<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>DSS &#8211; Peepal Media</title>
	<atom:link href="https://peepalmedia.com/tag/dss/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 25 Nov 2024 09:50:44 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>DSS &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಶೋಷಣೆ ಅಸಮಾನತೆ ವಿರುದ್ಧ, ಜಾತಿ ಧರ್ಮಗಳ ವಿರುದ್ಧ ಪ್ರಶ್ನೆ ಮಾಡಲು ಹುಟ್ಟಿದ್ದೆ ದಲಿತ ಚಳುವಳಿ &#8211; ಮಾವಳ್ಳಿ ಶಂಕರ್</title>
		<link>https://peepalmedia.com/dalit-movement-was-born-to-question-exploitation-inequality-caste-and-religion-mavalli-shankar/</link>
		
		<dc:creator><![CDATA[Murali Maluru]]></dc:creator>
		<pubDate>Mon, 25 Nov 2024 09:50:43 +0000</pubDate>
				<category><![CDATA[ರಾಜ್ಯ]]></category>
		<category><![CDATA[caste and religion - Mavalli Shankar]]></category>
		<category><![CDATA[DSS]]></category>
		<category><![CDATA[inequality]]></category>
		<category><![CDATA[mavalli shankar]]></category>
		<guid isPermaLink="false">https://peepalmedia.com/?p=49566</guid>

					<description><![CDATA[ನಗರದ ಸ್ವಾಭಿಮಾನ ಭವನದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ದ ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆ ಹಾಗೂ ಜಿಲ್ಲಾ ಸಮಿತಿ ಪುನರ್ ರಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದು ಒದಗಿದೆ ಒಂದು ಕಡೆ ಸಂವಿಧಾನ ಮತ್ತೊಂದು ಕಡೆ ಅಲಿಖಿತ ಸಂವಿಧಾನ ಇದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಇದ್ದರೂ ಸಹ ಧಾರ್ಮಿಕ ಭಯೋತ್ಪಾದನೆ ಅಂತಹ ಅಲಿಖಿತ ಸಂವಿಧಾನಗಳು ದಾಳಿ [&#8230;]]]></description>
										<content:encoded><![CDATA[
<p>ನಗರದ ಸ್ವಾಭಿಮಾನ ಭವನದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ದ ಜಿಲ್ಲಾ ಮಟ್ಟದ ಸರ್ವ ಸದಸ್ಯರ ಸಭೆ ಹಾಗೂ ಜಿಲ್ಲಾ ಸಮಿತಿ ಪುನರ್ ರಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.</p>



<p>ಇತ್ತೀಚಿನ ದಿನಗಳಲ್ಲಿ ದಲಿತ ಸಮುದಾಯಗಳು ಹೆಚ್ಚು ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬಂದು ಒದಗಿದೆ ಒಂದು ಕಡೆ ಸಂವಿಧಾನ ಮತ್ತೊಂದು ಕಡೆ ಅಲಿಖಿತ ಸಂವಿಧಾನ ಇದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಇದ್ದರೂ ಸಹ ಧಾರ್ಮಿಕ ಭಯೋತ್ಪಾದನೆ ಅಂತಹ ಅಲಿಖಿತ ಸಂವಿಧಾನಗಳು ದಾಳಿ ಮಾಡಿ ನಮ್ಮನ್ನು ಕುಗ್ಗಿಸುವಂತೆ ಮಾಡುತ್ತಿದೆ ಎಂದರೂ.</p>



<p>ವೈದಿಕ ಕೋಮುವಾದಿಗಳು ಹೆಚ್ಚಾಗುತ್ತಿದ್ದು ಸಂವಿಧಾನ ಪ್ರಜಾಪ್ರಭುತ್ವದ ಬಗ್ಗೆ ಸಂಪೂರ್ಣವಾಗಿ ನಾಶ ಮಾಡುವ ಕ್ರಿಯೆಯಲ್ಲಿ ಅವರು ತೊಡಗಿದ್ದಾರೆ ಈ ಬಗ್ಗೆ ಪ್ರತಿಯೊಂದು ಶೋಷಿತ ಸಮಾಜ ಅರಿತು ಅದರ ವಿರುದ್ಧ ಧನಿಯತ್ತಬೇಕು ಎಂದು ಕರೆ ನೀಡಿದರು.</p>



<p>ಒಂದು ಕಡೆ ಅಸಮಾನತೆ ಅಘಧವಾಗಿ ನಮ್ಮನ್ನು ಕಾಡುತ್ತಿದೆ. ಇನ್ನೊಂದು ಕಡೆ ದೇಶದ ಸಂಪತ್ತು ಕೆಲವೇ ಜನರ ಕಪಿಮುಷ್ಠಿಯಲ್ಲಿ ಸಿಲುಕಿ ಕೊಂಡಿದೆ. ಕೆಲವೇ ಕುಟುಂಬಗಳು ದೇಶದ ಸಂಪತ್ತನ್ನು ಲೂಟಿ ಮಾಡುತ್ತೇವೆ ಕೇಂದ್ರ ಸರಕಾರ ಅವರ ಪರ ನೀತಿಗಳನ್ನು ಜಾರಿ ಮಾಡಿದೆ ಎಂದರು.</p>



<p>ಕಳೆದ ಹತ್ತು ವರ್ಷಗಳಲ್ಲಿ ದೇಶ ಸಾಧಿಸುವ ಸಾಧನೆ ಸಂಪೂರ್ಣವಾಗಿ ಹಿನ್ನಡೆ ತಲುಪಿದೆ ಎಂಬುದನ್ನು ನಾವು ಸೂಚ್ಯಂಕಗಳ ಮೂಲಕ ಗಮನಿಸಬಹುದು. ಇವತ್ತಿನ ದಿನಗಳಲ್ಲಿ ಬಡತನ ಅತ್ಯಂತ ಕೆಳಮಟ್ಟಕ್ಕೆ ತಲುಪುತ್ತಿದೆ ಶಿಕ್ಷಣ ಕೈ ಎಟುಗದ ರೀತಿಯಲ್ಲಿ ನಡೆಯುತ್ತಿದ್ದು ಮಹಿಳೆಯರ ಮೇಲಿನ ದೌರ್ಜನ್ಯಗಳು ಶೋಷಿತ ಸಮುದಾಯಗಳ ಮೇಲಿನ ದೌರ್ಜನ್ಯ ತೀವ್ರವಾಗಿ ನಡೆಯುತ್ತಿದೆ ಎಂದರು.</p>



<p>ಹಾಗಾಗಿ ಪ್ರತಿಯೊಬ್ಬ ಹಿಂದುಳಿದ ಸಮುದಾಯಗಳು, ಮಹಿಳೆಯರು, ಬಡತನದಲ್ಲಿರುವ ಮಕ್ಕಳು ಕೈಜೋಡಿಸಿ ಸಂಘಟನೆಯನ್ನು ಕಟ್ಟುವ ಮೂಲಕ ಸಮಸ್ಯೆಗಳನ್ನು ಎದುರಿಸಬೇಕು ಎಂದು ಕಿವಿಮಾತು ಹೇಳಿದರು.</p>



<p>ಕಾರ್ಯಕ್ರಮದಲ್ಲಿ ಅಂತರ್ರಾಷ್ಟ್ರೀಯ ಚಿತ್ರ ಕಲಾವಿದ ಕೆ ಟಿ ಶಿವಪ್ರಸಾದ್, ಡಿಎಸ್ಎಸ್ ಅಂಬೇಡ್ಕರ್ ವಾದದ ಜಿಲ್ಲಾ ಸಂಚಾಲಕ ಬೇಲೂರು ಲಕ್ಷ್ಮಣ್, ವಿಭಜಿಯ ಸಂಚಾಲಕ ಆಲೇಶಪ್ಪ, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿ ಸುಮದುದ್ದ, ಡಾಕ್ಟರ್ ಕೃಷ್ಣ ಹತ್ನಿ, ಮಲ್ಲಿಗೆವಾಳುದೇವಪ್ಪ ಇತರರು ಹಾಜರಿದ್ದರು.</p>
]]></content:encoded>
					
		
		
			</item>
		<item>
		<title>ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡರೆ ನಾವು ಸುಮ್ಮನಿರಲ್ಲ: DSS ಒಕ್ಕೂಟ</title>
		<link>https://peepalmedia.com/if-funds-meant-for-dalits-are-used-for-guarantees-we-will-not-be-idle-dss-union/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 20 Jul 2024 12:21:04 +0000</pubDate>
				<category><![CDATA[ರಾಜ್ಯ]]></category>
		<category><![CDATA[bengalure]]></category>
		<category><![CDATA[dalitha]]></category>
		<category><![CDATA[DSS]]></category>
		<category><![CDATA[gyarantee]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=42521</guid>

					<description><![CDATA[ಬೆಂಗಳೂರು: ದಲಿತರಿಗೆ ಮೀಸಲಿಟ್ಟ ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡರೆ ನಾವು ಸುಮ್ಮನಿರುವುದಿಲ್ಲ, ಹೋರಾಟ ಮಾಡಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಮುಖಂಡರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ಮುಖಂಡರು “ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ನಿರ್ಧರಿಸಿದ ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಮೀಸಲು ಹಣವನ್ನು ಹಿಂಪಡೆಯಬೇಕು ಮತ್ತು ದಲಿತ ಸಮುದಾಯದ ಇತರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು. ಹಿರಿಯ ಪತ್ರಕರ್ತ ಮತ್ತು ದಲಿತ [&#8230;]]]></description>
										<content:encoded><![CDATA[
<p>ಬೆಂಗಳೂರು: ದಲಿತರಿಗೆ ಮೀಸಲಿಟ್ಟ ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡರೆ ನಾವು ಸುಮ್ಮನಿರುವುದಿಲ್ಲ, ಹೋರಾಟ ಮಾಡಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಮುಖಂಡರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.</p>



<p>ಈ ಕುರಿತು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ಮುಖಂಡರು “ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲು ನಿರ್ಧರಿಸಿದ ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಮೀಸಲು ಹಣವನ್ನು ಹಿಂಪಡೆಯಬೇಕು ಮತ್ತು ದಲಿತ ಸಮುದಾಯದ ಇತರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಆಗ್ರಹಿಸಿದರು. </p>



<p>ಹಿರಿಯ ಪತ್ರಕರ್ತ ಮತ್ತು ದಲಿತ ಸಮುದಾಯದ ಮುಖಂಡ ಇಂದೂದರ ಹೊನ್ನಾಪುರ ಮಾತನಾಡಿ, ಭಾರತದ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಿ ಸರ್ವಾಧಿಕಾರ ಸ್ಥಾಪಿಸಲು ಹೊರಟಿರುವ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯನ್ನು ಸೋಲಿಸದೆ ದಲಿತರಿಗೆ ಬೇರೆ ದಾರಿಯೇ ಇರಲಿಲ್ಲ. ಹಾಗಾಗಿ, ರಾಜ್ಯ, ರಾಷ್ಟ್ರದಲ್ಲಿ ಕೋಮುವಾದಿ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲು ದಲಿತರು ಅನಿವಾರ್ಯವಾಗಿ ಕಾಂಗ್ರೆಸ್‌ ಪಕ್ಷದೊಂದಿಗೆ ನಿಂತಿದ್ದಾರೆ.  ಬಹಿರಂಗವಾಗಿಯೇ ದಲಿತ ಸಂಘಟನೆಗಳು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷ ಗೆದ್ದು ಸರ್ಕಾರ ರಚಿಸಿದೆ ಎಂದರು. </p>



<p> 2023ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸಿರುವ ಕಾಂಗ್ರೆಸ್, ದಲಿತರ ಕೆಲವು ಬೇಡಿಕೆಗಳನ್ನು ಈಡೇರಿಸುವಲ್ಲಿ ಹೆಜ್ಜೆ ಇಟ್ಟಿತಾದರೂ, ಕೆಲವೇ ದಿನಗಳಲ್ಲಿ ಭ್ರಮನಿರಸನ ಉಂಟು ಮಾಡಿದೆ. ಗ್ಯಾರಂಟಿ ಕಾರ್ಯಕ್ರಮಗಳಿಗೆ ದಲಿತರಿಗೆ ಮೀಸಲಿಟ್ಟ ಹಣವನ್ನು ಬಳಸಿಕೊಂಡು ದಲಿತರ ಬೆನ್ನಿಗೆ ಚೂರಿ ಹಾಕಿದೆ ಎಂದು ಅವರು ದೂರಿದರು. </p>



<p>ಬ್ಯಾಕ್‌ಲಾಗ್ ನೇಮಕಾತಿಯಿಂದ ಹಿಡಿದು, ಇತ್ತೀಚಿನ ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಅನುದಾವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವವರೆಗೂ ಸರ್ಕಾರ ವಂಚನೆ ಮುಂದುವರೆಸಿದೆ. ಬ್ಯಾಕ್‌ಲಾಗ್ ಹುದ್ದೆ ತುಂಬುತ್ತಿಲ್ಲ, ದಲಿತರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಅಡಚಣೆ ಮಾಡುತ್ತಿದೆ. ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ ತರುತ್ತಿಲ್ಲ. ಈ ಕುರಿತು ದಲಿತ ಜನಸಮೂಹದಲ್ಲಿ ತೀವ್ರ ಅಸಮಾಧಾನ ಮೂಡಿದ್ದು, ಕಾಂಗ್ರೆಸ್ ವಿರುದ್ದ ತಿರುಗಿ ಬೀಳುವ ಹಂತಕ್ಕೆ ಬಂದು ಮುಟ್ಟಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನಡೆಯನ್ನು ನಾವು ಸಹಿಸುವುದಿಲ್ಲ. ದಲಿತರಿಗೆ ಮಾಡಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ ಬೃಹತ್ ಹೋರಾಟ ಆರಂಭಿಸುತ್ತೇವೆ ಎಂದು ಡಿಎಸ್‌ಎಸ್‌ ಮುಖಂಡ ಮಾವಳ್ಳಿ ಶಂಕತ್‌ ಎಚ್ಚರಿಕೆ ನೀಡಿದರು. ಡಿಎಸ್‌ಎಸ್‌ ಮುಖಂಡರಾದ ವೆಂಕಟೇಶ್‌, ಮೋಹನರಾಜ್‌ ಮತ್ತಿತರು ಉಪಸ್ಥಿತರಿದ್ದರು. </p>



<p><strong>ಒಕ್ಕೂಟದ ಹಕ್ಕೋತ್ತಾಯಗಳ ಪಟ್ಟಿ ಈ ಕೆಳಗಿನಂತಿದೆ</strong></p>



<ol class="wp-block-list">
<li>ಎಸ್‌ಸಿ, ಎಸ್‌ಟಿ ಬ್ಯಾಕ್‌ಲಾಗ್ ಉದ್ಯೋಗಗಳನ್ನು ಕೂಡಲೇ ಭರ್ತಿ ಮಾಡಬೇಕು.</li>
</ol>



<p>2. ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಮೀಸಲು ಹಣವನ್ನು ಯಾವುದೇ ಕಾರಣಕ್ಕೂ ಇತರೆ ಯೋಜನೆಗಳಿಗೆ ಬಳಸಬಾರದು. ಈಗಾಗಲೇ ಗ್ಯಾರಂಟಿ ಯೋಜನೆಗೆ ಬಳಸಿರುವ ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಮೀಸಲು ಹಣವನ್ನು ಹಿಂಪಡೆಯಬೇಕು. ಕಳೆದ ಸಾಲಿನ 11 ಸಾವಿರ ಕೋಟಿ ರೂ. ಮತ್ತು ಈ ಸಾಲಿನ 14 ಸಾವಿರ ಕೋಟಿ ರೂ. ಹಣವನ್ನು ಈ ಕೂಡಲೇ ಹಿಂಪಡೆಯಬೇಕು.</p>



<p>3. ಎಸ್‌ಸಿ, ಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆಯ ಯೋಜನೆಗಳ ಜಾರಿಗೆ ಕೂಡಲೇ ಏಕಗವಾಕ್ಷಿ ಪದ್ದತಿಯನ್ನು ಜಾರಿಗೊಳಿಸಬೇಕು.</p>



<p>4. ಹೊರಗುತ್ತಿಗೆ ನೇಮಕಾತಿಯಲ್ಲಿ ಕಡ್ಡಾಯವಾಗಿ ರೋಸ್ಟರ್ ಪದ್ದತಿಗನುಗುಣವಾಗಿ ಮೀಸಲಾತಿ ನೀಡಬೇಕು</p>



<p>5. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೆರಿಟ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಧನಕ್ಕೆ ವಿಧಿಸಿರುವ ಆದಾಯ ಹಾಗೂ ಅಂಕಗಳ ಮಿತಿಯನ್ನು ರದ್ದುಗೊಳಿಸಿ, ಈ ಹಿಂದೆ ನಿಗದಿಪಡಿಸಿದಂತೆ ಮರು ಜಾರಿಗೊಳಿಸಬೇಕು.</p>



<p>6. ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡುತ್ತಿರುವ ಎಲ್ಲಾ ಅನುದಾನಗಳ ನಿರ್ವಹಣೆ ಮತ್ತು ಪರಿವೀಕ್ಷಣೆ ಮಾಡಲು ಸ್ವತಂತ್ರ ಕಾವಲು ಸಮಿತಿ ನೇಮಿಸಬೇಕು ಹಾಗೂ ಅದಕ್ಕೆ ನ್ಯಾಯಾಂಗ ಅಧಿಕಾರ ನೀಡಬೇಕು.</p>



<p>7. ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಚಿಸುವ ದಲಿತ ವಿದ್ಯಾರ್ಥಿಗಳಿಗೆ ‘ಪ್ರಬುದ್ದ ಯೋಜನೆ’ ಮೂಲಕ ನೀಡುತ್ತಿರುವ ನಿರ್ವಹಣ ವೆಚ್ಚದ ಮಿತಿಯನ್ನು ಸಡಿಲಗೊಳಿಸಿ, ವಾಸ್ತವ ವೆಚ್ಚವನ್ನು ನೀಡಬೇಕು. ಈ ಹಿಂದಿನಂತೆ ಎರಡು ಕೋಟಿಗಳವರೆಗೆ ನೀಡುತ್ತಿರುವ ಅನುದಾನವನ್ನು ಮುಂದುವರೆಸಬೇಕು.</p>



<p>8. ವಿದೇಶದಲ್ಲಿ ಪಿಹೆಚ್‌ಡಿ ಪದವಿ ಪಡೆಯಲು ನೀಡುತ್ತಿದ್ದ ಧನ ಸಹಾಯ ರದ್ದುಗೊಳಿಸಿರುವುದನ್ನು ಕೂಡಲೇ ಹಿಂಪಡೆದು, ಹಿಂದಿ ಪದ್ದತಿಯನ್ನು ಮುಂದುವರೆಸಬೇಕು.</p>



<p>9. ವಸತಿ ಶಾಲೆಗಳ ಪ್ರವೇಶಕ್ಕೆ ನಿಗದಿಪಡಿಸಿರುವ ಪ್ರವೇಶ ಪರೀಕ್ಷೆಗಳನ್ನು ರದ್ದುಪಡಿಸಿ ಸಾಮಾಜಿಕ ಹಾಗೂ ಅರ್ಥಿಕ ಮಾನದಂಡದ ಮೇಲೆ ಪ್ರವೇಶಾತಿ ನೀಡಬೇಕು. ಇತ್ಯಾದಿ&#8230; </p>
]]></content:encoded>
					
		
		
			</item>
		<item>
		<title>ನಮ್ಮ ಸಂವಿಧಾನ ಮನುವಾದಿಗಳ ಕೈಯಲ್ಲಿದೆ ; ದಸಂಸ ವೇದಿಕೆಯಲ್ಲಿ ಸಿದ್ದರಾಮಯ್ಯ</title>
		<link>https://peepalmedia.com/our-constitution-is-in-the-hands-of-petitioners-siddaramaiah-on-dss-stage/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 09 Jun 2023 12:05:21 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[Ambedkar]]></category>
		<category><![CDATA[DSS]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Siddaramaiah]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=22237</guid>

					<description><![CDATA[ಆರೆಸ್ಸೆಸ್ ಸರಸಂಘಚಾಲಕ ಗೋಲ್ವಲ್ಕರ್ ಅಂಬೇಡ್ಕರ್ ಸಂವಿಧಾನ ಸರಿಯಿಲ್ಲ ಎಂದಿದ್ದರು. ಸಾವರ್ಕರ್ ಅಂಬೇಡ್ಕರ್ ಬರೆದ ಸಂವಿಧಾನ ಒಪ್ಪಿರಲಿಲ್ಲ. ಆದರೆ ಸಾವರ್ಕರ್ ಸಿದ್ಧಾಂತ ಒಪ್ಪುವ ಬಿಜೆಪಿ ಅಂಬೇಡ್ಕರ್ ಅವರನ್ನು ಗೌರವಿಸುವ ನಾಟಕ ಮಾಡುತ್ತಿದೆ. ಅವರದು ಸಾವರ್ಕರ್ ಸಿದ್ಧಾಂತವೋ, ಅಂಬೇಡ್ಕರ್ ಸಿದ್ದಾಂತವೋ ಎಂಬುದು ಸ್ಪಷ್ಟಪಡಿಸಲಿ. ಈ ಹಿಪೋಕ್ರಸಿ ಅಗತ್ಯವಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ &#8220;ಭೀಮ ಸಂಕಲ್ಪ&#8221; ಸಮಾವೇಶದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನ ಟೌನ್ ಹಾಲ್ ನಲ್ಲಿ ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ [&#8230;]]]></description>
										<content:encoded><![CDATA[
<p>ಆರೆಸ್ಸೆಸ್ ಸರಸಂಘಚಾಲಕ ಗೋಲ್ವಲ್ಕರ್ ಅಂಬೇಡ್ಕರ್ ಸಂವಿಧಾನ ಸರಿಯಿಲ್ಲ ಎಂದಿದ್ದರು. ಸಾವರ್ಕರ್ ಅಂಬೇಡ್ಕರ್ ಬರೆದ ಸಂವಿಧಾನ ಒಪ್ಪಿರಲಿಲ್ಲ. ಆದರೆ ಸಾವರ್ಕರ್ ಸಿದ್ಧಾಂತ ಒಪ್ಪುವ ಬಿಜೆಪಿ ಅಂಬೇಡ್ಕರ್ ಅವರನ್ನು ಗೌರವಿಸುವ ನಾಟಕ ಮಾಡುತ್ತಿದೆ. ಅವರದು ಸಾವರ್ಕರ್ ಸಿದ್ಧಾಂತವೋ, ಅಂಬೇಡ್ಕರ್ ಸಿದ್ದಾಂತವೋ ಎಂಬುದು ಸ್ಪಷ್ಟಪಡಿಸಲಿ. ಈ ಹಿಪೋಕ್ರಸಿ ಅಗತ್ಯವಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ &#8220;ಭೀಮ ಸಂಕಲ್ಪ&#8221; ಸಮಾವೇಶದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.</p>



<p>ಬೆಂಗಳೂರಿನ ಟೌನ್ ಹಾಲ್ ನಲ್ಲಿ ದಲಿತ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, &#8216;ಈ ಭೀಮ ಸಂಕಲ್ಪ ಸಮಾವೇಶದಲ್ಲಿ ಅತ್ಯಂತ ಸಂತೋಷದಿಂದ ಭಾಗವಹಿಸಿದ್ದೇನೆ. ಕಳೆದ ಚುನಾವಣೆಯಲ್ಲಿ ನಮ್ಮ ಗೆಲುವಿಗೆ ಕಾರಣಕರ್ತರಾದ ನಿಮಗೆ ಹೃದಯ ತುಂಬಿದ ಧನ್ಯವಾದಗಳನ್ನು ಅರ್ಪಿಸುತ್ತೇನೆ‌ ಎಂದರು.</p>



<p>ಬಾಬಾಸಾಹೇಬ್ ಅಂಬೇಡ್ಕರ್ ಅವರು ಬಹಳ ಕಠಿಣವಲ್ಲದ ತಿದ್ದುಪಡಿಗೆ ಅವಕಾಶ ಇರುವ ಒಂದು ಯೋಗ್ಯವಾದ ಸಂವಿಧಾನವನ್ನು ಕೊಟ್ಟಿದ್ದಾರೆ. ಅವರು ಒಂದು ಮಾತು ಹೇಳಿದ್ದಾರೆ. ಈ ಸಂವಿಧಾನ ಯೋಗ್ಯವಾಗಿದೆ. ಆದರೆ ಅದು ಯಾರ ಕೈಯಲ್ಲಿರುತ್ತದೆ ಎಂಬುದು ಮುಖ್ಯ ಎಂದಿದ್ದಾರೆ‌.</p>



<p>ಕೇಂದ್ರ ಮತ್ತು ರಾಜ್ಯಗಳಲ್ಲಿ ಸಂವಿಧಾ‌ನಕ್ಕೆ ವಿರುದ್ಧವಿರುವ ಜನರೂ ಅಧಿಕಾರಕ್ಕೆ ಬಂದಿದ್ದಾರೆ. ಅವರು ಅಧಿಕಾರದಲ್ಲಿದ್ದುಕೊಂಡೇ ಸಂವಿಧಾನದ ವಿರುದ್ಧ ಮಾತಾಡ್ತಾರೆ. ಅನಂತಕುಮಾರ್ ಹೆಗಡೆಯಂತಹ ಒಬ್ಬ ಕೇಂದ್ರ ಸಚಿವ ನಾವು ಬಂದಿರುವುದೇ ಸಂವಿಧಾನ ಬದಲಿಸಲು ಎಂದಾಗ ಅಮಿತ್ ಶಾ ಆಗಲೀ, ನರೇಂದ್ರ ಮೋದಿ ಆಗಲೀ ಆ ವ್ಯಕ್ತಿಯನ್ನು ಸಚಿವ ಸ್ಥಾನದಿಂದ ತೆಗೆದು ಹಾಕಲಿಲ್ಲ. ಅವರಿಗೆ ಗೊತ್ತಿದ್ದೇ ಹಾಗೆ ಮಾಡಲು ಅವಕಾಶ ಕೊಟ್ಟು ಸುಮ್ಮನಾದರು. ಆದರೆ ನಾವು ಸುಮ್ಮನಿರುವುದಿಲ್ಲ. ಈ ಸಂವಿಧಾನ ಉಳಿಯಲೇ ಬೇಕು. ನೀವೆಲ್ಲಾ ಪ್ರತಿಜ್ಞೆ ಮಾಡಿ ಯಾರು ಸಂವಿಧಾನ ಬದಲಾವಣೆ ಮಾಡುತ್ತೇವೆಂದರೋ ಅವರನ್ನೇ ಬದಲಾವಣೆ ಮಾಡಿದ್ದೀರಿ. ನಿಮಗೆ ಧನ್ಯವಾದಗಳು ಎಂದು ಹೇಳಿದರು.</p>



<figure class="wp-block-image size-large"><img fetchpriority="high" decoding="async" width="684" height="1024" src="https://peepalmedia.com/wp-content/uploads/2023/06/IMG-20230609-WA0019-684x1024.jpg" alt="" class="wp-image-22239" srcset="https://peepalmedia.com/wp-content/uploads/2023/06/IMG-20230609-WA0019-684x1024.jpg 684w, https://peepalmedia.com/wp-content/uploads/2023/06/IMG-20230609-WA0019-200x300.jpg 200w, https://peepalmedia.com/wp-content/uploads/2023/06/IMG-20230609-WA0019-768x1150.jpg 768w, https://peepalmedia.com/wp-content/uploads/2023/06/IMG-20230609-WA0019-150x225.jpg 150w, https://peepalmedia.com/wp-content/uploads/2023/06/IMG-20230609-WA0019-300x449.jpg 300w, https://peepalmedia.com/wp-content/uploads/2023/06/IMG-20230609-WA0019-696x1042.jpg 696w, https://peepalmedia.com/wp-content/uploads/2023/06/IMG-20230609-WA0019.jpg 855w" sizes="(max-width: 684px) 100vw, 684px" /></figure>



<p>ಕಾಂಗ್ರೆಸ್ ಪಕ್ಷ ಎಲ್ಲಾ ಮಾಡಿದೆ ಎಂದು ನಾನು ಹೇಳಲ್ಲ. ಆದರೆ ಕಾಂಗ್ರೆಸ್ ಪಕ್ಷ ಯಾವತ್ತೂ ಸಂವಿಧಾನಕ್ಕೆ ವಿರುದ್ಧ ಹೋಗಲ್ಲ. ಕೋಮುವಾದಿಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಹಾಗೆಯೇ ಇಂದಿಗೂ ಅಸಮಾನತೆ ದೇಶದಲ್ಲಿದೆ. ನವೆಂಬರ್ 25 ರ 1949 ರಂದು ಅಂಬೇಡ್ಕರ್ ಸಂವಿಧಾನಸಭೆಯಲ್ಲಿ ಐತಿಹಾಸಿಕ ಭಾಷಣ ಮಾಡಿದ್ದಾರೆ. ಅದನ್ನು ಎಲ್ಲರೂ ಓದಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆ ಭಾಷಣದಲ್ಲಿ ಬಾಬಾಸಾಹೇಬ್‌ ಅಂಬೇಡ್ಕರ್‌ ಅವರು, ನಾವೇನೋ ಒಳ್ಳೆಯ ಸಂವಿಧಾನ ಮಾಡಿದ್ದೇವೆ. ಆದರೆ ಅದನ್ನು ಯಾರು ಜಾರಿ ಮಾಡುತ್ತಾರೆ ಅವರು ಒಳ್ಳೆಯವರಾಗಿದ್ದರೆ ಮಾತ್ರ ಒಳ್ಳೆಯದಾಗುತ್ತದೆ. ಅಕಸ್ಮಾತ್‌ ಸಂವಿಧಾನ ದುಷ್ಟರ ಮೂಲಕ ಜಾರಿಯಾದರೆ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಾರೆಟ.  ಅಂಬೇಡ್ಕರ್‌ ಅವರು ಸಂವಿಧಾನ ಜಾರಿಯಾಗುವ ಮೂಲಕ ಭಾರತೀಯರು ವೈರುಧ್ಯದ ಯುಗಕ್ಕೆ ಕಾಲಿಟ್ಟಿದ್ದೇವೆಂದೂ, ಶತಶತಮಾನಗಳ ಕಾಲ ಸಮಾಜವನ್ನು ಆಳಿರುವ ಮನುಸ್ಮೃತಿ ಪ್ರಣೀತ ಅಸಮಾನತೆ ಸಮಾಜದಲ್ಲಿದೆ, ಆದರೆ ನಮ್ಮ ಸಂವಿಧಾನ ರಾಜಕೀಯ ಸಮಾನತೆ ಹೇಳುತ್ತದೆ. ಈ ವೈರುಧ್ಯ ನೀಗಿಕೊಳ್ಳದೇ ಇದ್ದರೆ,  ಸಮಾಜದಲ್ಲಿ ಇರುವ ಅನ್ಯಾಯ ಸರಿಪಡಿಸದೇ ಹೋದರೆ ನಾವು ಶ್ರಮವಹಿಸಿ ಕಟ್ಟಿರುವ ಈ ಸೌಧವನ್ನೇ ದಮನಿತರು ಧ್ವಂಸ ಮಾಡುತ್ತಾರೆ. ಹಾಗಾಗಿ ಆದಷ್ಟು ಬೇಗನೇ ಈ ಸಾಮಾಜಿಕ ಅಸಮಾನತೆ ತೊಡೆದು ಹಾಕಬೇಕುಟ ಎಂದು ಎಚ್ಚರಿಕೆ ನೀಡಿದ್ದನ್ನು ನಾವು ಯಾರೂ ಮರೆಯಬಾರದು ಎಂದು ಸಿದ್ದರಾಮಯ್ಯ ತಿಳಿಸಿದರು. </p>



<p>ನಮ್ಮ ದೇಶದ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ಅಲ್ಲಿ ಚಲನೆ ಬೇಕು ಎಂದರೆ ಸಾಮಾಜಿಕ ಆರ್ಥಿಕ ಶಕ್ತಿ ಬರಬೇಕು. ಇದನ್ನು ಬಾಬಾಸಾಹೇಬ್ ಅಂಬೇಡ್ಕರ್ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಒಬ್ಬ ವ್ಯಕ್ತಿ- ಒಂದು ಓಟು ತತ್ವದ ರಾಜಕೀಯ ಸಮಾನತೆ ಇದೆ. ಆದರೆ ಒಬ್ಬ ವ್ಯಕ್ತಿ, ಒಂದು ಮೌಲ್ಯ ಆಗಬೇಕಂದರೆ ಸಾಮಾಜಿಕ, ರಾಜಕೀಯ ಪ್ರಜಾಪ್ರಭುತ್ವ ಜಾರಿಯಾಗಬೇಕು. ಇದು ಅಂಬೇಡ್ಕರ್ ಕಾಳಜಿಯಾಗಿತ್ತು.</p>



<p>ಮನುಸ್ಮೃತಿಯ ಬದಲಾವಣೆಯೇ ಸಮಾನತೆಯ ಸಂವಿಧಾನವಾಗಿದೆ. ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟಿರುವುದು ಬಿಜೆಪಿ. ಬಿಜೆಪಿ ಸೇರಿದವರು ಅಂಬೇಡ್ಕರ್ ಸಿದ್ದಾಂತ ಪ್ರತಿಪಾದಿಸುವುದಿಲ್ಲ. ಆರ್‌ ಎಸ್‌ ಎಸ್‌ ನ ಸರಸಂಘಚಾಲಕ ಮಾ.ಸ.ಗೋಲ್ವಾಲ್ಕರ್‌, ಹಿಂದೂ ಮಹಾಸಭಾದ ಅಧ್ಯಕ್ಷ ಸಾವರ್ಕರ್‌ ಇಬ್ಬರೂ ಅಂಬೇಢ್ಕರ್‌ ಬರೆದ ಸಂವಿಧಾನವನ್ನು ತಿರಸ್ಕರಿಸಿ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಆರೆಸ್ಸೆಸ್‌ ತನ್ನ ಪತ್ರಿಕೆ ಆರ್ಗನೈಸರ್‌ ನಲ್ಲಿ ಸಂವಿಧಾನವನ್ನು ತಿರಸ್ಕರಿಸುವ ಲೇಖನಗಳನ್ನು ಪ್ರಕಟಿಸಿತ್ತು. ಇಂದು ಕೆಲವರು ಬಿಜೆಪಿ ಪಕ್ಷವನ್ನು ಹುದ್ದೆಗಳಿಗಾಗಿ ಸೇರಿಕೊಳ್ಳುತ್ತಾರೆ. ಅವರೂ ಕೂಡ ಸಂವಿಧಾನ ವಿರೋಧಿಗಳು ಎಂದು ತೀರ್ಮಾನ ಮಾಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</p>



<p>ದಲಿತ ಸಂಘರ್ಷ ಸಮಿತಿ ನೀಡಿರುವ ಎಲ್ಲಾ ಬೇಡಿಕೆಗಳಿಗೆ ನಮ್ಮ ಒಪ್ಪಿಗೆ ಇದೆ. ಅಗತ್ಯ ಇರುವ ಕಾಯ್ದೆಗಳನ್ನು ತರೋಣ. ಜಾರಿಯಲ್ಲಿರುವ ಕೆಲವು ಕಾಯ್ದೆ ಕಾನೂನುಗಳಿಗೆ ನೀವು ಹೇಳಿದ ಬದಲಾವಣೆಗಳನ್ನು ತರೋಣ ಎಂದು ಸಿದ್ದರಾಮಯ್ಯ ಭರವಸೆ ನೀಡದರು.  ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಉಲ್ಲೇಖಿಸಿದ ಅವರು ಕೆಲವರು ಇದನ್ನೇ ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ. ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಮೇಲೆ 10% ಸೇರಿಸಿ ನೀಡುವುದರಲ್ಲಿ ತಪ್ಪೇನಿದೆ? ಗೃಹಲಕ್ಷ್ಮಿ ಯೋಜನೆ ಜನಸಂಖ್ಯೆಯ 85% ಕುಟುಂಬಗಳಿಗೆ ಅನ್ವಯವಾಗುತ್ತದೆ. 10 KG ಅಕ್ಕಿ ಬಡವರಿಗೆ ಅನುಕೂಲವಾಗುತ್ತದೆ. ಇಂದಿರಾ ಕ್ಯಾಂಟೀನ್ ಕೂಡಾ ಮತ್ತೆ ಶುರು ಮಾಡುತ್ತೇವೆ. ಇವೆಲ್ಲವೂ ಬಡವರಿಗೆ ಅನುಕೂಲ ಆಗುವಂತದ್ದು. ಇದಕ್ಕೆ ಬಿಜೆಪಿ ಅಪಸ್ವರ ಎತ್ತಿದೆ. ಆ ಮೂಲಕ ಬಿಜೆಪಿ ಬಡವರ ವಿರೋಧಿ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.</p>
]]></content:encoded>
					
		
		
			</item>
		<item>
		<title>ಸಂವಿಧಾನವೇ ನಮ್ಮ ಬೈಬಲ್, ಕುರಾನ್, ಭಗವದ್ಗೀತೆ ; ಡಿಸಿಎಂ ಡಿಕೆಶಿ</title>
		<link>https://peepalmedia.com/constitution-is-our-bible-quran-and-bhagavad-gita-d-k-sivakumar/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 09 Jun 2023 10:19:34 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[Ambedkar]]></category>
		<category><![CDATA[DK SHIVKUMAR]]></category>
		<category><![CDATA[DSS]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=22229</guid>

					<description><![CDATA[&#8220;ಕಾಂಗ್ರೆಸ್ ಗೂ ಸಂವಿಧಾನಕ್ಕೂ ಒಂದು ಅವಿನಾಭಾವ ಸಂಬಂಧ. ಹಾಗಾಗಿಯೇ ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಗಳಿಗೆ ಬದ್ದವಾಗಿ ಸದಾ ಹೋರಾಡುತ್ತದೆ. ಆ ಕಾರಣದಿಂದ ಸಂವಿಧಾನವೇ ನಮ್ಮ ಬೈಬಲ್, ಸಂವಿಧಾನವೇ ನಮ್ಮ ಕುರಾನ್, ಸಂವಿಧಾನವೇ ನಮ್ಮ ಭಗವದ್ಗೀತೆ&#8221; ಎಂಬುದಾಗಿ ಬೆಂಗಳೂರಿನ ಟೌನ್ ಹಾಲ್ ನಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ &#8220;ಭೀಮ ಸಂಕಲ್ಪ&#8221; ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನನ್ನ ವಿದ್ಯಾರ್ಥಿ ಜೀವನದಿಂದಲೂ ನಾನು ದಲಿತ ಸಂಘರ್ಷ ಸಮಿತಿಯ ಹೋರಾಟವನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ. ನೀವೆಲ್ಲ ಬೀದಿಯಲ್ಲಿ ಹೋರಾಡ್ತಾ ಇದೀರ. [&#8230;]]]></description>
										<content:encoded><![CDATA[
<p>&#8220;ಕಾಂಗ್ರೆಸ್ ಗೂ ಸಂವಿಧಾನಕ್ಕೂ ಒಂದು ಅವಿನಾಭಾವ ಸಂಬಂಧ. ಹಾಗಾಗಿಯೇ ಕಾಂಗ್ರೆಸ್ ಪಕ್ಷ ಸಂವಿಧಾನದ ಆಶಯಗಳಿಗೆ ಬದ್ದವಾಗಿ ಸದಾ ಹೋರಾಡುತ್ತದೆ. ಆ ಕಾರಣದಿಂದ ಸಂವಿಧಾನವೇ ನಮ್ಮ ಬೈಬಲ್, ಸಂವಿಧಾನವೇ ನಮ್ಮ ಕುರಾನ್, ಸಂವಿಧಾನವೇ ನಮ್ಮ ಭಗವದ್ಗೀತೆ&#8221; ಎಂಬುದಾಗಿ ಬೆಂಗಳೂರಿನ ಟೌನ್ ಹಾಲ್ ನಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ &#8220;ಭೀಮ ಸಂಕಲ್ಪ&#8221; ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.</p>



<p><br>ನನ್ನ ವಿದ್ಯಾರ್ಥಿ ಜೀವನದಿಂದಲೂ ನಾನು ದಲಿತ ಸಂಘರ್ಷ ಸಮಿತಿಯ ಹೋರಾಟವನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದೇನೆ. ನೀವೆಲ್ಲ ಬೀದಿಯಲ್ಲಿ ಹೋರಾಡ್ತಾ ಇದೀರ. ದಸಂಸ ನಾಯಕರು ಸಮಾಜದ ಬದಲಾವಣೆಗೆ ನಿರಂತರವಾಗಿ ಹೋರಾಟ ನಡೆಸುತ್ತಿರುವವರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ದೀಕ್ಷೆ ಉಳಿಸಿಕೊಳ್ಳು ನಿಮ್ಮ ಹೋರಾಟ ಯಶಸ್ವಿಯಾಗಲಿ ಎಂದು ಹೇಳಿದ್ದಾರೆ.</p>



<p><br>ನಾವು ಒಂದು ಕಾಲದಲ್ಲಿ ಸಂವಿಧಾನ ಪೀಠಿಕೆಯನ್ನು 11 ಸಾವಿರ ಪಂಚಾಯ್ತಿಗಳಲ್ಲಿ ಬೋಧಿಸುವ ಪ್ರತಿಜ್ಞೆ ಕೈಗೊಂಡಿದ್ವಿ. ಬಾಬಾ ಸಾಹೇಬರು ನಮಗೆ ಸಂವಿಧಾನದ ಮೂಲಕ ಗೌರವದ ಬದುಕನ್ನು ತಂದುಕೊಟ್ಟಿದ್ದಾರೆ. ಆ ಮೂಲಕ ನಾವು ಬಾಬಾಸಾಹೇಬರನ್ನು ದೇವರಂತೆ ಕಾಣುತ್ತೇವೆ. ಅಂಬೇಡ್ಕರ್ ಅಂದರೆ ಜ್ಞಾನ, ಅಂಬೇಡ್ಕರ್ ಅಂದರೆ ಸಮಾನತೆ, ಅಂಬೇಡ್ಕರ್ ಎಂದರೆ ಧೈರ್ಯ. ಎಂದು ಹೇಳಿದ್ದಾರೆ.</p>



<p><br>ಇತಿಹಾಸ ಮರೆತವರು ಇತಿಹಾಸ ಸೃಷ್ಡಿಸಲಾರರು ಎಂದು ಅಂಬೇಡ್ಕರ್ ಹೇಳಿದ್ದಾರೆ. ಇಂದು ಕಾಂಗ್ರೆಸ್ ಅದ್ಯಕ್ಷ ಸ್ಥಾನದಲ್ಲಿ ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆಯವರು ಕುಳಿತಿದ್ದಾರೆ. ಅವರಿಗೆ ನೀವು ಗೌರವಿಸಿದ್ದೀರಿ. ಅವರ ನಾಯಕತ್ವದಲ್ಲಿ ಇಡೀ ದೇಶದಲ್ಲಿ ಬದಲಾವಣೆಗೆ ನಾಂದಿ ಹಾಡಿದೆ ಎಂದು ಕಾಂಗ್ರೆಸ್ ಪಕ್ಷದಲ್ಲಿ ದಲಿತರ ಸ್ಥಾನಮಾನದ ಉಲ್ಲೇಖಿಸಿ ಹೇಳಿದ್ದಾರೆ.</p>



<p><br>ಹಾಗೆಯೇ &#8216;ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಪರಿಶಿಷ್ಟ ಜಾತಿ ಪಂಗಡ ಸಮುದಾಯಗಳಿಗೆ SCP/TSP ಕಾಯ್ದೆ ಜಾರಿ ಮಾಡಿ ಕಾಂಗ್ರೆಸ್ ಇತಿಹಾಸ ಸೃಷ್ಟಿಸಿದೆ. ಹಾಲಿ ಸರ್ಕಾರದಲ್ಲಿ ಸಹ ದಲಿತ ಸಮಯದಾಯದ ಜನಪ್ರತಿನಿಧಿಗಳು ಮಂತ್ರಿಗಳಾಗಿದ್ದಾರೆ. ನಮ್ಮ ಸರ್ಕಾರ ಒಂದು ಜಾತಿ ಒಂದು ಧರ್ಮ ಎಂದಲ್ಲ, ಮಾನವೀಯತೆಯ ಸಿದ್ದಾಂತದ ಆದಾರದಲ್ಲಿ ಇಡೀ ಸಮಾಜವನ್ನು ಒಂದುಗೂಡಿಸಿಕೊಂಡು ಹೋಗುತ್ತದೆ. ಹಾಗೆಯೇ ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮುಂದಿಟ್ಟಿರುವ ಹಕ್ಕೊತ್ತಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಈ ಮೂಲಕ ಭರವಸೆ ನೀಡುತ್ತಿದ್ದೇ‌‌ನೆ ಎಂದು ಹೇಳಿದ್ದಾರೆ.</p>
]]></content:encoded>
					
		
		
			</item>
		<item>
		<title>ದಲಿತರೇನು ಕ್ರಿಮಿನಲ್‌ಗಳೇ?: ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ</title>
		<link>https://peepalmedia.com/are-dalits-criminals-congress-attack-on-state-government/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 12 Dec 2022 07:28:10 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[ರಾಜ್ಯ]]></category>
		<category><![CDATA[bengalure]]></category>
		<category><![CDATA[Dalit fighters]]></category>
		<category><![CDATA[DSS]]></category>
		<category><![CDATA[india]]></category>
		<category><![CDATA[internal reservation]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=18284</guid>

					<description><![CDATA[ಬೆಂಗಳೂರು: ಒಳಮೀಸಲಾತಿ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ದಲಿತ ಹೋರಾಟಗಾರರ ಮೇಲೆ ಪೊಲೀಸರ ಲಾಠಿ ಚಾರ್ಜ್‌ ಮತ್ತು ಬಂಧನವನ್ನು ವಿರೋಧಿಸಿ, ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್‌ ಘಟಕ ವಾಗ್ದಾಳಿ ನಡೆಸಿದೆ. ಈ ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ಟ್ವಿಟ್‌ ಮಾಡಿದ್ದು, ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ದಲಿತ ಹೋರಾಟಗಾರರ ಮೇಲೆ ಲಾಠಿ ಬೀಸಿದ &#160;ರಾಜ್ಯ ಬಿಜೆಪಿ ಸರ್ಕಾರ ತನ್ನೊಳಗಿದ್ದ ದಲಿತರ ಮೇಲಿನ ದ್ವೇಷ, ಅಸಹನೆಯನ್ನು ಕಾರಿಕೊಂಡಿದೆ. ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದಿದ್ದ ಸರ್ಕಾರವೇ ಇಂದು [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಒಳಮೀಸಲಾತಿ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ದಲಿತ ಹೋರಾಟಗಾರರ ಮೇಲೆ ಪೊಲೀಸರ ಲಾಠಿ ಚಾರ್ಜ್‌ ಮತ್ತು ಬಂಧನವನ್ನು ವಿರೋಧಿಸಿ, ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್‌ ಘಟಕ ವಾಗ್ದಾಳಿ ನಡೆಸಿದೆ.</p>



<p>ಈ ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ಟ್ವಿಟ್‌ ಮಾಡಿದ್ದು, ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ದಲಿತ ಹೋರಾಟಗಾರರ ಮೇಲೆ ಲಾಠಿ ಬೀಸಿದ &nbsp;ರಾಜ್ಯ ಬಿಜೆಪಿ ಸರ್ಕಾರ ತನ್ನೊಳಗಿದ್ದ ದಲಿತರ ಮೇಲಿನ ದ್ವೇಷ, ಅಸಹನೆಯನ್ನು ಕಾರಿಕೊಂಡಿದೆ. ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದಿದ್ದ ಸರ್ಕಾರವೇ ಇಂದು ಲಾಠಿಚಾರ್ಜ್ ನಡೆಸಿ ಜಾರಿಯನ್ನು ನಿರಾಕರಿಸುವ ಸಂದೇಶ ನೀಡಿದೆ ಎಂದು ಕಿಡಿಕಾರಿದೆ.</p>



<p>ರಾಜ್ಯ ಬಿಜೆಪಿ ಸರ್ಕಾರದಲ್ಲಿ ಕೇಸರಿ ಶಾಲು ಹೊದ್ದು ಪುಂಡಾಟಿಕೆ ನಡೆಸುವವರಿಗೆ &#8211; ರಾಜಮರ್ಯಾದೆ ಭ್ರಷ್ಟಾಚಾರ, ಅಕ್ರಮ ನಡೆಸುವವರಿಗೆ &#8211; ರಾಜಮರ್ಯಾದೆ ರೌಡಿಗಳಿಗೆ, ಕ್ರಿಮಿನಲ್‌ಗಳಿಗೆ &#8211; ರಾಜಮರ್ಯಾದೆ ಆದರೆ ಶಾಂತಿಯಿಂದ ಪ್ರತಿಭಟಿಸುವ ದಲಿತ ಹೋರಾಟಗಾರರಿಗೆ ಮಾತ್ರ – ಲಾಠಿಏಟು. ಏಕೆ ಬಿಜೆಪಿ ದೃಷ್ಟಿಯಲ್ಲಿ ದಲಿತರು ಕ್ರಿಮಿನಲ್‌ಗಳಂತೆ ಕಾಣುವರೇ? ಎಂದು ರಾಜ್ಯ ಕಾಂಗ್ರೆಸ್‌ ಘಟಕ ಆಕ್ರೋಶ ವ್ಯಕ್ತ ಪಡಿಸಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ದಲಿತ ಹೋರಾಟಗಾರರ ಮೇಲೆ ಲಾಠಿ ಬೀಸಿದ <a href="https://twitter.com/BJP4Karnataka?ref_src=twsrc%5Etfw">@BJP4Karnataka</a> ಸರ್ಕಾರ ತನ್ನೊಳಗಿದ್ದ ದಲಿತರ ಮೇಲಿನ ದ್ವೇಷ, ಅಸಹನೆಯನ್ನು ಕಾರಿಕೊಂಡಿದೆ.<br><br>ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದಿದ್ದ ಸರ್ಕಾರವೇ ಇಂದು ಲಾಠಿಚಾರ್ಜ್ ನಡೆಸಿ ಜಾರಿಯನ್ನು ನಿರಾಕರಿಸುವ ಸಂದೇಶ ನೀಡಿದೆ.</p>&mdash; Karnataka Congress (@INCKarnataka) <a href="https://twitter.com/INCKarnataka/status/1602189905668747265?ref_src=twsrc%5Etfw">December 12, 2022</a></blockquote><script async src="https://platform.twitter.com/widgets.js" charset="utf-8"></script>
</div></figure>
]]></content:encoded>
					
		
		
			</item>
		<item>
		<title>ʼದಲಿತರಿಗಿರುವ ಏಕೈಕ ದಾರಿ ಶಿ‌ಕ್ಷಣ ಮತ್ತು ಹೋರಾಟʼ: ರಮಾಬಾಯಿ ಅಂಬೇಡ್ಕರ್</title>
		<link>https://peepalmedia.com/education-and-struggle-is-the-only-way-for-dalits-ramabai-ambedkar/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 06 Dec 2022 10:47:34 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[ರಾಜ್ಯ]]></category>
		<category><![CDATA[bengalure]]></category>
		<category><![CDATA[Dalit cultural resistance]]></category>
		<category><![CDATA[DSS]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[RAMABAYI AMBEDKAR]]></category>
		<guid isPermaLink="false">https://peepalmedia.com/?p=17721</guid>

					<description><![CDATA[ಬೆಂಗಳೂರು: ಪ್ರಸ್ತುತ ದಿನಮಾನಗಳಲ್ಲಿ ದಲಿತ ದಮನಿತರಿಗೆ ನೀಡಿದ್ದ ಸವಲತ್ತುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದು, ಇದಕ್ಕೆ ಏಕೈಕ ಪರಿಹಾರ ಡಾ.ಬಿ.ಆರ್‌. ಅಂಬೇಡ್ಕರ್‌ ಹೇಳಿದಂತೆ ಶಿಕ್ಷಣ ಪಡೆಯುವುದು ಮತ್ತು ಹೋರಾಟ ಮಾಡುವುದು ಎಂದು ಹೋರಾಟಗಾರ್ತಿ ರಮಾಬಾಯಿ ಅಂಬೇಡ್ಕರ್ ಹೇಳಿದರು. ನ್ಯಾಷನಲ್ ಕಾಲೇಜು ಮೈದಾನದಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅಂಬೇಡ್ಕರರ ಪರಿನಿರ್ವಾಣದ ದಿನ. ಅವರು ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದಾರೆ. ಬಡವರಿಗೆ, ಬಲ್ಲಿದರಿಗೆಲ್ಲರಿಗೂ ಒಂದು ಮತದಾನದ ಹಕ್ಕು ನೀಡಿದ್ದಾರೆ. ಅದನ್ನು ಸಮರ್ಪಕವಾಗಿ ಬಳಸುವುದು ನಮ್ಮ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ಪ್ರಸ್ತುತ ದಿನಮಾನಗಳಲ್ಲಿ ದಲಿತ ದಮನಿತರಿಗೆ ನೀಡಿದ್ದ ಸವಲತ್ತುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದು, ಇದಕ್ಕೆ ಏಕೈಕ ಪರಿಹಾರ ಡಾ.ಬಿ.ಆರ್‌. ಅಂಬೇಡ್ಕರ್‌ ಹೇಳಿದಂತೆ ಶಿಕ್ಷಣ ಪಡೆಯುವುದು ಮತ್ತು ಹೋರಾಟ ಮಾಡುವುದು ಎಂದು ಹೋರಾಟಗಾರ್ತಿ ರಮಾಬಾಯಿ ಅಂಬೇಡ್ಕರ್ ಹೇಳಿದರು.</p>



<p>ನ್ಯಾಷನಲ್ ಕಾಲೇಜು ಮೈದಾನದಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅಂಬೇಡ್ಕರರ ಪರಿನಿರ್ವಾಣದ ದಿನ. ಅವರು ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದಾರೆ. ಬಡವರಿಗೆ, ಬಲ್ಲಿದರಿಗೆಲ್ಲರಿಗೂ ಒಂದು ಮತದಾನದ ಹಕ್ಕು ನೀಡಿದ್ದಾರೆ. ಅದನ್ನು ಸಮರ್ಪಕವಾಗಿ ಬಳಸುವುದು ನಮ್ಮ ಜವಾಬ್ದಾರಿ ಎಂದರು.</p>



<p>ಮಹಿಳಾ ಶಿಕ್ಷಣದ ಬಗ್ಗೆ ಬಾಬಾ ಸಾಹೇಬರು ಹೇಳಿದ್ದಾರೆ. ಮಹಿಳಾ ಶಿಕ್ಷಣದಿಂದ ಇಡೀ ಸಮಾಜದ ಶಕ್ತಿಯಾಗುತ್ತಾಳೆ ಎಂದರು. ಒಂದು ಸಮಾಜದ ಅಭಿವೃದ್ದಿ ಅಲ್ಲಿನ ಮಹಿಳೆಯರ ಶಿಕ್ಷಣದಿಂದ ಅಳೆಯಬೇಕು ಎಂದರು. ಹೀಗಾಗಿ ನಾವು ಬಾಬಾ ಸಾಹೇಬರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುವುದೆಂದರೆ ಶಿಕ್ಷಣಕ್ಕಾಗಿ ಹೋರಾಡುವುದಾಗಿದೆ ಎಂದು ಹೇಳಿದರು.</p>



<p>ನೀವು ಬಾಬಾ ಸಾಹೇಬರು ಹೇಳಿದಂತೆ ನಿಮ್ಮ ನಾಯಕರನ್ನು ಆಯ್ಕೆ ಮಾಡಿಕೊಂಡು ಸಂಘಟನೆ ಕಟ್ಟಿ, ಸಂಘರ್ಷ ಮಾಡಬೇಕು. ಇಂದು ಕೇಂದ್ರ ಸರ್ಕಾರ ದಲಿತ ದಮನಿತರ ವಿದ್ಯಾರ್ಥಿ ವೇತನ ಕಿತ್ತುಕೊಳ್ಳುತ್ತಿದ್ದಾರೆ. ಶಿಕ್ಷಣ ಕಿತ್ತುಕೊಳ್ಳುತ್ತಿದ್ದಾರೆ. ಹಾಗಾಗಿ ಬಾಬಾ ಸಾಹೇಬರು ಹೇಳಿದಂತೆ ಹೋರಾಟವೇ ಮುಖ್ಯವಾಗಿದೆ ಎಂದರು.</p>



<p>ಸಂವಿಧಾನವನ್ನು ಇಂಚಿಂಚೆ ಕಸಿಯಲಾಗುಗತ್ತಿದೆ. ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ತಿಳಿಯಬೇಕು. ಅದರ ವಿರುದ್ಧ ಐಕ್ಯ ಹೋರಾಟ ನಡೆಸಬೇಕು. ಇದಕ್ಕೆ ಅನೇಕ ದಲಿತ ಸಂಘಟನೆಗಳು ಒಂದಾಗುತ್ತಿರುವುದು ಭರವಸೆ ಮೂಡಿಸಿದೆ ಎಂದು ಹೇಳಿದರು.</p>



<p>ಕಾರ್ಯಕ್ರಮಕ್ಕೆ ಬಹು ಸಂಖ್ಯೆಯಲ್ಲಿ ಜನರು ಸೇರಿರುವುದನ್ನು ನೋಡಿ ಸಂತೋಷವಾಗಿದೆ. ನಾವು ಸಂಘರ್ಷದ ಹಾದಿ ತುಳಿಯಬೇಕಿದೆ. ಡಾ. ಆನಂದ್ ತೇಲ್ತುಂಬ್ದೆಯವರು ಜೈಲಿನಲ್ಲಿದ್ದಾಗ ನೀವೆಲ್ಲ ಹೋರಾಟ ಮಾಡಿ ನಮ್ಮ ಜೊತೆಯಲ್ಲಿದ್ದೀರಿ. ಜೊತೆಗೆ ನನ್ನನ್ನು ಇಲ್ಲಿ ಕರೆಸಿ ಗೌರವ ಕೊಟ್ಟಿದ್ದೀರಿ ಎಂದು ಧನ್ಯವಾದಗಳನ್ನು ತಿಳಿಸಿದರು.</p>
]]></content:encoded>
					
		
		
			</item>
		<item>
		<title>ಡಿಎಸ್‌ಎಸ್‌ ಪಕ್ಷವಲ್ಲ ದಲಿತರ ಶಕ್ತಿ: ಸಿ.ಬಸವಲಿಂಗಯ್ಯ</title>
		<link>https://peepalmedia.com/dss-is-not-a-party-but-the-power-of-dalits-c-basavalingaiah/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 06 Dec 2022 10:18:07 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[ರಾಜ್ಯ]]></category>
		<category><![CDATA[Ambedkar Parinirvan Day]]></category>
		<category><![CDATA[bengalure]]></category>
		<category><![CDATA[C BASAVALINGAYYA]]></category>
		<category><![CDATA[DSS]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=17713</guid>

					<description><![CDATA[ಬೆಂಗಳೂರು: ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ಒಂದು ಪಕ್ಷವಲ್ಲ ಇದು ದಲಿತರ ಶಕ್ತಿ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದರು. ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡ ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂಬೇಡ್ಕರ್ ಪರಿನಿರ್ವಾಣ ದಿನ ನಮ್ಮ ಪಾಲಿಗೆ ಹಬ್ಬ, ನಾವು ಇದನ್ನು ಸಂಭ್ರಮಿಸುತ್ತೇವೆ ಎಂದರು. ಈ ದೇಶದಲ್ಲಿ ದಲಿತರು ಯಾರನ್ನು ಕೊಂದಿಲ್ಲ, ಮೋಸ ಮಾಡಿಲ್ಲ. ಈ ಹಿಂದೆ ಸಿದ್ದಲಿಂಗಯ್ಯನವರ “ಇಕ್ಕುರ್ಲ ಹೊದಿರ್ಲ ಆ ನನ್ ಮಕ್ಕಳ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್‌) ಒಂದು ಪಕ್ಷವಲ್ಲ ಇದು ದಲಿತರ ಶಕ್ತಿ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಹೇಳಿದರು.</p>



<p>ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡ ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂಬೇಡ್ಕರ್ ಪರಿನಿರ್ವಾಣ ದಿನ ನಮ್ಮ ಪಾಲಿಗೆ ಹಬ್ಬ, ನಾವು ಇದನ್ನು ಸಂಭ್ರಮಿಸುತ್ತೇವೆ ಎಂದರು.</p>



<p>ಈ ದೇಶದಲ್ಲಿ ದಲಿತರು ಯಾರನ್ನು ಕೊಂದಿಲ್ಲ, ಮೋಸ ಮಾಡಿಲ್ಲ. ಈ ಹಿಂದೆ ಸಿದ್ದಲಿಂಗಯ್ಯನವರ “ಇಕ್ಕುರ್ಲ ಹೊದಿರ್ಲ ಆ ನನ್ ಮಕ್ಕಳ ಚರ್ಮ ಎಬ್ಬುರ್ಲʼಎಂದು ಹಾಡಿದ್ದೇವೆ ಹೌದು. ಜೊತೆಗೆ ನಾವು ಕಟ್ಟುತ್ತೇವೆ, ನಾವು ಕಟ್ಟುತ್ತೇವೆ ಹಾಡನ್ನು ಸಹ ಹಾಡುತ್ತೇವೆ. ನಮ್ಮದು ಸಾಂಸ್ಕೃತಿಕ ಪ್ರತರೋಧ ಎಂದು ಹೇಳಿದರು.</p>



<p>ದಲಿತರ ತಮಟನೆಯನ್ನು ಜನ ಕೀಳೆಂದು ತಿಳಿದಿದ್ದರು. ಅದನ್ನೆ ನಮ್ಮ ಹೋರಾಟದ ಅಸ್ತ್ರ ಮಾಡಿಕೊಂಡಿದ್ದೇವೆ. ಜಂಬೆ ಎನ್ನುವುದು ಆಫ್ರಿಕದಲ್ಲಿ ಹುಟ್ಟಿತು. ಅದಕ್ಕೂ ನಮಗೂ ಡಿಎನ್‌ಎ ಸಂಬಂಧವಿದೆ ಮತ್ತು ಜಂಬೆ ಇಂದು ವಿಶ್ವವ್ಯಾಪಿಯಾಗಿದೆ. ಈ ಸಾಂಸ್ಕೃತಿಕ ಆಯುಧಗಳ ಮೂಲಕ ಹೊಸ ಪ್ರತಿರೋಧ ಚಳವಳಿ ಕಟ್ಟುತ್ತೇವೆ. ಏಕೆಂದರೆ ಡಿಎಸ್‌ಎಸ್‌ ಎಂಬುದು ಒಂದು ಪಕ್ಷವಲ್ಲ, ಬದಲಿಗೆ ದಲಿತರ ಶಕ್ತಿ ಎಂದರು.</p>



<p>ನಾವೆಲ್ಲವರೂ ವಿಶ್ವಮಾನವರು, ನಾವೆಲ್ಲ ಒಂದೇ. ಮೂಲನಿವಾಸಿಗಳ ಮೇಲಿನ ದಮನ ದೌರ್ಜನ್ಯವನ್ನು ಒಟ್ಟಾಗಿ ಎದುರಿಸುತ್ತೇವೆ. ಇದು ಪೇಶ್ವೆ ಭಾರತವಲ್ಲ, ಇದು ಸಂವಿಧಾನ ಭಾರತ. ದೌರ್ಜನ್ಯ ನಡೆಸುವವರ ಡಿಎನ್‌ಎ ಚೆಕ್ ಮಾಡಿದರೆ ನಮಗೆ ಸತ್ಯ ತಿಳಿಯುತ್ತದೆ ಎಂದು ಹೇಳಿದರು.</p>



<p>ಇದು ಬುದ್ದನ ನಾಡು, ಆದರೆ ಬುದ್ಧನೇ ಇಲ್ಲಿ ಪರಕೀಯನಾಗಿದ್ದಾನೆ. ಮೂಲನಿವಾಸಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ, ಇದಕ್ಕೆ ಅವಕಾಶ ಕೊಡಬಾರದು. ಕರ್ನಾಟಕವನ್ನು ಯುಪಿ, ಗುಜರಾತ್, ಬಿಹಾರ ಮಾಡಲು ಬಿಡುವುದಿಲ್ಲ ಎಂದು ಸಿ.ಬಸವಲಿಂಗಯ್ಯ ಎಚ್ಚರಿಸಿದರು.</p>
]]></content:encoded>
					
		
		
			</item>
		<item>
		<title>ದಲಿತ ಸಂಘರ್ಷ ಸಮಿತಿ ಐಕ್ಯತೆ : ಸಂಭ್ರಮ, ಆಶಯ ಮತ್ತು ಆತಂಕ</title>
		<link>https://peepalmedia.com/vikas-r-mourya-article-on-dss-aikyatha-samavesha/</link>
		
		<dc:creator><![CDATA[Vikas R Maurya]]></dc:creator>
		<pubDate>Mon, 05 Dec 2022 05:12:16 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[DSS]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Vikas R Maurya]]></category>
		<guid isPermaLink="false">https://peepalmedia.com/?p=17540</guid>

					<description><![CDATA[ದಲಿತಸಂಘಟನೆಗಳ ಐಕ್ಯತೆಯನ್ನು ಇಂದು ಸಂಭ್ರಮಿಸುತ್ತಿರುವವರೆಲ್ಲರೂ ದಲಿತ ಸಂಘಟನೆಗಳ ನಾಯಕರ ಬಾಯಿಯಿಂದ ‘ನಾವು ಮುಂದೆಂದೂ ಛಿದ್ರಗೊಳ್ಳುವುದಿಲ್ಲ’ ಎಂಬ ಉತ್ತರವನ್ನು ಬಯಸುತ್ತಿದ್ದಾರೆ. ಡಿಸೆಂಬರ್ 6 ರಂದು ‘ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ’ ಮತ್ತು ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ದಿನದಂದು ನಾಡಿನ ಜನತೆಯ ಮುಂದೆ ‘ಈ ಒಗ್ಗಟ್ಟು ಮುರಿಯುವುದಿಲ್ಲ’ವೆಂಬ ಭರವಸೆಯನ್ನು ದಲಿತ ನಾಯಕರು ನೀಡಬೇಕಿದೆ ಎನ್ನುತ್ತಾರೆ ಲೇಖಕ ವಿಕಾಸ್ ಆರ್ ಮೌರ್ಯ ನಡೆಯುವವರು ಮಾತ್ರ ಎಡುವುತ್ತಾರೆ. -ಜಾನಪದ ನಾಣ್ಣುಡಿ ಅಂದು 1981 ರ ಜೂನ್ 10 ನೇ ದಿನ. ಬುಧವಾರದ ಹಗಲಿನ [&#8230;]]]></description>
										<content:encoded><![CDATA[
<div class="wp-block-group"><div class="wp-block-group__inner-container is-layout-constrained wp-block-group-is-layout-constrained">
<h5 class="has-text-align-center has-very-light-gray-to-cyan-bluish-gray-gradient-background has-background wp-block-heading"><strong>ದಲಿತಸಂಘಟನೆಗಳ ಐಕ್ಯತೆಯನ್ನು ಇಂದು ಸಂಭ್ರಮಿಸುತ್ತಿರುವವರೆಲ್ಲರೂ ದಲಿತ ಸಂಘಟನೆಗಳ ನಾಯಕರ ಬಾಯಿಯಿಂದ ‘ನಾವು ಮುಂದೆಂದೂ ಛಿದ್ರಗೊಳ್ಳುವುದಿಲ್ಲ’ ಎಂಬ ಉತ್ತರವನ್ನು ಬಯಸುತ್ತಿದ್ದಾರೆ. ಡಿಸೆಂಬರ್ 6 ರಂದು ‘ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ’ ಮತ್ತು ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ದಿನದಂದು ನಾಡಿನ ಜನತೆಯ ಮುಂದೆ ‘ಈ ಒಗ್ಗಟ್ಟು ಮುರಿಯುವುದಿಲ್ಲ’ವೆಂಬ ಭರವಸೆಯನ್ನು ದಲಿತ ನಾಯಕರು ನೀಡಬೇಕಿದೆ ಎನ್ನುತ್ತಾರೆ ಲೇಖಕ ವಿಕಾಸ್ ಆರ್ ಮೌರ್ಯ</strong></h5>
</div></div>



<p class="dropcapp1">ನಡೆಯುವವರು ಮಾತ್ರ ಎಡುವುತ್ತಾರೆ.</p>



<p>-ಜಾನಪದ ನಾಣ್ಣುಡಿ</p>



<p>ಅಂದು 1981 ರ ಜೂನ್ 10 ನೇ ದಿನ. ಬುಧವಾರದ ಹಗಲಿನ ಸಮಯ. ಕೋಲಾರದ ಹಾರೋಹಳ್ಳಿಯ ಗಂಗಮ್ಮನ ಗುಡಿ ಮುಂದಿನ ಜಾಗದಲ್ಲಿ ವೇದಿಕೆ ಸಿದ್ಧಗೊಂಡಿತ್ತು. ಅಲ್ಲಿಯೇ ನೀಲಿ ಬಟ್ಟೆಗೆ ಅಪ್ಪಿಕೊಂಡಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಅವರ ದೊಡ್ಡದಾದ ಭಾವಚಿತ್ರ ನೆರೆದಿದ್ದ ಜನರೆಲ್ಲರ ಮುಖ್ಯ ಆಕರ್ಷಣೀಯ ಕೇಂದ್ರವಾಗಿತ್ತು. ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿಯ ಹೋರಾಟಗಾರರಾದ ಎನ್. ಶಿವಣ್ಣ, ಎನ್. ವೆಂಕಟೇಶ್, ಎನ್. ಮುನಿಸ್ವಾಮಿ, ಕೆ. ರಾಮಯ್ಯ, ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಸಿ.ಎಂ. ಮುನಿಯಪ್ಪ ಮುಂತಾದವರು ಭಾಗವಹಿಸಿದ್ದರು. ಇಡೀ ಕಾರ್ಯಕ್ರಮವನ್ನು ಲಾಯರ್ ಕೃಷ್ಣ ಅವರು ಸಂಯೋಜಿಸಿದ್ದರು. ಅಂದು ಹಾರೋಹಳ್ಳಿಯಲ್ಲಿ ‘ದಲಿತ ಸಂಘರ್ಷ ಸಮಿತಿ’ ವತಿಯಿಂದ ರಾಜ್ಯಮಟ್ಟದ ಜಾಗೃತಿ ಸಮಾವೇಶ ನಡೆದಿತ್ತು. ಜೊತೆಗೆ ಶಿಕ್ಷಣದಲ್ಲಿ ಸಾಧನೆ ಮಾಡಿದ ದಲಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ಇತ್ತು. ದಲಿತ ಕಲಾ ಮಂಡಳಿಯೂ ಹಾಜರಿತ್ತು.</p>



<p>ಅಂದು ಅದೇ ವೇದಿಕೆಯಲ್ಲಿ ಮತ್ತೊಂದು ಶುಭ ಸಮಾರಂಭವೂ ಜರುಗಿತು. ಅದು ಹಾಸನದ ಹೆಚ್.ಜೆ.ರುದ್ರಯ್ಯ ಮತ್ತು ಕೋಲಾರದ ಚಿಂತಾಮಣಿಯ ಪದ್ಮ ಇವರ ನಡುವಿನ ಅಂತರ್ಜಾತಿ ವಿವಾಹ. ರುದ್ರಯ್ಯ ಹೊಲೆಯ ಸಮುದಾಯದವರಾದರೇ, ಪದ್ಮ ಮಾದಿಗ ಸಮುದಾಯದವರು. ದಲಿತ ಸಂಘರ್ಷ ಸಮಿತಿಯ ‘ಫಾಹಿಯಾನ’ ಹಿರಿಯ ಜೀವ ಎನ್.ವೆಂಕಟೇಶ್ ಅವರ ತಂಗಿಯಾದ ಪದ್ಮ ಮತ್ತು ರೇಷ್ಮೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರುದ್ರಯ್ಯ ಇವರಿಬ್ಬರೂ ಅಂಬೇಡ್ಕರ್ ಅವರ ಭಾವಚಿತ್ರವನ್ನು ಅನಾವರಣ ಮಾಡುವ ಮೂಲಕ ಒಂದಾದರು, ವಿವಾಹವಾದರು. ದಲಿತ ಸಂಘರ್ಷ ಸಮಿತಿಯ ಎಲ್ಲಾ ಹೋರಾಟಗಾರರು ಹಾಗೂ ಹಾರೋಹಳ್ಳಿಯ ಜನತೆ ಇವರಿಬ್ಬರನ್ನೂ ಹಾರೈಸಿದ್ದರು.</p>



<p>ಪದ್ಮ ಮತ್ತು ಹೆಚ್.ಜೆ.ರುದ್ರಯ್ಯನವರ ಮೊದಲ ಮಗನೇ ನಾನು. ನನ್ನ ಬಗ್ಗೆಯೇ ಹೇಳಿಕೊಳ್ಳಲು ಮುಜುಗರವಾಗುತ್ತದೆಯಾದರೂ ನನ್ನ ಮತ್ತು ದಲಿತ ಸಂಘರ್ಷ ಸಮಿತಿಯ ನಡುವೆ ಇರುವ ಈ ಕಳ್ಳುಬಳ್ಳಿ ಸಂಬಂಧದ ಬಗ್ಗೆ ನನಗೆ ಹೆಮ್ಮೆಯಿದೆ. ದಸಂಸ ನನ್ನಂತಹ ಲಕ್ಷಾಂತರ ಯುವಜನತೆಗೆ ನೀಡಿದ ಬೆಳಕಿನ ಬಗ್ಗೆ, ದಲಿತ ಜನಮಾನಸದಲ್ಲಿ ದಸಂಸ ಮೂಡಿಸಿದ ಘನತೆ ಬಗ್ಗೆ ಅಪಾರವಾದ ಗೌರವವಿದೆ. ನನ್ನಂತವರ ಪಾಲಿಗೆ ದಸಂಸ ತಂದೆ-ತಾಯಿ ಎರಡೂ ಆಗಿದೆ. ಬಾಬಾಸಾಹೇಬ್ ಒಂದು ಕಣ್ಣಾದರೆ, ಮತ್ತೊಂದು ದಸಂಸ.</p>



<p>ನಾ ಬೆಳೆದ ಕೇರಿಯಲ್ಲಿ ಏಪ್ರಿಲ್ 14 ಬಂದರೆ ಸಂಭ್ರಮವೋ ಸಂಭ್ರಮ. ಅಲ್ಲಿನ ನಮ್ಮ ದಸಂಸದ ಹಿರಿಯಣ್ಣಂದಿರು ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಾಡುವ ಹಾಡಿಗೆ ಹೆಜ್ಜೆ ಹಾಕುವುದೆಂದರೆ ಸಂತೋಷವೋ ಸಂತೋಷ. ಹನುಮಂತಣ್ಣ, ಗುಡುಗಣ್ಣ, ಚಿಕ್ಕಾಳಣ್ಣ ಬಾರಿಸುತ್ತಿದ್ದ ತಮಟೆ ಸದ್ದಿಗೆ ನಮ್ಮಪ್ಪನೂ ಸೇರಿದಂತೆ ಹೋಮ್‍ಗಾರ್ಡ್ ಪ್ರಕಾಶಣ್ಣ ಹಾಕುತ್ತಿದ್ದ ಕುಣಿತ ನೆಲವ ನಡುಗಿಸುವಾಗ ಅದರಲ್ಲಿ ನಾವೂ ಗುಡುಗಿ ಮೆತ್ತಗಾಗುತ್ತಿದ್ದೆವು. ನನಗೂ ಕೇರಿಗೂ ದಲಿತ ಅಸ್ಮಿತೆಯ ಬಗ್ಗೆ ಹೆಮ್ಮೆ ಹಾಗೂ ಅಂಬೇಡ್ಕರ್ ಅವರ ವಿಚಾರವನ್ನು ಹೇಳಿಕೊಟ್ಟಿದ್ದೇ ದಸಂಸ.</p>



<p>ಸ್ವತಃ ನನ್ನ ಸೋದರಮಾವ ಗಡ್ಡಮಾಮ (ಎನ್. ವೆಂಕಟೇಶಣ್ಣ) ಮೈಸೂರಿನ ಕಡೆ ಬಂದಾಗ ನಮ್ಮ ಕುಟುಂಬ ನೆಲಸಿದ್ದ ಮಂಡ್ಯ ಜಿಲ್ಲೆಯ ಹೊಸಹೊಳಲಿಗೂ ಬರುತ್ತಿದ್ದರು. ಒಂದೆರಡು ದಿನ ವಿಶ್ರಾಂತಿ ಪಡೆದು ಹೊರಡುತ್ತಿದ್ದರು. ಅವರು ಬಂದರೆಂದರೆ ನನಗೂ ನನ್ನ ತಂಗಿಗೂ ಅವರ ತೋಳೇರಿದ್ದ ಬಟ್ಟೆಯ ಚೀಲದ ಮೇಲೆಯೇ ಕಣ್ಣು. ಎನ್. ವೆಂಕಟೇಶಣ್ಣ ಯಾವಾಗಲೂ ಪ್ರತಿಭಟನೆ ಅಥವಾ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬರುತ್ತಿದ್ದದ್ದು ತಡರಾತ್ರಿಯ ಸಮಯವೇ. ಅವರು ಬರುವವರೆಗೂ ನಾನು ಮತ್ತು ನನ್ನ ತಂಗಿ ಶೀಲ ನಿದ್ದೆ ಮಾಡದೇ ಕಾದಿರುತ್ತಿದ್ದೆವು. ಅವರು ಬಂದೊಡನೇ ಒಂದೆರಡು ಮುತ್ತು ವಿನಿಮಯವಾಗಿ ಅವರ ಭುಜವೇರಿದ್ದ ಬ್ಯಾಗಿಗಾಗಿ ನನ್ನ ಮತ್ತು ಶೀಲ ಇಬ್ಬರ ನಡುವೆಯೂ ಯುದ್ಧವಾಗುತ್ತಿತ್ತು. ಅದರಲ್ಲಿರುವ ಕ್ರ್ಯಾಕ್‍ಜಾಕ್ ಬಿಸ್ಕತ್ತಿಗಾಗಿಯೇ ನಮ್ಮಿಬ್ಬರ ಹೊಡೆದಾಟ. ಹೀಗೆ ಬಿಸ್ಕತ್ತು ಹುಡುಕುವಾಗ ಬ್ಯಾಗಿನಲ್ಲಿದ್ದ ಕರಪತ್ರದಲ್ಲಿ ನಗುತ್ತಿದ್ದ ಅಂಬೇಡ್ಕರ್ ಮತ್ತು ದಸಂಸ ‘ಲೋಗೋ’ ನಮ್ಮ ಕಣ್ಣಿಗೆ ಬಿದ್ದು ಅಂದಿನಿಂದಲೇ ಬಾಬಾಸಾಹೇಬ್ ಮತ್ತು ದಸಂಸದ ಪರಿಚಯವಾಗಿತ್ತು.</p>



<p>ಮುಂದೆ ಪಿಯುಸಿ ಫೇಲಾದಾಗ ಅದೇ ವೆಂಕಟೇಶಣ್ಣನ ಚೀಲದಲ್ಲಿ ಸಿಕ್ಕಿದ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರೆಹಗಳು ಮತ್ತು ಭಾಷಣಗಳ ಸಂಪುಟ 3 &#8211; ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ, ಬ್ರಾಹ್ಮಣ ಧರ್ಮದ ದಿಗ್ವಿಜಯ ಕೃತಿ ನನ್ನ ಬದುಕನ್ನೇ ಬದಲಾಯಿಸಿಬಿಟ್ಟಿತು. ಪದವಿ ವ್ಯಾಸಂಗಕ್ಕಾಗಿ ಮೈಸೂರಿಗೆ ತೆರಳಿದಾಗ ಗೌತಮ್ ಹಾಸ್ಟೆಲ್‍ನಲ್ಲಿ ತುಂಬಿ ತುಳುಕುತ್ತಿದ್ದ ಬಹುಜನ ಚಳವಳಿಯ ವಿಚಾರಗಳೂ ಸಹ ನನ್ನ ಮೇಲೆ ಪ್ರಭಾವ ಬೀರಿದವು. ಅಷ್ಟೊತ್ತಿಗೆ ಒಂದು ಮಟ್ಟಕ್ಕೆ ಪ್ರಭಾವ ಕಳೆದುಕೊಂಡಿದ್ದ ದಸಂಸದ ಸ್ಥಿತಿಯೂ ಸಮಕಾಲೀನ ಯುವಜನತೆಯಲ್ಲಿ ಆತಂಕ ಮೂಡಿಸಿತ್ತು. ಆದರೆ ಕಾಲಕ್ರಮೇಣ ದಸಂಸದ ಹಿರಿಯ ಜೀವಗಳೊಂದಿಗೆ ಬಹಳ ಕಾಲದ ನಂತರ ಏರ್ಪಟ್ಟ ನಂಟಿನಿಂದ ಮತ್ತೆ ದಸಂಸ ನಮ್ಮೆದೆಗಳಲ್ಲಿ ತುಂಬಿಕೊಂಡಿತು.</p>



<p>ದಸಂಸ ಬಣಗಳಾದದ್ದು ಯಾರಿಗೆಲ್ಲಾ ದುಃಖವನ್ನು ಉಂಟುಮಾಡಿತ್ತೋ ಅವರೆಲ್ಲರೂ ಇಂದು ಹುಮ್ಮಸ್ಸಿನಿಂದ ಕುಣಿಯುತ್ತಿದ್ದಾರೆ. ಎರಡು ದಶಕಗಳ ನಂತರ ಒಗ್ಗೂಡಲು ಅಣಿಯಾಗಿರುವ ದಸಂಸ ಹೋರಾಟಗಾರರ ನಡೆಯನ್ನು ಕಂಡು ಕಣ್ತುಂಬಿ ಸಂಭ್ರಮಿಸುತ್ತಿದ್ದಾರೆ. ಅಲ್ಲೆಲ್ಲೋ ಕೊಲೆ, ಇಲ್ಲೆಲ್ಲೋ ಅತ್ಯಾಚಾರ, ಪಕ್ಕದಲ್ಲಿಯೇ ಬಹಿಷ್ಕಾರ, ಮನೆ ಮುಂದೆಯೇ ನಿಂದನೆ ಹೀಗೆ ಒಂದಾ ಎರಡಾ.. ಲೆಕ್ಕವಿಲ್ಲದಷ್ಟು ದಲಿತರ ಮೇಲಿನ ದೌರ್ಜನ್ಯಗಳು ನಡೆದಾಗ ಕೇರಿ ಕೇರಿಗಳಲ್ಲಿನ ದಲಿತರು ‘ಡಿಎಸ್‍ಎಸ್’ ಕೈಗಳು ನಮ್ಮನ್ನು ಕಾಪಾಡುತ್ತವೆ ಎಂದು ಕಾಯುತ್ತಿದ್ದರು. ಒಗ್ಗಟ್ಟಾಗಿ ಬರದಿದ್ದಾಗ ನೊಂದು ಗೆಲ್ಲುವ ಅಥವಾ ಉಳಿಯುವ ಆಸೆಯನ್ನೇ ಬಿಟ್ಟಿದ್ದರು. ನಮ್ಮ ಕತೆ ಇಷ್ಟೇ. ಪೊಲೀಸ್ ಸ್ಟೇಷನ್, ನ್ಯಾಯಾಲಯಗಳಲ್ಲಿ ನಮಗೆ ನ್ಯಾಯವಿಲ್ಲ. ಈ ಮೇಲ್ಜಾತಿ ಜಾತಿವಾದಿಗಳ ಕೈಕೆಳಗೆ ನಮಗೆ ಉಳಿಗಾಲವಿಲ್ಲ. ಮತ್ತೆ ಮೊದಲಿನಂತೆಯೇ ಬದುಕಿ ಬಿಡೋಣವೇ? ಎಂದೊಮ್ಮೆ ಯೋಚಿಸಿ ‘ಅಯ್ಯೋ ಬೇಡವೇ ಬೇಡ’ ಎಂದುಕೊಂಡರೂ ಎದುರುಗೊಳ್ಳುವ ಯಮಕಿಂಕರರನ್ನು ಸೋಲಿಸುವುದೆಂತು? ವಾಮನರ ಹೆಜ್ಜೆಯ ಸಪ್ಪಳವನ್ನರಿಯುವುದೆಂತು? ನಮ್ಮನ್ನೆಲ್ಲ ಕಾಪಾಡಲು ಬಾಬಾಸಾಹೇಬ್ ಮತ್ತೆ ಹುಟ್ಟಿ ಬರಬೇಕಷ್ಟೆ ಎಂದು ನಿರಾಶರಾಗಿ ಕುಳಿತಿದ್ದ ದಲಿತರ ಕಿವಿಗೆ ‘ದಲಿತ ಸಂಘಟನೆಗಳು ಐಕ್ಯಗೊಳ್ಳುತ್ತಿವೆ’ ಎಂಬ ಸುದ್ದಿ ಮುಟ್ಟಿದ್ದೇ ತಡ ನರನಾಡಿಗಳೆಲ್ಲ ನಿಮಿರಿ ನಿಂತಿವೆ. ಎದೆಯೊಳಗೆ ಧೈರ್ಯ ತುಂಬಿ ಕೊಂಡಂತಾಗಿದೆ. ರಟ್ಟೆಗಳಿಗೆ ಶಕ್ತಿ ಬಂದಂತಾಗಿದೆ. ಹಲವರಿಗೆ ಇದು ಕನಸೋ ನನಸೋ ಎಂಬ ಅನುಮಾನವೂ ಶುರುವಾಗಿದೆ. ಕಳೆದೆರಡು ವಾರಗಳಿಂದ ದಲಿತ ಕೇರಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ‘ಜೈ ಭೀಮ್’ ಘೋಷಣೆ ಮುಗಿಲು ಮುಟ್ಟಿದೆ.</p>



<p>ಈ ಬೆಳವಣಿಗೆಯ ನಡುವೆ ‘ಐಕ್ಯತೆ 6 ನೇ ತಾರೀಖಿನವರೆಗೆ ಮಾತ್ರವೇ?’ ಎಂಬ ಪ್ರಶ್ನೆಯೂ ಎದ್ದು ಬಂದಿದೆ. ದಲಿತಸಂಘಟನೆಗಳ ಐಕ್ಯತೆಯನ್ನು ಇಂದು ಸಂಭ್ರಮಿಸುತ್ತಿರುವವರೆಲ್ಲರೂ ದಲಿತ ಸಂಘಟನೆಗಳ ನಾಯಕರ ಬಾಯಿಯಿಂದ ‘ನಾವು ಮುಂದೆಂದೂ ಛಿದ್ರಗೊಳ್ಳುವುದಿಲ್ಲ’ ಎಂಬ ಉತ್ತರವನ್ನು ಬಯಸುತ್ತಿದ್ದಾರೆ. ಡಿಸೆಂಬರ್ 6 ರಂದು ‘ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ’ ಮತ್ತು ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ದಿನದಂದು ನಾಡಿನ ಜನತೆ ಮುಂದೆ ‘ಈ ಒಗ್ಗಟ್ಟು ಮುರಿಯುವುದಿಲ್ಲ’ವೆಂಬ ಭರವಸೆಯನ್ನು ದಲಿತ ನಾಯಕರು ನೀಡಬೇಕಿದೆ.</p>



<p>ಬಹುಮುಖ್ಯವಾಗಿ ಇಂದು ಜೊತೆಯಾಗಿರುವ 12 ಬಣಗಳ ಸಂಖ್ಯೆ ಮತ್ತಷ್ಟು ಹೆಚ್ಚಬೇಕಿದೆ. ಕರ್ನಾಟಕಕ್ಕೆಲ್ಲಾ ಒಂದೇ ‘ದಲಿತ ಸಂಘರ್ಷ ಸಮಿತಿ’ ಎಂಬ ಕನಸು ನನಸಾಗಬೇಕಿದೆ. ಮಹಿಳೆಯರನ್ನು ಒಳಗೊಳ್ಳುವ, ಒಳಮೀಸಲಾತಿಯನ್ನು ಮುಂದು ಮಾಡಿಕೊಂಡು ಒಳರಾಜಕಾರಣ ಮಾಡುತ್ತಿರುವ ದಲಿತ ವಿರೋಧಿ ರಾಜಕೀಯ ಪಕ್ಷಗಳಿಗೆ ‘ಒಳಮೀಸಲಾತಿ ಜಾರಿಯಾಗಲೇಬೇಕು. ಇಲ್ಲವಾದರೆ..’ ಎಂಬ ಖಡಕ್ ಎಚ್ಚರಿಕೆಯನ್ನು ನೀಡಬೇಕಿದೆ. ಮತ್ತೆ ‘ಹೊಲೆಮಾದಿಗರ ಹಾಡನ್ನು’ ದಸಂಸ ಒಕ್ಕೊರಲಿನಿಂದ ಹಾಡಬೇಕಿದೆ. ಶೇಷಗಿರಿಯಪ್ಪ ಮತ್ತು ಅನುಸೂಯಮ್ಮಂದಿರೂ ಇತ್ತ ನೋಡುತ್ತಿದ್ದಾರೆ. ಇತರೆ ಎಲ್ಲಾ ಜಾತಿಯ ಬಡವರ ಬವಣೆಗೆ ದಸಂಸ ಸ್ಪಂದಿಸಬೇಕಿದೆ.</p>



<p>ಕೊನೆಯದಾಗಿ, ಈ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶವು ಕೇವಲ ಡಿಸೆಂಬರ್ 6 ಕ್ಕೆ ಮಾತ್ರ ಕೊನೆಗೊಂಡರೆ ಅಥವಾ ಈ ಐಕ್ಯತೆಯು ಚುನಾವಣಾ ಪೂರ್ವ ಜಾಗೃತಿಗೆ ಮಾತ್ರ ಸೀಮಿತಗೊಂಡರೆ ಖಂಡಿತವಾಗಿಯೂ ಇಂದು ‘ದಲಿತರ ಸಾಂಸ್ಕೃತಿಕ ಪ್ರತಿರೋಧ’ ಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ನೊಂದ ಜನತೆ ಶಾಶ್ವತವಾಗಿ ‘ದಲಿತ ಸಂಘರ್ಷ ಸಮಿತಿ’ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲಿದ್ದಾರೆ. ಅಪ್ಪಿತಪ್ಪಿ ಇಂತಹ ಬೆಳವಣಿಗೆ ನಡೆದುಬಿಟ್ಟರೆ ಅದಕ್ಕೆ ಮುಖ್ಯ ಕಾರಣ ಇಂದು ಐಕ್ಯಗೊಂಡಿರುವ ದಲಿತ ನಾಯಕರೇ ಆಗುತ್ತಾರೆ.</p>



<p>ದಲಿತ ಸಂಘರ್ಷ ಸಮಿತಿಯ ಲಕ್ಷಾಂತರ ಕೂಸುಗಳಲ್ಲಿ ಒಬ್ಬನಾದ ನನ್ನ ಆಶಯವೂ ಸಹ ಈ ಐಕ್ಯತೆ ಉಳಿಯುತ್ತದೆ ಹಾಗೂ ವಿಸ್ತರಿಸುತ್ತದೆ ಎಂಬುದಾಗಿದೆ. ‘ನಮ್ಮೆದೆಯೊಳಗೆ ಕಾರುಣ್ಯ ಹಾಗೂ ಕ್ರಾಂತಿಯ ದೀಪ ಹಚ್ಚಿದ ನಮ್ಮಂಣ್ಣಂದಿರು ಸ್ವತಃ ಅವರೇ ಕೈಯಾರೆ ಆ ದೀಪಗಳನ್ನು ಆರಿಸುವುದಿಲ್ಲ’ ಎಂಬ ನಂಬಿಕೆ ನಮಗಿದೆ.</p>



<p></p>



<p></p>



<p><strong>ವಿಕಾಸ್ ಆರ್ ಮೌರ್ಯ</strong></p>



<p><strong>ಲೇಖಕರು</strong></p>
]]></content:encoded>
					
		
		
			</item>
		<item>
		<title>ಅಕ್ಟೋಬರ್‌ ಒಂದರಂದು ಕುಂದಾಪುರದಲ್ಲಿ ಮೌನ ಮೆರವಣಿಗೆ</title>
		<link>https://peepalmedia.com/candle-march-at-kundapura/</link>
		
		<dc:creator><![CDATA[Peepal Media]]></dc:creator>
		<pubDate>Fri, 30 Sep 2022 03:41:15 +0000</pubDate>
				<category><![CDATA[ಉಡುಪಿ]]></category>
		<category><![CDATA[DSS]]></category>
		<category><![CDATA[DYFI]]></category>
		<category><![CDATA[karnataka]]></category>
		<category><![CDATA[kundapur]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[samudaya]]></category>
		<category><![CDATA[samudayakundapura]]></category>
		<guid isPermaLink="false">https://peepalmedia.com/?p=8125</guid>

					<description><![CDATA[ಕುಂದಾಪುರ: ದೇಶ ಮತ್ತು ರಾಜ್ಯದ ಹಲವೆಡೆ ನಡೆಯುತ್ತಿರುವ ಮಹಿಳೆಯರು ಮತ್ತು ಶೋಷಿತ ಜನರ ಮೇಲಿನ ದೌರ್ಜನ್ಯವನ್ನು ವಿರೋಧಿಸುವ ನಿಟ್ಟಿನಲ್ಲಿ ಕುಂದಾಪುರದ ಹಲವು ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಅಕ್ಟೋಬರ್‌ 1ನೇ ತಾರೀಖಿನಂದು ಸಂಜೆ 6:30ಕ್ಕೆ ಮೌನ ಮೆರವಣಿಗೆಯನ್ನು ಹಮ್ಮಿಕೊಂಡಿವೆ. ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯು ಸಾರ್ವಜನಿಕರಿಗೆ ಭಾಗವಹಿಸುವಂತೆ ಆಹ್ವಾನವನ್ನು ನೀಡಿದ್ದು, ಅಂದು ಪ್ರಜ್ಞಾವಂತ ನಾಗರಿಕರು ಜೊತೆಗಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡಿರುತ್ತಾರೆ. ಸಮಿತಿಯ ಪ್ರಕಟಣಾ ಹೇಳಿಕೆ ಹೀಗಿದೆ: ಮೋಂಬತ್ತಿಯ ಬೆಳಕಿನಲ್ಲಿ ಆತ್ಮಸಾಕ್ಷಿಯನ್ನು ಶೋಧಿಸಿಕೊಳ್ಳೋಣ! ದೇಶಪ್ರೇಮಿ ಬಂಧುಗಳೆ,ಮಹಿಳೆಯರ ಮೇಲಿನ ಅತ್ಯಾಚಾರ [&#8230;]]]></description>
										<content:encoded><![CDATA[
<p>ಕುಂದಾಪುರ: ದೇಶ ಮತ್ತು ರಾಜ್ಯದ ಹಲವೆಡೆ ನಡೆಯುತ್ತಿರುವ ಮಹಿಳೆಯರು ಮತ್ತು ಶೋಷಿತ ಜನರ ಮೇಲಿನ ದೌರ್ಜನ್ಯವನ್ನು ವಿರೋಧಿಸುವ ನಿಟ್ಟಿನಲ್ಲಿ ಕುಂದಾಪುರದ ಹಲವು ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಅಕ್ಟೋಬರ್‌ 1ನೇ ತಾರೀಖಿನಂದು ಸಂಜೆ 6:30ಕ್ಕೆ ಮೌನ ಮೆರವಣಿಗೆಯನ್ನು ಹಮ್ಮಿಕೊಂಡಿವೆ.</p>



<p>ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯು ಸಾರ್ವಜನಿಕರಿಗೆ ಭಾಗವಹಿಸುವಂತೆ ಆಹ್ವಾನವನ್ನು ನೀಡಿದ್ದು, ಅಂದು ಪ್ರಜ್ಞಾವಂತ ನಾಗರಿಕರು ಜೊತೆಗಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡಿರುತ್ತಾರೆ.</p>


<div class="wp-block-image">
<figure class="aligncenter size-large is-resized"><img decoding="async" src="https://peepalmedia.com/wp-content/uploads/2022/09/ಸಮುದಾಯ-2-682x1024.webp" alt="" class="wp-image-8127" width="386" height="574"/></figure></div>


<p>ಸಮಿತಿಯ ಪ್ರಕಟಣಾ ಹೇಳಿಕೆ ಹೀಗಿದೆ:</p>



<p>ಮೋಂಬತ್ತಿಯ ಬೆಳಕಿನಲ್ಲಿ ಆತ್ಮಸಾಕ್ಷಿಯನ್ನು ಶೋಧಿಸಿಕೊಳ್ಳೋಣ!</p>



<p>ದೇಶಪ್ರೇಮಿ ಬಂಧುಗಳೆ,<br>ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿವೆ. ದಲಿತ ಮಹಿಳೆಯರ ಮೇಲಿನ ಪ್ರತಿವರ್ಷ ವರದಿಯಾಗುವ ಅತ್ಯಾಚಾರ ಪ್ರಕರಣಗಳು ಹತ್ತು ವರ್ಷಗಳ ಹಿಂದಿಗಿಂತ ಈಗ ನಲವತ್ತೈದು ಶೇಕಡಾದಷ್ಟು ಹೆಚ್ಚಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯ ಅಂಕಿಸಂಖ್ಯೆಗಳು ತಿಳಿಸುತ್ತವೆ. ಅಸ್ಪ್ರಶ್ಯತೆ, ಜಾತಿ ನಿಂದನೆಯ ಪ್ರಕರಣಗಳೂ ಹೆಚ್ಚುತ್ತಿವೆ. ತನ್ನ ನೀರಿನ ಮಡಕೆಯನ್ನು ಮುಟ್ಟಿದ್ದಕ್ಕಾಗಿ ಉತ್ತರ ಪ್ರದೇಶದ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ಹೊಡೆದು ಕೊಂದಿದ್ದಾನೆ. ದೇವರ ಗುಜ್ಜು ಕೋಲನ್ನು ಎತ್ತಿದ್ದಕ್ಕಾಗಿ ಕರ್ನಾಟಕದಲ್ಲಿ ದಲಿತ ಹುಡುಗನೊಬ್ಬನನ್ನು ತಳಿಸಿ ಆ ಕುಟುಂಬಕ್ಕೆ ದಂಡ ವಿಧಿಸಿದ ಘಟನೆ ನಡೆದಿದೆ. ನಿತ್ಯವೂ ಇಂತಹ ನೂರಾರು ಘಟನೆಗಳು ನಡೆಯುತ್ತವೆ. ಎಲ್ಲವೂ ವರದಿಯಾಗುವುದಿಲ್ಲ. ಜಾತಿ- ಮತಗಳ ನಡುವೆ ಅಪನಂಬಿಕೆ ಉಂಟಾಗುವಂತಹ ದ್ವೇಷದ ವಾತಾವರಣವು ಉಂಟಾಗಿದೆ. ಸಹಬಾಳ್ವೆಯ ಭಾರತವನ್ನೀಗ ಮರುಕಟ್ಟಬೇಕಿದೆ. ಅಂತಹ ದೌಡೇನಿಲ್ಲ. ನಿಧಾನವಾಗಿ ಆದರೆ, ನಿಖರವಾಗಿ ನೆಮ್ಮದಿಯ ನಾಡನ್ನು ಕಟ್ಟುವ ಗುರಿ ತಲುಪುವುದಕ್ಕಾಗಿ, ನಾವು ಆತ್ಮಸಾಕ್ಷಿಯನ್ನು‌ ಪ್ರಶ್ನಿಸಿಕೊಳ್ಳಬೇಕಾಗಿದೆ. ಅಸಮಾನತೆ, ಅಸ್ಪ್ರಶ್ಯತೆ, ಅಸಹಿಷ್ಣುತೆ, ಅತ್ಯಾಚಾರಗಳು ನಮ್ಮನ್ನು ತಲೆತಗ್ಗಿಸುವಂತೆ ಮಾಡಿವೆ ಎಂಬುದನ್ನು ಬಹಿರಂಗವಾಗಿ ಹೇಳಿಕೊಳ್ಳಬೇಕಾಗಿದೆ.<br>ಈ ದೇಶದ ಜನರು ಸಂವಿಧಾನದ ಪೀಠಿಕೆಯಲ್ಲಿ ನೀಡಿರುವ ವಾಗ್ದಾನದಂತೆ ಸಮಾನತೆಯ, ಶೋಷಣೆರಹಿತ ಸಮಾಜವನ್ನು ಕಟ್ಟಲು ನಾವು ಕಟಿಬದ್ಧರಾಗಬೇಕಿದೆ. ಭ್ರಾತೃತ್ವದ ಭಾರತವನ್ನು ಹಂಬಲಿಸುವ ಎಲ್ಲರೂ ಶನಿವಾರ, ಅಕ್ಟೋಬರ್ 1 ರಂದು ಸಂಜೆ 6.30 ಕ್ಕೆ ಮೋಂಬತ್ತಿ ಹಿಡಿದು ಮೌನ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಾಗಿ ಕೋರಿಕೆ.<br>ಸ್ಥಳ: ಶಾಸ್ತ್ರಿ ವೃತ್ತದಿಂದ ಪಾರಿಜಾತ ಸರ್ಕಲ್, ಕುಂದಾಪುರ</p>



<p>ದಯವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಜೊತೆಗೂಡಿ.</p>


<div class="wp-block-image">
<figure class="aligncenter size-large is-resized"><img decoding="async" src="https://peepalmedia.com/wp-content/uploads/2022/09/ಸಮುದಾಯ-682x1024.webp" alt="" class="wp-image-8126" width="371" height="553"/></figure></div>


<p>  </p>
]]></content:encoded>
					
		
		
			</item>
		<item>
		<title>ಬಿಲ್ಕಿಸ್‌ ಬಾನು ಪ್ರಕರಣ: ಬಿಡುಗಡೆಯನ್ನು ಖಂಡಿಸಿ ರಾಜ್ಯಾದಾದ್ಯಂತ ಪ್ರತಿಭಟನೆ</title>
		<link>https://peepalmedia.com/bilkis-banu-prakarana-bidugadeyannu-kandisi-rajyadadyanta-prathibatane/</link>
		
		<dc:creator><![CDATA[Peepal Media]]></dc:creator>
		<pubDate>Sat, 27 Aug 2022 09:54:44 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[AAP]]></category>
		<category><![CDATA[AIARLA]]></category>
		<category><![CDATA[AIMSS]]></category>
		<category><![CDATA[bengalure]]></category>
		<category><![CDATA[Bilkis Bano]]></category>
		<category><![CDATA[CRI]]></category>
		<category><![CDATA[CSSI]]></category>
		<category><![CDATA[davanagere]]></category>
		<category><![CDATA[DSS]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mysore]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=3177</guid>

					<description><![CDATA[ಮೈಸೂರು: ಬಿಲ್ಕಿಸ್ ಭಾನು ಸಾಮೂಹಿಕ ಅತ್ಯಾಚಾರ ಹಾಗೂ 14 ಜನರ ಕೊಲೆಪ್ರಕರಣ ದಲ್ಲಿ ಬಿಡುಗಡೆಯಾದ 11 ಅಪರಾಧಿಗಳ ಕ್ಷಮಾದಾನ ಹಾಗೂ ಶಿಕ್ಷಾ ವಿನಾಯತಿ ಮತ್ತು ಸನ್ನಡತೆಯ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆಯನ್ನು ಖಂಡಿಸಿ, ಇಂದು (ಶನಿವಾರ), ಬೆಳಿಗ್ಗೆ 10.30 ಕ್ಕೇ, ಅಂಬೇಡ್ಕರ್ ಪ್ರತಿಮೆ, ಪುರಭವನ, ಮೈಸೂರು ಸೇರಿದಂತೆ ರಾಜ್ಯಾದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆ ಯಲ್ಲಿ 25 ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಸಂಘಟನೆಗಳಾದ ಸಮತಾ ವೇದಿಕೆ, RLHP, PUCL ಮೈಸೂರು, ಶಕ್ತಿ ಧಾಮ, AIMSS, AIPWA, NFIW, [&#8230;]]]></description>
										<content:encoded><![CDATA[
<p class="has-medium-font-size"><strong>ಮೈಸೂರು:</strong> ಬಿಲ್ಕಿಸ್ ಭಾನು ಸಾಮೂಹಿಕ ಅತ್ಯಾಚಾರ ಹಾಗೂ 14 ಜನರ ಕೊಲೆಪ್ರಕರಣ ದಲ್ಲಿ ಬಿಡುಗಡೆಯಾದ 11 ಅಪರಾಧಿಗಳ ಕ್ಷಮಾದಾನ ಹಾಗೂ ಶಿಕ್ಷಾ ವಿನಾಯತಿ ಮತ್ತು ಸನ್ನಡತೆಯ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆಯನ್ನು ಖಂಡಿಸಿ, ಇಂದು (ಶನಿವಾರ), ಬೆಳಿಗ್ಗೆ 10.30 ಕ್ಕೇ, ಅಂಬೇಡ್ಕರ್ ಪ್ರತಿಮೆ, ಪುರಭವನ, ಮೈಸೂರು ಸೇರಿದಂತೆ ರಾಜ್ಯಾದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.</p>



<p class="has-medium-font-size">ಪ್ರತಿಭಟನೆ ಯಲ್ಲಿ 25 ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದು, ಸಂಘಟನೆಗಳಾದ ಸಮತಾ ವೇದಿಕೆ, RLHP, PUCL ಮೈಸೂರು, ಶಕ್ತಿ ಧಾಮ, AIMSS, AIPWA, NFIW, ಆಮ್ ಆದ್ಮಿ ಪಾರ್ಟಿ (ಆಪ್), ಸಿಪಿಐ ಎಂ ಎಲ್, ಸಿಪಿಎಂ, AIARLA (ಕೃಷಿ ಕೂಲಿ ಸಂಘ), ಎಸ್ ಎಫ್ ಐ, ಕನ್ನಡ ಕ್ರಿಯಾ ಸಮಿತಿ, CSSI ( Congregation of the Sisters of SaintTheresa), ODP, ಮೈಸೂರು ವಿಶ್ವವಿದ್ಯಾನಿಲಯ ಸಂಶೋಧನಾ ವಿಧ್ಯಾರ್ಥಿ ಸಂಘಟನೆ, ಸಮತಾ ಅಧ್ಯಯನ ಕೇಂದ್ರ, Responsible Citizens of India,&nbsp; ಹಿಂದುಳಿದ ವರ್ಗಗಳ ಸಂಘಟನೆ, ನವೋದಯ, C R I, ರೈತ ಸಂಘ, DSS, ರಂಗಕರ್ಮಿ ಸಂಘಟನೆ, ಹೀಗೆ ಹಲವು ಸಂಘ ಸಂಸ್ಥೆ ಭಾಗವಹಿಸಿದ್ದವು.</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/08/ಬಿಲ್ಕಿಸ್‌-ಬಾನು-ದಾವಣಗೆರೆ.jpg" alt="" class="wp-image-3182" width="460" height="327" srcset="https://peepalmedia.com/wp-content/uploads/2022/08/ಬಿಲ್ಕಿಸ್‌-ಬಾನು-ದಾವಣಗೆರೆ.jpg 658w, https://peepalmedia.com/wp-content/uploads/2022/08/ಬಿಲ್ಕಿಸ್‌-ಬಾನು-ದಾವಣಗೆರೆ-300x213.jpg 300w" sizes="auto, (max-width: 460px) 100vw, 460px" /><figcaption><strong>ಬಿಲ್ಕಿಸ್‌ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ ಖಂಡಿಸಿ ದಾವಣಗೆರೆಯಲ್ಲಿ ಪ್ರತಿಭಟನೆ</strong></figcaption></figure></div>


<p class="has-medium-font-size">ಪ್ರತಿಭಟನೆಯಲ್ಲಿ ಶ್ರೀ ಪಾ ಮಲ್ಲೇಶ್, ಚಿತ್ರ ನಟ ಪ್ರಕಾಶ್ ರೈ, ಎಂ.ಎಸ್‌.ರಾಮೇಶ್ವರ ವರ್ಮಾ ,ಡಾ. ವಿ. ಲಕ್ಷ್ಮೀನಾರಾಯಣ, ಸಾಹಿತಿ ನ. ದಿವಾಕರ್, ಪ್ರೋ. ಕಾಳಚೆನ್ನೆಗೌಡ, ಪ್ರೋ ಆರ್‌.ಇಂದಿರ ಹಾಗೂ ಹಲವು ರಂಗಗಳಲ್ಲಿ ಕೆಲಸ ನಿರ್ವಹಿಸಿದ ಗಣ್ಯರು ಭಾಗವಹಿಸಿದ್ದರು.</p>



<p class="has-medium-font-size">ಈ ಪ್ರತಿಭಟನೆಯಲ್ಲಿ, ಹಲವು ಸಾಮಾಜಿಕ ರಂಗಗಳಿಂದ ಪ್ರೊಫೆಸರ್‌ಗಳು, ವಿಜ್ಞಾನಿಗಳು, ಡಾಕ್ಟರ್‌ಗಳು, ವಿದ್ಯಾರ್ಥಿ ಗಳು, ಪತ್ರಕರ್ತರು ಸಾಮಾಜಿಕ ಕಾರ್ಯ ಕರ್ತೆಯರು, ಪೌರಕಾರ್ಮಿಕರು ಹೆಚ್ಚಿನ ಸಂಖ್ಯೆಲ್ಲಿ ಭಾಗವಹಿಸಿದ್ದು, ಅತ್ಯಾಚಾರಿಗಳಿಗೆ ನೀಡಿರುವ ಕ್ಷಮಾಧಾನವನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದರು.</p>
]]></content:encoded>
					
		
		
			</item>
	</channel>
</rss>
