<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>fir &#8211; Peepal Media</title>
	<atom:link href="https://peepalmedia.com/tag/fir/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 31 Aug 2024 04:16:07 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>fir &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ನಟನ ಮೇಲೆ ಲೈಂಗಿಕ ದೌರ್ಜನ್ಯ: ನಿರ್ದೇಶಕ ರಂಜಿತ್ ವಿರುದ್ಧ ಎರಡನೇ ಎಫ್‌ಐಆರ್</title>
		<link>https://peepalmedia.com/second-fir-for-sexual-assault-against-ranjith/</link>
		
		<dc:creator><![CDATA[Peepal Media]]></dc:creator>
		<pubDate>Sat, 31 Aug 2024 04:16:06 +0000</pubDate>
				<category><![CDATA[ಅಪರಾಧ]]></category>
		<category><![CDATA[fir]]></category>
		<category><![CDATA[kannada]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Ranjith]]></category>
		<guid isPermaLink="false">https://peepalmedia.com/?p=44698</guid>

					<description><![CDATA[ನಟನೊಬ್ಬ ನೀಡಿದ ದೂರಿನ ಆಧಾರದ ಮೇಲೆ ಕೇರಳ ಪೊಲೀಸರು ಚಲನಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಎರಡನೇ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ಶನಿವಾರ ವರದಿ ಮಾಡಿದೆ. ಕೋಳಿಕ್ಕೋಡ್‌ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣವು ಇತ್ತೀಚಿನ ಹೇಮಾ ಸಮಿತಿ ವರದಿಯ ಹಿನ್ನೆಲೆಯಲ್ಲಿ ಚಲನಚಿತ್ರ ನಿರ್ಮಾಪಕರ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣವಾಗಿದೆ. ತನಿಖಾ ತಂಡ ನಿನ್ನೆ ದೂರುದಾರರ ಹೇಳಿಕೆ ದಾಖಲಿಸಿಕೊಂಡಿದೆ. ಶುಕ್ರವಾರ, ಯುವ ನಟನೊಬ್ಬ ಕೇರಳದ ಚಲನಚಿತ್ರ ನಿರ್ಮಾಪಕ ರಂಜಿತ್ ವಿರುದ್ಧ ದೂರು ನೀಡಿದ್ದರು, ನಿರ್ದೇಶಕರು [&#8230;]]]></description>
										<content:encoded><![CDATA[
<p>ನಟನೊಬ್ಬ ನೀಡಿದ ದೂರಿನ ಆಧಾರದ ಮೇಲೆ ಕೇರಳ ಪೊಲೀಸರು ಚಲನಚಿತ್ರ ನಿರ್ದೇಶಕ ರಂಜಿತ್ ವಿರುದ್ಧ ಎರಡನೇ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ANI ಶನಿವಾರ ವರದಿ ಮಾಡಿದೆ.</p>



<p>ಕೋಳಿಕ್ಕೋಡ್‌ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣವು ಇತ್ತೀಚಿನ ಹೇಮಾ ಸಮಿತಿ ವರದಿಯ ಹಿನ್ನೆಲೆಯಲ್ಲಿ ಚಲನಚಿತ್ರ ನಿರ್ಮಾಪಕರ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣವಾಗಿದೆ.</p>



<p>ತನಿಖಾ ತಂಡ ನಿನ್ನೆ ದೂರುದಾರರ ಹೇಳಿಕೆ ದಾಖಲಿಸಿಕೊಂಡಿದೆ.</p>



<p>ಶುಕ್ರವಾರ, ಯುವ ನಟನೊಬ್ಬ ಕೇರಳದ ಚಲನಚಿತ್ರ ನಿರ್ಮಾಪಕ ರಂಜಿತ್ ವಿರುದ್ಧ ದೂರು ನೀಡಿದ್ದರು, ನಿರ್ದೇಶಕರು 2012ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಬಲವಂತವಾಗಿ ವಿವಸ್ತ್ರಗೊಳಿಸಿದ್ದಾರೆ ಎಂದು ಅವರು ಆರೋಪಿಸಿದ್ದರು.</p>



<p>ರಂಜಿತ್ ಸಂತ್ರಸ್ತನನ್ನು ಬೆಂಗಳೂರಿನ ಹೊಟೇಲ್‌ಗೆ ಆಡಿಷನ್‌ಗೆ ಕರೆಸಿಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದು ಆಡಿಷನ್‌ನ ಭಾಗ ಎಂದು ತಾನು ಭಾವಿಸಿದ್ದಾಗಿ ದೂರುದಾರರು ಹೇಳಿದ್ದಾರೆ.</p>



<p>ರಂಜಿತ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮರುದಿನ ಬೆಳಿಗ್ಗೆ ಹಣವನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ನಟ ಡಿಜಿಪಿಗೆ ದೂರು ನೀಡಿದ್ದು, ಎಸ್‌ಐಟಿ ಆ ದೂರನ್ನು ಗಣನೆಗೆ ತೆಗೆದುಕೊಂಡಿದೆ.</p>
]]></content:encoded>
					
		
		
			</item>
		<item>
		<title>ಧ್ರುವ್‌ ರಾಠಿ ವಿಡಿಯೋ ಹಂಚಿಕೆ: ಸುಳ್ಳು ಬಿಂಬಿಸುವ ವಿಡಿಯೋ ಎಂದು ಕೇಸ್‌ ದಾಖಲಿಸಿದ ಪೊಲೀಸರು</title>
		<link>https://peepalmedia.com/dhruv-rathi-video-sharing-the-police-registered-a-case-as-a-fake-video/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 30 May 2024 07:34:34 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[court]]></category>
		<category><![CDATA[druva rathi]]></category>
		<category><![CDATA[fir]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[police]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=40099</guid>

					<description><![CDATA[ಮುಂಬೈ: ಖ್ಯಾತ ಯುಟ್ಯೂಬರ್‌ ದ್ರುವ್‌ ರಾಠಿಯವರು ಮೋದಿ ಬಗ್ಗೆ ತಯಾರಿಸಿದ್ದ ವಿಡಿಯೋ ಒಂದನ್ನು ವಾಟ್ಸಪ್‌ ಗುಂಪಿನಲ್ಲಿ ಹಂಚಿಕೊಂಡ ಯುವ ವಕೀಲನ ಮೇಲೆ ಮಹಾರಾಷ್ಟ್ರದ ವಸಾಯಿ ಪೊಲೀಸರು ಸ್ವಯಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಲಿಬರೇಶನ್‌ನ ಮಹಾರಾಷ್ಟ್ರ ಕಾರ್ಯದರ್ಶಿಯೂ ಆಗಿರುವ ವಕೀಲ ಆದೇಶ್ ಬನ್ಸೋಡೆ ‘ಮೈಂಡ್ ಆಫ್ ಎ ಡಿಕ್ಟೇಟರ್’ ಎಂಬ ಶೀರ್ಷಿಕೆಯ ಧ್ರುವ್‌ ರಾಥಿ ಅವರ ವೀಡಿಯೊ ಲಿಂಕ್‌ನ್ನು ವಸಾಯಿಯ ಬಾರ್ ಅಸೋಸಿಯೇಷನ್ ವಾಟ್ಸಾಪ್‌ ಗ್ರೂಪ್‌ಗೆ ಮೇ.20 ರಂದು ಹಂಚಿಕೊಂಡಿದ್ದರು. ದಯವಿಟ್ಟು ​​ಮತದಾನ ಮಾಡುವ [&#8230;]]]></description>
										<content:encoded><![CDATA[
<p><strong> ಮುಂಬೈ:</strong> ಖ್ಯಾತ ಯುಟ್ಯೂಬರ್‌ ದ್ರುವ್‌ ರಾಠಿಯವರು ಮೋದಿ ಬಗ್ಗೆ ತಯಾರಿಸಿದ್ದ ವಿಡಿಯೋ ಒಂದನ್ನು ವಾಟ್ಸಪ್‌ ಗುಂಪಿನಲ್ಲಿ ಹಂಚಿಕೊಂಡ ಯುವ ವಕೀಲನ ಮೇಲೆ ಮಹಾರಾಷ್ಟ್ರದ ವಸಾಯಿ ಪೊಲೀಸರು ಸ್ವಯಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. </p>



<p>ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಲಿಬರೇಶನ್‌ನ ಮಹಾರಾಷ್ಟ್ರ ಕಾರ್ಯದರ್ಶಿಯೂ ಆಗಿರುವ ವಕೀಲ ಆದೇಶ್ ಬನ್ಸೋಡೆ ‘ಮೈಂಡ್ ಆಫ್ ಎ ಡಿಕ್ಟೇಟರ್’ ಎಂಬ ಶೀರ್ಷಿಕೆಯ ಧ್ರುವ್‌ ರಾಥಿ ಅವರ ವೀಡಿಯೊ ಲಿಂಕ್‌ನ್ನು ವಸಾಯಿಯ ಬಾರ್ ಅಸೋಸಿಯೇಷನ್ ವಾಟ್ಸಾಪ್‌ ಗ್ರೂಪ್‌ಗೆ ಮೇ.20 ರಂದು ಹಂಚಿಕೊಂಡಿದ್ದರು. ದಯವಿಟ್ಟು ​​ಮತದಾನ ಮಾಡುವ ಮೊದಲು ವೀಡಿಯೊವನ್ನು ಸರಿಯಾಗಿ ವೀಕ್ಷಿಸಿ ನಿರ್ಧಾರ ತೆಗೆದುಕೊಳ್ಳಿ ಎಂಬ ಸಂದೇಶದೊಂದಿಗೆ ವಿಡಿಯೋವನ್ನು ಶೇರ್‌ ಮಾಡಿದ್ದರು. ಮೇ 20ರಂದು ಐದನೇ ಹಂತದ ಲೋಕಸಭೆ ಚುನಾವಣೆ ವೇಳೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದರಿಂದ ಗುಂಪಿನಲ್ಲಿದ್ದ ಮತ್ತೋರ್ವ ವಕೀಲರು ಪೊಲೀಸರಿಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ. </p>



<p>ಶೇರ್ ಮಾಡಿರುವ ವಿಡಿಯೋ ಮತ್ತು ಅದರ ಸಂದೇಶವು ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಕುರಿತು ಸುಳ್ಳು ಬಿಂಬಿಸುತ್ತದೆ. ಈ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಎಂಬಿವಿವಿ ಪೊಲೀಸ್ ಕಮಿಷನರ್ ಮಧುಕರ್ ಪಾಂಡೆ ತಮ್ಮ ಕಮಿಷನರೇಟ್‌ಗೆ ಮೇ 18 ಮತ್ತು ಮೇ 20ರ ನಡುವೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆ ಇಂಥ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಕುರಿತು ನಿಷೇಧಾಜ್ಞೆ ಹೊರಡಿಸಿದ್ದರು. ವಿಡಿಯೋ ಹಂಚಿಕೆಯು ಕಮಿಷನರ್‌ ಅವರ ಆದೇಶದ ಉಲ್ಲಂಘನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.</p>



<p><strong>ಈ FIR ಕಾನೂನು ಬಾಹೀರ</strong></p>



<p> ನಿರ್ದಿಷ್ಟ ವೀಡಿಯೋವನ್ನು ಕೋಟ್ಯಂತರ ಜನರು ವೀಕ್ಷಿಸಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ, ಅವರೆಲ್ಲರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದೇ? ಸಿಆರ್‌ಪಿಸಿ ಸೆಕ್ಷನ್ 195ರ ಪ್ರಕಾರ, ಐಪಿಸಿಯ ಸೆಕ್ಷನ್ 188ರಡಿಯಲ್ಲಿ ಎಫ್‌ಐಆರ್ ದಾಖಲಿಸುವ ಮೊದಲು ಪೊಲೀಸರು ಸಂಬಂಧಪಟ್ಟ ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಅನುಮತಿ ಪಡೆದಿಲ್ಲ. ಈ ಎಫ್‌ಐಆರ್ ಕಾನೂನುಬಾಹಿರ, ಇದು ಜನರ ಧ್ವನಿಯನ್ನು ಹತ್ತಿಕ್ಕುವ ರಾಜ್ಯದ ನಡೆಯ ಭಾಗ ಎಂದು ಆರೋಪಿಸಿದ್ದಾರೆ. </p>
]]></content:encoded>
					
		
		
			</item>
		<item>
		<title>ಭಾರತದಲ್ಲಿ ಹೆಚ್ಚಿದ ಮಹಿಳಾ ದೌರ್ಜನ್ಯ: ಅಪರಾಧದಲ್ಲಿ ಉತ್ತರಪ್ರದೇಶವೇ ಟಾಪ್!‌  NCRB ವರದಿ ಬಹಿರಂಗ</title>
		<link>https://peepalmedia.com/increase-in-crimes-against-women-ncrb/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 05 Dec 2023 07:37:23 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ದೇಶ]]></category>
		<category><![CDATA[amit shah]]></category>
		<category><![CDATA[Bangalore]]></category>
		<category><![CDATA[breaking news]]></category>
		<category><![CDATA[children]]></category>
		<category><![CDATA[crime]]></category>
		<category><![CDATA[fir]]></category>
		<category><![CDATA[home minister]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[National Crime Records Bureau]]></category>
		<category><![CDATA[NCRB]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[women]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33396</guid>

					<description><![CDATA[ಬೆಂಗಳೂರು: 2021 ಕ್ಕೆ ಹೋಲಿಸಿದರೆ ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು 2022 ರಲ್ಲಿ ಶೇ.4 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 4,45,256 ಪ್ರಕರಣಗಳು ದಾಖಲಾಗಿದ್ದವು ಎಂದು 3 ಡಿಸೆಂಬರ್, ಭಾನುವಾರ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau &#8211; NCRB) ನ 2022 ರ ವರದಿ ಬಹಿರಂಗಪಡಿಸಿದೆ. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಣೆಯಾದ ದಿನವೇ ಎನ್‌ಸಿಆರ್‌ಬಿ ವಾರ್ಷಿಕ ವರದಿ ಬಿಡುಗಡೆಗೊಂಡಿದ್ದು, ಮಕ್ಕಳು, ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ) [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> 2021 ಕ್ಕೆ ಹೋಲಿಸಿದರೆ ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು 2022 ರಲ್ಲಿ ಶೇ.4 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 4,45,256 ಪ್ರಕರಣಗಳು ದಾಖಲಾಗಿದ್ದವು ಎಂದು 3 ಡಿಸೆಂಬರ್, ಭಾನುವಾರ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau &#8211; NCRB) ನ 2022 ರ ವರದಿ ಬಹಿರಂಗಪಡಿಸಿದೆ.</p>



<p>ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಣೆಯಾದ ದಿನವೇ ಎನ್‌ಸಿಆರ್‌ಬಿ ವಾರ್ಷಿಕ ವರದಿ ಬಿಡುಗಡೆಗೊಂಡಿದ್ದು, ಮಕ್ಕಳು, ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ಸೈಬರ್ ಅಪರಾಧಗಳ ವಿರುದ್ಧ ವರದಿಯಾದ ಅಪರಾಧಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ.</p>



<p>2022 ರಲ್ಲಿ ಪ್ರತಿದಿನ ಸರಾಸರಿ ಮೂರು ಅತ್ಯಾಚಾರ ಪ್ರಕರಣಗಳು ವರದಿಯಾಗುವುದರೊಂದಿಗೆ ದೆಹಲಿಯು ಭಾರತದಲ್ಲಿಯೇ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಮೆಟ್ರೋಪಾಲಿಟನ್ ನಗರವಾಗಿ ಬದಲಾಗಿದೆ ಮತ್ತು ಮಹಿಳೆಯ ಮೇಲಿನ ದೌರ್ಜನ್ಯದಲ್ಲಿ ಉತ್ತರ ಪ್ರದೇಶ ಪ್ರಥಮ ಸ್ಥಾನದಲ್ಲಿದೆ &nbsp;ಎಂದು ಎನ್‌ಸಿಆರ್‌ಬಿ ಡೇಟಾ ತೋರಿಸಿದೆ.</p>



<p>ಎನ್‌ಸಿಆರ್‌ಬಿ ವರದಿಯು ಮಹಿಳೆಯರ ವಿರುದ್ಧದ ಅಪರಾಧದ ಪ್ರಮಾಣವು (1 ಲಕ್ಷ ಜನಸಂಖ್ಯೆಗೆ ಘಟನೆಗಳ ಸಂಖ್ಯೆ) 2021 ರಲ್ಲಿ ಶೇ.64.5 ದಿಂದ 2022 ರಲ್ಲಿ ಶೇ.66 ಕ್ಕೆ ಏರಿಕೆಯಾಗಿದೆ ಎಂದು ತೋರಿಸಿದೆ.</p>



<p>2022 ರಲ್ಲಿ 19 ಮಹಾನಗರಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಒಟ್ಟು 48,755 ಪ್ರಕರಣಗಳು ದಾಖಲಾಗಿವೆ, ಇದು 2021 ಕ್ಕಿಂತ 12.3% ಹೆಚ್ಚಳವಾಗಿದೆ ( ಹಿಂದಿನ ವರ್ಷ43,414 ಪ್ರಕರಣಗಳು).</p>



<p>ಈ ಮಹಿಳಾ ದೌರ್ಜನ್ಯದ ಪ್ರಕರಣಗಳಲ್ಲಿ,</p>



<ul class="wp-block-list">
<li>ಪತಿ ಅಥವಾ ಅವನ ಮನೆಯವರಿಂದ ಕ್ರೌರ್ಯ: 31.4%</li>



<li>ಮಹಿಳೆಯರ ಅಪಹರಣ: 19.2%</li>



<li>ಮಹಿಳೆಯರ ಮೇಲಿನ ಹಲ್ಲೆ: 18.7%</li>



<li>ಅತ್ಯಾಚಾರ: 7.1%</li>
</ul>



<p style="font-size:20px"><strong>ರಾಜ್ಯಗಳ ಕಥೆ ಏನು?</strong></p>



<p>2022 ರಲ್ಲಿ 65,743 ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಕರಣಗಳನ್ನು ದಾಖಲಿಸಿರುವ ಉತ್ತರ ಪ್ರದೇಶ ಮಹಿಳಾ ದೌರ್ಜನ್ಯದಲ್ಲಿ ಅಗ್ರಸ್ಥಾನದಲ್ಲಿದೆ. ಇದರ ನಂತರ ಮಹಾರಾಷ್ಟ್ರ (45,331) ಮತ್ತು ರಾಜಸ್ಥಾನ (45,058) ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿವೆ.</p>



<p style="font-size:20px"><strong>ಮೆಟ್ರೋಪಾಲಿಟನ್ ಸಿಟಿಗಳ ಕಥೆ ಏನು?</strong></p>



<p>ದೆಹಲಿ, ಈ ಹಿಂದೆ ಹೇಳಿದಂತೆ ಸತತ ಮೂರನೇ ವರ್ಷಕ್ಕೆ 14,158 ಮಹಿಳೆಯರ ವಿರುದ್ಧದ ಅತಿ ಹೆಚ್ಚು ಅಪರಾಧಗಳು ದಾಖಲಾಗಿ ಮಹಿಳೆಯರಿಗೆ ಅಸುರಕ್ಷಿತವಾದ ನಗರವಾಗಿ ಉಳಿದುಕೊಂಡಿದೆ ಮತ್ತು 1,00,000 ಮಹಿಳೆಯರಿಗೆ ಸುಮಾರು 186.9 ಅಪರಾಧಗಳು ವರದಿಯಾಗಿವೆ.</p>



<p>ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಕರಣಗಳು ಒಟ್ಟು ಅಪರಾಧಗಳಲ್ಲಿ ಶೇ.31.20 ರಷ್ಟಿದೆ. ʼಮಹಿಳಾ ಘನತೆಗೆ ದಕ್ಕೆ ತರಲು ನಡೆಸಿದ ದೌರ್ಜನ್ಯ’ ಮತ್ತು ‘ಮಹಿಳೆಯರ ಅಪಹರಣʼ ವಿಭಾಗಗಳಲ್ಲಿ ದೆಹಲಿಯ 19 ಮಹಾನಗರಗಳಲ್ಲಿ ಅಗ್ರಸ್ಥಾನದಲ್ಲಿದೆ.</p>



<p>ಇದರ ಜೊತೆಗೆ, ಮುಂಬೈನಲ್ಲಿ 6,176 ಪ್ರಕರಣಗಳು ಮತ್ತು ಬೆಂಗಳೂರಿನಲ್ಲಿ 3,924 ಪ್ರಕರಣಗಳು ದಾಖಲಾಗಿವೆ.</p>



<p style="font-size:20px"><strong>ಅತ್ಯಾಚಾರ ಪ್ರಕರಣಳು:</strong></p>



<p>ಭಾರತದಲ್ಲಿ 2022 ರಲ್ಲಿ ಒಟ್ಟು 31,516 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ:</p>



<ul class="wp-block-list">
<li>ರಾಜಸ್ಥಾನದಲ್ಲಿ 5,399 ಪ್ರಕರಣಗಳು</li>



<li>ಉತ್ತರ ಪ್ರದೇಶದಲ್ಲಿ 3,690 ಪ್ರಕರಣಗಳು</li>



<li>ಮಧ್ಯಪ್ರದೇಶದಲ್ಲಿ 3,029 ಪ್ರಕರಣಗಳು</li>



<li>ಮಹಾರಾಷ್ಟ್ರದಲ್ಲಿ 2,904 ಪ್ರಕರಣಗಳು</li>



<li>ಹರಿಯಾಣದಲ್ಲಿ 1,787 ಪ್ರಕರಣಗಳು</li>
</ul>



<p>ʼಅತ್ಯಾಚಾರ/ಗ್ಯಾಂಗ್‌ ರೇಪ್‌ ಹಾಗೂ ಕೊಲೆ’ವಿಭಾಗದಲ್ಲಿ ಅಡಿಯಲ್ಲಿ 62 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಉತ್ತರ ಪ್ರದೇಶ ಮತ್ತೆ ಪ್ರಥಮ ಸ್ಥಾನ ಪಡೆದಿದೆ. 41 ಪ್ರಕರಣಗಳನ್ನು ದಾಖಲಾಗಿರುವ ಮಧ್ಯಪ್ರದೇಶ ನಂತರದ ಸ್ಥಾನದಲ್ಲಿದೆ.</p>



<p>ದೆಹಲಿಯಲ್ಲಿ ಕಳೆದ ವರ್ಷ 1,204 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ಜೈಪುರದಲ್ಲಿ 497 ಪ್ರಕರಣಗಳು ವರದಿಯಾಗಿವೆ ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳು ಬಹಿರಂಗಪಡಿಸಿವೆ.</p>



<p style="font-size:20px"><strong>ಮಕ್ಕಳ ಮೇಲಿನ ದೌರ್ಜನ್ಯ: ಮಹಾರಾಷ್ಟ್ರವೇ ಮೊದಲು!</strong></p>



<p>2022 ರಲ್ಲಿ ಮಕ್ಕಳ ವಿರುದ್ಧದ ಅಪರಾಧಗಳ ಒಟ್ಟು 1,62,449 ಪ್ರಕರಣಗಳು ದಾಖಲಾಗಿವೆ, ಇದು 2021 ಕ್ಕಿಂತ ಶೇ.8.7 ಹೆಚ್ಚಳವಾಗಿದೆ (1,49,404 ಪ್ರಕರಣಗಳು).</p>



<p style="font-size:20px"><strong>ಮಕ್ಕಳ ಮೇಲಿನ ಪ್ರಮುಖ ದೌರ್ಜನ್ಯಗಳು:</strong></p>



<ul class="wp-block-list">
<li>ಅಪಹರಣ &#8211; 45.7%</li>



<li>ಮಕ್ಕಳ ಮೇಲಿನ ಅತ್ಯಾಚಾರ ಸೇರಿದಂತೆ,ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ – ಪೋಕ್ಸೋ- 2012 ಪ್ರಕರಣಗಳು -39.7%</li>
</ul>



<p>2022 ರಲ್ಲಿ ಮಹಾರಾಷ್ಟ್ರದಲ್ಲಿ ಮಕ್ಕಳ ವಿರುದ್ಧ ಅತಿ ಹೆಚ್ಚು ಅಪರಾಧಗಳ 20,762 ಪ್ರಕರಣಗಳು ದಾಖಲಾಗಿದ್ದು ಅಗ್ರಸ್ಥಾನದಲ್ಲಿದೆ, ಇದರ ನಂತರ ಮಧ್ಯಪ್ರದೇಶ (20,415) ಮತ್ತು ಉತ್ತರ ಪ್ರದೇಶ (18,682) ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದಿವೆ. ಉತ್ತರ ಪ್ರದೇಶದಲ್ಲಿ ಪೋಕ್ಸೊ ಕಾಯ್ದೆಯಡಿ 7,955 ಪ್ರಕರಣಗಳು ವರದಿಯಾಗಿವೆ.</p>



<p>ದೆಹಲಿಯಲ್ಲಿ 2022 ರಲ್ಲಿ 1,529 ಪೋಕ್ಸೊ ಪ್ರಕರಣಗಳು ವರದಿಯಾಗಿವೆ. ಮುಂಬೈ ಮಹಾನಗರಗಳಲ್ಲಿ 1,195 ಪ್ರಕರಣಗಳನ್ನು ದಾಖಲಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ.</p>



<p style="font-size:20px"><strong>ಬಾಲಾಪರಾಧಿಗಳ ವಿರುದ್ಧದ ಪ್ರಕರಣಗಳು:</strong></p>



<p>2022 ರಲ್ಲಿ ಬಾಲಾಪರಾಧಿಗಳ ವಿರುದ್ಧ ಒಟ್ಟು 30,555 ಪ್ರಕರಣಗಳನ್ನು ದಾಖಲಿಸಲಾಗಿದೆ, ಇದು 2021 ಕ್ಕಿಂತ 2.0% ರಷ್ಟು ಇಳಿಕೆಯಾಗಿದೆ (31,170 ಪ್ರಕರಣಗಳು).</p>



<p style="font-size:20px"><strong>ಕೊಲೆ ಪ್ರಕರಣಗಳು:</strong></p>



<p>2022 ರಲ್ಲಿ, 2022 ರಲ್ಲಿ ಒಟ್ಟು 28,522 ಎಫ್‌ಐಆರ್‌ಗಳು ದಾಖಲಾಗಿವೆ. ಪ್ರತಿ ದಿನ ಸರಾಸರಿ 78 ಹತ್ಯೆಗಳು ಅಥವಾ ಪ್ರತಿ ಗಂಟೆಗೆ ಮೂರಕ್ಕಿಂತ ಹೆಚ್ಚು ಪ್ರಕರಣಗಳು ಭಾರತದಾದ್ಯಂತ ವರದಿಯಾಗಿವೆ. ಎನ್‌ಸಿಆರ್‌ಬಿ ಡೇಟಾ ಪ್ರಕಾರ 2020 ರಲ್ಲಿ 29,193 ರಿಂದ 2021 ರಲ್ಲಿ 29,272ಕ್ಕೆ  ಕಡಿಮೆಯಾಗಿದೆ.</p>



<p style="font-size:20px"><strong>ಪ್ರಕರಣಗಳ ಪ್ರಮುಖ ಉದ್ದೇಶಗಳು &#8211; ಮೋಟಿವ್ ಯಾವುವು?</strong></p>



<p>2022 ರಲ್ಲಿ ಅತಿ ಹೆಚ್ಚು ಕೊಲೆ ಪ್ರಕರಣಗಳಿಗೆ, 9,962 ಪ್ರಕರಣಗಳಿಗೆ ವಿವಾದ-ಡಿಸ್ಪ್ಯೂಟ್‌ ಕಾರಣವಾಗಿವೆ ವೈಯಕ್ತಿಕ ದ್ವೇಷ ಅಥವಾ ದ್ವೇಷದ (<strong>Personal vendetta or enmity)</strong> ಅಡಿಯಲ್ಲಿ 3,761 ಪ್ರಕರಣಗಳು ವರದಿಯಾಗಿವೆ 1,884 ಪ್ರಕರಣಗಳಲ್ಲಿ ʼಗಳಿಕೆ &#8211; <strong>Gain</strong> &#8216; ಮೂರನೇ ಅತಿ ದೊಡ್ಡ ಉದ್ದೇಶವಾಗಿದೆ.</p>



<p>ಎನ್‌ಸಿಆರ್‌ಬಿ ಪ್ರಕಾರ, ಕೊಲೆಗೆ ಬಲಿಯಾದವರಲ್ಲಿ 8,125 ಮಹಿಳೆಯರು ಮತ್ತು ಒಂಬತ್ತು &#8220;ತೃತೀಯ ಲಿಂಗಿಗಳು&#8221;, ಶೇ.70 ಪುರುಷರು ಇದ್ದಾರೆ.</p>



<p style="font-size:20px"><strong>ಎಸ್‌ಸಿ/ಎಸ್‌ಟಿಗಳ ವಿರುದ್ಧದ ಅಪರಾಧಗಳು:</strong></p>



<p>ಒಟ್ಟು 57,582 ಎಸ್‌ಸಿಗಳ ವಿರುದ್ಧ ಅಪರಾಧಗಳ ಪ್ರಕರಣಗಳು ದಾಖಲಾಗಿವೆ, ಇದು 2021 (50,900 ಪ್ರಕರಣಗಳು) ಗಿಂತ ಶೇ.13.1 ಹೆಚ್ಚಳವಾಗಿದೆ. ಮಧ್ಯೆ, ಪರಿಶಿಷ್ಟ ಪಂಗಡಗಳ (ಎಸ್‌ಟಿ) ವಿರುದ್ಧ ಅಪರಾಧದಲ್ಲಿ 10,064 ಪ್ರಕರಣಗಳನ್ನು ದಾಖಲಲಾಗಿದೆ, ಇದು 2021 (8,802 ಪ್ರಕರಣಗಳು) ಗಿಂತ ಶೇ.14.3 ಹೆಚ್ಚಳವಾಗಿದೆ.</p>
]]></content:encoded>
					
		
		
			</item>
		<item>
		<title>ಗಡಿ ವಿವಾದ: 12 ಮಂದಿ ಕರವೇ ಕಾರ್ಯಕರ್ತರ ವಿರುದ್ಧ ಎಫ್ಐಆರ್</title>
		<link>https://peepalmedia.com/border-dispute-fir-against-12-karaway-workers/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 07 Dec 2022 07:00:05 +0000</pubDate>
				<category><![CDATA[ಬೆಳಗಾವಿ]]></category>
		<category><![CDATA[ರಾಜ್ಯ]]></category>
		<category><![CDATA[BASAVARAJ BOMMAYI]]></category>
		<category><![CDATA[BELAGAVI]]></category>
		<category><![CDATA[belagavi police]]></category>
		<category><![CDATA[fir]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karave]]></category>
		<category><![CDATA[karnataka]]></category>
		<category><![CDATA[maharashtra cm]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=17796</guid>

					<description><![CDATA[ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಭುಗಿಲೆದ್ದಿದ್ದು, ಮಂಗಳವಾರ ಬೆಳಗಾವಿ ಬಳಿ ನೂರಾರು ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್ ವಿ) ಬೆಂಬಲಿಗರನ್ನು ಬಂಧಿಸಲಾಗಿದ್ದು, ಮಹಾರಾಷ್ಟ್ರ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಬೆಳಗಾವಿ ಪೊಲೀಸರು 12 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಕರ್ನಾಟಕದ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ನಿಯೋಗದ ಉದ್ದೇಶಿತ ಭೇಟಿಯನ್ನು ಮಂಗಳವಾರ ಮುಂದೂಡಿದ ನಂತರ ವಿವಾದ ಇನ್ನೂ ತಾರಕಕ್ಕೇರಿದ್ದು, ಏತನ್ಮಧ್ಯೆ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ [&#8230;]]]></description>
										<content:encoded><![CDATA[
<p><strong>ಬೆಳಗಾವಿ:</strong> ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಭುಗಿಲೆದ್ದಿದ್ದು, ಮಂಗಳವಾರ ಬೆಳಗಾವಿ ಬಳಿ ನೂರಾರು ಕರ್ನಾಟಕ ರಕ್ಷಣಾ ವೇದಿಕೆ (ಕೆಆರ್ ವಿ) ಬೆಂಬಲಿಗರನ್ನು ಬಂಧಿಸಲಾಗಿದ್ದು, ಮಹಾರಾಷ್ಟ್ರ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಬೆಳಗಾವಿ ಪೊಲೀಸರು 12 ಮಂದಿಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.</p>



<p>ಕರ್ನಾಟಕದ ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ನಿಯೋಗದ ಉದ್ದೇಶಿತ ಭೇಟಿಯನ್ನು ಮಂಗಳವಾರ ಮುಂದೂಡಿದ ನಂತರ ವಿವಾದ ಇನ್ನೂ ತಾರಕಕ್ಕೇರಿದ್ದು, ಏತನ್ಮಧ್ಯೆ, ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಂಎಸ್ಆರ್‌ಟಿಸಿ) ಪೊಲೀಸ್ ಸಲಹೆಯನ್ನು ಉಲ್ಲೇಖಿಸಿ ದಕ್ಷಿಣ ರಾಜ್ಯಕ್ಕೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಿದೆ.</p>



<p>ಬೆಳಗಾವಿ ಸಮೀಪದ ಹಿರೇಬಾಗವಾಡಿಯಲ್ಲಿ ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಹಾರಾಷ್ಟ್ರದ ಆರು ವಾಹನಗಳ ಮೇಲೆ ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಮಂಗಳವಾರ ರಾತ್ರಿ ದೂರವಾಣಿಯಲ್ಲಿ ಪರಸ್ಪರ ಮಾತನಾಡಿ, ಎರಡೂ ಕಡೆ ಶಾಂತಿ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದು ಒಪ್ಪಿಕೊಂಡಿದ್ದಾರೆ.</p>



<p>ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿ ಹಿಂಸಾಚಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಇದಕ್ಕೆ ಬೊಮ್ಮಾಯಿ ಅವರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಮಹಾರಾಷ್ಟ್ರದಿಂದ ಬರುವ ವಾಹನಗಳನ್ನು ರಕ್ಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.</p>
]]></content:encoded>
					
		
		
			</item>
		<item>
		<title>ಬಿಜೆಪಿ ನಾಯಕನಿಗೆ ಜೀವ ಬೆದರಿಕೆ: ಎಫ್ಐಆರ್ ದಾಖಲು</title>
		<link>https://peepalmedia.com/life-threat-to-bjp-leader-fir-filed/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 25 Nov 2022 06:08:16 +0000</pubDate>
				<category><![CDATA[ತುಮಕೂರು]]></category>
		<category><![CDATA[ರಾಜ್ಯ]]></category>
		<category><![CDATA[BJP leader Suresh Gowda]]></category>
		<category><![CDATA[fir]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Kyatsandra Police Station]]></category>
		<category><![CDATA[MLA Gaurishankar]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[tumakuru]]></category>
		<guid isPermaLink="false">https://peepalmedia.com/?p=16462</guid>

					<description><![CDATA[ತುಮಕೂರು: ಬಿಜೆಪಿ ಮುಖಂಡ ಸುರೇಶ್ ಗೌಡ ಅವರ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ತುಮಕೂರು ಗ್ರಾಮಾಂತರದ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಗುರುವಾರ ಪೊಲೀಸರು ಹಲವಾರು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಕುರಿತು ಸುರೇಶ್ ಗೌಡರವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂವರು ವ್ಯಕ್ತಿಗಳು ತನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದೂರಿನಲ್ಲಿ ʼನನ್ನ ಜೀವಕ್ಕೆ ಅಪಾಯವಿದೆ ಮತ್ತು ತನ್ನ ಜೀವ ಕಾಪಾಡಿಕೊಳ್ಳುವ ಉದ್ದೇಶದಿಂದ ಈಗಾಗಲೇ 5 ಕೋಟಿ ರೂ.ಗಳನ್ನು ನೀಡಲಾಗಿದೆʼ.ʼನಾನು ಕಾರಿನಲ್ಲಿ ಸಂಚಾರಿಸುವಾಗ ಸಂಚಾರಕ್ಕೆ [&#8230;]]]></description>
										<content:encoded><![CDATA[
<p><strong>ತುಮಕೂರು:</strong> ಬಿಜೆಪಿ ಮುಖಂಡ ಸುರೇಶ್ ಗೌಡ ಅವರ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ತುಮಕೂರು ಗ್ರಾಮಾಂತರದ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಗುರುವಾರ ಪೊಲೀಸರು ಹಲವಾರು ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" src="https://peepalmedia.com/wp-content/uploads/2022/11/suresh-gowda-1.jpg" alt="" class="wp-image-16468" width="369" height="278" srcset="https://peepalmedia.com/wp-content/uploads/2022/11/suresh-gowda-1.jpg 596w, https://peepalmedia.com/wp-content/uploads/2022/11/suresh-gowda-1-300x226.jpg 300w, https://peepalmedia.com/wp-content/uploads/2022/11/suresh-gowda-1-150x113.jpg 150w" sizes="(max-width: 369px) 100vw, 369px" /><figcaption class="wp-element-caption"><strong>ಬಿಜೆಪಿ ಮುಖಂಡ ಸುರೇಶ್ ಗೌಡ</strong></figcaption></figure></div>


<p>ಈ ಕುರಿತು ಸುರೇಶ್ ಗೌಡರವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮೂವರು ವ್ಯಕ್ತಿಗಳು ತನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದ್ದಾರೆ.</p>



<p>ದೂರಿನಲ್ಲಿ ʼನನ್ನ ಜೀವಕ್ಕೆ ಅಪಾಯವಿದೆ ಮತ್ತು ತನ್ನ ಜೀವ ಕಾಪಾಡಿಕೊಳ್ಳುವ ಉದ್ದೇಶದಿಂದ ಈಗಾಗಲೇ 5 ಕೋಟಿ ರೂ.ಗಳನ್ನು ನೀಡಲಾಗಿದೆʼ.ʼನಾನು ಕಾರಿನಲ್ಲಿ ಸಂಚಾರಿಸುವಾಗ ಸಂಚಾರಕ್ಕೆ ಅಡ್ಡಿಪಡಿಸುವುದು ಅಥವಾ ಬೇರೆ ವಾಹನದಿಂದ ಅಪಘಾತಗೊಳಿಸಿ. ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾರೆʼ ಎಂದು ಸುರೇಶ್ ಗೌಡರವರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.</p>



<p>ಈ ಹಿನ್ನಲೆಯಲ್ಲಿ ಶಾಸಕ ಗೌರಿಶಂಕರ್ ಮತ್ತು ಅವರ ಬೆಂಬಲಿಗರಾದ ಹಿರೇಹಳ್ಳಿ ಮಹೇಶ್ ಮತ್ತು ಬೊಮ್ಮನಹಳ್ಳಿ ಬಾಬು ಅಲಿಯಾಸ್ ಅಟ್ಟಿಕಾ ಬಾಬು ಮತ್ತು ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರು ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿಯ ಶಿಕ್ಷೆ), 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ), ಹಾಗೂ ಸೆಕ್ಷನ್‌109 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.</p>



<p>ಪೊಲೀಸರ ಮಾಹಿತಿ ಪ್ರಕಾರ, ತುಮಕೂರಿನ ಪ್ರಥಮ ದರ್ಜೆ ನ್ಯಾಯಾಧೀಶರ (ಜೆಎಂಎಫ್ ಸಿ) ನ್ಯಾಯಾಲಯದ ಅನುಮತಿ ಮೇರೆಗೆ ಮಾಜಿ ಶಾಸಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಕುರಿತು ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಗರ್ಭಿಣಿ ನಾಯಿಯನ್ನು ಥಳಿಸಿ ಕೊಂದ ವಿದ್ಯಾರ್ಥಿಗಳು: ಎಫ್‌ಐಆರ್‌ ದಾಖಲು</title>
		<link>https://peepalmedia.com/students-beat-pregnant-dog-to-death-fir-registered/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 22 Nov 2022 04:12:20 +0000</pubDate>
				<category><![CDATA[ದೇಶ]]></category>
		<category><![CDATA[fir]]></category>
		<category><![CDATA[india]]></category>
		<category><![CDATA[New Delhi]]></category>
		<category><![CDATA[New Friends Colony]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pregnant dog]]></category>
		<guid isPermaLink="false">https://peepalmedia.com/?p=16144</guid>

					<description><![CDATA[ಹೊಸದಿಲ್ಲಿ: ನ್ಯೂ ಫ್ರೆಂಡ್ಸ್ ಕಾಲೋನಿ ಪ್ರದೇಶದಲ್ಲಿ ಗರ್ಭಿಣಿ ನಾಯಿಯನ್ನು ಹೊಡೆದು ಕೊಂದಿದ್ದಕ್ಕಾಗಿ ಡಾನ್ ಬಾಸ್ಕೋ ಟೆಕ್ನಿಕಲ್ ಇನ್ಸ್ಟಿಟ್ಯೂಟ್ನ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳು ರಸ್ತೆಯಲ್ಲಿ ಹೋಗುವಾಗ ಗರ್ಭಿಣಿ ನಾಯಿಯು ಬೊಗಳಲು ಶುರುಮಾಡಿದೆ. ಈ ಕಾರಣ ಆಕ್ರೋಶಕ್ಕೋಳಗಾದ ಅವರು ನಾಯಿಯನ್ನು ಥಳಿಸಿದ್ದಾರೆ. ಅದು ಸತ್ತ ನಂತರ ಅದರ ಶವವನ್ನು ಎಳೆದೊಯ್ಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ. ಈ ಕಾರಣ ವಿದ್ಯಾರ್ಥಿಗಳ ಮೇಲೆ ದೂರು ದಾಖಲಾಗಿದ್ದು, ದೂರಿನ ಆಧಾರದ ಮೇಲೆ, ದೆಹಲಿಯ [&#8230;]]]></description>
										<content:encoded><![CDATA[
<p><strong>ಹೊಸದಿಲ್ಲಿ:</strong> ನ್ಯೂ ಫ್ರೆಂಡ್ಸ್ ಕಾಲೋನಿ ಪ್ರದೇಶದಲ್ಲಿ ಗರ್ಭಿಣಿ ನಾಯಿಯನ್ನು ಹೊಡೆದು ಕೊಂದಿದ್ದಕ್ಕಾಗಿ ಡಾನ್ ಬಾಸ್ಕೋ ಟೆಕ್ನಿಕಲ್ ಇನ್ಸ್ಟಿಟ್ಯೂಟ್ನ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.</p>



<p>ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳು ರಸ್ತೆಯಲ್ಲಿ ಹೋಗುವಾಗ ಗರ್ಭಿಣಿ ನಾಯಿಯು ಬೊಗಳಲು ಶುರುಮಾಡಿದೆ. ಈ ಕಾರಣ ಆಕ್ರೋಶಕ್ಕೋಳಗಾದ ಅವರು ನಾಯಿಯನ್ನು ಥಳಿಸಿದ್ದಾರೆ. ಅದು ಸತ್ತ ನಂತರ ಅದರ ಶವವನ್ನು ಎಳೆದೊಯ್ಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.</p>


<div class="wp-block-image">
<figure class="aligncenter size-full"><img decoding="async" width="400" height="225" src="https://peepalmedia.com/wp-content/uploads/2022/11/dog-killing.webp" alt="" class="wp-image-16147" srcset="https://peepalmedia.com/wp-content/uploads/2022/11/dog-killing.webp 400w, https://peepalmedia.com/wp-content/uploads/2022/11/dog-killing-300x169.webp 300w, https://peepalmedia.com/wp-content/uploads/2022/11/dog-killing-150x84.webp 150w" sizes="(max-width: 400px) 100vw, 400px" /><figcaption class="wp-element-caption"><strong>ಗರ್ಭಿಣಿ ನಾಯಯಿಯನ್ನು ಕೊಂದು ಎಳೆದೊಳ್ಳುತ್ತಿರುವ ದೃಶ್ಯ</strong></figcaption></figure></div>


<p>ಈ ಕಾರಣ ವಿದ್ಯಾರ್ಥಿಗಳ ಮೇಲೆ ದೂರು ದಾಖಲಾಗಿದ್ದು, ದೂರಿನ ಆಧಾರದ ಮೇಲೆ, ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 429 ಮತ್ತು 34 ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ರ 11 (1) ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p>
]]></content:encoded>
					
		
		
			</item>
		<item>
		<title>ಕೆಜಿಎಫ್‌ ಹಾಡುಗಳ ಬಳಕೆ: ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್</title>
		<link>https://peepalmedia.com/kgf-hadugala-balake-rahul-gandhi-virudda-fir/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 04 Nov 2022 11:29:42 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[bengalure]]></category>
		<category><![CDATA[fir]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kgf]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=14193</guid>

					<description><![CDATA[ಬೆಂಗಳೂರು: ಕೆಜಿಎಫ್‌ ಚಲನಚಿತ್ರದ ಹಿಂದಿ ಅವತರಿಣಿಕೆಯ ಹಾಡುಗಳನ್ನು ಭಾರತ್‌ ಜೋಡೋ ಪ್ರಚಾರದಲ್ಲಿ ಬಳಸಿಕೊಂಡಿರುವುದಕ್ಕಾಗಿ ಎಂ.ಆರ್.ಟಿ. ಮ್ಯೂಸಿಕ್‌ ಸಂಸ್ಥೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹಾಗು ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್ ವಿರುದ್ಧ ದೂರು ದಾಖಲಿಸಿದೆ. ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೆಜಿಎಫ್‌ ಚಿತ್ರದ ಹಾಡುಗಳ ಹಕ್ಕುಗಳು ನಮಗೆ ಸೇರಿದ್ದು, ಕಾನೂನು ಬಾಹಿರವಾಗಿ ಅವುಗಳನ್ನು ಭಾರತ್‌ ಜೋಡೋ ಯಾತ್ರೆಯ ಪ್ರಚಾರಕ್ಕೆ ಬಳಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ದೂರಿನ ಹಿನ್ನೆಲೆಯಲ್ಲಿ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ಕೆಜಿಎಫ್‌ ಚಲನಚಿತ್ರದ ಹಿಂದಿ ಅವತರಿಣಿಕೆಯ ಹಾಡುಗಳನ್ನು ಭಾರತ್‌ ಜೋಡೋ ಪ್ರಚಾರದಲ್ಲಿ ಬಳಸಿಕೊಂಡಿರುವುದಕ್ಕಾಗಿ ಎಂ.ಆರ್.ಟಿ. ಮ್ಯೂಸಿಕ್‌ ಸಂಸ್ಥೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹಾಗು ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್ ವಿರುದ್ಧ ದೂರು ದಾಖಲಿಸಿದೆ.</p>



<p>ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೆಜಿಎಫ್‌ ಚಿತ್ರದ ಹಾಡುಗಳ ಹಕ್ಕುಗಳು ನಮಗೆ ಸೇರಿದ್ದು, ಕಾನೂನು ಬಾಹಿರವಾಗಿ ಅವುಗಳನ್ನು ಭಾರತ್‌ ಜೋಡೋ ಯಾತ್ರೆಯ ಪ್ರಚಾರಕ್ಕೆ ಬಳಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.</p>



<p>ರಾಷ್ಟ್ರಮಟ್ಟದ ರಾಜಕೀಯ ಪಕ್ಷವು ಹಕ್ಕುಸ್ವಾಮ್ಯದ ಕಾನೂನುಗಳನ್ನು ಉಲ್ಲಂಘಿಸಿದ್ದು, ಇದು ಕಾನೂನು ಮತ್ತು ಸಂಸ್ಥೆಗಳ ಹಕ್ಕುಗಳ ಕುರಿತಾದ ಅದರ ನಿರ್ಲಕ್ಷ್ಯತನವನ್ನು ತೋರಿಸುತ್ತದೆ ಎಂದು ಸಂಸ್ಥೆ ದೂರಿದೆ.</p>



<p>ಇಂದು ಡಿಜಿಟಲ್ ಜಗತ್ತಿನಲ್ಲಿ ಹಕ್ಕುಸ್ವಾಮ್ಯ ಕಾಯಿದೆಯಿಂದ ರಕ್ಷಿಸಲ್ಪಟ್ಟ ನಮ್ಮ ಬೌದ್ಧಿಕ ಆಸ್ತಿಯನ್ನು ಕಾಂಗ್ರೆಸ್‌ ಪಕ್ಷವು ದುರುಪಯೋಗಪಡಿಸಿಕೊಂಡಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಪಕ್ಷವು ಪೋಸ್ಟ್ ಮಾಡಿದ ವೀಡಿಯೊಗಳನ್ನು ನೋಡಿದ್ದೇವೆ, ಅವುಗಳಲ್ಲಿ ನಮ್ಮ ಅನುಮತಿ/ಪರವಾನಗಿಯನ್ನು ಪಡೆಯದೆ ತಮ್ಮ ಸ್ವಂತ ರಾಜಕೀಯ ಕಾರ್ಯಸೂಚಿಯನ್ನು ಮುಂದುವರಿಸಲು ಮತ್ತು ಮಾರ್ಕೆಟಿಂಗ್ ಮತ್ತು ಪ್ರಚಾರಕ್ಕಾಗಿ ನಮ್ಮ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಈ ವೀಡಿಯೊಗಳನ್ನು ತಮ್ಮ ಅಧಿಕೃತ ಸಾಮಾಜಿಕ ಹ್ಯಾಂಡಲ್‌ಗಳಲ್ಲಿ INC ಯಿಂದ ಪ್ರಸಾರ / ಪೋಸ್ಟ್ ಮಾಡಲಾಗಿದೆ ಮತ್ತು ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಸಹ ಕಾಣಬಹುದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>



<p>ಭಾರತ ರಾಷ್ಟ್ರೀಯ ಕಾಂಗ್ರೆಸ್‌ನಂಥ ದೊಡ್ಡ ರಾಜಕೀಯ ಪಕ್ಷವು ಬೌದ್ಧಿಕ ಹಕ್ಕುಸ್ವಾಮ್ಯ ಕಾಯ್ದೆಯನ್ನು ಉಲ್ಲಂಘಿಸಿ, ಕೆಟ್ಟ ಮಾದರಿಯನ್ನು ಪ್ರದರ್ಶಿಸಿದೆ. ನಾವು ದೊಡ್ಡಮಟ್ಟದ ಹಣ ಹೂಡಿ ಕೆಜಿಎಫ್‌ ಚಿತ್ರಗಳ ಹಾಡುಗಳ ಹಕ್ಕನ್ನು ಪಡೆದಿದ್ದೇವೆ. ಹೀಗಿರುವಾಗ ನಮ್ಮ ಹಾಡುಗಳನ್ನು ಬಳಸಿಕೊಳ್ಳುವುದು ಕಾನೂನುಬಾಹಿರ ಎಂದು ಸಂಸ್ಥೆ ದೂರಿನಲ್ಲಿ ತಿಳಿಸಿದೆ.</p>



<p>ಕಾಂಗ್ರೆಸ್‌ ಪಕ್ಷದ ಈ ಕಾರ್ಯವು ಭಾರತೀಯ ನಾಗರಿಕರಿಗೆ ಸಂಪೂರ್ಣವಾಗಿ ತಪ್ಪು ಸಂಕೇತವನ್ನು ಕಳುಹಿಸುತ್ತದೆ ಮತ್ತು ನಮ್ಮ ಹಕ್ಕುಸ್ವಾಮ್ಯಗಳನ್ನು ರಕ್ಷಿಸುವ ಪ್ರಯತ್ನಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆ ಹೇಳಿದೆ.</p>
]]></content:encoded>
					
		
		
			</item>
		<item>
		<title>ಮಕ್ಕಳ ಕಳ್ಳ ಎಂದು ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಥಳಿತ: ಎಫ್‌ಐಆರ್‌ ದಾಖಲು</title>
		<link>https://peepalmedia.com/mentally-ill-person-beaten-up-as-child-thief-fir-registered/</link>
		
		<dc:creator><![CDATA[Peepal Media]]></dc:creator>
		<pubDate>Sat, 08 Oct 2022 04:48:44 +0000</pubDate>
				<category><![CDATA[ದೇಶ]]></category>
		<category><![CDATA[Chhattisgarh]]></category>
		<category><![CDATA[child abductor]]></category>
		<category><![CDATA[fir]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[Mentally ill perso]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=9294</guid>

					<description><![CDATA[ಛತ್ತೀಸ್‌ಗಢ: ಮಕ್ಕಳ ಅಪಹರಣಕಾರನೆಂದು ತಪ್ಪಾಗಿ ಭಾವಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಥಳಿಸಿದ ಘಟನೆ ಉತೈ ಪಿಎಸ್ ಪ್ರದೇಶದಲ್ಲಿ ನಡೆದಿದೆ. ಈ ಕುರಿತು ನಗರದ ಎಎಸ್ಪಿ ದುರ್ಗ ಅಭಿಷೇಕ್ ಪಲ್ಲವ ಅವರು ಮಾಹಿತಿ ನೀಡಿದ್ದು, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ನಗರದ ಬೀದಿ ಬೀದಿಗಳಲ್ಲಿ ತಿರುಗಾಡುತ್ತಿದ್ದು, ಇತ್ತೀಚಿನ ಗಾಳಿ ಸುದ್ದಿಯಂತೆ ಆತ ಮಕ್ಕಳ ಕಳ್ಳ ಎಂದು ಭಾವಿಸಿ ಅಪರಿಚತ ವ್ಯಕ್ತಿಗಳು ಆತನನ್ನು ಥಳಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪೊಲೀಸರು ಆತನನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ [&#8230;]]]></description>
										<content:encoded><![CDATA[
<p style="font-size:20px"><strong>ಛತ್ತೀಸ್‌ಗಢ:</strong> ಮಕ್ಕಳ ಅಪಹರಣಕಾರನೆಂದು ತಪ್ಪಾಗಿ ಭಾವಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರ ಮೇಲೆ ಗುಂಪೊಂದು ಥಳಿಸಿದ ಘಟನೆ ಉತೈ ಪಿಎಸ್ ಪ್ರದೇಶದಲ್ಲಿ ನಡೆದಿದೆ.</p>



<p style="font-size:20px">ಈ ಕುರಿತು ನಗರದ ಎಎಸ್ಪಿ ದುರ್ಗ ಅಭಿಷೇಕ್ ಪಲ್ಲವ ಅವರು ಮಾಹಿತಿ ನೀಡಿದ್ದು, ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬ ನಗರದ ಬೀದಿ ಬೀದಿಗಳಲ್ಲಿ ತಿರುಗಾಡುತ್ತಿದ್ದು, ಇತ್ತೀಚಿನ ಗಾಳಿ ಸುದ್ದಿಯಂತೆ ಆತ ಮಕ್ಕಳ ಕಳ್ಳ ಎಂದು ಭಾವಿಸಿ ಅಪರಿಚತ ವ್ಯಕ್ತಿಗಳು ಆತನನ್ನು ಥಳಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪೊಲೀಸರು ಆತನನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿಸಿದರು.</p>



<p style="font-size:20px">ಈ ಹಿನ್ನಲೆ ಅಪರಿಚಿತ ವ್ಯಕ್ತಿಗಳು ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಥಳಿಸಿರುವವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಹೀಗಾಗಿ ಅಪರಿಚಿತ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಯುತ್ತಿದ್ದು, ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಎಸ್ಪಿ ದುರ್ಗ ಅಭಿಷೇಕ್ ಪಲ್ಲವ ಅವರು ಹೇಳಿದರು.</p>
]]></content:encoded>
					
		
		
			</item>
		<item>
		<title>ಡಿಮಾನ್ಸ್ ನಲ್ಲಿ ಜಾತಿ ನಿಂದನೆ ಆರೋಪ : ಮೇಲಧಿಕಾರಿಗಳ ವಿರುದ್ಧ FIR ದಾಖಲು</title>
		<link>https://peepalmedia.com/allegation-of-caste-abuse-in-demons-fir-filed-against-superiors/</link>
		
		<dc:creator><![CDATA[Peepal Media]]></dc:creator>
		<pubDate>Wed, 05 Oct 2022 08:23:06 +0000</pubDate>
				<category><![CDATA[ಧಾರವಾಡ]]></category>
		<category><![CDATA[ರಾಜ್ಯ]]></category>
		<category><![CDATA[bengalure]]></category>
		<category><![CDATA[Dharavada]]></category>
		<category><![CDATA[Dimhans]]></category>
		<category><![CDATA[fir]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=8973</guid>

					<description><![CDATA[ಧಾರವಾಡದ ಡಿಮಾನ್ಸ್ ನಲ್ಲಿ ಕಳೆದ ಎರಡು ವರ್ಷಗಳಿಂದ ಜಾತಿಯ ಕಾರಣಕ್ಕಾಗಿ ಮತ್ತು ಔದ್ಯೋಗಿಕ ಉನ್ನತಿಯನ್ನು ಸಹಿಸದ ಹಿನ್ನೆಲೆಯಲ್ಲಿ ಪ್ರೊಫೆಸರ್ ಬಿ.ರಮೇಶ್ ಬಾಬು ಎಂಬುವವರು ಡಿಮಾನ್ಸ್ ನ ಹಿರಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರು. ಆ ದೂರಿನ ಅನ್ವಯ ಎಲ್ಲಾ ರೀತಿಯ ತನಿಖೆ ನಡೆದು ಹಿರಿಯ ಅಧಿಕಾರಿಗಳಾದ ಡಾ.ಮಹೇಶ್ ದೇಸಾಯಿ ಮತ್ತು ಡಾ.ರಾಘವೇಂದ್ರ ನಾಯಕ್ ಎಂಬುವವರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಘಟನೆಯ ವಿವರ: ಧಾರವಾಡದ ಡಿಮಾನ್ಸ್ ಆಸ್ಪತ್ರೆಯಲ್ಲಿ 2019ರ ಡಿಸೆಂಬರ್ [&#8230;]]]></description>
										<content:encoded><![CDATA[
<p style="font-size:20px">ಧಾರವಾಡದ ಡಿಮಾನ್ಸ್ ನಲ್ಲಿ ಕಳೆದ ಎರಡು ವರ್ಷಗಳಿಂದ ಜಾತಿಯ ಕಾರಣಕ್ಕಾಗಿ ಮತ್ತು ಔದ್ಯೋಗಿಕ ಉನ್ನತಿಯನ್ನು ಸಹಿಸದ ಹಿನ್ನೆಲೆಯಲ್ಲಿ ಪ್ರೊಫೆಸರ್ ಬಿ.ರಮೇಶ್ ಬಾಬು ಎಂಬುವವರು ಡಿಮಾನ್ಸ್ ನ ಹಿರಿಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರು. ಆ ದೂರಿನ ಅನ್ವಯ ಎಲ್ಲಾ ರೀತಿಯ ತನಿಖೆ ನಡೆದು ಹಿರಿಯ ಅಧಿಕಾರಿಗಳಾದ ಡಾ.ಮಹೇಶ್ ದೇಸಾಯಿ ಮತ್ತು ಡಾ.ರಾಘವೇಂದ್ರ ನಾಯಕ್ ಎಂಬುವವರ ಮೇಲೆ ದಲಿತ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.</p>



<p style="font-size:20px"><strong>ಘಟನೆಯ ವಿವರ: </strong>ಧಾರವಾಡದ ಡಿಮಾನ್ಸ್ ಆಸ್ಪತ್ರೆಯಲ್ಲಿ 2019ರ ಡಿಸೆಂಬರ್ ನಲ್ಲಿ ಸರ್ಕಾರದ ಖಾಲಿ ಇರುವ ಬ್ಯಾಕ್ಲಾಗ್ ಪ್ರಾಧ್ಯಾಪಕರ ಹುದ್ದೆಯಲ್ಲಿ ಪ್ರೊಫೆಸರ್ ಡಾ.ರಮೇಶ್ ಬಾಬು ಕಾರ್ಯ ನಿರ್ವಹಿಸುತ್ತಿದ್ದರು. ನಂತರ 2020 ರ ಜನವರಿಯಲ್ಲಿ &#8216;ನಿರ್ದೇಶಕರು, ಡಿಮಾನ್ಸ್, ಧಾರವಾಡ&#8217; ಇವರ ಹೆಸರಿನಲ್ಲಿ ಡಾ.ರಮೇಶ್ ಬಾಬು ಅವರಿಗೆ ಪತ್ರವೊಂದು ಬಂದಿತ್ತು. ಆ ಪತ್ರದಲ್ಲಿ ಡಾ.ರಮೇಶ್ ಬಾಬು ಈ ದಿನದಿಂದ ಯಾವುದೇ ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುವುದು, ಉಪನ್ಯಾಸ ಮಾಡುವುದು, ಕ್ಲಿನಿಕಲ್ ಕಾರ್ಯನಿರ್ವಹಣೆ ಮಾಡುವುದು ಇವುಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಬರೆಯಲಾಗಿತ್ತು. ಹಾಜರಾತಿ ಇದ್ದರೂ ಸಹ ಮೇಲಧಿಕಾರಿಗಳು ಸಂಬಳ ತಡೆ ಹಿಡಿಯುವ ಕೆಲಸಕ್ಕೆ ಮುಂದಾಗಿದ್ದರು.</p>



<p style="font-size:20px">ಜೊತೆಗೆ ಸರ್ಕಾರ ಆದೇಶ ಮಾಡಿದ್ದರೂ ಅನಧಿಕೃತವಾಗಿ ಡಿಮಾನ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಎಲ್ಲರ ಎದುರು ಬಹಿರಂಗವಾಗಿ ಅವಮಾನ ಮಾಡಿದ್ದಾರೆ. ಹಾಗೂ ಕೋವಿಡ್ 19 ಸಂದರ್ಭದಲ್ಲೂ ಸಹ ಯಾವುದೇ ರೀತಿಯಲ್ಲೂ ಕರ್ತವ್ಯ ನಿರ್ವಹಿಸಲು ಬಿಡದೇ ಈ ದಿನದ ವರೆಗೂ ರಮೇಶ್ ಬಾಬು ಅವರಿಗೆ ಬರುವ ಸಂಬಳ ತಡೆ ಹಿಡಿದಿದ್ದಾರೆ. ಇದನ್ನು ಪ್ರಶ್ನಿಸಲು ಮುಂದಾದಾಗ ಹಿರಿಯ ಅಧಿಕಾರಿಗಳಾದ ಡಾ.ಮಹೇಶ್ ದೇಸಾಯಿ ಮತ್ತು ಡಾ.ರಾಘವೇಂದ್ರ ನಾಯಕ್ ಎಂಬುವವರು&nbsp; ಪರಿಶಿಷ್ಟ ಜಾತಿಗೆ ಸೇರಿದ ಡಾ.ರಮೇಶ್ ಬಾಬು ಅವರು ಭಾರತದ ಯಾವುದೇ ವಿಧ್ಯಾಸಂಸ್ಥೆಗೆ ಕರ್ತವ್ಯ ನಿರ್ವಹಿಸಲು ಅನರ್ಹ, ಎಂದು ಸುಳ್ಳು ದಾಖಲೆ ಸೃಷ್ಟಿಸಿ ಅನಗತ್ಯವಾಗಿ ಸತ್ಯ ಶೋಧನೆಗೆ ಒಳಪಡದ ರೀತಿಯಲ್ಲಿ ವರದಿ ಸಿದ್ದಪಡಿಸಿದ್ದಾರೆ. ಇದೆಲ್ಲವನ್ನೂ ಸಹಿಸಿಕೊಂಡು ಕರ್ತವ್ಯ ನಿರ್ವಹಣೆ ಅಡಿಯಲ್ಲಿ ಕೆಲಸ ಮಾಡಿದ್ದರೂ ಮೇಲಧಿಕಾರಿಗಳು ಇವರನ್ನು ಸರಿಯಾಗಿ ನಡೆಸಿಕೊಳ್ಳದೇ, ಮಾತನಾಡದೇ ಅವಮಾನಕರವಾಗಿ ನಡೆದುಕೊಂಡಿದ್ದಾರೆ.</p>



<p style="font-size:20px">ಹಾಗೇ ಡಾ.ರಮೇಶ್ ಬಾಬುರವರು ಇವೆಲ್ಲವನ್ನೂ ಮರೆತು 2020 ರ ಸ್ವಾತಂತ್ರ್ಯ ದಿನಾಚರಣೆ ದಿನ ಕೈ ಕುಲುಕಿ ಶುಭಾಶಯ ಹೇಳಿದಾಗಲೂ ಅವರ ಸ್ಪರ್ಶದಿಂದ ಕಿರಿಕಿರಿ ಎಂದು ಕೆಲವರೊಂದಿಗೆ ಡಾ.ಮಹೇಶ್ ದೇಸಾಯಿ ಹೇಳಿಕೊಂಡದ್ದೂ ಸಹ ಸಾಕ್ಷ್ಯ ಸಮೇತ ರುಜುವಾತಾಗಿದೆ. ಇದರ ಜೊತೆಗೆ ಡಾ.ರಮೇಶ್ ಬಾಬುರವರ ಮೇಲಾದ ಮಾನಹಾನಿ ಪರವಾಗಿ ನಿಂತ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯೆ ಡಾ.ಅಂಜು ಬಾಲಾ ಅವರ ಮೇಲೂ ಸಹ ಡಾ.ರಾಘವೇಂದ್ರ ನಾಯಕ್ ಅವರು ದೂರು ದಾಖಲಿಸಿ ಪರಿಶಿಷ್ಟ ಜಾತಿಯವರ ಮೇಲಿನ ಅಸಹನೆಯನ್ನು ಹೊರಹಾಕಿದ್ದು, ಇವೆಲ್ಲವೂ ಸಾಕ್ಷ್ಯ ಸಮೇತ ದಾಖಲಾಗಿದೆ.</p>



<p style="font-size:20px">ಸಧ್ಯ ಈ ಬಗ್ಗೆ ಸಂಪೂರ್ಣ ತನಿಖೆ ನಡೆದು ಧಾರವಾಡ ಡಿಮಾನ್ಸ್ ನಲ್ಲಿ ಡಾ.ಮಹೇಶ್ ದೇಸಾಯಿ ಮತ್ತು ಡಾ.ರಾಘವೇಂದ್ರ ನಾಯಕ್ ಅವರ ಮೇಲೆ ರಾಯಚೂರಿನಲ್ಲಿ FIR ದಾಖಲಾಗಿದೆ. ಸಧ್ಯ ಧಾರವಾಡ ಡಿಮಾನ್ಸ್ ಆಸ್ಪತ್ರೆ ಅಸ್ಪೃಶ್ಯತಾ ಆಚರಣೆಯ ಹಿನ್ನೆಲೆಯಲ್ಲಿ ಸುದ್ದಿಯಾಗುತ್ತಿದೆ. ಡಾ.ರಮೇಶ್ ಬಾಬು ಅವರ ಪ್ರಕಾರ ಮೇಲಧಿಕಾರಿಗಳ ಈ ರೀತಿಯ ವರ್ತನೆಗೆ ಸಮಾಜದ ದೊಡ್ಡ ದೊಡ್ಡ ವ್ಯಕ್ತಿಗಳು, ರಾಜಕಾರಣಿಗಳು ಇವರ ಬೆಂಬಲಕ್ಕೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ, ಇದು ಸ್ಪಷ್ಟವಾಗಿ ಔದ್ಯೋಗಿಕ ಉನ್ನತಿಗೆ ಅಸೂಯೆ ಪಡುವ ಕೆಟ್ಟ ಪ್ರವೃತ್ತಿಯಾಗಿದೆ. ಸಮಾಜದಲ್ಲಿ ಕೆಳ ವರ್ಗ ಎಂದು ಗುರುತಿಸಲ್ಪಡುವ ಸಮುದಾಯಗಳನ್ನು ಇಂತಹ ಅಧಿಕಾರಿಗಳೇ ಕೆಟ್ಟ ದೃಷ್ಟಿಯಿಂದ ನೋಡಿದರೆ ಇನ್ನು ಸಾಮಾನ್ಯ ಜನರ ಪಾಡೇನು?</p>
]]></content:encoded>
					
		
		
			</item>
		<item>
		<title>ಸಿ.ಪಿ ಯೋಗೇಶ್ವರ್‌ ಕಾರಿನ ಮೇಲೆ ಮೊಟ್ಟೆ ತೂರಾಟ : 14 ಜೆಡಿಎಸ್‌ ಕಾರ್ಯಕರ್ತರ ಮೇಲೆ FIR ದಾಖಲು</title>
		<link>https://peepalmedia.com/cp-yogeshwar-karina-mele-motte-torata-14-jds-karyakarthara-mele-fir-dakhalu/</link>
		
		<dc:creator><![CDATA[Peepal Media]]></dc:creator>
		<pubDate>Sun, 02 Oct 2022 10:06:39 +0000</pubDate>
				<category><![CDATA[ರಾಜ್ಯ]]></category>
		<category><![CDATA[ರಾಮನಗರ]]></category>
		<category><![CDATA[bengalure]]></category>
		<category><![CDATA[fir]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=8582</guid>

					<description><![CDATA[ರಾಮನಗರ : ರಾಮನಗರಕ್ಕೆ ಬಂದಿದ್ದ ಬಿಜೆಪಿ ಶಾಸಕ ಸಿ.ಪಿ ಯೋಗೇಶ್ವರ್‌ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಪೋಲಿಸರ್‌ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಶನಿವಾರದಂದು ಸರ್ಕಾರದ 50 ಕೋಟಿ ವಿಶೇಷ ಅನುದಾನದ ಅಡಿ ಕಾಮಗಾರಿ ಚಾಲನೆಗೆಂದು ಬಿಜೆಪಿ ಶಾಸಕ ಸಿ ಪಿ ಯೋಗೇಶ್ವರ್‌ ಅವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣಕ್ಕೆ ಬಂದಿದ್ದಾರೆ.ಈ ವೇಳೆ ಜೆಡಿಎಸ್‌ ಕಾರ್ಯಕರ್ತರು ಅವರ ಕಾರಿನ ಮೇಲೆ ಕಲ್ಲು ಮತ್ತು ಮೊಟ್ಟೆಗಳನ್ನು ಹೊಡೆದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ [&#8230;]]]></description>
										<content:encoded><![CDATA[
<p style="font-size:20px"><strong>ರಾಮನಗರ</strong> : ರಾಮನಗರಕ್ಕೆ ಬಂದಿದ್ದ ಬಿಜೆಪಿ ಶಾಸಕ ಸಿ.ಪಿ ಯೋಗೇಶ್ವರ್‌ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಪೋಲಿಸರ್‌ ಎಫ್‌ಐಆರ್‌ ದಾಖಲು ಮಾಡಿದ್ದಾರೆ.</p>



<p style="font-size:20px">ಶನಿವಾರದಂದು ಸರ್ಕಾರದ 50 ಕೋಟಿ ವಿಶೇಷ ಅನುದಾನದ ಅಡಿ ಕಾಮಗಾರಿ ಚಾಲನೆಗೆಂದು ಬಿಜೆಪಿ ಶಾಸಕ ಸಿ ಪಿ ಯೋಗೇಶ್ವರ್‌ ಅವರು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣಕ್ಕೆ ಬಂದಿದ್ದಾರೆ.ಈ ವೇಳೆ ಜೆಡಿಎಸ್‌ ಕಾರ್ಯಕರ್ತರು ಅವರ ಕಾರಿನ ಮೇಲೆ ಕಲ್ಲು ಮತ್ತು ಮೊಟ್ಟೆಗಳನ್ನು ಹೊಡೆದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.</p>



<p style="font-size:20px">ಈ ಹಿನ್ನಲೆ ಕಾರಿನ ಚಾಲಕನಾದ ವೆಂಕಟೇಶ್‌ ಎಂಬುವವರು ಜೆಡಿಎಸ್‌ ಕಾರ್ಯಕರ್ತರ ವಿರುದ್ದ ಚನ್ನಪಟ್ಟಣ ಗ್ರಾಮೀಣ ಪೋಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.&nbsp; ಪ್ರಕರಣ ದಾಖಲಿಸಿಕೊಂಡ ಅಲ್ಲಿನ ಪೋಲೀಸರು ಇಂದು 14 ಜನ ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ.</p>



<p style="font-size:20px">ಇದರ ಬೆನ್ನಲ್ಲೇ ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷರಾದ ನಿಖಿಲ್‌ ಕುಮಾರಸ್ವಾಮಿಯವರು ಭಾನುವಾರದಂದು ರಾಮನಗರಕ್ಕೆ ಭೇಟಿ ನೀಡಿದ್ದು, ಪ್ರಕರಣದ ಕುರಿತು ಡಿವೈಎಸ್‌ಪಿ ಓಂ ಪ್ರಕಾಶ್‌ ಜೊತೆ ಚರ್ಚೆ ನಡೆಸಿದ್ದಾರೆ.<br></p>



<p style="font-size:20px"><strong>🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ</strong><br><a href="https://chat.whatsapp.com/G94DLKaJrsBH07M7DvkqRo">https://chat.whatsapp.com/G94DLKaJrsBH07M7DvkqRo</a></p>



<p style="font-size:20px"><strong><mark class="has-inline-color has-vivid-red-color">ಇದನ್ನೂ ನೋಡಿ</mark></strong>:  🟨 ಗಾಂಧಿ ಜನಯಂತಿ ಪ್ರಯುಕ್ತ ಸಾರ್ವಜನಿಕರಲ್ಲಿ ಪೌರಕಾರ್ಮಿಕರು ಹಾಗೂ ಮಾರ್ಷಲ್ಸ್ ಮನವಿ</p>



<p style="font-size:20px">🟨 ದಯವಿಟ್ಟು ಪೀಪಲ್ ಮೀಡಿಯಾ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಫಾಲೋ ಮಾಡಿ</p>



<p style="font-size:20px"><a href="https://fb.watch/fV5MIzhgVh/">https://fb.watch/fV5MIzhgVh/</a></p>
]]></content:encoded>
					
		
		
			</item>
	</channel>
</rss>
