<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>electoral bonds &#8211; Peepal Media</title>
	<atom:link href="https://peepalmedia.com/tag/electoral-bonds/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 28 Jan 2025 06:51:57 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>electoral bonds &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಸಿಕ್ಕಿರುವ ದೇಣಿಗೆಯಲ್ಲಿ 87% ಹೆಚ್ಚಳ!</title>
		<link>https://peepalmedia.com/87-increase-in-donation-received-by-bjp-ahead-of-lok-sabha-elections/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 28 Jan 2025 06:48:23 +0000</pubDate>
				<category><![CDATA[ದೇಶ]]></category>
		<category><![CDATA[Bharatiya Janata Party]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[donation]]></category>
		<category><![CDATA[electoral bond]]></category>
		<category><![CDATA[electoral bonds]]></category>
		<category><![CDATA[modi]]></category>
		<category><![CDATA[narendra modi]]></category>
		<guid isPermaLink="false">https://peepalmedia.com/?p=52955</guid>

					<description><![CDATA[ಬೆಂಗಳೂರು: 2022-2023 ರಿಂದ 2023-2024 ರವರೆಗೆ ಬಿಜೆಪಿಗೆ ಸಿಕ್ಕಿರುವ ದೇಣಿಗೆಯು  87% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಚುನಾವಣಾ ಬಾಂಡ್‌ಗಳ ಪಾಲು ಅರ್ಧಕ್ಕಿಂತ ಕಡಿಮೆಯಿದ್ದರೂ ಸಹ ಪಕ್ಷಕ್ಕೆ ಸಿಕ್ಕಿರುವ ದೇಣಿಗೆಯಲ್ಲಿನ ಏರಿಕೆಯನ್ನು ಚುನಾವಣಾ ಆಯೋಗಕ್ಕೆ ತನ್ನ ಆಡಿಟ್ ವರದಿಯಲ್ಲಿ ಬಿಜೆಪಿ ತೋರಿಸಿದೆ. 2023-2024ರ ಬಿಜೆಪಿಯ ವಾರ್ಷಿಕ ಲೆಕ್ಕಪರಿಶೋಧನಾ ವರದಿಯು 2022-2023ರಲ್ಲಿ ಬಿಜೆಪಿಗೆ 2,120.06 ಕೋಟಿ ರುಪಾಯಿಗಳಿಂದ 2023-2024ರಲ್ಲಿ 3,967.14 ಕೋಟಿ ರುಪಾಯಿಗಳಿಗೆ ಏರಿಕೆಯಾಗಿರುವುದನ್ನು ಎಂದು ತೋರಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ 1,685.62 ಕೋಟಿ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong><a href="https://www.eci.gov.in/eci-backend/public//pdf/report/January/1737958167.pdf" target="_blank" rel="noreferrer noopener">2022-2023 ರಿಂದ 2023-2024 ರವರೆಗೆ ಬಿಜೆಪಿಗೆ ಸಿಕ್ಕಿರುವ ದೇಣಿಗೆಯು </a> 87% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಚುನಾವಣಾ ಬಾಂಡ್‌ಗಳ ಪಾಲು ಅರ್ಧಕ್ಕಿಂತ ಕಡಿಮೆಯಿದ್ದರೂ ಸಹ  ಪಕ್ಷಕ್ಕೆ ಸಿಕ್ಕಿರುವ ದೇಣಿಗೆಯಲ್ಲಿನ ಏರಿಕೆಯನ್ನು ಚುನಾವಣಾ ಆಯೋಗಕ್ಕೆ ತನ್ನ ಆಡಿಟ್ ವರದಿಯಲ್ಲಿ ಬಿಜೆಪಿ ತೋರಿಸಿದೆ.</p>



<p>2023-2024ರ ಬಿಜೆಪಿಯ ವಾರ್ಷಿಕ ಲೆಕ್ಕಪರಿಶೋಧನಾ ವರದಿಯು 2022-2023ರಲ್ಲಿ ಬಿಜೆಪಿಗೆ 2,120.06 ಕೋಟಿ ರುಪಾಯಿಗಳಿಂದ 2023-2024ರಲ್ಲಿ 3,967.14 ಕೋಟಿ ರುಪಾಯಿಗಳಿಗೆ ಏರಿಕೆಯಾಗಿರುವುದನ್ನು ಎಂದು ತೋರಿಸಿದೆ.</p>



<p>ಹಿಂದಿನ ಹಣಕಾಸು ವರ್ಷದಲ್ಲಿ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ 1,685.62 ಕೋಟಿ ರೂಪಾಯಿಗಳನ್ನು (ಒಟ್ಟು ದೇಣಿಗೆಯ 42.4%) ಸ್ವೀಕರಿಸಿದೆ. ಇದಕ್ಕೆ ಹೋಲಿಸಿದರೆ 2022-2023ರಲ್ಲಿ, ಸದ್ಯ ರದ್ದಾಗಿರುವ <u>ಎಲೆಕ್ಟೋರಲ್ <a href="https://www.thehindu.com/news/national/bjp-got-nearly-1300-crore-through-electoral-bonds-in-2022-23-over-7-times-what-congress-received/article67832058.ece">ಬಾಂಡ್‌ಗಳ ಮೂಲಕ 1,294.14 ಕೋಟಿ ರುಪಾಯಿ (ಒಟ್ಟು ದೇಣಿಗೆಯ 61%) </a>ಪಡೆದುಕೊಂಡಿತ್ತು.</u></p>



<p>ಲೋಕಸಭೆ ಚುನಾವಣೆಗೆ ಮುಂಚಿತವಾಗಿ 2022-2023 ರಿಂದ 2023-2024 ರವರೆಗೆ ಕಾಂಗ್ರೆಸ್‌ಗೆ ಸಿಕ್ಕಿರುವ ದೇಣಿಗೆಯಲ್ಲಿ 320% ಹೆಚ್ಚಾಗಿದೆ ಎಂದು ಅದರ <a href="https://www.eci.gov.in/eci-backend/public//pdf/report/January/1737958148.pdf" target="_blank" rel="noreferrer noopener">ಆಡಿಟ್ ವರದಿ</a> ತೋರಿಸಿದೆ. ಪಕ್ಷವು 2022-2023ರಲ್ಲಿ 268.62 ಕೋಟಿ ರುಪಾಯಿ ಮತ್ತು 2023-2024ರಲ್ಲಿ 1,129.66 ಕೋಟಿ <a href="https://indianexpress.com/article/india/bjp-got-rs-3967-crore-in-donations-in-2023-24-up-87-per-cent-share-of-poll-bonds-dipped-to-43-per-cent-9802705/">ರುಪಾಯಿ ದೇಣಿಗೆಯನ್ನು ಪ</a>ಡೆದಿತ್ತು. ಇದರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ದೇಣಿಗೆ 2022-2023ರಲ್ಲಿ 63.6% ಮತ್ತು 2023-2024ರಲ್ಲಿ 73.3% ರಷ್ಟಿದ್ದವು.</p>



<p><a href="https://peepalmedia.com/sbi-has-submitted-the-complete-details-of-the-election-bond/#google_vignette">ಸುಪ್ರೀಂ ಕೋರ್ಟ್ 2024 ರ ಫೆಬ್ರವರಿಯಲ್ಲಿ</a> ಚುನಾವಣಾ ಬಾಂಡ್‌ ಯೋಜನೆಯನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿತು. ಹೀಗಾಗಿ 2023-2024 ನೇ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಸ್ವೀಕರಿಸಿದ ಕೊನೆಯ ವರ್ಷವಾಗಿದೆ.  </p>



<h3 class="wp-block-heading"></h3>
]]></content:encoded>
					
		
		
			</item>
		<item>
		<title>ಐಟಿ ದಾಳಿಯ ನಂತರ ಬೀಫ್‌ ಮಾರುವ ಅಲ್ಲಾನಾ ಗ್ರೂಪ್ಸ್‌ನಿಂದ ಬಿಜೆಪಿಗೆ 2 ಕೋಟಿ!</title>
		<link>https://peepalmedia.com/beef-export-company-donated-rs-2-cr-to-bjp/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 23 Mar 2024 12:15:21 +0000</pubDate>
				<category><![CDATA[ರಾಜಕೀಯ]]></category>
		<category><![CDATA[beef]]></category>
		<category><![CDATA[bjp]]></category>
		<category><![CDATA[electoral bonds]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=37418</guid>

					<description><![CDATA[ಭಾರತದ ಪ್ರಮುಖ ಮಾಂಸ ರಪ್ತುದಾರ ಕಂಪನಿಯಾದ ಅಲ್ಲಾನಾ ಗ್ರೂಪ್ , ಬಿಜೆಪಿಗೆ 2 ಕೋಟಿ ರುಪಾಯಿ ಹಾಗೂ ಶಿವಸೇನೆಗೆ 5 ಕೋಟಿ ರುಪಾಯಿಯನ್ನು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದೆ. ಮಾರ್ಚ್ 21, ಗುರುವಾರದಂದು ಆಲ್ಫಾನ್ಯೂಮರಿಕ್ ಸಂಖ್ಯೆಗಳು ಅಥವಾ ಬಾಂಡ್ ಸಂಖ್ಯೆಗಳು ಸೇರಿದಂತೆ ಉಳಿದ ಎಲ್ಲಾ ಚುನಾವಣಾ ಬಾಂಡ್ ವಿವರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಲ್ಲಿಸಿದ ನಂತರ ಈ ಮಾಹಿತಿಯು ಹೊರಬಂದಿದೆ. 9 ಜುಲೈ 2019 ರಂದು ಅಲ್ಲಾನಾ ಕೋಲ್ಡ್ ಸ್ಟೋರೇಜ್, ಅಲ್ಲಾನಾ ಸನ್ಸ್ [&#8230;]]]></description>
										<content:encoded><![CDATA[
<p>ಭಾರತದ ಪ್ರಮುಖ ಮಾಂಸ ರಪ್ತುದಾರ ಕಂಪನಿಯಾದ ಅಲ್ಲಾನಾ ಗ್ರೂಪ್ , ಬಿಜೆಪಿಗೆ 2 ಕೋಟಿ ರುಪಾಯಿ ಹಾಗೂ ಶಿವಸೇನೆಗೆ 5 ಕೋಟಿ ರುಪಾಯಿಯನ್ನು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದೆ.</p>



<p>ಮಾರ್ಚ್ 21, ಗುರುವಾರದಂದು ಆಲ್ಫಾನ್ಯೂಮರಿಕ್ ಸಂಖ್ಯೆಗಳು ಅಥವಾ ಬಾಂಡ್ ಸಂಖ್ಯೆಗಳು ಸೇರಿದಂತೆ ಉಳಿದ ಎಲ್ಲಾ ಚುನಾವಣಾ ಬಾಂಡ್ ವಿವರಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸಲ್ಲಿಸಿದ ನಂತರ ಈ ಮಾಹಿತಿಯು ಹೊರಬಂದಿದೆ.</p>



<p>9 ಜುಲೈ 2019 ರಂದು ಅಲ್ಲಾನಾ ಕೋಲ್ಡ್ ಸ್ಟೋರೇಜ್, ಅಲ್ಲಾನಾ ಸನ್ಸ್ ಪ್ರೈವೇಟ್ ಲಿಮಿಟೆಡ್, ಫ್ರಿಗೊರಿಫಿಕೊ ಅಲ್ಲಾನಾ ಪ್ರೈವೇಟ್ ಲಿಮಿಟೆಡ್‌ನಿಂದ ತಲಾ ರೂ 1 ಕೋಟಿಯ ಐದು ಬಾಂಡ್‌ಗಳನ್ನು ಖರೀದಿಸಲಾಗಿದೆ. ಶಿವಸೇನೆಯು ಈ ಐದು ಚುನಾವಣಾ ಬಾಂಡ್‌ಗಳನ್ನು 11 ಜುಲೈ 2019 ರಂದು ಎನ್‌ಕ್ಯಾಶ್ ಮಾಡಿದೆ.</p>



<p>9 ಅಕ್ಟೋಬರ್ 2019 ರಂದು ಅಲನಾಸನ್ಸ್ ಪ್ರೈವೇಟ್ ಲಿಮಿಟೆಡ್ &nbsp;1 ಕೋಟಿ ರುಪಾಯಿ ಮೌಲ್ಯದ ಮತ್ತೊಂದು ಬಾಂಡ್ ಅನ್ನು ಖರೀದಿಸಿತು. ಬಿಜೆಪಿ ಈ ಬಾಂಡ್ ಅನ್ನು 19 ಅಕ್ಟೋಬರ್ 2019 ರಂದು ಎನ್‌ಕ್ಯಾಶ್ ಮಾಡಿದೆ.</p>



<p>ಫ್ರಿಗೇರಿಯೋ ಕನ್ಸೆರ್ವಾ ಅಲ್ಲಾನಾ 22 ಜನವರಿ 2020 ರಂದು 1 ಕೋಟಿ ರುಪಾಯಿ ಮೌಲ್ಯದ ಮತ್ತೊಂದು ಬಾಂಡ್ ಖರೀದಿಸಿತು. ಬಿಜೆಪಿ ಈ ಬಾಂಡ್ ಅನ್ನು 3 ಫೆಬ್ರವರಿ 2020 ರಂದು ಎನ್‌ಕ್ಯಾಶ್ ಮಾಡಿದೆ.</p>



<p>ಜನವರಿ 2019 ರಲ್ಲಿ, ಆದಾಯ ತೆರಿಗೆ ಇಲಾಖೆಯ ಮುಂಬೈ ವಿಭಾಗವು ಅಲ್ಲಾನಾ ಗ್ರೂಪ್ಸ್‌ ಮೇಲೆ ದಾಳಿ ನಡೆಸಿತು. ಎಕನಾಮಿಕ್ ಟೈಮ್ಸ್ ಪ್ರಕಾರ ಎರಡು ದಿನಗಳ ಕಾಲ 100 ಕ್ಕೂ ಹೆಚ್ಚು ಘಟಕಗಳ ಮೇಲೆ ದಾಳಿ ನಡೆಸಲಾಗಿತ್ತು.</p>



<p>ಅದೇ ವರ್ಷ ಏಪ್ರಿಲ್‌ನಲ್ಲಿ, ಅಲ್ಲಾನಾ ಗ್ರೂಪ್ಸ್ 2,000 ಕೋಟಿ ರೂಪಾಯಿ ತೆರಿಗೆ ವಂಚಿಸಿದೆ ಎಂದು ಇಲಾಖೆ ಆರೋಪಿಸಿತ್ತು. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ಈ ಗ್ರೂಪ್ಸ್ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ.</p>



<p>2019 ರ ಅಕ್ಟೋಬರ್‌ನಲ್ಲಿ ರಾಜ್ಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಈ ಕಂಪನಿಯ 1 ಕೋಟಿ ರೂಪಾಯಿ ಮೌಲ್ಯದ ಒಂದು ಬಾಂಡ್ ಅನ್ನು ಎನ್‌ಕ್ಯಾಶ್ ಮಾಡಿದೆ. ಇದಕ್ಕೂ ಮೊದಲು 2015ರ ಡಿಸೆಂಬರ್‌ನಲ್ಲಿ ಫ್ರಿಗೊರಿಫಿಕೊ ಅಲಾನಾ ಲಿಮಿಟೆಡ್, ಫ್ರಿಗೇರಿಯೊ ಕನ್ವರ್ವಾ ಅಲಾನಾ ಲಿಮಿಟೆಡ್ ಮತ್ತು ಇಂಡಾಗ್ರೊ ಫುಡ್ಸ್ ಲಿಮಿಟೆಡ್‌ನಿಂದ ಬಿಜೆಪಿ 2.50 ಕೋಟಿ ರೂಪಾಯಿ ದೇಣಿಗೆ ಪಡೆದಿರುವುದು ಬಹಿರಂಗವಾಗಿದೆ.</p>



<p>1865 ರಲ್ಲಿ ಸ್ಥಾಪಿತವಾದ ಅಲನಾಸನ್ಸ್ ಪ್ರೈವೇಟ್ ಲಿಮಿಟೆಡ್‌ನ&nbsp; ವೆಬ್‌ಸೈಟ್&nbsp; ಪ್ರಕಾರ ಈ ಗ್ರೂಪ್ಸ್ &#8220;ಉನ್ನತ ಮಟ್ಟದ ರಫ್ತುದಾರರು, ತಯಾರಕರು ಮತ್ತು ಸಂಸ್ಕರಿಸಿದ ಬ್ರ್ಯಾಂಡೆಡ್ ಆಹಾರ ಉತ್ಪನ್ನಗಳು ಮತ್ತು ಕೃಷಿ ಸರಕುಗಳನ್ನು ಒದಗಿಸುವವರು.&#8221; ಇದರ ವಾರ್ಷಿಕ ವಹಿವಾಟು, ಈ ಗ್ರೂಪ್ಸ್‌ ಹೇಳುವಂತೆ 500 ರಿಂದ 1,000 ಕೋಟಿ ರುಪಾಯಿ.</p>
]]></content:encoded>
					
		
		
			</item>
		<item>
		<title>ಎಲೆಕ್ಟೋರಲ್ ಬಾಂಡ್‌: ಮೇಘಾ ಇಂಜಿನಿಯರಿಂಗ್ ಕೊಟ್ಟಿದ್ದೆಷ್ಟು?</title>
		<link>https://peepalmedia.com/top-doner-telangana-based-megha-electoral-bond-scam/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 22 Mar 2024 09:30:00 +0000</pubDate>
				<category><![CDATA[ರಾಜಕೀಯ]]></category>
		<category><![CDATA[amit shah]]></category>
		<category><![CDATA[bjp]]></category>
		<category><![CDATA[electoral bonds]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Scam]]></category>
		<category><![CDATA[state politics]]></category>
		<category><![CDATA[supreme court́]]></category>
		<guid isPermaLink="false">https://peepalmedia.com/?p=37363</guid>

					<description><![CDATA[ಬಿಜೆಪಿಯ ಚುನಾವಣಾ ಬಾಂಡ್‌ ಭ್ರಷ್ಟಾಚಾರ – 2 ಎಲೆಕ್ಟೋರಲ್ ಬಾಂಡ್‌ಗಳ ಮಾಹಿತಿ ಹೊರಬಂದಂತೆ ದೇಶ ಕಂಡು ಕೇಳರಿಯದ ಅನೇಕ ಭ್ರಷ್ಟಾಚಾರಗಳು ಹೊರಗೆ ಬಂದಿವೆ. ಈ ಡೇಟಾವು ಏಪ್ರಿಲ್ 12, 2019 ರಿಂದ ಪ್ರಾರಂಭವಾಗುವ ಮತ್ತು ಜನವರಿ 15, 2024 ರವರೆಗೆ (ಕೊನೆಯ ಬಾಂಡ್‌ಗಳನ್ನು ಮಾರಾಟ ಮಾಡಿದಾಗ) ಅವಧಿಗೆ ಸಂಬಂಧಿಸಿದೆ. ಇದು ಯೋಜನೆಯ ಮೊದಲ ವರ್ಷದ ಡೇಟಾವನ್ನು ಒಳಗೊಂಡಿಲ್ಲ. ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಏಪ್ರಿಲ್ 12, 2019 ಮತ್ತು [&#8230;]]]></description>
										<content:encoded><![CDATA[
<p><strong>ಬಿಜೆಪಿಯ ಚುನಾವಣಾ ಬಾಂಡ್‌ ಭ್ರಷ್ಟಾಚಾರ – </strong>2</p>



<p>ಎಲೆಕ್ಟೋರಲ್ ಬಾಂಡ್‌ಗಳ ಮಾಹಿತಿ ಹೊರಬಂದಂತೆ ದೇಶ ಕಂಡು ಕೇಳರಿಯದ ಅನೇಕ ಭ್ರಷ್ಟಾಚಾರಗಳು ಹೊರಗೆ ಬಂದಿವೆ. ಈ ಡೇಟಾವು ಏಪ್ರಿಲ್ 12, 2019 ರಿಂದ ಪ್ರಾರಂಭವಾಗುವ ಮತ್ತು ಜನವರಿ 15, 2024 ರವರೆಗೆ (ಕೊನೆಯ ಬಾಂಡ್‌ಗಳನ್ನು ಮಾರಾಟ ಮಾಡಿದಾಗ) ಅವಧಿಗೆ ಸಂಬಂಧಿಸಿದೆ. ಇದು ಯೋಜನೆಯ ಮೊದಲ ವರ್ಷದ ಡೇಟಾವನ್ನು ಒಳಗೊಂಡಿಲ್ಲ.</p>



<p>ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್</p>



<p>ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಏಪ್ರಿಲ್ 12, 2019 ಮತ್ತು ಜನವರಿ 11, 2024 ರ ನಡುವೆ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದಾನ ನೀಡಿದ ಎರಡನೇ ಅತಿದೊಡ್ಡ ದಾನಿ. ಹೊಸ ಡೇಟಾದ ಪ್ರಕಾರ ಇದು ಬಿಜೆಪಿಗೆ 584 ಕೋಟಿ ರುಪಾಯಿ ನೀಡಿದೆ. ತೆಲಂಗಾಣ ಮೂಲದ ಈ ಕಂಪನಿಯ ಚೇರ್‌ಮನ್ ಪಾಮಿರೆಡ್ಡಿ ಪಿಚಿ ರೆಡ್ಡಿ ಮತ್ತು ಅವರ ಸಂಬಂಧಿ ಪಿವಿ ಕೃಷ್ಣಾ ರೆಡ್ಡಿ ಈ ಅವಧಿಯಲ್ಲಿ 966 ಕೋಟಿ ರುಪಾಯಿ ನೀಡಿದ್ದಾರೆ.</p>



<p>ಗುರುವಾರ ಭಾರತೀಯಚುನಾವಣಾ ಆಯೋಗ ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯಲ್ಲಿ 966 ಕೋಟಿ ರೂಪಾಯಿಗಳಲ್ಲಿ ಮೇಘಾ ಇಂಜಿನೀಯರಿಂಗ್‌ ಕಂಪನಿಯಿಂದ 584 ಕೋಟಿ ರೂಪಾಯಿಗಳನ್ನು ಬಿಜೆಪಿಗೆ ನೀಡಿದೆ. ಎಂಐಇಎಲ್ ಖರೀದಿಸಿದ ಎಲೆಕ್ಟೋರಲ್ ಬಾಂಡ್‌ಗಳಿಂದ ಲಾಭ ಪಡೆದ ಎರಡನೇ ಅತಿ ದೊಡ್ಡ ಪಕ್ಷವೆಂದರೆ ಆಡಳಿತಾರೂಢ ಕೆ ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ. ಇದು 195 ಕೋಟಿ ರುಪಾಯಿಗಳನ್ನು ಪಡೆದಿದೆ. ಅಲ್ಲದೇ, ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ 37 ಕೋಟಿ ರುಪಾಯಿ, ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ 85 ಕೋಟಿಯನ್ನು ಪಡೆದಿವೆ.</p>



<p>ಬಿಹಾರದ ಆಡಳಿತ ಪಕ್ಷವಾದ ನಿತೀಶ್ ಕುಮಾರ್ ಅವರ ಜನತಾ ದಳಕ್ಕೆ (ಯುನೈಟೆಡ್ ) ಈ ಎಂಐಇಎಲ್ ಕಂಪನಿ 10 ಕೋಟಿ ರುಪಾಯಿ ದೇಣಿಗೆ ನೀಡಿದೆ.</p>



<p>MIEL ವಿರೋಧ ಪಕ್ಷಗಳಿಗೆ ನೀಡಿದ ದೇಣಿಗೆ ಅತ್ಯಂತ ಸಣ್ಣ ಮೊತ್ತ. ಆಂಧ್ರ ಮೂಲದ ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) 28 ಕೋಟಿ, ಕಾಂಗ್ರೆಸ್ 18 ಕೋಟಿ, ಜನತಾ ದಳ (ಜಾತ್ಯತೀತ) 5 ಕೋಟಿ. ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಕ್ಕೆ 4 ಕೋಟಿ ರುಪಾಯಿಗಳನ್ನು ನೀಡಿದೆ.</p>



<p>ಎಪ್ರಿಲ್ 12, 2023 ರ ಮೊದಲು MIEL ನ ಚುನಾವಣಾ ಬಾಂಡ್‌ಗಳ 89.75 ಕೋಟಿ ರೂಪಾಯಿಗಳಲ್ಲಿ ಜನತಾ ದಳ (ಜಾತ್ಯತೀತ) 50 ಕೋಟಿ ರೂಪಾಯಿಗಳನ್ನು ಪಡೆದಿದೆ ಎಂದು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ಮಾಹಿತಿಗಳಿಂದ ತಿಳಿದು ಬಂದಿದೆ. ಒಟ್ಟು ಮೊತ್ತದ ಸುಮಾರು 56% ಭಾಗವನ್ನು ಮೇ 2023 ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಮೊದಲೇ ಜೆಡಿಎಸ್‌ ಸ್ವೀಕರಿಸಿದೆ.</p>



<p>ಈ ಅವಧಿಯಲ್ಲಿ MIEL ಅನೇಕ ಸರ್ಕಾರಿ ಮೂಲಸೌಕರ್ಯ ಯೋಜನೆಗಳನ್ನು ತನ್ನ ಪಾಲಿಗೆ ದಕ್ಕಿಸಿಕೊಂಡಿತ್ತು. ಕಂಪನಿಯು 14,400 ಕೋಟಿ ರುಪಾಯಿಯ ಥಾಣೆ-ಬೊರಿವಲಿ ಜೋಡಿ ಸುರಂಗ ಯೋಜನೆಗೆ ಟೆಂಡರ್ ಪಡೆದುಕೊಂಡಿದೆ. ಈ ಟೆಂಡರ್‌ 2023 ರ ಏಪ್ರಿಲ್ 11 ರಂದು 140 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಿದ ಒಂದು ತಿಂಗಳ ನಂತರ ಸಿಕ್ಕಿದೆ. 140 ಕೋಟಿ ರೂಪಾಯಿಗಳಲ್ಲಿ, 115 ಕೋಟಿ ರುಪಾಯಿಗಳನ್ನು ಈ ಕಂಪನಿ ಬಿಜೆಪಿಗೆ, ಉಳಿದ 25 ಕೋಟಿ ರುಪಾಯಿಗಳನ್ನು ತೆಲುಗು ದೇಶಂ ಪಕ್ಷ, ಜನಸೇನಾ ಪಕ್ಷ, ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಹಂಚಿದೆ.</p>



<p>ಆಗ ಒಂದು ಟೆಂಡರ್ ಪ್ರಕ್ರಿಯೆ ವಿವಾದಕ್ಕೀಡಾಗಿತ್ತು. ಮಹಾರಾಷ್ಟ್ರ ಸರ್ಕಾರದ ಮುಂಬೈ ಮೆಟ್ರೋಪಾಲಿಟನ್ ಡೆವಲಪ್‌ಮೆಂಟ್ ಅಥಾರಿಟಿ (MMRDA) 2023 ರ ಜನವರಿಯಲ್ಲಿ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಅಡಿಯಲ್ಲಿ ಎರಡು ರಸ್ತೆ ಸುರಂಗಗಳ ನಿರ್ಮಾಣಕ್ಕೆ ಟೆಂಡರ್ ಕರೆದಿತ್ತು. ಇದರಲ್ಲಿ MEIL ನ ಬಿಡ್ ಮಾತ್ರ ಸರ್ಕಾರ ಸ್ಪಂದಿಸಿತ್ತು. MIEL ಟೆಂಡರ್ ಪಡೆದುಕೊಂಡ ಕೂಡಲೇ MIEL ನ ಪ್ರತಿಸ್ಪರ್ಧಿ L&amp;T ಮೇ 2023 ರಲ್ಲಿ ನ್ಯಾಯಾಲಯದಲ್ಲಿ ನಿರ್ಧಾರವನ್ನು ಪ್ರಶ್ನಿಸಿತ್ತು. ಆದರೆ ಬಾಂಬೆ ಉಚ್ಚ ನ್ಯಾಯಾಲಯವು ತಾಂತ್ರಿಕ ಆಧಾರದ ಮೇಲೆ L&amp;T ಕಂಪನಿಯ ಮನವಿಯನ್ನು ವಜಾಗೊಳಿಸಿತು.</p>



<p>ಒಂದು ಸಣ್ಣ ಕಂಪನಿಯಾಗಿದ್ದ MIEL ಭಾರತದಲ್ಲಿ ಅತಿದೊಡ್ಡ ಮೂಲಸೌಕರ್ಯ ನಿರ್ಮಾಣದ ದೈತ್ಯ ಕಂಪನಿಯಾಗಿ ಬೆಳೆದಿದೆ. ಪ್ರಸ್ತುತ 20 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅನೇಕ ವಿವಾದಗಳನ್ನೂ ಮೈಗೆಳೆದುಕೊಂಡಿದೆ. ತೆಲಂಗಾಣದಲ್ಲಿ ಹೊಸದಾಗಿ ಚುನಾಯಿತರಾಗಿರುವ ಕಾಂಗ್ರೆಸ್ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಕೆಲವು ತಿಂಗಳ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ, 1 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಕಾಳೇಶ್ವರಂ ಲಿಫ್ಟ್ ನೀರಾವರಿ ಯೋಜನೆಯಲ್ಲಿ ಹಲವಾರು ಗುತ್ತಿಗೆಗಳನ್ನು ಈ ಕಂಪನಿಗೆ ಹಸ್ತಾಂತರಿಸುವಲ್ಲಿ ನಡೆದಿರುವ ಅವ್ಯವಹಾರಕ್ಕಾಗಿ ಆಡಳಿತಾರೂಢ ಬಿಆರ್‌ಎಸ್ ವಿರುದ್ಧ ಆರೋಪಗಳನ್ನು ಮಾಡಿದ್ದರು.</p>



<p>ಆಂಧ್ರಪ್ರದೇಶದಲ್ಲಿ, ವೈಎಸ್ ಜಗನ್ ಮೋಹನ್ ರೆಡ್ಡಿ ಅವರು 2014 ರಿಂದ 2019 ರ ನಡುವೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರವು ಬೃಹತ್ ಪಟ್ಟಿಸೀಮಾ ನೀರಾವರಿ ಯೋಜನೆಯಲ್ಲಿ ಎಂಐಇಎಲ್‌ ಕಡೆ ಹೆಚ್ಚಿನ ಒಲವು ನೀಡಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪ ಮಾಡಿದ್ದ ಇದೇ ಜಗನ್ ತಾವು ಅಧಿಕಾರಕ್ಕೆ ಬಂದ ನಂತರ, MIEL ಗೆ ಹೆಚ್ಚಿನ ಗುತ್ತಿಗೆಗಳನ್ನು ನೀಡಿದರು. ಇದರಲ್ಲಿ ಪೋಲವರಂ ಅಣೆಕಟ್ಟು ಯೋಜನೆ ಕೂಡ ಒಂದು. ಜಗನ್‌, ನವಯುಗ ಇಂಜಿನಿಯರಿಂಗ್‌ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಈ ಯೋಜನೆಯನ್ನು MIELಗೆ ನೀಡಿದರು.</p>



<p>MIEL ಸಹ ಆದಾಯ ತೆರಿಗೆ ಇಲಾಖೆಯ ಸ್ಕ್ಯಾನರ್ ಅಡಿಯಲ್ಲಿ ಬರುತ್ತದೆ. ಅಕ್ಟೋಬರ್, 2019 ರಲ್ಲಿ ಅದರ ಕಚೇರಿಯ ಮೇಲೆ ದಾಳಿ ನಡೆಸಲಾಯಿತು, ಅದರ ನಂತರ ಈ ಕಂಪನಿ ಬೃಹತ್‌ ಪ್ರಮಾಣದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಝೋಝಿ-ಲಾ ಸುರಂಗವನ್ನು ನಿರ್ಮಿಸುವ 4,509 ಕೋಟಿ ಮೌಲ್ಯದ ಯೋಜನೆಯನ್ನು ಈ ಕಂಪನಿ ಆಗಸ್ಟ್ 2020 ರಲ್ಲಿ ಪಡೆದುಕೊಂಡಿದೆ.</p>



<p>ಕಳೆದ ಕೆಲವು ವರ್ಷಗಳಿಂದ MIEL ಹೈದರಾಬಾದ್ ಮೂಲದ ಮೈ ಹೋಮ್ ಗ್ರೂಪ್‌ನ ಸಹಭಾಗಿತ್ವದಲ್ಲಿ ಮಾಧ್ಯಮ ಕ್ಷೇತ್ರದ ಉದ್ಯಮದಲ್ಲಿಯೂ ತೊಡಗಿಸಿಕೊಂಡಿದೆ. ಇದು ಪ್ರಭಾವಿ TV9TElugu ಚಾನೆಲನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಮತ್ತು NTV ಚಾನೆಲ್‌ನ 22% ಷೇರನ್ನು ಖರೀದಿಸಿದೆ. MIEL ಶೀಘ್ರದಲ್ಲೇ ಎಲೆಕ್ಟ್ರಿಕ್ ವಾಹನಗಳ ಉತ್ಪಾದಿಸುವ ಉದ್ಯಮಕ್ಕೆ ಯೋಜನೆಗಳನ್ನು ಹಾಕಿಕೊಂಡಿದೆ.</p>



<p>ಎಂಐಇಎಲ್‌ನ ಸಹಭಾಗಿತ್ವ ಹೊಂದಿರುವ ಕಂಪನಿಗಳನ್ನೂ ಸೇರಿಸಿದರೆ, ಬಿಜೆಪಿಗೆ ಈ ಕಂಪನಿ ನೀಡಿದ ದೇಣಿಗೆಗಳು ಇನ್ನೂ ಹೆಚ್ಚಾಗುತ್ತವೆ. MIEL ಸಹಭಾಗಿತ್ವದ ಕಂಪನಿಗಳು ನೀಡಿದ ಕಡಿಮೆ ಮೊತ್ತದ ದೇಣಿಗೆಗಳಲ್ಲಿ ಹೆಚ್ಚಿನವು ಕಾಂಗ್ರೆಸ್‌ಗೆ ಹೋಗಿವೆ.<br>ಎಂಐಇಎಲ್ ಒಡೆತನದ ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ 220 ಕೋಟಿ ರೂಪಾಯಿ ಮೌಲ್ಯದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿ ಮಾಡಿದೆ. ಇದು ಬಿಜೆಪಿಗೆ 80 ಕೋಟಿ ಬಾಂಡ್ ನೀಡಿದ್ದರೆ, ಕಾಂಗ್ರೆಸ್ ಗೆ 110 ಕೋಟಿ ದೇಣಿಗೆ ನೀಡಿದೆ. ಅಲ್ಲದೆ, ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ ಟಿಡಿಪಿಗೆ ರೂ 20 ಕೋಟಿ ಮತ್ತು ಜನಸೇನಾಗೆ ಬಾಂಡ್‌ಗಳ ಮೂಲಕ ರೂ 10 ಕೋಟಿ ದೇಣಿಗೆ ನೀಡಿದೆ.</p>



<p>40 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ MIEL ನ ಮತ್ತೊಂದು ಕಂಪನಿ SEPC Power, ಕಾಂಗ್ರೆಸ್‌ಗೆ 30 ಕೋಟಿ ರುಪಾಯಿಗಳನ್ನೂ, ಬಿಜೆಪಿ ಮತ್ತು ಟಿಡಿಪಿಗೆ ತಲಾ 5 ಕೋಟಿ ರುಪಾಯಿಗಳನ್ನು ನೀಡಿದೆ. MIEL ನ ಮತ್ತೊಂದು ಕಂಪನಿ Evey Trans Private Limited ಬಿಆರ್‌ಎಸ್‌ ಪಕ್ಷಕ್ಕೆ ಬಾಂಡ್‌ಗಳ ಮೂಲಕ 6 ಕೋಟಿ ರುಪಾಯಿ ನೀಡಿದೆ.</p>



<p>ಎಲ್ಲವನ್ನೂ ಸಮಗ್ರವಾಗಿ ನೋಡಿದಾಗ MIEL ಮತ್ತು ಅದರ ಸಂಬಂಧಿತ ಕಂಪನಿಗಳ ಪಾಲು 1232 ಕೋಟಿ ರುಪಾಯಿಗಳಷ್ಟಿದೆ. ಅದರಲ್ಲಿ ಬಿಜೆಪಿ ಮಾತ್ರ 669 ಕೋಟಿ ರುಪಾಯಿಗಳನ್ನು ಪಡೆದುಕೊಂಡಿದೆ. ಇದು ಒಟ್ಟು ದೇಣಿಗೆಯ ಸುಮಾರು 54.3% ಪಾಲು. ಈ ಕಂಪನಿಯಿಂದ ದೇಣಿಗೆ ಪಡೆದುಕೊಂಡಿರುವ ಎರಡನೇ ಅತಿದೊಡ್ಡ ಪಕ್ಷ ಬಿಆರ್‌ಎಸ್.</p>
]]></content:encoded>
					
		
		
			</item>
		<item>
		<title>ದೆಹಲಿ ಲಿಕ್ಕರ್ ಪಾಲಿಸಿ ಪ್ರಕರಣದಲ್ಲಿ ಬಂಧಿತನಾದವನಿಂದ ಬಿಜೆಪಿಗೆ 5 ಕೋಟಿ</title>
		<link>https://peepalmedia.com/approver-in-delhi-liquor-policy-case-donated-rs-5-crore-to-bjp/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 22 Mar 2024 09:21:54 +0000</pubDate>
				<category><![CDATA[ರಾಜಕೀಯ]]></category>
		<category><![CDATA[amit shah]]></category>
		<category><![CDATA[bjp]]></category>
		<category><![CDATA[electoral bonds]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Scam]]></category>
		<category><![CDATA[state politics]]></category>
		<category><![CDATA[supreme court́]]></category>
		<category><![CDATA[writing]]></category>
		<guid isPermaLink="false">https://peepalmedia.com/?p=37347</guid>

					<description><![CDATA[ಬಿಜೆಪಿಯ ಚುನಾವಣಾ ಬಾಂಡ್‌ ಭ್ರಷ್ಟಾಚಾರ – 1 ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21, ಗುರುವಾರ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿರುವ ಹೈದರಾಬಾದ್ ಮೂಲದ ಉದ್ಯಮಿ ಪಿ. ಶರತ್ ಚಂದ್ರ ರೆಡ್ಡಿ ಎಂಬಾತನ ಕಂಪನಿ ಅರಬಿಂದೋ ಫಾರ್ಮಾ ಲಿಮಿಟೆಡ್  5 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಬಿಜೆಪಿಗೆ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ. 2022 ರ ನವೆಂಬರ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಬಳಸಿ [&#8230;]]]></description>
										<content:encoded><![CDATA[
<p style="font-size:17px"><p class="MsoNormal"><span lang="EN-US" style="font-family:&quot;Tunga&quot;,sans-serif;
mso-ansi-language:EN-US"><strong>ಬಿಜೆಪಿಯ ಚುನಾವಣಾ ಬಾಂಡ್‌ ಭ್ರಷ್ಟಾಚಾರ – 1  </strong></span></p></p>



<p><span style="font-family: Tunga, sans-serif; color: initial;">ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21, ಗುರುವಾರ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿರುವ ಹೈದರಾಬಾದ್ ಮೂಲದ ಉದ್ಯಮಿ ಪಿ. ಶರತ್ ಚಂದ್ರ ರೆಡ್ಡಿ ಎಂಬಾತನ ಕಂಪನಿ ಅರಬಿಂದೋ ಫಾರ್ಮಾ ಲಿಮಿಟೆಡ್  5 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಬಿಜೆಪಿಗೆ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ. 2022 ರ ನವೆಂಬರ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಬಳಸಿ ಈತನನ್ನು ಬಂಧಿಸಿತ್ತು, ಬಂಧನವಾಗಿ ಕೇವಲ ಐದು ದಿನಗಳ ನಂತರ ಈತ ಬಿಜೆಪಿಗೆ ದೇಣಿಗೆ ನೀಡಿದ್ದಾನೆ.</span><p class="MsoNormal"></p><span style="font-family: Tunga, sans-serif; color: initial;">ಚುನಾವಣಾ ಆಯೋಗವು ಪ್ರತಿ ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ವಿಶಿಷ್ಟ ಸಂಖ್ಯೆಯನ್ನು ಗುರುವಾರ ಬಿಡುಗಡೆ ಮಾಡಿದ ಈ ಚುನಾವಣಾ ಬಾಂಡ್‌ ಹಗರಣದ ಒಂದು ಕಥೆ ಬೆಳಕಿಗೆ ಬಂದಿದೆ. ಅರಬಿಂದೋ ಫಾರ್ಮಾ ಲಿಮಿಟೆಡ್ ಎಂಬ ಈ ಕಂಪನಿಯನ್ನು ಶರತ್ ರೆಡ್ಡಿಯ ತಂದೆ ಪಿವಿ ರಾಮ್ ಪ್ರಸಾದ್ ರೆಡ್ಡಿ ಸ್ಥಾಪಿಸಿದ್ದು, ಶರತ್ ರೆಡ್ಡಿ ಅದರ ನಿರ್ದೇಶಕರಲ್ಲಿ ಓರ್ವ.</span> <p class="MsoNormal"></p><span style="font-family: Tunga, sans-serif; color: initial;">ಶರತ್ ರೆಡ್ಡಿಯ ಬಂಧನದ ನಂತರ ಈತ ದೆಹಲಿ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದಾಗ ಈತನನ್ನು ಬಂಧಿಸಿದ ಜಾರಿ ನಿರ್ದೇಶನಾಲಯ ಈ ಜಾಮೀನಿಗೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಮೇ 2023 ರಂದು ನ್ಯಾಯಾಲಯವು ವೈದ್ಯಕೀಯ ಕಾರಣಕ್ಕೆ  ಜಾಮೀನು ನೀಡಿತ್ತು.</span> <p class="MsoNormal"></p><span style="font-family: Tunga, sans-serif; color: initial;">ಜೂನ್ 2023 ರಲ್ಲಿ, ಶರತ್ ರೆಡ್ಡಿ ಪ್ರಕರಣದಲ್ಲಿ ಅಪ್ರೂವರ್‌ ಆಗಿ, ಎರಡು ತಿಂಗಳ ನಂತರ ಈತನ ಫಾರ್ಮಾ ಕಂಪನಿಯು ಬಿಜೆಪಿಗೆ ಮತ್ತೆ 25 ಕೋಟಿ ರುಪಾಯಿ ನೀಡಿದ್ದ.</span> <p class="MsoNormal"></p><span style="background-color: rgba(0, 0, 0, 0.2); font-family: Tunga, sans-serif; color: initial;">ಶರತ್ ರೆಡ್ಡಿ ಬಂಧನಕ್ಕೂ ಮುನ್ನ ಇದೇ ಕಂಪನಿ ಭಾರತ್ ರಾಷ್ಟ್ರ ಸಮಿತಿ ಮತ್ತು ತೆಲುಗು ದೇಶಂ ಪಕ್ಷಕ್ಕೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಯನ್ನು ನೀಡಿತ್ತು.</span></p>



<p><p class="MsoNormal"><span style="font-family: Tunga, sans-serif; color: initial;">ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಭಾರತ್ ರಾಷ್ಟ್ರ ಸಮಿತಿ ಎಂಎಲ್‌ಸಿ ಕೆ ಕವಿತಾ ಸೇರಿದಂತೆ ಪ್ರತಿಪಕ್ಷ ನಾಯಕರನ್ನು ಈ ಹಿಂದೆ ಲಿಕ್ಕರ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ದೇಶದಲ್ಲಿರುವ ಎಲ್ಲಾ ಭಿನ್ನ ದನಿಗಳನ್ನು ಮತ್ತು ರಾಜಕೀಯ ವಿರೋಧವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.</span></p> </p>
]]></content:encoded>
					
		
		
			</item>
		<item>
		<title>ಎಲೆಕ್ಟೋರಲ್‌ ಬಾಂಡು: ಹೆಚ್ಚು ಉಂಡವರು ಯಾರು?</title>
		<link>https://peepalmedia.com/who-benefited-from-electoral-bonds/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 06 Mar 2024 08:57:50 +0000</pubDate>
				<category><![CDATA[ರಾಜಕೀಯ]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[electoral bonds]]></category>
		<category><![CDATA[india]]></category>
		<category><![CDATA[JDS]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[news updates]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[RBI]]></category>
		<category><![CDATA[Scam]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=36703</guid>

					<description><![CDATA[2017-2018 ರಿಂದ 2022-2023 ರವರೆಗೆ ಮಾರಾಟವಾದ ಸುಮಾರು 12,000 ಕೋಟಿ ರುಪಾಯಿಗಳ ಒಟ್ಟು ಎಲೆಕ್ಟೋರಲ್ ಬಾಂಡ್‌ಗಳಲ್ಲಿ ಸುಮಾರು 55% ಅಥವಾ 6,564 ಕೋಟಿ ರುಪಾಯಿ ಬಾಂಡ್‌ಗಳನ್ನು ಬಿಜೆಪಿ ಸ್ವೀಕರಿಸಿದೆ. ಅಲ್ಲದೇ, ಈ ಐದು ವರ್ಷಗಳ ಅವಧಿಯಲ್ಲಿ ಮಾರಾಟವಾದ ಎಲ್ಲಾ ಬಾಂಡ್‌ಗಳಲ್ಲಿ ಕೇವಲ 9.5% ರಷ್ಟು 1,135 ಕೋಟಿ ರುಪಾಯಿ ಬಾಂಡ್‌ಗಳನ್ನು ಕಾಂಗ್ರೇಸ್‌ ಹಾಗೂ ತೃಣಮೂಲ ಕಾಂಗ್ರೆಸ್ ಚುನಾವಣಾ ಬಾಂಡ್‌ಗಳಿಂದ 1,096 ಕೋಟಿ ರೂಪಾಯಿಗಳನ್ನು ಪಡೆದಿದೆ. 2017ರಲ್ಲಿ ನರೇಂದ್ರ ಮೋದಿ (Narendra Modi) ಸರ್ಕಾರ ತಂದಿರುವ ಎಲೆಕ್ಟೋರಲ್ ಬಾಂಡ್ [&#8230;]]]></description>
										<content:encoded><![CDATA[
<p>2017-2018 ರಿಂದ 2022-2023 ರವರೆಗೆ ಮಾರಾಟವಾದ ಸುಮಾರು 12,000 ಕೋಟಿ ರುಪಾಯಿಗಳ ಒಟ್ಟು ಎಲೆಕ್ಟೋರಲ್ ಬಾಂಡ್‌ಗಳಲ್ಲಿ ಸುಮಾರು 55% ಅಥವಾ 6,564 ಕೋಟಿ ರುಪಾಯಿ ಬಾಂಡ್‌ಗಳನ್ನು ಬಿಜೆಪಿ ಸ್ವೀಕರಿಸಿದೆ. </p>



<p>ಅಲ್ಲದೇ, ಈ ಐದು ವರ್ಷಗಳ ಅವಧಿಯಲ್ಲಿ ಮಾರಾಟವಾದ ಎಲ್ಲಾ ಬಾಂಡ್‌ಗಳಲ್ಲಿ ಕೇವಲ 9.5% ರಷ್ಟು 1,135 ಕೋಟಿ ರುಪಾಯಿ ಬಾಂಡ್‌ಗಳನ್ನು ಕಾಂಗ್ರೇಸ್‌ ಹಾಗೂ ತೃಣಮೂಲ ಕಾಂಗ್ರೆಸ್ ಚುನಾವಣಾ ಬಾಂಡ್‌ಗಳಿಂದ 1,096 ಕೋಟಿ ರೂಪಾಯಿಗಳನ್ನು ಪಡೆದಿದೆ.</p>



<p>2017ರಲ್ಲಿ ನರೇಂದ್ರ ಮೋದಿ (Narendra Modi) ಸರ್ಕಾರ ತಂದಿರುವ ಎಲೆಕ್ಟೋರಲ್ ಬಾಂಡ್ (Eelectoral bonds) ಯೋಜನೆಯು ಅಸಂವಿಧಾನಿಕ ಮತ್ತು ಮಾಹಿತಿ ಹಕ್ಕು ಹಾಗೂ <a href="https://indiankanoon.org/doc/1218090/" data-type="link" data-id="https://indiankanoon.org/doc/1218090/">19(1)(ಎ) ವಿಧಿ</a>ಯನ್ನು ಉಲ್ಲಂಘಿಸುತ್ತದೆ ಎಂದು ಫೆಬ್ರವರಿ 15 ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. 2017 ರಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಆಲಿಸಲು ನ್ಯಾಯಾಲಯವು ಎಂಟು ವರ್ಷಗಳನ್ನು ತೆಗೆದುಕೊಂಡಿತು ಅಲ್ಲದೇ ಈ ಯೋಜನೆಯನ್ನು ರದ್ದು ಮಾಡಲು ಈ ಹಿಂದೆ ನಿರಾಕರಿಸಿತ್ತು. ಈ ವರ್ಷದ ಜನವರಿಯಲ್ಲಿ ನೂರಾರು ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮಾರಾಟ ಮಾಡಿದೆ.</p>



<p>ಹಾಗಾದರೆ ಈ ಯೋಜನೆಯಿಂದ ಯಾರು ಹೆಚ್ಚು ಲಾಭ ಪಡೆದರು ಮತ್ತು ನ್ಯಾಯಾಲಯದಿಂದ ವಿಳಂಬವಾದ ನಿರ್ಧಾರದಿಂದ ಯಾರಿಗೆ ಹೆಚ್ಚು ಪ್ರಯೋಜನವಾಗಿದೆ?</p>



<p>ಇತ್ತೀಚಿನ ಕಂತು ಸೇರಿದಂತೆ ಒಟ್ಟು 16,518.11 ಕೋಟಿ ರುಪಾಯಿಗಳ ಎಲೆಕ್ಟೋರಲ್ ಬಾಂಡ್‌ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದುವರೆಗೆ ಮಾರಾಟ ಮಾಡಿದೆ.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="948" height="913" src="https://peepalmedia.com/wp-content/uploads/2024/03/image-2.png" alt="" class="wp-image-36705" style="width:458px;height:auto" srcset="https://peepalmedia.com/wp-content/uploads/2024/03/image-2.png 948w, https://peepalmedia.com/wp-content/uploads/2024/03/image-2-300x289.png 300w, https://peepalmedia.com/wp-content/uploads/2024/03/image-2-768x740.png 768w, https://peepalmedia.com/wp-content/uploads/2024/03/image-2-150x144.png 150w, https://peepalmedia.com/wp-content/uploads/2024/03/image-2-696x670.png 696w" sizes="(max-width: 948px) 100vw, 948px" /><figcaption class="wp-element-caption">ಮೂಲ: ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್</figcaption></figure></div>


<p>ಮೊದಲೇ ಹೇಳಿದಂತೆ, 2017-2018 ಮತ್ತು 2022-2023 ರ ನಡುವೆ ಮಾರಾಟವಾದ 12,008 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳಲ್ಲಿ ಸುಮಾರು 55% ಬಿಜೆಪಿಗೆ ಹೋಗಿದೆ. </p>



<p>2022-23ರಲ್ಲಿ ಬಿಜೆಪಿಯ ಒಟ್ಟು ಆದಾಯದ 54%, ಅಂದರೆ 2,120.06 ಕೋಟಿ ರುಪಾಯಿ ಚುನಾವಣಾ ಬಾಂಡ್‌ಗಳಿಂದ ಬಂದಿದೆ ಎಂದು ದಿ ಹಿಂದೂ ಇತ್ತೀಚೆಗೆ ವರದಿ ಮಾಡಿದೆ. 2018 ಮತ್ತು 2023 ರ ನಡುವಿನ ಆರು ವರ್ಷಗಳ ಅವಧಿಯಲ್ಲಿ, ಬಿಜೆಪಿಯ ಒಟ್ಟು ದೇಣಿಗೆಯಲ್ಲಿ 52% ಕ್ಕಿಂತ ಹೆಚ್ಚು, ಅಂದರೆ 5271.9751 ಕೋಟಿ ರೂಪಾಯಿ ಮೌಲ್ಯ ಹಣ ಚುನಾವಣಾ ಬಾಂಡ್‌ಗಳಿಂದ ಬಂದಿದೆ ಎಂದು <a href="https://adrindia.org/sites/default/files/Analysis_of_Donations_to_Registered_Recognised_Political_Parties_FY_2016-17_to_2021-22.pdf" data-type="link" data-id="https://adrindia.org/sites/default/files/Analysis_of_Donations_to_Registered_Recognised_Political_Parties_FY_2016-17_to_2021-22.pdf">ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್</a> ತಿಳಿಸಿದೆ.</p>



<p>2022-23ರಲ್ಲಿ ಚುನಾವಣಾ ಬಾಂಡ್‌ಗಳಿಂದ ಕಾಂಗ್ರೆಸ್ 171 ಕೋಟಿ ರೂಪಾಯಿ ದೇಣಿಗೆ ಪಡೆದಿತ್ತು.</p>



<p>ಪ್ರಾದೇಶಿಕ ಪಕ್ಷಗಳೂ ಕೂಡ ಎಲೆಕ್ಟೋರಲ್ ಬಾಂಡ್‌ಗಳ ಮೂಲಕ ದೊಡ್ಡ ಮೊತ್ತದ ಹಣವನ್ನು ಪಡೆದಿವೆ. ಭಾರತ್ ರಾಷ್ಟ್ರ ಸಮಿತಿಯು 2022-23 ರಲ್ಲಿ ಎಲೆಕ್ಟೋರಲ್‌ ಬಾಂಡ್‌ಗಳ ಮೂಲಕ 529 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಸ್ವೀಕರಿಸಿ ಪ್ರಾದೇಶಿಕ ಪಕ್ಷಗಳಲ್ಲಿ ಪ್ರಥಮ ಸ್ಥಾನದಲ್ಲಿದೆ. ಚುನಾವಣಾ ಬಾಂಡ್‌ಗಳ ಮೂಲಕ 329 ಕೋಟಿ ರುಪಾಯಿ ದೇಣಿಗೆ ಪಡೆದಿರುವ ಟಿಎಂಸಿ ಎರಡನೇ ಸ್ಥಾನದಲ್ಲಿದೆ. ಬಿಜೆಡಿ 152 ಕೋಟಿ ರುಪಾಯಿ ಮತ್ತು ವೈಎಸ್‌ಆರ್ ಕಾಂಗ್ರೆಸ್ 52 ಕೋಟಿ ರುಪಾಯಿ ದೇಣಿಗೆ ಪಡೆದಿವೆ. ಬಿಆರ್‌ಎಸ್ ಹೊರತುಪಡಿಸಿ ಈ ನಾಲ್ಕು ಪಕ್ಷಗಳು 2021-22ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ದೊಡ್ಡ ಮೊತ್ತದ ಹಣವನ್ನು ಪಡೆದಿವೆ. ಟಿಎಂಸಿ 528 ಕೋಟಿ ರುಪಾಯಿ, ಡಿಎಂಕೆಗೆ 306 ಕೋಟಿ ರುಪಾಯಿ, ಬಿಜೆಡಿ 291 ಕೋಟಿ ರುಪಾಯಿ ಮತ್ತು ವೈಎಸ್‌ಆರ್‌ ಕಾಂಗ್ರೇಸ್ 60 ಕೋಟಿ‌ ರುಪಾಯಿ ಪಡೆದಿವೆ.</p>


<div class="wp-block-image">
<figure class="aligncenter size-large"><a href="https://peepalmedia.com/?attachment_id=36717"><img decoding="async" width="1024" height="427" src="https://peepalmedia.com/wp-content/uploads/2024/03/image-3-1024x427.png" alt="" class="wp-image-36717" srcset="https://peepalmedia.com/wp-content/uploads/2024/03/image-3-1024x427.png 1024w, https://peepalmedia.com/wp-content/uploads/2024/03/image-3-300x125.png 300w, https://peepalmedia.com/wp-content/uploads/2024/03/image-3-768x320.png 768w, https://peepalmedia.com/wp-content/uploads/2024/03/image-3-150x63.png 150w, https://peepalmedia.com/wp-content/uploads/2024/03/image-3-696x290.png 696w, https://peepalmedia.com/wp-content/uploads/2024/03/image-3-1068x445.png 1068w, https://peepalmedia.com/wp-content/uploads/2024/03/image-3.png 1300w" sizes="(max-width: 1024px) 100vw, 1024px" /></a><figcaption class="wp-element-caption"><a href="https://public.flourish.studio/visualisation/16811897/?utm_source=embed&amp;utm_campaign=visualisation/16811897" data-type="link" data-id="https://public.flourish.studio/visualisation/16811897/?utm_source=embed&amp;utm_campaign=visualisation/16811897">TEMPLATE CREDITS</a><br><a href="https://app.flourish.studio/%E2%80%A020762">Line, bar and pie charts</a> by <strong>Flourish team</strong></figcaption></figure></div>


<p><br>ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಿದ ಮೊದಲ ಸಾರ್ವತ್ರಿಕ ಚುನಾವಣೆಯಾದ 2019 ರ ಲೋಕಸಭಾ ಚುನಾವಣೆ ಇಲ್ಲಿಯ ವರೆಗೆ ಜಗತ್ತು ಕಂಡ ಅತ್ಯಂತ ದುಬಾರಿ ಚುನಾವಣೆಯಾಗಿದೆ ಎಂದು <a href="https://www.bloomberg.com/news/articles/2019-06-03/india-s-bitterly-fought-poll-becomes-the-world-s-most-expensive" data-type="link" data-id="https://www.bloomberg.com/news/articles/2019-06-03/india-s-bitterly-fought-poll-becomes-the-world-s-most-expensive">ಬ್ಲೂಮ್‌ಬರ್ಗ್ ವರದಿ</a> ಮಾಡಿದೆ . ಸುಮಾರು 8.7 ಶತಕೋಟಿ ಡಾಲರ್‌ಗಳನ್ನು ಈ ಚುನಾವಣೆಯಲ್ಲಿ ಭಾರತದ ರಾಜಕೀಯ ಪಕ್ಷಗಳು ಖರ್ಚು ಮಾಡಿದ್ದು, 2014ರ ಚುನಾವಣೆಗೆ ಖರ್ಚು ಮಾಡಿದ್ದಕ್ಕಿಂತ ದುಪ್ಪಟ್ಟು ಹಣ ವ್ಯಯಿಸಲಾಗಿದೆ.  </p>



<p>ಎಲೆಕ್ಟೋರಲ್‌ ಬಾಂಡ್‌ಗಳನ್ನು ಪರಿಚಯಿಸಿದಾಗಿನಿಂದಲೂ, ಸಾಮಾಜಿಕ ಕಾರ್ಯಕರ್ತರು ಮೋದಿ ಸರ್ಕಾರದ ಚುನಾವಣಾ ಬಾಂಡ್‌ಗಳ ಯೋಜನೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಯೋಜನೆ ಜಾರಿಗೆ ಬಂದಾಗ ಆಗಿನ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ ಕೇಂದ್ರ ಹಣಕಾಸು ಇಲಾಖೆ ನಿರ್ಲಕ್ಷ್ಯ ಮಾಡಿತ್ತು. ಯಾವುದೇ ರೀತಿಯ ಸಾರ್ವಜನಿಕ ಸಮಾಲೋಚನೆ ನಡೆಸದೆ ಇದನ್ನು ಹೇಗೆ ಜಾರಿಗೆ ತಂದರು ಎಂಬ ಬಗ್ಗೆ ಅನೇಕ ಆರ್ಥಿಕ ತಜ್ಞರು ಪ್ರಶ್ನೆಗಳನ್ನು ಎತ್ತಿದ್ದರು. </p>



<p>ಈ ಯೋಜನೆಯ ಬಗ್ಗೆ ನ್ಯಾಯಾಲಯಗಳಲ್ಲಿ ಪ್ರಶ್ನೆಗಳನ್ನು ಸಲ್ಲಿಸಲಾಯಿತು. ಈ ಯೋಜನೆಯು ಅನಾಮಧೇಯ ವ್ಯಕ್ತಿಗಳಿಂದ ದೇಣಿಗೆಗಳನ್ನು ಸ್ವೀಕರಿಸಲು ಅನುಮತಿ ನೀಡುವ ಮೂಲಕ, ರಾಜಕೀಯ ಪಕ್ಷಗಳು ಮತ್ತು ದೊಡ್ಡ ದೊಡ್ಡ ಉದ್ಯಮಿಗಳ ನಡುವೆ ಅನೈತಿಕ ಸಂಬಂಧವನ್ನು ಏರ್ಪಡಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡಲಿದೆ ಎಂದು ಆರೋಪಿಸಿದ್ದರು. ಸುಮಾರು ಏಳು ವರ್ಷಗಳ ನಂತರ, ಸುಪ್ರೀಂ ಕೋರ್ಟ್ ಆ ಎಲ್ಲಾ ಕಳವಳಗಳನ್ನು ಪರಿಗಣಿಸಿ ಇಲೆಕ್ಟೋರಲ್‌ ಬಾಂಡ್‌ಗಳನ್ನು ರದ್ದು ಮಾಡಿದೆ. ಖರೀದಿಸಿದ ಎಲ್ಲಾ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಿಡುಗಡೆ ಮಾಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ನ್ಯಾಯಾಲಯವು ಆದೇಶಿಸಿದೆ.</p>



<p>(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)  ಚುನಾವಣಾ ಬಾಂಡ್ ಪ್ರಕರಣದಲ್ಲಿ ಮಾರ್ಚ್ 6ರ ಗಡುವನ್ನು ವಿಸ್ತರಿಸುವಂತೆ ಕೋರಿ ಸುಪ್ರೀಂ ಕೋರ್ಟನ್ನು ಸಂಪರ್ಕಿಸಿರುವ ಹಿನ್ನಲೆಯಲ್ಲಿ ಈ ವರದಿ)</p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="YSXEGDWcv0"><a href="https://peepalmedia.com/sbi-asks-supreme-court-for-time-till-june-end-to-hand-over-details-of-electoral-bonds/">ಚುನಾವಣಾ ಬಾಂಡ್‌ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತಲುಪಿದ SBI, ಇದು ಮೋದಿ ಸರ್ಕಾರದ ಕಾಲ ಕಳೆಯುವ ಆಟವೇ?</a></blockquote><iframe class="wp-embedded-content" sandbox="allow-scripts" security="restricted"  title="&#8220;ಚುನಾವಣಾ ಬಾಂಡ್‌ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತಲುಪಿದ SBI, ಇದು ಮೋದಿ ಸರ್ಕಾರದ ಕಾಲ ಕಳೆಯುವ ಆಟವೇ?&#8221; &#8212; Peepal Media" src="https://peepalmedia.com/sbi-asks-supreme-court-for-time-till-june-end-to-hand-over-details-of-electoral-bonds/embed/#?secret=u0MhQvsH3C#?secret=YSXEGDWcv0" data-secret="YSXEGDWcv0" width="600" height="338" frameborder="0" marginwidth="0" marginheight="0" scrolling="no"></iframe>
</div></figure>
]]></content:encoded>
					
		
		
			</item>
	</channel>
</rss>
