<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>HARDHIK PANDYA &#8211; Peepal Media</title>
	<atom:link href="https://peepalmedia.com/tag/hardhik-pandya/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 10 Nov 2022 12:06:09 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>HARDHIK PANDYA &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಟಿ-20 ವಿಶ್ವಕಪ್‌: ಭಾರತಕ್ಕೆ ಹೀನಾಯ ಸೋಲು</title>
		<link>https://peepalmedia.com/t-20-world-cup-colossal-defeat-for-india/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 10 Nov 2022 12:06:07 +0000</pubDate>
				<category><![CDATA[ಆಟೋಟ]]></category>
		<category><![CDATA[Alex Hales]]></category>
		<category><![CDATA[HARDHIK PANDYA]]></category>
		<category><![CDATA[IND VS ENG]]></category>
		<category><![CDATA[india]]></category>
		<category><![CDATA[JOS BUTTLER]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[ROHITH SHARMA]]></category>
		<category><![CDATA[sports news]]></category>
		<category><![CDATA[T-20 WORLD CUP]]></category>
		<category><![CDATA[Virat Kohli]]></category>
		<guid isPermaLink="false">https://peepalmedia.com/?p=15178</guid>

					<description><![CDATA[ಅಡಿಲೇಡ್‌ ಓವಲ್‌: ಇಂದು ನಡೆದ ವಿಶ್ವಕಪ್‌ ಎರಡನೇ ಸೆಮಿಪೈನಲ್‌ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್‌ ತಂಡದ ವಿರುದ್ಧ ಹೀನಾಯ ಸೋಲು ಅನುಭವಿಸಿದೆ. ಇಂಗ್ಲೆಂಡ್‌ ತಂಡವು ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಕಾರಣ, ಮೊದಲು ಬ್ಯಾಟಿಂಗ್‌ ಇಳಿದ ಭಾರತ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 168 ರನ್‌ ಕಲೆಹಾಕಿತು. ಈ ವೇಳೆ ಭಾರತ ತಂಡದ ಆರಂಭಿಕ ಆಟಗಾರ ಕೆ.ಎಲ್‌. ರಾಹುಲ್‌ ಎರಡನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ನಂತರ ಕಣಕ್ಕಿಳಿದ ವಿರಾಟ್‌ ಕೊಹ್ಲಿ [&#8230;]]]></description>
										<content:encoded><![CDATA[
<p><strong>ಅಡಿಲೇಡ್‌ ಓವಲ್‌:</strong> ಇಂದು ನಡೆದ ವಿಶ್ವಕಪ್‌ ಎರಡನೇ ಸೆಮಿಪೈನಲ್‌ ಪಂದ್ಯದಲ್ಲಿ ಭಾರತ ತಂಡವು ಇಂಗ್ಲೆಂಡ್‌ ತಂಡದ ವಿರುದ್ಧ ಹೀನಾಯ ಸೋಲು ಅನುಭವಿಸಿದೆ.</p>



<p>ಇಂಗ್ಲೆಂಡ್‌ ತಂಡವು ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಕಾರಣ, ಮೊದಲು ಬ್ಯಾಟಿಂಗ್‌ ಇಳಿದ ಭಾರತ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 168 ರನ್‌ ಕಲೆಹಾಕಿತು.</p>



<p>ಈ ವೇಳೆ ಭಾರತ ತಂಡದ ಆರಂಭಿಕ ಆಟಗಾರ ಕೆ.ಎಲ್‌. ರಾಹುಲ್‌ ಎರಡನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು. ನಂತರ ಕಣಕ್ಕಿಳಿದ ವಿರಾಟ್‌ ಕೊಹ್ಲಿ ತಂಡಕ್ಕೆ ಭರವಸೆಯ ಆಟವಾಡಿದರು. ಆದರೆ ಓಂಬತ್ತನೇ ಓವರ್‌ನಲ್ಲಿ ರೋಹಿತ್‌ ಶರ್ಮಾ ಅವರು ಜೊರ್ಡನ್‌ ಕೈಗೆ ವಿಕೇಟ್‌ ಒಪ್ಪಿಸಿ ಹೊರನಡೆದರು. ನಂತರ ಬಂದಂತಹ ಸೂರ್ಯಕುಮಾರ್‌ ಯಾದವ್‌ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಟವಾಡದೆ, 10 ಎಸೆತಗಳಲ್ಲಿ 14 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು.</p>



<p>ನಂತರ ವಿರಾಟ್‌ ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯಾ ಉತ್ತಮವಾಗಿ ಆಟವಾಡಿದ್ದರಿಂದ ತಂಡ ಹೆಚ್ಚು ರನ್‌ಗಳಿಸುವ ನಿಟ್ಟಿನಲ್ಲಿ ಸಾಗಿತು. ತಂಡಕ್ಕೆ ವಿರಾಟ್‌ ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯಾ ಅವರು ಗಳಿಸಿದ ಅರ್ಧಶತಕದಿಂದಾಗಿ ಭಾರತ ತಂಡ 168 ರನ್‌ಗಳಿಸಲು ಸಾಧ್ಯವಾಯಿತು.</p>



<p>ನಂತರ 168 ರನ್‌ ಬೆನ್ನತ್ತಿದ ಇಂಗ್ಲೆಂಡ್‌ ತಂಡ ಯಾವುದೇ ವಿಕೆಟ್‌ ಇಲ್ಲದೆ, ನಿರಾಸದಾಯಕ ಗೆಲುವು ಸಾಧಿಸಿತು.</p>



<p>ಇಂಗ್ಲೆಂಡ್‌ ತಂಡದ ಆರಂಭಿಕ ಆಟಗಾರರಾದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಭಾರತ ತಂಡದ ಎಲ್ಲಾ ಬೌಲರ್‌ಗಳಿಗೆ ತಮ್ಮ ಉತ್ತಮ ಪ್ರರ್ದಶನದ ಮೂಲಕ ಸರಿಯಾಗಿ ಪಾಠ ಕಲಿಸಿದರು. ಈ ಮೂಲಕ ಇಂಗ್ಲೆಂಡ್‌ ತಂಡ ಬಲಿಷ್ಠ ಭಾರತ ತಂಡವನ್ನು ಮಣಿಸಿ ಪೈನಲ್‌ ಪ್ರವೇಶಿಸಿದೆ.</p>



<p><strong>ಸ್ಕೋರ್ ಕಾರ್ಡ್‌</strong></p>



<p><strong>ಭಾರತ: 168/6(20)</strong></p>



<p><strong>ಬ್ಯಾಟಿಂಗ್</strong></p>



<p>ಕೆ.ಎಲ್.ರಾಹುಲ್ : 5(5)</p>



<p>ರೋಹಿತ್ ಶರ್ಮಾ : 27(28)</p>



<p>ವಿರಾಟ್ ಕೊಹ್ಲಿ : 50(40)</p>



<p>ಸೂರ್ಯಕುಮಾರ್ ಯಾದವ್ : 14(10)</p>



<p>ಹಾರ್ದಿಕ್ ಪಾಂಡ್ಯ : 63(33)</p>



<p>ರಿಷಬ್ ಪಂತ್ : 6(4)</p>



<p>ರವಿಚಂದ್ರನ್ ಅಶ್ವಿನ್ : 0(0)</p>



<p>ಇತರೆ : 3</p>



<p><strong>ಬೌಲಿಂಗ್</strong></p>



<p>ಬೆನ್ ಸ್ಟೊಕ್ಸ್ : 2-0-18-0</p>



<p>ಕ್ರಿಸ್ ವೂಕ್ಸ್ : 3-0-24-1</p>



<p>ಸ್ಯಾಮ್ ಕರನ್ : 4-0-42-0</p>



<p>ಆದಿಲ್ ರಶೀದ್ : 4-0-20-1</p>



<p>ಲಿಯಾಮ್ ಲಿವಿಂಗ್ಸ್ಟನ್ : 3-0-21-0</p>



<p>ಕ್ರಿಸ್ ಜೋರ್ಡನ್ : 4-0-43-3</p>



<p><strong>ಇಂಗ್ಲೆಂಡ್ : 170/0(16)</strong></p>



<p><strong>ಬ್ಯಾಟಿಂಗ್</strong></p>



<p>ಜಾಸ್ ಬಟ್ಲರ್ : 80(49)</p>



<p>ಅಲೆಕ್ಸ್ ಹೇಲ್ಸ್ : 86(47)</p>



<p>ಇತರೆ: 4</p>



<p><strong>ಬೌಲಿಂಗ್</strong></p>



<p>ಭುವನೇಶ್ವರ್ ಕುಮಾರ್ : 2-0-25-0</p>



<p>ಅರ್ಶದೀಪ್ ಸಿಂಗ್ : 2-0-15-0</p>



<p>ಅಕ್ಸರ್ ಪಟೇಲ್ : 4-0-30-0</p>



<p>ಮೊಹಮ್ಮದ್ ಶಮಿ : 3-0-39-0</p>



<p>ರವಿಚಂದ್ರನ್ ಅಶ್ವಿನ್ : 2-0-27-0</p>



<p>ಹಾರ್ದಿಕ್ ಪಾಂಡ್ಯ : 3-0-34-0</p>
]]></content:encoded>
					
		
		
			</item>
		<item>
		<title>T20 ವಿಶ್ವ ಕಪ್‌ : ಭಾರತ ಮತ್ತು ಇಂಗ್ಲೆಂಡ್‌ ಎರಡನೇ ಸಮಿಫೈನಲ್‌, ತಂಡಕ್ಕೆ ನೆರವಾದ ಕೊಹ್ಲಿ-ಪಾಂಡ್ಯಾ</title>
		<link>https://peepalmedia.com/t20-world-cup-india-vs-england-second-semi-final-kohli-pandya-helped-the-team/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 10 Nov 2022 09:44:49 +0000</pubDate>
				<category><![CDATA[ಆಟೋಟ]]></category>
		<category><![CDATA[HARDHIK PANDYA]]></category>
		<category><![CDATA[IND VS ENG]]></category>
		<category><![CDATA[india]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sports news]]></category>
		<category><![CDATA[Virat Kohli]]></category>
		<guid isPermaLink="false">https://peepalmedia.com/?p=15148</guid>

					<description><![CDATA[ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ ಭಾರತ 168/6 ಅಡಿಲೇಡ್‌ ಓವೆಲ್‌: ಭಾರತ ಇಂಗ್ಲೆಂಡ್‌ ನಡುವಿನ ಎರಡನೇ ಸೆಮಿಫೈನಲ್‌ ಪಂದ್ಯ ಇಂದು ನಡೆಯುತ್ತಿದ್ದು ಭಾರತ ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ 168 ರನ್‌ ಗಳಿಸಿದೆ. ಟಾಸ್‌ ಗೆದ್ದು ಫೀಲ್ದಿಂಗ್‌ ಆಯ್ದುಕೊಂಡಿದ್ದ ಇಂಗ್ಲೆಂಡ್‌ ಎರಡನೇ ಓವರ್‌ನಲ್ಲಿ ಕೆ.ಎಲ್‌ ರಾಹುಲ್‌ ವಿಕೇಟ್‌ ಪಡೆದಿದ್ದು ಭಾರತಕ್ಕೆ ಭಾರಿ ಹಿನ್ನಡೆ ಎನ್ನಬಹುದು. ನಂತರ ರೋಹಿತ್‌ ಜೊತೆಗೂಡಿದ ರನ್‌ ಮಿಷಿನ್‌ ಕೊಹ್ಲಿ ಇಬ್ಬರೂ ಒಂದಷ್ಟು ಕಾಲ ಜವಾಬ್ದಾರಿಯುತವಾಗಿ ಆಡುತ್ತ ಇಬ್ಬರ ಜೊತೆಯಾಟದಲ್ಲಿ 47 ರನ್‌ ಗಳಿಸಿದರು. ಓಂಬತ್ತನೇ ಓವರ್‌ನಲ್ಲಿ [&#8230;]]]></description>
										<content:encoded><![CDATA[
<p><strong>ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ ಭಾರತ 168/6</strong></p>



<p><strong>ಅಡಿಲೇಡ್‌ ಓವೆಲ್‌</strong>: ಭಾರತ ಇಂಗ್ಲೆಂಡ್‌ ನಡುವಿನ ಎರಡನೇ ಸೆಮಿಫೈನಲ್‌ ಪಂದ್ಯ ಇಂದು ನಡೆಯುತ್ತಿದ್ದು ಭಾರತ ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ 168 ರನ್‌ ಗಳಿಸಿದೆ. ಟಾಸ್‌ ಗೆದ್ದು ಫೀಲ್ದಿಂಗ್‌ ಆಯ್ದುಕೊಂಡಿದ್ದ ಇಂಗ್ಲೆಂಡ್‌ ಎರಡನೇ ಓವರ್‌ನಲ್ಲಿ ಕೆ.ಎಲ್‌ ರಾಹುಲ್‌ ವಿಕೇಟ್‌ ಪಡೆದಿದ್ದು ಭಾರತಕ್ಕೆ ಭಾರಿ ಹಿನ್ನಡೆ ಎನ್ನಬಹುದು. ನಂತರ ರೋಹಿತ್‌ ಜೊತೆಗೂಡಿದ ರನ್‌ ಮಿಷಿನ್‌ ಕೊಹ್ಲಿ ಇಬ್ಬರೂ ಒಂದಷ್ಟು ಕಾಲ ಜವಾಬ್ದಾರಿಯುತವಾಗಿ ಆಡುತ್ತ ಇಬ್ಬರ ಜೊತೆಯಾಟದಲ್ಲಿ 47 ರನ್‌ ಗಳಿಸಿದರು.</p>



<p>ಓಂಬತ್ತನೇ ಓವರ್‌ನಲ್ಲಿ ರೋಹಿತ್‌ ಶರ್ಮಾ ಅವರು ಜೊರ್ಡನ್‌ ಕೈಗೆ ವಿಕೇಟ್‌ ಒಪ್ಪಿಸಿ ಹೊರನಡೆದರೆ ನಂತರ ಬಂದಂತಹ ಸೂರ್ಯಕುಮಾರ್‌ ಯಾದವ್‌ ಸಹಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಹು ನಿರೀಕ್ಷೆ ಹೊಂದಿದ್ದ ಸೂರ್ಯಕುಮಾರ್‌ ಗಳಿಸಿದ್ದು ಮಾತ್ರ ಕೇವಲ 14 ರನ್.‌ ತಂಡಕ್ಕೆ ಎಂದಿನಂತೆ ಅಪದ್ಭಾಂದವರಾಗಿದ್ದು ಮಾತ್ರ &nbsp;ಕೊಹ್ಲಿ ಮತ್ತು ಹಾರ್ದಿಕ್‌ ಪಾಂಡ್ಯಾ . ಒಂದೆಡೆ ವಿಕೇಟ್‌ ಕಳೆದುಕೋಳ್ಳುತ್ತಿದ್ದರೂ ಸಹ ಯಾವುದೇ ರೀತಿಯಲ್ಲೂ ಗೊಂದಲಕ್ಕೊಳಗಾಗದೆ ಮಂದಗತಿಯಲ್ಲಿ ಶೂರು ಮಾಡಿ ಉತ್ತಮ ಸ್ಟ್ರೈಕ್‌ ರೇಟ್‌ ನತ್ತ ಭಾರತವನ್ನ ಕೊಂಡೊಯ್ಯುತ್ತಿದ್ದರು. ಕೋಹ್ಲಿಗೆ ಹಾರ್ದಿಕ್‌ ಪಾಂಡ್ಯಾ ಸಹ ಉತ್ತಮ ರೀತಿಯಲ್ಲಿ ಸ್ಟ್ರೈಕ್‌ ನೀಡುತ್ತಾಬಂದಿದ್ದು ಅವಶ್ಯವಾಗಿತ್ತು ಮತ್ತು ಹಾಗೆಯೇ ಮುಂದುವರೆದರೂ ಸಹ.</p>



<p>ಕೊಹ್ಲಿಯ ಅರ್ಧ ಶತಕದ ನಂತರ ಅವರ ಅಬ್ಬರದ ಆಟಕ್ಕೆ ಕಾದಿದ್ದ ಅಭಿಮಾನಿಗಳಿಗೆ ಪಾಂಡ್ಯ ಭರ್ಜರಿ ಮನರಂಜನೆಯನ್ನೇ ಕೊಟ್ಟುಬಿಟ್ಟರು. ಕೊಹ್ಲಿಯ ಆಟಕ್ಕಾಗಿ ಕಾದಿದ್ದ ಅಭಿಮಾನಿಗಳಿಗೆ ಕೊಹ್ಲಿ ಅರ್ಧ ಶತಕಕ್ಕೆ ಕ್ರಿಸ್‌ ವೂಕ್ಸ್‌ ಕೈಗೆ ವಿಕೇಟ್‌ ಒಪ್ಪಿಸಿ ಹೊರನಡೆದದ್ದು ಮಾತ್ರ ಅಭಿಮಾನಿಗಳಲ್ಲಿ ನಿರಾಸೆಯನ್ನು ಉಂಟು ಮಾಡಿತು. ಕೊಹ್ಲಿ ಮತ್ತು ಪಾಂಡ್ಯ ಜೊತೆಯಾಟ ತಂಡಕ್ಕೆ 61 ರನ್‌ ತಂದುಕೊಟ್ಟಿತು. ಕೊಹ್ಲಿ ನಂತರ ಪಾಂಡ್ಯ ಆಟಕ್ಕೆ ಕಡಿವಾಣ ಹಾಕಲು ಇಂಗ್ಲೆಂಡ್‌ ಆಟಗಾರರಿಗೆ ಆಗಲೇ ಇಲ್ಲ.</p>



<p>ಒಟ್ಟಾರೆ ಮೊದಲ ಇನ್ನಿಂಗ್ಸ್‌ ಮುಕ್ತಾಯಕ್ಕೆ ಭಾರತ 6 ವಿಕೆಟ್‌ ನೀಡಿ, 168 ರನ್‌ ಗಳಿಸಿದ್ದು, ಭಾರತದ ಬೌಲರ್‌ಗಳ ಮೇಲೆ ತಂಡದ ಗೆಲುವು ಆಧರಿಸಿದೆ.</p>
]]></content:encoded>
					
		
		
			</item>
		<item>
		<title>ವೇಗದ ಬೌಲರ್‌ಗಳಿಗೆ ಬಿಜಿನೆಸ್‌ ಕ್ಲಾಸ್ ಸೀಟ್‌ ಬಿಟ್ಟುಕೊಟ್ಟ ದ್ರಾವಿಡ್‌, ಕೊಹ್ಲಿ, ರೋಹಿತ್‌</title>
		<link>https://peepalmedia.com/dravid-kohli-rohit-give-up-business-class-seats-for-fast-bowlers/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 08 Nov 2022 08:15:11 +0000</pubDate>
				<category><![CDATA[ಆಟೋಟ]]></category>
		<category><![CDATA[ARSHADEEP SINGH]]></category>
		<category><![CDATA[Bhuvneshwar Kumar]]></category>
		<category><![CDATA[HARDHIK PANDYA]]></category>
		<category><![CDATA[india]]></category>
		<category><![CDATA[mohamad shami]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[RAHUL DRAVID]]></category>
		<category><![CDATA[ROHITH SHARMA]]></category>
		<category><![CDATA[sports news]]></category>
		<category><![CDATA[t20 world cup]]></category>
		<category><![CDATA[Virat Kohli]]></category>
		<guid isPermaLink="false">https://peepalmedia.com/?p=14761</guid>

					<description><![CDATA[ಅಡಿಲೇಡ್‌ ಓವಲ್‌ (ಆಸ್ಟ್ರೇಲಿಯಾ): ಟಿ-20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಈಗಾಗಲೇ ಸೆಮಿಫೈನಲ್‌ ತಲುಪಿರುವ ಭಾರತ ತಂಡದ ಆಟಗಾರರು ಪಂದ್ಯಾವಳಿ ಆರಂಭವಾದಗಿನಿಂದಲೂ ವಿಮಾನಗಳಲ್ಲಿ ಸಾಕಷ್ಟು ಮೈಲಿಗಳ ದೂರದ ಪ್ರಯಾಣ ನಡೆಸುತ್ತಿದ್ದು, ಪ್ರಯಾಣದ ಸಂದರ್ಭದಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳನ್ನು ಬಿಟ್ಟುಕೊಟ್ಟಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ವಿಮಾನದಲ್ಲಿ ಪ್ರಯಾಣಿಸುವವರಿಗೆ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳು, ಮತ್ತು ಎಕನಮಿ ಕ್ಲಾಸ್‌ [&#8230;]]]></description>
										<content:encoded><![CDATA[
<p><strong>ಅಡಿಲೇಡ್‌ ಓವಲ್‌ (ಆಸ್ಟ್ರೇಲಿಯಾ):</strong> ಟಿ-20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ಈಗಾಗಲೇ ಸೆಮಿಫೈನಲ್‌ ತಲುಪಿರುವ ಭಾರತ ತಂಡದ ಆಟಗಾರರು ಪಂದ್ಯಾವಳಿ ಆರಂಭವಾದಗಿನಿಂದಲೂ ವಿಮಾನಗಳಲ್ಲಿ ಸಾಕಷ್ಟು ಮೈಲಿಗಳ ದೂರದ ಪ್ರಯಾಣ ನಡೆಸುತ್ತಿದ್ದು, ಪ್ರಯಾಣದ ಸಂದರ್ಭದಲ್ಲಿ ವೇಗದ ಬೌಲರ್‌ಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳನ್ನು ಬಿಟ್ಟುಕೊಟ್ಟಿರುವುದು ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.</p>



<p>ವಿಮಾನದಲ್ಲಿ ಪ್ರಯಾಣಿಸುವವರಿಗೆ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳು, ಮತ್ತು ಎಕನಮಿ ಕ್ಲಾಸ್‌ ಸೀಟ್‌ಗಳಲ್ಲಿ ಪ್ರಯಾಣ ನಡೆಸಬಹುದಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಾನದಂಡಗಳ ಪ್ರಕಾರ, ಸಾಮಾನ್ಯವಾಗಿ ತಂಡದ ಕೋಚ್, ನಾಯಕ, ಉಪನಾಯಕ ಮತ್ತು ಮ್ಯಾನೇಜರ್‌ಗೆ ಬಿಸಿನೆಸ್‌ ಕ್ಲಾಸ್ ಸೀಟ್‌ಗಳು ಮತ್ತು ಉಳಿದ ಆಟಗಾರರಿಗೆ ಎಕನಮಿ ಕ್ಲಾಸ್‌ ಸೀಟ್‌ಗಳು ನೋಂದಣಿಯಾಗಿರುತ್ತವೆ.</p>



<p>ಸಾಮಾನ್ಯವಾಗಿ ಬಿಸಿನೆಸ್‌ ಕ್ಲಾಸ್‌ ಸೀಟ್‌ಗಳಲ್ಲಿ ಪ್ರಯಾಣಿಕರು ಕಾಲುಗಳನ್ನು ನೀಡಿಕೊಂಡು ಆರಾಮದಾಯಕ ಪ್ರಯಾಣ ನಡೆಸಬಹುದಾಗಿದೆ. ಆದರೆ ಎಕನಮಿ ಕ್ಲಾಸ್‌ ಸೀಟ್‌ಗಳಲ್ಲಿ ಕೊಂಚ ಇಕ್ಕಟ್ಟು ಇರುವುದರಿಂದ ಪ್ರಯಾಣಿಕರು ಬಿಸಿನೆಸ್‌ ಕ್ಲಾಸ್‌ನಷ್ಟು ಆರಾಮದಾಯಕ ಪ್ರಯಾಣ ನಡೆಸಲು ಸಾಧ್ಯವಾಗುವುದಿಲ್ಲ.</p>



<p>ವೇಗದ ಬೌಲರ್‌ಗಳು ಮೈದಾನದಲ್ಲಿ ಸಾಕಷ್ಟು ಶ್ರಮ ವಹಿಸಬೇಕಾಗುತ್ತದೆ, ಬೆವರು ಹರಿಸಬೇಕಾಗುತ್ತದೆ. ಇತರ ಆಟಗಾರರಿಗಿಂತ ಹೆಚ್ಚು ವೇಗದ ಬೌಲರ್‌ಗಳ ಕಾಲುಗಳಿಗೆ ವಿಶ್ರಾಂತಿ ಅಗತ್ಯವಾಗಿರುತ್ತದೆ. ಆದರೆ ಪ್ರಯಾಣದ ಸಮಯದಲ್ಲಿ ತಂಡದ ವೇಗದ ಬೌಲರ್‌ಗಳು ಎಕನಮಿ ಕ್ಲಾಸ್‌ ಸೀಟ್‌ಗಳಲ್ಲಿ ಪ್ರಯಾಣಿಸುವುದರಿಂದ, ಅವರಿಗೆ ಆರಾಮದಾಯಕ ವಿಶ್ರಾಂತಿ ಸಿಗುವುದಿಲ್ಲ.</p>



<p>ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್‌ ತಂಡದ ಹಿರಿಯ ಆಟಗಾರರಾದ ರಾಹುಲ್‌ ದ್ರಾವಿಡ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ತಮ್ಮ ಸೀಟುಗಳನ್ನು ತಂಡದ ವೇಗಿ ಬೌಲರ್‌ಗಳಾದ ಮಹಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಹಾರ್ದಿಕ್‌ ಪಾಂಡ್ಯ, ಮತ್ತು ಅರ್ಶದೀಪ್‌ ಸಿಂಗ್‌ ಅವರಿಗೆ aಬಿಟ್ಟುಕೊಟ್ಟು, ಆಟಗಾರರ ಬಗ್ಗೆ ಕಾಳಜಿ ತೋರಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.</p>
]]></content:encoded>
					
		
		
			</item>
	</channel>
</rss>
