<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Fake news &#8211; Peepal Media</title>
	<atom:link href="https://peepalmedia.com/tag/fake-news/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 09 May 2025 07:34:26 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Fake news &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಪಾಕಿಸ್ತಾನ ಸಾಮಾಜಿಕ ಮಾಧ್ಯಮಗಳ ಬಗ್ಗೆ ಪಿಐಬಿ ಎಚ್ಚರಿಕೆ</title>
		<link>https://peepalmedia.com/pib-warns-pakistani-social-media-platforms-spreading-fake-news/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 09 May 2025 07:26:52 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಸುಳ್ಳು ಸುದ್ದಿ ಪತ್ತೆ]]></category>
		<category><![CDATA[factcheck]]></category>
		<category><![CDATA[Fake news]]></category>
		<category><![CDATA[india]]></category>
		<category><![CDATA[news]]></category>
		<category><![CDATA[Pahalgam terror attack]]></category>
		<category><![CDATA[Pakistan]]></category>
		<category><![CDATA[peepalmedia]]></category>
		<category><![CDATA[PIB warns]]></category>
		<category><![CDATA[social media]]></category>
		<category><![CDATA[War]]></category>
		<guid isPermaLink="false">https://peepalmedia.com/?p=58580</guid>

					<description><![CDATA[ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಭಾರತದ ವಿರುದ್ಧ ಸಂಘಟಿತ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂದು ಪಿಬಿಐ (ಪ್ರೆಸ್ ಇನ್ ಫರ್ಮೇಷನ್ ಬ್ಯೂರೋ) ಭಾರತೀಯರಿಗೆ ಎಚ್ಚರಿಕೆ ನೀಡಿದೆ.&#160; ಭಾರತದ ಜನರಲ್ಲಿ ಅಪನಂಬಿಕೆ, ಆತಂಕ ಮತ್ತು ಗೊಂದಲ ಸೃಷ್ಟಿಸುವುದು ಪಾಕ್ ಮಾಧ್ಯಮಗಳ ಉದ್ದೇಶವಾಗಿದ್ದು, ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಪಿಬಿಐ ಮನವಿ ಮಾಡಿದೆ.&#160; ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತಂತೆ ಸುಳ್ಳು ಸುದ್ದಿ ಹರಡುವಂತಹ, ಅದರಲ್ಲೂ ಸಶಸ್ತ್ರ ಪಡೆಯ ಕುರಿತ ತಪ್ಪು ಮಾಹಿತಿಯನ್ನು ಪಾಕ್ ಮಾಧ್ಯಮಗಳು ಪ್ರಕಟಿಸಿದರೆ, ಅಂತಹ [&#8230;]]]></description>
										<content:encoded><![CDATA[
<p>ಪಾಕಿಸ್ತಾನದ ಸಾಮಾಜಿಕ ಮಾಧ್ಯಮಗಳು ಭಾರತದ ವಿರುದ್ಧ ಸಂಘಟಿತ ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಎಂದು ಪಿಬಿಐ (ಪ್ರೆಸ್ ಇನ್ ಫರ್ಮೇಷನ್ ಬ್ಯೂರೋ) ಭಾರತೀಯರಿಗೆ ಎಚ್ಚರಿಕೆ ನೀಡಿದೆ.&nbsp;</p>



<p>ಭಾರತದ ಜನರಲ್ಲಿ ಅಪನಂಬಿಕೆ, ಆತಂಕ ಮತ್ತು ಗೊಂದಲ ಸೃಷ್ಟಿಸುವುದು ಪಾಕ್ ಮಾಧ್ಯಮಗಳ ಉದ್ದೇಶವಾಗಿದ್ದು, ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಪಿಬಿಐ ಮನವಿ ಮಾಡಿದೆ.&nbsp;</p>



<p>ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಕುರಿತಂತೆ ಸುಳ್ಳು ಸುದ್ದಿ ಹರಡುವಂತಹ, ಅದರಲ್ಲೂ ಸಶಸ್ತ್ರ ಪಡೆಯ ಕುರಿತ ತಪ್ಪು ಮಾಹಿತಿಯನ್ನು ಪಾಕ್ ಮಾಧ್ಯಮಗಳು ಪ್ರಕಟಿಸಿದರೆ, ಅಂತಹ ಸುದ್ದಿಗಳ ಕುರಿತು #PIBFactCheck ಗೆ ರಿಪೋರ್ಟ್ ಮಾಡುವಂತೆ ಮನವಿ ಮಾಡಿಕೊಂಡಿದೆ.</p>



<p>ಮುಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳು ಇಂತಹ ಸುಳ್ಳು ಮಾಹಿತಿಗಳಿಂದಲೇ ತುಂಬಿಹೋಗುವ ಲಕ್ಷಣಗಳಿವೆ. ಆದ್ದರಿಂದ&nbsp; ಯಾವುದೇ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲನೆ ನಡೆಸುವುದು ಮುಖ್ಯ ಎಂದು ಪಿಐಬಿ ತಿಳಿಸಿದೆ.</p>



<p>ಇಂಥಹ ಸುದ್ದಿಗಳ ಬಗ್ಗೆ ಈ ಕೆಳಗಿನ ವಾಟ್ಸ್‌ಆ್ಯಪ್ ಸಂಖ್ಯೆ, ಇಮೇಲ್ ಮೂಲಕ ಮಾಹಿತಿ ಹಂಚಿಕೊಳ್ಳಲು ಕೋರಲಾಗಿದೆ. Email: <strong> <a href="mailto:factcheck@pib.gov.in">factcheck@pib.gov.in</a> </strong>ಅಥವಾ  91 8799711259 ನಂಬರ್‌ ಗೆ ತಿಳಿಸುವಂತೆ ಕೋರಿದೆ.</p>



<p></p>
]]></content:encoded>
					
		
		
			</item>
		<item>
		<title>ಆಪರೇಷನ್‌ ಸಿಂಧೂರ್: ಪಾಕಿಸ್ತಾನದ ಸುಳ್ಳು ಸುದ್ದಿಗಳನ್ನು ರಾತ್ರೋ ರಾತ್ರಿ ಬಯಲಿಗೆಳೆದ ಮೊಹಮ್ಮದ್ ಜುಬೈರ್</title>
		<link>https://peepalmedia.com/operation-sindoora-mohammad-zubair-exposed-pakistans-fake-news-overnight/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 07 May 2025 10:25:16 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಸುಳ್ಳು ಸುದ್ದಿ ಪತ್ತೆ]]></category>
		<category><![CDATA[airforce]]></category>
		<category><![CDATA[alt news]]></category>
		<category><![CDATA[Fact check]]></category>
		<category><![CDATA[Fake news]]></category>
		<category><![CDATA[indian army]]></category>
		<category><![CDATA[Mohammed Zubair]]></category>
		<category><![CDATA[operation sindhur]]></category>
		<category><![CDATA[Pakistan]]></category>
		<guid isPermaLink="false">https://peepalmedia.com/?p=58437</guid>

					<description><![CDATA[ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ನೆಲೆಗಳ ಮೇಲೆ ಭಾರತ ನಡೆಸಿದ ಮಿಲಿಟರಿ ದಾಳಿಯ ನಂತರ ಸುಳ್ಳು ಸುದ್ದಿಗಳ ಫ್ಯಾಕ್ಟ್‌ ಚೆಕ್ಕರ್‌ ಮೊಹಮ್ಮದ್ ಜುಬೈರ್ ಆನ್‌ಲೈನ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆಪರೇಷನ್ ಸಿಂಧೂರ್ ನಡೆಯುತ್ತಿದ್ದಂತೆ, ಮೊಹಮ್ಮದ್ ಜುಬೈರ್ ರಾತ್ರಿ ಹೊರಬರುತ್ತಿದ್ದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಡುತ್ತಿದ್ದ ಸುಳ್ಳು ಸುದ್ದಿಗಳನ್ನು ಬಯಲಿಗೆಳೆದಿದ್ದಾರೆ. ಪಾಕಿಸ್ತಾನ ಆರಂಭಿಸಿದ ಸುಳ್ಳು ಮಾಹಿತಿ ಹರಡುವ ತಂತ್ರವನ್ನು ಜುಬೈರ್‌ ರಾತ್ರೋ ರಾತ್ರಿ ಬಟಾ ಬಯಲು ಮಾಡಿದ್ದಾರೆ. ರೈಟ್-ವಿಂಗ್ ಐಟಿ ಸೆಲ್‌ಗಳಿಂದ ಸತತ ಆನ್‌ಲೈನ್‌ ದಾಳಿಗಳಿಗೆ ಒಳಗಾಗುತ್ತಿದ್ದ ಜುಬೈರ್‌ [&#8230;]]]></description>
										<content:encoded><![CDATA[
<p>ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ನೆಲೆಗಳ ಮೇಲೆ ಭಾರತ ನಡೆಸಿದ ಮಿಲಿಟರಿ ದಾಳಿಯ ನಂತರ ಸುಳ್ಳು ಸುದ್ದಿಗಳ ಫ್ಯಾಕ್ಟ್‌ ಚೆಕ್ಕರ್‌ ಮೊಹಮ್ಮದ್ ಜುಬೈರ್ ಆನ್‌ಲೈನ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ಆಪರೇಷನ್ ಸಿಂಧೂರ್ ನಡೆಯುತ್ತಿದ್ದಂತೆ, ಮೊಹಮ್ಮದ್ ಜುಬೈರ್ ರಾತ್ರಿ ಹೊರಬರುತ್ತಿದ್ದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲ್ಪಡುತ್ತಿದ್ದ ಸುಳ್ಳು ಸುದ್ದಿಗಳನ್ನು ಬಯಲಿಗೆಳೆದಿದ್ದಾರೆ.  </p>



<p>ಪಾಕಿಸ್ತಾನ ಆರಂಭಿಸಿದ ಸುಳ್ಳು ಮಾಹಿತಿ ಹರಡುವ ತಂತ್ರವನ್ನು ಜುಬೈರ್‌ ರಾತ್ರೋ ರಾತ್ರಿ ಬಟಾ ಬಯಲು ಮಾಡಿದ್ದಾರೆ. ರೈಟ್-ವಿಂಗ್ ಐಟಿ ಸೆಲ್‌ಗಳಿಂದ ಸತತ ಆನ್‌ಲೈನ್‌  ದಾಳಿಗಳಿಗೆ ಒಳಗಾಗುತ್ತಿದ್ದ ಜುಬೈರ್‌ ಈಗ ಪಾಕಿಸ್ತಾನದ ಸುಳ್ಳು ಸುದ್ದಿಗಳ ಬಣ್ಣವನ್ನು ಕಳಚಿದ್ದಾರೆ.  ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ಹಮೀದ್ ಮಿರ್ ಅವರಂತಹ ಹಿರಿಯ ಪತ್ರಕರ್ತರು ಹಂಚಿಕೊಂಡಿರುವ ತಪ್ಪು ಮಾಹಿತಿಯನ್ನು ಅವರು ಸುಳ್ಳೆಂದು ಸಾಬೀತು ಮಾಡಿದ್ದಾರೆ.</p>



<p>ಆಲ್ಟ್ ನ್ಯೂಸ್ ಸಂಸ್ಥಾಪಕರಾಗಿರುವ ಇವರು, ಭಾರತ ನಡೆಸಿದ ದಾಳಿಯ ನಂತರ ಪಾಕಿಸ್ತಾನ ಹರಡಲು ಆರಂಭಿಸಿದ ತಪ್ಪು ಮಾಹಿತಿ 90% ಪಾಕಿಸ್ತಾನಿ ಖಾತೆಗಳಿಂದ ಬಂದಿದೆ ಎಂದು ಹೇಳಿದ್ದಾರೆ.  </p>



<p>X ನಲ್ಲಿ, ಜುಬೈರ್ ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿಯಂತೆ ನಟಿಸುವ ಪಾಕಿಸ್ತಾನಿ ಖಾತೆಗಳ ಪಟ್ಟಿಯನ್ನು ಸಹ <a href="https://x.com/zoo_bear/status/1919930898159698383">ಹಂಚಿಕೊಂಡಿದ್ದಾರೆ</a> . ಅಂತಹ ಒಂದು ಖಾತೆಯ ಹೆಸರು ಅಡ್ಮಿರಲ್ ಅರುಣ್ ಪ್ರಕಾಶ್, ಈತ ತನ್ನನ್ನು ತಾನು ಮಾಜಿ ನೌಕಾಪಡೆಯ ನೌಕರ ಎಂದು ಬರೆದುಕೊಂಡಿದ್ದ,  &#8220;ಭಾರತ ನನ್ನ ರಕ್ತದಲ್ಲಿದೆ&#8221; ಎಂದು ತನ್ನ ಬಯೋದಲ್ಲಿ ಹೇಳಿಕೊಂಡಿದ್ದಾನೆ.  </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Beware! These are Pakistani propaganda accounts pretending to be Indian Army Personals. <br>Don&#39;t amplify their tweets. <a href="https://t.co/uhoYFDvbUM">pic.twitter.com/uhoYFDvbUM</a></p>&mdash; Mohammed Zubair (@zoo_bear) <a href="https://twitter.com/zoo_bear/status/1919930898159698383?ref_src=twsrc%5Etfw">May 7, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಮೂರನೇ ಪರಿಶೀಲಿಸಿದ ಎಕ್ಸ್ ಖಾತೆಯು ತನ್ನನ್ನು ತಾನು ಹೆಮ್ಮೆಯ ಭಾರತೀಯ ಮತ್ತು &#8220;ಕಾಂಗ್ರೆಸ್ ಬೆಂಬಲಿಗ&#8221; ಎಂದು ಕರೆದುಕೊಂಡಿದೆ. ಈ ಖಾತೆಯಿಂದ ಹಂಚಿಕೊಳ್ಳಲಾದ ನಕಲಿ ಸುದ್ದಿಗಳನ್ನು <a href="https://x.com/zoo_bear/status/1919933118104117597/photo/1">ಪಾಕಿಸ್ತಾನಿ ಪತ್ರಕರ್ತ ಹಮೀದ್ ಮಿರ್ ಶೇರ್‌ ಮಾಡಿದ್ದರು</a>.</p>



<p>&#8220;ನಮ್ಮ ಪಡೆಗಳು ನಡೆಸಿದ ಆಪರೇಷನ್ ಸಿಂದೂರ್ ನಂತರ, ರಕ್ತಸಿಕ್ತ ಪಾಕಿಸ್ತಾನಿಗಳು ಅಖ್ನೂರ್ ಬಳಿ 1 ರಫೇಲ್ ಮತ್ತು 1 ಸು -30 ಅನ್ನು ಹೊಡೆದುರುಳಿಸಿದರು. ಮತ್ತು ನಮ್ಮ ಬ್ರಿಗೇಡ್ ಪ್ರಧಾನ ಕಚೇರಿಯನ್ನು ನಾಶಪಡಿಸಿದರು&#8221; ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಪೋಸ್ಟ್‌ ಅನ್ನು ಹಮೀದ್‌ ಮೀರ್‌ ರಿಟ್ವೀಟ್‌ ಮಾಡಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">So Pak Senior Journalist <a href="https://twitter.com/HamidMirPAK?ref_src=twsrc%5Etfw">@HamidMirPAK</a> is amplifying tweets by <a href="https://twitter.com/Tiju0Prakash?ref_src=twsrc%5Etfw">@Tiju0Prakash</a> whose earlier I&#39;d was @tiju786 ( A Pakistan propaganda account pretending to be Congress Supporter). 😏 <a href="https://t.co/pUJPlafWq6">pic.twitter.com/pUJPlafWq6</a></p>&mdash; Mohammed Zubair (@zoo_bear) <a href="https://twitter.com/zoo_bear/status/1919933118104117597?ref_src=twsrc%5Etfw">May 7, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಈ ಬಗ್ಗೆ ಸತ್ಯ ಪರಿಶೀಲನೆಗೆ ಇಳಿದ ಜುಬೈರ್‌ ಈ ಭಾರತೀಯ ವೇಷದ ನಕಲಿ ಪಾಕಿಸ್ತಾನಿ ಎಕ್ಸ್‌ ಹ್ಯಾಂಡಲ್‌ನ ನೈಜತೆಯನ್ನು ಬಯಲಿಗೆಳೆದರು.</p>



<p>ಪಾಕಿಸ್ತಾನದ ಪ್ರತೀಕಾರದ ಪುರಾವೆಯಾಗಿ ಹಂಚಿಕೊಳ್ಳಲಾಗುತ್ತಿರುವ ಹಲವಾರು ದೃಶ್ಯಗಳು ಹಳೆಯ ಘಟನೆಗಳಾಗಿದ್ದು, ಅವುಗಳಲ್ಲಿ ಹಲವು ಗಾಜಾದ ವೀಡಿಯೋಗಳಾಗಿವೆ. </p>



<p>&#8220;ಕೆಲವು ಗಾಜಾ ಮತ್ತು ಇಸ್ರೇಲ್‌ನಿಂದ ಬಂದಿವೆ, ಮತ್ತು ಭಾರತ ಮತ್ತು ಪಾಕಿಸ್ತಾನದ ಹಳೆಯ ಫೋಟೋಗಳು ಮತ್ತು ಘಟನೆಗಳು ಸಹ ಬಂದಿವೆ&#8221; ಎಂದು ಜುಬೈರ್ ಹೇಳಿದ್ದು, ಹರಿದಾಡುತ್ತಿರುವ ಕೆಲವು ದೃಶ್ಯಗಳು ಇರಾನ್‌ನಿಂದಲೂ ಬಂದಿವೆ ಎಂದು ಹೇಳಿದ್ದಾರೆ. </p>



<p>ಮೇ 4 ರವರೆಗೆ, ಪಾಕಿಸ್ತಾನದಲ್ಲಿ X ಅನ್ನು ನಿಷೇಧಿಸಲಾಗಿತ್ತು. ಅದರ ಈ ನಿಷೇಧವನ್ನು ತೆಗೆದು ಹಾಕಿದ ನಂತರ ಸುಳ್ಳು ಸುದ್ದಿ ಹರಡಲು ವ್ಯಾಪಕವಾಗಿ ಬಳಕೆಯಾಯಿತು.</p>



<p>&#8220;ಪ್ರಚಾರ ಮತ್ತು ಪ್ರಭಾವಿ ಖಾತೆಗಳು ಎರಡೂ ತಪ್ಪು ಮಾಹಿತಿಯನ್ನು ಹರಡುತ್ತಿವೆ ಎಂದು ನಮ್ಮ ಮೂಲಗಳಿಂದ ನಮಗೆ ತಿಳಿದಾಗ, ನಾನು ಸತ್ಯ ಪರಿಶೀಲನೆ ಮಾಡಲು ಪ್ರಾರಂಭಿಸಿದೆ. ಅಲ್ಗಾರಿದಮ್ ನನಗೆ ಸಹಾಯ ಮಾಡಿತು,&#8221; ಎಂದು ಜುಬೈರ್ ಹೇಳಿದರು. </p>



<p>ಭಾರತ-ಪಾಕಿಸ್ತಾನ ಬಿಕ್ಕಟ್ಟಿನ ಹಿಂದಿನ ಅಧ್ಯಾಯವಾದ ಪುಲ್ವಾಮಾ ಮತ್ತು ಪ್ರತೀಕಾರದ ಬಾಲಕೋಟ್ ದಾಳಿಯಲ್ಲಿ ಎರಡೂ ಕಡೆಯಿಂದಲೂ ತಪ್ಪು ಮಾಹಿತಿ ಹರಡಲಾಗುತ್ತಿತ್ತು ಎಂದು ಅವರು ಹೇಳಿದರು.</p>



<p>ಭಾರತದಲ್ಲಿ ಕೂಡ ಎಕ್ಸ್, ವಿಶೇಷವಾಗಿ ಸಂಘರ್ಷದ ಸಮಯದಲ್ಲಿ, ತನ್ನ ನಕಲಿ ಮತ್ತು ಕೃತಕ ನಿರೂಪಣೆಗಳ ಪ್ರಚಾರಕ್ಕೆ ಕುಖ್ಯಾತವಾಗಿದೆ. ಉದಾಹರಣೆಗೆ, ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷದ ಸಮಯದಲ್ಲಿ, ಭಾರತೀಯ ಎಕ್ಸ್ ಖಾತೆಗಳಲ್ಲಿ ನಕಲಿ ಸುದ್ದಿಗಳೇ ತುಂಬಿದ್ದವು.  ಇವುಗಳ ಸುಳ್ಳನ್ನು ಬಯಲಿಗೆಳೆದ ಜುಬೈರ್‌ ಅವರನ್ನು ಭಾರತದಲ್ಲಿ ʼಪಾಕಿಸ್ತಾನಿʼ ಎಂದೆಲ್ಲಾ ಕರೆದಿದ್ದರು. ಈಗ ಪಾಕಿಸ್ತಾನದ ನಕಲಿ ಸುದ್ದಿಗಳನ್ನು ಬಯಲಿಗೆಳೆದು ತಮ್ಮ ವೃತ್ತಿನಿಷ್ಠೆಯನ್ನು ಮೆರೆದಿದ್ದಾರೆ. </p>



<p>ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜುಬೈರ್‌ ಅವರನ್ನು ಜನರು ಪ್ರಶಂಸೆ ಮಾಡುತ್ತಿದ್ದಾರೆ. </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">boss Zubair -my deep respects 🙏🙏🙏<br><br>fills my heart with pain to realize that your own countrymen give you gaalis daily. daily non-stop. call you anti-national, pakistani etc etc and feel proud to do this. <br><br>yet you soldier on. without getting any pat on the back. i admire Modi…</p>&mdash; Puneet Sharma (@PuneetSharmaX) <a href="https://twitter.com/PuneetSharmaX/status/1919965351351042210?ref_src=twsrc%5Etfw">May 7, 2025</a></blockquote><script async src="https://platform.twitter.com/widgets.js" charset="utf-8"></script>
</div></figure>
]]></content:encoded>
					
		
		
			</item>
		<item>
		<title>ಸುಳ್ಳು ಸುದ್ದಿ ಪತ್ತೆ ವ್ಯವಸ್ಥೆ ನಿಲ್ಲಿಸಲಿರುವ ಮೆಟಾ: ಭಾರತದಲ್ಲಿ ಏನಾಗಬಹುದು?</title>
		<link>https://peepalmedia.com/meta-to-stop-fake-news-detection-system-what-will-happen-in-india/</link>
		
		<dc:creator><![CDATA[Charan Aivarnad]]></dc:creator>
		<pubDate>Sat, 11 Jan 2025 11:36:50 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[Donald Trump]]></category>
		<category><![CDATA[facebook]]></category>
		<category><![CDATA[Fact check]]></category>
		<category><![CDATA[fact checking]]></category>
		<category><![CDATA[Fake news]]></category>
		<category><![CDATA[Instagram]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[meta]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[social media]]></category>
		<category><![CDATA[thread]]></category>
		<category><![CDATA[twitter]]></category>
		<category><![CDATA[whatsaap]]></category>
		<category><![CDATA[X]]></category>
		<guid isPermaLink="false">https://peepalmedia.com/?p=52117</guid>

					<description><![CDATA[ಜನವರಿ 7, 2025 ಮಂಗಳವಾರ ಥರ್ಡ್‌-ಪಾರ್ಟಿ-ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು ನಿಲ್ಲಿಸುವುದಾಗಿ ಮೆಟಾ ಘೋಷಿಸಿದೆ. ಇದನ್ನು ಅಮೇರಿಕಾದಿಂದ ಆರಂಭಿಸಲು ತೀರ್ಮಾನಿಸಿದೆ. ಈ ಮೂಲಕ 130 ದೇಶಗಳ 90 ಸಂಸ್ಥೆಗಳ ಜೊತೆಗೆ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಥ್ರೆಡ್‌ನಲ್ಲಿ ಸುಳ್ಳು ಸುದ್ದಿ ಪತ್ತೆಗಾಗಿ ಮಾಡಿಕೊಂಡಿದ್ದ ಒಪ್ಪಂದವನ್ನು ಮೆಟಾ ನಿಲ್ಲಿಸಲಿದೆ. ಮೆಟಾ ಸುಳ್ಳು ಸುದ್ದಿ ಪತ್ತೆಗಾಗಿ ಈ ವ್ಯವಸ್ಥೆಯನ್ನು 2016 ರಲ್ಲಿ ಆರಂಭಿಸಿತು. ಈಗ ಇದನ್ನು ನಿಲ್ಲಿಸಿ, X ನಲ್ಲಿರುವ ನೋಟ್ಸ್‌ನಂತೆ ಸಾಮೂಹಿಕ ( crowdsourced) ಫ್ಯಾಕ್ಟ್‌ ಚೆಕ್ಕಿಂಗ್‌ ಮಾದರಿಯನ್ನು ಜಾರಿಗೆ ತರಲಿದೆ. ಇದರಲ್ಲಿ [&#8230;]]]></description>
										<content:encoded><![CDATA[
<p>ಜನವರಿ 7, 2025 ಮಂಗಳವಾರ <a href="https://www.facebook.com/formedia/mjp/programs/third-party-fact-checking/partner-map">ಥರ್ಡ್‌-ಪಾರ್ಟಿ-ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು</a> ನಿಲ್ಲಿಸುವುದಾಗಿ ಮೆಟಾ ಘೋಷಿಸಿದೆ. ಇದನ್ನು ಅಮೇರಿಕಾದಿಂದ ಆರಂಭಿಸಲು ತೀರ್ಮಾನಿಸಿದೆ. ಈ ಮೂಲಕ 130 ದೇಶಗಳ 90 ಸಂಸ್ಥೆಗಳ ಜೊತೆಗೆ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌, ಥ್ರೆಡ್‌ನಲ್ಲಿ ಸುಳ್ಳು ಸುದ್ದಿ ಪತ್ತೆಗಾಗಿ ಮಾಡಿಕೊಂಡಿದ್ದ ಒಪ್ಪಂದವನ್ನು ಮೆಟಾ ನಿಲ್ಲಿಸಲಿದೆ.</p>



<p>ಮೆಟಾ ಸುಳ್ಳು ಸುದ್ದಿ ಪತ್ತೆಗಾಗಿ ಈ ವ್ಯವಸ್ಥೆಯನ್ನು 2016 ರಲ್ಲಿ ಆರಂಭಿಸಿತು. ಈಗ ಇದನ್ನು ನಿಲ್ಲಿಸಿ, X ನಲ್ಲಿರುವ ನೋಟ್ಸ್‌ನಂತೆ ಸಾಮೂಹಿಕ ( crowdsourced) ಫ್ಯಾಕ್ಟ್‌ ಚೆಕ್ಕಿಂಗ್‌ ಮಾದರಿಯನ್ನು ಜಾರಿಗೆ ತರಲಿದೆ. ಇದರಲ್ಲಿ ಬಳಕೆದಾರರು ಮಾಹಿತಿಯ ಬಗ್ಗೆ ತಮ್ಮ ಸ್ಪಷ್ಟನೆಯನ್ನು ನೀಡಲು ಸಾಧ್ಯವಿದೆ, ಈ ಸ್ಪಷ್ಟೀಕರಣವು ಜನರ ದಾರಿ ತಪ್ಪಿಸುವ ಪೋಸ್ಟ್‌ನ ಪಕ್ಕದಲ್ಲಿಯೇ ಕಾಣಿಸಿಕೊಳ್ಳಲಿದೆ. </p>



<p>ಸದ್ಯ ಇದನ್ನು ಅಮೇರಿಕಾದಿಂದ ಆರಂಭಿಸಲಾಗುತ್ತಿದೆ, ನಂತರ ಇತರ ದೇಶಗಳಲ್ಲೂ ಇದನ್ನು ಜಾರಿಗೊಳಿಸಲಿದೆ. ಅಮೇರಿಕಾದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಸಂತೋಪಡಿಸಲು, ಸುಳ್ಳು ಮತ್ತು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡುವ ಟ್ರಂಪನ್ನು ಮೆಚ್ಚಿಸಲು ಮೆಟಾ ಈ ದಾರಿ ಹಿಡಿದಿದೆ ಎಂಬ ಟೀಕೆಗಳು ಜಾಗತಿಕವಾಗಿ ಕೇಳಿಬರುತ್ತಿದೆ.</p>



<p>ಮೆಟಾದ ಈ ನಡೆಯು ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಸರ್ಕಾರವಿರುವ ಭಾರತದಂತಹ ದೇಶಗಳಲ್ಲಿ ಸರ್ಕಾರದ ಪರವಾಗಿ ಕೆಲಸ ಮಾಡುವ ಸಾಧ್ಯತೆ ಇದೆ. </p>



<p><strong>ಮೆಟಾದ ಪಾಲಿಸಿಯಲ್ಲಿ ಆಗುವ ಬದಲಾವಣೆಯಿಂದ ಏನಾಗಲಿದೆ?</strong></p>



<p>ಸದ್ಯದ ಸಂದರ್ಭದಲ್ಲಿ ಫ್ಯಾಕ್ಟ್‌ ಚೆಕ್ಕರ್‌ಗಳು ಒಂದು ಪೋಸ್ಟ್‌ ಅನ್ನು ಸುಳ್ಳು ಎಂದು ಹೇಳಿದರೆ, ಮೆಟಾ ಆ ಪೋಸ್ಟ್‌ನ <a href="https://www.facebook.com/business/help/2593586717571940?id=673052479947730">ವಿಸಿಬಿಲಿಟಿ ಮತ್ತು ರೀಚ್‌ ಕಡಿಮೆ </a>ಮಾಡುವ ಮೂಲಕ ಹೆಚ್ಚೆಚ್ಚು ಜನರಿಗೆ ತಲುಪದಂತೆ ಮಾಡುತ್ತದೆ.  ಅಲ್ಲದೇ, ಅದು ಸುಳ್ಳು ಸುದ್ದಿ ಎಂದು ಪೋಸ್ಟ್‌ ಮೇಲೆ ಲೇಬಲ್‌ ಮಾಡುತ್ತದೆ, ಜೊತೆಗೆ ಸತ್ಯ ಏನು ಎಂದು ತಿಳಿಯಲು ಲಿಂಕ್‌ ಅನ್ನು ನೀಡುತ್ತದೆ.</p>



<p>ಮೆಟಾದ ಹೊಸ ಮಾನದಂಡವು, X  ನ ಪಾಲಿಸಿಯಂತೆ ಕೆಲಸ ಮಾಡಲಿದೆ. ಎಕ್ಸ್‌ನ ಮಾಲೀಕ ಎಲನ್‌ ಮಸ್ಕ್‌ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆತ್ಮೀಯ ಸ್ನೇಹಿತ ಎಂಬುದನ್ನು ಮರೆಯುವಂತಿಲ್ಲ.  <a href="https://communitynotes.x.com/guide/en/contributing/signing-up">X ನ ಪಾಲಿಸಿಯು ಪ್ರೋಗ್ರಾಂಗೆ ಸೈನ್‌ಅಪ್‌ ಮಾಡಿ</a>ದ ಖಾತೆಗಳು ಮಾಡುವ ಎಲ್ಲಾ ಸಮುದಾಯ ಟಿಪ್ಪಣಿ (ಜನರ ಅಭಪ್ರಾಯ)ಯನ್ನು ಪ್ರಕಟಿಸಲು ಅನುಮತಿ ನೀಡುತ್ತದೆ. ಹೆಚ್ಚು ಜನ ಸಮ್ಮತಿಸಿದ್ದಾರೆ ಎಂಬ ಕಾರಣಕ್ಕೆ ಆ ನೋಟ್‌ ಅನ್ನು ಸಾರ್ವಜನಿಕಗೊಳಿಸಲಾಗುವುದಿಲ್ಲ, &#8220;<a href="https://communitynotes.x.com/guide/en/about/introduction">ವೈವಿಧ್ಯಮಯ ದೃಷ್ಟಿಕೋನಗಳಿಂದ</a>&#8221; ಕೂಡಿರುವ ಖಾತೆಗಳ ನೋಟ್‌ಗಳು ಉಪಯುಕ್ತ ಎಂದು ಅನ್ನಿಸಿದರೆ ಮಾತ್ರ ಆ ನೋಟ್‌ ಎಲ್ಲಿರಿಗೂ ಕಾಣಿಸಲಿದೆ.   </p>



<p>ಮಂಗಳವಾರದ ತನ್ನ ಪ್ರಕಟಣೆಯಲ್ಲಿ, ಮೆಟಾ ಈ ವಿಧಾನವು X ನಲ್ಲಿ ಕೆಲಸ ಮಾಡಿದೆ ಮತ್ತು&nbsp;<a href="https://about.fb.com/news/2025/01/meta-more-speech-fewer-mistakes/" target="_blank" rel="noreferrer noopener">&#8220;ಪಕ್ಷಪಾತ ಕಡಿಮೆಯಾಗುತ್ತದೆ&#8221;</a>&nbsp;ಎಂದು ಹೇಳಿಕೊಂಡಿದೆ .</p>



<p>ಇದರಿಂದ, ಒಂದು ಪೋಸ್ಟ್‌ ಸುಳ್ಳು ಸುದ್ದಿಯಾಗಿದ್ದರೂ, ಬಹುಪಾಲು ಜನರು ಅದನ್ನು ಸತ್ಯವೆಂದು ಕರೆದರೂ ಆ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳಲಿದೆ. ಸುಳ್ಳನ್ನು ಸತ್ಯ ಎಂದು ಹೇಳುವವರ ನೋಟ್‌ಗಳು ಹೆಚ್ಚಾದರೆ, ಆ ಸುಳ್ಳು ಅಧಿಕೃತ ಮಾಹಿತಿಯಂತೆ ಹರಡುವ ಸಾಧ್ಯತೆ ಇದೆ. ‌</p>



<p><strong>ಟ್ರಂಪ್‌ ಕೃಪೆಗಾಗಿ ಈ ಸರ್ಕಸ್?</strong></p>



<p>ಅಮೇರಿಕಾದಲ್ಲಿ ಟ್ರಂಪ್‌ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿರುವಾಗ, ಟ್ರಂಪ್‌ ಆಶೀರ್ವಾದ ಪಡೆಯಲು ಮೆಟಾ ಮತ್ತು ಎಕ್ಸ್‌ ಈ ಸರ್ಕಸ್‌ ನಡೆಸುತ್ತಿರುವಂತೆ ಕಾಣುತ್ತದೆ. ಟ್ರಂಪ್‌ನ ಕಟ್ಟರ್‌ ಬೆಂಬಲಿಗ, ಬಲಪಂಥೀಯ <a href="https://edition.cnn.com/2025/01/02/tech/meta-nick-clegg-stepping-down-joel-kaplan/index.html" target="_blank" rel="noreferrer noopener">ಜೋಯಲ್ ಕಪ್ಲಾನ್ ಅವರನ್ನು ಜಾಗತಿಕ ವ್ಯವಹಾರಗಳ ಮುಖ್ಯಸ್ಥರನ್ನಾಗಿ ಮೆಟಾ 2025 ರ ಜನವರಿ 2 ರಂದು ನೇಮಿಸಿತು.</a> ಇದು ಸರ್ಕಾರಕ್ಕೆ ಹತ್ತಿರ ಇರುವ ವ್ಯಕ್ತಿಯನ್ನು ಕೂರಿಸಿಕೊಂಡು ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವಂತೆ, ಸರ್ಕಾರದ ಸುಳ್ಳುಗಳನ್ನು ಸುಲಭವಾಗಿ ಪ್ರಚಾರ ಮಾಡಲು ಸಾಧ್ಯವಾಗುವಂತೆ ಮಾಡುವ ತಂತ್ರದಂತೆ ಕಾಣುತ್ತದೆ. </p>



<p>ಟ್ರಂಪ್‌ ಹಾಗೂ ಅವರ ಬೆಂಬಲಿಗರು <a href="https://apnews.com/article/meta-facts-trump-musk-community-notes-413b8495939a058ff2d25fd23f2e0f43">ಫ್ಯಾಕ್ಟ್‌ ಚೆಕ್ಕರ್‌ಗಳ ಮೇಲೆ ಸತತವಾಗಿ ಟೀಕೆಗಳನ್ನು</a> ಮಾಡುತ್ತಲೇ ಬಂದಿದ್ದಾರೆ. ಇವರ ಈ ನಡೆಗೆ ಪೂರಕವಾಗಿ, ಬೆಂಬಲವಾಗಿ ಮೆಟಾ ಹಂತ ಹಂತವಾಗಿ ಥರ್ಡ್‌-ಪಾರ್ಟಿ ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು ನಿಲ್ಲಿಸಲು ಹೊರಟಿದೆ. ಇದರ ಜೊತೆಗೆ ದ್ವೇಷ ಹರಡುವ ನಡವಳಿಕೆಗಳ ಮೇಲೆ ನಿಯಂತ್ರಣ ಹೇರಲು ಇದ್ದ <a href="https://transparency.meta.com/en-gb/policies/community-standards/hateful-conduct/">ಪಾಲಿಸಿಯಲ್ಲಿಯೂ ಬದಲಾವಣೆಯನ್ನು</a> ಮೆಟಾ ತಂದಿದೆ. </p>



<p><strong>ಇದನ್ನು ಓದಿ: </strong><a href="https://peepalmedia.com/meta-allow-lgbtq-people-to-be-insulted-as-mentally-ill/"><strong>LGBTQ+ ಗಳನ್ನು ಮಾನಸಿಕ ರೋಗಿಗಳೆಂದು ಅವಮಾನಿಸಲು ಮೆಟಾ ಅನುಮತಿ!</strong></a></p>



<p>ಇದರಿಂದ ಟ್ರಂಪ್‌ ಅವರಿಗೆ ದೊಡ್ಡ ಲಾಭವಾದರೂ, ಬದಿಯಲ್ಲಿ ಲಾಭ ಪಡೆಯುವವರು ನರೇಂದ್ರ ಮೋದಿ ಹಾಗೂ ಬಿಜೆಪಿ ಎಂಬುದು ಭಾರತದ ವಿಚಾರದಲ್ಲಿ ಸತ್ಯ.</p>



<p>ಸದ್ಯ ಯಾವ ರೀತಿಯಲ್ಲಿಯೂ ಉಪದ್ರವನ್ನು ನೀಡದ ಪೋಸ್ಟ್‌ಗಳೂ ಸೆನ್ಸಾರ್‌ ಆಗುತ್ತಿವೆ ಎಂದು ಫ್ಯಾಕ್ಟ್‌ ಚೆಕ್ಕರ್‌ಗಳ ಮೇಲೆ ಆರೋಪಿಸುವಂತೆ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.  &#8220;ಮೆಟಾ ನಿರ್ಬಂಧಿಸುತ್ತಿದೆ. ಇದರಿಂದ ಜನರು ಫೇಸ್‌ಬುಕ್‌ ಜೈಲಿನನಲ್ಲಿ ಬಂಧಿಗಳಾಗಿರುವಂತೆ ಭಾವಿಸುತ್ತಾರೆ, ಅವರಿಗೆ ನಾವು ನಿಧಾನವಾಗಿ ಪ್ರತಿಕ್ರಿಯೆ ನೀಡುತ್ತೇವೆ,&#8221; ಎಂದು ಅಭಿವ್ಯಕ್ತಿ ಸ್ವಾತಂತ್ರ್ಯದ <a href="https://about.fb.com/news/2025/01/meta-more-speech-fewer-mistakes/">ಪಾಠವನ್ನು ಮೆಟಾ ಹೇಳಿದೆ</a>. </p>



<figure class="wp-block-image size-full"><img fetchpriority="high" decoding="async" width="1009" height="372" src="https://peepalmedia.com/wp-content/uploads/2025/01/image-30.png" alt="" class="wp-image-52122" srcset="https://peepalmedia.com/wp-content/uploads/2025/01/image-30.png 1009w, https://peepalmedia.com/wp-content/uploads/2025/01/image-30-300x111.png 300w, https://peepalmedia.com/wp-content/uploads/2025/01/image-30-768x283.png 768w, https://peepalmedia.com/wp-content/uploads/2025/01/image-30-150x55.png 150w, https://peepalmedia.com/wp-content/uploads/2025/01/image-30-696x257.png 696w" sizes="(max-width: 1009px) 100vw, 1009px" /></figure>



<p>ಆದರೆ, ಯಾವುದೇ ಫ್ಯಾಕ್ಟ್‌ ಚೆಕ್ಕರ್‌ಗಳೂ ಮೆಟಾದಲ್ಲಿ ಪೋಸ್ಟ್‌ ಅನ್ನು ಸೆನ್ಸಾರ್‌ ಮಾಡಿಲ್ಲ, ಮತ್ತು ಮಾಡಲು ಸಾಧ್ಯವೂ ಇಲ್ಲ. ಅವರು ಮೆಟಾದ ಟೂಲ್‌ಗಳನ್ನು ಮತ್ತು ನಿಯಮಗಳನ್ನು ಬಳಸಿಕೊಂಡು ಪೋಸ್ಟ್‌ಗಳ ಸ್ವತಂತ್ರ ವಿಮರ್ಶೆಯನ್ನು ಮಾಡಿ, ಅದನ್ನು ಸುಳ್ಳು ಅಥವಾ ಸತ್ಯ ಎಂದು ನಿರ್ಧರಿಸಿ ನಿಖರ ಆಕರಗಳ ಮೂಲಕ ತಮ್ಮ ತೀರ್ಮಾಣವನ್ನು ದೃಢೀಕರಿಸುತ್ತಾರೆ. ಆ ನಂತರ ಆ ಸುದ್ದಿಯನ್ನು ಸೆನ್ಸಾರ್‌ ಮಾಡುವುದು, ಬಿಡುವುದು ಮೆಟಾಕ್ಕೆ ಬಿಟ್ಟ ಕೆಲಸವಾಗಿದೆ. &#8220;More Speech and Fewer Mistakes&#8221; ಎನ್ನುವ ಮೆಟಾ, 2024 ರ ಅಕ್ಟೋಬರ್‌ನಲ್ಲಿ ಪ್ರಕಟಿಸಿದ <a href="https://transparency.meta.com/sr/dsa-transparency-report-sep2024-facebook" target="_blank" rel="noreferrer noopener">Regulation (EU) 2022/2065 &#8211; Digital Services Act &#8211; Transparency Report for Facebook ವರದಿಯಲ್ಲಿ</a>, ಮೆಟಾದಲ್ಲಿ ಮಾಡಲಾಗುವ ಸುಳ್ಳು ಸುದ್ದಿ ಪತ್ತೆಯಲ್ಲಿ ಕೇವಲ 3% ಮಾತ್ರ ದೂರುಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದೆ.</p>



<p>ಮೆಟಾ ಥರ್ಡ್-ಪಾರ್ಟಿ-ಫ್ಯಾಕ್ಟ್‌ ಚೆಕ್ಕಿಂಗ್‌ ವ್ಯವಸ್ಥೆಯನ್ನು ನಿಲ್ಲಿಸುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಮಸ್ಯಾತ್ಮಕ ಬದಲಾವಣೆಗಳು ನಡೆಯುವ ಸಾಧ್ಯತೆಗಳಿವೆ. ಫ್ಯಾಕ್ಟ್‌ ಚೆಕ್ಕಿಂಗ್‌ನಿಂದ ಉಪಯೋಗವಿಲ್ಲ ಎಂಬುದು, ಸೆನ್ಸಾರ್‌ ಮಾಡಿದಂತಾಗುತ್ತದೆ ಎಂಬಿತ್ಯಾದಿ ಕಾರಣಗಳನ್ನು ನೀಡುವ ಮೆಟಾ ಮುಂದೆ ಹೆಚ್ಚು ಹೆಚ್ಚು ತಪ್ಪು ಮಾಹಿತಿಗಳು-ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಲು ಕಾರಣವಾಗಬಹುದು.</p>



<p><strong>ಮೆಟಾದ ಈ ನಡೆಯಿಂದ ಮೋದಿ ಸರ್ಕಾರದ ಬೇಳೆ ಬೇಯುತ್ತಾ?</strong></p>



<p>ಸದ್ಯ ಫ್ಯಾಕ್ಟ್‌ ಚೆಕ್ಕಿಂಗ್‌ ನಿಲ್ಲಿಸುವ ಮೆಟಾ, ಈ ಕೆಲಸವನ್ನು ಮೊದಲು ಅಮೇರಿಕಾದಲ್ಲಿ ಆರಂಭಿಲಿದೆ. ಇದರಿಂದ ಟ್ರಂಪ್‌ ಸರ್ಕಾರಕ್ಕೆ ಲಾಭವಾಗಲಿದೆ ಎಂಬುದನ್ನು ಜಾಗತಿಕ ಮಟ್ಟದ ತಜ್ಞರು, ವಿಶ್ಲೇಷಕರು ಒಪ್ಪಿಕೊಂಡಿದ್ದಾರೆ. ಇದರಿಂದ ಭಾರತಕ್ಕೆ ಏನು ಲಾಭವಾಗಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಟ್ರಂಪ್‌ ನಂತೆ ಮೋದಿಯವರೂ, ಅವರಿಬ್ಬರ ಬೆಂಬಲಿಗರೂ ಭಾರತದಲ್ಲಿ ಫ್ಯಾಕ್ಟ್‌ ಚೆಕ್ಕರ್‌ಗಳ ಮೇಲೆ ಅಸಹನೆಯನ್ನು ಹೊಂದಿರುವುದನ್ನು ನಾವು ಅನೇಕ ನಿದರ್ಶನಗಳ ಮೂಲಕ ನೋಡಬಹುದು.</p>



<p>2020 ರ ಅಗಸ್ಟ್‌ನಲ್ಲಿ, ಭಾರತದ ಬಿಜೆಪಿ ನಾಯಕರ ದ್ವೇಷ ಭಾಷಣದ ಮೇಲೆ ನಿರ್ಬಂಧ ಹೇರಬೇಡಿ, ಇದರಿಂದ ಕಂಪನಿಯ ನಿರೀಕ್ಷೆಗಳಿಗೆ ಹಾನಿಯಾಗುತ್ತದೆ ಎಂದು ತನ್ನ ಸಿಬ್ಬಂದಿಗಳಿಗೆ ಫೇಸ್‌ಬುಕ್‌ನ ಭಾರತದ ಸಾರ್ವಜನಿಕ ನೀತಿ ಮುಖ್ಯಸ್ಥೆ ಆಂಖಿ ದಾಸ್ ಹೇಳಿದ್ದಾರೆ ಎಂದು <a href="https://www.wsj.com/articles/facebook-hate-speech-india-politics-muslim-hindu-modi-zuckerberg-11597423346">ದಿ ವಾಲ್‌ ಸ್ಟ್ರೀಟ್‌ ಜರ್ನಲ್‌ </a>ವರದಿ ಮಾಡಿತ್ತು. ಈ ಸಂದರ್ಭದಲ್ಲಿ ಅಂಖಿ ದಾಸ್‌ ಮೇಲೆ ಬಿಜೆಪಿ ನಾಯಕರನ್ನು ಫೇಸ್‌ಬುಕ್‌ನ ದ್ವೇಷ ಭಾಷಣದ ನಿಯಮಗಳಿಂದ ರಕ್ಷಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂತು.</p>



<p>ಈ ಆರೋಪವನ್ನು ನಿರಾಕರಿಸಿದ ಫೇಸ್‌ಬುಕ್‌, &#8220;ತಾನು ಯಾವುದೇ ಪಕ್ಷದ ಪರವಾಗಿ ಇಲ್ಲ,&#8221; ಎಂದು ಸಮರ್ಥನೆ ಮಾಡಿಕೊಂಡಿತ್ತು. ಇದಾಗಿ ಎರಡು ತಿಂಗಳು ಕಳೆದ ಮೇಲೆ, 2020 ರ ಅಕ್ಟೋಬರ್‌ 27 ರಂದು ಅಂಖಿ ದಾಸ್‌ ತಮ್ಮ<a href="https://www.bbc.com/news/world-asia-india-54715995"> ಹುದ್ದೆಗೆ ರಾಜೀನಾಮೆಯನ್ನು</a> ನೀಡಿದರು. ಮೆಟಾ ಹಾಗೂ ಭಾರತ ಸರ್ಕಾರದ ನಡುವಿನ ಸಂಬಂಧ ಅಸ್ಪಷ್ಟ ಹಾಗೂ ಅಪಾರದರ್ಶಕವಾಗಿ ಕಂಡು ಬರುತ್ತದೆ. </p>



<p>ಈಗ X ನ ಮಾದರಿಯನ್ನು ಅನುಸರಿಸಲು ಮೆಟಾ ಹೊರಟಿದೆ. 2024 ರಲ್ಲಿ ಯುರೋಪಿನ ಫ್ಯಾಕ್ಟ್-ಚೆಕಿಂಗ್ ಸ್ಟ್ಯಾಂಡರ್ಡ್ಸ್ ನೆಟ್‌ವರ್ಕ್‌ ನಡೆಸಿದ ಅಧ್ಯಯನವು ಸುಮಾರು 69% ಟ್ವಿಟ್‌ಗಳನ್ನು ಸುಳ್ಳು ಅಥವಾ ತಪ್ಪುದಾರಿಗೆಳೆಯುವವು  ಎಂದು ಫ್ಯಾಕ್ಟ್‌-ಚೆಕ್ಕರ್‌ಗಳು ಹೇಳಿರುವುದನ್ನು ಬಹಿರಂಗಪಡಿಸಿದೆ. ಆದರೆ<a href="https://science.feedback.org/despite-community-notes-most-content-reviewed-eu-fact-checkers-goes-unaddressed-x-twitter/"> X ಮಾತ್ರ ಈ ಬಗ್ಗೆ ತಲೆ </a>ಕೆಡಿಸಿಕೊಳ್ಳಲೇ ಇಲ್ಲ.  </p>



<p>ಈಗ ಮೆಟಾ ತನ್ನ ಹೊಸ ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೆ ತಂದರೆ, ಅದನ್ನು ಮೊದಲು ಬಿಜೆಪಿ ಹೈಜಾಕ್‌ ಮಾಡಿಕೊಳ್ಳುತ್ತದೆ. ಈ ಹಿಂದೆ ಪ್ರೆಸ್‌ ಇನ್ಪಾರ್ಮೇಷನ್‌ ಬ್ಯೂರೋ (PIB) ಅಡಿಯಲ್ಲಿ ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ತನ್ನದೇ ಆದ ಫ್ಯಾಕ್ಟ್‌ ಚೆಕ್ಕಿಂಗ್‌ ಘಟಕ ಆರಂಭಿಸಲು ಹೊರಟಾಗ, ಆ <a href="https://www.thehindu.com/news/national/supreme-court-stays-it-ministrys-notification-establishing-fact-check-unit-under-pib-to-identify-fake-news/article67975405.ece">ಅಧಿಸೂಚನೆಗೆ ಸುಪ್ರೀಂ ಕೋರ್ಟ್‌ ತಡೆಯನ್ನು</a> ಒಡ್ಡಿತ್ತು.</p>



<p>ಸರ್ಕಾರಗಳೇ ಫ್ಯಾಕ್ಟ್‌-ಚೆಕ್ಕಿಂಗ್‌ ಯೂನಿಟ್‌ಗಳನ್ನು ಆರಂಭಿಸುವುದು ನರಿಯನ್ನು ಕೋಳಿಗೂಡಿನ ಕಾವಲು ಕಾಯಲು ಹೇಳಿ ಬೀಗದ ಕೀಯನ್ನು ಕೊಟ್ಟಂತೆ. ಸರ್ಕಾರಗಳು ಈ ಫ್ಯಾಕ್ಟ್‌-ಚೆಕ್ಕಿಂಗ್‌ ಯೂನಿಟ್‌ಗಳ ಮೂಲಕ ತಮ್ಮನ್ನು ಟೀಕಿಸುವ, ಪ್ರಶ್ನಿಸುವ ದನಿಗಳನ್ನು ಸುಲಭವಾಗಿ ಹತ್ತಿಕ್ಕಲು ಸಾಧ್ಯ. </p>



<p>ಭಾರತದಲ್ಲಿ ಸದ್ಯ ಮೆಟಾದ ಜೊತೆಗೆ <a href="https://www.facebook.com/formedia/mjp/programs/third-party-fact-checking/partner-map">ಸಹಯೋಗವನ್ನು</a> ಹೊಂದಿರುವ ಥರ್ಡ್‌-ಪಾರ್ಟಿ-ಫ್ಯಾಕ್ಟ್‌-ಚೆಕ್ಕಿಂಗ್‌ ಸಂಸ್ಥೆಗಳೆಂದರೆ, <a href="https://factcheck.afp.com/afp-india?fbclid=IwZXh0bgNhZW0CMTEAAR1bQ2B2pK0WlUvVEs6RcTksRnDpfPQv1MznqWYPjdKd4jGiSFfhu0_KpXY_aem_sBM5-5gRUdTkGrq3vS2RZA" target="_blank" rel="noreferrer noopener">AFP &#8211; ಹಬ್</a>, <a href="https://l.facebook.com/l.php?u=https%3A%2F%2Fwww.boomlive.in%2F%3Ffbclid%3DIwZXh0bgNhZW0CMTEAAR20VhnUH6jGL_tFqUoTBTKV85Y95_Vb1x8Kcpl-iic7YzkrnrKvFzBLWIA_aem_wHUU2t4nPE9r1TdiCvYQNg&amp;h=AT2KcRdD2ZQ30FypECDRIYbGV2dwvrzxVDGR4DIt6A10oennjlUv66L3Xb6a7yqMsXxOLjucuIRSALPvWKVKj_PvsNXJ-2UKk7LXcbxBv9d1w-EO00sBlS7hH2sygkQdwby5z3f8bxYMsWmE91yFFA" target="_blank" rel="noreferrer noopener">ಬೂಮ್</a>, <a href="https://factcrescendo.com/?fbclid=IwZXh0bgNhZW0CMTEAAR1ADY9DVl-WFmbPUZBYWo1SJ5F5LvVwyT4X7frvKqjWDRd9l5d7HeHfcmw_aem_ytlK2fuJHVw8DwldlotmjQ" target="_blank" rel="noreferrer noopener">ಫ್ಯಾಕ್ಟ್ ಕ್ರೆಸೆಂಡೋ</a>, <a href="https://www.thip.media/category/health-news-fact-check/?fbclid=IwZXh0bgNhZW0CMTEAAR17VmbD78uqnohidvwDppAno_NvwbrzQWddscWWptEpO7y7y9Pw0WbqY_o_aem_KknsGD2cyBcEPSOU8J7myg" target="_blank" rel="noreferrer noopener">ದಿ ಹೆಲ್ದೀ ಇಂಡಿಯನ್‌ ಪ್ರಾಜೆಕ್ಟ್</a> , <a href="https://factly.in/?fbclid=IwZXh0bgNhZW0CMTEAAR0G6WlS8KAnlmprG3Ws1N13AcrAgjiiSAsxEg-EJY8q2VMQIt8Yp-RlAtc_aem_5Z7Ps4grwdv3qGr2wv7Dwg" target="_blank" rel="noreferrer noopener">ಫ್ಯಾಕ್ಟ್ಲೀ</a>, <a href="https://www.indiatoday.in/fact-check?fbclid=IwZXh0bgNhZW0CMTEAAR0AFJ6P-xZ3vmRDdcLFQZkKm1YlU8BhdJKo8yjbrQFx0M2JTVi1MUSkUpU_aem_dmOURwmGLiG9Z_qUC6vRyw" target="_blank" rel="noreferrer noopener">ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್</a> , <a href="https://www.newschecker.in/?fbclid=IwZXh0bgNhZW0CMTEAAR0QVLKmSsdAA3rYAEKR2dmnYo_GmhQ8NHTZdRCXwth9V3aKXHQ9LKCUT7w_aem_9zkN4E3x8BSJ5xt7IK97cw" target="_blank" rel="noreferrer noopener"> ನ್ಯೂಸ್‌ಚೆಕ್ಕರ್ </a>, <a href="https://newsmeter.in/fact-check?fbclid=IwZXh0bgNhZW0CMTEAAR0-XHOndcjyOM-6Uh1wDzxshma1jB0RyfYsco89PalcIEq3U0U8X47YvaA_aem_IuekF8U_MPQcPmM8Qtzw4A" target="_blank" rel="noreferrer noopener"> ನ್ಯೂಸ್‌ಮೀಟರ್ </a>, <a href="http://www.newsmobile.in/?fbclid=IwZXh0bgNhZW0CMTEAAR2IZ7JrQMJkIs7csEH42FQ2lY61nQDpreBcwgQ0JZ640ImsynP22qEcGR8_aem_anmnqPGoNR-ePQQsFbVd3Q" target="_blank" rel="noreferrer noopener">ನ್ಯೂಸ್‌ಮೊಬೈಲ್ ಫ್ಯಾಕ್ಟ್  ಚೆಕ್ಕರ್ </a>, <a href="https://l.facebook.com/l.php?u=https%3A%2F%2Fwww.thequint.com%2F%3Ffbclid%3DIwZXh0bgNhZW0CMTEAAR002BB_sUJxvksD03bwMHwK0fyGfgDTIOlb4QjEHEoVnb_GxVgXcjqmtsE_aem_JFekj2_JSowt4LXAsKpTJw&amp;h=AT0OQJZvhUstb2ocGHoL-4x3nM4QkNdKtEjYw7mGp6QyfahtAyBu15pEt0s8aZfIk1s7ehNrOhsjtqdn5zzK6vgW1IGizRuSssTd2GRNQwa0JmVd0yeUxRmi1Tjd_XWnZ73rAyGKLTr93FewVpus-A" target="_blank" rel="noreferrer noopener">ದಿ ಕ್ವಿಂಟ್</a> , <a href="https://www.vishvasnews.com/?fbclid=IwZXh0bgNhZW0CMTEAAR3jMSrVrw6z02x65Cyjll45qy-9C1RTgm3122_VP-yElWn_1RIKfRH8k80_aem_QuYfLY_SrWycAmh48xMwNQ">ವಿಶ್ವಸ್.ನ್ಯೂಸ್ </a>.‌</p>



<p>ಮೆಟಾ ತನ್ನ ಪಾಲಿಸಿಯಲ್ಲಿ ತಂದಿರುವ ಬದಲಾವಣೆಗಳು ಭಾರತದಲ್ಲಿ ಯಾವ ರೀತಿಯ ಪರಿಣಾಮವನ್ನು ಬೀರಲಿದೆ ಎಂಬುದು ಅಮೇರಿಕಾದಲ್ಲಿ ಆಗುವ ಬದಲಾವಣೆಗಳಿಂದ ಗ್ರಹಿಸಬಹುದು. ಅಧಿಕಾರದಲ್ಲಿ ಇರುವವರಿಗೆ ತಾನು ನೀಡಿದ ಮಾತನ್ನು ಉಳಿಸಿಕೊಳ್ಳಲು ಮೆಟಾ ಈ ರೀತಿಯ ಸರ್ಕಸ್‌ ಮಾಡುತ್ತಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ. ಅಮೇರಿಕಾದಲ್ಲಿ ಏನಾಗಲಿದೆಯೋ, ಅದು ಭಾರತದಲ್ಲೂ ಆಗುವ ಸಾಧ್ಯತೆ ಇದೆ. </p>



<p></p>



<p></p>



<p></p>



<p></p>



<p></p>



<p></p>



<p></p>
]]></content:encoded>
					
		
		
			</item>
		<item>
		<title>&#8216;ಬಿಜೆಪಿ ನಮ್ಮ ವರದಿಯನ್ನು ಬಳಸಿ ಸುಳ್ಳು ಸುದ್ದಿ ಹರಡಿಸಿದೆʼ- ಫ್ರೆಂಚ್ ಮಾಧ್ಯಮ ಮೀಡಿಯಾಪಾರ್ಟ್ ಖಂಡನೆ</title>
		<link>https://peepalmedia.com/bjp-used-mediapart-report-to-spread-fake-news/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 11 Dec 2024 06:16:04 +0000</pubDate>
				<category><![CDATA[ವಿದೇಶ]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[Fake news]]></category>
		<category><![CDATA[George Soros]]></category>
		<category><![CDATA[Mediapart]]></category>
		<category><![CDATA[narendra modi]]></category>
		<guid isPermaLink="false">https://peepalmedia.com/?p=50533</guid>

					<description><![CDATA[ಬೆಂಗಳೂರು: ಫ್ರೆಂಚ್ ತನಿಖಾ ಮಾಧ್ಯಮವಾಗಿರುವ ಮೀಡಿಯಾಪಾರ್ಟ್ ಬಿಜೆಪಿ ತನ್ನ ವರದಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಖಂಡಿಸಿ, ಭಾರತದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಯುಎಸ್‌ ಸ್ಟೇಟ್‌ ಡಿಪಾರ್ಟ್‌ಮೆಂಟ್ , ಅಮೆರಿಕದ ಕೋಟ್ಯಾದೀಶ ಜಾರ್ಜ್ ಸೊರೊಸ್ ಮತ್ತು ಭಾರತದ ವಿರೋಧ ಪಕ್ಷಗಳು ಪಿತೂರಿ ನಡೆಸುತ್ತಿವೆ ಎಂದು ಬಿಜೆಪಿ ಮಾಡಿರುವ ಆರೋಪಗಳಿಗೆ ಪೂರಕವಾಗಿರುವ ಯಾವುದೇ &#8220;ಸಾಕ್ಷ್ಯಗಳು ಇಲ್ಲ&#8221; ಇಲ್ಲ ಎಂದು ಹೇಳಿದೆ. ಬಿಜೆಪಿಯು ಸಂಸತ್ತಿನಲ್ಲಿ ಮತ್ತು ಅದರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ, ಮತ್ತೊಂದು ತನಿಖಾ ಮಾಧ್ಯಮ ನೆಟ್‌ವರ್ಕ್, ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆಯಲ್ಲಿ (OCCRP &#8211; [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ಫ್ರೆಂಚ್ ತನಿಖಾ ಮಾಧ್ಯಮವಾಗಿರುವ <em>ಮೀಡಿಯಾಪಾರ್ಟ್</em> ಬಿಜೆಪಿ ತನ್ನ ವರದಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಖಂಡಿಸಿ, ಭಾರತದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಲು ಯುಎಸ್‌ ಸ್ಟೇಟ್‌ ಡಿಪಾರ್ಟ್‌ಮೆಂಟ್ , ಅಮೆರಿಕದ ಕೋಟ್ಯಾದೀಶ ಜಾರ್ಜ್ ಸೊರೊಸ್ ಮತ್ತು ಭಾರತದ ವಿರೋಧ ಪಕ್ಷಗಳು ಪಿತೂರಿ ನಡೆಸುತ್ತಿವೆ ಎಂದು ಬಿಜೆಪಿ ಮಾಡಿರುವ ಆರೋಪಗಳಿಗೆ ಪೂರಕವಾಗಿರುವ ಯಾವುದೇ &#8220;ಸಾಕ್ಷ್ಯಗಳು ಇಲ್ಲ&#8221; ಇಲ್ಲ ಎಂದು ಹೇಳಿದೆ. </p>



<p>ಬಿಜೆಪಿಯು ಸಂಸತ್ತಿನಲ್ಲಿ ಮತ್ತು ಅದರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ, <a href="https://www.mediapart.fr/en/journal/international/021224/hidden-links-between-giant-investigative-journalism-and-us-government">ಮತ್ತೊಂದು ತನಿಖಾ ಮಾಧ್ಯಮ ನೆಟ್‌ವರ್ಕ್, ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆಯಲ್ಲಿ (OCCRP &#8211; Organized Crime and Corruption Reporting Project) <em>ಮೀಡಿಯಾಪಾರ್ಟ್‌ನ</em> ವರದಿಯನ್ನು</a> ಉಲ್ಲೇಖಿಸಿ, ಸೊರೊಸ್ ಮತ್ತು ಅಮೇರಿಕಾದ ಸ್ಟೇಟ್‌ ಡಿಪಾರ್ಟ್‌ಮೆಂಟಿನ ಬೆಂಬಲದೊಂದಿಗೆ ಕಾಂಗ್ರೆಸ್ ಹಾಗೂ ಆ ಪಕ್ಷದ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿತ್ತು. </p>



<p>&#8221; ಬಿಜೆಪಿಯು ತನ್ನ ರಾಜಕೀಯ ತಂತ್ರವನ್ನು ಕಾರ್ಯರೂಪಕ್ಕೆ ತರಲು ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಒಸಿಸಿಆರ್‌ಪಿ ಕುರಿತು ಇತ್ತೀಚೆಗೆ ಪ್ರಕಟಿಸಿದ ತನಿಖಾ ಲೇಖನವನ್ನು <em>ಮೀಡಿಯಾಪಾರ್ಟ್  ಖಂಡಿಸುತ್ತದೆ,&#8221; ಎಂದು ಮೀಡಿಯಾಪಾರ್ಟ್‌ನ</em> ಪ್ರಕಾಶಕರು ಮತ್ತು ನಿರ್ದೇಶಕಿ ಕ್ಯಾರಿನ್ ಫೌಟೊ ಡಿಸೆಂಬರ್ 7 ರಂದು ಹೇಳಿದರು. </p>



<p>&#8221; ನಾವು ಎಂದಿಗೂ ಪ್ರಕಟಿಸದ ನಕಲಿ ಸುದ್ದಿಗಳನ್ನು ಹರಡಲು ಬಿಜೆಪಿಯು <em>ಮೀಡಿಯಾಪಾರ್ಟ್‌ನ ಲೇಖನ ಎಂದು ತಪ್ಪಾಗಿ ಬಳಸಿಕೊಂಡಿದೆ,&#8221; ಎಂದು ಅವರು ಆರೋಪಿಸಿದರು.</em></p>



<p>&#8220;ಬಿಜೆಪಿಯು ಪ್ರಚಾರ ಮಾಡುವ ಪಿತೂರಿ ಸಿದ್ಧಾಂತವನ್ನು ಬೆಂಬಲಿಸುವ ಯಾವುದೇ ಸತ್ಯ ಸಾಕ್ಷಿಗಳು ಲಭ್ಯವಿಲ್ಲ,&#8221; ಎಂದಿರುವ <em>ಮೀಡಿಯಾಪಾರ್ಟ್‌ನ</em> ಪ್ರಕಾಶಕರು ಹೇಳಿದರು, &#8220;ಭಾರತದಲ್ಲಿ ವರದಿ ಮಾಡುವ ಮತ್ತು ತನಿಖೆ ಮಾಡುವ ಧೈರ್ಯಶಾಲಿ ಭಾರತೀಯ ಮತ್ತು ಅಂತರರಾಷ್ಟ್ರೀಯ ಪತ್ರಕರ್ತರಿಗೆ ಸಂಪೂರ್ಣ ಬೆಂಬಲವನ್ನು&#8221; ವ್ಯಕ್ತಪಡಿಸಿದ್ದಾರೆ.</p>



<p>ಗುರುವಾರ, ಬಿಜೆಪಿ ಶಾಸಕರು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಟೀಕಿಸಲು <em>ಮೀಡಿಯಾಪಾರ್ಟ್ ವರದಿಯನ್ನು ಉಲ್ಲೇಖಿಸಿ, ಅವರು ಒಸಿಸಿಆರ್‌ಪಿ ಮತ್ತು ಯುಎಸ್ ಬಿಲಿಯನೇರ್ ಸೊರೊಸ್ ಜೊತೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದರು.</em></p>



<p>ಸಾರ್ವಜನಿಕ ದಾಖಲೆಗಳ ಪ್ರಕಾರ USAID ಯು (<a href="https://www.usaid.gov/" target="_blank" rel="noreferrer noopener">U.S. Agency for International Development</a>) OCCRP ಗೆ ಗಣನೀಯ ಪ್ರಮಾಣದ ಹಣವನ್ನು ನೀಡಿದ್ದರಿಂದ ಯುಎಸ್‌ ಸ್ಟೇಟ್‌ ಡಿಪಾರ್ಟ್‌ಮೆಂಟ್ ರಾಜ್ಯ ಪಿತೂರಿಯ ಭಾಗವಾಗಿದೆ ಎಂದು ನೇರವಾಗಿ ಆರೋಪಿಸಿ ಬಿಜೆಪಿ <a href="https://x.com/BJP4India/status/1864601128757006538">X ನಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿತ್ತು. </a> ಬಿಜೆಪಿ ಸಂಸದ <a href="https://www.bjp.org/pressreleases/salient-points-press-conference-bjp-national-spokesperson-dr-sambit-patra-mp-9">ಸಂಬಿತ್ ಪಾತ್ರ</a> ಗುರುವಾರದ ಪತ್ರಿಕಾಗೋಷ್ಠಿಯಲ್ಲಿಯೂ ಈ ಆರೋಪಗಳನ್ನು ಮಾಡಿದ್ದರು. </p>



<p>ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿ ಶನಿವಾರ ಹೇಳಿಕೆಯನ್ನು&nbsp;<a href="https://thewire.in/diplomacy/us-embassy-says-disappointing-that-bjp-would-accuse-state-department-of-destabilising-india">ನೀಡಿದ್ದು</a>&nbsp;, &#8220;ಭಾರತದಲ್ಲಿ ಆಡಳಿತ ಪಕ್ಷವು ಈ ರೀತಿಯ ಆರೋಪಗಳನ್ನು ಮಾಡುತ್ತಿರುವುದು ನಿರಾಶಾದಾಯಕವಾಗಿದೆ&#8221; ಎಂದು ಹೇಳಿದೆ.</p>



<p>ಇದು <em>ಮೀಡಿಯಾಪಾರ್ಟ್‌</em> ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಈ ಕಿತ್ತಾಟ ಇದೇ ಮೊದಲೇನಲ್ಲ. 2018 ರಲ್ಲಿ ಈ ಫ್ರೆಂಚ್ ಮಾಧ್ಯಮವು ಭಾರತ ಖರೀದಿಸದ 36 ರಫೇಲ್ ಫೈಟರ್ ಜೆಟ್‌ಗಳಲ್ಲಿ ಆಗಿರುವ ಭ್ರಷ್ಟಾಚಾರದ <a href="https://www.mediapart.fr/en/search?search_word=rafale%20india&amp;page=1">ವಿಶೇಷ ತನಿಖಾ ವರದಿಗಳ ಸರಣಿಯನ್ನು ಪ್ರಕಟಿಸಿತ್ತು.</a> ಆ ಸಮಯದಲ್ಲಿ, <a href="https://www.mediapart.fr/en/journal/international/111018/indian-defence-minister-dismisses-mediapart-report">ಭಾರತ ಸರ್ಕಾರ </a><a href="https://www.business-standard.com/article/politics/cong-bjp-spar-as-french-media-says-judicial-probe-begins-into-rafale-deal-121070300682_1.html">ಮತ್ತು ಬಿಜೆಪಿ</a> ರಫೇಲ್‌ ಹಗರಣದ ಆರೋಪಗಳನ್ನು ತಳ್ಳಿಹಾಕಿತು.</p>



<p><a href="https://www.mediapart.fr/en/journal/international/141223/rafale-papers-india-impedes-french-judicial-probe-dassault">2023 ಡಿಸೆಂಬರ್</a> ನಲ್ಲಿ ಪ್ರಕಟವಾದ ರಫೇಲ್ ಒಪ್ಪಂದದ ಇತ್ತೀಚಿನ ವರದಿಯಲ್ಲಿ , ಭ್ರಷ್ಟಾಚಾರ ಆರೋಪಗಳ ಬಗ್ಗೆ ಫ್ರೆಂಚ್ ನ್ಯಾಯಾಂಗ ತನಿಖೆಗೆ ಭಾರತ ಅಡ್ಡಿಪಡಿಸುತ್ತಿದೆ ಎಂದು <em>ಮೀಡಿಯಾಪಾರ್ಟ್ ಆರೋಪಿಸಿತ್ತು.</em> &#8220;ಇದು ಈಗ ಸ್ಥಾಪಿತ ಸತ್ಯ: ಭಾರತಕ್ಕೆ 36 ಡಸ್ಸಾಲ್ಟ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳ ಮಾರಾಟಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣವನ್ನು ಎಷ್ಟೇ ಖರ್ಚುಮಾಡಿಯಾದರೂ ಮುಚ್ಚಿಹಾಕಲು ಅಲ್ಟ್ರಾ-ರಾಷ್ಟ್ರೀಯವಾದಿ ಪ್ರಧಾನಿ ನರೇಂದ್ರ ಮೋದಿಯವರ ಭಾರತ ಸರ್ಕಾರ ಉತ್ಸುಕವಾಗಿದೆ&#8221; ಎಂದು ಈ ಮಾಧ್ಯಮ ಬರೆದಿತ್ತು. </p>



<p>ಆಮ್‌ಸ್ಟರ್‌ಡ್ಯಾಮ್-ಆಧಾರಿತ OCCRP ಕುರಿತು <em>ಮೀಡಿಯಾಪಾರ್ಟ್‌ನ ಇತ್ತೀಚಿನ ತನಿಖೆಯು ಹೆಚ್ಚಾಗಿ ಸಾರ್ವಜನಿಕ ದಾಖಲೆಗಳ ಮೇಲೆ ಅವಲಂಬಿತವಾಗಿದೆ ಮತ್ತು OCCRP ಸಂಸ್ಥಾಪಕ ಡ್ರೂ ಸುಲ್ಲಿವಾನ್ ಮತ್ತು ಹಲವಾರು ಹಿರಿಯ US ಅಧಿಕಾರಿಗಳು ಜರ್ಮನ್ ಬ್ರಾಡ್‌ಕಾಸ್ಟರ್ NDR ಗೆ ನೀಡಿದ ಸಂದರ್ಶನಗಳನ್ನೂ ಚಿತ್ರೀಕರಿಸಲಾಗಿದೆ.</em></p>



<p>ಮೀಡಿಯಾಪಾರ್ಟ್ ವರದಿಯು &#8220;OCCRP ಅನೇಕ ಅಮೇರಿಕನ್ ಸರ್ಕಾರದ ದೇಣಿಗೆಗಳನ್ನು ಸ್ವೀಕರಿಸಿದೆ, ಅದು ವಾಷಿಂಗ್ಟನ್ ಆದ್ಯತೆಯ ವಿಷಯವೆಂದು ಪರಿಗಣಿಸುವ ಕೆಲವು ದೇಶಗಳ ತನಿಖೆಗಳಿಗೆ ಖರ್ಚು ಮಾಡಲು ನಿರ್ಬಂಧವನ್ನು ಹೊಂದಿದೆ&#8221; ಎಂದು ಹೈಲೈಟ್ ಮಾಡಿತ್ತು <em>.</em></p>



<p>ಇದು ರಷ್ಯಾ, ವೆನೆಜುವೆಲಾ, ಮಾಲ್ಟಾ ಮತ್ತು ಸೈಪ್ರಸ್‌ನಲ್ಲಿ ತೆರಿಗೆ ಸ್ವರ್ಗಗಳು ಮತ್ತು ಮೆಕ್ಸಿಕೋದಲ್ಲಿನ ಡ್ರಗ್ ಕಾರ್ಟೆಲ್‌ಗಳ ಮೇಲೆ ಕೇಂದ್ರೀಕರಿಸಿದ ಯುಎಸ್‌ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಧನಸಹಾಯ ಪಡೆದ ಯೋಜನೆಗಳನ್ನು ವಿವರಿಸಿದೆ. ಹಾಗೆಯೇ, <em>ಮೀಡಿಯಾಪಾರ್ಟ್‌ನ</em> ತನಿಖೆಯು ಯಾವುದೇ OCCRP ವರದಿಯಲ್ಲಿ ಭಾರತವನ್ನು ಗುರಿಯಾಗಿಸುವ ಯಾವುದೇ ಯುಎಸ್‌ ಸ್ಟೇಟ್‌ ಡಿಪಾರ್ಟ್‌ಮೆಂಟ್‌ನ ಅನುದಾನದ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ.</p>



<p><em>ಮೀಡಿಯಾಪಾರ್ಟ್‌ನ</em> ಲೇಖನದ ಪ್ರಕಟಣೆಯ ನಂತರ <a href="https://www.occrp.org/en/announcement/report-on-occrp-distorts-facts">OCCRP ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯನ್ನು ನೀಡಿ</a>de. ತಮ್ಮ ಈ ವರದಿಯು ದಾನಿಗಳ ಹಣದಿಂದ ಪ್ರಭಾವಕ್ಕೆ ಒಳಗಾಗಿದೆ ಎಂಬ ಆರೋಪವನ್ನು ಒಂದು ಸುಳ್ಳು ಆರೋಪ ಎಂದಿದೆ. &#8220;OCCRP ತನ್ನ ಪತ್ರಿಕೋದ್ಯಮದ ಮೇಲೆ ಯಾವುದೇ ಮಿತಿಗಳನ್ನು ಹೊಂದಿಲ್ಲ ಮತ್ತು ಯಾವುದೇ ದಾನಿಯು ನಮ್ಮ ವರದಿಯ ಮೇಲೆ ಪ್ರಭಾವ ಬೀರುವುದಿಲ್ಲ&#8221; ಎಂದು ಮಾಧ್ಯಮ ಸಂಸ್ಥೆ ಹೇಳಿದೆ.</p>



<p></p>
]]></content:encoded>
					
		
		
			</item>
		<item>
		<title>ಭಾರತದ ಸಾರ್ವಭೌಮತ್ವ, ಏಕತೆ, ಸಮಗ್ರತೆಗೆ ಅಪಾಯ ತಂದಿದ್ದಾರೆ ಎಂದು ಜುಬೈರ್‌ ಮೇಲೆ ಯುಪಿ ಪೊಲೀಸ್‌ ಆರೋಪ</title>
		<link>https://peepalmedia.com/up-police-accuses-zubair-of-endangering-indias-sovereignty-unity-and-integrity/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 28 Nov 2024 05:48:54 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[Allahabad High Court told]]></category>
		<category><![CDATA[alt news]]></category>
		<category><![CDATA[Fact check]]></category>
		<category><![CDATA[Fake news]]></category>
		<category><![CDATA[hindutva]]></category>
		<category><![CDATA[Mohammed Zubair]]></category>
		<category><![CDATA[sovereignty]]></category>
		<category><![CDATA[unity of India]]></category>
		<guid isPermaLink="false">https://peepalmedia.com/?p=49739</guid>

					<description><![CDATA[ಬೆಂಗಳೂರು: ಹಿಂದುತ್ವವಾದಿಯೊಬ್ಬನ ದ್ವೇಷಪೂರಿತ ಭಾಷಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪತ್ತೆದಾರ ಮೊಹಮ್ಮದ್ ಜುಬೇರ್ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕಾನೂನನ್ನು ಜಾರಿಗೊಳಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಬುಧವಾರ (ನವೆಂಬರ್ 27) ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದ್ದು, ಬಿಎನ್‌ಎಸ್‌ನ ಸೆಕ್ಷನ್ 152 ರ ಅಡಿಯಲ್ಲಿ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಅಪರಾಧದ ಅಡಿಯಲ್ಲಿ ಜುಬೈರ್ ವಿರುದ್ಧದ ಎಫ್‌ಐಆರ್‌ ದಾಖಲಾಗಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ. ಅವರು ಎಫ್‌ಐಆರ್‌ಗೆ &#8216;ಕಂಪ್ಯೂಟರ್ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಹಿಂದುತ್ವವಾದಿಯೊಬ್ಬನ ದ್ವೇಷಪೂರಿತ ಭಾಷಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಪತ್ತೆದಾರ ಮೊಹಮ್ಮದ್ ಜುಬೇರ್ ವಿರುದ್ಧ ಉತ್ತರ ಪ್ರದೇಶದ ಪೊಲೀಸರು ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಕಾನೂನನ್ನು ಜಾರಿಗೊಳಿಸಿದ್ದಾರೆ.</p>



<p>ಪ್ರಕರಣದ ತನಿಖಾಧಿಕಾರಿ ಬುಧವಾರ (ನವೆಂಬರ್ 27) ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದ್ದು, ಬಿಎನ್‌ಎಸ್‌ನ ಸೆಕ್ಷನ್ 152 ರ ಅಡಿಯಲ್ಲಿ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟು ಮಾಡುವ ಅಪರಾಧದ ಅಡಿಯಲ್ಲಿ ಜುಬೈರ್ ವಿರುದ್ಧದ ಎಫ್‌ಐಆರ್‌ ದಾಖಲಾಗಿದೆ ಎಂದು <em>ಬಾರ್ ಮತ್ತು ಬೆಂಚ್ </em><a href="https://www.barandbench.com/news/mohammed-zubair-endangering-sovereignty-unity-of-india-allahabad-high-court-told">ವರದಿ ಮಾಡಿದೆ</a>.</p>



<p>ಅವರು ಎಫ್‌ಐಆರ್‌ಗೆ &#8216;ಕಂಪ್ಯೂಟರ್ ಅಪರಾಧಗಳಿಗೆ&#8217; ಸಂಬಂಧಿಸಿದ ಐಟಿ ಕಾಯ್ದೆಯ ಸೆಕ್ಷನ್ 66 ಅನ್ನು ಕೂಡ ಸೇರಿಸಿದ್ದು, ಇದರಲ್ಲಿ ದ್ವೇಷವನ್ನು ಉತ್ತೇಜಿಸುವುದು, ಸಾಕ್ಷ್ಯವನ್ನು ಸೃಷ್ಟಿಸುವುದು, ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವುದು, ಮಾನನಷ್ಟ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ನಿಬಂಧನೆಗಳಿವೆ. </p>



<p>ಹಿಂದುತ್ವವಾದಿ ಯತಿ ನರಸಿಂಗಾನಂದ ಎಂಬಾತನ ಸಹಾಯಕನ ದೂರಿನ ಮೇರೆಗೆ ಗಾಜಿಯಾಬಾದ್ ಪೊಲೀಸರು ಕಳೆದ ತಿಂಗಳು ಜುಬೈರ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.</p>



<p>ಯತಿ ನರಸಿಂಹಾನಂದ ಸರಸ್ವತಿ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಉದಿತಾ ತ್ಯಾಗಿ,&nbsp;ಜುಬೇರ್ ಅವರು ಮುಸ್ಲಿಮರಿಂದ ಹಿಂಸಾಚಾರವನ್ನು ಪ್ರಚೋದಿಸುವ ಸಲುವಾಗಿ ನರಸಿಂಹಾನಂದರನ್ನು ಒಳಗೊಂಡ ಹಳೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ&nbsp;<a href="https://theprint.in/india/fir-filed-against-alt-news-co-founder-mohammad-zubair-in-ghaziabad-over-post-on-narsinghanand-police/2301507/">.</a></p>



<p>ಆ ತಿಂಗಳ ಆರಂಭದಲ್ಲಿ,&nbsp;ನರಸಿಂಹಾನಂದರು ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ&nbsp;<a href="https://thewire.in/politics/narsinghanand-bjp-dasna-ghaziabad-israel-encounter">ವಿವಾದವುಂಟಾಯಿತು .</a></p>



<p>ಸೆಪ್ಟೆಂಬರ್ 29 ರಂದು ಗಾಜಿಯಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನರಸಿಂಹಾನಂದ ಅವರು ಪ್ರವಾದಿಯವರ ಪ್ರತಿಕೃತಿಯನ್ನು ಸುಡುವಂತೆ ಜನರನ್ನು ಪ್ರಚೋದಿಸುವ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.</p>



<p>ಉತ್ತರ ಪ್ರದೇಶದ ಹಲವೆಡೆ ಮುಸ್ಲಿಮರು ಬೀದಿಗಿಳಿದು ಪ್ರತಿಭಟನೆ ನಡೆಸಿ ಈತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.</p>



<p>ಜುಬೇರ್ ತನ್ನ ವಿರುದ್ಧದ ಎಫ್‌ಐಆರ್ ಅನ್ನು ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ ಮತ್ತು ರಕ್ಷಣೆಯನ್ನು ಕೋರಿದ್ದಾರೆ.</p>



<p>ನರಸಿಂಹಾನಂದನ ಕುರಿತು ತಾವು ಮಾಡಿದ ಪೋಸ್ಟ್‌ನಲ್ಲಿ ಹಿಂಸಾಚಾರಕ್ಕೆ ಕರೆ ನೀಡಿರುವುದಿಲ್ಲ ಎಂದು ಜುಬೈರ್‌ ಹೇಳಿದ್ದಾರೆ, ಆದರೆ ನರಸಿಂಹಾನಂದನ ವಿರುದ್ಧ ಕ್ರಮ ತೆಗೆದುಕೊಳ್ಳಲು ಮತ್ತು ರಕ್ಷಣೆಗಾಗಿ ಕೋರಿದ್ದರು ಎಂದು ಪಿಟಿಐ <a href="https://theprint.in/india/alt-news-co-founder-md-zubair-files-writ-petition-challenging-fir-by-ghaziabad-police/2367887/">ವರದಿ ಮಾಡಿದೆ</a>. </p>



<p>ನರಸಿಂಹಾನಂದ ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ವಿರುದ್ಧ ದ್ವೇಷ ಭಾಷಣ ಪ್ರಕರಣದಲ್ಲಿ ಕೇಸು ದಾಖಲಾಗಿ, ಆಮೇಲೆ ಕೋಮು ಸೌಹಾರ್ದತೆಯನ್ನು ಕದಡುವ ಯಾವುದೇ ಹೇಳಿಕೆಗಳನ್ನು ನೀಡಬಾರದು ಜಾಮೀನು ಷರತ್ತುಗಳ ಮೇಲೆ ಜಾಮೀನಿನ ಮೂಲಕ ಹೊರಬಂದಿದ್ದರು ಎಂದು ಅವರ ರಿಟ್ ಅರ್ಜಿಯಲ್ಲಿ <a href="https://theprint.in/india/alt-news-co-founder-md-zubair-files-writ-petition-challenging-fir-by-ghaziabad-police/2367887/">ತಿಳಿಸಲಾಗಿದೆ.</a></p>



<p><em>ಲೈವ್‌ಲಾ</em> ವರದಿಯ ಪ್ರಕಾರ, ಜುಬೈರ್ ಅವರು ನರಸಿಂಹಾನಂದ್ ಅವರ ವೀಡಿಯೊಗಳನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಹಂಚಿಕೊಳ್ಳುವ ಮೂಲಕ ಅವರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿರುವುದು ಮಾನನಷ್ಟವಾಗುವುದಿಲ್ಲ ಎಂದು <a href="https://www.livelaw.in/high-court/allahabad-high-court/allahabad-high-court-up-police-offence-endangering-sovereignty-unity-india-invoked-against-mohammed-zubair-x-post-276521">ವಾದಿಸಿದರು .</a></p>



<p>ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 3 ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ ಎಂದು <em>ಬಾರ್ </em>ಆಂಡ್‌ ಬೆಂಚ್ ವರದಿ ತಿಳಿಸಿದೆ.</p>



<p><a href="https://www.mha.gov.in/sites/default/files/250883_english_01042024.pdf"></a>ಬಿಎನ್‌ಎಸ್‌ <a href="https://www.mha.gov.in/sites/default/files/250883_english_01042024.pdf">ಸೆಕ್ಷನ್ 152 ಹೀಗೆ ಹೇಳುತ್ತದೆ:</a></p>



<p>&#8220;ಯಾರು, ಉದ್ದೇಶಪೂರ್ವಕವಾಗಿ ಅಥವಾ ಗೊತ್ತಿದ್ದು ಗೊತ್ತಿದ್ದೂ, ಪದಗಳಿಂದ, ಮಾತನಾಡುವ ಅಥವಾ ಬರೆಯುವ ಮೂಲಕ, ಅಥವಾ ಸಂಕೇತಗಳ ಮೂಲಕ, ಅಥವಾ ಕಣ್ಣಿಗೆ ಕಾಣುವಂತ ಯಾವುದೇ ರೀತಿಯಲ್ಲಿ, ಅಥವಾ ವಿದ್ಯುನ್ಮಾನ ಸಂವಹನದಿಂದ ಅಥವಾ ಆರ್ಥಿಕ ಉದ್ದೇಶದಿಂದ ಅಥವಾ ಇತರ ರೀತಿಯಲ್ಲಿ, ಪ್ರಚೋದಿಸುವ ಅಥವಾ ಪ್ರಚೋದಿಸಲು ಪ್ರಯತ್ನಿಸುವ, ಪ್ರತ್ಯೇಕತೆ ಅಥವಾ ಸಶಸ್ತ್ರ ದಂಗೆ ಅಥವಾ ವಿಧ್ವಂಸಕ ಚಟುವಟಿಕೆಗಳು, ಅಥವಾ ಪ್ರತ್ಯೇಕತಾವಾದಿ ಚಟುವಟಿಕೆಗಳ ಭಾವನೆಗಳನ್ನು ಪ್ರೋತ್ಸಾಹಿಸುವುದು ಅಥವಾ ಭಾರತದ ಸಾರ್ವಭೌಮತ್ವ ಅಥವಾ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುತ್ತದೆ; ಅಥವಾ ಅಂತಹ ಯಾವುದೇ ಕೃತ್ಯದಲ್ಲಿ ತೊಡಗಿದರೆ ಅಥವಾ ಎಸಗಿದರೆ ಜೀವಾವಧಿ ಶಿಕ್ಷೆ ಅಥವಾ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ ಮತ್ತು ದಂಡಕ್ಕೆ ಗುರಿಯಾಗಬಹುದು.&#8221;</p>



<p>ಜುಬೈರ್ ವಿರುದ್ಧ ಎಫ್‌ಐಆರ್ ದಾಖಲಾಗಿರುವುದು ಇದೇ ಮೊದಲಲ್ಲ. ಅವರು 2018 ರಲ್ಲಿ ಮಾಡಿದ ಪೋಸ್ಟ್‌ಗೆ ಸಂಬಂಧಿಸಿದಂತೆ ಅವರನ್ನು ಜೂನ್ 2022 ರಲ್ಲಿ ಬಂಧಿಸಲಾಯಿತು.</p>



<p>ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳು, ನಾಗರಿಕ ಸಮಾಜ ಮತ್ತು ವಿರೋಧ ಪಕ್ಷಗಳು ವಿರೋಧಕ್ಕೆ ಕಾರಣವಾಯ್ತು, ಇದು ಭಿನ್ನಾಭಿಪ್ರಾಯದ ಬಾಯಿ ಮುಚ್ಚಿಸುವ ಮತ್ತು ಸತ್ಯ-ಶೋಧಕರನ್ನು ಗುರಿ ಮಾಡುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದರು.</p>



<p>ಜುಬೈರ್ ಸಹ-ಸಂಸ್ಥಾಪಕರಾಗಿರುವ <em>Alt News</em> ಎಂಬ ಸತ್ಯ-ಪರಿಶೀಲನಾ ಡಿಜಿಟಲ್‌ <a href="https://x.com/AltNews/status/1861789039159885931">ಮಾಧ್ಯಮವು ತನ್ನ ಹೇಳಿಕೆಯಲ್ಲಿ</a>, ಬುಧವಾರ ತಾನು &#8220;ಜುಬೈರ್ ಈ ರೀತಿ ಪಟ್ಟುಬಿಡದೆ ಕಾನೂನು ಬೆದರಿಕೆಯನ್ನು ಎದುರಿಸುತ್ತಿರುವಾಗ ಅವರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ&#8221; ಎಂದು ಹೇಳಿದೆ.</p>



<p>&#8220;ದ್ವೇಷ ಮತ್ತು ತಪ್ಪು ಮಾಹಿತಿಯನ್ನು ಬೆತ್ತಲುಗೊಳಿಸಲು ಬದ್ಧವಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಬೆದರಿಸಲು ಸರ್ಕಾರಿ ಯಂತ್ರವನ್ನು ಹೇಗೆ ಬಳಸಲಾಗುತ್ತಿದೆ ಎಂಬುದಕ್ಕೆ ಈ ಅಫಿಡವಿಟ್ ಮತ್ತೊಂದು ಉದಾಹರಣೆಯಾಗಿದೆ&#8221; ಎಂದು ಅದು ಹೇಳಿದೆ.</p>
]]></content:encoded>
					
		
		
			</item>
		<item>
		<title>Fact Check: IC 814 ಸೀರಿಸ್‌ನಲ್ಲಿ ಕಂದಹಾರ್ ಉಗ್ರರಿಗೆ ಹಿಂದೂ ಹೆಸರೇ? ಸತ್ಯ ಏನು?</title>
		<link>https://peepalmedia.com/fact-check-ic-814-the-kandahar-hijack-series-used-hindu-names-to-hijackers/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 03 Sep 2024 15:44:41 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಸುಳ್ಳು ಸುದ್ದಿ ಪತ್ತೆ]]></category>
		<category><![CDATA[bjp]]></category>
		<category><![CDATA[fact]]></category>
		<category><![CDATA[Fact check]]></category>
		<category><![CDATA[facts]]></category>
		<category><![CDATA[fake]]></category>
		<category><![CDATA[Fake news]]></category>
		<category><![CDATA[IC 814: The Kandahar Hijack]]></category>
		<category><![CDATA[kandahar hijack]]></category>
		<category><![CDATA[LK advani]]></category>
		<category><![CDATA[netflix]]></category>
		<category><![CDATA[Series]]></category>
		<category><![CDATA[webseries]]></category>
		<guid isPermaLink="false">https://peepalmedia.com/?p=44878</guid>

					<description><![CDATA[&#8216;IC 814: ದಿ ಕಂದಹಾರ್ ಹೈಜಾಕ್&#8217; (IC 814: The Kandahar Hijack) ಎಂಬ ವೆಬ್‌ ಸೀರಿಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ.&#160; ಈ ಸೀರಿಸ್‌ನ ನಿರ್ದೇಶಕರಲ್ಲಿ ಒಬ್ಬರಾದ ಅನುಭವ್ ಸಿನ್ಹಾ ಅವರು ಉಗ್ರಗಾಮಿಗಳ ಪಾತ್ರಗಳು &#8216;ಭೋಲಾ&#8217; ಮತ್ತು &#8216;ಶಂಕರ್&#8217; ಎಂಬ ಕೋಡ್‌ನೇಮ್‌ಗಳನ್ನು ಬಳಸಿದಂತೆ ಚಿತ್ರಿಸಿದ ಕಾರಣಕ್ಕೆ ಬಲಪಂಥೀಯ ಗುಂಪುಗಳ ಮತ್ತು ಗೋದಿ ಮೀಡಿಯಗಳ ಮೌಖಿಕ ದಾಳಿಗೆ ಗುರಿಯಾಗಿದ್ದಾರೆ.&#160;&#160; 176 ಪ್ರಯಾಣಿಕರು ಇದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ IC 814 ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಡಿಸೆಂಬರ್ 24, 1999 ರಂದು [&#8230;]]]></description>
										<content:encoded><![CDATA[
<p>&#8216;IC 814: ದಿ ಕಂದಹಾರ್ ಹೈಜಾಕ್&#8217; (IC 814: The Kandahar Hijack) ಎಂಬ ವೆಬ್‌ ಸೀರಿಸ್‌ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿದೆ.&nbsp; ಈ ಸೀರಿಸ್‌ನ ನಿರ್ದೇಶಕರಲ್ಲಿ ಒಬ್ಬರಾದ ಅನುಭವ್ ಸಿನ್ಹಾ ಅವರು ಉಗ್ರಗಾಮಿಗಳ ಪಾತ್ರಗಳು &#8216;ಭೋಲಾ&#8217; ಮತ್ತು &#8216;ಶಂಕರ್&#8217; ಎಂಬ ಕೋಡ್‌ನೇಮ್‌ಗಳನ್ನು ಬಳಸಿದಂತೆ ಚಿತ್ರಿಸಿದ ಕಾರಣಕ್ಕೆ ಬಲಪಂಥೀಯ ಗುಂಪುಗಳ ಮತ್ತು ಗೋದಿ ಮೀಡಿಯಗಳ ಮೌಖಿಕ ದಾಳಿಗೆ ಗುರಿಯಾಗಿದ್ದಾರೆ.&nbsp;&nbsp;</p>



<p>176 ಪ್ರಯಾಣಿಕರು ಇದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ IC 814 ನೇಪಾಳದ ಕಠ್ಮಂಡುವಿನಿಂದ ದೆಹಲಿಗೆ ಡಿಸೆಂಬರ್ 24, 1999 ರಂದು ಹೊರಟಿತ್ತು. ಇದನ್ನು ಐವರು ಪಾಕಿಸ್ತಾನಿ ಉಗ್ರರು ಹೈಜಾಕ್ ಮಾಡಿದರು, ನಂತರ ಬೇರೆ ಬೇರೆ ಸ್ಥಳಗಳಲ್ಲಿ ವಿಮಾನವನ್ನು ಇಳಿಸಿ, ಕೊನೆಗೆ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಇಳಿಸಿದರು. ಏಳು ದಿನಗಳ ನಂತರ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಅಪಹರಣಕಾರರ ಬೇಡಿಕೆಗಳನ್ನು ಭಾಗಶಃ ಒಪ್ಪಿಕೊಂಡಿತು. ಭಾರತದ ಜೈಲಿನಲ್ಲಿದ್ದ ಮೂವರು ಉಗ್ರರಾದ ಮೌಲಾನಾ ಮಸೂದ್ ಅಜರ್, ಅಹ್ಮದ್ ಒಮರ್ ಸಯೀದ್ ಶೇಖ್ ಮತ್ತು ಮುಷ್ತಾಕ್ ಅಹ್ಮದ್ ಜರ್ಗರ್ ಅವರನ್ನು ಪ್ರಯಾಣಿಕರಿಗೆ ಬದಲಾಗಿ ಬಿಡುಗಡೆಗೊಳಿಸಿದರು. ಕೊನೆಗೆ ಅಪಹರಣಕಾರರು ಜನರನ್ನು ಬಿಡುಗಡೆ ಮಾಡಿದರು. ಈ ಘಟನೆಯನ್ನು ಆಧರಿಸಿ &#8216;IC 814: ದಿ ಕಂದಹಾರ್ ಹೈಜಾಕ್&#8217; ವೆನ್‌ಸೀರಿಸ್‌ ಪ್ರಸಾರವಾಗಿದೆ.&nbsp;</p>



<p>ಇದರಲ್ಲಿ ಅನುಭವ್ ಸಿನ್ಹಾ ಅವರು ವಿಮಾನ ಹೈಜಾಕ್‌ ಮಾಡಿದ ಉಗ್ರರನ್ನು ಭೋಲಾ ಮತ್ತು ಶಂಕರ್‌ ಎಂದು ಹೆಸರಿಸಿದ್ದಾರೆ. ಇದು ಉಗ್ರರನ್ನು &#8216;ವೈಟ್‌ವಾಶ್&#8217;‌ ಮಾಡುವ ತಂತ್ರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯರೂ, ಗೋದಿ ಮಾಧ್ಯಮಗಳೂ ಪ್ರಚಾರ ಮಾಡಿವೆ.</p>



<p>ಕರ್ನಾಟಕದ News18 ಕನ್ನಡ ಎಂಬ ಮಾಧ್ಯಮ ಕೂಡ ಈ ಸುಳ್ಳನ್ನು ಹರಿಯಬಿಟ್ಟಿದೆ. ಪೋಸ್ಟ್‌ ಕಾರ್ಡ್‌ ಸೇರಿದಂತೆ ಕೋಮು ಪ್ರಚೋದಕ ಮತ್ತು ಸುಳ್ಳು ಸುದ್ದಿಗಳನ್ನು ಹರಡುವ ಮಾಧ್ಯಮಗಳು ಈ ವಿಚಾರವನ್ನು ತಿರುಚಿ ದ್ವೇಷ ಹೊರಹಾಕಿವೆ.</p>


<div class="wp-block-image">
<figure class="aligncenter size-full is-resized"><img decoding="async" width="678" height="482" src="https://peepalmedia.com/wp-content/uploads/2024/09/WhatsApp-Image-2024-09-03-at-8.36.08-PM.jpeg" alt="" class="wp-image-44882" style="width:482px;height:auto" srcset="https://peepalmedia.com/wp-content/uploads/2024/09/WhatsApp-Image-2024-09-03-at-8.36.08-PM.jpeg 678w, https://peepalmedia.com/wp-content/uploads/2024/09/WhatsApp-Image-2024-09-03-at-8.36.08-PM-300x213.jpeg 300w, https://peepalmedia.com/wp-content/uploads/2024/09/WhatsApp-Image-2024-09-03-at-8.36.08-PM-150x107.jpeg 150w" sizes="(max-width: 678px) 100vw, 678px" /></figure></div>

<div class="wp-block-image">
<figure class="aligncenter size-full is-resized"><img decoding="async" width="576" height="916" src="https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM.jpeg" alt="" class="wp-image-44885" style="width:275px;height:auto" srcset="https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM.jpeg 576w, https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM-189x300.jpeg 189w, https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM-150x239.jpeg 150w, https://peepalmedia.com/wp-content/uploads/2024/09/WhatsApp-Image-2024-09-03-at-7.55.39-PM-300x477.jpeg 300w" sizes="(max-width: 576px) 100vw, 576px" /></figure></div>


<p><strong>ಸತ್ಯ ಏನು?</strong></p>



<p>IC 814 ವಿಮಾನವನ್ನು ಅಪಹರಿಸಿದ ಕುರಿತು ಅನೇಕ ಸುದ್ದಿ ವರದಿಗಳನ್ನು ನಾವು Google ನಲ್ಲಿ ನೋಡಬಹುದು. ಇವೆಲ್ಲವೂ ಇಬ್ಬರು ಅಪಹರಣಕಾರರು ಭೋಲಾ ಮತ್ತು ಶಂಕರ್ ಎಂಬ ಕೋಡ್ ಅನ್ನು ಬಳಸಿರುವುದನ್ನು ವರದಿ ಮಾಡಿವೆ. ವಿಮಾನದಲ್ಲಿದ್ದ ಭೋಪಾಲ್‌ನ ದಂಪತಿಗಳ ಅನುಭವದ ಬಗ್ಗೆ <a href="https://timesofindia.indiatimes.com/city/bhopal/21-yrs-on-kandahar-hijack-still-haunts-bhopal-couple/articleshow/79935600.cms">ಟೈಮ್‌ ಆಫ್‌ ಇಂಡಿಯಾ</a> ವರದಿಯೊಂದನ್ನು ಡಿಸೆಂಬರ್ 24, 2020 ರಂದು ಪ್ರಕಟಿಸಿದೆ. ಇದರಲ್ಲಿ “ಬರ್ಗರ್, ಡಾಕ್ಟರ್, ಚೀಫ್, ಭೋಲಾ ಮತ್ತು ಶಂಕರ್…” ಎಂದು ಉಗ್ರರು ತಮ್ಮನ್ನು ತಾವು ಪರಸ್ಪರ ಕರೆಸಿಕೊಳ್ಳುತ್ತಿದ್ದರೆಂದೂ, ದುರ್ಗೇಶ್ ಮತ್ತು ರೇಣು ಗೋಯೆಲ್ ಎಂಬ ಈ ದಂಪತಿಗಳಿಗೆ ಅದೊಂದು ದುಸ್ವಪ್ನವಾಗಿ ಕಾಡುತ್ತಿದೆ ಎಂದು ವರದಿ ಹೇಳಿದೆ.</p>



<p>TOI ನ ವರದಿಯಲ್ಲಿ, ಭಯಾನಕತೆಯನ್ನು ವಿವರಿಸುತ್ತಾ, ಗೋಯೆಲ್, &#8220;ಭೋಲಾ ಮತ್ತು ಬರ್ಗರ್ ಪ್ರಯಾಣಿಕರನ್ನು ಹೊಡೆಯುತ್ತಿದ್ದರು, ಆದರೆ ಡಾಕ್ಟರ್ ಮತ್ತು ಚೀಫ್‌ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದರು,&#8221; ಎಂದು ಹೇಳಿದ್ದಾರೆ.</p>



<p>ನೇಪಾಳ ಟೈಮ್ಸ್‌ನ ಪತ್ರಿಕೆ ಡಿಸೆಂಬರ್ 31, 2019 ರಂದು ಪ್ರಕಟಿಸಿದ&nbsp; <a href="https://nepalitimes.com/latest/remembering-ic814">Remembering&nbsp; IC814</a> ಎಂಬ ವರದಿಯಲ್ಲಿ ಆ ವಿಮಾನದಲ್ಲಿದ್ದ ಸಂಜಯ್ ಧಿತಾಲ್, &#8220;ಐದು ಅಪಹರಣಕಾರರಲ್ಲಿ ಎಲ್ಲರಿಗೂ ಕೋಡ್ ನೇಮ್‌ಗಳು ಇದ್ದವು: ಮ್ಯಾನೇಜರ್, ಶಂಕರ್, ಭೋಲಾ, ಬರ್ಗರ್ ಮತ್ತು ಡಾಕ್ಟರ್,&#8221; ಎಂದು ಹೇಳಿರುವುದು ವರದಿಯಾಗಿದೆ.</p>



<p>ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿ&nbsp; ಮಾರ್ಚ್ 6, 2019 ರಂದು ಪ್ರಕಟವಾದ IC 814 hijack: How Jaish-e-Mohammed chief Masood Azhar’s brother planned Indian Airlines hijack in 1999 ಎಂಬ ವರದಿಯಲ್ಲಿ&nbsp; ಪ್ರತಿಯೊಬ್ಬ ಅಪಹರಣಕಾರರು ಕೋಡ್ ಹೆಸರನ್ನು ಬಳಸಿರುವುದನ್ನು ಉಲ್ಲೇಖಿಸಲಾಗಿದೆ.&nbsp;</p>



<figure class="wp-block-image"><img decoding="async" src="https://lh7-rt.googleusercontent.com/docsz/AD_4nXcB-bRhOTZJGWPur_LxhNCH3xg3i0zQuSIuiiTP-bh-aa2cXENgZ7DlhAQwWfJ-K4Lk6wAfAJZvzJiNLINwwG096CVxPQguQ--EMDRt-1TL-C2hurmMhjBKG2Pe3f0zgol3mb-i7nmNy_z7eZYqAbTJXKHk?key=S0LKrvHHDnwa9IPkbPfMEw" alt=""/></figure>



<p>ಕೋಡ್ ಹೆಸರುಗಳನ್ನು ಬಳಸಿರುವುದನ್ನು IC 814 ರ ಫ್ಲೈಟ್ ಎಂಜಿನಿಯರ್&nbsp; ಅನಿಲ್ ಕೆ ಜಗ್ಗಿಯಾ ಕೂಡ ದೃಢೀಕರಿಸಿದ್ದಾರೆ&nbsp; , ಅವರು 2021 ರಲ್ಲಿ ತಮ್ಮ ಅನುಭವವನ್ನು&nbsp; <a href="https://dod.overdrive.com/media/6383398">IC 814 Hijacked: The Inside Story </a>ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.</p>



<p>ಎಲ್ಲಕ್ಕೂ ಮುಖ್ಯವಾಗಿ ಘಟನೆ ಮುಗಿದ ಒಂದು ವಾರದ ನಂತರ <a href="https://www.mea.gov.in/Speeches-Statements.htm?dtl/5481/Union+Home+Ministers+StatementIndian+Airlines+Flight+IC814">ಭಾರತ ಸರ್ಕಾರದ ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ</a>ಲ್ಲಿ ಈ ಅಪಹರಣಕಾರರು ಚೀಫ್‌, ಡಾಕ್ಟರ್‌, ಶಂಕರ್‌ ಮತ್ತು ಬೋಲಾ ಎಂದು ತಮ್ಮನ್ನು ತಾವು ಕರೆಸಿಕೊಳ್ಳುತ್ತಿದ್ದ ಬಗ್ಗೆ ಹೇಳಿದೆ.</p>



<figure class="wp-block-image"><img decoding="async" src="https://lh7-rt.googleusercontent.com/docsz/AD_4nXfIt-2ukwZhdcV0k0BfeZe1I6wE2f1UY5TAyap-E8f8X06SI8Ph7lZ1fgGNmJnNkX0PGoTlpBn1mCo5HyuxVjo0izO58RSXyoI0vCUb8tWjVaG3h5wyyJnGv2lbEqVctBhNCl3NAOSB5Uj0XvKHC-kYno5o?key=S0LKrvHHDnwa9IPkbPfMEw" alt=""/></figure>



<figure class="wp-block-image"><img decoding="async" src="https://lh7-rt.googleusercontent.com/docsz/AD_4nXexkBtTuxoMV5Spu0hAb8MKP_qxeR--qaqhUR-6G_H7jQaKrpYfjgCCNYCKv6sI4BITgau-gwjUtC0wT9Chgo0fd2iyyjz0WuSVLz97FdZu2m0Pk4CGsdonj5JB6qXx0YOphzUIBzJGiyz8eNvXhcp2uoM?key=S0LKrvHHDnwa9IPkbPfMEw" alt=""/></figure>



<p>ಹೈಜಾಕ್ ಸಮಸ್ಯೆ ಮುಗಿದ ನಂತರ ತನ್ನ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಆಗಿನ <a href="https://www.tribuneindia.com/2000/20000107/main2.htm">ಗೃಹ ಸಚಿವ ಎಲ್‌ ಕೆ ಅಡ್ವಾಣಿ</a> ಅವರು ಐವರು ಅಪಹರಣಕಾರರನ್ನು ಬಹವಾಲ್‌ಪುರದ ಇಬ್ರಾಹಿಂ ಅಖ್ತರ್ ಅಲಿಯಾಸ್ ಅಥರ್, ಕರಾಚಿಯ ಡಿಫೆನ್ಸ್‌ ಏರಿಯಾದ ನಿವಾಸಿ ಸನ್ನಿ ಅಹ್ಮದ್ ಖಾಜಿ, ಕರಾಚಿಯ  ಗುಲ್ಶನ್ ಅಖ್ತರ್ ಕಾಲೋನಿಯ ಮಿಸ್ತ್ರಿ ಜಹೂರ್ ಇಬ್ರಾಹಿಂ, ಸುಕ್ಕೂರ್ ನಗರದ ಶಾಕಿರ್ ಎಂದು ಗುರುತಿಸಿರುವುದಾಗಿ ಹೇಳಿದ್ದಾರೆ. ಮುಂದುವರಿದು, ಮೌಲಾನಾ ಅಜರ್‌ನ ಸಹೋದರ ಎಂದು ಕರೆಸಿಕೊಂಡಿರುವ ಇಬ್ರಾಹಿಂನನ್ನು &#8220;ಮುಖ್ಯಸ್ಥ&#8221; ಎಂದೂ, ಸಯೀದ್‌ನನ್ನು &#8220;ಡಾಕ್ಟರ್&#8221; ಎಂದೂ, ಖಾಜಿಯನ್ನು &#8220;ಬರ್ಗರ್&#8221; ಎಂದೂ, ಇಬ್ರಾಹಿಂನನ್ನು &#8220;ಭೋಲಾ&#8221; ಎಂದೂ, ಶಾಕಿರ್‌ನನ್ನು &#8220;ಶಂಕರ್&#8221; ಎಂದು ಎಂದು ಕರೆಯಲಾಗುತ್ತಿತ್ತು, ಅಪಹರಣಕಾರರು ವಿಮಾನದಲ್ಲಿ ಪರಸ್ಪರ ಕರೆಸಿಕೊಳ್ಳಲು ಬಳಸುತ್ತಿದ್ದ ಹೆಸರುಗಳು ಇವು ಎಂದು ಅಡ್ವಾಣಿ ಹೇಳಿದ್ದಾರೆ.</p>



<p>ಇದರಿಂದ ತಿಳಿದು ಬರುವುದು ಏನೆಂದರೆ, IC 814: The Kandahar Hijack ನಲ್ಲಿ ಬಳಸಲಾಗಿರುವ ಭೋಲಾ ಮತ್ತು ಶಂಕರ್‌ ಎಂಬ ಅಪಹರಣಕಾರರ ಹೆಸರು ಸೀರಿಸ್‌ಗೆ ಕಥೆ ರಚಿಸಿದವರ ಸೃಷ್ಟಿಯಲ್ಲ, ಕಥೆಯನ್ನು ಬರೆಯುವಾಗ ನಿಜ ಘಟನೆಯನ್ನು ಅಧ್ಯಯನ ಮಾಡಿ ರಚಿಸಿದ್ದಾರೆ. ಅಪಹರಣಕಾರರು ತಮ್ಮನ್ನು ತಾವು ಈ ಹೆಸರುಗಳಿಂದ ಕರೆಸಿಕೊಂಡ ಬಗ್ಗೆ ಸ್ವತಃ ಆಗ ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರವೇ ದೃಢೀಕರಿಸಿದೆ.</p>



<p>ಈ ವಿಚಾರದಲ್ಲಿ ಯಾವುದೇ ಅಧ್ಯಯನಗಳನ್ನು ಮಾಡದೆ ಗೋದಿ ಮೀಡಿಯಾಗಳು ಮತ್ತು ಬಲಪಂಥೀಯರು ನಡೆಸುತ್ತಿರುವ ಸುಳ್ಳು ಪ್ರಚಾರಕ್ಕೆ ಯಾವುದೇ ಹುರುಳಿಲ್ಲ, ಅದು ತಲೆಬುಡವಿಲ್ಲದ ವಾದ!</p>
]]></content:encoded>
					
		
		
			</item>
		<item>
		<title>ಬಾಂಗ್ಲಾದೇಶ ಬಿಕ್ಕಟ್ಟಿನ ಬಗ್ಗೆ ಭಾರತೀಯ ಮಾಧ್ಯಮಗಳಿಂದ ಸುಳ್ಳು ಸುದ್ದಿಗಳು</title>
		<link>https://peepalmedia.com/hate-news-by-indian-media-bangladesh/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 20 Aug 2024 07:16:18 +0000</pubDate>
				<category><![CDATA[ಸುಳ್ಳು ಸುದ್ದಿ ಪತ್ತೆ]]></category>
		<category><![CDATA[bangladesh]]></category>
		<category><![CDATA[fake]]></category>
		<category><![CDATA[Fake news]]></category>
		<category><![CDATA[indian media]]></category>
		<category><![CDATA[viral]]></category>
		<guid isPermaLink="false">https://peepalmedia.com/?p=44090</guid>

					<description><![CDATA[ಬೆಂಗಳೂರು: ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು ಬಾಂಗ್ರಾದೇಶದ ಬಗ್ಗೆ ವದಂತಿ ಹಬ್ಬಿಸುತ್ತಿವೆ ಎಂದು ಬಾಂಗ್ಲಾದೇಶ ಮೂಲದ ಸತ್ಯ ತಪಾಸಣೆ ವೆಬ್‌ಸೈಟ್ ರೂಮರ್ ಸ್ಕ್ಯಾನರ್ ವರದಿಯಲ್ಲಿ ಬಹಿರಂಗಪಡಿಸಿದೆ. ಈ ತನಿಖಾ ಘಟಕವು X ನಲ್ಲಿ 50 ಖಾತೆಗಳನ್ನು ಗುರುತಿಸಿದೆ, ಅದು ಬಾಂಗ್ಲಾದೇಶದಲ್ಲಿ ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿದ ಚಿತ್ರಗಳು, ವೀಡಿಯೊಗಳು ಮತ್ತು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಕೋಮುದ್ವೇಷವನ್ನು ಹರಡಿಸುತ್ತಿವೆ ಎಂದು ಹೇಳಿದೆ. ಈ ಪ್ರತಿಯೊಂದು ಖಾತೆಯಲ್ಲಿ ಕನಿಷ್ಠ ಒಂದು ಪೋಸ್ಟ್ ಕೋಮು ದ್ವೇಷದ ಮತ್ತು ಸುಳ್ಳು ಮಾಹಿತಿ ಪ್ರಕಟವಾಗಿದೆ ಎಂದು Surge [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು ಬಾಂಗ್ರಾದೇಶದ ಬಗ್ಗೆ ವದಂತಿ ಹಬ್ಬಿಸುತ್ತಿವೆ ಎಂದು ಬಾಂಗ್ಲಾದೇಶ ಮೂಲದ ಸತ್ಯ ತಪಾಸಣೆ ವೆಬ್‌ಸೈಟ್ ರೂಮರ್ ಸ್ಕ್ಯಾನರ್ ವರದಿಯಲ್ಲಿ ಬಹಿರಂಗಪಡಿಸಿದೆ.</p>



<p>ಈ ತನಿಖಾ ಘಟಕವು X ನಲ್ಲಿ 50 ಖಾತೆಗಳನ್ನು ಗುರುತಿಸಿದೆ, ಅದು ಬಾಂಗ್ಲಾದೇಶದಲ್ಲಿ ಇತ್ತೀಚಿನ ಘಟನೆಗಳಿಗೆ ಸಂಬಂಧಿಸಿದ ಚಿತ್ರಗಳು, ವೀಡಿಯೊಗಳು ಮತ್ತು ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಕೋಮುದ್ವೇಷವನ್ನು ಹರಡಿಸುತ್ತಿವೆ ಎಂದು ಹೇಳಿದೆ.</p>



<p>ಈ ಪ್ರತಿಯೊಂದು ಖಾತೆಯಲ್ಲಿ ಕನಿಷ್ಠ ಒಂದು ಪೋಸ್ಟ್ ಕೋಮು ದ್ವೇಷದ ಮತ್ತು ಸುಳ್ಳು ಮಾಹಿತಿ ಪ್ರಕಟವಾಗಿದೆ ಎಂದು<a href="https://rumorscanner.com/en/rs-iu-en/communal-propaganda-in-x-accounts-about-bangladesh/120392"> Surge of Communal Misinformation on X During Bangladesh’s Political Crisis </a>ಎಂಬ ಈ ವರದಿ ಹೇಳಿದೆ.</p>



<p>ಆಗಸ್ಟ್ 5 ರಿಂದ 13 ರವರೆಗೆ, ಆ 50 ಖಾತೆಗಳಲ್ಲಿ ಮಾಡಲಾಗಿದ್ದ  ಪೋಸ್ಟ್‌ಗಳನ್ನು 154 ಮಿಲಿಯನ್ ಗೂ ಅಧಿಕ ಜನ ನೋಡಿದ್ದು , 72% ರಷ್ಟು ನಕಲಿ ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಹರಡುವ ಖಾತೆಗಳು ಭಾರತದಲ್ಲಿವೆ ಎಂದು ಹೇಳಿದೆ. ಹಲವಾರು ಜವಾಬ್ದಾರಿಯುತ ವ್ಯಕ್ತಿಗಳು ಮತ್ತು ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು ಕೂಡ ಈ ಕೆಲವು ತಪ್ಪು ಮಾಹಿತಿಯನ್ನು ಪ್ರಚಾರ ಮಾಡುತ್ತಿವೆ ಎಂದು ವರದಿ ಹೇಳಿದೆ. ಇದಲ್ಲಿ <a href="https://ghostarchive.org/archive/aLAWr">ನ್ಯೂಸ್ ಮಧ್ಯಪ್ರದೇಶ</a> ಮತ್ತು <a href="https://archive.is/Lm2hG">ನ್ಯೂಸ್ 24</a> ಕೂಡ ಸೇರಿವೆ.</p>



<p>ಹಿಂದೂ ಮಹಿಳೆಯರು ಮತ್ತು ಮಕ್ಕಳ ಶಿಬಿರದಲ್ಲಿ ಬಾಂಬ್‌ಗಳನ್ನು ಸ್ಫೋಟಿಸುವ ಮೂಲಕ ಜಿಹಾದಿಗಳು ನೂರಾರು ಮಹಿಳೆಯರನ್ನು ಕೊಂದಿದ್ದಾರೆ ಎಂದು ಹೇಳುವ ವೀಡಿಯೊವನ್ನು ದೀಪಕ್ ಶರ್ಮಾ ಎಂಬ X ಖಾತೆಯಿಂದ ಆಗಸ್ಟ್ 9 ರಂದು ಪೋಸ್ಟ್ ಮಾಡಲಾಗಿದೆ. ವೀಡಿಯೋವನ್ನು ಪರಿಶೀಲಿಸಿದಾಗ, ಜುಲೈ 7 ರಂದು ಜಗನ್ನಾಥ ದೇವರ ರಥಯಾತ್ರೆಯ ಸಂದರ್ಭದಲ್ಲಿ ವಿದ್ಯುದಾಘಾತದಿಂದ ಐದು ಜನರ ಸಾವಿನ ವಿಡಿಯೋ ಇದು ಎಂದು ತಿಳಿದುಬಂದಿದೆ. &nbsp;</p>



<p>ಕಾಣೆಯಾದ ತನ್ನ ಮಗನ ಪತ್ತೆಗೆ ಒತ್ತಾಯಿಸುತ್ತಿರುವ ಹಿಂದೂ ವ್ಯಕ್ತಿಯ ವೀಡಿಯೊವನ್ನು ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ANI), NDTV ಮತ್ತು ಮಿರರ್ ನೌ ತಮ್ಮ X ನಲ್ಲಿ ಹಂಚಿಕೊಂಡಿವೆ. ರೂಮರ್ ಸ್ಕ್ಯಾನರ್ ಇದರ ಹಿಂದಿನ ಸುಳ್ಳನ್ನು ಪತ್ತೆ ಮಾಡಿದ್ದು, ಇದು ಬಾಬುಲ್ ಹೌಲಾಡರ್ ಎಂಬ ಮುಸ್ಲಿಂ ವ್ಯಕ್ತಿ 2013 ರಿಂದ ಕಾಣೆಯಾದ ತನ್ನ ಮಗನನ್ನು ಪತ್ತೆ ಹಚ್ಚಲು ಆಗ್ರಹಿಸಿ ನಡೆಸಿದ ಪ್ರತಿಭಟನೆಯ ವಿಡಿಯೋವಾಗಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Correction: The below tweet has been deleted since this person is not from the minority Hindu community. Error regretted. <a href="https://t.co/EY8FBnJc1g">pic.twitter.com/EY8FBnJc1g</a></p>&mdash; ANI (@ANI) <a href="https://twitter.com/ANI/status/1823386700342612344?ref_src=twsrc%5Etfw">August 13, 2024</a></blockquote><script async src="https://platform.twitter.com/widgets.js" charset="utf-8"></script>
</div></figure>


<div class="wp-block-image">
<figure class="aligncenter size-full is-resized"><img loading="lazy" decoding="async" width="568" height="805" src="https://peepalmedia.com/wp-content/uploads/2024/08/image-3.png" alt="" class="wp-image-44093" style="width:307px;height:auto" srcset="https://peepalmedia.com/wp-content/uploads/2024/08/image-3.png 568w, https://peepalmedia.com/wp-content/uploads/2024/08/image-3-212x300.png 212w, https://peepalmedia.com/wp-content/uploads/2024/08/image-3-150x213.png 150w, https://peepalmedia.com/wp-content/uploads/2024/08/image-3-300x425.png 300w" sizes="auto, (max-width: 568px) 100vw, 568px" /></figure></div>


<p>ಸುಳ್ಳುಸುದ್ದಿ ಹರಡಲು ಹೆಸರಾಗಿರುವ OpIndia ನ ಮುಖ್ಯ ಸಂಪಾದಕಿ ನೂಪುರ್ ಜೆ ಶರ್ಮಾ ತನ್ನ X ಹ್ಯಾಂಡಲ್‌ನಿಂದ ಎಂದಿನಂತೆ <a href="https://x.com/UnSubtleDesi/status/1822570087892787331?t=nItpJ6hM34NDoB-jTsw0Gw&amp;s=19">ಸುಳ್ಳು ಸುದ್ದಿ</a>ಗಳನ್ನು ಹರಡಿದ್ದರು. ಇದನ್ನು ಆಕೆಯ ಗಮನಕ್ಕೆ ತಂದ ರೂಮರ್‌ ಸ್ಕಾನರ್‌ನ ಸದಸ್ಯರೊಬ್ಬರನ್ನು ಆಕೆ ಆಗಸ್ಟ್ 11 ರಂದು X ನಲ್ಲಿ ಬ್ಲಾಕ್‌ ಮಾಡಿದ್ದಾರೆ.</p>



<p>ಭಾರತ ಮಾತ್ರವಲ್ಲ ಇತರ ದೇಶಗಳಲ್ಲೂ ಬಾಂಗ್ಲಾದೇಶದ ಬಗ್ಗೆ ಸುಳ್ಳನ್ನು ಹರಡಲಾಗಿದೆ ಎಂದು ರೂಮರ್‌ ಸ್ಕ್ಯಾನರ್‌ ಹೇಳಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಕ್ರಿಕೆಟಿಗ ಲಿಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಸುಳ್ಳು ಹೇಳುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವಾಸ್ತವದಲ್ಲಿ, ಈ <a href="https://ghostarchive.org/archive/5U8q4">ದೃಶ್ಯಾವಳಿಗಳು</a> ಮಶ್ರಫ್‌ ಎಂಬವರ ಮನೆಯ ಮೇಲೆ ನಡೆದ ಬೆಂಕಿ ದಾಳಿಯಾಗಿದ್ದವು. ಲಿಟನ್ ಅವರ ಮನೆಯಲ್ಲಿ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ ಎಂದು ರೂಮರ್‌ ಸ್ಕ್ಯಾನರ್‌ ಹೇಳಿದೆ.</p>
]]></content:encoded>
					
		
		
			</item>
		<item>
		<title>ನಿಜವಾದ ಮೋದಿ ದರ್ಶನ!</title>
		<link>https://peepalmedia.com/real-narendra-modi/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 24 Apr 2024 09:46:52 +0000</pubDate>
				<category><![CDATA[ಅಂಕಣ]]></category>
		<category><![CDATA[``Karnataka Digital Economy Mission Big Tech Show-2022&#039;&#039;]]></category>
		<category><![CDATA[Bangalore]]></category>
		<category><![CDATA[Election 2024]]></category>
		<category><![CDATA[Election Commission of India]]></category>
		<category><![CDATA[Fake news]]></category>
		<category><![CDATA[hate speech]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[Rajastan]]></category>
		<guid isPermaLink="false">https://peepalmedia.com/?p=38668</guid>

					<description><![CDATA[ನರೇಂದ್ರ ಮೋದಿಯವರಿಗೆ ಯಾವಾಗಲೂ ನಾಟಕೀಯವಾಗಿ ಬದುಕಲು ಸಾಧ್ಯವಿಲ್ಲ. ಅವರನ್ನು ಆಳದಲ್ಲಿ ಕಾಡುವ, ಭಯಭೀತಗೊಳಿಸುವ ಕೀಳರಿಮೆಯ ಫಲವಾಗಿಯೇ ಅವರು ತಮ್ಮ ಇಡೀ ಜೀವನದ ಬಗ್ಗೆ ಸುಳ್ಳಿನ ಕಥನಗಳನ್ನು ಕಟ್ಟಿದರು. ಆದರೆ ಅವೆಲ್ಲವೂ ಸೋಲುವ ದಿನಗಳು ಹತ್ತಿರ ಬರುತ್ತಿದೆ ಎನ್ನುವಾಗ, ತಾನು ಭಾರತದ ಇತಿಹಾಸದಲ್ಲಿ ಅಪ್ರಸ್ತುತನಾಗುತ್ತೇನೆ ಎಂಬ ಭೀತಿ ಕಾಡುವಾಗ ಅವರೊಳಗಿನ ʼನಿಜವಾದ ನರೇಂದ್ರ ಮೋದಿʼ ಆಗಾಗ ಹೊರಗೆ ಬರುತ್ತದೆ. ಈ ʼಮಿಥ್ಯ ನರೇಂದ್ರʼನ ಒಳಗಿನಿಂದ ʼಸತ್ಯ ನರೇಂದ್ರʼ ಹೊರಗೆ ಬಂದದ್ದನ್ನು ನಾವು ಅವರು ರಾಜಸ್ಥಾನದಲ್ಲಿ ಮಾಡಿದ ಚುನಾವಣಾ ಭಾಷಣದಲ್ಲಿ [&#8230;]]]></description>
										<content:encoded><![CDATA[
<p>ನರೇಂದ್ರ ಮೋದಿಯವರಿಗೆ ಯಾವಾಗಲೂ ನಾಟಕೀಯವಾಗಿ ಬದುಕಲು ಸಾಧ್ಯವಿಲ್ಲ. ಅವರನ್ನು ಆಳದಲ್ಲಿ ಕಾಡುವ, ಭಯಭೀತಗೊಳಿಸುವ ಕೀಳರಿಮೆಯ ಫಲವಾಗಿಯೇ ಅವರು ತಮ್ಮ ಇಡೀ ಜೀವನದ ಬಗ್ಗೆ ಸುಳ್ಳಿನ ಕಥನಗಳನ್ನು ಕಟ್ಟಿದರು. ಆದರೆ ಅವೆಲ್ಲವೂ ಸೋಲುವ ದಿನಗಳು ಹತ್ತಿರ ಬರುತ್ತಿದೆ ಎನ್ನುವಾಗ, ತಾನು ಭಾರತದ ಇತಿಹಾಸದಲ್ಲಿ ಅಪ್ರಸ್ತುತನಾಗುತ್ತೇನೆ ಎಂಬ ಭೀತಿ ಕಾಡುವಾಗ ಅವರೊಳಗಿನ ʼನಿಜವಾದ ನರೇಂದ್ರ ಮೋದಿʼ ಆಗಾಗ ಹೊರಗೆ ಬರುತ್ತದೆ. ಈ ʼಮಿಥ್ಯ ನರೇಂದ್ರʼನ ಒಳಗಿನಿಂದ ʼಸತ್ಯ ನರೇಂದ್ರʼ ಹೊರಗೆ ಬಂದದ್ದನ್ನು ನಾವು ಅವರು ರಾಜಸ್ಥಾನದಲ್ಲಿ ಮಾಡಿದ ಚುನಾವಣಾ ಭಾಷಣದಲ್ಲಿ ನೋಡಬಹುದು.</p>



<p>ಈ ಸತ್ಯ ನರೇಂದ್ರನೇ ಮುಸ್ಲೀಂ ದ್ವೇಷದ, ಕೋಮುವಾದಿ ಮೆದುಳಿನ ನರೇಂದ್ರ ಮೋದಿ. ರಾಜಸ್ಥಾನದ ಚುನಾವಣಾ ಭಾಷಣದಲ್ಲಿ ಬಹಿರಂಗವಾಗಿ ಮುಸ್ಲೀಂ ದ್ವೇಷವನ್ನು ಕಾರಿದರು. ಜಾತ್ಯಾತೀತ ದೇಶವೊಂದರ ಘನವೆತ್ತ ಪ್ರಧಾನಿ ಲಜ್ಜೆಯಿಲ್ಲದೆ ಖುಲ್ಲಂಖುಲ್ಲಾಗಿ ಈ ರೀತಿಯ ಭಾಷಣವನ್ನು ಮಾಡುತ್ತಿದ್ದಾರೆ ಎಂದರೆ, ಮುಂದೆ ಗೆದ್ದು ಬಂದರೆ ತಮ್ಮ ಕೋಮುವಾದಿ ಅಜೆಂಡಾಗಳನ್ನು ಹಿಂದಿಗಿಂತಲೂ ಹೆಚ್ಚು ತೀವ್ರಗತಿಯಲ್ಲಿ ಜಾರಿಗೆ ತರುತ್ತಾರೆ.</p>



<p>ಮುಸಲ್ಮಾನರನ್ನು ʼನುಸುಳುಕೋರರುʼ ಎಂದು ಕರೆದ ನರೇಂದ್ರ ಮೋದಿಯವರು ಯಾವುದೇ ಮುಲಾಜು ಇಲ್ಲದೆ ಹಸಿಹಸಿ ಸುಳ್ಳನ್ನು ತಮ್ಮ ಭಾಷಣದಲ್ಲಿ ಹೇಳಿದರು. ಮಾಜೀ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರ ಮಾತುಗಳನ್ನು ತಿರುಚಿ ಇತಿಹಾಸದಲ್ಲಿ ತಮ್ಮ ವ್ಯಕ್ತಿತ್ವದ ಮೇಲೆಯೇ ಮತ್ತೊಮ್ಮೆ ಮಸಿಯನ್ನು ಎರಚಿಕೊಂಡರು.</p>



<p>&nbsp;ಡಾ. ಮನಮೋಹನ್ ಸಿಂಗ್ ಅವರು &#8220;ಮೊದಲ ಹಕ್ಕು ಮುಸ್ಲಿಮರದ್ದು ಎಂದು ಹೇಳಿದರು&#8221; ಎಂದು ಮೋದಿಯವರ ಸುಳ್ಳು ಹೇಳಿದಾಗ, ಈ ಸುಳ್ಳಿನ ಸತ್ಯವನ್ನು ಅನೇಕರು ಬಯಲಿಗೆ ಎಳೆದರು.&nbsp;&nbsp;</p>



<p>ಮೋದಿ ಹೇಳಿದ ಸುಳ್ಳು: ಈ ದೇಶದ ಸಂಪತ್ತಿನ ಮೊದಲ ಅಧಿಕಾರ ಮುಸಲ್ಮಾನರದ್ದು. ಇದರ ಅರ್ಥ, ಸಂಪತ್ತನ್ನು ಸಂಗ್ರಹಿಸಿ ಯಾರಿಗೆ ಹಂಚುತ್ತಾರೆ? ಯಾರಿಗೆ ಹೆಚ್ಚು ಮಕ್ಕಳಿದ್ದಾರೋ ಅವರಿಗೆ ಹಂಚುತ್ತಾರೆ.&nbsp; ನುಸುಳುಕೋರರಿಗೆ ಹಂಚುತ್ತಾರೆ. ನೀವು ಕಷ್ಟಪಟ್ಟು ಸಂಪಾದಿಸಿದ ಹಣವು ನುಸುಳುಕೋರರಿಗೆ ಹೋಗಬೇಕೇ…?</p>



<p>ಬಹುಶಃ ಭಾರತದ ಇತಿಹಾಸದಲ್ಲಿ ಪ್ರಧಾನಿ ಹುದ್ದೆಯಲ್ಲಿ ಕುಳಿತಿದ್ದ ಓರ್ವ ವ್ಯಕ್ತಿ ಇಷ್ಟು ಕೀಳಾದ ಹೇಳಿಕೆಯನ್ನು ನೀಡಿರುವುದು ಮೊದಲೇ ಇರಬೇಕು. ಹೆಚ್ಚು ಮಕ್ಕಳು ಮಾಡಿದವರು ಎಂದು ನೇರಾನೇರವಾಗಿ ಮುಸಲ್ಮಾನರನ್ನು ಗುರಿಯಾಗಿಸಿ ದ್ವೇಷ ಕಾರಿದ ಮೋದಿಯವರು ತಾವೂ ಸೇರಿದಂತೆ ತಮ್ಮ ಹೆತ್ತವರಿಗೆ ಆರು ಮಕ್ಕಳು ಎಂಬುದನ್ನು ಮರೆತಂತಿದೆ.</p>



<p>ʼನಿಜ ನರೇಂದ್ರʼನ ಈ ದ್ವೇಷಕಾರಿ ಭಾಷಣದ ಅಸಲಿಯತ್ತಿನ ಬಗ್ಗೆ ದೇಶದಲ್ಲಿ ಚರ್ಚೆ ನಡೆದಿದೆ. ಮನಮೋಹನ್‌ ಸಿಂಗ್‌ ಅವರ ಈ ಭಾಷಣದ ಬಗ್ಗೆ 2006ರಲ್ಲಿಯೇ<a href="https://archivepmo.nic.in/drmanmohansingh/press-details.php?nodeid=516"> ಸ್ಪಷ್ಟನೆ</a> ನೀಡಲಾಗಿತ್ತು.&nbsp;</p>



<figure class="wp-block-image size-large"><img loading="lazy" decoding="async" width="1024" height="779" src="https://peepalmedia.com/wp-content/uploads/2024/04/ಕಜಹ-1024x779.jpg" alt="" class="wp-image-38669" srcset="https://peepalmedia.com/wp-content/uploads/2024/04/ಕಜಹ-1024x779.jpg 1024w, https://peepalmedia.com/wp-content/uploads/2024/04/ಕಜಹ-300x228.jpg 300w, https://peepalmedia.com/wp-content/uploads/2024/04/ಕಜಹ-768x584.jpg 768w, https://peepalmedia.com/wp-content/uploads/2024/04/ಕಜಹ-150x114.jpg 150w, https://peepalmedia.com/wp-content/uploads/2024/04/ಕಜಹ-696x530.jpg 696w, https://peepalmedia.com/wp-content/uploads/2024/04/ಕಜಹ-1068x813.jpg 1068w, https://peepalmedia.com/wp-content/uploads/2024/04/ಕಜಹ.jpg 1179w" sizes="auto, (max-width: 1024px) 100vw, 1024px" /></figure>



<p>ಮನಮೋಹನ್‌ ಸಿಂಗ್‌ ಅವರ ಭಾಷಣದ ಪೂರ್ಣ ಪಠ್ಯ ಇಲ್ಲಿದೆ :‌ <a href="https://archivepmo.nic.in/drmanmohansingh/speech-details.php?nodeid=482">2006ರ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ಪ್ರಧಾನಮಂತ್ರಿಯವರ ಭಾಷಣ</a></p>



<p>ಇದರಲ್ಲಿ,</p>



<p>&#8220;ನಮ್ಮ ಸಾಮೂಹಿಕ ಆದ್ಯತೆಗಳು ಸ್ಪಷ್ಟವಾಗಿವೆ ಎಂದು ನಾನು ನಂಬುತ್ತೇನೆ: ಕೃಷಿ, ನೀರಾವರಿ ಮತ್ತು ಜಲಸಂಪನ್ಮೂಲ, ಆರೋಗ್ಯ, ಶಿಕ್ಷಣ, ಗ್ರಾಮೀಣ ಮೂಲಸೌಕರ್ಯದಲ್ಲಿ ನಿರ್ಣಾಯಕ ಹೂಡಿಕೆ, ಮತ್ತು ಸಾಮಾನ್ಯ ಮೂಲಸೌಕರ್ಯಗಳ ಅಗತ್ಯ ಸಾರ್ವಜನಿಕ ಹೂಡಿಕೆ ಅಗತ್ಯಗಳು, ಜೊತೆಗೆ SC/ST ಗಳು, ಇತರ ಹಿಂದುಳಿದ ವರ್ಗಗಳ ಉನ್ನತಿಗಾಗಿ ಕಾರ್ಯಕ್ರಮಗಳು. , ಅಲ್ಪಸಂಖ್ಯಾತರು ಮತ್ತು ಪರಿಶಿಷ್ಟ ಪಂಗಡಗಳ ಘಟಕ ಯೋಜನೆಗಳನ್ನು ಪುನಶ್ಚೇತನಗೊಳಿಸಬೇಕಾಗಿದೆ, ವಿಶೇಷವಾಗಿ ಮುಸ್ಲಿಂ ಅಲ್ಪಸಂಖ್ಯಾತರು ಅಭಿವೃದ್ಧಿಯ ಫಲವನ್ನು ಸಮಾನವಾಗಿ ಹಂಚಿಕೊಳ್ಳಲು ನಾವು ನವೀನ ಯೋಜನೆಗಳನ್ನು ರೂಪಿಸಬೇಕಾಗಿದೆ. ಅವರು ಸಂಪನ್ಮೂಲಗಳ ಮೇಲಿನ ಮೊದಲ ಹಕ್ಕನ್ನು ಹೊಂದಿರಬೇಕು.</p>



<p>ಇದರಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಮತ್ತು ಮಕ್ಕಳ ಬಗ್ಗೆ ಮಾತನಾಡುತ್ತಾ, ಮುಸಲ್ಮಾನರನ್ನೂ ಉಲ್ಲೇಖಿಸಿದ್ದಾರೆ. ಆದರೆ ನರೇಂದ್ರ ಮೋದಿಯವರಿಗೆ ಮುಸಲ್ಮಾನರು ಎಂಬುದು ಮಾತ್ರ ಕಂಡಿರುವುದು ಅವರ ಆಂತರ್ಯದಲ್ಲಿ ಇರುವ ಮಾನವ ದ್ವೇಷವನ್ನು ತೋರಿಸುತ್ತದೆ.&nbsp;</p>



<p>ನೀವು ಮೇಲಿರುವ ಡಾ. ಸಿಂಗ್‌ ಅವರ ಭಾಷಣದ ಪೂರ್ಣ ಪಠ್ಯವನ್ನು ಓದಿದರೆ ಒಂದು ವಿಚಾರ ಸ್ಪಷ್ಟವಾಗುತ್ತದೆ. ಅದೇನೆಂದರೆ, ನರೇಂದ್ರ ಮೋದಿಯವರಿಗೆ ಈ ರೀತಿಯ ಭಾಷಣವನ್ನು ಮಾಡಲು ಸಾಧ್ಯವಿಲ್ಲ. ಅವರಲ್ಲಿ ಅಂತಹ ಪಾಂಡಿತ್ಯವಾಗಲೀ, ದೂರದೃಷ್ಟಿಯಾಗಲೀ ಇಲ್ಲ. ಈ ಕೀಳರಿಮೆ ಅವರನ್ನು ಆಳದಲ್ಲಿ ಘಾಸಿಗೊಳಿಸಿದೆ.</p>



<p>ಯಾವಾಗ ಕೀಳರಿಮೆ ಹೆಚ್ಚಾಗುತ್ತದೆಯೋ, ಆಗ ಮನುಷ್ಯ ಅಡ್ಡದಾರಿಯ ಮೂಲಕ ತನ್ನ ಸುಳ್ಳು ವ್ಯಕ್ತಿತ್ವವನ್ನು ಮರುಕಟ್ಟಲು ಹೆಣಗಾಡುತ್ತಾನೆ. ಈ ಹಂತದಲ್ಲಿ ಸದ್ಯ ನರೇಂದ್ರ ಮೋದಿಯವರು ಇದ್ದಾರೆ.&nbsp;</p>



<p>ತನ್ನನ್ನು ದೇವರು, ದೈವಾಂಶ ಸಂಭೂತ, ದೇಶದ ಏಕಮೇವಾದ್ವಿತೀಯ ಉದ್ಧಾರಕ ಎಂದು ಅವರು ತಮ್ಮ ಒಳಗೆ ತಮ್ಮದಲ್ಲದ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಬೇಕಾದಂತೆ ಬದುಕುತ್ತಾರೆ. ನಡೆ ನುಡಿ ಸಾಧು -ಸನ್ಯಾಸಿಯಂತೆ, ಶಾಂತಿಯ ದೂತನಂತೆ ಇರುತ್ತದೆ. ಆದರೆ ಆಂತರ್ಯದಲ್ಲಿ ಇರುವ ನಿಜವಾದ ಮೋದಿ ಓರ್ವ ದ್ವೇಷಕಾರುವ ಮನುಷ್ಯ. ಆದು ಆಗಾಗ ಹತಾಶ ಸ್ಥಿತಿಯಲ್ಲಿದ್ದಾಗ ಹೊರಗೆ ಬರುತ್ತದೆ.</p>



<p>ಈ ವ್ಯಕ್ತಿತ್ವಕ್ಕೆ ಕಾರಣ ಅವರಲ್ಲಿರುವ ʼಮೆಸಿಯಾ ಕಾಂಪ್ಲೆಕ್ಸ್‌ʼ ಎಂಬ ಮಾನಸಿಕ ಸ್ಥಿತಿ. ಈ ಸ್ಥಿತಿಯಲ್ಲಿ ಮನುಷ್ಯ ತಾನೇ ದೇವರಂತೆ ವರ್ತಿಸುತ್ತಾನೆ, ಇಲ್ಲವೇ ದೇವರ ದೂತನಾಗುತ್ತಾನೆ. ಇದು ಆತನ ಒಳಗಿರುವ ಗೊಂದಲ, ಭಯ, ಕೀಳರಿಮೆಯನ್ನು ಅಡಗಿಸಲು ಬೆಳೆಸಿಕೊಳ್ಳುವ ಸುಳ್ಳು ವ್ಯಕ್ತಿತ್ವ.&nbsp;</p>
]]></content:encoded>
					
		
		
			</item>
		<item>
		<title>ಶಬರಿಮಲೆಯಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲವೇ?ಅಳುತ್ತಿರುವ ಮಗುವಿನ ವಿಡಿಯೋ ಹಿಂದಿರುವ ಸತ್ಯ ಏನು?</title>
		<link>https://peepalmedia.com/child-crying-for-father-amid-sabarimala-rush/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 14 Dec 2023 12:33:37 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[aiyappa]]></category>
		<category><![CDATA[Bangalore]]></category>
		<category><![CDATA[bengalure]]></category>
		<category><![CDATA[breaking]]></category>
		<category><![CDATA[breaking news]]></category>
		<category><![CDATA[child]]></category>
		<category><![CDATA[crying]]></category>
		<category><![CDATA[fact]]></category>
		<category><![CDATA[factcheck]]></category>
		<category><![CDATA[fake]]></category>
		<category><![CDATA[Fake news]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kerala]]></category>
		<category><![CDATA[Kerala Police]]></category>
		<category><![CDATA[kiannada]]></category>
		<category><![CDATA[news]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[shabarimala]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[viral]]></category>
		<category><![CDATA[Viral Audio]]></category>
		<category><![CDATA[viral news]]></category>
		<category><![CDATA[viral video]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33656</guid>

					<description><![CDATA[ಬೆಂಗಳೂರು: ಶಬರಿಮಲೆಯಲ್ಲಿ ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಆಗಮಿಸಿರುವ ಹಿನ್ನಲೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಡಿಸೆಂಬರ್ 10 ರಂದು 18 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ತಾಳ್ಮೆ ಕಳೆದುಕೊಂಡು ಬ್ಯಾರಿಕೇಡ್‌ಗಳನ್ನು ಭೇದಿಸಿದ್ದರು. ಇದರಿಂದಾಗಿ ಮೆಟ್ಟಿಲುಗಳ ಬಳಿ ಅನಿಯಂತ್ರಿತ ನೂಕುನುಗ್ಗಲು ಉಂಟಾಯಿತು. ಡಿಸೆಂಬರ್ 12 ರಂದು ಅಧಿಕಾರಿಗಳಿಗೆ ಕೊನೆಗೂ ಜನದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಾಯಿತು. ಈ ಮಧ್ಯೆ, ಬಸ್ಸಿನ ಒಳಗಿನಿಂದ ಮಗುವೊಂದು &#8216;ಅಪ್ಪಾ&#8217; ಎಂದು ಕೂಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದು ಕಮ್ಯುನಿಸ್ಟ್ ಪಾರ್ಟಿ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ಶಬರಿಮಲೆಯಲ್ಲಿ ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಆಗಮಿಸಿರುವ ಹಿನ್ನಲೆಯಲ್ಲಿ ನೂಕುನುಗ್ಗಲು ಉಂಟಾಗಿತ್ತು. ಡಿಸೆಂಬರ್ 10 ರಂದು 18 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ತಾಳ್ಮೆ ಕಳೆದುಕೊಂಡು ಬ್ಯಾರಿಕೇಡ್‌ಗಳನ್ನು ಭೇದಿಸಿದ್ದರು. ಇದರಿಂದಾಗಿ ಮೆಟ್ಟಿಲುಗಳ ಬಳಿ ಅನಿಯಂತ್ರಿತ ನೂಕುನುಗ್ಗಲು ಉಂಟಾಯಿತು. ಡಿಸೆಂಬರ್ 12 ರಂದು ಅಧಿಕಾರಿಗಳಿಗೆ ಕೊನೆಗೂ ಜನದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಾಯಿತು.</p>



<p>ಈ ಮಧ್ಯೆ, ಬಸ್ಸಿನ ಒಳಗಿನಿಂದ ಮಗುವೊಂದು &#8216;ಅಪ್ಪಾ&#8217; ಎಂದು ಕೂಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಇದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನೇತೃತ್ವದ ಸರ್ಕಾರ ಇರುವ &#8216;ಕೇರಳದ ಹಿಂದೂಗಳ ದುಸ್ಥಿತಿಯನ್ನು ತೋರಿಸುತ್ತದೆ&#8217; ಎಂದು ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಾಮನ್ ದಾಸ್ ವೀಡಿಯೊವನ್ನು ಟ್ವೀಟ್ ಮಾಡಿದ್ದು, ಮಗುವನ್ನು &#8216;ಸನಾತನ ಧರ್ಮವನ್ನು ಪಾಲಿಸಿದ್ದಕ್ಕಾಗಿ ಪೊಲೀಸರು ಬಂಧಿಸಿದ್ದಾರೆ&#8217; ಎಂದು ಹೇಳಿದ್ದಾರೆ. ಕೆಲ ಸಮಯದ ನಂತರ ದಾಸ್ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. </p>


<div class="wp-block-image">
<figure class="aligncenter size-large is-resized"><img loading="lazy" decoding="async" width="774" height="1024" src="https://peepalmedia.com/wp-content/uploads/2023/12/WhatsApp-Image-2023-12-12-at-21.13.52-1-774x1024.jpeg" alt="" class="wp-image-33657" style="width:276px;height:auto" srcset="https://peepalmedia.com/wp-content/uploads/2023/12/WhatsApp-Image-2023-12-12-at-21.13.52-1-774x1024.jpeg 774w, https://peepalmedia.com/wp-content/uploads/2023/12/WhatsApp-Image-2023-12-12-at-21.13.52-1-227x300.jpeg 227w, https://peepalmedia.com/wp-content/uploads/2023/12/WhatsApp-Image-2023-12-12-at-21.13.52-1-768x1017.jpeg 768w, https://peepalmedia.com/wp-content/uploads/2023/12/WhatsApp-Image-2023-12-12-at-21.13.52-1-150x199.jpeg 150w, https://peepalmedia.com/wp-content/uploads/2023/12/WhatsApp-Image-2023-12-12-at-21.13.52-1-300x397.jpeg 300w, https://peepalmedia.com/wp-content/uploads/2023/12/WhatsApp-Image-2023-12-12-at-21.13.52-1-696x921.jpeg 696w, https://peepalmedia.com/wp-content/uploads/2023/12/WhatsApp-Image-2023-12-12-at-21.13.52-1.jpeg 967w" sizes="auto, (max-width: 774px) 100vw, 774px" /><figcaption class="wp-element-caption">ಸದ್ಯ X ನಿಂದ ಡಿಲಿಟ್‌ ಆಗಿರುವ ಇಸ್ಕಾನ್‌ನ ರಾಧಾರಾಮನ್ ದಾಸ್‌ನ ಟ್ವೀಟ್‌, ಕೃಪೆ: altnews</figcaption></figure></div>


<p>ಹಿಂದುತ್ವ ಕಾರ್ಯಕರ್ತ ಮತ್ತು ಹಿಂದೂ ಸೇವಾ ಕೇಂದ್ರದ ಸಂಸ್ಥಾಪಕ ಪ್ರತೀಶ್ ವಿಶ್ವನಾಥ್ ಈ ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದು, ಟ್ವೀಟನ್ನು X ನಲ್ಲಿ 2 ಲಕ್ಷದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.  </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Hello <a href="https://twitter.com/pinarayivijayan?ref_src=twsrc%5Etfw">@pinarayivijayan</a> &amp; communist govt !!!<br><br>Karma has no deadline&#8230;!!<a href="https://twitter.com/hashtag/Sabarimala?src=hash&amp;ref_src=twsrc%5Etfw">#Sabarimala</a> <a href="https://twitter.com/hashtag/Kerala?src=hash&amp;ref_src=twsrc%5Etfw">#Kerala</a> <a href="https://twitter.com/hashtag/Hindus?src=hash&amp;ref_src=twsrc%5Etfw">#Hindus</a> <a href="https://t.co/PC8Z5vKOJe">pic.twitter.com/PC8Z5vKOJe</a></p>&mdash; Pratheesh Viswanath (@pratheesh_Hind) <a href="https://twitter.com/pratheesh_Hind/status/1734560366288589109?ref_src=twsrc%5Etfw">December 12, 2023</a></blockquote><script async src="https://platform.twitter.com/widgets.js" charset="utf-8"></script>
</div><figcaption class="wp-element-caption">ಬಲಪಂಥೀಯ ರಿಷಿ ಬಾಗ್ರೀ ಈ ವೀಡಿಯೊವನ್ನು ಟ್ವೀಟ್ ಮಾಡಿದ್ದು, ಸರ್ಕಾರಿ ಅಧಿಕಾರಿಗಳು ಹಿಂದೂ ಭಕ್ತರನ್ನು ಹಿಂಸಿಸಿದ್ದಾರೆ, ಮಕ್ಕಳನ್ನು ಸಹ ಬಿಡಲಿಲ್ಲ ಎಂದು ಹೇಳಿದ್ದಾರೆ. </figcaption></figure>


<div class="wp-block-image">
<figure class="aligncenter size-large is-resized"><img loading="lazy" decoding="async" width="747" height="1024" src="https://peepalmedia.com/wp-content/uploads/2023/12/chrome_AgMiJzyn85-747x1024.jpg" alt="" class="wp-image-33659" style="width:283px;height:auto" srcset="https://peepalmedia.com/wp-content/uploads/2023/12/chrome_AgMiJzyn85-747x1024.jpg 747w, https://peepalmedia.com/wp-content/uploads/2023/12/chrome_AgMiJzyn85-219x300.jpg 219w, https://peepalmedia.com/wp-content/uploads/2023/12/chrome_AgMiJzyn85-768x1053.jpg 768w, https://peepalmedia.com/wp-content/uploads/2023/12/chrome_AgMiJzyn85-150x206.jpg 150w, https://peepalmedia.com/wp-content/uploads/2023/12/chrome_AgMiJzyn85-300x411.jpg 300w, https://peepalmedia.com/wp-content/uploads/2023/12/chrome_AgMiJzyn85-696x954.jpg 696w, https://peepalmedia.com/wp-content/uploads/2023/12/chrome_AgMiJzyn85.jpg 959w" sizes="auto, (max-width: 747px) 100vw, 747px" /><figcaption class="wp-element-caption"> ರಿಷಿ ಬಾಗ್ರೀ ಟ್ವೀಟ್</figcaption></figure></div>


<p>ಈ ವಿಡಿಯೋವನ್ನು ಅನೇಕ ಅಧಿಕೃತ x ಖಾತೆಗಳಲ್ಲೂ ಹಂಚಲಾಗಿದ್ದು, ಪೋಸ್ಟರ್‌ಗಳನ್ನೂ ಮಾಡಿ ಹರಿಬಿಡಲಾಗುತ್ತಿದೆ.   </p>


<div class="wp-block-image">
<figure class="aligncenter size-large is-resized"><img loading="lazy" decoding="async" width="627" height="1024" src="https://peepalmedia.com/wp-content/uploads/2023/12/WhatsApp-Image-2023-12-14-at-6.08.51-PM-1-627x1024.jpeg" alt="" class="wp-image-33671" style="width:248px;height:auto" srcset="https://peepalmedia.com/wp-content/uploads/2023/12/WhatsApp-Image-2023-12-14-at-6.08.51-PM-1-627x1024.jpeg 627w, https://peepalmedia.com/wp-content/uploads/2023/12/WhatsApp-Image-2023-12-14-at-6.08.51-PM-1-184x300.jpeg 184w, https://peepalmedia.com/wp-content/uploads/2023/12/WhatsApp-Image-2023-12-14-at-6.08.51-PM-1-150x245.jpeg 150w, https://peepalmedia.com/wp-content/uploads/2023/12/WhatsApp-Image-2023-12-14-at-6.08.51-PM-1-300x490.jpeg 300w, https://peepalmedia.com/wp-content/uploads/2023/12/WhatsApp-Image-2023-12-14-at-6.08.51-PM-1-696x1137.jpeg 696w, https://peepalmedia.com/wp-content/uploads/2023/12/WhatsApp-Image-2023-12-14-at-6.08.51-PM-1.jpeg 738w" sizes="auto, (max-width: 627px) 100vw, 627px" /></figure></div>

<div class="wp-block-image">
<figure class="aligncenter size-large is-resized"><img loading="lazy" decoding="async" width="636" height="1024" src="https://peepalmedia.com/wp-content/uploads/2023/12/WhatsApp-Image-2023-12-14-at-6.07.03-PM-1-636x1024.jpeg" alt="" class="wp-image-33674" style="width:241px;height:auto" srcset="https://peepalmedia.com/wp-content/uploads/2023/12/WhatsApp-Image-2023-12-14-at-6.07.03-PM-1-636x1024.jpeg 636w, https://peepalmedia.com/wp-content/uploads/2023/12/WhatsApp-Image-2023-12-14-at-6.07.03-PM-1-186x300.jpeg 186w, https://peepalmedia.com/wp-content/uploads/2023/12/WhatsApp-Image-2023-12-14-at-6.07.03-PM-1-150x241.jpeg 150w, https://peepalmedia.com/wp-content/uploads/2023/12/WhatsApp-Image-2023-12-14-at-6.07.03-PM-1-300x483.jpeg 300w, https://peepalmedia.com/wp-content/uploads/2023/12/WhatsApp-Image-2023-12-14-at-6.07.03-PM-1-696x1120.jpeg 696w, https://peepalmedia.com/wp-content/uploads/2023/12/WhatsApp-Image-2023-12-14-at-6.07.03-PM-1.jpeg 738w" sizes="auto, (max-width: 636px) 100vw, 636px" /></figure></div>


<p>ವಿಡಿಯೋ ಹಿಂದಿರುವ ನಿಜಾಂಶವನ್ನು ವರದಿ ಮಾಡಿರುವ ಆಲ್ಟ್‌ ನ್ಯೂಸ್‌ ಹೀಗೆ ಹೇಳಿದೆ. ಈ ವಿಡಿಯೋವಿನ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ, ಏಷ್ಯಾನೆಟ್ ನ್ಯೂಸ್‌ನ “Sabarimala rush: Heart-wrenching video of crying child seeking help to find his father emerges” ಎಂಬ ಶೀರ್ಷಿಕೆಯ ವರದಿ ಕಂಡುಬಂದಿದೆ. ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ವೀಡಿಯೊನಲ್ಲಿ ಘಟನೆಯ ಒಂದು ಭಾಗವನ್ನು ಮಾತ್ರ ತೋರಿಸಲಾಗಿದೆ. ಸಂಪೂರ್ಣ ವೀಡಿಯೊದಲ್ಲಿ ಮಗು ತನ್ನ ತಂದೆಯನ್ನು ಗುರುತಿಸಿ, ಅವರತ್ತ ಕೈ ಬೀಸುತ್ತಾನೆ. ಏಷ್ಯಾನೆಟ್ ನ್ಯೂಸ್ ಈ ವಿಡಿಯೋವನ್ನು ಹಂಚಿಕೊಂಡಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Sabarimala rush: Heart-wrenching video of crying child seeking help to find his father emerges; WATCH<br>.<a href="https://twitter.com/hashtag/Sabrimala?src=hash&amp;ref_src=twsrc%5Etfw">#Sabrimala</a> <a href="https://twitter.com/hashtag/ViralVideo?src=hash&amp;ref_src=twsrc%5Etfw">#ViralVideo</a> <a href="https://twitter.com/hashtag/Darshan?src=hash&amp;ref_src=twsrc%5Etfw">#Darshan</a> <a href="https://twitter.com/hashtag/LordAyyappa?src=hash&amp;ref_src=twsrc%5Etfw">#LordAyyappa</a> <a href="https://twitter.com/hashtag/Pandalam?src=hash&amp;ref_src=twsrc%5Etfw">#Pandalam</a> <a href="https://twitter.com/hashtag/Nilakkal?src=hash&amp;ref_src=twsrc%5Etfw">#Nilakkal</a> <a href="https://t.co/GqJLkVSiNr">pic.twitter.com/GqJLkVSiNr</a></p>&mdash; Asianet Newsable (@AsianetNewsEN) <a href="https://twitter.com/AsianetNewsEN/status/1734537941597253634?ref_src=twsrc%5Etfw">December 12, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p>34-ಸೆಕೆಂಡ್‌ಗಳ ಕ್ಲಿಪ್‌ನ ಆರಂಭದಲ್ಲಿ ಮಗು ತನ್ನ ತಂದೆಯನ್ನು ಅಳುತ್ತಾ ಹುಡುಕುತ್ತಾನೆ. ಖಾಕಿ ಸಮವಸ್ತ್ರ ಮತ್ತು ಭುಜದ ತೋಳಿನ ಮೇಲೆ ಪೊಲೀಸ್‌ ಮುದ್ರೆ ಇರುವ ಪೋಲಿಸ್ 0:10 ಕ್ಕೆ ಅವನನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ.</p>



<p>0:27-ಸೆಕೆಂಡ್‌ನಲ್ಲಿ, ಹುಡುಗ ತನ್ನ ತಂದೆಯನ್ನು ಗುರುತಿಸಿ, ಅವರ ಕಡೆಗೆ ತನ್ನ ತೋಳನ್ನು ಚಾಚುತ್ತಾನೆ. ಅವರು ಮಗುವಿಗೆ ಕಾಯುವಂತೆ ಸನ್ನೆ ಮಾಡುತ್ತಾರೆ. ಅಷ್ಟು ಹೊತ್ತಿಗೆ ಮಗು ಸ್ವಲ್ಪ ಶಾಂತವಾಗುತ್ತಾನೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="553" height="300" src="https://peepalmedia.com/wp-content/uploads/2023/12/image-3.png" alt="" class="wp-image-33660" style="width:410px;height:auto" srcset="https://peepalmedia.com/wp-content/uploads/2023/12/image-3.png 553w, https://peepalmedia.com/wp-content/uploads/2023/12/image-3-300x163.png 300w, https://peepalmedia.com/wp-content/uploads/2023/12/image-3-150x81.png 150w" sizes="auto, (max-width: 553px) 100vw, 553px" /><figcaption class="wp-element-caption">ಮಗುವನ್ನು ಸಮದಾನಿಸುತ್ತಿರುವ ತಂದೆ, ಕೃಪೆ: ಏಷ್ಯಾನೆಟ್ ನ್ಯೂಸ್‌ ವಿಡಿಯೋ</figcaption></figure></div>


<p>ಪೊಲೀಸ್ ಅಧಿಕಾರಿಗಳು ಭಕ್ತರ ಜೊತೆಗೆ ಕೆಟ್ಟದಾಗಿ ನಡೆದುಕೊಂಡಿಲ್ಲ. ಹಿಂದೂ ಎಂಬ ಕಾರಣಕ್ಕೆ ಈ ರೀತಿ ನಡೆಸಿಕೊಂಡಿದ್ದಾರೆ ಎಂಬುದು ಅಪ್ಪಟ ಅಪಪ್ರಚಾರ. ಜನದಟ್ಟನೆಯಲ್ಲಿ ಒಂದು ಗಳಿಗೆ ಮಗುವಿನಿಂದ ತಂದೆ ಬೇರ್ಪಟ್ಟಿದ್ದಾರೆ.‌ ಇದರಿಂದ ಸಹಜವಾಗಿಯೇ ಆತಂಕಗೊಂಡಿರುವ ಮಗು ತಂದೆಗಾಗಿ ಕೂಗುತ್ತಾ ಅಳುತ್ತಿದೆ, ಅಷ್ಟೇ. </p>



<p>ಏಷ್ಯಾನೆಟ್ ನ್ಯೂಸ್ ಪೋಸ್ಟ್ ಮಾಡಿರುವ ವೀಡಿಯೊದಲ್ಲಿ ವಾಹನದ ನಂಬರ್ ಪ್ಲೇಟ್ ಕೆಎಲ್-15 ಎ-814 ಎಂದಿದೆ. ಇದು ಸರ್ಕಾರಿ ಬಸ್ ಆಗಿದ್ದು, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಅಡಿಯಲ್ಲಿ ಬರುವ ಬಸ್‌ಗಳನ್ನು ತಿರುವನಂತಪುರಂನಲ್ಲಿ ‘ಕೆಎಲ್-15’ ಸಂಖ್ಯೆಯನ್ನು ನೋಂದಾಯಿಸಲಾಗುತ್ತದೆ. ಕೆಎಸ್‌ಆರ್‌ಟಿಸಿಯ ಲಾಂಛನವು ಬಸ್‌ನಲ್ಲಿ ಕಾಣುತ್ತದೆ. ಲೋಗೋಗೆ ಹೊಂದಿಕೆಯಾಗುತ್ತದೆ. ಇದು ಪೊಲೀಸ್‌ ಬಸ್‌ ಅಲ್ಲವೇ ಅಲ್ಲ. ಪೊಲೀಸರು ಭಕ್ತರನ್ನು ಬಂಧಿಸಿದ್ದಾರೆ ಎಂಬುದು ದೊಡ್ಡ ಸುಳ್ಳು!</p>



<p>ಆಲ್ಟ್‌ನ್ಯೂಸ್‌ ಕೇರಳ ಪೊಲೀಸ್ ಪಿಆರ್‌ಒ ಪ್ರಮೋದ್ ಕುಮಾರ್ ಅವರೊಂದಿಗೆ ಮಾತನಾಡಿದ್ದು, ಅವರು ವೈರಲ್ ವಿಡಿಯೋ ಬಳಸಿ ಮಾಡಿರುವ ಅರೋಪವನ್ನು ತಳ್ಳಿಹಾಕಿದ್ದಾರೆ. ಶಬರಿಮಲೆ ಬೇಸ್‌ಕ್ಯಾಂಪ್ ಆಗಿರುವ ನಿಲಕ್ಕಲ್‌ನಿಂದ ಆಚೆಗೆ ಯಾತ್ರಾರ್ಥಿಗಳ ವಾಹನಗಳಿಗೆ ಅನುಮತಿ ಇಲ್ಲ ಎಂದು ಹೇಳಿದ್ದಾರೆ. ಆದ್ದರಿಂದ ಎಲ್ಲಾ ಯಾತ್ರಾರ್ಥಿಗಳನ್ನೂ ಸರ್ಕಾರಿ ಸ್ವಾಮ್ಯದ ಬಸ್‌ಗಳ ಮೂಲಕ ಪಂಬಾಗೆ ಕರೆದುಕೊಂಡು ಹೋಗಲಾಗುತ್ತದೆ.  ವಿಡಿಯೋದಲ್ಲಿರುವ ಮಗು ಬಸ್‌ ಹತ್ತಿತ್ತು, ಆದರೆ ಆತನ ತಂದೆ ಇನ್ನೂ ಬಸ್‌ ಹತ್ತಬೇಕಿತ್ತು. ಆದರೆ ಬಸ್ ಹೊರಡುವ ಮೊದಲು ಅವರು ಬಸ್ಸನ್ನು ಏರಿದರು. ಇದರ ಅರ್ಥ ತಂದೆ-ಮಗ ಬೇರ್ಪಟ್ಟಿಲ್ಲ. ಎರಡು ಮೂರು ನಿಮಿಷಗಳ ನಂತರ ಮಗು ಮತ್ತೆ ತಂದೆಯೊಂದಿಗೆ ಸೇರಿಕೊಂಡಿತು. ಘಟನೆಯನ್ನು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಅರ್ಥೈಸುತ್ತಿದ್ದಾರೆ.</p>



<p>ಹೀಗಾಗಿ, ಅಯ್ಯಪ್ಪನ ಭಕ್ತನಾದ, ತಂದೆಯಿಂದ ಬೇರ್ಪಟ್ಟ ಈ ಮಗುವಿನ ಆತಂಕ ಹಾಗೂ ನೋವನ್ನು ಬಳಸಿಕೊಂಡು ʼಹಿಂದೂಗಳಿಗೆ ರಕ್ಷಣೆ ಇಲ್ಲ&#8221; ಎಂದು ಹರಡುತ್ತಿರುವುದು ನರೇಟಿವ್‌ ಸುಳ್ಳು&#8230;ಸುಳ್ಳು..ಸುಳ್ಳು!</p>



<p>(ಈ ವರದಿಯನ್ನು <a href="https://www.altnews.in/clip-of-child-crying-for-father-amid-sabarimala-rush-shared-out-of-context-with-plight-of-hindus-in-kerala-barb/" data-type="link" data-id="https://www.altnews.in/clip-of-child-crying-for-father-amid-sabarimala-rush-shared-out-of-context-with-plight-of-hindus-in-kerala-barb/">ಆಲ್ಟ್‌ನ್ಯೂಸಿನ ಫ್ಯಾಕ್ಟ್‌ಚೆಕ್‌</a> ಆಧರಿಸಿ ಮಾಡಲಾಗಿದೆ)</p>
]]></content:encoded>
					
		
		
			</item>
		<item>
		<title>ವಯಸ್ಕರ ಪತ್ರಿಕೆ ಪ್ಲೇಬಾಯ್‌ನಲ್ಲಿ ಪ್ರಕಟವಾಗಿತ್ತೇ ನೆಹರೂ ಸಂದರ್ಶನ? ಸತ್ಯ ಏನು?</title>
		<link>https://peepalmedia.com/nehrus-interview-to-playboy-is-not-true/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 15 Nov 2023 08:42:30 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[Fact check]]></category>
		<category><![CDATA[factcheck]]></category>
		<category><![CDATA[Fake news]]></category>
		<category><![CDATA[fake twitter handling]]></category>
		<category><![CDATA[india]]></category>
		<category><![CDATA[jawaharalal nehru]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[nehru]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[playboy]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=32209</guid>

					<description><![CDATA[ಬೆಂಗಳೂರು: ಪ್ಲೇಬಾಯ್‌ ಪುರುಷರ ಮ್ಯಾಗಜೈನ್‌ನಲ್ಲಿ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಇಂಟರ್ವ್ಯೂ ಪ್ರಕಟವಾಗಿದೆ ಎಂದು ಈ ವಿಡಿಯೋವೊಂದು ಸದ್ಯ ಟ್ವಿಟರ್‌ನಲ್ಲಿ ಓಡಾಡುತ್ತಿದೆ. An exclusive interview with Nehru of India ಎಂಬ ಶೀರ್ಷಿಕೆಯ ಈ ಇಂಟರ್ವ್ಯೂ ಇರುವ ಈ ಮ್ಯಾಗಜೈನ್‌ನ ಪ್ರತಿಯನ್ನು ಇಟ್ಟುಕೊಂಟು 1962ರ ಇಂಡೋ-ಚೈನಾ ಯುದ್ಧದ ನಂತರ ಪೋರ್ನ್‌ ಮ್ಯಾಗಜೈನ್‌ನಲ್ಲಿ ನೆಹರೂ ಇಂಟರ್ವ್ಯೂ ಎಂದು ವಿಡಿಯೋವನ್ನು ಹಂಚುತ್ತಿದ್ದಾರೆ. ಪ್ಲೇಬಾಯ್‌ ಎಂಬುದು ಲೈಫ್‌ ಸ್ಟೈಲ್‌ ಮ್ಯಾಗಜೈನ್. ಇದು ಬೆತ್ತಲೆ ಮತ್ತು ಅರೆ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ಪ್ಲೇಬಾಯ್‌ ಪುರುಷರ ಮ್ಯಾಗಜೈನ್‌ನಲ್ಲಿ ಭಾರತದ ಮೊದಲ ಪ್ರಧಾನಮಂತ್ರಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರ ಇಂಟರ್ವ್ಯೂ ಪ್ರಕಟವಾಗಿದೆ ಎಂದು ಈ <a href="https://x.com/rishibagree/status/1724448420465885511?s=20" data-type="link" data-id="https://x.com/rishibagree/status/1724448420465885511?s=20">ವಿಡಿಯೋವೊಂದು</a> ಸದ್ಯ ಟ್ವಿಟರ್‌ನಲ್ಲಿ ಓಡಾಡುತ್ತಿದೆ.</p>



<p>An exclusive interview with Nehru of India ಎಂಬ ಶೀರ್ಷಿಕೆಯ ಈ ಇಂಟರ್ವ್ಯೂ ಇರುವ ಈ ಮ್ಯಾಗಜೈನ್‌ನ ಪ್ರತಿಯನ್ನು ಇಟ್ಟುಕೊಂಟು 1962ರ ಇಂಡೋ-ಚೈನಾ ಯುದ್ಧದ ನಂತರ ಪೋರ್ನ್‌ ಮ್ಯಾಗಜೈನ್‌ನಲ್ಲಿ ನೆಹರೂ ಇಂಟರ್ವ್ಯೂ ಎಂದು <a href="https://x.com/ShakunthalaHS/status/1724459605013430548?s=20" data-type="link" data-id="https://x.com/ShakunthalaHS/status/1724459605013430548?s=20">ವಿಡಿಯೋವನ್ನು</a> ಹಂಚುತ್ತಿದ್ದಾರೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="729" height="870" src="https://peepalmedia.com/wp-content/uploads/2023/11/image-44.png" alt="" class="wp-image-32211" style="width:326px;height:auto" srcset="https://peepalmedia.com/wp-content/uploads/2023/11/image-44.png 729w, https://peepalmedia.com/wp-content/uploads/2023/11/image-44-251x300.png 251w, https://peepalmedia.com/wp-content/uploads/2023/11/image-44-150x179.png 150w, https://peepalmedia.com/wp-content/uploads/2023/11/image-44-300x358.png 300w, https://peepalmedia.com/wp-content/uploads/2023/11/image-44-696x831.png 696w" sizes="auto, (max-width: 729px) 100vw, 729px" /></figure></div>


<p>ಪ್ಲೇಬಾಯ್‌ ಎಂಬುದು ಲೈಫ್‌ ಸ್ಟೈಲ್‌ ಮ್ಯಾಗಜೈನ್. ಇದು ಬೆತ್ತಲೆ ಮತ್ತು ಅರೆ ಬೆತ್ತಲೆ ಪೋಟೋಗಳಿಂದ ಜನಪ್ರಿಯತೆ ಗಳಿಸಿತ್ತು. ಇದರಲ್ಲಿ 1962ರಲ್ಲಿ ಪ್ರಕಟವಾಗುತ್ತಿದ್ದ Playboy interview ಎಂಬ ಸರಣಿ ಸಂದರ್ಶನ ಪತ್ರಿಕೆಯ ಪ್ರಕಟಣೆಯನ್ನು ಹೆಚ್ಚಿಸಿತ್ತು. ಇದರಲ್ಲಿ ಅಧ್ಯಕ್ಷ ಜಿಮ್ಮಿ ಕಾರ್ಟರ್, ಮಾಲ್ಕಾಮ್ ಎಕ್ಸ್, ಫಿಡೆಲ್ ಕ್ಯಾಸ್ಟ್ರೋ, ದಿ ಬೀಟಲ್ಸ್, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಜಿಮ್ಮಿ ಹಾಫ್ಫಾ, ಜಾರ್ಜ್ ವ್ಯಾಲೇಸ್, ಹೆನ್ರಿ ಮಿಲ್ಲರ್ ಮತ್ತು ಕ್ಯಾಸಿಸಸ್ ಕ್ಲೇ ಸೇರಿದಂತೆ ವಿಶ್ವದ ಕೆಲವು ಪ್ರಮುಖ ವ್ಯಕ್ತಿಗಳೊಂದಿಗಿನ ಸಂದರ್ಶನವನ್ನು ಪ್ರಕಟಿಸಲಾಗಿತ್ತು. ಆದರೆ, ವಿಶ್ವ ನಾಯಕರ ಜೊತೆಗಿನ ಇದರ ಮೊದಲ ಸಂದರ್ಶನವೇ ಭಾರತದ ಆಗಿನ ಪ್ರಧಾನಿ ನೆಹರೂ ಅವರೊಂದಿಗೆ, ಅಕ್ಟೋಬರ್ 1963ರ ಸಂಚಿಕೆಯಲ್ಲಿ. ಈ ಬಗ್ಗೆ <a href="https://www.forbes.com/sites/ronakdesai/2017/10/03/the-curious-connection-between-playboy-and-jawaharlal-nehru-indias-first-prime-minister/?sh=2cf3ab96608a" data-type="link" data-id="https://www.forbes.com/sites/ronakdesai/2017/10/03/the-curious-connection-between-playboy-and-jawaharlal-nehru-indias-first-prime-minister/?sh=2cf3ab96608a">ಪೋರ್ಬ್ಸ್‌ ಪತ್ರಿಕೆಯಲ್ಲಿ</a> ಈ ಬಗ್ಗೆ ಲೇಖನವೊಂದು ಪ್ರಕಟವಾಗಿದೆ.</p>



<p style="font-size:20px"><strong>ಸತ್ಯ ಏನು?</strong></p>



<p>ಅಸಲಿಗೆ ಇದೊಂದು ಡಮ್ಮಿ ಸಂದರ್ಶನವಾಗಿತ್ತು. ಅಕ್ಟೋಬರ್ 1963ರಂದು ಪ್ರಕಟವಾದ ನೆಹರೂ ಸಂದರ್ಶನಕ್ಕೆ a candid conversation with the architect of modern India ಟೈಟಲ್‌ ನೀಡಲಾಗಿತ್ತು.</p>



<p>ಇದರಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಕುರಿತಾದ ನೆಹರೂ ಅಭಿಪ್ರಾಯಗಳು, ಪ್ರಜಾಪ್ರಭುತ್ವದ ದೌರ್ಬಲ್ಯಗಳು, ಶೀತಲ ಸಮರದ ರಾಜಕೀಯ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು, ಸಮಾಜ, ವಿಶ್ವ ಧರ್ಮದ ಮೇಲೆ materialismನ ವಿನಾಶಕಾರಿ ಪರಿಣಾಮ, ದೇಶದಲ್ಲಿ ಜನಸಂಖ್ಯಾ ಸ್ಪೋಟ, ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಭಾರತದ ಭವಿಷ್ಯ, ಮೊದಲಾದ ವಿಚಾರಗಳ ಕುರಿತು ನೆಹರೂರವರ ಸಮಗ್ರ ದೃಷ್ಟಿಕೋನವನ್ನು ಪ್ರಕಟಿಸಲಾಗಿತ್ತು.</p>



<p style="font-size:20px">ಆದರೆ, ಅಸಲಿಗೂ ಈ ಸಂದರ್ಶನ ನಡೆದಿತ್ತೇ?</p>



<p>ಇದೇ ಸಂಚಿಕೆಯ ಪುಟ 3 ರಲ್ಲಿರುವ &#8220;ಸಂಪಾದಕೀಯದಲ್ಲಿ&#8221; &#8220;ನಿಯತಕಾಲಿಕದ ಉಳಿದ ಪ್ರತಿಗಳು ಮುದ್ರಣಕ್ಕೆ ಹೋದ ನಂತರ, ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಇದು ಪಿಎಂ ನೆಹರೂ ಅವರೊಂದಿಗಿನ ನಮ್ಮ ವೈಯಕ್ತಿಕ ಸಂದರ್ಶನ ಅಲ್ಲ ಎಂಬ ಸುದ್ದಿ ಬಂದಿದೆ. ಆದರೆ ಕಳೆದ ಹಲವಾರು ವರ್ಷಗಳಿಂದ ಪ್ರಧಾನಿಯವರು ಮಾಡಿದ ವಿವಿಧ ಭಾಷಣಗಳು, ಅವರ ಹೇಳಿಕೆಗಳು,ಸಾರ್ವಜನಿಕ ಭಾಷಣಗಳನ್ನು ಒಟ್ಟುಗೂಡುಸಿ ತಯಾರಿಸಲಾಗಿದೆ,” ಎಂದು ಹೇಳಲಾಗಿದೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="928" height="916" src="https://peepalmedia.com/wp-content/uploads/2023/11/image-46.png" alt="" class="wp-image-32214" style="width:387px;height:auto" srcset="https://peepalmedia.com/wp-content/uploads/2023/11/image-46.png 928w, https://peepalmedia.com/wp-content/uploads/2023/11/image-46-300x296.png 300w, https://peepalmedia.com/wp-content/uploads/2023/11/image-46-768x758.png 768w, https://peepalmedia.com/wp-content/uploads/2023/11/image-46-150x148.png 150w, https://peepalmedia.com/wp-content/uploads/2023/11/image-46-696x687.png 696w" sizes="auto, (max-width: 928px) 100vw, 928px" /></figure></div>


<p>ಇದರ ಅರ್ಥ, ಪ್ಲೈಬಾಯ್‌ ಪತ್ರಿಕೆಯವರು ನೆಹರೂರೊಂದಿಗೆ ಸಂದರ್ಶನವನ್ನೇ ನಡೆಸಿಲ್ಲ ಎಂದು ರಾಯಭಾರಿ ಕಚೇರಿ ತಿಳಿಸಿದೆ. ಬದಲಿಗೆ, ನೆಹರೂರವರ ಅನೇಕ ಭಾಷಣಗಳನ್ನು ಒಗ್ಗೂಡಿಸಿ ಒಂದು ಡಮ್ಮಿ ಸಂದರ್ಶನವನ್ನು ಪ್ರಕಟಿಸಲಾಗಿದೆ. ಆದರೆ ಇದೇ ಸಂಪಾದಕೀಯದಲ್ಲಿ ಈ ಸಂದರ್ಶಕ ಜಗತ್ತಿನ ಬೇರೆ ನಾಯಕರನ್ನೂ ಸಂದರ್ಶಿಸಿದ್ದಾನೆ ಎಂದು ತಿಳಿಸಲಾಗಿದೆ.</p>



<p>ಮುಂದುವರಿದ ಸಂಪಾದಕೀಯದಲ್ಲಿ “ಭಾರತ ಸರ್ಕಾರ ನೀಡಿದ ಅಧಿಕೃತ ನಿರಾಕರಣೆಯನ್ನು ಗೌರವಿಸಬೇಕು ಮತ್ತು ಹೆಚ್ಚಿನ ಸ್ಪಷ್ಟೀಕರಣಕ್ಕಾಗಿ ಸಂದರ್ಶಕರನ್ನು ಸಂಪರ್ಕಿಸಲು ನಾವು ವಿಫಲವಾಗಿದ್ದೇವೆ. ಸಂಪಾದಕೀಯ ಸಮಗ್ರತೆಗಾಗಿ ನಾವು ಈ ಹೇಳಿಕೆಯನ್ನು ಮುದ್ರಿಸುವ ಅಗತ್ಯವಿದೆ,” ಎಂದು ಹೇಳಲಾಗಿದೆ.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="724" height="1024" src="https://peepalmedia.com/wp-content/uploads/2023/11/image-47-724x1024.png" alt="" class="wp-image-32217" style="width:552px;height:auto" srcset="https://peepalmedia.com/wp-content/uploads/2023/11/image-47-724x1024.png 724w, https://peepalmedia.com/wp-content/uploads/2023/11/image-47-212x300.png 212w, https://peepalmedia.com/wp-content/uploads/2023/11/image-47-768x1086.png 768w, https://peepalmedia.com/wp-content/uploads/2023/11/image-47-1086x1536.png 1086w, https://peepalmedia.com/wp-content/uploads/2023/11/image-47-150x212.png 150w, https://peepalmedia.com/wp-content/uploads/2023/11/image-47-300x424.png 300w, https://peepalmedia.com/wp-content/uploads/2023/11/image-47-696x984.png 696w, https://peepalmedia.com/wp-content/uploads/2023/11/image-47-1068x1511.png 1068w, https://peepalmedia.com/wp-content/uploads/2023/11/image-47.png 1414w" sizes="auto, (max-width: 724px) 100vw, 724px" /></figure></div>


<p>ಭಾರತದಲ್ಲಿ ಪ್ಯೂರಿಟಾನಿಕಲ್ ಸೆನ್ಸಾರ್‌ಗಳು ಆಗಲೇ ಭಾರತದಲ್ಲಿ ಈ ಪುರುಷರ ಮ್ಯಾಗಜೈನ್‌ ಅನ್ನು ನಿಷೇಧಿಸಿತ್ತು. ಆದರೂ ಈ ಪತ್ರಿಕೆಯಲ್ಲಿ ನೆಹರೂ ಡಮ್ಮಿ ಸಂದರ್ಶನ ಪ್ರಕಟವಾದಾಗ ಬಿಸಿ ಬಿಸಿ ಮಸಾಲದೋಸೆಯಂತೆ ಪತ್ರಿಕೆ ಮಾರಾಟವಾಯಿತು. ಭಾರತಕ್ಕೆ ಈ ಪತ್ರಿಕೆಯ ಪ್ರತಿಗಳನ್ನು ಕಳ್ಳಸಾಗಾಟ ಮಾಡಲಾಗಿತ್ತು.</p>



<p>ಪತ್ರಿಕೆಯ ಅಸಲಿ ಬೆಲೆಗಿಂತ 30 ಪಟ್ಟು ಹೆಚ್ಚಿನ ಬೆಲೆಗೆ ಖರೀದಿ ಮಾಡುತ್ತಿದ್ದರು. ಪತ್ರಿಕೆಯ ಓರ್ವ ಸಂಪಾದಕ ಅಕ್ಟೋಬರ್‌ನ ಈ ಸಂಚಿಕೆಯ ಪ್ರತಿ “ಬ್ಲೆಂಡೆಟ್‌ ಸ್ಕಾಚ್‌ ವಿಸ್ಕಿ ಚೀವಾಸ್ ರೀಗಲ್ ಬಾಟಲಿಗಿಂತ ದುಬಾರಿ” ಎಂದು ಹೇಳಿದ್ದ.</p>



<p>ಅಚ್ಚರಿಯೇನಂದ್ರೆ, ಇಂತಹದ್ದೇ ಸಂಕಷ್ಟಕ್ಕೆ ರಾಜೀವ್‌ ಗಾಂಧೀ ಕೂಡ ಬಿದ್ದಿದ್ದರು. ದಿ ಸ್ಟೇಟ್ಸ್‌ಮನ್‌ನಲ್ಲಿ ಆಗಾಗ ಬರೆಯುತ್ತಿದ್ದ ರಸೆಲ್‌ ವಾರನ್‌ ಹೌವೇ ಎಂಬ ಪತ್ರಕರ್ತ ಜಾಗತಿಕ ರಾಜಕೀಯ ನಾಯಕರ ಬಗ್ಗೆ ಪುಸ್ತಕ ಬರೆಯುತ್ತಿರುವುದಾಗಿ, ರಾಜೀವ್‌ ಗಾಂಧಿಯವರ ಸಂದರ್ಶನವನ್ನು ಕೇಳಿದ್ದ. ಆದರೆ ಅಮೇರಿಕನ್‌ ಅಡಲ್ಟ್‌ ಮ್ಯಾಗಜೈನ್‌ ಪೆಂಟ್‌ಹೌಸ್‌ನ ಮುಂದಿನ ಸಂಚಿಕೆಯಲ್ಲಿ <a href="https://www.indiatoday.in/magazine/eyecatchers/story/19870630-penthouse-magazine-to-feature-rajiv-gandhi-interview-798997-1987-06-29" data-type="link" data-id="https://www.indiatoday.in/magazine/eyecatchers/story/19870630-penthouse-magazine-to-feature-rajiv-gandhi-interview-798997-1987-06-29">ರಾಜೀವ್‌ ಗಾಂಧಿಯವರ ಸಂದರ್ಶನ</a> ಪ್ರಕಟಿಸಲಾಗುವುದು ಎಂದು ಪ್ರಕಟಣೆಯಾದಾಗ ರಾಜೀವ್‌ ಗಾಬರಿ ಬಿದ್ದಿದ್ದರು. ಭಾರತದಲ್ಲಿ ಬ್ಯಾನ್‌ ಆಗಿದ್ದ ವಯಸ್ಕರ ಮ್ಯಾಗಜೈನ್ ಪೆಂಟ್‌ಹೌಸ್‌ಗೆ ರಾಜೀವ್‌ ಸಂದರ್ಶನ ನೀಡಿಲ್ಲ, ಬದಲಾಗಿ ಈ ರೀತಿ ಸುಳ್ಳು ಹೇಳಿ ಸಂದರ್ಶನ ತೆಗೆದುಕೊಳ್ಳಲಾಗಿದೆ ಎಂದು ವಾಷಿಂಗ್‌ಟನ್‌ನಲ್ಲಿ ಇರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿತು ಮತ್ತು ಕಾನೂನಾತ್ಮಕ ಕ್ರಮವನ್ನೂ ತೆಗೆದುಕೊಂಡಿತ್ತು.</p>



<p>ಇಷ್ಟು ವರ್ಷಗಳಾದರೂ ಪ್ಲೈಬಾಯ್‌ ಪತ್ರಿಕೆ ನೆಹರೂರವರ ಜೊತೆಗೆ ಇರುವ ಸಂದರ್ಶಕನ ಫೋಟೋಗಳು ಹಾಗೂ ಆತನ ಬಗೆಗಿನ ವಿವರಗಳನ್ನು ಪ್ರಕಟಿಸಲು ನಿರಾಕರಿಸಿದೆ. ಅಸಲಿಗೆ ಅದರ ಸಂಪಾದಕೀಯ ಹೇಳುವಂತೆ ಪತ್ರಿಕೆ ಸಂಪರ್ಕಿಸಲು ಯತ್ನಿಸಿ ವಿಫಲವಾದ ಈ ಸಂದರ್ಶಕನ ಬಗ್ಗೆ ಅವರಿಗೇ ತಿಳಿದಿಲ್ಲ. ಇದೊಂದು ನಿಚ್ಚಲವಾಗಿ ಸುಳ್ಳು ಸಂದರ್ಶನವಾಗಿತ್ತು.</p>



<p>ಸದ್ಯ ಈ ಸುಳ್ಳು ಸಂದರ್ಶನದ ಪ್ಲೇಬಾಯ್‌ ಪತ್ರಿಕೆಯ ಪ್ರತಿಯನ್ನು ಇಟ್ಟುಕೊಂಡು ಅವಹೇಳನಕಾರಿ ವಿಡಿಯೋವೊಂದು ಟ್ವಿಟರ್‌ನಲ್ಲಿ ಓಡಾಡುತ್ತಿದೆ.</p>
]]></content:encoded>
					
		
		
			</item>
	</channel>
</rss>
