<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Election Commission of India &#8211; Peepal Media</title>
	<atom:link href="https://peepalmedia.com/tag/election-commission-of-india/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 19 Aug 2025 06:44:55 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Election Commission of India &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಒಂದು ಮನೆ ವಿಳಾಸದಲ್ಲಿ ಬೇರೆ ಬೇರೆ ಸಮುದಾಯಗಳ 24 ಮತದಾರರು! &#8211; ತಂಡಗಳಿಂದ ಬಿಹಾರದ ಮತದಾರರ ಪಟ್ಟಿ ಪರಿಶೀಲನೆ</title>
		<link>https://peepalmedia.com/24-voters-from-different-communities-at-one-home-address-teams-verify-bihars-voter-list/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 19 Aug 2025 06:27:22 +0000</pubDate>
				<category><![CDATA[ಅಂಕಣ]]></category>
		<category><![CDATA[bengaluru]]></category>
		<category><![CDATA[bihar]]></category>
		<category><![CDATA[Election Commission of India]]></category>
		<category><![CDATA[Gyanesh Kumar]]></category>
		<category><![CDATA[jharkhand]]></category>
		<category><![CDATA[karnataka]]></category>
		<category><![CDATA[Rahul Gandhi]]></category>
		<category><![CDATA[vote theft]]></category>
		<guid isPermaLink="false">https://peepalmedia.com/?p=64362</guid>

					<description><![CDATA[ಅಗಸ್ಟ್ ಮೂರನೇ ವಾರದ ಒಂದು ಮುಂಜಾನೆ, ಅರಾ ಪಟ್ಟಣದ ಗೌಸ್‌ಗಂಜ್‌ನ ಬೀದಿಯೊಂದರ ಮೂಲೆಯಲ್ಲಿ ಮರದ ಮೇಜಿನ ಸುತ್ತಲೂ ಜನರ ಗುಂಪೊಂದು ಜಮಾಯಿಸಿತ್ತು. ಮಳೆಯಿಂದ ರಕ್ಷಿಸಿಕೊಳ್ಳಲು ನಿರ್ಮಿಸಲಾಗಿದ್ದ ಪ್ಲಾಸ್ಟಿಕ್ ಟೆಂಟಿನ ಅಡಿಯಲ್ಲಿ ಅವರು ಗುಂಪುಗೂಡಿದ್ದರು. ಮೇಜಿನ ಮೇಲೆ ಹರಡಿದ ಕಾಗದದ ಹಾಳೆಗಳನ್ನು ಒಟ್ಟುಮಾಡಿ ಪಿನ್‌ ಮಾಡಲಾಗಿತ್ತು: ಅವು ಆ ಪಟ್ಟಣದ ಉತ್ತರ ಹೊರವಲಯದಲ್ಲಿರುವ ಅರಾ ಕ್ಷೇತ್ರದ ಬೂತ್ ಸಂಖ್ಯೆ 103 ರ ಮತದಾರರ ಪಟ್ಟಿಯ ಪ್ರಿಂಟ್‌ಔಟ್. ಇವರೆಲ್ಲಾ ವಿರೋಧ ಪಕ್ಷದ ಮಹಾಘಟಬಂಧನ್‌ನ ಭಾಗವಾಗಿರುವ ಬಿಹಾರದಲ್ಲಿ ನೋಂದಾಯಿತ ರಾಜಕೀಯ ಪಕ್ಷವಾದ [&#8230;]]]></description>
										<content:encoded><![CDATA[
<pre class="wp-block-code"><code>‌<em>ಮತದಾರರ ಪಟ್ಟಿಯನ್ನು ಅಧ್ಯಯನ ಮಾಡಿದ ತಂಡವು ಒಂದೇ ವಿಳಾಸದಲ್ಲಿ 24 ಮತದಾರರನ್ನು ನೋಂದಾಯಿಸಿರುವುದನ್ನು ಕಂಡುಹಿಡಿದಿದೆ, ಮತ್ತೊಂದು ಪ್ರಕರಣದಲ್ಲಿ, ತಂದೆಯ ವಯಸ್ಸು ಮಗಳ ವಯಸ್ಸುಗಿಂತ ಕಡಿಮೆಯಿದೆ. ಹಾಗಿದ್ದೂ, ಈ ಅನುಮಾನಗಳನ್ನು ಪರಿಶೀಲಿಸುವುದು ಒಂದು ಸವಾಲಿನ ಸಂಗತಿ</em> - 
ತುಷಾರ್ ಧಾರಾ</code></pre>



<p>ಅಗಸ್ಟ್ ಮೂರನೇ ವಾರದ ಒಂದು ಮುಂಜಾನೆ, ಅರಾ ಪಟ್ಟಣದ ಗೌಸ್‌ಗಂಜ್‌ನ ಬೀದಿಯೊಂದರ ಮೂಲೆಯಲ್ಲಿ ಮರದ ಮೇಜಿನ ಸುತ್ತಲೂ ಜನರ ಗುಂಪೊಂದು ಜಮಾಯಿಸಿತ್ತು. ಮಳೆಯಿಂದ ರಕ್ಷಿಸಿಕೊಳ್ಳಲು ನಿರ್ಮಿಸಲಾಗಿದ್ದ ಪ್ಲಾಸ್ಟಿಕ್ ಟೆಂಟಿನ ಅಡಿಯಲ್ಲಿ ಅವರು ಗುಂಪುಗೂಡಿದ್ದರು. ಮೇಜಿನ ಮೇಲೆ ಹರಡಿದ ಕಾಗದದ ಹಾಳೆಗಳನ್ನು ಒಟ್ಟುಮಾಡಿ ಪಿನ್‌ ಮಾಡಲಾಗಿತ್ತು: ಅವು ಆ ಪಟ್ಟಣದ ಉತ್ತರ ಹೊರವಲಯದಲ್ಲಿರುವ ಅರಾ ಕ್ಷೇತ್ರದ ಬೂತ್ ಸಂಖ್ಯೆ 103 ರ ಮತದಾರರ ಪಟ್ಟಿಯ ಪ್ರಿಂಟ್‌ಔಟ್. ಇವರೆಲ್ಲಾ ವಿರೋಧ ಪಕ್ಷದ ಮಹಾಘಟಬಂಧನ್‌ನ ಭಾಗವಾಗಿರುವ ಬಿಹಾರದಲ್ಲಿ ನೋಂದಾಯಿತ ರಾಜಕೀಯ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂಎಲ್) ಲಿಬರೇಶನ್‌ನ ಕಾರ್ಯಕರ್ತರಾಗಿದ್ದರು.</p>



<p>ಲಿಬರೇಶನ್‌ನ ಬಿಹಾರ ರಾಜ್ಯ ಸಮಿತಿಯ ಸದಸ್ಯರಾದ ಖುಯಾಮುದ್ದೀನ್ ಅನ್ಸಾರಿ, ಮತದಾರರ ಪಟ್ಟಿಯಲ್ಲಿ ಆಗಿರುವ ಮೋಸವನ್ನು ಪತ್ತೆಹಚ್ಚಲು, ಕಾಣೆಯಾಗಿರುವ ಹೆಸರುಗಳು ಅಥವಾ ಡಿಲಿಟ್‌ ಮಾಡಲಾಗಿರುವ ಹೆಸರುಗಳನ್ನು ಗುರುತಿಸಲು ಮತ್ತು ಕರಡು ಪಟ್ಟಿಯಲ್ಲಿರುವ ಮತದಾರರ ಮನೆ-ಮನೆ ಪರಿಶೀಲನೆಯನ್ನು ನಡೆಸಲು ರೂಪಿಸಲಾಗಿರುವ ತಂಡವೊಂದನ್ನು  ಮುನ್ನಡೆಸುತ್ತಿದ್ದರು. ಹಾಗಿದ್ದೂ, ಮಳೆಗಾಲದ ಕಾರಣ, ಇಡೀ ನೆರೆಹೊರೆಯ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿದ್ದು, ಮುಖತಃ ಹೋಗಿ ಭೇಟಿ ಮಾಡುವುದು ಸವಾಲಿನ ಸಂಗತಿಯಾಗಿತ್ತು.</p>



<p>ಖ್ವಾಮುದ್ದೀನ್ ಮತ್ತು ವಿಶ್ವಕರ್ಮ ಪಾಸ್ವಾನ್ ಮತ್ತು ಹಿಮ್ಮತ್ ಯಾದವ್ ಅವರನ್ನು ಒಳಗೊಂಡಿರುವ ಅವರ ತಂಡ ಈ ವಂಚನೆಯ ಪ್ರಕರಣಗಳನ್ನು ಗುರುತಿಸಲು ಪ್ರಯತ್ನಿಸುತ್ತಾ, ಕರಡು ಮತದಾರರ ಪಟ್ಟಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಒಂದು ನಿದರ್ಶನದಲ್ಲೇ, ಮತದಾರರ ಪಟ್ಟಿಯಲ್ಲಿ ಮನೆ ಸಂಖ್ಯೆ 10 ಎಂಬ ಒಂದೇ ವಿಳಾಸದಲ್ಲಿ 24 ಮತದಾರರು ನೋಂದಾಯಿಸಲ್ಪಟ್ಟಿರುವುದನ್ನು ಅವರು ಕಂಡುಹಿಡಿದರು ಮತ್ತು ಇದನ್ನು ವಂಚನೆಯೆಂದು ಕರೆದರು. </p>



<p>ಪಟ್ಟಿಯಲ್ಲಿ ಠಾಕೂರರು, ಬ್ರಾಹ್ಮಣರು ಮತ್ತು ಬನಿಯಾ ಹೆಸರುಗಳು ಇದ್ದುದರಿಂದ ಅವರು ಈ ತೀರ್ಮಾನಕ್ಕೆ ಬಂದಿದ್ದರು. ಬಿಹಾರದ ಜಾತಿ ವ್ಯವಸ್ಥೆಯ ವಾಸ್ತವಗಳನ್ನು ನೋಡಿದರೆ ಇದೊಂದು ವಿಚಿತ್ರವೆಂಬಂತೆ ಅವರಿಗೆ ಅನ್ನಿಸಿತ್ತು. ಅಲ್ಲದಿದ್ದರೆ ಬೇರೆ ಬೇರೆ ಜಾತಿಯ ಜನರು ಒಂದೇ ಮನೆಯ ಸದಸ್ಯರಂತೆ ಒಂದು ಮನೆಯಲ್ಲಿ ವಾಸಿಸಲು ಹೇಗೆ ಸಾಧ್ಯ?  </p>



<p>ಆಪಾದಿತ ದುಷ್ಕೃತ್ಯದ ಮತ್ತೊಂದು ಉದಾಹರಣೆಯೆಂದರೆ ತಂದೆ-ಮಗಳನ್ನು ದಂಪತಿಯೆಂಬಂತೆ ಮತದಾರರ ಹೆಸರಿನಲ್ಲಿ ಪಟ್ಟಿ ಮಾಡಿರುವುದು! ಅದೂ ತಂದೆಯ ವಯಸ್ಸು 28 ಮತ್ತು ಮಗಳ ವಯಸ್ಸು 29 ಎಂದು ಉಲ್ಲೇಖಿಸಲಾಗಿದೆ!</p>



<p>&#8220;ಮನೆ ಮನೆ ಭೇಟಿಗಳಿಂದ ಈ ವಂಚನೆಯನ್ನು ದೃಢೀಕರಿಸಲು ಸಾಧ್ಯವಿಲ್ಲ, ಮತದಾರರ ಪಟ್ಟಿಯ ವಿಸ್ತೃತ ಅಧ್ಯಯನದಿಂದ ಮಾತ್ರ ಅದನ್ನು ಬಯಲಿಗೆಳೆಯಬಹುದು&#8221; ಎಂದು ಖುಯಮ್ಮುದ್ದೀನ್ ಹೇಳುತ್ತಾರೆ. ತಮ್ಮ ಹೆಸರುಗಳನ್ನು ತಪ್ಪಾಗಿ ಅಳಿಸಲಾಗಿದೆ ಎಂದು ಆರೋಪಿಸುತ್ತಿರುವ ನೂರಾರು ಜನರ ಸಾಕ್ಷ್ಯಗಳನ್ನು ಅವರು ತಮ್ಮ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಇಟ್ಟಿದ್ದಾರೆ.</p>



<p><em>ಅನುಮಾನಾಸ್ಪದ ವಿಳಾಸದ ಮೊದಲ ನಿದರ್ಶನವನ್ನು ದಿ ವೈರ್</em>&nbsp;ಎರಡು ಕಾರಣಗಳಿಗಾಗಿ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ: ಮೊದಲನೆಯದಾಗಿ, ಈ ನಿರ್ದಿಷ್ಟ ಮನೆ ಇರುವ ಪ್ರದೇಶವು ಪ್ರವಾಹಕ್ಕೆ ಸಿಲುಕಿದೆ, ಆದ್ದರಿಂದ ಭೇಟಿ ನೀಡುವುದು ಕಷ್ಟಕರವಾಗಿದೆ. ಎರಡನೆಯದಾಗಿ, ಮತದಾರರ ಪಟ್ಟಿಯಲ್ಲಿ ಅನುಗುಣವಾದ ವಿಳಾಸವನ್ನು ನೀಡದೆ ಮನೆ ಸಂಖ್ಯೆಯನ್ನು ಪಟ್ಟಿ ಮಾಡಲಾಗಿದೆ, ಇದರಿಂದಾಗಿ ಆ ಪ್ರದೇಶದ ಪರಿಚಯವಿಲ್ಲದವರನ್ನು ಕಂಡುಹಿಡಿಯುವುದು ಕಷ್ಟಕರವಾಗಿದೆ.&nbsp;</p>



<p>ಈ ಎರಡೂ ಪ್ರಕರಣಗಳು ಚುನಾವಣಾ ವಂಚನೆಗೆ ದೊಡ್ಡ ನಿದರ್ಶನಗಳಾಗಿವೆ ಎಂದು ಲಿಬರೇಶನ್ ತಂಡಕ್ಕೆ ಮನವರಿಕೆಯಾಗಿದೆಯಾದರೂ, ವಿಷಯವು ಅಷ್ಟು ಸ್ಪಷ್ಟವಾಗಿಲ್ಲ. ಅಲ್ಲದೇ, ಇದು ಪ್ರತಿಕೂಲ ಹವಾಮಾನ ಇರುವಾಗ ಕಡಿಮೆ ಅವಧಿಯಲ್ಲಿ ಮತದಾರರ ಪಟ್ಟಿಗಳನ್ನು ಪರಿಶೀಲಿಸುವಲ್ಲಿನ ತೊಂದರೆಗಳನ್ನು ಎತ್ತಿ ತೋರಿಸುತ್ತದೆ. </p>



<p>ಮತದಾರರು ವಿಳಾಸ ಕಾಲಮ್ ಅನ್ನು ಖಾಲಿ ಬಿಡುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ ಚುನಾವಣಾ ಆಯೋಗವು ಕಾಲ್ಪನಿಕ ಮನೆ ಸಂಖ್ಯೆಗಳನ್ನು ಬಳಸುತ್ತದೆ. <a href="https://indianexpress.com/article/political-pulse/election-commission-notional-house-numbers-inclusion-roll-standardised-addresses-10185846/" target="_blank" rel="noreferrer noopener"><em>ದಿ ಇಂಡಿಯನ್ ಎಕ್ಸ್‌ಪ್ರೆಸ್</em></a><a href="https://indianexpress.com/article/political-pulse/election-commission-notional-house-numbers-inclusion-roll-standardised-addresses-10185846/" target="_blank" rel="noreferrer noopener"> ವರದಿ ಮಾಡಿದಂತೆ</a> ಚುನಾವಣಾ ಸಂಸ್ಥೆಯು ರೋಲ್‌ಗಳನ್ನು ಗಣಕೀಕರಿಸಲು ಪ್ರಾರಂಭಿಸಿದಾಗ ಇದು ಪ್ರಾರಂಭವಾಯಿತು ಮತ್ತು ಡಿಜಿಟಲೀಕರಣಕ್ಕೆ ಬದಲಾವಣೆಯ ಸಮಯದಲ್ಲಿ ಕಾಲ್ಪನಿಕ ವಿಳಾಸಗಳನ್ನು ಬಳಸುವುದು ಪ್ರಮಾಣಿಕೃತವಾಯಿತು.  </p>



<p>ಆಗಸ್ಟ್ 7 ರಂದು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು &#8220;ಕಳ್ಳತನ&#8221;ವಾಗಿದ್ದು, ಅವುಗಳಲ್ಲಿ ಅರ್ಧದಷ್ಟು ವಿಳಾಸ ಅಕ್ರಮಗಳಾಗಿವೆ ಎಂದು ಹೇಳಿದಾಗ ಈ ವಿಚಾರ ಮುನ್ನಲೆಗೆ ಬಂತು.</p>



<p>&#8220;ಮತದಾರರ ಪಟ್ಟಿಯಲ್ಲಿ ವಿಳಾಸ ಅಕ್ರಮಗಳ ಬಗ್ಗೆ ಹಲವಾರು ವ್ಯಾಖ್ಯಾನಗಳಿವೆ ಮತ್ತು ಪರಿಶೀಲಿಸಲು ಏಕೈಕ ಮಾರ್ಗವೆಂದರೆ ಮನೆಗೆ ಭೇಟಿ ನೀಡುವುದು&#8221; ಎಂದು&nbsp; ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನ ಸ್ಥಾಪಕ ಸದಸ್ಯ ಜಗದೀಪ್ ಛೋಕರ್,&nbsp;<em>ದಿ ವೈರ್</em>&nbsp;ಜೊತೆಗಿನ ದೂರವಾಣಿ ಸಂದರ್ಶನದಲ್ಲಿ ಹೇಳಿದರು.</p>



<p>&#8220;ನೀವು ರಾಜಕೀಯ ಪಕ್ಷಗಳನ್ನು ಅವಲಂಬಿಸಿದರೆ, ಅವರು ನಿಮಗೆ ಏನು ತೋರಿಸಬೇಕೆಂದು ಬಯಸುತ್ತಾರೋ ಅದನ್ನೇ ತೋರಿಸುತ್ತಾರೆ&#8221; ಎಂದು ಅವರು ಹೇಳಿದರು. ತಂದೆ-ಮಗಳ ವಯಸ್ಸಿನ ವ್ಯತ್ಯಾಸದ ಬಗ್ಗೆ ಜಗದೀಪ್ ಛೋಕರ್, ಇವುಗಳು ಸ್ಥೂಲ ದೋಷಗಳಾಗಿರಬಹುದು ಎಂದು ಹೇಳಿದರು. &#8220;ಸಣ್ಣ ಸಣ್ಣ ವೈಯಕ್ತಿಕ ದೋಷಗಳ ಬದಲು ವ್ಯವಸ್ಥಿತ ವಂಚನೆಯನ್ನು ಹುಡುಕಿ ಬಯಲಿಗೆಳೆಯಬೇಕು.&#8221; </p>



<p>ಬಿಹಾರದಲ್ಲಿ ನಡೆಸಿದ ವಿಶೇಷ ತೀವ್ರ ಪರಿಶೀಲನೆಯನ್ನು (Special Intensive Review) ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರಲ್ಲಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಕೂಡ ಒಂದು. ಆದರೆ ಹಲವಾರು ಕಾರಣಗಳಿಂದಾಗಿ, ಇದನ್ನು ಹೇಳುವುದು ಸುಲಭ, ಆದರೆ ಅನೇಕ ಕಾರಣಗಳಿಂದಾಗಿ ಮಾಡುವುದು ಅಷ್ಟು ಸುಲಭದಲ್ಲ.. </p>



<p>ಆಗಸ್ಟ್ 9 ರಂದು, ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ದಿಲಿಟ್‌ ಮಾಡಿ, ಸ್ಕ್ಯಾನ್ ಮಾಡಿದ ಚಿತ್ರಗಳನ್ನು ಅಪ್‌ಲೋಡ್‌ ಮಾಡಲಾಗಿದೆ. ಇದರ ಮೆಷಿನ್‌ ರೀಡಿಂಗ್‌ ಮಾಡುವುದು ಕಷ್ಟದ ಕೆಲಸ, ಇದರಿಂದಾಗಿ ದೊಡ್ಡ ಪ್ರಮಾಣದ ಅಕ್ರಮಗಳನ್ನು ಪತ್ತೆಹಚ್ಚಲಾಯಿತು ಎಂದು <a href="https://scroll.in/latest/1085399/election-commission-removes-digital-draft-voter-lists-in-bihar" target="_blank" rel="noreferrer noopener"><em>ಸ್ಕ್ರೋಲ್</em> ವರದಿ ಮಾಡಿದೆ</a>. </p>



<p>ಎರಡನೆಯದಾಗಿ, ಚುನಾವಣಾ ಸಂಸ್ಥೆಯು SIR ಮತದಾರರ ಪಟ್ಟಿಯಿಂದ ಅಳಿಸಲಾದವರ ಪಟ್ಟಿಯನ್ನು (ಇಲ್ಲಿಯವರೆಗೆ 65 ಲಕ್ಷ) ನೀಡಿದ್ದರೂ, ಯಾಕೆ ಅಳಿಸಲಾಗಿದೆ ಎಂಬ ಕಾರಣಗಳ ವಿವರವನ್ನು ನೀಡಿಲ್ಲ. ಎಷ್ಟು ಹೆಸರುಗಳು ಸ್ಥಳಾಂತರಗೊಂಡಿವೆ, ಎಷ್ಟು ಜನ ಸತ್ತಿದ್ದಾರೆ ಅಥವಾ ನಕಲಿ ನಮೂದುಗಳಾಗಿದ್ದವು ಎಂದು ತಿಳಿಯಲು ಯಾವುದೇ ಮಾರ್ಗವಿಲ್ಲ. ಈ ಮಾಹಿತಿಯಿಲ್ಲದೆ, ನೆಲಮಟ್ಟದಲ್ಲಿ ಪರಿಶೀಲನೆ ನಡೆಸುವುದು ಇನ್ನಷ್ಟು ಕಷ್ಟಕರವಾಗುತ್ತದೆ. </p>



<p>ಆಗಸ್ಟ್ 14 ರಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಅಳಿಸುವಿಕೆಗೆ ಕಾರಣಗಳ ಜೊತೆಗೆ ಪಟ್ಟಿಯನ್ನು ಪ್ರಕಟಿಸುವಂತೆ ನಿರ್ದೇಶನ ನೀಡಿದ್ದರೂ, ಕಡಿಮೆ ಅವಧಿ ಮತ್ತು ಮಳೆಯಲ್ಲಿ ಏರಿಕೆ ಕಂಡುಬಂದಿರುವುದರಿಂದ ಅಕ್ರಮಗಳನ್ನು ಪತ್ತೆಹಚ್ಚಲು ತಂಡಗಳು ಓಡುತ್ತಿವೆ. ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 1 ರಂದು ಪ್ರಕಟಿಸಲಾಗುವುದು. </p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="1024" height="989" src="https://peepalmedia.com/wp-content/uploads/2025/08/image-1.png" alt="" class="wp-image-64371" style="width:450px;height:auto" srcset="https://peepalmedia.com/wp-content/uploads/2025/08/image-1.png 1024w, https://peepalmedia.com/wp-content/uploads/2025/08/image-1-300x290.png 300w, https://peepalmedia.com/wp-content/uploads/2025/08/image-1-768x742.png 768w, https://peepalmedia.com/wp-content/uploads/2025/08/image-1-150x145.png 150w, https://peepalmedia.com/wp-content/uploads/2025/08/image-1-696x672.png 696w" sizes="(max-width: 1024px) 100vw, 1024px" /><figcaption class="wp-element-caption">ಬಿಹಾರದ ಕರಡು ಮತದಾರರ ಪಟ್ಟಿಯಲ್ಲಿ &#8216;ಮೃತ&#8217; ಎಂದು ಘೋಷಿಸಲ್ಪಟ್ಟಿರುವ ಮಿಂಟು ಪಾಸ್ವಾನ್. ಫೋಟೋ: ದಿ ವೈರ್ </figcaption></figure></div>


<p><a href="https://thewire.in/government/declared-dead-in-draft-electoral-roll-bihar-voter-appears-in-supreme-court" target="_blank" rel="noreferrer noopener">ಗೌಸ್‌ಗಂಜ್‌ನಲ್ಲಿ ಕೆಲಸ ಮಾಡುತ್ತಿರುವ ಲಿಬರೇಶನ್ ತಂಡವು ಮಿಂಟು ಪಾಸ್ವಾನ್ ಪ್ರಕರಣವನ್ನು ಪತ್ತೆಹಚ್ಚಿತು</a>. ಮಿಂಟು ಜೀವಂತವಾಗಿದ್ದರೂ ಮತದಾರರ ಪಟ್ಟಿಯಲ್ಲಿ ಅವರನ್ನು &#8216;ಸತ್ತಿದ್ದಾರೆ&#8217; ಎಂದು ಘೋಷಿಸಲಾಗಿದೆ. ನಿಜವೇನೆಂದರೆ, ಸುಪ್ರೀಂ ಕೋರ್ಟ್‌ನಲ್ಲಿ ಸಾಕ್ಷಿಯಾಗಿ ಹಾಜರಾಗಲು, ಎಸ್‌ಐಆರ್ ನಿಜವಾದ ಮತದಾರರನ್ನು ಪಟ್ಟಿಯಿಂದ ಹೇಗೆ ಅಳಿಸುತ್ತಿದೆ ಎಂಬುದನ್ನು ತೋರಿಸಲು ಮಿಂಟು ನವದೆಹಲಿಗೆ ಹೋಗಿದ್ದಾರೆ.</p>



<p>ಅರ್ರಾಹ್‌ನ ಇನ್ನೊಂದು ಭಾಗದಲ್ಲಿ, ಸುಧೀರ್ ಕುಮಾರ್ ತಮ್ಮ ಕಚೇರಿಯಲ್ಲಿ ಕಾಗದಗಳು ಮತ್ತು ನೋಟ್‌ಬುಕ್‌ಗಳ ಜೊತೆಗೆ ಕುಳಿತಿದ್ದಾರೆ. ಕುಮಾರ್ ಲಿಬರೇಶನ್‌ನ ಸದಸ್ಯರಾಗಿದ್ದಾರೆ ಮತ್ತು ಅರ್ರಾಹ್‌ನ ಪಟ್ಟಣ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮೇಜಿನ ಮೇಲೆ ಅರ್ರಾಹ್ ಪಟ್ಟಣದ ಮತದಾರರ ಅಳಿಸುವಿಕೆಗಳನ್ನು ಒಳಗೊಂಡಿರುವ A4 ಹಾಳೆಗಳ ದಾಖಲೆಯಿದೆ, ಜೊತೆಗೆ ಪಕ್ಷವು ಆಡಳಿತದಲ್ಲಿನ ವಿಸ್ಲ್‌ಬ್ಲೋವರ್‌ಗಳ ಸಹಾಯದಿಂದ ಸಂಗ್ರಹಿಸಿರುವ ಕಾರಣಗಳನ್ನು ಸಹ ಹೊಂದಿದೆ. ಲಿಬರೇಶನ್ ತಕ್ಷಣವೇ ಅರ್ರಾಹ್ ಪಟ್ಟಣದಾದ್ಯಂತ ಹೋಗಿ ಮತದಾರರ ಪಟ್ಟಿಗಳನ್ನು ಭೌತಿಕ ಪರಿಶೀಲನೆ ನಡೆಸುವುದರೊಂದಿಗೆ ಅನೇಕ ತಂಡಗಳನ್ನು ರಚಿಸಿತು.</p>



<p>ಇದು ಕಷ್ಟದ ಕೆಲಸ. ಅರಾಹ್ ವಿಧಾನಸಭಾ ಕ್ಷೇತ್ರವು 45 ವಾರ್ಡ್‌ಗಳು ಮತ್ತು 242 ಬೂತ್‌ಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, 12 ಗ್ರಾಮ ಪಂಚಾಯತ್‌ಗಳಿವೆ. ಇಲ್ಲಿಯವರೆಗೆ, 16 ಪ್ರಕರಣಗಳನ್ನು ಮಾತ್ರ ಪತ್ತೆಹಚ್ಚಲು ಸಾಧ್ಯವಾಗಿದೆ: ಪಟ್ಟಿಯಲ್ಲಿ &#8216;ಸ್ಥಳಾಂತರಗೊಂಡ&#8217; ಎಂದು ಪಟ್ಟಿ ಮಾಡಲಾದ ಆರು ಪ್ರಕರಣಗಳು ಅರ್ರಾಹ್‌ನಲ್ಲಿವೆ, ಮತ್ತು &#8216;ಸತ್ತ&#8217; ಎಂದು ಘೋಷಿಸಲ್ಪಟ್ಟ 10 ಪ್ರಕರಣಗಳು ಇನ್ನೂ ಜೀವಂತವಾಗಿವೆ. ಆ 10 ಜನರಲ್ಲಿ ಏಳು ಜನರನ್ನು ಪಕ್ಷದ ಕಾರ್ಯಕರ್ತರು ಭೇಟಿ ಮಾಡಿದ್ದಾರೆ, ಮೂವರ ಬಗ್ಗೆ ಇನ್ನೂ ದೃಢೀಕರಿಸಬೇಕಾಗಿದೆ. </p>



<p>ಕುಮಾರ್ ಮತ್ತು ಅವರ ಉಪನಾಯಕ ರಣಧೀರ್ ರಾಣಾ ಅವರು &#8216;ಸತ್ತವರ&#8217; ಪಟ್ಟಿಯನ್ನು ಎಚ್ಚರಿಕೆಯಿಂದ ಪರಿಶೀಲಿಸುತ್ತಾರೆ ಮತ್ತು ಅದನ್ನು ಬೂತ್‌ವಾರು ಅಳಿಸಿದವರ ಪಟ್ಟಿಯೊಂದಿಗೆ ಹೋಲಿಸುತ್ತಾರೆ. ಹೆಸರುಗಳು ಹೊಂದಿಕೆಯಾದರೆ, ಆ ಮತದಾರರ ಸ್ಥಿತಿಗತಿಯನ್ನು ಪರಿಶೀಲಿಸಲು ಪಕ್ಷದ ಕಾರ್ಯಕರ್ತರನ್ನು ಬೂತ್‌ಗೆ ಕಳುಹಿಸಲಾಗುತ್ತದೆ, ಇದನ್ನು ಅವರು ನೆರೆಹೊರೆಯವರೊಂದಿಗೆ ಮಾತನಾಡುವುದು, ವಿಳಾಸವನ್ನು ಪಡೆಯುವುದು ಮತ್ತು ಭೇಟಿ ಮಾಡುವುದು ಮತ್ತು EC ಯ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಅನ್ನು ಬಳಸುವುದು ಸೇರಿದಂತೆ ವಿವಿಧ ರೀತಿಯಲ್ಲಿ ಮಾಡುತ್ತಾರೆ.</p>



<p>SIR ಗೆ ಸಮಾನಾಂತರವಾಗಿ, ಚುನಾವಣಾ ಆಯೋಗವು ಮತದಾನ ಕೇಂದ್ರಗಳನ್ನು ವಿಭಜಿಸಿರುವುದು ಈ ಪ್ರಕ್ರಿಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ. ನಿಜವಾಗಿ, ಪ್ರತಿ ಬೂತ್‌ಗೆ 1,200 ಕ್ಕಿಂತ ಹೆಚ್ಚು ಮತದಾರರು ಇರಬಾರದು, ಅದಕ್ಕೂ ಹೆಚ್ಚು ಮತದಾರರು ಇದ್ದರೆ ಹೊಸ ಬೂತ್ ಅನ್ನು ರಚಿಸಲಾಗುತ್ತದೆ ಅಥವಾ ಹೆಚ್ಚುವರಿ ಮತದಾರರನ್ನು ಮತ್ತೊಂದು ಬೂತ್‌ಗೆ ಸ್ಥಳಾಂತರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬೂತ್ ಸಂಖ್ಯೆಗಳು ಬದಲಾಗುತ್ತವೆ, ಇದು ಗೊಂದಲವನ್ನು ಹೆಚ್ಚಿಸುತ್ತದೆ. </p>



<p>ಉದಾಹರಣೆಗೆ, ಆಗಸ್ಟ್ 11 ರಂದು, &#8216;ಸತ್ತವರು&#8217; ಎಂದು ಪಟ್ಟಿ ಮಾಡಲಾದ ನಾಲ್ವರು ಜನರು ಜೀವಂತವಾಗಿರುವುದು ಕಂಡುಬಂದಿತು, ಅದರಲ್ಲಿ ಮೂರು ಹೆಸರುಗಳು ಹತ್ತಿರದ ಮತಗಟ್ಟೆಯಲ್ಲಿ ಕಂಡುಬಂದವು. ಹೆಚ್ಚುವರಿಯಾಗಿ, ಕರಡು ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲು ದಾಖಲೆಗಳನ್ನು ಸಂಗ್ರಹಿಸುವ ಮತ್ತು ಮತದಾರರನ್ನು ಸೇರಿಸುವ ಹೆಚ್ಚಿನ ಕೆಲಸವನ್ನು ಮಾಡಿದ ಬ್ಲಾಕ್ ಮಟ್ಟದ ಅಧಿಕಾರಿಗಳು ಹೆಚ್ಚಿನ ಸಹಾಯವನ್ನು ನೀಡಲಿಲ್ಲ.&nbsp;</p>



<p>ಅವರಲ್ಲಿ ಹೆಚ್ಚಿನವರಿಗೆ ಸಾಕು ಸಾಕಾಗಿ ಹೋಗಿದೆ, ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ, ಕರೆಗಳನ್ನು ಸ್ವೀಕರಿಸುತ್ತಿಲ್ಲ. </p>



<p>&#8220;ಮುಂದಿನ 15 ದಿನಗಳಲ್ಲಿ ನಾವು ಎಷ್ಟು ಅಕ್ರಮಗಳನ್ನು ಕಂಡುಹಿಡಿಯಬಹುದು?&#8221; ಎಂದು ಕುಮಾರ್ ಕೇಳುತ್ತಾರೆ. ಬಿಹಾರದ ಹೆಚ್ಚಿನ ಜನರು ಇನ್ನೂ SIR ಮತ್ತು ಪೌರತ್ವದ ನಡುವಿನ ಸಂಬಂಧವನ್ನು ಕಂಡುಕೊಂಡಿಲ್ಲ ಮತ್ತು ವಿರೋಧ ಪಕ್ಷಗಳಿಗೆ ಇದನ್ನು ಸ್ಪಷ್ಟವಾಗಿ ವಿವರಿಸಲು ಸಾಧ್ಯವಾಗಿಲ್ಲ ಎಂದು ಅವರು ಒಪ್ಪಿಕೊಳ್ಳುತ್ತಾರೆ. </p>



<p>ಬಿಹಾರದಲ್ಲಿ ಲಿಬರೇಶನ್‌ನ ಪ್ರಮುಖ ಮತದಾರರು ದಲಿತರ ಮತ್ತು ಇಬಿಸಿ ಸಮುದಾಯಗಳಲ್ಲಿದ್ದಾರೆ. ಲಿಬರೇಶನ್ ಪಕ್ಷದ ಪ್ರಕಾರ, ಅಳಿಸಲಾಗಿರುವ ಗರಿಷ್ಠ ಮತದಾರರು ಈ ವರ್ಗಗಳಿಗೆ ಸೇರಿದವರು.  ಛತ್ತೀಸ್‌ಗಢದಲ್ಲಿ ಮಾವೋವಾದಿಗಳನ್ನು &#8220;ಮುಗಿಸಿದಂತೆ&#8221; ತಮ್ಮ ಮತದಾರರನ್ನು ನಿರ್ಮೂಲನೆ ಮಾಡುವ ಮೂಲಕ ಬಿಹಾರದಲ್ಲಿ ವಿಮೋಚನೆಯನ್ನು ಪೂರ್ಣಗೊಳಿಸಲು ಬಿಜೆಪಿ ಬಯಸುತ್ತಿದೆ ಎಂದು ಕುಮಾರ್ ಹೇಳುತ್ತಾರೆ. ‌ </p>



<p>“ಹಿಂದೆಲ್ಲಾ, ನೇರವಾಗಿ ಬೂತ್‌ಗಳನ್ನು ಕಬಳಿಸಲಾಗುತ್ತಿತ್ತು, ಈಗ ಪರೋಕ್ಷವಾಗಿ ಕಬಳಿಸಲಾಗುತ್ತಿದೆ,” ಎಂದು ಅವರು ಹೇಳುತ್ತಾರೆ.</p>



<p><em>ಇದು ದಿ ವೈರ್‌ ಪ್ರಕಟಿಸಿದ ತುಷಾರ್ ಧಾರಾ</em> ಅವರ<em> &#8216;<a href="https://thewire.in/rights/bihar-sir-voter-roll-scrutiny-teams-examining-election-commission-eletoral-rolls-24-voters-in-address">24 Voters in an Address&#8217;, Floods and a Ticking Clock: What Teams Examining Bihar&#8217;s Voter Rolls Encounter</a> ನ ಕನ್ನಡಾನುವಾದ</em></p>



<p></p>



<p></p>
]]></content:encoded>
					
		
		
			</item>
		<item>
		<title>ಅಫಿಡವಿಟ್‌ನಲ್ಲಿ ಪಕ್ಷಪಾತ, ಅಕ್ರಮ ವಲಸಿಗರ ಬಗ್ಗೆ ಮೌನ: ಚುನಾವಣಾ ಆಯೋಗದ ಬಳಿ ಈ ಏಳು ಪ್ರಶ್ನೆಗಳಿಗೆ ಉತ್ತರವಿಲ್ಲ!</title>
		<link>https://peepalmedia.com/silence-on-illegal-immigrants-no-answers-from-the-election-commission/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 18 Aug 2025 07:18:00 +0000</pubDate>
				<category><![CDATA[ಅಂಕಣ]]></category>
		<category><![CDATA[bengaluru]]></category>
		<category><![CDATA[Election Commission of India]]></category>
		<category><![CDATA[Gyanesh Kumar]]></category>
		<category><![CDATA[karnataka]]></category>
		<category><![CDATA[Rahul Gandhi]]></category>
		<category><![CDATA[vote theft]]></category>
		<guid isPermaLink="false">https://peepalmedia.com/?p=64321</guid>

					<description><![CDATA[&#8220;ಮತ ಕಳ್ಳತನ&#8221; ಆರೋಪ ಮತ್ತು ಬಿಹಾರದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ 65 ಲಕ್ಷ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿರುವ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (Special Intensive Revision &#8211; SIR) ಕುರಿತು ವಿರೋಧ ಪಕ್ಷಗಳ ಟೀಕೆಗಳನ್ನು ಎದುರಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಭಾನುವಾರ (ಆಗಸ್ಟ್ 17) ಮಾತನಾಡಿದರು. 2024 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ [&#8230;]]]></description>
										<content:encoded><![CDATA[
<pre class="wp-block-code"><code><em>ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು 2003 ರಲ್ಲಿ ಬಿಹಾರ ಎಸ್ಐಆರ್ ಅನ್ನು ಜುಲೈನಲ್ಲಿ ನಡೆಸಲಾಯಿತು ಎಂದು ಹೇಳಿದರೆ. ಆದರೆ ಆ ವರ್ಷ ಯಾವುದೇ ಚುನಾವಣೆಗಳು ನಡೆದಿಲ್ಲ ಎಂಬುದನ್ನು ಉಲ್ಲೇಖಿಸಲಿಲ್ಲ. ರಾಹುಲ್ ಗಾಂಧಿಯವರು 7 ದಿನಗಳಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು ಮತ್ತು ಮತದಾರರ ಪಟ್ಟಿಯಲ್ಲಿ ಹಲವು ಬಾರಿ ಹೆಸರುಗಳು ಬಂದಿದ್ದರೆ, ಅದು ಮತ ಕಳ್ಳತನವನ್ನು ತೋರಿಸುವುದಿಲ್ಲ ಎಂದು ಹೇಳಿದರು</em> - ಶ್ರಾವಸ್ತಿ ದಾಸಗುಪ್ತ, ದಿ ವೈರ್</code></pre>



<p>&#8220;ಮತ ಕಳ್ಳತನ&#8221; ಆರೋಪ ಮತ್ತು ಬಿಹಾರದಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ 65 ಲಕ್ಷ ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ಹೊರಗಿಡಲಾಗಿರುವ ವಿವಾದಾತ್ಮಕ ವಿಶೇಷ ತೀವ್ರ ಪರಿಷ್ಕರಣೆ (Special Intensive Revision &#8211; SIR) ಕುರಿತು ವಿರೋಧ ಪಕ್ಷಗಳ ಟೀಕೆಗಳನ್ನು ಎದುರಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಭಾನುವಾರ (ಆಗಸ್ಟ್ 17) ಮಾತನಾಡಿದರು.</p>



<p>2024 ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ ಎಂಬ ಆರೋಪದ ಮೇಲೆ ಚುನಾವಣಾ ಆಯೋಗವು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಂದ ಪ್ರಮಾಣವಚನದಡಿಯಲ್ಲಿ (oath) ಅಫಿಡವಿಟ್ ಕೇಳುತ್ತಿದೆಯೇ ಎಂಬ ಪ್ರಶ್ನೆಗೆ ಇಡೀ ಪತ್ರಿಕಾಗೋಷ್ಠಿಯಲ್ಲಿ ಜ್ಞಾನೇಶ್‌ ಕುಮಾರ್ ಯಾವುದೇ ಉತ್ತರವನ್ನು ನೀಡಲಿಲ್ಲ. ಆದರೆ ರಾಯ್ ಬರೇಲಿ, ವಯನಾಡ್, ಡೈಮಂಡ್ ಹಾರ್ಬರ್ ಮತ್ತು ಕನ್ನೌಜ್‌ನಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಆರೋಪಿಸಿದಾಗ, ಅವರಿಂದ ಚುನಾವಣಾ ಆಯೋಗ ಯಾವುದೇ ಅಫಿಡವಿಟ್ ಕೇಳಿರಲಿಲ್ಲ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಅಭಿಷೇಕ್ ಬ್ಯಾನರ್ಜಿ ಮತ್ತು ಅಖಿಲೇಶ್ ಯಾದವ್ ಅವರು ಲೋಕಸಭಾ ಸಂಸದ <a href="https://thewire.in/politics/elections-choreographed-huge-criminal-fraud-by-election-commission-rahul-gandhi">ಸ್ಥಾನಕ್ಕೆ</a> ರಾಜೀನಾಮೆ ನೀಡಬೇಕೆಂದು ಅನುರಾಗ್‌ ಠಾಕೂರ್ ಒತ್ತಾಯಿಸಿದರು.‌</p>



<p>ಬಿಹಾರದಲ್ಲಿ ಎಷ್ಟು ಗಣತಿ ನಮೂನೆಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಲಾಗಿದೆ ಮತ್ತು ಎಸ್‌ಐಆರ್ ಸಮಯದಲ್ಲಿ ಎಷ್ಟು ವಿದೇಶಿ ದಾಖಲೆರಹಿತ ವಲಸಿಗರು ಕಂಡುಬಂದಿದ್ದಾರೆ ಎಂಬ ಪ್ರಶ್ನೆಗಳಿಗೆ ಹಾಗೂ ರಾಜ್ಯದಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಜಾರಿಗೆ ತರಲು ಈ ಪ್ರಕ್ರಿಯೆಯನ್ನು ಬಳಸಲಾಗುತ್ತಿದೆಯೇ ಎಂಬ ಆರೋಪಗಳಿಗೆ ಕೂಡ ಜ್ಞಾನೇಶ್ ಕುಮಾರ್ ಯಾವುದೇ ಉತ್ತರಗಳನ್ನು ನೀಡಲಿಲ್ಲ.</p>



<p>ವಿಧಾನಸಭಾ ಚುನಾವಣೆಗಳು ಹತ್ತಿರದಲ್ಲಿರುವಾಗ ಮತ್ತು ಅದು ಕೂಡ ಪ್ರವಾಹದ ಸಮಯದಲ್ಲಿ ಎಸ್‌ಐಆರ್ ಅನ್ನು ಏಕೆ ನಡೆಸಲಾಗುತ್ತಿದೆ ಎಂಬ ಪ್ರಶ್ನೆಗೆ ಕುಮಾರ್ ಉತ್ತರಿಸುತ್ತಾ, 2003 ರಲ್ಲಿ ನಡೆದ ಕೊನೆಯ ಪುನರಾವರ್ತನೆಯು (Iteration) ಜುಲೈನಲ್ಲಿ ನಡೆಯಿತು ಎಂದು ಹೇಳಿದರು, ಆದರೆ ವಿಧಾನಸಭಾ ಚುನಾವಣೆಗಳು ಅಕ್ಟೋಬರ್ 2005 ರವರೆಗೆ ಇರಲಿಲ್ಲ ಎಂದು ಉಲ್ಲೇಖಿಸುವುದನ್ನು ಮರೆತಂತಿತ್ತು.</p>



<p>ಬದಲಾಗಿ, ಜ್ಞಾನೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ‌ ಬಹಳ ಅಳೆದು ತೂಗಿ ತಮ್ಮ ಉತ್ತರಗಳನ್ನು ನೀಡುತ್ತಿದ್ದರು. ಮನೆ ಸಂಖ್ಯೆಗಳನ್ನು 0 (ಸೊನ್ನೆ) ಎಂದು ಉಲ್ಲೇಖಿಸಲಾಗಿರುವ ಮತದಾರರ ಹೆಸರುಗಳನ್ನು  ಬಡವರ ಬಗ್ಗೆ ಮಾಡುವ ತಮಾಷೆ ಎಂದು ಬಿಂಬಿಸಲುಪ್ರಯತ್ನಿಸಿದರು ಮತ್ತು ಮತದಾರರ ಹೆಸರು ಹಲವು ಬಾರಿ ಕಾಣಿಸಿಕೊಳ್ಳುವುದು ಮತ ಕಳ್ಳತನವನ್ನು ತೋರಿಸುವುದಿಲ್ಲ ಅಥವಾ ಅವರು ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸಿದ್ದಾರೆ ಎಂದು ಅರ್ಥವಲ್ಲ ಎಂದು ವಾದಿಸಿದರು. </p>



<p>ಜ್ಞಾನೇಶ್‌ ಕುಮಾರ್‌ ರಾಹುಲ್ ಗಾಂಧಿಯವರಿಗೆ ಒಂದು ಅಲ್ಟಿಮೇಟಮ್ ಸಹ ಹೊರಡಿಸಿದರು, ಏಳು ದಿನಗಳಲ್ಲಿ ಪ್ರಮಾಣವಚನದಡಿ ಅಫಿಡವಿಟ್‌ ಸಲ್ಲಿಸಬೇಕು ಅಥವಾ ರಾಷ್ಟ್ರದ ಕ್ಷಮೆಯಾಚಿಸಿ ಎಂದು ಹೇಳಿದರು.</p>



<p><em>ಚುನಾವಣಾ ಆಯೋಗದ ಪತ್ರಿಕಾಗೋಷ್ಠಿಯಲ್ಲಿ ಉತ್ತರಿಸದ ಏಳು ಅಂಶಗಳ ಬಗ್ಗೆ ಒಂದು ಒಳನೋಟವನ್ನು ಇಲ್ಲಿ ನೀಡಲಾಗಿದೆ. </em></p>



<p>‌ಚುನಾವಣಾ ಆಯೋಗವು ರಾಹುಲ್ ಗಾಂಧಿಯವರಿಂದ ಅಫಿಡವಿಟ್ ಕೇಳಿದೆಯೇ ಹೊರತು, ಅಂತಹದೇ ಆರೋಪಗಳನ್ನು ಮಾಡಿರುವ ಬಿಜೆಪಿಯಿಂದ ಕೇಳಿಲ್ಲ.</p>



<p><em>ಜ್ಞಾನೇಶ್‌ ಕುಮಾರ್ ತಮ್ಮ ಪತ್ರಿಕಾಗೋಷ್ಠಿಯನ್ನು ಆರಂಭಿಸುತ್ತಲೇ, ಚುನಾವಣಾ ಆಯೋಗಕ್ಕೆ &#8220;ಪಕ್ಷ</em> ಅಥವಾ <em>ವಿಪಕ್ಷ</em> &#8221; (ಆಡಳಿತ ಪಕ್ಷ ಅಥವಾ ವಿರೋಧ ಪಕ್ಷ) ಎಂಬುದು ಇಲ್ಲ ಎಂದು ಹೇಳಿದರು.</p>



<p>&#8220;ಚುನಾವಣಾ ಆಯೋಗಕ್ಕೆ ಆಡಳಿತ ಪಕ್ಷಗಳು ಅಥವಾ ವಿರೋಧ ಪಕ್ಷಗಳು ಇಲ್ಲ; ಎಲ್ಲರೂ ಸಮಾನರು. ಯಾವುದೇ ರಾಜಕೀಯ ಪಕ್ಷದಿಂದ ಯಾರೇ ಬಂದರೂ, ಆಯೋಗ ತನ್ನ ಸಾಂವಿಧಾನಿಕ ಕರ್ತವ್ಯಗಳನ್ನು ಮಾಡದೇ ಇರುವುದಿಲ್ಲ&#8221; ಎಂದು ಅವರು ಹೇಳಿದರು.</p>



<p><a href="https://thewire.in/government/election-commission-opposition-creating-confusion-bihar-sir">ಹಾಗಿದ್ದೂ, ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಮಾಡಿರುವ ಆರೋಪಗಳು &#8220;ಆಧಾರರಹಿತ&#8221;</a> ಎಂದು ಜ್ಞಾನೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿ‌, ಅವರಿಂದ ಅಫಿಡವಿಟ್ ಕೂಡ ಕೇಳಿದರು.</p>



<p>&#8220;ಒಬ್ಬ ಮತದಾರನ ವಿರುದ್ಧ ದೂರು ಬಂದರೆ, ಚುನಾವಣಾ ಆಯೋಗ ಅದನ್ನು ಪರಿಶೀಲಿಸುತ್ತದೆ. ಆದರೆ ಸುಮಾರು 1.5 ಲಕ್ಷ ಮತದಾರರ ಬಗ್ಗೆ ಮೇಲೆ ಆರೋಪಗಳು ಬಂದಿವೆ, ಯಾವುದೇ ಪುರಾವೆ ಅಥವಾ ಅಫಿಡವಿಟ್ ಇಲ್ಲದೆ 1.5 ಲಕ್ಷ ಮತದಾರರಿಗೆ ನಾವು ನೋಟಿಸ್ ಕಳುಹಿಸಬೇಕೇ? ಇದು ಕಾನೂನುಬದ್ಧವಾಗುತ್ತದೆಯೇ? ಕಾನೂನಿನಲ್ಲಿ ಅಥವಾ ಅಫಿಡವಿಟ್‌ನಲ್ಲಿ ಯಾವುದೇ ಪುರಾವೆಗಳಿಲ್ಲ. ನಾವು 1.5 ಲಕ್ಷ ಮತದಾರರನ್ನು ಎಸ್‌ಡಿಎಂ [ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್] ಕಚೇರಿಗೆ ಕರೆದು ಅವರು ನಕಲಿ ಮತದಾರರು ಎಂದು ಹೇಳಬೇಕೇ? ಮತದಾರರು ಪುರಾವೆ ಕೇಳುವುದಿಲ್ಲವೇ? ಯಾವುದೇ ಪುರಾವೆ ಇಲ್ಲದೆ, ಮತದಾರರ ಹೆಸರುಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ,&#8221; ಎಂದು ಕುಮಾರ್ ಹೇಳಿದರು.</p>



<p>&#8220;ಪ್ರತಿಯೊಬ್ಬ ಮತದಾರರೊಂದಿಗೆ ಚುನಾವಣಾ ಆಯೋಗವು ಗುರಾಣಿಯಂತೆ ನಿಂತಿದೆ. ತಪ್ಪು ವಿಶ್ಲೇಷಣೆ ಮತ್ತು ಅಂಕಿ-ಅಂಶಗಳೊಂದಿಗೆ ಪಿಪಿಟಿ ನೀಡುವ ಮೂಲಕ ಮತ್ತು &#8216;ಈ ಮಹಿಳೆ ಎರಡು ಬಾರಿ ಮತ ಚಲಾಯಿಸಿದ್ದಾರೆ&#8217; ಎಂದು ಹೇಳುವ ಮೂಲಕ ಚುನಾವಣಾ ಆಯೋಗವು ಇದಕ್ಕೆ ಪ್ರತಿಕ್ರಿಯಿಸುತ್ತದೆ ಎಂದು ಯಾರಾದರೂ ಭಾವಿಸಿದರೆ, ಇಂತಹ ಗಂಭೀರ ಆರೋಪಗಳ ವಿಷಯದಲ್ಲಿ ಅಫಿಡವಿಟ್ ಇಲ್ಲದೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಅದು ಕಾನೂನು ಮತ್ತು ಸಂವಿಧಾನಕ್ಕೆ ವಿರುದ್ಧವಾಗಿರುತ್ತದೆ,&#8221; ಎಂದು ಆಯುಕ್ತರು ಹೇಳಿದರು.</p>



<p>ಆಗಸ್ಟ್ 7 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ, ಬಿಜೆಪಿ ಮತ್ತು ಚುನಾವಣಾ ಆಯೋಗದ ನಡುವೆ <a href="https://thewire.in/politics/elections-choreographed-huge-criminal-fraud-by-election-commission-rahul-gandhi">&#8220;ಒಂದು ಸಂಬಂಧವಿದೆ&#8221; ಇದೆ</a> ಎಂದು ಆರೋಪಿಸಿದ್ದರು ಮತ್ತು ಮಹದೇವಪುರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳು ಕಳ್ಳತನವಾಗಿವೆ ಎಂದು ಹೇಳಲು ಚುನಾವಣಾ ಆಯೋಗದ ಮತದಾರರ ಪಟ್ಟಿಯನ್ನು ಪುರಾವೆಯಾಗಿ ತೋರಿಸಿದ್ದರು.</p>



<p>ಲೋಕಸಭಾ ಸದಸ್ಯರಾದ ಗಾಂಧಿ (ರಾಯ್ ಬರೇಲಿ), ವಾದ್ರಾ (ವಯನಾಡು), ಯಾದವ್ (ಕನ್ನೌಜ್) ಮತ್ತು ಬ್ಯಾನರ್ಜಿ (ಡೈಮಂಡ್ ಹಾರ್ಬರ್) ವಿರುದ್ಧದ ಬಿಜೆಪಿ ಸಂಸದ ಠಾಕೂರ್ ಅರೋಪಗಳನ್ನು ಮಾಡಿದ್ದರು, ಆದರೆ ಅವರಿಂದ ಚುನಾವಣಾ ಆಯೋಗ ಏಕೆ ಅಫಿಡವಿಟ್ ಕೇಳುತ್ತಿಲ್ಲ ಎಂದು ವರದಿಗಾರರು ಕುಮಾರ್ ಅವರನ್ನು ಕೇಳಿದರು.</p>



<p><strong>ನಿಯಮ 20(3)(b) ರ ಉಲ್ಲೇಖ</strong></p>



<p>ರಾಹುಲ್ ಗಾಂಧಿಯವರ ಹೆಸರನ್ನು ಉಲ್ಲೇಖಿಸದೆ, ಅವರಿಂದ ಅಫಿಡವಿಟ್ ಕೋರುವಾಗ,‌ ಜ್ಞಾನೇಶ್ ಕುಮಾರ್, 1960 ರ ಮತದಾರರ ನೋಂದಣಿ ನಿಯಮಗಳ ನಿಯಮ 20(3)(ಬಿ) ಮೇಲೆ‌ ತಮ್ಮ ವಾದವನ್ನು ಕೇಂದ್ರೀಕರಿಸಿದರು.</p>



<p>&#8220;ನೀವು ಆ ಕ್ಷೇತ್ರದ ಮತದಾರರಾಗಿದ್ದರೆ, ನೀವು ನಿಗದಿತ ಸಮಯದೊಳಗೆ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಫಾರ್ಮ್ 6, 7 ಮತ್ತು 8 ಅನ್ನು ಭರ್ತಿ ಮಾಡಬಹುದು. ಆದರೆ ನೀವು ಆ ಕ್ಷೇತ್ರದ ಮತದಾರರಲ್ಲದಿದ್ದರೆ, ಕಾನೂನಿನಡಿಯಲ್ಲಿ ನಿಮಗೆ ಒಂದೇ ಒಂದು ಪರಿಹಾರವಿದೆ, ಅದು ನಿಯಮ 20(3)(b).&#8221;</p>



<p>&#8220;ನೀವು ಆ ಕ್ಷೇತ್ರದ ಮತದಾರರಲ್ಲದಿದ್ದರೆ, ನೀವು ಸಾಕ್ಷಿಯಾಗಿ ನಿಮ್ಮ ದೂರನ್ನು ಸಲ್ಲಿಸಬಹುದು ಎಂಬುದು ಇದರ ಅರ್ಥ. ನೀವು ಚುನಾವಣಾ ನೋಂದಣಿ ಅಧಿಕಾರಿಗೆ ಪ್ರಮಾಣ ವಚನ ಸ್ವೀಕರಿಸಬೇಕು ಮತ್ತು ನೀವು ದೂರು ನೀಡಿದ ವ್ಯಕ್ತಿಯ ಮುಂದೆ ಆ ಪ್ರಮಾಣ ವಚನ ಸ್ವೀಕರಿಸಬೇಕು.&#8221;</p>



<p>ಚುನಾವಣಾ ಆಯೋಗದ ಪರಿಷ್ಕರಣಾ ಪ್ರಕ್ರಿಯೆಯ ನಂತರ ಕರಡು ಪಟ್ಟಿಗಳನ್ನು ಸಿದ್ಧಪಡಿಸಿದ ನಂತರ ಎತ್ತಲಾದ ಪ್ರಶ್ನೆಗಳು ಮತ್ತು ಆಕ್ಷೇಪಣೆಗಳಿಗೆ ನಿಯಮ 20(3)(ಬಿ) ಅನ್ವಯಿಸುತ್ತದೆ ಎಂದು <em>ದಿ ವೈರ್</em> ಈ ಹಿಂದೆ <a href="https://thewire.in/government/can-the-election-commission-demand-an-oath-from-rahul-gandhi-to-probe-vote-theft-allegations">ವರದಿ ಮಾಡಿತ್ತು .</a></p>



<p>2024 ರ ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮಾಡಿರುವ ಆರೋಪಗಳು ನಿಯಮ 20(3)(b) ದ ವ್ಯಾಪ್ತಿಗೆ ಬರುವುದಿಲ್ಲ, ಏಕೆಂದರೆ ಚುನಾವಣೆ ನಡೆದು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ ಎಂದು ತಜ್ಞರು ಹೇಳಿದ್ದಾರೆ.</p>



<p>ಪರಿಷ್ಕರಣೆಯ ನಂತರ ಕರಡು ಪಟ್ಟಿಗಳನ್ನು ಸಿದ್ಧಪಡಿಸಿದ ನಂತರ ಎತ್ತಲಾದ ಪ್ರಶ್ನೆಗಳು ಮತ್ತು ಆಕ್ಷೇಪಣೆಗಳಿಗೆ ನಿಯಮ 20(3)(b) ಅನ್ವಯಿಸುತ್ತದೆ ಎಂದು ಕುಮಾರ್ ಉಲ್ಲೇಖಿಸಲಿಲ್ಲ. ಬದಲಾಗಿ, ರಾಹುಲ್ ಗಾಂಧಿಯವರ ಆರೋಪಗಳನ್ನು ಉಲ್ಲೇಖಿಸಿ 45 ದಿನಗಳಲ್ಲಿ ತಾವು ಕಂಡಿರುವ ದೋಷಗಳನ್ನು ಸಲ್ಲಿಸಬೇಕು, ಇಲ್ಲದಿದ್ದರೆ ಅದು &#8220;ಸಾರ್ವಜನಿಕರ ಹಾದಿ ತಪ್ಪಿಸಿದಂತೆ&#8221; ಎಂದು ಅವರು ಹೇಳಿದರು.</p>



<p>&#8220;ನೀವು ನಿಗದಿತ 45 ದಿನಗಳ ಒಳಗೆ ಮತದಾರರ ಪಟ್ಟಿಯಲ್ಲಿರುವ ದೋಷಗಳ ವಿರುದ್ಧ ದೂರು ನೀಡದಿದ್ದರೆ, ಮತ್ತು ನಂತರ ʼಓಟ್ <em>ಚೋರಿ</em> [ಮತ ಕಳ್ಳತನ]ʼ ನಂತಹ ತಪ್ಪು ಪದಗಳನ್ನು ಬಳಸಿದರೆ <em>,</em> ಅದು ಸಾರ್ವಜನಿಕರನ್ನು ದಾರಿ ತಪ್ಪಿಸುವ ಒಂದು ಮಾರ್ಗವಲ್ಲವೇ? ಇದು ಭಾರತದ ಸಂವಿಧಾನದ ಬಗ್ಗೆ ಅಗೌರವವನ್ನು ತೋರಿಸುತ್ತದೆ. ಅಲ್ಲದಿದ್ದರೆ ಮತ್ತೆ ಏನು?&#8221; ಅವರು ಹೇಳಿದರು.</p>



<p>ಜ್ಞಾನೇಶ್ ಕುಮಾರ್ ಏಳು ದಿನಗಳಲ್ಲಿ ಗಾಂಧಿಯವರಿಂದ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.</p>



<p>&#8220;ದೇಶಕ್ಕೆ ಪ್ರಮಾಣ ವಚನ ನೀಡಿ ಅಥವಾ ಕ್ಷಮೆಯಾಚಿಸಿ. ಮೂರನೇ ಆಯ್ಕೆ ಇಲ್ಲ. ಏಳು ದಿನಗಳಲ್ಲಿ ನಮಗೆ‌ ಅವರಿಂದ ಅಫಿಡವಿಟ್ ಸಿಗದಿದ್ದರೆ, ಈ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ ಮತ್ತು &#8216;ನಮ್ಮ ಮತದಾರರು ವಂಚಕರು&#8217; ಎಂದು ಹೇಳುತ್ತಿರುವ ಆ ವ್ಯಕ್ತಿ ಕ್ಷಮೆಯಾಚಿಸಬೇಕು ಎಂದರ್ಥ.&#8221;</p>



<p>ಚುನಾವಣೆಗೆ ತುಂಬಾ ಹತ್ತಿರವಿರುವಾಗ ಮತ್ತು ಬಿಹಾರವು ಮಾನ್ಸೂನ್ ಪ್ರೇರಿತ ಪ್ರವಾಹವನ್ನು ಕಾಣುವ ಸಮಯದಲ್ಲಿ &#8211; ಬಿಹಾರದಲ್ಲಿ ಎಸ್‌ಐಆರ್‌ನ ಸಮಯದ ಕುರಿತು ಪ್ರಶ್ನೆಗಳಿಗೆ ಕುಮಾರ್ ಉತ್ತರಿಸಲು ಪ್ರಯತ್ನಿಸಿದರು ಮತ್ತು ಈ ಪ್ರಕ್ರಿಯೆಯನ್ನು ಕೊನೆಯ ಬಾರಿಗೆ 2003 ರ ಜುಲೈನಲ್ಲಿ ನಡೆಸಲಾಗಿತ್ತು ಎಂದು ಹೇಳಿದರು.</p>



<p>&#8220;ಹವಾಮಾನ ಚೆನ್ನಾಗಿಲ್ಲದಿದ್ದಾಗ ಜುಲೈನಲ್ಲಿ ಏಕೆ ಮಾಡಬೇಕು ಎಂಬ ಪ್ರಶ್ನೆ ಬಂದಿದೆ. ಬಿಹಾರದಲ್ಲಿ 2003 ರಲ್ಲಿ ಎಸ್‌ಐಆರ್ ನಡೆಸಿದಾಗ, ಅದನ್ನು ಜುಲೈ 14 ರಿಂದ ಆಗಸ್ಟ್ 14 ರವರೆಗೆ ಮಾಡಲಾಗಿತ್ತು ಎಂದು ನಾನು ನಿಮಗೆ ತಿಳಿಸಲು ಬಯಸುತ್ತೇನೆ. ಹಾಗಿದ್ದೂ ಇದನ್ನು ಯಶಸ್ವಿಯಾಗಿ ಮಾಡಲಾಯಿತು, ಈಗ ಕೂಡ ಎಲ್ಲಾ ಎಣಿಕೆ ನಮೂನೆಗಳನ್ನು ಸಂಗ್ರಹಿಸಲಾಗಿದೆ, ”ಎಂದು ಕುಮಾರ್ ಹೇಳಿದರು.</p>



<p>ಹಾಗಿದ್ದೂ, ಬಿಹಾರದಲ್ಲಿ 2003 ರಲ್ಲಿ ಯಾವುದೇ ವಿಧಾನಸಭಾ ಚುನಾವಣೆಗಳು ನಡೆದಿರಲಿಲ್ಲ ಎಂಬುದನ್ನು ಅವರು ಉಲ್ಲೇಖಿಸಲಿಲ್ಲ .</p>



<p>ಮಾರ್ಚ್ 2000 ರಲ್ಲಿ, ಜನತಾದಳ (ಸಂಯುಕ್ತ)ದ ಈಗಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಒಂದು ದಿನ ಮೊದಲು&nbsp;<a href="https://www.deccanherald.com/india/march-2000-when-nitish-quit-as-cm-before-floor-test-779422.html">ರಾಜೀನಾಮೆ ನೀಡಿದರು</a>&nbsp;ಮತ್ತು ರಾಷ್ಟ್ರೀಯ ಜನತಾದಳದ ರಾಬ್ರಿ ದೇವಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರು 2005 ರಲ್ಲಿ ನಡೆದ ವಿಧಾನಸಭಾ ಚುನಾವಣೆಯವರೆಗೂ ಅಧಿಕಾರದಲ್ಲಿ ಮುಂದುವರೆದರು.</p>



<p>2003 ರ SIR ನಡೆಸಲು ನೀಡಿದ ಆದೇಶವು ಇನ್ನೂ ಲಭ್ಯವಿಲ್ಲ ಮತ್ತು ಆ ವರ್ಷದ ಸಂಪೂರ್ಣ ಅವಧಿಯ ಉಲ್ಲೇಖಕ್ಕಾಗಿ ಅದನ್ನು ಪರಿಶೀಲಿಸಲಾಗುವುದಿಲ್ಲ ಎಂದು <em>ದಿ ವೈರ್ </em><a href="https://thewire.in/government/bihar-sir-why-has-no-one-seen-2003-revision-order">ವರದಿ ಮಾಡಿದೆ</a> , ಆದರೆ 2005 ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವುದಕ್ಕೆ ಬಹಳ ಹಿಂದೆಯೇ SIR ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಸ್ಪಷ್ಟವಾಗುತ್ತದೆ.<a href="https://thewire.in/government/bihar-sir-why-has-no-one-seen-2003-revision-order"></a></p>



<p>2004 ರಲ್ಲಿ ಹೊರಡಿಸಲಾದ ತೀವ್ರ ಪರಿಷ್ಕರಣಾ ಆದೇಶದ ಕುರಿತಾದ ಪ್ರಶ್ನೆಗಳಿಗೆ ಕುಮಾರ್ ಉತ್ತರಿಸಲಿಲ್ಲ, ಆ ಆದೇಶದಲ್ಲಿ ಚುನಾವಣಾ ಆಯೋಗವು ಅರುಣಾಚಲ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಆ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ ಮತ್ತು ಆದ್ದರಿಂದ ಈ ರಾಜ್ಯಗಳಲ್ಲಿ ಚುನಾವಣೆಯ ನಂತರ ಪರಿಷ್ಕರಣೆ ನಡೆಯಲಿದೆ ಎಂದು ಹೇಳಿತ್ತು. ಆ ಆದೇಶದ ಪ್ರತಿಯನ್ನು <em>ದಿ ವೈರ್ ಪರಿಶೀಲಿಸಿದೆ.</em></p>



<p>ಪ್ರತಿ ಚುನಾವಣೆಗೂ ಮುನ್ನ ಪರಿಷ್ಕರಣಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಕಾನೂನು ಹೇಳುತ್ತದೆ ಎಂದು ಚುನಾವಣಾ ಮುಖ್ಯಸ್ಥರು ಹೇಳಿದರು. ಈ ವರ್ಷದ ಜನವರಿಯಲ್ಲಿ ಬಿಹಾರದಲ್ಲಿ ಸಾರಾಂಶ ಪರಿಷ್ಕರಣೆಯನ್ನು ನಡೆಸಲಾಗಿದ್ದರೂ, ನವೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗಳಿಗೆ ಅದು ಸಾಕಾಗುವುದಿಲ್ಲ, ಆದ್ದರಿಂದ ಜುಲೈ ಅನ್ನು ಅರ್ಹತಾ ದಿನಾಂಕವೆಂದು ನಿರ್ಧರಿಸಲಾಯಿತು ಎಂದು ಅವರು ಹೇಳಿದರು.</p>



<p><strong>ಅಕ್ರಮ ವಲಸಿಗರ ಬಗ್ಗೆ ಯಾವುದೇ ಉತ್ತರಗಳಿಲ್ಲ</strong></p>



<p><a href="https://www.eci.gov.in/eci-backend/public/api/download?url=LMAhAK6sOPBp%2FNFF0iRfXbEB1EVSLT41NNLRjYNJJP1KivrUxbfqkDatmHy12e%2FzIv7%2FZQ09etPKoyJV5h%2FcTqdXj7y4XEu54AgUpFYqlgb%2F9owy3xJkkWNyeb7x3GfQsXQUwCbGU493NshNTgs7UQ%3D%3D">ಜೂನ್ 24 ರಂದು ಬಿಹಾರದಲ್ಲಿ SIR ಅನ್ನು ಘೋಷಿಸುವಾಗ</a>, ಚುನಾವಣಾ ಆಯೋಗವು ವಿವಿಧ ಕಾರಣಗಳಿಗಾಗಿ ಇದನ್ನು ನಡೆಸುವುದು ಅಗತ್ಯ ಎಂದು ಹೇಳಿದೆ, ಅವುಗಳಲ್ಲಿ &#8220;ವಿದೇಶಿ ಅಕ್ರಮ ವಲಸಿಗರೂ&#8221; ಮತದಾರರ ಪಟ್ಟಿಯಲ್ಲಿ ಸೇರಿರುವುದು ಸೇರಿದೆ.</p>



<p>ನೇಪಾಳ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಿಂದ ಬಂದ ಅನಿರ್ದಿಷ್ಟ ಸಂಖ್ಯೆಯ ಅಕ್ರಮ ವಲಸಿಗರು ಪಟ್ಟಿಯಲ್ಲಿ ಕಂಡುಬಂದಿದ್ದಾರೆ ಎಂದು ಚುನಾವಣಾ ಆಯೋಗವು ಈ ಹಿಂದೆ&nbsp;<a href="https://thewire.in/politics/election-commission-addresses-bihar-sir-criticism-through-selectively-made-available-whatsapp-texts">ಕೆಲವು ಮಾಧ್ಯಮಗಳಿಗೆ &#8220;ಮೂಲಗಳ&#8221;</a>&nbsp;ಮೂಲಕ ತಿಳಿಸಿತ್ತು .</p>



<p>ಪತ್ರಿಕಾಗೋಷ್ಠಿಯಲ್ಲಿ ದಾಖಲೆರಹಿತ ವಲಸಿಗರ ಸಂಖ್ಯೆಯ ಬಗ್ಗೆ ಪ್ರಶ್ನೆಯನ್ನು ಕೇಳಿದಾಗ, ಜ್ಞಾನೇಶ್ ಕುಮಾರ್ ಯಾವುದೇ ಅಂಕಿ ಅಂಶವನ್ನು ಒದಗಿಸಲಿಲ್ಲ.</p>



<p>&#8220;ಭಾರತದ ಸಂವಿಧಾನದ ಪ್ರಕಾರ, ಭಾರತೀಯ ನಾಗರಿಕರು ಮಾತ್ರ ಸಂಸದರು ಮತ್ತು ಶಾಸಕರ ಚುನಾವಣೆಗಳಿಗೆ ಮತ ಚಲಾಯಿಸಬಹುದು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಇತರ ದೇಶಗಳ ಜನರಿಗೆ ಆ ಹಕ್ಕಿಲ್ಲ. ಅಂತಹ ಜನರು ಗಣತಿ ನಮೂನೆಯನ್ನು ಭರ್ತಿ ಮಾಡಿದ್ದರೆ, SIR ಪ್ರಕ್ರಿಯೆಯ ಸಮಯದಲ್ಲಿ ಅವರು ಕೆಲವು ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ರಾಷ್ಟ್ರೀಯತೆಯನ್ನು ಸಾಬೀತುಪಡಿಸಬೇಕಾಗುತ್ತದೆ, ಇವುಗಳನ್ನು ಸೆಪ್ಟೆಂಬರ್ 30 ರವರೆಗೆ ಪರಿಶೀಲಿಸಲಾಗುತ್ತಿದೆ. ಭಾರತೀಯ ನಾಗರಿಕರಲ್ಲದವರನ್ನು ಕಂಡುಹಿಡಿಯಲಾಗುತ್ತದೆ ಮತ್ತು ಅವರನ್ನು ಮತದಾರರಾಗಿ ಸೇರಿಸಲಾಗುವುದಿಲ್ಲ,”‌ ಎಂದು ಅವರು ಹೇಳಿದರು.</p>



<p>ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ಜಾರಿಗೆ ತರಲು SIR ಪ್ರಕ್ರಿಯೆಯನ್ನು ಬಳಸಲಾಗುತ್ತಿದೆಯೇ ಎಂಬುದಕ್ಕೆ ಅವರು ಯಾವುದೇ ಉತ್ತರಗಳನ್ನು ನೀಡಲಿಲ್ಲ.</p>



<p><strong>ಪರಿಶೀಲನಾ ದಾಖಲೆಗಳೊಂದಿಗೆ ಸ್ವೀಕರಿಸಲಾದ ಗಣತಿ ನಮೂನೆಗಳ ಸಂಖ್ಯೆಯ ಬಗ್ಗೆ ಸ್ಪಷ್ಟ ಉತ್ತರವಿಲ್ಲ</strong></p>



<p>ಜುಲೈ 25 ರಂದು ಗಣತಿ ನಮೂನೆಗಳನ್ನು ಸಂಗ್ರಹಿಸಲು ಮೀಸಲಾಗಿರುವ SIR ಹಂತದ ಕೊನೆಯಲ್ಲಿ, 99.8% ನಮೂನೆಗಳನ್ನು ಮತದಾರರಿಂದ ಸಂಗ್ರಹಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.</p>



<p>ಈ ಪ್ರಕ್ರಿಯೆಯಲ್ಲಿ ಪ್ರಮುಖ ವಿವಾದಾತ್ಮಕ ಅಂಶವೆಂದರೆ ಆಯೋಗವು ಮತದಾರರಿಂದ ಅವರ ಅರ್ಹತೆಯ ಪುರಾವೆಯಾಗಿ ಕೇಳುತ್ತಿರುವ 11 ದಾಖಲೆಗಳ ಪಟ್ಟಿ. ಅರ್ಹ ದಾಖಲೆಗಳೊಂದಿಗೆ ಎಷ್ಟು ಫಾರ್ಮ್‌ಗಳನ್ನು ಸ್ವೀಕರಿಸಲಾಗಿದೆ ಅಥವಾ ಬೂತ್ ಮಟ್ಟದ ಅಧಿಕಾರಿಗಳು &#8216;ಶಿಫಾರಸು ಮಾಡಿದ್ದಾರೆ&#8217; ಮತ್ತು &#8216;ಶಿಫಾರಸು ಮಾಡಿಲ್ಲ&#8217; ಎಂಬ ಮತದಾರರ ನಡುವೆ ಈಗ ವ್ಯತ್ಯಾಸ ಏಕೆ ಇದೆ ಎಂಬುದರ ಕುರಿತು ಕುಮಾರ್ ಯಾವುದೇ ಸ್ಪಷ್ಟ ಉತ್ತರಗಳನ್ನು ನೀಡಿಲ್ಲ.</p>



<p>&#8220;ಬಿಹಾರದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ, ಎಷ್ಟು ಜನರನ್ನು ಸ್ವೀಕರಿಸಲಾಗಿದೆ, ಎಷ್ಟು ಜನರನ್ನು ಶಿಫಾರಸು ಮಾಡಲಾಗಿದೆ ಮತ್ತು ಪ್ರತಿಯೊಬ್ಬ ಬೂತ್ ಮಟ್ಟದ ಅಧಿಕಾರಿ ಏನು ಶಿಫಾರಸು ಮಾಡಿದ್ದಾರೆ ಎಂಬುದರ ದಾಖಲೆಗಳು &#8211; ಈ ಡೇಟಾವನ್ನು ಸಂಗ್ರಹಿಸುವ ಪ್ರಯತ್ನ ನಡೆಯುತ್ತಿದೆ. ಚುನಾವಣಾ ಆಯೋಗವು ಬಹು ಹಂತದಲ್ಲಿ ಈ ಕೆಲಸ ಮಾಡುತ್ತಿದೆ&#8221; ಎಂದು ಕುಮಾರ್ ಹೇಳಿದರು.</p>



<p>&#8220;ಮೊದಲು ಬೂತ್ ಮಟ್ಟದ ಅಧಿಕಾರಿ, ನಂತರ ಬೂತ್ ಮಟ್ಟದ ಮೇಲ್ವಿಚಾರಕ, ನಂತರ SDM, ನಂತರ DM ಮತ್ತು ನಂತರ ಮುಖ್ಯ ಚುನಾವಣಾ ಅಧಿಕಾರಿ ಇರುತ್ತಾರೆ. ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆ ಚುನಾವಣಾ ಆಯೋಗ ಅಥವಾ ಬೇರೆ ಯಾರೂ ಯಾವುದೇ ಮತವನ್ನು ಸೇರಿಸಲು ಸಾಧ್ಯವಿಲ್ಲ. ಈ ವಿಕೇಂದ್ರೀಕೃತ ರಚನೆಯ ಅಡಿಯಲ್ಲಿ, ಎಷ್ಟು ದಾಖಲೆಗಳನ್ನು ತೆಗೆದುಕೊಳ್ಳಲಾಗಿದೆಯೋ ಇಲ್ಲವೋ, ಇನ್ನೂ SDM ಮಟ್ಟದಲ್ಲಿ ನಡೆಯುತ್ತಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇದು ಇನ್ನೂ ಹೊರಬರಬೇಕಿದೆ, ಅದಕ್ಕೂ ಮುಂಚಿತವಾಗಿ ಏನನ್ನೂ ಹೇಳುವುದು ಸರಿಯಲ್ಲ,&#8221; ಎಂದು ಅವರು ಹೇಳಿದರು.</p>



<p><strong>ಮನೆ ನಂಬರ್‌ &#8211; 0 </strong></p>



<p>ಬಿಹಾರದ ಮತದಾರರ ಪಟ್ಟಿಯಲ್ಲಿ ಹಲವಾರು ಮತದಾರರ <a href="https://www.thenewsminute.com/news/exclusive-bihar-sir-rolls-reveal-292048-voters-with-house-number-0">ಮನೆ ಸಂಖ್ಯೆಗಳು 0 ಎಂದು ದಾಖಲಾಗಿವೆ</a> ಎಂದು ವರದಿಗಳು ಹೊರಬಿದ್ದಿವೆ, ಆದರೆ ಅದನ್ನು ಪ್ರಶ್ನಿಸುವುದು ಬಡ ಮತದಾರರನ್ನು ತಮಾಷೆ ಮಾಡಿದಂತೆ ಎಂದು ಜ್ಞಾನೇಶ್ ಕುಮಾರ್ ಹೇಳಿದರು.</p>



<p>&#8220;ಹಲವರಿಗೆ ಮನೆ ಇಲ್ಲ‌, ಆದರೆ ಮತದಾರರ ಪಟ್ಟಿಯಲ್ಲಿ ಅವರ ಹೆಸರುಗಳಿವೆ. ಹಾಗಾದರೆ ಅವರ ವಿಳಾಸ ಏನು? ಅವರು ರಾತ್ರಿ ಮಲಗಲು ಹೋಗುವ ಸ್ಥಳವೇ ವಿಳಾಸ; ಕೆಲವೊಮ್ಮೆ ರಸ್ತೆಯ ಬದಿಯಲ್ಲಿ, ಕೆಲವೊಮ್ಮೆ ಸೇತುವೆಯ ಕೆಳಗೆ, ಕೆಲವೊಮ್ಮೆ ದೀಪದ ಕಂಬದ ಪಕ್ಕದಲ್ಲಿ. ಅವರನ್ನು ನಕಲಿ ಮತದಾರರು ಎಂದು ಹೇಳಿದರೆ, ಅದು ನಮ್ಮ ಬಡ ಮತದಾರರು, ಸಹೋದರಿಯರು, ಸಹೋದರರು ಮತ್ತು ಹಿರಿಯರ ಬಗ್ಗೆ ದೊಡ್ಡ ವ್ಯಂಗ್ಯ ಮಾಡಿದಂತೆ,&#8221; ಎಂದು ಅವರು ಹೇಳಿದರು.</p>



<p>ಕೋಟ್ಯಂತರ&#8221; ಜನರ ವಿಳಾಸಗಳ ಮನೆ ನಂಬರ್‌ 0, ಏಕೆಂದರೆ ಅವರ ಪಂಚಾಯತ್‌ಗಳು ಅಥವಾ ಪುರಸಭೆಗಳು ಅವರ ಮನೆಗಳಿಗೆ ಸಂಖ್ಯೆಗಳನ್ನು ನೀಡಿಲ್ಲ ಎಂದು ಕುಮಾರ್ ಹೇಳಿದರು, ಚುನಾವಣಾ ಆಯೋಗವು ಅಂತಹ ಮತದಾರರಿಗೆ &#8220;ಕಾಲ್ಪನಿಕ ಸಂಖ್ಯೆಗಳನ್ನು&#8221; ಒದಗಿಸುತ್ತದೆ, ಅದನ್ನು &#8220;ಕಂಪ್ಯೂಟರ್‌ನಲ್ಲಿ ಶೂನ್ಯವಾಗಿ ತೋರಿಸಲಾಗುತ್ತದೆ ಎಂದು ಅವರು ಹೇಳಿದರು. &#8220;ಇದರರ್ಥ ಅವರು ಮತದಾರರಲ್ಲ ಎಂದು ಅರ್ಥವಲ್ಲ,&#8221; ಎಂದು ಜ್ಞಾನೇಶ್‌ ಹೇಳಿದರು.</p>



<p><strong>ಮತದಾರರ ಪಟ್ಟಿಯಲ್ಲಿ ಅನೇಕ ಬಾರಿ ಮತದಾರನ ಹೆಸರು</strong></p>



<p>ಒಂದೇ ಮತದಾರನನ್ನು ಹಲವಾರು ಮತಗಟ್ಟೆಗಳಲ್ಲಿ ನೋಂದಾಯಿಸಿರುವ ನಿದರ್ಶನಗಳಿವೆ ಎಂದು ಗಾಂಧಿ ಆರೋಪಿಸಿದ್ದರೆ, ಒಬ್ಬ ಮತದಾರನ ಹೆಸರು ಹಲವು ಬಾರಿ ಇದ್ದರೂ ಒಮ್ಮೆ ಮಾತ್ರ ಮತ ಚಲಾಯಿಸಬಹುದು ಎಂದು ಕುಮಾರ್ ಹೇಳಿದರು.</p>



<p>ಮತದಾರರ ಪಟ್ಟಿಯಲ್ಲಿ ಒಬ್ಬ ಮತದಾರರ ಹೆಸರು ಹಲವು ಬಾರಿ ಏಕೆ ಕಾಣಿಸಿಕೊಳ್ಳುತ್ತಿದೆ ಎಂಬುದಕ್ಕೆ ಅವರು ಯಾವುದೇ ಉತ್ತರವನ್ನು ನೀಡಲಿಲ್ಲ.</p>



<p>ಆಗಸ್ಟ್ 7 ರ ಪತ್ರಿಕಾಗೋಷ್ಠಿಯಲ್ಲಿ ಗಾಂಧಿಯವರು ವಿವಿಧ ಬೂತ್‌ಗಳಲ್ಲಿನ ಮತದಾರರ ಪಟ್ಟಿಯಲ್ಲಿ ಮತದಾರರು ಹಲವು ಬಾರಿ ಕಾಣಿಸಿಕೊಂಡಿರುವ ವಿವಿಧ ಉದಾಹರಣೆಗಳನ್ನು ತೋರಿಸಿದ್ದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">New Voter List Irregularities<br><br>Significant irregularities have also been observed in the new voter list.<br><br>For instance, a woman named &#39;Shakun Rani&#39; was registered twice within two months. This was done so cleverly that in one instance, her full name was entered as &#39;Shakun Rani&#39;… <a href="https://t.co/EOZWWTIyZA">pic.twitter.com/EOZWWTIyZA</a></p>&mdash; Congress (@INCIndia) <a href="https://twitter.com/INCIndia/status/1953419885108773194?ref_src=twsrc%5Etfw">August 7, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಒಬ್ಬ ಮತದಾರ &#8220;ಒಮ್ಮೆ ಮಾತ್ರ ಮತ ಚಲಾಯಿಸಬಹುದು. ಮತದಾರರ ಪಟ್ಟಿಯಲ್ಲಿ ಅವರ ಹೆಸರು ಎರಡು ಬಾರಿ ಇದ್ದರೆ ಅದು ಹೇಗೆ ಮತ ಕಳ್ಳತನವಾಗುತ್ತದೆ? ಅದು ಸಾಧ್ಯವಿಲ್ಲ. ಪ್ರತಿಯೊಬ್ಬ ಮತದಾರರು ಒಮ್ಮೆ ಮಾತ್ರ ಮತ ಚಲಾಯಿಸಬಹುದು. ಅದಕ್ಕಾಗಿಯೇ ಚುನಾವಣಾ ಆಯೋಗದ ಡೇಟಾವನ್ನು ತಪ್ಪಾಗಿ ವಿಶ್ಲೇಷಿಸಲಾಗಿದೆ ಮತ್ತು ಮತದಾರರ ಪಟ್ಟಿಗಳು ತಪ್ಪು ಮತ್ತು ಆದ್ದರಿಂದ ಮತದಾನ ತಪ್ಪು ಎಂದು ಹೇಳಲಾಗಿದೆ ಎಂದು ನಾವು ಹೇಳಿದ್ದೇವೆ &#8211; ಚುನಾವಣಾ ಪಟ್ಟಿಗಳು ಮತ್ತು ಮತದಾನ ಬೇರೆ ಬೇರೆ&#8221; ಎಂದು ಕುಮಾರ್ ಹೇಳಿದರು.‌</p>



<p>(ಇದು ದಿ ವೈರ್‌ ಪ್ರಕಟಿಸಿದ <a href="https://thewire.in/government/chief-election-commissioner-gyanesh-kumar-presser-seven-non-answers"><strong>Oath Politics, Silence on Forms Received and Number of &#8216;Illegal&#8217; Immigrants: EC&#8217;s Seven Non-Answers</strong></a> ಕನ್ನಡಾನುವಾದ)</p>



<p></p>
]]></content:encoded>
					
		
		
			</item>
		<item>
		<title>ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ರಾಹುಲ್‌ ಗಾಂಧಿಯನ್ನು ಟಾರ್ಗೆಟ್‌ ಮಾಡಿದ ಚುನಾವಣಾ ಆಯೋಗ!</title>
		<link>https://peepalmedia.com/the-election-commission-targeted-rahul-gandhi-to-cover-up-its-failure/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 11 Aug 2025 06:30:25 +0000</pubDate>
				<category><![CDATA[ಅಂಕಣ]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[Election Commission of India]]></category>
		<category><![CDATA[mahadevapura]]></category>
		<category><![CDATA[Rahul Gandhi]]></category>
		<category><![CDATA[vote theft]]></category>
		<guid isPermaLink="false">https://peepalmedia.com/?p=63987</guid>

					<description><![CDATA[ಆಗಸ್ಟ್ 8, 2025ರಂದು, ಭಾರತದ ಚುನಾವಣಾ ಆಯೋಗ (ECI) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಒಂದು ಒತ್ತಾಯವನ್ನು ನೀಡಿತು. ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ &#8220;ವ್ಯಾಪಕ ಮತದಾನ ಕಳ್ಳತನ&#8221; ಎಂದು ಅವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ಆರೋಪಗಳನ್ನು ಕಾನೂನಿನ ಪ್ರಕಾರ ಪ್ರಮಾಣದ ಮೂಲಕ ಸಲ್ಲಿಸಿ, ಅಥವಾ &#8220;ಸಾರ್ವಜನಿಕರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಿ,&#8221; ಎಂದು ಆಯೋಗವು ಅವರಿಗೆ ಸವಾಲು ಹಾಕಿತು. ಆದರೆ ಇದು ಕೇವಲ ರಾಜಕೀಯ ವಾಗ್ವಾದವಲ್ಲ. ಇದು ಚುನಾವಣಾ ಆಯೋಗದ ಒಂದು ದಶಕದ ದಾಖಲಿತ ವೈಫಲ್ಯಗಳ ಫಲವಾಗಿದೆ. ಮಹದೇವಪುರದಲ್ಲಿ, [&#8230;]]]></description>
										<content:encoded><![CDATA[
<p>ಆಗಸ್ಟ್ 8, 2025ರಂದು, ಭಾರತದ ಚುನಾವಣಾ ಆಯೋಗ (ECI) <a href="https://x.com/INCIndia/status/1953419885108773194">ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ</a>ಗೆ ಒಂದು ಒತ್ತಾಯವನ್ನು ನೀಡಿತು. ಬೆಂಗಳೂರಿನ <a href="https://x.com/ECISVEEP/status/1953419769564254699">ಮಹದೇವಪುರ ಕ್ಷೇತ್ರದಲ್ಲಿ &#8220;ವ್ಯಾಪಕ ಮತದಾನ ಕಳ್ಳತನ&#8221; ಎಂದು ಅವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯೆಯಾಗಿ</a>, ಆರೋಪಗಳನ್ನು ಕಾನೂನಿನ ಪ್ರಕಾರ ಪ್ರಮಾಣದ ಮೂಲಕ ಸಲ್ಲಿಸಿ, ಅಥವಾ &#8220;ಸಾರ್ವಜನಿಕರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಿ,&#8221; ಎಂದು ಆಯೋಗವು ಅವರಿಗೆ ಸವಾಲು ಹಾಕಿತು.</p>



<p>ಆದರೆ ಇದು ಕೇವಲ ರಾಜಕೀಯ ವಾಗ್ವಾದವಲ್ಲ. ಇದು ಚುನಾವಣಾ ಆಯೋಗದ ಒಂದು ದಶಕದ ದಾಖಲಿತ ವೈಫಲ್ಯಗಳ ಫಲವಾಗಿದೆ.</p>



<p>ಮಹದೇವಪುರದಲ್ಲಿ, ಚುನಾವಣಾ ಆಯೋಗವು ವರ್ಷಗಳಿಂದ ತನ್ನದೇ ಆದ ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಿದೆ, ಆದರೂ ಕ್ಷೇತ್ರದ ಮತದಾರರ ಪಟ್ಟಿಯು ಅಸಾಮಾನ್ಯ ಮತ್ತು ಅಸಂಭವ ದರದಲ್ಲಿ ಬೆಳೆಯುತ್ತಿತ್ತು. ಆಯೋಗದ ದತ್ತಾಂಶ, ಸುದ್ದಿ ವರದಿಗಳು ಮತ್ತು ಹಿಂದಿನ ಹಗರಣಗಳು, ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತರಿಪಡಿಸುವ ಏಕೈಕ ಜವಾಬ್ದಾರಿಯನ್ನು ಹೊಂದಿರುವ ಸಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗವು, ಬಿಕ್ಕಟ್ಟನ್ನು ಬೆಳೆಯಲು ಅವಕಾಶ ನೀಡಿತ್ತು ಮತ್ತು ಈಗ ಅದನ್ನು ಬಹಿರಂಗವಾಗಿ ನಿರಾಕರಿಸುತ್ತಿದೆ. </p>



<p>ಮಹದೇವಪುರದ ಕಥೆ ಚುನಾವಣಾ ಆಯೋಗದ ಸ್ವಂತ<a href="https://www.eci.gov.in/Documents/Final-ER-FAQ.pdf"> ಕೈಪಿಡಿಯಿಂದ</a> ಆರಂಭವಾಗುತ್ತದೆ. ಈ ಕೈಪಿಡಿ ಒಂದು ಪರಿಷ್ಕರಣೆಯ ಸಂದರ್ಭದಲ್ಲಿ ಮತದಾರರ ಸಂಖ್ಯೆಯ ಶೇ.4ಕ್ಕಿಂತ ಹೆಚ್ಚು ನಿವ್ವಳ ಸೇರ್ಪಡೆಯಾದರೆ &#8220;ಹೆಚ್ಚುವರಿ ಹಂತಗಳ ದೃಢೀಕರಣವನ್ನು&#8221; ಮಾಡಬೇಕೆಂದು ಹೇಳುತ್ತದೆ.  ಈ ಶೇ.4 ರ ಗಡಿಯು ಸಿಂಗಲ್‌ ರಿವಿಷನ್‌ ಸೈಕಲ್‌ಗೆ ಆಯೋಗದ ಎಚ್ಚರಿಕೆಯ ಗಂಟೆಯಾಗಿದೆ.</p>



<p>ಮಹದೇವಪುರದಲ್ಲಿ, ದತ್ತಾಂಶವು ಈ ಎಚ್ಚರಿಕೆಯ ಗಂಟೆ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಬಡಿಯುತ್ತಿತ್ತು ಎಂಬುದನ್ನು ತೋರಿಸುತ್ತದೆ. ಅಧಿಕೃತ ಮತದಾರ ದತ್ತಾಂಶವು ತೀವ್ರವಾದ ಬೆಳವಣಿಗೆಯನ್ನು ಬಹಿರಂಗಪಡಿಸುತ್ತದೆ. ಆಯೋಗವು ಸ್ವಂತ ಮಾನದಂಡದ ಅಡಿಯಲ್ಲಿ ನಿರಂತರ ವಿಶೇಷ ಪರಿಶೀಲನೆಯನ್ನು ಮಾಡಬೇಕಿತ್ತು. </p>



<h4 class="wp-block-heading">ವಿವರಣೆ:</h4>



<figure class="wp-block-image size-large"><img decoding="async" width="1024" height="366" src="https://peepalmedia.com/wp-content/uploads/2025/08/image-1024x366.png" alt="" class="wp-image-63988" srcset="https://peepalmedia.com/wp-content/uploads/2025/08/image-1024x366.png 1024w, https://peepalmedia.com/wp-content/uploads/2025/08/image-300x107.png 300w, https://peepalmedia.com/wp-content/uploads/2025/08/image-768x274.png 768w, https://peepalmedia.com/wp-content/uploads/2025/08/image-1536x549.png 1536w, https://peepalmedia.com/wp-content/uploads/2025/08/image-150x54.png 150w, https://peepalmedia.com/wp-content/uploads/2025/08/image-696x249.png 696w, https://peepalmedia.com/wp-content/uploads/2025/08/image-1068x381.png 1068w, https://peepalmedia.com/wp-content/uploads/2025/08/image.png 1596w" sizes="(max-width: 1024px) 100vw, 1024px" /></figure>



<ul class="wp-block-list">
<li>ಪ್ರತಿ ಐದು ವರ್ಷಗಳ ಗುಂಪಿನಲ್ಲಿ, ಸರಾಸರಿ ವಾರ್ಷಿಕ ಬೆಳವಣಿಗೆ ದರವು ಶೇ.5.5 ರಿಂದ ಶೇ.6.8 ರವರೆಗೆ ಇತ್ತು, ಇದರಿಂದ ಆಯೋಗದ ಶೇ.4 ರ ಗಡಿಯನ್ನು ಹಲವಾರು ಬಾರಿ ಉಲ್ಲಂಘಿಸಲಾಗಿದೆ ಎಂಬುದು ಖಚಿತವಾಗಿದೆ.</li>



<li>ಒಂದು ವರ್ಷದಲ್ಲಿ, ಮತದಾರರ ಸಂಖ್ಯೆ ಶೇ.8.54 ರಷ್ಟು ಏರಿಕೆಯಾಗಿದೆ. 2023 ರ ರಾಜ್ಯ ಚುನಾವಣೆ ಮತ್ತು 2024 ರ ಸಾರ್ವತ್ರಿಕ ಚುನಾವಣೆಯ ನಡುವೆ, ಮತದಾರರ ಸಂಖ್ಯೆ ಶೇ.8.54 ರಷ್ಟು ಗಣನೀಯವಾಗಿ ಬೆಳೆಯಿತು. ಈ ಸಿಂಗಲ್‌ ರಿವಿಷನ್‌ ಸೈಕಲ್‌ ಆಯೋಗದ ಶೇ.4 ರ ಕೆಂಪು ಗೆರೆಯನ್ನು ಎರಡು ಪಟ್ಟು ಮೀರಿತು. ಆಯೋಗ ಸ್ವಯಂಚಾಲಿತ ಪರಿಶೀಲನೆಯನ್ನು ಆರಂಭಿಸಬೇಕಿತ್ತು.</li>
</ul>



<p>ಇದು ನಗರವ್ಯಾಪಿ ಪ್ರವೃತ್ತಿಯಾಗಿರಲಿಲ್ಲ. 2008 ರಿಂದ 2024 ರವರೆಗೆ ಮಹದೇವಪುರದ ಶೇ.140 ರ ಬೆಳವಣಿಗೆಯು, ಅದೇ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಇತರ ಏಳು ವಿಧಾನಸಭಾ ಭಾಗಗಳ ಬೆಳವಣಿಗೆಯನ್ನು ಕುಗ್ಗಿಸಿತು. <a href="https://archive.ph/JYREo"><em>ದಿ ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ</a>ಯಂತೆ, ಎರಡನೇ ವೇಗವಾಗಿ ಬೆಳೆಯುತ್ತಿರುವ ಭಾಗವಾದ ಸರ್ವಜ್ಞನಗರವು ಇದೇ ಅವಧಿಯಲ್ಲಿ ಕೇವಲ ಶೇ.26.5 ರಷ್ಟು ಬೆಳೆಯಿತು. ಉಳಿದ ಆರು ಭಾಗಗಳ ಬೆಳವಣಿಗೆ ಇದಕ್ಕಿಂತಲೂ ಕಡಿಮೆಯಾಗಿತ್ತು.</p>



<p>ಮಹದೇವಪುರದಲ್ಲಿ ಐಟಿ ಕಾರಿಡಾರ್‌ನಿಂದಾಗಿ ರಿಯಲ್ ಎಸ್ಟೇಟ್ ಮತ್ತು ಜನಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ ಎಂಬುದು ನಿರಾಕರಿಸಲಾಗದ ಸತ್ಯ. ಆದರೆ, ಇಂತಹ ಜನಸಂಖ್ಯಾಶಾಸ್ತ್ರೀಯ ಬದಲಾವಣೆಗಳನ್ನು ನಿರ್ವಹಿಸಲು ಚುನಾವಣಾ ಆಯೋಗದ ನಿಯಮಗಳನ್ನು ರೂಪಿಸಲಾಗಿದೆ. ಅಸಾಧಾರಣ ಬೆಳವಣಿಗೆಯು ಅಧಿಕಾರಿಗಳನ್ನು ತಮ್ಮ ಕರ್ತವ್ಯ ಮಾಡುವುದರಿಂದ ವಿನಾಯಿತಿ ನೀಡುವುದಿಲ್ಲ; ಇದಕ್ಕೆ ವಿರುದ್ಧವಾಗಿ, ಇದು &#8220;additional layers of cross-verification&#8221; ಮಾಡಬೇಕೆಂದು ಒತ್ತಾಯಿಸುತ್ತದೆ, ಆದರೆ ಇವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ತೋರುತ್ತದೆ.</p>



<p>ದತ್ತಾಂಶವು ಎರಡು ವಿಷಯಗಳನ್ನು ಸಾಬೀತುಪಡಿಸುತ್ತದೆ. ಮೊದಲನೆಯದಾಗಿ, ಮಹದೇವಪುರವು ಒಂದು ತೀವ್ರವಾದ ವಿಚಲನವಾಗಿತ್ತು. ಎರಡನೆಯದಾಗಿ, ಚುನಾವಣಾ ಆಯೋಗವು ತನ್ನದೇ ಆದ ನಿಯಮಗಳ ಪ್ರಕಾರ ವರ್ಷದಿಂದ ವರ್ಷಕ್ಕೆ ತನಿಖೆ ನಡೆಸಬೇಕಿತ್ತು, ಆದರೂ ಅದು ಮತದಾರರ ಪಟ್ಟಿಯನ್ನು ಹತ್ತಿರದಲ್ಲೇ ಇದ್ದ ಮುಂದಿನ ದೊಡ್ಡ ಕ್ಷೇತ್ರಕ್ಕಿಂತ ಎರಡು ಪಟ್ಟು ದೊಡ್ಡದಾಗಲು ಅವಕಾಶ ನೀಡಿತು.</p>



<p><strong>ಸಾರ್ವಜನಿಕ ಎಚ್ಚರಿಕೆಗಳು ಮತ್ತು ದಾಖಲಿತ ಹಗರಣಗಳು</strong></p>



<p>ಎಚ್ಚರಿಕೆಗಳು ಕೇವಲ ದತ್ತಾಂಶದಲ್ಲಿ ಮಾತ್ರ ಇರಲಿಲ್ಲ. ಬೆಂಗಳೂರಿನ ನಾಗರಿಕರು ಮತ್ತು ಕಾರ್ಯಕರ್ತರು ವರ್ಷಗಳಿಂದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು, ಆದರೆ ಪ್ರತಿಕ್ರಿಯೆ ಮಾತ್ರ ನೀರಸವಾಗಿತ್ತು. </p>



<p>2017 ರಲ್ಲಿ, ವೈಟ್‌ಫೀಲ್ಡ್‌ನಲ್ಲಿ &#8220;ಮಿಲಿಯನ್ ವೋಟರ್ಸ್ ರೈಸಿಂಗ್&#8221; ಎಂಬ ನಾಗರಿಕರ ಸಂಘಟನೆಯೊಂದು ಆಳವಾದ ಸಮಸ್ಯೆಗಳನ್ನು ಕಂಡುಕೊಂಡಿತು. <a href="https://www.thehindu.com/news/national/karnataka/mahadevapura-has-seen-allegations-over-electoral-roll-manipulation-earlier-too/article69909837.ece"><em>ದಿ ಹಿಂದೂ</em> </a>ವರದಿಯಂತೆ, ಶೇ.66 ರಷ್ಟು ಮತದಾರರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿತ್ತು. ಸಾರ್ವಜನಿಕರು ಆಕ್ರೋಶಿತರಾದರು, ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಫಾರ್ಮ್‌ಗಳ ಮರುಪರಿಶೀಲನೆಗೆ ಆದೇಶಿಸಲು ಒತ್ತಾಯಿಸಿದರು. ಆದರೂ ಇದರಿಂದ ತೃಪ್ತರಾಗದ ನಾಗರಿಕರು ಈ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್‌ ಬಾಗಿಲಿಗೆ ತಂದರು. </p>



<p>ನಂತರ, 2022 ರಲ್ಲಿ, ಚಿಲುಮೆ ವಿವಾದವು ಮತದಾರರ ಪಟ್ಟಿಯ ದುರ್ಬಳಕೆಯ ಒಂದು ಭಯಾನಕತೆಯನ್ನು ನಮ್ಮ ಮುಂದೆ ಇಟ್ಟಿತು. <em><a href="https://www.thenewsminute.com/karnataka/probe-finds-chilume-collected-bengaluru-voter-data-illegally-and-stored-foreign-servers">ದಿ ನ್ಯೂಸ್‌ಮಿನಿಟ್</a></em> ಮತ್ತು ಪ್ರತಿಧ್ವನಿ ನಡೆಸಿದ ತನಿಖಾ ವರದಿಯಲ್ಲಿ, ನಗರರಾಡಳಿತದಿಂದ &#8216;ಮತದಾರರ ಜಾಗೃತಿಯನ್ನು ಹೆಚ್ಚಿಸಲು&#8217; ಅಧಿಕಾರ ಪಡೆದ ಚಿಲುಮೆ ಟ್ರಸ್ಟ್ ಎಂಬ ಎನ್‌ಜಿಒ ಮೇಲೆ, ಮತದಾರರ ವೈಯಕ್ತಿಕ ದತ್ತಾಂಶವನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿದ ಆರೋಪ ಮಾಡಲಾಗಿತ್ತು. ಆಗ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷವು, ಈ ಸಂಸ್ಥೆಯು ಈ ದತ್ತಾಂಶವನ್ನು ರಾಜಕೀಯ ಕ್ಲೈಂಟ್‌ಗಳಿಗಾಗಿ ಮತದಾರರನ್ನು ಪಟ್ಟಿಯಿಂದ ಅಳಿಸಲು ಬಳಸಿದೆ ಎಂದು ಆರೋಪಿಸಿತು.</p>



<p>ಸರ್ಕಾರಿ ತನಿಖೆಯು ನಂತರ ಚಿಲುಮೆ &#8220;ಕಾನೂನುಬಾಹಿರವಾಗಿ&#8221; ಮತದಾರರ ದತ್ತಾಂಶವನ್ನು ಸಂಗ್ರಹಿಸಿ ಖಾಸಗಿ ಸರ್ವರ್‌ಗಳಲ್ಲಿ ಸಂಗ್ರಹಿಸಿತು ಎಂದು ಒಪ್ಪಿಕೊಂಡಿತು, ಆದರೂ &#8220;ದುರ್ಬಳಕೆಯಾಗಿದೆ&#8221; ಎಂದು ತನಿಖೆ ಕಂಡುಹಿಡಿಯಲಿಲ್ಲ. ಮತದಾರರ ಜಾಗೃತಿಯ ಹೆಸರಿನಲ್ಲಿ ಅಧಿಕೃತ ಪ್ರಕ್ರಿಯೆಯನ್ನು ಕಾನೂನುಬಾಹಿರ ಉದ್ದೇಶಗಳಿಗಾಗಿ ಉಲ್ಲಂಘಿಸಲಾಗಿತ್ತು. ಮಹದೇವಪುರವು ಚಿಲುಮೆ ಸಂಸ್ಥೆ ಸಕ್ರಿಯವಾಗಿ ಕೆಲಸ ಮಾಡಿದ್ದ ಮೂರು ಕ್ಷೇತ್ರಗಳಲ್ಲಿ ಒಂದಾಗಿತ್ತು.</p>



<p><strong>ಪ್ರಮಾಣ ಎಂಬ ವಿಡಂಬನೆ</strong></p>



<p>ಇದು ಆಗಸ್ಟ್ 7, 2025 ರಂದು ರಾಹುಲ್ ಗಾಂಧಿಯವರು ನಡೆಸಿದ ಪತ್ರಿಕಾಗೋಷ್ಠಿಯ ಹಿನ್ನೆಲೆಯಾಗಿತ್ತು. ಅವರ 1,00,250 &#8220;ಕದ್ದ ಮತಗಳ&#8221; ಆರೋಪಕ್ಕೆ ವರ್ಷಗಳಿಂದ ಏರಿಳಿಯುತ್ತಿರುವ ಮತದಾರರ ಸಂಖ್ಯೆಗಳು, ನಿರ್ಲಕ್ಷಿತ ದೂರುಗಳು ಮತ್ತು ಸಾರ್ವಜನಿಕ ಹಗರಣಗಳು ಆಧಾರಿತವಾಗಿದ್ದವು.</p>



<p>ಚುನಾವಣಾ ಆಯೋಗದ ಪ್ರತಿಕ್ರಿಯೆ, ಆರೋಪವನ್ನು ಅಧಿಕೃತವಾಗಿ ಸಲ್ಲಿಸಲು ಒತ್ತಾಯಿಸುವುದು ವಿಡಂಬನೆಯಾಗಿದೆ. ವಿವರವಾದ ಆರೋಪಗಳನ್ನು ತನಿಖೆ ಮಾಡುವ ಬದಲು, ಆಯೋಗವು ಆಕ್ರಮಣಕಾರಿಯಾಗಿ ನಡೆದುಕೊಂಡಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕಾನೂನು ತಜ್ಞ ಅಭಿಷೇಕ್ ಮನು ಸಿಂಗ್ವಿ <a href="https://www.thehindu.com/news/national/eci-is-shooting-the-messenger-and-ignoring-the-message-says-congresss-abhishek-singhvi/article69916195.ece"><em>ದಿ ಹಿಂದೂ</em>ಗೆ </a>ತಿಳಿಸಿದಂತೆ, ಆಯೋಗವು ತಕ್ಷಣವೇ &#8220;ಸಂದೇಶವಾಹಕನನ್ನು ಗುರಿಯಾಗಿಸಿ ಸಂದೇಶವನ್ನು ನಿರ್ಲಕ್ಷಿಸಿತು &#8211; shooting the messenger and ignoring the message.&#8221;</p>



<p>ಆರೋಪವನ್ನು ಪ್ರಮಾಣೀಕರಿಸಲು ಒತ್ತಾಯಿಸುವುದು ಒಂದು ತಂತ್ರವಾಗಿದೆ. ಇದು ಆಯೋಗದ ಜವಾಬ್ದಾರಿಯಾದ ವ್ಯವಸ್ಥಿತ ಸಮಸ್ಯೆಯನ್ನು, ರಾಜಕಾರಣಿಯ ವೈಯಕ್ತಿಕ ವಿಶ್ವಾಸಾರ್ಹತೆಯ ಸಮಸ್ಯೆಯಾಗಿ ಬದಲಾಯಿಸುತ್ತದೆ. ಸಿಂಗ್ವಿ ಕಾನೂನು ದೋಷವನ್ನು ಎತ್ತಿ ತೋರಿಸಿದರು, ಈ ನಿಯಮವನ್ನು &#8220;ಪೂರ್ಣವಾಗಿ ತಪ್ಪಾಗಿ ಅರ್ಥೈಸಲಾಗಿದೆ&#8221; ಎಂದು ಕರೆದರು. ಪ್ರಮಾಣವು ನಿರ್ದಿಷ್ಟ, ವೈಯಕ್ತಿಕ ಚುನಾವಣಾ ವಿವಾದಗಳಿಗಾಗಿ ರೂಪಿಸಲಾಗಿದೆ ಮತ್ತು &#8220;ಒಂದು ಸಂಪೂರ್ಣ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಬೃಹತ್‌ ವಂಚನೆಯ ಆರೋಪಕ್ಕೆ ಯಾವುದೇ ಸಂಬಂಧವಿಲ್ಲ&#8221; ಎಂದು ಅವರು ವಾದಿಸಿದರು.</p>



<p>ಚುನಾವಣಾ ಆಯೋಗವು ವಿರೋಧ ಪಕ್ಷದ ನಾಯಕನ ಮೇಲೆ ಒಂದು ಲಕ್ಷಕ್ಕಿಂತ ಹೆಚ್ಚು ವೈಯಕ್ತಿಕ ಪ್ರಕರಣಗಳನ್ನು ಸ್ವತಃ ದೃಢೀಕರಿಸುವ ಅಸಾಧ್ಯ ಕಾನೂನು ಭಾರವನ್ನು ಹೇರಲು ಹೊರಟಿದೆ. ಆಯೋಗ ಮಾಡಬೇಕಾದ ಕೆಲಸವನ್ನು ಸರಿಯಾಗಿ ಮಾಡದೆ ಇಷ್ಟು ದೊಡ್ಡದಾಗಿ ಈ ಸಂಖ್ಯೆ ಬೆಳೆದಿದೆ.  ಸಿಂಗ್ವಿ ಈ ಪರಿಸ್ಥಿತಿಯನ್ನು ಒಬ್ಬ ನಾಗರಿಕನು ಕಳ್ಳತನವನ್ನು ವರದಿ ಮಾಡಿದಾಗ, ಪೊಲೀಸರು ಕಳ್ಳರನ್ನು ನಿರ್ಲಕ್ಷಿಸಿ, ದೂರುದಾರನಿಗೆ ಪ್ರಮಾಣದ ಮೇಲೆ ಹೇಳಿಕೆಯನ್ನು ನೀಡಲು ಒತ್ತಾಯಿಸುವಂತೆ ಆಗಿದೆ ಎಂದು ಹೋಲಿಸಿದರು.</p>



<p><strong>ಕೇಂದ್ರ ವಿಷಯ</strong></p>



<p>ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಯನ್ನು ಖಾತರಿಪಡಿಸಲು ಸಂವಿಧಾನದಿಂದ ಬದ್ಧರಾದವರು ಚುನಾವಣಾ ಆಯೋಗದ ಅಧಿಕಾರಿಗಳೇ. ಮಹದೇವಪುರದಲ್ಲಿ, ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ತಮ್ಮದೇ ಆದ ದತ್ತಾಂಶ ಮತ್ತು ನಿಯಮಗಳ ಮೇಲೆ ಕಾರ್ಯನಿರ್ವಹಿಸಲು ಅವರು ವಿಫಲರಾದರು ಎಂಬುದಕ್ಕೆ ಸಾಕ್ಷಿಯಿದೆ. ಈಗ, ಅದೇ ಸಂಸ್ಥೆಯು ಒಂದು ಬೇರೆ ನಿಯಮವನ್ನು ಆಯುಧವಾಗಿ ಬಳಸಿಕೊಂಡು, ಸಮಸ್ಯೆಯನ್ನು ಮುನ್ನಲೆಗೆ ತಂದ ವ್ಯಕ್ತಿಯನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ. ಸಿಂಗ್ವಿ ಕೇಳಿದಂತೆ, &#8220;ಸಂವಿಧಾನಿಕ ಕಾವಲುಗಾರರು ತಮ್ಮ ಜವಾಬ್ದಾರಿಗಳನ್ನು ತ್ಯಜಿಸಿದಾಗ&#8230; ವಿರೋಧ ಪಕ್ಷವು ಕಾವಲುಗಾರರನ್ನು ಕಾಯದಿರೆ ಬೇರೆ ಯಾರುಕಾಯುತ್ತಾರೆ &#8211; When constitutional custodians… abdicate their responsibilities… Who will guard the guardians if not the opposition?&#8221;</p>



<p>ಮಹದೇವಪುರದ ಕಥೆಯು ಈಗ ಒಂದು ಕ್ಷೇತ್ರಕ್ಕೆ ಅಥವಾ ಒಬ್ಬ ರಾಜಕಾರಣಿಯ ಮೇಲಿನ ಆರೋಪಕ್ಕೆ ಸೀಮಿತವಾಗಿಲ್ಲ. ಇದು ಸಾಂಸ್ಥಿಕ ವೈಫಲ್ಯಕ್ಕೆ ಕೈಗನ್ನಡಿಯಾಗಿದೆ, ಇದು ಚುನಾವಣಾ ಆಯೋಗವು ಸ್ವತಂತ್ರ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ಬದ್ಧವಾಗಿದೆಯೇ ಎಂಬ ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ.</p>
]]></content:encoded>
					
		
		
			</item>
		<item>
		<title>45 ದಿನಗಳಲ್ಲಿ ಸಿಸಿಟಿವಿ ದೃಶ್ಯಗಳನ್ನು ನಾಶಮಾಡಲು ಅಧಿಕಾರಿಗಳಿಗೆ ಸೂಚಿಸಿದ ಚುನಾವಣಾ ಆಯೋಗ</title>
		<link>https://peepalmedia.com/election-commission-asks-officials-to-destroy-cctv-footage-within-45-days/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 20 Jun 2025 11:11:35 +0000</pubDate>
				<category><![CDATA[ದೇಶ]]></category>
		<category><![CDATA[Chief Election Commissioner]]></category>
		<category><![CDATA[Election Commission of India]]></category>
		<category><![CDATA[Gyanesh Kumar]]></category>
		<guid isPermaLink="false">https://peepalmedia.com/?p=61321</guid>

					<description><![CDATA[45 ದಿನಗಳ ಒಳಗೆ ನ್ಯಾಯಾಲಯದಲ್ಲಿ ಮತದಾನವನ್ನು ಯಾರಾದರೂ ಪ್ರಶ್ನಿಸದಿದ್ದರೆ, ಚುನಾವಣಾ ಪ್ರಕ್ರಿಯೆಯ ಸಿಸಿಟಿವಿ, ವೆಬ್‌ಕಾಸ್ಟಿಂಗ್ ಮತ್ತು ವಿಡಿಯೋ ದೃಶ್ಯಗಳನ್ನು ನಾಶಪಡಿಸುವಂತೆ ಭಾರತೀಯ ಚುನಾವಣಾ ಆಯೋಗ (ಇಸಿಐ) ರಾಜ್ಯ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ತನ್ನ ಎಲೆಕ್ಟ್ರಾನಿಕ್ ಡೇಟಾವನ್ನು ಬಳಸಿಕೊಂಡು &#8220;ದುರುದ್ದೇಶಪೂರಿತ ನಿರೂಪಣೆಗಳು&#8221; ಎಂದು ಹರಡುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಮೇ 30 ರಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಚುನಾವಣಾ ಆಯೋಗವು ಈ ಸೂಚನೆಗಳನ್ನು ನೀಡಿದೆ ಎಂದು&#160;ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ [&#8230;]]]></description>
										<content:encoded><![CDATA[
<p>45 ದಿನಗಳ ಒಳಗೆ ನ್ಯಾಯಾಲಯದಲ್ಲಿ ಮತದಾನವನ್ನು ಯಾರಾದರೂ ಪ್ರಶ್ನಿಸದಿದ್ದರೆ, ಚುನಾವಣಾ ಪ್ರಕ್ರಿಯೆಯ ಸಿಸಿಟಿವಿ, ವೆಬ್‌ಕಾಸ್ಟಿಂಗ್ ಮತ್ತು ವಿಡಿಯೋ ದೃಶ್ಯಗಳನ್ನು ನಾಶಪಡಿಸುವಂತೆ ಭಾರತೀಯ ಚುನಾವಣಾ ಆಯೋಗ (ಇಸಿಐ) ರಾಜ್ಯ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ತನ್ನ ಎಲೆಕ್ಟ್ರಾನಿಕ್ ಡೇಟಾವನ್ನು ಬಳಸಿಕೊಂಡು &#8220;ದುರುದ್ದೇಶಪೂರಿತ ನಿರೂಪಣೆಗಳು&#8221; ಎಂದು ಹರಡುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.</p>



<p>ಮೇ 30 ರಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಚುನಾವಣಾ ಆಯೋಗವು ಈ ಸೂಚನೆಗಳನ್ನು ನೀಡಿದೆ ಎಂದು&nbsp;<a href="https://www.newindianexpress.com/nation/2025/Jun/20/destroy-cctv-camera-webcasting-video-footage-after-45-days-ec-to-state-poll-officers">ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.</a></p>



<p>ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳನ್ನು ಬಹು ರೆಕಾರ್ಡಿಂಗ್ ಸಾಧನಗಳಾದ ಛಾಯಾಗ್ರಹಣ, ವಿಡಿಯೋಗ್ರಫಿ, ಸಿಸಿಟಿವಿ ಮತ್ತು ವೆಬ್‌ಕಾಸ್ಟಿಂಗ್ ಮೂಲಕ ದಾಖಲಿಸಲು ಸೂಚನೆಗಳನ್ನು ನೀಡಿರುವುದಾಗಿ ಚುನಾವಣಾ ಆಯೋಗ ಪತ್ರದಲ್ಲಿ ತಿಳಿಸಿದೆ. ಆದರೆ ಅಂತಹ ದೃಶ್ಯಗಳನ್ನು 45 ದಿನಗಳವರೆಗೆ ಮಾತ್ರ ಸಂರಕ್ಷಿಸಲಾಗುವುದು, ಅಂದರೆ ಆ ಅವಧಿಯೊಳಗೆ ಚುನಾವಣಾ ಅರ್ಜಿಯನ್ನು (ಮತದಾನವನ್ನು ಪ್ರಶ್ನಿಸಿ) ನ್ಯಾಯಾಲಯದಲ್ಲಿ ಸಲ್ಲಿಸಬಹುದು ಎಂದು ಹೇಳಿದರು.</p>



<p>&#8220;ಇತ್ತೀಚೆಗೆ ಈ ವಿಷಯವನ್ನು ಚುನಾವಣಾ ಅಭ್ಯರ್ಥಿಗಳಲ್ಲದವರು ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಮತ್ತು ದುರುದ್ದೇಶಪೂರಿತ ನಿರೂಪಣೆಗಳನ್ನು ಹರಡಲು ದುರುಪಯೋಗಪಡಿಸಿಕೊಂಡಿದ್ದಾರೆ, ಅಂತಹ ವಿಷಯವನ್ನು ಆಯ್ದ ಮತ್ತು ಸಂದರ್ಭಕ್ಕೆ ಹೊರತಾದ ರೀತಿಯಲ್ಲಿ ಬಳಸುವುದರಿಂದ ಯಾವುದೇ ಕಾನೂನು ಫಲಿತಾಂಶ ದೊರೆಯುವುದಿಲ್ಲ, ಇದು ಪರಿಶೀಲನೆಗೆ ಪ್ರೇರೇಪಿಸಿದೆ&#8221; ಎಂದು ಪತ್ರದಲ್ಲಿ ತಿಳಿಸಲಾಗಿದೆ.</p>



<p>&#8220;ಒಂದು ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಚುನಾವಣೆಯನ್ನು ಪ್ರಶ್ನಿಸಿ ಅರ್ಜಿ ಬಾರದೇ ಇದ್ದರೆ, ಸದರಿ ಡೇಟಾವನ್ನು ನಾಶಪಡಿಸಬಹುದು&#8221; ಎಂದು ಪತ್ರದಲ್ಲಿ ತಿಳಿಸಲಾಗಿದೆ.</p>



<p>ಡಿಸೆಂಬರ್ 2024 ರಲ್ಲಿ, <a href="https://thewire.in/government/now-not-all-election-related-documents-are-available-for-public-inspection-as-centre-changes-rules">ಕೇಂದ್ರ ಸರ್ಕಾರವು 1961 ರ ಚುನಾವಣಾ ನೀತಿ ನಿಯಮಗಳ ನಿಯಮ 93(2)(a) ಗೆ ತಿದ್ದುಪಡಿ ತಂದಿತು.</a> ಹೊಸ ನಿಯಮಗಳ ಪ್ರಕಾರ, ಚುನಾವಣೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಸಾರ್ವಜನಿಕರಿಗೆ ಪರಿಶೀಲನೆಗೆ ಲಭ್ಯವಿರುವುದಿಲ್ಲ. ಫೆಬ್ರವರಿಯಲ್ಲಿ, 1961 ರ ಚುನಾವಣಾ ನೀತಿ ನಿಯಮಗಳಿಗೆ ಮಾಡಿದ ಬದಲಾವಣೆಗಳ ವಿರುದ್ಧ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ <a href="https://thewire.in/law/sc-issues-notice-to-union-govt-eci-over-plea-against-change-in-polling-rules">ನೋಟಿಸ್</a> ನೀಡಿತು. ಪಾರದರ್ಶಕತೆಯ ಪರ ಕಾರ್ಯಕರ್ತೆ ಅಂಜಲಿ ಭಾರದ್ವಾಜ್ ಸಲ್ಲಿಸಿದ ಅರ್ಜಿಯಲ್ಲಿ, ತಿದ್ದುಪಡಿಗಳು ಮತದಾರರ ಮಾಹಿತಿಯ ಮೂಲಭೂತ ಹಕ್ಕಿನ ಮೇಲೆ ಅಸಮಂಜಸ ನಿರ್ಬಂಧಗಳನ್ನು ಹೇರುತ್ತವೆ ಎಂದು ಹೇಳಲಾಗಿದೆ. ಈ ವಿಷಯವು ಈಗ ಸುಪ್ರೀಂ ಕೋರ್ಟ್‌ನಲ್ಲಿದೆ.</p>



<p>ಜನವರಿ 2024 ರಲ್ಲಿ, ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಧ್ಯಕ್ಷರು <a href="https://thewire.in/politics/anil-masih-admits-marking-ballots-cji-says-he-must-be-prosecuted/?mid_related_new">ಚುನಾವಣೆಯಲ್ಲಿ</a> ಅಕ್ರಮ ನಡೆಸುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್, ಬಿಜೆಪಿ ಅಭ್ಯರ್ಥಿಯ ಪರವಾಗಿ ವಂಚನೆಯ ಮಾರ್ಗದ ಮೂಲಕ ಬಂದ ಮೇಯರ್ ಚುನಾವಣೆಯ <a href="http://cms.thewire.in/government/murder-of-democracy-supreme-court-chandigarh-narendra-modi-anil-massih">ಫಲಿತಾಂಶಗಳನ್ನು ರದ್ದುಗೊಳಿಸಿತು</a> ಮತ್ತು ಎಎಪಿ-ಕಾಂಗ್ರೆಸ್ ಜಂಟಿ ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ನಗರ ಮೇಯರ್ ಆಗಿ ಮಾನ್ಯವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿತು. ನಂತರ , ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಹಿರಿಯ ಉಪ ಮೇಯರ್ ಮತ್ತು ಉಪ ಮೇಯರ್ ಹುದ್ದೆಗಳಿಗೆ ಚುನಾವಣೆ ಗೆಲ್ಲಲು ಆಮ್ ಆದ್ಮಿ ಪಕ್ಷದ (ಎಎಪಿ) ಮೂವರು ಕೌನ್ಸಿಲರ್‌ಗಳು <a href="https://thewire.in/politics/chandigarh-mayoral-polls-after-sc-slam-aap-defections-allow-bjp-to-clinch-two-top-posts">ಸಹಾಯ ಮಾಡಿದರು.</a></p>
]]></content:encoded>
					
		
		
			</item>
		<item>
		<title>&#8216;ಧರ್ಮದಿಂದಲ್ಲ, ಪ್ರತಿಭೆಯಿಂದ ಒಬ್ಬನನ್ನು ಗುರುತಿಸುವ ಭಾರತದ ಪರಿಕಲ್ಪನೆಯಲ್ಲಿ ನಾನು ನಂಬಿಕೆ ಇಡುತ್ತೇನೆ&#8217;: ಮುಸ್ಲಿಂ ಆಯುಕ್ತ ಎಂಬ ಟೀಕೆಗೆ ಎಸ್‌ವೈ ಖುರೈಷಿ ಪ್ರತಿಕ್ರಿಯೆ</title>
		<link>https://peepalmedia.com/i-believe-in-indias-concept-of-identifying-a-person-by-talent-not-religion-sy-qureshi-responds-to-criticism-of-being-a-muslim-commissioner/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 21 Apr 2025 11:38:44 +0000</pubDate>
				<category><![CDATA[ಕೋಮುವಾದ]]></category>
		<category><![CDATA[Election Commission of India]]></category>
		<category><![CDATA[Muslim Commissioner]]></category>
		<category><![CDATA[Nishikant Dubey]]></category>
		<category><![CDATA[S.Y. Quraishi]]></category>
		<category><![CDATA[Wakf Act]]></category>
		<guid isPermaLink="false">https://peepalmedia.com/?p=57594</guid>

					<description><![CDATA[ದ್ವೇಷಪೂರಿತ ರಾಜಕೀಯವನ್ನು ಉತ್ತೇಜಿಸಲು ಕೆಲವರು ಧಾರ್ಮಿಕ ಗುರುತುಗಳನ್ನು ಬಳಸುತ್ತಾರೆ, ಆದರೆ &#8220;ಒಬ್ಬ ವ್ಯಕ್ತಿಯನ್ನು ಅವರ ಪ್ರತಿಭೆ ಮತ್ತು ಅವರು ನೀಡಿದ ಕೊಡುಗೆಗಳಿಂದ ನೋಡಬೇಕೇ ಹೊರತು ಅವರ ಧಾರ್ಮಿಕ ಗುರುತುಗಳಿಂದಲ್ಲ&#8221; ಎಂಬ ಭಾರತದ ಪರಿಕಲ್ಪನೆಯಲ್ಲಿ ತಾವು ನಂಬಿಕೆ ಇಟ್ಟಿರುವುದಾಗಿ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೈಷಿ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷದ ಸಂಸದ ನಿಶಿಕಾಂತ್ ದುಬೆ ಮಾಜಿ ಸಿಇಸಿಯನ್ನು &#8220;ಮುಸ್ಲಿಂ ಆಯುಕ್ತ&#8221; ಎಂದು ಕರೆದ ಒಂದು ದಿನದ ನಂತರ, ಖುರೈಷಿಯವರ ಈ ಹೇಳಿಕೆ ನೀಡಿದ್ದಾರೆ. 1971 [&#8230;]]]></description>
										<content:encoded><![CDATA[
<p>ದ್ವೇಷಪೂರಿತ ರಾಜಕೀಯವನ್ನು ಉತ್ತೇಜಿಸಲು ಕೆಲವರು ಧಾರ್ಮಿಕ ಗುರುತುಗಳನ್ನು ಬಳಸುತ್ತಾರೆ, ಆದರೆ &#8220;ಒಬ್ಬ ವ್ಯಕ್ತಿಯನ್ನು ಅವರ ಪ್ರತಿಭೆ ಮತ್ತು ಅವರು ನೀಡಿದ ಕೊಡುಗೆಗಳಿಂದ ನೋಡಬೇಕೇ ಹೊರತು ಅವರ ಧಾರ್ಮಿಕ ಗುರುತುಗಳಿಂದಲ್ಲ&#8221; ಎಂಬ ಭಾರತದ ಪರಿಕಲ್ಪನೆಯಲ್ಲಿ ತಾವು ನಂಬಿಕೆ ಇಟ್ಟಿರುವುದಾಗಿ ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌ವೈ ಖುರೈಷಿ ಹೇಳಿದ್ದಾರೆ.</p>



<p>ಭಾರತೀಯ ಜನತಾ ಪಕ್ಷದ ಸಂಸದ ನಿಶಿಕಾಂತ್ ದುಬೆ ಮಾಜಿ ಸಿಇಸಿಯನ್ನು &#8220;ಮುಸ್ಲಿಂ ಆಯುಕ್ತ&#8221; ಎಂದು ಕರೆದ ಒಂದು ದಿನದ ನಂತರ, ಖುರೈಷಿಯವರ ಈ ಹೇಳಿಕೆ ನೀಡಿದ್ದಾರೆ.</p>



<p>1971 ರ ಬ್ಯಾಚ್‌ನ ಭಾರತೀಯ ಆಡಳಿತ ಸೇವಾ ಅಧಿಕಾರಿಯಾಗಿರುವ ಖುರೈಷಿ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.</p>



<p>&#8220;ನಾನು ಚುನಾವಣಾ ಆಯುಕ್ತರ ಸಾಂವಿಧಾನಿಕ ಹುದ್ದೆಯಲ್ಲಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಿದ್ದೇನೆ ಮತ್ತು ಐಎಎಸ್‌ನಲ್ಲಿ ದೀರ್ಘ ಹಾಗೂ ತೃಪ್ತಿಕರ ವೃತ್ತಿಜೀವನವನ್ನು ಹೊಂದಿದ್ದೇನೆ. ಒಬ್ಬ ವ್ಯಕ್ತಿಯನ್ನು ಅವರ ಪ್ರತಿಭೆ ಮತ್ತು ಕೊಡುಗೆಗಳಿಂದ ವ್ಯಾಖ್ಯಾನಿಸಲಾಗುತ್ತದೆಯೇ ಹೊರತು ಅವರ ಧಾರ್ಮಿಕ ಗುರುತುಗಳಿಂದಲ್ಲ ಎಂಬ ಭಾರತದ ಪರಿಕಲ್ಪನೆಯನ್ನು ನಾನು ನಂಬುತ್ತೇನೆ&#8221; ಎಂದು ಖುರೈಷಿ ತಿಳಿಸಿದ್ದಾರೆ.</p>



<p>&#8220;ಆದರೆ ಕೆಲವರಿಗೆ, ಧಾರ್ಮಿಕ ಗುರುತುಗಳು ತಮ್ಮ ದ್ವೇಷಪೂರಿತ ರಾಜಕೀಯವನ್ನು ಮಾಡಲು ಪ್ರಮುಖ ಅಂಶವಾಗಿ ಬಳಸುತ್ತಾರೆ. ಭಾರತವು ತನ್ನ ಸಾಂವಿಧಾನಿಕ ಸಂಸ್ಥೆಗಳು ಮತ್ತು ತತ್ವಗಳಿಗಾಗಿ ಹೋರಾಡಿದೆ, ಹೋರಾಡುತ್ತಲೇ ಇದೆ ಮತ್ತು ಯಾವಾಗಲೂ ಅದಕ್ಕಾಗಿ ಸೆಟೆದು ನಿಲ್ಲುತ್ತದೆ&#8221; ಎಂದು ಅವರು ಹೇಳಿದರು.</p>



<p>ಖುರೈಷಿ ಆಡಳಿತ ಮತ್ತು ಸರ್ಕಾರಿ ನೀತಿಗಳ ತೀಕ್ಷ್ಣ ವಿಮರ್ಶಕರಾಗಿದ್ದು,ಇವು ನಡೆಯುವ ವಿಧಾನವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಕರಣ್ ಥಾಪರ್ ಅವರೊಂದಿಗಿನ ದಿ ವೈರ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ , <em>ಸುಪ್ರೀಂ </em><a href="https://thewire.in/video/selection-panel-for-ec-a-joke-on-the-nation-supreme-courts-handling-very-irresponsible-s-y-quraishi">ಕೋರ್ಟ್‌ನ</a> &#8220;ಪ್ರತಿಷ್ಠೆಗೆ ಹೇಗೆ ಹೊಡೆತ ಬಿದ್ದಿದೆ&#8221; ಮತ್ತು ಅದು &#8220;ತನ್ನ ಮೇಲೆ ಬೆದರಿಸುವಿಕೆ ಒಡ್ಡಲು ಅವಕಾಶ ಮಾಡಿಕೊಟ್ಟಿದೆ &#8211; allowed itself to be bullied and run over,&#8221; ಎಂಬುದರ ಕುರಿತು ಅವರು ತೀಕ್ಷ್ಣವಾದ ಕಾಮೆಂಟ್‌ಗಳನ್ನು ಮಾಡಿದ್ದರು.</p>



<p>ಏಪ್ರಿಲ್ 17 ರಂದು, ಖುರೈಷಿ ಅವರು X ನಲ್ಲಿ ಬಿಜೆಪಿ ಸರ್ಕಾರದ ಬಹು ಟೀಕೆಗೊಳಗಾದ ವಕ್ಫ್ (ತಿದ್ದುಪಡಿ) ಕಾಯ್ದೆಯ ಕುರಿತು ಪೋಸ್ಟ್ ಮಾಡಿದ್ದಾರೆ. ಇದು ವಕ್ಫ್‌ಗಳು ಅಥವಾ ಇಸ್ಲಾಮಿಕ್ ದತ್ತಿ ದತ್ತಿಗಳನ್ನು ನಡೆಸುವ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ಪ್ರಸ್ತಾಪಿಸುತ್ತದೆ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗುತ್ತಿದೆ. &#8220;ವಕ್ಫ್ ಕಾಯ್ದೆ ನಿಸ್ಸಂದೇಹವಾಗಿ ಮುಸ್ಲಿಂ ಭೂಮಿಯನ್ನು ಕಸಿದುಕೊಳ್ಳಲು ಸರ್ಕಾರದ ಒಂದು ದುಷ್ಟ ಯೋಜನೆಯಾಗಿದೆ. ಸುಪ್ರೀಂ ಕೋರ್ಟ್ ಅದನ್ನು ಬಹಿರಂಗವಾಗಿ ಹೇಳುತ್ತದೆ ಎಂದು ನನಗೆ ಖಚಿತವಾಗಿದೆ. ದುರುದ್ದೇಶಪೂರಿತ ಪ್ರಚಾರ ಯಂತ್ರದಿಂದ ತಪ್ಪು ಮಾಹಿತಿಯನ್ನು ಹರಡುವ ತನ್ನ ಕೆಲಸವನ್ನು ಚೆನ್ನಾಗಿ ಮಾಡಿದೆ&#8221; ಎಂದು ಖುರೈಶಿ ಬರೆದಿದ್ದಾರೆ.</p>



<p>ಎರಡು ದಿನಗಳ ಹಿಂದೆ ಖುರೈಷಿ ಮಾಡಿದ್ದ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಏಪ್ರಿಲ್ 20 ರಂದು <a href="https://x.com/nishikant_dubey/status/1913794383972888686">ಸಂಸದ ದುಬೆ</a> &#8220;ನೀವು ಚುನಾವಣಾ ಆಯುಕ್ತರಾಗಿರಲಿಲ್ಲ, ನೀವು ಮುಸ್ಲಿಂ ಆಯುಕ್ತರಾಗಿದ್ದಿರಿ&#8221; ಎಂಬ ಸಾಲಿನ ಮೂಲಕ ತಮ್ಮ ಟೀಕೆಯನ್ನು ಪ್ರಾರಂಭಿಸಿದರು.</p>



<p>ಗೊಡ್ಡಾದಿಂದ ನಾಲ್ಕು ಬಾರಿ ಶಾಸಕರಾಗಿದ್ದ ದುಬೆ ಅವರು: “ನಿಮ್ಮ ಅವಧಿಯಲ್ಲಿ ಜಾರ್ಖಂಡ್‌ನ ಸಂತಲ್‌ಪರ್ಗಣದಲ್ಲಿ ಗರಿಷ್ಠ ಸಂಖ್ಯೆಯ ಬಾಂಗ್ಲಾದೇಶಿ ನುಸುಳುಕೋರರನ್ನು ಮತದಾರರನ್ನಾಗಿ ಮಾಡಲಾಯಿತು. ಪ್ರವಾದಿ ಮುಹಮ್ಮದ್ ಅವರ ಇಸ್ಲಾಂ 712 ರಲ್ಲಿ ಭಾರತಕ್ಕೆ ಬಂದಿತು. ಈ ಭೂಮಿ (ವಕ್ಫ್), ಅದಕ್ಕೂ ಮೊದಲು, ಹಿಂದೂಗಳು ಅಥವಾ ಬುಡಕಟ್ಟು ಜನಾಂಗದವರು, ಜೈನರು ಅಥವಾ ಆ ನಂಬಿಕೆಗೆ ಸಂಬಂಧಿಸಿದ ಬೌದ್ಧರಿಗೆ ಸೇರಿತ್ತು. ನನ್ನ ಗ್ರಾಮವಾದ ವಿಕ್ರಮಶಿಲಾವನ್ನು 1189 ರಲ್ಲಿ ಭಕ್ತಿಯಾರ್ ಖಿಲ್ಜಿ ಸುಟ್ಟುಹಾಕಿದ, ವಿಕ್ರಮಶಿಲಾ ವಿಶ್ವವಿದ್ಯಾಲಯವು ಅತಿಶ್ ದೀಪಂಕರ್ ರೂಪದಲ್ಲಿ ಜಗತ್ತಿಗೆ ಮೊದಲ ಉಪಕುಲಪತಿಯನ್ನು ನೀಡಿತು. ಈ ದೇಶವನ್ನು ಒಂದುಗೂಡಿಸಿ, ಇತಿಹಾಸವನ್ನು ಓದಿ. ಪಾಕಿಸ್ತಾನವನ್ನು ವಿಭಜಿಸುವ ಮೂಲಕ ರಚಿಸಲಾಗಿದೆ. ಈಗ ಯಾವುದೇ ವಿಭಜನೆ ನಡೆಯುವುದಿಲ್ಲ,” ಎಂದು ಹೇಳಿದ್ದಾರೆ.</p>



<p>ದುಬೆ ಯಾವ ಐತಿಹಾಸಿಕ ಮೂಲಗಳಿಂದ ತಮ್ಮ ಸತ್ಯಗಳನ್ನು ಕಂಡುಕೊಂಡರು ಎಂಬುದು ಸ್ಪಷ್ಟವಾಗಿಲ್ಲ. ಅವರ ಹೇಳಿಕೆಗಳನ್ನು ವಿರೋಧ ಪಕ್ಷಗಳು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಟೀಕಿಸಿವೆ.</p>



<p>ಸುಪ್ರೀಂ ಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಮೇಲೆ ಕಟುವಾದ ವಾಗ್ದಾಳಿ ನಡೆಸಿ, ಭಾರತದಲ್ಲಿ &#8220;ಧಾರ್ಮಿಕ ಯುದ್ಧಗಳಿಗೆ&#8221; ಅವರನ್ನೇ ದೂಷಿಸಿದ ಒಂದು ದಿನದ ನಂತರ ದುಬೆ ಅವರ ಧರ್ಮಕ್ಕೆ ಅಪಮಾನ ಮಾಡುವ ಹೇಳಿಕೆ ನಡೆದಿದೆ. ನಂತರ ಬಿಜೆಪಿ ವಿವಾದಾತ್ಮಕ ಹೇಳಿಕೆಗಳಿಂದ ದೂರವಿರಬೇಕಾಯಿತು. ಖುರೈಷಿ ಅವರ ಕುರಿತಾದ ದುಬೆ ಅವರ ಹೇಳಿಕೆಗಳ ಬಗ್ಗೆ ಬಿಜೆಪಿ ಮೌನವಾಗಿದೆ.</p>



<p>ದೆಹಲಿ ಆಡಳಿತ ಅಧಿಕಾರಿಗಳ ಶೈಕ್ಷಣಿಕ ವೇದಿಕೆಯ ಗೌರವ ಅಧ್ಯಕ್ಷರಾಗಿರುವ ಕೆ. ಮಹೇಶ್ ಕೂಡ ಖುರೈಷಿ ಅವರನ್ನು ಬೆಂಬಲಿಸಿದರು.</p>



<p>&#8220;ಅವರು ಈ ಮಹತ್ತರವಾದ ಹುದ್ದೆಗಳನ್ನು ಧೈರ್ಯದಿಂದ ಮತ್ತು ವಿಶಿಷ್ಟತೆಯಿಂದ ನಿರ್ವಹಿಸಿದರು ಮತ್ತು ಹಲವಾರು ಸುಧಾರಣೆಗಳನ್ನು ಪರಿಚಯಿಸುವ ಮೂಲಕ ಚುನಾವಣಾ ಆಯೋಗದ ಸಂಸ್ಥೆಯನ್ನು ಬಹಳವಾಗಿ ಶ್ರೀಮಂತಗೊಳಿಸಿದರು. ಉದಾಹರಣೆಗೆ, ಅವರು ಮತದಾರರ ಶಿಕ್ಷಣ ವಿಭಾಗ, ಖರ್ಚು ನಿಯಂತ್ರಣ ವಿಭಾಗವನ್ನು ಸ್ಥಾಪಿಸಿದರು ಮತ್ತು ಅವರು ಇಂಡಿಯಾ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಅಂಡ್ ಎಲೆಕ್ಷನ್ ಮ್ಯಾನೇಜ್ಮೆಂಟ್ ಅನ್ನು ಸಹ ಸ್ಥಾಪಿಸಿದರು&#8221; ಎಂದು ಮಹೇಶ್ ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಮತದಾನದ ವೀಡಿಯೊ ಮಾಡಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ</title>
		<link>https://peepalmedia.com/supreme-court-directs-election-commission-to-make-voting-video/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 31 Jan 2025 11:36:55 +0000</pubDate>
				<category><![CDATA[ದೇಶ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[election]]></category>
		<category><![CDATA[Election Commission of India]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Supreme Court]]></category>
		<guid isPermaLink="false">https://peepalmedia.com/?p=53188</guid>

					<description><![CDATA[ಪ್ರತಿ ಮತಗಟ್ಟೆಗೆ ಮತದಾರರ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರವನ್ನು ಮಾಡಿರುವ ಚುನಾವಣಾ ಆಯೋಗಕ್ಕೆ ಸವಾಲುಗಳು ಎದುರಾಗಿರುವುದರ ಜೊತೆ ಜೊತೆಯಲ್ಲಿಯೇ, ಮತದಾನದ ವೀಡಿಯೊ ರೆಕಾರ್ಡಿಂಗ್‌ಗಳನ್ನು ಸಂರಕ್ಷಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ ಎಂದು ಲೈವ್ ಲಾ ವರದಿ ಮಾಡಿದೆ . ಪ್ರತಿ ಮತಗಟ್ಟೆಗೆ ಗರಿಷ್ಠ ಸಂಖ್ಯೆಯ ಮತದಾರರನ್ನು 1,200 ರಿಂದ 1,500 ಕ್ಕೆ ಹೆಚ್ಚಿಸುವ ಚುನಾವಣಾ ಆಯೋಗದ ಆಗಸ್ಟ್‌ನ ನಿರ್ಧಾರವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠವು ಈ ನಿರ್ದೇಶನ [&#8230;]]]></description>
										<content:encoded><![CDATA[
<p>ಪ್ರತಿ ಮತಗಟ್ಟೆಗೆ ಮತದಾರರ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರವನ್ನು ಮಾಡಿರುವ ಚುನಾವಣಾ ಆಯೋಗಕ್ಕೆ ಸವಾಲುಗಳು ಎದುರಾಗಿರುವುದರ ಜೊತೆ ಜೊತೆಯಲ್ಲಿಯೇ, ಮತದಾನದ ವೀಡಿಯೊ ರೆಕಾರ್ಡಿಂಗ್‌ಗಳನ್ನು ಸಂರಕ್ಷಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ ಎಂದು <a href="https://www.livelaw.in/top-stories/supreme-court-directs-election-commission-to-preserve-cctv-recordings-of-pollings-in-plea-challenging-increase-of-voters-per-booth-282563">ಲೈವ್ ಲಾ<em> ವರದಿ</em></a> ಮಾಡಿದೆ <em>.</em></p>



<p>ಪ್ರತಿ ಮತಗಟ್ಟೆಗೆ ಗರಿಷ್ಠ ಸಂಖ್ಯೆಯ ಮತದಾರರನ್ನು 1,200 ರಿಂದ 1,500 ಕ್ಕೆ ಹೆಚ್ಚಿಸುವ ಚುನಾವಣಾ ಆಯೋಗದ ಆಗಸ್ಟ್‌ನ ನಿರ್ಧಾರವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರ ಪೀಠವು ಈ ನಿರ್ದೇಶನ ನೀಡಿದೆ .</p>



<p>ನ್ಯಾಯಾಲಯವು ತನ್ನ ಉತ್ತರವನ್ನು ಸಲ್ಲಿಸಲು ಚುನಾವಣಾ ಆಯೋಗಕ್ಕೆ ಹೆಚ್ಚುವರಿ ಸಮಯವನ್ನು ನೀಡಿತು ಮತ್ತು ವಿಚಾರ ಬಾಕಿ ಇರುವಾಗ ಮತದಾನದ ವೀಡಿಯೊ ರೆಕಾರ್ಡಿಂಗ್ ಅನ್ನು ಸಂರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಿರ್ದೇಶಿಸಿತು.</p>



<p>ಹಿಂದಿನ ವಿಚಾರಣೆಯಲ್ಲಿ, ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಸಿಂಘ್ವಿ, ಈ ಕ್ರಮವು ಮತದಾರರಿಗೆ ಸವಾಲುಗಳನ್ನು ಸೃಷ್ಟಿಸುತ್ತದೆ ಮತ್ತು ಮತದಾರರನ್ನು ಅಮಾನ್ಯ ಮಾಡುವ ನಡೆಯಾಗಿದೆ ಎಂದು ವಾದಿಸಿದ್ದರು.</p>



<p>ಚುನಾವಣಾ ಆಯೋಗದ ಈನಿರ್ಧಾರವು ಮತದಾನ ಪ್ರಕ್ರಿಯೆಯಿಂದ ಅವಕಾಶ ವಂಚಿತ ಗುಂಪುಗಳನ್ನು ಹೊರಗಿಡಲು ಕಾರಣವಾಗಬಹುದು, ಏಕೆಂದರೆ ಅವರು ತಮ್ಮ ದೈನಂದಿನ ವೇಳಾಪಟ್ಟಿಯಲ್ಲಿ ತಮ್ಮ ಮತದಾನವನ್ನು ಚಲಾಯಿಸಲು ಸಮಯ ಮಾಡಿಕೊಳ್ಳಲು ಸಾಧ್ಯವಾಗದಿರಬಹುದು ಎಂದು ಸಿಂಘ್ವಿ ವಾದಿಸಿದರು.</p>



<p>ಆಯೋಗದ ನಿರ್ಧಾರವು ಡೇಟಾದಿಂದ ಬೆಂಬಲಿತವಾಗಿಲ್ಲ ಎಂದು ಅರ್ಜಿದಾರರು ವಾದಿಸಿದರು. 2011 ರಿಂದ ಯಾವುದೇ ಜನಗಣತಿ ನಡೆದಿಲ್ಲ ಮತ್ತು ಆದ್ದರಿಂದ, ಸಮಿತಿಯ ನಿರ್ಧಾರವಕ್ಕೆ ಪೂರಕವಾದ ಯಾವುದೇ ತಾಜಾ ಡೇಟಾ ಇಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.</p>



<p>&#8220;ಈ ಮಿತಿಯನ್ನು [ಪ್ರತಿ ಮತದಾನ ಕೇಂದ್ರಕ್ಕೆ ಮತದಾರರು] ಹೆಚ್ಚಿಸುವ ಮೂಲಕ, [ಚುನಾವಣಾ ಆಯೋಗ] ಮತದಾನ ಕೇಂದ್ರಗಳ <a href="https://www.livelaw.in/top-stories/supreme-court-seeks-election-commissions-explanation-on-decision-to-increase-voters-per-polling-station-from-1200-to-1500-276939" target="_blank" rel="noreferrer noopener">ಕಾರ್ಯಾಚರಣೆಯ</a> ದಕ್ಷತೆಯಲ್ಲಿ ರಾಜಿ ಮಾಡಿಕೊಂಡಿದೆ, ಇದು ದೀರ್ಘಾವಧಿಯ ಸಮಯ, ಜನಸಂದಣಿ ಮತ್ತು ಮತದಾರರ ಆಯಾಸಕ್ಕೆ ಕಾರಣವಾಗಬಹುದು&#8221; ಎಂದು ಅರ್ಜಿದಾರರ ವಾದವನ್ನು ಡಿಸೆಂಬರ್‌ನಲ್ಲಿ <em>ಲೈವ್ ಲಾ</em> ಉಲ್ಲೇಖಿಸಿತ್ತು.</p>



<p>ಪ್ರತಿ ಮತದಾರರು ಮತ ಚಲಾಯಿಸಲು 60 ಸೆಕೆಂಡುಗಳಿಂದ 90 ಸೆಕೆಂಡುಗಳವರೆಗೆ ತೆಗೆದುಕೊಳ್ಳುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ, ಅಂದರೆ 11 ಗಂಟೆಗಳ ಚುನಾವಣಾ ಅವಧಿಯಲ್ಲಿ ಕೇವಲ 495 ರಿಂದ 660 ಜನರು ಮಾತ್ರ ಮತ ಚಲಾಯಿಸಬಹುದು.</p>



<p>ಹೆಚ್ಚುತ್ತಿರುವ ಮತದಾರರಿಗೆ ಅನುಗುಣವಾಗಿ ಮತಗಟ್ಟೆಗಳ ಸಂಖ್ಯೆಯಲ್ಲಿ ಪ್ರಮಾಣಾನುಗುಣ ವಿಸ್ತರಣೆಯಾಗಬೇಕು ಎಂದು ಅರ್ಜಿದಾರರು ಹೇಳಿದ್ದಾರೆ.</p>



<p>ಜನವರಿ 15 ರಂದು, 1961 ರ ಚುನಾವಣಾ ನೀತಿ ನಿಯಮಗಳಿಗೆ <u>ಇತ್ತೀಚಿನ ತಿದ್ದುಪಡಿಯನ್ನು ಪ್ರಶ್ನಿಸಿ</u> ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರವನ್ನು ಕೇಳಿತ್ತು.</p>



<p></p>
]]></content:encoded>
					
		
		
			</item>
		<item>
		<title>1 ಮತ್ತು 2ನೇ ಹಂತದ ಮತದಾನದ ಅಂತಿಮ ಡೇಟಾ ಬಿಡುಗಡೆ ಮಾಡದ ಚುನಾವಣಾ ಆಯೋಗ</title>
		<link>https://peepalmedia.com/final-data-o-phases-1-and-2-voter-turnout-not-released-by-eci/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 30 Apr 2024 08:36:23 +0000</pubDate>
				<category><![CDATA[ರಾಜಕೀಯ]]></category>
		<category><![CDATA[election]]></category>
		<category><![CDATA[Election 2024]]></category>
		<category><![CDATA[Election Commission of India]]></category>
		<category><![CDATA[voting]]></category>
		<guid isPermaLink="false">https://peepalmedia.com/?p=38970</guid>

					<description><![CDATA[ನವದೆಹಲಿ: 2024 ರ ಲೋಕಸಭಾ ಚುನಾವಣೆಯ ಮೊದಲ ಹಂತವು ಏಪ್ರಿಲ್ 19 ರಂದು ಮತ್ತು ಎರಡನೇ ಹಂತವು ಏಪ್ರಿಲ್ 26 ರಂದು ನಡೆಯಿತು, ಆದರೆ ಭಾರತೀಯ ಚುನಾವಣಾ ಆಯೋಗವು ಎರಡೂ ಹಂತದ ಮತದಾನದ ಅಂತಿಮ ಅಂಕಿಅಂಶಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಪ್ರತಿ ಮತದಾನದ ದಿನ ಸುಮಾರು 7 ಗಂಟೆಗೆ ಆಯೋಗ ಬಿಡುಗಡೆ ಮಾಡಿದ &#8220;approximate trend&#8221; ಮಾತ್ರ ಲಭ್ಯವಿದೆ. ಏಪ್ರಿಲ್ 19 ರ ಈ ಅಂದಾಜಿನ ಪ್ರಕಾರ 60% ಮತ್ತು ಏಪ್ರಿಲ್ 26 ಕ್ಕೆ 60.96% ಆಗಿತ್ತು. [&#8230;]]]></description>
										<content:encoded><![CDATA[
<p><strong>ನವದೆಹಲಿ:</strong> 2024 ರ ಲೋಕಸಭಾ ಚುನಾವಣೆಯ ಮೊದಲ ಹಂತವು ಏಪ್ರಿಲ್ 19 ರಂದು ಮತ್ತು ಎರಡನೇ ಹಂತವು ಏಪ್ರಿಲ್ 26 ರಂದು ನಡೆಯಿತು, ಆದರೆ ಭಾರತೀಯ ಚುನಾವಣಾ ಆಯೋಗವು ಎರಡೂ ಹಂತದ ಮತದಾನದ ಅಂತಿಮ ಅಂಕಿಅಂಶಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಪ್ರತಿ ಮತದಾನದ ದಿನ ಸುಮಾರು 7 ಗಂಟೆಗೆ ಆಯೋಗ ಬಿಡುಗಡೆ ಮಾಡಿದ &#8220;approximate trend&#8221; ಮಾತ್ರ ಲಭ್ಯವಿದೆ.</p>



<p>ಏಪ್ರಿಲ್ 19 ರ ಈ ಅಂದಾಜಿನ ಪ್ರಕಾರ 60% ಮತ್ತು ಏಪ್ರಿಲ್ 26 ಕ್ಕೆ 60.96% ಆಗಿತ್ತು.</p>



<p>ಮೊದಲ ಹಂತದಲ್ಲಿ 66.14% ಮತ್ತು ಎರಡನೇ ಹಂತದಲ್ಲಿ 66.7% ರಷ್ಟು ಅಂತಿಮ ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಉನ್ನತ ಅಧಿಕಾರಿಯೊಬ್ಬರು <a href="https://www.thehindubusinessline.com/data-stories/ec-website-fails-to-disclose-exact-poll-percentage-for-two-phases/article68121829.ece" data-type="link" data-id="https://www.thehindubusinessline.com/data-stories/ec-website-fails-to-disclose-exact-poll-percentage-for-two-phases/article68121829.ece">ಬಿಸಿನೆಸ್‌ಲೈನ್‌ಗೆ</a>  ತಿಳಿಸಿದ್ದಾರೆ. &#8220;ನಾವು ಸಂಗ್ರಹಿಸಿದ ತಕ್ಷಣ ನಾವು ಅಂತಿಮ ಅಂಕಿಅಂಶಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಹಾಕುತ್ತೇವೆ&#8221; ಎಂದು ಅವರು ತಿಳಿಸಿದ್ದಾರೆ. ಆದರೆ ಈ ಅಂಕಿಅಂಶಗಳು ಇನ್ನೂ ವೆಬ್‌ಸೈಟ್‌ನಲ್ಲಿಲ್ಲ.</p>



<p>ಬ್ಯುಸಿನೆಸ್‌ಲೈನ್ ವರದಿ ಮಾಡಿದಂತೆ, ಇದು ವೆಬ್‌ಸೈಟ್‌ನಿಂದ ಕಾಣೆಯಾಗಿರುವ ಮತದಾರರ ಮತದಾನದ ಡೇಟಾ ಅಲ್ಲ. ಪ್ರತಿ ಸಂಸದೀಯ ಕ್ಷೇತ್ರದಲ್ಲಿ ನೋಂದಾಯಿತ ಮತದಾರರ ಸಂಖ್ಯೆಯೂ ಕಾಣೆಯಾಗಿದೆ. “ಬಿಸಿನೆಸ್‌ಲೈನ್‌ ಪ್ರತಿ ಕ್ಷೇತ್ರದ ಮತದಾರರ ಸಂಖ್ಯೆಯನ್ನು ಕಂಡುಹಿಡಿಯಲು ಪ್ರಯತ್ನಿಸಿದಾಗ, ಸಿಕ್ಕಿದ್ದು ಉತ್ತರ ಪ್ರದೇಶದಂತಹ ಕೆಲವು ಆಯ್ದ ರಾಜ್ಯಗಳಲ್ಲಿನ ಬೂತ್‌ವಾರು ಚುನಾವಣಾ ಪಟ್ಟಿಗಳು. ಒಡಿಶಾ, ಬಿಹಾರ ಅಥವಾ ದೆಹಲಿಯ ಡೇಟಾ ಲಭ್ಯವಿಲ್ಲ. ಬಿಹಾರ ಅಥವಾ ಒಡಿಶಾದ ಮತದಾರರ ಸಂಖ್ಯೆಯನ್ನು ನೋಡೆದರೆ, ಮಾಹಿತಿಯನ್ನು ಒದಗಿಸಬೇಕಾದ ಕೊನೆಯ ಪುಟದಲ್ಲಿ ದೋಷಗಳಿವೆ.”</p>



<p>ಇದುವರೆಗಿನ ಅಂದಾಜು ಮತದಾನದ ಪ್ರಮಾಣವು 2019 ರ ಲೋಕಸಭೆ ಚುನಾವಣೆಯಲ್ಲಿ ಕಂಡುಬಂದಕ್ಕಿಂತ ಕಡಿಮೆಯಾಗಿದೆ.</p>



<p>&#8220;ಈ ಕುಸಿತವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರಂತಹ ಮೋದಿ ಸರ್ಕಾರದ ಟೀಕಾಕಾರರು ಈ ಕುಸಿತವನ್ನು ಕೇಂದ್ರದ ಕಡೆಗೆ ಜನರು ತೋರಿರುವ ಅಸಮಧಾನವಾಗಿ ನೋಡುತ್ತಾರೆ.ಎನ್‌ಡಿಎಯೇತರ ಪಕ್ಷಗಳಿಗಿಂತ ಬಿಜೆಪಿ ನೇತೃತ್ವದ ಎನ್‌ಡಿಎ ಹೊಂದಿರುವ ಸ್ಥಾನಗಳಲ್ಲಿ ಮತದಾನ ಪ್ರಮಾಣದಲ್ಲಿ ಕುಸಿತವು ಹೆಚ್ಚಾಗಿದೆ ಎಂದು ಪ್ರತಿಪಾದಿಸುತ್ತಾರೆ. ಆದರೆ ಬಿಜೆಪಿಯ ಬೆಂಬಲಿಗರು ಇದಕ್ಕೆ ವಾತಾವರಣದಲ್ಲಿ ಆಗಿರುವ ತೀವ್ರತರವಾದ ಬಿಸಿಲು ಕಾರಣ ಎಂದು ನಂಬುತ್ತಾರೆ,” ಎಂದು <a href="https://thewire.in/politics/dwindling-voter-turnout-shows-discontent-and-political-apathy-in-2nd-phase-of-lok-sabha-polls" data-type="link" data-id="https://thewire.in/politics/dwindling-voter-turnout-shows-discontent-and-political-apathy-in-2nd-phase-of-lok-sabha-polls">ಅಜೋಯ್ ಆಶೀರ್ವಾದ್ ಮಹಾಪ್ರಶಾಸ್ತಾ </a>ಬರೆದಿದ್ದಾರೆ .</p>



<p>“&#8230;ಲೋಕಸಭಾ ಚುನಾವಣೆಯನ್ನು ವ್ಯಾಪಾರ-ವಹಿವಾಟು, ವಾಡಿಕೆಯ ವ್ಯವಹಾರದಂತೆ ನಡೆಸಲಾಗುತ್ತಿದೆ. ಸ್ವತಃ ಪ್ರಧಾನಿ ನೇತೃತ್ವದ ಬಿಜೆಪಿ ನಾಯಕರು ಅಲ್ಪಸಂಖ್ಯಾತರ ವಿರುದ್ಧ ದ್ವೇಷಪೂರಿತ ಟೀಕೆಗಳನ್ನು ಮಾಡುವುದರಲ್ಲಿ ನಿರ್ಭಯದಿಂದ ತೊಡಗಿಸಿಕೊಂಡಿದ್ದಾರೆ, ಚುನಾವಣಾ ಆಯೋಗದಿಂದಲೂ ಯಾವುದೇ ಹಸ್ತಕ್ಷೇಪವಾಗಿಲ್ಲ. ಕೆಲವು ಪ್ರಾದೇಶಿಕ ನಾಯಕರನ್ನು ಹೊರತುಪಡಿಸಿ ಪ್ರತಿಪಕ್ಷಗಳು ತಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಮತ್ತು ಸಂಪನ್ಮೂಲಗಳನ್ನು ಸಂಗ್ರಹಿಸಲು ಹೆಣಗಾಡುತ್ತಿವೆ, ಮೋದಿ ಆಡಳಿತವು ಮಾಡಿದ ಅತಿರೇಕಗಳಿಗೆ ಸವಾಲೆಸೆಯುವವರು ಇಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ನಿಜವಾದ ಮೋದಿ ದರ್ಶನ!</title>
		<link>https://peepalmedia.com/real-narendra-modi/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 24 Apr 2024 09:46:52 +0000</pubDate>
				<category><![CDATA[ಅಂಕಣ]]></category>
		<category><![CDATA[``Karnataka Digital Economy Mission Big Tech Show-2022&#039;&#039;]]></category>
		<category><![CDATA[Bangalore]]></category>
		<category><![CDATA[Election 2024]]></category>
		<category><![CDATA[Election Commission of India]]></category>
		<category><![CDATA[Fake news]]></category>
		<category><![CDATA[hate speech]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[Rajastan]]></category>
		<guid isPermaLink="false">https://peepalmedia.com/?p=38668</guid>

					<description><![CDATA[ನರೇಂದ್ರ ಮೋದಿಯವರಿಗೆ ಯಾವಾಗಲೂ ನಾಟಕೀಯವಾಗಿ ಬದುಕಲು ಸಾಧ್ಯವಿಲ್ಲ. ಅವರನ್ನು ಆಳದಲ್ಲಿ ಕಾಡುವ, ಭಯಭೀತಗೊಳಿಸುವ ಕೀಳರಿಮೆಯ ಫಲವಾಗಿಯೇ ಅವರು ತಮ್ಮ ಇಡೀ ಜೀವನದ ಬಗ್ಗೆ ಸುಳ್ಳಿನ ಕಥನಗಳನ್ನು ಕಟ್ಟಿದರು. ಆದರೆ ಅವೆಲ್ಲವೂ ಸೋಲುವ ದಿನಗಳು ಹತ್ತಿರ ಬರುತ್ತಿದೆ ಎನ್ನುವಾಗ, ತಾನು ಭಾರತದ ಇತಿಹಾಸದಲ್ಲಿ ಅಪ್ರಸ್ತುತನಾಗುತ್ತೇನೆ ಎಂಬ ಭೀತಿ ಕಾಡುವಾಗ ಅವರೊಳಗಿನ ʼನಿಜವಾದ ನರೇಂದ್ರ ಮೋದಿʼ ಆಗಾಗ ಹೊರಗೆ ಬರುತ್ತದೆ. ಈ ʼಮಿಥ್ಯ ನರೇಂದ್ರʼನ ಒಳಗಿನಿಂದ ʼಸತ್ಯ ನರೇಂದ್ರʼ ಹೊರಗೆ ಬಂದದ್ದನ್ನು ನಾವು ಅವರು ರಾಜಸ್ಥಾನದಲ್ಲಿ ಮಾಡಿದ ಚುನಾವಣಾ ಭಾಷಣದಲ್ಲಿ [&#8230;]]]></description>
										<content:encoded><![CDATA[
<p>ನರೇಂದ್ರ ಮೋದಿಯವರಿಗೆ ಯಾವಾಗಲೂ ನಾಟಕೀಯವಾಗಿ ಬದುಕಲು ಸಾಧ್ಯವಿಲ್ಲ. ಅವರನ್ನು ಆಳದಲ್ಲಿ ಕಾಡುವ, ಭಯಭೀತಗೊಳಿಸುವ ಕೀಳರಿಮೆಯ ಫಲವಾಗಿಯೇ ಅವರು ತಮ್ಮ ಇಡೀ ಜೀವನದ ಬಗ್ಗೆ ಸುಳ್ಳಿನ ಕಥನಗಳನ್ನು ಕಟ್ಟಿದರು. ಆದರೆ ಅವೆಲ್ಲವೂ ಸೋಲುವ ದಿನಗಳು ಹತ್ತಿರ ಬರುತ್ತಿದೆ ಎನ್ನುವಾಗ, ತಾನು ಭಾರತದ ಇತಿಹಾಸದಲ್ಲಿ ಅಪ್ರಸ್ತುತನಾಗುತ್ತೇನೆ ಎಂಬ ಭೀತಿ ಕಾಡುವಾಗ ಅವರೊಳಗಿನ ʼನಿಜವಾದ ನರೇಂದ್ರ ಮೋದಿʼ ಆಗಾಗ ಹೊರಗೆ ಬರುತ್ತದೆ. ಈ ʼಮಿಥ್ಯ ನರೇಂದ್ರʼನ ಒಳಗಿನಿಂದ ʼಸತ್ಯ ನರೇಂದ್ರʼ ಹೊರಗೆ ಬಂದದ್ದನ್ನು ನಾವು ಅವರು ರಾಜಸ್ಥಾನದಲ್ಲಿ ಮಾಡಿದ ಚುನಾವಣಾ ಭಾಷಣದಲ್ಲಿ ನೋಡಬಹುದು.</p>



<p>ಈ ಸತ್ಯ ನರೇಂದ್ರನೇ ಮುಸ್ಲೀಂ ದ್ವೇಷದ, ಕೋಮುವಾದಿ ಮೆದುಳಿನ ನರೇಂದ್ರ ಮೋದಿ. ರಾಜಸ್ಥಾನದ ಚುನಾವಣಾ ಭಾಷಣದಲ್ಲಿ ಬಹಿರಂಗವಾಗಿ ಮುಸ್ಲೀಂ ದ್ವೇಷವನ್ನು ಕಾರಿದರು. ಜಾತ್ಯಾತೀತ ದೇಶವೊಂದರ ಘನವೆತ್ತ ಪ್ರಧಾನಿ ಲಜ್ಜೆಯಿಲ್ಲದೆ ಖುಲ್ಲಂಖುಲ್ಲಾಗಿ ಈ ರೀತಿಯ ಭಾಷಣವನ್ನು ಮಾಡುತ್ತಿದ್ದಾರೆ ಎಂದರೆ, ಮುಂದೆ ಗೆದ್ದು ಬಂದರೆ ತಮ್ಮ ಕೋಮುವಾದಿ ಅಜೆಂಡಾಗಳನ್ನು ಹಿಂದಿಗಿಂತಲೂ ಹೆಚ್ಚು ತೀವ್ರಗತಿಯಲ್ಲಿ ಜಾರಿಗೆ ತರುತ್ತಾರೆ.</p>



<p>ಮುಸಲ್ಮಾನರನ್ನು ʼನುಸುಳುಕೋರರುʼ ಎಂದು ಕರೆದ ನರೇಂದ್ರ ಮೋದಿಯವರು ಯಾವುದೇ ಮುಲಾಜು ಇಲ್ಲದೆ ಹಸಿಹಸಿ ಸುಳ್ಳನ್ನು ತಮ್ಮ ಭಾಷಣದಲ್ಲಿ ಹೇಳಿದರು. ಮಾಜೀ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ಮಾತುಗಳನ್ನು ತಿರುಚಿ ಇತಿಹಾಸದಲ್ಲಿ ತಮ್ಮ ವ್ಯಕ್ತಿತ್ವದ ಮೇಲೆಯೇ ಮತ್ತೊಮ್ಮೆ ಮಸಿಯನ್ನು ಎರಚಿಕೊಂಡರು.</p>



<p>&nbsp;ಡಾ. ಮನಮೋಹನ್ ಸಿಂಗ್ ಅವರು &#8220;ಮೊದಲ ಹಕ್ಕು ಮುಸ್ಲಿಮರದ್ದು ಎಂದು ಹೇಳಿದರು&#8221; ಎಂದು ಮೋದಿಯವರ ಸುಳ್ಳು ಹೇಳಿದಾಗ, ಈ ಸುಳ್ಳಿನ ಸತ್ಯವನ್ನು ಅನೇಕರು ಬಯಲಿಗೆ ಎಳೆದರು.&nbsp;&nbsp;</p>



<p>ಮೋದಿ ಹೇಳಿದ ಸುಳ್ಳು: ಈ ದೇಶದ ಸಂಪತ್ತಿನ ಮೊದಲ ಅಧಿಕಾರ ಮುಸಲ್ಮಾನರದ್ದು. ಇದರ ಅರ್ಥ, ಸಂಪತ್ತನ್ನು ಸಂಗ್ರಹಿಸಿ ಯಾರಿಗೆ ಹಂಚುತ್ತಾರೆ? ಯಾರಿಗೆ ಹೆಚ್ಚು ಮಕ್ಕಳಿದ್ದಾರೋ ಅವರಿಗೆ ಹಂಚುತ್ತಾರೆ.&nbsp; ನುಸುಳುಕೋರರಿಗೆ ಹಂಚುತ್ತಾರೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವು ನುಸುಳುಕೋರರಿಗೆ ಹೋಗಬೇಕೇ…?</p>



<p>ಬಹುಶಃ ಭಾರತದ ಇತಿಹಾಸದಲ್ಲಿ ಪ್ರಧಾನಿ ಹುದ್ದೆಯಲ್ಲಿ ಕುಳಿತಿದ್ದ ಓರ್ವ ವ್ಯಕ್ತಿ ಇಷ್ಟು ಕೀಳಾದ ಹೇಳಿಕೆಯನ್ನು ನೀಡಿರುವುದು ಮೊದಲೇ ಇರಬೇಕು. ಹೆಚ್ಚು ಮಕ್ಕಳು ಮಾಡಿದವರು ಎಂದು ನೇರಾನೇರವಾಗಿ ಮುಸಲ್ಮಾನರನ್ನು ಗುರಿಯಾಗಿಸಿ ದ್ವೇಷ ಕಾರಿದ ಮೋದಿಯವರು ತಾವೂ ಸೇರಿದಂತೆ ತಮ್ಮ ಹೆತ್ತವರಿಗೆ ಆರು ಮಕ್ಕಳು ಎಂಬುದನ್ನು ಮರೆತಂತಿದೆ.</p>



<p>ʼನಿಜ ನರೇಂದ್ರʼನ ಈ ದ್ವೇಷಕಾರಿ ಭಾಷಣದ ಅಸಲಿಯತ್ತಿನ ಬಗ್ಗೆ ದೇಶದಲ್ಲಿ ಚರ್ಚೆ ನಡೆದಿದೆ. ಮನಮೋಹನ್‌ ಸಿಂಗ್‌ ಅವರ ಈ ಭಾಷಣದ ಬಗ್ಗೆ 2006ರಲ್ಲಿಯೇ<a href="https://archivepmo.nic.in/drmanmohansingh/press-details.php?nodeid=516"> ಸ್ಪಷ್ಟನೆ</a> ನೀಡಲಾಗಿತ್ತು.&nbsp;</p>



<figure class="wp-block-image size-large"><img decoding="async" width="1024" height="779" src="https://peepalmedia.com/wp-content/uploads/2024/04/ಕಜಹ-1024x779.jpg" alt="" class="wp-image-38669" srcset="https://peepalmedia.com/wp-content/uploads/2024/04/ಕಜಹ-1024x779.jpg 1024w, https://peepalmedia.com/wp-content/uploads/2024/04/ಕಜಹ-300x228.jpg 300w, https://peepalmedia.com/wp-content/uploads/2024/04/ಕಜಹ-768x584.jpg 768w, https://peepalmedia.com/wp-content/uploads/2024/04/ಕಜಹ-150x114.jpg 150w, https://peepalmedia.com/wp-content/uploads/2024/04/ಕಜಹ-696x530.jpg 696w, https://peepalmedia.com/wp-content/uploads/2024/04/ಕಜಹ-1068x813.jpg 1068w, https://peepalmedia.com/wp-content/uploads/2024/04/ಕಜಹ.jpg 1179w" sizes="(max-width: 1024px) 100vw, 1024px" /></figure>



<p>ಮನಮೋಹನ್‌ ಸಿಂಗ್‌ ಅವರ ಭಾಷಣದ ಪೂರ್ಣ ಪಠ್ಯ ಇಲ್ಲಿದೆ :‌ <a href="https://archivepmo.nic.in/drmanmohansingh/speech-details.php?nodeid=482">2006ರ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ</a></p>



<p>ಇದರಲ್ಲಿ,</p>



<p>&#8220;ನಮ್ಮ ಸಾಮೂಹಿಕ ಆದ್ಯತೆಗಳು ಸ್ಪಷ್ಟವಾಗಿವೆ ಎಂದು ನಾನು ನಂಬುತ್ತೇನೆ: ಕೃಷಿ, ನೀರಾವರಿ ಮತ್ತು ಜಲಸಂಪನ್ಮೂಲ, ಆರೋಗ್ಯ, ಶಿಕ್ಷಣ, ಗ್ರಾಮೀಣ ಮೂಲಸೌಕರ್ಯದಲ್ಲಿ ನಿರ್ಣಾಯಕ ಹೂಡಿಕೆ, ಮತ್ತು ಸಾಮಾನ್ಯ ಮೂಲಸೌಕರ್ಯಗಳ ಅಗತ್ಯ ಸಾರ್ವಜನಿಕ ಹೂಡಿಕೆ ಅಗತ್ಯಗಳು, ಜೊತೆಗೆ SC/ST ಗಳು, ಇತರ ಹಿಂದುಳಿದ ವರ್ಗಗಳ ಉನ್ನತಿಗಾಗಿ ಕಾರ್ಯಕ್ರಮಗಳು. , ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಪಂಗಡಗಳ ಘಟಕ ಯೋಜನೆಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರು ಅಭಿವೃದ್ಧಿಯ ಫಲವನ್ನು ಸಮಾನವಾಗಿ ಹಂಚಿಕೊಳ್ಳಲು ನಾವು ನವೀನ ಯೋಜನೆಗಳನ್ನು ರೂಪಿಸಬೇಕಾಗಿದೆ. ಅವರು ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕನ್ನು ಹೊಂದಿರಬೇಕು.</p>



<p>ಇದರಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಮಾತನಾಡುತ್ತಾ, ಮುಸಲ್ಮಾನರನ್ನೂ ಉಲ್ಲೇಖಿಸಿದ್ದಾರೆ. ಆದರೆ ನರೇಂದ್ರ ಮೋದಿಯವರಿಗೆ ಮುಸಲ್ಮಾನರು ಎಂಬುದು ಮಾತ್ರ ಕಂಡಿರುವುದು ಅವರ ಆಂತರ್ಯದಲ್ಲಿ ಇರುವ ಮಾನವ ದ್ವೇಷವನ್ನು ತೋರಿಸುತ್ತದೆ.&nbsp;</p>



<p>ನೀವು ಮೇಲಿರುವ ಡಾ. ಸಿಂಗ್‌ ಅವರ ಭಾಷಣದ ಪೂರ್ಣ ಪಠ್ಯವನ್ನು ಓದಿದರೆ ಒಂದು ವಿಚಾರ ಸ್ಪಷ್ಟವಾಗುತ್ತದೆ. ಅದೇನೆಂದರೆ, ನರೇಂದ್ರ ಮೋದಿಯವರಿಗೆ ಈ ರೀತಿಯ ಭಾಷಣವನ್ನು ಮಾಡಲು ಸಾಧ್ಯವಿಲ್ಲ. ಅವರಲ್ಲಿ ಅಂತಹ ಪಾಂಡಿತ್ಯವಾಗಲೀ, ದೂರದೃಷ್ಟಿಯಾಗಲೀ ಇಲ್ಲ. ಈ ಕೀಳರಿಮೆ ಅವರನ್ನು ಆಳದಲ್ಲಿ ಘಾಸಿಗೊಳಿಸಿದೆ.</p>



<p>ಯಾವಾಗ ಕೀಳರಿಮೆ ಹೆಚ್ಚಾಗುತ್ತದೆಯೋ, ಆಗ ಮನುಷ್ಯ ಅಡ್ಡದಾರಿಯ ಮೂಲಕ ತನ್ನ ಸುಳ್ಳು ವ್ಯಕ್ತಿತ್ವವನ್ನು ಮರುಕಟ್ಟಲು ಹೆಣಗಾಡುತ್ತಾನೆ. ಈ ಹಂತದಲ್ಲಿ ಸದ್ಯ ನರೇಂದ್ರ ಮೋದಿಯವರು ಇದ್ದಾರೆ.&nbsp;</p>



<p>ತನ್ನನ್ನು ದೇವರು, ದೈವಾಂಶ ಸಂಭೂತ, ದೇಶದ ಏಕಮೇವಾದ್ವಿತೀಯ ಉದ್ಧಾರಕ ಎಂದು ಅವರು ತಮ್ಮ ಒಳಗೆ ತಮ್ಮದಲ್ಲದ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಬೇಕಾದಂತೆ ಬದುಕುತ್ತಾರೆ. ನಡೆ ನುಡಿ ಸಾಧು -ಸನ್ಯಾಸಿಯಂತೆ, ಶಾಂತಿಯ ದೂತನಂತೆ ಇರುತ್ತದೆ. ಆದರೆ ಆಂತರ್ಯದಲ್ಲಿ ಇರುವ ನಿಜವಾದ ಮೋದಿ ಓರ್ವ ದ್ವೇಷಕಾರುವ ಮನುಷ್ಯ. ಆದು ಆಗಾಗ ಹತಾಶ ಸ್ಥಿತಿಯಲ್ಲಿದ್ದಾಗ ಹೊರಗೆ ಬರುತ್ತದೆ.</p>



<p>ಈ ವ್ಯಕ್ತಿತ್ವಕ್ಕೆ ಕಾರಣ ಅವರಲ್ಲಿರುವ ʼಮೆಸಿಯಾ ಕಾಂಪ್ಲೆಕ್ಸ್‌ʼ ಎಂಬ ಮಾನಸಿಕ ಸ್ಥಿತಿ. ಈ ಸ್ಥಿತಿಯಲ್ಲಿ ಮನುಷ್ಯ ತಾನೇ ದೇವರಂತೆ ವರ್ತಿಸುತ್ತಾನೆ, ಇಲ್ಲವೇ ದೇವರ ದೂತನಾಗುತ್ತಾನೆ. ಇದು ಆತನ ಒಳಗಿರುವ ಗೊಂದಲ, ಭಯ, ಕೀಳರಿಮೆಯನ್ನು ಅಡಗಿಸಲು ಬೆಳೆಸಿಕೊಳ್ಳುವ ಸುಳ್ಳು ವ್ಯಕ್ತಿತ್ವ.&nbsp;</p>
]]></content:encoded>
					
		
		
			</item>
		<item>
		<title>ಒಂದು ದೇಶ ಒಂದು ಚುನಾವಣೆ ಕುರಿತು ರಾಷ್ಟ್ರಪತಿಗೆ ಪ್ರಸ್ತಾವನೆ ಸಲ್ಲಿಕೆ</title>
		<link>https://peepalmedia.com/proposal-submission-to-president-on-one-country-one-election/</link>
		
		<dc:creator><![CDATA[Peepal Media]]></dc:creator>
		<pubDate>Thu, 14 Mar 2024 08:57:59 +0000</pubDate>
				<category><![CDATA[Uncategorized]]></category>
		<category><![CDATA[ಕರ್ನಾಟಕ ಚುನಾವಣೆ - 2023]]></category>
		<category><![CDATA[ಚುನಾವಣೆ 2023]]></category>
		<category><![CDATA[ಚುನಾವಣೆ 2023- ಪರಿಣಾಮ]]></category>
		<category><![CDATA[ಜನ-ಗಣ-ಮನ]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ದೇಶ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ರಾಜಕೀಯ]]></category>
		<category><![CDATA[ರಾಜ್ಯ]]></category>
		<category><![CDATA[ವಿದೇಶ]]></category>
		<category><![CDATA[ವಿಶೇಷ]]></category>
		<category><![CDATA[Draupadi Murmu]]></category>
		<category><![CDATA[Election 2024]]></category>
		<category><![CDATA[Election campaign]]></category>
		<category><![CDATA[Election Commission of India]]></category>
		<category><![CDATA[india]]></category>
		<category><![CDATA[kovind]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[President Droupadi Murmu]]></category>
		<guid isPermaLink="false">https://peepalmedia.com/?p=37010</guid>

					<description><![CDATA[ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಂದು ಮುಂಜಾನೆ ಮಾಜಿ ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ʼಒಂದು ದೇಶ, ಒಂದು ಚುನಾವಣೆʼ ಸಂಬಂಧಿಸಿದ ಪ್ರಸ್ತಾವನೆಯ ವರದಿಯನ್ನು ಸಲ್ಲಿಸಿತು. ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಪ್ರಸ್ತಾವನೆ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಹಳ ಸಮಯದಿಂದ ʼಒಂದು ದೇಶ, ಒಂದು ಚುನಾವಣೆʼ ಪರಿಕಲ್ಪನೆಯನ್ನು ಬೆಂಬಲಿಸುತ್ತಾ ಬಂದಿದ್ದರು. ಈ ಕುರಿತು ಕಾನೂನು ರೂಪಿಸುವುದು ಮೋದಿಯವರ ಕನಸಾಗಿದೆ. ಗೃಹ ಸಚಿವ ಅಮಿತ್‌ [&#8230;]]]></description>
										<content:encoded><![CDATA[
<h3 class="wp-block-heading">ಹೊಸದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಇಂದು ಮುಂಜಾನೆ ಮಾಜಿ ರಾಷ್ಟ್ರಪತಿ ರಾಮ್‌ ನಾಥ್‌ ಕೋವಿಂದ್‌ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿಯು ʼಒಂದು ದೇಶ, ಒಂದು ಚುನಾವಣೆʼ ಸಂಬಂಧಿಸಿದ ಪ್ರಸ್ತಾವನೆಯ ವರದಿಯನ್ನು ಸಲ್ಲಿಸಿತು.</h3>



<p>ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಪ್ರಸ್ತಾವನೆ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಹಳ ಸಮಯದಿಂದ ʼಒಂದು ದೇಶ, ಒಂದು ಚುನಾವಣೆʼ ಪರಿಕಲ್ಪನೆಯನ್ನು ಬೆಂಬಲಿಸುತ್ತಾ ಬಂದಿದ್ದರು. ಈ ಕುರಿತು ಕಾನೂನು ರೂಪಿಸುವುದು ಮೋದಿಯವರ ಕನಸಾಗಿದೆ.</p>



<p>ಗೃಹ ಸಚಿವ ಅಮಿತ್‌ ಶಾ, ರಾಜ್ಯಸಭೆಯಲ್ಲಿನ ಮಾಜಿ ವಿಪಕ್ಷ ನಾಯಕ ಗುಲಾಂ ನಬಿ ಆಝಾದ್.‌ ವಿತ್ತ ಆಯೋಗದ ಮಾಜಿ ಅಧ್ಯಕ್ಷ ಎನ್‌ ಕೆ ಸಿಂಗ್‌, ಲೋಕಸಭೆಯ ಮಾಜಿ ಮಹಾ ಕಾರ್ಯದರ್ಶಿ ಸುಭಾಶ್‌ ಕಶ್ಯಪ್‌ ಮತ್ತು ಹಿರಿಯ ವಕೀಲ ಹರೀಶ್‌ ಸಾಳ್ವೆ ರಾಮನಾಥ್‌ ಕೋವಿಂದ್‌ ಅವರ ನೇತೃತ್ವದ ಈ ಸಮಿತಿಯ ಇನ್ನುಳಿದ ಸದಸ್ಯರಾಗಿದ್ದಾರೆ. ರಾಷ್ಟ್ರಪತಿಯ ಅಂಕಿತ ಬಿದ್ದೊಡನೆ ಇದನ್ನು ಅನುಷ್ಠಾನಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ಕಾನೂನು ಜಾರಿಯಾದರೆ ಈ ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳ ಸಾರ್ವಭೌಮತೆಗೆ ಧಕ್ಕೆ ಆಗಬಹುದು ಎನ್ನುವ ಆರೋಪಗಳು ಕೇಳಿ ಬಂದಿವೆ.</p>
]]></content:encoded>
					
		
		
			</item>
		<item>
		<title>ಚುನಾವಣಾ ಆಯೋಗದಿಂದ NCRT ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಶೀಲನೆ: ಕೇಂದ್ರಕ್ಕೆ ಪತ್ರ</title>
		<link>https://peepalmedia.com/ec-to-vet-ncert-social-science-textbooks/</link>
		
		<dc:creator><![CDATA[Charan Aivarnad]]></dc:creator>
		<pubDate>Sat, 16 Dec 2023 07:28:15 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[EC]]></category>
		<category><![CDATA[education]]></category>
		<category><![CDATA[Election Commission]]></category>
		<category><![CDATA[Election Commission of India]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[ncert]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[school]]></category>
		<category><![CDATA[state politics]]></category>
		<category><![CDATA[text book]]></category>
		<category><![CDATA[trend]]></category>
		<category><![CDATA[trend'trending]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33787</guid>

					<description><![CDATA[ಬೆಂಗಳೂರು: ಎನ್‌ಸಿಆರ್‌ಟಿ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿರುವ ದೋಷಗಳನ್ನು ಪರಿಶೀಲಿಸಲಿಸುತ್ತೇವೆ ಎಂದು ಚುನಾವಣಾ ಆಯೋಗವು ಕೇಂದ್ರಕ್ಕೆ ತಿಳಿಸಿದೆ. &#8220;correctness and relevance&#8221; ಗಾಗಿ ಪುಸ್ತಕಗಳನ್ನು ಪರಿಶೀಲಿಸಲು ಬಯಸಿರುವುದಾಗಿ ಚುನಾವಣಾ ಆಯೋಗ ತಿಳಿಸಿದ್ದು, ಸದ್ಯದ ಪಠ್ಯಪುಸ್ತಕಗಳನ್ನು &#8220;ನೈತಿಕ ಮತದಾನದ ನಿರ್ಧಾರಗಳನ್ನು&#8221; ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳನ್ನು ರೂಪಿಸಲು ಸಿದ್ಧಪಡಿಸುವುದಿಲ್ಲ ಎಂದು ಹೇಳಿದೆ. 2022 ರಲ್ಲಿ ಚುನಾವಣಾ ಆಯೋಗವು ತಿದ್ದುಪಡಿ ಮಾಡಲು ಸೂಚಿಸಿದ ಅಧ್ಯಾಯಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) 6 ನೇ ತರಗತಿ ಮತ್ತು 10 ನೇ ತರಗತಿ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಎನ್‌ಸಿಆರ್‌ಟಿ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಲ್ಲಿರುವ ದೋಷಗಳನ್ನು ಪರಿಶೀಲಿಸಲಿಸುತ್ತೇವೆ ಎಂದು ಚುನಾವಣಾ ಆಯೋಗವು ಕೇಂದ್ರಕ್ಕೆ ತಿಳಿಸಿದೆ.</p>



<p>&#8220;correctness and relevance&#8221; ಗಾಗಿ ಪುಸ್ತಕಗಳನ್ನು ಪರಿಶೀಲಿಸಲು ಬಯಸಿರುವುದಾಗಿ ಚುನಾವಣಾ ಆಯೋಗ ತಿಳಿಸಿದ್ದು, ಸದ್ಯದ ಪಠ್ಯಪುಸ್ತಕಗಳನ್ನು &#8220;ನೈತಿಕ ಮತದಾನದ ನಿರ್ಧಾರಗಳನ್ನು&#8221; ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳನ್ನು ರೂಪಿಸಲು ಸಿದ್ಧಪಡಿಸುವುದಿಲ್ಲ ಎಂದು ಹೇಳಿದೆ.</p>



<p>2022 ರಲ್ಲಿ ಚುನಾವಣಾ ಆಯೋಗವು ತಿದ್ದುಪಡಿ ಮಾಡಲು ಸೂಚಿಸಿದ ಅಧ್ಯಾಯಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) 6 ನೇ ತರಗತಿ ಮತ್ತು 10 ನೇ ತರಗತಿ ಪಠ್ಯಪುಸ್ತಕಗಳಿಂದ ತೆಗೆದುಹಾಕಿದೆ. ಇದಕ್ಕೆ &nbsp;ಕೋವಿಡ್-19 &nbsp;ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲಿನ ಶೈಕ್ಷಣಿಕ ಹೊರೆಯನ್ನು ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿತ್ತು. &nbsp;&nbsp;</p>



<p>ಡಿಲಿಟ್‌ ಮಾಡಲಾದ ಅಧ್ಯಾಯಗಳು: 6 ನೇ ತರಗತಿಯ &#8220;ಪ್ರಜಾಪ್ರಭುತ್ವದ ಸರ್ಕಾರದ ಪ್ರಮುಖ ಅಂಶಗಳು&#8221; ಮತ್ತು 10 ನೇ ತರಗತಿಯ &#8220;ಜನಪ್ರಿಯ ಹೋರಾಟಗಳು ಮತ್ತು ಚಳುವಳಿಗಳು&#8221;.</p>



<p>6 ನೇ ತರಗತಿಯ ಪಠ್ಯಪುಸ್ತಕದ ಅಧ್ಯಾಯದಲ್ಲಿ ಚುನಾವಣಾ ಆಯೋಗವು &#8220;ಈ ಎಳಸು ವಯಸ್ಸಿನ ಮಕ್ಕಳಿಗೆ ಸಂಘರ್ಷ ಇತಿಹಾಸವನ್ನು ವಿಸ್ತರಿಸಿ ಪಾಠ ಮಾಡುವುದು ತೀರ ಅನಗತ್ಯ&#8221; ಎಂದು ಹೇಳಿದೆ. 10 ನೇ ತರಗತಿ ಪುಸ್ತಕದಲ್ಲಿನ ಅಧ್ಯಾಯಕ್ಕೆ ಸಂಬಂಧಿಸಿದಂತೆ, &#8220;ಘರ್ಷಣೆಗಳು, ಹೋರಾಟಗಳು, ಜನಪ್ರಿಯ ಚಳುವಳಿಗಳು, ಆಂದೋಲನಗಳ&#8221; ಬಗ್ಗೆ ಹೆಚ್ಚು ಮಾತನಾಡಿದೆಯೇ ಹೊರತು, &#8220;ಚುನಾವಣಾ ಭಾಗವಹಿಸುವಿಕೆಗಾಗಿ ಪೌರತ್ವ ಅಭಿವೃದ್ಧಿ &#8211; citizenship development for electoral participation&#8221; ಬಗ್ಗೆ ಯುವಜನರಿಗೆ ಹೆಚ್ಚು ಪಠ್ಯ ನೀಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.</p>



<p>6 ನೇ ತರಗತಿ ಪುಸ್ತಕದ ಅಧ್ಯಾಯವು ಸಮಾನತೆ ಮತ್ತು ತಾರತಮ್ಯದ ಪರಿಕಲ್ಪನೆಗಳ ಬಗ್ಗೆ ಮಾತನಾಡಿದೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ಮತ್ತು ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ನೇತೃತ್ವದ ಚಳುವಳಿಗಳ ಬಗ್ಗೆ ಉಲ್ಲೇಖಿಸಿದೆ. 10 ನೇ ತರಗತಿ ಪುಸ್ತಕದಿಂದ &nbsp;ಕಾರ್ಯಕರ್ತೆ ಮೇಧಾ ಪಾಟ್ಕರ್ ನೇತೃತ್ವದ ಪೀಪಲ್ಸ್ ಮೂವ್‌ಮೆಂಟ್‌ಗಳ ರಾಷ್ಟ್ರೀಯ ಒಕ್ಕೂಟ ಮತ್ತು ನೇಪಾಳದಲ್ಲಿ ರಾಜಪ್ರಭುತ್ವ ವಿರೋಧಿ ಪ್ರತಿಭಟನೆಗಳ ಬಗ್ಗೆ ಇರುವ ಮಾಹಿತಿಗಳನ್ನು ತೆಗೆದುಹಾಕಲಾಗಿದೆ.</p>



<p>ಪಠ್ಯಪುಸ್ತಕಗಳಿಗೆ ತಿದ್ದುಪಡಿಗಳನ್ನು ಸೂಚಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು 2016 ರಿಂದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಜೊತೆಗೆ ಪತ್ರವ್ಯವಹಾರ ನಡೆಸುತ್ತಿದೆ. 2020 ರಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವನ್ನು ಶಿಕ್ಷಣ ಸಚಿವಾಲಯ ಎಂದು ಮರುನಾಮಕರಣ ಮಾಡಲಾಯಿತು.</p>
]]></content:encoded>
					
		
		
			</item>
	</channel>
</rss>
