<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Fact check &#8211; Peepal Media</title>
	<atom:link href="https://peepalmedia.com/tag/fact-check/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 07 May 2025 10:27:18 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Fact check &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಆಪರೇಷನ್‌ ಸಿಂಧೂರ್: ಪಾಕಿಸ್ತಾನದ ಸುಳ್ಳು ಸುದ್ದಿಗಳನ್ನು ರಾತ್ರೋ ರಾತ್ರಿ ಬಯಲಿಗೆಳೆದ ಮೊಹಮ್ಮದ್ ಜುಬೈರ್</title>
		<link>https://peepalmedia.com/operation-sindoora-mohammad-zubair-exposed-pakistans-fake-news-overnight/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 07 May 2025 10:25:16 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಸುಳ್ಳು ಸುದ್ದಿ ಪತ್ತೆ]]></category>
		<category><![CDATA[airforce]]></category>
		<category><![CDATA[alt news]]></category>
		<category><![CDATA[Fact check]]></category>
		<category><![CDATA[Fake news]]></category>
		<category><![CDATA[indian army]]></category>
		<category><![CDATA[Mohammed Zubair]]></category>
		<category><![CDATA[operation sindhur]]></category>
		<category><![CDATA[Pakistan]]></category>
		<guid isPermaLink="false">https://peepalmedia.com/?p=58437</guid>

					<description><![CDATA[ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ನೆಲೆಗಳ ಮೇಲೆ ಭಾರತ ನಡೆಸಿದ ಮಿಲಿಟರಿ ದಾಳಿಯ ನಂತರ ಸುಳ್ಳು ಸುದ್ದಿಗಳ ಫ್ಯಾಕ್ಟ್‌ ಚೆಕ್ಕರ್‌ ಮೊಹಮ್ಮದ್ ಜುಬೈರ್ ಆನ್‌ಲೈನ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆಪರೇಷನ್ ಸಿಂಧೂರ್ ನಡೆಯುತ್ತಿದ್ದಂತೆ, ಮೊಹಮ್ಮದ್ ಜುಬೈರ್ ರಾತ್ರಿ ಹೊರಬರುತ್ತಿದ್ದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಡುತ್ತಿದ್ದ ಸುಳ್ಳು ಸುದ್ದಿಗಳನ್ನು ಬಯಲಿಗೆಳೆದಿದ್ದಾರೆ. ಪಾಕಿಸ್ತಾನ ಆರಂಭಿಸಿದ ಸುಳ್ಳು ಮಾಹಿತಿ ಹರಡುವ ತಂತ್ರವನ್ನು ಜುಬೈರ್‌ ರಾತ್ರೋ ರಾತ್ರಿ ಬಟಾ ಬಯಲು ಮಾಡಿದ್ದಾರೆ. ರೈಟ್-ವಿಂಗ್ ಐಟಿ ಸೆಲ್‌ಗಳಿಂದ ಸತತ ಆನ್‌ಲೈನ್‌ ದಾಳಿಗಳಿಗೆ ಒಳಗಾಗುತ್ತಿದ್ದ ಜುಬೈರ್‌ [&#8230;]]]></description>
										<content:encoded><![CDATA[
<p>ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ನೆಲೆಗಳ ಮೇಲೆ ಭಾರತ ನಡೆಸಿದ ಮಿಲಿಟರಿ ದಾಳಿಯ ನಂತರ ಸುಳ್ಳು ಸುದ್ದಿಗಳ ಫ್ಯಾಕ್ಟ್‌ ಚೆಕ್ಕರ್‌ ಮೊಹಮ್ಮದ್ ಜುಬೈರ್ ಆನ್‌ಲೈನ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆಪರೇಷನ್ ಸಿಂಧೂರ್ ನಡೆಯುತ್ತಿದ್ದಂತೆ, ಮೊಹಮ್ಮದ್ ಜುಬೈರ್ ರಾತ್ರಿ ಹೊರಬರುತ್ತಿದ್ದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಡುತ್ತಿದ್ದ ಸುಳ್ಳು ಸುದ್ದಿಗಳನ್ನು ಬಯಲಿಗೆಳೆದಿದ್ದಾರೆ.  </p>



<p>ಪಾಕಿಸ್ತಾನ ಆರಂಭಿಸಿದ ಸುಳ್ಳು ಮಾಹಿತಿ ಹರಡುವ ತಂತ್ರವನ್ನು ಜುಬೈರ್‌ ರಾತ್ರೋ ರಾತ್ರಿ ಬಟಾ ಬಯಲು ಮಾಡಿದ್ದಾರೆ. ರೈಟ್-ವಿಂಗ್ ಐಟಿ ಸೆಲ್‌ಗಳಿಂದ ಸತತ ಆನ್‌ಲೈನ್‌  ದಾಳಿಗಳಿಗೆ ಒಳಗಾಗುತ್ತಿದ್ದ ಜುಬೈರ್‌ ಈಗ ಪಾಕಿಸ್ತಾನದ ಸುಳ್ಳು ಸುದ್ದಿಗಳ ಬಣ್ಣವನ್ನು ಕಳಚಿದ್ದಾರೆ.  ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ಹಮೀದ್ ಮಿರ್ ಅವರಂತಹ ಹಿರಿಯ ಪತ್ರಕರ್ತರು ಹಂಚಿಕೊಂಡಿರುವ ತಪ್ಪು ಮಾಹಿತಿಯನ್ನು ಅವರು ಸುಳ್ಳೆಂದು ಸಾಬೀತು ಮಾಡಿದ್ದಾರೆ.</p>



<p>ಆಲ್ಟ್ ನ್ಯೂಸ್ ಸಂಸ್ಥಾಪಕರಾಗಿರುವ ಇವರು, ಭಾರತ ನಡೆಸಿದ ದಾಳಿಯ ನಂತರ ಪಾಕಿಸ್ತಾನ ಹರಡಲು ಆರಂಭಿಸಿದ ತಪ್ಪು ಮಾಹಿತಿ 90% ಪಾಕಿಸ್ತಾನಿ ಖಾತೆಗಳಿಂದ ಬಂದಿದೆ ಎಂದು ಹೇಳಿದ್ದಾರೆ.  </p>



<p>X ನಲ್ಲಿ, ಜುಬೈರ್ ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯಂತೆ ನಟಿಸುವ ಪಾಕಿಸ್ತಾನಿ ಖಾತೆಗಳ ಪಟ್ಟಿಯನ್ನು ಸಹ <a href="https://x.com/zoo_bear/status/1919930898159698383">ಹಂಚಿಕೊಂಡಿದ್ದಾರೆ</a> . ಅಂತಹ ಒಂದು ಖಾತೆಯ ಹೆಸರು ಅಡ್ಮಿರಲ್ ಅರುಣ್ ಪ್ರಕಾಶ್, ಈತ ತನ್ನನ್ನು ತಾನು ಮಾಜಿ ನೌಕಾಪಡೆಯ ನೌಕರ ಎಂದು ಬರೆದುಕೊಂಡಿದ್ದ,  &#8220;ಭಾರತ ನನ್ನ ರಕ್ತದಲ್ಲಿದೆ&#8221; ಎಂದು ತನ್ನ ಬಯೋದಲ್ಲಿ ಹೇಳಿಕೊಂಡಿದ್ದಾನೆ.  </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Beware! These are Pakistani propaganda accounts pretending to be Indian Army Personals. <br>Don&#39;t amplify their tweets. <a href="https://t.co/uhoYFDvbUM">pic.twitter.com/uhoYFDvbUM</a></p>&mdash; Mohammed Zubair (@zoo_bear) <a href="https://twitter.com/zoo_bear/status/1919930898159698383?ref_src=twsrc%5Etfw">May 7, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಮೂರನೇ ಪರಿಶೀಲಿಸಿದ ಎಕ್ಸ್ ಖಾತೆಯು ತನ್ನನ್ನು ತಾನು ಹೆಮ್ಮೆಯ ಭಾರತೀಯ ಮತ್ತು &#8220;ಕಾಂಗ್ರೆಸ್ ಬೆಂಬಲಿಗ&#8221; ಎಂದು ಕರೆದುಕೊಂಡಿದೆ. ಈ ಖಾತೆಯಿಂದ ಹಂಚಿಕೊಳ್ಳಲಾದ ನಕಲಿ ಸುದ್ದಿಗಳನ್ನು <a href="https://x.com/zoo_bear/status/1919933118104117597/photo/1">ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್ ಶೇರ್‌ ಮಾಡಿದ್ದರು</a>.</p>



<p>&#8220;ನಮ್ಮ ಪಡೆಗಳು ನಡೆಸಿದ ಆಪರೇಷನ್ ಸಿಂದೂರ್ ನಂತರ, ರಕ್ತಸಿಕ್ತ ಪಾಕಿಸ್ತಾನಿಗಳು ಅಖ್ನೂರ್ ಬಳಿ 1 ರಫೇಲ್ ಮತ್ತು 1 ಸು -30 ಅನ್ನು ಹೊಡೆದುರುಳಿಸಿದರು. ಮತ್ತು ನಮ್ಮ ಬ್ರಿಗೇಡ್ ಪ್ರಧಾನ ಕಚೇರಿಯನ್ನು ನಾಶಪಡಿಸಿದರು&#8221; ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಪೋಸ್ಟ್‌ ಅನ್ನು ಹಮೀದ್‌ ಮೀರ್‌ ರಿಟ್ವೀಟ್‌ ಮಾಡಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">So Pak Senior Journalist <a href="https://twitter.com/HamidMirPAK?ref_src=twsrc%5Etfw">@HamidMirPAK</a> is amplifying tweets by <a href="https://twitter.com/Tiju0Prakash?ref_src=twsrc%5Etfw">@Tiju0Prakash</a> whose earlier I&#39;d was @tiju786 ( A Pakistan propaganda account pretending to be Congress Supporter). 😏 <a href="https://t.co/pUJPlafWq6">pic.twitter.com/pUJPlafWq6</a></p>&mdash; Mohammed Zubair (@zoo_bear) <a href="https://twitter.com/zoo_bear/status/1919933118104117597?ref_src=twsrc%5Etfw">May 7, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಈ ಬಗ್ಗೆ ಸತ್ಯ ಪರಿಶೀಲನೆಗೆ ಇಳಿದ ಜುಬೈರ್‌ ಈ ಭಾರತೀಯ ವೇಷದ ನಕಲಿ ಪಾಕಿಸ್ತಾನಿ ಎಕ್ಸ್‌ ಹ್ಯಾಂಡಲ್‌ನ ನೈಜತೆಯನ್ನು ಬಯಲಿಗೆಳೆದರು.</p>



<p>ಪಾಕಿಸ್ತಾನದ ಪ್ರತೀಕಾರದ ಪುರಾವೆಯಾಗಿ ಹಂಚಿಕೊಳ್ಳಲಾಗುತ್ತಿರುವ ಹಲವಾರು ದೃಶ್ಯಗಳು ಹಳೆಯ ಘಟನೆಗಳಾಗಿದ್ದು, ಅವುಗಳಲ್ಲಿ ಹಲವು ಗಾಜಾದ ವೀಡಿಯೋಗಳಾಗಿವೆ. </p>



<p>&#8220;ಕೆಲವು ಗಾಜಾ ಮತ್ತು ಇಸ್ರೇಲ್‌ನಿಂದ ಬಂದಿವೆ, ಮತ್ತು ಭಾರತ ಮತ್ತು ಪಾಕಿಸ್ತಾನದ ಹಳೆಯ ಫೋಟೋಗಳು ಮತ್ತು ಘಟನೆಗಳು ಸಹ ಬಂದಿವೆ&#8221; ಎಂದು ಜುಬೈರ್ ಹೇಳಿದ್ದು, ಹರಿದಾಡುತ್ತಿರುವ ಕೆಲವು ದೃಶ್ಯಗಳು ಇರಾನ್‌ನಿಂದಲೂ ಬಂದಿವೆ ಎಂದು ಹೇಳಿದ್ದಾರೆ. </p>



<p>ಮೇ 4 ರವರೆಗೆ, ಪಾಕಿಸ್ತಾನದಲ್ಲಿ X ಅನ್ನು ನಿಷೇಧಿಸಲಾಗಿತ್ತು. ಅದರ ಈ ನಿಷೇಧವನ್ನು ತೆಗೆದು ಹಾಕಿದ ನಂತರ ಸುಳ್ಳು ಸುದ್ದಿ ಹರಡಲು ವ್ಯಾಪಕವಾಗಿ ಬಳಕೆಯಾಯಿತು.</p>



<p>&#8220;ಪ್ರಚಾರ ಮತ್ತು ಪ್ರಭಾವಿ ಖಾತೆಗಳು ಎರಡೂ ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ನಮ್ಮ ಮೂಲಗಳಿಂದ ನಮಗೆ ತಿಳಿದಾಗ, ನಾನು ಸತ್ಯ ಪರಿಶೀಲನೆ ಮಾಡಲು ಪ್ರಾರಂಭಿಸಿದೆ. ಅಲ್ಗಾರಿದಮ್ ನನಗೆ ಸಹಾಯ ಮಾಡಿತು,&#8221; ಎಂದು ಜುಬೈರ್ ಹೇಳಿದರು. </p>



<p>ಭಾರತ-ಪಾಕಿಸ್ತಾನ ಬಿಕ್ಕಟ್ಟಿನ ಹಿಂದಿನ ಅಧ್ಯಾಯವಾದ ಪುಲ್ವಾಮಾ ಮತ್ತು ಪ್ರತೀಕಾರದ ಬಾಲಕೋಟ್ ದಾಳಿಯಲ್ಲಿ ಎರಡೂ ಕಡೆಯಿಂದಲೂ ತಪ್ಪು ಮಾಹಿತಿ ಹರಡಲಾಗುತ್ತಿತ್ತು ಎಂದು ಅವರು ಹೇಳಿದರು.</p>



<p>ಭಾರತದಲ್ಲಿ ಕೂಡ ಎಕ್ಸ್, ವಿಶೇಷವಾಗಿ ಸಂಘರ್ಷದ ಸಮಯದಲ್ಲಿ, ತನ್ನ ನಕಲಿ ಮತ್ತು ಕೃತಕ ನಿರೂಪಣೆಗಳ ಪ್ರಚಾರಕ್ಕೆ ಕುಖ್ಯಾತವಾಗಿದೆ. ಉದಾಹರಣೆಗೆ, ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಸಮಯದಲ್ಲಿ, ಭಾರತೀಯ ಎಕ್ಸ್ ಖಾತೆಗಳಲ್ಲಿ ನಕಲಿ ಸುದ್ದಿಗಳೇ ತುಂಬಿದ್ದವು.  ಇವುಗಳ ಸುಳ್ಳನ್ನು ಬಯಲಿಗೆಳೆದ ಜುಬೈರ್‌ ಅವರನ್ನು ಭಾರತದಲ್ಲಿ ʼಪಾಕಿಸ್ತಾನಿʼ ಎಂದೆಲ್ಲಾ ಕರೆದಿದ್ದರು. ಈಗ ಪಾಕಿಸ್ತಾನದ ನಕಲಿ ಸುದ್ದಿಗಳನ್ನು ಬಯಲಿಗೆಳೆದು ತಮ್ಮ ವೃತ್ತಿನಿಷ್ಠೆಯನ್ನು ಮೆರೆದಿದ್ದಾರೆ. </p>



<p>ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜುಬೈರ್‌ ಅವರನ್ನು ಜನರು ಪ್ರಶಂಸೆ ಮಾಡುತ್ತಿದ್ದಾರೆ. </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">boss Zubair -my deep respects 🙏🙏🙏<br><br>fills my heart with pain to realize that your own countrymen give you gaalis daily. daily non-stop. call you anti-national, pakistani etc etc and feel proud to do this. <br><br>yet you soldier on. without getting any pat on the back. i admire Modi…</p>&mdash; Puneet Sharma (@PuneetSharmaX) <a href="https://twitter.com/PuneetSharmaX/status/1919965351351042210?ref_src=twsrc%5Etfw">May 7, 2025</a></blockquote><script async src="https://platform.twitter.com/widgets.js" charset="utf-8"></script>
</div></figure>
]]></content:encoded>
					
		
		
			</item>
		<item>
		<title>ಸುಳ್ಳು ಸುದ್ದಿ ಪತ್ತೆ ವ್ಯವಸ್ಥೆ ನಿಲ್ಲಿಸಲಿರುವ ಮೆಟಾ: ಭಾರತದಲ್ಲಿ ಏನಾಗಬಹುದು?</title>
		<link>https://peepalmedia.com/meta-to-stop-fake-news-detection-system-what-will-happen-in-india/</link>
		
		<dc:creator><![CDATA[Charan Aivarnad]]></dc:creator>
		<pubDate>Sat, 11 Jan 2025 11:36:50 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[Donald Trump]]></category>
		<category><![CDATA[facebook]]></category>
		<category><![CDATA[Fact check]]></category>
		<category><![CDATA[fact checking]]></category>
		<category><![CDATA[Fake news]]></category>
		<category><![CDATA[Instagram]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[meta]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[social media]]></category>
		<category><![CDATA[thread]]></category>
		<category><![CDATA[twitter]]></category>
		<category><![CDATA[whatsaap]]></category>
		<category><![CDATA[X]]></category>
		<guid isPermaLink="false">https://peepalmedia.com/?p=52117</guid>

					<description><![CDATA[ಜನವರಿ 7, 2025 ಮಂಗಳವಾರ ಥರ್ಡ್‌-ಪಾರ್ಟಿ-ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು ನಿಲ್ಲಿಸುವುದಾಗಿ ಮೆಟಾ ಘೋಷಿಸಿದೆ. ಇದನ್ನು ಅಮೇರಿಕಾದಿಂದ ಆರಂಭಿಸಲು ತೀರ್ಮಾನಿಸಿದೆ. ಈ ಮೂಲಕ 130 ದೇಶಗಳ 90 ಸಂಸ್ಥೆಗಳ ಜೊತೆಗೆ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಥ್ರೆಡ್‌ನಲ್ಲಿ ಸುಳ್ಳು ಸುದ್ದಿ ಪತ್ತೆಗಾಗಿ ಮಾಡಿಕೊಂಡಿದ್ದ ಒಪ್ಪಂದವನ್ನು ಮೆಟಾ ನಿಲ್ಲಿಸಲಿದೆ. ಮೆಟಾ ಸುಳ್ಳು ಸುದ್ದಿ ಪತ್ತೆಗಾಗಿ ಈ ವ್ಯವಸ್ಥೆಯನ್ನು 2016 ರಲ್ಲಿ ಆರಂಭಿಸಿತು. ಈಗ ಇದನ್ನು ನಿಲ್ಲಿಸಿ, X ನಲ್ಲಿರುವ ನೋಟ್ಸ್‌ನಂತೆ ಸಾಮೂಹಿಕ ( crowdsourced) ಫ್ಯಾಕ್ಟ್‌ ಚೆಕ್ಕಿಂಗ್‌ ಮಾದರಿಯನ್ನು ಜಾರಿಗೆ ತರಲಿದೆ. ಇದರಲ್ಲಿ [&#8230;]]]></description>
										<content:encoded><![CDATA[
<p>ಜನವರಿ 7, 2025 ಮಂಗಳವಾರ <a href="https://www.facebook.com/formedia/mjp/programs/third-party-fact-checking/partner-map">ಥರ್ಡ್‌-ಪಾರ್ಟಿ-ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು</a> ನಿಲ್ಲಿಸುವುದಾಗಿ ಮೆಟಾ ಘೋಷಿಸಿದೆ. ಇದನ್ನು ಅಮೇರಿಕಾದಿಂದ ಆರಂಭಿಸಲು ತೀರ್ಮಾನಿಸಿದೆ. ಈ ಮೂಲಕ 130 ದೇಶಗಳ 90 ಸಂಸ್ಥೆಗಳ ಜೊತೆಗೆ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಥ್ರೆಡ್‌ನಲ್ಲಿ ಸುಳ್ಳು ಸುದ್ದಿ ಪತ್ತೆಗಾಗಿ ಮಾಡಿಕೊಂಡಿದ್ದ ಒಪ್ಪಂದವನ್ನು ಮೆಟಾ ನಿಲ್ಲಿಸಲಿದೆ.</p>



<p>ಮೆಟಾ ಸುಳ್ಳು ಸುದ್ದಿ ಪತ್ತೆಗಾಗಿ ಈ ವ್ಯವಸ್ಥೆಯನ್ನು 2016 ರಲ್ಲಿ ಆರಂಭಿಸಿತು. ಈಗ ಇದನ್ನು ನಿಲ್ಲಿಸಿ, X ನಲ್ಲಿರುವ ನೋಟ್ಸ್‌ನಂತೆ ಸಾಮೂಹಿಕ ( crowdsourced) ಫ್ಯಾಕ್ಟ್‌ ಚೆಕ್ಕಿಂಗ್‌ ಮಾದರಿಯನ್ನು ಜಾರಿಗೆ ತರಲಿದೆ. ಇದರಲ್ಲಿ ಬಳಕೆದಾರರು ಮಾಹಿತಿಯ ಬಗ್ಗೆ ತಮ್ಮ ಸ್ಪಷ್ಟನೆಯನ್ನು ನೀಡಲು ಸಾಧ್ಯವಿದೆ, ಈ ಸ್ಪಷ್ಟೀಕರಣವು ಜನರ ದಾರಿ ತಪ್ಪಿಸುವ ಪೋಸ್ಟ್‌ನ ಪಕ್ಕದಲ್ಲಿಯೇ ಕಾಣಿಸಿಕೊಳ್ಳಲಿದೆ. </p>



<p>ಸದ್ಯ ಇದನ್ನು ಅಮೇರಿಕಾದಿಂದ ಆರಂಭಿಸಲಾಗುತ್ತಿದೆ, ನಂತರ ಇತರ ದೇಶಗಳಲ್ಲೂ ಇದನ್ನು ಜಾರಿಗೊಳಿಸಲಿದೆ. ಅಮೇರಿಕಾದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಸಂತೋಪಡಿಸಲು, ಸುಳ್ಳು ಮತ್ತು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುವ ಟ್ರಂಪನ್ನು ಮೆಚ್ಚಿಸಲು ಮೆಟಾ ಈ ದಾರಿ ಹಿಡಿದಿದೆ ಎಂಬ ಟೀಕೆಗಳು ಜಾಗತಿಕವಾಗಿ ಕೇಳಿಬರುತ್ತಿದೆ.</p>



<p>ಮೆಟಾದ ಈ ನಡೆಯು ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಸರ್ಕಾರವಿರುವ ಭಾರತದಂತಹ ದೇಶಗಳಲ್ಲಿ ಸರ್ಕಾರದ ಪರವಾಗಿ ಕೆಲಸ ಮಾಡುವ ಸಾಧ್ಯತೆ ಇದೆ. </p>



<p><strong>ಮೆಟಾದ ಪಾಲಿಸಿಯಲ್ಲಿ ಆಗುವ ಬದಲಾವಣೆಯಿಂದ ಏನಾಗಲಿದೆ?</strong></p>



<p>ಸದ್ಯದ ಸಂದರ್ಭದಲ್ಲಿ ಫ್ಯಾಕ್ಟ್‌ ಚೆಕ್ಕರ್‌ಗಳು ಒಂದು ಪೋಸ್ಟ್‌ ಅನ್ನು ಸುಳ್ಳು ಎಂದು ಹೇಳಿದರೆ, ಮೆಟಾ ಆ ಪೋಸ್ಟ್‌ನ <a href="https://www.facebook.com/business/help/2593586717571940?id=673052479947730">ವಿಸಿಬಿಲಿಟಿ ಮತ್ತು ರೀಚ್‌ ಕಡಿಮೆ </a>ಮಾಡುವ ಮೂಲಕ ಹೆಚ್ಚೆಚ್ಚು ಜನರಿಗೆ ತಲುಪದಂತೆ ಮಾಡುತ್ತದೆ.  ಅಲ್ಲದೇ, ಅದು ಸುಳ್ಳು ಸುದ್ದಿ ಎಂದು ಪೋಸ್ಟ್‌ ಮೇಲೆ ಲೇಬಲ್‌ ಮಾಡುತ್ತದೆ, ಜೊತೆಗೆ ಸತ್ಯ ಏನು ಎಂದು ತಿಳಿಯಲು ಲಿಂಕ್‌ ಅನ್ನು ನೀಡುತ್ತದೆ.</p>



<p>ಮೆಟಾದ ಹೊಸ ಮಾನದಂಡವು, X  ನ ಪಾಲಿಸಿಯಂತೆ ಕೆಲಸ ಮಾಡಲಿದೆ. ಎಕ್ಸ್‌ನ ಮಾಲೀಕ ಎಲನ್‌ ಮಸ್ಕ್‌ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆತ್ಮೀಯ ಸ್ನೇಹಿತ ಎಂಬುದನ್ನು ಮರೆಯುವಂತಿಲ್ಲ.  <a href="https://communitynotes.x.com/guide/en/contributing/signing-up">X ನ ಪಾಲಿಸಿಯು ಪ್ರೋಗ್ರಾಂಗೆ ಸೈನ್‌ಅಪ್‌ ಮಾಡಿ</a>ದ ಖಾತೆಗಳು ಮಾಡುವ ಎಲ್ಲಾ ಸಮುದಾಯ ಟಿಪ್ಪಣಿ (ಜನರ ಅಭಪ್ರಾಯ)ಯನ್ನು ಪ್ರಕಟಿಸಲು ಅನುಮತಿ ನೀಡುತ್ತದೆ. ಹೆಚ್ಚು ಜನ ಸಮ್ಮತಿಸಿದ್ದಾರೆ ಎಂಬ ಕಾರಣಕ್ಕೆ ಆ ನೋಟ್‌ ಅನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ, &#8220;<a href="https://communitynotes.x.com/guide/en/about/introduction">ವೈವಿಧ್ಯಮಯ ದೃಷ್ಟಿಕೋನಗಳಿಂದ</a>&#8221; ಕೂಡಿರುವ ಖಾತೆಗಳ ನೋಟ್‌ಗಳು ಉಪಯುಕ್ತ ಎಂದು ಅನ್ನಿಸಿದರೆ ಮಾತ್ರ ಆ ನೋಟ್‌ ಎಲ್ಲಿರಿಗೂ ಕಾಣಿಸಲಿದೆ.   </p>



<p>ಮಂಗಳವಾರದ ತನ್ನ ಪ್ರಕಟಣೆಯಲ್ಲಿ, ಮೆಟಾ ಈ ವಿಧಾನವು X ನಲ್ಲಿ ಕೆಲಸ ಮಾಡಿದೆ ಮತ್ತು&nbsp;<a href="https://about.fb.com/news/2025/01/meta-more-speech-fewer-mistakes/" target="_blank" rel="noreferrer noopener">&#8220;ಪಕ್ಷಪಾತ ಕಡಿಮೆಯಾಗುತ್ತದೆ&#8221;</a>&nbsp;ಎಂದು ಹೇಳಿಕೊಂಡಿದೆ .</p>



<p>ಇದರಿಂದ, ಒಂದು ಪೋಸ್ಟ್‌ ಸುಳ್ಳು ಸುದ್ದಿಯಾಗಿದ್ದರೂ, ಬಹುಪಾಲು ಜನರು ಅದನ್ನು ಸತ್ಯವೆಂದು ಕರೆದರೂ ಆ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಲಿದೆ. ಸುಳ್ಳನ್ನು ಸತ್ಯ ಎಂದು ಹೇಳುವವರ ನೋಟ್‌ಗಳು ಹೆಚ್ಚಾದರೆ, ಆ ಸುಳ್ಳು ಅಧಿಕೃತ ಮಾಹಿತಿಯಂತೆ ಹರಡುವ ಸಾಧ್ಯತೆ ಇದೆ. ‌</p>



<p><strong>ಟ್ರಂಪ್‌ ಕೃಪೆಗಾಗಿ ಈ ಸರ್ಕಸ್?</strong></p>



<p>ಅಮೇರಿಕಾದಲ್ಲಿ ಟ್ರಂಪ್‌ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವಾಗ, ಟ್ರಂಪ್‌ ಆಶೀರ್ವಾದ ಪಡೆಯಲು ಮೆಟಾ ಮತ್ತು ಎಕ್ಸ್‌ ಈ ಸರ್ಕಸ್‌ ನಡೆಸುತ್ತಿರುವಂತೆ ಕಾಣುತ್ತದೆ. ಟ್ರಂಪ್‌ನ ಕಟ್ಟರ್‌ ಬೆಂಬಲಿಗ, ಬಲಪಂಥೀಯ <a href="https://edition.cnn.com/2025/01/02/tech/meta-nick-clegg-stepping-down-joel-kaplan/index.html" target="_blank" rel="noreferrer noopener">ಜೋಯಲ್ ಕಪ್ಲಾನ್ ಅವರನ್ನು ಜಾಗತಿಕ ವ್ಯವಹಾರಗಳ ಮುಖ್ಯಸ್ಥರನ್ನಾಗಿ ಮೆಟಾ 2025 ರ ಜನವರಿ 2 ರಂದು ನೇಮಿಸಿತು.</a> ಇದು ಸರ್ಕಾರಕ್ಕೆ ಹತ್ತಿರ ಇರುವ ವ್ಯಕ್ತಿಯನ್ನು ಕೂರಿಸಿಕೊಂಡು ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವಂತೆ, ಸರ್ಕಾರದ ಸುಳ್ಳುಗಳನ್ನು ಸುಲಭವಾಗಿ ಪ್ರಚಾರ ಮಾಡಲು ಸಾಧ್ಯವಾಗುವಂತೆ ಮಾಡುವ ತಂತ್ರದಂತೆ ಕಾಣುತ್ತದೆ. </p>



<p>ಟ್ರಂಪ್‌ ಹಾಗೂ ಅವರ ಬೆಂಬಲಿಗರು <a href="https://apnews.com/article/meta-facts-trump-musk-community-notes-413b8495939a058ff2d25fd23f2e0f43">ಫ್ಯಾಕ್ಟ್‌ ಚೆಕ್ಕರ್‌ಗಳ ಮೇಲೆ ಸತತವಾಗಿ ಟೀಕೆಗಳನ್ನು</a> ಮಾಡುತ್ತಲೇ ಬಂದಿದ್ದಾರೆ. ಇವರ ಈ ನಡೆಗೆ ಪೂರಕವಾಗಿ, ಬೆಂಬಲವಾಗಿ ಮೆಟಾ ಹಂತ ಹಂತವಾಗಿ ಥರ್ಡ್‌-ಪಾರ್ಟಿ ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು ನಿಲ್ಲಿಸಲು ಹೊರಟಿದೆ. ಇದರ ಜೊತೆಗೆ ದ್ವೇಷ ಹರಡುವ ನಡವಳಿಕೆಗಳ ಮೇಲೆ ನಿಯಂತ್ರಣ ಹೇರಲು ಇದ್ದ <a href="https://transparency.meta.com/en-gb/policies/community-standards/hateful-conduct/">ಪಾಲಿಸಿಯಲ್ಲಿಯೂ ಬದಲಾವಣೆಯನ್ನು</a> ಮೆಟಾ ತಂದಿದೆ. </p>



<p><strong>ಇದನ್ನು ಓದಿ: </strong><a href="https://peepalmedia.com/meta-allow-lgbtq-people-to-be-insulted-as-mentally-ill/"><strong>LGBTQ+ ಗಳನ್ನು ಮಾನಸಿಕ ರೋಗಿಗಳೆಂದು ಅವಮಾನಿಸಲು ಮೆಟಾ ಅನುಮತಿ!</strong></a></p>



<p>ಇದರಿಂದ ಟ್ರಂಪ್‌ ಅವರಿಗೆ ದೊಡ್ಡ ಲಾಭವಾದರೂ, ಬದಿಯಲ್ಲಿ ಲಾಭ ಪಡೆಯುವವರು ನರೇಂದ್ರ ಮೋದಿ ಹಾಗೂ ಬಿಜೆಪಿ ಎಂಬುದು ಭಾರತದ ವಿಚಾರದಲ್ಲಿ ಸತ್ಯ.</p>



<p>ಸದ್ಯ ಯಾವ ರೀತಿಯಲ್ಲಿಯೂ ಉಪದ್ರವನ್ನು ನೀಡದ ಪೋಸ್ಟ್‌ಗಳೂ ಸೆನ್ಸಾರ್‌ ಆಗುತ್ತಿವೆ ಎಂದು ಫ್ಯಾಕ್ಟ್‌ ಚೆಕ್ಕರ್‌ಗಳ ಮೇಲೆ ಆರೋಪಿಸುವಂತೆ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.  &#8220;ಮೆಟಾ ನಿರ್ಬಂಧಿಸುತ್ತಿದೆ. ಇದರಿಂದ ಜನರು ಫೇಸ್‌ಬುಕ್‌ ಜೈಲಿನನಲ್ಲಿ ಬಂಧಿಗಳಾಗಿರುವಂತೆ ಭಾವಿಸುತ್ತಾರೆ, ಅವರಿಗೆ ನಾವು ನಿಧಾನವಾಗಿ ಪ್ರತಿಕ್ರಿಯೆ ನೀಡುತ್ತೇವೆ,&#8221; ಎಂದು ಅಭಿವ್ಯಕ್ತಿ ಸ್ವಾತಂತ್ರ್ಯದ <a href="https://about.fb.com/news/2025/01/meta-more-speech-fewer-mistakes/">ಪಾಠವನ್ನು ಮೆಟಾ ಹೇಳಿದೆ</a>. </p>



<figure class="wp-block-image size-full"><img fetchpriority="high" decoding="async" width="1009" height="372" src="https://peepalmedia.com/wp-content/uploads/2025/01/image-30.png" alt="" class="wp-image-52122" srcset="https://peepalmedia.com/wp-content/uploads/2025/01/image-30.png 1009w, https://peepalmedia.com/wp-content/uploads/2025/01/image-30-300x111.png 300w, https://peepalmedia.com/wp-content/uploads/2025/01/image-30-768x283.png 768w, https://peepalmedia.com/wp-content/uploads/2025/01/image-30-150x55.png 150w, https://peepalmedia.com/wp-content/uploads/2025/01/image-30-696x257.png 696w" sizes="(max-width: 1009px) 100vw, 1009px" /></figure>



<p>ಆದರೆ, ಯಾವುದೇ ಫ್ಯಾಕ್ಟ್‌ ಚೆಕ್ಕರ್‌ಗಳೂ ಮೆಟಾದಲ್ಲಿ ಪೋಸ್ಟ್‌ ಅನ್ನು ಸೆನ್ಸಾರ್‌ ಮಾಡಿಲ್ಲ, ಮತ್ತು ಮಾಡಲು ಸಾಧ್ಯವೂ ಇಲ್ಲ. ಅವರು ಮೆಟಾದ ಟೂಲ್‌ಗಳನ್ನು ಮತ್ತು ನಿಯಮಗಳನ್ನು ಬಳಸಿಕೊಂಡು ಪೋಸ್ಟ್‌ಗಳ ಸ್ವತಂತ್ರ ವಿಮರ್ಶೆಯನ್ನು ಮಾಡಿ, ಅದನ್ನು ಸುಳ್ಳು ಅಥವಾ ಸತ್ಯ ಎಂದು ನಿರ್ಧರಿಸಿ ನಿಖರ ಆಕರಗಳ ಮೂಲಕ ತಮ್ಮ ತೀರ್ಮಾಣವನ್ನು ದೃಢೀಕರಿಸುತ್ತಾರೆ. ಆ ನಂತರ ಆ ಸುದ್ದಿಯನ್ನು ಸೆನ್ಸಾರ್‌ ಮಾಡುವುದು, ಬಿಡುವುದು ಮೆಟಾಕ್ಕೆ ಬಿಟ್ಟ ಕೆಲಸವಾಗಿದೆ. &#8220;More Speech and Fewer Mistakes&#8221; ಎನ್ನುವ ಮೆಟಾ, 2024 ರ ಅಕ್ಟೋಬರ್‌ನಲ್ಲಿ ಪ್ರಕಟಿಸಿದ <a href="https://transparency.meta.com/sr/dsa-transparency-report-sep2024-facebook" target="_blank" rel="noreferrer noopener">Regulation (EU) 2022/2065 &#8211; Digital Services Act &#8211; Transparency Report for Facebook ವರದಿಯಲ್ಲಿ</a>, ಮೆಟಾದಲ್ಲಿ ಮಾಡಲಾಗುವ ಸುಳ್ಳು ಸುದ್ದಿ ಪತ್ತೆಯಲ್ಲಿ ಕೇವಲ 3% ಮಾತ್ರ ದೂರುಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.</p>



<p>ಮೆಟಾ ಥರ್ಡ್-ಪಾರ್ಟಿ-ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು ನಿಲ್ಲಿಸುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯಾತ್ಮಕ ಬದಲಾವಣೆಗಳು ನಡೆಯುವ ಸಾಧ್ಯತೆಗಳಿವೆ. ಫ್ಯಾಕ್ಟ್‌ ಚೆಕ್ಕಿಂಗ್‌ನಿಂದ ಉಪಯೋಗವಿಲ್ಲ ಎಂಬುದು, ಸೆನ್ಸಾರ್‌ ಮಾಡಿದಂತಾಗುತ್ತದೆ ಎಂಬಿತ್ಯಾದಿ ಕಾರಣಗಳನ್ನು ನೀಡುವ ಮೆಟಾ ಮುಂದೆ ಹೆಚ್ಚು ಹೆಚ್ಚು ತಪ್ಪು ಮಾಹಿತಿಗಳು-ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಲು ಕಾರಣವಾಗಬಹುದು.</p>



<p><strong>ಮೆಟಾದ ಈ ನಡೆಯಿಂದ ಮೋದಿ ಸರ್ಕಾರದ ಬೇಳೆ ಬೇಯುತ್ತಾ?</strong></p>



<p>ಸದ್ಯ ಫ್ಯಾಕ್ಟ್‌ ಚೆಕ್ಕಿಂಗ್‌ ನಿಲ್ಲಿಸುವ ಮೆಟಾ, ಈ ಕೆಲಸವನ್ನು ಮೊದಲು ಅಮೇರಿಕಾದಲ್ಲಿ ಆರಂಭಿಲಿದೆ. ಇದರಿಂದ ಟ್ರಂಪ್‌ ಸರ್ಕಾರಕ್ಕೆ ಲಾಭವಾಗಲಿದೆ ಎಂಬುದನ್ನು ಜಾಗತಿಕ ಮಟ್ಟದ ತಜ್ಞರು, ವಿಶ್ಲೇಷಕರು ಒಪ್ಪಿಕೊಂಡಿದ್ದಾರೆ. ಇದರಿಂದ ಭಾರತಕ್ಕೆ ಏನು ಲಾಭವಾಗಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಟ್ರಂಪ್‌ ನಂತೆ ಮೋದಿಯವರೂ, ಅವರಿಬ್ಬರ ಬೆಂಬಲಿಗರೂ ಭಾರತದಲ್ಲಿ ಫ್ಯಾಕ್ಟ್‌ ಚೆಕ್ಕರ್‌ಗಳ ಮೇಲೆ ಅಸಹನೆಯನ್ನು ಹೊಂದಿರುವುದನ್ನು ನಾವು ಅನೇಕ ನಿದರ್ಶನಗಳ ಮೂಲಕ ನೋಡಬಹುದು.</p>



<p>2020 ರ ಅಗಸ್ಟ್‌ನಲ್ಲಿ, ಭಾರತದ ಬಿಜೆಪಿ ನಾಯಕರ ದ್ವೇಷ ಭಾಷಣದ ಮೇಲೆ ನಿರ್ಬಂಧ ಹೇರಬೇಡಿ, ಇದರಿಂದ ಕಂಪನಿಯ ನಿರೀಕ್ಷೆಗಳಿಗೆ ಹಾನಿಯಾಗುತ್ತದೆ ಎಂದು ತನ್ನ ಸಿಬ್ಬಂದಿಗಳಿಗೆ ಫೇಸ್‌ಬುಕ್‌ನ ಭಾರತದ ಸಾರ್ವಜನಿಕ ನೀತಿ ಮುಖ್ಯಸ್ಥೆ ಆಂಖಿ ದಾಸ್ ಹೇಳಿದ್ದಾರೆ ಎಂದು <a href="https://www.wsj.com/articles/facebook-hate-speech-india-politics-muslim-hindu-modi-zuckerberg-11597423346">ದಿ ವಾಲ್‌ ಸ್ಟ್ರೀಟ್‌ ಜರ್ನಲ್‌ </a>ವರದಿ ಮಾಡಿತ್ತು. ಈ ಸಂದರ್ಭದಲ್ಲಿ ಅಂಖಿ ದಾಸ್‌ ಮೇಲೆ ಬಿಜೆಪಿ ನಾಯಕರನ್ನು ಫೇಸ್‌ಬುಕ್‌ನ ದ್ವೇಷ ಭಾಷಣದ ನಿಯಮಗಳಿಂದ ರಕ್ಷಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂತು.</p>



<p>ಈ ಆರೋಪವನ್ನು ನಿರಾಕರಿಸಿದ ಫೇಸ್‌ಬುಕ್‌, &#8220;ತಾನು ಯಾವುದೇ ಪಕ್ಷದ ಪರವಾಗಿ ಇಲ್ಲ,&#8221; ಎಂದು ಸಮರ್ಥನೆ ಮಾಡಿಕೊಂಡಿತ್ತು. ಇದಾಗಿ ಎರಡು ತಿಂಗಳು ಕಳೆದ ಮೇಲೆ, 2020 ರ ಅಕ್ಟೋಬರ್‌ 27 ರಂದು ಅಂಖಿ ದಾಸ್‌ ತಮ್ಮ<a href="https://www.bbc.com/news/world-asia-india-54715995"> ಹುದ್ದೆಗೆ ರಾಜೀನಾಮೆಯನ್ನು</a> ನೀಡಿದರು. ಮೆಟಾ ಹಾಗೂ ಭಾರತ ಸರ್ಕಾರದ ನಡುವಿನ ಸಂಬಂಧ ಅಸ್ಪಷ್ಟ ಹಾಗೂ ಅಪಾರದರ್ಶಕವಾಗಿ ಕಂಡು ಬರುತ್ತದೆ. </p>



<p>ಈಗ X ನ ಮಾದರಿಯನ್ನು ಅನುಸರಿಸಲು ಮೆಟಾ ಹೊರಟಿದೆ. 2024 ರಲ್ಲಿ ಯುರೋಪಿನ ಫ್ಯಾಕ್ಟ್-ಚೆಕಿಂಗ್ ಸ್ಟ್ಯಾಂಡರ್ಡ್ಸ್ ನೆಟ್‌ವರ್ಕ್‌ ನಡೆಸಿದ ಅಧ್ಯಯನವು ಸುಮಾರು 69% ಟ್ವಿಟ್‌ಗಳನ್ನು ಸುಳ್ಳು ಅಥವಾ ತಪ್ಪುದಾರಿಗೆಳೆಯುವವು  ಎಂದು ಫ್ಯಾಕ್ಟ್‌-ಚೆಕ್ಕರ್‌ಗಳು ಹೇಳಿರುವುದನ್ನು ಬಹಿರಂಗಪಡಿಸಿದೆ. ಆದರೆ<a href="https://science.feedback.org/despite-community-notes-most-content-reviewed-eu-fact-checkers-goes-unaddressed-x-twitter/"> X ಮಾತ್ರ ಈ ಬಗ್ಗೆ ತಲೆ </a>ಕೆಡಿಸಿಕೊಳ್ಳಲೇ ಇಲ್ಲ.  </p>



<p>ಈಗ ಮೆಟಾ ತನ್ನ ಹೊಸ ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೆ ತಂದರೆ, ಅದನ್ನು ಮೊದಲು ಬಿಜೆಪಿ ಹೈಜಾಕ್‌ ಮಾಡಿಕೊಳ್ಳುತ್ತದೆ. ಈ ಹಿಂದೆ ಪ್ರೆಸ್‌ ಇನ್ಪಾರ್ಮೇಷನ್‌ ಬ್ಯೂರೋ (PIB) ಅಡಿಯಲ್ಲಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ತನ್ನದೇ ಆದ ಫ್ಯಾಕ್ಟ್‌ ಚೆಕ್ಕಿಂಗ್‌ ಘಟಕ ಆರಂಭಿಸಲು ಹೊರಟಾಗ, ಆ <a href="https://www.thehindu.com/news/national/supreme-court-stays-it-ministrys-notification-establishing-fact-check-unit-under-pib-to-identify-fake-news/article67975405.ece">ಅಧಿಸೂಚನೆಗೆ ಸುಪ್ರೀಂ ಕೋರ್ಟ್‌ ತಡೆಯನ್ನು</a> ಒಡ್ಡಿತ್ತು.</p>



<p>ಸರ್ಕಾರಗಳೇ ಫ್ಯಾಕ್ಟ್‌-ಚೆಕ್ಕಿಂಗ್‌ ಯೂನಿಟ್‌ಗಳನ್ನು ಆರಂಭಿಸುವುದು ನರಿಯನ್ನು ಕೋಳಿಗೂಡಿನ ಕಾವಲು ಕಾಯಲು ಹೇಳಿ ಬೀಗದ ಕೀಯನ್ನು ಕೊಟ್ಟಂತೆ. ಸರ್ಕಾರಗಳು ಈ ಫ್ಯಾಕ್ಟ್‌-ಚೆಕ್ಕಿಂಗ್‌ ಯೂನಿಟ್‌ಗಳ ಮೂಲಕ ತಮ್ಮನ್ನು ಟೀಕಿಸುವ, ಪ್ರಶ್ನಿಸುವ ದನಿಗಳನ್ನು ಸುಲಭವಾಗಿ ಹತ್ತಿಕ್ಕಲು ಸಾಧ್ಯ. </p>



<p>ಭಾರತದಲ್ಲಿ ಸದ್ಯ ಮೆಟಾದ ಜೊತೆಗೆ <a href="https://www.facebook.com/formedia/mjp/programs/third-party-fact-checking/partner-map">ಸಹಯೋಗವನ್ನು</a> ಹೊಂದಿರುವ ಥರ್ಡ್‌-ಪಾರ್ಟಿ-ಫ್ಯಾಕ್ಟ್‌-ಚೆಕ್ಕಿಂಗ್‌ ಸಂಸ್ಥೆಗಳೆಂದರೆ, <a href="https://factcheck.afp.com/afp-india?fbclid=IwZXh0bgNhZW0CMTEAAR1bQ2B2pK0WlUvVEs6RcTksRnDpfPQv1MznqWYPjdKd4jGiSFfhu0_KpXY_aem_sBM5-5gRUdTkGrq3vS2RZA" target="_blank" rel="noreferrer noopener">AFP &#8211; ಹಬ್</a>, <a href="https://l.facebook.com/l.php?u=https%3A%2F%2Fwww.boomlive.in%2F%3Ffbclid%3DIwZXh0bgNhZW0CMTEAAR20VhnUH6jGL_tFqUoTBTKV85Y95_Vb1x8Kcpl-iic7YzkrnrKvFzBLWIA_aem_wHUU2t4nPE9r1TdiCvYQNg&amp;h=AT2KcRdD2ZQ30FypECDRIYbGV2dwvrzxVDGR4DIt6A10oennjlUv66L3Xb6a7yqMsXxOLjucuIRSALPvWKVKj_PvsNXJ-2UKk7LXcbxBv9d1w-EO00sBlS7hH2sygkQdwby5z3f8bxYMsWmE91yFFA" target="_blank" rel="noreferrer noopener">ಬೂಮ್</a>, <a href="https://factcrescendo.com/?fbclid=IwZXh0bgNhZW0CMTEAAR1ADY9DVl-WFmbPUZBYWo1SJ5F5LvVwyT4X7frvKqjWDRd9l5d7HeHfcmw_aem_ytlK2fuJHVw8DwldlotmjQ" target="_blank" rel="noreferrer noopener">ಫ್ಯಾಕ್ಟ್ ಕ್ರೆಸೆಂಡೋ</a>, <a href="https://www.thip.media/category/health-news-fact-check/?fbclid=IwZXh0bgNhZW0CMTEAAR17VmbD78uqnohidvwDppAno_NvwbrzQWddscWWptEpO7y7y9Pw0WbqY_o_aem_KknsGD2cyBcEPSOU8J7myg" target="_blank" rel="noreferrer noopener">ದಿ ಹೆಲ್ದೀ ಇಂಡಿಯನ್‌ ಪ್ರಾಜೆಕ್ಟ್</a> , <a href="https://factly.in/?fbclid=IwZXh0bgNhZW0CMTEAAR0G6WlS8KAnlmprG3Ws1N13AcrAgjiiSAsxEg-EJY8q2VMQIt8Yp-RlAtc_aem_5Z7Ps4grwdv3qGr2wv7Dwg" target="_blank" rel="noreferrer noopener">ಫ್ಯಾಕ್ಟ್ಲೀ</a>, <a href="https://www.indiatoday.in/fact-check?fbclid=IwZXh0bgNhZW0CMTEAAR0AFJ6P-xZ3vmRDdcLFQZkKm1YlU8BhdJKo8yjbrQFx0M2JTVi1MUSkUpU_aem_dmOURwmGLiG9Z_qUC6vRyw" target="_blank" rel="noreferrer noopener">ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್</a> , <a href="https://www.newschecker.in/?fbclid=IwZXh0bgNhZW0CMTEAAR0QVLKmSsdAA3rYAEKR2dmnYo_GmhQ8NHTZdRCXwth9V3aKXHQ9LKCUT7w_aem_9zkN4E3x8BSJ5xt7IK97cw" target="_blank" rel="noreferrer noopener"> ನ್ಯೂಸ್‌ಚೆಕ್ಕರ್ </a>, <a href="https://newsmeter.in/fact-check?fbclid=IwZXh0bgNhZW0CMTEAAR0-XHOndcjyOM-6Uh1wDzxshma1jB0RyfYsco89PalcIEq3U0U8X47YvaA_aem_IuekF8U_MPQcPmM8Qtzw4A" target="_blank" rel="noreferrer noopener"> ನ್ಯೂಸ್‌ಮೀಟರ್ </a>, <a href="http://www.newsmobile.in/?fbclid=IwZXh0bgNhZW0CMTEAAR2IZ7JrQMJkIs7csEH42FQ2lY61nQDpreBcwgQ0JZ640ImsynP22qEcGR8_aem_anmnqPGoNR-ePQQsFbVd3Q" target="_blank" rel="noreferrer noopener">ನ್ಯೂಸ್‌ಮೊಬೈಲ್ ಫ್ಯಾಕ್ಟ್  ಚೆಕ್ಕರ್ </a>, <a href="https://l.facebook.com/l.php?u=https%3A%2F%2Fwww.thequint.com%2F%3Ffbclid%3DIwZXh0bgNhZW0CMTEAAR002BB_sUJxvksD03bwMHwK0fyGfgDTIOlb4QjEHEoVnb_GxVgXcjqmtsE_aem_JFekj2_JSowt4LXAsKpTJw&amp;h=AT0OQJZvhUstb2ocGHoL-4x3nM4QkNdKtEjYw7mGp6QyfahtAyBu15pEt0s8aZfIk1s7ehNrOhsjtqdn5zzK6vgW1IGizRuSssTd2GRNQwa0JmVd0yeUxRmi1Tjd_XWnZ73rAyGKLTr93FewVpus-A" target="_blank" rel="noreferrer noopener">ದಿ ಕ್ವಿಂಟ್</a> , <a href="https://www.vishvasnews.com/?fbclid=IwZXh0bgNhZW0CMTEAAR3jMSrVrw6z02x65Cyjll45qy-9C1RTgm3122_VP-yElWn_1RIKfRH8k80_aem_QuYfLY_SrWycAmh48xMwNQ">ವಿಶ್ವಸ್.ನ್ಯೂಸ್ </a>.‌</p>



<p>ಮೆಟಾ ತನ್ನ ಪಾಲಿಸಿಯಲ್ಲಿ ತಂದಿರುವ ಬದಲಾವಣೆಗಳು ಭಾರತದಲ್ಲಿ ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂಬುದು ಅಮೇರಿಕಾದಲ್ಲಿ ಆಗುವ ಬದಲಾವಣೆಗಳಿಂದ ಗ್ರಹಿಸಬಹುದು. ಅಧಿಕಾರದಲ್ಲಿ ಇರುವವರಿಗೆ ತಾನು ನೀಡಿದ ಮಾತನ್ನು ಉಳಿಸಿಕೊಳ್ಳಲು ಮೆಟಾ ಈ ರೀತಿಯ ಸರ್ಕಸ್‌ ಮಾಡುತ್ತಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ. ಅಮೇರಿಕಾದಲ್ಲಿ ಏನಾಗಲಿದೆಯೋ, ಅದು ಭಾರತದಲ್ಲೂ ಆಗುವ ಸಾಧ್ಯತೆ ಇದೆ. </p>



<p></p>



<p></p>



<p></p>



<p></p>



<p></p>



<p></p>



<p></p>
]]></content:encoded>
					
		
		
			</item>
		<item>
		<title>ಮೋದಿ ಸುಳ್ಳುಗಳನ್ನು ಸಂಸತ್ತಿನಲ್ಲಿ ಬಯಲಿಗೆಳೆದ ಖರ್ಗೆ!</title>
		<link>https://peepalmedia.com/kharge-exposed-modi-lies-in-parliament/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 18 Dec 2024 07:44:23 +0000</pubDate>
				<category><![CDATA[ದೇಶ]]></category>
		<category><![CDATA[AICC]]></category>
		<category><![CDATA[congress]]></category>
		<category><![CDATA[Fact check]]></category>
		<category><![CDATA[Mallikarjun Kharge]]></category>
		<category><![CDATA[narendra modi]]></category>
		<category><![CDATA[nehru]]></category>
		<guid isPermaLink="false">https://peepalmedia.com/?p=50840</guid>

					<description><![CDATA[ಬೆಂಗಳೂರು: ಸಂಸತ್ತಿನಲ್ಲಿ ಸಂವಿಧಾನದ ಇತಿಹಾಸದ ಬಗ್ಗೆ ಪ್ರಧಾನಿ ಮೋದಿಯವರು ಹೇಳಿರುವ ಸುಳ್ಳುಗಳ ಫ್ಯಾಕ್ಟ್‌ ಚೆಕ್‌ ಮಾಡುತ್ತಾ ರಾಜ್ಯಸಭೆಯ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, &#8220;ಮೋದಿಯವರು ಜರ್ಮನಿಯ ಪ್ರಚಾರ ಮಂತ್ರಿ ಜೋಸೆಫ್ ಗೋಬೆಲ್ಸ್‌ಗಿಂತಲೂ ಸುಳ್ಳ,&#8221; ಎಂದು ಕರೆದಿದ್ದಾರೆ. ಮೋದಿಯವರು ಸಂಸತ್ತಿನಲ್ಲಿ ಹೇಳಿರುವ ಸುಳ್ಳುಗಳ ಪಟ್ಟಿಯೊಂದಿಗೆ ಸತ್ಯ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ. ಸುಳ್ಳು ನಂ. 1: ಜವಾಹರಲಾಲ್ ನೆಹರು ನೇತೃತ್ವದ ಕಾಂಗ್ರೆಸ್ &#8216;ಸಾಂವಿಧಾನಿಕವಾಗಿ ಕಡ್ಡಾಯಗೊಳಿಸಿದ&#8217; ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಆಕ್ರಮಣ ಮಾಡಲು ಮೊದಲ ತಿದ್ದುಪಡಿಯನ್ನು ನಿರಂಕುಶವಾಗಿ ಪರಿಚಯಿಸಿತು [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಸಂಸತ್ತಿನಲ್ಲಿ ಸಂವಿಧಾನದ ಇತಿಹಾಸದ ಬಗ್ಗೆ ಪ್ರಧಾನಿ ಮೋದಿಯವರು ಹೇಳಿರುವ ಸುಳ್ಳುಗಳ ಫ್ಯಾಕ್ಟ್‌ ಚೆಕ್‌ ಮಾಡುತ್ತಾ ರಾಜ್ಯಸಭೆಯ ವಿಪಕ್ಷ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, &#8220;ಮೋದಿಯವರು ಜರ್ಮನಿಯ ಪ್ರಚಾರ ಮಂತ್ರಿ  ಜೋಸೆಫ್ ಗೋಬೆಲ್ಸ್‌ಗಿಂತಲೂ ಸುಳ್ಳ,&#8221; ಎಂದು ಕರೆದಿದ್ದಾರೆ.  ಮೋದಿಯವರು ಸಂಸತ್ತಿನಲ್ಲಿ ಹೇಳಿರುವ ಸುಳ್ಳುಗಳ ಪಟ್ಟಿಯೊಂದಿಗೆ ಸತ್ಯ ವಿಚಾರಗಳನ್ನು ಬಹಿರಂಗ ಪಡಿಸಿದ್ದಾರೆ.</p>



<p><strong>ಸುಳ್ಳು ನಂ. 1:</strong></p>



<p>ಜವಾಹರಲಾಲ್ ನೆಹರು ನೇತೃತ್ವದ ಕಾಂಗ್ರೆಸ್ &#8216;ಸಾಂವಿಧಾನಿಕವಾಗಿ ಕಡ್ಡಾಯಗೊಳಿಸಿದ&#8217; ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಆಕ್ರಮಣ ಮಾಡಲು ಮೊದಲ ತಿದ್ದುಪಡಿಯನ್ನು ನಿರಂಕುಶವಾಗಿ ಪರಿಚಯಿಸಿತು ಎಂದು ಮೋದಿ ಪ್ರತಿಪಾದಿಸಿದರು. ಆದರೆ ಈ ಸುಳ್ಳನ್ನು ಬಯಲಿಗೆಳೆದ ಖರ್ಗೆ, &#8220;1951 ರಲ್ಲಿ ಸಂವಿಧಾನದ ಅಸೆಂಬ್ಲಿ ಸದಸ್ಯರನ್ನು ಒಳಗೊಂಡಿರುವ ತಾತ್ಕಾಲಿಕ ಸಂಸತ್ತಿನಿಂದ ಮೊದಲ ತಿದ್ದುಪಡಿಯನ್ನು ತರಲಾಯಿತು,&#8221; ಎಂದು ಫ್ಯಾಕ್ಟ್‌ಚೆಕ್‌ ಮಾಡಿದ್ದಾರೆ. ಚುನಾಯಿತ ಪ್ರತಿನಿಧಿಗಳು 1951 ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದ ನಂತರವೇ ಲೋಕಸಭೆಗೆ ಬಂದರು, ಅದಕ್ಕಿಂತ ಮೊದಲೇ ತಿದ್ದುಪಡಿಯನ್ನು ಅಂಗೀಕರಿಸಲಾಗಿತ್ತು.</p>



<p>ಮೊದಲ ತಿದ್ದುಪಡಿಯು 19 ನೇ ವಿಧಿಯ ಮೇಲೆ &#8220;ಸಮಂಜಸವಾದ ನಿರ್ಬಂಧವನ್ನು&#8221; ವಿಧಿಸಲು ಹೊಸ ಷರತ್ತನ್ನು ಪರಿಚಯಿಸಿತು ಎಂದು ಕಾಂಗ್ರೆಸ್ ನಾಯಕ ಹೇಳಿದರು. ಆ ಹಂಗಾಮಿ ಸಂಸತ್ತಿನಲ್ಲಿ ಹಿಂದುತ್ವ ನಾಯಕ ಶ್ಯಾಮ ಪ್ರಸಾದ್ ಮುಖರ್ಜಿ ಅವರಂತಹ ಸದಸ್ಯರಿದ್ದರು ಎಂದು ಅವರು ಹೇಳಿದರು. ಮೊದಲ ತಿದ್ದುಪಡಿಯಲ್ಲಿ ಭೂಸುಧಾರಣೆಗಳೂ ಸೇರಿದ್ದವು, ನ್ಯಾಯಾಲಯದ ತೀರ್ಪಿನ ನಂತರ ಕೋಟಾ ವ್ಯವಸ್ಥೆಯನ್ನು ರದ್ದುಪಡಿಸಿದ ನಂತರ ಸಾಂವಿಧಾನಿಕವಾಗಿ ಮೀಸಲಾತಿಗಳನ್ನು ಮಾಡಲಾಗಿತ್ತು ಎಂದು ಹೇಳಿರುವ ಖರ್ಗೆ, &#8220;ಆ ತಿದ್ದುಪಡಿಗಳನ್ನು ಬಿಜೆಪಿ ಬೆಂಬಲಿಸುವುದಿಲ್ಲವೇ?&#8221;  ಎಂದು ಪ್ರಶ್ನಿಸಿದ್ದಾರೆ. </p>



<p><strong>ಸುಳ್ಳು ನಂ.2:</strong></p>



<p>ನೆಹರೂಗಿಂತ ಹೆಚ್ಚು ಯೋಗ್ಯರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ನಾಯಕತ್ವವನ್ನು ಕಾಂಗ್ರೆಸ್‌ನ 12 ರಾಜ್ಯ ಸಮಿತಿಗಳು ಬೆಂಬಲಿಸಿದ ಹೊರತಾಗಿಯೂ, ನೆಹರೂರವರು ಪಟೇಲರಿಗೆ ಸಿಗಬೇಕಾಗಿದ್ದ ಪ್ರಧಾನ ಮಂತ್ರಿ ಸ್ಥಾನವನ್ನು ವಿರೋಧಿಸಿದರು ಎಂದು ಮೋದಿ ಹೇಳಿಕೊಂಡಿದ್ದಾರೆ. ಇದಕ್ಕೆ ಉತ್ತರವಾಗಿ, 1951-52ರಲ್ಲಿ ಭಾರತದ ಮೊದಲ ಸಾರ್ವತ್ರಿಕ ಚುನಾವಣೆ ನಡೆಯುವ ವೇಳೆಗಾಗಲೇ  ಪಟೇಲರು ಮೃತಪಟ್ಟಿದ್ದರು ಎಂದು ಖರ್ಗೆ ಹೇಳಿದರು. (1950 ರ ಡಿಸೆಂಬರ್ 15 ರಂದು ಪಟೇಲ್ ನಿಧನರಾದರು).</p>



<p>1947-50ರ ಮಧ್ಯಂತರ ಸರ್ಕಾರದಲ್ಲಿ ಪಟೇಲ್ ಅವರು ಉಪಪ್ರಧಾನಿಯಾಗಿ ನೆಹರುಗೆ ಎರಡನೇ ಪಿಟೀಲು ನುಡಿಸುವಂತೆ ಅವರನ್ನು ಒತ್ತಾಯಿಸಲಾಯಿತು ಎಂಬ ಮೋದಿಯವರ ವಾದವನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಕಾಂಗ್ರೆಸ್ ಕಾರ್ಯಕಾರಿ ಮಂಡಳಿಯು ನೆಹರು ಅವರನ್ನು ಆಯ್ಕೆ ಮಾಡಿದ ನಂತರ ಮಧ್ಯಂತರ ಸರ್ಕಾರದಲ್ಲಿ ಪ್ರಧಾನಿಯಾದರು ಎಂದು ಹೇಳಿದರು. ಅಧಿಕಾರದ ಶಾಂತಿಯುತ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಲು 1946ರ ಕ್ಯಾಬಿನೆಟ್ ಮಿಷನ್ ಯೋಜನೆಯಲ್ಲಿ ನಾಯಕರಾದ ಮೇಲೆಯೇ ಅವರನ್ನು ಪ್ರಧಾನಿ ಮಾಡಲಾಯಿತು..</p>



<p><strong>ಸುಳ್ಳು ನ.3:</strong></p>



<p>ನೆಹರೂ-ಗಾಂಧಿ ಕುಟುಂಬವು ಕಾಂಗ್ರೆಸ್ ಒಳಗೆ ಅಂತರ್ಗತವಾಗಿರುವ ಸಂವಿಧಾನ ವಿರೋಧಿ ಮನೋಭಾವಕ್ಕೆ ಹೋಲುತ್ತದೆ ಎಂಬ ಮೋದಿಯವರ ಆರೋಪವನ್ನು ಸಹ ಖರ್ಗೆ ವಿರೋಧಿಸಿದರು. ರಾಷ್ಟ್ರೀಯವಾದಿ ಚಳವಳಿಯ ಪ್ರಕ್ಷುಬ್ಧತೆಯ ನಡುವೆಯೂ ಸಾಂವಿಧಾನಿಕ ಬೆಳಕನ್ನು ಸಮರ್ಪಿತವಾಗಿ ಹಿಡಿದವರು ನೆಹರು ಎಂದು ಖರ್ಗೆ ಪ್ರತಿಪಾದಿಸಿದರು. 1931 ರಲ್ಲಿ, ನೆಹರು ಅವರು ಸರ್ದಾರ್ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ನ ಕರಾಚಿ ಅಧಿವೇಶನದಲ್ಲಿ ಮೂಲಭೂತ ಹಕ್ಕುಗಳ ಕುರಿತು ಪಕ್ಷದ ನಿರ್ಣಯಗಳನ್ನು ಪ್ರಾರಂಭಿಸಿದರು ಎಂದು ಅವರು ಹೇಳಿದರು. 1937ರ ಪ್ರಾಂತೀಯ ಚುನಾವಣೆಗಳಲ್ಲಿ ಭಾರತೀಯರ ಮೂಲಭೂತ ಹಕ್ಕುಗಳು ಕಾಂಗ್ರೆಸ್‌ನ ಪ್ರಮುಖ ಪ್ರಚಾರವಾಗಿ ಮಾರ್ಪಟ್ಟವು ಎಂದು ಖರ್ಗೆ ಹೇಳಿದರು.</p>



<p>ಅನೇಕ ಶಕ್ತಿಶಾಲಿ ರಾಷ್ಟ್ರಗಳು ಮಹಿಳೆಯರಿಗೆ ಮತ್ತು ದುರ್ಬಲ ವರ್ಗದ ಜನರಿಗೆ ಮತದಾನದ ಹಕ್ಕನ್ನು ನಿರಾಕರಿಸಿದ್ದರೂ ಸಹ, ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ನೀಡುವ ಸ್ವತಂತ್ರ ಭಾರತದ ನಿರ್ಧಾರದಲ್ಲಿ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಕಾಂಗ್ರೆಸ್‌ಗೆ ಇರುವ ಬದ್ಧತೆಯನ್ನು ತೋರಿಸುತ್ತದೆ ಖರ್ಗೆ ಹೇಳಿದರು. ಭಾರತವನ್ನು ಪ್ರಜಾಸತ್ತಾತ್ಮಕ ಹಾದಿಯಲ್ಲಿ ಕೊಂಡೊಯ್ದ ನೆಹರೂ ಅವರು  ಸ್ವತಂತ್ರ ಭಾರತವು  ಅವ್ಯವಸ್ಥೆಗೆ ಜಾರಿಬೀಳುತ್ತದೆ ಎಂದು ನಂಬಿದ್ದ ವಿನ್‌ಸ್ಟನ್ ಚರ್ಚಿಲ್ ಅವರಂತಹ ನಾಯಕರ ಅಭಿಪ್ರಾಯವನ್ನು ತಪ್ಪು ಎಂದು ಸಾಬೀತುಪಡಿಸಿದರು.</p>



<p>ಸ್ಥಳೀಯ ಸರ್ಕಾರಗಳನ್ನು ಶಾಸನ ಮಾಡುವ 73 ಮತ್ತು 74 ನೇ ತಿದ್ದುಪಡಿಗಳು, ಇಂದಿರಾಗಾಂಧಿ ಅವರ ಸರ್ಕಾರದ ಅವಧಿಯಲ್ಲಿ ಬ್ಯಾಂಕ್ ರಾಷ್ಟ್ರೀಕರಣದಂತಹ ಕ್ರಮಗಳು, ಸಂವಿಧಾನದ ಮೂಲ ರಚನೆಯ ಭಾಗವಾಗಿ ಸುಪ್ರೀಂ ಕೋರ್ಟ್ ಅಂಗೀಕರಿಸಿದ  ಸಾಂವಿಧಾನಿಕ ಮೌಲ್ಯಗಳ ಪೀಠಿಕೆಯಲ್ಲಿ ಸಮಾಜವಾದಿ ಮತ್ತು ಜಾತ್ಯತೀತವನ್ನು ಪರಿಚಯಿಸಿ ಭಾರತಕ್ಕೆ ಧೈರ್ಯ ತುಂಬಿತು ಎಂದು ಖರ್ಗೆ ಹೇಳಿದರು.</p>



<p>ಖರ್ಗೆಯವರು ಕಾಂಗ್ರೆಸ್ ಸರ್ಕಾರದ ಯೋಜನೆಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ, ಆಹಾರ ಭದ್ರತಾ ಕಾಯ್ದೆ ಮತ್ತು ಶಿಕ್ಷಣದ ಹಕ್ಕುಗಳನ್ನು ಬಡವರನ್ನು ಸಬಲೀಕರಣಗೊಳಿಸುವ ಮಹತ್ವದ ಹೆಜ್ಜೆಗಳೆಂದು ಎತ್ತಿ ತೋರಿಸಿದರು. ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು ಪ್ರತಿಯೊಬ್ಬ ಭಾರತೀಯ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿಗಳನ್ನು ವರ್ಗಾಯಿಸುವುದು ಮುಂತಾದ ಮೋದಿ ಸರ್ಕಾರದ &#8220;ಸುಳ್ಳು&#8221; ಭರವಸೆಗಳೊಂದಿಗೆ ಅವರು ಹಿಂದಿನ ಕಾಂಗ್ರೇಸ್‌ ಸರ್ಕಾರಗಳ ಈ ಮಹತ್ವದ ಯೋಜನೆಗಳನ್ನು ಹೋಲಿಸಿದರು.</p>



<p><strong>ಸುಳ್ಳು ನಂ. 4</strong></p>



<p>1948 ರಲ್ಲಿ ಮಹಾತ್ಮ ಗಾಂಧಿಯವರು ನೆಹರೂಗೆ ಬರೆದ ಪತ್ರಗಳನ್ನು ಉಲ್ಲೇಖಿಸಿ ಮೋದಿಯವರು ನೀಡಿರುವ ಹೇಳಿಕೆಯನ್ನು ಖರ್ಗೆ ವಿರೋಧಿಸಿದರು. ಈ ಹೇಳಿಕೆಯಲ್ಲಿ ಮೋದಿ, ಉದಾರವಾದ ಸಂವಿಧಾನವನ್ನು ಸಾಂಸ್ಥಿಕಗೊಳಿಸಲು ಆರಂಭದಲ್ಲಿ ನೆಹರು ಮೊಂಡುತನ ತೋರಿದರು ಎಂದು ಹೇಳಿದ್ದರು. ಇದಕ್ಕೆ ಉತ್ತರವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪತ್ರವನ್ನು ಉಲ್ಲೇಖಿಸಿ, ಸಂವಿಧಾನ ಸಭೆಗೆ ಸುವ್ಯವಸ್ಥೆಯ ಪ್ರಜ್ಞೆಯನ್ನು ನೀಡಿದ ಕೀರ್ತಿ ಕಾಂಗ್ರೆಸ್ ಮತ್ತು ಅದರ ನಾಯಕರಿಗೆ ಸಲ್ಲುತ್ತದೆ ಎಂದು ಅಂಬೇಡ್ಕರ್‌ ಹೇಳಿರುವುದನ್ನು ನೆನಪಿಸಿದರು. ಸರ್ದಾರ್ ಪಟೇಲ್ ಅವರು ನೆಹರೂಗೆ ಬರೆದ ಪತ್ರವನ್ನು ಉಲ್ಲೇಖಿಸಿ, ಅಲ್ಲಿ ನೆಹರೂ-ಪಟೇಲ್ ನಡುವಿನ ಸ್ನೇಹವನ್ನು ಶ್ಲಾಘಿಸಿದರು.</p>



<p>ಖರ್ಗೆಯವರು ಮೋದಿಯವರ ಆಪಾದಿತ &#8220;ಸುಳ್ಳು&#8221;ಗಳ ಬಗ್ಗೆ ವಿವರಿಸಿದಂತೆ, ಬಿಜೆಪಿಯ ಹಿಂದಿನ ಅವತಾರ ಜನಸಂಘ ಮತ್ತು ಇತರ ಹಿಂದುತ್ವ ಸಂಘಟನೆಗಳು ರಾಷ್ಟ್ರಧ್ವಜವನ್ನು ಹೇಗೆ ಅನುಮೋದಿಸಲಿಲ್ಲ ಎಂಬುದನ್ನು ತೋರಿಸಲು ಅವರು RSS ನ ಮುಖವಾಣಿ <em>ಆರ್ಗನೈಸರ್ ಅನ್ನು</em> ಉಲ್ಲೇಖಿಸಿದರು. &#8220;2002 ರಲ್ಲಿ ನ್ಯಾಯಾಲಯದ ಆದೇಶದ ನಂತರವೇ RSS ರಾಷ್ಟ್ರಧ್ವಜವನ್ನು ಹಾರಿಸಿತು&#8221; ಎಂದು ಅವರು ಹೇಳಿದರು. ಮುಂಬೈ ರೈಲ್ವೇ ನಿಲ್ದಾಣದಲ್ಲಿ ನಡೆದ 1948 ರ ಕಾರ್ಯಕ್ರಮವೊಂದರಲ್ಲಿ ಕೇಸರಿ ಧ್ವಜವನ್ನು ರಾಷ್ಟ್ರೀಯ ಚಿಹ್ನೆಯಾಗಿ ಹೊಂದಬೇಕೆಂಬ ಸಂಘ ಪರಿವಾರದ ಒತ್ತಾಯಕ್ಕೆ ಡಾ. ಅಂಬೇಡ್ಕರ್ ಅವರು ತೋರಿದ ವಿರೋಧವನ್ನು ಪ್ರಸ್ತಾಪಿಸಿದರು. </p>



<p>ಇಂದಿರಾಗಾಂಧಿಯವರ ಸರ್ಕಾರದ ಅವಧಿಯಲ್ಲಿನ ತುರ್ತು ಪರಿಸ್ಥಿತಿಯು ತಪ್ಪು ನಿರ್ಧಾರ ಎಂಬುದನ್ನು ಒಪ್ಪಿಕೊಂಡಿರು ಖರ್ಗೆ,  ಕಾಂಗ್ರೆಸ್ ತನ್ನ ತಪ್ಪನ್ನು ಬೇಗನೇ ಅರಿತುಕೊಂಡಿತು ಮತ್ತು 1980 ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ನಾಯಕತ್ವದಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು ಎಂದು ಹೇಳಿದರು. ಇದಕ್ಕೆ ವ್ಯತಿರಿಕ್ತವಾಗಿ, ಮೋದಿ ಸರ್ಕಾರವು ತನ್ನ ತಪ್ಪುಗಳಿಂದ ಕಲಿಯಲು ನಿರಾಕರಿಸಿದೆ ಮತ್ತು ನಿರಂಕುಶಾಧಿಕಾರದ ಕ್ರಮಗಳನ್ನು ಹೇರುವ ಹಾಗೂ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸುವ ಮೂಲಕ ಸಂವಿಧಾನವನ್ನು ಉಲ್ಲಂಘಿಸುವುದನ್ನು ಮುಂದುವರೆಸಿದೆ ಎಂದು ಆರೋಪಿಸಿದರು.</p>



<p>ಮೋದಿಯವವರು ಹೇಳಿರುವ ಈ ಸುಳ್ಳುಗಳ ಬಗ್ಗೆ ಕಾಂಗ್ರೆಸ್ ಸಂಸತ್ತಿನಲ್ಲಿ ವಿಶೇಷ ಹಕ್ಕು ಉಲ್ಲಂಘನೆಯ ಪ್ರಸ್ತಾಪವನ್ನು ಮಂಡಿಸಲಿದೆಯೇ ಎಂಬುದನ್ನು ಮುಂದೆ ನೋಡಬೇಕಿದೆ.</p>



<p></p>
]]></content:encoded>
					
		
		
			</item>
		<item>
		<title>ಭಾರತದ ಸಾರ್ವಭೌಮತ್ವ, ಏಕತೆ, ಸಮಗ್ರತೆಗೆ ಅಪಾಯ ತಂದಿದ್ದಾರೆ ಎಂದು ಜುಬೈರ್‌ ಮೇಲೆ ಯುಪಿ ಪೊಲೀಸ್‌ ಆರೋಪ</title>
		<link>https://peepalmedia.com/up-police-accuses-zubair-of-endangering-indias-sovereignty-unity-and-integrity/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 28 Nov 2024 05:48:54 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[Allahabad High Court told]]></category>
		<category><![CDATA[alt news]]></category>
		<category><![CDATA[Fact check]]></category>
		<category><![CDATA[Fake news]]></category>
		<category><![CDATA[hindutva]]></category>
		<category><![CDATA[Mohammed Zubair]]></category>
		<category><![CDATA[sovereignty]]></category>
		<category><![CDATA[unity of India]]></category>
		<guid isPermaLink="false">https://peepalmedia.com/?p=49739</guid>

					<description><![CDATA[ಬೆಂಗಳೂರು: ಹಿಂದುತ್ವವಾದಿಯೊಬ್ಬನ ದ್ವೇಷಪೂರಿತ ಭಾಷಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪತ್ತೆದಾರ ಮೊಹಮ್ಮದ್ ಜುಬೇರ್ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕಾನೂನನ್ನು ಜಾರಿಗೊಳಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಬುಧವಾರ (ನವೆಂಬರ್ 27) ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದ್ದು, ಬಿಎನ್‌ಎಸ್‌ನ ಸೆಕ್ಷನ್ 152 ರ ಅಡಿಯಲ್ಲಿ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಅಪರಾಧದ ಅಡಿಯಲ್ಲಿ ಜುಬೈರ್ ವಿರುದ್ಧದ ಎಫ್‌ಐಆರ್‌ ದಾಖಲಾಗಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಅವರು ಎಫ್‌ಐಆರ್‌ಗೆ &#8216;ಕಂಪ್ಯೂಟರ್ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಹಿಂದುತ್ವವಾದಿಯೊಬ್ಬನ ದ್ವೇಷಪೂರಿತ ಭಾಷಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪತ್ತೆದಾರ ಮೊಹಮ್ಮದ್ ಜುಬೇರ್ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕಾನೂನನ್ನು ಜಾರಿಗೊಳಿಸಿದ್ದಾರೆ.</p>



<p>ಪ್ರಕರಣದ ತನಿಖಾಧಿಕಾರಿ ಬುಧವಾರ (ನವೆಂಬರ್ 27) ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದ್ದು, ಬಿಎನ್‌ಎಸ್‌ನ ಸೆಕ್ಷನ್ 152 ರ ಅಡಿಯಲ್ಲಿ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಅಪರಾಧದ ಅಡಿಯಲ್ಲಿ ಜುಬೈರ್ ವಿರುದ್ಧದ ಎಫ್‌ಐಆರ್‌ ದಾಖಲಾಗಿದೆ ಎಂದು <em>ಬಾರ್ ಮತ್ತು ಬೆಂಚ್ </em><a href="https://www.barandbench.com/news/mohammed-zubair-endangering-sovereignty-unity-of-india-allahabad-high-court-told">ವರದಿ ಮಾಡಿದೆ</a>.</p>



<p>ಅವರು ಎಫ್‌ಐಆರ್‌ಗೆ &#8216;ಕಂಪ್ಯೂಟರ್ ಅಪರಾಧಗಳಿಗೆ&#8217; ಸಂಬಂಧಿಸಿದ ಐಟಿ ಕಾಯ್ದೆಯ ಸೆಕ್ಷನ್ 66 ಅನ್ನು ಕೂಡ ಸೇರಿಸಿದ್ದು, ಇದರಲ್ಲಿ ದ್ವೇಷವನ್ನು ಉತ್ತೇಜಿಸುವುದು, ಸಾಕ್ಷ್ಯವನ್ನು ಸೃಷ್ಟಿಸುವುದು, ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವುದು, ಮಾನನಷ್ಟ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ನಿಬಂಧನೆಗಳಿವೆ. </p>



<p>ಹಿಂದುತ್ವವಾದಿ ಯತಿ ನರಸಿಂಗಾನಂದ ಎಂಬಾತನ ಸಹಾಯಕನ ದೂರಿನ ಮೇರೆಗೆ ಗಾಜಿಯಾಬಾದ್ ಪೊಲೀಸರು ಕಳೆದ ತಿಂಗಳು ಜುಬೈರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.</p>



<p>ಯತಿ ನರಸಿಂಹಾನಂದ ಸರಸ್ವತಿ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ,&nbsp;ಜುಬೇರ್ ಅವರು ಮುಸ್ಲಿಮರಿಂದ ಹಿಂಸಾಚಾರವನ್ನು ಪ್ರಚೋದಿಸುವ ಸಲುವಾಗಿ ನರಸಿಂಹಾನಂದರನ್ನು ಒಳಗೊಂಡ ಹಳೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ&nbsp;<a href="https://theprint.in/india/fir-filed-against-alt-news-co-founder-mohammad-zubair-in-ghaziabad-over-post-on-narsinghanand-police/2301507/">.</a></p>



<p>ಆ ತಿಂಗಳ ಆರಂಭದಲ್ಲಿ,&nbsp;ನರಸಿಂಹಾನಂದರು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ&nbsp;<a href="https://thewire.in/politics/narsinghanand-bjp-dasna-ghaziabad-israel-encounter">ವಿವಾದವುಂಟಾಯಿತು .</a></p>



<p>ಸೆಪ್ಟೆಂಬರ್ 29 ರಂದು ಗಾಜಿಯಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನರಸಿಂಹಾನಂದ ಅವರು ಪ್ರವಾದಿಯವರ ಪ್ರತಿಕೃತಿಯನ್ನು ಸುಡುವಂತೆ ಜನರನ್ನು ಪ್ರಚೋದಿಸುವ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.</p>



<p>ಉತ್ತರ ಪ್ರದೇಶದ ಹಲವೆಡೆ ಮುಸ್ಲಿಮರು ಬೀದಿಗಿಳಿದು ಪ್ರತಿಭಟನೆ ನಡೆಸಿ ಈತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.</p>



<p>ಜುಬೇರ್ ತನ್ನ ವಿರುದ್ಧದ ಎಫ್‌ಐಆರ್ ಅನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ ಮತ್ತು ರಕ್ಷಣೆಯನ್ನು ಕೋರಿದ್ದಾರೆ.</p>



<p>ನರಸಿಂಹಾನಂದನ ಕುರಿತು ತಾವು ಮಾಡಿದ ಪೋಸ್ಟ್‌ನಲ್ಲಿ ಹಿಂಸಾಚಾರಕ್ಕೆ ಕರೆ ನೀಡಿರುವುದಿಲ್ಲ ಎಂದು ಜುಬೈರ್‌ ಹೇಳಿದ್ದಾರೆ, ಆದರೆ ನರಸಿಂಹಾನಂದನ ವಿರುದ್ಧ ಕ್ರಮ ತೆಗೆದುಕೊಳ್ಳಲು ಮತ್ತು ರಕ್ಷಣೆಗಾಗಿ ಕೋರಿದ್ದರು ಎಂದು ಪಿಟಿಐ <a href="https://theprint.in/india/alt-news-co-founder-md-zubair-files-writ-petition-challenging-fir-by-ghaziabad-police/2367887/">ವರದಿ ಮಾಡಿದೆ</a>. </p>



<p>ನರಸಿಂಹಾನಂದ ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ದ್ವೇಷ ಭಾಷಣ ಪ್ರಕರಣದಲ್ಲಿ ಕೇಸು ದಾಖಲಾಗಿ, ಆಮೇಲೆ ಕೋಮು ಸೌಹಾರ್ದತೆಯನ್ನು ಕದಡುವ ಯಾವುದೇ ಹೇಳಿಕೆಗಳನ್ನು ನೀಡಬಾರದು ಜಾಮೀನು ಷರತ್ತುಗಳ ಮೇಲೆ ಜಾಮೀನಿನ ಮೂಲಕ ಹೊರಬಂದಿದ್ದರು ಎಂದು ಅವರ ರಿಟ್ ಅರ್ಜಿಯಲ್ಲಿ <a href="https://theprint.in/india/alt-news-co-founder-md-zubair-files-writ-petition-challenging-fir-by-ghaziabad-police/2367887/">ತಿಳಿಸಲಾಗಿದೆ.</a></p>



<p><em>ಲೈವ್‌ಲಾ</em> ವರದಿಯ ಪ್ರಕಾರ, ಜುಬೈರ್ ಅವರು ನರಸಿಂಹಾನಂದ್ ಅವರ ವೀಡಿಯೊಗಳನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿರುವುದು ಮಾನನಷ್ಟವಾಗುವುದಿಲ್ಲ ಎಂದು <a href="https://www.livelaw.in/high-court/allahabad-high-court/allahabad-high-court-up-police-offence-endangering-sovereignty-unity-india-invoked-against-mohammed-zubair-x-post-276521">ವಾದಿಸಿದರು .</a></p>



<p>ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 3 ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ ಎಂದು <em>ಬಾರ್ </em>ಆಂಡ್‌ ಬೆಂಚ್ ವರದಿ ತಿಳಿಸಿದೆ.</p>



<p><a href="https://www.mha.gov.in/sites/default/files/250883_english_01042024.pdf"></a>ಬಿಎನ್‌ಎಸ್‌ <a href="https://www.mha.gov.in/sites/default/files/250883_english_01042024.pdf">ಸೆಕ್ಷನ್ 152 ಹೀಗೆ ಹೇಳುತ್ತದೆ:</a></p>



<p>&#8220;ಯಾರು, ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿದ್ದು ಗೊತ್ತಿದ್ದೂ, ಪದಗಳಿಂದ, ಮಾತನಾಡುವ ಅಥವಾ ಬರೆಯುವ ಮೂಲಕ, ಅಥವಾ ಸಂಕೇತಗಳ ಮೂಲಕ, ಅಥವಾ ಕಣ್ಣಿಗೆ ಕಾಣುವಂತ ಯಾವುದೇ ರೀತಿಯಲ್ಲಿ, ಅಥವಾ ವಿದ್ಯುನ್ಮಾನ ಸಂವಹನದಿಂದ ಅಥವಾ ಆರ್ಥಿಕ ಉದ್ದೇಶದಿಂದ ಅಥವಾ ಇತರ ರೀತಿಯಲ್ಲಿ, ಪ್ರಚೋದಿಸುವ ಅಥವಾ ಪ್ರಚೋದಿಸಲು ಪ್ರಯತ್ನಿಸುವ, ಪ್ರತ್ಯೇಕತೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳು, ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪ್ರೋತ್ಸಾಹಿಸುವುದು ಅಥವಾ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುತ್ತದೆ; ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಎಸಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡಕ್ಕೆ ಗುರಿಯಾಗಬಹುದು.&#8221;</p>



<p>ಜುಬೈರ್ ವಿರುದ್ಧ ಎಫ್‌ಐಆರ್ ದಾಖಲಾಗಿರುವುದು ಇದೇ ಮೊದಲಲ್ಲ. ಅವರು 2018 ರಲ್ಲಿ ಮಾಡಿದ ಪೋಸ್ಟ್‌ಗೆ ಸಂಬಂಧಿಸಿದಂತೆ ಅವರನ್ನು ಜೂನ್ 2022 ರಲ್ಲಿ ಬಂಧಿಸಲಾಯಿತು.</p>



<p>ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳು, ನಾಗರಿಕ ಸಮಾಜ ಮತ್ತು ವಿರೋಧ ಪಕ್ಷಗಳು ವಿರೋಧಕ್ಕೆ ಕಾರಣವಾಯ್ತು, ಇದು ಭಿನ್ನಾಭಿಪ್ರಾಯದ ಬಾಯಿ ಮುಚ್ಚಿಸುವ ಮತ್ತು ಸತ್ಯ-ಶೋಧಕರನ್ನು ಗುರಿ ಮಾಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು.</p>



<p>ಜುಬೈರ್ ಸಹ-ಸಂಸ್ಥಾಪಕರಾಗಿರುವ <em>Alt News</em> ಎಂಬ ಸತ್ಯ-ಪರಿಶೀಲನಾ ಡಿಜಿಟಲ್‌ <a href="https://x.com/AltNews/status/1861789039159885931">ಮಾಧ್ಯಮವು ತನ್ನ ಹೇಳಿಕೆಯಲ್ಲಿ</a>, ಬುಧವಾರ ತಾನು &#8220;ಜುಬೈರ್ ಈ ರೀತಿ ಪಟ್ಟುಬಿಡದೆ ಕಾನೂನು ಬೆದರಿಕೆಯನ್ನು ಎದುರಿಸುತ್ತಿರುವಾಗ ಅವರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ&#8221; ಎಂದು ಹೇಳಿದೆ.</p>



<p>&#8220;ದ್ವೇಷ ಮತ್ತು ತಪ್ಪು ಮಾಹಿತಿಯನ್ನು ಬೆತ್ತಲುಗೊಳಿಸಲು ಬದ್ಧವಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಬೆದರಿಸಲು ಸರ್ಕಾರಿ ಯಂತ್ರವನ್ನು ಹೇಗೆ ಬಳಸಲಾಗುತ್ತಿದೆ ಎಂಬುದಕ್ಕೆ ಈ ಅಫಿಡವಿಟ್ ಮತ್ತೊಂದು ಉದಾಹರಣೆಯಾಗಿದೆ&#8221; ಎಂದು ಅದು ಹೇಳಿದೆ.</p>
]]></content:encoded>
					
		
		
			</item>
		<item>
		<title>ಸಾಧುಗಳ ವೇಷದಲ್ಲಿದ್ದವರು ಮುಸಲ್ಮಾನರೇ? Fact Check</title>
		<link>https://peepalmedia.com/muslims-were-caught-in-surat-posing-as-sadhus-fact-check/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 08 Nov 2024 13:15:38 +0000</pubDate>
				<category><![CDATA[ಸತ್ಯ ಶೋಧ]]></category>
		<category><![CDATA[communal]]></category>
		<category><![CDATA[communal issues]]></category>
		<category><![CDATA[Fact check]]></category>
		<category><![CDATA[hindu]]></category>
		<category><![CDATA[hindutva]]></category>
		<category><![CDATA[Muslim]]></category>
		<category><![CDATA[viral]]></category>
		<guid isPermaLink="false">https://peepalmedia.com/?p=48572</guid>

					<description><![CDATA[ಸಾಧುಗಳಂತೆ ಕೇಸರಿ ಬಟ್ಟೆ ತೊಟ್ಟು ಮೂವರಲ್ಲಿ ಓರ್ವ ವ್ಯಕ್ತಿ ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತಾನೆ. ಅವರು ಸರಿಯಾದ ಉತ್ತರವನ್ನು ನೀಡುವುದಿಲ್ಲ. ಹಾಗಾಗಿ ಈ ಹಿಂದೂ ಸನ್ಯಾಸಿಗಳಂತೆ ವೇಷ ಧರಿಸಿರುವವರು ಮುಸ್ಲಿಮರು ಎಂಬ ಒಂದು ವೀಡಿಯೋ ವೈರಲ್‌ ಆಗಿತ್ತು. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಈ ಕೇಸರಿ ಬಟ್ಟೆ ತೊಟ್ಟಿರುವವರಲ್ಲಿ, &#8220;ಕನಿಷ್ಠ ಒಂದು&#160;ಶ್ಲೋಕವನ್ನು&#160;(ಸಂಸ್ಕೃತದಲ್ಲಿ ಒಂದು ಶ್ಲೋಕ) ಹೇಳಿ, ಅಥವಾ ನಾವು ನಿಮ್ಮನ್ನು ಹೋಗಲು ಬಿಡುವುದಿಲ್ಲ. ನಿಮಗೆ ಎಷ್ಟು ದೇವರ ಹೆಸರುಗಳು ಗೊತ್ತು?” ಎಂದು ಕೇಳುತ್ತಾನೆ. ಇದಕ್ಕೆ ಆ [&#8230;]]]></description>
										<content:encoded><![CDATA[
<p>ಸಾಧುಗಳಂತೆ ಕೇಸರಿ ಬಟ್ಟೆ ತೊಟ್ಟು ಮೂವರಲ್ಲಿ ಓರ್ವ ವ್ಯಕ್ತಿ ಹಿಂದೂ ಧರ್ಮದ ಬಗ್ಗೆ ಪ್ರಶ್ನೆ ಮಾಡುತ್ತಾನೆ. ಅವರು ಸರಿಯಾದ ಉತ್ತರವನ್ನು ನೀಡುವುದಿಲ್ಲ. ಹಾಗಾಗಿ ಈ ಹಿಂದೂ ಸನ್ಯಾಸಿಗಳಂತೆ ವೇಷ ಧರಿಸಿರುವವರು ಮುಸ್ಲಿಮರು ಎಂಬ ಒಂದು ವೀಡಿಯೋ ವೈರಲ್‌ ಆಗಿತ್ತು.</p>



<p>ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಈ ಕೇಸರಿ ಬಟ್ಟೆ ತೊಟ್ಟಿರುವವರಲ್ಲಿ, &#8220;ಕನಿಷ್ಠ ಒಂದು&nbsp;<em>ಶ್ಲೋಕವನ್ನು</em>&nbsp;(ಸಂಸ್ಕೃತದಲ್ಲಿ ಒಂದು ಶ್ಲೋಕ) ಹೇಳಿ, ಅಥವಾ ನಾವು ನಿಮ್ಮನ್ನು ಹೋಗಲು ಬಿಡುವುದಿಲ್ಲ. ನಿಮಗೆ ಎಷ್ಟು ದೇವರ ಹೆಸರುಗಳು ಗೊತ್ತು?” ಎಂದು ಕೇಳುತ್ತಾನೆ. ಇದಕ್ಕೆ ಆ ಮೂವರಲ್ಲಿ ಒಬ್ಬ ವ್ಯಕ್ತಿ, &#8220;ನಾವು&nbsp;<em>ಭೋಲೆನಾಥನನ್ನು</em>&nbsp;ಆರಾಧಿಸುತ್ತೇವೆ &#8221; ಎಂದು ಉತ್ತರಿಸುತ್ತಾನೆ. </p>



<p>ವೀಡಿಯೋ ಮಾಡುತ್ತಿರುವ ವ್ಯಕ್ತಿ, &#8220;ನಿಮಗೆ ಒಂದೇ ಒಂದು ಹಿಂದೂ ದೇವತೆಯ ಹೆಸರು ತಿಳಿಯದಿದ್ದರೆ ನಿಮ್ಮನ್ನು ನಿಜವಾದ ಸಾಧುಗಳು ಎಂದು ಹೇಗೆ ನಂಬುವುದು,&#8221; ಎಂದು ಕೇಳುತ್ತಾರೆ. ಅಷ್ಟು ಹೊತ್ತಗೆ ಸುತ್ತಮುತ್ತ ಜನ ಸೇರುತ್ತಾರೆ, ಈ ಮೂವರು ಖಾವಿದಾರಿಗಳನ್ನು &#8216;ಬಾಂಗ್ಲಾದೇಶಿ&#8217; ಮತ್ತು &#8216;ರೋಹಿಂಗ್ಯಾ&#8217; ಎಂದೆಲ್ಲಾ ಬೈಯುತ್ತಾರೆ, ಕೆಲವರು ಪೆಟ್ಟು ಹೊಡೆಯಲು ಹೇಳುತ್ತಾರೆ.</p>



<p>ಆಮೇಲೆ ಈ ವೀಡಿಯೋ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಈ ಮೂವರು ಸಾಧುಗಳಲ್ಲಿ ಒಬ್ಬನ ಹೆಸರು &#8216;ಸಲ್ಮಾನ್&#8217; ಎಂದು ಸುತ್ತಮುತ್ತ ಸೇರಿದವರಿಗೆ ಹೇಳುತ್ತಾನೆ, ಅದನ್ನು ಸಾಬೀತುಪಡಿಸಲು ಐಡಿ ಕಾರ್ಡ್‌ ಕೂಡ ತೋರಿಸುತ್ತಾನೆ. </p>



<p>ಗುಜರಾತಿ ನ್ಯೂಸ್ ಚಾನೆಲ್ Zee 24 Kalak (@Zee24Kalak) ನವೆಂಬರ್ 2 ರಂದು ಈ ಘಟನೆಯ ಕುರಿತು ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡಿದೆ: “ಸಾಧುವಿನ ವೇಷದಲ್ಲಿದ್ದ ಸಲ್ಮಾನ್ ಸಿಕ್ಕಿಬಿದ್ದಿದ್ದಾನೆ! ಸೂರತ್‌ನಲ್ಲಿ ಸಾಧು ಭಿಕ್ಷೆ ಬೇಡುತ್ತಿದ್ದ ಸತ್ಯವನ್ನು ಐಡಿ ಚೆಕ್‌ನಿಂದ ಬಯಲಾದ ವಂಚನೆ,&#8221; ಎಂದು ಟೈಟಲ್‌ ನೀಡಲಾಗಿದೆ. (&nbsp;<a href="https://archive.is/kQybb" target="_blank" rel="noreferrer noopener">ಆರ್ಕೈವ್</a>&nbsp;)</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="gu" dir="ltr">સાધુના વેશમાં સલમાનનાથ પકડાયો! સુરતમાં ભીક્ષા માગી રહેલા સાધુનું આઇડી ચેક કરાતા ફૂટ્યો ભાંડો<a href="https://twitter.com/hashtag/Gujarat?src=hash&amp;ref_src=twsrc%5Etfw">#Gujarat</a> <a href="https://twitter.com/hashtag/Viral?src=hash&amp;ref_src=twsrc%5Etfw">#Viral</a> <a href="https://twitter.com/hashtag/ViralVideo?src=hash&amp;ref_src=twsrc%5Etfw">#ViralVideo</a> <a href="https://twitter.com/hashtag/Trending?src=hash&amp;ref_src=twsrc%5Etfw">#Trending</a> <a href="https://twitter.com/hashtag/TrendingNow?src=hash&amp;ref_src=twsrc%5Etfw">#TrendingNow</a> <a href="https://twitter.com/hashtag/India?src=hash&amp;ref_src=twsrc%5Etfw">#India</a> <a href="https://twitter.com/hashtag/Surat?src=hash&amp;ref_src=twsrc%5Etfw">#Surat</a> <a href="https://t.co/891kz7qBdG">pic.twitter.com/891kz7qBdG</a></p>&mdash; Zee 24 Kalak (@Zee24Kalak) <a href="https://twitter.com/Zee24Kalak/status/1852752530348122214?ref_src=twsrc%5Etfw">November 2, 2024</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಗೋದಿ ಮೀಡಿಯಾ OpIndia (@OpIndia_in&nbsp;) ಕೂಡ Zee 24 Kalak ಅವರ ಟ್ವೀಟ್ ಇರುವ&nbsp;<a href="https://hindi.opindia.com/national/salman-was-begging-as-hindus-in-saffron-with-his-companions-in-surat-gujarat-video-viral/" target="_blank" rel="noreferrer noopener">ವರದಿಯನ್ನು</a>&nbsp;ಪ್ರಕಟಿಸಿದೆ.&nbsp;<br>ಜೊತಗೆ ತಮ್ಮ ಅಧಿಕೃತ X ಹ್ಯಾಂಡಲ್‌ನಲ್ಲಿ ಈ ವರದಿಯ ಲಿಂಕ್ ಅನ್ನು ಪೋಸ್ಟ್ ಮಾಡಿದೆ.  “ಸಲ್ಮಾನ್ ಮತ್ತು ಅವನ ಸಹಚರರು ಕೇಸರಿ ಬಟ್ಟೆಗಳನ್ನು ಧರಿಸಿ ಭಿಕ್ಷೆ ಬೇಡುತ್ತಿದ್ದರು. ಗುರುತಿನ ಚೀಟಿಯ ಮೂಲಕ ಅವರ ನಿಜವಾದ ಗುರುತು ಬಯಲಾಗಿದೆ. ಅವರಿಗೆ ಯಾವುದೇ ಶ್ಲೋಕವನ್ನು ಪಠಿಸಲು ಅಥವಾ ಹಿಂದೂ ದೇವರು ಮತ್ತು ದೇವತೆಗಳ ಹೆಸರನ್ನು ಸರಿಯಾಗಿ ಹೇಳಲು ಸಾಧ್ಯವಾಗಲಿಲ್ಲ,&#8221; ಎಂಬ ಟೈಟಲನ್ನು ಓಪ್‌ಇಂಡಿಯಾ ತನ್ನ X ನಲ್ಲಿ ಪೋಸ್ಟ್‌ ಮಾಡಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">भगवा वस्त्र पहन सलमान और उसके साथी भीख माँग रहे थे। आईडी कार्ड से उनकी असली पहचान सामने आई। वे न कोई श्लोक सुना सके और न ही हिंदू देवी-देवताओं का ठीक से नाम बता सके।<a href="https://twitter.com/hashtag/surat?src=hash&amp;ref_src=twsrc%5Etfw">#surat</a> <a href="https://twitter.com/hashtag/Muslims?src=hash&amp;ref_src=twsrc%5Etfw">#Muslims</a> <a href="https://t.co/RpzS60uCZ7">https://t.co/RpzS60uCZ7</a></p>&mdash; ऑपइंडिया (@OpIndia_in) <a href="https://twitter.com/OpIndia_in/status/1853248297416135101?ref_src=twsrc%5Etfw">November 4, 2024</a></blockquote><script async src="https://platform.twitter.com/widgets.js" charset="utf-8"></script>
</div><figcaption class="wp-element-caption">ಹಿಂದಿಯಲ್ಲಿ ಇರುವ ಓಪ್‌ಇಂಡಿಯಾ ವರದಿಯ ಶೀರ್ಷಿಕೆಯಲ್ಲಿ ಹೀಗೆ ಹೇಳಲಾಗಿದೆ: “ಸಂಸ್ಕೃತ ಶ್ಲೋಕಗಳನ್ನು ಕೇಳಿದಾಗ, ಅವನು ಪ್ರಾರ್ಥಿಸಲು ಪ್ರಾರಂಭಿಸಿದನು, ಅವನಿಗೆ ಒಂದೇ ಒಂದು ಹಿಂದೂ ದೇವರ ಹೆಸರನ್ನು ಹೇಳಲು ಸಾಧ್ಯವಾಯಿತು: ಸಲ್ಮಾನ್ ಮತ್ತು ಗ್ಯಾಂಗ್ ಸೂರತ್‌ನಲ್ಲಿ &#8216;ಸಾಧು&#8217;ಗಳಂತೆ ಪೋಸು ಕೊಟ್ಟು ಭಿಕ್ಷೆ ಬೇಡುತ್ತಿದ್ದರು, ಈ ರಹಸ್ಯವು ಐಡಿ ಕಾರ್ಡ್‌ ಮೂಲಕ ಬಹಿರಂಗವಾಯಿತು.&#8221; <br><br>ತನ್ನ ವರದಿಯಲ್ಲಿ ಮೂವರು ವ್ಯಕ್ತಿಗಳು &#8216;ಸಾಧುಗಳ ವೇಷ ಧರಿಸಿ ತಿರುಗಾಡುತ್ತಿದ್ದ ಮುಸ್ಲಿಮರು&#8217; ಮತ್ತು ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು OpIndia ಹೇಳಿಕೊಂಡಿದೆ. (ಆರ್ಕೈವ್ <a href="https://archive.is/ozZlY" target="_blank" rel="noreferrer noopener">1</a>,&nbsp;<a href="https://archive.is/UL0TQ" target="_blank" rel="noreferrer noopener">2</a>,&nbsp;<a href="https://archive.is/KMBET" target="_blank" rel="noreferrer noopener">3</a>)</figcaption></figure>



<p>ಮತ್ತೊಂದು ಕೂಗುಮಾರಿ ಚಾನೆಲ್ , ಸುದರ್ಶನ್ ನ್ಯೂಸ್ (@SudarshanNewsTV), ಈ ಘಟನೆಯ ಕುರಿತು ವೀಡಿಯೊ ವರದಿಯನ್ನು ಈ  ರೀತಿಯ ಶೀರ್ಷಿಕೆಯ ಜೊತೆಗೆ ಹಂಚಿಕೊಂಡಿದೆ: &#8220;ಗುಜರಾತ್‌ನ ಸೂರತ್‌ನಲ್ಲಿ, &#8216;ಜಿಹಾದಿ&#8217; ಸಲ್ಮಾನ್ ಮತ್ತು ಅವನ ಗ್ಯಾಂಗ್ ಸಾಧುಗಳಂತೆ ಪೋಸ್ ಕೊಡುತ್ತಾ ಭಿಕ್ಷೆ ಬೇಡುತ್ತಿದ್ದರು &#8230; ಕೇಸರಿ ವಸ್ತ್ರಗಳನ್ನು ಧರಿಸಿ ಸಾಧುಗಳಂತೆ ಪೋಸು ಕೊಟ್ಟ ಈ ಮೂರು &#8216;ಜಿಹಾದಿಗಳು&#8217; ಬಂಧಿಸಲಾಗಿದೆ. (&nbsp;<a href="https://archive.is/EwDAJ" target="_blank" rel="noreferrer noopener">ಆರ್ಕೈವ್</a>&nbsp;)</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">गुजरात के सूरत में ‘साधु’ बन भीख मांग रहा था जिहादी सलमान और उसकी गैंग&#8230;<br><br>साधू वेश में भगवा वस्त्र पहन कर घूम रहे 3 जिहादी गिरफ्तार&#8230;<a href="https://twitter.com/hashtag/Surat?src=hash&amp;ref_src=twsrc%5Etfw">#Surat</a> <a href="https://twitter.com/hashtag/Gujarat?src=hash&amp;ref_src=twsrc%5Etfw">#Gujarat</a> <a href="https://t.co/RQDu5uWvIk">pic.twitter.com/RQDu5uWvIk</a></p>&mdash; Sudarshan News (@SudarshanNewsTV) <a href="https://twitter.com/SudarshanNewsTV/status/1853383294391636450?ref_src=twsrc%5Etfw">November 4, 2024</a></blockquote><script async src="https://platform.twitter.com/widgets.js" charset="utf-8"></script>
</div><figcaption class="wp-element-caption">ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ (@epanchjanya) ಕೂಡ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಹಿಂದಿಯಲ್ಲಿರುವ ಈ ಟ್ವೀಟ್‌ನಲ್ಲಿ, “ಸಾಧುಗಳ ವೇಷದಲ್ಲಿ ಸಿಕ್ಕಿಬಿದ್ದ ಮುಸ್ಲಿಮರು! ನೀವು ಸಾಧು ಆಗಬೇಕೆಂದಿದ್ದರೆ, ಹಿಂದೂವಾಗಿ ಯಾಕೆ ಬದಲಾಗಬಾರದು? ಸಲ್ಮಾನ್ ಎಂಬ ಮುಸ್ಲಿಂ ವ್ಯಕ್ತಿ ಕೇಸರಿ ವೇಷ ಧರಿಸಿ ಸಾಧುವಿನಂತೆ ಪೋಸು ಕೊಟ್ಟು ಭಿಕ್ಷೆ ಬೇಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನವೆಂಬರ್ 3, 2024 ರಂದು ನಡೆದಿದ್ದು, ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಇದೇ ಮೊದಲಲ್ಲ-ಸಾಧುಗಳ ವೇಷ ಧರಿಸಿದ ಮುಸ್ಲಿಮರು ಈ ಹಿಂದೆ 16 ಬಾರಿ ಸಿಕ್ಕಿಬಿದ್ದಿದ್ದಾರೆ!” (<a href="https://archive.is/6fh1t" target="_blank" rel="noreferrer noopener">ಆರ್ಕೈವ್</a>&nbsp;)</figcaption></figure>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">साधु भेष में पकड़े गए मुस्लिम!<br><br>साधु ही बनना है तो हिन्दू क्यों नहीं बन जाते!<br><br>भगवा वस्त्र पहना हुआ मुस्लिम युवक सलमान, साधु के भेष में भीख माँगते हुए पकड़ा गया।<br><br>गुजरात के सूरत में 3 नवंबर, 2024 को ये घटना हुई जिसके बाद पुलिस ने उसे गिरफ्तार किया।<br><br>ऐसा पहली बार नहीं 16 बार हो… <a href="https://t.co/3knDytJfXo">pic.twitter.com/3knDytJfXo</a></p>&mdash; Panchjanya (@epanchjanya) <a href="https://twitter.com/epanchjanya/status/1853426572537000040?ref_src=twsrc%5Etfw">November 4, 2024</a></blockquote><script async src="https://platform.twitter.com/widgets.js" charset="utf-8"></script>
</div><figcaption class="wp-element-caption">ಈ ವೀಡಿಯೋ ಫೇಸ್ಬುಕ್‌, X, ವಾಟ್ಸಾಪ್‌ ಗ್ರೂಪುಗಳಲ್ಲಿ ಜನರು ಹಂಚಿಕೊಂಡಿದ್ದಾರೆ. (ನೋಡಿ: <a href="https://archive.is/gFT8p" target="_blank" rel="noreferrer noopener">&nbsp;@ajaychauhan41</a>&nbsp;,&nbsp;<br><a href="https://archive.is/XTZVV" target="_blank" rel="noreferrer noopener">@Sudanshutrivedi</a>)</figcaption></figure>



<p><strong>ಸತ್ಯ ಏನು?</strong></p>



<p>ಸತ್ಯಾನ್ವೇಷಣೆಯ ನಂತರ ಈ ಮೂವರೂ ಸಂತರು ಹಿಂದೂಗಳು ಎಂಬುದು ಕಂಡುಬಂದಿದೆ. ದೈನಿಕ್ ಭಾಸ್ಕರ್ ಗ್ರೂಪ್‌ನ ಗುಜರಾತಿ ದಿನಪತ್ರಿಕೆ ದಿವ್ಯಾ ಭಾಸ್ಕರ್ ಈ ಬಗ್ಗೆ&nbsp;<a href="https://x.com/Divya_Bhaskar/status/1853390257640898813" target="_blank" rel="noreferrer noopener">ವರದಿ</a> ಮಾಡಿದೆ. ನವೆಂಬರ್ 4 ರಂದು, ಪೊಲೀಸ್ ತನಿಖೆಯ ನಂತರ ಇವರು&nbsp;ಮೂವರೂ ಹಿಂದೂಗಳು ಮತ್ತು ಜುನಾಗಢದಿಂದ ಬಂದವರು ಎಂದು&nbsp;<a href="https://www.divyabhaskar.co.in/amp/local/gujarat/surat/news/suspicion-of-a-person-of-another-religion-masquerading-as-a-monk-133906340.html" target="_blank" rel="noreferrer noopener">ತಿಳಿದುಬಂದಿದೆ</a>&nbsp;ಎಂದು ವರದಿ ಹೇಳುತ್ತದೆ.</p>



<p>ಸೂರತ್‌ನ ಅದಾಜನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆರ್‌ಬಿ ಗೋಜಿಯಾ ಅವರು ಮೂವರು ಸನ್ಯಾಸಿಗಳನ್ನು ಅನುಮಾನಾಸ್ಪದ ವ್ಯಕ್ತಿಗಳೆಂದು ವರದಿ ಮಾಡಿದ್ದಾರೆ ಮತ್ತು ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು&nbsp;<a href="https://www.divyabhaskar.co.in/amp/local/gujarat/surat/news/suspicion-of-a-person-of-another-religion-masquerading-as-a-monk-133906340.html" target="_blank" rel="noreferrer noopener">ವರದಿ</a>&nbsp;ಉಲ್ಲೇಖಿಸಿದೆ.&nbsp;ವಿಚಾರಣೆಯ ನಂತರ, ಪರಿಶೀಲನೆಗಾಗಿ, ಅವರ ನಿಜವಾದ ಗುರುತನ್ನು ನಿರ್ಧರಿಸಲು ಜುನಾಗಢದಲ್ಲಿ ತನಿಖೆಯನ್ನು ಪ್ರಾರಂಭಿಸಲಾಯಿತು. ಅವರು ನೀಡಿದ ಹೆಸರುಗಳು ಸತ್ಯವಾಗಿವೆ ಎಂದು ಕಂಡುಬಂದಿದೆ. ಒಬ್ಬ ವ್ಯಕ್ತಿಯ ಹೆಸರು ಸಲ್ಮನಾಥ್ ಆಗಿದ್ದು, ಆತನನ್ನು ಸಲ್ಮಾನ್‌, ಓರ್ವ ಮುಸಲ್ಮಾನ ಎಂದು ಹಿಂದೂಗಳು ಭಾವಿಸಿ ಆತನ ಮೇಲೆಗೆ ಹಲ್ಲೆಗೆ ಮುಂದಾಗಿದ್ದಾರೆ. ಆದರೆ, ಆತ ಹಿಂದೂ ಎಂಬುದು ದೃಢಪಟ್ಟಿದೆ.</p>



<p>Alt News ಈತನ ಮತದಾರ ಚೀಟಿಯನ್ನು ವರದಿ ಮಾಡಿದ್ದು, ಈ ಚೀಟಿಯಲ್ಲಿ ಈತನ ಹೆಸರು ಹೆಸರು ಸಲ್ಮನಾಥ್ ಪರ್ಮಾರ್ ಮತ್ತು ಅವನ ತಂದೆಯ ಹೆಸರು ಸೂರಮ್ನಾಥ್ ಪರ್ಮಾರ್ ಎಂದು ಉಲ್ಲೇಖಿಸಲಾಗಿದೆ.&nbsp;<br></p>



<p>ರಜಪೂತರಲ್ಲಿ <a href="https://forebears.io/surnames/parmar#meaning" target="_blank" rel="noreferrer noopener">ಪರ್ಮಾರ್</a>&nbsp;ಎಂಬ ಉಪನಾಮವಿದೆ. ಈ ಪರ್ಮಾರರು ಹೆಚ್ಚಾಗಿ ಉತ್ತರ ಮತ್ತು ಮಧ್ಯ ಭಾರತದಿಂದ, ವಿಶೇಷವಾಗಿ ರಾಜಸ್ಥಾನ, ಗುಜರಾತ್, ಪಂಜಾಬ್, ಹರಿಯಾಣ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಮಹಾರಾಷ್ಟ್ರದಿಂದ ಬಂದವರು.</p>



<p><em>ಆದ್ದರಿಂದ ಸಾಧುವಿನ ವೇಷ</em> ಧರಿಸಿದ ಮೂವರು ಮುಸ್ಲಿಮರು ಭಿಕ್ಷೆ ಬೇಡುತ್ತಿದ್ದಾರೆ ಎಂಬುದು ಹಸಿಹಸಿ ಸುಳ್ಳು, ಭಿಕ್ಷೆ ಬೇಡುತ್ತಿದ್ದವರು ಹಿಂದೂ ಸಾಧುಗಳೇ ಆಗಿದ್ದಾರೆ.</p>



<p>ಈ ರೀತಿ ಹಿಂದೂ ಸಾಧುಗಳನ್ನು ಮುಸಲ್ಮಾನರು ಎಂದು ಕರೆದು ಕಿರುಕುಳ ನೀಡಿದ್ದು ಇದೇ ಮೊದಲೇನಲ್ಲ. <a href="https://www.altnews.in/up-meerut-sadhus-thrashed-suspicion-of-being-child-kidnappers-video-viral-with-false-muslim-angle/" target="_blank" rel="noreferrer noopener">ಈ 2024 ರ ಜುಲೈನಲ್ಲಿ</a> ಮೀರತ್‌ನಲ್ಲಿ ಮೂವರು ಸಾಧುಗಳ ಗುಂಪಿಗೆ ಮುಸ್ಲಿಮರು ಎಂಬ ಹಣೆಪಟ್ಟಿ ಕಟ್ಟಲಾಯಿತು. ಸಂಚಾರಿ ಸನ್ಯಾಸಿಗಳನ್ನು ಮಕ್ಕಳ ಅಪಹರಣಕಾರರು ಎಂದು ಸುಳ್ಳು ಆರೋಪ ಹೊರಿಸಿದ ಘಟನೆಗಳೂ ನಡೆದಿವೆ. </p>



<p></p>
]]></content:encoded>
					
		
		
			</item>
		<item>
		<title>Fact Check: IC 814 ಸೀರಿಸ್‌ನಲ್ಲಿ ಕಂದಹಾರ್ ಉಗ್ರರಿಗೆ ಹಿಂದೂ ಹೆಸರೇ? ಸತ್ಯ ಏನು?</title>
		<link>https://peepalmedia.com/fact-check-ic-814-the-kandahar-hijack-series-used-hindu-names-to-hijackers/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 03 Sep 2024 15:44:41 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಸುಳ್ಳು ಸುದ್ದಿ ಪತ್ತೆ]]></category>
		<category><![CDATA[bjp]]></category>
		<category><![CDATA[fact]]></category>
		<category><![CDATA[Fact check]]></category>
		<category><![CDATA[facts]]></category>
		<category><![CDATA[fake]]></category>
		<category><![CDATA[Fake news]]></category>
		<category><![CDATA[IC 814: The Kandahar Hijack]]></category>
		<category><![CDATA[kandahar hijack]]></category>
		<category><![CDATA[LK advani]]></category>
		<category><![CDATA[netflix]]></category>
		<category><![CDATA[Series]]></category>
		<category><![CDATA[webseries]]></category>
		<guid isPermaLink="false">https://peepalmedia.com/?p=44878</guid>

					<description><![CDATA[&#8216;IC 814: ದಿ ಕಂದಹಾರ್ ಹೈಜಾಕ್&#8217; (IC 814: The Kandahar Hijack) ಎಂಬ ವೆಬ್‌ ಸೀರಿಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ.&#160; ಈ ಸೀರಿಸ್‌ನ ನಿರ್ದೇಶಕರಲ್ಲಿ ಒಬ್ಬರಾದ ಅನುಭವ್ ಸಿನ್ಹಾ ಅವರು ಉಗ್ರಗಾಮಿಗಳ ಪಾತ್ರಗಳು &#8216;ಭೋಲಾ&#8217; ಮತ್ತು &#8216;ಶಂಕರ್&#8217; ಎಂಬ ಕೋಡ್‌ನೇಮ್‌ಗಳನ್ನು ಬಳಸಿದಂತೆ ಚಿತ್ರಿಸಿದ ಕಾರಣಕ್ಕೆ ಬಲಪಂಥೀಯ ಗುಂಪುಗಳ ಮತ್ತು ಗೋದಿ ಮೀಡಿಯಗಳ ಮೌಖಿಕ ದಾಳಿಗೆ ಗುರಿಯಾಗಿದ್ದಾರೆ.&#160;&#160; 176 ಪ್ರಯಾಣಿಕರು ಇದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ IC 814 ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಡಿಸೆಂಬರ್ 24, 1999 ರಂದು [&#8230;]]]></description>
										<content:encoded><![CDATA[
<p>&#8216;IC 814: ದಿ ಕಂದಹಾರ್ ಹೈಜಾಕ್&#8217; (IC 814: The Kandahar Hijack) ಎಂಬ ವೆಬ್‌ ಸೀರಿಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ.&nbsp; ಈ ಸೀರಿಸ್‌ನ ನಿರ್ದೇಶಕರಲ್ಲಿ ಒಬ್ಬರಾದ ಅನುಭವ್ ಸಿನ್ಹಾ ಅವರು ಉಗ್ರಗಾಮಿಗಳ ಪಾತ್ರಗಳು &#8216;ಭೋಲಾ&#8217; ಮತ್ತು &#8216;ಶಂಕರ್&#8217; ಎಂಬ ಕೋಡ್‌ನೇಮ್‌ಗಳನ್ನು ಬಳಸಿದಂತೆ ಚಿತ್ರಿಸಿದ ಕಾರಣಕ್ಕೆ ಬಲಪಂಥೀಯ ಗುಂಪುಗಳ ಮತ್ತು ಗೋದಿ ಮೀಡಿಯಗಳ ಮೌಖಿಕ ದಾಳಿಗೆ ಗುರಿಯಾಗಿದ್ದಾರೆ.&nbsp;&nbsp;</p>



<p>176 ಪ್ರಯಾಣಿಕರು ಇದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ IC 814 ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಡಿಸೆಂಬರ್ 24, 1999 ರಂದು ಹೊರಟಿತ್ತು. ಇದನ್ನು ಐವರು ಪಾಕಿಸ್ತಾನಿ ಉಗ್ರರು ಹೈಜಾಕ್ ಮಾಡಿದರು, ನಂತರ ಬೇರೆ ಬೇರೆ ಸ್ಥಳಗಳಲ್ಲಿ ವಿಮಾನವನ್ನು ಇಳಿಸಿ, ಕೊನೆಗೆ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಇಳಿಸಿದರು. ಏಳು ದಿನಗಳ ನಂತರ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಅಪಹರಣಕಾರರ ಬೇಡಿಕೆಗಳನ್ನು ಭಾಗಶಃ ಒಪ್ಪಿಕೊಂಡಿತು. ಭಾರತದ ಜೈಲಿನಲ್ಲಿದ್ದ ಮೂವರು ಉಗ್ರರಾದ ಮೌಲಾನಾ ಮಸೂದ್ ಅಜರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಜರ್ಗರ್ ಅವರನ್ನು ಪ್ರಯಾಣಿಕರಿಗೆ ಬದಲಾಗಿ ಬಿಡುಗಡೆಗೊಳಿಸಿದರು. ಕೊನೆಗೆ ಅಪಹರಣಕಾರರು ಜನರನ್ನು ಬಿಡುಗಡೆ ಮಾಡಿದರು. ಈ ಘಟನೆಯನ್ನು ಆಧರಿಸಿ &#8216;IC 814: ದಿ ಕಂದಹಾರ್ ಹೈಜಾಕ್&#8217; ವೆನ್‌ಸೀರಿಸ್‌ ಪ್ರಸಾರವಾಗಿದೆ.&nbsp;</p>



<p>ಇದರಲ್ಲಿ ಅನುಭವ್ ಸಿನ್ಹಾ ಅವರು ವಿಮಾನ ಹೈಜಾಕ್‌ ಮಾಡಿದ ಉಗ್ರರನ್ನು ಭೋಲಾ ಮತ್ತು ಶಂಕರ್‌ ಎಂದು ಹೆಸರಿಸಿದ್ದಾರೆ. ಇದು ಉಗ್ರರನ್ನು &#8216;ವೈಟ್‌ವಾಶ್&#8217;‌ ಮಾಡುವ ತಂತ್ರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯರೂ, ಗೋದಿ ಮಾಧ್ಯಮಗಳೂ ಪ್ರಚಾರ ಮಾಡಿವೆ.</p>



<p>ಕರ್ನಾಟಕದ News18 ಕನ್ನಡ ಎಂಬ ಮಾಧ್ಯಮ ಕೂಡ ಈ ಸುಳ್ಳನ್ನು ಹರಿಯಬಿಟ್ಟಿದೆ. ಪೋಸ್ಟ್‌ ಕಾರ್ಡ್‌ ಸೇರಿದಂತೆ ಕೋಮು ಪ್ರಚೋದಕ ಮತ್ತು ಸುಳ್ಳು ಸುದ್ದಿಗಳನ್ನು ಹರಡುವ ಮಾಧ್ಯಮಗಳು ಈ ವಿಚಾರವನ್ನು ತಿರುಚಿ ದ್ವೇಷ ಹೊರಹಾಕಿವೆ.</p>


<div class="wp-block-image">
<figure class="aligncenter size-full is-resized"><img decoding="async" width="678" height="482" src="https://peepalmedia.com/wp-content/uploads/2024/09/WhatsApp-Image-2024-09-03-at-8.36.08-PM.jpeg" alt="" class="wp-image-44882" style="width:482px;height:auto" srcset="https://peepalmedia.com/wp-content/uploads/2024/09/WhatsApp-Image-2024-09-03-at-8.36.08-PM.jpeg 678w, https://peepalmedia.com/wp-content/uploads/2024/09/WhatsApp-Image-2024-09-03-at-8.36.08-PM-300x213.jpeg 300w, https://peepalmedia.com/wp-content/uploads/2024/09/WhatsApp-Image-2024-09-03-at-8.36.08-PM-150x107.jpeg 150w" sizes="(max-width: 678px) 100vw, 678px" /></figure></div>

<div class="wp-block-image">
<figure class="aligncenter size-full is-resized"><img decoding="async" width="576" height="916" src="https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM.jpeg" alt="" class="wp-image-44885" style="width:275px;height:auto" srcset="https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM.jpeg 576w, https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM-189x300.jpeg 189w, https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM-150x239.jpeg 150w, https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM-300x477.jpeg 300w" sizes="(max-width: 576px) 100vw, 576px" /></figure></div>


<p><strong>ಸತ್ಯ ಏನು?</strong></p>



<p>IC 814 ವಿಮಾನವನ್ನು ಅಪಹರಿಸಿದ ಕುರಿತು ಅನೇಕ ಸುದ್ದಿ ವರದಿಗಳನ್ನು ನಾವು Google ನಲ್ಲಿ ನೋಡಬಹುದು. ಇವೆಲ್ಲವೂ ಇಬ್ಬರು ಅಪಹರಣಕಾರರು ಭೋಲಾ ಮತ್ತು ಶಂಕರ್ ಎಂಬ ಕೋಡ್ ಅನ್ನು ಬಳಸಿರುವುದನ್ನು ವರದಿ ಮಾಡಿವೆ. ವಿಮಾನದಲ್ಲಿದ್ದ ಭೋಪಾಲ್‌ನ ದಂಪತಿಗಳ ಅನುಭವದ ಬಗ್ಗೆ <a href="https://timesofindia.indiatimes.com/city/bhopal/21-yrs-on-kandahar-hijack-still-haunts-bhopal-couple/articleshow/79935600.cms">ಟೈಮ್‌ ಆಫ್‌ ಇಂಡಿಯಾ</a> ವರದಿಯೊಂದನ್ನು ಡಿಸೆಂಬರ್ 24, 2020 ರಂದು ಪ್ರಕಟಿಸಿದೆ. ಇದರಲ್ಲಿ “ಬರ್ಗರ್, ಡಾಕ್ಟರ್, ಚೀಫ್, ಭೋಲಾ ಮತ್ತು ಶಂಕರ್…” ಎಂದು ಉಗ್ರರು ತಮ್ಮನ್ನು ತಾವು ಪರಸ್ಪರ ಕರೆಸಿಕೊಳ್ಳುತ್ತಿದ್ದರೆಂದೂ, ದುರ್ಗೇಶ್ ಮತ್ತು ರೇಣು ಗೋಯೆಲ್ ಎಂಬ ಈ ದಂಪತಿಗಳಿಗೆ ಅದೊಂದು ದುಸ್ವಪ್ನವಾಗಿ ಕಾಡುತ್ತಿದೆ ಎಂದು ವರದಿ ಹೇಳಿದೆ.</p>



<p>TOI ನ ವರದಿಯಲ್ಲಿ, ಭಯಾನಕತೆಯನ್ನು ವಿವರಿಸುತ್ತಾ, ಗೋಯೆಲ್, &#8220;ಭೋಲಾ ಮತ್ತು ಬರ್ಗರ್ ಪ್ರಯಾಣಿಕರನ್ನು ಹೊಡೆಯುತ್ತಿದ್ದರು, ಆದರೆ ಡಾಕ್ಟರ್ ಮತ್ತು ಚೀಫ್‌ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದರು,&#8221; ಎಂದು ಹೇಳಿದ್ದಾರೆ.</p>



<p>ನೇಪಾಳ ಟೈಮ್ಸ್‌ನ ಪತ್ರಿಕೆ ಡಿಸೆಂಬರ್ 31, 2019 ರಂದು ಪ್ರಕಟಿಸಿದ&nbsp; <a href="https://nepalitimes.com/latest/remembering-ic814">Remembering&nbsp; IC814</a> ಎಂಬ ವರದಿಯಲ್ಲಿ ಆ ವಿಮಾನದಲ್ಲಿದ್ದ ಸಂಜಯ್ ಧಿತಾಲ್, &#8220;ಐದು ಅಪಹರಣಕಾರರಲ್ಲಿ ಎಲ್ಲರಿಗೂ ಕೋಡ್ ನೇಮ್‌ಗಳು ಇದ್ದವು: ಮ್ಯಾನೇಜರ್, ಶಂಕರ್, ಭೋಲಾ, ಬರ್ಗರ್ ಮತ್ತು ಡಾಕ್ಟರ್,&#8221; ಎಂದು ಹೇಳಿರುವುದು ವರದಿಯಾಗಿದೆ.</p>



<p>ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿ&nbsp; ಮಾರ್ಚ್ 6, 2019 ರಂದು ಪ್ರಕಟವಾದ IC 814 hijack: How Jaish-e-Mohammed chief Masood Azhar’s brother planned Indian Airlines hijack in 1999 ಎಂಬ ವರದಿಯಲ್ಲಿ&nbsp; ಪ್ರತಿಯೊಬ್ಬ ಅಪಹರಣಕಾರರು ಕೋಡ್ ಹೆಸರನ್ನು ಬಳಸಿರುವುದನ್ನು ಉಲ್ಲೇಖಿಸಲಾಗಿದೆ.&nbsp;</p>



<figure class="wp-block-image"><img decoding="async" src="https://lh7-rt.googleusercontent.com/docsz/AD_4nXcB-bRhOTZJGWPur_LxhNCH3xg3i0zQuSIuiiTP-bh-aa2cXENgZ7DlhAQwWfJ-K4Lk6wAfAJZvzJiNLINwwG096CVxPQguQ--EMDRt-1TL-C2hurmMhjBKG2Pe3f0zgol3mb-i7nmNy_z7eZYqAbTJXKHk?key=S0LKrvHHDnwa9IPkbPfMEw" alt=""/></figure>



<p>ಕೋಡ್ ಹೆಸರುಗಳನ್ನು ಬಳಸಿರುವುದನ್ನು IC 814 ರ ಫ್ಲೈಟ್ ಎಂಜಿನಿಯರ್&nbsp; ಅನಿಲ್ ಕೆ ಜಗ್ಗಿಯಾ ಕೂಡ ದೃಢೀಕರಿಸಿದ್ದಾರೆ&nbsp; , ಅವರು 2021 ರಲ್ಲಿ ತಮ್ಮ ಅನುಭವವನ್ನು&nbsp; <a href="https://dod.overdrive.com/media/6383398">IC 814 Hijacked: The Inside Story </a>ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.</p>



<p>ಎಲ್ಲಕ್ಕೂ ಮುಖ್ಯವಾಗಿ ಘಟನೆ ಮುಗಿದ ಒಂದು ವಾರದ ನಂತರ <a href="https://www.mea.gov.in/Speeches-Statements.htm?dtl/5481/Union+Home+Ministers+StatementIndian+Airlines+Flight+IC814">ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ</a>ಲ್ಲಿ ಈ ಅಪಹರಣಕಾರರು ಚೀಫ್‌, ಡಾಕ್ಟರ್‌, ಶಂಕರ್‌ ಮತ್ತು ಬೋಲಾ ಎಂದು ತಮ್ಮನ್ನು ತಾವು ಕರೆಸಿಕೊಳ್ಳುತ್ತಿದ್ದ ಬಗ್ಗೆ ಹೇಳಿದೆ.</p>



<figure class="wp-block-image"><img decoding="async" src="https://lh7-rt.googleusercontent.com/docsz/AD_4nXfIt-2ukwZhdcV0k0BfeZe1I6wE2f1UY5TAyap-E8f8X06SI8Ph7lZ1fgGNmJnNkX0PGoTlpBn1mCo5HyuxVjo0izO58RSXyoI0vCUb8tWjVaG3h5wyyJnGv2lbEqVctBhNCl3NAOSB5Uj0XvKHC-kYno5o?key=S0LKrvHHDnwa9IPkbPfMEw" alt=""/></figure>



<figure class="wp-block-image"><img decoding="async" src="https://lh7-rt.googleusercontent.com/docsz/AD_4nXexkBtTuxoMV5Spu0hAb8MKP_qxeR--qaqhUR-6G_H7jQaKrpYfjgCCNYCKv6sI4BITgau-gwjUtC0wT9Chgo0fd2iyyjz0WuSVLz97FdZu2m0Pk4CGsdonj5JB6qXx0YOphzUIBzJGiyz8eNvXhcp2uoM?key=S0LKrvHHDnwa9IPkbPfMEw" alt=""/></figure>



<p>ಹೈಜಾಕ್ ಸಮಸ್ಯೆ ಮುಗಿದ ನಂತರ ತನ್ನ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಆಗಿನ <a href="https://www.tribuneindia.com/2000/20000107/main2.htm">ಗೃಹ ಸಚಿವ ಎಲ್‌ ಕೆ ಅಡ್ವಾಣಿ</a> ಅವರು ಐವರು ಅಪಹರಣಕಾರರನ್ನು ಬಹವಾಲ್‌ಪುರದ ಇಬ್ರಾಹಿಂ ಅಖ್ತರ್ ಅಲಿಯಾಸ್ ಅಥರ್, ಕರಾಚಿಯ ಡಿಫೆನ್ಸ್‌ ಏರಿಯಾದ ನಿವಾಸಿ ಸನ್ನಿ ಅಹ್ಮದ್ ಖಾಜಿ, ಕರಾಚಿಯ  ಗುಲ್ಶನ್ ಅಖ್ತರ್ ಕಾಲೋನಿಯ ಮಿಸ್ತ್ರಿ ಜಹೂರ್ ಇಬ್ರಾಹಿಂ, ಸುಕ್ಕೂರ್ ನಗರದ ಶಾಕಿರ್ ಎಂದು ಗುರುತಿಸಿರುವುದಾಗಿ ಹೇಳಿದ್ದಾರೆ. ಮುಂದುವರಿದು, ಮೌಲಾನಾ ಅಜರ್‌ನ ಸಹೋದರ ಎಂದು ಕರೆಸಿಕೊಂಡಿರುವ ಇಬ್ರಾಹಿಂನನ್ನು &#8220;ಮುಖ್ಯಸ್ಥ&#8221; ಎಂದೂ, ಸಯೀದ್‌ನನ್ನು &#8220;ಡಾಕ್ಟರ್&#8221; ಎಂದೂ, ಖಾಜಿಯನ್ನು &#8220;ಬರ್ಗರ್&#8221; ಎಂದೂ, ಇಬ್ರಾಹಿಂನನ್ನು &#8220;ಭೋಲಾ&#8221; ಎಂದೂ, ಶಾಕಿರ್‌ನನ್ನು &#8220;ಶಂಕರ್&#8221; ಎಂದು ಎಂದು ಕರೆಯಲಾಗುತ್ತಿತ್ತು, ಅಪಹರಣಕಾರರು ವಿಮಾನದಲ್ಲಿ ಪರಸ್ಪರ ಕರೆಸಿಕೊಳ್ಳಲು ಬಳಸುತ್ತಿದ್ದ ಹೆಸರುಗಳು ಇವು ಎಂದು ಅಡ್ವಾಣಿ ಹೇಳಿದ್ದಾರೆ.</p>



<p>ಇದರಿಂದ ತಿಳಿದು ಬರುವುದು ಏನೆಂದರೆ, IC 814: The Kandahar Hijack ನಲ್ಲಿ ಬಳಸಲಾಗಿರುವ ಭೋಲಾ ಮತ್ತು ಶಂಕರ್‌ ಎಂಬ ಅಪಹರಣಕಾರರ ಹೆಸರು ಸೀರಿಸ್‌ಗೆ ಕಥೆ ರಚಿಸಿದವರ ಸೃಷ್ಟಿಯಲ್ಲ, ಕಥೆಯನ್ನು ಬರೆಯುವಾಗ ನಿಜ ಘಟನೆಯನ್ನು ಅಧ್ಯಯನ ಮಾಡಿ ರಚಿಸಿದ್ದಾರೆ. ಅಪಹರಣಕಾರರು ತಮ್ಮನ್ನು ತಾವು ಈ ಹೆಸರುಗಳಿಂದ ಕರೆಸಿಕೊಂಡ ಬಗ್ಗೆ ಸ್ವತಃ ಆಗ ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರವೇ ದೃಢೀಕರಿಸಿದೆ.</p>



<p>ಈ ವಿಚಾರದಲ್ಲಿ ಯಾವುದೇ ಅಧ್ಯಯನಗಳನ್ನು ಮಾಡದೆ ಗೋದಿ ಮೀಡಿಯಾಗಳು ಮತ್ತು ಬಲಪಂಥೀಯರು ನಡೆಸುತ್ತಿರುವ ಸುಳ್ಳು ಪ್ರಚಾರಕ್ಕೆ ಯಾವುದೇ ಹುರುಳಿಲ್ಲ, ಅದು ತಲೆಬುಡವಿಲ್ಲದ ವಾದ!</p>
]]></content:encoded>
					
		
		
			</item>
		<item>
		<title>ಮೋದಿ ಹೇಳಿದ ಹಸಿಹಸಿ ಸುಳ್ಳು: ಕಾಂಗ್ರೇಸ್‌ನಿಂದ ಮುಸ್ಲೀಮರಿಗೆ ಸರ್ಕಾರಿ ಟೆಂಡರ್‌ನಲ್ಲಿ ಕೋಟಾ</title>
		<link>https://peepalmedia.com/congress-promises-quota-for-muslims-in-govt-tenders-modiji-lied/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 03 May 2024 11:12:59 +0000</pubDate>
				<category><![CDATA[ಅಂಕಣ]]></category>
		<category><![CDATA[Election 2024]]></category>
		<category><![CDATA[Election Commission]]></category>
		<category><![CDATA[Fact check]]></category>
		<category><![CDATA[fake story]]></category>
		<category><![CDATA[Lok sabha Election 2024]]></category>
		<category><![CDATA[modi]]></category>
		<category><![CDATA[narendra modi]]></category>
		<guid isPermaLink="false">https://peepalmedia.com/?p=39095</guid>

					<description><![CDATA[ಮೇ 2 ರಂದು ಗುಜರಾತ್‌ನ ಸುರೇಂದ್ರನಗರದಲ್ಲಿ ರ್ಯಾಲಿಯಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ವಿರೋಧಿ ಮಾತುಗಳನ್ನಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ವಿಶೇಷ ಕೋಟಾ ನೀಡುವುದಾಗಿ ಭರವಸೆ ನೀಡಿದೆ ಎಂದು ಹೇಳಿದ್ದರು.[ ವಿಡಿಯೋ ಲಿಂಕ್ ; 30&#8217;32” ನಿಮಿಷದಿಂದ ನೋಡಿ] “ಕಾಂಗ್ರೆಸ್‌ನ ಪ್ರಣಾಳಿಕೆಯು ಪ್ರತಿಯೊಂದು ಅಂಶದಲ್ಲೂ ತುಷ್ಟೀಕರಣ, ಓಲೈಕೆಗಳನ್ನು ಮಾಡಲಾಗಿದೆ. ಇಂದು ನಾನು ನಿಮಗೆ ಅವರ ಪ್ರಣಾಳಿಕೆಯ ಬಗ್ಗೆ ಹೇಳುತ್ತೇನೆ ಅದು ನಿಮಗೆ ಆಘಾತವಾಗಬಹುದು. ಈಗ ಸರ್ಕಾರಿ ಟೆಂಡರ್‌ಗಳಿಗೆ ಅಲ್ಪಸಂಖ್ಯಾತರಿಗೆ, ಮುಸ್ಲಿಮರಿಗೆ ಕೋಟಾವನ್ನು ನಿಗದಿಪಡಿಸಲಾಗುವುದು ಎಂದು [&#8230;]]]></description>
										<content:encoded><![CDATA[
<p>ಮೇ 2 ರಂದು ಗುಜರಾತ್‌ನ ಸುರೇಂದ್ರನಗರದಲ್ಲಿ ರ್ಯಾಲಿಯಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ವಿರೋಧಿ ಮಾತುಗಳನ್ನಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ವಿಶೇಷ ಕೋಟಾ ನೀಡುವುದಾಗಿ ಭರವಸೆ ನೀಡಿದೆ ಎಂದು ಹೇಳಿದ್ದರು.[ <a href="https://youtu.be/2GmcIaKtNAA?si=VvYZP8zktDkAqcX8&amp;t=1832">ವಿಡಿಯೋ ಲಿಂಕ್</a> ; <em>30&#8217;32” ನಿಮಿಷದಿಂದ ನೋಡಿ]</em></p>



<p>“ಕಾಂಗ್ರೆಸ್‌ನ ಪ್ರಣಾಳಿಕೆಯು ಪ್ರತಿಯೊಂದು ಅಂಶದಲ್ಲೂ ತುಷ್ಟೀಕರಣ, ಓಲೈಕೆಗಳನ್ನು ಮಾಡಲಾಗಿದೆ. ಇಂದು ನಾನು ನಿಮಗೆ ಅವರ ಪ್ರಣಾಳಿಕೆಯ ಬಗ್ಗೆ ಹೇಳುತ್ತೇನೆ ಅದು ನಿಮಗೆ ಆಘಾತವಾಗಬಹುದು. ಈಗ ಸರ್ಕಾರಿ ಟೆಂಡರ್‌ಗಳಿಗೆ ಅಲ್ಪಸಂಖ್ಯಾತರಿಗೆ, ಮುಸ್ಲಿಮರಿಗೆ ಕೋಟಾವನ್ನು ನಿಗದಿಪಡಿಸಲಾಗುವುದು ಎಂದು ಲಿಖಿತವಾಗಿ ಹೇಳಿದ್ದಾರೆ. ಹಾಗಾದರೆ ಇನ್ಮುಂದೆ ಸರ್ಕಾರಿ ಗುತ್ತಿಗೆಗಳನ್ನು ಧರ್ಮದ ಆಧಾರದಲ್ಲಿ ನೀಡಲಾಗುವುದೇ? ಮತ್ತು ಅದಕ್ಕಾಗಿ ಮೀಸಲಾತಿಯನ್ನು ಪರಿಚಯಿಸಲಾಗಿದೆಯೇ?” ಎಂದು ಮೋದಿ ಹೇಳಿದ್ದರು.</p>



<p>ಮೋದಿ ಹೇಳಿದ್ದು ಸತ್ಯವೇ?ಅದಕ್ಕೆ ಆಧಾರವೇನು?&nbsp;</p>



<p><a href="https://manifesto.inc.in/assets/Congress-Manifesto-English-2024-Dyoxp_4E.pdf" target="_blank" rel="noreferrer noopener">2024 ರ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ</a>&nbsp;ನಿಜವಾಗಿಯೂ&nbsp;ಮುಸ್ಲಿಮರಿಗೆ ಸರ್ಕಾರಿ ಕೋಟಾಗಳನ್ನು ನೀಡುವುದಾಗಿ ಕಾಂಗ್ರೇಸ್‌ ಹೇಳಿದೆಯೇ?</p>



<p>ಇದಕ್ಕೆ ಇರುವ ಉತ್ತರ: ಮೋದಿ ಹೇಳಿದ್ದು ಹಸಿಹಸಿ ಸುಳ್ಳು!</p>



<p>ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎರಡು ಕಡೆ &#8220;ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆ&#8221; ಬಗ್ಗೆ ಹೇಳಲಾಗಿದೆ. </p>



<ol class="wp-block-list">
<li> ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ &#8216;ಸಮಾನತೆ&#8217; ವಿಭಾಗದಲ್ಲಿ: &#8220;ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಸೇರಿದ ಗುತ್ತಿಗೆದಾರರಿಗೆ&nbsp;<em>ಹೆಚ್ಚಿನ ಸಾರ್ವಜನಿಕ ಕಾಮಗಾರಿ ಗುತ್ತಿಗೆಗಳನ್ನು ನೀಡಲು</em>&nbsp;ಸಾರ್ವಜನಿಕ ಸಂಗ್ರಹಣೆ ನೀತಿಯ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು .&#8221;&nbsp;(<em>ಪುಟ 6, ಪ್ಯಾರಾ 8:</em>)</li>



<li> ಎರಡನೆಯದು &#8216;ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರು&#8217; ವಿಭಾಗದಲ್ಲಿ: &#8220;ಅಲ್ಪಸಂಖ್ಯಾತರು&nbsp;ಶಿಕ್ಷಣ, ಆರೋಗ್ಯ, ಸಾರ್ವಜನಿಕ ಉದ್ಯೋಗ,&nbsp;<em>ಸಾರ್ವಜನಿಕ ಕಾರ್ಯಗಳ ಒಪ್ಪಂದಗಳು</em>&nbsp;, ಕೌಶಲ್ಯ ಅಭಿವೃದ್ಧಿ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ&nbsp;<em>ತಾರತಮ್ಯವಿಲ್ಲದೆ&nbsp;ಅವರ ನ್ಯಾಯಯುತ ಪಾಲನ್ನು ಪಡೆಯುವುದನ್ನು</em>&nbsp;ನಾವು ಖಚಿತಪಡಿಸುತ್ತೇವೆ .&#8221; (<em>ಪುಟ 8, ಪ್ಯಾರಾ 6</em>)</li>
</ol>



<p>ನಾವು ಸ್ಪಷ್ಟವಾಗಿರುವಂತೆ, ಎಸ್‌ಸಿ ಮತ್ತು ಎಸ್‌ಟಿಗಳ ವಿಷಯದಲ್ಲಿ, “ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಸೇರಿದ ಗುತ್ತಿಗೆದಾರರಿಗೆ ಹೆಚ್ಚಿನ ಲೋಕೋಪಯೋಗಿ ಗುತ್ತಿಗೆಗಳನ್ನು ನೀಡುವುದಾಗಿ ಕಾಂಗ್ರೆಸ್ ಹೇಳುತ್ತದೆ. ಮತ್ತು ಅಲ್ಪಸಂಖ್ಯಾತರ ವಿಷಯದಲ್ಲಿ, ಪಕ್ಷವು &#8220;ಅಲ್ಪಸಂಖ್ಯಾತರು ತಮ್ಮ ನ್ಯಾಯಯುತವಾದ ಅವಕಾಶಗಳನ್ನು&#8230; ಸಾರ್ವಜನಿಕ ಕಾರ್ಯಗಳ ಒಪ್ಪಂದಗಳಲ್ಲಿ&#8230; ತಾರತಮ್ಯವಿಲ್ಲದೆ ಪಡೆಯುತ್ತಾರೆ&#8221; ಎಂದು ಖಚಿತಪಡಿಸುತ್ತದೆ ಎಂದು ಹೇಳುತ್ತದೆ.</p>



<p>ಮೋದಿ ಹೇಳಿಕೊಂಡಂತೆ ಅಲ್ಪಸಂಖ್ಯಾತರಿಗೆ ಅಥವಾ ಮುಸ್ಲಿಮರಿಗೆ ನಿಗದಿತ ಕೋಟಾದ ಬಗ್ಗೆ ಪ್ರಣಾಳಿಕೆಯಲ್ಲಿ ಎಲ್ಲಿಯೂ ಹೇಳಿಲ್ಲ. ಅಲ್ಪಸಂಖ್ಯಾತರಿಗೆ &#8216;ತಾರತಮ್ಯವಿಲ್ಲದೆ&#8217; &#8216;ನ್ಯಾಯಯುತವಾದ ಪಾಲು&#8217; ಖಾತ್ರಿಪಡಿಸುತ್ತದೆ ಎಂದು ಅದು ಭರವಸೆ ನೀಡುತ್ತದೆ. ಇನ್ನೊಂದು ಪ್ಯಾರಾಗ್ರಾಫ್‌ನಲ್ಲಿ, ವಾಸ್ತವವಾಗಿ, &#8220;ಬ್ಯಾಂಕ್‌ಗಳು ಅಲ್ಪಸಂಖ್ಯಾತರಿಗೆ ತಾರತಮ್ಯವಿಲ್ಲದೆ ಸಾಂಸ್ಥಿಕ ಸಾಲವನ್ನು ಒದಗಿಸುತ್ತವೆ ಎಂದು ಖಚಿತಪಡಿಸಿಕೊಳ್ಳಲು&#8221; ಇದು ಭರವಸೆ ನೀಡುತ್ತದೆ. </p>



<p><a href="https://timesofindia.indiatimes.com/city/mumbai/muslims-get-only-2-of-psu-bank-loans-shows-rti-query/articleshow/51385928.cms" target="_blank" rel="noreferrer noopener">ಭಾರತದ ಬ್ಯಾಂಕುಗಳಲ್ಲಿ ಮುಸ್ಲಿಮರು ಸಾಲ ಪಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. </a>ಇದರ ಅರಿವು ಕಾಂಗ್ರೇಸಿಗೆ ಇರುವುದರಿಂದ ಇದನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿದೆ. ಹಾಗಾಗಿ ಸುಳ್ಳು ಹೇಳುವ ಮೋದಿಜಿಗೆ ಕನಿಷ್ಟ ಭಾಷಣದಲ್ಲಿ ಕಾಂಗ್ರೆಸ್ &#8220;ಬ್ಯಾಂಕ್ ಸಾಲಗಳಿಗೆ ಕೋಟಾ&#8221; ಕೂಡ ಭರವಸೆ ನೀಡುತ್ತಿದೆ ಎಂದಾದರೂ ಹೇಳಿ ನೈತಿಕತೆ ಉಳಿಸಿಕೊಳ್ಳಬೇಕಿತ್ತು. </p>



<p>ಉದ್ಯೋಗ, ಶಿಕ್ಷಣ, ವಸತಿ ಮತ್ತು ಹಣಕಾಸಿನಲ್ಲಿ ಮುಸ್ಲಿಮರು ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂಬ ಅಂಶವನ್ನು&nbsp;<a href="https://www.minorityaffairs.gov.in/show_content.php?lang=1&amp;level=0&amp;ls_id=14&amp;lid=14" target="_blank" rel="noreferrer noopener">2006 ರಲ್ಲಿ ಸಾಚಾರ್ ಸಮಿತಿ</a>&nbsp;ಮತ್ತು ಅಕ್ಟೋಬರ್ 2014 ರಲ್ಲಿ ಮೋದಿ ಸರ್ಕಾರಕ್ಕೆ ಪ್ರೊ ಅಮಿತಾಬ್ ಕುಂದು ಸಲ್ಲಿಸಿದ ಫಾಲೋಅಪ್ ವರದಿಯು&nbsp;ಉತ್ತಮವಾಗಿ ದಾಖಲಿಸಿದೆ .</p>



<p>ಕೋಟಾಗಳು &#8220;ಸಮಾಜದಲ್ಲಿ ವ್ಯಾಪಕವಾಗಿರುವ, ವ್ಯವಸ್ಥಿತವಾಗಿರುವ ತಾರತಮ್ಯವನ್ನು ಪರಿಹರಿಸುವ ಹಲವಾರು ಸಾಧನಗಳಲ್ಲಿ ಒಂದಾಗಿದೆ&#8221; ಮತ್ತು &#8220;ವೈವಿಧ್ಯತೆಯ ಪ್ರಚಾರ ಮತ್ತು ತಾರತಮ್ಯ ವಿರೋಧಿಸಲು ಸರ್ಕಾರವು &#8220;ಮೀಸಲಾತಿಗಳನ್ನು ಮೀರಿ&#8221; ಕೆಲಸ ಮಾಬೇಕು ಎಂದು&nbsp;ಕುಂದು ಸಮಿತಿ<a href="https://twocircles.net/2014dec04/1417692480.html" target="_blank" rel="noreferrer noopener"> ಹೇಳಿದೆ.</a> </p>



<p>ಮೋದಿಯವರು ಸುರೇಂದ್ರನಗರದ ಭಾಷಣದಲ್ಲಿ ಸರ್ಕಾರದ ಗುತ್ತಿಗೆಗಳನ್ನು &#8216;ಕೋಟಾ ಮೂಲಕ&#8217; ನೀಡಲು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಕಾಂಗ್ರೇಸ್‌ ಮೇಲೆ ಆರೋಪಿಸಿದ್ದಾರೆ. ಆದರೆ ಅವರದೇ ಸರ್ಕಾರ 2018 ರಲ್ಲಿ ಆರು ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವಾಗ ಅನೇಕ ನಿಯಮಗಳನ್ನು ಸಡಿಲ ಮಾಡಿತ್ತು, ಈ ಕ್ಷೇತ್ರದಲ್ಲಿ ಯಾವುದೇ ಅನುಭವವಿಲ್ಲದ ಕಂಪನಿಗಳಿಗೆ ಬಿಡ್ ಮಾಡಲು<a href="https://www.ft.com/content/474706d6-1243-4f1e-b365-891d4c5d528b"> ಅವಕಾಶ ನೀಡಿತು</a>. ಮೋದಿಯವರು ತಮ್ಮ ಕಾರ್ಪೊರೇಟ್ ಸ್ನೇಹಿತರಿಗಾಗಿ ಭಾರತದಲ್ಲಿ ಮತ್ತು ವಿದೇಶಗಳಲ್ಲಿಯೂ ಸಹ ಒಪ್ಪಂದಗಳು ಮತ್ತು ನೀತಿ ಬದಲಾವಣೆಗಳನ್ನು ಮಾಡುತ್ತಿದೆ ಎಂದು ಆರೋಪಿಸಲಾಗಿದೆ. (ಇಲ್ಲಿ ನೋಡಿ&nbsp;<a href="https://www.aljazeera.com/economy/2023/3/1/modi-govt-allowed-adani-coal-deals-it-knew-were-inappropriate#:~:text=The%20Modi%20govt%20brought%20in,coal%2Dscam%20era'%20deals.&amp;text=New%20Delhi%2C%20India%20%E2%80%93%20The%20Indian,his%20coal%20business%2C%20documents%20reveal." target="_blank" rel="noreferrer noopener">ಕಲ್ಲಿದ್ದಲು ಗಣಿಗಳು</a>&nbsp;.&nbsp;<a href="https://scroll.in/article/1065827/bharti-groups-rs-150-crore-bond-donation-to-bjp-coincided-with-modi-governments-telecom-u-turn#:~:text=Between%202019%20and%202024%2C%20group,by%20the%20Election%20Commission%20shows." target="_blank" rel="noreferrer noopener">ಸ್ಪೆಕ್ಟ್ರಮ್</a>&nbsp;.&nbsp;&nbsp;<a href="https://thewire.in/rights/large-protest-in-mumbai-against-dharavi-redevelopment-project-given-to-adani-group" target="_blank" rel="noreferrer noopener">ಧಾರಾವಿ</a>&nbsp;.&nbsp;<a href="https://thewire.in/south-asia/to-legalise-power-project-given-to-adani-without-tender-sri-lanka-wants-it-turned-into-govt-to-govt-deal" target="_blank" rel="noreferrer noopener">ಶ್ರೀಲಂಕಾ</a>&nbsp;.&nbsp;<a href="https://thewire.in/government/adani-bangladesh-modi-jawhar-sircar-jaishankar" target="_blank" rel="noreferrer noopener">ಬಾಂಗ್ಲಾದೇಶ</a>​&nbsp;<a href="https://thewire.in/diplomacy/pm-modis-historic-visit-to-greece-emphasises-strong-business-agenda-report" target="_blank" rel="noreferrer noopener">ಗ್ರೀಸ್</a>)​</p>



<p>ಹೀಗೆ ಮೋದಿಯವರು ಜನರ ಹಾದಿ ತಪ್ಪಿಸುವಂತೆ ತಮ್ಮ ರಾಜಸ್ಥಾನ ಭಾಷಣದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಮಾಡಿದ ಅತ್ಯಂತ ಹೀನಾಯವಾದ ಹೇಳಿಕೆಯಂತೆ, ಸುರೇಂದ್ರನಗರದ ಭಾಷಣದಲ್ಲೂ ಕಾಂಗ್ರೇಸ್‌ ಪ್ರಣಾಳಿಕೆಯ ಬಗ್ಗೆ ಹಸಿಹಸಿಯಾದ ಸುಳ್ಳನ್ನು ಹೇಳಿದ್ದಾರೆ. ಚರಿತ್ರೆಯಲ್ಲಿ ತಾವು ಅತ್ಯಂತ ಹೆಚ್ಚು ಸುಳ್ಳುಗಳನ್ನು ಹೇಳಿದ ಭಾರತದ ಪ್ರಧಾನಿಯಾಗಿ ದಾಖಲಾಗುತ್ತಾರೆ.</p>
]]></content:encoded>
					
		
		
			</item>
		<item>
		<title>ಬಿಯರ್ ಬಾಟೆಲ್ ಮೇಲೆ ಡಿಕೆ ಸುರೇಶ್ ಫೋಟೋ ; ವೈರಲ್  ಸುದ್ದಿಯ ಅಸಲೀಯತ್ತೇನು?</title>
		<link>https://peepalmedia.com/dk-suresh-photo-on-beer-bottle/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 17 Apr 2024 15:07:40 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ರಾಜಕೀಯ]]></category>
		<category><![CDATA[ಸತ್ಯ ಶೋಧ]]></category>
		<category><![CDATA[bjp dirty politics]]></category>
		<category><![CDATA[dk suresh]]></category>
		<category><![CDATA[Fact check]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=38440</guid>

					<description><![CDATA[ದೇಶದಲ್ಲಿ ಚುನಾವಣಾ ಕಾವು ಜೋರಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ಸರ್ವೆ ಸಾಮಾನ್ಯವಾಗಿದೆ. ಇದರ ಜೊತೆಗೆ ಫೇಕ್ ನ್ಯೂಸ್ ಗಳ ಹಾವಳಿ ಸಹ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಶಿವಮೊಗ್ಗ ಬಿಜೆಪಿ ಪಕ್ಷದ ಅಧಿಕೃತ ಫೇಸ್ಬುಕ್ ಪೇಜ್ ನಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಸದ ಡಿಕೆ ಸುರೇಶ್ ಗೆ ಸಂಬಂಧಿಸಿದ ಫೋಟೋ ಹರಿದಾಡುತ್ತಿದ್ದು, &#8216;ಹೊಸ ಗ್ಯಾರಂಟಿ&#8217; ಎಂಬ ಶೀರ್ಷಿಕೆ ಅಡಿಯಲ್ಲಿ ವೈರಲ್ ಆಗಿದೆ. https://www.facebook.com/bjp4shivamogga?mibextid=ZbWKwL ವೈರಲ್ ಆಗುತ್ತಿರುವ ಫೋಟೋದಲ್ಲಿ ಬಿಯರ್ ಬಾಟಲಿಯ ಮೇಲೆ ಡಿಕೆ ಸುರೇಶ್ ಅವರ ಚಿತ್ರ [&#8230;]]]></description>
										<content:encoded><![CDATA[
<p>ದೇಶದಲ್ಲಿ ಚುನಾವಣಾ ಕಾವು ಜೋರಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳು ಸರ್ವೆ ಸಾಮಾನ್ಯವಾಗಿದೆ. ಇದರ ಜೊತೆಗೆ ಫೇಕ್ ನ್ಯೂಸ್ ಗಳ ಹಾವಳಿ ಸಹ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಶಿವಮೊಗ್ಗ ಬಿಜೆಪಿ ಪಕ್ಷದ ಅಧಿಕೃತ ಫೇಸ್ಬುಕ್ ಪೇಜ್ ನಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಸದ ಡಿಕೆ ಸುರೇಶ್ ಗೆ ಸಂಬಂಧಿಸಿದ ಫೋಟೋ ಹರಿದಾಡುತ್ತಿದ್ದು, &#8216;ಹೊಸ ಗ್ಯಾರಂಟಿ&#8217; ಎಂಬ ಶೀರ್ಷಿಕೆ ಅಡಿಯಲ್ಲಿ ವೈರಲ್ ಆಗಿದೆ.</p>



<figure class="wp-block-image size-large"><img loading="lazy" decoding="async" width="650" height="1024" src="https://peepalmedia.com/wp-content/uploads/2024/04/IMG-20240417-WA0036-650x1024.jpg" alt="" class="wp-image-38444" srcset="https://peepalmedia.com/wp-content/uploads/2024/04/IMG-20240417-WA0036-650x1024.jpg 650w, https://peepalmedia.com/wp-content/uploads/2024/04/IMG-20240417-WA0036-191x300.jpg 191w, https://peepalmedia.com/wp-content/uploads/2024/04/IMG-20240417-WA0036-768x1209.jpg 768w, https://peepalmedia.com/wp-content/uploads/2024/04/IMG-20240417-WA0036-975x1536.jpg 975w, https://peepalmedia.com/wp-content/uploads/2024/04/IMG-20240417-WA0036-150x236.jpg 150w, https://peepalmedia.com/wp-content/uploads/2024/04/IMG-20240417-WA0036-300x472.jpg 300w, https://peepalmedia.com/wp-content/uploads/2024/04/IMG-20240417-WA0036-696x1096.jpg 696w, https://peepalmedia.com/wp-content/uploads/2024/04/IMG-20240417-WA0036.jpg 1016w" sizes="auto, (max-width: 650px) 100vw, 650px" /></figure>



<p><a href="https://www.facebook.com/bjp4shivamogga?mibextid=ZbWKwL">https://www.facebook.com/bjp4shivamogga?mibextid=ZbWKwL</a></p>



<p>ವೈರಲ್ ಆಗುತ್ತಿರುವ ಫೋಟೋದಲ್ಲಿ ಬಿಯರ್ ಬಾಟಲಿಯ ಮೇಲೆ ಡಿಕೆ ಸುರೇಶ್ ಅವರ ಚಿತ್ರ ಅಂಟಿಸಿದಂತಿದ್ದು, ಮೇಲೆ ಚಿಕ್ಕದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಫೋಟೋ ಕೂಡಾ ಫೋಟೋದ ಒಳಗೆ ಇದೆ.</p>



<p><a href="https://www.facebook.com/bjp4shivamogga?mibextid=ZbWKwL">https://www.facebook.com/bjp4shivamogga?mibextid=ZbWKwL</a></p>



<p>ಸಧ್ಯ ಶಿವಮೊಗ್ಗ ಬಿಜೆಪಿ ಅಧಿಕೃತ ಫೇಸ್ಬುಕ್ ಪೇಜ್ ಹಾಗೂ ಇತರೆ ಫೇಸ್ಬುಕ್ ಖಾತೆಗಳ ಮೂಲಕ ವೈರಲ್ ಆಗುತ್ತಿರುವ ಫೋಟೋ ಅಸಲಿಯದ್ದು ಅಲ್ಲ ಎಂದು ತಿಳಿದು ಬಂದಿದೆ. ಈ ಫೋಟೋ 2023 ರ ವರ್ಷದ್ದಾಗಿದ್ದು, ಬೇರೆ ಯಾವುದೋ ಫೋಟೋಗೆ ಡಿಕೆ ಸುರೇಶ್ ಫೋಟೋ ಹಾಕಿ ಎಡಿಟ್ ಮಾಡಲಾಗಿದೆ.</p>



<figure class="wp-block-image size-full"><img loading="lazy" decoding="async" width="772" height="1024" src="https://peepalmedia.com/wp-content/uploads/2024/04/IMG-20240417-WA0037.jpg" alt="" class="wp-image-38445" srcset="https://peepalmedia.com/wp-content/uploads/2024/04/IMG-20240417-WA0037.jpg 772w, https://peepalmedia.com/wp-content/uploads/2024/04/IMG-20240417-WA0037-226x300.jpg 226w, https://peepalmedia.com/wp-content/uploads/2024/04/IMG-20240417-WA0037-768x1019.jpg 768w, https://peepalmedia.com/wp-content/uploads/2024/04/IMG-20240417-WA0037-150x199.jpg 150w, https://peepalmedia.com/wp-content/uploads/2024/04/IMG-20240417-WA0037-300x398.jpg 300w, https://peepalmedia.com/wp-content/uploads/2024/04/IMG-20240417-WA0037-696x923.jpg 696w" sizes="auto, (max-width: 772px) 100vw, 772px" /></figure>



<p>2023 ರ ನವೆಂಬರ್ ತಿಂಗಳಲ್ಲಿ ತೆಲಂಗಾಣದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಡೆಸಿದ ಪ್ರಚಾರದ ಸಂದರ್ಭದಲ್ಲಿ ತಗೆದ ಫೋಟೋ ಬಳಸಿಕೊಂಡು ಅದಕ್ಕೆ ಡಿಕೆ ಸುರೇಶ್ ಅವರಿರುವ ಭಾವಚಿತ್ರ ಅಂಟಿಸಿದ ಎಡಿಟ್ ಮಾಡಿದ ಫೋಟೋ ಇದಾಗಿದೆ. ಈ ಒಂದು ಸುಳ್ಳು ಸುದ್ದಿಯನ್ನು ಬಿಜೆಪಿ ಪಕ್ಷ ಎಲ್ಲಾ ಕಡೆಗೂ ವೈರಲ್ ಮಾಡುತ್ತಿದ್ದು ಈಗಾಗಲೇ 150 ಕ್ಕೂ ಹೆಚ್ಚು ಮಂದಿ ಶೇರ್ ಮಾಡಿರುವುದು ಈಗ ಬೆಳಕಿಗೆ ಬಂದಿದೆ.</p>
]]></content:encoded>
					
		
		
			</item>
		<item>
		<title>Fact Check : ಮೋದಿ ಹ್ಯಾಂಡ್ ಸ್ಟಾಂಡ್ ವಿಡಿಯೋ : ಸುಳ್ಳು ಸುದ್ದಿ ಹಂಚಿಕೊಂಡ ಬಿಜೆಪಿ ನಾಯಕ ಬಿಸಿ ಪಾಟೀಲ್</title>
		<link>https://peepalmedia.com/bjp-leader-bc-patil-shared-fake-news/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 08 Jan 2024 03:54:46 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[BC Patil]]></category>
		<category><![CDATA[Fact check]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=34637</guid>

					<description><![CDATA[ದೇವಸ್ಥಾನವೊಂದರಲ್ಲಿ ಪ್ರದಕ್ಷಿಣೆ ಹಾಕುವಾಗ ಪ್ರಧಾನಿ ನರೇಂದ್ರ ಮೋದಿ ತಮ್ಮ ಕೈ ಆಧಾರದಲ್ಲಿ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲೂ ಈ ವಿಡಿಯೋವನ್ನು ಬಿಜೆಪಿ ನಾಯಕ ಮಾಜಿ ಸಚಿವ ಬಿಸಿ ಪಾಟೀಲ್ ಹಂಚಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 26 ನೇ ವಯಸ್ಸಿನಲ್ಲಿ, ಅಂದರೆ 1977 ನೇ ಇಸವಿಯಲ್ಲಿ ಯೋಗಾಸನ ಮಾಡುತ್ತಿರುವ ವಿಡಿಯೋ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹಂಚಿಕೊಂಡ ವಿಡಿಯೋ ಸಾಕ್ಷಿ ಈಗ ಅವರ ಟ್ವಿಟ್ಟರ್ ಮೂಲಕ ಹರಿದಾಡಿದೆ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಕೆದಕಿದಾಗ [&#8230;]]]></description>
										<content:encoded><![CDATA[
<p>ದೇವಸ್ಥಾನವೊಂದರಲ್ಲಿ ಪ್ರದಕ್ಷಿಣೆ ಹಾಕುವಾಗ ಪ್ರಧಾನಿ ನರೇಂದ್ರ ಮೋದಿ ತಮ್ಮ ಕೈ ಆಧಾರದಲ್ಲಿ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲೂ ಈ ವಿಡಿಯೋವನ್ನು ಬಿಜೆಪಿ ನಾಯಕ ಮಾಜಿ ಸಚಿವ ಬಿಸಿ ಪಾಟೀಲ್ ಹಂಚಿಕೊಂಡಿದ್ದಾರೆ.</p>



<p>ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 26 ನೇ ವಯಸ್ಸಿನಲ್ಲಿ, ಅಂದರೆ 1977 ನೇ ಇಸವಿಯಲ್ಲಿ ಯೋಗಾಸನ ಮಾಡುತ್ತಿರುವ ವಿಡಿಯೋ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹಂಚಿಕೊಂಡ ವಿಡಿಯೋ ಸಾಕ್ಷಿ ಈಗ ಅವರ ಟ್ವಿಟ್ಟರ್ ಮೂಲಕ ಹರಿದಾಡಿದೆ. ಆದರೆ ಇದರ ಸತ್ಯಾಸತ್ಯತೆ ಬಗ್ಗೆ ಕೆದಕಿದಾಗ ತೀರಾ ಹಳೆಯ ಇತಿಹಾಸ ಈ ವಿಡಿಯೋ ಹೊಂದಿಲ್ಲ ಎಂಬುದು ಬಹಿರಂಗಗೊಂಡಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ, ಅವರು 26 ವರ್ಷ ವಯಸ್ಸಿನವರಾಗಿದ್ದಾಗ, ಅವರು ಕೇದಾರನಾಥವನ್ನು ಹೇಗೆ ಪ್ರದಕ್ಷಿಣೆ ಮಾಡಿದರು, ನೀವೆಲ್ಲರೂ ಒಮ್ಮೆ ನೋಡಿ. <a href="https://t.co/YnQekOLSH9">pic.twitter.com/YnQekOLSH9</a></p>&mdash; B C Patil (@bcpatilkourava) <a href="https://twitter.com/bcpatilkourava/status/1743592161411781041?ref_src=twsrc%5Etfw">January 6, 2024</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ವಿಡಿಯೋದಲ್ಲಿ ನರೇಂದ್ರ ಮೋದಿ ಕಿರಿಯ ವಯಸ್ಸನ್ನು ಹೋಲುವ ವ್ಯಕ್ತಿ ಕಾಲು ಮೇಲೆ ಮಾಡಿ ತನ್ನ ಎರಡು ಕೈಗಳಿಂದ ನಡೆದಾಡಿದ್ದು ಕಂಡುಬಂದಿದೆ. ಆದರೆ ಈ ಚಿತ್ರ ಬಳಸಿ ಗೂಗಲ್ ಮೂಲಕ ಹುಡುಕಾಡಿದಾಗ ಈ ವಿಡಿಯೋ ಮೊದಲ ಬಾರಿಗೆ ಆನ್ಲೈನ್ ನಲ್ಲಿ ಪ್ರಕಟಿಸಿದ್ದು 2021 ರ ಜೂನ್ ನಲ್ಲಿ ಎಂದು ತಿಳಿದು ಬಂದಿದೆ.</p>



<p>E TV ಭಾರತ್ ಸುದ್ದಿ ವಾಹಿನಿಯಲ್ಲಿ ಈ ವಿಡಿಯೋ ಮೊದಲ ಬಾರಿ ಪ್ರಕಟವಾಗಿದ್ದು, ಕೇದಾರನಾಥ ದೇವಾಲಯದ ಆವರಣದಲ್ಲಿ ಇದು ಚಿತ್ರೀಕರಣಗೊಂಡಿದೆ ಎಂಬುದು Fact check ಮೂಲಕ ತಿಳಿದು ಬಂದಿದೆ. ವಿಡಿಯೋದಲ್ಲಿ ಕಂಡುಬಂದ ವ್ಯಕ್ತಿ ಆಚಾರ್ಯ ಸಂತೋಷ್ ತ್ರಿವೇದಿ ಎಂಬುದೂ ಈಗ ಬಹಿರಂಗಗೊಂಡಿದೆ.</p>



<figure class="wp-block-image size-full"><img loading="lazy" decoding="async" width="720" height="512" src="https://peepalmedia.com/wp-content/uploads/2024/01/thequint_2022-07_52fe9fdc-54b8-4961-a05c-d3dbfd6be830_Screenshot_2022_07_13_103342.jpg" alt="" class="wp-image-34639" srcset="https://peepalmedia.com/wp-content/uploads/2024/01/thequint_2022-07_52fe9fdc-54b8-4961-a05c-d3dbfd6be830_Screenshot_2022_07_13_103342.jpg 720w, https://peepalmedia.com/wp-content/uploads/2024/01/thequint_2022-07_52fe9fdc-54b8-4961-a05c-d3dbfd6be830_Screenshot_2022_07_13_103342-300x213.jpg 300w, https://peepalmedia.com/wp-content/uploads/2024/01/thequint_2022-07_52fe9fdc-54b8-4961-a05c-d3dbfd6be830_Screenshot_2022_07_13_103342-150x107.jpg 150w, https://peepalmedia.com/wp-content/uploads/2024/01/thequint_2022-07_52fe9fdc-54b8-4961-a05c-d3dbfd6be830_Screenshot_2022_07_13_103342-696x495.jpg 696w" sizes="auto, (max-width: 720px) 100vw, 720px" /></figure>



<p>ಆ ವಿಡಿಯೋ ಮೊದಲ ಬಾರಿಗೆ ಪ್ರಕಟಗೊಂಡ ನಂತರ ಹಲವು ಬಾರಿ ತಪ್ಪು ಮಾಹಿತಿಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಂಡಿದೆ. ಆದರೂ ಸಹ ನೆಟ್ಟಿಗರು ಹಿಂದು ಮುಂದು ನೋಡದೇ ಇದನ್ನು ಪ್ರಧಾನಿ ನರೇಂದ್ರ ಮೋದಿ ಎಂದು ಹಂಚಿಕೊಂಡಿದ್ದಾರೆ.</p>



<figure class="wp-block-image size-large"><img loading="lazy" decoding="async" width="640" height="1024" src="https://peepalmedia.com/wp-content/uploads/2024/01/IMG_20240108_092257-640x1024.jpg" alt="" class="wp-image-34638" srcset="https://peepalmedia.com/wp-content/uploads/2024/01/IMG_20240108_092257-640x1024.jpg 640w, https://peepalmedia.com/wp-content/uploads/2024/01/IMG_20240108_092257-188x300.jpg 188w, https://peepalmedia.com/wp-content/uploads/2024/01/IMG_20240108_092257-768x1229.jpg 768w, https://peepalmedia.com/wp-content/uploads/2024/01/IMG_20240108_092257-960x1536.jpg 960w, https://peepalmedia.com/wp-content/uploads/2024/01/IMG_20240108_092257-150x240.jpg 150w, https://peepalmedia.com/wp-content/uploads/2024/01/IMG_20240108_092257-300x480.jpg 300w, https://peepalmedia.com/wp-content/uploads/2024/01/IMG_20240108_092257-696x1114.jpg 696w, https://peepalmedia.com/wp-content/uploads/2024/01/IMG_20240108_092257-1068x1709.jpg 1068w, https://peepalmedia.com/wp-content/uploads/2024/01/IMG_20240108_092257.jpg 1080w" sizes="auto, (max-width: 640px) 100vw, 640px" /></figure>



<p>ಈ ಬಾರಿ ಕರ್ನಾಟಕದ ಮಾಜಿ ಸಚಿವ, ಬಿಜೆಪಿ ನಾಯಕ ಬಿ.ಸಿ.ಪಾಟೀಲ್ ತಮ್ಮ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದು, ಒಬ್ಬ ಜವಾಬ್ದಾರಿಯುತ ವ್ಯಕ್ತಿ ಕೂಡಾ ಸಮಾಜದಲ್ಲಿ ಈ ರೀತಿಯ ಸುಳ್ಳು ಮಾಹಿತಿ ಹಬ್ಬಿಸುವಂತೆ ಮಾಡುವ ಅಸಲಿ ಉದ್ದೇಶದ ಬಗ್ಗೆ ಅನುಮಾನ ಹುಟ್ಟಿಸಿದೆ.</p>
]]></content:encoded>
					
		
		
			</item>
		<item>
		<title>ವಯಸ್ಕರ ಪತ್ರಿಕೆ ಪ್ಲೇಬಾಯ್‌ನಲ್ಲಿ ಪ್ರಕಟವಾಗಿತ್ತೇ ನೆಹರೂ ಸಂದರ್ಶನ? ಸತ್ಯ ಏನು?</title>
		<link>https://peepalmedia.com/nehrus-interview-to-playboy-is-not-true/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 15 Nov 2023 08:42:30 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[Fact check]]></category>
		<category><![CDATA[factcheck]]></category>
		<category><![CDATA[Fake news]]></category>
		<category><![CDATA[fake twitter handling]]></category>
		<category><![CDATA[india]]></category>
		<category><![CDATA[jawaharalal nehru]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[nehru]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[playboy]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=32209</guid>

					<description><![CDATA[ಬೆಂಗಳೂರು: ಪ್ಲೇಬಾಯ್‌ ಪುರುಷರ ಮ್ಯಾಗಜೈನ್‌ನಲ್ಲಿ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಇಂಟರ್ವ್ಯೂ ಪ್ರಕಟವಾಗಿದೆ ಎಂದು ಈ ವಿಡಿಯೋವೊಂದು ಸದ್ಯ ಟ್ವಿಟರ್‌ನಲ್ಲಿ ಓಡಾಡುತ್ತಿದೆ. An exclusive interview with Nehru of India ಎಂಬ ಶೀರ್ಷಿಕೆಯ ಈ ಇಂಟರ್ವ್ಯೂ ಇರುವ ಈ ಮ್ಯಾಗಜೈನ್‌ನ ಪ್ರತಿಯನ್ನು ಇಟ್ಟುಕೊಂಟು 1962ರ ಇಂಡೋ-ಚೈನಾ ಯುದ್ಧದ ನಂತರ ಪೋರ್ನ್‌ ಮ್ಯಾಗಜೈನ್‌ನಲ್ಲಿ ನೆಹರೂ ಇಂಟರ್ವ್ಯೂ ಎಂದು ವಿಡಿಯೋವನ್ನು ಹಂಚುತ್ತಿದ್ದಾರೆ. ಪ್ಲೇಬಾಯ್‌ ಎಂಬುದು ಲೈಫ್‌ ಸ್ಟೈಲ್‌ ಮ್ಯಾಗಜೈನ್. ಇದು ಬೆತ್ತಲೆ ಮತ್ತು ಅರೆ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ಪ್ಲೇಬಾಯ್‌ ಪುರುಷರ ಮ್ಯಾಗಜೈನ್‌ನಲ್ಲಿ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಇಂಟರ್ವ್ಯೂ ಪ್ರಕಟವಾಗಿದೆ ಎಂದು ಈ <a href="https://x.com/rishibagree/status/1724448420465885511?s=20" data-type="link" data-id="https://x.com/rishibagree/status/1724448420465885511?s=20">ವಿಡಿಯೋವೊಂದು</a> ಸದ್ಯ ಟ್ವಿಟರ್‌ನಲ್ಲಿ ಓಡಾಡುತ್ತಿದೆ.</p>



<p>An exclusive interview with Nehru of India ಎಂಬ ಶೀರ್ಷಿಕೆಯ ಈ ಇಂಟರ್ವ್ಯೂ ಇರುವ ಈ ಮ್ಯಾಗಜೈನ್‌ನ ಪ್ರತಿಯನ್ನು ಇಟ್ಟುಕೊಂಟು 1962ರ ಇಂಡೋ-ಚೈನಾ ಯುದ್ಧದ ನಂತರ ಪೋರ್ನ್‌ ಮ್ಯಾಗಜೈನ್‌ನಲ್ಲಿ ನೆಹರೂ ಇಂಟರ್ವ್ಯೂ ಎಂದು <a href="https://x.com/ShakunthalaHS/status/1724459605013430548?s=20" data-type="link" data-id="https://x.com/ShakunthalaHS/status/1724459605013430548?s=20">ವಿಡಿಯೋವನ್ನು</a> ಹಂಚುತ್ತಿದ್ದಾರೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="729" height="870" src="https://peepalmedia.com/wp-content/uploads/2023/11/image-44.png" alt="" class="wp-image-32211" style="width:326px;height:auto" srcset="https://peepalmedia.com/wp-content/uploads/2023/11/image-44.png 729w, https://peepalmedia.com/wp-content/uploads/2023/11/image-44-251x300.png 251w, https://peepalmedia.com/wp-content/uploads/2023/11/image-44-150x179.png 150w, https://peepalmedia.com/wp-content/uploads/2023/11/image-44-300x358.png 300w, https://peepalmedia.com/wp-content/uploads/2023/11/image-44-696x831.png 696w" sizes="auto, (max-width: 729px) 100vw, 729px" /></figure></div>


<p>ಪ್ಲೇಬಾಯ್‌ ಎಂಬುದು ಲೈಫ್‌ ಸ್ಟೈಲ್‌ ಮ್ಯಾಗಜೈನ್. ಇದು ಬೆತ್ತಲೆ ಮತ್ತು ಅರೆ ಬೆತ್ತಲೆ ಪೋಟೋಗಳಿಂದ ಜನಪ್ರಿಯತೆ ಗಳಿಸಿತ್ತು. ಇದರಲ್ಲಿ 1962ರಲ್ಲಿ ಪ್ರಕಟವಾಗುತ್ತಿದ್ದ Playboy interview ಎಂಬ ಸರಣಿ ಸಂದರ್ಶನ ಪತ್ರಿಕೆಯ ಪ್ರಕಟಣೆಯನ್ನು ಹೆಚ್ಚಿಸಿತ್ತು. ಇದರಲ್ಲಿ ಅಧ್ಯಕ್ಷ ಜಿಮ್ಮಿ ಕಾರ್ಟರ್, ಮಾಲ್ಕಾಮ್ ಎಕ್ಸ್, ಫಿಡೆಲ್ ಕ್ಯಾಸ್ಟ್ರೋ, ದಿ ಬೀಟಲ್ಸ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಜಿಮ್ಮಿ ಹಾಫ್ಫಾ, ಜಾರ್ಜ್ ವ್ಯಾಲೇಸ್, ಹೆನ್ರಿ ಮಿಲ್ಲರ್ ಮತ್ತು ಕ್ಯಾಸಿಸಸ್ ಕ್ಲೇ ಸೇರಿದಂತೆ ವಿಶ್ವದ ಕೆಲವು ಪ್ರಮುಖ ವ್ಯಕ್ತಿಗಳೊಂದಿಗಿನ ಸಂದರ್ಶನವನ್ನು ಪ್ರಕಟಿಸಲಾಗಿತ್ತು. ಆದರೆ, ವಿಶ್ವ ನಾಯಕರ ಜೊತೆಗಿನ ಇದರ ಮೊದಲ ಸಂದರ್ಶನವೇ ಭಾರತದ ಆಗಿನ ಪ್ರಧಾನಿ ನೆಹರೂ ಅವರೊಂದಿಗೆ, ಅಕ್ಟೋಬರ್ 1963ರ ಸಂಚಿಕೆಯಲ್ಲಿ. ಈ ಬಗ್ಗೆ <a href="https://www.forbes.com/sites/ronakdesai/2017/10/03/the-curious-connection-between-playboy-and-jawaharlal-nehru-indias-first-prime-minister/?sh=2cf3ab96608a" data-type="link" data-id="https://www.forbes.com/sites/ronakdesai/2017/10/03/the-curious-connection-between-playboy-and-jawaharlal-nehru-indias-first-prime-minister/?sh=2cf3ab96608a">ಪೋರ್ಬ್ಸ್‌ ಪತ್ರಿಕೆಯಲ್ಲಿ</a> ಈ ಬಗ್ಗೆ ಲೇಖನವೊಂದು ಪ್ರಕಟವಾಗಿದೆ.</p>



<p style="font-size:20px"><strong>ಸತ್ಯ ಏನು?</strong></p>



<p>ಅಸಲಿಗೆ ಇದೊಂದು ಡಮ್ಮಿ ಸಂದರ್ಶನವಾಗಿತ್ತು. ಅಕ್ಟೋಬರ್ 1963ರಂದು ಪ್ರಕಟವಾದ ನೆಹರೂ ಸಂದರ್ಶನಕ್ಕೆ a candid conversation with the architect of modern India ಟೈಟಲ್‌ ನೀಡಲಾಗಿತ್ತು.</p>



<p>ಇದರಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಕುರಿತಾದ ನೆಹರೂ ಅಭಿಪ್ರಾಯಗಳು, ಪ್ರಜಾಪ್ರಭುತ್ವದ ದೌರ್ಬಲ್ಯಗಳು, ಶೀತಲ ಸಮರದ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು, ಸಮಾಜ, ವಿಶ್ವ ಧರ್ಮದ ಮೇಲೆ materialismನ ವಿನಾಶಕಾರಿ ಪರಿಣಾಮ, ದೇಶದಲ್ಲಿ ಜನಸಂಖ್ಯಾ ಸ್ಪೋಟ, ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಭಾರತದ ಭವಿಷ್ಯ, ಮೊದಲಾದ ವಿಚಾರಗಳ ಕುರಿತು ನೆಹರೂರವರ ಸಮಗ್ರ ದೃಷ್ಟಿಕೋನವನ್ನು ಪ್ರಕಟಿಸಲಾಗಿತ್ತು.</p>



<p style="font-size:20px">ಆದರೆ, ಅಸಲಿಗೂ ಈ ಸಂದರ್ಶನ ನಡೆದಿತ್ತೇ?</p>



<p>ಇದೇ ಸಂಚಿಕೆಯ ಪುಟ 3 ರಲ್ಲಿರುವ &#8220;ಸಂಪಾದಕೀಯದಲ್ಲಿ&#8221; &#8220;ನಿಯತಕಾಲಿಕದ ಉಳಿದ ಪ್ರತಿಗಳು ಮುದ್ರಣಕ್ಕೆ ಹೋದ ನಂತರ, ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಇದು ಪಿಎಂ ನೆಹರೂ ಅವರೊಂದಿಗಿನ ನಮ್ಮ ವೈಯಕ್ತಿಕ ಸಂದರ್ಶನ ಅಲ್ಲ ಎಂಬ ಸುದ್ದಿ ಬಂದಿದೆ. ಆದರೆ ಕಳೆದ ಹಲವಾರು ವರ್ಷಗಳಿಂದ ಪ್ರಧಾನಿಯವರು ಮಾಡಿದ ವಿವಿಧ ಭಾಷಣಗಳು, ಅವರ ಹೇಳಿಕೆಗಳು,ಸಾರ್ವಜನಿಕ ಭಾಷಣಗಳನ್ನು ಒಟ್ಟುಗೂಡುಸಿ ತಯಾರಿಸಲಾಗಿದೆ,” ಎಂದು ಹೇಳಲಾಗಿದೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="928" height="916" src="https://peepalmedia.com/wp-content/uploads/2023/11/image-46.png" alt="" class="wp-image-32214" style="width:387px;height:auto" srcset="https://peepalmedia.com/wp-content/uploads/2023/11/image-46.png 928w, https://peepalmedia.com/wp-content/uploads/2023/11/image-46-300x296.png 300w, https://peepalmedia.com/wp-content/uploads/2023/11/image-46-768x758.png 768w, https://peepalmedia.com/wp-content/uploads/2023/11/image-46-150x148.png 150w, https://peepalmedia.com/wp-content/uploads/2023/11/image-46-696x687.png 696w" sizes="auto, (max-width: 928px) 100vw, 928px" /></figure></div>


<p>ಇದರ ಅರ್ಥ, ಪ್ಲೈಬಾಯ್‌ ಪತ್ರಿಕೆಯವರು ನೆಹರೂರೊಂದಿಗೆ ಸಂದರ್ಶನವನ್ನೇ ನಡೆಸಿಲ್ಲ ಎಂದು ರಾಯಭಾರಿ ಕಚೇರಿ ತಿಳಿಸಿದೆ. ಬದಲಿಗೆ, ನೆಹರೂರವರ ಅನೇಕ ಭಾಷಣಗಳನ್ನು ಒಗ್ಗೂಡಿಸಿ ಒಂದು ಡಮ್ಮಿ ಸಂದರ್ಶನವನ್ನು ಪ್ರಕಟಿಸಲಾಗಿದೆ. ಆದರೆ ಇದೇ ಸಂಪಾದಕೀಯದಲ್ಲಿ ಈ ಸಂದರ್ಶಕ ಜಗತ್ತಿನ ಬೇರೆ ನಾಯಕರನ್ನೂ ಸಂದರ್ಶಿಸಿದ್ದಾನೆ ಎಂದು ತಿಳಿಸಲಾಗಿದೆ.</p>



<p>ಮುಂದುವರಿದ ಸಂಪಾದಕೀಯದಲ್ಲಿ “ಭಾರತ ಸರ್ಕಾರ ನೀಡಿದ ಅಧಿಕೃತ ನಿರಾಕರಣೆಯನ್ನು ಗೌರವಿಸಬೇಕು ಮತ್ತು ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಸಂದರ್ಶಕರನ್ನು ಸಂಪರ್ಕಿಸಲು ನಾವು ವಿಫಲವಾಗಿದ್ದೇವೆ. ಸಂಪಾದಕೀಯ ಸಮಗ್ರತೆಗಾಗಿ ನಾವು ಈ ಹೇಳಿಕೆಯನ್ನು ಮುದ್ರಿಸುವ ಅಗತ್ಯವಿದೆ,” ಎಂದು ಹೇಳಲಾಗಿದೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="724" height="1024" src="https://peepalmedia.com/wp-content/uploads/2023/11/image-47-724x1024.png" alt="" class="wp-image-32217" style="width:552px;height:auto" srcset="https://peepalmedia.com/wp-content/uploads/2023/11/image-47-724x1024.png 724w, https://peepalmedia.com/wp-content/uploads/2023/11/image-47-212x300.png 212w, https://peepalmedia.com/wp-content/uploads/2023/11/image-47-768x1086.png 768w, https://peepalmedia.com/wp-content/uploads/2023/11/image-47-1086x1536.png 1086w, https://peepalmedia.com/wp-content/uploads/2023/11/image-47-150x212.png 150w, https://peepalmedia.com/wp-content/uploads/2023/11/image-47-300x424.png 300w, https://peepalmedia.com/wp-content/uploads/2023/11/image-47-696x984.png 696w, https://peepalmedia.com/wp-content/uploads/2023/11/image-47-1068x1511.png 1068w, https://peepalmedia.com/wp-content/uploads/2023/11/image-47.png 1414w" sizes="auto, (max-width: 724px) 100vw, 724px" /></figure></div>


<p>ಭಾರತದಲ್ಲಿ ಪ್ಯೂರಿಟಾನಿಕಲ್ ಸೆನ್ಸಾರ್‌ಗಳು ಆಗಲೇ ಭಾರತದಲ್ಲಿ ಈ ಪುರುಷರ ಮ್ಯಾಗಜೈನ್‌ ಅನ್ನು ನಿಷೇಧಿಸಿತ್ತು. ಆದರೂ ಈ ಪತ್ರಿಕೆಯಲ್ಲಿ ನೆಹರೂ ಡಮ್ಮಿ ಸಂದರ್ಶನ ಪ್ರಕಟವಾದಾಗ ಬಿಸಿ ಬಿಸಿ ಮಸಾಲದೋಸೆಯಂತೆ ಪತ್ರಿಕೆ ಮಾರಾಟವಾಯಿತು. ಭಾರತಕ್ಕೆ ಈ ಪತ್ರಿಕೆಯ ಪ್ರತಿಗಳನ್ನು ಕಳ್ಳಸಾಗಾಟ ಮಾಡಲಾಗಿತ್ತು.</p>



<p>ಪತ್ರಿಕೆಯ ಅಸಲಿ ಬೆಲೆಗಿಂತ 30 ಪಟ್ಟು ಹೆಚ್ಚಿನ ಬೆಲೆಗೆ ಖರೀದಿ ಮಾಡುತ್ತಿದ್ದರು. ಪತ್ರಿಕೆಯ ಓರ್ವ ಸಂಪಾದಕ ಅಕ್ಟೋಬರ್‌ನ ಈ ಸಂಚಿಕೆಯ ಪ್ರತಿ “ಬ್ಲೆಂಡೆಟ್‌ ಸ್ಕಾಚ್‌ ವಿಸ್ಕಿ ಚೀವಾಸ್ ರೀಗಲ್ ಬಾಟಲಿಗಿಂತ ದುಬಾರಿ” ಎಂದು ಹೇಳಿದ್ದ.</p>



<p>ಅಚ್ಚರಿಯೇನಂದ್ರೆ, ಇಂತಹದ್ದೇ ಸಂಕಷ್ಟಕ್ಕೆ ರಾಜೀವ್‌ ಗಾಂಧೀ ಕೂಡ ಬಿದ್ದಿದ್ದರು. ದಿ ಸ್ಟೇಟ್ಸ್‌ಮನ್‌ನಲ್ಲಿ ಆಗಾಗ ಬರೆಯುತ್ತಿದ್ದ ರಸೆಲ್‌ ವಾರನ್‌ ಹೌವೇ ಎಂಬ ಪತ್ರಕರ್ತ ಜಾಗತಿಕ ರಾಜಕೀಯ ನಾಯಕರ ಬಗ್ಗೆ ಪುಸ್ತಕ ಬರೆಯುತ್ತಿರುವುದಾಗಿ, ರಾಜೀವ್‌ ಗಾಂಧಿಯವರ ಸಂದರ್ಶನವನ್ನು ಕೇಳಿದ್ದ. ಆದರೆ ಅಮೇರಿಕನ್‌ ಅಡಲ್ಟ್‌ ಮ್ಯಾಗಜೈನ್‌ ಪೆಂಟ್‌ಹೌಸ್‌ನ ಮುಂದಿನ ಸಂಚಿಕೆಯಲ್ಲಿ <a href="https://www.indiatoday.in/magazine/eyecatchers/story/19870630-penthouse-magazine-to-feature-rajiv-gandhi-interview-798997-1987-06-29" data-type="link" data-id="https://www.indiatoday.in/magazine/eyecatchers/story/19870630-penthouse-magazine-to-feature-rajiv-gandhi-interview-798997-1987-06-29">ರಾಜೀವ್‌ ಗಾಂಧಿಯವರ ಸಂದರ್ಶನ</a> ಪ್ರಕಟಿಸಲಾಗುವುದು ಎಂದು ಪ್ರಕಟಣೆಯಾದಾಗ ರಾಜೀವ್‌ ಗಾಬರಿ ಬಿದ್ದಿದ್ದರು. ಭಾರತದಲ್ಲಿ ಬ್ಯಾನ್‌ ಆಗಿದ್ದ ವಯಸ್ಕರ ಮ್ಯಾಗಜೈನ್ ಪೆಂಟ್‌ಹೌಸ್‌ಗೆ ರಾಜೀವ್‌ ಸಂದರ್ಶನ ನೀಡಿಲ್ಲ, ಬದಲಾಗಿ ಈ ರೀತಿ ಸುಳ್ಳು ಹೇಳಿ ಸಂದರ್ಶನ ತೆಗೆದುಕೊಳ್ಳಲಾಗಿದೆ ಎಂದು ವಾಷಿಂಗ್‌ಟನ್‌ನಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿತು ಮತ್ತು ಕಾನೂನಾತ್ಮಕ ಕ್ರಮವನ್ನೂ ತೆಗೆದುಕೊಂಡಿತ್ತು.</p>



<p>ಇಷ್ಟು ವರ್ಷಗಳಾದರೂ ಪ್ಲೈಬಾಯ್‌ ಪತ್ರಿಕೆ ನೆಹರೂರವರ ಜೊತೆಗೆ ಇರುವ ಸಂದರ್ಶಕನ ಫೋಟೋಗಳು ಹಾಗೂ ಆತನ ಬಗೆಗಿನ ವಿವರಗಳನ್ನು ಪ್ರಕಟಿಸಲು ನಿರಾಕರಿಸಿದೆ. ಅಸಲಿಗೆ ಅದರ ಸಂಪಾದಕೀಯ ಹೇಳುವಂತೆ ಪತ್ರಿಕೆ ಸಂಪರ್ಕಿಸಲು ಯತ್ನಿಸಿ ವಿಫಲವಾದ ಈ ಸಂದರ್ಶಕನ ಬಗ್ಗೆ ಅವರಿಗೇ ತಿಳಿದಿಲ್ಲ. ಇದೊಂದು ನಿಚ್ಚಲವಾಗಿ ಸುಳ್ಳು ಸಂದರ್ಶನವಾಗಿತ್ತು.</p>



<p>ಸದ್ಯ ಈ ಸುಳ್ಳು ಸಂದರ್ಶನದ ಪ್ಲೇಬಾಯ್‌ ಪತ್ರಿಕೆಯ ಪ್ರತಿಯನ್ನು ಇಟ್ಟುಕೊಂಡು ಅವಹೇಳನಕಾರಿ ವಿಡಿಯೋವೊಂದು ಟ್ವಿಟರ್‌ನಲ್ಲಿ ಓಡಾಡುತ್ತಿದೆ.</p>
]]></content:encoded>
					
		
		
			</item>
	</channel>
</rss>
