<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>darshan &#8211; Peepal Media</title>
	<atom:link href="https://peepalmedia.com/tag/darshan/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 29 Aug 2024 07:32:29 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>darshan &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಬಿಗಿ ಭದ್ರತೆಯ ನಡುವೆ ಆಂಧ್ರದ ಮೂಲಕ ಬಳ್ಳಾರಿ ಜೈಲಿಗೆ ಸ್ಥಳಾಂತರಗೊಂಡ ಕೊಲೆ ಆರೋಪಿ ನಟ ದರ್ಶನ್</title>
		<link>https://peepalmedia.com/actor-darshan-shifted-to-ballari-jail-amid-tight-security/</link>
		
		<dc:creator><![CDATA[Peepal Media]]></dc:creator>
		<pubDate>Thu, 29 Aug 2024 07:32:29 +0000</pubDate>
				<category><![CDATA[ಬಳ್ಳಾರಿ]]></category>
		<category><![CDATA[ಬೆಂಗಳೂರು]]></category>
		<category><![CDATA[darshan]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[renukaswamy]]></category>
		<category><![CDATA[Thoogudeepa]]></category>
		<guid isPermaLink="false">https://peepalmedia.com/?p=44604</guid>

					<description><![CDATA[ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ಅವರನ್ನು ಬಿಗಿ ಭದ್ರತೆಯ ನಡುವೆ ಗುರುವಾರ ಬೆಳಗ್ಗೆ ಬೆಂಗಳೂರು ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ ಪಟ್ಟಿಯಡಿ ಆರೋಪಿಯಾಗಿರುವ ದರ್ಶನ್ ಅವರಿಗೆ 16 ಮಂದಿಯೊಂದಿಗೆ ಸೆಪ್ಟೆಂಬರ್ 9ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಧಿಕಾರಿಗಳ ಪ್ರಕಾರ, ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪೊಲೀಸ್ ಎಸ್‌ಯುವಿ ವಾಹನವೊಂದರಲ್ಲಿ ಹೊರಕ್ಕೆ ಕರೆತರಲಾಯಿತು ಮತ್ತು [&#8230;]]]></description>
										<content:encoded><![CDATA[
<p>ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತೂಗುದೀಪ ಅವರನ್ನು ಬಿಗಿ ಭದ್ರತೆಯ ನಡುವೆ ಗುರುವಾರ ಬೆಳಗ್ಗೆ ಬೆಂಗಳೂರು ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು.</p>



<p>ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ ಪಟ್ಟಿಯಡಿ ಆರೋಪಿಯಾಗಿರುವ ದರ್ಶನ್ ಅವರಿಗೆ 16 ಮಂದಿಯೊಂದಿಗೆ ಸೆಪ್ಟೆಂಬರ್ 9ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.</p>



<p>ಅಧಿಕಾರಿಗಳ ಪ್ರಕಾರ, ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪೊಲೀಸ್ ಎಸ್‌ಯುವಿ ವಾಹನವೊಂದರಲ್ಲಿ ಹೊರಕ್ಕೆ ಕರೆತರಲಾಯಿತು ಮತ್ತು ನಂತರ ಚಿಕ್ಕಬಳ್ಳಾಪುರದಿಂದ ಪೊಲೀಸ್ ವ್ಯಾನ್‌ ಮೂಲಕ ತೆರಳಿದರು. ದರ್ಶನ್ ಅವರಿದ್ದ ವ್ಯಾನ್ ಬೆಳಗ್ಗೆ 9.30ರ ಸುಮಾರಿಗೆ ಬಳ್ಳಾರಿ ಜೈಲು ತಲುಪಿತು.</p>



<p>ಭದ್ರತಾ ಲೋಪಗಳನ್ನು ತಪ್ಪಿಸಲು ನಟನನ್ನು ಆಂಧ್ರಪ್ರದೇಶ ಮಾರ್ಗದ ಮೂಲಕ ಕರೆದೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ</p>



<p>ದರ್ಶನ್ ಪೊಲೀಸ್ ಅಧಿಕಾರಿಗಳ ಪಕ್ಕದಲ್ಲಿಯೇ ಜೈಲು ಪ್ರವೇಶಿಸಿದರು. ಅವರು ಕಪ್ಪು ಪೂಮಾ ಟಿ-ಶರ್ಟ್ ಧರಿಸಿದ್ದರು ಆದರೆ ವಿಗ್‌ ಹಾಕಿಕೊಂಡಿರಲಿಲ್ಲ.</p>



<p>ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ವಿಶೇಷ ಸವಲತ್ತುಗಳನ್ನು ಅನುಭವಿಸುತ್ತಿರುವ ಫೋಟೋಗಳು ವೈರಲ್ ಆದ ನಂತರ, ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರ ಒಂಬತ್ತು ಆರೋಪಿಗಳನ್ನು ವರ್ಗಾಯಿಸಲು ಬೆಂಗಳೂರು ನ್ಯಾಯಾಲಯ ಆದೇಶಿಸಿತ್ತು.</p>
]]></content:encoded>
					
		
		
			</item>
		<item>
		<title>ದರ್ಶನ್ ಪ್ರಕರಣದಲ್ಲಿ ಮಗ ಜೈಲುಪಾಲು: ಮಗನ ಶೋಕದಲ್ಲಿ ಕೊರಗಿ ಕೊರಗಿ ತಾಯಿ ಮಣ್ಣುಪಾಲು</title>
		<link>https://peepalmedia.com/son-jailed-in-darshan-case-mother-mourns-sons-grief/</link>
		
		<dc:creator><![CDATA[Peepal Media]]></dc:creator>
		<pubDate>Sat, 20 Jul 2024 07:28:44 +0000</pubDate>
				<category><![CDATA[ರಾಜ್ಯ]]></category>
		<category><![CDATA[actor darshan]]></category>
		<category><![CDATA[bengalure]]></category>
		<category><![CDATA[chitrdurga]]></category>
		<category><![CDATA[darshan]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[murder]]></category>
		<category><![CDATA[news]]></category>
		<category><![CDATA[pavitra]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[renukaswamy]]></category>
		<guid isPermaLink="false">https://peepalmedia.com/?p=42489</guid>

					<description><![CDATA[ಚಿತ್ರದುರ್ಗ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಘು ಎಂಬಾತನ ತಾಯಿ ಮಂಜುಳಮ್ಮ (65) ನಿಧನ ಹೊಂದಿದ್ದಾರೆ. ಜಿಲ್ಲೆಯ ಕೋಳಿ ಬುರುಜನಹಟ್ಟಿಯ ಮನೆಯಲ್ಲಿ ಮಂಜುಳಮ್ಮ ವಾಸವಾಗಿದ್ದರು. ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರಿಗೆ ಮಗನ ಜೈಲು ಸುದ್ದಿ ಮತ್ತಷ್ಟು ಆತಂಕ ಬಾಧಿಸುವಂತೆ ಮಾಡಿತ್ತು. ರೇಣುಕಾಸ್ವಾಮಿ ಅಪಹರಣ ಮತ್ತು ಮರ್ಡರ್ ಕೇಸ್​ಗೆ ಸಂಬಂಧಿಸಿದಂತೆ ಎ4 ಆರೋಪಿಯಾಗಿದ್ದಾರೆ. ಇದೀಗ ಮಂಜುಳಮ್ಮ ಅವರ ಅಂತ್ಯ ಸಂಸ್ಕಾರಕ್ಕೆ ಪುತ್ರ ರಘುನನ್ನು ಕರೆತರಲು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ. ರಘು [&#8230;]]]></description>
										<content:encoded><![CDATA[
<p><strong>ಚಿತ್ರದುರ್ಗ:</strong> ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ದರ್ಶನ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ರಘು ಎಂಬಾತನ ತಾಯಿ ಮಂಜುಳಮ್ಮ (65) ನಿಧನ ಹೊಂದಿದ್ದಾರೆ. </p>



<p>  ಜಿಲ್ಲೆಯ ಕೋಳಿ ಬುರುಜನಹಟ್ಟಿಯ ಮನೆಯಲ್ಲಿ ಮಂಜುಳಮ್ಮ ವಾಸವಾಗಿದ್ದರು. ಕಳೆದ ಒಂದು ವರ್ಷದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರಿಗೆ ಮಗನ ಜೈಲು ಸುದ್ದಿ ಮತ್ತಷ್ಟು ಆತಂಕ ಬಾಧಿಸುವಂತೆ ಮಾಡಿತ್ತು. </p>



<p>ರೇಣುಕಾಸ್ವಾಮಿ ಅಪಹರಣ ಮತ್ತು ಮರ್ಡರ್ ಕೇಸ್​ಗೆ ಸಂಬಂಧಿಸಿದಂತೆ ಎ4 ಆರೋಪಿಯಾಗಿದ್ದಾರೆ. ಇದೀಗ ಮಂಜುಳಮ್ಮ ಅವರ ಅಂತ್ಯ ಸಂಸ್ಕಾರಕ್ಕೆ ಪುತ್ರ ರಘುನನ್ನು ಕರೆತರಲು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.</p>



<p>ರಘು ತಾಯಿ ನಿಧನದ ಹಿನ್ನಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಆತನ ಸಹೋದರಿ, ನಮ್ಮ ತಮ್ಮ ಕೊಲೆ ಆರೋಪಿ ಆಗಿದ್ದ ಚಿಂತೆಯಲ್ಲಿ ತಾಯಿ ಚಿಂತೆ ಮಾಡಿ ನಿಧನರಾಗಿದ್ದಾರೆ. ಅವನು ಅಂದ್ರೆ ನಮ್ಮ ಅಮ್ಮನಿಗೆ ಬಹಳ ಜೀವ, ಅಷ್ಟು ದೊಡ್ಡವನಾದರೂ ಮುದ್ದಾಡುತ್ತಿದ್ದರು. ಅವನು ಇಂಥ ಕೆಲಸ ಮಾಡುವವನೇ ಅಲ್ಲ. ಅದು ಹೇಗಾಯ್ತು ಅಂತ ಗೊತ್ತಿಲ್ಲ. ಒಬ್ಬರಿಗೆ ಒಂದೇಟು ಹೊಡೆದವನಲ್ಲ, ಡ್ರಿಂಕ್ಸ್ ಮಾಡಿದಾಗ ಹೆಂಡತಿ ಹತ್ತಿರ ಬಾಯಿ ಮಾಡ್ತಿದ್ದ. ಬೇರೆ ಯಾರತ್ರನೂ ಗುದ್ದಾಡಿ, ಹೊಡೆದಾಡಿದ್ದನ್ನು ನಾವು ನೋಡಿಲ್ಲ ಎಂದರು.</p>



<p>ನನ್ನ ಸಹೋದರನನ್ನು ಅಂತ್ಯಕ್ರಿಯೆಗೆ ಕರೆಸಬೇಕು. ಅವನಿಂದಲೇ ನರಳಿ ನರಳಿ, ನೊಂದಿದ್ದಾರೆ. ಚೆನ್ನಾಗಿಯೇ ಓಡಾಡಿಕೊಂಡು ಇದ್ದರು.  ಆದರೆ ಮಗ ಜೈಲಿಗೆ ಹೋದ ಬಳಿಕ ಹಾಸಿಗೆ ಹಿಡಿದಿದ್ದರು ಎಂದು ಹೇಳಿದರು. </p>



<p>ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಜೊತೆಗೆ ಜೈಲು ಸೇರಿರುವ 17 ಆರೋಪಿಗಳ ಪೈಕಿ ಇಬ್ಬರು ಆರೋಪಿಗಳ ಸಂಬಂಧಿಕರು ಸಾವನ್ನಪ್ಪಿದ್ದಾರೆ. ಈ ಹಿಂದೆ ಅನುಕುಮಾರ್ ಎಂಬ ಆರೋಪಿಯ ತಂದೆ ಕೆಲ ದಿನಗಳ ಹಿಂದಷ್ಟೇ ಸಾವನ್ನಪ್ಪಿದ್ದರು. ಈಗ ಮತ್ತೊಂದು ಆರೋಪಿಗೆ ತೀವ್ರ ಅಘಾತ ಎದುರಾಗಿದೆ. </p>
]]></content:encoded>
					
		
		
			</item>
		<item>
		<title>ಕಾಟೇರ ಸಕ್ಸಸ್ ಪಾರ್ಟಿ : ಕನ್ನಡದ ನಟರ ಮೇಲೆ ಪೊಲೀಸ್ ನೋಟಿಸ್ ಜಾರಿ</title>
		<link>https://peepalmedia.com/notice-issued-on-kannada-actors/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 08 Jan 2024 13:41:26 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[darshan]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Katera]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=34683</guid>

					<description><![CDATA[ಬೆಂಗಳೂರಿನ ಪಬ್ ಒಂದರಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪದ ಮೇಲೆ ಕನ್ನಡದ ನಟರಾದ ದರ್ಶನ್, ಡಾಲಿ ಧನಂಜಯ, ಅಭಿಷೇಕ್ ಅಂಬರೀಶ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ಬೆಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ವರದಿಗಳ ಪ್ರಕಾರ ಕಾಟೇರ ಚಿತ್ರತಂಡ ತಮ್ಮ ಚಿತ್ರದ ಸಕ್ಸಸ್ ಪಾರ್ಟಿಯನ್ನು ರಾಜಾಜಿನಗರದಲ್ಲಿರುವ ಜೆಟ್‌ಲಾಗ್ ಪಬ್‌ನಲ್ಲಿ ಆಚರಿಸಿಕೊಂಡಿದೆ.&#160;ನಗರದಲ್ಲಿ ಪಬ್‌ಗಳಿಗೆ ಅನುಮತಿಸಲಾದ ಸಮಯವು ಮಧ್ಯರಾತ್ರಿ 1 ಗಂಟೆಯವರೆಗೆ ಇದ್ದರೂ ಪಾರ್ಟಿ ಬೆಳಗಿನವರೆಗೂ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸ್ ಇಲಾಖೆಯಿಂದ ಬಂದ ಮಾಹಿತಿಯಂತೆ, [&#8230;]]]></description>
										<content:encoded><![CDATA[
<p>ಬೆಂಗಳೂರಿನ ಪಬ್ ಒಂದರಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪದ ಮೇಲೆ ಕನ್ನಡದ ನಟರಾದ ದರ್ಶನ್, ಡಾಲಿ ಧನಂಜಯ, ಅಭಿಷೇಕ್ ಅಂಬರೀಶ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ಬೆಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.</p>



<p>ವರದಿಗಳ ಪ್ರಕಾರ ಕಾಟೇರ ಚಿತ್ರತಂಡ ತಮ್ಮ ಚಿತ್ರದ ಸಕ್ಸಸ್ ಪಾರ್ಟಿಯನ್ನು ರಾಜಾಜಿನಗರದಲ್ಲಿರುವ ಜೆಟ್‌ಲಾಗ್ ಪಬ್‌ನಲ್ಲಿ ಆಚರಿಸಿಕೊಂಡಿದೆ.&nbsp;ನಗರದಲ್ಲಿ ಪಬ್‌ಗಳಿಗೆ ಅನುಮತಿಸಲಾದ ಸಮಯವು ಮಧ್ಯರಾತ್ರಿ 1 ಗಂಟೆಯವರೆಗೆ ಇದ್ದರೂ ಪಾರ್ಟಿ ಬೆಳಗಿನವರೆಗೂ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.</p>



<p>ಪೊಲೀಸ್ ಇಲಾಖೆಯಿಂದ ಬಂದ ಮಾಹಿತಿಯಂತೆ, ಜನವರಿ 3 ರಂದು ಇಡೀ ರಾತ್ರಿ ಪಬ್ ನಲ್ಲಿ ಜೋರಾದ ಮ್ಯೂಸಿಕ್ ಹಾಕಲಾಗಿದ್ದು, ಕನ್ನಡ ಚಿತ್ರರಂಗದ ಪ್ರಮುಖ ನಟರು ಈ ಪಾರ್ಟಿಯ ಭಾಗವಾಗಿದ್ದರು. ಇದನ್ನು&nbsp;ಉಲ್ಲೇಖಿಸಿ ಸುಬ್ರಹ್ಮಣ್ಯನಗರ ಪೊಲೀಸರು ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರಿಗೆ ನೋಟಿಸ್‌ ಕಳುಹಿಸಿದ್ದಾರೆ ಹಾಗೂ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.&nbsp;</p>



<p>ಇದರ ಜೊತೆಗೆ ಜೆಟ್‌ಲಾಗ್ ಪಬ್ ಮಾಲೀಕರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ.&nbsp;ಆ ರಾತ್ರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸುವಂತೆ ಪೊಲೀಸರು ಪಬ್ ನ ಆಡಳಿತಾಧಿಕಾರಿಗಳನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.</p>
]]></content:encoded>
					
		
		
			</item>
		<item>
		<title>ಹುಲಿ ಉಗುರಿನ ಪ್ರಕರಣ : ದರ್ಶನ್, ರಾಕ್ ಲೈನ್ ವೆಂಕಟೇಶ್, ಜಗ್ಗೇಶ್ ಮನೆಯಲ್ಲಿ ತೀವ್ರ ಶೋಧ</title>
		<link>https://peepalmedia.com/darshan-rock-line-venkatesh-jaggeshs-house-is-searched-intensively/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 25 Oct 2023 12:25:55 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[darshan]]></category>
		<category><![CDATA[Jaggesh]]></category>
		<category><![CDATA[karnataka]]></category>
		<category><![CDATA[Nikhil Kumaraswamy]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Rock line Venkatesh]]></category>
		<category><![CDATA[Tiger Claw]]></category>
		<guid isPermaLink="false">https://peepalmedia.com/?p=30528</guid>

					<description><![CDATA[ಹುಲಿ ಉಗುರು ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಜಗ್ಗೇಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿರೋದಾಗಿ ತಿಳಿದು ಬಂದಿದೆ. ಇದರ ಜೊತೆಗೆ ನಟ ದರ್ಶನ್ ಮನೆಗೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಹುಲಿ ಉಗಃರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಧ್ಯ ಮೂರೂ ಸೆಲೆಬ್ರಿಟಿಗಳ ಮನೆಯನ್ನು ಜಾಲಾಡಿರುವ ಅಧಿಕಾರಿಗಳು ಈಗಾಗಲೇ ದರ್ಶನ್ ಮನೆಯಲ್ಲಿ ಇರುವ ಹುಲಿ ಉಗುರನ್ನು ವಶಕ್ಕೆ ಪಡೆದರೆ, ಜಗ್ಗೇಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಮನೆಯಲ್ಲಿ [&#8230;]]]></description>
										<content:encoded><![CDATA[
<p>ಹುಲಿ ಉಗುರು ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಜಗ್ಗೇಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಅವರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿರೋದಾಗಿ ತಿಳಿದು ಬಂದಿದೆ. ಇದರ ಜೊತೆಗೆ ನಟ ದರ್ಶನ್ ಮನೆಗೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಹುಲಿ ಉಗಃರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.</p>



<p>ಸಧ್ಯ ಮೂರೂ ಸೆಲೆಬ್ರಿಟಿಗಳ ಮನೆಯನ್ನು ಜಾಲಾಡಿರುವ ಅಧಿಕಾರಿಗಳು ಈಗಾಗಲೇ ದರ್ಶನ್ ಮನೆಯಲ್ಲಿ ಇರುವ ಹುಲಿ ಉಗುರನ್ನು ವಶಕ್ಕೆ ಪಡೆದರೆ, ಜಗ್ಗೇಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಮನೆಯಲ್ಲಿ ತೀವ್ರ ಶೋಧ ಕಾರ್ಯ ಮುಂದುವರೆಸಿದ್ದಾರೆ.</p>



<p>ಮಲ್ಲೇಶ್ವರಂನಲ್ಲಿರುವಂತ ನಟ ಜಗ್ಗೇಶ್ ಅವರ ನಿವಾಸಕ್ಕೆ ಭೇಟಿ ನೀಡಿರುವಂತ ಅರಣ್ಯ ಇಲಾಖೆಯ ಅಧಿಕಾರಿಗಳು, ಜಗ್ಗೇಶ್ ಅವರ ಪತ್ನಿಯೊಂದಿಗೆ ಚರ್ಚಿಸುತ್ತಿದ್ದು, ಮನೆ ಪರಿಶೀಲನೆಯನ್ನು ಕೆಲವೇ ಕ್ಷಣಗಳಲ್ಲಿ ನಡೆಸೋದಕ್ಕೆ ಸಿದ್ಧತೆಯನ್ನು ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮಲ್ಲೇಶ್ವರಂನ ಜಗ್ಗೇಶ್ ನಿವಾಸದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತೆರಳಿದಂತ ವೇಳೆಯಲ್ಲಿ ಅವರು ಮನೆಯಲ್ಲಿ ಇಲ್ಲ ಎಂಬುದಾಗಿ ತಿಳಿದು ಬಂದಿದೆ.</p>



<p>ಮಹಾಲಕ್ಷ್ಮಿ ಲೇಔಟ್​ನಲ್ಲಿ ನಟ ರಾಕ್​ಲೈನ್​ ವೆಂಕಟೇಶ್ ನಿವಾಸಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ರಾಕ್​ಲೈನ್​ ವೆಂಕಟೇಶ್​ ಮನೆಯಲ್ಲಿ ಇಲ್ಲ ಎಂದು ಕೆಲಸದವರು ಹೇಳಿದ್ದಾರೆ. ಬಳಿಕ ಮನೆಯಲ್ಲಿದ್ದ ಮಗನನ್ನು ಕರೆದು ಸರ್ಚ್​ ವಾರೆಂಟ್​​ಗೆ ಸಹಿ ಹಾಕಿಸಿಕೊಂಡ ಅಧಿಕಾರಿಗಳು ಮನೆಯೊಳಗೆ ಹೋಗಿ ಶೋಧ ಶುರು ಮಾಡಿದ್ದಾರೆ.</p>



<p>ಇನ್ನು ನಿಖಿಲ್ ಕುಮಾರಸ್ವಾಮಿ ಮೇಲೂ ಹುಲಿ ಉಗುರು ಧರಿಸಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಖಿಲ್ &#8220;ನಾನು ಧರಿಸಿದ್ದ ಹುಲಿ ಉಗುರು ಮಾದರಿಯ ಪೆಂಡೆಂಟ್ ಕೃತಕವಾದದ್ದೇ ಹೊರತು ನೈಜವಾದುದ್ದಲ್ಲ. ಅದನ್ನು ನನ್ನ ಮದುವೆ ಸಮಯದಲ್ಲಿ ಉಡುಗೋರೆ ನೀಡಿದ್ದು. ಅದು ಈಗಲೂ ನನ್ನ ಬಳಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬಹುದು. ದಯಮಾಡಿ ಯಾರೂ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಪ್ರಸಾರ ಮಾಡಬಾರದು&#8221; ಎಂದು ನಿಖಿಲ್ ಕುಮಾರಸ್ವಾಮಿ ಅವರು ಟ್ವೀಟ್ ಮೂಲಕ ವಿನಂತಿ ಮಾಡಿದ್ದಾರೆ.</p>
]]></content:encoded>
					
		
		
			</item>
		<item>
		<title>ಹುಲಿ ಉಗುರಿನ ಸರಣಿ : ಬಿಜೆಪಿ ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ಬಂಧನಕ್ಕೆ ಹೆಚ್ಚಿದ ಒತ್ತಡ</title>
		<link>https://peepalmedia.com/increased-pressure-to-arrest-actor-jaggesh/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 25 Oct 2023 02:09:46 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[darshan]]></category>
		<category><![CDATA[Jaggesh]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[Nikhil Kumaraswamy]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Tiger Claw]]></category>
		<category><![CDATA[Varthur Santosh]]></category>
		<category><![CDATA[Vinay Guruji]]></category>
		<guid isPermaLink="false">https://peepalmedia.com/?p=30464</guid>

					<description><![CDATA[ಅಸಲಿ ಹುಲಿ ಉಗುರು ಧರಿಸಿದ ಆರೋಪದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹುಲಿ ಉಗುರು ಧರಿಸಿರುವವರ ಬಗ್ಗೆ ಹೆಚ್ಚು ಸದ್ದು ಕೇಳಿ ಬರುತ್ತಿದೆ. ವರ್ತೂರು ಸಂತೋಷ್ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ನಡುವೆ ಹುಲಿ ಉಗುರು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಂಚಿಕೊಂಡ ಒಬ್ಬೊಬ್ಬರನ್ನೇ ಹುಡುಕಿ ಅರಣ್ಯ ಇಲಾಖೆ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ [&#8230;]]]></description>
										<content:encoded><![CDATA[
<p>ಅಸಲಿ ಹುಲಿ ಉಗುರು ಧರಿಸಿದ ಆರೋಪದಲ್ಲಿ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹುಲಿ ಉಗುರು ಧರಿಸಿರುವವರ ಬಗ್ಗೆ ಹೆಚ್ಚು ಸದ್ದು ಕೇಳಿ ಬರುತ್ತಿದೆ.</p>



<p>ವರ್ತೂರು ಸಂತೋಷ್ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ನಡುವೆ ಹುಲಿ ಉಗುರು ಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹಂಚಿಕೊಂಡ ಒಬ್ಬೊಬ್ಬರನ್ನೇ ಹುಡುಕಿ ಅರಣ್ಯ ಇಲಾಖೆ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದ್ದು, ಈಗ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಚರ್ಚೆ ಶುರುವಾಗಿದೆ.</p>



<p>ಈಗ ಬಿಜೆಪಿ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ಅವರ ಮೇಲೆ ಹುಲಿ ಉಗುರು ಧರಿಸಿರುವ ಆರೋಪ ಕೇಳಿಬಂದಿದೆ. ನಟ ಜಗ್ಗೇಶ್ ಕೂಡ ತಮ್ಮ ಕೊರಳಿನಲ್ಲಿ ಹುಲಿ ಉಗುರಿನ ಸರ ಹಾಕಿಕೊಂಡಿದ್ದಾರೆ. ಈ ಬಗ್ಗೆ ಖುದ್ದಾಗಿ ಸ್ವತಃ ಜಗ್ಗೇಶ್ ನ್ಯೂಸ್ ಪಸ್ಟ್ ಕನ್ನಡ ಎಂಬ ಖಾಸಗಿ ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಹಲವರು, ವರ್ತೂರ್ ಸಂತೋಷ್ಗೆ ಒಂದು ನ್ಯಾಯ ಜಗ್ಗೇಶ್ ಗೆ ಒಂದು ನ್ಯಾಯ. ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಬಂಧನ ಯಾವಾಗ? ಎಂದು ಪ್ರಶ್ನಿಸುತ್ತಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಇವ್ರ ಅಮ್ಮ ಹುಲಿ ಇದ್ದಂಗೆ ಇರಬೇಕು ಅಂತ <br>ಒರಿಜಿನಲ್ ಹುಲಿ ಉಗುರಲ್ಲಿ ಲಾಕೆಟ್ ಮಾಡಿಸಿದ್ದು ಅಂತೆ ಬಿಜೆಪಿ ರಾಜ್ಯಸಭಾ ಎಂಪಿ ಜಗ್ಗೇಶ್ ಅವರೇ ಹೇಳ್ತಾ ಇದ್ದೀದ್ದು .<br><br>ಇವ್ರ ಮೇಲೇನು ಕೂಡ ಕ್ರಮ ಆಗಬೇಕು<a href="https://twitter.com/aranya_kfd?ref_src=twsrc%5Etfw">@aranya_kfd</a><a href="https://t.co/irSNBYeOnC">pic.twitter.com/irSNBYeOnC</a></p>&mdash; Goudrusarkar &#8211; ಗೌಡ್ರುಸರ್ಕಾರ್ (@Gs_0107) <a href="https://twitter.com/Gs_0107/status/1716822921627529301?ref_src=twsrc%5Etfw">October 24, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಸಂದರ್ಶನದಲ್ಲಿ ನಟ ಜಗ್ಗೇಶ್ “ನನಗೆ 20 ವರ್ಷ ಆದಾಗ ನನ್ನಮ್ಮ ನನ್ನ ಮಗ ಹುಲಿ ಇದ್ದಂಗೆ ಇರಬೇಕು ಅಂತ ಹೇಳಿ ಒರಿಜಿನಲ್ ಹುಲಿ ಉಗುರಿನಲ್ಲಿ ಈ ಲಾಕೆಟ್ ಇರುವ ಸರ ಮಾಡಿಸಿ ಹಾಕಿದ್ದರು” ಎಂದಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.</p>



<p>ಅಷ್ಟೆ ಅಲ್ಲದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಗ, ಜೆಡಿಎಸ್ ಯೂತ್ ವಿಂಗ್ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಮ್ಮ ಮದುವೆ ಕಾರ್ಯಕ್ರಮದಲ್ಲಿ ಧರಿಸಿರುವ ಒಡವೆಯಲ್ಲೂ ಹುಲಿ ಉಗುರು ಪತ್ತೆಯಾಗಿದೆ. ಈ ಬಗ್ಗೆಯೂ ಜಾಲತಾಣಗಳಲ್ಲಿ &#8216;ಇವರ ಬಂಧನ ಯಾವಾಗ&#8217; ಎನ್ನುವ ಪ್ರಶ್ನೆ ಎದ್ದಿದೆ.</p>



<figure class="wp-block-image size-full"><img fetchpriority="high" decoding="async" width="431" height="640" src="https://peepalmedia.com/wp-content/uploads/2023/10/20231025_065015.jpg" alt="" class="wp-image-30465" srcset="https://peepalmedia.com/wp-content/uploads/2023/10/20231025_065015.jpg 431w, https://peepalmedia.com/wp-content/uploads/2023/10/20231025_065015-202x300.jpg 202w, https://peepalmedia.com/wp-content/uploads/2023/10/20231025_065015-150x223.jpg 150w, https://peepalmedia.com/wp-content/uploads/2023/10/20231025_065015-300x445.jpg 300w" sizes="(max-width: 431px) 100vw, 431px" /></figure>



<p>ಈಗಾಗಲೇ ಚಿತ್ರನಟ ದರ್ಶನ್ ಕೂಡಾ ಈ ಹಿಂದೆ ಹುಲಿ ಉಗುರು ಹೊಂದಿರುವ ಸರ ಧರಿಸಿದ್ದು, ಈ ಬಗ್ಗೆಯೂ ಜಾಲತಾಣಗಳಲ್ಲಿ ಚರ್ಚೆಯಾಗಿ ದರ್ಶನ್ ಮೇಲೆ ದೂರು ದಾಖಲಾಗಿದೆ. </p>



<figure class="wp-block-image size-full"><img decoding="async" width="387" height="406" src="https://peepalmedia.com/wp-content/uploads/2023/10/Screenshot-2023-10-24-163057.jpg" alt="" class="wp-image-30467" srcset="https://peepalmedia.com/wp-content/uploads/2023/10/Screenshot-2023-10-24-163057.jpg 387w, https://peepalmedia.com/wp-content/uploads/2023/10/Screenshot-2023-10-24-163057-286x300.jpg 286w, https://peepalmedia.com/wp-content/uploads/2023/10/Screenshot-2023-10-24-163057-150x157.jpg 150w, https://peepalmedia.com/wp-content/uploads/2023/10/Screenshot-2023-10-24-163057-300x315.jpg 300w" sizes="(max-width: 387px) 100vw, 387px" /></figure>



<p>ಅವಧೂತನ ಅವತಾರದಲ್ಲಿ ಬರುವ ಗೌರಿಗದ್ದೆ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ವಿನಯ್ ಗುರೂಜಿ ಮೇಲೂ ದೂರು ದಾಖಲಾಗಿದೆ. ಅರಣ್ಯ ಇಲಾಖೆ ಈಗಾಗಲೇ ದರ್ಶನ್, ವಿನಯ್ ಗುರೂಜಿ ವಿಚಾರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.</p>



<figure class="wp-block-image size-full"><img decoding="async" width="500" height="286" src="https://peepalmedia.com/wp-content/uploads/2023/10/346098-tiger.jpeg" alt="" class="wp-image-30466" srcset="https://peepalmedia.com/wp-content/uploads/2023/10/346098-tiger.jpeg 500w, https://peepalmedia.com/wp-content/uploads/2023/10/346098-tiger-300x172.jpeg 300w, https://peepalmedia.com/wp-content/uploads/2023/10/346098-tiger-150x86.jpeg 150w" sizes="(max-width: 500px) 100vw, 500px" /></figure>
]]></content:encoded>
					
		
		
			</item>
		<item>
		<title>&#8216;ದರ್ಶನ್ ಜೊತೆಯಾಗಲು ಸಿದ್ಧ, ಆದರೆ..!&#8217; ; ಕಿಚ್ಚ ಸುದೀಪ್ ಹೇಳಿದ್ದೇನು?</title>
		<link>https://peepalmedia.com/ready-to-be-with-darshan-but-what-did-kiccha-sudeep-say/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 02 Sep 2023 13:19:27 +0000</pubDate>
				<category><![CDATA[ಸಿನಿಮಾ]]></category>
		<category><![CDATA[darshan]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kiccha sudeep]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=27073</guid>

					<description><![CDATA[ತನ್ನ ಹುಟ್ಟು ಹಬ್ಬದ ವಿಶೇಷವಾಗಿ ಅಭಿಮಾನಿಗಳು ಮತ್ತು ಮಾಧ್ಯಮ ಸ್ನೇಹಿತರ ಜೊತೆಗೆ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಕಿಚ್ಚ ಸುದೀಪ್ ಮಾಧ್ಯಮದವರೊಟ್ಟಿಗೆ ಮಾತಾಡಿದ್ದಾರೆ. ವಿಶೇಷ ಎಂದರೆ ತನ್ನ ಸಹನಟ ದರ್ಶನ್ ವಿಚಾರವಾಗಿ ಮನಬಿಚ್ಚಿ ಮಾತನಾಡಿದ್ದಾರೆ ಕಿಚ್ಚ ಸುದೀಪ್. ಇತ್ತೀಚೆಗೆ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಒಂದೇ ವೇದಿಕೆ ಹಂಚಿಕೊಂಡರೂ ಮುಖ ನೋಡಿಕೊಳ್ಳದ ದರ್ಶನ್ ಮತ್ತು ಸುದೀಪ್ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸುದ್ದಿಗಳು ಗರಿಗೆದರಿತ್ತು. ಅದರ ಬೆನ್ನಲ್ಲೇ ಬಂದ [&#8230;]]]></description>
										<content:encoded><![CDATA[
<p>ತನ್ನ ಹುಟ್ಟು ಹಬ್ಬದ ವಿಶೇಷವಾಗಿ ಅಭಿಮಾನಿಗಳು ಮತ್ತು ಮಾಧ್ಯಮ ಸ್ನೇಹಿತರ ಜೊತೆಗೆ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಕಿಚ್ಚ ಸುದೀಪ್ ಮಾಧ್ಯಮದವರೊಟ್ಟಿಗೆ ಮಾತಾಡಿದ್ದಾರೆ. ವಿಶೇಷ ಎಂದರೆ ತನ್ನ ಸಹನಟ ದರ್ಶನ್ ವಿಚಾರವಾಗಿ ಮನಬಿಚ್ಚಿ ಮಾತನಾಡಿದ್ದಾರೆ ಕಿಚ್ಚ ಸುದೀಪ್.</p>



<p>ಇತ್ತೀಚೆಗೆ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಒಂದೇ ವೇದಿಕೆ ಹಂಚಿಕೊಂಡರೂ ಮುಖ ನೋಡಿಕೊಳ್ಳದ ದರ್ಶನ್ ಮತ್ತು ಸುದೀಪ್ ಬಗ್ಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸುದ್ದಿಗಳು ಗರಿಗೆದರಿತ್ತು. ಅದರ ಬೆನ್ನಲ್ಲೇ ಬಂದ ಸುದೀಪ್ ಹುಟ್ಟುಹಬ್ಬ ಆ ಒಂದು ಸನ್ನಿವೇಶದ ಬಗ್ಗೆ ಪ್ರಶ್ನಿಸಲು ಮಾಧ್ಯಮಗಳಿಗೆ ಒಂದು ಒಳ್ಳೆಯ ವೇದಿಕೆ ಕೂಡಾ ಆಗಿದ್ದು ವಿಶೇಷ.</p>



<p>ಇನ್ನೂ ಒಂದು ಮುಖ್ಯ ವಿಚಾರ ಎಂದರೆ ಸುದೀಪ್ ಬೇರೆಲ್ಲಾ ದಿನಗಳಂತೆ ದರ್ಶನ್ ವಿಚಾರವಾಗಿ ಬಂದ ಪ್ರಶ್ನೆಗಳನ್ನು ತಿರಸ್ಕರಿಸದೇ, ಮುಕ್ತವಾಗಿ ಸ್ವೀಕರಿಸಿ ಬಹುತೇಕರಿಗೆ ಸಮಾಧಾನ ಆಗುವಂತೆ ಉತ್ತರಿಸಿದ್ದಾರೆ. ಸಮಾಧಾನ ಎನ್ನುವುದಕ್ಕಿಂತ ತನ್ನ ಮನದ ಮಾತನ್ನು ಹೊರಹಾಕಿದ್ದಾರೆ.</p>



<p>ಸುಮಲತಾ ಅಂಬರೀಶ್ ಹುಟ್ಟು ಹಬ್ಬದ ಸಂದರ್ಭದಲ್ಲಿ ದರ್ಶನ್ ಸುದೀಪ್ ವೇದಿಕೆ ಹಂಚಿಕೊಂಡ ಬಗ್ಗೆ, ಇಬ್ಬರೂ ಮುಖ ನೋಡಿಕೊಳ್ಳದೇ ನಿರ್ಗಮಿಸಿದ ಬಗ್ಗೆ ಮಾಧ್ಯಮಗಳು ಮೊದಲ ಪ್ರಶ್ನೆಯಾಗಿ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್.. ಮೊದಲಿಗೆ ದರ್ಶನ್ ಹಾಗೂ ಮಾಧ್ಯಮಗಳು ಒಂದಾಗಿದ್ದು ಒಳ್ಳೆಯ ವಿಷಯ. ಎಷ್ಟು ದಿನ ಅಂತ ದ್ವೇಷ ಇಟ್ಟು ಇರುವುದಕ್ಕೆ ಆಗುತ್ತದೆ.. ಒಂದು ಕೆಟ್ಟ ಗಳಿಗೆಯಲ್ಲಿ ಮಾತು ಬರುತ್ತೆ, ಹೋಗುತ್ತೆ.. ಅದನ್ನು ಬೆಳೆಸದೇ ಒಂದಾಗಿದ್ದು ನನಗಂತೂ ಖುಷಿ ಇದೆ ಎಂದು ಸುದೀಪ್ ಹೇಳಿದ್ದಾರೆ.</p>



<p>ನಂತರ &#8216;ನಂಗೆ ಅವರ ಮೇಲೆ ಕೋಪ ಇಲ್ಲ. ನಾವಿಬ್ಬರೂ ಒಂದಾಗುವುದಕ್ಕೆ ಸ್ವಲ್ಪ ಸಮಯ ಬೇಕು. ನಾವಿಬ್ಬರೂ ಪರಸ್ಪರ ಗೌರವ ಕೊಡ್ತೀವಿ. ಪರಸ್ಪರ ಕೈಕುಲುಕಿದ ಮಾತ್ರಕ್ಕೆ ಎಲ್ಲಾ ಸರಿಹೋಯ್ತು ಅನ್ನೋಕಾಗಲ್ಲ. ನನ್ನಲ್ಲೂ ಕೆಲವು ಪ್ರಶ್ನೆಗಳಿವೆ, ಅವರಲ್ಲೂ ಕೆಲವು ಪ್ರಶ್ನೆಗಳಿರಬಹುದು.. In fact ಸುಮಾರು 6 ವರ್ಷಗಳ ನಂತರ ನಾನು ದರ್ಶನ್ ಮುಖಾಮುಖಿ ಆದದ್ದು. ಈ ಬಗ್ಗೆ ಖುಷಿ ಇದೆ. ಆದರೆ ಒಂದಾಗಲು ಕಾಲ ಬರಬೇಕು. ಅದಕ್ಕೆ ಸಮಯ ಬೇಕು. ಆ ಸಮಯ ಕೊಡಿ&#8217; ಎಂದು ಸುದೀಪ್ ಹೇಳಿದ್ದಾರೆ.</p>



<p>ಮಾಧ್ಯಮಗಳಲ್ಲಿ ಈ ವಿಷಯ ಸುದ್ದಿ ಆದಾಗ ಖುಷಿ ತಂದಿತ್ತು. ದರ್ಶನ್ ದೊಡ್ಡ ನಟ. ನಾವು ಕಿತ್ತಾಡಿಕೊಂಡಿಲ್ಲ. ನನಗೆ ದರ್ಶನ್ ಮೇಲೆ ಕೋಪವಿಲ್ಲ. ಕಿತ್ತಾಡಿಕೊಂಡ್ರು, ಜಗಳ ಮಾಡಿಕೊಂಡ್ರು ಅನ್ನುವುದು ಕಲ್ಪನೆ ಅಷ್ಟೇ. ಗೋಡೆ ಮುರಿಬೇಕು, ಆದರೆ ಕಲ್ಪನೆ ಇರಬಾರದು. ಇಬ್ಬರೂ ಒಂದೇ ಪಾರ್ಟಿಯಲ್ಲಿ ಭೇಟಿ ಆಗಿದ್ದು ಖುಷಿ ತಂದಿದೆ. ನಂಗೂ ಕೆಲವು ಪ್ರಶ್ನೆಗಳು ಇವೆ. ದರ್ಶನ್‌ಗೂ ಇವೆ. ಇಬ್ಬರೂ ಮುಖಾಮುಖಿ ಆದಾಗ ಮಾತ್ರ ಸಮಸ್ಯೆಗೆ ಪರಿಹಾರ ಸಿಗೋದು. ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ಒಪ್ತೀನಿ ಎಂದು ಸುದೀಪ್‌ ಹೇಳಿದ್ದಾರೆ.</p>



<p>ಸುಮಲತಾ (Sumalatha) ಅವರ ಮೇಲೆ ಗೌರವ ಇದೆ, ಹಾಗಾಗಿ ಪಾರ್ಟಿ ಹೋಗಿದ್ದೆ. ತುಂಬಾ ವರ್ಷಗಳ ನಂತರ ಪಾರ್ಟಿಗೆ ಹೋಗಿದ್ದೆ. ನಾನು ಪಾರ್ಟಿ ಮಾಡುವ ವ್ಯಕ್ತಿ ಅಲ್ಲ. ಆ ರೀತಿ ಆಗಿದ್ದು ನನಗೂ ತುಂಬಾ ಖುಷಿ ಆಗಿದೆ. ನಾನು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ನೋಡುವುದಿಲ್ಲ. ದರ್ಶನ್ ಪೋಸ್ಟ್ ನಾನು ನೋಡಿಲ್ಲ. ನೇರವಾಗಿ ಏನಾದರೂ ಹೇಳಿದರೆ ಕನ್ಸಿಡರ್ ಮಾಡ್ತೀನಿ ಎಂದಿದ್ದಾರೆ ಸುದೀಪ್.</p>



<p>ಸಧ್ಯ ಎಲ್ಲಾ ಮನಸ್ತಾಪಕ್ಕೂ ಒಂದು ಕೊನೆ ಇದೆ. ಅದಕ್ಕೆ ಕಾಲ ಬೇಕು ಎನ್ನುವ ಮೂಲಕ ಸುದೀಪ್ ಮೊದಲ ಬಾರಿಗೆ ಈ ಬಗ್ಗೆ ಬಹಿರಂಗ ವೇದಿಕೆಯಲ್ಲಿ ಮೌನ ಮುರಿದಿದ್ದಾರೆ. ಇನ್ನು ಇದಕ್ಕೆ ದರ್ಶನ್ ಅವರ ಉತ್ತರ ಏನು, ಒಂದಾಗಲು ಎಷ್ಟು ಕಾಲ ಬೇಕು ಎಂಬುದಕ್ಕೂ ಕಾಲವೇ ಉತ್ತರಿಸಲಿದೆ.</p>
]]></content:encoded>
					
		
		
			</item>
		<item>
		<title>ಬೆಳ್ಳಿ ಪರದೆಗೆ ಕನಸಿನ ರಾಣಿಯ ಪುತ್ರಿ, ದರ್ಶನ್ ಸಿನಿಮಾ ನಾಯಕಿಯಾದ ರಾಧನಾ</title>
		<link>https://peepalmedia.com/belli-paradege-kanasina-raaniya-putri-darshan-sinimaa-naayakiyada-raadhanaa/</link>
		
		<dc:creator><![CDATA[Peepal Media]]></dc:creator>
		<pubDate>Sat, 06 Aug 2022 10:32:06 +0000</pubDate>
				<category><![CDATA[ಸಿನಿಮಾ]]></category>
		<category><![CDATA[bengalure]]></category>
		<category><![CDATA[cinema]]></category>
		<category><![CDATA[darshan]]></category>
		<category><![CDATA[kannada]]></category>
		<category><![CDATA[kannada cinema]]></category>
		<category><![CDATA[karnataka]]></category>
		<category><![CDATA[malashri]]></category>
		<category><![CDATA[movie]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[raadhanaa]]></category>
		<category><![CDATA[sandalwood]]></category>
		<category><![CDATA[writing]]></category>
		<guid isPermaLink="false">https://peepalmedia.com/?p=759</guid>

					<description><![CDATA[ಮಾಲಾಶ್ರೀ ಅಂದ್ರೆ ಒಂದು ಕಾಲದ ಯುವಕರ ಕನಸಿನ ರಾಣಿ. ಕನ್ನಡ ಚಿತ್ರರಂಗದಲ್ಲಿ ನಾಯಕರನ್ನು ಮೀರಿ ಬೆಳೆದ ಕೆಲವೇ ಕೆಲವು ನಾಯಕಿಯರಲ್ಲಿ ಒಬ್ಬರು ಮಾಲಾಶ್ರೀ. ಇತ್ತೀಚಿಗೆ ತಮ್ಮ ಪತಿ ರಾಮು ಅವರನ್ನು ಕಳೆದುಕೊಂಡು ದುಃಖದಲ್ಲಿರುವ ಅವರ ಕುಟುಂಬದಿಂದ ಈಗ ಸಿಹಿಸದ್ದಿಯೊಂದು ಹೊರಬಂದಿದೆ. ಅದು ರಾಮು ಮತ್ತು ಮಾಲಾಶ್ರೀ ಪುತ್ರಿಯ ಸಿನಿಮಾ ಎಂಟ್ರಿ. ಅನನ್ಯಾ ಎಂಬ ಹೆಸರಿನ ಮಾಲಾಶ್ರೀ ಪುತ್ರಿ ಈಗ ರಾಧನಾ ರಾಮ್ ಎಂದು ಹೆಸರು ಬದಲಾಯಿಸಿಕೊಂಡು ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ. ಅವರ ಮೊದಲ ಪ್ರಯತ್ನವೇ ಅದ್ದೂರಿಯಾಗಿ ಇರಲಿದೆ [&#8230;]]]></description>
										<content:encoded><![CDATA[
<p class="has-medium-font-size">ಮಾಲಾಶ್ರೀ ಅಂದ್ರೆ ಒಂದು ಕಾಲದ ಯುವಕರ ಕನಸಿನ ರಾಣಿ. ಕನ್ನಡ ಚಿತ್ರರಂಗದಲ್ಲಿ ನಾಯಕರನ್ನು ಮೀರಿ ಬೆಳೆದ ಕೆಲವೇ ಕೆಲವು ನಾಯಕಿಯರಲ್ಲಿ ಒಬ್ಬರು ಮಾಲಾಶ್ರೀ. ಇತ್ತೀಚಿಗೆ ತಮ್ಮ ಪತಿ ರಾಮು ಅವರನ್ನು ಕಳೆದುಕೊಂಡು ದುಃಖದಲ್ಲಿರುವ ಅವರ ಕುಟುಂಬದಿಂದ ಈಗ ಸಿಹಿಸದ್ದಿಯೊಂದು ಹೊರಬಂದಿದೆ. ಅದು ರಾಮು ಮತ್ತು ಮಾಲಾಶ್ರೀ ಪುತ್ರಿಯ ಸಿನಿಮಾ ಎಂಟ್ರಿ.</p>



<p class="has-medium-font-size">ಅನನ್ಯಾ ಎಂಬ ಹೆಸರಿನ ಮಾಲಾಶ್ರೀ ಪುತ್ರಿ ಈಗ ರಾಧನಾ ರಾಮ್ ಎಂದು ಹೆಸರು ಬದಲಾಯಿಸಿಕೊಂಡು ಸಿನಿಮಾ ರಂಗಕ್ಕೆ ಬರುತ್ತಿದ್ದಾರೆ. ಅವರ ಮೊದಲ ಪ್ರಯತ್ನವೇ ಅದ್ದೂರಿಯಾಗಿ ಇರಲಿದೆ ಅನ್ನೋದಕ್ಕೆ ಅವರು ದರ್ಶನ್ ಅವರ ಸಿನಿಮಾ ನಾಯಕಿ ಆಗಿರೋದೇ ಕಾರಣ. ಹೌದು ತರುಣ್ ಕಿಶೋರ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ದರ್ಶನ್ ಗೆ ನಾಯಕಿಯಾಗಿ ರಾಧನಾ ರಾಮ್ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಇಂದು ಘೋಷಣೆ ಆಗಿದೆ. ಈ ಹಿಂದೆ ದರ್ಶನ್ ಅವರಿಗೆ ರಾಬರ್ಟ್ ಸಿನಿಮಾ ನಿರ್ದೇಶನ ಮಾಡಿ ಯಶಸ್ಸು ಕಂಡಿದ್ದ ತರುಣ್ ಕಿಶೋರ್ ಈಗ ಡಿ 56 ಎಂಬ ತಾತ್ಕಾಲಿಕ ಹೆಸರಿರುವ ಚಿತ್ರದ ನಿರ್ದೇಶನಕ್ಕೆ ಹೊರಳಿದ್ದಾರೆ.</p>



<p class="has-medium-font-size">ಒಟ್ಟಿನಲ್ಲಿ ನಟಿ ಮಾಲಾಶ್ರೀ ಅವರು ಚಿತ್ರರಂಗದಿಂದ ಕೊಂಚ ದೂರವೇ ಇದ್ದರೂ, ಈಗ ಅವರ ಪುತ್ರಿ ಚಿತ್ರರಂಗಕ್ಕೆ ಕಾಲಿಡ್ತಾ ಇರೋದು ಅವರ ಅಭಿಮಾನಿಗಳಲ್ಲಿ ಪುಳಕ ಉಂಟು ಮಾಡಿದೆ.</p>
]]></content:encoded>
					
		
		
			</item>
	</channel>
</rss>
