<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>death &#8211; Peepal Media</title>
	<atom:link href="https://peepalmedia.com/tag/death/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sun, 27 Oct 2024 01:53:32 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>death &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸಾವಿನ ವ್ಯಾಖ್ಯಾನವನ್ನೇ ಬದಲಿಸಲು ಹೊರಟಿದೆ ಎಐ ತಂತ್ರಜ್ಞಾನ!</title>
		<link>https://peepalmedia.com/ai-technology-is-going-to-change-the-definition-of-death/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 26 Oct 2024 12:26:20 +0000</pubDate>
				<category><![CDATA[ಅಂಕಣ]]></category>
		<category><![CDATA[ಸೈನ್ಸ್ + ಟೆಕ್ನಾಲಜಿ]]></category>
		<category><![CDATA[AI technology]]></category>
		<category><![CDATA[death]]></category>
		<guid isPermaLink="false">https://peepalmedia.com/?p=47840</guid>

					<description><![CDATA[&#8220;ಸಾವು ದೇಹಕ್ಕೆ ಅಷ್ಟೆ ಹೊರತು, ಮೆದುಳಿಗೆ ಅಲ್ಲ ಎನ್ನುತ್ತಿದೆ ಈ ತಂತ್ರಜ್ಞಾನ. ಕೊಂಚ ಅಚ್ಚರಿ ಅನ್ನಿಸಿದರು, ಈವರೆಗೆ ನಾವುಗಳು ಕಟ್ಟಿಕೊಂಡು ಬಂದ ಸಾವಿನ ಕುರಿತಾದ ಪರಿಕಲ್ಪನೆಯನ್ನು ವಿಜ್ಞಾನ ಬದಲಿಸಲು ಹೊರಟಂತಿದೆ. ಅದನ್ನು ಡಿಜಿಟಲ್ ಇಮ್ಮಾರ್ಟಲಿಟಿ ಅಂತ ಕರೆಯಲು ಶುರುಮಾಡಿದ್ದಾರೆ..&#8221; AI ಕ್ರಾಂತಿಯ ಮುಂದುವರೆದ ಭಾಗವಾಗಿ ಪತ್ರಕರ್ತ ಪ್ರಶಾಂತ್ ಹುಲ್ಕೋಡು ಅವರ ಕುತೂಹಲಕಾರಿ ಬರಹ. ತಪ್ಪದೇ ಓದಿ. ಆಗಷ್ಟೆ ಕೊರೊನಾ ಮೊದಲ ಅಲೆ ಮುಗಿದಿತ್ತು. ನಮ್ಮ ತಲೆಮಾರು ನೋಡಿದ ಮೊದಲ ಸಾಂಕ್ರಾಮಿಕ ರೋಗ ಇನ್ನೂ ಶಾಂತವಾಗಿರಲಿಲ್ಲ. ಆಗಷ್ಟೆ 6 [&#8230;]]]></description>
										<content:encoded><![CDATA[
<p></p>



<blockquote class="wp-block-quote is-layout-flow wp-block-quote-is-layout-flow">
<p>&#8220;ಸಾವು ದೇಹಕ್ಕೆ ಅಷ್ಟೆ ಹೊರತು, ಮೆದುಳಿಗೆ ಅಲ್ಲ ಎನ್ನುತ್ತಿದೆ ಈ ತಂತ್ರಜ್ಞಾನ. ಕೊಂಚ ಅಚ್ಚರಿ ಅನ್ನಿಸಿದರು, ಈವರೆಗೆ ನಾವುಗಳು ಕಟ್ಟಿಕೊಂಡು ಬಂದ ಸಾವಿನ ಕುರಿತಾದ ಪರಿಕಲ್ಪನೆಯನ್ನು ವಿಜ್ಞಾನ ಬದಲಿಸಲು ಹೊರಟಂತಿದೆ. ಅದನ್ನು ಡಿಜಿಟಲ್ ಇಮ್ಮಾರ್ಟಲಿಟಿ ಅಂತ ಕರೆಯಲು ಶುರುಮಾಡಿದ್ದಾರೆ..&#8221; AI ಕ್ರಾಂತಿಯ ಮುಂದುವರೆದ ಭಾಗವಾಗಿ ಪತ್ರಕರ್ತ ಪ್ರಶಾಂತ್ ಹುಲ್ಕೋಡು ಅವರ ಕುತೂಹಲಕಾರಿ ಬರಹ. ತಪ್ಪದೇ ಓದಿ.</p>
</blockquote>



<p>ಆಗಷ್ಟೆ ಕೊರೊನಾ ಮೊದಲ ಅಲೆ ಮುಗಿದಿತ್ತು. ನಮ್ಮ ತಲೆಮಾರು ನೋಡಿದ ಮೊದಲ ಸಾಂಕ್ರಾಮಿಕ ರೋಗ ಇನ್ನೂ ಶಾಂತವಾಗಿರಲಿಲ್ಲ. ಆಗಷ್ಟೆ 6 ತಿಂಗಳ ಬಾಣಂತನ ಮುಗಿಸಿ ಮಗನ ಜತೆ ಬಾಳ ಸಂಗಾತಿ ಬೆಂಗಳೂರಿಗೆ ಬಂದಿಳಿದಿದ್ದಳು. ಹೀಗಿರುವಾಗಲೇ ತೀರ್ಥಹಳ್ಳಿಯಿಂದ ಒಬ್ಬ ಕರೆ ಮಾಡಿದ್ದ. ಅವತ್ತು ನವೆಂಬರ್ 5, 2020. “ಪಿಟ್ಟಿ, ನಿನ್ನ ಅಪ್ಪ ಹೋಗಿಬಿಟ್ರು,” ಅಂದ. ಬೆಂಗಳೂರಿನ ಮಾಳಗಾಳದ ಟೀ ಅಂಗಡಿ ಮುಂದೆ ನಿಂತಿದ್ದ ನನಗೆ ಆ ಕ್ಷಣಕ್ಕೆ ಏನು ಹೇಳಬೇಕೋ ತೋಚಲಿಲ್ಲ. ಅಪ್ಪನ ಪ್ರೀತಿಯ ಮಗ ನಾನು. ನನ್ನ ಎಲ್ಲಾ ಪ್ರಯೋಗಗಳಿಗೆ ತನ್ನ ನಿಷ್ಕಲ್ಮಶ ನಗುವಿನ ಮೂಲಕವೇ ಸಮ್ಮತಿ ಕೊಟ್ಟುಕೊಂಡು ಬಂದವರು. ಸುಮಾರು ಒಂದೂವರೆ ದಶಕ ಪಾರ್ಕಿನ್ಸನ್ ಕಾಯಿಲೆಯ ಜತೆ ಗುದ್ದಾಡಿದ ಅವರ ಹೃದಯ ಕೊನೆಗೂ ಬಡಿತ ನಿಲ್ಲಿಸಿತ್ತು.</p>



<p>ಸಾವು ನನಗೆ ಹೊಸತೇನೂ ಆಗಿರಲಿಲ್ಲ. ನಾನಾ ರೀತಿಯ ಸಾವುಗಳಿಗೆ (ಎನ್‌ಕೌಂಟರ್, ರಸ್ತೆ ಅಪಘಾತ, ಲೈವ್‌ ಮರ್ಡರ್, ಆತ್ಮೀಯರ ಅಗಲಿಕೆ…) ಸಾಕ್ಷಿಯಾಗಿದ್ದೆ. ಸಾವಿನ ಕುರಿತು ಮೊದಲೇ ಒಂದು ರೀತಿಯ ಭಾವಶೂನ್ಯತೆ ಆವರಿಸಿಕೊಂಡಿತ್ತು. ಹೀಗಿರುವಾಗ, ನನ್ನ ಪ್ರೀತಿಯ ತಂದೆಯ ಸಾವು ಕೇವಲ ಕರ್ತವ್ಯಗಳನ್ನಷ್ಟೆ ನೆನಪಿಸಿತು. ಪ್ರತೀತಿಯಿಂದ ಬಂದ ಕೆಲಸಕ್ಕೆ ಬಾರದ ಶ್ರಾದ್ಧಾ, ಕಟ್ಲೆ ಕಾರ್ಯಗಳನ್ನು ಮುಗಿಸಿ ಬೆಂಗಳೂರಿಗೆ ವಾಪಾಸಾದೆ.</p>



<p>ಮೊದಲಿನಿಂದಲೂ ಬದುಕಿನ ತಿರುವುಗಳಲ್ಲಿ ಅಪ್ಪ ನೆನಪಾಗುತ್ತಿದ್ದರು. ಅವರ ಅನಿಸಿಕೆ ಏನಿರಬಹುದು ಎಂಬ ಕುತೂಹಲ ಇದ್ದೇ ಇತ್ತು. ಇದೀಗ ಅವರಿಲ್ಲ. ಇನ್ನಾವ ವಿಚಾರಕ್ಕೂ ಅವರ ಅಭಿಪ್ರಾಯ, ಅನಿಸಿಕೆಗಳು ಲಭ್ಯವಿಲ್ಲ. ಆಗಾಗ, “ಅಪ್ಪ ಇದ್ದಿದ್ದರೆ…” ಅನ್ನೋ ಆಲೋಚನೆಯೊಂದು ಸುಳಿಯಲಾರಂಭಿಸಿತು. ಈ ಸಮಯದಲ್ಲಿ ಹಿರಿಯರು ಬುದ್ಧನ ಸಾವಿಲ್ಲದ ಮನೆಯ ಸಾಸಿವೆ ಕತೆ ಹೇಳಿ ಸಮಾಧಾನಪಡಿಸಿದರು. ಇನ್ನೊಬ್ಬರು ಖುಷ್ವಂತ್ ಸಿಂಗ್‌ ಅವರ ಸಾವಿನ ಕುರಿತಾದ ಪುಸ್ತಕ ಓದಲು ಹೇಳಿದರು. ಹೀಗೆ ಸಾವಿಗೆ ಸಾಂತ್ವಾನ ಹೇಳಿಕೊಳ್ಳುವ ಅನಿವಾರ್ಯತೆಯನ್ನು, ಶೋಕಗಳನ್ನು ನೀಗಿಕೊಳ್ಳುವ ಕಲೆಯನ್ನು ಸುತ್ತಮುತ್ತಲಿನವರು ಕಲಿಸಿದರು.</p>



<p>ಹಾಗೆ ನೋಡಿದರೆ, ಈ ನಾಗರೀಕತೆ ಹುಟ್ಟು ಮತ್ತು ಸಾವಿಗೆ ತನ್ನದೇ ಅರ್ಥಗಳನ್ನು ಕಂಡುಕೊಂಡಿದೆ. ಏನೇ ಬಂದರೂ ಅರಗಿಸಿಕೊಂಡು ಮುಂದೆ ಹೋಗುವ ಕಲೆಯನ್ನು ರೂಢಿಸಿಕೊಂಡಿದೆ. ನಮ್ಮನ್ನು ಅಗಲುವವರು ಪೈಕಿ ಶೇ. 98ರಷ್ಟು ಸಾವುಗಳಿಗೆ ಅಂತಿಮವಾಗಿ ಹೃದಯ ಕೆಲಸ ನಿಲ್ಲಿಸುವುದೇ ಕಾರಣ. ಇನ್ನುಳಿದ ಶೇ. 2ರಷ್ಟು ಸಾವುಗಳು ಮೆದುಳು ಸ್ಥಗಿತದಿಂದ ಸಂಭವಿಸುತ್ತವೆ ಎನ್ನುತ್ತವೆ ಸಂಶೋಧನೆಗಳು. ಸಾವುಗಳನ್ನು ಮೀರಿದ ಬದುಕು ಇಲ್ಲವಾಗಿರುವ ಕಾರಣಕ್ಕೆ, ಸತ್ತವರನ್ನು ನೆನಪಿಸಿಕೊಳ್ಳಲು ಪಿತೃಪಕ್ಷ, ಶ್ರಾದ್ಧಾಗಳ ಹೆಸರಿನಲ್ಲಿ ಆಚರಣೆಗಳನ್ನು ಹುಟ್ಟುಹಾಕಿಕೊಂಡಿದ್ದೇವೆ. ಆ ಮೂಲಕ ವರ್ಷಕ್ಕೊಮ್ಮೆಯಾದರೂ ಅಗಲಿದವರನ್ನು ನೆನಪಿಸಿಕೊಳ್ಳುವ ಪ್ರಕ್ರಿಯೆ ಇದು ಅಂತ ಅನ್ನಿಸುತ್ತದೆ. ಯಾಕೆ ಇಷ್ಟು ಸಾವಿನ ಕುರಿತು ಮಾತನಾಡುತ್ತಿದ್ದೇನೆ ಎಂದರೆ, ಇದೀಗ ಈ ಎಐ ಎಂದು ಕರೆಯುವ ಕೃತಕ ಬುದ್ದಿವಂತಿಕೆಯು ಸಾವಿನ ವ್ಯಾಖ್ಯಾನಗಳನ್ನೇ ಬದಲಿಸಲು ಹೊರಟಿದೆ. ಸಾವು ದೇಹಕ್ಕೆ ಅಷ್ಟೆ ಹೊರತು, ಮೆದುಳಿಗೆ ಅಲ್ಲ ಎನ್ನುತ್ತಿದೆ ಈ ತಂತ್ರಜ್ಞಾನ. ಕೊಂಚ ಅಚ್ಚರಿ ಅನ್ನಿಸಿದರು, ಈವರೆಗೆ ನಾವುಗಳು ಕಟ್ಟಿಕೊಂಡು ಬಂದ ಸಾವಿನ ಕುರಿತಾದ ಪರಿಕಲ್ಪನೆಯನ್ನು ವಿಜ್ಞಾನ ಬದಲಿಸಲು ಹೊರಟಂತಿದೆ. ಅದನ್ನು ಡಿಜಿಟಲ್ ಇಮ್ಮಾರ್ಟಲಿಟಿ ಅಂತ ಕರೆಯಲು ಶುರುಮಾಡಿದ್ದಾರೆ.</p>



<p><strong>ಏನಿದು ಡಿಜಿಟಲ್ ಇಮ್ಮಾರ್ಟಲಿಟಿ?:</strong><br>ಎಐ ತಂತ್ರಜ್ಞಾನ, ನ್ಯೂರೋ ಸೈನ್ಸ್ ಮತ್ತಿತರ ವಿಜ್ಞಾನದ ಆವಿಷ್ಕಾರಗಳ ಬೆಳವಣಿಗೆಯಿಂದಾಗಿ ಈಗಾಗಲೇ ನಮ್ಮದೇ ರೀತಿಯ ಅವತಾರಗಳನ್ನು ಸೃಷ್ಟಿಸುವ ಅವಕಾಶವಿದೆ. ಮೈಕ್ರೋಸಾಫ್ಟ್ ಸಂಸ್ಥೆ ಜೀವಂತ ವ್ಯಕ್ತಿಗಳ ಮೆದುಳನ್ನೇ ನಕಲು ಮಾಡುವ ತಂತ್ರಜ್ಞಾನವನ್ನು ಹೊರಜಗತ್ತಿಗೆ ನೀಡಲು ಹೊರಟಿದೆ. ಇದರ ಬಿಡುಗಡೆಯ ದಿನಾಂಕವನ್ನೂ ಇನ್ನೂ ಟೆಕ್‌ ಸಂಸ್ಥೆ ಘೋಷಣೆ ಮಾಡದಿದ್ದರೂ, ಮುಂದಿನ ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಧ್ಯತೆ ಇದೆ. ಡೀಪ್‌ಬ್ರೈನ್‌ ಎಐ ಎಂಬ ಸಂಸ್ಥೆ ಈಗಿರುವ ವ್ಯಕ್ತಿಗಳ ಧ್ವನಿ ಹಾಗೂ ಮುಖವನ್ನು ನಕಲು ಮಾಡಲು ಅವಕಾಶ ಒದಗಿಸಿದೆ. ಹೋಲ್‌ ಬ್ರೈನ್‌ ಎಮ್ಯುಲೇಶನ್ ಎಂಬ ಪರಿಕಲ್ಪನೆ ಮುಂದಿನ ದಿನಗಳಲ್ಲಿ ಪಡೆದುಕೊಳ್ಳುವ ಸ್ವರೂಪಗಳ ಕುರಿತು ಟೆಕ್‌ ಲೋಕದಲ್ಲಿ ಸಂಚಲನ ಸೃಷ್ಟಿಯಾಗಿದೆ.</p>



<figure class="wp-block-image size-full"><img fetchpriority="high" decoding="async" width="1024" height="1024" src="https://peepalmedia.com/wp-content/uploads/2024/10/brain-uploading-2-1.png" alt="" class="wp-image-47890" srcset="https://peepalmedia.com/wp-content/uploads/2024/10/brain-uploading-2-1.png 1024w, https://peepalmedia.com/wp-content/uploads/2024/10/brain-uploading-2-1-300x300.png 300w, https://peepalmedia.com/wp-content/uploads/2024/10/brain-uploading-2-1-150x150.png 150w, https://peepalmedia.com/wp-content/uploads/2024/10/brain-uploading-2-1-768x768.png 768w, https://peepalmedia.com/wp-content/uploads/2024/10/brain-uploading-2-1-696x696.png 696w" sizes="(max-width: 1024px) 100vw, 1024px" /></figure>



<p>ಒಂದು ವೇಳೆ ಮನುಷ್ಯನ ನಕಲು ಮಾಡಿದ ಡಿಜಿಟಲ್ ಮೆದುಳು ಅಸಲಿ ಮನುಷ್ಯನಂತೆ ಭಾವನೆಗಳನ್ನು ವ್ಯಕ್ತಪಡಿಸುವ, ಆಲೋಚಿಸುವ, ಸ್ವಂತಿಕೆಯನ್ನು ಬೆಳೆಸಿಕೊಂಡರೆ ಅದರ ಪರಿಣಾಮಗಳು ಏನಿರಬಹುದು ಎಂಬುದನ್ನು ನಿಮ್ಮ ಊಹೆಗೆ ಬಿಡಲಾಗಿದೆ. 2024ರ ‘ಲೈವ್‌ ಸೈನ್ಸ್‌’ ಸಂಚಿಕೆಯೊಂದರ ಲೇಖನವೊಂದು ಹೋಲ್‌ ಬ್ರೈನ್‌ ಎಮ್ಯುಲೇಶನ್‌ನ ನೈತಿಕತೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದೆ. ಇದರಿಂದ ಎದುರಾಗುವ ಕಾನೂನಾತ್ಮಕ ಸಮಸ್ಯೆಗಳು ಹಾಗೂ ಸಾಮಾಜಿಕ ಸಂರಚನೆಯ ಬದಲಾವಣೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ. 2022ರಲ್ಲಿ ‘ಸೈಕಾಲಜಿ ಟುಡೆ’ ಪ್ರಕಟಿಸಿದ ಅಂಕಣದಲ್ಲಿ ಮನುಷ್ಯನ ನಕಲಿ ಮೆದುಳು ಆಕೆಯ/ ಆತನ ದೇಹಾಂತ್ಯದ ನಂತರವೂ ಬದುಕುಳಿಯುವ ಮೆದುಳು ಹುಟ್ಟುಹಾಕುವ ಮನೋವೈಜ್ಞಾನಿಕ ತಲ್ಲಣಗಳನ್ನು ಪಟ್ಟಿ ಮಾಡಿದೆ. ಜತೆಗೆ, ಸಾವಿನ ಕುರಿತು ಈವರೆಗೆ ಅರಗಿಸಿಕೊಂಡ ತತ್ವಗಳಲ್ಲಿ ಏಳುವ ಕಂಪನಗಳ ಕುರಿತು ಗಮನ ಸೆಳೆಯುತ್ತದೆ. &nbsp;</p>



<figure class="wp-block-image size-full"><img decoding="async" width="1024" height="1024" src="https://peepalmedia.com/wp-content/uploads/2024/10/brain-uploading-1.png" alt="" class="wp-image-47889" srcset="https://peepalmedia.com/wp-content/uploads/2024/10/brain-uploading-1.png 1024w, https://peepalmedia.com/wp-content/uploads/2024/10/brain-uploading-1-300x300.png 300w, https://peepalmedia.com/wp-content/uploads/2024/10/brain-uploading-1-150x150.png 150w, https://peepalmedia.com/wp-content/uploads/2024/10/brain-uploading-1-768x768.png 768w, https://peepalmedia.com/wp-content/uploads/2024/10/brain-uploading-1-696x696.png 696w" sizes="(max-width: 1024px) 100vw, 1024px" /></figure>



<p><br><strong>ಕೆಲವು ಪ್ರಶ್ನೆಗಳು:</strong><br>ಒಟ್ಟಾರೆ, ಮನುಷ್ಯ ಸತ್ತ ನಂತರವೂ ಆಕೆಯ/ಆತನ ಮೆದುಳನ್ನು ಉಳಿಸಿಕೊಳ್ಳುವುದು ಇವತ್ತಿಗೆ ಊಹೆಗೆ ಮೀರಿದ ಪರಿಕಲ್ಪನೆಯಾಗಿ ಉಳಿದಿಲ್ಲ. ಹಾಗಂತ ಈ ತಂತ್ರಜ್ಞಾನ ಎಲ್ಲಾ ಮನುಷ್ಯರಿಗೂ ಸಮಾನವಾಗಿ ಸಿಗುತ್ತಾ ಎಂಬ ಪ್ರಶ್ನೆ ಇದ್ದೇ ಇದೆ. ಆರ್ಥಿಕ ಅಸಮಾನತೆಯಲ್ಲಿ ಬೇಯುತ್ತಿರುವ ಈ ಸಮಾಜದಲ್ಲಿ ಇಂತಹದೊಂದು ತಂತ್ರಜ್ಞಾನ ಬಲಾಢ್ಯರ ಮೆದುಳುಗಳನ್ನು ಮಾತ್ರವೇ ಉಳಿಸುವಂತಾದರೂ ಕಷ್ಟವೇ. ಇದಕ್ಕಾಗಿ ನಮ್ಮ ಸರಕಾರಗಳು ಈ ವಿಚಾರದಲ್ಲಿ ಹೆಚ್ಚು ಸೂಕ್ಷ್ಮತೆಯಿಂದ ವ್ಯವಹರಿಸಬೇಕಿದೆ.</p>



<p>ನಮ್ಮದೇ ರಾಜ್ಯದ ಆಡಳಿತವನ್ನು ಗಮನಿಸಿ ನೋಡಿ. ಇಲ್ಲಿ ಗ್ರಾಮೀಣಾಭಿವೃದ್ಧಿಗೂ, ಐಟಿ- ಬಿಟಿಗೂ ಒಬ್ಬನೇ ಸಚಿವ. ಗ್ರಾಮೀಣಾಭಿವೃದ್ಧಿಯಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಿಕೊಳ್ಳಿ ಎಂದು ರೈತರು ನೀಡಿದ ಮನವಿಯನ್ನೇ ಈತ ಕಸದ ಬುಟ್ಟಿಗೆ ಎಸೆದಿದ್ದಾನೆ. ಇಂತವರಿಂದ ಎಐ ತಂತ್ರಜ್ಞಾನ ಸೃಷ್ಟಿಸಬಹುದಾದ ಕಂದಕವನ್ನು ಮುಚ್ಚುವ ಕೆಲಸ ಆಗುತ್ತಾ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ.</p>



<p>ಎರಡನೇ ಪ್ರಮುಖ ಪ್ರಶ್ನೆ ಇರುವುದು, ಸಾವಿನ ನಂತರವೂ ಬದುಕುಳಿಯುವ ತಂತ್ರಜ್ಞಾನ ಎತ್ತಬಹುದಾದ ತಾತ್ವಿಕ ವಿಚಾರಗಳ ಕುರಿತಾಗಿದ್ದು. ಪಿತೃಪಕ್ಷ, ಶ್ರಾದ್ಧಾಗಳ ಮೂಲಕ ‘ಹೋದವರೆಲ್ಲಾ ಒಳ್ಳೆಯವರು’ ಎಂಬ ತೆಳುವಾದ ನೈತಿಕ ಚೌಕಟ್ಟಿನಲ್ಲಿ ಸಮಾಜ ಈಗ ಮುಂದೆ ಸಾಗುತ್ತಿದೆ. ಒಂದು ವೇಳೆ, ಸತ್ತ ನಂತರವೂ ಮೆದುಳೊಂದು ಜೀವಂತ ಇದ್ದರೆ, ಆಗ ಅದನ್ನು ‘ಒಳ್ಳೆಯವರು’ ಎಂದು ಗುರುತಿಸುವ ಮನೋಧರ್ಮ ಉಳಿಯುತ್ತಾ? ಉತ್ತರಗಳಿಗಾಗಿ ಕಾದುನೋಡಬೇಕಿದೆ.</p>



<p><strong>ಒಂದು ಸಲಹೆ :</strong><br>ಈ ತಂತ್ರಜ್ಞಾನ ಭವಿಷ್ಯವನ್ನು ಬದಲಿಸುವ ಪರಿಗೆ ನಾವೆಲ್ಲಾ ಸಾಕ್ಷಿಯಾಗಬೇಕಿದೆ. ಅದಕ್ಕಾಗಿ ಅರಿಮೆಯನ್ನು ಬೆಳೆಸಿಕೊಳ್ಳುವುದು ಬಹುಮುಖ್ಯವಾಗಿರುವ ಕೆಲಸವಾಗಬೇಕಿದೆ. ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ವಾತಾವರಣದಲ್ಲಿ ವಿಶಿಷ್ಟವಾಗಿರುವ ಮೆದುಳು ಮ್ಯೂಸಿಯಂ ಒಂದನ್ನು ಸ್ಥಾಪಿಸಲಾಗಿದೆ. ಇಲ್ಲಿ ಕಳೆದ 40 ವರ್ಷಗಳ ಅಂತರದಲ್ಲಿ ನಾನಾ ಕಾರಣಗಳಿಗಾಗಿ ಸತ್ತವರ ಸುಮಾರು 400ಕ್ಕೂ ಹೆಚ್ಚು ಮೆದುಳುಗಳನ್ನು ಸಂಸ್ಕರಿಸಲಾಗಿದೆ. ಇದೀಗ ಸಾರ್ವಜನಿಕರು, ಶಾಲಾ ಮಕ್ಕಳಿಗೆ ಪ್ರವೇಶಾವಕಾಶವನ್ನು ಒದಗಿಸಲಾಗಿದೆ. ಹೆಚ್ಚಿನ ಮಾಹಿತಿಗೆ (https://thenimhansbrainbank.in/museum/) ಕ್ಲಿಕ್ ಮಾಡಿ, ಈಗಲೇ ನೋಂದಾಯಿಸಿಕೊಳ್ಳಿ ಮತ್ತು ವಿಶಿಷ್ಟ ಅನುಭವಕ್ಕೆ ಈಡಾಗಿ.</p>
]]></content:encoded>
					
		
		
			</item>
		<item>
		<title>ನಾಗಪುರ: ಒಂದೇ ಮನೆಯ ನಾಲ್ವರು ನೇಣು ಹಾಕಿಕೊಂಡು ಆತ್ಮಹತ್ಯೆ</title>
		<link>https://peepalmedia.com/4-of-family-hang-selves-in-nagpur/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 02 Oct 2024 09:45:35 +0000</pubDate>
				<category><![CDATA[ಅಪರಾಧ]]></category>
		<category><![CDATA[crime]]></category>
		<category><![CDATA[death]]></category>
		<category><![CDATA[maharashtra]]></category>
		<category><![CDATA[nagpur]]></category>
		<category><![CDATA[suicide]]></category>
		<guid isPermaLink="false">https://peepalmedia.com/?p=46585</guid>

					<description><![CDATA[ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ದಂಪತಿ ಮತ್ತು ಅವರ ಇಬ್ಬರು ಪುತ್ರರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಮನೆಯಲ್ಲಿ ಪತ್ತೆಯಾದ ಸೂಸೈಡ್ ನೋಟ್‌ನಲ್ಲಿ ವಂಚನೆ ಪ್ರಕರಣವೊಂದರಲ್ಲಿ ಪುತ್ರನೊಬ್ಬನ ಬಂಧನದಿಂದಾಗಿ ಕುಟುಂಬವು ಒತ್ತಡದಲ್ಲಿದೆ ಎಂದು ಬರೆಯಲಾಗಿದೆ ಎಂದು ನಾಗ್ಪುರ ಗ್ರಾಮಾಂತರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊವಾಡ್ ಗ್ರಾಮದಲ್ಲಿರುವ ಇವರ ಮನೆಯಲ್ಲಿ ಯಾವುದೇ ಶಬ್ಧಗಳು ಬಾರದೆ ಇದ್ದದ್ದನ್ನು ಗಮನಿಸಿ ಕೆಲವು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದರು. ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ [&#8230;]]]></description>
										<content:encoded><![CDATA[
<p>ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ದಂಪತಿ ಮತ್ತು ಅವರ ಇಬ್ಬರು ಪುತ್ರರು ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.</p>



<p>ಮನೆಯಲ್ಲಿ ಪತ್ತೆಯಾದ ಸೂಸೈಡ್ ನೋಟ್‌ನಲ್ಲಿ ವಂಚನೆ ಪ್ರಕರಣವೊಂದರಲ್ಲಿ ಪುತ್ರನೊಬ್ಬನ ಬಂಧನದಿಂದಾಗಿ ಕುಟುಂಬವು ಒತ್ತಡದಲ್ಲಿದೆ ಎಂದು ಬರೆಯಲಾಗಿದೆ ಎಂದು ನಾಗ್ಪುರ ಗ್ರಾಮಾಂತರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>



<p>ಮೊವಾಡ್ ಗ್ರಾಮದಲ್ಲಿರುವ ಇವರ ಮನೆಯಲ್ಲಿ ಯಾವುದೇ ಶಬ್ಧಗಳು ಬಾರದೆ ಇದ್ದದ್ದನ್ನು ಗಮನಿಸಿ ಕೆಲವು ನೆರೆಹೊರೆಯವರು ಪೊಲೀಸರಿಗೆ ತಿಳಿಸಿದರು.</p>



<p>ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ಕುಟುಂಬದ ನಾಲ್ವರು ಸೀಲಿಂಗ್ ಕೊಕ್ಕೆಗಳಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.</p>



<p>ಮೃತರನ್ನು ನಿವೃತ್ತ ಶಿಕ್ಷಕ ವಿಜಯ್ ಮಧುಕರ್ ಪಚೋರಿ (68), ಅವರ ಪತ್ನಿ ಮಾಲಾ (55) ಮತ್ತು ಅವರ ಮಕ್ಕಳಾದ ಗಣೇಶ್ (38) ಮತ್ತು ದೀಪಕ್ (36) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.</p>



<p>ಮಧ್ಯಪ್ರದೇಶದ ಪಾಂಡುರ್ನಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣದಲ್ಲಿ ಈ ವರ್ಷದ ಆರಂಭದಲ್ಲಿ ಗಣೇಶ್ ಬಂಧನದಿಂದಾಗಿ ಕುಟುಂಬವು ಅಪಾರ ಒತ್ತಡದಲ್ಲಿದ್ದುದು ಸೂಸೈಡ್ ನೋಟ್‌ನಲ್ಲಿ ಕಂಡುಬಂದಿದೆ.&nbsp; ಇದರಲ್ಲಿ ಕುಟುಂಬದ ನಾಲ್ಕು ಸದಸ್ಯರ ಸಹಿಯನ್ನುಇತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.</p>



<p>ನಾರ್ಖೇಡ್ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.</p>
]]></content:encoded>
					
		
		
			</item>
		<item>
		<title>ಒಡಿಯಾ ಚಿತ್ರರಂಗದ ಜನಪ್ರಿಯ ನಟಿ ಝರನಾ ದಾಸ್‌ ನಿಧನ</title>
		<link>https://peepalmedia.com/popular-odia-film-actress-zarana-das-passed-away/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 02 Dec 2022 08:33:55 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[death]]></category>
		<category><![CDATA[india]]></category>
		<category><![CDATA[jharana das]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=17275</guid>

					<description><![CDATA[ಒಡಿಶಾ: ಒಡಿಯಾ ಚಿತ್ರರಂಗದ ಜನಪ್ರಿಯ ನಟಿ ಝರನಾ ದಾಸ್‌(82)  ತನ್ನ ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ . 1960ರ ಜನಪ್ರಿಯ ನಟಿಯಾಗಿದ್ದ ಝರನಾ ದಾಸ್‌ ಶ್ರೀ ಜಗನ್ನಾಥ, ನಾರಿ, ಆದಿನಮೇಘಾ, ಅಭಿನೇತ್ರಿ, ಅಮಡಾ ಬಾಟಾ, ಮಲಜಹ್ನಾ, ಮಾರಿ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಅತ್ಯಂತ ಹೆಸರುವಾಸಿಯಾಗಿದ್ದಾರೆ. ಕತಕ್‌ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುವುದಲ್ಲದೆ, ಬಾಲನಟಿಯಾಗಿ, ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ದಾಸ್‌ ಅವರು ಅತ್ಯಂತ ಜನಪ್ರಿಯವಾಗಿದ್ದರು. ಅಷ್ಟಲ್ಲದೇ ಮಾಜಿ ಮುಖ್ಯಮಂತ್ರಿ ಹರೇಕೃಷ್ಣ ಮಹ್ತಾಬ್‌ ಜೀವನಾಧಾರಿತ ಸಾಕ್ಷ್ಯಚಿತ್ರವನ್ನು ಸಹ [&#8230;]]]></description>
										<content:encoded><![CDATA[
<p><strong>ಒಡಿಶಾ:</strong> ಒಡಿಯಾ ಚಿತ್ರರಂಗದ ಜನಪ್ರಿಯ ನಟಿ ಝರನಾ ದಾಸ್‌(82)  ತನ್ನ ವಯೋಸಹಜ ಕಾಯಿಲೆಯಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ .</p>



<p>1960ರ ಜನಪ್ರಿಯ ನಟಿಯಾಗಿದ್ದ ಝರನಾ ದಾಸ್‌ ಶ್ರೀ ಜಗನ್ನಾಥ, ನಾರಿ, ಆದಿನಮೇಘಾ, ಅಭಿನೇತ್ರಿ, ಅಮಡಾ ಬಾಟಾ, ಮಲಜಹ್ನಾ, ಮಾರಿ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಅತ್ಯಂತ ಹೆಸರುವಾಸಿಯಾಗಿದ್ದಾರೆ.</p>



<p>ಕತಕ್‌ ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುವುದಲ್ಲದೆ, ಬಾಲನಟಿಯಾಗಿ, ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ದಾಸ್‌ ಅವರು ಅತ್ಯಂತ ಜನಪ್ರಿಯವಾಗಿದ್ದರು. ಅಷ್ಟಲ್ಲದೇ ಮಾಜಿ ಮುಖ್ಯಮಂತ್ರಿ ಹರೇಕೃಷ್ಣ ಮಹ್ತಾಬ್‌ ಜೀವನಾಧಾರಿತ ಸಾಕ್ಷ್ಯಚಿತ್ರವನ್ನು ಸಹ ದಾಸ್‌ ಅವರು ನಿರ್ದೇಶಿಸಿದ್ದು ಖ್ಯಾತಿ ಗಳಿಸಿದ್ದರು.</p>



<p>ಝರನಾ ದಾಸ್‌ ಅವರು ಹಲವಾರು ನಾಟಕಗಳು, ಟಿವಿ ಸರಣಿಗಳು ಮತ್ತು ಧಾರವಾಹಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಗುರು ಕೇಲುಚರಣ್‌ ಮೊಹಪಾತ್ರ ಅವರ ಅಡಿಯಲ್ಲಿ ಒಡಿಸ್ಸಿ ನೃತ್ಯವನ್ನು ಕಲಿತು, 2016 ರಲ್ಲಿ ʼಗುರು ಕೇಲುಚರಣ್‌ ಮೋಹಪಾತ್ರ ಪ್ರಶಸ್ತಿʼ ಯನ್ನು ಪಡೆದಿದ್ದರು.</p>



<p>ರಾಜ್ಯ ಸರ್ಕಾರ ದಾಸ್‌ ಅವರ ಸಿನಿಮಾ ಕ್ಷೇತ್ರದಲ್ಲಿನ ಸಾಧನೆಗಾಗಿ ಪ್ರತಿಷ್ಟಿತ ಪ್ರಶಸ್ತಿ ಜಯದೇವ್‌ ಪುರಸ್ಕಾರ ಪಡೆದಿದ್ದರು.</p>
]]></content:encoded>
					
		
		
			</item>
		<item>
		<title>ಬಾಲಿವುಡ್‌ ಹಿರಿಯ ನಟ ವಿಕ್ರಮ್‌ ಗೋಖಲೆ ನಿಧನ</title>
		<link>https://peepalmedia.com/veteran-bollywood-actor-vikram-gokhale-passed-away/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 26 Nov 2022 10:02:10 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[bollywood acort]]></category>
		<category><![CDATA[death]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[vikŗam gokhale\]]></category>
		<category><![CDATA[writing]]></category>
		<guid isPermaLink="false">https://peepalmedia.com/?p=16627</guid>

					<description><![CDATA[ಮುಂಬೈ : ಬಾಲಿವುಡ್‌ ಹಿರಿಯ ನಟ ವಿಕ್ರಮ್‌ ಗೋಖಲೆ ಅವರು ಇಂದು ಮಧ್ಯಾನ ಪುಣೆಯ ಧೀನನಾಥ್‌ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಕ್ರಮ್‌ ಗೋಖಲೆಯವರು, ಪುಣೆಯ ದೀನನಾಥ್‌ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಮ್ಮ 75 ನೇ ವಯಸ್ಸಿನಲ್ಲಿ ನವೆಂಬರ್‌ 26 ಶನಿವಾರದಂದು ಇಹಲೋಕ ತ್ಯಜಿಸಿದ್ದಾರೆ. ಖ್ಯಾತ ನಟ ವಿಕ್ರಮ್‌ ಗೋಖಲೆಯವರು 1971 ರಲ್ಲಿ ಅಮಿತಾಬ್‌ ಬಚ್ಚನ್‌ ಅವರ ಪರ್ವಾನಾ ಚಿತ್ರದ ಮೂಲಕ ಚಿತ್ರರಂಗನಕ್ಕೆ ಹೆಜ್ಜೆ ಇಟ್ಟಿದ್ದ ಇವರು, [&#8230;]]]></description>
										<content:encoded><![CDATA[
<p><strong>ಮುಂಬೈ :</strong> ಬಾಲಿವುಡ್‌ ಹಿರಿಯ ನಟ ವಿಕ್ರಮ್‌ ಗೋಖಲೆ ಅವರು ಇಂದು ಮಧ್ಯಾನ ಪುಣೆಯ ಧೀನನಾಥ್‌ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.</p>



<p>ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಕ್ರಮ್‌ ಗೋಖಲೆಯವರು, ಪುಣೆಯ ದೀನನಾಥ್‌ ಮಂಗೇಶ್ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಮ್ಮ 75 ನೇ ವಯಸ್ಸಿನಲ್ಲಿ ನವೆಂಬರ್‌ 26 ಶನಿವಾರದಂದು ಇಹಲೋಕ ತ್ಯಜಿಸಿದ್ದಾರೆ.</p>



<p>ಖ್ಯಾತ ನಟ ವಿಕ್ರಮ್‌ ಗೋಖಲೆಯವರು 1971 ರಲ್ಲಿ ಅಮಿತಾಬ್‌ ಬಚ್ಚನ್‌ ಅವರ ಪರ್ವಾನಾ ಚಿತ್ರದ ಮೂಲಕ ಚಿತ್ರರಂಗನಕ್ಕೆ ಹೆಜ್ಜೆ ಇಟ್ಟಿದ್ದ ಇವರು, ಅನೇಕ ಚಲನಚಿತ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಅಮಿತಾಬ್‌ ಬಚ್ಚನ್‌ ಅವರ ಅಗ್ನಿಪಥ್‌, ʼಹಮ್‌ ದಿಲ್‌ ದೇ ಚುಕೆ ಸನಮ್‌ʼ ಮಿಷನ್‌ ಮಂಗಲ್, ಹಿಚ್ಕಿ , ಬ್ಯಾಂಗ್‌ ಬ್ಯಾಂಗ್‌ , ಅಯಾರಿ, &nbsp;ಸೇರಿದಂತೆ ಹಲವಾರು ಮರಾಠಿ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು. ನಲವತ್ತು ವರ್ಷಗಳಿಗಿಂತಲೂ ಹೆಚ್ಚು ವರ್ಷಗಳ ಕಾಲ ಹಲವಾರು ಟಿವಿ ಶೋಗಳಲ್ಲಿ ನಟಿಸಿದ್ದಾರೆ.</p>



<p>2010 ರಲ್ಲಿ, ಇವರ ಮರಾಠಿ ಚಲನಚಿತ್ರದಲ್ಲಿ ಇವರ ಪರಿಶ್ರಮಕ್ಕೆ ಅತ್ಯುತ್ತಮ ನಟನಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. ಮರಾಠಿ ಚಿತ್ರ ʼ<em>ಆಘಾತ್ʼ</em> ಮೂಲಕ ನಿರ್ದೇಶನಕ್ಕೆ ಧುಮುಕಿ ಸೇವೆ ಸಲ್ಲಿಸಿದ್ದರು.</p>
]]></content:encoded>
					
		
		
			</item>
		<item>
		<title>ತೆಲುಗು ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ</title>
		<link>https://peepalmedia.com/telugu-superstar-krishna-is-no-more/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 15 Nov 2022 06:30:52 +0000</pubDate>
				<category><![CDATA[ದೇಶ]]></category>
		<category><![CDATA[ಸಿನಿಮಾ]]></category>
		<category><![CDATA[bengalure]]></category>
		<category><![CDATA[death]]></category>
		<category><![CDATA[hyderabad]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mahesh babu]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[super str krushna]]></category>
		<category><![CDATA[telugu actor]]></category>
		<category><![CDATA[telugu star]]></category>
		<category><![CDATA[writing]]></category>
		<guid isPermaLink="false">https://peepalmedia.com/?p=15579</guid>

					<description><![CDATA[ಹೈದರಾಬಾದ್: ತೆಲುಗು ಚಿತ್ರರಂಗವನ್ನು 70-80 ದಶಕಗಳಲ್ಲಿ ತನ್ನದೇ ಆದ ವಿಶಿಷ್ಟ ನಟನೆಯ ಮೂಲಕ ಆಳಿದಂತಹ ಸೂಪರ್ ಸ್ಟಾರ್ ಕೃಷ್ಣ ಇಂದು ಬೆಳಿಗ್ಗೆ 4:10 ಸಮಯಕ್ಕೆ ಸರಿಯಾಗಿ ಹೈದರಾಬಾದ್ ನಗರದ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ನಟರಾದ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅಗಲಿರುವುದು ತೆಲುಗು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಎನ್‌ಟಿಆರ್ ಏಎನ್ಆರ್ ಅವರ ಕಾಲದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೃಷ್ಣ ಈ ಇಬ್ಬರು ಮೇರು ನಟರೊಂದಿಗೆ ಸೆಡ್ಡು ಹೊಡೆದು [&#8230;]]]></description>
										<content:encoded><![CDATA[
<p><strong>ಹೈದರಾಬಾದ್:</strong> ತೆಲುಗು ಚಿತ್ರರಂಗವನ್ನು 70-80 ದಶಕಗಳಲ್ಲಿ ತನ್ನದೇ ಆದ ವಿಶಿಷ್ಟ ನಟನೆಯ ಮೂಲಕ ಆಳಿದಂತಹ ಸೂಪರ್ ಸ್ಟಾರ್ ಕೃಷ್ಣ ಇಂದು ಬೆಳಿಗ್ಗೆ 4:10 ಸಮಯಕ್ಕೆ ಸರಿಯಾಗಿ ಹೈದರಾಬಾದ್ ನಗರದ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.</p>



<p>ತೆಲುಗು ಚಿತ್ರರಂಗದ ಸ್ಟಾರ್ ನಟರಾದ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅಗಲಿರುವುದು ತೆಲುಗು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.</p>



<p>ಎನ್‌ಟಿಆರ್ ಏಎನ್ಆರ್ ಅವರ ಕಾಲದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೃಷ್ಣ ಈ ಇಬ್ಬರು ಮೇರು ನಟರೊಂದಿಗೆ ಸೆಡ್ಡು ಹೊಡೆದು ಚಿತ್ರರಂಗದಲ್ಲಿ ನೆಲೆಯೂರಿದ್ದು ಸಾಮಾನ್ಯ ವಿಷಯವಲ್ಲ. ಹಾಗಾಗಿ ಇವರಿಗೆ ಸೂಪರ್ ಸ್ಟಾರ್ ಎಂಬ ಬಿರುದು ಮಾತ್ರವಲ್ಲದೆ ಛಲಗಾರ ಎಂಬುದೂ ಸಹ ಇವರ ಮನೆಯ ಹೆಸರಾದಂತೆ ಆಗಿತ್ತು.</p>



<p>ಸರಿ ಸುಮಾರು 55 ವರ್ಷಗಳು ತೆಲುಗು ಚಿತ್ರರಂಗದ ಸೇವೆ ಸಲ್ಲಿಸಿರುವ ಸೂಪರ್ ಸ್ಟಾರ್ ಕೃಷ್ಣ 350 ಸಿನಿಮಾಗಳಲ್ಲಿ ನಟಿಸಿದ್ದು, ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜರಾಗಿದ್ದಾರೆ.</p>



<p>2022 ರ ಇದೇ ಜನವರಿಯಂದು ತಮ್ಮ‌ ಮೊದಲ ಮಗನಾದ ರಮೇಶ್ ಬಾಬು ಅವರು ಮೃತರಾಗಿದ್ದರು. ಇತ್ತೀಚೆಗೆಷ್ಟೇ ತಮ್ಮ ಮೊದಲ ಪತ್ನಿಯಾದ ಇಂದಿರಾ ದೇವಿ ಅವರನ್ನು ಕಳೆದುಕೊಂಡಿದ್ದರು. ಈ ಹಿಂದೆ 2019 ರಲ್ಲಿ ತಮ್ಮ ಎರಡನೇ ಪತ್ನಿಯಾದ ವಿಜಯ ನಿರ್ಮಲರನ್ನು ಕಳೆದುಕೊಂಡಿದ್ದರು.</p>



<p>ಇದೀಗ ತಾವೇ ಕಾಲದ ಕರೆಗೆ ಓಗೊಟ್ಟು ಹೊರಟಿರುವುದು ಮಹೇಶ್ ಬಾಬು ಅವರಿಗೆ ದಿಕ್ಕು ತೋಚದಂತಾಗಿದೆ.</p>



<p>ಇಂದು ಕೃಷ್ಣ ಅವರ ಪಾರ್ಥೀವ ಶರೀರ ಅಭಿಮಾನಿಗಳ ವೀಕ್ಷಣೆಗಾಗಿ ಇರಿಸಿ ನಾಳೆಯ ದಿನ ಅಂತ್ಯಸಂಸ್ಕಾರ ಮಾಡುವುದಾಗಿ ಕುಟುಂಬದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ‌.</p>



<p>ಕೃಷ್ಣ ಅವರ ಅಗಲಿಕೆಗೆ ರಾಷ್ಟ್ರದ ಬಹುತೇಕ ಸ್ಟಾರ್ ನಟರು ವಿಷಾದ ವ್ಯಕ್ತಪಡಿಸಿದ್ದು, ತೆಲುಗು ಚಿತ್ರರಂಗದ ನಟ ನಟಿಯರು ಮಹೇಶ್ ಬಾಬು ಅವರಿಗೆ ಸಾಂತ್ವನ ತಿಳಿಸುತ್ತಿದ್ದಾರೆ.</p>
]]></content:encoded>
					
		
		
			</item>
		<item>
		<title>ಬೀದಿನಾಯಿ ಸಾವಿನಿಂದ ನೊಂದು ವಿದ್ಯಾರ್ಥಿನಿ ಆತ್ಮಹತ್ಯೆ</title>
		<link>https://peepalmedia.com/a-student-committed-suicide-due-to-the-death-of-street-dog/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 06 Nov 2022 04:03:23 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[death]]></category>
		<category><![CDATA[india]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sucide]]></category>
		<guid isPermaLink="false">https://peepalmedia.com/?p=14363</guid>

					<description><![CDATA[ಮೀರತ್: ಬೀದಿನಾಯಿಯೊಂದು ಮೃತಪಟ್ಟ ಘಟನೆಯಿಂದ ನೊಂದು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಇಲ್ಲಿನ ಕಂಕರಖೇಡದಲ್ಲಿ ನಡೆದಿದೆ. ಬೀದಿನಾಯಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಯುವತಿ ಗೌರಿ (24) ಅವುಗಳಿಗೆ ಊಟ ನೀಡುವುದು, ಶುಶ್ರೂಶೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು. ಒಂದು ಬೀದಿನಾಯಿ ಅಪಘಾತಕ್ಕೆ ಒಳಗಾದ ಹಿನ್ನೆಲೆಯಲ್ಲಿ ಅದನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೂ ಅದು ಬದುಕುಳಿಯಲಿಲ್ಲ. ಇದರಿಂದಾಗಿ ನೊ‌ದ ಗೌರಿ ಮನೆಯ ಸಮೀಪದ ವಾಟರ್ ಟ್ಯಾಂಕ್ ಹತ್ತಿ, ಅಲ್ಲಿಂದ ಜಿಗಿದು ಕೆಳಗೆ ಬಿದ್ದು ಸಾವಿಗೀಡಾಗಿದ್ದಾಳೆ. ಗೌರಿಯ ತಂದೆ ಸಂಜಯ್ ತ್ಯಾಗಿ ಅವರ ಪುತ್ರ [&#8230;]]]></description>
										<content:encoded><![CDATA[
<p style="font-size:20px">ಮೀರತ್: ಬೀದಿನಾಯಿಯೊಂದು ಮೃತಪಟ್ಟ ಘಟನೆಯಿಂದ ನೊಂದು ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ಘಟನೆ ಇಲ್ಲಿನ ಕಂಕರಖೇಡದಲ್ಲಿ ನಡೆದಿದೆ.</p>



<p style="font-size:20px">ಬೀದಿನಾಯಿಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಯುವತಿ ಗೌರಿ (24) ಅವುಗಳಿಗೆ ಊಟ ನೀಡುವುದು, ಶುಶ್ರೂಶೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಳು. ಒಂದು ಬೀದಿನಾಯಿ ಅಪಘಾತಕ್ಕೆ ಒಳಗಾದ ಹಿನ್ನೆಲೆಯಲ್ಲಿ ಅದನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೂ ಅದು ಬದುಕುಳಿಯಲಿಲ್ಲ. ಇದರಿಂದಾಗಿ ನೊ‌ದ ಗೌರಿ ಮನೆಯ ಸಮೀಪದ ವಾಟರ್ ಟ್ಯಾಂಕ್ ಹತ್ತಿ, ಅಲ್ಲಿಂದ ಜಿಗಿದು ಕೆಳಗೆ ಬಿದ್ದು ಸಾವಿಗೀಡಾಗಿದ್ದಾಳೆ.</p>



<p style="font-size:20px">ಗೌರಿಯ ತಂದೆ ಸಂಜಯ್ ತ್ಯಾಗಿ ಅವರ ಪುತ್ರ ಸಾರ್ಥಕ್ ಬೆಂಗಳೂರಿನ ಐಟಿ ಕಂಪನಿಯಲ್ಲಿ ಇಂಜಿನಿಯರ್. ಮಗಳು ಗೌರಿ ಈ ವರ್ಷ ನೀಟ್‌ನಲ್ಲಿ ತೇರ್ಗಡೆಯಾಗಿದ್ದಾಳೆ. ಆಕೆ ಪ್ರಾಣಿಗಳನ್ನು ತುಂಬಾ ಪ್ರೀತಿಸುತ್ತಿದ್ದಳು. ಗುರುವಾರ ಸಂಜೆ ಸಾಕು ನಾಯಿಯೊಂದಿಗೆ ವಾಕಿಂಗ್‌ಗೆ ತೆರಳಿದ್ದ ಆಕೆ ರಸ್ತೆಯಲ್ಲಿ ಗಾಯಗೊಂಡಿದ್ದ ನಾಯಿಯನ್ನು ನೋಡಿ ಮನೆಗೆ ಕರೆತಂದಿದ್ದಾಳೆ. ನಾಯಿಯ ಶುಶ್ರೂಶೆ ಮಾಡಿದ್ದಾಳೆ. ಆದರೆ ಅದು ಮೃತಪಟ್ಟಿತು. ಆ ನೋವಿನಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬ‌ ಸದಸ್ಯರು ತಿಳಿಸಿದ್ದಾರೆ.</p>



<p style="font-size:20px">ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.</p>
]]></content:encoded>
					
		
		
			</item>
		<item>
		<title>ಚಂದ್ರಶೇಖರ್ ಸಾವಿನ ಬಗ್ಗೆ ಅರ್ಥೈಸಿಕೊಳ್ಳಬೇಕಾದ ಅಂಶಗಳಿವು!</title>
		<link>https://peepalmedia.com/things-to-understand-about-chandrasekhar-death/</link>
		
		<dc:creator><![CDATA[Pragath K R]]></dc:creator>
		<pubDate>Sat, 05 Nov 2022 09:02:57 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[accident death]]></category>
		<category><![CDATA[chandrashekar death]]></category>
		<category><![CDATA[death]]></category>
		<category><![CDATA[karnataka]]></category>
		<category><![CDATA[m.p. renukacharya]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=14317</guid>

					<description><![CDATA[ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್ ಅವರ ಪುತ್ರ ಚಂದ್ರಶೇಖರ್ ನಿಗೂಢ ಸಾವಿನ ಸುತ್ತ ಹಲವು ಅನುಮಾನ ಹುಟ್ಟಿಸಿರುವುದಂತೂ ಸತ್ಯ. ಮೇಲ್ನೋಟಕ್ಕಷ್ಟೆ ಇದು ಅಪಘಾತ ಎಂದು ಕಂಡುಬಂದರೂ ಕುಟುಂಬದ ಮೂಲಗಳು ಮತ್ತು ಮೃತದೇಹ ಸಿಕ್ಕ ಸ್ಥಿತಿಯ ಪ್ರಕಾರ ಸಹಜವಾಗಿಯೇ ಈ ಅನುಮಾನಗಳು ಹುಟ್ಟಿಕೊಂಡಿವೆ. ಪ್ರಮುಖವಾಗಿ ಇಲ್ಲಿಯವರೆಗೂ ಪೊಲೀಸ್ ಇಲಾಖೆಯಿಂದ ಯಾವುದೇ ತನಿಖಾ ವರದಿ ಹೊರಬರದೇ ಇದ್ದರೂ ಶಾಸಕ ರೇಣುಕಾಚಾರ್ಯ ಮಾತ್ರ ಇದೊಂದು ವ್ಯವಸ್ಥಿತ ಕೊಲೆ ಎಂದು ಪಟ್ಟು ಹಿಡಿದು ಕೂತಿದ್ದಾರೆ. ಹಾಗಾದರೆ ಪೊಲೀಸರಿಗೂ ಸಿಗದ ಮಾಹಿತಿ ರೇಣುಕಾಚಾರ್ಯ [&#8230;]]]></description>
										<content:encoded><![CDATA[
<p style="font-size:20px">ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್ ಅವರ ಪುತ್ರ ಚಂದ್ರಶೇಖರ್ ನಿಗೂಢ ಸಾವಿನ ಸುತ್ತ ಹಲವು ಅನುಮಾನ ಹುಟ್ಟಿಸಿರುವುದಂತೂ ಸತ್ಯ. ಮೇಲ್ನೋಟಕ್ಕಷ್ಟೆ ಇದು ಅಪಘಾತ ಎಂದು ಕಂಡುಬಂದರೂ ಕುಟುಂಬದ ಮೂಲಗಳು ಮತ್ತು ಮೃತದೇಹ ಸಿಕ್ಕ ಸ್ಥಿತಿಯ ಪ್ರಕಾರ ಸಹಜವಾಗಿಯೇ ಈ ಅನುಮಾನಗಳು ಹುಟ್ಟಿಕೊಂಡಿವೆ.</p>



<p style="font-size:20px">ಪ್ರಮುಖವಾಗಿ ಇಲ್ಲಿಯವರೆಗೂ ಪೊಲೀಸ್ ಇಲಾಖೆಯಿಂದ ಯಾವುದೇ ತನಿಖಾ ವರದಿ ಹೊರಬರದೇ ಇದ್ದರೂ ಶಾಸಕ ರೇಣುಕಾಚಾರ್ಯ ಮಾತ್ರ ಇದೊಂದು ವ್ಯವಸ್ಥಿತ ಕೊಲೆ ಎಂದು ಪಟ್ಟು ಹಿಡಿದು ಕೂತಿದ್ದಾರೆ. ಹಾಗಾದರೆ ಪೊಲೀಸರಿಗೂ ಸಿಗದ ಮಾಹಿತಿ ರೇಣುಕಾಚಾರ್ಯ ಮತ್ತು ಕುಟುಂಬದವರಿಗೆ ಸಿಕ್ಕಿದೆಯೇ? ಇದೊಂದು ಕೊಲೆ ಎಂಬುದನ್ನು ಅಷ್ಟು ಒತ್ತಿ ಹೇಳುವುದಾದರೆ ಚಂದ್ರಶೇಖರ್ ಕೊಲೆ(?) ಹಿನ್ನೆಲೆಯಲ್ಲಿ ಕುಟುಂಬದ ಮೂಲಗಳು ಕೊಡುವ ಸಾಕ್ಷ್ಯಗಳು ಏನಾದರೂ ಇದೆಯೇ? ಚಂದ್ರಶೇಖರ್ ಗೆ ರಾಜಕೀಯ ಮತ್ತು ವ್ಯಾವಹಾರಿಕವಾಗಿ ಇದ್ದ ವೈಮನಸ್ಸುಗಳು ಏನು? ಇಂತಹ ಹಲವಷ್ಟು ಅನುಮಾನಗಳು ಹುಟ್ಟಬಹುದು.</p>



<p style="font-size:20px">ಇವೆಲ್ಲವುಗಳ ನಡುವೆ ಸಾವಿನ ಸಾಧ್ಯಾಸಾಧ್ಯತೆಗಳ ಕೂಲಂಕಷ ಚರ್ಚೆ ಅತ್ಯಗತ್ಯ. ಮೇಲ್ನೋಟಕ್ಕೆ ಚಂದ್ರಶೇಖರ್ ಗುಣ ನಡತೆಗಳ ಬಗ್ಗೆ ಕುಟುಂಬದ ಮೂಲಗಳು ಒಳ್ಳೆಯ ಅಭಿಪ್ರಾಯವನ್ನೇನೋ ಹೇಳಿವೆ. ಆದರೆ ಚಂದ್ರಶೇಖರ್ ಇದ್ದ ಕಾರು ರಾತ್ರಿ ಸಮಯದಲ್ಲಿ ಆದ ಅಪಘಾತದ ಹಿನ್ನೆಲೆಯಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ (ಕಾರಿನಲ್ಲಿ ಇಬ್ಬರು ಇದ್ದ ಬಗ್ಗೆ ವರದಿಯಾಗಿವೆ) ಪಾನಮತ್ತರಾಗಿ ವಾಹನ ಚಲಾವಣೆ ಮಾಡಿರಬಹುದಾ ಎಂಬುದು ಹುಟ್ಟಿರುವ ಮತ್ತೊಂದು ಅನುಮಾನ. ಈಗಾಗಲೇ ಕೆಲವು ಸಿಸಿ ಕ್ಯಾಮರಾ ದೃಶ್ಯಗಳಲ್ಲಿ ಕಾರು ವೇಗವಾಗಿ ಚಲಿಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಹಾಗಾಗಿ ಆಯ ತಪ್ಪಿ ಚಾಲಕನ ನಿಯಂತ್ರಣ ತಪ್ಪಿಯೂ ಕಾರು ನಾಲೆಗೆ ಬಿದ್ದ ಅನುಮಾನಗಳನ್ನೂ ತಳ್ಳಿ ಹಾಕುವಂತಿಲ್ಲ. ಇದಕ್ಕೆ ಚಂದ್ರಶೇಖರ್ ಅಥವಾ ಆ ಇನ್ನೊಂದು ವ್ಯಕ್ತಿಯ ದೇಹದ ಪರೀಕ್ಷೆ ನಡೆಯಬೇಕು.</p>



<p style="font-size:20px">ಪ್ರಾಥಮಿಕ ಮಾಹಿತಿಯಂತೆ ಸಾವಿನ ದಿನ ಸಂಜೆ ಚಂದ್ರಶೇಖರ್ ಮತ್ತು ಜೊತೆಗೆ ಬಂದ ಅನಾಮಿಕ ವ್ಯಕ್ತಿ ಕೊಪ್ಪದ ವಿನಯ್ ಗುರು ಆಶ್ರಮಕ್ಕೆ ಭೇಟಿ ನೀಡಿದ್ದರು. ಆದರೆ ಆಶ್ರಮದಲ್ಲಿ ವಿನಯ್ ಗುರು ಭೇಟಿ ಸಾಧ್ಯವಾಗಿರಲಿಲ್ಲ ಎಂಬುದು ಆಶ್ರಮದ ಕಡೆಯಿಂದ ಸಿಕ್ಕ ಮಾಹಿತಿ. ವಿನಯ್ ಗುರು ಭೇಟಿ ಆಗಿದ್ದಿದ್ದರೆ ಸಾವಿನ ಹಿಂದಿನ ಕೆಲವು ಕಾರಣಗಳು ಹೊರಬರುತ್ತಿದ್ದವೋ ಏನೋ! ಆದರೆ ಆ ದಿನ ರಾತ್ರಿಯೇ ಚಂದ್ರಶೇಖರ್ ಮತ್ತೋರ್ವ ವ್ಯಕ್ತಿ ಅಲ್ಲಿಂದ ನಿರ್ಗಮಿಸಿದ್ದಾರೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ಕೇವಲ ಇಬ್ಬರೇ ಅಥವಾ ಮೂವರೇ ಎಂಬುದು ಮತ್ತೊಂದು ಅನುಮಾನ. ಸಧ್ಯದ ಮಾಹಿತಿಯಂತೆ ಚಂದ್ರಶೇಖರ್ ಜೊತೆಗೆ ಶಿವಮೊಗ್ಗದ ಸ್ನೇಹಿತ ಕಿರಣ್ ಕೂಡ ಇದ್ದರು ಎನ್ನಲಾಗಿದೆ. ಆದರೆ ಕಿರಣ್ ಶಿವಮೊಗ್ಗದಲ್ಲಿಯೇ ಇಳಿದ ಬಗ್ಗೆ ಮಾಹಿತಿಯಿದೆ. ಹಾಗಾದರೆ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವರದಿಯಾದಂತೆ, ಶಿವಮೊಗ್ಗ ದಾಟಿದ ನಂತರ ಸಿಗುವ ಸಿಸಿ ಕ್ಯಾಮರಾ ದೃಶ್ಯಗಳಲ್ಲಿ ಕಂಡ ಕಾರಿನಲ್ಲಿ ಇದ್ದ ಮತ್ತೋರ್ವ ವ್ಯಕ್ತಿ ಯಾರು? ಈ ಬಗ್ಗೆ ಶಿವಮೊಗ್ಗ ಮೂಲದ ಕಿರಣ್ ತನಿಖೆಯಾಗಬೇಕಿದೆ.</p>



<p style="font-size:20px">ರಾಜಕೀಯ ಹಿನ್ನೆಲೆಯಲ್ಲಿ ಆದ ಕೊಲೆ ಎಂಬ ಇನ್ನೊಂದು ಅನುಮಾನದ ಹಿಂದೆ ಶಾಸಕ ಎಂ.ಪಿ.ರೇಣುಕಾಚಾರ್ಯರೇ ಈ ತನಿಖೆಗೆ ಮುಖ್ಯವಾಗಿ ಸಾಕ್ಷ್ಯ ಒದಗಿಸಬೇಕಿದೆ. ಯಾಕೆಂದರೆ ಹೊನ್ನಾಳಿ ವ್ಯಾಪ್ತಿಯಲ್ಲಿ ಎಂತದ್ದೇ ರಾಜಕೀಯ ವೈಮನಸ್ಸು ಇದ್ದರೂ ಅದೂ ಶಾಸಕರ ಕುಟುಂಬದ ಸದಸ್ಯನಾಗಿರುವುದರಿಂದ ಏನಿದ್ದರೂ ರೇಣುಕಾಚಾರ್ಯರ ಕಿವಿಗೆ ಬೀಳಲೇಬೇಕು. ಅದಲ್ಲದೇ ಸ್ವತಃ ರೇಣುಕಾಚಾರ್ಯ ಇದೊಂದು ವ್ಯವಸ್ಥಿತ ಕೊಲೆ ಎಂಬುದನ್ನೇ ಒತ್ತಿ ಹೇಳುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ರೇಣುಕಾಚಾರ್ಯರನ್ನೂ ಸಹ ತನಿಖೆಗೆ ಒಳಪಡಿಸಿದರೂ ಆಶ್ಚರ್ಯವಿಲ್ಲ.</p>



<p style="font-size:20px">ಇದರ ನಡುವೆ ಶಾಸಕ ರೇಣುಕಾಚಾರ್ಯ ಮಾಧ್ಯಮಗಳಿಗೆ ಕೊಟ್ಟ ಪ್ರತಿಕ್ರಿಯೆಗಳೂ ಸಹ ಗಮನಾರ್ಹ ಅಂಶಗಳಾಗಿವೆ. ಇನ್ನೂ ಸಾವಿನ ಮನೆಯ ಸೂತಕ ಆರದೇ ಇದ್ದರೂ ರೇಣುಕಾಚಾರ್ಯ ಮಾತ್ರ ಇದರ ಹಿಂದೆ ರಾಜಕೀಯದ &#8216;ಪಿತೂರಿ&#8217;ಯನ್ನು ಒತ್ತಾಯಪೂರ್ವಕವಾಗಿ ತುಂಬುತ್ತಿದ್ದಂತೆ ಭಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೇಣುಕಾಚಾರ್ಯ ಅವರ ಅತಿಯಾದ ಭಾವುಕತೆ ಪ್ರದರ್ಶನ ಬಗ್ಗೆಯೂ ಚರ್ಚೆ ನಡೆದಿದೆ. ಚಂದ್ರಶೇಖರ್ ಕಾಣೆಯಾದ ಮೊದಲ ದಿನದಿಂದಲೇ ರೇಣುಕಾಚಾರ್ಯ ಅತಿಯಾಗಿ ದುಃಖಕ್ಕೆ ಜಾರಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಹಾಗಾದರೆ ಚಂದ್ರಶೇಖರ್ ಸಾವಿನ ಅನುಮಾನ ಮೊದಲೇ ಇದ್ದಿರಬಹುದಾ ಎಂಬ ಬಗ್ಗೆಯೂ ತನಿಖೆ ಸಾಗಬೇಕಿದೆ.</p>



<p style="font-size:20px;max-width:1008px">ಇದರ ನಡುವೆ ಶಾಸಕ ರೇಣುಕಾಚಾರ್ಯ &#8216;ಹಿಂದೂ, ಹಿಂದೂ ಸಂಸ್ಕೃತಿ, ಹಿಂದೂ ಆಚರಣೆ&#8217; ಅಂತೆಲ್ಲ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಮನೆಯಲ್ಲಿ ಸಾವಾಗಿದ್ದರೂ ರೇಣುಕಾಚಾರ್ಯ ಸಾವನ್ನು ರಾಜಕೀಯಗೊಳಿಸುತ್ತಿದ್ದಾರೆಯೆ? ಇದ್ಯಾವ ಸಂಸ್ಕೃತಿ? ಸಾವಿನ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಸರಿಯೇ? ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ಪ್ರಶ್ನೆ ಹುಟ್ಟಿದೆ. ಅತಿ ಭಾವುಕತೆ ಮತ್ತು ಕುಟುಂಬ ಸದಸ್ಯನ ಅನುಮಾನಾಸ್ಪದ ಸಾವು ರೇಣುಕಾಚಾರ್ಯರ ರಾಜಕೀಯ ಲಾಭಕ್ಕೆ ದಾರಿಯಾಗುತ್ತಿದೆಯೇ ಎಂಬುದು ಸಧ್ಯದ ಚರ್ಚೆಯ ಪ್ರಮುಖ ಅಂಶ.</p>



<p style="font-size:20px">ಇನ್ನು ಚಂದ್ರಶೇಖರ್ ಕೊಲೆಯೇ ಆಗಿದ್ದರೂ ಅದಕ್ಕೆ ಪ್ರಮುಖ ಕಾರಣ ಆತ ಹಿಂದೂಪರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು ಎಂಬುದು ಬಿಜೆಪಿ ಹಿನ್ನೆಲೆಯ ವ್ಯಕ್ತಿಗಳಿಂದ ಕೇಳಿ ಬರುತ್ತಿರುವ ಮಾತುಗಳು. ಹಾಗಾದರೆ ಸೌಮ್ಯ ಸ್ವಭಾವ ಎಂದು ಗುರುತಿಸಿಕೊಂಡಿದ್ದ ಚಂದ್ರಶೇಖರ್ ಯಾರ ಪ್ರಚೋದನೆಗೆ ಬಲಿಯಾಗಿರಬಹುದು? ಹೊನ್ನಾಳಿಯಲ್ಲಿ one and only ಬಿಜೆಪಿ ಫೈರ್ ಬ್ರಾಂಡ್ ಆಗಿದ್ದ ರೇಣುಕಾಚಾರ್ಯರ ಪ್ರಚೋದನಕಾರಿ ಹೇಳಿಕೆಗಳು ವಿರೋಧಿಗಳ ಕೆರಳಲು ಕಾರಣವಾಯ್ತೆ? ರೇಣುಕಾಚಾರ್ಯರ ಕೆಲವು ಆಕ್ರಮಣಕಾರಿ ಹೇಳಿಕೆಗೆ ಸ್ವತಃ ಕುಟುಂಬ ಸದಸ್ಯನೇ ಬಲಿಯಾದನೆ.? ಇಲ್ಲಿ ಮಾಧ್ಯಮಗಳು ಕೇವಲ ರೇಣುಕಾಚಾರ್ಯರನ್ನೇ ಹೆಚ್ಚು ಕೇಂದ್ರೀಕರಿಸುತ್ತಿದ್ದು ಚಂದ್ರಶೇಖರ್ ತಂದೆ, ತಾಯಿ ಮತ್ತು ಆಪ್ತರ ಅಭಿಪ್ರಾಯ ಯಾರೂ ಸಹ ಕೇಳದಂತಾಗಿದೆ.</p>



<p style="font-size:20px">ಎಂ.ಪಿ.ರಮೇಶ್ ಪುತ್ರ ಚಂದ್ರಶೇಖರನದು ಕೊಲೆ ಅಥವಾ ಅಪಘಾತ ಎಂಬುದು ತನಿಖೆ ನಂತರದ ವಿಚಾರ. ಆದರೆ ಸ್ವತಃ ರೇಣುಕಾಚಾರ್ಯರೇ ಕೊಲೆ ಕೊಲೆ ಎಂದೇ ಒತ್ತಿ ಹೇಳುತ್ತಿರುವಾಗ ಬಿಜೆಪಿ ನಾಯಕರು ಇನ್ನು ಮುಂದಾದರೂ ಪ್ರಚೋದನಾಕಾರಿ ಹೇಳಿಕೆಗಳಿಗೆ ಕಡಿವಾಣ ಹಾಕಬಹುದೇ? ಅಥವಾ ಈ ಸಾವೂ ಕೂಡಾ ಬಿಜೆಪಿ ಹಿನ್ನೆಲೆಯ ರಾಜಕಾರಣಿಗಳಿಗೆ ಮತ ಗಳಿಕೆಯ ಮಾರ್ಗವಾಗುವುದೇ? ಸಾಮಾನ್ಯ ಜನ ಅರ್ಥ ಮಾಡಿಕೊಳ್ಳಬೇಕು ಅಷ್ಟೆ.</p>
]]></content:encoded>
					
		
		
			</item>
		<item>
		<title>ಕಾರ್ಖಾನೆಯಲ್ಲಿ ಬೆಂಕಿ ಅವಘಡ: ಇಬ್ಬರ ಸಾವು</title>
		<link>https://peepalmedia.com/karkaneyalli-benki-avaghada-ibbara-saavu/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 01 Nov 2022 07:00:08 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[bengalure]]></category>
		<category><![CDATA[death]]></category>
		<category><![CDATA[Delhi]]></category>
		<category><![CDATA[Fire accident]]></category>
		<category><![CDATA[india]]></category>
		<category><![CDATA[industries]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=13541</guid>

					<description><![CDATA[ಹೊಸದಿಲ್ಲಿ: ಪಾದರಕ್ಷೆ ಕಾರ್ಖಾನೆಯಲ್ಲಿ ಬೆಂಕಿ ಅವಘಡದಿಂದ ಇಬ್ಬರು ಮೃತಪಟ್ಟಿದ್ದು, ಕೆಲವರು ಗಾಯಗೊಂಡಿದ್ದಾರೆ. ಇನ್ನೂ ಕೆಲವರು ಕಾರ್ಖಾನೆಯಲ್ಲೇ ಸಿಕ್ಕಿಬಿದ್ದಿರುವ ಘಟನೆ ದೆಹಲಿಯ ನರೇಲಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ದೆಹಲಿಯ ನರೇಲಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಕೆಲವರು ಕಾರ್ಖಾನೆಯಲ್ಲೇ ಸಿಕ್ಕಿಬಿದ್ದಿರುವ ಆತಂಕದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ದೆಹಲಿ ಪೊಲೀಸರು, ʼಬೆಂಕಿ ಅವಘಡದಿಂದ ಇಬ್ಬರು ಸಾವನಪ್ಪಿದ್ದುಕೆಲವರಿಗೆ ಸಣ್ಣಪುಟ್ಟ [&#8230;]]]></description>
										<content:encoded><![CDATA[
<p style="font-size:20px"><strong>ಹೊಸದಿಲ್ಲಿ</strong>: ಪಾದರಕ್ಷೆ ಕಾರ್ಖಾನೆಯಲ್ಲಿ ಬೆಂಕಿ ಅವಘಡದಿಂದ ಇಬ್ಬರು ಮೃತಪಟ್ಟಿದ್ದು, ಕೆಲವರು ಗಾಯಗೊಂಡಿದ್ದಾರೆ. ಇನ್ನೂ ಕೆಲವರು ಕಾರ್ಖಾನೆಯಲ್ಲೇ ಸಿಕ್ಕಿಬಿದ್ದಿರುವ ಘಟನೆ ದೆಹಲಿಯ ನರೇಲಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ.</p>



<p style="font-size:20px">ದೆಹಲಿಯ ನರೇಲಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, </p>



<p style="font-size:20px">ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಈವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಕೆಲವರು ಕಾರ್ಖಾನೆಯಲ್ಲೇ ಸಿಕ್ಕಿಬಿದ್ದಿರುವ ಆತಂಕದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.</p>



<p style="font-size:20px">ಈ ಕುರಿತು ಮಾಹಿತಿ ನೀಡಿರುವ ದೆಹಲಿ ಪೊಲೀಸರು, ʼಬೆಂಕಿ ಅವಘಡದಿಂದ ಇಬ್ಬರು ಸಾವನಪ್ಪಿದ್ದುಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.  ಮೃತಪಟ್ಟವರ ಗುರುತನ್ನು ಪತ್ತೆಹಚ್ಚಲಾಗುತ್ತಿದೆʼ ಎಂದು ಹೇಳಿದ್ದಾರೆ.</p>
]]></content:encoded>
					
		
		
			</item>
		<item>
		<title>ಸಮುದ್ರದಲ್ಲಿ ಈಜಲು ಹೊರಟ 3 ಜನ ವಿದ್ಯಾರ್ಥಿಗಳ ಸಾವು</title>
		<link>https://peepalmedia.com/samudradalli-eejalu-horata-3-jana-vidyarthigala-saavu/</link>
		
		<dc:creator><![CDATA[Peepal Media]]></dc:creator>
		<pubDate>Mon, 26 Sep 2022 06:45:54 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[3 students death]]></category>
		<category><![CDATA[beach]]></category>
		<category><![CDATA[bengalure]]></category>
		<category><![CDATA[death]]></category>
		<category><![CDATA[hoodi beach]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=7214</guid>

					<description><![CDATA[ಉಡುಪಿ : ಈಜಲು ಹೊರಟ ಮಣಿಪಾಲ ವಿದ್ಯಾರ್ಥಿಗಳಲ್ಲಿ ಮೂರು ಜನ ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಉಡುಪಿಯ ಹೂಡಿ ಬೀಚ್‌ನಲ್ಲಿ ನಡೆದಿದೆ. ಪ್ರವಾಸಕ್ಕೆಂದು ಬಂದ 15 ಜನ ಮಣಿಪಾಲ ವಿದ್ಯಾರ್ಥಿಗಳು ನೆನ್ನೆ ಸಂಜೆ ಹೂಡಿ ಬೀಚ್‌ನಲ್ಲಿ ಈಜಲೆಂದು ಹೊರಟಿದ್ದರು. ಈ ವೇಳೆ ಸಮುದ್ರದ ಅಲೆಗಳ ಅಬ್ಬರಕ್ಕೆ ಮೂರು ಜನ ವಿದ್ಯಾರ್ಥಿಗಳು ಸಿಲುಕಿ ಕೂಡಲೆ ಅಲ್ಲಿನವರು ಇಬ್ಬರನ್ನು ರಕ್ಡಿಸಿ ಹೊರಕ್ಕೆ ತರಲಾಗಿತ್ತು. ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆಂದು ಕೊಂಡೊಯ್ಯುವಾಗ ದಾರಿ ಮದ್ಯೆ ಇಬ್ಬರೂ ಮೃತ ಪಟ್ಟಿದ್ದಾರೆ ಶ್ರೀಕರ್‌ ಎಂಬ [&#8230;]]]></description>
										<content:encoded><![CDATA[
<p style="font-size:20px"><strong>ಉಡುಪಿ</strong> : ಈಜಲು ಹೊರಟ ಮಣಿಪಾಲ ವಿದ್ಯಾರ್ಥಿಗಳಲ್ಲಿ ಮೂರು ಜನ ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಉಡುಪಿಯ ಹೂಡಿ ಬೀಚ್‌ನಲ್ಲಿ ನಡೆದಿದೆ.</p>



<p style="font-size:20px">ಪ್ರವಾಸಕ್ಕೆಂದು ಬಂದ 15 ಜನ ಮಣಿಪಾಲ ವಿದ್ಯಾರ್ಥಿಗಳು ನೆನ್ನೆ ಸಂಜೆ ಹೂಡಿ ಬೀಚ್‌ನಲ್ಲಿ ಈಜಲೆಂದು ಹೊರಟಿದ್ದರು. ಈ ವೇಳೆ ಸಮುದ್ರದ ಅಲೆಗಳ ಅಬ್ಬರಕ್ಕೆ ಮೂರು ಜನ ವಿದ್ಯಾರ್ಥಿಗಳು ಸಿಲುಕಿ ಕೂಡಲೆ ಅಲ್ಲಿನವರು ಇಬ್ಬರನ್ನು ರಕ್ಡಿಸಿ ಹೊರಕ್ಕೆ ತರಲಾಗಿತ್ತು. ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆಂದು ಕೊಂಡೊಯ್ಯುವಾಗ ದಾರಿ ಮದ್ಯೆ ಇಬ್ಬರೂ ಮೃತ ಪಟ್ಟಿದ್ದಾರೆ ಶ್ರೀಕರ್‌ ಎಂಬ ವಿದ್ಯಾರ್ಥಿ ಸಮುದ್ರದ ಅಲೆಗಳ ನಡುವೆಯೇ ಕೊಚ್ಚಿಹೋಗಿದ್ದು ನಾಪತ್ತೆಯಾಗಿದ್ದ. ಪೋಲೀಸರು ಆತನಿಕಗೋಸ್ಕರ ನೆನ್ನೆಯಿಂದ ತೀವ್ರ ಹುಡುಕಾಟ ನಡೆಸುತ್ತಿದ್ದರು . ಇಂದು ಮುಂಜಾನೆ ಶ್ರೀಕರ್‌ನ ಮೃತ ದೇಹ ಪತ್ತೆಯಾಗಿದೆ&nbsp; ಎಂದು ಪೋಲಿಸರು ತಿಳಿಸಿದ್ದಾರೆ. </p>



<p style="font-size:20px;max-width:790px;margin-top:29px;margin-bottom:68px">ನಿಶಾಂತ್(21)‌, ಷಣ್ಮುಗ(21) ಮತ್ತು ಶ್ರೀಕರ್‌(21) ಮೃತ ದುರ್ದೈವಿಗಳಾಗಿದ್ದಾರೆ</p>
]]></content:encoded>
					
		
		
			</item>
		<item>
		<title>ಕೋಮಾದಲ್ಲಿದ್ದಾರೆಂದು ಭಾವಿಸಿ 18 ತಿಂಗಳಿಂದ ಶವವನ್ನು ಮನೆಯಲ್ಲೇ ಇಟ್ಟುಕೊಂಡ ಕಾನ್ಪುರ ಕುಟುಂಬ</title>
		<link>https://peepalmedia.com/komadalliddarendu-bhavisi-18-tingalinda-shavavvannu-maneyalle-ittukonda-kutumba/</link>
		
		<dc:creator><![CDATA[Peepal Media]]></dc:creator>
		<pubDate>Sat, 24 Sep 2022 10:53:31 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[death]]></category>
		<category><![CDATA[india]]></category>
		<category><![CDATA[kanpur]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=6962</guid>

					<description><![CDATA[ಕಾನ್ಪುರ : ವಿಮಲೇಶ್‌ ದೀಕ್ಷಿತ್‌ ಅವರು ಮೃತಪಟ್ಟು 18 ತಿಂಗಳಾದರೂ, ಅವರಿನ್ನೂ ಕೋಮಾದಲ್ಲಿದ್ದಾರೆಂದು ನಂಬಿದ್ದ ಕುಟುಂಬಸ್ಥರು ಕೊಳೆತ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಘಟನೆ ರಾವತ್ ಪುರ್‌ನಲ್ಲಿ ನಡೆದಿದೆ. ಆದಾಯ ತೆರಿಗೆ ಇಲಾಖೆ ನೌಕರರಾಗಿದ್ದ ದೀಕ್ಷಿತ್‌ ಹೃದಯ ಸ್ತಂಭನದಿಂದ ಮೃತಪಟ್ಟಿದ್ದು ಖಾಸಗಿ ಆಸ್ಪತ್ರೆಯೊಂದು 2021 ಏಪ್ರಿಲ್‌ 21 ರಂದೇ ಮರಣ ಪ್ರಮಾಣ ಪತ್ರ ನೀಡಿದೆ. ಆದರೂ ಕುಟುಂಬಸ್ಥರು ದೀಕ್ಷಿತ್‌ ಅವರ ಮೇಲಿನ ಅತಿಯಾದ ಪ್ರೇಮದಿಂದ ಸತ್ಯವನ್ನು ನಂಬದೇ ಅಂತ್ಯಸಂಸ್ಕಾರವನ್ನೂ ನಡೆಸದೆ ದೀಕ್ಡಿತ್‌ ಇನ್ನೂ ಕೋಮಾದಲ್ಲಿದ್ದಾರೆಂದು ಭಾವಿಸಿ ಶವವನ್ನು ಮನೆಯಲ್ಲಿಯೇ [&#8230;]]]></description>
										<content:encoded><![CDATA[
<p class="has-medium-font-size"><strong>ಕಾನ್ಪುರ </strong>: ವಿಮಲೇಶ್‌ ದೀಕ್ಷಿತ್‌ ಅವರು ಮೃತಪಟ್ಟು 18 ತಿಂಗಳಾದರೂ, ಅವರಿನ್ನೂ ಕೋಮಾದಲ್ಲಿದ್ದಾರೆಂದು ನಂಬಿದ್ದ ಕುಟುಂಬಸ್ಥರು ಕೊಳೆತ ಶವವನ್ನು ಮನೆಯಲ್ಲೇ ಇಟ್ಟುಕೊಂಡಿದ್ದ ಘಟನೆ ರಾವತ್ ಪುರ್‌ನಲ್ಲಿ ನಡೆದಿದೆ.</p>



<p class="has-medium-font-size">ಆದಾಯ ತೆರಿಗೆ ಇಲಾಖೆ ನೌಕರರಾಗಿದ್ದ ದೀಕ್ಷಿತ್‌ ಹೃದಯ ಸ್ತಂಭನದಿಂದ ಮೃತಪಟ್ಟಿದ್ದು ಖಾಸಗಿ ಆಸ್ಪತ್ರೆಯೊಂದು 2021 ಏಪ್ರಿಲ್‌ 21 ರಂದೇ ಮರಣ ಪ್ರಮಾಣ ಪತ್ರ ನೀಡಿದೆ. ಆದರೂ ಕುಟುಂಬಸ್ಥರು ದೀಕ್ಷಿತ್‌ ಅವರ ಮೇಲಿನ ಅತಿಯಾದ ಪ್ರೇಮದಿಂದ ಸತ್ಯವನ್ನು ನಂಬದೇ ಅಂತ್ಯಸಂಸ್ಕಾರವನ್ನೂ ನಡೆಸದೆ ದೀಕ್ಡಿತ್‌ ಇನ್ನೂ ಕೋಮಾದಲ್ಲಿದ್ದಾರೆಂದು ಭಾವಿಸಿ ಶವವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದಾರೆ.ಎಂದು ಮುಖ್ಯ ಆರೋಗ್ಯ ಅಧಿಕಾರಿ ಡಾ.ಅಲೋಕ್‌ ರಂಜನ್‌ ವಿವರಿಸಿದ್ದಾರೆ.</p>



<p class="has-medium-font-size">ವಿಮಲೇಶ್‌ ದೀಕ್ಷಿತ್‌ ಅವರ ಕುಟುಂಬದ ಪಿಂಚಣಿ ಸಂಬಂಧಿಸಿದ ಕಡತಗಳು ವಿಲೇವಾರಿಯಾಗದ ಕಾರಣ ಆದಾಯ ತೆರಿಗೆ ಅಧಿಕಾರಿಗಳು ಪೋಲೀಸರಿಗೆ ಮಾಹಿತಿ ನೀಡಿ ತನಿಖೆ ನಡೆಸುವಂತೆ ಹೇಳಿದಾಗ ಅಲ್ಲಿನ ಪೋಲೀಸರು ಮತ್ತು ಮ್ಯಾಜಿಸ್ಟ್ರೇಟ್‌ಗಳೊಂದಿಗೆ ಆದಾಯ ತೆರಿಗೆ ಅಧಿಕಾರಿಗಳು ದೀಕ್ಷಿತ್‌ ಅವರ ಮನೆಗೆ ಭೇಟಿ ನೀಡಿದ್ದಾರೆ . ಈ ವೇಳೆ ಅಲ್ಲಿ ಆ ವಿಲಕ್ಷಣ ವಿಚಾರ ತಿಳಿದು ಬಂದಿದೆ. ಅಷ್ಟಾದರೂ ಅವರ ಕುಟುಂಬದವರು ಅವರಿನ್ನೂ ಸತ್ತಿಲ್ಲ ಕೋಮಾದಲ್ಲಿದ್ದಾರೆ ಎಂದು ಒತ್ತಾಯಪೂರ್ವಕವಾಗಿ ಹೇಳಿದ್ದಾರೆ. ದೀಕ್ಷಿತ್‌ ಅವರ ಪತ್ನಿ, ತನ್ನ ಪತಿ ಬೇಗ ಗುಣಮುಖವಾಗಲಿ, ಆದಷ್ಟು ಬೇಗ ಕೋಮಾದಿಂದ ಹೊರಬರಲಿ ಎಂದು ಪ್ರತಿನಿತ್ಯ ಶವದ ಮೇಲೆ ಗಂಗಾಜಲವನ್ನು ಪ್ರೋಕ್ಷಣೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.</p>



<p class="has-medium-font-size">ಆದಾಗ್ಯೂ, ಕುಟುಂಬದವರ ಮನವೊಲಿಸಿದ ಅಧಿಕಾರಿಗಳು ಶವವನ್ನು ಲಾಲಾ ಲಜಪತ್‌ ರಾಜ್‌(LLR) ಆಸ್ಪತ್ರೆಗೆ ತಂದು ತಪಾಸಣೆ ನಡೆಸಿ ದೀಕ್ಷಿತ್‌ ಮೃತಪಟ್ಟಿದ್ದಾರೆ ಎಂದು ಪ್ರಕಟಿಸಲಾಗಿದೆ ಎಂದು ರಂಜನ್‌ ಹೇಳಿದರು.</p>



<p class="has-medium-font-size">ಕುಟುಂಬದವರು ದೀಕ್ಷಿತ್‌ ಕೋಮಾದಲ್ಲಿದಾರೆಂದು ಎಂದು ನೆರೆಹೊರೆಯವರ ಹತ್ತಿರವೂ ಹೇಳಿಕೊಂಡಿದ್ದಾರೆ. ದೀಕ್ಷಿತ್‌ ಅವರ ಪತ್ನಿ ದಿನೇ ದಿನೇ ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಹಾಗೆಯೇ ದೀಕ್ಷಿತ್‌ ಕುಟುಂಬದವರು ಆಗಾಗ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಮನೆಗೆ ಕೊಂಡೊಯ್ಯುತಿದ್ದರು ಎಂದು ಅಕ್ಕಪಕ್ಕದ ಮನೆಗಳವರು ಹೇಳಿಕೆ ಕೊಟ್ಟಿದ್ದಾರೆ.</p>



<p class="has-medium-font-size">ಈ ಕುರಿತು ತ್ರಿ-ಸದಸ್ಯ ತಂಡವನ್ನು ರಚಿಸಲಾಗಿದ್ದು, ಘಟನೆಯ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸುವಂತೆ ಅಧಿಕಾರಿ ಮಾಹಿತಿ ನೀಡಿದ್ದಾರೆ.</p>
]]></content:encoded>
					
		
		
			</item>
	</channel>
</rss>
