<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>gandhi &#8211; Peepal Media</title>
	<atom:link href="https://peepalmedia.com/tag/gandhi/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 22 Mar 2025 09:59:39 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>gandhi &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಗಾಂಧೀಜಿ, ಪೊಲೀಸ್ ಅಧಿಕಾರಿ ವಿರುದ್ಧ ನಿಂದನಾತ್ಮಕ ಹೇಳಿಕೆ: ಯತಿ ನರಸಿಂಹಾನಂದನ ಮೇಲೆ ಕೇಸ್ ದಾಖಲು</title>
		<link>https://peepalmedia.com/case-registered-against-yati-narasimhanand-for-making-derogatory-remarks-against-gandhiji-police-officer/</link>
		
		<dc:creator><![CDATA[ಮಂಜುಳ ಹುಲಿಕುಂಟೆ]]></dc:creator>
		<pubDate>Sat, 22 Mar 2025 09:59:38 +0000</pubDate>
				<category><![CDATA[ಕೋಮುವಾದ]]></category>
		<category><![CDATA[ದೇಶ]]></category>
		<category><![CDATA[gandhi]]></category>
		<category><![CDATA[gaziyabadh]]></category>
		<category><![CDATA[hate speech]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[police]]></category>
		<category><![CDATA[police case]]></category>
		<category><![CDATA[UP]]></category>
		<category><![CDATA[uttar pradesh]]></category>
		<category><![CDATA[Yati Narasimhanand]]></category>
		<guid isPermaLink="false">https://peepalmedia.com/?p=55590</guid>

					<description><![CDATA[ಗಾಜಿಯಾಬಾದ್: ಗಾಂಧೀಜಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ವಿಡಿಯೋಗಳನ್ನು ಆಧರಿಸಿ ದಾಸ್ನಾ ದೇವಾಲಯದ ಅರ್ಚಕ ಯತಿ ನರಸಿಂಹಾನಂದ ಗಿರಿ ಸ್ವಾಮೀಜಿಯ ವಿರುದ್ಧ ಮಾರ್ಚ್ 22, ಶನಿವಾರ ಅಧಿಕೃತವಾಗಿ ಪ್ರಕರಣ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.&#160; ನರಸಿಂಹಾನಂದ ಗಿರಿ ಸ್ವಾಮೀಜಿ ವಿರುದ್ಧ ಉಪ ಪೊಲೀಸ್ ಆಯುಕ್ತ ಸುರೇಂದ್ರ ನಾಥ್ ತಿವಾರಿ ಅವರು ವೇವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ವಾಮೀಜಿ ಹೇಳಿಕೆಗಳು ಕೋಮು ಸಾಮರಸ್ಯ ಕೆರಳಿಸುವ ಉದ್ದೇಶವನ್ನು ಹೊಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅರ್ಚಕ [&#8230;]]]></description>
										<content:encoded><![CDATA[
<p><strong>ಗಾಜಿಯಾಬಾದ್: </strong>ಗಾಂಧೀಜಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ವಿಡಿಯೋಗಳನ್ನು ಆಧರಿಸಿ ದಾಸ್ನಾ ದೇವಾಲಯದ ಅರ್ಚಕ ಯತಿ ನರಸಿಂಹಾನಂದ ಗಿರಿ ಸ್ವಾಮೀಜಿಯ ವಿರುದ್ಧ ಮಾರ್ಚ್ 22, ಶನಿವಾರ ಅಧಿಕೃತವಾಗಿ ಪ್ರಕರಣ ದಾಖಲಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.&nbsp;</p>



<p>ನರಸಿಂಹಾನಂದ ಗಿರಿ ಸ್ವಾಮೀಜಿ ವಿರುದ್ಧ ಉಪ ಪೊಲೀಸ್ ಆಯುಕ್ತ ಸುರೇಂದ್ರ ನಾಥ್ ತಿವಾರಿ ಅವರು ವೇವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ವಾಮೀಜಿ ಹೇಳಿಕೆಗಳು ಕೋಮು ಸಾಮರಸ್ಯ ಕೆರಳಿಸುವ ಉದ್ದೇಶವನ್ನು ಹೊಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p>



<p>ಅರ್ಚಕ ಯತಿ ನರಸಿಂಹಾನಂದ ಮಹಾತ್ಮ ಗಾಂಧಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಮೂಲಕ ಕ್ರಿಮಿನಲ್ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಆಯುಕ್ತ ಸುರೇಂದ್ರನಾಥ್ ತಿವಾರಿ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.&nbsp;</p>



<p>ಸ್ವಾಮೀಜಿ ಅವರು ಮಾತನಾಡಿರುವ ವಿಡಿಯೊದಲ್ಲಿ ಗಾಜಿಯಾಬಾದ್ ಪೊಲೀಸ್ ಆಯುಕ್ತ ಮತ್ತು ಲೋನಿಯ ಸಹಾಯಕ ಪೊಲೀಸ್ ಆಯುಕ್ತರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಎಂದೂ ಸುರೇಂದ್ರ ಆರೋಪಿಸಿದ್ದಾರೆ.</p>



<p>ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>



<p></p>
]]></content:encoded>
					
		
		
			</item>
		<item>
		<title>ವಾಟ್ಸಾಪ್ ಯೂನಿವರ್ಸಿಟಿಯ ಗಾಂಧಿ ನಮ್ಮ ಗಾಂಧಿಯಲ್ಲ!!</title>
		<link>https://peepalmedia.com/gandhi-of-whatsapp-university-is-not-our-gandhi/</link>
		
		<dc:creator><![CDATA[Peepal Media]]></dc:creator>
		<pubDate>Tue, 31 Jan 2023 11:03:49 +0000</pubDate>
				<category><![CDATA[ಯುವ ನೋಟ]]></category>
		<category><![CDATA[gandhi]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[WhatsApp University]]></category>
		<guid isPermaLink="false">https://peepalmedia.com/?p=19407</guid>

					<description><![CDATA[ಈ ನೆಲ ಕಂಡ ಅದ್ವಿತೀಯ ಚೇತನಗಳಲ್ಲಿ ಒಂದಾಗಿರುವ ಗಾಂಧೀಜಿಯನ್ನು ಧಿಕ್ಕರಿಸಿ ಮಾತಾಡುವ, ಗಾಂಧಿ ತತ್ತ್ವಗಳನ್ನು ಹಳೆಯ ಕಾಲದ ಥಿಯರಿ ಎಂದು ಹೀಯಾಳಿಸುವ, ಗಾಂಧಿಯಿಂದಲೇ ದೇಶ ಹಾಳಾಯಿತೆಂದು ಭಾವಿಸುವ ಯುವ ಜನತೆ ಹೆಚ್ಚುತ್ತಿರುವಾಗ ʼವಾಟ್ಸಾಪ್‌ ಯೂನಿವರ್ಸಿಟಿʼ ಸೃಷ್ಟಿಸಿದ ಗಾಂಧಿ ನಮ್ಮ ಗಾಂಧಿಯಲ್ಲ ಎಂದು ಗಟ್ಟಿದನಿಯಲ್ಲಿ ಹೇಳುತ್ತಾರೆ ಸಂತೇಶಿವರದ ಯುವಕ ವಿನಯ್ ಎಸ್ ಕಾಂತ. ಜಗತ್ತಿಗೆ ಶಾಂತಿ, ಸತ್ಯ, ಅಹಿಂಸೆ, ಸರ್ವೋದಯ ಸಾರಿ ಜಗತ್ತಿನ ಹಲವು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾದರಿಯಾದ ಗಾಂಧಿ ಒಬ್ಬ ಮತಾಂಧನ ಕೈಯಿಂದ ಹತ್ಯೆಯಾಗಿ 75 ವರ್ಷ. [&#8230;]]]></description>
										<content:encoded><![CDATA[
<p class="has-cyan-bluish-gray-background-color has-background">ಈ ನೆಲ ಕಂಡ ಅದ್ವಿತೀಯ ಚೇತನಗಳಲ್ಲಿ ಒಂದಾಗಿರುವ ಗಾಂಧೀಜಿಯನ್ನು ಧಿಕ್ಕರಿಸಿ ಮಾತಾಡುವ, ಗಾಂಧಿ ತತ್ತ್ವಗಳನ್ನು ಹಳೆಯ ಕಾಲದ ಥಿಯರಿ ಎಂದು ಹೀಯಾಳಿಸುವ, ಗಾಂಧಿಯಿಂದಲೇ ದೇಶ ಹಾಳಾಯಿತೆಂದು ಭಾವಿಸುವ ಯುವ ಜನತೆ ಹೆಚ್ಚುತ್ತಿರುವಾಗ ʼವಾಟ್ಸಾಪ್‌ ಯೂನಿವರ್ಸಿಟಿʼ ಸೃಷ್ಟಿಸಿದ ಗಾಂಧಿ ನಮ್ಮ ಗಾಂಧಿಯಲ್ಲ ಎಂದು ಗಟ್ಟಿದನಿಯಲ್ಲಿ ಹೇಳುತ್ತಾರೆ ಸಂತೇಶಿವರದ ಯುವಕ ವಿನಯ್ ಎಸ್ ಕಾಂತ.</p>



<p>ಜಗತ್ತಿಗೆ ಶಾಂತಿ, ಸತ್ಯ, ಅಹಿಂಸೆ, ಸರ್ವೋದಯ ಸಾರಿ ಜಗತ್ತಿನ ಹಲವು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾದರಿಯಾದ ಗಾಂಧಿ ಒಬ್ಬ ಮತಾಂಧನ ಕೈಯಿಂದ ಹತ್ಯೆಯಾಗಿ 75 ವರ್ಷ. ಇಂದಿಗೂ ಗಾಂಧಿ ಬೇರೆ ದೇಶಕ್ಕೆ ಅರ್ಥವಾದಷ್ಟು ಭಾರತಕ್ಕೆ ಅರ್ಥ ಆಗಿಲ್ಲ. ವಾಟ್ಸಾಪ್‌, ಫೇಸ್ಬುಕ್,&nbsp;ಯುಟ್ಯೂಬ್ ಮುಂತಾದ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯರಿಗೆ ಗಾಂಧಿ ಹಿಂದೂ ವಿರೋಧಿ, ಮುಸ್ಲಿಂ ಪ್ರೇಮಿ, ದೇಶ ವಿಭಜಕ, ಆಂದೋಲನ ಜೀವಿ, ಮಜಾವಾದಿ. ಗಾಂಧೀಜಿಯವರ ರಾಜಕೀಯ ವಿರೋಧಿಯಾಗಿದ್ದ ಬ್ರಿಟಿಷರು ಗಾಂಧಿಯನ್ನುಇಷ್ಟೊಂದು ಕೆಳಮಟ್ಟದಲ್ಲಿ ಟೀಕಿಸಿರಲಾರರು.&nbsp;ಇಂದು ಇಂಗ್ಲೆಂಡ್ ದೇಶದಲ್ಲಿ ಇವರ ಹಲವಾರು ಪ್ರತಿಮೆಗಳಿವೆ. ಆದರೆ ನಮ್ಮಲ್ಲಿ ಇಲ್ಲಸಲ್ಲದ ಫೋಟೋಶಾಪ್ ಗಳು, ಕಥೆಗಳು, ಆಧಾರವೇ ಇಲ್ಲದ ಇತಿಹಾಸ ಕಟ್ಟಿ ಗಾಂಧಿಯನ್ನು ತೆಗಳುತ್ತಿದ್ದೇವೆ. ಗಾಂಧಿಯ ಪ್ರತಿಮೆಗಳನ್ನು ವಿರೂಪ ಗೊಳಿಸುತ್ತಿದ್ದೇವೆ. ಹೀಗೆಲ್ಲ ವಿಕಾರವಾಗಿ ವರ್ತಿಸುವ ನಾವು ಗಾಂಧೀಜೀಯವರ ನಿಜ ವಿಚಾರಗಳನ್ನು ಓದಿದ್ದೇವೆಯೇ? ಇಲ್ಲ. ಗಾಂಧೀಜಿ ಮಾತ್ರವಲ್ಲ ಅಂಬೇಡ್ಕರ್, ಭಗತ್ ಸಿಂಗ್, ವಿವೇಕಾನಂದ, ಪರಮಹಂಸರು, ಸುಭಾಷ್ ಚಂದ್ರ ಬೋಸ್, ನೆಹರು&nbsp; ಮುಂತಾದವರ ಬರಹಗಳನ್ನು ಓದಿದ್ದೇವೆಯೇ? ಇಲ್ಲ. ಆದರೆ ಯಾರೋ ಪುಂಖಾನು ಪುಂಖವಾಗಿ ಪುಂಗುವ ಪುಂಗಿದಾಸರ ಮಾತುಗಳನ್ನು ಕೇಳಿ, ವಾಟ್ಸಾಪ್‌ ಗಳಲ್ಲಿ ಹರಿದು ಬರುವ ಸುದ್ದಿಗಳನ್ನೇ &nbsp;ಗ್ರಹಿಕೆಗೆ ತೆಗೆದುಕೊಂಡು, ಸುಳ್ಳುಗಳನ್ನು ಸತ್ಯವೆಂದು ನಂಬಿ, ನಮ್ಮತನವನ್ನೆ ಕಳೆದುಕೊಂಡು ಬೇರೆಯವರ ದ್ವೇಷದ ಅಜೆಂಡಾದ ಭಾಗವಾಗುತ್ತಿದ್ದೇವೆ. ಇತಿಹಾಸದಲ್ಲಿ ತಪ್ಪು ಹುಡುಕಿ ಅದನ್ನು ಮತ್ತೆ ಬರೆಯಬೇಕು ಎಂಬುದು &nbsp;ಇಂದಿನ ನಮ್ಮ ಫ್ಯಾಷನ್ ಆಗಿದೆ!</p>



<p><strong>ಗಾಂಧಿ ಹೀಗಿದ್ದರು &#8230;</strong></p>



<p>ಗಾಂಧಿ ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿಯನ್ನು ಮುಗಿಸಿ ಹಿಂದಿರುಗಿ ಬರುವಾಗ ಅಲ್ಲಿದ್ದ ಭಾರತೀಯರು ಅವರನ್ನು ಸನ್ಮಾನಿಸಿ ಹಲವಾರು ಉಡುಗೊರೆಗಳನ್ನು ನೀಡಿದ್ದರು. ಅದರಲ್ಲಿ ಒಂದು ಬೆಲೆ ಬಾಳುವ ಚಿನ್ನದ ನೆಕ್ ಲೆಸ್ ಇದ್ದು ಅದು ಕಸ್ತೂರ್ ಬಾ ಅವರಿಗೆ ಬಹಳ ಇಷ್ಟವಾಗಿದ್ದರೂ ಆ ಬೆಲೆ ಬಾಳುವ ಉಡುಗೊರೆಯನ್ನು ಹಿಂದಿರುಗಿಸಿದವರು ಗಾಂಧೀಜಿ. ಇಂತಹ ನಡೆವಳಿಕೆಯನ್ನು ಇಂದಿನ ಪೀಳಿಗೆಯ ಯಾವ ನಾಯಕರಲ್ಲಿ, ಅಧಿಕಾರಿಗಳಲ್ಲಿ&nbsp;ನಿರೀಕ್ಷಿಸಬಹುದು?</p>



<p><strong>ಗಾಂಧೀಜಿಯ ಅಹಿಂಸೆ</strong></p>



<p>ಅಹಿಂಸೆ ಗಾಂಧೀಜಿಯವರ ಮೂಲ ತತ್ತ್ವಗಳಲ್ಲಿ ಒಂದು. ಇಂದು ವಾಟ್ಸಾಪ್ ಯೂನಿವರ್ಸಿಟಿಯ ಪ್ರಕಾರ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸೋದು ಅಹಿಂಸೆ. ಆದರೆ ಗಾಂಧೀಜಿಯವರ ನಿಜ ಅಹಿಂಸೆ ಅಂದರೆ ಯುದ್ಧಕ್ಕೆ ವಿರೋಧ.</p>



<p>ಇನ್ನು ಅಹಿಂಸೆಯಿಂದ, ಉಪವಾಸದಿಂದ ಸ್ವಾತಂತ್ರ್ಯ ಬರಲಿಲ್ಲ ಎನ್ನುತ್ತಾರೆ. ಆದರೆ ದೇಶದ ಎಲ್ಲಾ ವರ್ಗದ ಜನರನ್ನು ಸ್ವಾತಂತ್ರ್ಯ ಚಳುವಳಿಗೆ ಧುಮುಕುವಂತೆ ಮಾಡಿದ್ದು ಅಂದಿನ ಮಾಸ್ ಲೀಡರ್ ಗಾಂಧೀಜಿ.<a>ಸ್ವಾತಂತ್ರ್ಯ ಚಳುವಳಿಯಲ್ಲಿ&nbsp; ಭಾಗವಹಿಸದೇ&nbsp; ಇಂದು ಅದರ ಬಗ್ಗೆಪುಂಖಾನು ಪುಂಖವಾಗಿ ಮಾತನಾಡುವುದೇ ವಿಪರ್ಯಾಸ.</a></p>



<p>ಗಾಂಧಿಜೀಯವರ ಮೇಲೆ ಬರುವ ಮತ್ತೊಂದು ಮುಖ್ಯ ಆರೋಪ ಅವರು ಹಿಂದೂ ವಿರೋಧಿ, ಪಾಕಿಸ್ತಾನದ ಪರ ಎನ್ನುವುದು. ಗಾಂಧಿ ತನ್ನ ಜೀವನ ಪೂರ್ತಿ ಅನುಸರಿಸಿದ್ದು ಹಿಂದೂ ಧರ್ಮದ ಜೀವನ ದರ್ಶನ, ಭಗವದ್ಗೀತೆ, ಉಪನಿಷತ್,‌ ಸತ್ಯ ಹರಿಶ್ಚಂದ್ರ, ಪಿತೃವಾಕ್ಯ ಪರಿಪಾಲಕ ಶ್ರೀರಾಮ. ಹೀಗಿರುವಾಗ ಗಾಂಧಿ ಒಬ್ಬ ನಿಜವಾದ ಅರ್ಥದಲ್ಲಿ ಹಿಂದೂ ಆಗಿದ್ದರು. ಅಸ್ಪೃಶ್ಯತೆಯ ವಿರೋಧಿ, ಗೋಹತ್ಯೆ ನಿಷೇಧದ ಪರ ಇದ್ದವರು. ಅವರೊಬ್ಬ ಆಧ್ಯಾತ್ಮಿಕ ಹಿಂದೂ ಆಗಿದ್ದರು. ರಾಜಕೀಯ ಲಾಭಕ್ಕಾಗಿ ಮತಾಂಧತೆಯನ್ನು ಹರಡುವ ಹಿಂದೂ ಆಗಿರಲಿಲ್ಲ. ಅವರಿಗೆ ಹಿಂದೂ ಮುಸ್ಲಿಂ ಏಕತೆ ಎಲ್ಲಕ್ಕಿಂತ ಮುಖ್ಯವಾಗಿತ್ತು. ಸ್ವಾತಂತ್ರ್ಯ ಚಳುವಳಿಯಲ್ಲಿ ಎಲ್ಲಾ ಕಡೆ ಈ ವಿಚಾರವನ್ನು ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಬಂದಾಗ ಗಾಂಧಿ ಆ ಸಂಭ್ರಮಾಚರಣೆಯಲ್ಲಿರಲಿಲ್ಲ . ಬದಲಿಗೆ ಹಿಂದೂ ಮುಸ್ಲಿಂ ಗಲಭೆ ಆರಿಸಲು ಕೊಲ್ಕತ್ತಾದಲ್ಲಿದ್ದರು!</p>



<p><strong>ಗಾಂಧಿಜಿ ಮತ್ತು ಸುಭಾಷ್ ಚಂದ್ರ ಬೋಸ್</strong></p>



<p>ಗಾಂಧಿಜೀ ಮತ್ತು ಸುಭಾಷ್ ಚಂದ್ರ ಬೋಸ್ ನಡುವೆ ಇಂದು ಕಂದಕವನ್ನೆ ವಾಟ್ಸಾಪ್‌ ಯೂನಿವರ್ಸಿಟಿ ಸೃಷ್ಟಿಸಿದೆ. ಗಾಂಧೀಜಿ ಮತ್ತು ನೇತಾಜಿ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದದ್ದು ನಿಜ. ಬೋಸ್ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಫಾರ್ವರ್ಡ್ ಬ್ಲಾಕ್ ಪಕ್ಷವನ್ನು ಸ್ಥಾಪಿಸಿದ್ದು ಈಗ ಇತಿಹಾಸ. ಆದರೆ ಅದೇ ಸುಭಾಷ್ ಚಂದ್ರ ಬೋಸ್ ರವರು ತಮ್ಮ ಭಾರತೀಯ ಸೇನೆಯ ರಿಜಿಮೆಂಟ್ ಗಳಿಗೆ ಗಾಂಧಿ, ನೆಹರು, ಆಜಾದ್ ಮತ್ತು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಹೆಸರನ್ನಿಟ್ಟಿದ್ದರು! ಗಾಂಧೀಜೀಯವರನ್ನು ರಾಷ್ಟ್ರಪಿತ ಎಂದು ತಮ್ಮ ರೇಡಿಯೋ ಅವತರಣಿಕೆಯಲ್ಲಿ ಕರೆದಿದ್ದು ನೇತಾಜಿ. ನೇತಾಜಿಯವರನ್ನು ʼಸ್ವಾತಂತ್ರ್ಯ ಸೇನಾನಿಗಳ ರಾಜಕುಮಾರʼ ಎಂದು ಕರೆದದ್ದು ಇತಿಹಾಸ.&nbsp;</p>



<p>ಇತ್ತೀಚೆಗೆ ನೇತಾಜಿ ಮಗಳು ಅನಿತಾ ಬೋಸ್ ಅವರು ನಮ್ಮ ತಂದೆಗೆ ಗಾಂಧಿ ಪ್ರೇರಣೆಯಾಗಿದ್ದರು,&nbsp; ನೆಹರೂ ಮತ್ತು ನಮ್ಮ ತಂದೆ ಉತ್ತಮ ಸ್ನೇಹಿತರು ಮತ್ತು ಜಾತ್ಯತೀತ ಎಡಪಂಥೀಯ ನಾಯಕರಾಗಿದ್ದರು ಎಂದಿದ್ದನ್ನು ನೆನಪಿಸಿಕೊಳ್ಳಬಹುದು.</p>



<p><strong>ಇಂದು &nbsp;ಗಾಂಧೀ ನೆನಪು ಹೀಗೆ&#8230;</strong></p>



<p>ನಿರ್ಮಲ ಭಾರತ ಗಾಂಧಿಯ ಕನ್ನಡಕದೊಂದಿಗೆ ಸ್ವಚ್ಛ ಭಾರತವಾಗಿ ಬದಲಾಯಿತು. ಆದರೆ ಮತಾಂಧತೆ, ಜಾತೀಯತೆ, ಸುಳ್ಳು ಹಬ್ಬಿಸುವ ಮೆದುಳುಗಳು ಇನ್ನೂ ಸ್ವಚ್ಛವಾಗುವ ಮನಸ್ಸು ಮಾಡಲಿಲ್ಲ.&nbsp;2013ರ ಕಂಪನಿ ಕಾಯ್ದೆಯ ಮೂಲಕ ಗಾಂಧಿಯ ಸಮಾಜವಾದ ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಆಯಿತು. ಇದರಿಂದಾಗಿ ಶ್ರೀಮಂತರು ಬಡವರಿಗೆ ಒಂದಿಷ್ಟು ಲಾಭಾಂಶ ನೀಡಿ ಪೋಟೋ ತೆಗೆದುಕೊಂಡು ಪ್ರಚಾರ ಪಡೆಯುವಂತಾಯಿತು. ಹಳ್ಳಿಗಳು ಇಂದಿಗೂ ಅಭಿವೃದ್ಧಿ ಕಾಣದಾಗಿವೆ. ಆದರೆ ಅದೇ ಹಳ್ಳಿಗಳಲ್ಲಿ ಮಹಾತ್ಮ ಗಾಂಧಿ ಹೆಸರಲ್ಲಿ ಉದ್ಯೋಗ ಖಾತ್ರಿ ಯೋಜನೆ ನಡೆಯುತ್ತಿದೆ! ಪಕ್ಷಗಳಿಲ್ಲದ ಪ್ರಜಾಪ್ರಭುತ್ವದ ಕನಸು ಕಂಡಿದ್ದವರಿಗೆ ಇಂದಿನ&nbsp; ಪಕ್ಷಾಂತರ, ಆಪರೇಷನ್ ಗಳು! ಖಾದಿ ಬಳಸುವವರು ಇಲ್ಲದೆ ಗ್ರಾಮ ಪಂಚಾಯಿತಿಗಳು, ಗುಡಿ ಮತ್ತು ಸಣ್ಣ ಕೈಗಾರಿಕೆಗಳು ಸರ್ಕಾರದ ಬೆಂಬಲ ಇಲ್ಲದೆ ಕುಂಟುತ್ತಿವೆ. ಗಾಂಧಿಯ ಗ್ರಾಮ ಸ್ವರಾಜ್ ಸ್ವದೇಶೀ ಆತ್ಮ ನಿರ್ಭರವಾಗಿ ಪ್ರಚಾರ ಪಡೆಯಿತು. ಆದರೆ ಯಶಸ್ಸು ಕಾಣಲು ಒದ್ದಾಡುತ್ತಿದೆ.ಇಂದಿನ ಜಾಗತಿಕ ಸಮಸ್ಯೆಯಾದ ಹವಾಮಾನ ಬದಲಾವಣೆಗೆ ಗಾಂಧೀಜಿಯವರ ಜೀವನ ವಿಧಾನದ ಸುಸ್ಥಿರಾಭಿವೃದ್ಧಿಯೇ ಉತ್ತರವಾಗಿದೆ.</p>



<p>&nbsp;ತಮ್ಮ ಜೀವನದಲ್ಲಿ ಯಾವುದೇ ಅಧಿಕಾರ ಅನುಭವಿಸದೇ&nbsp; ತನ್ನ ಅರ್ಧ ಜೀವನವನ್ನು ಅರೆಬೆತ್ತಲೆ ಫಕೀರನಾಗಿ ಕಳೆದ ಮಹಾತ್ಮ&nbsp; ವಿಶ್ವಕ್ಕೆ ತನ್ನ ಅಹಿಂಸೆ,&nbsp; ಸತ್ಯಾಗ್ರಹ ಚಳವಳಿಯ ಮಾರ್ಗ ತೋರಿದರು. ಇಂದಿಗೂ ಯಾವುದೇ ಜಾತಿ, ಸಂಘಟನೆಗಳು, ಪಕ್ಷಗಳು ಕ್ಲೇಮ್ ಮಾಡದ ವಾದ ಗಾಂಧಿವಾದವಾಗಿದೆ. ವಿಶ್ವ ಸಂಸ್ಥೆಯಿಂದ&nbsp; ಗಾಂಧಿಯವರ ಜನ್ಮದಿನಾಚರಣೆಯನ್ನು ಅಹಿಂಸಾ ದಿನವಾಗಿ ಆಚರಿಸಲಾಗುತ್ತದೆ. ಯಾರು ಏನೇ ಹೇಳಲಿ ಗಾಂಧೀಜಿ ನಿಜವಾಗಿ&nbsp; ಮಹಾತ್ಮ.ಇಂದು ಇಡೀ ವಿಶ್ವ ಭಾರತವನ್ನು ಗುರುತಿಸಿರುವುದು ಗಾಂಧಿ, ಅಂಬೇಡ್ಕರ್, ವಿವೇಕಾನಂದ, ನೆಹರೂರಂತಹ ಚೇತನಗಳಿಂದಲೇ ಹೊರತು ವಾಟ್ಸಾಪ್‌ &nbsp;ಯೂನಿವರ್ಸಿಟಿಯ ವೀರರಿಂದಲ್ಲ.</p>



<p><a><strong>ವಿನಯ್ ಎಸ್ ಕಾಂತ</strong></a></p>



<p>ಸಂತೇಶಿವರ</p>



<figure class="wp-block-table"><table><tbody><tr><td></td></tr></tbody></table></figure>
]]></content:encoded>
					
		
		
			</item>
		<item>
		<title>ಗುಜರಾತ್‌ ವಿಧಾನಸಭೆಗೆ ಚುನಾವಣಾ ದಿನಾಂಕ ಘೋಷಣೆ</title>
		<link>https://peepalmedia.com/ec-anounces-gujarath-election-dates/</link>
		
		<dc:creator><![CDATA[Peepal Media]]></dc:creator>
		<pubDate>Thu, 03 Nov 2022 07:31:02 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ahmadabad]]></category>
		<category><![CDATA[congress]]></category>
		<category><![CDATA[EC]]></category>
		<category><![CDATA[gandhi]]></category>
		<category><![CDATA[gujarat election]]></category>
		<category><![CDATA[gujarath election]]></category>
		<category><![CDATA[kannada]]></category>
		<category><![CDATA[modi]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[rahul]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=13921</guid>

					<description><![CDATA[ಕೊನೆಗೂ ಚುನಾವಣಾ ಆಯೋಗವು ಗುಜರಾತ್‌ ವಿಧಾನಸಭೆಗೆ ಚುನಾವಣಾ ದಿನಾಂಕವನ್ನು ಘೋಷಿಸಿದ್ದು, ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಡಿಸೆಂಬರ್ 1ರಂದು 89 ಸ್ಥಾನಗಳಿಗೆ, ಡಿಸೆಂಬರ್ 5ರಂದು 93 ಸ್ಥಾನಗಳಿಗೆ ಮತದಾನ ನಡೆಯಲಿದೆಯೆಂದು ಆಯೋಗ ತಿಳಿಸಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಗುಜರಾತ್ ಚುನಾವಣೆಯಲ್ಲಿ 4.9 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ 34,000 ಕ್ಕಿಂತ ಹೆಚ್ಚು ಸೇರಿದಂತೆ 51,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು [&#8230;]]]></description>
										<content:encoded><![CDATA[
<p>ಕೊನೆಗೂ ಚುನಾವಣಾ ಆಯೋಗವು ಗುಜರಾತ್‌ ವಿಧಾನಸಭೆಗೆ ಚುನಾವಣಾ ದಿನಾಂಕವನ್ನು ಘೋಷಿಸಿದ್ದು, ಚುನಾವಣೆಯು ಎರಡು ಹಂತಗಳಲ್ಲಿ ನಡೆಯಲಿದ್ದು, ಡಿಸೆಂಬರ್ 1ರಂದು 89 ಸ್ಥಾನಗಳಿಗೆ, ಡಿಸೆಂಬರ್ 5ರಂದು 93 ಸ್ಥಾನಗಳಿಗೆ ಮತದಾನ ನಡೆಯಲಿದೆಯೆಂದು ಆಯೋಗ ತಿಳಿಸಿದೆ. </p>



<p>ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಗುಜರಾತ್ ಚುನಾವಣೆಯಲ್ಲಿ 4.9 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಮತದಾರರಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ 34,000 ಕ್ಕಿಂತ ಹೆಚ್ಚು ಸೇರಿದಂತೆ 51,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.</p>



<p>182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 92 ಸದಸ್ಯರ ಬೆಂಬಲ ಬೇಕಿದೆ. ಪ್ರಸ್ತುತ ಆಡಳಿತಾರೂಢ ಬಿಜೆಪಿ 111, ಕಾಂಗ್ರೆಸ್​ 62 ಸದಸ್ಯ ಬಲ ಹೊಂದಿವೆ. ಐದು ಸ್ಥಾನಗಳು ವಿವಿಧ ಕಾರಣಗಳಿಂದ ತೆರವಾಗಿವೆ.</p>



<p>ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಮಹಿಳೆಯರು, ವೃದ್ಧರು, ಅಂಗವಿಕಲರಿಗೆ ಪ್ರವೇಶ ಮತ್ತು ಸೇರ್ಪಡೆಗಾಗಿ ವಿಶೇಷ ವೀಕ್ಷಕರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಿಯೋಜಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.</p>



<p>ಇತ್ತೀಚೆಗೆ ಹಿಮಾಚಲ ಪ್ರದೇಶದ ಚುನಾವಣಾ ದಿನಾಂಕವನ್ನು ಮಾತ್ರವೇ ಘೋಷಿಸಿ ಗುಜರಾತ್‌ ಚುನಾವಣಾ ದಿನಾಂಕ ನಿಗದಿಪಡಿಸದ ಚುನಾವಣಾ ಆಯೋಗದ ಕುರಿತು ಅಲ್ಲಲ್ಲಿ ಅಪಸ್ವರ ಕೇಳಿ ಬಂದಿತ್ತು. ಆಡಳಿತ ರೂಢ ಬಿಜೆಪಿಗೆ ಅದರ ಯೋಜನೆಗಳನ್ನು ಉದ್ಘಾಟಿಸಲು ಅನುವು ಮಾಡಿಕೊಡುವ ಸಲುವಾಗಿ ಹೀಗೆ ಮಾಡಲಾಗುತ್ತಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇದೆಲ್ಲದರಿಂದ ಕೆರಳಿದ ಆಯೋಗವು ತನ್ನ ವಿರುದ್ಧ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿತ್ತು.</p>



<p>ಇಂದು ಬೆಳಗಿನ ಹೊತ್ತು ಆಯೋಗ ಚುನಾವಣಾ ದಿನಾಂಕವನ್ನು ಪ್ರಕಟಿಸಿಲಿದೆ ಎಂದು ತಿಳಿದ ಕೂಡಲೇ ಅದಕ್ಕೆ ಪ್ರತಿಕ್ರಿಯೆಯಾಗಿ ಹಿರಿಯ ಪತ್ರಕರ್ತ ರಾಜದೀಪ್‌ ಸರ್ದೇಸಾಯಿ ಹೀಗೆ ಟ್ವೀಟ್‌ ಮಾಡಿದ್ದರು: &#8220;ಬ್ರೇಕಿಂಗ್ ನ್ಯೂಸ್: ಈಗ ಎಲ್ಲಾ ಸರ್ಕಾರಿ ಉದ್ಘಾಟನೆಗಳು ಮುಗಿದಿವೆ, ರಿಬ್ಬನ್ ಕಟ್, ಶಿಲಾನ್ಯಾಸ ಸಮಾರಂಭಗಳು, ಭರವಸೆಗಳನ್ನು ನೀಡುವುದು ಹೀಗೆ ಎಲ್ಲವೂ ಮುಗಿದಿದೆ. ಅಂತೂ ಕೊನೆಗೂ ಗುಜರಾತ್ ವಿಧಾನಸಭೆಯ ಚುನಾವಣಾ ದಿನಾಂಕವನ್ನು ಚುನಾವಣಾ ಆಯೋಗವು ಅಂತಿಮವಾಗಿ ಘೋಷಿಸಲಿದೆ! ಇಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಯಾರು ಹೊಂದಿಸುತ್ತಾರೆ ಎಂದು ನೀವೇ ಊಹಿಸಿ!&#8221;</p>



<p></p>
]]></content:encoded>
					
		
		
			</item>
		<item>
		<title>ಗಾಂಧಿ ತಾತನಿಗೆ</title>
		<link>https://peepalmedia.com/gandhi-taatanige/</link>
		
		<dc:creator><![CDATA[Vikas R Maurya]]></dc:creator>
		<pubDate>Sun, 02 Oct 2022 09:47:26 +0000</pubDate>
				<category><![CDATA[ಕಲೆ – ಸಾಹಿತ್ಯ]]></category>
		<category><![CDATA[gandhi]]></category>
		<category><![CDATA[gandhi jayanthi]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[padya]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[poem]]></category>
		<category><![CDATA[Vikas R Maurya]]></category>
		<category><![CDATA[writing]]></category>
		<guid isPermaLink="false">https://peepalmedia.com/?p=8572</guid>

					<description><![CDATA[ನಿನ್ನ ಬಿಸಿ ಅಪ್ಪುಗೆಗೆ ಕರಗಲೊಲ್ಲೆ ತಾತಅಪ್ಪನ ಭಾವುಣಿಕೆಗೆ ಕರಗಿದಂತೆನೀ ಅಡ್ಡಲಾಗಿ ನೆಟ್ಟ ಬೇಲಿ ಹಾರಲೇ ಹರುಷನನಗೂ ನನ್ನಪ್ಪನಂತೆ ನಿನ್ನ ವಯಸ್ಸಿಗೆ ತಾತನೆಂದೆ ಅಷ್ಟೆಕರುಳುಬಳ್ಳಿಯ ಸಂಬಂಧ ಹುಡುಕಬೇಡಪಾಯಿಖಾನೆ ತೊಳೆದದ್ದು ಪಶ್ಚಾತ್ತಾಪವೆಹಾಗೆಂದು ಸ್ವತಃ ಬೆನ್ನು ತಟ್ಟಿಕೊಳ್ಳಬೇಡ ರೈಲಿನಿಂದ ಹೊರದಬ್ಬಿದರೆಂದುರೈಲ್ವೇ ಹಳಿಯ ಮೇಲೆ ಕೋಪಗೊಂಡೆಯಾ?ಎಲ್ಲವನ್ನೂ ಬಿಟ್ಟ ನೀನುಬಿರ್ಲಾ ಮನೆ ಬಾಗಿಲು ತಟ್ಟಿದ್ದು ಸರಿಯಾ? ಏನೋ ನೀನೊಂದು‌ ನಿಗೂಢ ತಾತಅಪ್ಪನಂತೆ ತಿಳಿ ನೀರಲ್ಲಸಂತನಂತಿದ್ದ ನಿನ್ನಲ್ಲೊಬ್ಬರಾಜಕಾರಣಿ ಸದಾ ಮನೆ ಮಾಡಿದ್ದ ತಾಯ್ನಾಡಿಲ್ಲ ಎಂದವರ ಮುಂದೆಪ್ರಾಣ ಪಣಕ್ಕಿಟ್ಟು ಕುಂತೆಅದೇ ತಾಯ್ನಾಡಿಲ್ಲದವರ ತಾಯ್ತನದಿಮರುಜನ್ಮ ಪಡೆದೆ ಸಬರಮತಿಯಿಂದ ಸೇವಾಗ್ರಾಮದವರೆಗೆತಲೆ [&#8230;]]]></description>
										<content:encoded><![CDATA[
<p style="font-size:20px">ನಿನ್ನ ಬಿಸಿ ಅಪ್ಪುಗೆಗೆ ಕರಗಲೊಲ್ಲೆ ತಾತ<br>ಅಪ್ಪನ ಭಾವುಣಿಕೆಗೆ ಕರಗಿದಂತೆ<br>ನೀ ಅಡ್ಡಲಾಗಿ ನೆಟ್ಟ ಬೇಲಿ ಹಾರಲೇ ಹರುಷ<br>ನನಗೂ ನನ್ನಪ್ಪನಂತೆ</p>



<p style="font-size:20px">ನಿನ್ನ ವಯಸ್ಸಿಗೆ ತಾತನೆಂದೆ ಅಷ್ಟೆ<br>ಕರುಳುಬಳ್ಳಿಯ ಸಂಬಂಧ ಹುಡುಕಬೇಡ<br>ಪಾಯಿಖಾನೆ ತೊಳೆದದ್ದು ಪಶ್ಚಾತ್ತಾಪವೆ<br>ಹಾಗೆಂದು ಸ್ವತಃ ಬೆನ್ನು ತಟ್ಟಿಕೊಳ್ಳಬೇಡ</p>



<p style="font-size:20px">ರೈಲಿನಿಂದ ಹೊರದಬ್ಬಿದರೆಂದು<br>ರೈಲ್ವೇ ಹಳಿಯ ಮೇಲೆ ಕೋಪಗೊಂಡೆಯಾ?<br>ಎಲ್ಲವನ್ನೂ ಬಿಟ್ಟ ನೀನು<br>ಬಿರ್ಲಾ ಮನೆ ಬಾಗಿಲು ತಟ್ಟಿದ್ದು ಸರಿಯಾ?</p>



<p style="font-size:20px">ಏನೋ ನೀನೊಂದು‌ ನಿಗೂಢ ತಾತ<br>ಅಪ್ಪನಂತೆ ತಿಳಿ ನೀರಲ್ಲ<br>ಸಂತನಂತಿದ್ದ ನಿನ್ನಲ್ಲೊಬ್ಬ<br>ರಾಜಕಾರಣಿ ಸದಾ ಮನೆ ಮಾಡಿದ್ದ</p>



<p style="font-size:20px">ತಾಯ್ನಾಡಿಲ್ಲ ಎಂದವರ ಮುಂದೆ<br>ಪ್ರಾಣ ಪಣಕ್ಕಿಟ್ಟು ಕುಂತೆ<br>ಅದೇ ತಾಯ್ನಾಡಿಲ್ಲದವರ ತಾಯ್ತನದಿ<br>ಮರುಜನ್ಮ ಪಡೆದೆ</p>



<p style="font-size:20px">ಸಬರಮತಿಯಿಂದ ಸೇವಾಗ್ರಾಮದವರೆಗೆ<br>ತಲೆ ಬಾಗುವೆನು ನೀ ಬೆಳೆದ ಪರಿಗೆ<br>ನಿನ್ನೊಳಗೆ ನನ್ನಪ್ಪ ಬಿತ್ತಿದ<br>ಶತಮಾನದ ಅರಿವಿಗೆ</p>



<p style="font-size:20px">ಅದರೂ ನಿನ್ನ ಕೊಂದ ಗೋಡ್ಸೆಗಳು<br>ಮತ್ತೆ ಮತ್ತೆ ನಿನ್ನ ಕೊಲ್ಲುತ್ತಿರುವಾಗ<br>ರಣರಂಗದಲ್ಲಿ ನಾ ನಿನ್ನ ಪಕ್ಕ, ದಮ್ಮಯ್ಯ<br>ಮತ್ತೆ ಗೀತೆ ಹಿಡಿದು ಅಹಿಂಸೆ ಎನಬೇಡ</p>



<figure class="wp-block-image size-full is-resized"><img decoding="async" src="https://peepalmedia.com/wp-content/uploads/2022/10/WhatsApp-Image-2022-10-02-at-2.06.07-PM.jpeg" alt="" class="wp-image-8576" width="199" height="160"/></figure>



<ul class="wp-block-list" style="font-size:20px"><li><strong>ವಿಕಾಸ್ ಆರ್ ಮೌರ್ಯ</strong><br>ಕವಿ</li></ul>



<p style="font-size:20px">🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ<br><a href="https://chat.whatsapp.com/G94DLKaJrsBH07M7DvkqRo">https://chat.whatsapp.com/G94DLKaJrsBH07M7DvkqRo</a></p>



<p></p>



<p style="font-size:20px"><strong><mark style="background-color:rgba(0, 0, 0, 0)" class="has-inline-color has-vivid-red-color">ಇದನ್ನೂ ನೋಡಿ:</mark></strong> <mark style="background-color:rgba(0, 0, 0, 0)" class="has-inline-color has-vivid-purple-color">ಗಾಂಧಿ ಜನಯಂತಿ ಪ್ರಯುಕ್ತ ಸಾರ್ವಜನಿಕರಲ್ಲಿ ಪೌರಕಾರ್ಮಿಕರು ಹಾಗೂ ಮಾರ್ಷಲ್ಸ್ ಮನವಿ</mark></p>



<p style="font-size:20px">🟨<mark style="background-color:rgba(0, 0, 0, 0)" class="has-inline-color has-vivid-purple-color"> ದಯವಿಟ್ಟು ಪೀಪಲ್ ಮೀಡಿಯಾ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಫಾಲೋ ಮಾಡಿ</mark></p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="ಸಾರ್ವಜನಿಕರಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಮಾರ್ಷಲ್ಸ್‌ ಹಾಗು ಪೌರಕಾರ್ಮಿಕರ ಮನವಿ." width="696" height="392" src="https://www.youtube.com/embed/Qy6UR4hwwhs?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>
</div></figure>



<p><a href="https://fb.watch/fV5MIzhgVh/">https://fb.watch/fV5MIzhgVh/</a></p>



<p style="font-size:20px">ನಿರಂತರ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕನ್ನು ಒತ್ತಿ</p>



<p><a href="https://chat.whatsapp.com/G94DLKaJrsBH07M7DvkqRo">https://chat.whatsapp.com/G94DLKaJrsBH07M7DvkqRo</a></p>
]]></content:encoded>
					
		
		
			</item>
		<item>
		<title>ಗಾಂಧಿ ಎಂಬ ಚುಂಬಕ ಶಕ್ತಿ</title>
		<link>https://peepalmedia.com/gandhi-emba-chumbaka-shakti/</link>
		
		<dc:creator><![CDATA[N Jagadish Koppa]]></dc:creator>
		<pubDate>Sun, 02 Oct 2022 02:27:12 +0000</pubDate>
				<category><![CDATA[ವಿಶೇಷ]]></category>
		<category><![CDATA[gandhi]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<guid isPermaLink="false">https://peepalmedia.com/?p=8393</guid>

					<description><![CDATA[ವರ್ತಮಾನದ ಜಗತ್ತು ಅನುಭವಿಸುತ್ತಿರುವ ಆರ್ಥಿಕ ಹಿಂಜರಿತ, ನಿರುದ್ಯೋಗ, ಬಡತನ, ಭಯೋತ್ಪಾದನೆ, ಹಿಂಸೆ ಇವೆಲ್ಲಕ್ಕೂ ಗಾಂಧೀಜಿಯ ಚಿಂತನೆಗಳಲ್ಲಿ, ಸಿದ್ಧಾಂತಗಳಲ್ಲಿ ಪರಿಹಾರ ಇದೆ ಎಂಬುದನ್ನು ಆಧುನಿಕ ಜಗತ್ತು&#160; ಈಗ ಮರೆತಿದೆ ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಎನ್.ಜಗದೀಶ್ ಕೊಪ್ಪ. ಗಾಂಧೀಜಿ ನಮ್ಮನ್ನಗಲಿ ಮುಂದಿನ ವರ್ಷಕ್ಕೆ ಎಪ್ಪತ್ತೈದು ವರ್ಷವಾಗಲಿದೆ. ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಅನೇಕ ಪ್ರಜ್ಞಾವಂತರಲ್ಲಿ ಇಂದಿಗೂ ಕಾಡುತ್ತಿರುವ ವಿಶಿಷ್ಟ ವ್ಯಕ್ತಿತ್ವ ಅವರದು. ಇಪ್ಪತ್ತೊಂದನೆಯ ಶತಮಾನದ ಮಾಹಿತಿ ತಂತ್ರಜ್ಞಾನದ ಕ್ರಾಂತಿಯಿಂದಾಗಿ ನಮ್ಮ ಬದುಕಿನಲ್ಲಾದ ಬದಲಾವಣೆ, ಆಲೋಚನಾ ಕ್ರಮ ಹಾಗೂ ತಲೆಮಾರುಗಳ ದೃಷ್ಟಿಕೋನದಲ್ಲಿರುವ [&#8230;]]]></description>
										<content:encoded><![CDATA[
<p style="font-size:20px"><strong>ವರ್ತಮಾನದ ಜಗತ್ತು ಅನುಭವಿಸುತ್ತಿರುವ ಆರ್ಥಿಕ ಹಿಂಜರಿತ, ನಿರುದ್ಯೋಗ, ಬಡತನ, ಭಯೋತ್ಪಾದನೆ, ಹಿಂಸೆ ಇವೆಲ್ಲಕ್ಕೂ ಗಾಂಧೀಜಿಯ ಚಿಂತನೆಗಳಲ್ಲಿ, ಸಿದ್ಧಾಂತಗಳಲ್ಲಿ ಪರಿಹಾರ ಇದೆ ಎಂಬುದನ್ನು ಆಧುನಿಕ ಜಗತ್ತು&nbsp; ಈಗ ಮರೆತಿದೆ ಎನ್ನುತ್ತಾರೆ ಹಿರಿಯ ಪತ್ರಕರ್ತ, ಲೇಖಕ ಎನ್.ಜಗದೀಶ್ ಕೊಪ್ಪ.</strong></p>



<p style="font-size:20px">ಗಾಂಧೀಜಿ ನಮ್ಮನ್ನಗಲಿ ಮುಂದಿನ ವರ್ಷಕ್ಕೆ ಎಪ್ಪತ್ತೈದು ವರ್ಷವಾಗಲಿದೆ. ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಅನೇಕ ಪ್ರಜ್ಞಾವಂತರಲ್ಲಿ ಇಂದಿಗೂ ಕಾಡುತ್ತಿರುವ ವಿಶಿಷ್ಟ ವ್ಯಕ್ತಿತ್ವ ಅವರದು. ಇಪ್ಪತ್ತೊಂದನೆಯ ಶತಮಾನದ ಮಾಹಿತಿ ತಂತ್ರಜ್ಞಾನದ ಕ್ರಾಂತಿಯಿಂದಾಗಿ ನಮ್ಮ ಬದುಕಿನಲ್ಲಾದ ಬದಲಾವಣೆ, ಆಲೋಚನಾ ಕ್ರಮ ಹಾಗೂ ತಲೆಮಾರುಗಳ ದೃಷ್ಟಿಕೋನದಲ್ಲಿರುವ ಅಂತರ ಇವೆಲ್ಲವುಗಳ ನಡುವೆಯೂ ಗಾಂಧೀಜಿ ಇನ್ನೂ ಜೀವಂತವಾಗಿದ್ದಾರೆ. ಬೆಂಕಿಯಷ್ಟೇ ಮನುಷ್ಯನನ್ನು ಕೊಲ್ಲಬಲ್ಲದು ಎಂದು ನಂಬಿದ್ದ ಜಗತ್ತಿಗೆ, ತಣ್ಣಗಿನ ಮಂಜುಗೆಡ್ಡೆಯೂ ಮನುಷ್ಯನನ್ನು ಕೊಲ್ಲಬಲ್ಲದು ಎಂಬುದನ್ನು ತಮ್ಮ ಬದುಕಿನ ಮೂಲಕ ಮನುಕುಲಕ್ಕೆ &nbsp;ತೋರಿಸಿಕೊಟ್ಟ ಅನನ್ಯ ವ್ಯಕ್ತಿತ್ವ ಅವರದು.</p>



<p style="font-size:20px">1948 ರ ಜನವರಿಯಲ್ಲಿ ಹಂತಕನ ಗುಂಡಿಗೆ ಬಲಿಯಾಗುವ ಮುನ್ನ `ಗಾಂಧಿವಾದ&#8217; ಎಂಬುದು ತಲೆಯೆತ್ತಬಾರದು ಎಂದು ಗಾಂಧೀಜಿ ಅಪೇಕ್ಷಿಸಿದ್ದರು. `ಯಾವುದೇ ತತ್ವ-ಸಿದ್ಧಾಂತಗಳನ್ನು ನಾನು ಹುಟ್ಟುಹಾಕಿದೆನೆಂದು ಜಗತ್ತು ಹೇಳಬಾರದು. ಶಾಶ್ವತ ಸತ್ಯಗಳನ್ನು ನಮ್ಮ ದಿನ ನಿತ್ಯದ ಬದುಕು ಮತ್ತು ಸಮಸ್ಯೆಗಳಿಗೆ ನನ್ನದೇ ಆದ ರೀತಿಯಲ್ಲಿ ಅನ್ವಯಿಸಲು ನಾನು ಪ್ರಯತ್ನಿಸಿದೆ ಅಷ್ಟೆ&#8217; ಇದು ಗಾಂಧಿಯವರ ನಿಲುವಾಗಿತ್ತು. ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದ ನೆಲ್ಸನ್ ಮಂಡೇಲಾ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಪತ್ರಕರ್ತನೊಬ್ಬ, ಗಾಂಧೀಜಿಯಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಬಿಳಿಯರಿಂದ ಕರಿಯರಿಗೆ ಬಿಡುಗಡೆ ಸಿಕ್ಕಿತು ಅಲ್ಲವೆ? ಎಂದಾಗ, ಮಂಡೇಲಾ ʼಹೌದು ನೀವು ಆಫ್ರಿಕಾಕ್ಕೆ ಮೋಹನದಾಸ ಕರಮಚಂದ ಗಾಂಧಿಯನ್ನು ಕಳಿಸಿಕೊಟ್ಟಿರಿ, ನಾವು ಅವರನ್ನು ಮಹಾತ್ಮ ಗಾಂಧೀಜಿಯನ್ನಾಗಿ ಕಳಿಸಿಕೊಟ್ಟೆವುʼ ಎಂದು ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿದ್ದರು.</p>



<figure class="wp-block-image size-full is-resized"><img fetchpriority="high" decoding="async" src="https://peepalmedia.com/wp-content/uploads/2022/10/IMG-20221001-WA0049.jpg" alt="" class="wp-image-8468" width="701" height="883"/></figure>



<p style="font-size:20px">&nbsp;`ಶಕ್ತಿಯೇ ಸರ್ವಸ್ವ&#8217; ಎಂದು ನಂಬಿರುವ ಆಧುನಿಕ ಜಗತ್ತಿಗೆ ಗಾಂಧೀಜಿಯ ತತ್ವ ಹಾಗು ಚಿಂತನೆಗಳನ್ನು ಅರಗಿಸಿಕೊಳ್ಳುವುದು ಕಷ್ಟ. ಸಮಾಜದಲ್ಲಿ ಎಲ್ಲರಿಗೂ ಸಮಾನತೆ, ಸಮೃದ್ಧಿ, ನ್ಯಾಯ ದೊರಕಿಸಿ ಕೊಡುವುದು ರಾಮರಾಜ್ಯದ ಕಲ್ಪನೆ. ವ್ಯಕ್ತಿಯೊಬ್ಬನ ಉನ್ನತಿಯ ಜೊತೆಗೆ ಸಮುದಾಯದ ಅಭಿವೃದ್ಧಿಗೆ ಜೀವನಾಂಶ ಒದಗಿಸಿ ಕೊಡುವುದು ಅಗತ್ಯ ಎಂದು ಗೌತಮ ಬುದ್ಧ ಪ್ರತಿಪಾದಿಸಿದ್ದನು. ದಾರ್ಶನಿಕ ಜಾನ್ ರಸ್ಕಿನ್ ಸರಳ ಬದುಕು ಅಗತ್ಯವೆಂದು ಒತ್ತಿಹೇಳುತ್ತಾ, ಮನುಷ್ಯನನ್ನು ದುರ್ಬಲಗೊಳಿಸುವ, ಸ್ವಾರ್ಥಿಯನ್ನಾಗಿ ರೂಪಿಸುತ್ತಿರುವ ಆಧುನಿಕ ಅರ್ಥವ್ಯವಸ್ಥೆಯನ್ನು ಟೀಕಿಸಿದ್ದನು. ಇವೆಲ್ಲವುಗಳಿಂದ ಗಾಂಧೀಜಿ ಪ್ರಭಾವಿತರಾಗಿದ್ದರು. ಈ ಕಾರಣಕ್ಕಾಗಿ ಶತಮಾನದ ಹಿಂದೆ (1908) ಅವರು ಹಿಂದ್ ಸ್ವರಾಜ್ ಕೃತಿ ಬರೆಯುವ ಮುನ್ನವೇ ಆಧುನಿಕ ಬದುಕಿನ ಎಲ್ಲಾ ಆಡಂಬರಕ್ಕೆ ಬೆನ್ನು ತಿರುಗಿಸಿ, ಪೂರ್ಣತೆಯ ಬದುಕಿನ ಹಾದಿಯ ಅನ್ವೇಷಣೆಯಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಬ್ರಿಟೀಷರ ಗುಲಾಮಗಿರಿಯಲ್ಲಿ ಸಿಲುಕಿ ನರಳುತ್ತಿರುವ ಭಾರತಕ್ಕೆ ಹಿಂಸೆ ಮಂತ್ರದಂಡವಲ್ಲ, ಅದಕ್ಕೆ ಪರ್ಯಾಯವಾಗಿ ಭಾರತೀಯ ಸಂಸ್ಕತಿಯ ಹಿನ್ನೆಲೆಯಲ್ಲಿ ಶ್ರೇಷ್ಠವಾದ ಅಸ್ತ್ರವೊಂದು ಭಾರತಕ್ಕೆ ಬೇಕಾಗಿದೆ ಎಂದು ನಂಬಿದ್ದ ಗಾಂಧಿ, ಅಣುಬಾಂಬ್‍ಗಿಂತ ಪ್ರಬಲವಾದ `ಅಹಿಂಸೆ&#8217; ಎಂಬ ಅಸ್ತ್ರವನ್ನು ಈ ಜಗತ್ತಿಗೆ ನೀಡಿದರು.</p>



<p style="font-size:20px">ಇಂಗ್ಲೆಂಡಿನ ಪ್ರಸಿದ್ಧ ಅರ್ಥಶಾಸ್ತ್ರಜ್ಞ `ಶೊಮಾಕರ್ &#8216; ನನ್ನ ಆರ್ಥಿಕ &nbsp;ಸಿದ್ಧಾಂತಗಳಲ್ಲಿ ಗಾಂಧೀಜಿಯವರ ಅಹಿಂಸಾ ತತ್ವಗಳನ್ನು ಕಾಣಬಹುದಾಗಿದೆ ಎಂದು ಹೇಳುವುದರ ಮೂಲಕ ಗಾಂಧೀಜಿಯವರ ತತ್ವಗಳನ್ನು ಪಾಶ್ಚಾತ್ಯ ಬುದ್ಧಿಜೀವಿಗಳಿಗೆ ಅರ್ಥೈಸಲು ಪ್ರಯತ್ನಿಸಿದನು. ಅಷ್ಟೇ ಅಲ್ಲದೆ `ಸಣ್ಣದು ಸುಂದರ&#8217; (ಸ್ಮಾಲ್ ಈಸ್ ಬ್ಯೂಟಿಫುಲ್) ಎಂಬ ಅರ್ಥಶಾಸ್ತ್ರದ ಕೃತಿಯನ್ನು &nbsp;ರಚಿಸಿ ಜಗತ್ತನ್ನು ತಲ್ಲಣಗೊಳಿಸಿದನು. ಶೊಮಾಕರ್ ಗಾಂಧೀಜಿಯವರಿಂದ ಪ್ರಭಾವಿತನಾಗುವಷ್ಟು ಅವರ ತತ್ವ-ಸಿದ್ಧಾಂತಗಳು ಪರಿಣಾಮಕಾರಿಯಾಗಿದ್ದವು. ಅವುಗಳನ್ನು ಅರ್ಥಮಾಡಿಕೊಂಡವರಲ್ಲಿ ಶೊಮಾಕರ್ ಮತ್ತು&nbsp; ಜೆ.ಸಿ.ಕುಮಾರಪ್ಪ ಪ್ರಮುಖರು.</p>



<p style="font-size:20px">&nbsp; ಗಾಂಧೀಜಿಯ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯಲ್ಲಿ ಜನತಾಂತ್ರಿಕ ರಾಜಕೀಯ ಆಶಯಗಳು ಮತ್ತು ಮಾರುಕಟ್ಟೆ ಆರ್ಥಿಕತೆಯ ಆಶಯಗಳು ಪರಸ್ಪರ ವಿರುದ್ಧ ದಿಕ್ಕಿನ ಭಿನ್ನ ನೆಲೆಗಳಲ್ಲಿ ಚಲಿಸುತ್ತವೆ. ತಮ್ಮ ಏಳಿಗೆಗೆ ಅವಶ್ಯಕವಾದ ನಿರ್ಧಾರಗಳನ್ನು ಜನರೇ ತೆಗೆದುಕೊಳ್ಳುತ್ತಾರೆ. ಇದು ಜನತಾಂತ್ರಿಕ ವ್ಯವಸ್ಥೆಯಲ್ಲಿ ಮಾತ್ರ ಸಾಧ್ಯ. ಇಂತಹ ಸಾಮೂಹಿಕ ನಿರ್ಧಾರ ತಳಮಟ್ಟದ ಸಮುದಾಯಗಳದ್ದು, ಈ ಪ್ರತಿಕ್ರಿಯೆ ಶಕ್ತಿಶಾಲಿಯಾಗಿರುತ್ತದೆ. ಮಾರುಕಟ್ಟೆ ಆಶಯ ಇದಕ್ಕೆ ತದ್ವಿರುದ್ಧವಾದುದು. ಜನತೆ ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳುವ ಸಾಧ್ಯತೆ ಬಗ್ಗೆ ಚಿಂತಿಸುವುದಾದರೆ, ಮಾರುಕಟ್ಟೆ ವ್ಯವಸ್ಥೆ ಸ್ಥಳೀಯ ನೆಲೆಗಳಿಗೆ ವಿಕೇಂದ್ರೀಕರಣಗೊಳ್ಳುವುದು ಅನಿವಾರ್ಯವಾಗುತ್ತದೆ. ಇಂತಹ ಸ್ಥಳೀಯ ನೆಲೆಗಳು ಜೀವಂತವಿರುವುದು ದೇಶೀ ಸಂಸ್ಕೃತಿಯಲ್ಲಿ ಮಾತ್ರ. ಗ್ರಾಮ ಸಂಸ್ಕತಿಯು ನಮ್ಮ ಪೂರ್ವಿಕರ ದರ್ಶನದಲ್ಲಿ ಅಡಕವಾಗಿರುವ ಮಾನವೀಯ ಮುಖವುಳ್ಳದ್ದಾಗಿದ್ದು ಅದು ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದಿದೆ.</p>



<p style="font-size:20px">ಶೈಕ್ಷಣಿಕ ಅಥವಾ ಅರ್ಹತೆಯ ಹಂಗಿಲ್ಲದ ಜನಪದರ ಪ್ರಾದೇಶಿಕ ತಿಳುವಳಿಕೆಯ ರೂಪವಾದ ದೇಶೀಯ ಪಾರಂಪರಿಕ ವಿಜ್ಞಾನ-ತಂತ್ರಜ್ಞಾನಗಳು ನಮ್ಮ ಪಾಲಿಗೆ ಲೋಕದರ್ಶನಗಳಾಗಿವೆ. ಈ ಸತ್ಯವನ್ನು ಗಾಂಧೀಜಿಯವರು ಮನಗಂಡಿದ್ದರು. ನಮ್ಮ ಪೂರ್ವಿಕರ ಈ ಜ್ಞಾನ ಶಾಖೆಗಳ ವೈಶಿಷ್ಟ್ಯವೆಂದರೆ, ಇವುಗಳು ಸ್ಥಳೀಯ ಸಂದರ್ಭ-ಅಗತ್ಯಗಳಿಗೆ ತಕ್ಕಂತೆ ರೂಪಾಂತರಗೊಳ್ಳುವ ಶಕ್ತಿ ಪಡೆದಿವೆ. ಇಂತಹ ಲೋಕವಿದ್ಯೆ ಪೂರ್ಣ ಪ್ರಮಾಣದಲ್ಲಿ ವಿಕಾಸವಾಗಿ, ಕ್ರಿಯಾರೂಪದಲ್ಲಿ ಪ್ರಕಟಗೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಎಂಬುದು ಗಾಂಧೀಜಿಯವರ ಅಚಲ ನಂಬಿಕೆಯಾಗಿತ್ತು.&nbsp; ವರ್ತಮಾನದ ಜಗತ್ತು ಅನುಭವಿಸುತ್ತಿರುವ ಆರ್ಥಿಕ ಹಿಂಜರಿತ, ನಿರುದ್ಯೋಗ, ಬಡತನ, ಭಯೋತ್ಪಾದನೆ, ಹಿಂಸೆ ಇವೆಲ್ಲಕ್ಕೂ ಗಾಂಧೀಜಿಯ ಚಿಂತನೆಗಳಲ್ಲಿ, ಸಿದ್ಧಾಂತಗಳಲ್ಲಿ ಪರಿಹಾರ ಇದೆ ಎಂಬುದನ್ನು ಆಧುನಿಕ ಜಗತ್ತು &nbsp;ಈಗ ಮರೆತಿದೆ.</p>



<p style="font-size:20px">&nbsp;ಗಾಂಧಿಯವರಿಂದ ಪ್ರಭಾವಿತರಾದ ಜೆ.ಸಿ.ಕುಮಾರಪ್ಪ ರಚಿಸಿದ ಶಾಶ್ವತ ಅರ್ಥಶಾಸ್ತ್ರ ಎಂಬ ಕೃತಿ ಈ ಕ್ಷಣದ ಎಲ್ಲಾ ಸವಾಲುಗಳಿಗೆ ಪರಿಹಾರವಾಗಬಲ್ಲದು. ತಮಿಳುನಾಡು ಮೂಲದ ಸಿ.ಕುಮಾರಪ್ಪ ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪದವಿ ಪಡೆದು ಆಧುನಿಕ ಅರ್ಥಶಾಸ್ತ್ರಜ್ಞರಾಗಿ ರೂಪುಗೊಂಡಿದ್ದರು. ಗಾಂಧೀಜಿಯವರಂತೆ ಅವರಿಗೆ ಹೊಸದಾಗಿ ಹೇಳಲು ಏನೂ ಇರಲಿಲ್ಲ. ನಿಸರ್ಗದಲ್ಲಿ ಜೀವ ಜಂತುಗಳು ಹೇಗೆ ಪರಸ್ಪರ ಪರಾವಲಂಬಿಗಳಾಗಿ ಬದುಕುತ್ತವೆ ಎಂಬುದನ್ನು ಗಮನಿಸಿದರು. ಇದರಿಂದ ಮನುಷ್ಯ ಕಲಿಯಬಹುದಾದ ಪಾಠವನ್ನು ಗ್ರಹಿಸಿದರು. ಪ್ರಕೃತಿ ತನ್ನ ಎಲ್ಲಾ ಘಟಕಗಳ ಸಹಕಾರ ಬಯಸುತ್ತದೆ. ಪ್ರತಿಯೊಂದು ತನ್ನಷ್ಟಕ್ಕೆ ತಾನು ಕೆಲಸ ಮಾಡುತ್ತಾ, ಈ ಪ್ರಕ್ರಿಯೆಯಲ್ಲಿ ಸಮಾಜದ ಬೇರೆ ಬೇರೆ ಘಟಕಗಳು ಅದರದರ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. ಓಡಾಡಬಲ್ಲವರು ಓಡಾಡದವರಿಗೆ, ಬುದ್ಧಿ ಇರುವವರು ಬುದ್ಧಿ ಇಲ್ಲದವರಿಗೆ ನೆರವು ನೀಡುವಂತೆ, ನಿಸರ್ಗದಲ್ಲಿ ಪ್ರತಿಯೊಂದೂ ಸಾಮಾನ್ಯ ಉದ್ದೇಶಕ್ಕಾಗಿ ಒಂದನ್ನೊಂದು ಹೊಂದಿಕೊಂಡಿರುತ್ತವೆ. ಹಿಂಸೆ ಎಂಬುದು ಈ ಸರಪಳಿಯನ್ನು ಒಡೆಯದೆ, ಇವೆಲ್ಲವೂ ಸುಸೂತ್ರವಾಗಿ ನಡೆದಲ್ಲಿ ಶಾಶ್ವತ ಅರ್ಥಶಾಸ್ತ್ರ ಜನ್ಮ ತಾಳುತ್ತದೆ. ಕುಮಾರಪ್ಪನವರು ಶಾಶ್ವತ ಅರ್ಥಶಾಸ್ತ್ರದೊಂದಿಗೆ ನಶ್ವರ ಅರ್ಥಶಾಸ್ತ್ರವನ್ನು ಹೋಲಿಸಿದರು. ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ, ಕೀಟ ನಾಶಕ ಬಳಸಿ ಆ ಮೂಲಕ ಅಲ್ಪ ಕಾಲದವರೆಗೆ ಅತಿಹೆಚ್ಚು ಇಳುವರಿ ಪಡೆಯುವ ನಾಟಕೀಯ ದೃಶ್ಯವಾಗಿ ನಶ್ವರ ಅರ್ಥಶಾಸ್ತ್ರ ಗೋಚರಿಸುತ್ತದೆ. ಇದರ ಪರಿಣಾಮವಾಗಿ ಭೂಮಿ ನಾಶವಾಗುತ್ತದೆಂದು, ಆಹಾರದಲ್ಲಿ ಸ್ವಾವಲಂಬಿಯಾಗುವ ಬದಲು ವಾಣಿಜ್ಯ ಬೆಳೆಗಳಿಗೆ ಆದ್ಯತೆ ನೀಡಿದಲ್ಲಿ ಮುಂದಾಗುವ ಅಪಾಯದ ಬಗ್ಗೆ ಅವರು ಎಚ್ಚರಿಸಿದ್ದರು.</p>



<p style="font-size:20px">&nbsp;ಪೂರ್ಣವಾಗಿ ಹಣ ಅಥವಾ ಲೌಕಿಕ ವಸ್ತುಗಳ ಮೌಲ್ಯದ ಆಧಾರದ ಮೇಲೆ ಕಟ್ಟಿದ ಅರ್ಥಶಾಸ್ತ್ರ ಸಮಯ ಮತ್ತು ಸ್ಥಳೀಯ ವಾಸ್ತವಿಕ ಹಿನ್ನೆಲೆಯನ್ನು ಪಡೆದುಕೊಳ್ಳುವುದಿಲ್ಲ. ಇದರಿಂದ ಹಿಂಸೆ ಮತ್ತು ನಾಶ ಆರಂಭವಾಗಿ ಈ ಜಗತ್ತಿಗೆ &nbsp;ಈ ಸಂಕಷ್ಟದಿಂದ ಪಾರಾಗಲು ಯಾವ ಮಾರ್ಗವೂ ಇರಲಾರದು&#8217;. ಇದು ಕುಮಾರಪ್ಪ ಹಾಗು ಗಾಂಧೀಜಿಯವರ ಅಚಲ ನಂಬಿಕೆಯಾಗಿತ್ತು. ಆಧುನಿಕ ಜಗತ್ತು ಹಿಂಸೆಗೆ ದೂಡಲ್ಪಟ್ಟಿರುವ ಈ ಸಂದರ್ಭದಲ್ಲಿ, ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದಲ್ಲಿ ಗಾಂಧೀಜಿ ಮತ್ತವರ ಚಿಂತನೆಗಳು ನಿರ್ಲಕ್ಷ್ಯಕ್ಕೊಳಗಾದ ಪರಿಣಾಮದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಸರಳತೆ-ಸಮಾನತೆ- ಸ್ವಾವಲಂಬನೆ ಮುಂತಾದ ಗಾಂಧೀಜಿಯವರ ಪರಿಕಲ್ಪನೆಗಳು ಸನ್ಯಾಸತ್ವದ ಲಕ್ಷಣಗಳಲ್ಲ ಎಂಬುದನ್ನು ಆಧುನಿಕ ಜಗತ್ತು ಅರಿಯಬೇಕಿದೆ. ಈ ಅರಿವು ನಮ್ಮನ್ನು ಆವರಿಸಿಕೊಂಡಾಗ ಮಾತ್ರ ಮಹಾತ್ಮ ಗಾಂಧೀಜಿ ನಮಗೆ ಅರ್ಥವಾಗಲು ಸಾಧ್ಯ.</p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/10/IMG-20221001-WA0047.jpg" alt="" class="wp-image-8470" width="208" height="208" srcset="https://peepalmedia.com/wp-content/uploads/2022/10/IMG-20221001-WA0047.jpg 960w, https://peepalmedia.com/wp-content/uploads/2022/10/IMG-20221001-WA0047-298x300.jpg 298w, https://peepalmedia.com/wp-content/uploads/2022/10/IMG-20221001-WA0047-150x150.jpg 150w, https://peepalmedia.com/wp-content/uploads/2022/10/IMG-20221001-WA0047-768x773.jpg 768w, https://peepalmedia.com/wp-content/uploads/2022/10/IMG-20221001-WA0047-300x300.jpg 300w, https://peepalmedia.com/wp-content/uploads/2022/10/IMG-20221001-WA0047-696x700.jpg 696w, https://peepalmedia.com/wp-content/uploads/2022/10/IMG-20221001-WA0047-24x24.jpg 24w, https://peepalmedia.com/wp-content/uploads/2022/10/IMG-20221001-WA0047-48x48.jpg 48w, https://peepalmedia.com/wp-content/uploads/2022/10/IMG-20221001-WA0047-96x96.jpg 96w" sizes="auto, (max-width: 208px) 100vw, 208px" /></figure>



<p style="font-size:20px"><strong>ಎನ್. ಜಗದೀಶ್‌ ಕೊಪ್ಪ, ಮೈಸೂರು</strong><br>ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತು, ಪರಿಸರ ಮತ್ತು ಜಾಗತಿಕ ಬಡತನದ ಕುರಿತು ವಿಶೇಷ ಆಸಕ್ತಿ.</p>



<p></p>



<p></p>



<p></p>



<p></p>
]]></content:encoded>
					
		
		
			</item>
	</channel>
</rss>
