<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Dinesh Kumar S C &#8211; Peepal Media</title>
	<atom:link href="https://peepalmedia.com/tag/dinesh-kumar-s-c/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 19 Nov 2022 13:21:29 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Dinesh Kumar S C &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ʼಮೇಡಂ, ಅಮೆರಿಕದ ನೌಕಾಪಡೆಯ ಯುದ್ಧನೌಕೆಗಳು ಬಂಗಾಳ ತೀರವನ್ನು ಪ್ರವೇಶಿಸಿವೆ’</title>
		<link>https://peepalmedia.com/indira-gandhi-bith-anniversery-special-by-dinesh-kumar-sc/</link>
		
		<dc:creator><![CDATA[Peepal Media]]></dc:creator>
		<pubDate>Sat, 19 Nov 2022 13:04:14 +0000</pubDate>
				<category><![CDATA[ವಿಶೇಷ]]></category>
		<category><![CDATA[Dinesh Kumar S C]]></category>
		<category><![CDATA[indira gandhi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=15910</guid>

					<description><![CDATA[ಇಂದು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನ. ಭಾರತದ ಪ್ರಧಾನಿಗಳ ಪಟ್ಟಿಯಲ್ಲಿ ಹಲವು ಕಾರಣಗಳಿಗಾಗಿ ಎದ್ದು ಕಾಣುವ ಹೆಸರು ಇಂದಿರಾ ಗಾಂಧಿಯವರದು. ಈ ಹಿನ್ನೆಲೆಯಲ್ಲಿ ನಮ್ಮ ಪೀಪಲ್‌ ಮೀಡಿಯಾ ಸಂಸ್ಥೆಯ ಪ್ರಧಾನ ಸಂಪಾದಕರಾದ ದಿನೇಶ್‌ ಕುಮಾರ್‌ ಎಸ್‌ ಸಿ ಅವರು ಬರೆದಿರುವ ಒಂದು ವಿಶೇಷ ಲೇಖನ ನಿಮ್ಮ ಓದಿಗಾಗಿ ಯಾವುದೇ ದೇಶದ ಪ್ರಧಾನಿಯ ಎದೆ ನಡುಗಿಸುವ ಸುದ್ದಿ ಅದು. ಆದರೆ ಇಂದಿರಾ ಗಾಂಧಿ ಕೇಳಿಯೂ ಕೇಳದಂತೆ ಸುಮ್ಮನಿದ್ದರು. ಈ ಸುದ್ದಿಯನ್ನು ಹೇಳುತ್ತಿರುವವರು ಬೇರೆ ಯಾರೂ ಅಲ್ಲ, [&#8230;]]]></description>
										<content:encoded><![CDATA[
<h5 class="has-text-align-center has-very-light-gray-to-cyan-bluish-gray-gradient-background has-background wp-block-heading" style="font-style:normal;font-weight:700;text-transform:uppercase"><strong>ಇಂದು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನ. ಭಾರತದ ಪ್ರಧಾನಿಗಳ ಪಟ್ಟಿಯಲ್ಲಿ ಹಲವು ಕಾರಣಗಳಿಗಾಗಿ ಎದ್ದು ಕಾಣುವ ಹೆಸರು ಇಂದಿರಾ ಗಾಂಧಿಯವರದು. ಈ ಹಿನ್ನೆಲೆಯಲ್ಲಿ ನಮ್ಮ ಪೀಪಲ್‌ ಮೀಡಿಯಾ ಸಂಸ್ಥೆಯ ಪ್ರಧಾನ ಸಂಪಾದಕರಾದ ದಿನೇಶ್‌ ಕುಮಾರ್‌ ಎಸ್‌ ಸಿ ಅವರು ಬರೆದಿರುವ ಒಂದು ವಿಶೇಷ ಲೇಖನ ನಿಮ್ಮ ಓದಿಗಾಗಿ</strong></h5>



<p>ಯಾವುದೇ ದೇಶದ ಪ್ರಧಾನಿಯ ಎದೆ ನಡುಗಿಸುವ ಸುದ್ದಿ ಅದು. ಆದರೆ ಇಂದಿರಾ ಗಾಂಧಿ ಕೇಳಿಯೂ ಕೇಳದಂತೆ ಸುಮ್ಮನಿದ್ದರು. ಈ ಸುದ್ದಿಯನ್ನು ಹೇಳುತ್ತಿರುವವರು ಬೇರೆ ಯಾರೂ ಅಲ್ಲ, ಭಾರತ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಎಸ್.ಎಂ.ನಂದ. ಇನ್ನೇನು ಬಾಂಗ್ಲಾದೇಶ ವಿಮೋಚನೆಗಾಗಿ ಭಾರತ ಪಾಕಿಸ್ತಾನದ ಜತೆ ನಿರ್ಣಾಯಕ ಕದನಕ್ಕೆ ಸಜ್ಜಾದಾಗ ಪ್ರಧಾನಿ ಇಂದಿರಾಗಾಂಧಿ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸುತ್ತಿದ್ದರು.</p>



<p>ಇಂದಿರಾಗಾಂಧಿ ಏನೂ ಪ್ರತಿಕ್ರಿಯೆ ನೀಡದೇ ಇದ್ದರಿಂದಾಗಿ ಚರ್ಚೆ ಮುಂದುವರೆಯಿತು. ತಾನು ಹೇಳಿದ್ದನ್ನು ಇಂದಿರಾ ಕೇಳಿಸಿಕೊಂಡರೋ ಇಲ್ಲವೋ ಎಂಬ ಧಾವಂತ ಅಡ್ಮಿರಲ್ ನಂದ ಅವರಿಗೆ. ಹೀಗಾಗಿ ಮತ್ತೆ ಮಧ್ಯೆ ಪ್ರವೇಶಿಸಿ, ‘ಮೇಡಂ, ಅಮೆರಿಕದ ಯುದ್ಧನೌಕೆಗಳು ಬಂಗಾಳ ತೀರ ಪ್ರವೇಶಿಸಿವೆ. ಇದನ್ನು ನಾನು ತಮ್ಮ ಗಮನಕ್ಕೆ ತರಲೇಬೇಕಿದೆ’ ಎಂದರು. ಇಂದಿರಾ ಥಟ್ಟನೇ ಹೇಳಿದರು: ‘ಅಡ್ಮಿರಲ್, ನೀವು ಮೊದಲ ಬಾರಿ ಹೇಳಿದಾಗಲೇ ನಾನು ಅದನ್ನು ಕೇಳಿಸಿಕೊಂಡೆ. ಆ ಕುರಿತು ಚಿಂತೆ ಬೇಡ. ಚರ್ಚೆ ಮುಂದುವರೆಯಲಿ’</p>



<p>ಅಡ್ಮಿರಲ್ ನಂದ ಅವರೊಂದಿಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಮಾತುಕತೆ<br>ಸಭೆಯಲ್ಲಿದ್ದ ಎಲ್ಲ ಅಧಿಕಾರಿಗಳು ಒಮ್ಮೆ ಬೆಚ್ಚಿಬಿದ್ದರು. ಪ್ರಧಾನಿಯ ಆ ಧೈರ್ಯದ ಮನೋಭಾವ ಎಲ್ಲರ ನೈತಿಕ ಶಕ್ತಿಯನ್ನು ಹೆಚ್ಚಿಸಿಬಿಟ್ಟಿತ್ತು. ಜಗತ್ತಿನ ಅತಿದೊಡ್ಡ ನೌಕಾಪಡೆಯನ್ನು ಹೊಂದಿದ್ದ ಅಮೆರಿಕದ ನೌಕೆಗಳು ಬಂದಿವೆ ಎಂದರೂ ಬೆದರದ ಇಂದಿರಾ, ಅಮೆರಿಕದ ಹಸ್ತಕ್ಷೇಪದ ಬಗ್ಗೆ ತೋರಿದ ತಿರಸ್ಕಾರ ಭಾರತ ಸಶಸ್ತ್ರ ಪಡೆಗಳ ಮನೋಬಲವನ್ನು ಹೆಚ್ಚಿಸಿತ್ತು.</p>



<p>ಇಂದಿರಾಗಾಂಧಿ ಹೀಗೆ ಅಮೆರಿಕದ ಬೆದರಿಕೆಯನ್ನು ತಿರಸ್ಕಾರದಿಂದ ನೋಡುವುದಕ್ಕೆ ಕಾರಣವೂ ಇತ್ತು. ಆಕೆಗೆ ಒಂದು ಯುದ್ಧವನ್ನು ಹೇಗೆ ಎಲ್ಲ ಬಗೆಯ ಪೂರ್ವತಯಾರಿಗಳೊಂದಿಗೆ ನಡೆಸಬೇಕು ಎಂಬುದು ಖಚಿತವಾಗಿ ಗೊತ್ತಿತ್ತು. ಯುದ್ಧವ್ಯೂಹವನ್ನು ರಚಿಸಲು ಅವರು ಭದ್ರತಾಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಅವರನ್ನು ಕೆಲಸಕ್ಕೆ ಹಚ್ಚಿ ರಾಜತಾಂತ್ರಿಕ ತಂತ್ರಗಳನ್ನು ಹೆಣೆಯುತ್ತ ಬಂದರು. ಪಾಕಿಸ್ತಾನದಲ್ಲಿ ದಂಗೆ ಶುರುವಾದ ಹೊತ್ತಿನಲ್ಲೇ ಇಂದಿರಾ ಯುದ್ಧವನ್ನು ಊಹಿಸಿದ್ದರು ಮತ್ತು ಲೋಕಸಭೆಯಲ್ಲಿ ಈ ಸಂಬಂಧ ಕೇಳಲಾದ ಪ್ರಶ್ನೆಗಳಿಗೆ ಮಾ.27ರಂದು ಅತ್ಯಂತ ಜವಾಬ್ದಾರಿಯುತ ಪ್ರತಿಕ್ರಿಯೆ ನೀಡಿದ್ದರು. ‘ಇಂಥ ಗಂಭೀರ ಸಂದರ್ಭದಲ್ಲಿ ಒಂದು ಸರ್ಕಾರವಾಗಿ ಅತಿ ಕಡಿಮೆ ಮಾತನಾಡುವುದು ಒಳ್ಳೆಯದು’. ಅದೇ ದಿನ ರಾಜ್ಯಸಭೆಯಲ್ಲಿ ಮಾತನಾಡುತ್ತ ಇಂದಿರಾಗಾಂಧಿ ಎಚ್ಚರಿಸಿದರು: ‘ಒಂದು ತಪ್ಪು ಹೆಜ್ಜೆ, ಒಂದು ತಪ್ಪು ಶಬ್ದ ನಾವು ಏನನ್ನು ಮಾಡಲು ಹೊರಟಿದ್ದೇವೋ ಅದನ್ನು ಸಂಪೂರ್ಣ ಹಾಳುಗೆಡವಬಹುದು’</p>



<p>ಅಲ್ಲಿಂದಾಚೆಗೆ ಆರು ತಿಂಗಳ ಕಾಲ, ಇಂದಿರಾ ಒಂದು ತಪ್ಪು ಶಬ್ದ ಮಾತನಾಡಲಿಲ್ಲ, ಒಂದು ತಪ್ಪು ಹೆಜ್ಜೆ ಇಡಲಿಲ್ಲ. ನಿರಂತರವಾಗಿ ಜಾಗತಿಕ ನಾಯಕರುಗಳಿಗೆ ಪತ್ರಗಳನ್ನು ಬರೆದರು. ಭಾರತ ಗಡಿಯಲ್ಲಿ ಉದ್ಭವಿಸಿರುವ ಸನ್ನಿವೇಶವನ್ನು ಬಿಡಿಸಿ ಹೇಳಿದರು. ಬ್ರಿಟನ್, ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಮತ್ತು ಅಮೆರಿಕಕ್ಕೆ ತಾವೇ ಖುದ್ದಾಗಿ ಭೇಟಿ ನೀಡಿ ಪಾಕ್ ಅಂತರ್ಯುದ್ಧದ ಸನ್ನಿವೇಶವನ್ನು ವಿವರಿಸಿದರು. ಪಶ್ಚಿಮ ಪಾಕಿಸ್ತಾನವು ಪೂರ್ವ ಪಾಕಿಸ್ತಾನದ ನಾಗರಿಕರ ಮೇಲೆ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ, ಭೀಕರ ನರಮೇಧಗಳು, ಲಕ್ಷಾಂತರ ಬೆಂಗಾಲಿ ಮಹಿಳೆಯರ ಮೇಲಿನ ಅತ್ಯಾಚಾರಗಳ ಕುರಿತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಕೊಟ್ಟರು. ಭಾರತದ ಪರಮಾಪ್ತ ರಾಷ್ಟ್ರ ಸೋವಿಯತ್ ಯೂನಿಯನ್ ಜತೆ ಐತಿಹಾಸಿಕ ಮೈತ್ರಿ ಮತ್ತು ಪರಸ್ಪರ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದರು.</p>



<p>ಪೂರ್ವ ಪಾಕಿಸ್ತಾನದಲ್ಲಿ ಎದ್ದ ದಂಗೆಯ ನಂತರ ಪಾಕಿಸ್ತಾನದ ವಿರುದ್ಧ ಯುದ್ಧ ಹೂಡುವುದು ಅನಿವಾರ್ಯ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಅದಕ್ಕೆ ಅವರು ಆತುರ ತೋರಲಿಲ್ಲ. ಅವರು ಮಾಡಿದ ಮೊದಲ ಕೆಲಸವೇ ಸೇನಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು. ‘ಭಾರತ ಈ ಸಂದರ್ಭದಲ್ಲಿ ಯುದ್ಧ ಮಾಡಲು ಸಾಧ್ಯವೇ?’ ಎಂದು ಅವರು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರನ್ನು ಕೇಳಿದ್ದರು. ಮಾಣಿಕ್ ಷಾ ಅತ್ಯಂತ ನೇರವಾಗಿ ‘ಆಗುವುದಿಲ್ಲ, ಅದಕ್ಕೆ ಸಮಯ ಬೇಕಾಗುತ್ತದೆ’ ಎಂದಿದ್ದರು. ಇಂದಿರಾ ಮರುಮಾತನಾಡದೇ ಅವರು ಕೇಳಿದಷ್ಟು ಸಮಯ ನೀಡಿದರು, ತಯಾರಿಗಳನ್ನು ಮಾಡಿಕೊಳ್ಳಲು ಆದೇಶಿಸಿದ್ದರು. ಬಾಂಗ್ಲಾ ವಿಮೋಚನೆಯ ಯುದ್ಧ ಘೋಷಣೆಯಾದ ನಂತರ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಈ ಯುದ್ಧವನ್ನು ಮುಗಿಸಿಬಿಡಲು ಇಂದಿರಾಗಾಂಧಿ ಬಯಸಿದ್ದರು. ಅಂತಾರಾಷ್ಟ್ರೀಯ ಸಮುದಾಯಗಳು ಪರಿಸ್ಥಿತಿಯ ಲಾಭ ಪಡೆಯಲು, ಮಧ್ಯ ಪ್ರವೇಶಿಸಲು ಅವಕಾಶವಿಲ್ಲದಂತೆ ಯುದ್ಧ ಪೂರ್ಣಗೊಳ್ಳಬೇಕು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಅವರು ಅಂದುಕೊಂಡ ಹಾಗೆಯೇ ಆಯಿತು. 1971 ಡಿಸೆಂಬರ್ 3ರಂದು ತಡರಾತ್ರಿ ಆರಂಭಗೊಂಡ ಯುದ್ಧ ಡಿಸೆಂಬರ್ 16ರಂದು ಮುಗಿದೇ ಹೋಗಿತ್ತು. ಪಾಕಿಸ್ತಾನದ 91,000 ಸೈನಿಕರು (ಈ ಪೈಕಿ ಕೆಲ ನಾಗರಿಕರು, ಸೈನಿಕ ಕುಟುಂಬದವರು, ರಜಾಕರೂ ಇದ್ದರು) ಭಾರತ ಸೈನ್ಯದೆದುರು ಮಂಡಿಯೂರಿ ಶರಣಾಗತರಾಗುವುದರೊಂದಿಗೆ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ಉದ್ಭವಿಸಿತು. ಎರಡನೇ ವಿಶ್ವಸಮರದ ನಂತರ ನಡೆದ ಬಹುದೊಡ್ಡ ಯುದ್ಧ ಇದಾಗಿತ್ತು. ಎರಡನೇ ಮಹಾಯುದ್ಧದ ನಂತರ ಇಷ್ಟು ದೊಡ್ಡ ಸಂಖ್ಯೆಯ ಯುದ್ಧಕೈದಿಗಳು ಉದ್ಭವಿಸಿದ ಯುದ್ಧವೂ ಇದಾಗಿತ್ತು. ಪಾಕಿಸ್ತಾನ ಎಂಥ ಹೀನಾಯವಾದ ಸೋಲನ್ನಪ್ಪಿತು ಎಂದರೆ ತನ್ನ ಅರ್ಧದಷ್ಟು ನೌಕಾಪಡೆಯನ್ನು ಅದು ಕಳೆದುಕೊಳ್ಳಬೇಕಾಯಿತು, ಮಾತ್ರವಲ್ಲ ಕಾಲುಭಾಗದಷ್ಟು ವಾಯುಪಡೆಯನ್ನು ಮೂರನೇ ಒಂದು ಭಾಗದಷ್ಟು ಭೂಸೇನೆಯನ್ನು ಕಳೆದುಕೊಂಡಿತು. ಪಾಕಿಸ್ತಾನ ಎರಡು ಭಾಗವಾಗಿ ಹೋಯಿತು. ತನ್ನ ಶೇ.60 ರಷ್ಟು ಭೂಭಾಗವನ್ನು, ಜನಸಂಖ್ಯೆಯನ್ನು ಶಾಶ್ವತವಾಗಿ ಕಳೆದುಕೊಂಡಿತು.</p>



<p></p>



<p>ದಿನೇಶ್‌ ಕುಮಾರ್‌ ಎಸ್‌ ಸಿ</p>
]]></content:encoded>
					
		
		
			</item>
		<item>
		<title>ಕಾಂತಾರ: ಸಂಘರ್ಷಗಳ ಕುಲುಮೆಯಲ್ಲಿ ದೈವದ ಹೆಜ್ಜೆಗಳ ಘಲ್‌ ಘಲ್‌ ಸದ್ದು!</title>
		<link>https://peepalmedia.com/kaantaara-sangharshagala-kulumeyalli-daivada-premada-hejjegala-ghal-ghal-saddu/</link>
		
		<dc:creator><![CDATA[Peepal Media]]></dc:creator>
		<pubDate>Tue, 04 Oct 2022 10:41:18 +0000</pubDate>
				<category><![CDATA[ವಿಶೇಷ]]></category>
		<category><![CDATA[ಸಿನಿಮಾ]]></category>
		<category><![CDATA[bengalure]]></category>
		<category><![CDATA[cinema]]></category>
		<category><![CDATA[Dinesh Kumar S C]]></category>
		<category><![CDATA[flim]]></category>
		<category><![CDATA[india]]></category>
		<category><![CDATA[Kaantar]]></category>
		<category><![CDATA[kannada]]></category>
		<category><![CDATA[kannada cinema]]></category>
		<category><![CDATA[karnataka]]></category>
		<category><![CDATA[movie]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=8919</guid>

					<description><![CDATA[ಕಾಡಿನ ಒಳಗೆ ಹೋಗಲು ನೀವು ನಮ್ಮ ಪರ್ಮಿಷನ್‌ ತಗೊಂಡು ಹೋಗಬೇಕು ಎನ್ನುತ್ತಾನೆ ಅರಣ್ಯಾಧಿಕಾರಿ. ನಿಮ್ಮ ಪರ್ಮಿಷನ್‌ ನಮಗೇಕೆ ಬೇಕು? ನಾವು ನಿಮ್ಮ ಸರ್ಕಾರ ಬರುವುದಕ್ಕೆ ಮುಂಚಿನಿಂದಲೂ ಇಲ್ಲಿದ್ದೇವೆ. ಪರ್ಮಿಷನ್‌ ತಗೊಳ್ಳಬೇಕಾದವರು ನಾವಲ್ಲ, ನೀವು ಎನ್ನುತ್ತಾನೆ ಕಥಾನಾಯಕ ದಲಿತ ಯುವಕ. ʻಕಾಂತಾರʼ ಸಂಘರ್ಷಗಳ ಕಥನ. ಮನುಷ್ಯ ಮತ್ತು ಪ್ರಕೃತಿ, ಮೇಲ್ಜಾತಿ ಮತ್ತು ಕೆಳಜಾತಿ, ಆದಿವಾಸಿಗಳು-ಸರ್ಕಾರ ನಡುವಿನ ಸಂಘರ್ಷಗಳು ಬಿಡಿಬಿಡಿಯಾಗಿ ಒಮ್ಮೊಮ್ಮೆ ಒತ್ತೊತ್ತಾಗಿ ಕಾಣಸಿಗುತ್ತವೆ. ಈ ಸಂಘರ್ಷಗಳ ನಡುವೆ ಪಂಜುರ್ಲಿ ದೈವ ಎದ್ದುನಿಲ್ಲುತ್ತವೆ, ಭೂಮಿ-ಆಕಾಶಗಳನ್ನು ವ್ಯಾಪಿಸುತ್ತ ಆವರಿಸಿಕೊಳ್ಳುತ್ತ ಹೋಗುತ್ತದೆ. ಕನ್ನಡ [&#8230;]]]></description>
										<content:encoded><![CDATA[
<p style="font-size:20px">ಕಾಡಿನ ಒಳಗೆ ಹೋಗಲು ನೀವು ನಮ್ಮ ಪರ್ಮಿಷನ್‌ ತಗೊಂಡು ಹೋಗಬೇಕು ಎನ್ನುತ್ತಾನೆ ಅರಣ್ಯಾಧಿಕಾರಿ. ನಿಮ್ಮ ಪರ್ಮಿಷನ್‌ ನಮಗೇಕೆ ಬೇಕು? ನಾವು ನಿಮ್ಮ ಸರ್ಕಾರ ಬರುವುದಕ್ಕೆ ಮುಂಚಿನಿಂದಲೂ ಇಲ್ಲಿದ್ದೇವೆ. ಪರ್ಮಿಷನ್‌ ತಗೊಳ್ಳಬೇಕಾದವರು ನಾವಲ್ಲ, ನೀವು ಎನ್ನುತ್ತಾನೆ ಕಥಾನಾಯಕ ದಲಿತ ಯುವಕ.</p>



<p style="font-size:20px">ʻಕಾಂತಾರʼ ಸಂಘರ್ಷಗಳ ಕಥನ. ಮನುಷ್ಯ ಮತ್ತು ಪ್ರಕೃತಿ, ಮೇಲ್ಜಾತಿ ಮತ್ತು ಕೆಳಜಾತಿ, ಆದಿವಾಸಿಗಳು-ಸರ್ಕಾರ ನಡುವಿನ ಸಂಘರ್ಷಗಳು ಬಿಡಿಬಿಡಿಯಾಗಿ ಒಮ್ಮೊಮ್ಮೆ ಒತ್ತೊತ್ತಾಗಿ ಕಾಣಸಿಗುತ್ತವೆ. ಈ ಸಂಘರ್ಷಗಳ ನಡುವೆ ಪಂಜುರ್ಲಿ ದೈವ ಎದ್ದುನಿಲ್ಲುತ್ತವೆ, ಭೂಮಿ-ಆಕಾಶಗಳನ್ನು ವ್ಯಾಪಿಸುತ್ತ ಆವರಿಸಿಕೊಳ್ಳುತ್ತ ಹೋಗುತ್ತದೆ.</p>



<p style="font-size:20px">ಕನ್ನಡ ಸಿನಿಮಾ ಲೋಕ ಪ್ರಯೋಗಶೀಲತೆಗಳಿಗೆ ಒಡ್ಡಿಕೊಂಡಿದೆ ಎಂಬುದಕ್ಕೆ ಕಾಂತಾರ ಇನ್ನೊಂದು ಸಾಕ್ಷಿ. ಸಿನಿಮಾದ ನಾಯಕಪಾತ್ರಧಾರಿಯೂ ಆಗಿರುವ ರಿಷಬ್‌ ಶೆಟ್ಟಿ ಹಳೆಯ ಕಟ್ಟುಪಾಡುಗಳನ್ನು ಒಡೆದು ಮುನ್ನುಗ್ಗುವ ಧಾವಂತ ತೋರಿದ್ದಾರೆ. ತಳಸಮುದಾಯದ ಯುವಕನೊಬ್ಬ ನಾಯಕನಾಗುವುದು, ಮೇಲ್ಜಾತಿಯ ಧನಿಕ ಖಳನಾಯಕನಾಗುವುದನ್ನು ಸಿನಿಮಾಗಳಲ್ಲಿ ನೋಡುವುದು ಕಷ್ಟ. ರಿಷಬ್‌ ಈ ಸವಾಲನ್ನು ಮೇಲೆ ಎಳೆದುಕೊಂಡಿದ್ದಾರೆ ಮತ್ತು ಅದೇ ಮೇಲ್ಜಾತಿಯ ಪ್ರೇಕ್ಷಕರಿಂದ ಚಪ್ಪಾಳೆಯನ್ನೂ ಗಿಟ್ಟಿಸಲು ಯಶಸ್ವಿಯಾಗಿದ್ದಾರೆ. ದಲಿತನೊಬ್ಬ ಮನೆ ಪ್ರವೇಶಿಸಿದ ಕಾರಣಕ್ಕೆ ʻಪಂಚಗವ್ಯ ಹಾಕಿದ್ರೇನೋ?ʼ ಎಂದು ತನ್ನ ಕೆಲಸಗಾರರಿಗೆ ಅರಚುವ ಖಳನಾಯಕ ಬ್ರಾಹ್ಮಣ್ಯವನ್ನೇ ಹೊದ್ದವನು. ಅವನ ಕುಟಿಲತೆ, ಲಂಪಟತನ, ಕ್ರೌರ್ಯಗಳೆದುರು ಸೆಣೆಸಲು ಕಥಾನಾಯಕನಿಗೆ ದೈವದ ರಕ್ಷಣೆಯೇ ಸಿಗಬೇಕು. ಅದೇ ಕಥಾವಸ್ತು.</p>



<figure class="wp-block-image size-large"><img fetchpriority="high" decoding="async" width="1024" height="512" src="https://peepalmedia.com/wp-content/uploads/2022/10/image-13-1024x512.png" alt="" class="wp-image-8926" srcset="https://peepalmedia.com/wp-content/uploads/2022/10/image-13-1024x512.png 1024w, https://peepalmedia.com/wp-content/uploads/2022/10/image-13-300x150.png 300w, https://peepalmedia.com/wp-content/uploads/2022/10/image-13-768x384.png 768w, https://peepalmedia.com/wp-content/uploads/2022/10/image-13-150x75.png 150w, https://peepalmedia.com/wp-content/uploads/2022/10/image-13-696x348.png 696w, https://peepalmedia.com/wp-content/uploads/2022/10/image-13-1068x534.png 1068w, https://peepalmedia.com/wp-content/uploads/2022/10/image-13.png 1200w" sizes="(max-width: 1024px) 100vw, 1024px" /></figure>



<p style="font-size:20px">ʻಸಮಯವೂ ಕೂಡ ಈಗ ನಮ್ಮ ಕಡೆಯೇ ಇದೆʼ ಎನ್ನುವ ದಲಿತ ಹುಡುಗನ ಮಾತು ಇವತ್ತಿನ ಸಿನಿಮಾ ಜಗತ್ತಿಗೊಂದು ರೂಪಕ. ಅಸ್ಪೃಶ್ಯನನ್ನು ಮುಟ್ಟಿಸಿಕೊಳ್ಳದ, ಮುಟ್ಟಿಸಿಕೊಂಡರೂ ಕೈತೊಳೆದು ಶುದ್ಧ ಮಾಡಿಕೊಳ್ಳುವ ಧಣಿಯ ಮನೆಯ ಒಳಗೆ ಬಂದು, ಅವನೆದುರೇ, ಅವನ ಸಮಾನವಾಗಿ ಊಟ ಮಾಡಿ ಎದ್ದುಹೋಗುವ ನಾಯಕನ ಸೀಮೋಲ್ಲಂಘನ ಹೊಸಕಾಲದ ತವಕಗಳನ್ನು ಧ್ವನಿಸುತ್ತದೆ. ಮೇಲ್ಜಾತಿಗಳ, ಉಳ್ಳವರ ಕಥೆಗಳನ್ನು ಕೇಳಿಕೇಳಿ ಜನರೂ ಬೇಸತ್ತಿದ್ದಾರೆ. ಹೀಗಾಗಿ ತಳಸಮುದಾಯಗಳ ಕಥನಗಳು ಸಿನಿಮಾಗಳಾಗುತ್ತಿವೆ, ಗೆಲ್ಲುತ್ತಿವೆ. ಕಾಂತಾರ ಅಂಥದ್ದೇ ಒಂದು ಪ್ರಯತ್ನ.</p>



<p style="font-size:20px">ರಿಷಬ್‌ ಶೆಟ್ಟಿ ಸಿನಿಮಾದ ಆತ್ಮದಂತಿದ್ದಾರೆ. ನಿರ್ದೇಶನದಲ್ಲೂ, ನಾಯಕ ಪಾತ್ರಧಾರಿಯಾಗಿಯೂ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ರಿಷಬ್‌ ತಾವೊಬ್ಬ ಒಳ್ಳೆಯ ನಟ ಎಂಬುದನ್ನು ಬೆಲ್‌ ಬಾಟಮ್‌ ಸಿನಿಮಾದಲ್ಲೇ ಸಾಬೀತುಪಡಿಸಿದ್ದರು. ಈಗ ಅವರು ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಸಂಪೂರ್ಣ ಭಿನ್ನವಾದ ಜಾನರ್‌ ನಲ್ಲೂ ಅವರು ಸೈ ಎನಿಸಿಕೊಳ್ಳುವಂತೆ ನಟಿಸಿದ್ದಾರೆ. ಪಂಜುರ್ಲಿಯಾಗಿ ಅವರದು ಪರಕಾಯ ಪ್ರವೇಶ. ಅವರು ʻಓʼ ಎಂದು ಕೂಗಿದಾಗಲೆಲ್ಲ ಎದೆ ನಡುಗುತ್ತದೆ.</p>



<figure class="wp-block-image size-large"><img decoding="async" width="1024" height="576" src="https://peepalmedia.com/wp-content/uploads/2022/10/image-15-1024x576.png" alt="" class="wp-image-8928" srcset="https://peepalmedia.com/wp-content/uploads/2022/10/image-15-1024x576.png 1024w, https://peepalmedia.com/wp-content/uploads/2022/10/image-15-300x169.png 300w, https://peepalmedia.com/wp-content/uploads/2022/10/image-15-768x432.png 768w, https://peepalmedia.com/wp-content/uploads/2022/10/image-15-150x84.png 150w, https://peepalmedia.com/wp-content/uploads/2022/10/image-15-696x392.png 696w, https://peepalmedia.com/wp-content/uploads/2022/10/image-15-1068x601.png 1068w, https://peepalmedia.com/wp-content/uploads/2022/10/image-15.png 1280w" sizes="(max-width: 1024px) 100vw, 1024px" /></figure>



<p style="font-size:20px">ಕರಾವಳಿಯವರಿಗೆ ಕಾಂತಾರ ತಮ್ಮದೇ ಕಥೆ ಎನಿಸಬಹುದು, ಸಿನಿಮಾದ ಲೋಪದೋಷಗಳೂ ಢಾಳಾಗಿ ಕಾಣಬಹುದು. ಆದರೆ ಹೊರಗಿನವರಿಗೆ ಕಾಂತಾರ ಹೊಸ ಪ್ರಪಂಚವನ್ನೇ ತೆರೆದಿಡುತ್ತದೆ. ಕರಾವಳಿಯ ದೈವಗಳ ಬಗ್ಗೆ ಗೊತ್ತಿಲ್ಲದವರು, ನೋಡಿಲ್ಲದವರಿಗೆ ಇದೊಂದು ಅದ್ಭುತ ಲೋಕ.</p>



<p style="font-size:20px">ಹಾಗೆ ನೋಡಿದರೆ ಕಾಂತಾರದಲ್ಲಿ ಲೋಪಗಳು ಇಲ್ಲವೆಂದೇನಿಲ್ಲ. ಸಿನಿಮಾದ ಎಲ್ಲ ಪಾತ್ರಗಳು ಕೂಗಾಡುತ್ತಲೇ ಮಾತಾಡುವುದು ಒಮ್ಮೊಮ್ಮೆ ಕಿರಿಕಿರಿ ಎನಿಸುತ್ತದೆ. ಕಥಾನಾಯಕನ ತಮ್ಮ ಗುರುವನೊಬ್ಬನನ್ನು ಬಿಟ್ಟರೆ ಮಿಕ್ಕವರೆಲ್ಲ ಅಬ್ಬರಿಸಿ ಬೊಬ್ಬಿರಿಯುವವರೇ. ಸಿನಿಮಾದ ಮೊದಲ ಅರ್ಧದಲ್ಲಿ ಕಥೆ ವೇಗವಾಗಿ ಸಾಗುವುದಿಲ್ಲ. ಕಂಬಳದ ಓಟದ ನಂತರದ ಒಂದು ಫೈಟ್‌ ಅನಗತ್ಯವಾಗಿತ್ತು. ಸಿನಿಮಾದ ಪಾತ್ರಗಳು, ಅದರಲ್ಲೂ ವಿಶೇಷವಾಗಿ ಆದಿವಾಸಿಗಳು ಹೊಟ್ಟೆಪಾಡಿಗಾಗಿ ಏನು ಮಾಡುತ್ತಾರೆ ಎಂಬುದನ್ನು ಇನ್ನಷ್ಟು ವಿವರವಾಗಿ ಹೇಳಬೇಕಿತ್ತು. ಬದಲಾಗಿ ನಾಯಕ ಮತ್ತವನ ತಂಡದ ಮರಗಳ್ಳತನ, ಹಂದಿಬೇಟೆಗಳನ್ನೇ ವಿಜೃಂಭಿಸಿರುವುದು ಗಂಭೀರ ಲೋಪ.</p>



<p style="font-size:20px">ಕಾಂತಾರದ ದ್ವಿತೀಯಾರ್ಧದಲ್ಲಿ ಕಥೆಯ ಒಳಸುಳಿಗಳೆಲ್ಲ ಒಂದೊಂದಾಗಿ ಬಿಚ್ಚಿಕೊಳ್ಳುತ್ತ ಸಾಗುತ್ತವೆ. ಒಂದಷ್ಟನ್ನು ನೀವೇ ಊಹಿಸುವಷ್ಟು ಸಲೀಸಾಗಿ ಕಥೆ ಮುಂದುವರೆಯುತ್ತದೆ. ಕೊನೆಯ ಹದಿನೈದು ನಿಮಿಷಗಳ ಕ್ಲೈಮ್ಯಾಕ್ಸ್‌ ನಿಮ್ಮನ್ನು ನಿಸ್ಸಂದೇಹವಾಗಿ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಒಂದು ದೃಶ್ಯರೂಪಕಕ್ಕೆ ಬೇಕಾದ ಎಲ್ಲ ಸಾಧ್ಯತೆಗಳನ್ನು ದುಡಿಸಿಕೊಂಡು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವಷ್ಟು ಸಶಕ್ತವಾಗಿದೆ ಕ್ಲೈಮ್ಯಾಕ್ಸ್.</p>


<div class="wp-block-image">
<figure class="aligncenter size-full is-resized"><img decoding="async" src="https://peepalmedia.com/wp-content/uploads/2022/10/image-17.png" alt="" class="wp-image-8931" width="652" height="952"/></figure></div>


<p style="font-size:20px">ಚಿತ್ರದ ಕ್ಲೈಮಾಕ್ಸ್&#8217;ನಲ್ಲೊಂದು ಸಣ್ಣ ಆದರೆ ಎಫೆಕ್ಟಿವ್ ಆದ ಪುಟ್ಟ ಸೀನ್ ಒಂದು ಇದೆ‌‌. ಪಂಚಗವ್ಯ ಕುಲದ ಭೂಮಾಲೀಕ ನಾಯಕ ಶಿವನಿದ್ದ ಹಾಡಿಯ ಮೇಲೆ ಭೀಕರ ಧಾಳಿಯೊಂದನ್ನು ಎಸಗುತ್ತಾನೆ. ಆ ಸಂದರ್ಭದಲ್ಲಿ ದೈವಾರಾಧನೆ ಉತ್ಸವಗಳಿಗೆ ಗರ್ನಲ್ ಮದ್ದು ಸಿಡಿಸಿ ಆ ಆರಾಧನೆಯನ್ನು ಕಲರ್&#8217;ಫುಲ್ ಮಾಡುವ &#8216;ಮುಸ್ಲಿಮ್&#8217; ಸಾಬರ ಮೇಲೂ ದಾಳಿಯಾಗುತ್ರದೆ. ಆ ಸಂದರ್ಭದಲ್ಲಿ ಆತ ಗರ್ನಲ್ ಸಿಡಿಸಲೆಂದು ಮದ್ದು ಸಂಗ್ರಹ ಮಾಡಿದ್ದ ಮನೆಯೊಂದರೊಳಗೆ ಓಡುತ್ತಾನೆ. ಅಟ್ಟಿಸಿಕೊಂಡು ಬರುವ ಭೂಮಾಲೀಕನ ಪಡೆಯಲ್ಲೊಬ್ಬ ಸಾಬನಿದ್ದಾನೆ.. ಆತ ಗರ್ನಲ್ ಸಾಬನಿಗೆ ನೀನು ನಮ್ಮವನು ಕೋಲ ಕಟ್ಟುವರ ಜೊತೆಗೇಕಿದ್ದಿ ಎಂಬಂತೆ &#8216;ಸಲಾಂ ಆಲೇಕುಂ&#8217; ಎನ್ನುತ್ತಾನೆ.. ಕೈನಲ್ಲಿ ಗರ್ನಲ್ ಮದ್ದು ಹಿಡಿದಿದ್ದ ಗರ್ನಲ್ ಸಾಬ &#8216;ವಾಲೇಕುಂ ಅಸ್ಸಲಾಂ&#8217; ಎಂದು ಕೈಯಲ್ಲಿ ಹಿಡಿದಿದ್ದ ಮದ್ದಿಗೆ ಬೆಂಕಿ ತಾಕಿಸಿ ತನ್ನನ್ನೂ ಕೊಂದುಕೊಂಡು ಕೋಲ ಕಟ್ಟುವರ ಮೇಲೆ ಮುಗಿಬಿದ್ದಿದ್ದ ಭೂಮಾಲೀಕರ ಪಡೆಯವರನ್ನೂ ಕೊಲ್ಲುತ್ತಾನೆ..</p>



<p style="font-size:20px">ಕರಾವಳಿಯ ನೆಲಮೂಲದ ಭೂತಗಳಲ್ಲಿರುವ ಮುಸ್ಲಿಂ ಭೂತಗಳಲ್ಲೊಂದಾದ ಬೊಬ್ಬರಿಯ ದೈವದ ಪ್ರತೀಕದಂತೆ ಈ ಗರ್ನಲ್ ಸಾಬು ಕಾಣುತ್ತಾನೆ. ಈ ಗರ್ನಲ್ ಸಾಬ ಜೊತೆ ನಿಲ್ಲುವುದು ಪಂಚಗವ್ಯದ ಭೂಮಾಲೀಕನೊಡನೆ ಅಲ್ಲ.. ಕೋಲ ಕಟ್ಟುವ ಶ್ರಮಿಕರ ಜೊತೆ. ದೈವ ನರ್ತಕರ ಪರಂಪರೆಗೆ ಜೀವ ಕೊಡುವುದರ ಮೂಲಕ ಕರಾವಳಿಯ ಶ್ರಮಿಕರು ಮತ್ತು ಮುಸ್ಲಿಮರ ಪರಂಪರಾನುಗತ ಸಹಬಾಳ್ವೆಗೆ ಈ ಗರ್ನಲ್ ಸಾಬನ ಪಾತ್ರ ಮತ್ತದರ ಅಂತ್ಯ ಕನ್ನಡಿಯಂತೆ ನಿಲ್ಲುತ್ತದೆ..</p>



<figure class="wp-block-image size-full"><img loading="lazy" decoding="async" width="800" height="450" src="https://peepalmedia.com/wp-content/uploads/2022/10/image-14.png" alt="" class="wp-image-8927" srcset="https://peepalmedia.com/wp-content/uploads/2022/10/image-14.png 800w, https://peepalmedia.com/wp-content/uploads/2022/10/image-14-300x169.png 300w, https://peepalmedia.com/wp-content/uploads/2022/10/image-14-768x432.png 768w, https://peepalmedia.com/wp-content/uploads/2022/10/image-14-150x84.png 150w, https://peepalmedia.com/wp-content/uploads/2022/10/image-14-696x392.png 696w" sizes="auto, (max-width: 800px) 100vw, 800px" /></figure>



<p style="font-size:20px">ಕಾಂತಾರದಲ್ಲಿ ರಿಷಬ್‌ ಶೆಟ್ಟಿಯವರಲ್ಲದೆ ರಾಜ್‌ ಬಿ.ಶೆಟ್ಟಿಯವರ ಕೈಚಳಕವೂ ಅಲ್ಲಲ್ಲಿ ಇದೆ. ದೈವಕ್ಕೆ ಸಂಬಂಧಿಸಿದ ಸಂಭಾಷಣೆಯನ್ನು ರಾಜ್‌ ಬರೆದಿದ್ದಾರೆ. ಕೆಲವೊಂದು ಸಂಭಾಷಣೆಗಳನ್ನು ತುಳುವಿನಲ್ಲೇ ಉಳಿಸಿ, ಕನ್ನಡದಲ್ಲಿ ಸಬ್‌ ಟೈಟಲ್‌ ಹಾಕಲಾಗಿದೆ. ಸಿನಿಮ್ಯಾಟೋಗ್ರಾಫರ್‌ ಅರವಿಂದ ಕಶ್ಯಪ್‌ ಮತ್ತು ಸಂಗೀತ ನಿರ್ದೇಶಕ ಅಜನೀಷ್‌ ಲೋಕನಾಥ್‌ ಅವರಿಗೆ ಪೂರ್ಣ ಅಂಕಗಳು ಸಲ್ಲಬೇಕು. ವಿಕ್ರಮ್‌ ಮೋರೆಯ ಸಾಹಸ ನಿರ್ದೇಶನವೂ ಶಿಳ್ಳೆ ಗಿಟ್ಟಿಸುತ್ತದೆ. ನಟನೆಯಲ್ಲಿ ಅಚ್ಯುತ್‌ ಮತ್ತು ಕಿಶೋರ್‌ ಮನಗೆಲ್ಲುತ್ತಾರೆ.</p>



<p style="font-size:20px">ಕಾಂತಾರದ ಮತ್ತೊಂದು ಮಹತ್ವದ ಅಂಶವೆಂದರೆ ಇಲ್ಲಿನ ಸ್ತ್ರೀ ಪಾತ್ರಗಳು. ಅವು ಗಂಡಸಿನಷ್ಟೇ ಶಕ್ತಿಶಾಲಿಗಳು. ನಾಯಕನ ತಾಯಿ ಮತ್ತು ನಾಯಕಿ ಇಬ್ಬರ ಪಾತ್ರಪೋಷಣೆಯೂ ಸಹಜವಾಗಿದೆ ಮತ್ತು ಗಮನ ಸೆಳೆಯುತ್ತದೆ.</p>



<p style="font-size:20px">ಕೆಜಿಎಫ್‌ಎರಡು ಅವತರಣಿಕೆಗಳ ನಂತರ ಹೊಂಬಾಳೆ ಸಂಸ್ಥೆಯ ವಿಜಯ ಕಿರಗಂದೂರು ಮತ್ತೊಂದು ಸಿಕ್ಸರ್‌ ಬಾರಿಸಿದ್ದಾರೆ. ಕಾಂತಾರ ಈ ವರ್ಷದ ಅತಿದೊಡ್ಡ ಹಿಟ್ ಸಿನಿಮಾ ಆಗುವ ಎಲ್ಲ ಲಕ್ಷಣಗಳೂ ಇವೆ.</p>



<p style="font-size:20px">ಕಾಂತಾರದ ಅತಿದೊಡ್ಡ ಯಶಸ್ಸು ಏನೆಂದರೆ, ಇಂಥ ಜನಸಂಸ್ಕೃತಿಯನ್ನು ತೆರೆದಿಡುವ, ಮುಖ್ಯವಾಹಿನಿ ಮಾಧ್ಯಮಗಳು ಮುಚ್ಚಿಟ್ಟ ನಿರ್ಲಕ್ಷಿತರ ಕಥೆಗಳನ್ನು ಸಿನಿಮಾ ಮಾಡಿ ಗೆಲ್ಲುವ ಧೈರ್ಯವನ್ನು ಕನ್ನಡದ ನಿರ್ದೇಶಕರೂ, ನಿರ್ಮಾಪಕರೂ ಮಾಡಬಹುದು. ಬರುವ ದಿನಗಳಲ್ಲಿ ಕಾಂತಾರದಂಥ ಹಲವು ಧೈರ್ಯಶಾಲಿ ಯತ್ನಗಳನ್ನು ನಾವು ನೋಡಬಹುದು.</p>



<p style="font-size:20px">ಕಾಂತಾರದ ಕೊನೆಯಲ್ಲಿ ಪಂಜುರ್ಲಿ ದೈವ ಎಲ್ಲರ ಒಳಗೊಳ್ಳುವಿಕೆ, ಪರಸ್ಪರ ಪ್ರೀತಿ ಸೋದರತ್ವವನ್ನು ಸಾರುತ್ತದೆ. ಈ ಆಶಯ ಕರ್ನಾಟಕದಲ್ಲಿ ಇತರೆಲ್ಲ ಭಾಗಗಳಿಗಿಂತಲೂ ಮೊದಲು ಕರಾವಳಿಯಲ್ಲೇ ಈಡೇರಬೇಕು. ಹಾಗೇ ಆಗಲಿ ಎಂದು ಆಶಿಸೋಣ.</p>



<p class="has-text-align-right" style="font-size:20px">(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</p>



<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/10/WhatsApp-Image-2022-10-04-at-4.09.24-PM-1024x1018.jpeg" alt="" class="wp-image-8933" width="190" height="173"/></figure>



<p style="font-size:20px"><strong>ದಿನೇಶ್‌ ಕುಮಾರ್‌ ಎಸ್.ಸಿ</strong><br>ಪತ್ರಕರ್ತರು</p>



<p></p>



<p style="font-size:20px">🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ<br><a href="https://chat.whatsapp.com/G94DLKaJrsBH07M7DvkqRo">https://chat.whatsapp.com/G94DLKaJrsBH07M7DvkqRo</a></p>



<p></p>



<p></p>



<p style="font-size:20px"><mark style="background-color:rgba(0, 0, 0, 0)" class="has-inline-color has-vivid-red-color">ಇದನ್ನೂ ನೋಡಿ: </mark><mark style="background-color:rgba(0, 0, 0, 0)" class="has-inline-color has-vivid-purple-color">ಕೆಲವು ದೇವಸ್ಥಾನಗಳಿಗೆ ಹೋಗುವಾಗ ಅಂಗಿ &#8211; ಬನಿಯನ್‌ ತೆಗೆದು ಅರೆ ಬೆತ್ತಲಾಗಿ ಹೋಗಬೇಕು ಎಂಬ ನಿಯಮ ಯಾಕೆ ಬಂತು? ಇದರ ಹಿಂದೆ ಏನಾದರೂ ವೈಜ್ಞಾನಿಕ ಕಾರಣಗಳಿವೆಯೇ? ಈ ಕುರಿತು ಪತ್ರಕರ್ತ, ಲೇಖಕ ದಿನೇಶ್‌ ಕುಮಾರ್‌ ಎಸ್‌ ಸಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.</mark> </p>



<p style="font-size:20px"><a href="https://www.youtube.com/watch?v=1QoI-Wt6d6o&amp;t=7s">https://www.youtube.com/watch?v=1QoI-Wt6d6o&amp;t=7s</a></p>



<p></p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="1QoI-Wt6d6o"><iframe loading="lazy" title="ದೇವಸ್ಥಾನಗಳಲ್ಲಿ ಬಟ್ಟೆ ತೆಗೆದು ಹೋಗುವುದು ಸರಿಯೆ? | Is it right to remove shirt while entering temples?" width="696" height="392" src="https://www.youtube.com/embed/1QoI-Wt6d6o?start=7&#038;feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe></div>
</div></figure>
]]></content:encoded>
					
		
		
			</item>
	</channel>
</rss>
