<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>delhi CM &#8211; Peepal Media</title>
	<atom:link href="https://peepalmedia.com/tag/delhi-cm/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 30 Jun 2025 07:33:53 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>delhi CM &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ತುರ್ತು ಪರಿಸ್ಥಿತಿಗೆ ಐವತ್ತು ವರ್ಷ: &#8216;ಸ್ವಂತ ರಿಸ್ಕ್‌ʼನಲ್ಲಿ ದೆಹಲಿಯಲ್ಲಿ ಪ್ರದರ್ಶನ ನೀಡಬಹುದು ಎಂದು ಕುನಾಲ್ ಕಮ್ರಾಗೆ ಹೇಳಿದ ದೆಹಲಿ ಮುಖ್ಯಮಂತ್ರಿ</title>
		<link>https://peepalmedia.com/fifty-years-of-emergency-delhi-cm-tells-kunal-kamra-he-can-perform-in-delhi-at-his-own-risk/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 30 Jun 2025 07:33:51 +0000</pubDate>
				<category><![CDATA[ಅಂಕಣ]]></category>
		<category><![CDATA[delhi CM]]></category>
		<category><![CDATA[Emergency]]></category>
		<category><![CDATA[freedom of expression]]></category>
		<category><![CDATA[kunal kamra]]></category>
		<category><![CDATA[Rekha Gupta]]></category>
		<guid isPermaLink="false">https://peepalmedia.com/?p=61793</guid>

					<description><![CDATA[ಜೂನ್ 25, 1975 ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ ತುರ್ತು ಪರಿಸ್ಥಿತಿಗೆ ಐವತ್ತು ವರ್ಷಗಳಾಗಿವೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಅನ್ನು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪಕ್ಷವೆಂದು ಬಿಂಬಿಸಲು ಪ್ರತೀ ವರ್ಷ ಇದನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿಯ ಅಧಿಕೃತ ಖಾತೆಯಲ್ಲಿ ʼಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಹೇರುತ್ತದೆಯೇʼ ಎಂಬ ಪ್ರಶ್ನೆಯನ್ನು ಕೇಳಿ ಟ್ವಿಟರ್ ಸಮೀಕ್ಷೆಯೊಂದನ್ನು ನಡೆಸಿದ್ದು, ಇದು ಬೂಮರಾಂಗ್ ಆದ ನಂತರ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದವರಲ್ಲಿ ಮೂರನೇ ಎರಡರಷ್ಟು ಜನರು ಬಿಜೆಪಿಯ ಈ ಪ್ರಶ್ನೆಗೆ [&#8230;]]]></description>
										<content:encoded><![CDATA[
<p>ಜೂನ್ 25, 1975 ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ ತುರ್ತು ಪರಿಸ್ಥಿತಿಗೆ ಐವತ್ತು ವರ್ಷಗಳಾಗಿವೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಅನ್ನು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪಕ್ಷವೆಂದು ಬಿಂಬಿಸಲು ಪ್ರತೀ ವರ್ಷ ಇದನ್ನು ಬಳಸಿಕೊಳ್ಳುತ್ತಿದೆ.</p>



<p>ಬಿಜೆಪಿಯ ಅಧಿಕೃತ ಖಾತೆಯಲ್ಲಿ ʼಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಹೇರುತ್ತದೆಯೇʼ ಎಂಬ ಪ್ರಶ್ನೆಯನ್ನು ಕೇಳಿ <a href="https://x.com/BJP4India/status/1937864240473497673">ಟ್ವಿಟರ್ ಸಮೀಕ್ಷೆಯೊಂದ</a>ನ್ನು ನಡೆಸಿದ್ದು, ಇದು ಬೂಮರಾಂಗ್ ಆದ ನಂತರ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದವರಲ್ಲಿ ಮೂರನೇ ಎರಡರಷ್ಟು ಜನರು ಬಿಜೆಪಿಯ ಈ ಪ್ರಶ್ನೆಗೆ ನಕಾರಾತ್ಮಕ ಉತ್ತರ ನೀಡಿ ವಿರೋಧಿಸಿದ್ದಾರೆ. ಹೀಗಾಗಿ, ದೆಹಲಿಯ ಮುಖ್ಯಮಂತ್ರಿ, ಬಿಜೆಪಿ ನಾಯಕಿ ರೇಖಾ ಗುಪ್ತಾ ಅವರ ಹೇಳಿಕೆಗಳು ಪಕ್ಷಕ್ಕೆ ಮುಜುಗರವನ್ನುಂಟುಮಾಡಿವೆ.</p>



<p><em>ದಿ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನ ಹಿಂದಿ ದಿನಪತ್ರಿಕೆ ಜನಸತ್ತ</em> ಆಯೋಜಿಸಿದ್ದ <a href="https://www.youtube.com/watch?v=tuJHgn9toPc">ಮಾಧ್ಯಮ ಕಾರ್ಯಕ್ರಮದಲ್ಲಿ ಮಾತನಾಡಿದ</a> ರೇಖಾ ಗುಪ್ತಾ, ಐಟಿ ನಿಯಮಗಳ ವಿರುದ್ಧದ ವಿಷಯದಲ್ಲಿ ಅರ್ಜಿದಾರ ಮತ್ತು ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ದೆಹಲಿಗೆ ಬಂದು ಪ್ರದರ್ಶನ ನೀಡಬಹುದು, ಆದರೆ &#8220;ತನ್ನ ಸ್ವಂತ ರಿಸ್ಕ್‌ನಲ್ಲಿ&#8221; ಬರಬಹುದು ಎಂದು ಹೇಳಿದರು. ಆಗ ಮಾಧ್ಯಮ ಸಂಸ್ಥೆಯ ಪ್ರತಿನಿಧಿಯೊಬ್ಬರು ಮುಖ್ಯಮಂತ್ರಿಯೊಬ್ಬರು &#8216;ತನ್ನ ಸ್ವಂತ ರಿಸ್ಕ್‌ನಲ್ಲಿ ಬರಬಹುದು&#8217; ಎಂದು  ಹೇಗೆ ಹೇಳಬಹುದು ಎಂದು ಕೇಳಿದಾಗ ರೇಖಾ ಗುಪ್ತಾ ಉತ್ತರಿಸಲು ನಿರಾಕರಿಸಿದರು.</p>



<p>ಆಡಳಿತಾರೂಢ ಶಿವಸೇನೆ (ಏಕನಾಥ್ ಶಿಂಧೆ) ಜೊತೆ ಸಂಪರ್ಕ ಹೊಂದಿರುವ ದುಷ್ಕರ್ಮಿಗಳು ಮುಂಬೈನಲ್ಲಿ ಕುನಾಲ್‌ ಕಾಮ್ರಾ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿ, ಯೂಟ್ಯೂಬ್‌ನಲ್ಲಿ ರಾಜಕೀಯ ವಿಡಂಬನೆಯನ್ನು ಪೋಸ್ಟ್ ಮಾಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ನಂತರ, ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ತೀವ್ರ ವಿವಾದಕ್ಕೆ ಗುರಿಯಾಗಿದ್ದರು.</p>



<p><a href="https://thewire.in/rights/fir-against-comedian-kunal-kamra-venue-of-his-new-show-shut-down-after-vandalism-by-shiv-sainiks">ಕಾಮ್ರಾ ಮತ್ತು ಸದ್ಯ ಬಂದ್‌ ಮಾಡಲಾಗಿರುವ</a> ಹಾಸ್ಯ ಕಾರ್ಯಕ್ರಮದ ಸ್ಥಳದ ಮೇಲಿನ ದಾಳಿಗಳು, ಮುಕ್ತ ಅಭಿವ್ಯಕ್ತಿ ಅಥವಾ ವಿಡಂಬನೆಗೆ ಸುರಕ್ಷಿತ ವೇದಿಕೆಯನ್ನು ಒದಗಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಆಗಿರುವ ಅಸಮರ್ಥತೆಗಯನ್ನು ಈಗಾಗಲೇ ಬೆಳಕಿಗೆ ತಂದಿವೆ. ಹಿಂದಿ ಚಲನಚಿತ್ರೋದ್ಯಮವನ್ನು ಹೊಂದಿರುವ ಮತ್ತು ಮೊದಲಿನಂತೆ ಪ್ರತಿಭಟನಾ-ಸಾಹಿತ್ಯ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಮತ್ತು ನಗರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಅಪಾಯದಲ್ಲಿದೆ ಎಂಬ ವಿಚಾರವನ್ನು ಮುಖ್ಯಮಂತ್ರಿ ಮತ್ತು ಬಿಜೆಪಿ ಹಾಗೂ ಶಿವಸೇನೆಯ ಉನ್ನತ ನಾಯಕರು ಮುಚ್ಚಿಹಾಕಲು ಸಾಧ್ಯವಿಲ್ಲ.</p>



<p>ಈ ಮಧ್ಯೆ, ಗುಪ್ತಾ ಅವರ ಮಾತಿಗೆ ಪ್ರತಿಕ್ರಿಯಿಸಿದ <a href="https://x.com/kunalkamra88/status/1938492288549982551">ಕಾಮ್ರಾ</a> , &#8220;ಒಬ್ಬ ಘನವೆತ್ತ ಮುಖ್ಯಮಂತ್ರಿಯಾಗಿ ಮಾತನಾಡಬೇಕಾದವರು ಶುದ್ಧ ಎಬಿವಿಪಿ ಕಾರ್ಯಕರ್ತರಂತೆ ಮಾತನಾಡಿದರು&#8221; ಎಂದು ಹೇಳಿದರು.</p>



<p>ಗುಪ್ತಾ ಅವರ ಹೇಳಿಕೆಗಳು &#8220;ದೆಹಲಿ ಪ್ರವಾಸೋದ್ಯಮದ ಜಾಹೀರಾತಿಗೆ ಒಂದು ಟ್ಯಾಗ್‌ಲೈನ್&#8221; ಆಗಿರಬಹುದು ಎಂದು ಅವರು ಹೇಳಿದರು.</p>



<p>ದೆಹಲಿ ಸರ್ಕಾರ ಬಿಜೆಪಿಯ ಕೈಯಲ್ಲಿದ್ದು,  ರಾಜಧಾನಿಯಲ್ಲಿ &#8216;ತ್ರಿಪಲ್ ಎಂಜಿನ್&#8217; ಸರ್ಕಾರವಿದೆ ಎಂದು ಹೆಮ್ಮೆಪಡುತ್ತಿರುವಾಗ, ರಾಜಕೀಯ ವಿಡಂಬನೆ ಮತ್ತು ಹಾಸ್ಯದ ಅಭಿವ್ಯಕ್ತಿಗೆ ಸುರಕ್ಷಿತ ಸ್ಥಳವನ್ನು ನೀಡಲು ದೆಹಲಿ ಮುಖ್ಯಮಂತ್ರಿಗಿರುವ ಅಸಮರ್ಥತೆಯು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. </p>



<p><a href="https://www.youtube.com/watch?v=2PnbFqm1vUY&amp;ab_channel=KunalKamra">ಮಾರ್ಚ್‌ನಲ್ಲಿ, ಕಮ್ರಾ ತಮ್ಮ ಹೊಸ ಕಾರ್ಯಕ್ರಮ &#8216;ನಯ ಭಾರತ್&#8217;</a> ನ ವೀಡಿಯೊವನ್ನು ಬಿಡುಗಡೆ ಮಾಡಿದರು. ದೇಶದ ಪರಿಸ್ಥಿತಿ ಮತ್ತು ಸರ್ಕಾರದ ಬಗ್ಗೆ ತೀಕ್ಷ್ಣವಾದ ನಿಲುವಿಗೆ ಹೆಸರುವಾಸಿಯಾದ ಕಮ್ರಾ ಅವರು ಆ ಕಾರ್ಯಕ್ರಮದಲ್ಲಿ ಹಲವಾರು ವಿಡಂಬನಾತ್ಮಕ ಹಾಡುಗಳನ್ನು ಹಾಡಿದರು.</p>



<p>ಮುಂಬೈನಲ್ಲಿ ವಿಡಿಯೋ ರೆಕಾರ್ಡ್ ಮಾಡಲಾದ ಕಾಮಿಡಿ ಕ್ಲಬ್ ಅನ್ನು ಶಿವಸೇನಾ ಸದಸ್ಯರು ಧ್ವಂಸಗೊಳಿಸಿದರು, ಕಾಮ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಾ, ಕಾಮ್ರಾ &#8220;ತನ್ಶಾ‌&#8221; ಅಥವಾ ಸರ್ವಾಧಿಕಾರಿ ಎಂಬ ಹಾಡನ್ನು ಹಾಡಿದರು. ಇನ್ನೊಂದರಲ್ಲಿ, ದಿಲ್ ತೋ ಪಾಗಲ್ ಹೈ ಹಾಡಿನಲ್ಲಿ, ಅವರು ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಗುರಿಯಾಗಿಸಿ ವಿಡಂಬನೆ ಮಾಡಿದರು.</p>



<p></p>
]]></content:encoded>
					
		
		
			</item>
	</channel>
</rss>
