<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Ernakulam &#8211; Peepal Media</title>
	<atom:link href="https://peepalmedia.com/tag/ernakulam/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 31 Oct 2023 09:24:01 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Ernakulam &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮೇಲೆ ಕೇರಳ ಪೊಲೀಸ್‌ FIR</title>
		<link>https://peepalmedia.com/fir-against-union-minister-rajeev-chandrasekhar/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 31 Oct 2023 09:24:00 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[Bharatiya Janata Party]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[Ernakulam]]></category>
		<category><![CDATA[Ernakulam District]]></category>
		<category><![CDATA[gaza]]></category>
		<category><![CDATA[Hamas]]></category>
		<category><![CDATA[india]]></category>
		<category><![CDATA[israeli–palestinian conflict]]></category>
		<category><![CDATA[isreal]]></category>
		<category><![CDATA[Isreal attack]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Kerala Police]]></category>
		<category><![CDATA[Kochi blasts]]></category>
		<category><![CDATA[kochin]]></category>
		<category><![CDATA[news]]></category>
		<category><![CDATA[palestinian]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pinarayi vijayan]]></category>
		<category><![CDATA[politics]]></category>
		<category><![CDATA[Rajeev Chandrasekhar]]></category>
		<category><![CDATA[state politics]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[Union minister]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=30877</guid>

					<description><![CDATA[ಬೆಂಗಳೂರು,ಅಕ್ಟೋಬರ್.‌31: ಎರ್ನಾಕುಲಂನ ಕ್ರಿಶ್ಚಿಯನ್ ಧಾರ್ಮಿಕ ಸಂಘಟನೆಯೊಂದರ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇರಳ ಪೊಲೀಸರು FIR ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಕೇರಳ ಪೊಲೀಸ್‌ ಕಾಯಿದೆ ಸೆಕ್ಷನ್ 120 (ಒ) (ಉಪದ್ರವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲಂಘಿಸುವುದು) ಅಡಿಯಲ್ಲಿ ಪ್ರಕರಣ [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್.‌31:</strong> ಎರ್ನಾಕುಲಂನ ಕ್ರಿಶ್ಚಿಯನ್ ಧಾರ್ಮಿಕ ಸಂಘಟನೆಯೊಂದರ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದ ಬಗ್ಗೆ ಹೇಳಿಕೆ ನೀಡಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇರಳ ಪೊಲೀಸರು FIR ದಾಖಲಿಸಿದ್ದಾರೆ.</p>



<p>ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153 ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಕೇರಳ ಪೊಲೀಸ್‌ ಕಾಯಿದೆ ಸೆಕ್ಷನ್ 120 (ಒ) (ಉಪದ್ರವ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಉಲ್ಲಂಘಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.</p>



<p>ಭಾನುವಾರ, ಕಲಮಸ್ಸೆರಿ ಪುರಸಭೆಯ ಪ್ರದೇಶದಲ್ಲಿ ಯೆಹೋವನ ಸಾಕ್ಷಿಗಳ ಕೂಟದಲ್ಲಿ ಎರಡು ದೊಡ್ಡ ಸ್ಫೋಟಗಳು ಸಂಭವಿಸಿದವು. ಜಮ್ರಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್‌ನಲ್ಲಿ ಪ್ರಾರ್ಥನಾ ಸಮಾವೇಶಕ್ಕೆ ರಾಜ್ಯದಾದ್ಯಂತ ಸುಮಾರು 2,500 ಯೆಹೋವನ ಸಾಕ್ಷಿಗಳು ಹಾಜರಾಗಿದ್ದರು. ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ 9.30 ರ ಸುಮಾರಿಗೆ ಸ್ಫೋಟಗಳು ಸಂಭವಿಸಿದವು.</p>



<p>ಇದರ ಬಗ್ಗೆ ದೇಶದಾದ್ಯಂತ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದಂತೆ, ಚಂದ್ರಶೇಖರ್<a href="https://x.com/Rajeev_GoI/status/1718561932066836946?s=20" data-type="link" data-id="https://x.com/Rajeev_GoI/status/1718561932066836946?s=20"> X ಪೋಸ್ಟ್‌ನಲ್ಲಿ</a>, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನವದೆಹಲಿಯಲ್ಲಿ ಇಸ್ರೇಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೆ, &#8220;ಜಿಹಾದ್‌ಗಾಗಿ ಭಯೋತ್ಪಾದಕ ಹಮಾಸ್‌ನ ನೀಡಿದ ಕರೆ ಮುಗ್ಧ ಕ್ರಿಶ್ಚಿಯನ್ನರ ಮೇಲಿನ ದಾಳಿ ಮತ್ತು ಬಾಂಬ್ ಸ್ಫೋಟಗಳಿಗೆ ಕಾರಣವಾಗುತ್ತಿದೆ&#8221; ಎಂದು ಟ್ವೀಟ್‌ ಮಾಡಿದ್ದರು.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="778" height="854" src="https://peepalmedia.com/wp-content/uploads/2023/10/image-58.png" alt="" class="wp-image-30880" style="aspect-ratio:0.9110070257611241;width:349px;height:auto" srcset="https://peepalmedia.com/wp-content/uploads/2023/10/image-58.png 778w, https://peepalmedia.com/wp-content/uploads/2023/10/image-58-273x300.png 273w, https://peepalmedia.com/wp-content/uploads/2023/10/image-58-768x843.png 768w, https://peepalmedia.com/wp-content/uploads/2023/10/image-58-150x165.png 150w, https://peepalmedia.com/wp-content/uploads/2023/10/image-58-300x329.png 300w, https://peepalmedia.com/wp-content/uploads/2023/10/image-58-696x764.png 696w" sizes="(max-width: 778px) 100vw, 778px" /></figure></div>


<p>ಈ ಸ್ಫೋಟ ಸಂಭವಿಸುವ ಸಂದರ್ಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್‌ ವಿಜಯನ್ ಗಾಜಾ ಮೇಲಿನ ಇಸ್ರೇಲ್‌ನ ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವಂತೆ ಕೋರಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.</p>



<p>ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಚಂದ್ರಶೇಖರ್, &#8220;ಕೊಳಕು, ನಾಚಿಕೆಯಿಲ್ಲದ ತುಷ್ಟೀಕರಣ ರಾಜಕೀಯ&#8221; ಪಿಣರಾಯ್‌ ವಿಜಯನ್ ತೊಡಗಿದ್ದಾರೆ ಎಂದು ಆರೋಪಿಸಿದ್ದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನ್ ಮೂಲಭೂತವಾದಿಗಳ ವಿರುದ್ಧ ಸಹಿಷ್ಣುತೆ ತೋರಿದ್ದಾರೆ ಎಂದು ಕಿಡಿಕಾರಿದ್ದರು.</p>



<p>ಅಕ್ಟೋಬರ್ 27 ರಂದು ಮಲಪುರಂನಲ್ಲಿ ಜಮಾತ್-ಎ-ಇಸ್ಲಾಮಿಯ ಯುವ ಘಟಕವಾದ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ವತಿಯಿಂದ ಪ್ಯಾಲಿಸ್ತೇನ್ ಪರ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಹಮಾಸ್‌ನ ಮಾಜಿ ಮುಖ್ಯಸ್ಥ ಖಲೀದ್ ಮಶಾಲ್ ವಿಡಿಯೋ ಕಾನ್ಫರೆನ್ಸ್‌ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದು ವರದಿಯಾಗಿತ್ತು.</p>



<p>ಇಸ್ಲಾಂ ಧರ್ಮದ ಮೂರು ಪವಿತ್ರ ಸ್ಥಳಗಳಲ್ಲಿ ಒಂದಾದ ಜೆರುಸಲೆಮ್‌ನಲ್ಲಿರುವ ಅಲ್-ಅಕ್ಸಾ ಮಸೀದಿಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವ ಪ್ಯಾಲೇಸ್ಟಿನಿಯನ್ ಹೋರಾಟಗಾರರನ್ನು ಪ್ರಪಂಚದಾದ್ಯಂತದ ಜನರು ಬೆಂಬಲಿಸಬೇಕು ಎಂದು ಮಶಾಲ್ ಭಾಷಣದಲ್ಲಿ ಹೇಳಿದ್ದರು.</p>



<p>&#8220;ಇಸ್ರೇಲ್ ನಮ್ಮ ನಿವಾಸಿಗಳ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಮನೆಗಳನ್ನು ಕೆಡವಲಾಗುತ್ತಿದೆ. ಅವರು ಗಾಜಾದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ನಾಶಪಡಿಸಿದ್ದಾರೆ. ಅವರು ಚರ್ಚುಗಳು, ದೇವಾಲಯಗಳು, ವಿಶ್ವವಿದ್ಯಾನಿಲಯಗಳು ಮತ್ತು ವಿಶ್ವಸಂಸ್ಥೆಯ ಕಟ್ಟಡಗಳನ್ನೂ ನಾಶಪಡಿಸುತ್ತಿದ್ದಾರೆ. ಈ ದಾಳಿಯ ಗಾಜಾವನ್ನು ಇಲ್ಲವಾಗಿಸುವುದೇ ಇದರ ಅರ್ಥ, ಮತ್ತು ಅವರು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಗಾಜಾದಲ್ಲಿನ ಹೋರಾಟಗಾರರು ಅವರನ್ನು ತಮ್ಮ ಮಿಲಿಟರಿಯಿಂದ ಸೋಲಿಸಿದ್ದಾರೆ,” ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು.</p>



<p>ಪ್ಯಾಲಿಸ್ತೇನ್ ಹಿತಾಸಕ್ತಿಗಳನ್ನು ಸಮರ್ಥಿಸುವ ಸೋಗಿನಲ್ಲಿ ಸಂಘಟಕರು ಹಮಾಸನ್ನು ವೈಭವೀಕರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ತನಿಖೆಗೆ ಕರೆ ಆಗ್ರಹಿಸಿತ್ತು.</p>



<p>ಇದಾದ ನಂತರ, ಸೋಮವಾರ, ಪಿಣರಾಯ್‌ ವಿಜಯನ್ ಹಮಾಸ್ ನಾಯಕನ ಭಾಷಣವನ್ನು ಪೊಲೀಸರು ಪರಿಶೀಲಿಸುತ್ತಾರೆ ಮತ್ತು ರಾಜೀವ್‌ ಚಂದ್ರಶೇಖರ್ ಅವರನ್ನು &#8220;ಅತ್ಯಂತ ವಿಷಕಾರಿ&#8221; ಎಂದು ಟೀಕಿಸಿದ್ದು ಪಿಟಿಐಯಲ್ಲಿ ವರದಿಯಾಗಿತ್ತು.</p>
]]></content:encoded>
					
		
		
			</item>
		<item>
		<title>ಕೇರಳಕ್ಕೇ ಯಾಕೆ ನಿಫಾ ವೈರಸ್‌ ಬರುತ್ತಿದೆ?</title>
		<link>https://peepalmedia.com/why-kerala-repeatedly-get-affected-by-nipah-virus/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 15 Sep 2023 14:17:06 +0000</pubDate>
				<category><![CDATA[ಆರೋಗ್ಯ]]></category>
		<category><![CDATA[acute encephalitis]]></category>
		<category><![CDATA[asymptomatic]]></category>
		<category><![CDATA[bengalure]]></category>
		<category><![CDATA[conona pandamic]]></category>
		<category><![CDATA[corona]]></category>
		<category><![CDATA[covid]]></category>
		<category><![CDATA[Ernakulam]]></category>
		<category><![CDATA[fever]]></category>
		<category><![CDATA[genotype]]></category>
		<category><![CDATA[Green Templeton College]]></category>
		<category><![CDATA[headache]]></category>
		<category><![CDATA[health]]></category>
		<category><![CDATA[ICMR]]></category>
		<category><![CDATA[india]]></category>
		<category><![CDATA[Indian Council of Medical Research]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kerala]]></category>
		<category><![CDATA[kozhikode]]></category>
		<category><![CDATA[Malappuram]]></category>
		<category><![CDATA[Malaysia]]></category>
		<category><![CDATA[myalgia]]></category>
		<category><![CDATA[National Institute of Virology]]></category>
		<category><![CDATA[news]]></category>
		<category><![CDATA[Nipah virus]]></category>
		<category><![CDATA[NIV]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pneumonia]]></category>
		<category><![CDATA[politics]]></category>
		<category><![CDATA[Singapore]]></category>
		<category><![CDATA[state politics]]></category>
		<category><![CDATA[West Bengal]]></category>
		<category><![CDATA[WHO]]></category>
		<category><![CDATA[world health organisation]]></category>
		<category><![CDATA[writing]]></category>
		<category><![CDATA[zoonotic virus]]></category>
		<guid isPermaLink="false">https://peepalmedia.com/?p=27939</guid>

					<description><![CDATA[ಬೆಂಗಳೂರು, ಸಪ್ಟೆಂಬರ್.‌15: ಕೇರಳದ ಕೋಯಿಕ್ಕೋಡ್‌ನಲ್ಲಿ ಮಾರಣಾಂತಿಕ ನಿಪಾ ವೈರಸ್‌ನ (Nipah virus)&#160; ಪತ್ತೆಯಾಗಿದ್ದು, ಸೋಂಕು ದೃಢಪಟ್ಟಿರುವ ಐದು ಜನರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸುಮಾರು 700 ಮಂದಿ ಶಂಕಿತ ಸೋಂಕಿತರಾಗಿದ್ದು, ಅವರಲ್ಲಿ 76 ಮಂದಿಯಿಂದ ಹೆಚ್ಚಿನ ಅಪಾಯವಿದೆ ಗುರುತಿಸಲಾಗಿದೆ. ಆರನೇ ಬಾರಿಗೆ ನಿಫಾ ವೈರಸ್‌ ಭಾರತಕ್ಕೆ! ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ ನಿಫಾ ವೈರಸ್‌ನಿಂದ ಸಂಭವಿಸಿದ ಮರಣ ಪ್ರಮಾಣ &#160;40% ನಿಂದ 75%. 1999ರಲ್ಲಿ ಮಲೇಷ್ಯಾದಲ್ಲಿ (Malaysia) ಮೊದಲ ಬಾರಿಗೆ ಕಾಣಿಸಿಕೊಂಡ ನಿಫಾ ವೈರಸ್‌ ಭಾರತದಲ್ಲಿ ಮೊದಲ [&#8230;]]]></description>
										<content:encoded><![CDATA[
<p>ಬೆಂಗಳೂರು, ಸಪ್ಟೆಂಬರ್.‌15: ಕೇರಳದ ಕೋಯಿಕ್ಕೋಡ್‌ನಲ್ಲಿ ಮಾರಣಾಂತಿಕ ನಿಪಾ ವೈರಸ್‌ನ (Nipah virus)&nbsp; ಪತ್ತೆಯಾಗಿದ್ದು, ಸೋಂಕು ದೃಢಪಟ್ಟಿರುವ ಐದು ಜನರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಸುಮಾರು 700 ಮಂದಿ ಶಂಕಿತ ಸೋಂಕಿತರಾಗಿದ್ದು, ಅವರಲ್ಲಿ 76 ಮಂದಿಯಿಂದ ಹೆಚ್ಚಿನ ಅಪಾಯವಿದೆ ಗುರುತಿಸಲಾಗಿದೆ.</p>



<p>ಆರನೇ ಬಾರಿಗೆ ನಿಫಾ ವೈರಸ್‌ ಭಾರತಕ್ಕೆ!</p>



<p>ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ ನಿಫಾ ವೈರಸ್‌ನಿಂದ ಸಂಭವಿಸಿದ ಮರಣ ಪ್ರಮಾಣ &nbsp;40% ನಿಂದ 75%. 1999ರಲ್ಲಿ ಮಲೇಷ್ಯಾದಲ್ಲಿ (Malaysia) ಮೊದಲ ಬಾರಿಗೆ ಕಾಣಿಸಿಕೊಂಡ ನಿಫಾ ವೈರಸ್‌ ಭಾರತದಲ್ಲಿ ಮೊದಲ ಎರಡು ಬಾರಿ ಪತ್ತೆಯಾಗಿದ್ದು ಪಶ್ಚಿಮ ಬಂಗಾಳದಲ್ಲಿ (West Bengal). ನಿಫಾದ ಮಾರಣಾಂತಿಕ ದಾಳಿಯಾಗಿದ್ದು 2೦೦1ರಲ್ಲಿ. ಆಗ ಪ.ಬಂಗಾಳದಲ್ಲಿ 66 ಕೇಸ್‌ಗಳು ದಾಖಲಾಗಿ, 45 ಜನರು ಸಾವನ್ನಪ್ಪಿದ್ದರು. 2007 ರಲ್ಲಿ ಮತ್ತೆ ಪಶ್ಚಿಮ ಬಂಗಾಳದಲ್ಲಿ ಕಾಣಿಸಿಕೊಂಡ ಈ ವೈರಸ್‌ನಿಂದ ಐದು ಜನರು ಸಾವನ್ನಪ್ಪಿದ್ದರು.</p>



<p>2007ರ ನಂತರ ಹತ್ತು ವರ್ಷಗಳಷ್ಟು ವಿರಾಮ ತೆಗೆದುಕೊಂಡ ಈ ಸೋಂಕು ಮತ್ತೆ 2018ರಲ್ಲಿ ದಾಂಗುಡಿ ಇಟ್ಟದ್ದು ಕೇರಳಕ್ಕೆ. &nbsp;ಕೋಯಿಕ್ಕೋಡ್‌ (Kozhikode) ಹಾಗೂ ಮಲಪ್ಪುರಂ (Malappuram)ನಲ್ಲಿ 18 ಕೇಸ್‌ಗಳು ಪತ್ತೆಯಾಗಿ, 17ಜನರು ಸಾವನ್ನಪ್ಪಿದ್ದರು. ಇದಾದ ನಂತರದ ವರ್ಷದಲ್ಲಿ ಎರ್ನಾಕುಲಂ (Ernakulam)ನಲ್ಲಿ ಓರ್ವ ವ್ಯಕ್ತಿಗೆ ಸೋಂಕು ತಗುಲಿ ಬದುಕುಳಿದರು. 2021 ರಲ್ಲಿ ಕೇರಳದ ಕೋಯಿಕ್ಕೋಡಿನಲ್ಲಿ ವ್ಯಕ್ತಿಯೋರ್ವರಿಗೆ ಸೋಂಕು ತಗುಲಿ, ಸಾವನ್ನಪ್ಪಿದ್ದರು.</p>



<p>ನಿಪಾ ಒಂದು ಝೂನೋಟಿಕ್ ವೈರಸ್ (zoonotic virus) , ಅಂದರೆ ಪ್ರಾಣಿಗಳಿಂದ ಮನುಷ್ಯರಿಗೆ ಇದು ಹರಡುತ್ತದೆ. ನಿಫಾ ವೈರಸ್‌ ಹಣ್ಣುಗಳನ್ನು ತಿನ್ನುವ ಬಾವಲಿ (bats) ಗಳಿಂದ ಹರಡಿದೆ. ಸೋಂಕಿತ ಆಹಾರ ಸೇವನೆ ಅಥವಾ ನೇರವಾಗಿ ಸೋಂಕಿತರ ಜೊತೆಗೆ ಸಂಪರ್ಕ ಇಟ್ಟುಕೊಂಡರೆ ನಿಫಾ ಹರಡುವ ಸಾಧ್ಯತೆಗಳಿವೆ. &nbsp;ಮಲೇಷ್ಯಾದಲ್ಲಿ ಮೊದಲ ಬಾರಿಗೆ ನಿಫಾ ಬಂದಾಗ, ಸಿಂಗಾಪುರಕ್ಕೂ (&nbsp;Singapore) ಹರಡಿತ್ತು. ಆಗ ಹಂದಿಗಳಿಂದ ಮಾನವರಿಗೆ ಈ ಸೋಂಕು ಹರಡಿತು. ಹಂದಿಗಳನ್ನು ಸ್ಪರ್ಷಿಸುವುದರಿಂದ, ಅವುಗಳ ಜೊಲ್ಲು, ಇತರ ಅಂಗಾಶಗಳ ಸ್ಪರ್ಷದಿಂದ ಹರಡಿತು.</p>



<p>ನಿಫಾ ಸೋಂಕು ತಗುಲಿದ ಆರಂಭದಲ್ಲಿ ಜ್ವರ, ತಲೆನೋವು , ಮೈಯಾಲ್ಜಿಯಾ (myalgia) ಅಥವಾ ಸ್ನಾಯು ನೋವು, ವಾಂತಿ ಮತ್ತು ಗಂಟಲು ನೋವು ಮುಂತಾದ ರೋಗಲಕ್ಷಣಗಳನ್ನು ಕಾಣಿಸಿಕೊಳ್ಳುತ್ತದೆ. ಆದರೆ ಯಾವುದೇ ರೋಗ ಲಕ್ಷಣಗಳನ್ನು ತೋರಿಸದೆಯೂ (asymptomatic) ಇರಬಹದು. &nbsp;</p>



<p>ಆರಂಭಿಕ ಹಂತದಲ್ಲೇ ಸೋಂಕಿತರು ತಲೆತಿರುಗುವಿಕೆ, ಅರೆನಿದ್ರಾವಸ್ಥೆ, ಪ್ರಜ್ಞೆ ಬದಲಾಗುವುದು ಮತ್ತು ತೀವ್ರವಾದ ಎನ್ಸೆಫಾಲಿಟಿಸ್ (ಮೆದುಳಿನ ಉರಿಯೂತ &#8211; acute encephalitis) ಮುಂತಾದ ನರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.</p>



<p>ಕೆಲವರಿಗೆ ನ್ಯುಮೋನಿಯಾ (&nbsp;pneumonia) ಮತ್ತು ತೀವ್ರವಾದ ಉಸಿರಾಟದ ತೊಂದರೆ ಮತ್ತು ಎನ್ಸೆಫಾಲಿಟಿಸ್ ಸೇರಿದಂತೆ ಉಸಿರಾಟದ ಸಮಸ್ಯೆಗಳು ಬರಬಹುದು. 24 ರಿಂದ 48 ಗಂಟೆಗಳ ಒಳಗೆ ಕೋಮಾಕ್ಕೆ ಹೋಗುವ ಸಾಧ್ಯತೆಯೂ ಇದೆ.</p>



<p>ಸೋಂಕು ಅರಂಭವಾದ ದಿನದಿಂದ ನಾಲ್ಕರಿಂದ ಹದಿನಾಲ್ಕು ದಿನಗಳ ಕಾಲ ಇರುತ್ತದೆ. ಒಮ್ಮೊಮ್ಮೆ 45 ದಿನಗಳ &nbsp;ಕಾಲ ಕೂಡ ಇರಬಹುದು. ತೀವ್ರವಾದ ಎನ್ಸೆಫಾಲಿಟಿಸ್‌ನಿಂದ ಬದುಕುಳಿದವರು ಚೇತರಿಸಿಕೊಳ್ಳಲು ಸಮಯ ಬೇಕು. ಅವರಿಗೆ ದೀರ್ಘಕಾಲಿಕ ನರ ಸಂಬಂಧಿ ಸಮಸ್ಯೆಗಳು ಬರುವ ಸಾಧ್ಯತೆಗಳೂ ವರದಿಯಾಗಿವೆ. ಪ್ರಸ್ತುತ ನಿಪಾ ವೈರಸ್‌ಗೆ ನಿರ್ದಿಷ್ಟವಾದ ಯಾವುದೇ ಔಷಧಿಗಳು ಅಥವಾ ಲಸಿಕೆಗಳು ಲಭ್ಯವಿಲ್ಲ. ನಿಪಾ ವೈರಸ್ ಸೋಂಕಿತ ಜನರೊಂದಿಗೆ ಅಸುರಕ್ಷಿತ ಸಂಪರ್ಕವನ್ನು ಇಟ್ಟುಕೊಳ್ಳದೇ ಇರುವುದು ಮಾರ್ಗ.</p>



<p><strong>ಕೇರಳವೇ ಯಾಕೆ ಬಲಿಯಾಗುತ್ತಿದೆ?</strong></p>



<p>ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (&nbsp;Indian Council of Medical Research -ICMR) ನ ವಿಜ್ಞಾನಿಯೋರ್ವರು ದಿ ಪ್ರಿಂಟ್‌ಗೆ ನಿಫಾ ವೈರಸ್‌ ಹರಡುವಿಕೆಯ ಬಗ್ಗೆ ರಾಷ್ಟ್ರೀಯ ವೈರಾಲಜಿ ಸಂಸ್ಥೆ (&nbsp;National Institute of Virology &#8211; NIV) ನಡೆಸುತ್ತಿರುವ ಸಂಶೋಧನೆಗಳ ಬಗ್ಗೆ ತಿಳಿಸಿರುವ ಮಾಹಿತಿ ವರದಿಯಾಗಿದೆ. ಬಾವಲಿಗಳ ಕಾರಣದಿಂದಾಗಿ ಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಬಿಹಾರ, ಅಸ್ಸಾಂ, ಮೇಘಾಲಯ, ತಮಿಳುನಾಡು ಮತ್ತು ಗೋವಾ, ಕೇರಳ ಮತ್ತು ಪಶ್ಚಿಮ ಬಂಗಾಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ನಿಫಾ ವೈರಸ್‌ ಹರಡಿರುವ ಬಗ್ಗೆ ತಿಳಿಸಿದ್ದಾರೆ.</p>



<p>&#8220;ಈ ಸೋಂಕು ಕೆಲವು ರಾಜ್ಯಗಳಿಗೆ ಮಾತ್ರ ಏಕೆ ಸೀಮಿತವಾಗಿದೆ ಎಂಬ ಪ್ರಶ್ನೆಗೆ ಉತ್ತರವನ್ನು ಅಲ್ಲಿನ ಆಹಾರ ಪದ್ಧತಿ ಅಥವಾ ಪ್ರಾಣಿ-ಮನುಷ್ಯರ ನಡುವಿನ ಸಂಪರ್ಕ ಹಾಗೂ ಸಾಂಸ್ಕೃತಿಕ ಕಾರಣಗಳನ್ನು ನೀಡಿ ಉತ್ತರಿಸಬಹುದು&#8221; ಎಂದು ಅವರು ತಿಳಿಸಿದ್ದಾರೆ.</p>



<p>&#8220;ಬಾವಲಿಗಳು ಬಹಳ ದೂರ ಹಾರುವುದಿಲ್ಲ. ಅರಣ್ಯನಾಶ ಮತ್ತು ಹವಾಮಾನ ಬದಲಾವಣೆ ಕಾರಣಗಳಿಂದ ಬಾವಲಿಗಳು ಮನುಷ್ಯರಿಗೆ ಹತ್ತಿರವಿದ್ದು ಬದುಕುತ್ತವೆ. ಆ ಪ್ರದೇಶದಲ್ಲಿ ಈ ಬಾವಲಿಗಳಿಂದಲೇ ವೈರಸ್ ಹರಡುವ ಸಾಧ್ಯತೆಯಿದೆ,” ಎಂಬ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಗ್ರೀನ್ ಟೆಂಪಲ್ಟನ್ ಕಾಲೇಜಿನಲ್ಲಿ (Green Templeton College) ಫೆಲೋ ಮತ್ತು ಅಶೋಕ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿರುವ ಹಿರಿಯ ವೈರಾಲಜಿಸ್ಟ್ ಡಾ ಶಾಹಿದ್ ಜಮೀಲ್ (Dr Shahid Jameel) ಅವರ ಅಭಿಪ್ರಾಯವನ್ನು ದಿ ಪ್ರಿಂಟ್‌ ವರದಿ ಮಾಡಿದೆ.</p>



<p>ಜಲೀಲ್‌ ಪ್ರಕಾರ ಈ ಪ್ರದೇಶಗಳ ಜನರು ಬೆಳಗ್ಗೆ ತಾಜಾ ಕಳ್ಳು (ಶೇಂದಿ) ಹಾಗೂ ಹಣ್ಣಿನ ರಸ ಕುಡಿಯುವ ಸಂಸ್ಕೃತಿಯವರು. ಇದೇ ಹಣ್ಣುಗಳಿಗೆ ರಾತ್ರಿ ಬಾವಲಿಗಳು ಬಾಯಿಹಾಕಿರುತ್ತವೆ. ಬಾವಲಿ ಹಾಗೂ ಮಾನವರ ಈ ಸಂಪರ್ಕ ನಿಫಾ ವೈರಸ್‌ ಹರಡಲು ಕಾರಣವಾಗಿರಬಹುದು. ಋತುಮಾನದ ಕಾರಣದಿಂದಾಗಿ ಬಾವಲಿಗಳು ಹೆಚ್ಚು ವೈರಸ್‌ ಹರಡಬಹುದು.</p>



<p>ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಕೇರಳದಲ್ಲಿ ಕಂಡುಬರುವ ವೈರಸ್ ಬಾಂಗ್ಲಾದೇಶದ ರೂಪಾಂತರವಾಗಿದ್ದು, ಇದರಿಂದ ಹೆಚ್ಚಿನ ಮರಣ ಸಂಭಿವಿಸುವ ಸಾಧ್ಯತೆ ಇದೆ ಎಂದಿರುವ ಹೇಳಿಕೆಗಳು ವರದಿಯಾಗಿವೆ.</p>



<p>ಈ ವರೆಗೆ ಮೂರು ವಿಭಿನ್ನ ನಿಪಾ ವೈರಸ್ ರೂಪಾಂತರಗಳನ್ನು ಗುರುತಿಸಲಾಗಿದೆ. ಅವು &#8211; ಮಲೇಷ್ಯಾ M ಜೀನೋಟೈಪ್, ಬಾಂಗ್ಲಾದೇಶ B ಜೀನೋಟೈಪ್ ಮತ್ತು ಭಾರತ I ಜೀನೋಟೈಪ್ (Malaysia M genotype, Bangladesh B genotype India I genotype). ಕೇರಳದಲ್ಲಿ ಪತ್ತೆಯಾಗಿರುವುದು ಇಂಡಿಯಾ I ಜೀನೋಟೈಪ್ ಎಂದು ತೋರುತ್ತದೆ&#8221; ಎಂದು ಐಸಿಎಂಆರ್‌ ವಿಜ್ಞಾನಿಗಳು ತಿಳಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
