<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>freedom of expression &#8211; Peepal Media</title>
	<atom:link href="https://peepalmedia.com/tag/freedom-of-expression/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 20 Aug 2025 06:50:39 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>freedom of expression &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ವಿದೇಶಿ ಸಂಸ್ಥೆಗಳಿಂದ ದೃಢೀಕರಣದ ಅಗತ್ಯವಿಲ್ಲ: ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಕೇಂದ್ರ ಸರ್ಕಾರ</title>
		<link>https://peepalmedia.com/no-need-for-certification-from-foreign-organizations-central-government-on-press-freedom/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 20 Aug 2025 06:50:39 +0000</pubDate>
				<category><![CDATA[ದೇಶ]]></category>
		<category><![CDATA[bengaluru]]></category>
		<category><![CDATA[freedom of expression]]></category>
		<category><![CDATA[kananda]]></category>
		<category><![CDATA[karnataka]]></category>
		<category><![CDATA[media freedom]]></category>
		<category><![CDATA[narendra modi]]></category>
		<category><![CDATA[press freedom]]></category>
		<guid isPermaLink="false">https://peepalmedia.com/?p=64453</guid>

					<description><![CDATA[ಭಾರತದ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕದಲ್ಲಿನ ಕುಸಿತ ಮತ್ತು ಪತ್ರಕರ್ತರ ಮೇಲಿನ ಹಿಂಸಾಚಾರ ಹಾಗೂ ಬೆದರಿಕೆ ಪ್ರಕರಣಗಳ ಕುರಿತು ಸಂಸತ್ತಿನ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರ, &#8220;ಭಾರತವು ಒಂದು ಚೈತನ್ಯಶೀಲ ಪತ್ರಿಕಾ ಮತ್ತು ಮಾಧ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ, ಇದಕ್ಕೆ ವಿದೇಶಿ ಸಂಸ್ಥೆಗಳಿಂದ ದೃಢೀಕರಣದ ಅಗತ್ಯವಿಲ್ಲ&#8221; ಎಂದು ಹೇಳಿದೆ. ಭಾರತದ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕದಲ್ಲಿನ ಕುಸಿತ ಮತ್ತು ಇತ್ತೀಚಿನ ವರ್ಷಗಳಲ್ಲಿ ಪತ್ರಕರ್ತರ ವಿರುದ್ಧದ ಬೆದರಿಕೆ, ಕಾನೂನು ಕಿರುಕುಳ ಮತ್ತು ಹಿಂಸಾಚಾರದಲ್ಲಿನ ಹೆಚ್ಚಳವನ್ನು ನಿರ್ಣಯಿಸಲು ಸರ್ಕಾರ ಯಾವುದೇ ಪರಿಶೀಲನೆಯನ್ನು ಕೈಗೊಂಡಿದೆಯೇ [&#8230;]]]></description>
										<content:encoded><![CDATA[
<p>ಭಾರತದ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕದಲ್ಲಿನ ಕುಸಿತ ಮತ್ತು ಪತ್ರಕರ್ತರ ಮೇಲಿನ ಹಿಂಸಾಚಾರ ಹಾಗೂ ಬೆದರಿಕೆ ಪ್ರಕರಣಗಳ ಕುರಿತು ಸಂಸತ್ತಿನ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರ, &#8220;ಭಾರತವು ಒಂದು ಚೈತನ್ಯಶೀಲ ಪತ್ರಿಕಾ ಮತ್ತು ಮಾಧ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ, ಇದಕ್ಕೆ ವಿದೇಶಿ ಸಂಸ್ಥೆಗಳಿಂದ ದೃಢೀಕರಣದ ಅಗತ್ಯವಿಲ್ಲ&#8221; ಎಂದು ಹೇಳಿದೆ.</p>



<p>ಭಾರತದ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕದಲ್ಲಿನ ಕುಸಿತ ಮತ್ತು ಇತ್ತೀಚಿನ ವರ್ಷಗಳಲ್ಲಿ ಪತ್ರಕರ್ತರ ವಿರುದ್ಧದ ಬೆದರಿಕೆ, ಕಾನೂನು ಕಿರುಕುಳ ಮತ್ತು ಹಿಂಸಾಚಾರದಲ್ಲಿನ ಹೆಚ್ಚಳವನ್ನು ನಿರ್ಣಯಿಸಲು ಸರ್ಕಾರ ಯಾವುದೇ ಪರಿಶೀಲನೆಯನ್ನು ಕೈಗೊಂಡಿದೆಯೇ ಎಂದು ರಾಜ್ಯಸಭೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸದ ಮನೋಜ್ ಕುಮಾರ್ ಝಾ ಅವರು ಮಾಹಿತಿ ಮತ್ತು ಪ್ರಸಾರ ಸಚಿವರನ್ನು ಕೇಳಿದ್ದರು.</p>



<p>&#8220;ಪತ್ರಿಕಾ ಸ್ವಾತಂತ್ರ್ಯವನ್ನು ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸಲು ಭಾರತೀಯ ಪತ್ರಿಕಾ ಮಂಡಳಿಯಂತಹ ( Press Council of India) ಸಾಂಸ್ಥಿಕ ಕಾರ್ಯವಿಧಾನಗಳನ್ನು ಬಲಪಡಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ; ಮತ್ತು ಪತ್ರಕರ್ತರು ಸರ್ಕಾರ ಅಥವಾ ರಾಜಕೀಯ ವ್ಯಕ್ತಿಗಳಿಂದ ಭಯ ಅಥವಾ ಒತ್ತಡವಿಲ್ಲದೆ ಕೆಲಸ ಮಾಡಬಹುದೆಂದು ಖಚಿತಪಡಿಸಿಕೊಳ್ಳಲು ಯೋಜಿಸಲಾದ ಕ್ರಮಗಳು ಯಾವುವು?&#8221; ಎಂದು ಮನೋಜ್ ಕುಮಾರ್ ಝಾ ಪ್ರಶ್ನೆಯಲ್ಲಿ ಕೇಳಿದ್ದರು.</p>



<p>ಭಾರತದ ಪತ್ರಿಕಾ ಶ್ರೇಯಾಂಕದಲ್ಲಿನ ಕುಸಿತವನ್ನು ನಿರ್ಣಯಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಝಾ ಅವರ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸುವ ಬದಲು, ಮಾಹಿತಿ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಲ್. ಮುರುಗನ್ ತಮ್ಮ ಪ್ರತಿಕ್ರಿಯೆಯಲ್ಲಿ ಪತ್ರಕರ್ತರನ್ನು ರಕ್ಷಿಸಲು ಅಸ್ತಿತ್ವದಲ್ಲಿರುವ ಕಾನೂನು ಚೌಕಟ್ಟಿನ ಬಗ್ಗೆ ಮತ್ತು ಭಾರತದಲ್ಲಿನ ಪ್ರಕಟಣೆಗಳ ಸಂಖ್ಯೆಯ ವಿವರಗಳನ್ನು ನೀಡಿದರು.</p>



<p>&#8220;ಭಾರತವು ಒಂದು ಅದ್ಭುತವಾದ ಪತ್ರಿಕಾ ಮತ್ತು ಮಾಧ್ಯಮ ಪರಿಸರ ವ್ಯವಸ್ಥೆಯನ್ನು ಹೊಂದಿದೆ, ಇದಕ್ಕೆ ವಿದೇಶಿ ಸಂಸ್ಥೆಗಳಿಂದ ದೃಢೀಕರಣದ ಅಗತ್ಯವಿಲ್ಲ. ಭಾರತವು ಸುಮಾರು 1,54,000 ಮುದ್ರಿತ ಪ್ರಕಟಣೆಗಳು, 900 ಕ್ಕೂ ಹೆಚ್ಚು ಖಾಸಗಿ ಉಪಗ್ರಹ ಟಿವಿ ಚಾನೆಲ್‌ಗಳು ಮತ್ತು OTT ಪ್ಲಾಟ್‌ಫಾರ್ಮ್‌ಗಳು, ಪತ್ರಿಕೆಗಳ ಇ-ರಿಪ್ಲಿಕಾ, ಡಿಜಿಟಲ್ ಪತ್ರಿಕೆಗಳು, ಸುದ್ದಿ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿನ ಸುದ್ದಿ ಚಾನೆಲ್‌ಗಳು ಸೇರಿದಂತೆ ಡಿಜಿಟಲ್ ಮಾಧ್ಯಮದಲ್ಲಿ ಹಲವಾರು ಪಬ್ಲಿಷರ್‌ಗಳನ್ನು ಹೊಂದಿದೆ. ಭಾರತವು ಆರ್ಟಿಕಲ್ 19 (1) (ಎ) ನಂತಹ ಸಾಂವಿಧಾನಿಕ ಖಾತರಿಗಳನ್ನು ಹೊಂದಿದೆ, ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ, ”ಎಂದು ಮುರುಗನ್ ಝಾ ಅವರ ಪ್ರಶ್ನೆಗೆ ಉತ್ತರಿಸಿದರು.</p>



<p>ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲಾಗಿದೆ, ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) 1978 ರ ಪತ್ರಿಕಾ ಮಂಡಳಿ ಕಾಯ್ದೆಯಡಿಯಲ್ಲಿ ಸ್ಥಾಪಿಸಲಾದ ಶಾಸನಬದ್ಧ ಸ್ವಾಯತ್ತ ಸಂಸ್ಥೆಯಾಗಿದ್ದು, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ನೇತೃತ್ವ ವಹಿಸುತ್ತಾರೆ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿ, ಪತ್ರಕರ್ತರ ಮೇಲಿನ ದೈಹಿಕ ಹಲ್ಲೆ/ದಾಳಿ ಇತ್ಯಾದಿಗಳ ಕುರಿತು ಪತ್ರಿಕಾ ಸದಸ್ಯರು ಸಲ್ಲಿಸುವ ದೂರುಗಳ ಮೇಲೆ ತೀರ್ಪು ನೀಡುತ್ತಾರೆ.</p>



<p>&#8220;1979 ರ ಪತ್ರಿಕಾ ಮಂಡಳಿ (ವಿಚಾರಣೆಗಾಗಿ ಕಾರ್ಯವಿಧಾನ) ನಿಯಮಗಳ 13 ನೇ ನಿಯಮದ ಅಡಿಯಲ್ಲಿ, ಪತ್ರಿಕಾ ಸ್ವಾತಂತ್ರ್ಯ ಮತ್ತು ಅದರ ಉನ್ನತ ಗುಣಮಟ್ಟಗಳ ರಕ್ಷಣೆಗೆ ಸಂಬಂಧಿಸಿದ ತುರ್ತು ಸಮಸ್ಯೆಗಳ ಬಗ್ಗೆ ಪಿಸಿಐ ಸ್ವಯಂಪ್ರೇರಿತವಾಗಿ ಗಮನ ಹರಿಸುವ ಹಕ್ಕನ್ನು ಹೊಂದಿದೆ&#8221; ಎಂದು ಸರ್ಕಾರದ ಪ್ರತಿಕ್ರಿಯೆ ತಿಳಿಸಿದೆ.</p>



<p>ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯ್ದೆ, 1995 ಮತ್ತು ಐಟಿ ನಿಯಮಗಳು, 2021 ರ ಅಡಿಯಲ್ಲಿ ಸ್ವಯಂ-ನಿಯಂತ್ರಕ ಕಾರ್ಯವಿಧಾನದ ಮೂಲಕ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಖಾತ್ರಿಪಡಿಸಲಾಗಿದೆ ಎಂದು ಪ್ರತಿಕ್ರಿಯೆಯಲ್ಲಿ ಸೇರಿಸಲಾಗಿದೆ. ದೂರುಗಳನ್ನು ಪರಿಹರಿಸಲು ಮೂರು ಹಂತದ ರಚನೆ ಜಾರಿಯಲ್ಲಿದೆ, ಮೊದಲ ಹಂತವು ಪ್ರಸಾರಕ/ಪ್ರಕಾಶಕರ ಮಟ್ಟದಲ್ಲಿ ಮತ್ತು ನಂತರ ಎರಡನೇ ಹಂತದಲ್ಲಿ ಸ್ವಯಂ-ನಿಯಂತ್ರಕ ಸಂಸ್ಥೆಗಳು ಇರುತ್ತವೆ ಎಂದು ಅದು ಹೇಳಿದೆ.</p>



<p>&#8220;ನಾನು ಇತ್ತೀಚೆಗೆ ರಾಜ್ಯಸಭೆಯಲ್ಲಿ ಈ ಪ್ರಶ್ನೆಯನ್ನು ಕೇಳಿದ್ದೆ ಮತ್ತು &#8216;ಪ್ರತಿಕ್ರಿಯೆ&#8217;ಯನ್ನು ಇಲ್ಲಿ ಕಾಣಬಹುದು. ನನ್ನ ಸರ್ಕಾರ ಏನು ಹೇಳುತ್ತದೆ ಮತ್ತು ಅದು ಏನು ಮಾಡುತ್ತದೆ ಎಂಬುದರ ನಡುವೆ ಮೈಲಿಗಟ್ಟಲೆ ಅಂತರವಿದೆ,&#8221; ಎಂದು ಆರ್‌ಜೆಡಿ ಸಂಸದ ಝಾ ನಂತರ&nbsp;ಎಕ್ಸ್‌ನಲ್ಲಿ&nbsp;<a target="_blank" href="https://x.com/manojkjhadu/status/1957776672075194528?s=46" rel="noreferrer noopener">ಪೋಸ್ಟ್ ಮಾಡಿದರು .</a></p>
]]></content:encoded>
					
		
		
			</item>
		<item>
		<title>ತುರ್ತು ಪರಿಸ್ಥಿತಿಗೆ ಐವತ್ತು ವರ್ಷ: &#8216;ಸ್ವಂತ ರಿಸ್ಕ್‌ʼನಲ್ಲಿ ದೆಹಲಿಯಲ್ಲಿ ಪ್ರದರ್ಶನ ನೀಡಬಹುದು ಎಂದು ಕುನಾಲ್ ಕಮ್ರಾಗೆ ಹೇಳಿದ ದೆಹಲಿ ಮುಖ್ಯಮಂತ್ರಿ</title>
		<link>https://peepalmedia.com/fifty-years-of-emergency-delhi-cm-tells-kunal-kamra-he-can-perform-in-delhi-at-his-own-risk/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 30 Jun 2025 07:33:51 +0000</pubDate>
				<category><![CDATA[ಅಂಕಣ]]></category>
		<category><![CDATA[delhi CM]]></category>
		<category><![CDATA[Emergency]]></category>
		<category><![CDATA[freedom of expression]]></category>
		<category><![CDATA[kunal kamra]]></category>
		<category><![CDATA[Rekha Gupta]]></category>
		<guid isPermaLink="false">https://peepalmedia.com/?p=61793</guid>

					<description><![CDATA[ಜೂನ್ 25, 1975 ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ ತುರ್ತು ಪರಿಸ್ಥಿತಿಗೆ ಐವತ್ತು ವರ್ಷಗಳಾಗಿವೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಅನ್ನು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪಕ್ಷವೆಂದು ಬಿಂಬಿಸಲು ಪ್ರತೀ ವರ್ಷ ಇದನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿಯ ಅಧಿಕೃತ ಖಾತೆಯಲ್ಲಿ ʼಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಹೇರುತ್ತದೆಯೇʼ ಎಂಬ ಪ್ರಶ್ನೆಯನ್ನು ಕೇಳಿ ಟ್ವಿಟರ್ ಸಮೀಕ್ಷೆಯೊಂದನ್ನು ನಡೆಸಿದ್ದು, ಇದು ಬೂಮರಾಂಗ್ ಆದ ನಂತರ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದವರಲ್ಲಿ ಮೂರನೇ ಎರಡರಷ್ಟು ಜನರು ಬಿಜೆಪಿಯ ಈ ಪ್ರಶ್ನೆಗೆ [&#8230;]]]></description>
										<content:encoded><![CDATA[
<p>ಜೂನ್ 25, 1975 ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ ತುರ್ತು ಪರಿಸ್ಥಿತಿಗೆ ಐವತ್ತು ವರ್ಷಗಳಾಗಿವೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಅನ್ನು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪಕ್ಷವೆಂದು ಬಿಂಬಿಸಲು ಪ್ರತೀ ವರ್ಷ ಇದನ್ನು ಬಳಸಿಕೊಳ್ಳುತ್ತಿದೆ.</p>



<p>ಬಿಜೆಪಿಯ ಅಧಿಕೃತ ಖಾತೆಯಲ್ಲಿ ʼಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಹೇರುತ್ತದೆಯೇʼ ಎಂಬ ಪ್ರಶ್ನೆಯನ್ನು ಕೇಳಿ <a href="https://x.com/BJP4India/status/1937864240473497673">ಟ್ವಿಟರ್ ಸಮೀಕ್ಷೆಯೊಂದ</a>ನ್ನು ನಡೆಸಿದ್ದು, ಇದು ಬೂಮರಾಂಗ್ ಆದ ನಂತರ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದವರಲ್ಲಿ ಮೂರನೇ ಎರಡರಷ್ಟು ಜನರು ಬಿಜೆಪಿಯ ಈ ಪ್ರಶ್ನೆಗೆ ನಕಾರಾತ್ಮಕ ಉತ್ತರ ನೀಡಿ ವಿರೋಧಿಸಿದ್ದಾರೆ. ಹೀಗಾಗಿ, ದೆಹಲಿಯ ಮುಖ್ಯಮಂತ್ರಿ, ಬಿಜೆಪಿ ನಾಯಕಿ ರೇಖಾ ಗುಪ್ತಾ ಅವರ ಹೇಳಿಕೆಗಳು ಪಕ್ಷಕ್ಕೆ ಮುಜುಗರವನ್ನುಂಟುಮಾಡಿವೆ.</p>



<p><em>ದಿ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನ ಹಿಂದಿ ದಿನಪತ್ರಿಕೆ ಜನಸತ್ತ</em> ಆಯೋಜಿಸಿದ್ದ <a href="https://www.youtube.com/watch?v=tuJHgn9toPc">ಮಾಧ್ಯಮ ಕಾರ್ಯಕ್ರಮದಲ್ಲಿ ಮಾತನಾಡಿದ</a> ರೇಖಾ ಗುಪ್ತಾ, ಐಟಿ ನಿಯಮಗಳ ವಿರುದ್ಧದ ವಿಷಯದಲ್ಲಿ ಅರ್ಜಿದಾರ ಮತ್ತು ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ದೆಹಲಿಗೆ ಬಂದು ಪ್ರದರ್ಶನ ನೀಡಬಹುದು, ಆದರೆ &#8220;ತನ್ನ ಸ್ವಂತ ರಿಸ್ಕ್‌ನಲ್ಲಿ&#8221; ಬರಬಹುದು ಎಂದು ಹೇಳಿದರು. ಆಗ ಮಾಧ್ಯಮ ಸಂಸ್ಥೆಯ ಪ್ರತಿನಿಧಿಯೊಬ್ಬರು ಮುಖ್ಯಮಂತ್ರಿಯೊಬ್ಬರು &#8216;ತನ್ನ ಸ್ವಂತ ರಿಸ್ಕ್‌ನಲ್ಲಿ ಬರಬಹುದು&#8217; ಎಂದು  ಹೇಗೆ ಹೇಳಬಹುದು ಎಂದು ಕೇಳಿದಾಗ ರೇಖಾ ಗುಪ್ತಾ ಉತ್ತರಿಸಲು ನಿರಾಕರಿಸಿದರು.</p>



<p>ಆಡಳಿತಾರೂಢ ಶಿವಸೇನೆ (ಏಕನಾಥ್ ಶಿಂಧೆ) ಜೊತೆ ಸಂಪರ್ಕ ಹೊಂದಿರುವ ದುಷ್ಕರ್ಮಿಗಳು ಮುಂಬೈನಲ್ಲಿ ಕುನಾಲ್‌ ಕಾಮ್ರಾ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿ, ಯೂಟ್ಯೂಬ್‌ನಲ್ಲಿ ರಾಜಕೀಯ ವಿಡಂಬನೆಯನ್ನು ಪೋಸ್ಟ್ ಮಾಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ನಂತರ, ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ತೀವ್ರ ವಿವಾದಕ್ಕೆ ಗುರಿಯಾಗಿದ್ದರು.</p>



<p><a href="https://thewire.in/rights/fir-against-comedian-kunal-kamra-venue-of-his-new-show-shut-down-after-vandalism-by-shiv-sainiks">ಕಾಮ್ರಾ ಮತ್ತು ಸದ್ಯ ಬಂದ್‌ ಮಾಡಲಾಗಿರುವ</a> ಹಾಸ್ಯ ಕಾರ್ಯಕ್ರಮದ ಸ್ಥಳದ ಮೇಲಿನ ದಾಳಿಗಳು, ಮುಕ್ತ ಅಭಿವ್ಯಕ್ತಿ ಅಥವಾ ವಿಡಂಬನೆಗೆ ಸುರಕ್ಷಿತ ವೇದಿಕೆಯನ್ನು ಒದಗಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಆಗಿರುವ ಅಸಮರ್ಥತೆಗಯನ್ನು ಈಗಾಗಲೇ ಬೆಳಕಿಗೆ ತಂದಿವೆ. ಹಿಂದಿ ಚಲನಚಿತ್ರೋದ್ಯಮವನ್ನು ಹೊಂದಿರುವ ಮತ್ತು ಮೊದಲಿನಂತೆ ಪ್ರತಿಭಟನಾ-ಸಾಹಿತ್ಯ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಮತ್ತು ನಗರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಅಪಾಯದಲ್ಲಿದೆ ಎಂಬ ವಿಚಾರವನ್ನು ಮುಖ್ಯಮಂತ್ರಿ ಮತ್ತು ಬಿಜೆಪಿ ಹಾಗೂ ಶಿವಸೇನೆಯ ಉನ್ನತ ನಾಯಕರು ಮುಚ್ಚಿಹಾಕಲು ಸಾಧ್ಯವಿಲ್ಲ.</p>



<p>ಈ ಮಧ್ಯೆ, ಗುಪ್ತಾ ಅವರ ಮಾತಿಗೆ ಪ್ರತಿಕ್ರಿಯಿಸಿದ <a href="https://x.com/kunalkamra88/status/1938492288549982551">ಕಾಮ್ರಾ</a> , &#8220;ಒಬ್ಬ ಘನವೆತ್ತ ಮುಖ್ಯಮಂತ್ರಿಯಾಗಿ ಮಾತನಾಡಬೇಕಾದವರು ಶುದ್ಧ ಎಬಿವಿಪಿ ಕಾರ್ಯಕರ್ತರಂತೆ ಮಾತನಾಡಿದರು&#8221; ಎಂದು ಹೇಳಿದರು.</p>



<p>ಗುಪ್ತಾ ಅವರ ಹೇಳಿಕೆಗಳು &#8220;ದೆಹಲಿ ಪ್ರವಾಸೋದ್ಯಮದ ಜಾಹೀರಾತಿಗೆ ಒಂದು ಟ್ಯಾಗ್‌ಲೈನ್&#8221; ಆಗಿರಬಹುದು ಎಂದು ಅವರು ಹೇಳಿದರು.</p>



<p>ದೆಹಲಿ ಸರ್ಕಾರ ಬಿಜೆಪಿಯ ಕೈಯಲ್ಲಿದ್ದು,  ರಾಜಧಾನಿಯಲ್ಲಿ &#8216;ತ್ರಿಪಲ್ ಎಂಜಿನ್&#8217; ಸರ್ಕಾರವಿದೆ ಎಂದು ಹೆಮ್ಮೆಪಡುತ್ತಿರುವಾಗ, ರಾಜಕೀಯ ವಿಡಂಬನೆ ಮತ್ತು ಹಾಸ್ಯದ ಅಭಿವ್ಯಕ್ತಿಗೆ ಸುರಕ್ಷಿತ ಸ್ಥಳವನ್ನು ನೀಡಲು ದೆಹಲಿ ಮುಖ್ಯಮಂತ್ರಿಗಿರುವ ಅಸಮರ್ಥತೆಯು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. </p>



<p><a href="https://www.youtube.com/watch?v=2PnbFqm1vUY&amp;ab_channel=KunalKamra">ಮಾರ್ಚ್‌ನಲ್ಲಿ, ಕಮ್ರಾ ತಮ್ಮ ಹೊಸ ಕಾರ್ಯಕ್ರಮ &#8216;ನಯ ಭಾರತ್&#8217;</a> ನ ವೀಡಿಯೊವನ್ನು ಬಿಡುಗಡೆ ಮಾಡಿದರು. ದೇಶದ ಪರಿಸ್ಥಿತಿ ಮತ್ತು ಸರ್ಕಾರದ ಬಗ್ಗೆ ತೀಕ್ಷ್ಣವಾದ ನಿಲುವಿಗೆ ಹೆಸರುವಾಸಿಯಾದ ಕಮ್ರಾ ಅವರು ಆ ಕಾರ್ಯಕ್ರಮದಲ್ಲಿ ಹಲವಾರು ವಿಡಂಬನಾತ್ಮಕ ಹಾಡುಗಳನ್ನು ಹಾಡಿದರು.</p>



<p>ಮುಂಬೈನಲ್ಲಿ ವಿಡಿಯೋ ರೆಕಾರ್ಡ್ ಮಾಡಲಾದ ಕಾಮಿಡಿ ಕ್ಲಬ್ ಅನ್ನು ಶಿವಸೇನಾ ಸದಸ್ಯರು ಧ್ವಂಸಗೊಳಿಸಿದರು, ಕಾಮ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಾ, ಕಾಮ್ರಾ &#8220;ತನ್ಶಾ‌&#8221; ಅಥವಾ ಸರ್ವಾಧಿಕಾರಿ ಎಂಬ ಹಾಡನ್ನು ಹಾಡಿದರು. ಇನ್ನೊಂದರಲ್ಲಿ, ದಿಲ್ ತೋ ಪಾಗಲ್ ಹೈ ಹಾಡಿನಲ್ಲಿ, ಅವರು ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಗುರಿಯಾಗಿಸಿ ವಿಡಂಬನೆ ಮಾಡಿದರು.</p>



<p></p>
]]></content:encoded>
					
		
		
			</item>
		<item>
		<title>ಫ್ಯಾಕ್ಟ್‌ ಚೆಕರ್‌ ಜುಬೇರ್‌ಗೆ 2023ರ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶಸ್ತಿ</title>
		<link>https://peepalmedia.com/freedom-of-expression-award-to-alt-news-mohammed-zubair/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 20 Oct 2023 06:42:05 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[alt news]]></category>
		<category><![CDATA[award]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[Fact check]]></category>
		<category><![CDATA[Fake news]]></category>
		<category><![CDATA[freedom of expression]]></category>
		<category><![CDATA[Freedom of Expression Award]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Mohammed Zubair]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=30212</guid>

					<description><![CDATA[ಬೆಂಗಳೂರು, ಅಕ್ಡೋಬರ್‌.20: &#160;ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್‌ವರಿಗೆ ಅಕ್ಟೋಬರ್‌ 20, ಶುಕ್ರವಾರದಂದು ಪತ್ರಿಕಾರಂಗದ 2023 ರ Freedom of Expression Award ಘೋಷಣೆಯಾಗಿದೆ. ಈ ಪ್ರಶಸ್ತಿಯನ್ನು Index on Censorship ಸಂಸ್ಥೆ ನೀಡಿದೆ. &#8220;ಆಡಳಿತ ಪಕ್ಷದ ಪ್ರಭಾವಿ ನಾಯಕರು ಹಂಚಿದ ತಪ್ಪು ಮಾಹಿತಿಗಳನ್ನು ಪ್ರಶ್ನಿಸಿ ಜುಬೈರ್  ಬೆದರಿಕೆಗಳನ್ನು ಎದುರಿಸಿದ್ದರು&#8221; ಎಂದು ಇಂಡೆಕ್ಸ್‌ ಆನ್‌ ಸೆನ್ಸಾರ್‌ಶಿಪ್ ಹೇಳಿದೆ. ಲಂಡನ್ ಮೂಲದ Index on Censorship ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕೆಲಸ ಮಾಡುತ್ತಿದೆ. Freedom [&#8230;]]]></description>
										<content:encoded><![CDATA[
<p><strong>ಬೆಂಗಳೂರು, ಅಕ್ಡೋಬರ್‌.20:</strong> &nbsp;ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್‌ವರಿಗೆ ಅಕ್ಟೋಬರ್‌ 20, ಶುಕ್ರವಾರದಂದು ಪತ್ರಿಕಾರಂಗದ 2023 ರ Freedom of Expression Award ಘೋಷಣೆಯಾಗಿದೆ. ಈ ಪ್ರಶಸ್ತಿಯನ್ನು Index on Censorship ಸಂಸ್ಥೆ ನೀಡಿದೆ.</p>



<p>&#8220;ಆಡಳಿತ ಪಕ್ಷದ ಪ್ರಭಾವಿ ನಾಯಕರು ಹಂಚಿದ ತಪ್ಪು ಮಾಹಿತಿಗಳನ್ನು ಪ್ರಶ್ನಿಸಿ ಜುಬೈರ್  ಬೆದರಿಕೆಗಳನ್ನು ಎದುರಿಸಿದ್ದರು&#8221; ಎಂದು ಇಂಡೆಕ್ಸ್‌ ಆನ್‌ ಸೆನ್ಸಾರ್‌ಶಿಪ್ ಹೇಳಿದೆ.</p>



<p>ಲಂಡನ್ ಮೂಲದ Index on Censorship ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕೆಲಸ ಮಾಡುತ್ತಿದೆ. Freedom of Expression ಪ್ರಶಸ್ತಿಗಳನ್ನು ಕಲೆ, ಪ್ರಚಾರ, ಪತ್ರಿಕೋದ್ಯಮ ಮತ್ತು ಟ್ರಸ್ಟಿ – ಎಂಬ ನಾಲ್ಕು ವಿಭಾಗಗಳಲ್ಲಿ ನೀಡಲಾಗಿದೆ. ವಿಜೇತರನ್ನು ಯುನೈಟೆಡ್ ಕಿಂಗ್‌ಡಮ್‌ನ ಲಂಡನ್‌ನಲ್ಲಿ ಸನ್ಮಾನಿಸಲಾಗುತ್ತದೆ.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="776" height="860" src="https://peepalmedia.com/wp-content/uploads/2023/10/image-35.png" alt="" class="wp-image-30216" style="aspect-ratio:0.9023255813953488;width:331px;height:auto" srcset="https://peepalmedia.com/wp-content/uploads/2023/10/image-35.png 776w, https://peepalmedia.com/wp-content/uploads/2023/10/image-35-271x300.png 271w, https://peepalmedia.com/wp-content/uploads/2023/10/image-35-768x851.png 768w, https://peepalmedia.com/wp-content/uploads/2023/10/image-35-150x166.png 150w, https://peepalmedia.com/wp-content/uploads/2023/10/image-35-300x332.png 300w, https://peepalmedia.com/wp-content/uploads/2023/10/image-35-696x771.png 696w" sizes="(max-width: 776px) 100vw, 776px" /></figure></div>


<p>&#8220;ನನ್ನ ಮೇಲೆ ದಾಳಿಯಾದಾಗ, ನಿಂದಿಸಿದಾಗ ಮತ್ತು ನನ್ನ ಕೆಲಸವನ್ನು ಮಾಡಿದ್ದಕ್ಕಾಗಿ ಜೈಲಿಗೆ ಹಾಕಿದಾಗ ನನ್ನ ಬೆಂಬಲಕ್ಕೆ ನಿಂತ&#8221;ವರಿಗೆ ಜುಬೇರ್ ಕೃತಜ್ಞತೆಯನ್ನು ಅರ್ಪಿಸಿದ್ದಾರೆ.</p>



<p>ಪ್ರಶಸ್ತಿ ಘೋಷಣೆಯಾದ ಹಿನ್ನಲೆಯಲ್ಲಿ ಮೊಹಮ್ಮದ್ ಜುಬೇರ್‌ ಮಾತುಗಳು: <a href="https://x.com/IndexCensorship/status/1715097987959881940?s=20" data-type="link" data-id="https://x.com/IndexCensorship/status/1715097987959881940?s=20">ಮೊಹಮ್ಮದ್ ಜುಬೇರ್‌</a></p>



<p>ಕಳೆದ ವರ್ಷ ಜುಬೈರ್‌ 24 ದಿನಗಳ ಕಾಲ ಜೈಲು ವಾಸದಲ್ಲಿದ್ದು, ಸುಪ್ರೀಂ ಕೋರ್ಟ್‌ ಜಾಮೀನು ಮೇರೆಗೆ ಹೊರಬಂದಿದ್ದರು. ಜುಬೇರ್‌ ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಆರು ಮತ್ತು ದೆಹಲಿಯಲ್ಲಿ ಒಂದು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.</p>



<p>ಸೊಮಾಲಿಯಾದ ಮೊದಲ ಮಹಿಳೆಯರೇ ನಡೆಸುವ ಮಾಧ್ಯಮ ಸಂಸ್ಥೆ ಬಿಲಾನ್ ಮೀಡಿಯಾ ಮತ್ತು ಈ ವರ್ಷದ ಜನವರಿಯಲ್ಲಿ ತಾಲಿಬಾನಿಗಳಿಂದ ಬಂಧನಕ್ಕೊಳಗಾದ ಅಫ್ಘಾನ್ ಪತ್ರಕರ್ತ ಮೊರ್ತಜಾ ಬೆಹಬೌಡಿ ಅವರ ಹೆಸರೂ ಪಟ್ಟಿಯಲ್ಲಿತ್ತು.</p>



<p>ಫ್ರೀಡಂ ಆಫ್ ಎಕ್ಸ್‌ಪ್ರೆಶನ್ ಅವಾರ್ಡ್ಸ್‌ ಪ್ರಶಸ್ತಿಗೆ ಈ ಹಿಂದೆ ಪತ್ರಿಕೋದ್ಯಮ ವಿಭಾಗದಿಂದ ತಮ್ಮ MeToo ಚಳವಳಿಯಲ್ಲಿ ವಹಿಸಿದ &nbsp;ಮಹತ್ವದ ಪಾತ್ರಕ್ಕಾಗಿ 2022 ರಲ್ಲಿ ಚೀನಾದ ಪತ್ರಕರ್ತೆ ಹುವಾಂಗ್ ಕ್ಸುಕಿನ್ ಭಾಜನರಾಗಿದ್ದರು. &nbsp;ಸೆಪ್ಟೆಂಬರ್ 2021 ರಲ್ಲಿ ಕಣ್ಮರೆಯಾದ ಇವರು ಮತ್ತು ಕಾರ್ಮಿಕಪರ ಹೋರಾಟಗಾರ ವಾಂಗ್ ಜಿಯಾನ್‌ಬಿಂಗ್ ವಿರುದ್ಧ “ದೇಶದ ಅಧಿಕಾರದ ವಿಧ್ವಂಸಕತೆಯನ್ನು ಪ್ರಚೋದಿಸುವ” ಆರೋಪದ ಮೇಲೆ ಚೀನಾ ಸರ್ಕಾರ ಬಂಧಿಸಿತು. ಸದ್ಯ ಇವರು ಬಂಧನದಲ್ಲಿಯೇ ಇದ್ದಾರೆ.</p>



<p>2021 ರಲ್ಲಿ ನೈಜೀರಿಯಾ ಪತ್ರಕರ್ತೆ ಸಮೀರಾ ಸಬೌ ಪ್ರಶಸ್ತಿಯನ್ನು ಗೆದ್ದಿದ್ದರು. 2020 ರಲ್ಲಿ ನಡೆದ ರಕ್ಷಣಾ ಸಚಿವಾಲಯದ ಭ್ರಷ್ಟಾಚಾರವನ್ನು ವರದಿ ಮಾಡಿದ್ದಕ್ಕಾಗಿ 2021 ರಲ್ಲಿ ಅವರನ್ನು ಅನೇಕ ಬಾರಿ ಬಂಧಿಸಿದರು.</p>
]]></content:encoded>
					
		
		
			</item>
	</channel>
</rss>
