<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>director Ranjith &#8211; Peepal Media</title>
	<atom:link href="https://peepalmedia.com/tag/director-ranjith/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 29 Oct 2024 09:25:16 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>director Ranjith &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕರ್ನಾಟಕದಲ್ಲಿ ನಟನಿಂದ ಮಲಯಾಳಂ ಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ</title>
		<link>https://peepalmedia.com/malayalam-director-ranjith-booked-for-sexually-assaulting-karnataka-actor/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 29 Oct 2024 09:16:41 +0000</pubDate>
				<category><![CDATA[ಅಪರಾಧ]]></category>
		<category><![CDATA[bengaluru]]></category>
		<category><![CDATA[director Ranjith]]></category>
		<category><![CDATA[malayalam]]></category>
		<category><![CDATA[Malayalam cinema]]></category>
		<category><![CDATA[Sexual assault]]></category>
		<guid isPermaLink="false">https://peepalmedia.com/?p=48018</guid>

					<description><![CDATA[ಬೆಂಗಳೂರು: ಕರ್ನಾಟಕದಲ್ಲಿ ನಟರೊಬ್ಬರು ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮಾಡಿ ದೂರು ದಾಖಲಿಸಿದ್ದಾರೆ. 31 ವರ್ಷದ ಈ ನಟನ ಈ ದೂರಿನ ಮೇಲೆ ಶನಿವಾರದಂದು ಬೆಂಗಳೂರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಎಫ್‌ಐಆರ್‌ನ ಪ್ರಕಾರ, 2012 ರಲ್ಲಿ ಬಾವುಟ್ಟಿಯುಡೆ ನಾಮತಿಲ್&#160;ಚಿತ್ರದ ಶೂಟಿಂಗ್‌ನಲ್ಲಿ ನಟ ಮಮ್ಮುಟ್ಟಿ ಅವರನ್ನು ಭೇಟಿ ಮಾಡಲು ಹೋದಾಗ ಕೇರಳದ ಕೋಝಿಕ್ಕೋಡ್‌ನಲ್ಲಿ ಬಾಲಕೃಷ್ಣನ್ ಅವರನ್ನು ಭೇಟಿಯಾಗಿದ್ದಾಗಿ ನಟ ಹೇಳಿಕೊಂಡಿದ್ದಾರೆ.&#160;ಈ ಚಲನಚಿತ್ರವನ್ನು ಬಾಲಕೃಷ್ಣನ್ ಬರೆದು ನಿರ್ದೇಶಿಸಿದ್ದರು. ಇದಾದ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ಕರ್ನಾಟಕದಲ್ಲಿ ನಟರೊಬ್ಬರು ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮಾಡಿ ದೂರು ದಾಖಲಿಸಿದ್ದಾರೆ.</p>



<p>31 ವರ್ಷದ ಈ ನಟನ ಈ ದೂರಿನ ಮೇಲೆ ಶನಿವಾರದಂದು ಬೆಂಗಳೂರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.</p>



<p><em>ಎಫ್‌ಐಆರ್‌ನ ಪ್ರಕಾರ, 2012 ರಲ್ಲಿ ಬಾವುಟ್ಟಿಯುಡೆ ನಾಮತಿಲ್</em>&nbsp;ಚಿತ್ರದ ಶೂಟಿಂಗ್‌ನಲ್ಲಿ ನಟ ಮಮ್ಮುಟ್ಟಿ ಅವರನ್ನು ಭೇಟಿ ಮಾಡಲು ಹೋದಾಗ ಕೇರಳದ ಕೋಝಿಕ್ಕೋಡ್‌ನಲ್ಲಿ ಬಾಲಕೃಷ್ಣನ್ ಅವರನ್ನು ಭೇಟಿಯಾಗಿದ್ದಾಗಿ ನಟ ಹೇಳಿಕೊಂಡಿದ್ದಾರೆ.&nbsp;ಈ ಚಲನಚಿತ್ರವನ್ನು ಬಾಲಕೃಷ್ಣನ್ ಬರೆದು ನಿರ್ದೇಶಿಸಿದ್ದರು.</p>



<p>ಇದಾದ ಬಳಿಕ, ಬಾಲಕೃಷ್ಣನ್ ಡಿಸೆಂಬರ್ 2012 ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಹೋಟೆಲ್‌ಗೆ ದೂರುದಾರರನ್ನು ಕರೆದಿದ್ದಾರೆ. ನಿರ್ದೇಶಕರು ಈ ನಟನಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.</p>



<p>ಆರಂಭದಲ್ಲಿ ಕೇರಳದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಆದರೆ ನಗರದ ಹೋಟೆಲ್‌ನಲ್ಲಿ ಘಟನೆ ನಡೆದಿರುವ ಕಾರಣ ಪ್ರಕರಣವನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದೆ.</p>



<p>ಈ ಘಟನೆಯು 2012 ರಲ್ಲಿ ನಡೆದಿದೆ ಎಂದು ಹೇಳಲಾಗಿದೆ ಆದರೆ ಮಲಯಾಳಂ ಚಲನಚಿತ್ರೋದ್ಯಮದ ಅನೇಕ ಕಲಾವಿದರ ಮೇಲೆ ಲೈಂಗಿಕ ಕಿರುಕುಳದ ಆರೋಪಗಳು ಹೇಮಾ ಕಮಿಟಿಯ ನಂತರ ಹೊರಬಂದಿರುವ ಹಿನ್ನೆಲೆಯಲ್ಲಿ ದೂರುದಾರರು ಈಗ ಈ ವಿಚಾರವನ್ನು ಹೊರಹಾಕಿದ್ದಾರೆ, ಕೇರಳದ ಈ ಬೆಳವಣಿಗೆ ತನಗೆ ಈ ಧೈರ್ಯ ನೀಡಿತು ಎಂದು ಅವರು ಹೇಳಿದ್ದಾರೆ.</p>



<p><u><a href="https://peepalmedia.com/233-page-report-of-hema-committee-kerala-high-court/">ಜಸ್ಟಿಸ್ ಹೇಮಾ ಸಮಿತಿಯ</a></u> ವರದಿಯ ಬಿಡುಗಡೆಯ ನಂತರ ತಮ್ಮ ಸಹೋದ್ಯೋಗಿಗಳ ಮೇಲೆ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿರುವ <u><a href="https://peepalmedia.com/metoo-shocks-in-mollywood/">ಮಲಯಾಳಂ ಚಲನಚಿತ್ರೋದ್ಯಮದ</a></u> ಹಲವಾರಲ್ಲಿ ಈ ನಟ ಕೂಡ ಸೇರಿದ್ದಾರೆ .<a href="https://scroll.in/latest/1072207/kerala-government-releases-2019-report-on-gender-inequality-in-malayalam-film-industry"></a></p>



<p>ಬಾಲಕೃಷ್ಣನ್ ವಿರುದ್ಧ ಅಸ್ವಾಭಾವಿಕ ಅಪರಾಧಗಳು ಮತ್ತು ಖಾಸಗಿತನದ ಉಲ್ಲಂಘನೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. &#8220;ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ&#8221; ಎಂದು ಅವರು ಹೇಳಿದರು.</p>



<p>ಆಗಸ್ಟ್‌ನಲ್ಲಿ, 2009 ರಲ್ಲಿ ನಟನೊಬ್ಬ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ನಂತರ&nbsp;<a href="https://scroll.in/latest/1072422/kerala-government-forms-panel-after-sexual-abuse-allegations-against-malayalam-film-industry-members">ಬಾಲಕೃಷ್ಣನ್ ಅವರು</a>&nbsp;ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.</p>



<p><em>ಪಲೇರಿ ಮಾಣಿಕ್ಯಂ: ಒರು ಪತಿರಕೋಲಪಾಠಕತಿಂತೆ ಕಥಾ</em>&nbsp;ಸಿನಿಮಾ ನಿರ್ಮಾಣವಾಗುತ್ತಿದ್ದಾಗ&nbsp;ನಿರ್ದೇಶಕರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿಯೊಬ್ಬರು ಆರೋಪಿಸಿದ್ದರು.</p>



<p>ಈ ಆರೋಪಗಳು ತನ್ನ ಮೇಲಿನ ಸಂಘಟಿತ ದಾಳಿಯ ಭಾಗವಾಗಿದೆ ಎಂದು ನಿರ್ದೇಶಕ ಆ ಸಮಯದಲ್ಲಿ ಹೇಳಿಕೊಂಡಿದ್ದರು.</p>



<p>&#8220;ಒಬ್ಬ ವ್ಯಕ್ತಿಯಾಗಿ ಆರೋಪವು ನನ್ನ ಮೇಲೆ ಉಂಟು ಮಾಡಿದ ಹಾನಿಯನ್ನು ತಕ್ಷಣವೇ ಸರಿಪಡಿಸಲು ಸಾಧ್ಯವಿಲ್ಲ&#8221; ಎಂದು ಅವರು ಹೇಳಿದ್ದರು. “ಆದರೂ, ಆರೋಪ ತಪ್ಪು ಎಂದು ನಾನು ಸಾಬೀತುಪಡಿಸಬೇಕಾಗಿದೆ. ಅದು ಸುಳ್ಳು ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುತ್ತೇನೆ. ಆಕೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾಳೆ. ಏನೇ ಆಗಲಿ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇನೆ,&#8221; ಎಂದು ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದರು.</p>



<p></p>
]]></content:encoded>
					
		
		
			</item>
	</channel>
</rss>
