<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>dalith &#8211; Peepal Media</title>
	<atom:link href="https://peepalmedia.com/tag/dalith/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 23 Nov 2024 12:32:38 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>dalith &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಚಾತುವರ್ಣ ಪದ್ದತಿ ಬಗ್ಗೆ ಮೊದಲು ಪ್ರಶ್ನಿಸಿದ ಪುಲೆ ಅವರ ʼಗುಲಾಮಗಿರಿʼ ಕೃತಿಗೆ 150 ವರ್ಷ</title>
		<link>https://peepalmedia.com/150-years-since-pules-work-gulamagiri-which-first-questioned-the-chatuvarna-system/</link>
		
		<dc:creator><![CDATA[Peepal Media]]></dc:creator>
		<pubDate>Sat, 23 Nov 2024 12:32:37 +0000</pubDate>
				<category><![CDATA[ಅಂಕಣ]]></category>
		<category><![CDATA[Dalit]]></category>
		<category><![CDATA[dalit activists]]></category>
		<category><![CDATA[Dalit assault]]></category>
		<category><![CDATA[Dalit community]]></category>
		<category><![CDATA[Dalit couple]]></category>
		<category><![CDATA[Dalit cultural resistance]]></category>
		<category><![CDATA[dalit dalitlivesmatter dalits]]></category>
		<category><![CDATA[Dalit fighters]]></category>
		<category><![CDATA[Dalit guest lecture]]></category>
		<category><![CDATA[Dalit leaders M. Devdas]]></category>
		<category><![CDATA[dalit litterature]]></category>
		<category><![CDATA[Dalit organizations]]></category>
		<category><![CDATA[dalitanews]]></category>
		<category><![CDATA[dalith]]></category>
		<category><![CDATA[dalith women]]></category>
		<category><![CDATA[dalith youth]]></category>
		<category><![CDATA[dalitha samskruthika prasthirodha]]></category>
		<category><![CDATA[daliths]]></category>
		<category><![CDATA[india]]></category>
		<category><![CDATA[jyotibhapule]]></category>
		<category><![CDATA[kannada]]></category>
		<category><![CDATA[maharastra]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[pule]]></category>
		<category><![CDATA[writing]]></category>
		<guid isPermaLink="false">https://peepalmedia.com/?p=49514</guid>

					<description><![CDATA[1873 ರಲ್ಲಿ ಮಹಾತ್ಮ ಜ್ಯೋತಿಬಾ ಫುಲೆಯವರು ರಚಿಸಿದ ʼ ಗುಲಾಮ ಗಿರಿʼ ಕೃತಿಗೆ 150 ವರ್ಷ ತುಂಬಿತು. ಫುಲೆಯವರ ʼ ಗುಲಾಮಗಿರಿʼ ಯ ಮೊದಲು ಜಾತಿ ಪದ್ಧತಿಯನ್ನು ವಿರೋಧಿಸಿದ ಯಾವ ಪುಸ್ತಕವೂ ಪ್ರಕಟವಾಗಿರಲಿಲ್ಲ. ʼ ಗುಲಾಮಗಿರಿʼ ಪುಸ್ತಕದಲ್ಲಿ ಚಾತುರ್ವರ್ಣ್ಯ ಪದ್ಧತಿಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸುವ ಜ್ಯೋತಿಬಾ ಫುಲೆಯವರು ಶೂದ್ರರು ಮತ್ತು ಅತಿ ಶೂದ್ರರಲ್ಲಿ ಎಚ್ಚರವನ್ನೂ, ಸ್ವಾತಂತ್ರ್ಯ, ಸಮಾನತೆಯ ಬಯಕೆಯನ್ನೂ ಹುಟ್ಟು ಹಾಕಿದ್ದರು. ʼ ಗುಲಾಮಗಿರಿ- 150 ʼ ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಇತ್ತೀಚೆಗೆ ‌ʼ ನವಯಾನ ಟ್ರಸ್ಟ್ [&#8230;]]]></description>
										<content:encoded><![CDATA[
<ul class="wp-block-list">
<li><strong>ಎಂ ನಾಗರಾಜ ಶೆಟ್ಟಿ</strong></li>
</ul>



<p>1873 ರಲ್ಲಿ ಮಹಾತ್ಮ ಜ್ಯೋತಿಬಾ ಫುಲೆಯವರು ರಚಿಸಿದ ʼ ಗುಲಾಮ ಗಿರಿʼ ಕೃತಿಗೆ 150 ವರ್ಷ ತುಂಬಿತು. ಫುಲೆಯವರ ʼ ಗುಲಾಮಗಿರಿʼ ಯ ಮೊದಲು ಜಾತಿ ಪದ್ಧತಿಯನ್ನು ವಿರೋಧಿಸಿದ ಯಾವ ಪುಸ್ತಕವೂ ಪ್ರಕಟವಾಗಿರಲಿಲ್ಲ. ʼ ಗುಲಾಮಗಿರಿʼ ಪುಸ್ತಕದಲ್ಲಿ ಚಾತುರ್ವರ್ಣ್ಯ ಪದ್ಧತಿಯನ್ನು ಕಟುವಾದ ಶಬ್ದಗಳಲ್ಲಿ ಟೀಕಿಸುವ ಜ್ಯೋತಿಬಾ ಫುಲೆಯವರು ಶೂದ್ರರು ಮತ್ತು ಅತಿ ಶೂದ್ರರಲ್ಲಿ ಎಚ್ಚರವನ್ನೂ, ಸ್ವಾತಂತ್ರ್ಯ, ಸಮಾನತೆಯ ಬಯಕೆಯನ್ನೂ ಹುಟ್ಟು ಹಾಕಿದ್ದರು.</p>



<p>ʼ ಗುಲಾಮಗಿರಿ- 150 ʼ ಎನ್ನುವ ಅರ್ಥಪೂರ್ಣ ಕಾರ್ಯಕ್ರಮವನ್ನು ಇತ್ತೀಚೆಗೆ ‌ʼ ನವಯಾನ ಟ್ರಸ್ಟ್ ʼ ಹಮ್ಮಿಕೊಂಡು ಈ ಪುಸ್ತಕವನ್ನು ನೆನಪಿಸುವ ಮತ್ತು ಫುಲೆಯವರ ಸಾಧನೆಗಳ ಬಗ್ಗೆ ಮನನ ಮಾಡುವ ಅವಕಾಶವನ್ನು ಒದಗಿಸಿತು. ಬೆಂಗಳೂರಲ್ಲಿ ಅರಂಭಗೊಂಡ ʼ ನವಯಾನ ಟ್ರಸ್ಟ್‌ ʼ ತನ್ನ ಮೊದಲ ಕಾರ್ಯಕ್ರಮವಾಗಿ ಇಂತಹ ಒಂದು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಶ್ಲಾಘನೀಯ.<img fetchpriority="high" decoding="async" width="800" height="600" class="wp-image-49515" style="width: 800px;" src="https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966.jpg" alt="" srcset="https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966.jpg 1599w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-300x225.jpg 300w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-1024x768.jpg 1024w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-768x576.jpg 768w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-1536x1153.jpg 1536w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-150x113.jpg 150w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-696x522.jpg 696w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-1068x802.jpg 1068w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_c7f33966-265x198.jpg 265w" sizes="(max-width: 800px) 100vw, 800px" /></p>



<p>ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕೃತಿಯ ವಿವರಗಳನ್ನು ಪ್ರಸ್ತಾಪಿಸಿ, ಪ್ರಸ್ತುತ ಸಂದರ್ಭಕ್ಕೆ ಅನುಸಾರವಾಗಿ ಹಲವು ಪ್ರಶ್ನೆಗಳನ್ನು ಎತ್ತಿದರು. ʼ ಗುಲಾಮಗಿರಿ ʼ ಪ್ರಕಟವಾದ ಸಂದರ್ಭ, ಅದರಲ್ಲಿ ಬಳಕೆಯಾಗಿರುವ ಕಟು ಮಾತುಗಳು, ಪುರಾಣಗಳ ಅರ್ಥೈಸುವಿಕೆ, ಮಿತ್‌ ಗಳ ಅಗತ್ಯ ಇವುಗಳ ಬಗ್ಗೆ ಮಾತು ಬಂತು. ʼ ಗುಲಾಮಗಿರಿ ʼ ಯ ಓದು ಮತ್ತು ಅದನ್ನು ವರ್ತಮಾನಕ್ಕೆ ಹೊಂದಿಸಿಕೊಳ್ಳುವುದರ ಬಗೆಗೆ ಚಿಂತನೆ ಅಗತ್ಯವಿದೆ ಎನ್ನುವ ಮಾತುಗಳು ಕೇಳಿ ಬಂದವು. ಈ ಕುರಿತು ನಿರ್ದುಷ್ಟವಾಗಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಮತ್ತು ಅದರ ಅಗತ್ಯ ಇಲ್ಲದಿದ್ದರೂ ಜಾತಿ ಪದ್ಧತಿ ತನ್ನೆಲ್ಲ ಕೆಡುಕುಗಳೊಂದಿಗೆ, ಕಂಡರೂ ಕಾಣದಂತೆ ಸವಾರಿ ಮಾಡುತ್ತಿರುವ ಹೊತ್ತಿನಲ್ಲಿ ʼ ಗುಲಾಮ ಗಿರಿʼ ಕೃತಿಯನ್ನು ಅವಲೋಕಿಸುವ ಮತ್ತು ಅದನ್ನು ಸದ್ಯಕ್ಕೆ ಹೊಂದಿಸಿಕೊಳ್ಳುವ ಅಗತ್ಯವಂತೂ ಇದೆ ಎನ್ನುವುದರಲ್ಲಿ ಸಂದೇಹವಿಲ್ಲ.</p>



<p>ಶೂದ್ರ, ಅತಿ ಶೂದ್ರರ ಗುಲಾಮಗಿರಿ</p>



<p>ಜ್ಯೋತಿಬಾ ಫುಲೆಯವರನ್ನು ಬಾಬಾ ಸಾಹೇಬ್ ಅಂಬೇಡ್ಕರ್ ತನ್ನ ಮೂರನೆಯ ಗುರುವೆಂದು ತಿಳಿದುಕೊಂಡಿದ್ದರು. ಭಗವಾನ್ ಬುದ್ಧ, ಸಂತ ಕಬೀರ ಮತ್ತು ಫುಲೆಯವರನ್ನು ತನ್ನ ಗುರುಗಳೆಂದು ತಿಳಿದಿದ್ದ ಬಾಬಾ ಸಾಹೇಬರಿಗೆ ʼ ಬುದ್ಧ ಮತ್ತು ಧಮ್ಮʼ ಕೃತಿಯ ನಂತರ ಫುಲೆಯವರ ಜೀವನ ಚರಿತ್ರೆ ಬರೆಯುವ ಉದ್ದೇಶವಿತ್ತಂತೆ. ಅವರ ಅನಾರೋಗ್ಯದ ಕಾರಣ ಅದು ಕೈಗೂಡಲಿಲ್ಲ. ಬಾಬಾಸಾಹೇಬರ ತಂದೆ ರಾಮ್ ಜಿ ಸತ್ಪಾಲ್ ರವರಿಗೆ ಫುಲೆ ಮತ್ತು ಅವರ ʼ ಸತ್ಯ ಶೋಧಕ ಸಮಾಜʼ ಗೋವಿಂದ ರಾನಡೆಯವರ ಮೂಲಕ ತಿಳಿದಿತ್ತು. ಇದರಿಂದ ಬಾಲ್ಯದಲ್ಲೇ ಬಾಬಾ ಸಾಹೇಬರು ಫುಲೆಯವರ ವಿಚಾರ ಮತ್ತು ವಿಧಾಯಕ ಕೆಲಸಗಳ ಅರಿವು ಪಡೆದಿದ್ದರು. ಬಾಬಾ ಸಾಹೇಬರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಜ್ಯೋತಿ ಬಾ ಫುಲೆಯವರ ಪ್ರಭಾವ ಇದ್ದೇ ಇತ್ತು.</p>



<p>ಹಾಗಿದ್ದರೂ ಬಾಬಾ ಸಾಹೇಬರು ಹಲವು ವಿಷಯಗಳಲ್ಲಿ ಫುಲೆಯವರಿಗಿಂತ ಭಿನ್ನವಾದ ನಿಲುವನ್ನು ತಳೆಯುತ್ತಾರೆ. ಅವರ ಅಭಿಪ್ರಾಯಗಳನ್ನು ಒಪ್ಪದ ಸಂದರ್ಭಗಳಲ್ಲಿ ಖಂಡಿಸುವುದಿಲ್ಲ. ಆದರೆ ತಮ್ಮ ವ್ಯಾಖ್ಯಾನವನ್ನು ಮಂಡಿಸಲು ಹಿಂಜರಿಯುವುದಿಲ್ಲ. ಇದು ಗುರುವನ್ನು ಗೌರವಿಸುವ ಕ್ರಮ; ಸತ್ಯವೆಂದು ತೋಚಿದ್ದನ್ನು ಹೇಳುವ ಮತ್ತು ಸರಿಯಾದುದನ್ನು ಕಂಡುಕೊಳ್ಳುವ ಸಮರ್ಪಕವಾದ ದಾರಿ. ಬಾಬಾ ಸಾಹೇಬರು ಫುಲೆಯವರ ಸಾಮಾಜಿಕ ಸುಧಾರಣಾ ಕಾರ್ಯಗಳು, ಜಾತಿ ನಿರ್ಮೂಲನ ಆಂದೋಲನವನ್ನು ಮುನ್ನಡೆಸಿದರು. ಅವರ ʼ ಜಾತಿ ವಿನಾಶʼ ( Annihilation of caste ) ಫುಲೆಯವರ ʼ ಗುಲಾಮಗಿರಿʼಯ ಮುಂದುವರಿದ ಮತ್ತು ಖಚಿತ ವೈಚಾರಿಕ ನೆಲೆಯ ಕೃತಿಯೇ ಆಗಿದೆ. ಅಂಬೇಡ್ಕರ್ ರವರ ʼ ಜಾತಿ ವಿನಾಶʼದ ಮೊದಲು ʼ ಗುಲಾಮಗಿರಿʼ ಯನ್ನು ಓದುವುದು ಓದುವಿಕೆಯ ಸರಿಯಾದ ರೀತಿಯೇ ಆಗಿದೆ.</p>



<p>ಸಮಾಜದಲ್ಲಿ ಯಾರೂ ಕನಿಷ್ಠರಲ್ಲ, ಶ್ರೇಷ್ಠರೂ ಅಲ್ಲ; ಪ್ರತಿಯೊಬ್ಬನೂ ಸಮಾನ. ಒಬ್ಬನ ಹಿತ ಮತ್ತೊಬ್ಬನಿಗೆ ಮಾರಕವಾಗಬಾರದು ಎನ್ನುವ ಖಚಿತ ಅಭಿಪ್ರಾಯವನ್ನು ಹೊಂದಿದ್ದ ಜ್ಯೋತಿಬಾರವರು ಕೆಳಜಾತಿಯವರನ್ನು ಅಜ್ಞಾನ, ಅನಕ್ಷರತೆ, ಮೂಢನಂಬಿಕೆಗಳಿಂದ ಪಾರು ಮಾಡಲು ಕಂಕಣಬದ್ಧರಾಗಿದ್ದರು. ಅವರಿಗೆ ಬ್ರಾಹ್ಮಣರ ಮಾನಸಿಕ ದಾಸ್ಯದಿಂದ ಶೋಷಿತ ಜಾತಿಗಳನ್ನು ಬಿಡುಗಡೆ ಮಾಡುವುದು ಅತಿ ಮುಖ್ಯವೆಂದು ತೋಚಿತ್ತು. ಅವರು ಜನರನ್ನು ಸುಲಭವಾಗಿ ತಲುಪುವ ಮಾರ್ಗಗಳನ್ನು ಅನ್ವೇಷಿಸಿದರು. ಮರಾಠಿಯಲ್ಲಿ ಜನಪ್ರಿಯವಾದ ಲಾವಣಿ, ಅಭಂಗ, ಕಾವ್ಯಗಳ ಮುಖಾಂತರ ಜನರಲ್ಲಿ ತಿಳಿವಳಿಕೆಯನ್ನು ಮೂಡಿಸುವ ಪ್ರಯತ್ನ ಮಾಡಿದರು.</p>



<p>1955 ರಲ್ಲಿ ʼ ತೃತೀಯ ರತ್ನʼ ಎನ್ನುವ ನಾಟಕವನ್ನು ಬರೆದು ಮೂಢನಂಬಿಕೆ, ಅಂಧಶ್ರದ್ಧೆಗಳನ್ನು ನೇರವಾಗಿ ವಿರೋಧಿಸಿದ್ದರು. ಅವರು ಶಿವಾಜಿ ಮಹಾರಾಜರ ಸಮಾಧಿಗೆ ಒದಗಿದ ದುರ್ಗತಿಗೆ ಮರುಗಿ ಬರೆದ ಲಾವಣಿ ಮತ್ತು ಪರಶುರಾಮನನ್ನು ಕುರಿತ ಸುಳ್ಳುಗಳನ್ನು ಬಯಲು ಮಾಡುವ ಲಾವಣಿಗಳು ಜನಪ್ರಿಯವಾಗಿದ್ದವು. ಧಾರ್ಮಿಕ ಮತ್ತು ಅಂಧಶೃದ್ಧೆಯ ಜನರನ್ನು ಪೀಡಿಸುವ ಕುಯುಕ್ತಿಯನ್ನು ಖಂಡಿಸುವ ಕಾವ್ಯ ಸಂಗ್ರಹ ʼ ಬ್ರಾಹ್ಮಣರ ಕುಯುಕ್ತಿʼ 1869 ರಲ್ಲಿ ಪ್ರಕಟವಾದಾಗ ಫುಲೆಯವರು ಹಲವರ ದುರಾಗ್ರಹಕ್ಕೆ ಪಾತ್ರರಾಗಬೇಕಾಯಿತು.</p>



<p>ಆ ಬಳಿಕ ಫುಲೆಯವರು ಮಹತ್ವದ, ಕ್ರಾಂತಿಕಾರಕ ಗ್ರಂಥವೊಂದನ್ನು ಬರೆಯಲು ತೀರ್ಮಾನಿಸಿದರು. 1872 ರ ಡಿಸೆಂಬರ್ ತಿಂಗಳಲ್ಲಿ ಕೆಲವು ಅಧ್ಯಾಯಗಳನ್ನು ಬರೆದ ಆ ಗ್ರಂಥ ಜೂನ್ 1873 ರಲ್ಲಿ ಪೂರ್ಣಗೊಂಡಿತು. ವೈದಿಕರ ಗ್ರಂಥ, ಶಾಸ್ತ್ರಗಳನ್ನು ನಿರಾಕರಿಸಿದ, ಅವತಾರಗಳನ್ನು ಪ್ರಶ್ನಿಸಿದ, ಜಾತಿಪದ್ಧತಿಯನ್ನು ಸ್ಪಷ್ಟ ಮಾತುಗಳಲ್ಲಿ ನಿರಾಕರಿಸಿದ, ʼ ಗುಲಾಮಗಿರಿʼ ಗ್ರಂಥ ಜಾತಿ ನಿರ್ಮೂಲನೆಯ ಆಂದೋಲನಕ್ಕೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿತು.</p>



<figure class="wp-block-image size-large"><img decoding="async" width="1024" height="1024" src="https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-1024x1024.jpg" alt="" class="wp-image-49516" srcset="https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-1024x1024.jpg 1024w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-300x300.jpg 300w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-150x150.jpg 150w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-768x768.jpg 768w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-696x696.jpg 696w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23-1068x1068.jpg 1068w, https://peepalmedia.com/wp-content/uploads/2024/11/WhatsApp-Image-2024-11-22-at-11.44.51_69434e23.jpg 1080w" sizes="(max-width: 1024px) 100vw, 1024px" /></figure>



<p>ಇಂಗ್ಲಿಷ್ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ʼಗುಲಾಮಗಿರಿ ʼ ಗೆ ಪ್ರಾರಂಭಿಕ ಮಾತುಗಳನ್ನು ಬರೆದ ಫುಲೆಯವರು ಮರಾಠಿಯ ಮುನ್ನುಡಿಯಲ್ಲಿ ತಮ್ಮ ಉದ್ದೇಶವನ್ನು ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ. ʼ ಈ ಪುಸ್ತಕದ ಮೂಲ ಉದ್ದೇಶ ಶೂದ್ರರಿಗೆ ಮತ್ತು ಅತಿ ಶೂದ್ರರಿಗೆ, ಬ್ರಾಹ್ಮಣರ ಸ್ವಾಧೀನದಲ್ಲಿ ಶತ ಶತಮಾನಗಳ ಕಾಲ ಅವರು ಅನುಭವಿಸಿದ ದೀನಾವಸ್ಥೆಯ, ಕಷ್ಟ ಪರಂಪರೆಯ ಅರಿವು ಮೂಡಿಸುವುದಾಗಿದೆ. ಆ ಮೂಲಕ ಅವರು ಇನ್ನು ಮುಂದೆ ಬ್ರಾಹ್ಮಣರ, ಭಟ್ಟರ ದೌರ್ಜನ್ಯದಿಂದ ಬಿಡುಗಡೆ ಪಡೆಯುವ ಮಾರ್ಗವನ್ನು ಆಳವಾಗಿ ಚಿಂತಿಸಿ ಕಂಡುಕೊಳ್ಳಬೇಕುʼ.</p>



<p>ʼ ಗುಲಾಮಗಿರಿʼ ಪುಸ್ತಕದಲ್ಲಿ ಫುಲೆಯವರು ಬ್ರಾಹ್ಮಣ್ಯ ಎನ್ನುವ ಶಬ್ದದ ಬದಲು ಬ್ರಾಹ್ಮಣರು ( Brahmins) ಮತ್ತು ಪುರೋಹಿತದ ಬದಲಾಗಿ ಭಟ್ಟ (Bhats) ಎನ್ನುವ ಪದವನ್ನು ಉಪಯೋಗಿಸುತ್ತಾರೆ. ಇಂಗ್ಲಿಷ್ ಮತ್ತು ಮರಾಠಿ ಎರಡೂ ಭಾಷೆಗಳಲ್ಲಿ ಅವರಿಗೆ ಹಿಡಿತ ಇದ್ದರೂ ʼ ಗುಲಾಮಗಿರಿ ʼ ಯಲ್ಲಿ ಉಪಯೋಗಿಸಿದ ಮರಾಠಿ ಜನರ ಆಡು ಭಾಷೆಯಾಗಿದ್ದು, ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ ಅದರಲ್ಲಿ ಗ್ರಾಮ್ಯವನ್ನೂ ಹೇರಳವಾಗಿ ಬಳಸಿದ್ದಾರೆ.</p>



<p>ʼ ಗುಲಾಮಗಿರಿʼ ಪುಸ್ತಕದಲ್ಲಿ ಜ್ಯೋತಿಬಾ ಮತ್ತು ದೋಂಡಿಬಾ ಎನ್ನುವ ಇಬ್ಬರು ವ್ಯಕ್ತಿಗಳ ನಡುವೆ ಸಂಭಾಷಣೆ ನಡೆಯುತ್ತದೆ. ಫುಲೆಯವರು ನಾಟಕಗಳನ್ನು ಬರೆದು, ನಟಿಸಿ, ನಿರ್ದೇಶಿಸಿದವರಾಗಿದ್ದರಿಂದ ಸಂಭಾಷಣೆ ಕಲೆ ಅವರಿಗೆ ಒದಗಿ ಬಂದಿದೆ. ದೋಂಡಿಬಾ ವ್ಯಕ್ತ ಪಡಿಸುವ ಅನುಮಾನಗಳಿಗೆ ನೇರವಾಗಿ, ತಮಾಷೆಯಾಗಿ, ಕಟುವಾಗಿ ಉತ್ತರಿಸುವ ಜ್ಯೋತಿಬಾ ನಿರ್ದಾಕ್ಷಿಣ್ಯವಾಗಿ ಪುರಾಣ, ಶಾಸ್ತ್ರ ಗ್ರಂಥಗಳನ್ನು ಜಾಲಾಡುತ್ತಾರೆ. ದಶಾವತಾರದ ಕಲ್ಪನೆಗಳನ್ನು ಒಂದೊಂದಾಗಿ ವಿಘಟಿಸುವ ಫುಲೆಯವರು ಪರಶುರಾಮನ ಕುರಿತು ತೀವ್ರ ಆಕ್ರೋಶವನ್ನು ವ್ಯಕ್ತ ಪಡಿಸುತ್ತಾರೆ. ಇಪ್ಪತ್ತೊಂದು ಸಲ ಭೂ ಪ್ರದಕ್ಷಿಣೆ ಮಾಡಿ ಹುಡುಕಿ, ಹುಡುಕಿ ಕ್ಷತ್ರಿಯರನ್ನು ನಿರ್ನಾಮ ಮಾಡಿದ್ದಲ್ಲದೆ, ನವ ಜಾತ ಶಿಶುಗಳನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದನ್ನು, ಗರ್ಭಿಣಿಯರನ್ನು ಅಂಡಲೆಸಿ ಶಿಶು ಹತ್ಯೆ ಮಾಡಿದ್ದನ್ನು ಅತಿ ಕ್ರೂರವಾದ ಕೊಲೆಗಡುಕತನ ಎಂದು ಹೇಳುತ್ತಾರೆ. ಬಾಬಾ ಸಾಹೇಬರು ಮೂಲತಃ ಶೂದ್ರರು ಕ್ಷತ್ರಿಯರಾಗಿದ್ದರು ಎನ್ನುವ ಫುಲೆಯವರ ಸಿದ್ಧಾಂತವನ್ನು ಒಪ್ಪಿರುವುದಲ್ಲದೆ ಈ ಕುರಿತು ವಿವರವಾಗಿ ಬರೆದಿದ್ದಾರೆ.</p>



<p>ಅಂತೆಯೇ ಫುಲೆಯವರು ನ್ಯಾಯವಂತಿಕೆಯಿಂದ ರಾಜ್ಯವಾಳುತ್ತಿದ್ದ ಬಲಿಯನ್ನು ಅನ್ಯಾಯವಾಗಿ ರಾಜ್ಯಭ್ರಷ್ಟನಾಗಿ ಮಾಡಿದ್ದನ್ನು ಖಂಡಿಸುತ್ತಾರೆ. ಅವರ ಪ್ರಕಾರ ಬಲಿ ರಾಜ್ಯ ಸ್ವಾತಂತ್ರ್ಯ, ಸಮಾನತೆಗಳ ರಾಜ್ಯ. ಅವತಾರ ಕಲ್ಪನೆಗಳನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವುದೇ ಫುಲೆಯವರ ಉದ್ದೇಶವಾಗಿತ್ತು. ಮಹಾಭಾರತ ರಚನೆಯಾಗುವುದಕ್ಕಿಂತ ಮೊದಲು ಅವತಾರಗಳ ಪ್ರಸ್ತಾಪ ಇರಲಿಲ್ಲ; ಧಾರ್ಮಿಕ ಹತೋಟಿಯನ್ನು ಉದ್ದೇಶದಿಂದ ಪುರಾಣಗಳಲ್ಲಿ ಅವುಗಳನ್ನು ಸೇರ್ಪಡೆಗೊಳಿಸಿರಬಹುದೆಂದು ಅವರು ಅಭಿಪ್ರಾಯ ಪಡುತ್ತಾರೆ.</p>



<p>ʼ ಗುಲಾಮಗಿರಿʼ ಪುಸ್ತಕದ ಕಠೋರತೆಗೆ ಪೇಶ್ವೆಯವರ ಕಾಲದ ದುಷ್ಟ ಆಡಳಿತ ಪದ್ಧತಿಯೇ ಕಾರಣ ಎನ್ನಬಹುದು. ಫುಲೆಯವರು ನೇರವಾಗಿ ಬ್ರಾಹ್ಮಣರ ಟೀಕೆ ಮಾಡಿದ್ದರೂ ಅವರ ಗುರಿ ಚಿತ್ಪಾವನ ಬ್ರಾಹ್ಮಣರು ಎನ್ನಲಾಗುತ್ತದೆ. ಬಾಳಾಜಿ ವಿಶ್ವನಾಥ ಪೇಶ್ವೆಯ ಕಾಲದಲ್ಲಿ ಚಿತ್ಪಾವನ‌ ಬ್ರಾಹ್ಮಣರು ಇನ್ನಿತರ ಬ್ರಾಹ್ಮಣ ಪಂಥಗಳನ್ನು ಬದಿಗೊತ್ತಿ ಶೂದ್ರರನ್ನು, ಅತಿ ಶೂದ್ರರನ್ನು ಅತಿ ಕ್ರೂರವಾಗಿ ನಡೆಸಿಕೊಂಡಿದ್ದಲ್ಲದೆ ಎಲ್ಲಾ ರೀತಿಯ ವೈಭೋಗಗಳನ್ನೂ ಪಡೆದುಕೊಂಡಿದ್ದರು.</p>



<figure class="wp-block-image size-full"><img decoding="async" width="641" height="973" src="https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4.jpg" alt="" class="wp-image-49517" srcset="https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4.jpg 641w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4-198x300.jpg 198w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4-150x228.jpg 150w, https://peepalmedia.com/wp-content/uploads/2024/11/WhatsApp-Image-2024-11-22-at-11.44.52_254617b4-300x455.jpg 300w" sizes="(max-width: 641px) 100vw, 641px" /></figure>



<p>ಶೂದ್ರರ, ಅತಿ ಶೂದ್ರರ ದೀನಾವಸ್ಥೆಯನ್ನು ಕಣ್ಣಾರೆ ಕಂಡು ಅನುಭವಿಸಿದ್ದ ಫುಲೆಯವರಿಗೆ ಬರವಣಿಗೆ ಅವರನ್ನು ವಿಮೋಚನೆಯ ದಾರಿಯಲ್ಲಿ ಕೊಂಡೊಯ್ಯವ ಮಾರ್ಗಗಳಲ್ಲಿ ಒಂದಾಗಿ ಕಂಡಿತ್ತು. ಸಮಾನತೆಯನ್ನು, ಸ್ವಾತಂತ್ರ್ಯವನ್ನು ನೀಡುವ ಯಾವುದೇ ಗ್ರಂಥವಾದರೂ ತಾನದನ್ನು ಗೌರವಿಸುತ್ತೇನೆ ಎಂದು ಹೇಳಿದ ಫುಲೆಯವರು ನಾನಾ ರೀತಿಯ ಮೂಢನಂಬಿಕೆ, ಅಜ್ಞಾನದಲ್ಲಿ ತೊಳಲಾಡುತ್ತಿರುವ ಶೂದ್ರ, ಅತಿ ಶೂದ್ರ ಬಂಧುಗಳಲ್ಲಿ ಒಬ್ಬನಾದರೂ ವೈದಿಕರ ದಾಸ್ಯದಿಂದ ಮುಕ್ತನಾಗಲು ಬಯಸಿ ತನ್ನ ಹೆಸರು ತಿಳಿಸಿ ಪತ್ರ ಬರೆದರೆ ನಾನು ಹೆಮ್ಮೆ ಪಡುತ್ತೇನೆ, ಆತನಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದರು.</p>



<p>ಸಮಾಜ ಸುಧಾರಣೆಗಳು</p>



<p>ಫುಲೆಯವರು ಶಾಲೆಯಲ್ಲಿ ಓದಿದ್ದು ಕಡಿಮೆಯೆಂದೇ ಹೇಳಬಹುದು.ಅವರ ಪ್ರಾಥಮಿಕ ಶಿಕ್ಷಣ, ತಂದೆ ಗೋವಿಂದ ರಾಯರಿಗೆ ಕೆಲವರು ದುರ್ಬೋಧೆ ಮಾಡಿದ್ದರಿಂದ ಅರ್ಧದಲ್ಲೇ ನಿಂತಿತ್ತು. ಮತ್ತೆ ಮೂರು ವರ್ಷಗಳ ನಂತರ ತಂದೆ ಮನಸ್ಸು ಬದಲಾಯಿಸಿ ಫುಲೆಯವರನ್ನು ಶಾಲೆಗೆ ಸೇರಿಸಿದರು. ಅವರು ಪಡೆದ ಶಿಕ್ಷಣ, ಇಂಗ್ಲಿಷ್ ಜ್ಞಾನ ಅವರಿಗೆ ಒಳ್ಳೆಯ ನೌಕರಿಯನ್ನು ಖಂಡಿತ ಒದಗಿಸುತ್ತಿತ್ತು. ಆದರೆ ಫುಲೆಯವರು ನೌಕರಿ ಮಾಡದೆ ಬದುಕನ್ನು ಸಾಮಾಜಿಕ ಸೇವೆಗೇ ಮುಡುಪಾಗಿಟ್ಟರು.</p>



<p>ಶೂದ್ರರ ಮತ್ತು ಅತಿ ಶೂದ್ರರ ಸುಧಾರಣೆಗೆ ಶಿಕ್ಷಣದ ಅಗತ್ಯವನ್ನು ಮನಗಂಡ ಫುಲೆಯವರು ಶಾಲೆಗಳನ್ನು ತೆರೆದು ತಾವೇ ಶಿಕ್ಷಕರಾಗಿ ದುಡಿದರು. ಹದಿಮೂರನೇ ವಯಸ್ಸಿಗೆ ಮದುವೆಯಾದ ಫುಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಹೆಂಡತಿ ಸಾವಿತ್ರಿ ಬಾಯಿಯವರಿಗೆ ತಾವೇ ಓದು ಬರಹ ಕಲಿಸಿದರು. 1948ರಲ್ಲಿ ಮೊದಲ ಹೆಣ್ಣು ಮಕ್ಕಳ ಶಾಲೆ ಪುಣೆಯಲ್ಲಿ ಆರಂಭವಾಯಿತು. ಹಲವು ಅಡ್ಡಿ ಆತಂಕಗಳ ನಡುವೆಯೂ ಫುಲೆ ದಂಪತಿ ಶಾಲೆಗಳನ್ನು ನಡೆಸಿದ್ದಲ್ಲದೆ ಅವರಿಬ್ಬರೂ ಇದಕ್ಕಾಗಿ ಯಾವ ಸವಲತ್ತನ್ನೂ ಪಡೆಯಲಿಲ್ಲ.</p>



<p>ಫುಲೆಯವರು ಸಮಾಜ ಸುಧಾರಕರಾಗಿದ್ದಂತೆ, ವಿಚಾರವಾದಿ, ಬರಹಗಾರ, ಪತ್ರಕರ್ತ ಮತ್ತು ಆಡಳಿತಕಾರನೂ ಆಗಿದ್ದರು. ಶೋಷಿತ ಜಾತಿಗಳ ಸುಧಾರಣೆಗಾಗಿ ಅವರು ಸ್ಥಾಪಿಸಿದ ʼ ಸತ್ಯ ಶೋಧಕ ಸಮಾಜ ʼ ದಲ್ಲಿ ಬ್ರಾಹ್ಮಣರನ್ನೊಳಗೊಂಡು ಎಲ್ಲಾ ಜಾತಿ,ಧರ್ಮದ ಜನರೂ ಇದ್ದರು. ಅಸ್ಪರ್ಶ್ಯತೆಯ ವಿರುದ್ಧ ಸಮರವನ್ನೇ ಸಾರಿದ ಫುಲೆಯವರು ʼ ಅಸ್ಪರ್ಶ್ಯರ ಕೈಫಿಯತ್ತು ʼ ಎನ್ನುವ ಪುಸ್ತಕ ಪ್ರಕಟಿಸಿದ್ದಲ್ಲದೆ, ಅವರ ವಸತಿ ಪ್ರದೇಶಗಳಿಗೆ ಭೇಟಿ ನೀಡಿ ಯುವಕರ ತಂಡವೊಂದನ್ನು ಸಿದ್ಧಪಡಿಸಿದರು. ಅವರಿಗೆ ನಿರಂತರ ಮಾರ್ಗದರ್ಶನ ನೀಡಿ ಬರೆಯಲು, ಭಾಷಣ ಮಾಡಲು ತರಬೇತಿ ಕೊಟ್ಟು ಸುಧಾರಣಾ ಕಾರ್ಯದಲ್ಲಿ ಭಾಗವಹಿಸುವಂತೆ ಮಾಡಿದರು.</p>



<p>ಬ್ರಾಹ್ಮಣ ವಿಧವೆಯ ವಿಮೋಚನೆಗಾಗಿ ಅವರು ಸ್ಥಾಪಿಸಿದ ʼ ಬಾಲಹತ್ಯಾ ಪ್ರತಿಬಂಧಕ ಗೃಹ ʼ ದೇಶದಲ್ಲಿಯೇ ಮೊತ್ತ ಮೊದಲ ಸಂಸ್ಥೆಯಾಗಿತ್ತು. ಈ ಸಂಸ್ಥೆಯಿಂದಾಗಿ ವಿಧವೆಯರು ಅಪಕೀರ್ತಿಗೆ ಒಳಗಾಗುವುದು, ಭ್ರೂಣ ಹತ್ಯೆ, ಶಿಶು ಹತ್ಯೆಗಳಾಗುವುದು ತಪ್ಪಿತು. ಬ್ರಾಹ್ಮಣರಲ್ಲದೆ ಇತರ ಜಾತಿಗಳಲ್ಲೂ ವಿಧವೆಯರ ಮರು ವಿವಾಹವನ್ನು ಪ್ರೋತ್ಸಾಹಿಸಿದರು. ತಾವೇ ನೇತೃತ್ವ ವಹಿಸಿ ಕಡಿಮೆ ಖರ್ಚಿನಲ್ಲಿ ಅಂತರ್ ಜಾತೀಯ ವಿವಾಹಗಳು ನಡೆಯುವಂತೆಯೂ ನೋಡಿಕೊಂಡರು.</p>



<p>ಪೇಶ್ವೆಯರ ಆಡಳಿತಕ್ಕೊಳಪಟ್ಟಿದ್ದ, ಚಿತ್ಪಾವನ ಬ್ರಾಹ್ಮಣರು ಶೂದ್ರ, ಅತಿ ಶೂದ್ರರನ್ನು ನಿಕೃಷ್ಟವಾಗಿ ನೋಡಿಕೊಳ್ಳುತ್ತಿದ್ದ ಪ್ರದೇಶದಲ್ಲಿ ಫುಲೆಯವರು ಏಕಾಂಗಿಯಾಗಿ ಮಾಡಿದ ಸಾಮಾಜಿಕ ಕಾರ್ಯಗಳು ಬೆರಗು ಹುಟ್ಟಿಸುತ್ತವೆ. ಅವರು ಹುಟ್ಟು ಹಾಕಿದ- ಮಹಾರಾಷ್ಟ್ರದಲ್ಲಿ ಹಲವು ಸುಧಾರಣೆಗಳಿಗೆ ಕಾರಣವಾದ ʼ ಸತ್ಯಶೋಧಕ ಸಮಾಜ ʼ ಕ್ರಮೇಣ ನಿಸ್ತೇಜಗೊಂಡಿತು. ಆದರೆ ಶೂದ್ರ, ಅತಿ ಶೂದ್ರರಲ್ಲಿ ಅವರು ಮೂಡಿಸಿದ ಎಚ್ಚರ ಮುಂದಿನ ತಲೆಮಾರುಗಳಿಗೆ ಹರಿದು ಬಂತು. ಫುಲೆಯವರನ್ನು ತಮ್ಮ ಗುರುಗಳೆಂದು ಕರೆದುಕೊಂಡ ಬಾಬಾ ಸಾಹೇಬ ಅಂಬೇಡ್ಕರ್ ರವರು ಫುಲೆಯವರ ಸಿದ್ಧಾಂತಗಳನ್ನು ಪರಿಷ್ಕರಿಸಿದರು; ವಿಸ್ತರಿಸಿದರು.</p>



<p>ಜಾಗೃತಿಯ ಅಗತ್ಯ</p>



<p>ಫುಲೆಯವರ ʼ ಗುಲಾಮಗಿರಿʼ ಪುಸ್ತಕ ಮತ್ತು ಅವರ ವಿಚಾರಗಳಿಗೆ ಮರು ಹುಟ್ಟು ಕೊಟ್ಟವರು ಕಾನ್ಶಿರಾಮ್. ಅವರ ʼ ʼಬಹುಜನ ಸಮಾಜ ಪಕ್ಷʼದ ಪೋಸ್ಟರ್ ಗಳಲ್ಲಿ ಸಮಾಜ ಸುಧಾರಕರ ಚಿತ್ರಗಳು ತಪ್ಪದೇ ಅಚ್ಚಾಗುತ್ತಿದ್ದವು. ಜ್ಯೋತಿಬಾ ಫುಲೆ, ಅಂಬೇಡ್ಕರ್, ನಾರಾಯಣ ಗುರು, ಪೆರಿಯಾರ್ ಇವರನ್ನು ʼ ಬಹುಜನ ಸಮಾಜ ಪಕ್ಷʼ ರಾಷ್ಟ್ರ ಮಟ್ಟದಲ್ಲಿ ಬಿಂಬಿಸಿತು. ವಿಸ್ಮೃತಿಗೆ ಸಂದಿದ್ದ ಫುಲೆಯವರನ್ನು, ಮಹಾರಾಷ್ಟ್ರಕ್ಕೆ ಮತ್ತು ಅಕಡೆಮಿಕ್ ಓದಿಗೆ ಸೀಮಿತರಾಗಿದ್ದ ಅಂಬೇಡ್ಕರ್ ರವರನ್ನು, ಕೇರಳ ಮತ್ತು ಕನ್ನಡ ಜಿಲ್ಲೆಗಳಿಗೆ ಬೆಳಕು ತೋರಿದ ನಾರಾಯಣ ಗುರುಗಳನ್ನು, ದ್ರಾವಿಡ ನಾಡಿಂದೀಚೆ ಹೆಸರು ಗಳಿಸದ ಪೆರಿಯಾರ್ ರವರನ್ನು ದೇಶದಾದ್ಯಂತ ಪರಿಚಯಿಸಿದವರು ಕಾನ್ಶಿರಾಮ್. ಅಂಬೇಡ್ಕರ್ ರವರು ಮುಂದುವರಿಸಿದ ಸುಧಾರಣೆಗಳನ್ನು ಕಾನ್ಶಿರಾಮ್ ಕೈಗೆತ್ತಿಕೊಂಡರು.</p>



<p>ಕಾನ್ಶಿರಾಮ್ ಕಾಲವಾದ ಬಳಿಕ ಹಲವು ಬದಲಾವಣೆಗಳು ಸಂಭವಿಸಿವೆ. ಜಾತಿಪದ್ಧತಿ ಅಳಿಯುವ ಬದಲು ಪ್ರಬಲರ ಅಸ್ತ್ರವಾಗಿ ಶೂದ್ರರ, ತಳಜಾತಿಗಳ,ದಲಿತರ ದಮನಕ್ಕೆ ಬಳಕೆಯಾಗುತ್ತಿದೆ. ಹಿಂದೂ ಎನ್ನುವ ಶಬ್ದ ಪ್ರಯೋಗವನ್ನು ಮಾಡದೆ, ಜಾತಿವಿನಾಶವನ್ನು, ಸಮಾನತೆಯ ಬದುಕನ್ನು ಹಾರೈಸಿದ ಫುಲೆಯವರ ಸಿದ್ಧಾಂತಗಳು ಹಿಂದುತ್ವದ ಅಡಿಯಲ್ಲಿ ನಲುಗುತ್ತಿವೆ. ಫುಲೆಯವರು ಸರಿಯಾಗಿಯೇ ಗುರುತಿಸಿದಂತೆ ಸವರ್ಣೀಯರು ಜಾತಿಗಳಲ್ಲಿ ವಿಭಜನೆ ಮಾಡಿ ತಮ್ಮ ಅನುಕೂಲಕ್ಕೋಸ್ಕರ ಅವರನ್ನು ಉಪಯೋಗಿಸುತ್ತಿರುವುದು ಕಂಡು ಬರುತ್ತಿದೆ. ಶೋಷಿತರು ಶೋಷಕರ ಗುಲಾಮರಾಗಿ ಮುಂದುವರಿಯುತ್ತಿರುವುದು ನಿಚ್ಚಳವಾಗಿ ಕಂಡು ಬರುತ್ತಿದೆ.</p>



<p>ಇಂತಹ ಸನ್ನಿವೇಶದಲ್ಲಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಅಗತ್ಯವನ್ನು ಮತ್ತೆ ಮೂಡಿಸುವುದು ಅವಶ್ಯವಾಗಿದೆ. ದುರ್ದೈವವೆಂದರೆ ʼ ಗುಲಾಮಗಿರಿʼ ಕೃತಿಗೆ 150 ವರ್ಷಗಳಾಗಿದ್ದನ್ನು ನೆನಪಿಸಿಕೊಳ್ಳುವ ಎಚ್ಚರವೂ ಕಾಣೆಯಾಗಿರುವುದು. ಇಂತಹ ಸಂದರ್ಭದಲ್ಲಿʼ ನವಯಾನ ಟ್ರಸ್ಟ್ ʼ ಕಾರ್ಯಕ್ರಮವನ್ನು ಏರ್ಪಡಿಸಿ ಒಳ್ಳೆಯ ಕೆಲಸವನ್ನೇ ಮಾಡಿದೆ. ಇಂತಹ ಕೆಲಸ ಎಲ್ಲಾ ಕಡೆಗಳಲ್ಲೂ ಆಗಬೇಕಿತ್ತು. ಅಂಬೇಡ್ಕರ್, ಕಾನ್ಶಿರಾಮ್ ರಂತ ಮಹನೀಯರು ಮಾತ್ರವೇ ಸಮಾನತೆಯ, ಜಾತಿವಿನಾಶದ, ಸಮಾಜ ಸುಧಾರಣೆಯ ಕೆಲಸ ಮಾಡಬೇಕಿಲ್ಲ. ಪ್ರತಿಯೊಬ್ಬರಲ್ಲೂ ಆ ಎಚ್ಚರ ಇದ್ದು ಅದಕ್ಕಾಗಿ ನಿರಂತರ ಪ್ರಯತ್ನ ಮಾಡಬೇಕಿದೆ.</p>



<p>ʼ ಗುಲಾಮ ಗಿರಿ- 150ʼ ಕಾರ್ಯಕ್ರಮದಲ್ಲಿ ಭಾಷಣ ಮಾಡಿದವರೊಬ್ಬರು ಹೇಳುತ್ತಿದ್ದರು: ʼ ನಿಮ್ಮಲ್ಲಿ ಅನೇಕರು ಸತ್ಯನಾರಾಯಣ ಪೂಜೆ ಮಾಡಿರಬಹುದುʼ. ಅವರಂದಂತೆ ಹತ್ತೊಂಬತ್ತನೇ ಶತಮಾನದಲ್ಲಿ ಹಠಾತ್ತಾಗಿ ಸೃಷ್ಟಿಸಿದ ಸತ್ಯನಾರಾಯಣ ಪೂಜೆ ಮಾಡದೇ ಇರುವವರೇ ಅಪರೂಪವಾಗಿರಬಹುದು. ಫುಲೆಯವರು ಇಂತಹ ನಂಬಿಕೆ, ಮೂಢನಂಬಿಕೆಗಳ ವಿರುದ್ಧ ಸಮರ ಸಾರಿದ್ದರು. ಅವರು ತಮ್ಮ ತಂದೆ ನಿಧನರಾದ ಸಂದರ್ಭದಲ್ಲಿ ಕಾಗೆಗಳಿಗೆ ಎಡೆ ಇಟ್ಟಿರಲಿಲ್ಲ. ಅದರ ಬದಲು ಹೊಟ್ಟೆಗಿಲ್ಲದವರಿಗೆ, ಅಂಗವಿಕಲರಿಗೆ ಉಣ ಬಡಿಸಿದ್ದರು. ಈಗ ಯಾರಾದರೂ ಈ ಆದರ್ಶವನ್ನು ಪಾಲಿಸುತ್ತಾರೆಯೇ? ಅನವಶ್ಯ ಅಹಾರವನ್ನು ಪೋಲು ಮಾಡುವ ಈ ರೀತಿಯ ಪದ್ಧತಿಗಳನ್ನು ಮಾಡದಿರುವುದು ಫುಲೆಯವರನ್ನು ನೆನಸಿಕೊಳ್ಳುವ ಅವರಿಗೆ ಕೃತಜ್ಞತೆ ಹೇಳುವ ಒಂದು ಸಣ್ಣ ಮಾರ್ಗ.ಇಂತಹ ಕ್ರಿಯೆಗಳೇ ಅಜ್ಞಾನವನ್ನು ನಿವಾರಿಸಲು ಸಹಾಯ ಮಾಡುತ್ತವೆ.</p>



<p></p>
]]></content:encoded>
					
		
		
			</item>
		<item>
		<title>ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಸ್ಲಿಂ,‌ ದಲಿತ, ಮಹಿಳೆಯರ ಅವಗಣನೆ</title>
		<link>https://peepalmedia.com/ignoring-muslim-dalit-women-in-kannada-sahitya-sammelan/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 07 Jan 2023 12:01:35 +0000</pubDate>
				<category><![CDATA[ಕಲೆ – ಸಾಹಿತ್ಯ]]></category>
		<category><![CDATA[bengalure]]></category>
		<category><![CDATA[dalith]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[kannada sahithya sammelana]]></category>
		<category><![CDATA[karnataka]]></category>
		<category><![CDATA[Muslim]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[women]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18972</guid>

					<description><![CDATA[ಮಹೇಶ್‌ ಜೋಶಿಯವರು ಅಪಕ್ವ ಹೇಳಿಕೆಗಳನ್ನು ನೀಡಿ ಪರಿಷತ್ತಿಗೆ ಮುಜುಗರ ತಾರದಿರಲಿ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮುಸ್ಲಿಮರನ್ನು ಮರೆಯದಿರಲಿ. ಶಿಶುನಾಳ ಷರೀಫರ ನಾಡಿನಲ್ಲಿ ಷರೀಫರನ್ನು ಮತ್ತು ಗುರು ಗೋವಿಂದಭಟ್ಟರನ್ನು ಅಗಲಿಸದಿರಲಿ. ಸೌಹಾರ್ದದ ಸಂಕೇತವಾಗಿ ಜೊತೆಯಾಗಿ ಮಲಗಿರುವ ಅವರ ಸಮಾಧಿಗಳನ್ನು ಬೇರೆ ಬೇರೆ ಮಾಡದಿರಲಿ ಎಂಬುದು ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲಭಾರತ ಸಾಹಿತ್ಯ ಸಮ್ಮೇಳನದ ವಿವಾದದ ಹಿನ್ನೆಲೆಯಲ್ಲಿ, ಸಮಾಜ ಮತ್ತು ಸಂಸ್ಕೃತಿ ಚಿಂತಕರಾಗಿರುವ ಡಾ.ಕೆ.ಷರೀಫಾ ಅವರ ಆಶಯ. ಹಾವೇರಿಯಲ್ಲಿ ದಿನಾಂಕ 6-1-202೩ ರಿಂದ ನಡೆಯಲಿರುವ 86ನೇ ಅಖಿಲ ಭಾರತ [&#8230;]]]></description>
										<content:encoded><![CDATA[
<p><strong>ಮಹೇಶ್‌ ಜೋಶಿಯವರು ಅಪಕ್ವ ಹೇಳಿಕೆಗಳನ್ನು ನೀಡಿ ಪರಿಷತ್ತಿಗೆ ಮುಜುಗರ ತಾರದಿರಲಿ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮುಸ್ಲಿಮರನ್ನು ಮರೆಯದಿರಲಿ. ಶಿಶುನಾಳ ಷರೀಫರ ನಾಡಿನಲ್ಲಿ ಷರೀಫರನ್ನು ಮತ್ತು ಗುರು ಗೋವಿಂದಭಟ್ಟರನ್ನು ಅಗಲಿಸದಿರಲಿ. ಸೌಹಾರ್ದದ ಸಂಕೇತವಾಗಿ ಜೊತೆಯಾಗಿ ಮಲಗಿರುವ ಅವರ ಸಮಾಧಿಗಳನ್ನು ಬೇರೆ ಬೇರೆ ಮಾಡದಿರಲಿ ಎಂಬುದು ಹಾವೇರಿಯಲ್ಲಿ ನಡೆಯುತ್ತಿರುವ ಅಖಿಲಭಾರತ ಸಾಹಿತ್ಯ ಸಮ್ಮೇಳನದ ವಿವಾದದ ಹಿನ್ನೆಲೆಯಲ್ಲಿ, ಸಮಾಜ ಮತ್ತು ಸಂಸ್ಕೃತಿ ಚಿಂತಕರಾಗಿರುವ ಡಾ.ಕೆ.ಷರೀಫಾ ಅವರ ಆಶಯ.</strong></p>



<p>ಹಾವೇರಿಯಲ್ಲಿ ದಿನಾಂಕ 6-1-202೩ ರಿಂದ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತರು, ಮತ್ತು ಮುಸಲ್ಮಾನ&nbsp; ಸಾಹಿತಿಗಳನ್ನು ಒಳಗೊಂಡಿಲ್ಲವೆಂದು ಅದರಲ್ಲೂ ಮಹಿಳೆಯರ ಅವಗಣನೆ ಕುರಿತು ವಿವಾದ ಸೃಷ್ಟಿಯಾಗಿದೆ. ಹಿಂದೆ 1979ರಲ್ಲಿ ಧರ್ಮಸ್ಥಳದಲ್ಲಿ ನಡೆದ 51ನೇ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಆಗ ಪರಿಷತ್ತಿನ ಅಧ್ಯಕ್ಷರಾದ ಹಂಪ ನಾಗರಾಜಯ್ಯನವರಿಗೆ ಚೆನ್ನಣ್ಣ ವಾಲೀಕಾರ ಮತ್ತು ಜಂಬಣ್ಣ ಅಮರಚಿಂತ ಅವರು ಹೋಗಿ ಸಮ್ಮೇಳನದಲ್ಲಿ ದಲಿತ ಗೋಷ್ಟಿಯೊಂದನ್ನು ಇಡಲು ಹೇಳಿದಾಗ ಹಂಪನಾರವರು “ಕನ್ನಡ ಸಾಹಿತ್ಯದಲ್ಲಿ ದಲಿತ ಬಲಿತ ಕಲಿತ ಎಂದೇನೂ ಇಲ್ಲ” ಎಂದು ಹೇಳಿದಾಗ ಅದನ್ನು ವಿರೋಧಿಸಿದ ಸಾಹಿತಿಗಳು ಅಂದಿನ ಪರಿಷತ್ತಿಗೆ ಪರ್ಯಾಯವಾಗಿ ಬಂಡಾಯ ಸಾಹಿತ್ಯ ಸಂಘಟನೆಯನ್ನು ಕಟ್ಟಿದ್ದು ಈಗ ಇತಿಹಾಸ.</p>



<p>ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆಯೇ ಹೊರತು ಅದು ಮನುವಾದಿಗಳ ಕೇಂದ್ರವಲ್ಲ. 1915ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ನೂರಾ ಏಳು ವರ್ಷಗಳ ಇತಿಹಾಸದಲ್ಲಿ ಇಲ್ಲಿಯವರೆಗೂ ಒಬ್ಬ ಮಹಿಳೆಯೂ ಅಧ್ಯಕ್ಷೆಯಾಗದಿರುವ ಕೆಟ್ಟ ದುರಿತ ಕಾಲದಲ್ಲಿ ನಾವು ಪರಿಷತ್ತಿನ ಸಮ್ಮೆಳನಗಳಲ್ಲಿ ಸಾಮಾಜಿಕ ನ್ಯಾಯವನ್ನು ಬಯಸುತ್ತಿದ್ದೇವೆ. ಮಹಿಳೆಯರ ಅವಗಣನೆಯನ್ನು ಪ್ರಶ್ನಿಸುತ್ತಿದ್ದೇವೆ. ಪರಿಷತ್ತಿನ ಅಧ್ಯಕ್ಷರು, ಕೋಮುವಾದಿ ಪಕ್ಷದ ಶಾಸಕರು ಸಂಸದರ ಮೂಲಕವೇ ಆರಿಸಿ ಬಂದಾಗ ಅವರಿಗೆ ವಿಧೇಯರಾಗಿರುತ್ತಾರೆ. ಆದರೆ ಪರಿಷತ್ತು ನಡೆಯುತ್ತಿರುವುದು ಸರ್ಕಾರದ ಅನುದಾನದಿಂದ ಮತ್ತು ಸರ್ಕಾರವು ನೀಡುತ್ತಿರುವ ಹಣ ಜನಸಾಮಾನ್ಯರದು.&nbsp; ರಾಜಕೀಯ ಪಕ್ಷ ಅಧಿಕಾರದಲ್ಲಿರಲಿ. ಆದರೆ, ಅವರು ಜನತೆಯ ಅಭಿಪ್ರಾಯವನ್ನು ಗೌರವಿಸಬೇಕಾಗುತ್ತದೆ. ಆಗ ಸಹಜವಾಗಿಯೇ ಅಲ್ಲಿ ಪ್ರಾತಿನಿಧ್ಯದ ಪ್ರಶ್ನೆ ಬರುತ್ತದೆ. ನಾಡಿನ ಬಹುಸಂಸ್ಕೃತಿಗೆ ಧಕ್ಕೆಯಾದಾಗ ಅದನ್ನು ಪ್ರತಿಭಟಿಸುವುದು ನಾಗರೀಕರ ಜವಾಬ್ದಾರಿಯಾಗಿದೆ.&nbsp;&nbsp;&nbsp;&nbsp;&nbsp;&nbsp;</p>



<p>&nbsp;ಎಲ್ಲ ಬಗೆಯ ಸಾಹಿತ್ಯಗಳಿಗೂ ಧರ್ಮಗಳಿಗೂ ಅವಿನಾಭಾವ ಸಂಬಂಧವಿದೆ. ಧರ್ಮಗಳಿಗೂ ಸಾಹಿತ್ಯಕ್ಕೂ ಇರುವ ನಂಟು ತುಂಬಾ ಪ್ರಾಚೀನವಾದುದು. ಬದುಕು ಚಲನಶೀಲವಾಗಿರುವಂತೆ ಸಾಹಿತ್ಯವೂ ಚಲನಶೀಲವಾಗಿದೆ. ಕನ್ನಡ ಸಾಹಿತ್ಯಕ್ಕೆ ಇರುವ ದೀರ್ಘ ಇತಿಹಾಸವನ್ನು ಒಂದು ಬಾರಿ ಅವಲೋಕಿಸಿದಾಗ ಅಲ್ಲಿ ಆರಂಭದ ಕನ್ನಡ ಸಾಹಿತ್ಯದ ಘಟ್ಟಗಳಲ್ಲಿ ಮುಸ್ಲಿಂ ಮಹಿಳಾ ಸಂವೇದನೆಗಳನ್ನು ಕಾಣಲು ಸಾಧ್ಯವಾಗುವುದಿಲ್ಲ.&nbsp;</p>



<p>14ನೇ ಶತಮಾನದಿಂದ ಹಿಡಿದು 19ನೇ ಶತಮಾನದವರೆಗೂ ಮುಸ್ಲಿಂ ದೊರೆಗಳು, ರಾಣಿಯರು ರಾಜ್ಯಭಾರ ಮಾಡಿದ ಚರಿತ್ರೆಯನ್ನು ನಾವು ಕಾಣಬಹುದಾಗಿದೆ. ಅಲ್ಲಿ ಕನ್ನಡದ ಮುಸ್ಲಿಂ ಸಾಹಿತಿಗಳು ಸಿಗುವುದಿಲ್ಲ. ಅದಕ್ಕೆ ಅದರದೇ ಆದ ಐತಿಹಾಸಿಕ ಕಾರಣಗಳಿವೆ. ಒಬ್ಬ ಲೇಖಕ ತಾನು ಬಯಸಿದರೂ ಬಯಸದೇ ಇದ್ದರೂ ಸಹ ಯಾವುದಾದರೂ ಒಂದು ಧರ್ಮದಲ್ಲಿ ಹುಟ್ಟುವುದು ಅನಿವಾರ್ಯವಾಗಿದೆ. ಆದರೆ ಅವರು ಆ ಧರ್ಮದ ಚೌಕಟ್ಟುಗಳನ್ನು ಮೀರುವ ಕ್ರಿಯೆಯಿಂದ ಸಾರ್ವಜನಿಕ, ಮತ್ತು ಸಾರ್ವತ್ರಿಕ ವ್ಯಕ್ತಿಗಳಾಗುತ್ತಾರೆ.</p>



<p>ಇಪ್ಪತ್ತನೆಯ ಶತಮಾನದಲ್ಲಿ&nbsp; ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಮತ್ತು ದಲಿತ ಸಾಹಿತ್ಯ&nbsp; ಘಟ್ಟಗಳು ಮತ್ತು ಚಳುವಳಿಗಳು ನಡೆದವು. ಆದರೆ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳೆಯರ ಸಂವೇದನೆಗಳು ದಾಖಲಾಗಲು ಆರಂಭಿಸಿದ್ದು ದಲಿತ ಬಂಡಾಯದ ಕಾಲದಲ್ಲಿ ಎಂದು ಹೇಳಬಹುದು. ಅಲ್ಲಿಂದ ಇಲ್ಲಿಯವರೆಗೆ ಅನೇಕ ಮುಸ್ಲಿಂ ಲೇಖಕರು ಕನ್ನಡದಲ್ಲಿ ಕಥೆ, ಕವನ, ಕಾದಂಬರಿ, ಲೇಖನ, ನಾಟಕ, ವಿಮರ್ಶೆ ಹೀಗೆ ಹಲವಾರು ಪ್ರಕಾರಗಳಲ್ಲಿ ಸಾಹಿತ್ಯವನ್ನು ರಚಿಸುತ್ತ ಕನ್ನಡ ಸಾಹಿತ್ಯ ಲೋಕವನ್ನು ಮುಸ್ಲಿಂ ಸಂವೇದನೆಗಳ ತೊರೆಯನ್ನು ಹರಿಸುತ್ತ ಶ್ರೀಮಂತಗೊಳಿಸಿದ್ದಾರೆ.</p>



<p>ಕನ್ನಡದಲ್ಲಿ ಮುಸ್ಲಿಂ ಮಹಿಳಾ ಸಂಕಟಗಳನ್ನು, ದಲಿತ ಬಂಡಾಯ ಸಂದರ್ಭದಲ್ಲಿ ಬಂದ ಈ ಸಮುದಾಯದ ಸಾಹಿತಿಗಳು ಈ ಧರ್ಮದೊಳಗಿನ ಕುಟುಂಬ, ಲಿಂಗತಾರತಮ್ಯ, ಬಹುಪತ್ನಿತ್ವ, ತಲ್ಲಾಕ್, ಇದ್ದತ್, ಖುಲಾಹ್, ಕೋಮುವಾದ, ಮೂಲಭೂತವಾದ, ಮತಾಂತರ, ಮೆಹರ್, ವಸ್ತ್ರಸಂಹಿತೆ, ವರ್ಗನೆಲೆ, ಪುರುಷಾಧಿಪತ್ಯ, ಅವಳ ಚಲನವಲನದ ಮೇಲೆ ನಿಯಂತ್ರಣ, ಹೀಗೆ ಹಲವಾರು ವಿಷಯಗಳ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಆದಾಗ್ಯೂ ಅವರ ಅನುಭವಕ್ಕೆ ದಕ್ಕಿದ ಸೀಮಿತ ವಿಷಯಗಳು ಮಾತ್ರ ಸಾಹಿತ್ಯದಲ್ಲಿ ದಾಖಲಾಗಿವೆ. ಒಂದು ಜನಸಮುದಾಯದ ಹೋರಾಟಗಳು ಲೇಖನಿಗಿಂತ ಹರಿತವಾದವುಗಳು. ಬರಹವು ಇಂತಹ ಚಳುವಳಿ ಹೋರಾಟಗಳ ಮೂಲಕವೇ ಯಾವುದೇ ಧರ್ಮದಡಿಯ ಅಧರ್ಮವನ್ನು ಪ್ರಶ್ನಿಸುವ ಕಸುವು ಪಡೆಯುತ್ತದೆ. ಈ ಲೇಖಕರು ಧರ್ಮದ ಒಳಗಿನ ಮತ್ತು ಹೊರಗಿನ ವಿರೋಧಿ ಶಕ್ತಿಗಳನ್ನು ತೆರೆದು ತೋರಿದರು. ಈ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಆಗಿನ ಕಾಲದಲ್ಲಿ ದಲಿತ ಚಳುವಳಿಯಿಂದ ಬಂದ ಲೇಖಕರು ಪುರೋಹಿತಶಾಹಿಯನ್ನು ವಿರೋಧಿಸಿ ಬರೆದಂತೆ ಮುಸ್ಲಿಂ ಸಮುದಾಯದ ಸಾಹಿತಿಗಳು ತಮ್ಮ ಧರ್ಮದ ಒಳಗಿನ ಶತ್ರು ಮತ್ತು ಹೊರಗಿನ ಶತ್ರುಗಳನ್ನು ಏಕಕಾಲಕ್ಕೆ ಗುರುತಿಸಿದರು. ಮೂಲಭೂತವಾದವನ್ನು ಪ್ರಶ್ನಿಸುತ್ತಲೇ ಮಹಿಳಾ ಶೋಷಣೆಯ ವಿವಿಧ ಮುಖಗಳನ್ನು ಮುಖಾಮುಖಿ ಮಾಡಿದರು. ಬೊಳುವಾರು ಮಹಮ್ಮದ್ ಕುಂಞಯವರು “ಇಡೀ ಜಗತ್ತಿನಲ್ಲಿ ಮುಸ್ಲಿಂ ಗೆಳತಿಯರು ಒಟ್ಟಾರೆ ಕಾಲದ ಅಗತ್ಯಕ್ಕೆ ಸ್ಪಂದಿಸಲಾರದಂತಹ ಸಂಕ್ರಮಣ ಕಾಲ ಒದಗಿ ಬಂದಿದೆ. ಇಂಡಿಯಾದ ಅಲ್ಪಸಂಖ್ಯಾತರ ಬರವಣಿಗೆಗೆ ವಿಶಿಷ್ಟ&nbsp; ಆರ್ಥವಿದೆ” ಎನ್ನುತ್ತಾರೆ. ಅದಷ್ಟೇ ಅಲ್ಲದೇ ಮುಂದುವರಿಯುತ್ತಾ “ದಲಿತ ಪ್ರಜ್ಞಾವಂತನೊಬ್ಬ ತನ್ನ ಸ್ವಾತಂತ್ರ್ಯದ ಅನ್ವೇಷಣೆಯಲ್ಲಿ ತನ್ನ ಕೋಮಿನ ಮೇಲುವರ್ಗದವನನ್ನಷ್ಟೇ ವಿರೋಧಿಸಿದರೆ ಸಾಕಾಗುತ್ತದೆ. ಆದರೆ ಮುಸ್ಲಿಂ ಪ್ರಜ್ಞಾವಂತನೊಬ್ಬ ತನ್ನ ಕೋಮಿನ ಮೇಲುವರ್ಗದ ವಿರುದ್ಧ ಧ್ವನಿಯೆತ್ತುವುದರ ಜತೆಯಲ್ಲೇ ಮುಸ್ಲಿಂ ವಿರೋಧಿ ಧೋರಣೆಗಳನ್ನು ತಳೆಯುವ ಮುಸ್ಲಿಮೇತರ ಕೋಮುಶಕ್ತಿಯನ್ನೂ ಸಹ ವಿರೋಧಿಸ ಬೇಕಾಗುತ್ತದೆ” ಎನ್ನುತ್ತಾರೆ.</p>



<p>ಮುಸ್ಲಿಂ ಸಮುದಾಯ ಕನ್ನಡದಲ್ಲಿ ಬರೆಯಲು ಆರಂಭಿಸಿದ ಕಾಲವೆಂದರೆ ಅದು ಶಿಶುನಾಳ ಷರೀಫರಿಂದಲೇ ಆರಂಭವಾಗುತ್ತದೆ.&nbsp; ಆನಂತರದಲ್ಲಿ ಈ ಸಮುದಾಯದಿಂದ ಬಂದ ಮೊದಲ ತಲೆಮಾರಿನ ಬರಹಗಾರರಾದ ಎಸ್.ಕೆ.ಕರಿಂಖಾನ್, ಎಂ.ಜೀವನ, ಎಂ.ಅಕಬರಲಿ, ಬಿ.ಎ.ಸನದಿ, ಅಬ್ದುಲ್ ಮಜೀದ್‍ಖಾನ್, ಎಂ.ದಸ್ತಗೀರ್, ಕೆ.ಎಸ್.ನಿಸಾರ್ ಅಹಮದ್ ಮೊದಲಾದ ಸಾಹಿತಿಗಳು ಬಂದರು. ಎರಡನೇ ತಲೆಮಾರಿನ ಲೇಖಕರಾದ ಫಕೀರ್ ಮಹಮದ್ ಕಟ್ಪಾಡಿ, ಬೊಳುವಾರು ಮಹಮದ್ ಕುಂಙ್ಞ , ಸಾರಾ ಅಬೂಬಕರ್‌, ಮುಮ್ತಾಜ್ ಬೇಗಂ (ಮುಲ್ಕಿ) ಕೆ.ಷರೀಫಾ, ಅಬ್ದುಲ್ ರಶೀದ್,&nbsp; ರಂಜಾನ್ ದರ್ಗಾ, ರಹಮತ್ ತರೀಕೆರೆ, ಅಬ್ಬಾಸ್ ಮೇಲಿನಮನಿ, ಡಿ.ಬಿ.ರಜಿಯಾ, ಪೀರಬಾಷಾ, ಬಾನು ಮುಷ್ತಾಕ್, ನಜೀರ್ ಚಂದಾವರ, ಸಬೀಹಾ, ಹಸನ್ ನಯಿಂ ಸುರಕೋಡ, ಎನ್.ಎಮ್. ಇಸ್ಮಾಯಿಲ್, ಎಲ್. ಕೆ.ಅತೀಕ್‌, ಮುಜಫರ್ ಅಸ್ಸಾದಿ, ಅದಿಬ್ ಅಖ್ತರ್, ದಸ್ತಗೀರಸಾಬ ದಿನ್ನಿ, (ಕೊಪ್ಪಳದ) ಮುಮ್ತಾಜ ಬೇಗಂ, ರಜಿಯಾ ಬಳಬಟ್ಟಿ, ಎಂ.ಷಹನಾಜ್ ಮುಂತಾದ ಮುಸ್ಲಿಂ ಸಮಾಜದ ಲೇಖಕರು ಮುನ್ನೆಲೆಗೆ ಬಂದರು.</p>



<p>ಶತಶತಮಾನಗಳಿಂದ ಮೌನವಾಗಿದ್ದ ಈ ಜನಾಂಗದ ಮಹಿಳಾ ಸಾಂಸ್ಕೃತಿಕ ಜಗತ್ತು ಅನಾವರಣಗೊಂಡು ದಾಖಲಿಸಿಕೊಂಡು, ಜನಮನ್ನಣೆ ಪಡೆಯಿತು. ಕನ್ನಡದಲ್ಲಿ ರಚಿತವಾದ ಮೊದಲ ಮಹಿಳಾ ಕಾದಂಬರಿ, 1908 ರಲ್ಲಿ ಶಾಂತಾಬಾಯಿ ನೀಲಗಾರರವರು ಬರೆದ “ಸದ್ಗುಣಿ ಕೃಷ್ಣಾಬಾಯಿ” ಪ್ರಕಟವಾಯಿತು. ಆದರೆ ಸಾರಾ ಅಬೂಬಕರವರು ಬರೆದ “ಚಂದ್ರಗಿರಿಯ ತೀರದಲ್ಲಿ” 1984ರಲ್ಲಿ ಪ್ರಕಟವಾಯಿತು. ಹಿಂದೂ ಮಹಿಳೆಯೊಬ್ಬಳು ಕನ್ನಡದಲ್ಲಿ ಕಾದಂಬರಿ ರಚಿಸಿದ 75 ವರ್ಷಗಳ ಬಳಿಕ ಒಬ್ಬ ಮುಸ್ಲಿಂ ಮಹಿಳೆ ಕನ್ನಡದಲ್ಲಿ ಮೊದಲ ಕಾದಂಬರಿಯೊಂದು ಬರೆಯುತ್ತಾಳೆಂದರೆ ಅದಕ್ಕೆ ಅದರದೇ ಆದ ಸಾಂಸ್ಕೃತಿಕ&nbsp; ಚಾರಿತ್ರಿಕ, ಮತ್ತು ರಾಜಕೀಯ ಕಾರಣಗಳಿರುತ್ತವೆ. ಕನ್ನಡದಲ್ಲಿ ಮುಸ್ಲಿಂ ಮಹಿಳಾ ಸಂವೇದನೆಯ ಮೊದಲ ಕಾದಂಬರಿ ಸಾರಾ ಅಬೂಬಕ್ಕರ್‌ ರವರದು 1984ರಲ್ಲಿ ಪ್ರಕಟವಾದರೆ, ಕನ್ನಡದ ಮೊದಲ ಮುಸ್ಲಿಂ ಕಥೆಗಾರ್ತಿ ಮುಮ್ತಾಜ ಬೇಗಂ ರವರ ಮೊದಲ ಕಥಾ ಸಂಕಲನ ‘ಅವ್ಯಕ್ತ’ 1985ರಲ್ಲಿ ಪ್ರಕಟವಾಯಿತು. 1975ರಿಂದಲೂ ಕವಿತೆಗಳನ್ನು ಬರೆಯುತ್ತಿರುವ ಡಾ.ಕೆ.ಷರೀಫಾರವರು ಮುಸ್ಲಿಂ ಸಮಾಜದಿಂದ ಬಂದ ಕನ್ನಡದ ಮೊದಲ ಕವಯಿತ್ರಿಯಾದರು.ಮುಂದೆ ಹಲವಾರು ಬರಹಗಾರ್ತಿಯರು ಈ ಸಮುದಾಯದಿಂದ ಬಂದರು</p>



<p>ಮುಂದೆ ಶಾಬಾನುವಿನ ಜೀವನಾಂಶದ ತಲ್ಲಾಕಿನ ವಿಷಯ ಬಂದಾಗ ಮುಸ್ಲಿಂ ಮೂಲಭೂತವಾದಿಗಳು “ಇದು ನಮ್ಮ ಸಮಾಜದ ಆಂತರಿಕ ವಿಷಯ”ವೆಂದು ಇತರರ ಪ್ರವೇಶವನ್ನು ನಿರಾಕರಿಸಿದವು. ಅಕ್ರಮಣಕಾರಿ “ದೇಶಭಕ್ತಿ” ಸಾಬೀತುಪಡಿಸುವಂತಹ ಮಾದರಿಗಳು ನಂತರದ ಕಾಲಘಟ್ಟದಲ್ಲಿ ಸೃಷ್ಟಿಯಾದವು. ಅನಂತರದಲ್ಲಿ ಭಾರತೀಯ ಮುಸ್ಲಿಮರಲ್ಲಿ ಅಭದ್ರತೆ, ಅನಾಥಪ್ರಜ್ಞೆ ಕಾಡತೊಡಗಿದವು. ಅಲ್ಲದೇ ಹಿಂದೂ ಮುಸ್ಲಿಂ ಎರಡೂ ಧರ್ಮದ ಮಹಿಳೆಯರ ಮೇಲೆ ಧರ್ಮಾಚರಣೆಯ ಒತ್ತಡಗಳೂ ಹೆಚ್ಚಾದವು. ರೂಪ್ ಕನ್ವರಳ ಸತಿಯಾದುದು, ಬಾಬ್ರಿ ಮಸೀದಿ ಧ್ವಂಸವಾದುದು ಇಡೀ ಜನಶಕ್ತಿಯನ್ನು ಕೋಮುವಾದಿಗಳನ್ನಾಗಿಸಿತು. ಆಗಲೇ ಸಾಹಿತ್ಯ ಚಳುವಳಿಗಳು ಮತ್ತು ಸಾಂಸ್ಕೃತಿಕ ಚಳುವಳಿಗಳಿಗೆ ಹಿನ್ನಡೆಯಾಯಿತು. ಯಾವ ಧರ್ಮದ ಕೋಮುವಾದವೇ ಇರಲಿ ಅದು ಆಯಾ ಧರ್ಮದ ಮಹಿಳೆಯರನ್ನು ಹಿಂಸೆ, ಕ್ರೌರ್ಯಗಳಿಗೆ ಬಲಿಯಾಗಿಸಿತು. ಇಂತಹ ನಿರ್ಭಂಧಗಳು ಅವಳ ಬದುಕಿನ ನೆಲೆಗಳನ್ನು ಕಿತ್ತುಕೊಳ್ಳತೊಡಗಿತು. ಅವಳ ಪ್ರಗತಿಗೆ ಮಾರಕವಾಗತೊಡಗಿದ್ದಂತೂ ಸತ್ಯ. ಶಾಹೀನ್‍ಬಾಗ್‍ನ ಎನ್.ಆರ್.ಸಿ., ಸಿಎಎ, ಕುರಿತು ಹೋರಾಟ ಮಾಡಿದ ದಾದಿಯರು ಇಂದು ನಮ್ಮ ಕಣ್ಣ ಮುಂದಿದ್ದಾರೆ. ಅವರು ತಮ್ಮ ಪರ್ಯಾಯಗಳನ್ನು ರೂಪಿಸಿಕೊಳ್ಳುತ್ತಲೇ ಹಕ್ಕು ಸ್ಥಾಪನೆಯತ್ತ ಸಾಗಿದ ಧೀಮಂತ ಮಹಿಳೆಯರಾಗಿದ್ದಾರೆ.&nbsp;&nbsp;&nbsp;&nbsp;&nbsp;</p>



<p>ಅನಂತರ ಬರುವ ಮೂರನೇ ತಲೆಮಾರಿನ ಬರಹಗಾರರಾದ, ಸಂತೆಬೆನ್ನೂರ ಫೈಜ್ ನಟರಾಜ, ಇಸ್ಮತ್ ಫಜೀರ್, ಚಾಂದ್‌ ಪಾಷ, ದಾದಾಪೀರ್ ಜೈಮನ್, ನಜ್ಮಾ ನಜೀರ್, ಮಿಸ್ರಿಯಾ, ತಾಜುಮಾ, ಮುಮ್ತಾಜ್ ಬಿರಾದಾರ್, ಯು.ಟಿ.ಫರ್ಜಾನಾ, ಮುಹಮ್ಮದ್ ಮುಸ್ತಫಾ, ಫಾತಿಮಾ ರಲಿಯಾ, ಬಿ.ಎಂ ಸಿಹಾನ ಮುಂತಾದ ಮುಸ್ಲಿಂ ಸಮುದಾಯದಿಂದ ಮೂರು ತಲೆಮಾರುಗಳಿಂದಲೂ ಬಂದ ಇಷ್ಟೆಲ್ಲ ಸಾಹಿತಿಗಳಿರಬೇಕಾದರೆ ಹಾಗೂ ಇವರೆಲ್ಲರೂ ಕನ್ನಡ ಸಾಹಿತ್ಯಕ್ಕೆ ತಮ್ಮ ಅಮೂಲ್ಯ ಕೊಡುಗೆಗಳನ್ನು ನೀಡಿರುವಾಗಲೂ ಅವರನ್ನು ದೂರ ಮಾಡುವುದು ಸರಿಯೇ? ಹುಟ್ಟಿದ ಮನೆಯಂಗಳದಿಂದ, ವ್ಯಾಪಾರದಿಂದ, ಹಲಾಲ್ಕಟ್, ಜಟ್ಕಾಕಟ್, ತಲೆ ಮೇಲಿನ ತುಂಡು ಬಟ್ಟೆಯಿಂದ, ಈಗ ಪರಿಷತ್ತಿನ ಸಮ್ಮೇಳನದಿಂದಲೇ ಹೊರಗು ಮಾಡುತ್ತಿದ್ದಾರಲ್ಲ ಇದು ನ್ಯಾಯವೇ?. ಪರಿಷತ್ತಿನಂತಹ ಮಹತ್ತ್ವದ ಸಂಸ್ಥೆಯೊಂದು ಕೋಮುವಾದಿಗಳ ಕೈಗೆ ಸಿಕ್ಕು ಯಾವ ರೀತಿ ಅಂಗವಿಕಲವಾಗುತ್ತಿದೆ ಎಂಬುದರ ಬಗ್ಗೆ ಕನ್ನಡಿಗರು ಗಮನಿಸುತ್ತಿದ್ದಾರೆ. ಮಹಿಳೆಯರು, ದಲಿತರು ಮತ್ತು ಮುಸ್ಲಿಮರನ್ನು ದೂರವಿಟ್ಟು ಇವರು ಏನನ್ನು ಸಾಧಿಸುವವರಿದ್ದಾರೆ? ಒಟ್ಟು 86 ಜನ ಸನ್ಮಾನಿತರಲ್ಲಿ ದೊಡ್ಡಮನಿ ಮತ್ತು ನದಾಫ್ ಇಬ್ಬರನ್ನು ಬಿಟ್ಟರೆ ಬೇರಾರೂ ಮುಸ್ಲಿಮರಿಲ್ಲ. ಒಟ್ಟು ಮೂರು ಬೇರೆ, ಬೇರೆ ವೇದಿಕೆಗಳಿದ್ದು, ಮೊದಲ ವೇದಿಕೆಯಲ್ಲಿ 9 ಗೋಷ್ಟಿಗಳಿದ್ದು ಅದರಲ್ಲಿ ಒಬ್ಬ ಭಾಷಣಕಾರರೂ ಮುಸ್ಲಿಮರಿಲ್ಲ. ಅದರಲ್ಲಿ ಒಬ್ಬ ಕವಿಯೂ ಮುಸ್ಲಿಮನಿಲ್ಲ. ಎರಡನೇ ವೇದಿಕೆಯಲ್ಲಿ 12 ಗೋಷ್ಟಿಗಳಿದ್ದು, ಅದರಲ್ಲಿ ಕವನ ಓದುವುದಕ್ಕೆ ಮಾತ್ರ ಒಬ್ಬ ಮುಸ್ಲಿಂ ಮಹಿಳೆಯಿದ್ದಾರೆ. ಮೂರನೇ ವೇದಿಕೆಯಲ್ಲಿ 12 ಗೋಷ್ಟಿಗಳಿದ್ದು ಅದರಲ್ಲಿ ಕವಿಗೋಷ್ಟಿಗೊಬ್ಬರು ಮತ್ತು ಗೋಷ್ಠಿಯಲ್ಲಿ ಒಬ್ಬರನ್ನು ಬಿಟ್ಟರೆ ಇನ್ನುಳಿದವರನ್ನು ಸ್ವಾಗತಕ್ಕೆ, ವಂದನೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಪರಿಷತ್ ಅಧ್ಯಕ್ಷರು ರಥ ಕೆತ್ತಿದವರನ್ನು, ಹೂ ಹೆಣೆದವರನ್ನು, ಕಸ ಗುಡಿಸಿದವರನ್ನು, ಷಾಮಿಯಾನಾ ಕಟ್ಟಿದವರನ್ನೆಲ್ಲ ಮುಸ್ಲಿಮರೆಂದು ಹೇಳಿ ದಿಕ್ಕು ತಪ್ಪಿಸುವುದೆಂದರೆ ಏನು?.&nbsp;</p>



<p>ಇಲ್ಲಿ ಪ್ರಶ್ನೆಯಿರುವುದು ಸಾಹಿತಿಗಳದು. ಜೋಶಿಯವರು ಇಂತಹ ಅಪಕ್ವ ಹೇಳಿಕೆಗಳನ್ನು ನೀಡಿ ಪರಿಷತ್ತಿಗೆ ಮುಜುಗರ ತಾರದಿರಲಿ. ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಮುಸ್ಲಿಮರನ್ನು ಮರೆಯದಿರಲಿ. ಶಿಶುನಾಳ ಷರೀಫರ ನಾಡಿನಲ್ಲಿ ಷರೀಫರನ್ನು ಮತ್ತು ಗುರು ಗೋವಿಂದಭಟ್ಟರನ್ನು ಅಗಲಿಸದಿರಲಿ. ಸೌಹಾರ್ದದ ಸಂಕೇತವಾಗಿ ಜೊತೆಯಾಗಿ ಮಲಗಿರುವ ಅವರ ಸಮಾಧಿಗಳನ್ನು ಬೇರೆ ಬೇರೆ ಮಾಡದಿರಲಿ.</p>



<p><strong>ಡಾ.ಕೆ.ಷರೀಫಾ</strong></p>



<p><strong>ಸಮಾಜ ಮತ್ತು ಸಂಸ್ಕೃತಿ ಚಿಂತಕರು.</strong><br></p>
]]></content:encoded>
					
		
		
			</item>
		<item>
		<title>ದಲಿತರು ದೇವರು-ದೇವಾಲಯಗಳನ್ನು ಬಹಿಷ್ಕರಿಸಬೇಕು.</title>
		<link>https://peepalmedia.com/dalits-should-boycott-the-temples/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 04 Jan 2023 03:48:26 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[bengalure]]></category>
		<category><![CDATA[dalith]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18860</guid>

					<description><![CDATA[ದೇವರ ಗುಡಿ ಕಟ್ಟಿದ್ದು, ಆ ಗುಡಿಗೆ ಬಣ್ಣ ಬಳಿದದ್ದು, ದೇವರ ವಿಗ್ರಹ ಕೆತ್ತಿದ್ದು, ಆ ದೇವರನ್ನು ಗುಡಿಯೊಳಗೆ ಪ್ರತಿಷ್ಠಾಪಿಸಿದ್ದು ದೇವರ ಪೂಜೆಗೆ ಹೂ ಬೆಳೆದಿದ್ದು, ತೀರ್ಥದ ನೀರಿಗೆ ಬಾವಿ ತೋಡಿದ್ದು, ಪ್ರಸಾದಕ್ಕೆ ಹಣ್ಣು-ಧಾನ್ಯ ಬೆಳೆದಿದ್ದು, ಪ್ರಸಾದ ಮಾಡಲು ಸೌದೆ/ಅನಿಲ ಹೊತ್ತಿದ್ದು ದಲಿತರೇ. ಆದರೂ ಇವರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಅಪಮಾನ, ನೋವು ತಪ್ಪಿಲ್ಲ&#8230;ಮುಂದೆ ಓದಿ ಕಲಬುರಗಿಯ ಪತ್ರಕರ್ತ ವಿಕ್ರಂ ತೇಜಸ್‌ ಅವರ ಲೇಖನ. ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಮನುವಾದಿಗಳು ದಲಿತರನ್ನು, ಅಸ್ಪೃಶ್ಯರನ್ನು ಆದಿವಾಸಿಗಳನ್ನು ಹಾಗೂ ಮಹಿಳೆಯರನ್ನು [&#8230;]]]></description>
										<content:encoded><![CDATA[
<p><strong>ದೇವರ ಗುಡಿ ಕಟ್ಟಿದ್ದು, ಆ ಗುಡಿಗೆ ಬಣ್ಣ ಬಳಿದದ್ದು, ದೇವರ ವಿಗ್ರಹ ಕೆತ್ತಿದ್ದು, ಆ ದೇವರನ್ನು ಗುಡಿಯೊಳಗೆ ಪ್ರತಿಷ್ಠಾಪಿಸಿದ್ದು ದೇವರ ಪೂಜೆಗೆ ಹೂ ಬೆಳೆದಿದ್ದು, ತೀರ್ಥದ ನೀರಿಗೆ ಬಾವಿ ತೋಡಿದ್ದು, ಪ್ರಸಾದಕ್ಕೆ ಹಣ್ಣು-ಧಾನ್ಯ ಬೆಳೆದಿದ್ದು, ಪ್ರಸಾದ ಮಾಡಲು ಸೌದೆ/ಅನಿಲ ಹೊತ್ತಿದ್ದು ದಲಿತರೇ. ಆದರೂ ಇವರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಅಪಮಾನ, ನೋವು ತಪ್ಪಿಲ್ಲ&#8230;ಮುಂದೆ ಓದಿ ಕಲಬುರಗಿಯ ಪತ್ರಕರ್ತ ವಿಕ್ರಂ ತೇಜಸ್‌ ಅವರ ಲೇಖನ.</strong></p>



<p>ಸಾವಿರಾರು ವರ್ಷಗಳಿಂದ ಈ ದೇಶದಲ್ಲಿ ಮನುವಾದಿಗಳು ದಲಿತರನ್ನು, ಅಸ್ಪೃಶ್ಯರನ್ನು ಆದಿವಾಸಿಗಳನ್ನು ಹಾಗೂ ಮಹಿಳೆಯರನ್ನು ಪ್ರಾಣಿಗಳಂತೆ ನಡೆಸಿಕೊಂಡು ಇರುವೆಯಂತೆ ಸಾಯಿಸಿದರೂ ಇವರು ನಂಬಿರುವ ಮುಕ್ಕೋಟಿ ದೇವರುಗಳಲ್ಲಿ ಯಾವೊಬ್ಬ ದೇವರು ಸಹ ಬಂದು ಇವರನ್ನು ರಕ್ಷಣೆ ಮಾಡಲಿಲ್ಲ. ಆದ್ದರಿಂದ ಈ ಸತ್ಯವನ್ನು ಅರ್ಥಮಾಡಿಕೊಂಡು ಈಗ ಇವರೇ ಆ ದೇವರು ಮತ್ತು ದೇವಾಲಯಗಳನ್ನು ಬಹಿಷ್ಕರಿಸಬೇಕು.</p>



<p>ಇವರ ಏಳಿಗೆಗೆ ರಾಜ ವೈಭವವನ್ನು ತೊರೆದ ವಿಶ್ವಗುರು ಬುದ್ಧ, ಇವರಿಗಾಗಿಯೇ ಕೊಲೆಯಾದ ಅಣ್ಣ ಬಸವಣ್ಣ, ತನ್ನ ಇಡೀ ಪರಿವಾರವನ್ನು ಬಲಿದಾನ ನೀಡಿ, ಇವರ ಚಿಂತೆಯಲ್ಲೇ ಹತ್ತಾರು ಕಾಯಿಲೆಗಳಿಂದ ನರಳುತ್ತಲೇ ನ್ಯಾಯ ಕೊಡಿಸಿ ಕೊನೆಯುಸಿರೆಳೆದ ಬಾಬಾಸಾಹೇಬ್ ಡಾ.ಅಂಬೇಡ್ಕರ್, ನೂರು ತರಹದ ನಿಂದನೆ, ಅವಮಾನ ಸಹಿಸಿ ಸಮ ಸಮಾಜಕ್ಕಾಗಿ ವೈಚಾರಿಕತೆಯನ್ನು ಸಾರಿದ ಮತ್ತು ಜೀವನವಿಡೀ ದೇಶ ಸುತ್ತಿ ಮಾನವೀಯತೆ ಬಿತ್ತಿದ ಕನಕ, ಕಬೀರ ಹಾಗೂ ಹಲವಾರು ಶರಣರ, ಸೂಫಿಗಳ-ಸಂತರ ಮಾರ್ಗದಲ್ಲಿ ನಡೆಯುವ ಜರೂರು ಮತ್ತು ಅನಿವಾರ್ಯತೆ ಈ ಸಮುದಾಯಕ್ಕಿದೆ.</p>



<p>ಒಂದು ಸುಳ್ಳನ್ನು ಸಾವಿರ ಸಲ ಸತ್ಯ ಸತ್ಯ ಅಂತ ಹೇಳಿ ಆ ಮಿಥ್ಯೆಯನ್ನೇ ಸತ್ಯವೆಂದು ನಂಬಿಸಿದ್ದರಿಂದ ಈ ಸಮುದಾಯ ಮೂಲ ಸತ್ಯವನ್ನು ತಿಳಿಯದೆ ಹೋದರು. ಅವರು ಸೃಷ್ಟಿಸಿದ ಹುಸಿ ದೇವರು, ನಂಬಿಕೆ ಮತ್ತು ಜೀವ ವಿರೋಧಿ ಸಂಸ್ಕಾರಗಳನ್ನು ಅಗಾಧ ಭಕ್ತಿ, ಶ್ರದ್ಧೆ ಮತ್ತು ಅತ್ಯಂತ ಪ್ರಾಮಾಣಿಕತೆಯಿಂದ ಆಚರಿಸುತ್ತ ಉಳಿಸಿ ಬೆಳೆಸಿದ ಶೋಷಿತರ ಸಮುದಾಯಗಳ ಮೇಲೆ ಅದೇ ದೇವರು, ಧರ್ಮ ಮತ್ತು ಸಂಪ್ರದಾಯಗಳನ್ನು ಮತ್ತೆ ಮತ್ತೆ ಹೇರಲಾಗುತ್ತಿದೆ. ಅವುಗಳ ಹೆಸರಿನಲ್ಲಿ ಹಲವು ರೀತಿಯ ಹಲ್ಲೆ, ಅಪಮಾನ, ಹಿಂಸೆ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಕೊಲೆಗಳಂತಹ ಘೋರ ಘಟನೆಗಳು ನಡೆದಿವೆ. ಇದನ್ನು ಅರ್ಥಮಾಡಿಕೊಳ್ಳದಿದ್ದರೆ ಇಂದು ಮುಂದೆ ಎಂದೆಂದೂ&nbsp; ಇಂಥವು ನಿರಂತರವಾಗಿ ನಡೆಯಲಿವೆ.&nbsp;</p>



<p>ದೇವರ ಗುಡಿ ಕಟ್ಟಿದ್ದು, ಆ ಗುಡಿಗೆ ಬಣ್ಣ ಬಳಿದದ್ದು, ದೇವರ ವಿಗ್ರಹ ಕೆತ್ತಿದ್ದು, ಆ ದೇವರನ್ನು ಗುಡಿಯೊಳಗೆ ಪ್ರತಿಷ್ಠಾಪಿಸಿದ್ದು ದೇವರ ಪೂಜೆಗೆ ಹೂ ಬೆಳೆದಿದ್ದು, ತೀರ್ಥದ ನೀರಿಗೆ ಬಾವಿ ತೋಡಿದ್ದು, ಪ್ರಸಾದಕ್ಕೆ ಹಣ್ಣು-ಧಾನ್ಯ ಬೆಳೆದಿದ್ದು, ಪ್ರಸಾದ ಮಾಡಲು ಸೌದೆ/ಅನಿಲ ಹೊತ್ತಿದ್ದು ಇವರೇ. ಆದರೂ ಇವರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ ಅಪಮಾನ, ನೋವು ತಪ್ಪಿಲ್ಲ. ಪ್ರಶ್ನೆ ಮಾಡಿದವರ ಮೇಲೆ ಹಲ್ಲೆ-ಕೊಲೆಗಳು ನಿಂತಿಲ್ಲ. ಇನ್ನೂ ಎಷ್ಟು ದಿನ ಈ ಅವಮಾನ ಸಹಿಸಬೇಕು? ಇನ್ನೆಷ್ಟು ದಿನ ಇವರ ಬಿಟ್ಟಿ ಚಾಕರಿ ಮಾಡಬೇಕು? ಇನ್ನೆಷ್ಟು ಜೀವಗಳ ಬಲಿ ಕೊಡಬೇಕು? ಇದನ್ನು ಅರ್ಥ ಮಾಡಿಕೊಂಡು ತಿರುಗಿ ಬೀಳದಿದ್ದರೆ ನಿತ್ಯ ನರಕ ತಪ್ಪಿದ್ದಲ್ಲ. ಇದಕ್ಕೆ ಪರಿಹಾರ ಎಂದರೆ ಕಲ್ಲು ಮಣ್ಣು ಕಟ್ಟಿಗೆ ಹಾಗೂ ಲೋಹಗಳಿಂದ ನಿರ್ಮಿತವಾದ ನಿರ್ಜೀವ ದೇವರುಗಳನ್ನು ತಿರಸ್ಕರಿಸುವ ಮೂಲಕ ದಲಿತ, ಮಹಿಳಾ ಹಾಗೂ ಎಲ್ಲಾ ಶೋಷಿತ ಸಮುದಾಯ ಎಚ್ಚೆತ್ತುಕೊಂಡು ದೇವರು ಮತ್ತು ದೇವಾಲಯಗಳನ್ನು ಬಹಿಷ್ಕರಿಸಬೇಕು.</p>



<p>ಸಂಪ್ರದಾಯವಾದಿಗಳ ಕುತಂತ್ರವನ್ನು ಅರಿತಿದ್ದ ಬಾಬಾಸಾಹೇಬರು ಜೀವವಿರೋಧಿ ಮನುಸ್ಮೃತಿ ಸುಟ್ಟುಹಾಕಿ 95 ವರ್ಷಗಳೇ ಕಳೆದಿವೆ. ಅದಕ್ಕೆ ಪ್ರತಿಯಾಗಿ ಜೀವಪರ ಸಂವಿಧಾನವನ್ನು ನೀಡಿದ್ದಾರೆ. ಆ ಸಂವಿಧಾನ ಜಾರಿಯಾಗಿ 72 ವರ್ಷಗಳು ಗತಿಸಿವೆ. ಆದರೆ, ಪ್ರತ್ಯಕ್ಷವಾಗಿ ಸಂವಿಧಾನ ಜಾರಿಯಾದರೂ, ಜಾತಿ, ಲಿಂಗ ಹಾಗೂ ವರ್ಗ ತಾರತಮ್ಯದ ರಾಜಕಾರಣದಿಂದ ಇಂದಿಗೂ ಪರೋಕ್ಷವಾಗಿ ಮನುಸ್ಮೃತಿಯೇ ಆಚರಣೆಯಲ್ಲಿದೆ. ಇದಕ್ಕೆ ಮತ್ತೊಂದು ಕಾರಣ, ಬಿಳಿ ತೊಗಲಿನ ಬ್ರಿಟಿಷರ ಸ್ಥಾನದಲ್ಲಿ ಬಿಳಿ, ಕೆಂಪು, ಕಂದು ಮಿಶ್ರ ತೊಗಲಿನ ಸಂಪ್ರದಾಯವಾದಿಗಳು ಕುಳಿತಿದ್ದಾರೆ. ಮನುಸ್ಮೃತಿಯ ಅನಿಷ್ಟಗಳನ್ನು ನಿಷೇಧಿಸಿ ಸಂವಿಧಾನ ಜಾರಿಗೊಳಿಸಬೇಕಾದ ಆಡಳಿತ ವ್ಯವಸ್ಥೆ ಭ್ರಷ್ಟವಾಗಿ, ಮನುಸ್ಮೃತಿ ಗಟ್ಟಿಗೊಳಿಸಲು ಬಿಟ್ಟಿ ತಿಂದು ಗಟ್ಟಿಯಾಗುತ್ತಿರುವ ಸೋಂಬೇರಿ ಪುರೋಹಿತಶಾಹಿ ವರ್ಗಕ್ಕೆ ಮೌಢ್ಯ ಬಿತ್ತಲು ರಾಜಾಶ್ರಯ ನೀಡುತ್ತಿವೆ. ಅಧಿಕಾರ ಹಿಡಿಯಲು ಅದೊಂದು ಅಸ್ತ್ರವಾಗಿ ಮಾಡಿಕೊಂಡು ಅನೇಕ ಸಂದರ್ಭಗಳಲ್ಲಿ ತೆರೆಯ ಮುಂದೆ ಮತ್ತು ಹಿಂದೆ ನಿಂತು ಮನುಸ್ಮೃತಿ ರಕ್ಷಿಸಲು ಕೋಮು ಗಲಭೆಗೆ ಕುಮ್ಮಕ್ಕು ನೀಡುತ್ತಿವೆ. ಆದರೆ, ಎಚ್ಚೆತ್ತುಕೊಂಡು ಪ್ರತಿರೋಧ ಒಡ್ಡಬೇಕಿದ್ದ ಶೋಷಿತ ಸಮುದಾಯ ಗಾಢ ನಿದ್ರೆಯಲ್ಲಿದೆ. ಬಾಬಾಸಾಹೇಬ ಡಾ. ಅಂಬೇಡ್ಕರ್ ಅವರು ಹೇಳಿದ ಶಿಕ್ಷಣ ಸಂಘಟನೆ ಹೋರಾಟವೆಂಬ ಮೂರು ಮುಖ್ಯ ಸೂತ್ರಗಳನ್ನು ಇವರು ಅರ್ಥಮಾಡಿಕೊಳ್ಳದೇ ವ್ಯರ್ಥ ಕಾಲ ಕಳೆಯುತ್ತಿದ್ದಾರೆ. ಇನ್ನು ಅರ್ಥವಾದವರು ಅಳವಡಿಸಿಕೊಳ್ಳದೆ ಸ್ವಾರ್ಥಿಗಳಾಗಿದ್ದಾರೆ.&nbsp;</p>



<p>2014ರ ನಂತರ ದೇವಸ್ಥಾನಗಳು ಹಾದಿ ಬೀದಿಗೊಂದು ತಲೆ ಎತ್ತಿವೆ. ಭಕ್ತಿಯ ಕಲ್ಪನೆಯೇ ಬದಲಾಗಿದೆ. ನ್ಯಾಯ, ಪ್ರೀತಿ, ಸಮಾನತೆ ಪಾತಾಳಕ್ಕೆ ಕುಸಿದಿದೆ. ಸೌಹಾರ್ದತೆಯ ಸಂಬಂಧಗಳಿಗೆ ದಿನೇ ದಿನೇ ಗೋರಿ ಕಟ್ಟಲಾಗುತ್ತಿದೆ. ಧರ್ಮಾಧಾರಿತ ಹಲ್ಲೆಗಳು&nbsp; ದ್ವೇಷದ ಡೈಲಾಗುಗಳು ಎಲ್ಲೆಲ್ಲೂ ಕೇಳುತ್ತಿವೆ. ಸಂಪ್ರದಾಯದ ಹೆಸರಿನಲ್ಲಿ ಅನಾಚಾರಗಳು ಎಲ್ಲೆ ಮೀರುತ್ತಿವೆ. ಹಳ್ಳಿ, ಗಲ್ಲಿಯಿಂದ ಹಿಡಿದು ದಿಲ್ಲಿಯವರೆಗೂ ಜಾತಿ ರಾಜಕಾರಣವೇ ರಾರಾಜಿಸುತ್ತಿದೆ. ಶೋಷಣೆಗೊಳಗಾದ ಸಮುದಾಯ ಅಜ್ಞಾನ ಹೊದ್ದು ಮಲಗಿದೆ. ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಅಕ್ಷರಸ್ಥರಾಗಿದ್ದರೂ ವಿದ್ಯಾವಂತರಾಗದೆ ವ್ಯರ್ಥ ಬದುಕು ಸಾಗಿಸುತ್ತಿದ್ದಾರೆ. ಉನ್ನತ ಶಿಕ್ಷಣ ಮತ್ತು ಸ್ಥಾನ ಪಡೆದ ಅದೆಷ್ಟೋ ಜನ ನೆಲಮೂಲದ ಸಂಸ್ಕೃತಿ ಬಿಟ್ಟು, ಹೋಮ, ಹವನ, ಪೂಜೆ ತೀರ್ಥ ಪ್ರಸಾದಗಳಂತಹ ಆರ್ಯ ಸಂಸ್ಕೃತಿಗಳ ದಾಸರಾಗುತ್ತಿದ್ದಾರೆ. ಅಂತಹ ವ್ಯಕ್ತಿಗಳು ತನ್ನ ಸಮುದಾಯಕ್ಕೆ ಸಹಾಯ ಮಾಡದೇ, ನವ ಸಂಪ್ರದಾಯವಾದಿ ವರ್ಗಕ್ಕೆ ಸೇರಿ ಮಾನಸಿಕ ಗುಲಾಮರಾಗಿದ್ದಾರೆ.</p>



<p>ಇವರ ಅಜ್ಞಾನ, ವೈಯಕ್ತಿಕ, ಸ್ವಾರ್ಥದಿಂದಾಗಿಯೇ 21ನೇ ಶತಮಾನದ ಆಧುನಿಕ ಯುಗದಲ್ಲಿಯೂ ದೇಶದಾದ್ಯಂತ ದಲಿತರ ಮೇಲೆ ಘೋರ ಅತ್ಯಾಚಾರ ಕೊಲೆಗಳು ನಡೆಯುತ್ತಿವೆ. ಇತ್ತೀಚೆಗೆ ನಮ್ಮ ರಾಜ್ಯವೂ ಉತ್ತರದ ರಾಜ್ಯಗಳೊಂದಿಗೆ ಪೈಪೋಟಿಗೆ ಇಳಿದಂತೆ ಕ್ರೌರ್ಯ ಮೆರೆಯುತ್ತಿವೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಳ್ಳೇರಹಳ್ಳಿಯಲ್ಲಿ 20ನೇ ಸೆಪ್ಟೆಂಬರ್ 2022 ರಂದು ಗ್ರಾಮ ದೇವತೆ ಮೆರವಣಿಗೆ ವೇಳೆ ಪಲ್ಲಕ್ಕಿಗೆ ಬೆಂಬಲಕ್ಕಾಗಿ ಬಳಸುವ ಗುಜ್ಜ ಕೋಲು ಕೆಳಗೆ ಬೀಳುತ್ತದೆ. ಅದನ್ನು ಮುಟ್ಟಿ ಎತ್ತಿ ಕೊಟ್ಟದ್ದಕ್ಕೆ ದಲಿತ ಯುವಕ ಚೇತನ್ ಕುಟುಂಬದವರನ್ನು ಅರುವತ್ತು ಸಾವಿರ ರೂ. ದಂಡ ವಿಧಿಸಿ ಆತನ ಕುಟುಂಬಕ್ಕೆ ಸವರ್ಣೀಯರು ಬಹಿಷ್ಕಾರ ಹಾಕಿದ್ದಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಸಮೀಪದ ಮಿಯಾಪುರದಲ್ಲಿ 4ನೇ ಸೆಪ್ಟೆಂಬರ್ 2021 ಪರಿಶಿಷ್ಟ ಜಾತಿಗೆ ಸೇರಿದ ಎರಡು ವರ್ಷದ ಮಗು ಆಂಜನೇಯ ದೇವಾಲಯ ಪ್ರವೇಶಿಸಿದ್ದಕ್ಕೆ ಅಲ್ಲಿನ ಜಾತಿವಾದಿಗಳು 25 ಸಾವಿರ ರುಪಾಯಿ ದಂಡ ವಿಧಿಸುತ್ತಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ರಥ ಮುಟ್ಟಿದಕ್ಕೆ ದಲಿತ ಯುವಕರ ಮೇಲೆ ಹಲ್ಲೆ ಮಾಡುತ್ತಾರೆ. ಹೀಗೆ ನಿತ್ಯ ನೂರಾರು ಪ್ರಕರಣಗಳು ನಡೆಯುತ್ತಲೇ ಇವೆ. ಜಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ, ದೇವಸ್ಥಾನಗಳಿಗೆ ಹೋಗುವುದರಿಂದ, ದೇವರ ಕಟ್ಟೆ, ಕೋಲು ಮುಟ್ಟಿದ ಕಾರಣಕ್ಕೆ ದಲಿತರ ಮೇಲಿನ ಹಲ್ಲೆ, ಕೊಲೆಗಳು, ಸಾಮಾಜಿಕ ಬಹಿಷ್ಕಾರ ಹಾಗೂ ದಂಡ ವಿಧಿಸುವ ಪ್ರಕರಣಗಳು ತುಂಬಾ ಹೆಚ್ಚಾಗಿವೆ. ಹಾಗಾಗಿ, ಕಲ್ಲು ಮಣ್ಣು ಕಟ್ಟಿಗೆ ಹಾಗೂ ಲೋಹಗಳಿಂದ ನಿರ್ಮಿತವಾದ ನಿರ್ಜೀವ ದೇವರುಗಳಿಗೆ ಜೀವವಿರುವ ಮನುಷ್ಯರನ್ನು ರಕ್ಷಿಸಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಶೋಷಿತ ಸಮುದಾಯಕ್ಕೆ ಮನವರಿಕೆ ಮಾಡಿಸಬೇಕು.</p>



<p>ದಮನಿತರ ಮೇಲೆ ದೌರ್ಜನ್ಯ ನಡೆದ ಸಂದರ್ಭಗಳಲ್ಲಿ ತಕ್ಷಣಕ್ಕೆ ಪ್ರತಿಭಟನೆ ಮಾಡುವುದು ಅತ್ಯಂತ ಅವಶ್ಯಕ. ಆದರೆ, ಪ್ರತಿಭಟನೆಯ ಜೊತೆಗೆ ಶೋಷಿತ ಸಮುದಾಯದ ಜನರಲ್ಲಿ ಅರಿವು ಮೂಡಿಸುವ ಕೆಲಸವೂ ನಡೆಯಬೇಕು. ಅವರ ಬೆಂಬಲಕ್ಕೆ ನಿಂತು ಮಾನಸಿಕ ಮತ್ತು ನೈತಿಕ ಬೆಂಬಲ ವ್ಯಕ್ತಪಡಿಸಬೇಕು. ಭಕ್ತರನ್ನು ರಕ್ಷಿಸದ ದೇವರು, ಸ್ವಾಭಿಮಾನಕ್ಕೆ ಧಕ್ಕೆ ತರುವ ಸಂಪ್ರದಾಯಗಳು ಮನುಷ್ಯರಿಗೆ ಮಾರಕ ಎನ್ನುವುದನ್ನು ಜನರಿಗೆ ಅರ್ಥಮಾಡಿಸಬೇಕು. ಸಾಂಕ್ರಾಮಿಕ ರೋಗವಾಗಿ ಕಾಡುತ್ತಿರುವ ಮೂಢನಂಬಿಕೆ ತೊಲಗಿಸುವ ನಿಟ್ಟಿನಲ್ಲಿ ವಿಜ್ಞಾನದ ಅರಿವು, ವೈಚಾರಿಕ ಉಪನ್ಯಾಸ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಪಾಠಗಳನ್ನು ಒಳಗೊಂಡ ಅಧ್ಯಯನ ಶಿಬಿರಗಳನ್ನು ನಡೆಸುವ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಸಾಮಾಜಿಕ ಕಾರ್ಯಕರ್ತರು ಮತ್ತು ಸಂಘಟನೆಗಳಿಂದ ನಡೆಯಬೇಕು. ಶೋಷಿತರು ದೇವಾಲಯಕ್ಕೆ ಹೋಗದಿದ್ದರೆ ಆ ದೇವರಿಗೆ ಬಡತನ ಬಂದು ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗುತ್ತದೆ. ಶೋಷಿತರು ದೇವಸ್ಥಾನ ಬಿಟ್ಟು ಶಾಲೆ ಅಥವಾ ಗ್ರಂಥಾಲಯಕ್ಕೆ ಹೋದರೆ ಆ ದೇವಾಲಯಗಳು ಹಾಳುಬಿದ್ದು, ದೇವರುಗಳು ಕಂಗಾಲಾಗಿ ದಲಿತ ಕೇರಿಗಳಿಗೆ ದಲಿತರ ದರ್ಶನಕ್ಕೆ ಬರಬೇಕಾಗುತ್ತದೆ. ಈ ಸತ್ಯವನ್ನು ದಲಿತರಿಗೆ ಅರ್ಥಮಾಡಿಸಬೇಕಿದೆ.</p>



<p>ಅಂದು ಆರ್ಯರು ತಮ್ಮ ಕುತ್ಸಿತ ಬುದ್ಧಿ ಉಪಯೋಗಿಸಿ ದೇವರು, ಧರ್ಮ, ಸಂಪ್ರದಾಯ ಹೇರುವ ಮೂಲಕ ಶೋಷಿತರನ್ನು ಸಮುದಾಯವನ್ನು ಎಲ್ಲದರಿಂದಲೂ ವಂಚಿತರನ್ನಾಗಿ ಮಾಡಿದ್ದಾರೆ. ಈ ಬಗ್ಗೆ ದಲಿತರು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಬಂದಿದೆ. ಎಲ್ಲಾ ತಪ್ಪು ಅವರದೇ ಎನ್ನುವ ಬದಲು ಮೊದಲು ನಮ್ಮ ತಪ್ಪುಗಳನ್ನು ನಾವು ತಿದ್ದಿಕೊಳ್ಳಬೇಕಿದೆ. ಗೌರವ ಸಿಗದ ಮಠ ಮಂದಿರಗಳ ಕಡೆಗೆ ನಮ್ಮ ಯಕ್ಕಡವೂ ಬಿಡಕೂಡದು. ಇದನ್ನು ನಾವು ರೂಢಿಸಿ ಕೊಳ್ಳುವುದರ ಜೊತೆಗೆ ನಮ್ಮ ನಮ್ಮ ಸಮುದಾಯದಲ್ಲಿಯೂ ಅರಿವು ಮೂಡಿಸಬೇಕು. ಬಾಬಾಸಾಹೇಬರು ಸಂವಿಧಾನ ಬದ್ಧವಾಗಿ ನೀಡಿದ ಅವಕಾಶಗಳನ್ನು ನೀಡಿದರೂ ನಾವು ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದು ಆಗಬೇಕು. ಓದುವ ಹಕ್ಕಿದೆ, ಓದಲಾಗುತ್ತಿಲ್ಲ ಹಾಗಾಗಿ ಶಾಲೆಯತ್ತ ಸಮುದಾಯ ಮುಖ ಮಾಡಬೇಕು. ಓದಿದವರು ಬೇಜವಾಬ್ದಾರಿಗಳಾಗಿ ಸಮುದಾಯದತ್ತ ತಿರುಗಿಯೂ ನೋಡುತ್ತಿಲ್ಲ. ಅವರನ್ನು ಜವಾಬ್ದಾರರನ್ನಾಗಿಸಬೇಕು. ಗೊಡ್ಡು ಸಂಪ್ರದಾಯವನ್ನು ಸೋಲಿಸಲು ಸಂವಿಧಾನ ಓದಬೇಕು. ಬುದ್ಧ, ಬಸವಣ್ಣ, ಅಂಬೇಡ್ಕರ್, ಕನಕ, ಕಬೀರ, ನಾನಕರ ಜೀವನ ಸಂದೇಶ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ಮನುಷ್ಯ ವಿರೋಧಿ ಸಂಪ್ರದಾಯವಾದಿಗಳ ಕುತಂತ್ರದಿಂದ ಶೋಷಿತ ಸಮುದಾಯವನ್ನು ರಕ್ಷಿಸಬಹುದು.&nbsp;</p>



<p><strong>ವಿಕ್ರಂ ತೇಜಸ್</strong></p>



<p>ಕಲಬುರಗಿಯಲ್ಲಿ ಪತ್ರಕರ್ತರು</p>
]]></content:encoded>
					
		
		
			</item>
		<item>
		<title>ಮನುವಾದಿಗಳಿಗೆ ಹಿಂದುಳಿದವರ ಶಿಕ್ಷಣದ ಮೇಲೇಕೆ ಕಣ್ಣು?</title>
		<link>https://peepalmedia.com/why-petitioners-eye-always-on-the-education-of-the-backward-classes/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 14 Dec 2022 12:51:58 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[bengalure]]></category>
		<category><![CDATA[dalith]]></category>
		<category><![CDATA[hinduthva]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[manuvada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18529</guid>

					<description><![CDATA[ಬೆಂಗಳೂರಿನ ದೊಡ್ಡ ಗಣಪತಿ ದೇಗುಲದ ಟೆಂಡರ್ ಹೆಸರಲ್ಲಿ ಶೂದ್ರರೇ ನಿಮ್ಮ ಸ್ಥಾನ ಯಾವತ್ತಿಗೂ ಇದೇ ಎಂದು ನೆನಪಿಸಿದಂತೆ ತಮಿಳುನಾಡಿನ ಈರೋಡ್ ನ ಶಾಲೆಯೊಂದರಲ್ಲೂ ಕೂಡ ಇದೇ ರೀತಿ ದಲಿತ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಲಾಗುತ್ತಿದ್ದ ಸುದ್ದಿ ಇತ್ತೀಚೆಗೆ ಬಂದಿತ್ತು. ಎಳವೆಯಲ್ಲೇ ದಲಿತರ ಸ್ಥಾನವನ್ನು ಖುದ್ದು ಅವರಿಗೆ ಮತ್ತು ಇತರರಿಗೆ ತೋರಿಸಿ ಕೊಡುವಂತಹ ಪ್ರಕ್ರಿಯೆ ಇದು. ಮುಂದೆ ಓದಿ ಶಂಕರ್ ಸೂರ್ನಳ್ಳಿ ಅವರ ಲೇಖನ. ಹಿಂದುತ್ವವಾದಿಗಳ ಕುರಿತಂತೆ ಪ್ರಗತಿಪರ ನಿಲುವುಳ್ಳವರು ಹೇಳುವಂತಹ ಪ್ರಮುಖ ಆರೋಪವೆಂದರೆ ಅವರು ಮನುಸ್ಮೃತಿಯನ್ನ ಜಾರಿಗೆ [&#8230;]]]></description>
										<content:encoded><![CDATA[
<p><strong>ಬೆಂಗಳೂರಿನ</strong><strong> </strong><strong>ದೊಡ್ಡ</strong><strong> </strong><strong>ಗಣಪತಿ</strong><strong> </strong><strong>ದೇಗುಲದ</strong><strong> </strong><strong>ಟೆಂಡರ್</strong><strong> </strong><strong>ಹೆಸರಲ್ಲಿ</strong><strong> </strong><strong>ಶೂದ್ರರೇ</strong><strong> </strong><strong>ನಿಮ್ಮ</strong><strong> </strong><strong>ಸ್ಥಾನ</strong><strong> </strong><strong>ಯಾವತ್ತಿಗೂ</strong><strong> </strong><strong>ಇದೇ</strong><strong> </strong><strong>ಎಂದು</strong><strong> </strong><strong>ನೆನಪಿಸಿದಂತೆ</strong><strong> </strong><strong>ತಮಿಳುನಾಡಿನ</strong><strong> </strong><strong>ಈರೋಡ್</strong><strong> </strong><strong>ನ</strong><strong> </strong><strong>ಶಾಲೆಯೊಂದರಲ್ಲೂ</strong><strong> </strong><strong>ಕೂಡ</strong><strong> </strong><strong>ಇದೇ</strong><strong> </strong><strong>ರೀತಿ</strong><strong> </strong><strong>ದಲಿತ</strong><strong> </strong><strong>ಮಕ್ಕಳಿಂದ</strong><strong> </strong><strong>ಟಾಯ್ಲೆಟ್</strong><strong> </strong><strong>ಕ್ಲೀನ್</strong><strong> </strong><strong>ಮಾಡಿಸಲಾಗುತ್ತಿದ್ದ</strong><strong> </strong><strong>ಸುದ್ದಿ</strong><strong> </strong><strong>ಇತ್ತೀಚೆಗೆ</strong><strong> </strong><strong>ಬಂದಿತ್ತು</strong><strong>. </strong><strong>ಎಳವೆಯಲ್ಲೇ</strong><strong> </strong><strong>ದಲಿತರ</strong><strong> </strong><strong>ಸ್ಥಾನವನ್ನು</strong><strong> </strong><strong>ಖುದ್ದು</strong><strong> </strong><strong>ಅವರಿಗೆ</strong><strong> </strong><strong>ಮತ್ತು</strong><strong> </strong><strong>ಇತರರಿಗೆ</strong><strong> </strong><strong>ತೋರಿಸಿ</strong><strong> </strong><strong>ಕೊಡುವಂತಹ</strong><strong> </strong><strong>ಪ್ರಕ್ರಿಯೆ</strong><strong> </strong><strong>ಇದು</strong><strong>. </strong><strong>ಮುಂದೆ</strong><strong> </strong><strong>ಓದಿ</strong><strong> </strong><strong>ಶಂಕರ್</strong><strong> </strong><strong>ಸೂರ್ನಳ್ಳಿ</strong><strong> </strong><strong>ಅವರ</strong><strong> </strong><strong>ಲೇಖನ</strong><strong>.</strong></p>



<p>ಹಿಂದುತ್ವವಾದಿಗಳ ಕುರಿತಂತೆ ಪ್ರಗತಿಪರ ನಿಲುವುಳ್ಳವರು ಹೇಳುವಂತಹ ಪ್ರಮುಖ ಆರೋಪವೆಂದರೆ ಅವರು ಮನುಸ್ಮೃತಿಯನ್ನ ಜಾರಿಗೆ ತರಲು ಹೊರಟಿದ್ದಾರೆನ್ನುವುದು. ಮನುಸ್ಮೃತಿಯೆನ್ನುವುದು ಧಾರ್ಮಿಕ ಹಿನ್ನೆಲೆಯಿಂದ ಸಾಮಾಜಿಕ ಕಟ್ಟುಪಾಡು ನೀತಿ ನಿಯಮಗಳನ್ನು ಬೋಧಿಸುವ ಅಥವಾ ನಿರ್ದೇಶಿಸುವಂತಹ ಹಲವಾರು ಶ್ಲೋಕಗಳುಳ್ಳ ಸದ್ಯದ ಮಟ್ಟಿಗೆ ಹೇಳುವುದಾದರೆ ಒಂದು ದೊಡ್ಡ ಗ್ರಂಥ. ಹೆಚ್ಚಾಗಿ ಆಗಿನ ಸಾಹಿತ್ಯಿಕ ದಾಖಲಾತಿಗಳು ಶ್ರುತಿ ಮತ್ತು ಸ್ಮೃತಿಯ ರೂಪದಲ್ಲಿಯೇ ಇರುತ್ತಿದ್ದವು. ಅದರ ಹೆಸರೇ ಸೂಚಿಸುವಂತೆ ಮೂಲತ: ಅದೊಂದು ಸ್ಮೃತಿ (ನೆನಪಿನ ರೂಪದಲ್ಲಿ ದಾಖಲಿಸಿಕೊಂಡಂತಹ) ರೂಪದ ದಾಖಲೆ.</p>



<p>ಇಂದು ಯಾಗ ಹೋಮವೇ ಮೊದಲಾದ ವೈದಿಕ ಕಾರ್ಯಗಳಲ್ಲಿ ಪುಸ್ತಕಗಳನ್ನು ನೋಡಿ ಮಂತ್ರ ಪಠಿಸುವವರನ್ನು ನೋಡಬಹುದು. ಆದರೆ ಹಿಂದೆ ಅಂತಹವರನ್ನು ಕನಿಷ್ಠವಾಗಿ ನೋಡಲಾಗುತ್ತಿತ್ತಂತೆ. ಬಹುತೇಕ ಅಧ್ಯಯನಗಳಲ್ಲೇ ಇರುವ ವೈದಿಕರಿಗೆ ವೇದ, ಗೀತೆ ಮೊದಲಾದ ಸಂಸ್ಕೃತ ಸಾಹಿತ್ಯ ದಾಖಲೆಗಳನ್ನು ಕಂಠಪಾಠ ಮಾಡಿಕೊಳ್ಳುವುದು ದೊಡ್ಡ ಕಷ್ಟವೇನಲ್ಲ. ಬರವಣಿಗೆಗೆ ಸ್ವಂತ ಲಿಪಿಯೂ ಇರದ (ಇಂಗ್ಲಿಷರು ರೋಮನ್ ಲಿಪಿ ಬಳಸುವಂತೆ ಸಂಸ್ಕೃತದ ದಾಖಲೆಗಳಿರುವುದು ದೇವನಾಗರೀ ಲಿಪಿಯಲ್ಲಿ) ಹಾಗೂ ಬರವಣಿಗೆಗಾಗಿ ಇನ್ನೂ ಕಾಗದದ ಆವಿಷ್ಕಾರವಾಗದೇ ತಾಳೆಗರಿಯಂತಹ ಪ್ರಾಕೃತಿಕ ವಸ್ತುವನ್ನೇ ಅವಲಂಬಿತವಾಗಿರುವ ಅಂದಿನ ಸಂದರ್ಭದಲ್ಲಿ ಇದು ಅನಿವಾರ್ಯವಾಗಿತ್ತು ಕೂಡಾ. ತುಳುನಾಡಿನ ದೈವಾರಾಧಕರ ಪಾಡ್ದನವೂ ಇದೇ ರೀತಿಯದ್ದೇ ಆಗಿದೆ. ಈ ಬಗ್ಗೆ ಅಧ್ಯಯನ ಮಾಡಿರುವ ಜನಪದ ವಿದ್ವಾಂಸ ಡಾ. ಚಿನ್ನಪ್ಪ ಗೌಡರು ಈ ಪಾಡ್ದನಗಳ ಕುರಿತಂತೆ ಅಚ್ಚರಿಯಿಂದ ತುಳು ಪಾಡ್ದನಗಳ ಹದಿನೈದು ಸಾವಿರಕ್ಕೂ ಹೆಚ್ಚಿನ ಸಾಲುಗಳನ್ನು ಭೂತ ಕೋಲದ ಪಾಡ್ದನಕಾರರು ನೆನಪಿಟ್ಟು ಕೊಂಡಂತಹ ದಾಖಲೆಗಳಿವೆ ಎಂದಿದ್ದರು.</p>



<p><strong>ಮನುಸ್ಮೃತಿಯ</strong><strong> </strong><strong>ಜಾರಿ</strong><strong> </strong><strong>ಎನ್ನುವ</strong><strong> </strong><strong>ಅಪಾಯದ</strong><strong> </strong><strong>ಮುನ್ನೆಚ್ಚರಿಕೆ</strong><strong>&nbsp;</strong></p>



<p>ಈ ಬಗೆಯ ಸಾವಿರಾರು ವರ್ಷಗಳ ಹಿಂದಿನ ಮನುಸ್ಮೃತಿಯಂತಹ ಧಾರ್ಮಿಕ ಕಟ್ಟುಪಾಡುಗಳ ಶಾಸನವನ್ನು ಈ ಕಾಲದಲ್ಲೂ ಕೂಡ ಯಥಾವತ್ತಾಗಿ ಜಾರಿಗೆ ತರಲು ನಿಜಕ್ಕೂ ಸಾಧ್ಯವೆ? ಖಂಡಿತಾ ಇಲ್ಲ. ಆದರೆ ಈ ಕಾಲಕ್ಕೆ ಹೊಂದುವಂತೆ ಅದನ್ನು ಶಾಸನ ರೂಪದಲ್ಲಿ ಅಳವಡಿಸಿ ಕೊಳ್ಳುವ ಸಾಧ್ಯತೆಯನ್ನು ಮಾತ್ರ ಖಂಡಿತಾ ಅಲ್ಲಗಳೆಯಲಾಗದು. ಅಂದರೆ, ಜಾತೀಯತೆ, ಸ್ತ್ರೀ ಸಂಬಂಧಿ ಕಟ್ಟುಪಾಡುಗಳು, ಬ್ರಾಹ್ಮಣ್ಯದ ಹೆಚ್ಚುಗಾರಿಕೆಯ ಮರುಸ್ಥಾಪನೆ ಖಂಡಿತಾ ಸಾಧ್ಯ. ಮುಖ್ಯವಾಗಿ ಅದರ ಹಂತ ಹಂತದ ಅಳವಡಿಕೆಯನ್ನು ಇಂದು ನಾವು ಕಣ್ಣಾರೆ ನೋಡುತ್ತಿದ್ದೇವೆ ಕೂಡ. ಪ್ರಗತಿಪರರು ಎಚ್ಚರಿಸುವ ಮನುಸ್ಮೃತಿಯ ಜಾರಿ ಎನ್ನುವ ಅಪಾಯದ ಮುನ್ನೆಚ್ಚರಿಕೆಯೆಂದರೆ ಇದೇನೆ.</p>



<p>ಉದಾಹರಣೆಗೆ: ಶತಮಾನಗಳ ಹಿಂದೆ ಬ್ರಾಹ್ಮಣ ಕ್ಷತ್ರಿಯರನ್ನು ಹೊರತು ಪಡಿಸಿ ಸ್ತ್ರೀಯರನ್ನೂ ಸೇರಿ ಇತರರಿಗೆ ವಿದ್ಯೆ ಅಧಿಕಾರಗಳಿಗೆ ಅವಕಾಶವನ್ನು ನಿರಾಕರಿಸಲಾಗಿತ್ತು. (ಸ್ತ್ರೀಯರ ಕುರಿತಂತೆ ಇದನ್ನು ಹೇಳಿದಾಕ್ಷಣ ಸನಾತನವಾದಿಗಳು ಮೈತ್ರೇಯಿ, ಗಾರ್ಗೇಯಿಯರ ಕಥೆ ಶುರುವಿಟ್ಟುಕೊಳ್ಳುತ್ತಾರೆ. ಇಂತಹ ಆಕಸ್ಮಿಕ ಉದಾಹರಣೆಗಳು ಐತಿಹಾಸಿಕ ಸಂಗತಿಗಳ ನಿಜವಾದ ಪ್ರತಿನಿಧಿತ್ವವನ್ನು ಯಾವತ್ತೂ ತೋರುವುದಿಲ್ಲ. ತೀರಾ ಇತ್ತೀಚೆಗಿನವರೆಗೂ ಸ್ತ್ರೀಯರ ಮೇಲಿನ ಕಟ್ಟುಪಾಡುಗಳ ನಿರ್ಬಂಧಗಳು ಮತ್ತು ಆ ಕುರಿತ ಹೋರಾಟಗಳಿಗೆ ಲೆಕ್ಕವಿಲ್ಲದಷ್ಟು ಐತಿಹಾಸಿಕ ದಾಖಲೆಗಳೇ ನಮ್ಮ ಮುಂದಿವೆ) ಧಾರ್ಮಿಕತೆಯ ನೆವನದ ಮೂಲಕ ಪ್ರಭುತ್ವವನ್ನು ಹಂಗಿನಲ್ಲಿರಿಸಿಕೊಂಡಿದ್ದ ಸನಾತನವಾದಿಗಳ ಹಿಡಿತ ತಪ್ಪಿ ನಂತರ ಶತಮಾನಗಳ ಕಾಲ ಆಳಿದ ಬ್ರಿಟಿಷರೇ ಮೊದಲಾದ ಅನ್ಯಮತೀಯರ ದೆಸೆಯಿಂದಾಗಿ ವಿದ್ಯೆಗೆ ಅವಕಾಶವೊದಗಿಸಿಕೊಂಡ ಶೂದ್ರವರ್ಗ ಇದೀಗ ತಮ್ಮನ್ನು ಈ ತನಕ ವಿದ್ಯೆ ವಂಚಿತರನ್ನಾಗಿಸಿದ್ದ ಸಮುದಾಯಕ್ಕೆ ಪ್ರತಿಯಾಗಿ ಅಥವಾ ಕೊನೇ ಪಕ್ಷ ತಟಸ್ಥವಾಗಿ ನಿಲ್ಲುವ ಬದಲು ಅವರ ಆದೇಶ ಪರಿಪಾಲನೆಯ ಕಾಲಾಳುಗಳಾಗಿಯೇ ಮಾರ್ಪಟ್ಟಿರುವುದು ಕಾಲದ ಒಂದು ಚೋದ್ಯವೇ ಸರಿ.</p>



<p>ಬ್ರಾಹ್ಮಣರಿಗಿಂತ ಶೂದ್ರ ವರ್ಗವೇ ಕಡು ಹಿಂದುತ್ವದ ಪ್ರತಿಪಾದನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿ ಕೊಂಡಿವೆ. ಅಸ್ಪೃಶ್ಯತೆಯ ಹೆಸರಲ್ಲಿ ದೇಗುಲದ ಆವರಣಕ್ಕೂ ಪ್ರವೇಶವಿಲ್ಲದಿದ್ದ ಶೂದ್ರ ವರ್ಗ ದೇಗುಲ ಪ್ರವೇಶದ ಅವಕಾಶವನ್ನು ಪಡೆದಂದಿನಿಂದ ಇದೀಗ ದೇಗುಲದ ಧಾರ್ಮಿಕ ಕರಸೇವೆಗಳು, ಕೇಸರಿ ಬಂಟಿಂಗ್ ಕಟ್ಟುವುದು, ಬಾವುಟ ಹಾರಿಸುವುದು, ಜೈಕಾರ ಕೂಗುವುದು ಇತ್ಯಾದಿಗಳಲ್ಲಿ ನಿರತವಾಗಿವೆ. ಕುರ್ಚಿ ಬೆಂಚುಗಳಿಲ್ಲದ ಶಾಲೆಗಳಿಗೆ ಹತ್ತು ರೂ ಕೊಡಲು ಹಿಂದೇಟು ಹಾಕುವ ಕೈಗಳು ದೇಗುಲಗಳಿಗೆ ಪೂಜೆಗಳಿಗೆ ಪುರೋಹಿತರಿಗೆ ಬಿಂದಾಸ್ ದಾನ, ಧರ್ಮ, ದಕ್ಷಿಣೆ ಕೊಡುವುದು, ವ್ರತಾಚರಣೆಗಳು ಮುಂತಾದವುಗಳ ಹೆಸರಲ್ಲಿ ಬ್ರಾಹ್ಮಣರ ಸೇವೆಗಾಗೇ ಟೊಂಕ ಕಟ್ಟಿಕೊಂಡು ಶೂದ್ರ ಪಡೆ ನಿಂತಿವೆ. ಶೂದ್ರ ವರ್ಗದ ಮದುವೆ, ಗೃಹ ಪ್ರವೇಶ, ನಾಮಕರಣಗಳ ಕಡೆ ಈತನಕ ಕಣ್ಣೆತ್ತಿಯೂ ನೋಡದಿದ್ದ ಬ್ರಾಹ್ಮಣ ವರ್ಗ ಈಗ ಕೈಯಲ್ಲಿ ಕಾಸಾಡುವ ಹಾಗೂ ಧಾರ್ಮಿಕ ಪೌರೋಹಿತ್ಯದ ಕಾರ್ಯಗಳಿಗೆ ಕಣ್ಮುಚ್ಚಿಕೊಂಡು ಖರ್ಚು ಮಾಡುವ ಶೂದ್ರ ವರ್ಗದ ಕಡೆ ಇನ್ನಿಲ್ಲದ ಆಸಕ್ತಿಯನ್ನು ತೋರುತ್ತಿವೆ. ಶೂದ್ರರು ಮೇಲ್ವರ್ಗದ ಹೊರತಾಗಿ ಯಾರಿಂದಲೋ ಪಡೆದ ಅಕ್ಷರ ವಿದ್ಯೆಯನ್ನು ಇದೀಗ ಹಿಂದುತ್ವ ವಿರೋಧಿಗಳ ವಿರುದ್ಧ ಕೆಂಡ ಕಾರಲು ಬಳಸಲಾಗುತ್ತಿದೆ. ಅದೇ &nbsp; ರೀತಿ, ಯಾರದೋ ಹೋರಾಟದ ಫಲದಿಂದಲೋ ದೊರಕಿದ ದೇಗುಲ ಪ್ರವೇಶ ಈಗ ಕರಸೇವೆ ಮೆರವಣಿಗೆಗೆ ಉಪಯುಕ್ತವಾಗುತ್ತಿದೆ. ’ಸೋಲನ್ನೇ ಗೆಲುವಾಗಿಸುವ” ವೈದಿಕರ ಈ ಕಲೆಯನ್ನು ಮೆಚ್ಚಲೇ ಬೇಕು. ಇಂತಹಾ ಎಲ್ಲಾ ಪೂರಕ ವಾತಾವರಣಗಳು ಸನಾತನವಾದಿಗಳ ಮನುಸ್ಮೃತಿ ಶಾಸನದ ಅಳವಡಿಕೆಯ ಸಾಧ್ಯತೆಯನ್ನು ಮತ್ತಷ್ಟು ಸುಲಭವಾಗುವಂತೆ ಮಾಡಿರುವುದಂತೂ ಸತ್ಯ.</p>



<p><strong>ಬ್ರಾಹ್ಮಣಶಾಹಿಯ</strong><strong> </strong><strong>ತಂತ್ರಗಾರಿಕೆ</strong><strong>.</strong></p>



<p>ಈ ಹಿಂದೆ ಕೆಲವೇ ಸಮುದಾಯದ ಕಪಿಮುಷ್ಟಿಯಲ್ಲಿದ್ದ ವಿದ್ಯೆ ಇದೀಗ ಸಾರ್ವತ್ರೀಕರಣಗೊಂಡಿದೆ. ಸಮಾಜ ಸುಧಾರಕರು, ಹೋರಾಟಗಾರರ ದೆಸೆಯಿಂದಾಗಿ ಸಾಮಾಜಿಕ ನ್ಯಾಯ ವ್ಯವಸ್ಥೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೂ ಕೂಡ ಅಸಮಾನತೆ, ಮೌಢ್ಯಗಳು ಯಾವುದೋ ಒಂದು ರೂಪದಲ್ಲಿ ಆಗಾಗ ಕಾಣಿಸುತ್ತಲೇ ಇರುತ್ತವೆ. (ಬೆಂಗಳೂರಿನ ದೇಗುಲವೊಂದರಲ್ಲಿ ವಿವಿಧ ಕೆಲಸ ಕಾರ್ಯಗಳಿಗಾಗಿ ಕರೆದ ಟೆಂಡರ್ ನಲ್ಲಿ ಪರಿಶಿಷ್ಟರಿಗೆ ಚಪ್ಪಲಿ ಕಾಯುವ ಕೆಲಸಕ್ಕಾಗಿ ಅರ್ಜಿ ಕರೆಯಲಾಗಿತ್ತು. ಚಾಮರಾಜನಗರದಲ್ಲಿ ದಲಿತ ಮಹಿಳೆಯೊಬ್ಬರು ಟ್ಯಾಂಕ್ ನ ನೀರು ಕುಡಿದರೆಂಬ ಮಾತ್ರಕ್ಕೆ ಟ್ಯಾಂಕ್ ಖಾಲಿ ಮಾಡಿ ಗೋಮೂತ್ರದಿಂದ ಅದನ್ನು ಶುದ್ಧಿ ಮಾಡಲಾಗಿತ್ತು. ಇದು ಹತ್ತನೇ ಶತಮಾನದ ಕಥೆಯಲ್ಲ. ಮೊನ್ನೆ ಮೊನ್ನೆ ಹತ್ತು ದಿನ ಹಿಂದಿನದ್ದು) ಸಮಾಜದಲ್ಲಿ ಸಂಪೂರ್ಣ ನೂರಕ್ಕೆ ನೂರು ಎನ್ನುವಂಥ ಬದಲಾವಣೆಗಳು ನಡೆಯದಿದ್ದರೂ ವಿದ್ಯೆ ಹಾಗು ಧಾರ್ಮಿಕ ಆಚರಣೆಗಳಲ್ಲಿನ ಮೊದಲಿದ್ದಂತಹ ನಿರ್ಬಂಧಗಳಂತೂ ಖಂಡಿತ ಇಲ್ಲ. ಇಂತಹ ಸಂದರ್ಭವನ್ನೇ ತಮ್ಮೆಡೆಗೆ ತಿರುಗಿಸಿಕೊಂಡ ಸನಾತನವಾದಿಗಳು ಹಿಂದೆ ವಿದ್ಯೆ ವಂಚಿತವಾಗಿ ಈಗ ಶಾಲೆಗೆ ಬರುವಂತಹ ಮುಗ್ಧ ಮನಸ್ಸಿನ ಚಿಕ್ಕ ಮಕ್ಕಳ (ವಿಶೇಷವಾಗಿ ಅಬ್ರಾಹ್ಮಣ ವರ್ಗದ ಮಕ್ಕಳು) ಮೇಲೆ ಧರ್ಮದ ಅಮಲನ್ನು ತುಂಬಿ ಅವರನ್ನೇ ಹಿಂದುತ್ವದ ಕಾಲಾಳುಗಳನ್ನಾಗಿ ದುಡಿಸಿಕೊಳ್ಳುತ್ತಿದ್ದಾರೆ. ಅವರ ಮಕ್ಕಳು ಮಾತ್ರ ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮೊದಲಾದೆಡೆ ಉನ್ನತ ವ್ಯಾಸಂಗ ಪಡೆದು ಉದ್ಯೋಗದಲ್ಲಿದ್ದರೆ ಶೂದ್ರ ವರ್ಗದ ಮಕ್ಕಳು ಇಲ್ಲೇ ಹಿಂದುತ್ವದ ಹೋರಾಟಗಳಲ್ಲಿ ಸಖತ್ ಬ್ಯುಸಿ. ಒಟ್ಟಾರೆ ಒಂದೇ ಕಲ್ಲಲ್ಲಿ ಎರಡು ಹಕ್ಕಿಗಳು. ಇದು ಬ್ರಾಹ್ಮಣಶಾಹಿಯ ತಂತ್ರಗಾರಿಕೆ.</p>



<p><strong>ಶೂದ್ರರನ್ನು</strong><strong> </strong><strong>ಶಿಕ್ಷಣದಿಂದ</strong><strong> </strong><strong>ಹೊರಗಿಡುವ</strong><strong> </strong><strong>ಪ್ರಕ್ರಿಯೆಯ</strong><strong> </strong><strong>ಆರಂಭ</strong></p>



<p>ದೇಶದಲ್ಲಿ ಲೆಕ್ಕವಿಲ್ಲದಷ್ಟು ಸರಕಾರಿ ಶಾಲೆಗಳು ಮುಚ್ಚುತ್ತಿರುವುದಾಗಿ ವರದಿಯಾಗಿವೆ. ಅದನ್ನು ಉಳಿಸಿಕೊಳ್ಳುವ ಬದಲು ಇವರಿಗೆ ಶಾಲಾ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯುವುದರಲ್ಲೇ ಆಸಕ್ತಿ. ಶಾಲೆಯಲ್ಲಿ ಪ್ರತಿ ದಿನ ಹತ್ತು ನಿಮಿಷದ ಧ್ಯಾನ ಶುರು ಮಾಡಬೇಕು ಎನ್ನುವ ಸರಕಾರಿ ಸುತ್ತೋಲೆ. ಇದೇ ಧ್ಯಾನದ ನೆಪದಲ್ಲಿ ಕ್ರಮೇಣ ಮುಗ್ದ ಮಕ್ಕಳ ಮನಸ್ಸಲ್ಲಿ ತಮ್ಮ ಅಜೆಂಡಾಗಳ ಹೇರಿಕೆಯ ಹುನ್ನಾರ ಇದರ ಹಿಂದಿದೆ. 5 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಯಾರೂ ಬೇಕೆಂದು ಕೇಳದೇ ಇದ್ದ ವೇದಗಣಿತದ ತರಬೇತಿಯ ಹೆಸರಲ್ಲಿ ಪ. ಜಾತಿ ಪ. ಪಂಗಡಗಳ ಉಪ ಯೋಜನೆ (TSP, SCSP) ಯಲ್ಲಿನ ಅನಾಮತ್ತು ಅರುವತ್ತು ಕೋಟಿ ರೂ. ಗಳ ಬಳಕೆಗೆ ಮಸಲತ್ತು ನಡೆದು ಬಳಿಕ ಎದುರಾದ ವಿರೋಧದ ಬಳಿಕ ಇದನ್ನು ತಡೆಹಿಡಿಯಲಾಯಿತು. ಇವರಿಗೆ ದಲಿತರ ಅಭಿವೃದ್ಧಿಗಿಂತ ಸೀಮೆಗಿಲ್ಲದ ವೇದಗಣಿತ ತಲೆಗೆ ತುಂಬೋದರಲ್ಲೇ ಹೆಚ್ಚು ಆಸಕ್ತಿ. ಇತ್ತೀಚೆಗೆ ಶೈಕ್ಷಣಿಕ ಚಿಂತನೆಯ ಗಂಧ ಗಾಳಿಯೂ ಇರದವರ ಉಸ್ತುವಾರಿಯಲ್ಲಿ ರಚನೆಯಾದ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಹಿಂದುತ್ವದ ಹುನ್ನಾರಗಳು, ಪ ಜಾತಿ/ ಪ ವರ್ಗದ ಮಕ್ಕಳ ಸ್ಕಾಲರ್ ಶಿಪ್ ರದ್ದು, ಸಂಶೋಧನಾ ವಿದ್ಯಾರ್ಥಿಗಳ ಫೆಲೋ ಶಿಪ್ ರದ್ದು, ಬೆಂಗಳೂರು ವಿ ವಿ 2 ನೇ ಸ್ನಾತಕೋತ್ತರ ಪದವಿಗಾಗಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ರದ್ದು, ಎಂಟು ಲಕ್ಷ ವಾರ್ಷಿಕ ಆದಾಯದ ಬ್ರಾಹ್ಮಣಾದಿ ಮೇಲ್ಜಾತಿಯ ಮಕ್ಕಳಿಗೆ ಮೀಸಲಾತಿ ತಂದು ಎರಡೂವರೆ ಲಕ್ಷಕ್ಕೂ ಕಡಿಮೆ ವಾರ್ಷಿಕ ಆದಾಯದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮಕ್ಕಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ ಸಂಪೂರ್ಣ ನಿಲುಗಡೆ ಇವುಗಳೆಲ್ಲ ಈ ತನಕ ವಿದ್ಯೆಯಿಂದ ಮೆರೆಯುತ್ತಿದ್ದ ಶೂದ್ರರನ್ನು ಅದರಿಂದ ಹೊರಗಿಡುವ ಪ್ರಕ್ರಿಯೆಯ ಆರಂಭಿಕ ಸೂಚನೆಗಳಷ್ಟೆ ಎನ್ನಬಹುದು.</p>



<p>ಬೆಂಗಳೂರಿನ ದೊಡ್ಡ ಗಣಪತಿ ದೇಗುಲದ ಟೆಂಡರ್ ಹೆಸರಲ್ಲಿ ಶೂದ್ರರೇ ನಿಮ್ಮ ಸ್ಥಾನ ಯಾವತ್ತಿಗೂ ಇದೇನೆ ಎಂದು ನೆನೆಪಿಸಿದಂತೆ ತಮಿಳುನಾಡಿನ ಈರೋಡ್ ನ ಶಾಲೆಯೊಂದರಲ್ಲೂ ಕೂಡ ಇದೇ ರೀತಿ ದಲಿತ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಲಾಗುತ್ತಿದ್ದ ಸುದ್ದಿ ಇತ್ತೀಚೆಗೆ ಬಂದಿತ್ತು. ಎಳವೆಯಲ್ಲೇ ದಲಿತರ ಸ್ಥಾನವನ್ನು ಖುದ್ದು ಅವರಿಗೆ ಮತ್ತು ಇತರರಿಗೆ ತೋರಿಸಿಕೊಡುವಂತಹ ಪ್ರಕ್ರಿಯೆ ಇದು.</p>



<p><strong>ಮನುವಾದಕ್ಕೆ</strong><strong> </strong><strong>ಕೊಡಲಿಯೇಟು</strong><strong>..</strong><strong>&nbsp;</strong></p>



<p>ರಾಷ್ಟ್ರಕವಿ ವಿಶ್ವ ಮಾನವತಾ ಪ್ರತಿಪಾದಕ ಕುವೆಂಪುರವರು ತನಗೆ ದೊರೆತಂತಹ ಸಾಂದರ್ಭಿಕ ವಿದ್ಯಾಭಾಗ್ಯದ ಕುರಿತಂತೆ ಮಾರ್ಮಿಕವಾಗಿ ಹೀಗೆ ಹೇಳಿದ್ದರು “ ಬ್ರಿಟಿಷರು ಒಂದುವೇಳೆ ಬಾರದೇ ಇದ್ದಿದ್ದರೆ ನಾನು ಯಾವುದೋ ಮೇಲ್ವರ್ಗದವನ ಮನೆಯ ಹೊಲಸಲ್ಲಿ ಹೊರಳುತ್ತಿರುವ ಹಂದಿಯಂತಿರುತ್ತಿದ್ದೆ ಎಂದು. ವಿದ್ಯೆಯನ್ನು ಸಾರ್ವತ್ರಿಕ ಗೊಳಿಸಿ ಮನುವಾದಕ್ಕೆ ಕೊಡಲಿಯೇಟು ಕೊಟ್ಟ ಬ್ರಿಟಿಷರ ಬಗ್ಗೆ ಸನಾತನವಾದಿಗಳಿಗೆ ಬಹಳಷ್ಟು ಕೋಪವಿದೆ. (ಅವರನ್ನು ಓಡಿಸಲು ಇದೂ ಒಂದು ಕಾರಣ) ಅದೇ ರೀತಿ ಅದನ್ನು ಸ್ವಾತಂತ್ರ್ಯಾನಂತರ ಮುಂದುವರೆಸಿ ಹೋದ ನೆಹರೂರವರ ಕುರಿತಂತೆಯೂ ಕೂಡ ಅಸಾಧ್ಯ ಅಸಹನೆಯಿದೆ. ಶಿವರಾಮ ಕಾರಂತರ ಸೋದರ ಕೋಟ ವಾಸುದೇವ ಕಾರಂತರು ತಮ್ಮ ಕೃತಿಗಳಲ್ಲಿ ಈ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಸಂಸ್ಕೃತ ಹೇಳಿದ ಶೂದ್ರನ ನಾಲಗೆ ಕತ್ತರಿಸಬೇಕು, ಸಂಸ್ಕೃತ ಕೇಳಿದ ಶೂದ್ರನ ಕಿವಿಗೆ ಕಾದ ಸೀಸ ಸುರಿಯಬೇಕೆಂದ ಸನಾತನವಾದಿಗಳೆಲ್ಲಿ? ತಾರತಮ್ಯ ನೋಡದೇ ಎಲ್ಲರ ವಿದ್ಯೆಗೂ ಪ್ರೋತ್ಸಾಹ ಕೊಟ್ಟ ಅನ್ಯ ಮತೀಯರೆಲ್ಲಿ?</p>



<p>ಕೋರ್ಟಿನಲ್ಲಿರುವ ಮೇಲ್ವರ್ಗದವರ ತೀವ್ರ ಪ್ರತಿರೋಧದ ಕಾರಣ ದಲಿತನೊಬ್ಬನಿಗೆ ಆ ಕೋರ್ಟ್ ನಲ್ಲಿ ಅಟೆಂಡರ್ ಕೆಲಸ ಕೊಡಿಸಲೂ ಸಾಧ್ಯವಾಗದೇ ತೀರಾ ಖಿನ್ನರಾಗಿ ಕುಗ್ಗಿಹೋಗಿದ್ದ ಮಂಗಳೂರಿನ ಕುದ್ಮುಲ್ ರಂಗರಾಯರಿಗೆ ಬ್ರಿಟಿಷ್ ನ್ಯಾಯಾಧೀಶರು ಹತ್ತಿರ ಕರೆದು ರಾಯರೇ, ನಿಮಗೆ ಈ ಡಿಪ್ರೆಸ್ಡ್ ಕ್ಲಾಸ್ ನವರ ಉದ್ದಾರದ ಬಗ್ಗೆ ನಿಜಕ್ಕೂ/ ಕಳಕಳಿ ಇದ್ದಿದ್ದೇ ಹೌದಾದರೆ ಮೊದಲು ಅವರಿಗೆ ವಿದ್ಯೆ ಕಲಿಸಿ. ಅದೇ ಅವರಲ್ಲಿ ದೊಡ್ಡ ಸಾಮಾಜಿಕ ಬದಲಾವಣೆ ತರಬಲ್ಲದು ಎಂದು ಬೆನ್ನು ತಟ್ಟಿದ್ದರು. ಅದರ ಪರಿಣಾಮವೇ ’ಮಹಾತ್ಮ ಗಾಂಧೀಜಿಯ ಗುರು’ ಎಂಬ ಹೆಗ್ಗಳಿಕೆಯ ಮಟ್ಟಕ್ಕೆ ದೊಡ್ಡ ಸುಧಾರಕರಾಗಿ ಕುದ್ಮುಲ್ ರಂಗರಾಯರ ಸೇವೆ ನಾಡಿಗೆ ದೊರಕಿತು.</p>



<p>ಮೆರೆಯುತ್ತಿರುವ ಶೂದ್ರವರ್ಗದ ಜುಟ್ಟು ತಮ್ಮ ಕೈಯಲ್ಲಿರಬೇಕೆಂದರೆ ಮೊದಲು ಅವರನ್ನು ವಿದ್ಯೆಯಿಂದ ವಂಚಿತರನ್ನಾಗಿಸಬೇಕೆನ್ನುವ ಸನಾತನವಾದಿಗಳ ಹುನ್ನಾರವನ್ನು ತಡೆಯದಿದ್ದರೆ ಮುಂದೊಂದು ದಿನ ದೊಡ್ಡ ಗಣಪತಿ ಟೆಂಡರಿನಲ್ಲಿದ್ದ ಚಪ್ಪಲಿ ಕಾಯುವ ಕೆಲಸವೂ ಕೂಡ ಶೂದ್ರ ಸಮುದಾಯಕ್ಕೆ ದೊರೆಯದು. ಯಾಕೆಂದರೆ ದೇಗುಲದ ವಠಾರಕ್ಕೆ ಅವರಿಗೆ ಪ್ರವೇಶ ಇದ್ದರೆ ತಾನೆ ಇದೆಲ್ಲ&#8230;</p>



<p><strong>ಶಂಕರ್</strong><strong> </strong><strong>ಸೂರ್ನಳ್ಳಿ</strong><strong>.</strong></p>



<p>ಲೇಖಕರು</p>
]]></content:encoded>
					
		
		
			</item>
		<item>
		<title>ದಲಿತ ಯುವಕ ಉದಯ ಕಿರಣ್ ಸಾವಿಗೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು: ಸಿಪಿಎಂ ಪಕ್ಷ ಆಗ್ರಹ</title>
		<link>https://peepalmedia.com/the-accused-responsible-for-the-death-of-dalit-youth-udaya-kiran-should-be-arrested-immediately-cpm-party-demands/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 02 Dec 2022 13:37:23 +0000</pubDate>
				<category><![CDATA[ಕೋಲಾರ]]></category>
		<category><![CDATA[bengalure]]></category>
		<category><![CDATA[dalith]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[uday kiran]]></category>
		<category><![CDATA[writing]]></category>
		<guid isPermaLink="false">https://peepalmedia.com/?p=17339</guid>

					<description><![CDATA[ಮುಳಬಾಗಿಲು: ದಲಿತ ಯುವಕ ಬೈಕ್ ಓವರ್ ಟೆಕ್ ಮಾಡಿದ ಕಾರಣದಿಂದ ಸವರ್ಣೀಯರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಜಾತಿ ನಿಂದನೆಯಿಂದ ಅವಮಾನಗೊಂಡು ದಲಿತ ಯುವಕ ಸಾವೀಗೀಡಾಗಿದ್ದು, ಈ ಘಟನೆ ಸಂಬಂಧಿತ ಆರೋಪಿಗಳನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ. ಕೋಲಾರದ ಮುಳಬಾಗಿಲು ತಾಲ್ಲೂಕಿನ ಪೆತ್ತಾಂಡ್ಲಹಳ್ಳಿ ಗ್ರಾಮದಲ್ಲಿ ಉದಯ್‌ ಕಿರಣ್‌ ಎಂಬ 25 ವರ್ಷದ  ದಲಿತ ಯುವಕನನ್ನು ರಾಜು ಎಂಬಾತನ ಬೈಕ್ ಓವರ್ ಟೆಕ್ [&#8230;]]]></description>
										<content:encoded><![CDATA[
<p><strong>ಮುಳಬಾಗಿಲು:</strong> ದಲಿತ ಯುವಕ ಬೈಕ್ ಓವರ್ ಟೆಕ್ ಮಾಡಿದ ಕಾರಣದಿಂದ ಸವರ್ಣೀಯರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಜಾತಿ ನಿಂದನೆಯಿಂದ ಅವಮಾನಗೊಂಡು ದಲಿತ ಯುವಕ ಸಾವೀಗೀಡಾಗಿದ್ದು, ಈ ಘಟನೆ ಸಂಬಂಧಿತ ಆರೋಪಿಗಳನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತ ಕಮ್ಯುನಿಸ್ಟ್‌ ಪಕ್ಷ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.</p>



<p>ಕೋಲಾರದ ಮುಳಬಾಗಿಲು ತಾಲ್ಲೂಕಿನ ಪೆತ್ತಾಂಡ್ಲಹಳ್ಳಿ ಗ್ರಾಮದಲ್ಲಿ ಉದಯ್‌ ಕಿರಣ್‌ ಎಂಬ 25 ವರ್ಷದ  ದಲಿತ ಯುವಕನನ್ನು ರಾಜು ಎಂಬಾತನ ಬೈಕ್ ಓವರ್ ಟೆಕ್ ಮಾಡಿದ್ದು, ಮೇಲ್ಜಾತಿಯವರು ಸೇರಿ ಯುವಕನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಈ ರೀತಿ ಜಾತಿ ನಿಂದನೆಯಿಂದ ಮನನೊಂದು ದಲಿತ ಯುವಕ  ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ನಂಗಲಿ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ನಡೆಸಿದ ರಾಜು, ಶಿವರಾಜ್‌, ಗೋಪಾಲಕೃಷ್ಣ ಮತ್ತು ಮುನಿವೆಂಕಟಪ್ಪ ಎಂಬ ನಾಲ್ವರ ವಿರುದ್ದ ಗುರುವಾರ ಪ್ರಕರಣ ದಾಖಲಾಗಿದೆ.</p>



<p>ಈ ಹಿನ್ನೆಲೆಯಲ್ಲಿ, ಜಾತಿ ದೌರ್ಜನ್ಯದಿಂದ ಮೃತಪಟ್ಟಿರುವ ದಲಿತ ಯುವಕ ಉದಯ್ ಕಿರಣ್ ಕುಟುಂಬದ ಸದಸ್ಯರನ್ನು ಶುಕ್ರವಾರದಂದು ಭೇಟಿ ಮಾಡಿದ ಸಿಪಿಎಂ , ಎಸ್ಎಫ್ಐ, ದಲಿತ ಸಂಘಟನೆಗಳ ಮುಖಂಡರು ಉದಯ್ ಕಿರಣ್ ಸಾವಿಗೆ ನ್ಯಾಯ ಸಿಗಬೇಕು, ಜಾತಿ ದೌರ್ಜನ್ಯಗಳು ನಿಲ್ಲಬೇಕು ಎಂದು ಘೋಷಣೆಗಳು ಕೂಗಿದ್ದಾರೆ. ಈ ವೇಳೆ ಮಾತನಾಡಿದ ಸಿಪಿಎಂ ಮುಖಂಡರು ಪೆತ್ತಾಂಡ್ಲಹಳ್ಳಿ ಗ್ರಾಮದಲ್ಲಿ ಬೈಕ್ ಓವರ್ ಟೆಕ್ ಮಾಡಿದ ಕಾರಣಕ್ಕೆ ದಲಿತ ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯನ್ನು ಸಿಪಿಐ(ಎಂ), ಎಸ್ಎಫ್ಐ, ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದು,ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಕಳೆದರು ದಲಿತರನ್ನು ಮನುಷ್ಯರಂತೆ ಸಮಾನವಾಗಿ ಕಾಣದ ಪಾಳೇಗಾರಿ ಮೌಲ್ಯಗಳೇ ಉದಯ್ ಸಾವಿಗೆ ಕಾರಣವಾಗಿದೆ ಎಂದಿದ್ದಾರೆ.</p>



<p>ಕೋಲಾರ ಜಿಲ್ಲೆ ಮತ್ತು&nbsp; ಮುಳಬಾಗಿಲು ತಾಲೂಕು ದಲಿತ ಮೀಸಲಾತಿಯ ಸಂಸದರು, ಶಾಸಕರು ಇದ್ದರೂ ಸಹ ದಲಿತರ ಮೇಲೆ ದಾಳಿ ದೌರ್ಜ್ಯಗಳು ನಿರಂತರವಾಗಿ ಹೆಚ್ಚಾಗುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.</p>



<p>ಜಾತಿ ದೌರ್ಜನ್ಯದಿಂದ ಯುವಕ ಸಾವನ್ನಪ್ಪಿದ್ದರು ಸಹ ಈ ಕ್ಷೇತ್ರದ ಶಾಸಕರು, ಸಂಸದರು ಯಾವೊಬ್ಬ ಜನಪ್ರತಿನಿಧಿ ಬಾಯಿ ಬಿಚ್ಚದಿರುವುದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಎಚ್ಚರಿಸಿದರು.</p>



<p>ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿ ಘಟನೆಯ ಸಂಬಂಧಿತ ಆರೋಪಿಗಳನ್ನು 24 ಗಂಟೆಗಳ ಒಳಗೆ ಬಂಧಿಸಬೇಕು. ಮೃತ ಉದಯ್ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ಆತನ ತಾಯಿಗೆ ಸರ್ಕಾರಿ ಉದ್ಯೋಗ, ಮನೆ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಹತ್ತಾರು ಸಾವಿರ ಜನರ ಪೆತ್ತಾಂಡ್ಲಹಳ್ಳಿ ಚಲೋ ಪಾದಯಾತ್ರೆ ಹಮ್ಮಿಕೊಂಡು ಹೋರಾಟ ತೀವ್ರ ಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.</p>



<p>&nbsp;ಈ ಸಂದರ್ಭದಲ್ಲಿ ಸಿಪಿಐಎಂ ತಾಲೂಕು ಕಾರ್ಯದರ್ಶಿ, ಪುಣ್ಯಹಳ್ಳಿ ಶಂಕರ್, ದಲಿತ ಮುಖಂಡರು ಸಂಗಸಂದ್ರ ವಿಜಯ್ ಕುಮಾರ್, ಮೆಕಾನಿಕ್ ಶ್ರೀನಿವಾಸ್, ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ಮೃತ ಸೋದರ ಮಾವ ನಾಗರಾಜ್ ಬೇವಹಳ್ಳಿ,&nbsp; ಡಿವೈಎಫ್ಐ ಮುಖಂಡ ಕೇರಳ ಶ್ರೀನಿವಾಸ್, ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಬಾಬು, ತಾಲ್ಲೂಕು&nbsp; ಅಧ್ಯಕ್ಷ ಶಶಿಕುಮಾರ್, ತಾಲೂಕು ಕಾರ್ಯದರ್ಶಿ ಸುದರ್ಶನ್ ಹಾಗೂ ನೂರಾರು ಜನ ಹೋರಾಟಗಾರರಿದ್ದರು.</p>
]]></content:encoded>
					
		
		
			</item>
	</channel>
</rss>
