<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>editors guild &#8211; Peepal Media</title>
	<atom:link href="https://peepalmedia.com/tag/editors-guild/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 03 Oct 2023 12:25:40 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>editors guild &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ನ್ಯೂಸ್‌ಕ್ಲಿಕ್ ಪತ್ರಕರ್ತರ ಮನೆಗಳ ಮೇಲೆ ದಾಳಿ: ಮಾಧ್ಯಮಗಳ ಬಾಯಿ ಮುಚ್ಚಿಸುವ ಯತ್ನ – ಎಡಿಟರ್ಸ್‌ ಗಿಲ್ಡ್‌</title>
		<link>https://peepalmedia.com/another-attempt-to-muzzle-media-editors-guild-flags-concern-over-raids-on-residences-of-newsclick-journalists/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 03 Oct 2023 12:24:14 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[Delhi]]></category>
		<category><![CDATA[editors guild]]></category>
		<category><![CDATA[india]]></category>
		<category><![CDATA[Journalist]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[media]]></category>
		<category><![CDATA[news]]></category>
		<category><![CDATA[NewsClick]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[police ride]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=28864</guid>

					<description><![CDATA[ನವದೆಹಲಿ, ಅಕ್ಟೋಬರ್ 3: ಆನ್‌ಲೈನ್ ಪೋರ್ಟಲ್ ನ್ಯೂಸ್‌ಕ್ಲಿಕ್‌ಗೆ ಸಂಬಂಧಪಟ್ಟ ಪತ್ರಕರ್ತರ ನಿವಾಸಗಳ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿರುವ ಬಗ್ಗೆ &#160;ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕಳವಳ ವ್ಯಕ್ತಪಡಿಸಿದೆ. ಮಂಗಳವಾರ ನಡೆದಿರುವ ಮೂವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದಿರುವ ದಾಳಿಗಳನ್ನು &#160;“ಮಾಧ್ಯಮಗಳ ಬಾಯಿ ಮುಚ್ಚಿಸುವ ಮತ್ತೊಂದು ಪ್ರಯತ್ನ” ಎಂದು ಟೀಕಸಿದೆ. ಆಗಸ್ಟ್ 17 ರಂದು ಯುಎಪಿಎ ಮತ್ತು 153A (ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಮತ್ತು 120B (ಕ್ರಿಮಿನಲ್ ಪಿತೂರಿ) ಸೇರಿದಂತೆ ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ [&#8230;]]]></description>
										<content:encoded><![CDATA[
<p><strong>ನವದೆಹಲಿ, ಅಕ್ಟೋಬರ್ 3:</strong> ಆನ್‌ಲೈನ್ ಪೋರ್ಟಲ್ ನ್ಯೂಸ್‌ಕ್ಲಿಕ್‌ಗೆ ಸಂಬಂಧಪಟ್ಟ ಪತ್ರಕರ್ತರ ನಿವಾಸಗಳ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿರುವ ಬಗ್ಗೆ &nbsp;ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕಳವಳ ವ್ಯಕ್ತಪಡಿಸಿದೆ. ಮಂಗಳವಾರ ನಡೆದಿರುವ ಮೂವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದಿರುವ ದಾಳಿಗಳನ್ನು &nbsp;“ಮಾಧ್ಯಮಗಳ ಬಾಯಿ ಮುಚ್ಚಿಸುವ ಮತ್ತೊಂದು ಪ್ರಯತ್ನ” ಎಂದು ಟೀಕಸಿದೆ.</p>



<p>ಆಗಸ್ಟ್ 17 ರಂದು ಯುಎಪಿಎ ಮತ್ತು 153A (ಎರಡು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಮತ್ತು 120B (ಕ್ರಿಮಿನಲ್ ಪಿತೂರಿ) ಸೇರಿದಂತೆ ಐಪಿಸಿಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಲಾಗಿರುವ &nbsp;ದೂರಿಗೆ ಸಂಬಂಧಿಸಿದಂತೆ ಈ ದಾಳಿಗಳು ನಡೆದಿವೆ.</p>


<div class="wp-block-image">
<figure class="aligncenter size-large is-resized"><img fetchpriority="high" decoding="async" src="https://peepalmedia.com/wp-content/uploads/2023/10/delhi-police-16644456051-1696304867-1024x576.jpg" alt="" class="wp-image-28870" style="width:450px;height:253px" width="450" height="253" srcset="https://peepalmedia.com/wp-content/uploads/2023/10/delhi-police-16644456051-1696304867-1024x576.jpg 1024w, https://peepalmedia.com/wp-content/uploads/2023/10/delhi-police-16644456051-1696304867-300x169.jpg 300w, https://peepalmedia.com/wp-content/uploads/2023/10/delhi-police-16644456051-1696304867-768x432.jpg 768w, https://peepalmedia.com/wp-content/uploads/2023/10/delhi-police-16644456051-1696304867-150x84.jpg 150w, https://peepalmedia.com/wp-content/uploads/2023/10/delhi-police-16644456051-1696304867-696x392.jpg 696w, https://peepalmedia.com/wp-content/uploads/2023/10/delhi-police-16644456051-1696304867-1068x601.jpg 1068w, https://peepalmedia.com/wp-content/uploads/2023/10/delhi-police-16644456051-1696304867.jpg 1200w" sizes="(max-width: 450px) 100vw, 450px" /></figure></div>


<p>ಘಟನೆಯ ಕುರಿತು ಪ್ರತಿಕ್ರಿಯಿಸಿದ ಎಡಿಟರ್ಸ್ ಗಿಲ್ಡ್ ಇಂದು ಮುಂಜಾನೆ ಹಿರಿಯ ಪತ್ರಕರ್ತರ ಮನೆಗಳ ಮೇಲೆ ನಡೆದ  ಈ ದಾಳಿಯ ಬಗ್ಗೆ &#8220;ಅತೀವ ಕಳವಳಕಾರಿ&#8221; ಎಂದು ಹೇಳಿಕೆ ನೀಡಿದೆ. ಈ ಸಂದರ್ಭದಲ್ಲಿ ಅವರ ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಿರಿಯ ಪತ್ರಕರ್ತರನ್ನು ದೆಹಲಿ ಪೊಲೀಸರು &#8216;ತನಿಖೆ&#8217;ಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.  </p>



<p><strong><a href="https://peepalmedia.com/delhi-police-raids-on-journalists-of-newsclick-and-fir-under-uapa/" data-type="link" data-id="https://peepalmedia.com/delhi-police-raids-on-journalists-of-newsclick-and-fir-under-uapa/">ಪತ್ರಕರ್ತರ ಮನೆಗಳ ಮೇಲೆ ದೆಹಲಿ ಪೊಲೀಸ್‌ ದಾಳಿ: ನ್ಯೂಸ್‌ಕ್ಲಿಕ್‌ ಮೇಲೆ UAPA ಅಡಿಯಲ್ಲಿ ಕೇಸ್</a></strong></p>



<p>ಈ ದಾಳಿ ಮಾಧ್ಯಮಗಳನ್ನು ಮೌನವಾಗಿಸುವ ಮತ್ತೊಂದು ಪ್ರಯತ್ನ ಎಂದು ಕಳವಳ ವ್ಯಕ್ತಪಡಿಸಿರುವ EGI &#8220;ನಿಜವಾದ ಅಪರಾಧಗಳು ನಡೆದಿದ್ದರೆ ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳಬೇಕು. ಕಠೋರ ಕಾನೂನುಗಳ ಅಡಿಯಲ್ಲಿ ಬೆದರಿಸುವುದು, ಅಥವಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ, ಭಿನ್ನ ಮತ್ತು ವಿಮರ್ಶಾತ್ಮಕ ಧ್ವನಿಗಳನ್ನು ನಿಯಂತ್ರಿಸುವುದು ಸರಿಯಲ್ಲ, ”ಎಂದು ಹೇಳಿಕೆ ನೀಡಿದೆ.</p>



<p>&#8220;ಪ್ರಜಾಪ್ರಭುತ್ವದಲ್ಲಿ ಸ್ವತಂತ್ರ ಮಾಧ್ಯಮಗಳ ಪ್ರಾಮುಖ್ಯತೆಯನ್ನು ನಾವು ಸರ್ಕಾರಕ್ಕೆ ನೆನಪಿಸುತ್ತೇವೆ. ಅವುಗಳನ್ನು ನಾಲ್ಕನೇ ಸ್ತಂಭವೆಂದು ಗೌರವಿಸಿ, ರಕ್ಷಿಸಲು ಒತ್ತಾಯಿಸುತ್ತೇವೆ&#8221; ಎಂದು ಆಗ್ರಹಿಸಿದೆ.</p>
]]></content:encoded>
					
		
		
			</item>
		<item>
		<title>ಫ್ಯಾಕ್ಟ್‌ ಚೆಕ್‌ ಯೂನಿಟ್‌ನಿಂದ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಿಲ್ಲ: ಎಡಿಟರ್ಸ್ ಗಿಲ್ಡ್ ಕಳವಳಕ್ಕೆ ಪ್ರಿಯಾಂಕ್‌ ಖರ್ಗೆ ಉತ್ತರ</title>
		<link>https://peepalmedia.com/freedom-of-press-is-not-threatened-by-fact-check-unit/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 29 Aug 2023 13:40:34 +0000</pubDate>
				<category><![CDATA[ರಾಜಕೀಯ]]></category>
		<category><![CDATA[editors guild]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=26719</guid>

					<description><![CDATA[ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಹಬ್ಬುತ್ತಿರುವ ಸುಳ್ಳು ಸುದ್ದಿಗಳನ್ನು ಪತ್ತೆ ಮಾಡಿ, ಅವುಗಳನ್ನು ತೊಡೆದು ಹಾಕಲು ಕರ್ನಾಟಕ ಸರ್ಕಾರ &#8216;ಸತ್ಯ-ಪರಿಶೀಲನಾ ಘಟಕ (Fact Checking Unit)&#8217;ವನ್ನು ಸ್ಥಾಪಿಸಲು ತೀರ್ಮಾನಿಸಿದೆ. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಸುಳಿವುಗಳನ್ನು ನೀಡಿದ್ದಾರೆ. ಆದರೆ ಈ ಘಟಕವು ಭಿನ್ನ ದನಿಗಳನ್ನು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಬಹುದು ಎಂಬ ಆತಂಕದಿಂದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕರ್ನಾಟಕ ಸರ್ಕಾರಕ್ಕೆ ಪತ್ರವನ್ನು ಬರೆದಿದೆ. [&#8230;]]]></description>
										<content:encoded><![CDATA[
<p>ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಹಬ್ಬುತ್ತಿರುವ ಸುಳ್ಳು ಸುದ್ದಿಗಳನ್ನು ಪತ್ತೆ ಮಾಡಿ, ಅವುಗಳನ್ನು ತೊಡೆದು ಹಾಕಲು ಕರ್ನಾಟಕ ಸರ್ಕಾರ &#8216;ಸತ್ಯ-ಪರಿಶೀಲನಾ ಘಟಕ (Fact Checking Unit)&#8217;ವನ್ನು ಸ್ಥಾಪಿಸಲು ತೀರ್ಮಾನಿಸಿದೆ. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಸುಳಿವುಗಳನ್ನು ನೀಡಿದ್ದಾರೆ.</p>



<p>ಆದರೆ ಈ ಘಟಕವು ಭಿನ್ನ ದನಿಗಳನ್ನು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಬಹುದು ಎಂಬ ಆತಂಕದಿಂದ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಕರ್ನಾಟಕ ಸರ್ಕಾರಕ್ಕೆ ಪತ್ರವನ್ನು ಬರೆದಿದೆ.</p>



<figure class="wp-block-image size-large"><img decoding="async" width="724" height="1024" src="https://peepalmedia.com/wp-content/uploads/2023/08/SAVE_20230829_191005-724x1024.jpg" alt="" class="wp-image-26722" srcset="https://peepalmedia.com/wp-content/uploads/2023/08/SAVE_20230829_191005-724x1024.jpg 724w, https://peepalmedia.com/wp-content/uploads/2023/08/SAVE_20230829_191005-212x300.jpg 212w, https://peepalmedia.com/wp-content/uploads/2023/08/SAVE_20230829_191005-768x1087.jpg 768w, https://peepalmedia.com/wp-content/uploads/2023/08/SAVE_20230829_191005-1085x1536.jpg 1085w, https://peepalmedia.com/wp-content/uploads/2023/08/SAVE_20230829_191005-150x212.jpg 150w, https://peepalmedia.com/wp-content/uploads/2023/08/SAVE_20230829_191005-300x425.jpg 300w, https://peepalmedia.com/wp-content/uploads/2023/08/SAVE_20230829_191005-696x985.jpg 696w, https://peepalmedia.com/wp-content/uploads/2023/08/SAVE_20230829_191005-1068x1512.jpg 1068w, https://peepalmedia.com/wp-content/uploads/2023/08/SAVE_20230829_191005.jpg 1240w" sizes="(max-width: 724px) 100vw, 724px" /></figure>



<p>ಈ ಪತ್ರಕ್ಕೆ ಟ್ವಿಟರ್‌ ಮೂಲಕ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್‌ ಖರ್ಗೆ “ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಅಭಿಪ್ರಾಯದಂತೆ ಆನ್‌ಲೈನ್‌ನಲ್ಲಿ ಬಿತ್ತರವಾಗುವ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ನಿವಾರಿಸಲು ಸೂಕ್ತ ಕ್ರಮಗಳ ಅನುಷ್ಠಾನದ ಅಗತ್ಯವಿದೆ. ನಮ್ಮ ಸತ್ಯ-ಪರಿಶೀಲನಾ ಘಟಕವು ಪಕ್ಷಪಾತವಿಲ್ಲದೆ ಅರಾಜಕೀಯ ನಿಲುವನ್ನು ಎತ್ತಿಹಿಡಿಯಲಿದೆ ಮತ್ತು ಸಾರ್ವಜನಿಕರಿಗೆ ಇದರ ವಿಧಾನಗಳನ್ನು ಪಾರದರ್ಶಕವಾಗಿ ವಿವರಿಸಲಿದೆ,” ಎಂದಿದ್ದಾರೆ.</p>



<p>“ಇದಕ್ಕಾಗಿ ನಾವು ಸ್ವತಂತ್ರ ಸಂಸ್ಥೆಯನ್ನು ಸ್ಥಾಪಿಸುವ ಯೋಜನೆಯಲ್ಲಿದ್ದೇವೆ. ಅದು ನಕಲಿ ಸುದ್ದಿ ಮತ್ತು ತಪ್ಪು ಮಾಹಿತಿಯ ವಿರುದ್ಧ ಹೋರಾಡಲು ನಮಗೆ ಸಹಾಯ ಮಾಡಲಿದೆ. ಕರ್ನಾಟಕ ಸರ್ಕಾರ ಬಸವಣ್ಣ ಮತ್ತು ಬಾಬಾಸಾಹೇಬರ ವಿಚಾರಧಾರೆಗಳಿಗೆ ಬದ್ಧವಾಗಿದೆ. ನಾವು Natural Justiceನ ತತ್ವಗಳನ್ನು ಶ್ರದ್ಧೆಯಿಂದ ಅನುಸರಿಸುತ್ತೇವೆ. ಈ ಘಟಕವು ಯಾವುದೇ ರೀತಿಯಲ್ಲೂ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದಿಲ್ಲ,” ಎಂದು ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">As acknowledged by the Editors Guild of India, the online realm faces a challenge of misinformation and fake news, necessitating the implementation of measures to address this issue.<br><br>I wish to reassure the esteemed organization that our fact-check unit will uphold an apolitical… <a href="https://t.co/PYbGE8VkRy">https://t.co/PYbGE8VkRy</a></p>&mdash; Priyank Kharge / ಪ್ರಿಯಾಂಕ್ ಖರ್ಗೆ (@PriyankKharge) <a href="https://twitter.com/PriyankKharge/status/1696338227219902810?ref_src=twsrc%5Etfw">August 29, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಏನಿದೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪತ್ರದಲ್ಲಿ?<br>ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ &#8216;ನಕಲಿ ಸುದ್ದಿ&#8217;ಗಳ ಮೇಲೆ ನಿಗಾ ಇಡಲು &#8216;ಸತ್ಯ-ಪರಿಶೀಲನಾ ಘಟಕ (Fact Checking Unit)&#8217;ವನ್ನು ಸ್ಥಾಪಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು ಕೆಲವು ಅಂಶಗಳನ್ನು ಏಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ ಗಮನಿಸಿದೆ.<br>ಕರ್ನಾಟಕ್‌ ಐಟಿ ಮತ್ತು ಬಿಟಿ ಸಚಿವರ ಪ್ರಕಾರ, &#8220;ಫ್ಯಾಕ್ಟ್‌ ಚೆಕ್ಕಿಂಗ್‌ ಯೂನಿಟ್‌ನಿಂದ ನಕಲಿ ಎಂದು ಕಂಡು ಬಂದ ಪೋಸ್ಟ್‌ಗಳು ಮತ್ತು ವರದಿಗಳನ್ನು ತೆಗೆದುಹಾಕಲಾಗುತ್ತದೆ. ಅಗತ್ಯವಿದ್ದರೆ, ಸರ್ಕಾರವು IPCಯ ಸಂಬಂಧಿತ ಕಾನೂನುಗಳಡಿಯಲ್ಲಿ ಕ್ರಮಗಳನ್ನು ಸಹ ತೆಗೆದುಕೊಳ್ಳುತ್ತದೆ,&#8221; ಎಂದಿದ್ದಾರೆ.<br>ಪೋಸ್ಟ್‌ ಅಥವಾ ವರದಿ ನಕಲಿಯೋ ಅಥವಾ ಅಸಲಿಯೋ ಎಂದು ನಿರ್ಧರಿಸುವ ಏಕೈಕ ಅಧಿಕಾರವನ್ನು ಹೊಂದಿರುವ ಫ್ಯಾಕ್ಟ್‌ ಚೆಕ್ಕಿಂಗ್‌ ಯೂನಿಟ್‌ನ ಸ್ಥಾಪನೆಗೆ ಅನುವು ಮಾಡಿಕೊಡುವ IT Rule 2003ಗೆ ಮಾಡುವ ತಿದ್ದುಪಡಿಯನ್ನು ಪ್ರಶ್ನಿಸಿ ಗಿಲ್ಡ್ ಈಗಾಗಲೇ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದೆ.</p>



<p>ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳಿಂದ ಸಮಸ್ಯೆಗಳಿವೆ, ವಿಶೇಷವಾಗಿ ಆನ್‌ಲೈನ್‌ ಮಾಧ್ಯಮಗಳಲ್ಲಿ. ಆದರೆ ಅವುಗಳನ್ನು<br>ಪರಿಶೀಲಿಸುವ ಪ್ರಯತ್ನ ಸರ್ಕಾರದ ಏಕೈಕ ವ್ಯಾಪ್ತಿಗೆ ಬಾರದ ಸ್ವತಂತ್ರ ಸಂಸ್ಥೆಗಳಿಂದ ನಡೆಯಬೇಕು. ಏಕೆಂದರೆ ಇದು ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕುವ ಸಾಧನಗಳಾಗಬಾರದು.</p>



<p>ಇದರ ಮೇಲ್ವಿಚಾರಣಾ ಪ್ರಕ್ರಿಯೆ ಪೂರ್ವ ಸೂಚನೆ ನೀಡುವ, ಮೇಲ್ಮನವಿ ಸಲ್ಲಿಸುವ ಹಕ್ಕು ಮತ್ತು ನ್ಯಾಯಾಂಗದ ಮೇಲ್ವಿಚಾರಣೆ ಸೇರಿದಂತೆ Natural Justice ನ ತತ್ವಗಳನ್ನು ಅನುಸರಿಸಬೇಕು. ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರ ಸೂಕ್ತ ಸಮಾಲೋಚನೆ ಮತ್ತು ಒಳಗೊಳ್ಳುವಿಕೆಯೊಂದಿಗೆ ಈ ಘಟಕವನ್ನು ಸ್ಥಾಪಿಸಬೇಕು.</p>



<p>ಫ್ಯಾಕ್ಟ್‌ ಚೆಕ್ಕಿಂಗ್‌ ಯೂನಿಟ್‌ನ ವ್ಯಾಪ್ತಿ ಮತ್ತು ಅಧಿಕಾರಗಳು ಹಾಗೂ ಅದು ಕಾರ್ಯನಿರ್ವಹಿಸುವ ಆಡಳಿತ ಕಾರ್ಯವಿಧಾನವನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸುವಂತೆ ಗಿಲ್ಡ್ ಪತ್ರದ ಮುಖೇನ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದೆ. ಈ ಸಂಸ್ಥೆಯ ಕಾರ್ಯವಿಧಾನ ಚೌಕಟ್ಟನ್ನು ರೂಪಿಸಲು ಪತ್ರಿಕಾ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಪತ್ರದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.</p>



<p>ಏನಿದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ?<br>ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳ ಸಂಪಾದಕೀಯದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶಗಳೊಂದಿಗೆ 1978 ರಲ್ಲಿ ಸ್ಥಾಪನೆಯಾದ ಸಂಸ್ಥೆ ಎಂದು ಇದರ ವೆಬ್‌ ಸೈಟ್‌ ಹೇಳಿದೆ. ಇದೊಂದು ಪತ್ರಿಕಾ ಸಂಪಾದಕರ ಲಾಭರಹಿತ ಸಂಸ್ಥೆಯಾಗಿದೆ.</p>
]]></content:encoded>
					
		
		
			</item>
		<item>
		<title>ಫ್ಯಾಕ್ಟ್‌ ಚೆಕ್‌ ಘಟಕ ಸ್ಥಾಪನೆ: ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಎಡಿಟರ್ಸ್ ಗಿಲ್ಡ್ ಕಳವಳ</title>
		<link>https://peepalmedia.com/editors-guild-objects-fact-cehck-unit/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 27 Aug 2023 14:55:06 +0000</pubDate>
				<category><![CDATA[ದೇಶ]]></category>
		<category><![CDATA[ಮೀಡಿಯಾ]]></category>
		<category><![CDATA[ರಾಜ್ಯ]]></category>
		<category><![CDATA[editors guild]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=26540</guid>

					<description><![CDATA[ನ್ಯೂಡೆಲ್ಲಿ: ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಡಲಾಗುವ &#8220;ನಕಲಿ ಸುದ್ದಿ&#8221; ಗಳ ಮೇಲೆ ನಿಗಾ ಇಡಲು ಫ್ಯಾಕ್ಟ್‌ ಚೆಕ್ ಘಟಕವನ್ನು ಸ್ಥಾಪಿಸುವ ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಭಾನುವಾರ ಕಳವಳ ವ್ಯಕ್ತಪಡಿಸಿದೆ. ಫ್ಯಾಕ್ಟ್‌ ಚೆಕ್ಕಿಂಗ್ ಪ್ರಯತ್ನಗಳನ್ನು ಸರ್ಕಾರದ ಬದಲು ಸ್ವಾಯತ್ತ ಸಂಸ್ಥೆಗಳು ನಡೆಸಬೇಕು, ಇಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕುವ ಸಾಧನಗಳಾಗಿ ಬದಲಾಗುತ್ತವೆ ಎಂದು ಅದು ಅಭಿಪ್ರಾಯಪಟ್ಟಿದೆ. ಫ್ಯಾಕ್ಟ್‌ ಚೆಕ್‌ನಂತಹ ಯಾವುದೇ ಮೇಲ್ವಿಚಾರಣಾ ಚೌಕಟ್ಟುಗಳು ಪೂರ್ವ ಸೂಚನೆ ನೀಡುವುದು, ಮೇಲ್ಮನವಿ [&#8230;]]]></description>
										<content:encoded><![CDATA[
<p>ನ್ಯೂಡೆಲ್ಲಿ: ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಡಲಾಗುವ &#8220;ನಕಲಿ ಸುದ್ದಿ&#8221; ಗಳ ಮೇಲೆ ನಿಗಾ ಇಡಲು ಫ್ಯಾಕ್ಟ್‌ ಚೆಕ್ ಘಟಕವನ್ನು ಸ್ಥಾಪಿಸುವ ಕರ್ನಾಟಕ ಸರ್ಕಾರದ ನಿರ್ಧಾರದ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಭಾನುವಾರ ಕಳವಳ ವ್ಯಕ್ತಪಡಿಸಿದೆ.</p>



<p>ಫ್ಯಾಕ್ಟ್‌ ಚೆಕ್ಕಿಂಗ್ ಪ್ರಯತ್ನಗಳನ್ನು ಸರ್ಕಾರದ ಬದಲು ಸ್ವಾಯತ್ತ ಸಂಸ್ಥೆಗಳು ನಡೆಸಬೇಕು, ಇಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಭಿನ್ನಾಭಿಪ್ರಾಯದ ಧ್ವನಿಗಳನ್ನು ಹತ್ತಿಕ್ಕುವ ಸಾಧನಗಳಾಗಿ ಬದಲಾಗುತ್ತವೆ ಎಂದು ಅದು ಅಭಿಪ್ರಾಯಪಟ್ಟಿದೆ.</p>



<p>ಫ್ಯಾಕ್ಟ್‌ ಚೆಕ್‌ನಂತಹ ಯಾವುದೇ ಮೇಲ್ವಿಚಾರಣಾ ಚೌಕಟ್ಟುಗಳು ಪೂರ್ವ ಸೂಚನೆ ನೀಡುವುದು, ಮೇಲ್ಮನವಿ ಸಲ್ಲಿಸುವ ಹಕ್ಕು ಮತ್ತು ನ್ಯಾಯಾಂಗ ಮೇಲ್ವಿಚಾರಣೆ ಸೇರಿದಂತೆ ನೈಸರ್ಗಿಕ ನ್ಯಾಯದ ತತ್ವಗಳನ್ನು ಅನುಸರಿಸಬೇಕು ಎಂದು ಗಿಲ್ಡ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.</p>



<p>ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥೆಗಳು ಸೇರಿದಂತೆ ಎಲ್ಲಾ ಪಾಲುದಾರರ ಸೂಕ್ತ ಸಮಾಲೋಚನೆ ಮತ್ತು ಒಳಗೊಳ್ಳುವಿಕೆಯೊಂದಿಗೆ ಇಂತಹ ಫ್ಯಾಕ್ಟ್‌ ಚೆಕಿಂಗ್ ಘಟಕಗಳನ್ನು ಸ್ಥಾಪಿಸಬೇಕು ಎಂದು ಅದು ಹೇಳಿದೆ.</p>



<p>ಗಿಲ್ಡ್ ಈಗಾಗಲೇ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಐಟಿ ನಿಯಮಗಳು 2023ರ ತಿದ್ದುಪಡಿಯನ್ನು ಪ್ರಶ್ನಿಸಿ ಈ ಕಾಯ್ದೆಯು ʼಫ್ಯಾಕ್ಟ್‌ ಚೆಕ್‌ʼ ಘಟಕವನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ ಎಂದಿದ್ದಾರೆ. ಅದರಡಿಯಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕರು ಸುಳ್ಳು ಯಾವುದು ಎನ್ನುವುದನ್ನು ಕಂಡುಹಿಡಿಯುವ ಅಧಿಕಾರವನ್ನು ಏಕಸ್ವಾಮ್ಯವಾಗಿ ಹೊಂದಿರುತ್ತಾರೆ. ಮತ್ತು ಇದು ಅವರಿಗೆ ಅಂತಹ ʼವಿಷಯ-ವಸ್ತುವನ್ನುʼ ಹಿಂತೆಗೆದುಕೊಳ್ಳಲು ಆದೇಶ ನೀಡುವ ಅಧಿಕಾರವನ್ನೂ ನೀಡುತ್ತದೆ ಎಂದು ದೂರಿದೆ.</p>



<p>ಕರ್ನಾಟಕದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ &#8220;ಫ್ಯಾಕ್ಟ್‌ ಚೆಕ್ ಘಟಕದಿಂದ ನಕಲಿ ಎಂದು ಟ್ಯಾಗ್ ಮಾಡಲ್ಪಟ್ಟ ಪೋಸ್ಟ್‌ಗಳು ಮತ್ತು ವರದಿಗಳನ್ನು ತೆಗೆದುಹಾಕಲಾಗುವುದು&#8221; ಮತ್ತು &#8220;ಅಗತ್ಯವಿದ್ದರೆ, ಸರ್ಕಾರವು ಐಪಿಸಿಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸಂಬಂಧಪಟ್ಟವರ ಮೇಲೆ ದಂಡದ ಕ್ರಮಗಳನ್ನು ಸಹ ತೆಗೆದುಕೊಳ್ಳಬಹುದು&#8221; ಎಂದು ಹೇಳಿದ್ದರು. .</p>
]]></content:encoded>
					
		
		
			</item>
	</channel>
</rss>
