<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>gujarat assemby &#8211; Peepal Media</title>
	<atom:link href="https://peepalmedia.com/tag/gujarat-assemby/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 20 Feb 2024 13:00:14 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>gujarat assemby &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಗುಜರಾತ್: ಸದನದಲ್ಲಿ ಪ್ರಶ್ನಿಸಿದ 10 ಮಂದಿ ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಿದ ಸ್ಪೀಕರ್</title>
		<link>https://peepalmedia.com/gujarat-speaker-suspended-10congress-mlas-who-were-questioned-in-the-house/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 20 Feb 2024 12:55:41 +0000</pubDate>
				<category><![CDATA[ದೇಶ]]></category>
		<category><![CDATA[gujarat]]></category>
		<category><![CDATA[gujarat assembly news]]></category>
		<category><![CDATA[gujarat assemby]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=36238</guid>

					<description><![CDATA[ಗಾಂಧಿನಗರ: ಸದನದಲ್ಲಿ ಘೋಷಣೆ ಕೂಗಿದ ಮತ್ತು ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದ 10 ಮಂದಿ ಶಾಸಕರನ್ನು ಒಂದು ದಿನದ ಮಟ್ಟಿಗೆ ಗುಜರಾತ್ ವಿಧಾನಸಭೆಯಿಂದ ಅಮಾನತುಗೊಳಿಸಿದ ಪ್ರಸಂಗ ನಡೆದಿದೆ. ಬಜೆಟ್ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ತುಷಾರ್ ಚೌಧರಿ, ಛೋಟಾ ಉದೇಪುರ್ ಜಿಲ್ಲೆಯಲ್ಲಿ ನಕಲಿ ಸರಕಾರಿ ಕಚೇರಿ ತೆರೆದು, ಆದಿವಾಸಿ ಪ್ರದೇಶಗಳಲ್ಲಿನ ನೀರಾವರಿ ಯೋಜನೆಗಳಿಗಾಗಿ ಮೀಸಲಿಟ್ಟಿದ್ದ ನಿಧಿಯನ್ನು ಲಪಟಾಯಿಸಿರುವ ಪ್ರಕರಣದ ಕುರಿತು ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು. ಗುಜರಾತ್ ವಿಧಾನಸಭೆಯಲ್ಲಿ ಒಟ್ಟು 15 ಮಂದಿ ಕಾಂಗ್ರೆಸ್ [&#8230;]]]></description>
										<content:encoded><![CDATA[
<p>ಗಾಂಧಿನಗರ: ಸದನದಲ್ಲಿ ಘೋಷಣೆ ಕೂಗಿದ ಮತ್ತು ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದ 10 ಮಂದಿ ಶಾಸಕರನ್ನು ಒಂದು ದಿನದ ಮಟ್ಟಿಗೆ ಗುಜರಾತ್ ವಿಧಾನಸಭೆಯಿಂದ ಅಮಾನತುಗೊಳಿಸಿದ ಪ್ರಸಂಗ ನಡೆದಿದೆ.</p>



<p><br>ಬಜೆಟ್ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ತುಷಾರ್ ಚೌಧರಿ, ಛೋಟಾ ಉದೇಪುರ್ ಜಿಲ್ಲೆಯಲ್ಲಿ ನಕಲಿ ಸರಕಾರಿ ಕಚೇರಿ ತೆರೆದು, ಆದಿವಾಸಿ ಪ್ರದೇಶಗಳಲ್ಲಿನ ನೀರಾವರಿ ಯೋಜನೆಗಳಿಗಾಗಿ ಮೀಸಲಿಟ್ಟಿದ್ದ ನಿಧಿಯನ್ನು ಲಪಟಾಯಿಸಿರುವ ಪ್ರಕರಣದ ಕುರಿತು ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.</p>



<p><br>ಗುಜರಾತ್ ವಿಧಾನಸಭೆಯಲ್ಲಿ ಒಟ್ಟು 15 ಮಂದಿ ಕಾಂಗ್ರೆಸ್ ಶಾಸಕರ ಬಲವಿದೆ. ಆದರೆ, ಸದನದಲ್ಲಿ ಗದ್ದಲ ನಡೆದಾಗ ಐದು ಮಂದಿ ಕಾಂಗ್ರೆಸ್ ಶಾಸಕರು ಗೈರಾಗಿದ್ದರು.</p>



<p>ಈ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಆದಿವಾಸಿ ಅಭಿವೃದ್ಧಿ ಸಚಿವ ಕುಬೇರ್ ದಿಂದೋರ್, ಛೋಟಾ ಉದೇಪುರ್ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಅಂತಹ ಯಾವುದೇ ನಕಲಿ ಕಚೇರಿ ಪತ್ತೆಯಾಗಿಲ್ಲ. ಹಾಗಾಗಿ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸದನಕ್ಕೆ ತಿಳಿಸಿದರು.</p>



<p><br>ಸಚಿವರ ಉತ್ತರದಿಂದ ಕುಪಿತರಾದ ಚೌಧರಿ, ಕಳೆದ ಒಂದು ವರ್ಷದಲ್ಲಿ ಆದಿವಾಸಿಗಳ ಪ್ರಾಬಲ್ಯ ಹೊಂದಿರುವ ಛೋಟಾ ಉದೇಪುರ್ ಜಿಲ್ಲೆಯಲ್ಲಿ ಅಂತಹ ಐದು ನಕಲಿ ಕಚೇರಿಗಳನ್ನು ಪತ್ತೆ ಹಚ್ಚಲಾಗಿದೆ ಆರೋಪಿಗಳನ್ನೂ ಸೆರೆ ಹಿಡಿಯಲಾಗಿದೆ ಎಂದು ವಾದ ಮಂಡಿಸಿದ್ದರು.</p>



<p><br><strong>ಪ್ರಕರಣದ ಹಿನ್ನೆಲೆ<br></strong>ಛೋಟಾ ಉದೇಪುರ್ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಕಾರ್ಯಪಾಲಕ ಎಂಜಿನಿಯರ್ ಕಚೇರಿಯನ್ನು ಸ್ಥಾಪಿಸಿ, ರೂ. 4.16 ಕೋಟಿ ಮೊತ್ತದ ಸರಕಾರಿ ಮಂಜೂರಾತಿಗಳನ್ನು ಪಡೆದ ಆರೋಪದಲ್ಲಿ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಬಂಧನಕ್ಕೀಡಾಗಿದ್ದ ಇಬ್ಬರು ವ್ಯಕ್ತಿಗಳ ಕುರಿತು ಚೌಧರಿ ಪ್ರಸ್ತಾಪಿಸಿದರು.</p>



<p><br>ನಂತರ, ಆರೋಪಿಗಳಿಗೆ ನೆರವು ನೀಡಿ, &#8216;ಆದಿವಾಸಿ ಪ್ರದೇಶ ಉಪ ಯೋಜನೆ&#8217; ಅಡಿಯಲ್ಲಿ ಹಗರಣ ನಡೆಸಿ, ರೂ. 18.59 ಕೋಟಿ ಸರಕಾರಿ ಮಂಜೂರಾತಿ ಪಡೆಯಲು ಅವಕಾಶ ಮಾಡಿಕೊಟ್ಟಿದ್ದ ಆರೋಪದಲ್ಲಿ ಕಳೆದ ವರ್ಷ ಸ್ವಯಂ ನಿವೃತ್ತಿ ಪಡೆದಿರುವ ಮಾಜಿ ಐಎಎಸ್ ಅಧಿಕಾರಿ ಬಿ.ಡಿ.ನಿನಮ ಅವರನ್ನು ಕಳೆದ ವರ್ಷದ ಫೆಬ್ರವರಿಯಲ್ಲಿ ದಾಹೋಡ್ ಜಿಲ್ಲೆಯ ಪೊಲೀಸರು ಬಂಧಿಸಿದ್ದರು.<br>ಆರೋಪಿಗಳಿಗೆ ಎಷ್ಟು ನಿಧಿಯನ್ನು ಒದಗಿಸಲಾಗಿದೆ ಎಂದು ಕಾಂಗ್ರೆಸ್ ಶಾಸಕ ಅಮೃತ್‌ಜಿ ಠಾಕೋರ್ ಪ್ರಶ್ನಿಸಿದಾಗ, ಆರೋಪಿಗಳು ನೈಜ ಅಧಿಕಾರಿಗಳಂತೆ ಸೋಗು ಹಾಕಿದ್ದರಿಂದ, ಅವರಿಗೆ ರೂ. 21 ಕೋಟಿ ವಿಲೇವಾರಿ ಮಾಡಲಾಗಿದೆ ಎಂದು ಸಚಿವ ದಿಂದೋರ್ ಉತ್ತರಿಸಿದರು.</p>



<p><br>&#8220;ಈ ಹಗರಣವನ್ನು ರಾಜ್ಯ ಸರಕಾರವೇ ಬಯಲಿಗೆಳೆದಿದ್ದು, ಈ ವಿಷಯ ಮಾಧ್ಯಮಗಳಲ್ಲೂ ಪ್ರಕಟವಾಗಿದೆ. ನಾವು ಈ ಸಂಬಂಧ ಸ್ವಯಂಪ್ರೇರಿತ ಕ್ರಮ ಕೈಗೊಂಡಿದ್ದೇವೆ. ನಾವು ಆರೋಪಿಗಳ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದು, ಈವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ&#8221; ಎಂದು ಸಚಿವ ದಿಂದೋರ್ ಸದನಕ್ಕೆ ಮಾಹಿತಿ ನೀಡಿದರು.</p>



<p><br>ಆದರೆ, ಲಿಖಿತ ಉತ್ತರಕ್ಕೂ, ಸಚಿವರ ಹೇಳಿಕೆಗೂ ವ್ಯತ್ಯಾಸವಿದ್ದುದರಿಂದ ಕಾಂಗ್ರೆಸ್ ಶಾಸಕರು ಸದನದಲ್ಲಿ ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು. ಸದನದಲ್ಲಿ ಘೋಷಣೆಗಳನ್ನು ಕೂಗುತ್ತಿದ್ದ ಕಾಂಗ್ರೆಸ್ ಶಾಸಕರಿಗೆ ಗದ್ದಲ ಸ್ಥಗಿತಗೊಳಿಸುವಂತೆ ವಿಧಾನಸಭಾ ಸ್ಪೀಕರ್ ಶಂಕರ್ ಚೌಧರಿ ಪದೇ ಪದೇ ಮನವಿ ಮಾಡಿದರೂ, ಕಾಂಗ್ರೆಸ್ ಶಾಸಕರು ಘೋಷಣೆ ಕೂಗುವುದನ್ನು ನಿಲ್ಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ವಿಧಾನಸಭಾ ಸ್ಪೀಕರ್ ಶಂಕರ್ ಚೌಧರಿ ಸದನದಲ್ಲಿ ಹಾಜರಿದ್ದ ಎಲ್ಲ ಕಾಂಗ್ರೆಸ್ ಶಾಸಕರನ್ನು ಒಂದು ದಿನದ ಮಟ್ಟಿಗೆ ಸದನದಿಂದ ಅಮಾನತುಗೊಳಿಸಿದ್ದಾರೆ. ನಾಳೆ ಕೂಡಾ ಬಜೆಟ್ ಅಧಿವೇಶನ ಮುಂದುವರಿಯಲಿದ್ದು, ಈ ಅಮಾನತು ನಾಳೆಗೂ ಅನ್ವಯವಾಗುತ್ತದೆ ಎಂದು ಸ್ಪೀಕರ್ ಶಂಕರ್ ಚೌಧರಿ ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಆಪ್‌ ಪಕ್ಷದ ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿ ಇಸುದನ್‌ ಗಧ್ವಿ ಯಾರು?</title>
		<link>https://peepalmedia.com/aaps-gujarat-cm-face/</link>
		
		<dc:creator><![CDATA[Peepal Media]]></dc:creator>
		<pubDate>Fri, 04 Nov 2022 10:49:02 +0000</pubDate>
				<category><![CDATA[ವಿಶೇಷ]]></category>
		<category><![CDATA[AAP CM CANDIDATE]]></category>
		<category><![CDATA[aravind kejrival]]></category>
		<category><![CDATA[gujarat assemby]]></category>
		<category><![CDATA[gujarat election]]></category>
		<category><![CDATA[gujarath election]]></category>
		<category><![CDATA[isudhan gadhvi]]></category>
		<category><![CDATA[kannada]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=14145</guid>

					<description><![CDATA[ಅತ್ತ ಚುನಾವಣಾ ಆಯೋಗವು ಗುಜರಾತ್‌ ರಾಜ್ಯದ ಚುನಾವಣೆ ಘೋಷಿಸುತ್ತಿದ್ದಂತೆ ಇತ್ತ ಅರವಿಂದ ಕೇಜ್ರಿವಾಲ್‌ ಅವರ ನೇತ್ರತ್ವದ ಆಮ್‌ ಆದ್ಮಿ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ. ನಿನ್ನೆ ಈ ಕುರಿತು ಜನರ ಬಳಿ ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಯಾರಾಗಬೇಕೆನ್ನುವುದನ್ನು ಸೂಚಿಸುವಂತೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಜನರು ತಮ್ಮ ಆಯ್ಕೆಯಾಗಿ ಇಸುದನ್‌ ಗದ್ವಿ ಎನ್ನುವವರನ್ನು ಮುಂದಿರಿಸಿದ್ದಾರೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. ಈ ಅಚ್ಚರಿಯ ಆಯ್ಕೆಯಂತೆ ಕಾಣುವ ಇಸುದನ್‌ ಗಧ್ವಿ ಮೂಲತಃ ಓರ್ವ ಪತ್ರಕರ್ತ. 2005ರಲ್ಲಿ ಗುಜರಾತ್ ವಿದ್ಯಾಪೀಠದಿಂದ ಪತ್ರಿಕೋದ್ಯಮ [&#8230;]]]></description>
										<content:encoded><![CDATA[
<p>ಅತ್ತ ಚುನಾವಣಾ ಆಯೋಗವು ಗುಜರಾತ್‌ ರಾಜ್ಯದ ಚುನಾವಣೆ ಘೋಷಿಸುತ್ತಿದ್ದಂತೆ ಇತ್ತ ಅರವಿಂದ ಕೇಜ್ರಿವಾಲ್‌ ಅವರ ನೇತ್ರತ್ವದ ಆಮ್‌ ಆದ್ಮಿ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ. ನಿನ್ನೆ ಈ ಕುರಿತು ಜನರ ಬಳಿ ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಯಾರಾಗಬೇಕೆನ್ನುವುದನ್ನು ಸೂಚಿಸುವಂತೆ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಜನರು ತಮ್ಮ ಆಯ್ಕೆಯಾಗಿ ಇಸುದನ್‌ ಗದ್ವಿ ಎನ್ನುವವರನ್ನು ಮುಂದಿರಿಸಿದ್ದಾರೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.</p>



<p> ಈ ಅಚ್ಚರಿಯ ಆಯ್ಕೆಯಂತೆ ಕಾಣುವ ಇಸುದನ್‌ ಗಧ್ವಿ ಮೂಲತಃ ಓರ್ವ ಪತ್ರಕರ್ತ. 2005ರಲ್ಲಿ ಗುಜರಾತ್ ವಿದ್ಯಾಪೀಠದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಇವರು ದೂರದರ್ಶನ ನಿರೂಪಕರಾಗಿ ಖ್ಯಾತರು. </p>



<p>ತಮ್ಮ ವೃತ್ತಿಜೀವನದ ಆರಂಭದಲ್ಲಿ, ಗಧ್ವಿ ದೂರದರ್ಶನದ ಜನಪ್ರಿಯ ಕಾರ್ಯಕ್ರಮವಾದ &#8216;ಯೋಜನಾ&#8217;ದಲ್ಲಿ ಕೆಲಸ ಮಾಡಿದರು. 2007ರಿಂದ 2011ರ ತನಕ, ಇಸುದನ್ ಪೋರಬಂದರ್ ಪ್ರದೇಶದಲ್ಲಿ ಆನ್-ಫೀಲ್ಡ್ ಪತ್ರಕರ್ತರಾಗಿ ETV ಗುಜರಾತಿಯಲ್ಲಿ ಕೆಲಸ ಮಾಡಿದ್ದರು. ನಂತರ ಅವರು ತಮ್ಮ ಸುದ್ದಿ ಕಾರ್ಯಕ್ರಮವೊಂದರಲ್ಲಿ ಗುಜರಾತಿನ ಡಾಂಗ್ ಮತ್ತು ಕಪರಡಾ ತಾಲೂಕಿನಲ್ಲಿ ನಡೆದ ಅಕ್ರಮ ಅರಣ್ಯನಾಶದ 150 ಕೋಟಿ ರೂ.ಗಳ ಹಗರಣವನ್ನು ಬಹಿರಂಗಪಡಿಸಿದರು, ಇದರ ಪರಿಣಾಮವಾಗಿ ಗುಜರಾತ್ ಸರ್ಕಾರವು ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಗೆ ಈಡಾಯಿತು. ಈ ಘಟನೆಯ ನಂತರ ಗಧ್ವಿಯವರ ಖ್ಯಾತಿ ಎಲ್ಲೆಡೆ ಹರಡಿತು.</p>



<p>ಇದರ ನಂತರ ವಿಟಿವಿ ಗುಜರಾತ್ ಚಾನೆಲ್ಲಿನಲ್ಲಿ ಗುಜರಾತಿ ಭಾಷೆಯ ಮಹಾಮಂಥನ್‌ ಎನ್ನುವ ಕಾರ್ಯಕ್ರಮವನ್ನು 2015ರಿಂದ 2021ರ ತನಕ ನಡೆಸಿಕೊಟ್ಟರು. ಇದೊಂದು ಪ್ರೈಮ್‌ ಟೈಮ್‌ ಕಾರ್ಯಕ್ರಮವಾಗಿತ್ತು. ಅದರ ನಂತರ ಜೂನ್‌ 2021ರಲ್ಲಿ ಆಮ್‌ ಆದ್ಮಿ ಪಕ್ಷವನ್ನು ಸೇರಿದರು. &#8220;ನಾನು ಜನಸೇವೆಗಾಗಿ ಮಾಧ್ಯಮ ರಂಗಕ್ಕೆ ಬಂದೆ. ಗುಜರಾತಿನ ಜನರು ನನ್ನನ್ನು ಇಷ್ಟಪಟ್ಟರು. ಮಾಧ್ಯಮ ಕ್ಷೇತ್ರದಲ್ಲಿಯೇ ಉಳಿದುಕೊಂಡರೆ ನಾನು ಕೆಲವೇ ಜನರಿಗಷ್ಟೇ ಸೇವೆ ಸಲ್ಲಿಸಬಹುದು, ಆದರೆ ರಾಜಕೀಯಕ್ಕೆ ಸೇರಿದರೆ ಇನ್ನೂ ಹೆಚ್ಚಿನ ಜನರಿಗೆ ನನ್ನ ಸೇವೆಯನ್ನು ವಿಸ್ತರಿಸಬಹುದು ಎನ್ನುವುದು ಮನದಿಂಗಿತವಾಗಿತ್ತು&#8221; ಎನ್ನುವ ಅವರು ಗುಜರಾತಿನ ರಾಜಕೀಯಕ್ಕೆ ಹೊಸತನ ನೀಡಲಿದ್ದಾರೆಯೇ ಎನ್ನುವುದನ್ನು ಕಾದು ನೋಡಬೇಕಿದೆ.</p>



<p>1982ರಲ್ಲಿ ಜನಿಸಿದ ಅವರನ್ನು ರಾಜಕೀಯ ಕ್ಷೇತ್ರದಲ್ಲಿ ಯುವ ರಾಜಾಕಾರಣಿಯೆಂದೇ ಹೇಳಬಹುದು. ಸಾಂಪ್ರದಾಯಿಕ ರಾಜಕಾರಣದ ಆಚೆಗೆ ಒಮ್ಮೊಮ್ಮೆ ಅಚ್ಚರಿಯ ಆಯ್ಕೆಗಳನ್ನು ಜನರ ಮುಂದಿಡುವಲ್ಲಿ ಸದಾ ಮುಂದಿರುವ ಆಪ್‌ ಈ ಬಾರಿಯೂ ವಿಭಿನ್ನ ಹಿನ್ನೆಲೆಯ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ಮೂಲಕ ರಾಜಕೀಯ ಪಂಡಿತರನ್ನು ಅಚ್ಚರಿಯಲ್ಲಿ ಕೆಡವಿದೆ.</p>



<p>ಎಎಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಸುದನ್ ಗಧ್ವಿ ಅವರಲ್ಲದೆ, ರಾಜ್ಯ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಮನೋಜ್ ಸೊರತಿಹ್ಯಾ ಕೂಡ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿ ರೇಸಿನಲ್ಲಿದ್ದರು. ಪಾಟಿದಾರ್ ಸಮುದಾಯ ಗುಜರಾತಿನಲ್ಲಿ ಮೀಸಲಾತಿಗಾಗಿ ನಡೆಸಿದ್ದ ಆಂದೋಲನದಲ್ಲಿ ಗೋಪಾಲ್ ಇಟಾಲಿಯಾ ಪ್ರಮುಖ ಪಾತ್ರ ವಹಿಸಿದ್ದರು. ಅವರು ದ್ವಾರಕಾ ಜಿಲ್ಲೆಯ ಪಿಪಾಲಿಯಾ ಗ್ರಾಮದ ರೈತ ಕುಟುಂಬಕ್ಕೆ ಸೇರಿದವರು ಮತ್ತು ರಾಜ್ಯದ ಜನಸಂಖ್ಯೆಯ ಶೇಕಡಾ 48ರಷ್ಟಿರುವ ಇತರ ಹಿಂದುಳಿದ ಜಾತಿಗಳಿಗೆ ಸೇರಿದವರು.</p>



<p>ಇತ್ತೀಚೆಗೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಎಪಿ ಪಕ್ಷವು ತನ್ನ ಗುಜರಾತ್ ಘಟಕವನ್ನು ವಿಸರ್ಜಿಸಿ ಅದನ್ನು ಹೊಸ ಸಾಂಸ್ಥಿಕ ರಚನೆಯೊಂದಿಗೆ ಪುನಶ್ಚೇತನಗೊಳಿಸಿತ್ತು. ಈ ಬದಲಾವಣೆಯಲ್ಲಿ ರಾಜ್ಯದ ಜನಪ್ರಿಯ ವ್ಯಕ್ತಿಯಾಗಿದ್ದ ಇಸುದನ್‌ ಗಧ್ವಿಯವರನ್ನು ಆಪ್‌ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಆಗಿ ನೇಮಕಗೊಳಿಸಿತ್ತು.</p>



<p>ಡಿಸೆಂಬರ್ 1 ಮತ್ತು ಡಿಸೆಂಬರ್ 5ರಂದು ಗುಜರಾತಿನಲ್ಲಿ ಎರಡು ಹಂತಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಡಿಸೆಂಬರ್ 8ರಂದು ಹಿಮಾಚಲ ಪ್ರದೇಶದ ಮತಗಳ ಎಣಿಕೆಯೊಂದಿಗೆ ಗುಜರಾತಿನ ಮತ ಎಣಿಕೆಯೂ ನಡೆಯಲಿದೆ ಎಂದು ಗುರುವಾರ ಘೋಷಿಸಿತ್ತು.</p>
]]></content:encoded>
					
		
		
			</item>
	</channel>
</rss>
