<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>govt &#8211; Peepal Media</title>
	<atom:link href="https://peepalmedia.com/tag/govt/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 08 Dec 2022 05:13:41 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>govt &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸಾಹಿತಿ, ಕಲಾವಿದರಿಗೆ ಧನ ಸಹಾಯ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ</title>
		<link>https://peepalmedia.com/claiming-the-government-to-release-financial-aid-to-literature-and-artists/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 08 Dec 2022 05:13:41 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[bengalure]]></category>
		<category><![CDATA[govt]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=17883</guid>

					<description><![CDATA[ಬೆಂಗಳೂರು: ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರ, ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟವು, ಧನ ಸಹಾಯ ಪಡೆಯುತ್ತಿರುವ ಸಂಘ ಸಂಸ್ಥೆಗಳ ಕುತ್ತಿಗೆ ಹಿಸುಕುವ ರೀತಿಯಲ್ಲಿ ರೂಪಿತವಾಗಿರುವ ಮಾರ್ಗಸೂಚಿ ರದ್ದುಪಡಿಸಿ, ಸರಳ ಮಾರ್ಗಸೂಚಿ ರೂಪಿಸಿ ಕೂಡಲೇ ಧನ ಸಹಾಯ ಬಿಡುಗಡೆ ಮಾಡವಂತೆ ಕೋರಿ ತಮ್ಮ ಹಕ್ಕೊತ್ತಾಯಗಳೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರ, ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟದ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ, ಡಿಸೆಂಬರ್‌ 12ರಂದು ನಾಡಿನ ಸಂಘ ಸಂಸ್ಥೆಗಳು, ಕನ್ನಡಪರ ಹೋರಾಟಗಳು, ಸಾಹಿತಿಗಳು, ಪತ್ರಕರ್ತರು, [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರ, ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟವು, ಧನ ಸಹಾಯ ಪಡೆಯುತ್ತಿರುವ ಸಂಘ ಸಂಸ್ಥೆಗಳ ಕುತ್ತಿಗೆ ಹಿಸುಕುವ ರೀತಿಯಲ್ಲಿ ರೂಪಿತವಾಗಿರುವ ಮಾರ್ಗಸೂಚಿ ರದ್ದುಪಡಿಸಿ, ಸರಳ ಮಾರ್ಗಸೂಚಿ ರೂಪಿಸಿ ಕೂಡಲೇ ಧನ ಸಹಾಯ ಬಿಡುಗಡೆ ಮಾಡವಂತೆ ಕೋರಿ ತಮ್ಮ ಹಕ್ಕೊತ್ತಾಯಗಳೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.</p>



<p>ಕರ್ನಾಟಕ ರಾಜ್ಯ ಸಾಹಿತಿ, ಕಲಾವಿದರ, ಸಾಂಸ್ಕೃತಿಕ ಚಿಂತಕರ ಸಂಘ ಸಂಸ್ಥೆಗಳ ಒಕ್ಕೂಟದ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ, ಡಿಸೆಂಬರ್‌ 12ರಂದು ನಾಡಿನ ಸಂಘ ಸಂಸ್ಥೆಗಳು, ಕನ್ನಡಪರ ಹೋರಾಟಗಳು, ಸಾಹಿತಿಗಳು, ಪತ್ರಕರ್ತರು, ಸಂಸ್ಕೃತಿ ಚಿಂತಕರು ಸೇರಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.</p>



<p>ಒಕ್ಕೂಟದ ಹಕ್ಕೊತ್ತಾಯಗಳು ಈ ಕೆಳಗಿನಂತಿವೆ.</p>



<p>1. ಸಂಘ ಸಂಸ್ಥೆಗಳು ಧನ ಸಹಾಯ ನೀಡುವಲ್ಲಿ ಏಕರೂಪದ ಮಾರ್ಗಸೂಚಿ ಪಾಲಿಸಬೇಕು. ಕ್ರಮ ಸಂಖ್ಯೆ 9 ರಂತೆ ಸರ್ಕಾರ ಸೂಚಿಸುವ ಕಾರ್ಯಕ್ರಮಗಳಿಗೆ ಧನ ಸಹಾಯ ನೀಡಬೇಕು.</p>



<p>2. ಈ ಆರ್ಥಿಕ ವರ್ಷದಿಂದ ಸಂಘ ಸಂಸ್ಥೆಗಳಿಗೆ ಧನ ಸಹಾಯ ಕನಿಷ್ಠ 5 ಲಕ್ಷ ದಿಂದ ಗರಿಷ್ಠ 15 ಲಕ್ಷದಿಂದ ಗರಿಷ್ಠ 15 ಲಕ್ಷಗಳಿಗೆ ನಿಗದಿಗೊಳಿಸಿ, ತಕ್ಷಣ ಬಿಡುಗಡೆ ಮಾಡಬೇಕು.</p>



<p>3. ಆರ್.ಟಿ.ಜಿ.ಎಸ್‌ ಪದ್ಧತಿ ರದ್ದುಗೊಳಿಸಬೇಕು.</p>



<p>4. ಅವೈಜ್ಞಾನಿಕವಾಗಿರುವ ಕಲಾ ತಂಡ app ದೋಷಪೂರಿತವಾಗಿದೆ ಅದನ್ನು ತತ್‌ಕ್ಷಣ ರದ್ಧುಗೊಳಿಸಬೇಕು.</p>



<p>5. ಮಾರ್ಗಸೂಚಿಗಳನ್ನು ಗ್ರಾಮೀಣ ಕಲಾವಿದರು, ಕಲಾ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಸರಳೀಕರಣಗೊಳಿಸಬೇಕು.</p>



<p>6. ವಿವಿಧ ಉದ್ದೇಶ ಅಂಶಗಳನ್ನು ಹೊಂದಿರುವ ಕ್ರಿಯಾಶೀಲ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ವಿನಾಕಾರಣ ಕಿರುಕುಳ ನೀಡುವುದನ್ನು ತಪ್ಪಿಸಿ, ಅವರನ್ನು ಕೂಡ ಪರಿಗಣಿಸಿ ಧನಸಹಾಯ ಯೋಜನೆಯ ಮಿತಿಗೆ ತರಬೇಕು(ಈ ಆರ್ಥಿಕ ವರ್ಷದಲ್ಲಿ ಈ ಸಂಸ್ಥೆಗಳನ್ನು ಪರಿಗಣಿಸಬೇಕು)</p>



<p>7. ಅವೈಜ್ಞಾನಿಕ ಮತ್ತು ದೂಷಪೂರಿತ ನಿರ್ಧಾರಗಳನ್ನು ಕೂಡಲೇ ರದ್ಧುಗೊಳಿಸಿ, ಜೇಷ್ಟತೆ ಆಧಾರದ ಮೇಲೆ ವಲಯವಾರು, ಪ್ರಾದೇಶಿಕವಾರು ಧನ ಸಹಾಯಕ ಪರಿಗಣಿಸಬೇಕು.</p>



<p>8. ಅಸಂಘಟಿತ ಕಲಾವಿದರಿಗೆ ವೇಷಭೂಷಣ, ರಂಗ ಪರಿಕರಗಳು, ವಾದ್ಯ ಪರಿಕರಗಳ ಧನ ಸಹಾಯವನ್ನು&nbsp; ರೂ.1 ಲಕ್ಷದಿಂದ 2 ಲಕ್ಷಕ್ಕೆ ಏರಿಸಿ ಜೇಷ್ಟತೆ ಆಧಾರದ ಮೇಲೆ ನೀಡಬೇಕು.</p>



<p>9. ಎಲ್ಲಾ ಉತ್ಸವಗಳನ್ನು ಹಾಗೂ ಜಿಲ್ಲಾ ಉತ್ಸವಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಮಾಡುವುದನ್ನು ರದ್ದುಗೊಳಿಸಿ, ಸಂಸ್ಕೃತಿ ಇಲಾಖೆಯೇ ನೇರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು.</p>



<p>10. ಉತ್ಸವದಲ್ಲಿ ಕರ್ನಾಟಕ ಕಲಾವಿದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು.</p>



<p>11. ಕಷ್ಟ ಪರಿಸ್ಥಿತಿಯಲ್ಲಿರುವ ಎಲ್ಲಾ ಪ್ರಾಕಾರದ ಕಲಾವಿದರ, ಸಾಹಿತಿಗಳ ವೈದ್ಯರ ಸಂಪೂರ್ಣ ವೆಚ್ಚವನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ&nbsp; ತಕ್ಷಣವೇ ಭರಿಸುವಂತೆ ಕ್ರಮ ಕೈಗೊಳ್ಳಬೇಕು.</p>



<p>12. ಜಾನಪದ ಜಾತ್ರೆಯನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ಮತ್ತೆ ಪ್ರಾರಂಭಿಸುವುದು.</p>



<p>13. ಸ್ಥಗಿತಗೊಂಡಿರುವ ಹಲವು ಹೆಸರಾಂತ ಯೋಜನೆಗಳಾದ ಸುಗ್ಗಿ- ಹುಗ್ಗಿ , ಯುವಸೌರಭ , ಚಿಗುರು, ಉದಯರಾಗ, ಸಂಧ್ಯರಾಗ, ಮಹಿಳಾಉತ್ಸವ ಇನ್ನು ಮುಂತಾದ ಹಲವು ಯೋಜನೆಗಳು ಮರು ಪ್ರಾರಂಭಿಸುವುದು. ಹಾಡಿರೇ ರಾಗಗಳ ತೂಗಿರೇ ದೀಪಗಳ ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸಬೇಕು.</p>



<p>14. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಯಾಮಾನುಸಾರ ನೊಂದಾಯಿಸಲ್ಪಟ್ಟ ಸಂಘ ಸಂಸ್ಥೆಗಳಿಗೆ, ಏಕರೂಪದ ಮಾನದಂಡವನ್ನು ಅನುಸರಿಸಿ, ತಾರತಮ್ಯ ಮಾಡದೇ, ಅನುದಾನವನ್ನು ಸಕಾಲಕ್ಕೆ ಬಿಡುಗಡೆ ಮಾಡುವುದು, ಅನುದಾನ/ಧನ ಸಹಾಯ ನೀಡುವಾಗ ಆ ಸಂಘ ಸಂಸ್ಥೆಗಳ ಜೇಷ್ಠತೆ, ಕಾರ್ಯಕ್ಷಮತೆ, ದಕ್ಷತೆ ನಿರಂತರ ಮತ್ತು ಗುಣಾತ್ಮಕ ಕಾರ್ಯಚಟುವಟಿಕೆಗಳನ್ನು ಆಧರಿಸಿ ಸಂಘ ಸಂಸ್ಥೆ ಸಲ್ಲಿಸುವ ಕ್ರಿಯಾಯೋಜನೆಗನುಗುಣವಾಗಿ ಸಮರ್ಪಕ ಅನುದಾನವನ್ನು ನಿಗದಿ ಮಾಡಬೇಕು.</p>



<p>15. ಕರ್ನಾಟಕ ಸರ್ಕಾರವು ನೀಡುವ 12ರಿಂದ 14 ಪ್ರಶಸ್ತಿಗಳನ್ನು ಆಯಾಯ ವರ್ಷದಲ್ಲೇ ಘೋಷಣೆ ಮಾಡಿ ಅರ್ಹ ಕಲಾವಿದರಿಗೆ ಪ್ರಶಸ್ತಿಗಳನ್ನು ನೀಡುವುದು.</p>



<p>16. ಕಲಾವಿದರ ಜೊತೆ ಅನುಚಿತವಾಗಿ ವರ್ತಿಸುವ ಕೆಲವು ಅಧಿಕಾರಿಗಳನ್ನು ಕೇಂದ್ರ ಕಛೇರಿಯಿಂದ ಕೂಡಲೇ ವರ್ಗಾಯಿಸಬೇಕು ಮತ್ತು ಈಗಾಗಲೇ ಹಲವಾರು ವರ್ಷಗಳಿಂದ ಇಲ್ಲೇ ಬಿಡುಬಿಟ್ಟಿರುವ ಅಧಿಕಾರಿಗಳನ್ನು ವರ್ಗಾಯಿಸಬೇಕು.</p>



<p>17. ವಿಶೇಷ ಘಟಕ ಯೋಜನೆ ಅನುದಾನವನ್ನು ಸಮರ್ಪಕವಾಗಿ ವೆಚ್ಚ ಮಾಡದೆ 2 ವರ್ಷಗಳಿಂದ ಸರ್ಕಾರಕ್ಕೆ ಅನುದಾನವನ್ನು ಹಿಂತಿರುಗಿಸುವ ವಿಷಯ ನಿರ್ವಾಹಕರನ್ನು ಅಮಾನತ್ತುಗೊಳಿಸಿ ತನಿಖೆಗೊಳಪಡಿಸಬೇಕು. ಈ ಹಣವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ವಿನಿಯೋಗ ಮಾಡಬೇಕು ಮತ್ತು ಪ್ರಕಟನೆಗಳಿಗೆ ವ್ಯಯ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸಬೇಕು.</p>



<p>18. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರಂಭವಾಗಿದ್ದು, ಕನ್ನಡ ನಾಡಿನ ಕಲೆ, ಸಾಹಿತ್ಯ ಸಂಗೀತ, ಸಂಸ್ಕೃತಿ ಮತ್ತು ನಾಡು ನುಡಿ ಸಂರಕ್ಷಣೆ ಮತ್ತು ಅಭಿವೃದ್ಧಿಯ ಧ್ಯೆಯೋದ್ಧೇಶದಿಂದ ಇತ್ತೀಚೆಗೆ ಪ್ರಭಾವಿ ಶೈಕ್ಷಣಿಕ ಸಂಘ ಸಂಸ್ಥೆಗಳು ಮತ್ತು ಮಠಗಳಿಗೆ ಇಲಾಖೆ ವತಿಯಿಂದ ಕೋಟಿಗಟ್ಟಲೆ ಅನುದಾನ ನೀಡುವ ಮೂಲಕ ಧ್ಯೆಯೋದ್ದೇಶವನ್ನು ಗಾಳಿಗೆ ತೂರಿದ್ದೀರಿ. ಈ ಕೂಡಲೇ ಶಿಕ್ಷಣ ಸಂಸ್ಥೆ ಮತ್ತು ಮಠಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಬೇಕು.</p>



<p>19. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕನ್ನಡ ನಾಡು, ನುಡಿ, ಕಲೆ ಮತ್ತು ಸಂಸ್ಕೃತಿಯ ಅಭಿವೃದ್ಧಿಯ ಬಗ್ಗೆ ಅರಿವು ಮತ್ತು ಕಾಳಜಿಯಿರುವ ಕಾರ್ಯದರ್ಶಿಗಳನ್ನು ನೇಮಿಸಬೇಕು.</p>



<p>20. ಮಹಿಳಾ ಕಲಾತಂಡ/ಕಲಾವಿದರಿಗೆ ಕಾಲಕಾಲಕ್ಕೆ ಸರ್ಕಾರದ ನಿಯಮಾನುಸಾರ 33% ಕಾರ್ಯಕ್ರಮ ಮತ್ತು ಅನುದಾನವನ್ನು ನೀಡುವುದು.</p>



<p>21. ಇಲಾಖೆಯ ಅಧಿಕಾರಿಗಳು/ಸಿಬ್ಬಂದಿ ವರ್ಗದವರು ಸರ್ಕಾರಿ ನೌಕರರು ಬೇನಾಮಿ ಹೆಸರಿನಲ್ಲಿ ನಡೆಸುತ್ತಿರುವ ಸಂಘ ಸಂಸ್ಥೆಗಳ ಅನುದಾನ ಪಡೆಯುತ್ತಿರುವ ಸಂಘ ಸಂಸ್ಥೆಗಳನ್ನು ಗುರ್ತಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.</p>



<p>22. ಇಲಾಖೆಯ ಸಚಿವರಾದವರು ತಮ್ಮ ಮತಕ್ಷೇತ್ರದಲ್ಲಿ ಚಿತ್ರವಿಚಿತ್ರವಾದ ಕಾರ್ಯಕ್ರಮ ಹೆಸರಿನಲ್ಲಿ ಇಲಾಖೆಯ ಬಹುತೇಕ ಧನಸಹಾಯ ಹಣವನ್ನು ಬಳಕೆ ಮಾಡುವುದನ್ನು ನಿಲ್ಲಿಸಿ, ರಾಜ್ಯವಾರು ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಚಿವರಾದವರು ಪ್ರಯತ್ನಿಸಬೇಕು.</p>



<p>23. ಬೇರೆ ಇಲಾಖೆಯಿಂದ ಪ್ರತಿ ನಿಯೋಜನೆಯಡಿಯಲ್ಲಿ ಬಂದಿರುವ ಅಧಿಕಾರಿ/ನೌಕರರನ್ನು ತತ್‌ಕ್ಷಣವೇ ಮಾತೃ ಇಲಾಖೆಗೆ ವಾಪಸ್ಸು ಕಳುಹಿಸಬೇಕು.</p>



<p>24. ನೇರ ನೇಮಕಾತಿಯಡಿ ಖಾಲಿ ಇರುವ ಹುದ್ದೆಗಳನ್ನು ತುರ್ತಾಗಿ&nbsp; ತುಂಬಬೇಕು.</p>



<p>ಈ ಹಕ್ಕೊತ್ತಾಯಗಳನ್ನು&nbsp; ಕೂಡಲೇ ಪುರಸ್ಕರಿಸಬೇಕೆಂದು ಜನಸಾಮಾನ್ಯರ ಮುಖ್ಯಮಂತ್ರಿಗಳೆಂದು ಹೆಸರುವಾಸಿಯಾಗಿರುವ ತಾವುಗಳು ತಕ್ಷಣವೇ ನಮ್ಮ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಆಶಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಆರೋಗ್ಯ ಇಲಾಖೆಯನ್ನು ಭ್ರಷ್ಟಾಚಾರದ ಕೊಂಪೆ ಮಾಡಿದ ಕೀರ್ತಿ ಸುಧಾಕರ್‌ ಅವರದ್ದು : ಕಾಂಗ್ರೆಸ್‌ ಕಿಡಿ</title>
		<link>https://peepalmedia.com/sudhakar-is-credited-with-making-the-health-department-a-corner-of-corruption-congress-spark/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 04 Dec 2022 10:10:36 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[govt]]></category>
		<category><![CDATA[india]]></category>
		<category><![CDATA[k sudhakar]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=17496</guid>

					<description><![CDATA[ಬೆಂಗಳೂರು : ತುಮಕೂರಿನ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಗ್ರಾಮದಲ್ಲಿ ಚಿಕಿತ್ಸೆ ಸಿಗದೆ ಮಗು ಸಾವನ್ನಪ್ಪಿದ್ದು ಪ್ರಕರಣಕ್ಕೆ ಸಂಭಂದಿಸಿದಂತೆ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿರುವ ರಾಜ್ಯ ಕಾಂಗ್ರೆಸ್‌ ʼಸರ್ಕಾರ ಜೀವ ಉಳಿಸುವ ಬದಲು ಜೀವ ತೆಗೆಯುವ ಕೆಲಸ ಮಾಡುತ್ತಿದೆʼ ಎಂದು ಕಿಡಿಕಾರಿದೆ. ಶುಕ್ರವಾರದಂದು ಆಕಸ್ಮಿಕವಾಗು ಐದು ವರ್ಷದ ಮಗುವೊಂದು ಸೊಂಪ್‌ನಲ್ಲಿ ಬಿದ್ದಿದ್ದು, ಮಗುವನ್ನು ಚಿಕಿತ್ಸೆಗೆಂದು ಕರೆತಂದ&#160; ವೇಳೆ ವೈದ್ಯರ ಕರ್ತವ್ಯಲೋಪ ಮತ್ತು ಉದಾಸೀನತೆಯ ತೋರಿಸಿರುವ&#160; ಹಿನ್ನೆಲೆಗೆ ಸಂಬಂಧಿಸಿದಂತೆ ಆರೋಗ್ರ ಇಲಾಖೆ ಅಯುಕ್ತರು, ಕೊಡಿಗೇನಹಳ್ಳಿ ಪ್ರಾಥಮಿಕ [&#8230;]]]></description>
										<content:encoded><![CDATA[
<p>ಬೆಂಗಳೂರು : ತುಮಕೂರಿನ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಗ್ರಾಮದಲ್ಲಿ ಚಿಕಿತ್ಸೆ ಸಿಗದೆ ಮಗು ಸಾವನ್ನಪ್ಪಿದ್ದು ಪ್ರಕರಣಕ್ಕೆ ಸಂಭಂದಿಸಿದಂತೆ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಈ ಕುರಿತು ಆಕ್ರೋಶ ವ್ಯಕ್ತ ಪಡಿಸಿರುವ ರಾಜ್ಯ ಕಾಂಗ್ರೆಸ್‌ ʼಸರ್ಕಾರ ಜೀವ ಉಳಿಸುವ ಬದಲು ಜೀವ ತೆಗೆಯುವ ಕೆಲಸ ಮಾಡುತ್ತಿದೆʼ ಎಂದು ಕಿಡಿಕಾರಿದೆ.</p>



<p>ಶುಕ್ರವಾರದಂದು ಆಕಸ್ಮಿಕವಾಗು ಐದು ವರ್ಷದ ಮಗುವೊಂದು ಸೊಂಪ್‌ನಲ್ಲಿ ಬಿದ್ದಿದ್ದು, ಮಗುವನ್ನು ಚಿಕಿತ್ಸೆಗೆಂದು ಕರೆತಂದ&nbsp; ವೇಳೆ ವೈದ್ಯರ ಕರ್ತವ್ಯಲೋಪ ಮತ್ತು ಉದಾಸೀನತೆಯ ತೋರಿಸಿರುವ&nbsp; ಹಿನ್ನೆಲೆಗೆ ಸಂಬಂಧಿಸಿದಂತೆ ಆರೋಗ್ರ ಇಲಾಖೆ ಅಯುಕ್ತರು, ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ರೋಹಿತ್‌ ಡಿ. ಅವರನ್ನು ಶನಿವಾರದಂದು ಅಮಾನತುಗೊಳಿಸಲಾಗಿದೆ.</p>



<p>ಈ ಘಟನೆಗೆ ಕುರಿತು ಇಂದು ಆಕ್ರೋಶ ವ್ಯಕ್ತ ಪಡಿಸಿರುವ ರಾಜ್ಯ ಕಾಂಗ್ರೆಸ್‌, ಆರೋಗ್ಯ ಸಚಿವ ಡಾ.ಕೆ ಸುಧಾಕರ್‌ ಅವರ ವಿರುದ್ದ ಕಿಡಿಕಾರಿದೆ. ʼಬೆಳಗಾವಿಯಲ್ಲಿ ವೆಂಟಿಲೇಟರ್‌ ಸಿಗದೆ ಸಾವನ್ನಪ್ಪಿದ್ದ ಘಟನೆ, ಹಾಸನದಲ್ಲಿ ಚಿಕಿತ್ಸೆ ನಿರಾಕರಿಸಿ ಸಾವು, ಇದೀಗ ತುಮಕೂರಿನ ಮಧುಗಿರಿಯಲ್ಲಿ ವೈದ್ಯರ ಕರ್ತವ್ಯ ಲೋಪದಿಂದ ಮಗು ಬಲಿಯಾಗಿದೆ. ಈ ಎಲ್ಲಾ ಜವಬ್ದಾರಿಗಳಿಗೂ ಸಚಿವ ಕೆ. ಸುಧಾಕರ್‌ ಅವರೇ ನೇರ ಹೊಣೆ ಮಾಡಿದ್ದು, ಆರೋಗ್ಯ ಇಲಾಖೆಯನ್ನು ಭ್ರಷ್ಟಾಚಾರದ ಕೊಂಪೆ ಮಾಡಿದ ಕೀರ್ತಿ ಸುಧಾಕರ್‌ ಅವರದ್ದೇʼ ಎಂದು ಕಾಂಗ್ರೆಸ್‌ ಟ್ವೀಟ್‌ನಲ್ಲಿ ಹೇಳಿದೆ.</p>



<p>ಈಗಿನ ಸರ್ಕಾರ ಜೀವ ಉಳಿಸುವ ಬದಲು ಜನರ ಜೀವಗಳನ್ನು ತೆಗೆಯುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ದ ರಾಜ್ಯ ಕಾಂಗ್ರೆಸ್‌ ಕಿಡಿಕಾರಿದೆ.</p>
]]></content:encoded>
					
		
		
			</item>
		<item>
		<title>ಸುರತ್ಕಲ್ ಟೋಲ್ ರದ್ದು ; ಆದೇಶ ಪ್ರತಿ ಸಿಗುವ ವರೆಗೂ ಹೋರಾಟ ಮುಂದುವರೆಯಲಿದೆ</title>
		<link>https://peepalmedia.com/abolition-of-suratkal-toll-the-struggle-will-continue-until-the-order-is-received/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 14 Nov 2022 11:34:51 +0000</pubDate>
				<category><![CDATA[ದಕ್ಷಿಣ ಕನ್ನಡ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[govt]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mangalore]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Suratkal illegal toll gate]]></category>
		<guid isPermaLink="false">https://peepalmedia.com/?p=15524</guid>

					<description><![CDATA[ಮಂಗಳೂರು: ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರವನ್ನು ವಿರೋಧಿಸಿ ಕಳೆದ 18 ದಿನಗಳಿಂದ ಹಗಲು ರಾತ್ರಿ ಧರಣಿ ನಡೆಸಿದ ನಂತರ ಈಗ ಹೋರಾಟಗಾರರ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿದಿದೆ. ಇದಕ್ಕೆ ಸಂಬಂಧಿಸಿದಂತೆ ಸಂಸದ ನಳೀನ್ ಕುಮಾರ್ ಕಟೀಲ್ ಟೋಲ್ ಕೇಂದ್ರ ರದ್ದಿನ ಬಗ್ಗೆ ಟ್ವಿಟ್ ಮಾಡಿದ್ದಾರೆ. ಹಲವು ದಿನಗಳಿಂದ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ್ದ ಹೆದ್ದಾರಿ ಸಚಿವರು ಟೋಲ್ ರದ್ದಿಗೆ ಆದೇಶಿಸಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಟೋಲ್ ರದ್ದು ವಿಳಂಬವಾಗಿತ್ತು. ಆದರೆ ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ [&#8230;]]]></description>
										<content:encoded><![CDATA[
<p style="font-size:20px"><strong>ಮಂಗಳೂರು</strong>: ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರವನ್ನು ವಿರೋಧಿಸಿ ಕಳೆದ 18 ದಿನಗಳಿಂದ ಹಗಲು ರಾತ್ರಿ ಧರಣಿ ನಡೆಸಿದ ನಂತರ ಈಗ ಹೋರಾಟಗಾರರ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿದಿದೆ. ಇದಕ್ಕೆ ಸಂಬಂಧಿಸಿದಂತೆ ಸಂಸದ ನಳೀನ್ ಕುಮಾರ್ ಕಟೀಲ್ ಟೋಲ್ ಕೇಂದ್ರ ರದ್ದಿನ ಬಗ್ಗೆ ಟ್ವಿಟ್ ಮಾಡಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವರಾದ ಶ್ರೀ <a href="https://twitter.com/nitin_gadkari?ref_src=twsrc%5Etfw">@nitin_gadkari</a> ಹಾಗೂ ಪ್ರಧಾನಿ ಶ್ರೀ <a href="https://twitter.com/narendramodi?ref_src=twsrc%5Etfw">@narendramodi</a> ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು.<br><br>ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ.</p>&mdash; Nalinkumar Kateel (@nalinkateel) <a href="https://twitter.com/nalinkateel/status/1592098650960060416?ref_src=twsrc%5Etfw">November 14, 2022</a></blockquote><script async src="https://platform.twitter.com/widgets.js" charset="utf-8"></script>
</div></figure>



<p style="font-size:20px">ಹಲವು ದಿನಗಳಿಂದ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದ್ದ ಹೆದ್ದಾರಿ ಸಚಿವರು ಟೋಲ್ ರದ್ದಿಗೆ ಆದೇಶಿಸಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಟೋಲ್ ರದ್ದು ವಿಳಂಬವಾಗಿತ್ತು. ಆದರೆ ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ ಎಂದು ತಮ್ಮ ಟ್ವಿಟ್ ನಲ್ಲಿ ತಿಳಿಸಿದ್ದಾರೆ.</p>



<p style="font-size:20px">ಆದರೆ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಈ ಹೇಳಿಕೆ ಬಗ್ಗೆ ಹೋರಾಟಗಾರರು ಅನುಮಾನ ವ್ಯಕ್ತಪಡಿಸಿದ್ದು, ಧರಣಿ ಮುಂದುವರೆಸುವುದಾಗಿ ತಿಳಿಸಿದ್ದಾರೆ. <strong>ಪೀಪಲ್ ಮೀಡಿಯಾ </strong>ಜೊತೆಗೆ ಮಾತನಾಡಿದ &#8220;ಸುರತ್ಕಲ್ ಟೋಲ್ ಸಂಗ್ರಹ ವಿರೋಧಿ ಹೋರಾಟ ಸಮಿತಿ&#8221; ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ ಈ ರೀತಿಯಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.<br>&#8220;<strong>ನೋಟಿಫಿಕೇಶನ್ ಆದ ಬಗ್ಗೆ ಖುಷಿ ಇದೆ. ಆದರೆ ಜಿಲ್ಲಾಡಳಿತ ಅಧಿಕೃತ ಆದೇಶದ ಪ್ರತಿ ನಮಗೆ ಕೊಟ್ಟಿಲ್ಲ. ಧರಣಿ ನಿರತರು ಟ್ವಿಟ್ ಮತ್ತು ಫೇಸ್ಬುಕ್ ಪೋಸ್ಟ್ ನಂಬಿ ಕೂರುವರಲ್ಲ. ಮತ್ತೆ ಇನ್ನಾವುದಾದರೂ ತಾಂತ್ರಿಕ ಕಾರಣ ಇಟ್ಟು ಮುಂದುವರಿಸುವ ಬಗ್ಗೆಯೂ ನಮಗೆ ಅನುಮಾನವಿದೆ. ಹಾಗಾಗಿ ಆದೇಶದ ಪ್ರತಿ ನಮ್ಮ ಕೈಗೆ ಸಿಕ್ಕಿ, ಟೋಲ್ ಗೇಟ್ ತೆರವಿನ ನಂತರವೇ ನಾವು ಇಲ್ಲಿಂದ ತೆರಳುತ್ತೇವೆ.<br>ಹಾಗೇ ನಳಿನ್ ಕುಮಾರ್ ಕಟೀಲ್ ಪ್ರಧಾನಿಗೆ, ಹೆದ್ದಾರಿ ಪ್ರಾಧಿಕಾರದ ಸಚಿವರಿಗೆ ಧನ್ಯವಾದ ಹೇಳಿದ್ದಾರೆ. ಅದಕ್ಕೂ ಮೊದಲು 7 ವರ್ಷದಿಂದ ಕೋಟ್ಯಂತರ ರೂಪಾಯಿ ಅಕ್ರಮವಾಗಿ ಹಣ ಸಂಗ್ರಹ ಮಾಡಿದ್ದಕ್ಕೆ ಕಟೀಲ್ ಎರಡು ಜಿಲ್ಲೆಯ ಜನರ ಕ್ಷಮೆ ಕೇಳಬೇಕು.&#8221;<br>&#8211; ಮುನೀರ್ ಕಾಟಿಪಳ್ಳ</strong></p>



<p style="font-size:20px">ಹಾಗಾಗಿ ಟೋಲ್ ಸಂಗ್ರಹ ಕೇಂದ್ರ ತೆರವಾಗುವ ವರೆಗೂ ಈ ಜಾಗ ಬಿಟ್ಟು ಕದಲುವುದಿಲ್ಲ ಎಂದು ಹೋರಾಟಗಾರರು ಪಟ್ಟು ಹಿಡಿದು ಕುಳಿತಿದ್ದಾರೆ.</p>
]]></content:encoded>
					
		
		
			</item>
		<item>
		<title>ಒಂದು ಕ್ಯೂಆರ್ ಕೋಡ್‌ಗೆ ಸರ್ಕಾರ ಅಲ್ಲಾಡುತ್ತಿದೆ: ಪ್ರಿಯಾಂಕ್‌ ಖರ್ಗೆ</title>
		<link>https://peepalmedia.com/ondu-qr-codege-sarkara-alladuttide-priyank-karge/</link>
		
		<dc:creator><![CDATA[Peepal Media]]></dc:creator>
		<pubDate>Fri, 23 Sep 2022 05:30:39 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[congrees]]></category>
		<category><![CDATA[govt]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[karnataka congress]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=6713</guid>

					<description><![CDATA[ಬೆಂಗಳೂರು: ರಾಜ್ಯದಲ್ಲಿನ ಪೇ ಸಿ ಎಂ ಅಭಿಯಾನವು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವೇ ಸೃಷ್ಠಿ ಆಗಿದೆ. ಈ ಕುರಿತು ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ಟ್ವೀಟ್‌ ಮೂಲಕ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ‌ಟ್ವೀಟ್‌ ನಲ್ಲಿ ಅವರು ಕಾಂಗ್ರೆಸ್ ಮುಖ್ಯಮಂತ್ರಿಗಳು, ನಾಯಕರ ತೇಜೋವಧೆ ಮಾಡುವಾಗ ಬಿಜೆಪಿಗೆ ರಾಜ್ಯದ ಘನತೆ, ಅವರ ಸ್ಥಾನದ ಗೌರವದ ನೆನಪಿರಲಿಲ್ಲವೇ? ಗುಬ್ಬಿ ಮೇಲೆ ಭ್ರಹ್ಮಾಸ್ತ್ರಾ ಎಂಬಂತೆ ಕಾರ್ಯಕರ್ತರ ಮೇಲೆ ನಿಮ್ಮ ಪೌರುಷ ತೋರಿಸುವುದು ಎಷ್ಟು ಸರಿ? ಒಂದು ಕ್ಯೂಆರ್ ಕೋಡ್‌ಗೆ ಸರ್ಕಾರ ಅಲ್ಲಾಡುತ್ತಿದೆ. [&#8230;]]]></description>
										<content:encoded><![CDATA[
<p class="has-medium-font-size"><strong>ಬೆಂಗಳೂರು</strong>: ರಾಜ್ಯದಲ್ಲಿನ ಪೇ ಸಿ ಎಂ ಅಭಿಯಾನವು ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನವೇ ಸೃಷ್ಠಿ ಆಗಿದೆ. ಈ ಕುರಿತು ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ ಟ್ವೀಟ್‌ ಮೂಲಕ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.</p>



<p class="has-medium-font-size">‌ಟ್ವೀಟ್‌ ನಲ್ಲಿ ಅವರು ಕಾಂಗ್ರೆಸ್ ಮುಖ್ಯಮಂತ್ರಿಗಳು, ನಾಯಕರ ತೇಜೋವಧೆ ಮಾಡುವಾಗ ಬಿಜೆಪಿಗೆ ರಾಜ್ಯದ ಘನತೆ, ಅವರ ಸ್ಥಾನದ ಗೌರವದ ನೆನಪಿರಲಿಲ್ಲವೇ? ಗುಬ್ಬಿ ಮೇಲೆ ಭ್ರಹ್ಮಾಸ್ತ್ರಾ ಎಂಬಂತೆ ಕಾರ್ಯಕರ್ತರ ಮೇಲೆ ನಿಮ್ಮ ಪೌರುಷ ತೋರಿಸುವುದು ಎಷ್ಟು ಸರಿ? ಒಂದು ಕ್ಯೂಆರ್ ಕೋಡ್‌ಗೆ ಸರ್ಕಾರ ಅಲ್ಲಾಡುತ್ತಿದೆ. ಇಷ್ಟೇನಾ ನಿಮ್ಮ ಧಮ್ಮು-ತಾಕತ್ತು-ಧೈರ್ಯ?  ಎಂದು ವಿಮರ್ಶೆ ಮಾಡಿದ್ದಾರೆ.</p>



<p></p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ಕಾಂಗ್ರೆಸ್ ಮುಖ್ಯಮಂತ್ರಿಗಳು, ನಾಯಕರ ತೇಜೋವಧೆ ಮಾಡುವಾಗ ಬಿಜೆಪಿಗೆ ರಾಜ್ಯದ ಘನತೆ, ಅವರ ಸ್ಥಾನದ ಗೌರವದ ನೆನಪಿರಲಿಲ್ಲವೇ?<br><br>ಗುಬ್ಬಿ ಮೇಲೆ ಭ್ರಹ್ಮಾಸ್ತ್ರಾ ಎಂಬಂತೆ ಕಾರ್ಯಕರ್ತರ ಮೇಲೆ ನಿಮ್ಮ ಪೌರುಷ ತೋರಿಸುವುದು ಎಷ್ಟು ಸರಿ?<br><br>ಒಂದು ಕ್ಯೂಆರ್ ಕೋಡ್‌ಗೆ ಸರ್ಕಾರ ಅಲ್ಲಾಡುತ್ತಿದೆ. ಇಷ್ಟೇನಾ ನಿಮ್ಮ ಧಮ್ಮು-ತಾಕತ್ತು-ಧೈರ್ಯ?<br>&#8211;<a href="https://twitter.com/PriyankKharge?ref_src=twsrc%5Etfw">@PriyankKharge</a> <a href="https://t.co/iIfc7Fc3tX">pic.twitter.com/iIfc7Fc3tX</a></p>&mdash; Karnataka Congress (@INCKarnataka) <a href="https://twitter.com/INCKarnataka/status/1572956382889844736?ref_src=twsrc%5Etfw">September 22, 2022</a></blockquote><script async src="https://platform.twitter.com/widgets.js" charset="utf-8"></script>
</div></figure>



<p></p>



<p class="has-medium-font-size"><strong>ಇದನ್ನೂ ನೋಡಿ:</strong> <a href="https://www.youtube.com/watch?v=v5P_-Jpo4cY">https://www.youtube.com/watch?v=v5P_-Jpo4cY</a></p>
]]></content:encoded>
					
		
		
			</item>
		<item>
		<title>ನೆಹರೂ ಭಾವಚಿತ್ರದ ವಿವಾದದ ನಂತರ ಸರ್ಕಾರದಿಂದ ಸಾಲು ಸಾಲು ಯಡವಟ್ಟು!</title>
		<link>https://peepalmedia.com/neharu-bhavachitrada-vivaadada-nantara-sarkaradinda-saalu-saalu-yadavattu/</link>
		
		<dc:creator><![CDATA[Peepal Media]]></dc:creator>
		<pubDate>Mon, 15 Aug 2022 10:36:17 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[bjp]]></category>
		<category><![CDATA[govt]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state news]]></category>
		<guid isPermaLink="false">https://peepalmedia.com/?p=1867</guid>

					<description><![CDATA[ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರ ಕೈಬಿಟ್ಟ ನಂತರ ರಾಜ್ಯ ಬಿಜೆಪಿ ಸರ್ಕಾರ ಮತ್ತೊಂದು ಪ್ರಮಾದ ಮಾಡಿ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ RSS ನ್ನು ಮೆಚ್ಚಿಸುವ ಮೂಲಕ ತಮ್ಮ ಕುರ್ಚಿ ಉಳಿಸಿಕೊಳ್ಳಲೆಂದೇ ಇಂತಹ ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಕನ್ನಡದ ಸಿನಿಮಾ ನಟರಿಂದ ಚಿತ್ರೀಕರಣ ನಡೆಸಿ ಸ್ವಾತಂತ್ರ್ಯ ದಿನಕ್ಕೆ ಈ ಹಾಡನ್ನು ಅರ್ಪಿಸಲಾಗಿದೆ ಎಂಬ ತಲೆಬರಹ ಕೊಡಲಾಗಿದೆ. ಆದರೆ ಇದು &#8216;ವಂದೇ ಮಾತರಂ&#8217; ಗೀತೆಯಾಗಿದ್ದು, ಕನ್ನಡದ [&#8230;]]]></description>
										<content:encoded><![CDATA[
<p class="has-medium-font-size">ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರ ಕೈಬಿಟ್ಟ ನಂತರ ರಾಜ್ಯ ಬಿಜೆಪಿ ಸರ್ಕಾರ ಮತ್ತೊಂದು ಪ್ರಮಾದ ಮಾಡಿ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ RSS ನ್ನು ಮೆಚ್ಚಿಸುವ ಮೂಲಕ ತಮ್ಮ ಕುರ್ಚಿ ಉಳಿಸಿಕೊಳ್ಳಲೆಂದೇ ಇಂತಹ ತಪ್ಪುಗಳನ್ನು ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.</p>



<p class="has-medium-font-size">ಕನ್ನಡದ ಸಿನಿಮಾ ನಟರಿಂದ ಚಿತ್ರೀಕರಣ ನಡೆಸಿ ಸ್ವಾತಂತ್ರ್ಯ ದಿನಕ್ಕೆ ಈ ಹಾಡನ್ನು ಅರ್ಪಿಸಲಾಗಿದೆ ಎಂಬ ತಲೆಬರಹ ಕೊಡಲಾಗಿದೆ. ಆದರೆ ಇದು &#8216;ವಂದೇ ಮಾತರಂ&#8217; ಗೀತೆಯಾಗಿದ್ದು, ಕನ್ನಡದ ನಟರನ್ನು ಬಳಸಿಕೊಂಡಿದ್ದು ಕನ್ನಡದ್ದೇ ಎಷ್ಟೋ ದೇಶಭಕ್ತಿಗೀತೆಗಳು ಇರುವಾಗ ಮತ್ತೊಮ್ಮೆ ವಂದೇಮಾತರಂ ಬಳಸುವ ಅವಶ್ಯಕತೆ ಏನಿತ್ತು ಎಂಬುದು ಪ್ರಮುಖ ಪ್ರಶ್ನೆಯಾಗಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ವಂದೇ ಮಾತರಂ<br><br>ಕನ್ನಡದ ಸಾಧಕರಿಂದ ತಾಯಿ ಭಾರತಿಗೆ ಅರ್ಪಣೆ<a href="https://twitter.com/hashtag/AzadiKaAmritMahotsav?src=hash&amp;ref_src=twsrc%5Etfw">#AzadiKaAmritMahotsav</a> <a href="https://t.co/bHTkvqzoLl">pic.twitter.com/bHTkvqzoLl</a></p>&mdash; Basavaraj S Bommai (@BSBommai) <a href="https://twitter.com/BSBommai/status/1558824598732697600?ref_src=twsrc%5Etfw">August 14, 2022</a></blockquote><script async src="https://platform.twitter.com/widgets.js" charset="utf-8"></script>
</div></figure>



<p class="has-medium-font-size">ಹಾಗೇ ಇಲ್ಲಿ ಸಾಧಕರು ಎಂಬ ತಲೆಬರಹ ಕೊಟ್ಟು ಕೇವಲ ಸಿನಿಮಾ ನಟರನ್ನು ಮಾತ್ರ ಇಡೀ ಚಿತ್ರೀಕರಣದಲ್ಲಿ ಬಳಸಿಕೊಳ್ಳಲಾಗಿದೆ. ಕ್ರಿಕೆಟ್ ಆಟಗಾರ ವೆಂಕಟೇಶ್ ಪ್ರಸಾದ್, ಮಂಜಮ್ಮ ಜೋಗತಿ, ಸಾಲುಮರದ ತಿಮ್ಮಕ್ಕ ಮತ್ತು ಲೇಖಕ ಭೈರಪ್ಪ ಹೊರತುಪಡಿಸಿ ಪ್ರತಿಯೊಬ್ಬರೂ ಚಿತ್ರನಟರೇ. ಅಲ್ಲೂ ಸಹ ಒಬ್ಬೇ ಒಬ್ಬ ಹೆಣ್ಣು ಮಕ್ಕಳೂ ಚಿತ್ರೀಕರಣದ ದೃಶ್ಯದಲ್ಲಿ ಕಾಣಸಿಗುವುದಿಲ್ಲ. ಹಾಗಾದರೆ ಕರ್ನಾಟಕದ ಮಟ್ಟಿಗೆ ಸಾಧನೆ ಮಾಡಬೇಕು ಎಂದರೆ ಸಿನಿಮಾ ನಟರೇ ಆಗಿರಬೇಕು, ಅದರಲ್ಲೂ ಗಂಡಸರೇ ಆಗಬೇಕೇ? ಎಂದು ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಚಿತ್ರನಟರಾದ ದರ್ಶನ್ ಮತ್ತು ಯಶ್ ಅವರನ್ನು ಈ ಹಾಡಿನ ಚಿತ್ರೀಕರಣದ ಒಳಗೆ ಸೇರಿಸದೇ ಇರುವುದು ಮತ್ತೊಂದಷ್ಟು ಅನುಮಾನಕ್ಕೆ ಕಾರಣವಾಗಿದೆ.</p>



<p class="has-medium-font-size">ಚಿತ್ರೀಕರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಬಳಸಿದ ದೃಶ್ಯವೊಂದರಲ್ಲಿ ಮರಾಠಿ ಸಾಮ್ರಾಜ್ಯಶಾಹಿ ಶಿವಾಜಿ ಫೋಟೊ ಕೂಡಾ ಹಾಕಲಾಗಿದೆ. ಶಿವಾಜಿ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದಾರೆ ಎಂಬುದು ಇಲ್ಲಿ ಎದ್ದಿರುವ ಮತ್ತೊಂದು ಪ್ರಶ್ನೆ.</p>



<figure class="wp-block-image size-full"><img fetchpriority="high" decoding="async" width="705" height="233" src="https://peepalmedia.com/wp-content/uploads/2022/08/FB_IMG_1660559606298-1.jpg" alt="" class="wp-image-1872" srcset="https://peepalmedia.com/wp-content/uploads/2022/08/FB_IMG_1660559606298-1.jpg 705w, https://peepalmedia.com/wp-content/uploads/2022/08/FB_IMG_1660559606298-1-300x99.jpg 300w" sizes="(max-width: 705px) 100vw, 705px" /></figure>



<p class="has-medium-font-size">ಇನ್ನು ತ್ರಿವರ್ಣ ಧ್ವಜದ ಬಗ್ಗೆ ರಾಷ್ಟ್ರವ್ಯಾಪಿ ದೊಡ್ಡ ಅಭಿಯಾನವನ್ನೇ ಮಾಡಿದ ಬಿಜೆಪಿ ಪಕ್ಷ ದೃಶ್ಯವೊಂದರಲ್ಲಿ ಬರುವ ಭಾರತ ಮಾತೆಯ ಕೈಯಲ್ಲಿ ತ್ರಿವರ್ಣ ಧ್ವಜದ ಬದಲು ಭಗವಾಧ್ವಜ ಕೊಟ್ಟಿದೆ. ಇದೂ ಸಹ ಬಿಜೆಪಿ ಪಕ್ಷದ ನಕಲಿ ರಾಷ್ಟ್ರಭಕ್ತಿ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ.</p>



<p class="has-medium-font-size">ಇಂತಹ ಸಾಲುಸಾಲು ಯಡವಟ್ಟುಗಳನ್ನು ಬೊಮ್ಮಾಯಿ ನೇತೃತ್ವದ ಸರ್ಕಾರ ಉದ್ದೇಶಪೂರ್ವಕವಾಗಿಯೇ ಮಾಡುತ್ತಿದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕುರ್ಚಿ ತಪ್ಪಿಹೋಗುವ ಭಯದಿಂದ RSS ಮೆಚ್ಚಿಸಲು ಇಂತಹ ಪ್ರಮಾದ ಮಾಡುತ್ತಿದೆ ಎಂಬ ಟೀಕೆ ವ್ಯಾಪಕವಾಗಿ ಸಾರ್ವಜನಿಕವಾಗಿ ಮತ್ತು ಜಾಲತಾಣಗಳ ಮೂಲಕ ಕೇಳಿ ಬರುತ್ತಿದೆ.</p>
]]></content:encoded>
					
		
		
			</item>
		<item>
		<title>ಇಂದು ದೇಶದ 16 ನೇ ಉಪರಾಷ್ಟ್ರಪತಿ ಚುನಾವಣೆ</title>
		<link>https://peepalmedia.com/indu-deshada16-ne-uparaashtrapati-chunaavane/</link>
		
		<dc:creator><![CDATA[Peepal Media]]></dc:creator>
		<pubDate>Sat, 06 Aug 2022 10:48:54 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[central politics]]></category>
		<category><![CDATA[election]]></category>
		<category><![CDATA[govt]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[New Delhi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[president]]></category>
		<category><![CDATA[sandalwood]]></category>
		<category><![CDATA[UPA]]></category>
		<category><![CDATA[vice president]]></category>
		<category><![CDATA[writing]]></category>
		<guid isPermaLink="false">https://peepalmedia.com/?p=682</guid>

					<description><![CDATA[ನವದೆಹಲಿ: ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ತೆರವಾಗುವ ಉಪರಾಷ್ಟ್ರಪತಿ ಹುದ್ದೆಗೆ ಇಂದು ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಗಳು ತಮ್ಮ ಪ್ರಚಾರ ಕಾರ್ಯ ಮುಗಿಸಿದ್ದಾರೆ. NDA ಅಭ್ಯರ್ಥಿಯಾಗಿ ಜಗದೀಪ್ ಧನಖರ್ ಮತ್ತು UPA ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವರವರು ಕಣಕ್ಕಿಳಿದಿದ್ದಾರೆ. ದೇಶದ 16 ನೇ ಉಪರಾಷ್ಟ್ರಪತಿ ಚುನಾವಣೆ ಇದಾಗಿದ್ದು, ಸಂಸತ್ತಿನ ಉಭಯ ಸದನಗಳ ಒಟ್ಟು ಪ್ರತಿನಿಧಿಗಳು ಸೇರಿ 788 ಮಂದಿ ಈ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ಯತೆಯ ಆಧಾರದಲ್ಲಿ ನಡೆಯುವ ಈ [&#8230;]]]></description>
										<content:encoded><![CDATA[
<p class="has-medium-font-size"><strong>ನವದೆಹಲಿ: </strong>ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ತೆರವಾಗುವ ಉಪರಾಷ್ಟ್ರಪತಿ ಹುದ್ದೆಗೆ ಇಂದು ಚುನಾವಣೆ ನಡೆಯಲಿದೆ. ಬಿಜೆಪಿ ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಗಳು ತಮ್ಮ ಪ್ರಚಾರ ಕಾರ್ಯ ಮುಗಿಸಿದ್ದಾರೆ. NDA ಅಭ್ಯರ್ಥಿಯಾಗಿ ಜಗದೀಪ್ ಧನಖರ್ ಮತ್ತು UPA ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವರವರು ಕಣಕ್ಕಿಳಿದಿದ್ದಾರೆ.</p>



<p class="has-medium-font-size">ದೇಶದ 16 ನೇ ಉಪರಾಷ್ಟ್ರಪತಿ ಚುನಾವಣೆ ಇದಾಗಿದ್ದು, ಸಂಸತ್ತಿನ ಉಭಯ ಸದನಗಳ ಒಟ್ಟು ಪ್ರತಿನಿಧಿಗಳು ಸೇರಿ 788 ಮಂದಿ ಈ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ಯತೆಯ ಆಧಾರದಲ್ಲಿ ನಡೆಯುವ ಈ ಮತದಾನ ಗುಪ್ತ ಮತದಾನವೂ ಆಗಿರುತ್ತದೆ. ಸದಸ್ಯರು ತಮ್ಮ ಆದ್ಯತೆಯನ್ನು ಅಂಕಿಗಳಲ್ಲಿ ತಿಳಿಸುತ್ತಾರೆ. ಪದಗಳಲ್ಲಿ ಸೂಚಿಸಿದ ಆದ್ಯತೆಯನ್ನು ಅನೂರ್ಜಿತ ಎಂದು ಪರಿಗಣಿಸಲಾಗಿದೆ. ಬ್ಯಾಲೆಟ್ ಪೇಪರ್ ಮಾನ್ಯವಾಗಿರಲು ಮೊದಲ ಪ್ರಾಶಸ್ತ್ಯದ ಗುರುತು ಕಡ್ಡಾಯವಾಗಿದ್ದರೂ, ಇತರ ಆದ್ಯತೆಗಳು ಐಚ್ಛಿಕವಾಗಿರುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ವಿಶೇಷ ಎಂದರೆ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಮತದಾರರಿಗೆ (ಸಂಸದರಿಗೆ) ಮತದಾನದ ವಿಚಾರಕ್ಕೆ ವಿಪ್ ನೀಡುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.</p>



<p class="has-medium-font-size">*ಜಗದೀಪ್ ಧನಖರ್ V/s ಮಾರ್ಗರೇಟ್ ಆಳ್ವ*<br>NDA ಒಕ್ಕೂಟದ ಅಭ್ಯರ್ಥಿಯಾಗಿ ಜಗದೀಪ್ ಧನಖರ್ ಕಣಕ್ಕಿಳಿಯಲಿದ್ದು ಒಕ್ಕೂಟ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಸಂಪುಟದಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದವರಾಗಿದ್ದಾರೆ. ಮೂಲತಃ ರಾಜಸ್ಥಾನದವರಾಗಿದ್ದು ಕಳೆದ ಜುಲೈ 17 ರ ರವೆಗೂ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ.</p>



<p class="has-medium-font-size">UPA ಒಕ್ಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಮಾರ್ಗರೇಟ್ ಆಳ್ವ ಕಾಂಗ್ರೆಸ್ ಪಕ್ಷದ ಹಿರಿಯ ಸಂಸದೀಯ ಪಟು. ಕಾಂಗ್ರೆಸ್ ಅಧಿಕಾರಾವಧಿಯ ಸಂದರ್ಭದಲ್ಲಿ ವಿವಿಧ ಮಹತ್ವದ ಹುದ್ದೆಗಳನ್ನು ಅವರು ಅಲಂಕರಿಸಿದ್ದಾರೆ. ಮೂಲತಃ ಕರ್ನಾಟಕದ ಕರಾವಳಿ ಭಾಗದವರಾಗಿದ್ದು ಉತ್ತರ ಕನ್ನಡ ಜಿಲ್ಲೆಯಿಂದ ಚುನಾಯಿತರಾಗಿ ರಾಷ್ಟ್ರ ಮಟ್ಟದಲ್ಲಿ ವಿವಿಧ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಖ್ಯಾತಿ ಇವರಿಗಿದೆ. 60 ರ ದಶಕದಲ್ಲೇ ರಾಜ್ಯಸಭೆಯ ಎರಡನೇ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಗೋವಾ, ಗುಜರಾತ್, ರಾಜಸ್ಥಾನ, ಉತ್ತರಾಖಂಡ್ ರಾಜ್ಯಗಳಲ್ಲಿ ರಾಜ್ಯಪಾಲರಾಗಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.</p>



<p class="has-medium-font-size">ಇನ್ನು ಸಂಖ್ಯಾಬಲದ ಆಧಾರದಲ್ಲಿ ನೋಡಿದರೆ NDA ಅಭ್ಯರ್ಥಿ ಜಗದೀಪ್ ಧನಖರ್ ಗೆಲ್ಲುವ ಅಭ್ಯರ್ಥಿಯಾಗಿದ್ದಾರೆ. ಆದರೆ UPA ಒಕ್ಕೂಟಕ್ಕೆ ತಮ್ಮ ಒಕ್ಕೂಟಕ್ಕೆ ಸೇರದ ಕೆಲವು ಸಂಸದರು ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ಮತ್ತು ಪಕ್ಷಗಳು ಸಂಸದರಿಗೆ ವಿಪ್ ನೀಡುವ ಪ್ರಕ್ರಿಯೆ ಇಲ್ಲದ ಹಿನ್ನೆಲೆಯಲ್ಲಿ ಮಾರ್ಗರೇಟ್ ಆಳ್ವರ ಗೆಲುವೂ ಸಹ ಅನಿರೀಕ್ಷಿತವೇನೂ ಆಗಿರುವುದಿಲ್ಲ. ಆ ಹಿನ್ನೆಲೆಯಲ್ಲಿ ಸಮಬಲದ ಹೋರಾಟ ಕೂಡಾ ನಡೆಯುವ ಸಾಧ್ಯತೆ ಇದೆ.</p>



<p class="has-medium-font-size">‌ಹಾಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರವರ ಅಧಿಕಾರ ಆಗಸ್ಟ್ 10 ಕ್ಕೆ ಅಂತ್ಯಗೊಳ್ಳಲಿದ್ದು ಇನ್ನು ಕೆಲವೇ ದಿನಗಳಲ್ಲಿ ಜಗದೀಪ್ ಧನಖರ್ ಅಥವಾ ಮಾರ್ಗರೇಟ್ ಆಳ್ವರನ್ನು ಆ ಸ್ಥಾನದಲ್ಲಿ ನೋಡಬಹುದಾಗಿದೆ.</p>
]]></content:encoded>
					
		
		
			</item>
	</channel>
</rss>
