<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Harsha Kumar Kugve &#8211; Peepal Media</title>
	<atom:link href="https://peepalmedia.com/tag/harsha-kumar-kugve/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 03 Nov 2022 01:24:53 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Harsha Kumar Kugve &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಯುವಜನರು, ಫ್ಯಾಸಿಸಂ ಮತ್ತು ನಿರುದ್ಯೋಗ</title>
		<link>https://peepalmedia.com/youth-and-fasism-a-lecture-by-harsha-kumar-kugwe/</link>
		
		<dc:creator><![CDATA[Peepal Media]]></dc:creator>
		<pubDate>Wed, 02 Nov 2022 12:12:12 +0000</pubDate>
				<category><![CDATA[ವಿಶೇಷ]]></category>
		<category><![CDATA[Harsha Kumar Kugve]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[slum janandolana]]></category>
		<category><![CDATA[writing]]></category>
		<guid isPermaLink="false">https://peepalmedia.com/?p=13789</guid>

					<description><![CDATA[ಫ್ಯಾಸಿಸಂನಿಂದ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಮ್ಮ ಜನರನ್ನು ಆಚೆಗೆ ತರಬೇಕಿದೆ. ತಳಸಮುದಾಯದ ಮಹಿಳೆಯರ, ಆದಿವಾಸಿಗಳ ಬದುಕು ಸಬಲೀಕರಣವಾಗಬೇಕಿದೆ. ಈ ದೇಶವನ್ನು ಕಟ್ಟಿದವರು ನಾವು. ಅದನ್ನು ನಾವು ಯಾವುದೇ ಕಾರಣಕ್ಕೂ ಮರೆಯಕೂಡದು ಎನ್ನುವ ಮಾತುಗಳು ಲೇಖಕ, ಪತ್ರಕರ್ತ ಹರ್ಷಕುಮಾರ್‌ ಕುಗ್ವೆಯವರದು. ಸ್ಲಮ್&#160;ಜನಾಂದೋಲನ ಸಂಸ್ಥೆಯ ಕಾರ್ಯಕ್ರಮದಲ್ಲಿ ಅವರು ಮಂಡಿಸಿದ ಉಪನ್ಯಾಸದ ಪೂರ್ಣಪಾಠ ಪೀಪಲ್‌ ಮೀಡಿಯಾದಿಂದ ನಿಮಗಾಗಿ. ಹೊಸ ನಾಡನ್ನು ಕಟ್ಟುವ ಸವಾಲು ಇವತ್ತಿನದಲ್ಲ. ಜನರಿಗೆ ಕಷ್ಟ ಕೋಟಲೆಗಳು ಇರಬಾರದು, ನಿರುದ್ಯೋಗ ಇರಬಾರದು, ಬೆಲೆ ಏರಿಕೆ ಇರಬಾರದು, ಗಂಡು [&#8230;]]]></description>
										<content:encoded><![CDATA[
<h5 class="has-text-align-center wp-block-heading"><strong>ಫ್ಯಾಸಿಸಂನಿಂದ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಮ್ಮ ಜನರನ್ನು ಆಚೆಗೆ ತರಬೇಕಿದೆ. ತಳಸಮುದಾಯದ ಮಹಿಳೆಯರ, ಆದಿವಾಸಿಗಳ ಬದುಕು ಸಬಲೀಕರಣವಾಗಬೇಕಿದೆ. ಈ ದೇಶವನ್ನು ಕಟ್ಟಿದವರು ನಾವು. ಅದನ್ನು ನಾವು ಯಾವುದೇ ಕಾರಣಕ್ಕೂ ಮರೆಯಕೂಡದು ಎನ್ನುವ ಮಾತುಗಳು ಲೇಖಕ, ಪತ್ರಕರ್ತ ಹರ್ಷಕುಮಾರ್‌ ಕುಗ್ವೆಯವರದು. ಸ್ಲಮ್&nbsp;ಜನಾಂದೋಲನ ಸಂಸ್ಥೆಯ ಕಾರ್ಯಕ್ರಮದಲ್ಲಿ ಅವರು ಮಂಡಿಸಿದ ಉಪನ್ಯಾಸದ ಪೂರ್ಣಪಾಠ ಪೀಪಲ್‌ ಮೀಡಿಯಾದಿಂದ ನಿಮಗಾಗಿ.</strong></h5>



<p>ಹೊಸ ನಾಡನ್ನು ಕಟ್ಟುವ ಸವಾಲು ಇವತ್ತಿನದಲ್ಲ. ಜನರಿಗೆ ಕಷ್ಟ ಕೋಟಲೆಗಳು ಇರಬಾರದು, ನಿರುದ್ಯೋಗ ಇರಬಾರದು, ಬೆಲೆ ಏರಿಕೆ ಇರಬಾರದು, ಗಂಡು ಹೆಣ್ಣೆಂಬ ಶೋಷಣೆಗಳು ಇರಬಾರದು, ಭ್ರಷ್ಟಾಚಾರ ಇರಬಾರದು- ಈ ರೀತಿಯೆಲ್ಲಾ ಸಮಸ್ಯೆಗಳು ಇಲ್ಲದ ಹಾಗೆ, ಮನುಷ್ಯ &#8211; ಮನುಷ್ಯನಂತೆ ಕಾಣುವ ಹಾಗೆ ನೋಡುವುದೇ ಹೊಸ ನಾಡನ್ನು ಕಟ್ಟುವ ಕ್ರಿಯೆ. ಇಂತಹ ಒಂದು ಹೊಸ ನಾಡನ್ನು ಕಟ್ಟುವುದಕ್ಕೆ ಬಹಳಷ್ಟು ಜನರು ಹೋರಾಟಗಳನ್ನು ಮಾಡಿದ್ದಾರೆ, ಚಳುವಳಿಗಳನ್ನು ಕಟ್ಟಿದ್ದಾರೆ, ಅಧ್ಯಯನ ಮಾಡಿದ್ದಾರೆ, ಸಾಹಿತ್ಯ ರಚಿಸಿದ್ದಾರೆ, ಸಂಶೋಧನೆ ಮಾಡಿದ್ದಾರೆ. ಇಂಥಾ ಹಲವು ಪ್ರಯತ್ನಗಳು ಚರಿತ್ರೆಯಲ್ಲಿ ನಡೆದಿವೆ.&nbsp;</p>



<p>ಇನ್ನೂರು ಮುನ್ನೂರು ವರ್ಷಗಳ ಹಿಂದಿನದ್ದನ್ನು ಅವಲೋಕಿಸಿದರೆ ಆಗಿನ ಪರಿಸ್ಥಿತಿ ಬಹಳ ಗಂಭೀರವಾಗಿತ್ತು, ಕ್ರೂರವಾಗಿತ್ತು. ಇವತ್ತು ಇದರ ಪಳೆಯುಳಿಕೆಯನ್ನು ಬೇರೆ ಬೇರೆ ರೂಪದಲ್ಲಿ, ಬೇರೆ ಬೇರೆ ಊರುಗಳಲ್ಲಿ ನೋಡುತ್ತಿದ್ದೇವೆ. ಚಿಕ್ಕಮಗಳೂರಿನಲ್ಲಿ ದಲಿತ ಕುಟುಂಬಗಳ ಹೆಣ್ಣುಮಕ್ಕಳನ್ನು ಎಸ್ಟೇಟ್ ಮಾಲೀಕನೊಬ್ಬ ಕೂಡಿ ಹಾಕಿ ದೌರ್ಜನ್ಯ ಮಾಡಿದ್ದನ್ನು ನೀವು ಪತ್ರಿಕೆಗಳಲ್ಲಿ ನೋಡಿದ್ದೀರಿ. ಇಂಥದ್ದನ್ನೆಲ್ಲ ನೀವು ತಮಿಳು ಸಿನಿಮಾಗಳಲ್ಲಿ ನೋಡಿರುತ್ತೀರಿ. ಸುಮಾರು ವರ್ಷಗಳ ಹಿಂದೆ ಹಂಗರಹಳ್ಳಿ ಜೀತ ಪ್ರಕರಣ ಬೆಳಕಿಗೆ ಬಂತು. 70 ವರ್ಷಗಳ ಹಿಂದೆ ಈ ಪರಿಸ್ಥಿತಿ ಇನ್ನೂ ಭೀಕರವಾಗಿತ್ತು. ಆದರೆ ಇವತ್ತು ಸ್ವಲ್ಪ ಸುಧಾರಿಸಿದೆ. ಇದು ಸಾಧ್ಯವಾಗಿದ್ದು ಹೋರಾಟಗಳಿಂದ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರು ಸಂವಿಧಾನ ಬರೆದಿದ್ದೆ ಈ ಕಾರಣಕ್ಕಾಗಿ. ಈ ದೇಶದ ಪರಿಸ್ಥಿತಿ ಬದಲಾಗಬೇಕು ಎಂದು ಅವರು ಸಂಕಲ್ಪ ಮಾಡಿದ್ದರು. ಅದರ ಪರಿಣಾಮವಾಗಿ ಭಾರತದ ಸಂವಿಧಾನದಲ್ಲಿ ಇಂತಹ ಅನ್ಯಾಯಕ್ಕೆ ಅವಕಾಶ ಇಲ್ಲ ಎನ್ನುವುದನ್ನು ಹೇಳುವಷ್ಟು ಧೈರ್ಯ ಇದೆ ನಮಗೆ.&nbsp;</p>



<p>ಮೂರು ತಿಂಗಳ ಹಿಂದೆ ಒಬ್ಬ ವಿದ್ಯಾವಂತ ಕೊರಗ ಜಾತಿಯ ಯುವಕನ ಮದುವೆಯಲ್ಲಿ ಡಿಜೆ ಹಾಕಿದ್ದಕ್ಕೆ ಮೇಲ್ಜಾತಿಯವರ ಮಾತು ಕಟ್ಟಿಕೊಂಡು ಪೊಲೀಸರು ದೌರ್ಜನ್ಯ ನಡೆಸಿದರು. ಈಗಲೂ ಸಹ ದೌರ್ಜನ್ಯಗಳು ಶೋಷಣೆಗಳು ನಡೆಯುತ್ತಲೇ ಇವೆ. ಆದರೆ ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದು ನಾವು ಸಂವಿಧಾನದ ಮೂಲಕ ರಕ್ಷಣೆ ಪಡೆಯುವ ಅವಕಾಶ ಮತ್ತು ಧೈರ್ಯ ಸಾಧ್ಯವಾಗಿದೆ. ಹಾಗಾಗಿ ಹೊಸ ನಾಡನ್ನು ಕಟ್ಟಲು ಹೋರಾಟಗಳು ಪ್ರಯತ್ನಗಳು ಎಲ್ಲವೂ ಬೇಕು. ನಮ್ಮದೇ ಜನರು ಹೋಗಿ ವಿಧಾನಸೌಧದಲ್ಲಿ ಮತ್ತು ಸಂಸತ್ತಿನಲ್ಲಿ ಕೂರಬೇಕು. ಅದೇ ರೀತಿ ಬೀದಿಯಲ್ಲಿ ಹೋರಾಟಗಳನ್ನು ಕಟ್ಟಬೇಕು. ಆಗಲೇ ಹೊಸ ನಾಡನ್ನು ಕಟ್ಟುವುದಕ್ಕೆ ಸಾಧ್ಯ. ಆದರೆ ಇವತ್ತು ಹೊಸ ನಾಡನ್ನು ಕಟ್ಟಲು ಬಹಳಷ್ಟು ಸವಾಲುಗಳಿವೆ; ಹೊಸ ಹೊಸ ಸಮಸ್ಯೆಗಳನ್ನು ಅವರು ನಮ್ಮ ಮುಂದೆ ತಂದಿಡುತ್ತಿದ್ದಾರೆ. ಅವುಗಳಲ್ಲಿ ಮುಖ್ಯವಾಗಿದ್ದು ಫ್ಯಾಸಿಸಂ.</p>



<p>ಫ್ಯಾಸಿಸಂ ಅನ್ನುವ ಪದವನ್ನು ನೀವು ಕೇಳಿರಬಹುದು. ಈ ಪದ ಇಟಲಿಯಲ್ಲಿ 1920ರ ಸಮಯದಲ್ಲಿ ಹುಟ್ಟಿಕೊಂಡಿತು. ಜರ್ಮನಿ, ಫ್ರಾನ್ಸ್ ಗಳಂಥ ಯುರೋಪಿಯನ್‌ ದೇಶಗಳಲ್ಲಿ ಅದು ಚಾಲ್ತಿಯಲ್ಲಿತ್ತು. ಇಟಲಿಯಲ್ಲಿ ಮುಸಲೋನಿ ಎಂಬುವವ ಫ್ಯಾಸಿಸ್ಟ್‌ ಪಾರ್ಟಿಯನ್ನು ಮಾಡಿದ್ದ. ಅವನು ಒಬ್ಬ ಸರ್ವಾಧಿಕಾರಿಯಾಗಿ ಯಾವುದೇ ವಿರೋಧವನ್ನು ಸಹ ಸಹಿಸುತ್ತಿರಲಿಲ್ಲ. ವಿರೋಧಿಸಿದವರನ್ನು ಕೊಲೆ ಮಾಡುತ್ತಿದ್ದ. ಅವನಿಗೆ ಏನು ಬೇಕೋ ಅದನ್ನು ಮಾಡುತ್ತಿದ್ದ. ಅದೇ ಸಮಯದಲ್ಲಿದ್ದ ಇನ್ನೊಬ್ಬನು ಹಿಟ್ಲರ್‌. ಆತನ ಪಕ್ಷದ ಹೆಸರು ನಾಜಿ ಪಾರ್ಟಿ ಅಂತ, ಇವನೂ ಕೂಡಾ ಫ್ಯಾಸಿಸ್ಟ್‌. ಯಾರ್ಯಾರು ಸರ್ವಾಧಿಕಾರಿಗಳಿದ್ದಾರೋ ಅವರನ್ನೆಲ್ಲಾ ಫ್ಯಾಸಿಸ್ಟ್‌ ಅಂತ ಕರೆಯುತ್ತೇವೆ. ಯಹೂದಿಗಳು ಇದ್ದರು, ಕಮ್ಯೂನಿಸ್ಟರು ಇದ್ದರು. ಇವರೆಲ್ಲರನ್ನೂ ಕೊಲೆ ಮಾಡುವ ಕೆಲಸವನ್ನು ಹಿಟ್ಲರ್‌ ಮಾಡಿದ. ಯಹೂದಿಗಳದು ಆಗ ಒಂದು ಸಣ್ಣ ಸಮುದಾಯ. ಅಲ್ಲಿ ಆವತ್ತು ನಿರುದ್ಯೋಗ ಇತ್ತು, ಬೆಲೆ ಏರಿಕೆ ಇತ್ತು. ಇದಕ್ಕೆಲ್ಲಾ ಮತ್ತು ನಮ್ಮೆಲ್ಲಾ ಕಷ್ಟಗಳಿಗೂ ಕಾರಣ ಈ ಯಹೂದಿಗಳೇ ಎಂದು ಹಿಟ್ಲರ್‌ ಹೇಳುತ್ತಿದ್ದ. ಅಸಲಿಗೆ ಹಿಟ್ಲರ್‌ ಜೊತೆಗಿದ್ದ ಒಂದಷ್ಟು ಕೈಗಾರಿಕೋದ್ಯಮಿಗಳು ಈ ಕಷ್ಟಕ್ಕೆಲ್ಲಾ ಕಾರಣವಾಗಿದ್ದರು. ನಮ್ಮ ದೇಶದಲ್ಲೂ ನೀವು ನೋಡಬಹುದು, ಜನರೆಲ್ಲಾ ಕಷ್ಟದಲ್ಲಿದ್ದಾಗ ಕೆಲವರಿಗೆ ಲಾಭವಾಗುತ್ತಿರುತ್ತದೆ. ಹೀಗೆಯೇ ಜರ್ಮನಿಯಲ್ಲೂ ಆಗುತ್ತಿತ್ತು. ಯಹೂದಿಗಳು ನಮ್ಮ ಧರ್ಮದವರಲ್ಲ, ನಮ್ಮದು &nbsp;ಜಗತ್ತಿನಲ್ಲಿ ಶ್ರೇಷ್ಠವಾದ ಆರ್ಯನ್‌ ಜನಾಂಗ, ಈ ಯಹೂದಿಗಳು ನಾಶವಾದರೆ ಜರ್ಮನಿಗೆ ಒಳ್ಳೆಯದಾಗುತ್ತದೆ ಎಂದಾಗ ಅಲ್ಲಿನ ಜನ ಅದನ್ನು ಆಗ ನಂಬಿಕೊಂಡರು.&nbsp;</p>



<p>ತಾನು ಹೇಳುತ್ತಿದ್ದ ಸುಳ್ಳುಗಳನ್ನು ಜನರಿಗೆ ನಂಬಿಸಲು ಹಿಟ್ಲರ್‌ ಆ ಕಾಲದಲ್ಲೇ ಒಂದು ಪ್ರಚಾರ ತಂತ್ರವನ್ನು ಕಂಡುಕೊಂಡಿದ್ದ. ʼದೊಡ್ಡ ದೊಡ್ಡ ಭಾಷಣಗಳನ್ನು ಮಾಡಬೇಡಿ. ಚಿಕ್ಕದಾದ ಘೋಷಣೆಗಳನ್ನು ಮಾತ್ರ ಜನರಿಗೆ ನೀಡುತ್ತಾ ಹೋಗಿ. ನಮ್ಮ ಕಷ್ಟಕ್ಕೆಲ್ಲಾ ಯಹೂದಿಗಳೇ ಕಾರಣ ಎಂದು ಪದೇ ಪದೇ ಹೇಳಿ. ಒಂದು ಸುಳ್ಳನ್ನು ಸಾವಿರ ಸಲ ಹೇಳಿದರೆ ಸತ್ಯವಾಗುತ್ತದೆʼ ಎಂದು ಗೋಬೆಲ್ಸ್‌ ಹೇಳಿದ. ಇದಕ್ಕಾಗಿ ಹಿಟ್ಲರ್‌ ಕುರಿತ ಅತೀ ರಂಜನೀಯ ಸಿನಿಮಾಗಳನ್ನು ಮಾಡಿಸಲಾಯಿತು. ಯಾಕೆ ಹೀಗೆ ಮಾಡಿದರು ಎಂದರೆ, ಈ ಸರ್ವಾಧಿಕಾರ ಮಾಡುವವರು ಬೆರಳೆಣಿಕೆಯ ಜನರಿರುತ್ತಾರೆ. ಅವರಿಗೆ ಲಕ್ಷಾಂತರ- ಕೋಟ್ಯಂತರ ಜನರನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅಸಾಧ್ಯವಾದ ಕಾರಣ ಆ ಜನರನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಜನರ ಮನಸ್ಸನ್ನು ಹತೋಟಿಗೆ ತಂದುಕೊಳ್ಳುತ್ತಾರೆ. ಜನರ ಆಲೋಚನೆಗಳನ್ನು ಬದಲಿಸುತ್ತಾರೆ.</p>



<p>ಆಫ್ರಿಕಾದಲ್ಲಿ ಒಬ್ಬ ದೊಡ್ಡ ಹೋರಾಟಗಾರ ಇದ್ದ, ಸ್ಟೀವ್‌ ಬಿಕೋ ಎಂಬ ಕಪ್ಪು ಪ್ರಜ್ಞೆಯ ಲೆಜೆಂಡರಿ ಹೋರಾಟಗಾರ. ಆತ ಏನು ಹೇಳಿದ್ದ ಗೊತ್ತೆ? &#8220;ದಬ್ಬಾಳಿಕೆ ನಡೆಸುವವರ ಕೈಯಲ್ಲಿನ ದೊಡ್ಡ ಹತಾರ ಎಂದರೆ ದಬ್ಬಾಳಿಕೆಗೆ ಒಳಗಾಗುವವರ ಮನಸ್ಸು&#8221; ಎಂದಿದ್ದ.  ನಿಮ್ಮ ಮೆದುಳನ್ನು ಯಾರಾದರೂ ಹಿಡಿದಿಟ್ಟುಕೊಳ್ಳಲು ಯಶಸ್ವಿಯಾದರೆ ಅವರು ಪವರ್‌ ಫುಲ್‌ ವ್ಯಕ್ತಿಯಾಗುತ್ತಾರೆ. ಅವರು ನಮ್ಮ ಮನಸ್ಸುಗಳ ಜೊತೆ ಆಟವಾಡುತ್ತಾರೆ, ನಿಜವಾದ ಸಮಸ್ಯೆಗಳನ್ನು ಬಿಟ್ಟು ಬೇರೆ ಸಮಸ್ಯೆಗಳ ಕಡೆ ನಮ್ಮನ್ನು ಡೈವರ್ಟ್‌ ಮಾಡುತ್ತಾರೆ.</p>



<p>ಈಗ ನಮ್ಮ ಕಣ್ಣು ಮುಂದೆ ನಡೆಯುತ್ತಿರುವುದಾದರೂ ಏನು? ಇದೇ ಅಲ್ಲವೇ? ಇಂಡಿಯಾದಲ್ಲಿ ಫ್ಯಾಸಿಸಂ ಇಲ್ಲವಾ? ಖಂಡಿತವಾಗಿಯೂ ಇದೆ. ಇದು ನಮ್ಮನ್ನು ಹೇಗೆ ಬಾಧಿಸುತ್ತಿದೆ ಎಂಬುದನ್ನು ನೋಡಬೇಕು. ಇಲ್ಲೂ ಕೂಡಾ ಅದೇ ರೀತಿ ಸುಳ್ಳು ಪ್ರಚಾರಗಳನ್ನು ಮಾಡುವ ಮೂಲಕ ಜನರ ಮನಸ್ಸನ್ನು ನಿಯಂತ್ರಿಸಿಕೊಂಡು ಬಹಳ ವ್ಯವಸ್ಥಿತವಾದ ಒಂದು ಸಿದ್ಧಾಂತವನ್ನು ಇಟ್ಟುಕೊಂಡು ಜನರ ಮನಸುಗಳ ಜೊತೆ ಆಟವಾಡಲಾಗುತ್ತಿದೆ. ಹಿಟ್ಲರ್‌ನ ನಾಜಿ ಸಿದ್ಧಾಂತದ ಹಾಗೆ ನಮ್ಮ ಇಂಡಿಯಾದಲ್ಲಿ ಆರ್‌ಎಸ್‌ಎಸ್‌ ಸಂಘಟನೆಯ ಸಿದ್ಧಾಂತವನ್ನು ಇಟ್ಟುಕೊಂಡಿದ್ದಾರೆ. ಆರ್‌ಎಸ್‌ಎಸ್‌ ಅನ್ನು ಸರ್ವಾಧಿಕಾರಿ ಸಂಘಟನೆ ಎಂದು ಯಾರೂ ಗುರುತಿಸುವುದಕ್ಕೆ ಆಗುವುದಿಲ್ಲ. ಜರ್ಮನಿಯುಲ್ಲಿ 20 ವರ್ಷ ನಾಜಿ ಸಿದ್ಧಾಂತದಡಿ ಆಳ್ವಿಕೆ ಮಾಡಿದ್ದ ಹಿಟ್ಲರ್, ಕೊನೆಗೆ ಯುದ್ಧದಲ್ಲಿ ಸೋತು ಅವಮಾನ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ. ಆದರೆ ನಮ್ಮ ಇಂಡಿಯಾದಲ್ಲಿ ಫ್ಯಾಸಿಸ್ಟರ ಪ್ಲಾನ್‌ ಇರುವುದು ಕೇವಲ ಒಂದೆರಡು ದಶಕಗಳ ಆಳ್ವಿಕೆಯಲ್ಲ. ಮುಂದಿನ ಎರಡು ಸಾವಿರ ವರ್ಷಗಳ ಕಾಲ ಸರ್ವಾಧಿಕಾರಿ ಆಡಳಿತ. ಇದು ಹಿಟ್ಲರ್‌ ಥರದ ಒಬ್ಬನ ವ್ಯವಸ್ಥೆ ಅಲ್ಲ, ಇದು ವ್ಯವಸ್ಥಿತವಾದ ಸಂಘಟನೆ.&nbsp;</p>



<p>ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿ ನೋಡಿ. ಇದ್ದಕ್ಕಿದ್ದಂತೆ ಹಿಜಾಬ್‌ ವಿಷಯ ಬಂತು. ಮುಸ್ಲಿಂ ಹೆಣ್ಣುಮಕ್ಕಳು ಶಾಲಾ ಕಾಲೇಜುಗಳಿಗೆ ಹಿಜಾಬ್‌ ಹಾಕಿಕೊಂಡು ಹೋಗುವಂತಿಲ್ಲ ಎಂಬ ಕೂಗು ಎದ್ದಿತು. ಕೇಸರಿ ಶಾಲುಗಳನ್ನು ಹಾಕಿಸಿ ಹುಡುಗರನ್ನು ಶಾಲೆಗಳಿಗೆ ಕಳುಹಿಸಲಾಯಿತು. ಆದರೆ ಕೇಸರಿ ಶಾಲು ಹಾಕಿಕೊಂಡು ಹೋದ ಹುಡುಗರ ನಿಜವಾದ ಸಮಸ್ಯೆಗಳು ಯಾವುವು? ನಮ್ಮ ಪೀಪಲ್‌ ಮೀಡಿಯಾ ಕಚೇರಿಗೆ ಡಾ.ಕೆ.ಪಿ.ಅಶ್ವಿನಿ ಎಂಬ ದಲಿತ ಸಮುದಾಯದ ಹೆಣ್ಣುಮಗಳು ಬಂದಿದ್ದರು. ಅವರನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಜನಾಂಗೀಯ ದ್ವೇಷದ ಕುರಿತು ಅಧ್ಯಯನ ನಡೆಸುವ ಸಮಿತಿಗೆ ಒಬ್ಬ ಸದಸ್ಯರನ್ನಾಗಿ ಮಾಡಲಾಗಿದೆ. ಈಗ ನೀವೇ ಹೇಳಿ-ಹೆಗಲಿಗೆ ಕೇಸರಿ ಶಾಲು ಹಾಕಿಕೊಂಡು ಕೈಯಲ್ಲಿ ತ್ರಿಶೂಲ ಹಿಡಿದುಕೊಂಡು ಹೋಗುವ ದೇಶಭಕ್ತರ ಗುಂಪು ನಮ್ಮ ಮಕ್ಕಳಿಗೆ ಮಾದರಿಯಾಗಬೇಕೇ? ಅಥವಾ ಬಾಬಾಸಾಹೇಬರನ್ನು ಮಾದರಿಯಾಗಿಟ್ಟುಕೊಂಡ ಡಾ.ಕೆ.ಪಿ.ಅಶ್ವಿನಿಯವರು ಆದರ್ಶವಾಗಬೇಕೆ? ವಿಶೇಷವಾಗಿ ತಳ ಸಮುದಾಯಗಳಿಂದ ಬಂದಂಥಹ ಹುಡುಗರಿಗೆ ಈ ರೀತಿಯಾಗಿ ತಲೆಗೆ ಧರ್ಮದ ಅಮಲನ್ನು ತುಂಬಿ ಅವರನ್ನು ಬಲಿಗೊಡಲಾಗುತ್ತಿದೆ.</p>



<p>ಎಲ್ಲಿಯವರೆಗೆ ನಾವು ಉನ್ನತ ಶಿಕ್ಷಣ ಪಡೆದು ಉನ್ನತ ಹಂತಕ್ಕೆ, ಆಡಳಿತ ನಡೆಸುವ ಜನಪ್ರತಿನಿಧಿಗಳ ಮಟ್ಟಕ್ಕೆ ಏರುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಯುವಜನರಿಗೆ ಭವಿಷ್ಯವಿಲ್ಲ ಎಂದು ಅಂಬೇಡ್ಕರ್‌ ಹೇಳಿದ್ದಾರೆ. ಆದರೆ ನಮ್ಮಲ್ಲಿ ಒಂದು ಕಡೆ ಶಾಲೆ ಓದುವ ಮಕ್ಕಳನ್ನು ಕೋಮುಗಲಭೆಗಳಿಗೆ ಬಿಡುವ ಕಾರ್ಯ ನಡೆಯುತ್ತಿದೆ. ಇನ್ನೊಂದು ಕಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಸಮುದಾಯದವರು ಬ್ರಾಹ್ಮಣ ಸಮುದಾಯದ 150 ಮಕ್ಕಳನ್ನು ದೆಹಲಿಯಲ್ಲಿರುವ ಸಂಕಲ್ಪ ಅನ್ನುವ ಸಂಸ್ಥೆಗೆ ಸೇರಿಸುತ್ತಾರೆ. ಅವರೆಲ್ಲಾ ಐಎಎಸ್‌ ಆಗುತ್ತಾರೆ. ಇದಕ್ಕೆ ಯಡಿಯೂರಪ್ಪನವರಿಗೆ ಧನ್ಯವಾದಗಳನ್ನು ಹೇಳುವ ವಿಡಿಯೋ ನೋಡಿದೆ ನಾನು. ನಮ್ಮ ಸಮುದಾಯದ ಮಕ್ಕಳಿಗೆ ಇದು ಸಾಧ್ಯವಾ? ಆದರೆ ಕೇವಲ ಒಂದೇ ಜಾತಿಯಲ್ಲಿ ಹುಟ್ಟಿದ್ದಕ್ಕೆ ಅವರಿಗೆ ಇದು ಸಾಧ್ಯವಾಗಿದೆ. ನಮ್ಮ ಧರ್ಮದ ಮೇಲೆ ದಾಳಿಯಾಗುತ್ತಿದೆ ಎಂದು ನಮ್ಮ ಮಕ್ಕಳನ್ನು ಧರ್ಮ ರಕ್ಷಣೆಯ ಕಡೆ ತಿರುಗಿಸುತ್ತಿದ್ದಾರೆ.&nbsp;</p>



<p>ಭಾರತದಲ್ಲಿ ನಿರುದ್ಯೋಗದ ಸಮಸ್ಯೆ ಇದೆ. ಭಾರತದಲ್ಲಿ ಸ್ವಾತಂತ್ರ್ಯಾ ನಂತರ ಅತೀ ಹೆಚ್ಚು ನಿರುದ್ಯೋಗ ಈಗ ಇದೆ. ಎನ್‌ಎಸ್‌ಎಸ್‌ಓ ಎನ್ನುವ ಕೇಂದ್ರ ಸರ್ಕಾರದ ಸಂಸ್ಥೆ ಇಡೀ ದೇಶದಲ್ಲಿನ ಕೈಗಾರಿಕೆಗಳ ಡೇಟಾ ತರಿಸಿಕೊಂಡು ಎಷ್ಟು ಉದ್ಯೋಗ ಇದೆ, ಎಷ್ಟು ಉದ್ಯೋಗ ಕಳೆದು ಕೊಂಡಿದ್ದಾರೆ ಎಂಬ ವರದಿಯನ್ನು ಮಾಡಿತು. ಕಳೆದ 45 ವರ್ಷಗಳಲ್ಲೇ ಇರದಿದ್ದಷ್ಟು ನಿರುದ್ಯೋಗ ಈಗ ಇದೆ ಎಂಬ ವಿಷಯ ಹೊರಗೆ ಬಂತು. ಆದರೆ ಈ ವರದಿಯನ್ನು ಬಹಿರಂಗಪಡಿಸದಂತೆ ಒತ್ತಡ ಹಾಕಿಲಾಯಿತು. ಇದನ್ನು ವಿರೋಧಿಸಿ ಎನ್‌ ಎಸ್‌ ಎಸ್‌ ಓ ಮುಖ್ಯಸ್ಥರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.  ಇದರ ಅರ್ಥ ವಾಸ್ತವಾಂಶಗಳನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. 2016ರ ನಂತರ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಕುರಿತು ಅಂಕಿ ಅಂಶಗಳನ್ನೇ ಹತ್ತಿಕ್ಕಲಾಗಿದೆ.  ನಿಜವಾಗಿಯೂ ಯಾವುದಕ್ಕೆ ಲೆಕ್ಕ ಕೊಡಬೇಕೊ ಅದನ್ನು ಸರ್ಕಾರ ಕೊಡುವುದರ ಬದಲಾಗಿ ಜನರು ಉದ್ವೇಗಗೊಳ್ಳುವ ವಿಚಾರಗಳ ಲೆಕ್ಕವನ್ನು ಮಾತ್ರ ಕೊಡುತ್ತಿದೆ.</p>



<p>ಪರೇಶ್‌ ಮೇಸ್ತಾ ಎಂಬ ಯುವಕನ ಸಾವನ್ನು ಇಟ್ಟುಕೊಂಡು ಸಮಾಜದಲ್ಲಿ ಅಶಾಂತಿ ಮೂಡಿಸಲಾಯಿತು. ಧರ್ಮದ ಬಣ್ಣ ಕಟ್ಟಿ ದೊಂಬಿ, ಜಗಳವನ್ನು ಹುಟ್ಟುಹಾಕಲಾಯಿತು. ಈ ಗಲಭೆಯ ಬೆಂಕಿಯನ್ನೇ ಬಳಸಿಕೊಂಡು ಹಲವರು ಚುನಾವಣೆಯಲ್ಲೂ ಗೆದ್ದು ಬಂದರು. ಆದರೆ ಅವನ ಸಾವು ಕೊಲೆಯಲ್ಲ, ಕಾಲು ಜಾರಿಬಿದ್ದು ಆದ ಸಾವು ಎಂದು ಸಿಬಿಐ ವರದಿ ಬಂತು. ಆದರೆ ಈ ಸಾವನ್ನು ಹೇಗೆಲ್ಲ ಬಳಸಿಕೊಳ್ಳಲಾಯಿತು? ಎಷ್ಟೊಂದು ಭಾವನಾತ್ಮಕವಾಗಿ ಜನರ ಜೊತೆ ಆಟವಾಡಲಾಯಿತು? ಇದನ್ನು ನಾವು ನಮ್ಮ ಯುವಜನರಿಗೆ ಅರ್ಥ ಮಾಡಿಸಬೇಕಿದೆ.</p>



<p>ಕಾಂತಾರ ಸಿನಿಮಾದಲ್ಲಿ ಭೂತಾರಾಧನೆ ವಿಷಯ ಬರುತ್ತದೆ, ಇದು ಇತ್ತೀಚಿನವರೆಗೂ ಕೂಡಾ ಮೇಲ್ಜಾತಿಗಳಿಂದ ದೂರ ಇದ್ದದ್ದು. ಅಲ್ಲಿರುವ ತಳ ಸಮುದಾಯಗಳ ನಾಯಕರೇ ಭೂತಗಳಾಗಿದ್ದವು. ಇದರಲ್ಲಿ ವೈದಿಕ ಅಂಶಗಳು ಇರಲಿಲ್ಲ. ಭೂತವನ್ನೇ ದೈವ ಎಂದು ನೋಡುತ್ತಾರೆ ಕರಾವಳಿಯಲ್ಲಿ. ವರಾಹ ರೂಪ ಎನ್ನುವುದು ವೈದಿಕ ಪರಂಪರೆಗೆ ಸೇರಿದ್ದು, ಇವತ್ತು ಇದೆಲ್ಲಾ ನಮ್ಮದೆ, ಹಿಂದೂ ಪರಂಪರೆಯದ್ದೇ ಎಂದು ಹೇಳುತ್ತಿದ್ದಾರೆ. ಒಬ್ಬ ಗೊಲ್ಲ ಕೃಷ್ಣನ ಮೂಲಕ ಭಗವದ್ಗೀತೆಯನ್ನು ಹೇಳಿಸುತ್ತಾರೆ. ಅದನ್ನು ನಾವು ರಕ್ಷಣೆ ಮಾಡುತ್ತೇವೆ ಎಂದು ಹೇಳುತ್ತಾರೆ. ಇದು ಒಂದು ಬಗೆಯ ಧಾರ್ಮಿಕ ರಾಜಕಾರಣ, ಸಾಂಸ್ಕೃತಿಕ ರಾಜಕಾರಣ.</p>



<p>ಮೊದಲೇ ಹೇಳಿದ ಹಾಗೆ ಈ ಫ್ಯಾಸಿಸಂ ಅನ್ನುವುದು ನಮ್ಮ ಮೆದುಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ತಂತ್ರಗಾರಿಕೆ ಹೊಂದಿರುತ್ತದೆ. ಹಾಗಾಗಿ ನಮ್ಮ ದೊಡ್ಡ ಜವಾಬ್ದಾರಿ ಜನರನ್ನು ಮಾನಸಿಕ ಗುಲಾಮಗಿರಿಯಿಂದ ಹೇಗೆ ಬಿಡಿಸುವುದು ಎಂಬುದೇ ಆಗಿದೆ. ಜ್ಯೋತಿಬಾಪುಲೆ ದಂಪತಿಯವರು ಈ ಗುಲಾಮಗಿರಿಯಿಂದ ಹೊರಗೆ ಬರಬೇಕೆಂದು ಪುಸ್ತಕವನ್ನೇ ಬರೆದು ಶಾಲೆಗಳನ್ನು ತೆರೆದರು. ಶಾಲೆಗೆ ಹೋಗುವುದು ನಿಷಿದ್ಧ ಆಗಿದ್ದ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಅದನ್ನು ಅರ್ಥ ಮಾಡಿಕೊಂಡು, ಬರೀ ಶೂದ್ರ ಮಾತ್ರವಲ್ಲ ಬ್ರಾಹ್ಮಣ ಹೆಣ್ಣುಮಕ್ಕಳಿಗೂ ಸಹ ಶಾಲೆ ಇರದಂತಹ ಸಮಯದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶಾಲೆಗಳನ್ನು ತೆರೆದರು. ಸತ್ಯಶೋಧಕ ಸಮಾಜದ ಕಾರ್ಯಚಟುವಟಿಕೆಗಳ ಮೂಲಕ ಸಾಕಷ್ಟು ಕೆಲಸ ಮಾಡಿದರು. ಈ ಉನ್ನತ ವರ್ಗದವರು ನಮ್ಮನ್ನು ಹೇಗೆ ಮೋಸ ಮಾಡುತ್ತಿದ್ದಾರೆ ಎಂದು ಪುಲೆ ದಂಪತಿಗಳು ಚಿಂತಿಸಿ ಶಾಲೆಗಳನ್ನು ತೆರೆದರು.&nbsp;</p>



<p>ಭಾರತ ಸ್ವತಂತ್ರ ದೇಶ, ಸಂವಿಧಾನದ ಆಸರೆ ನಮಗಿದೆ. ಉತ್ತರ ಕನ್ನಡದ ಲೋಕಸಭಾ ಸದಸ್ಯ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸುವುದಕ್ಕೆ ಎಂದು ಹೇಳಿದ್ದಾನೆ. ಅವರೊಳಗೆ ಇರುವ ಉದ್ದೇಶವೇ ಅದು. ಸಂವಿಧಾನದ ಮೇಲೆ ಅವರಿಗೆ ಯಾಕೆ ಅಷ್ಟು ಅಸಹನೆ ಎಂದರೆ, ಇವರ ಸರ್ವಾಧಿಕಾರದ ಆಸೆಗೆ ಪೆಟ್ಟು ಕೊಟ್ಟಿರುವುದು ನಮ್ಮ ಸಂವಿಧಾನ. ಸಂವಿಧಾನದಲ್ಲಿ ಆರ್ಟಿಕಲ್‌ 14 ಹೇಳುವುದು ಎಲ್ಲರೂ ಸಮಾನರು ಎಂದು. ಯಾವುದೇ ಜಾತಿಯಲ್ಲಿ ಹುಟ್ಟಿದ್ದರೂ ಅವರೆಲ್ಲರೂ ಸಮಾನರು ಎಂದು ಸಂವಿಧಾನ ಹೇಳುತ್ತದೆ. ಮನುಸ್ಮೃತಿ ಹೀಗೆ ಹೇಳುತ್ತದೆಯೇ? ದಯವಿಟ್ಟು ಎಲ್ಲರೂ ಮನುಸ್ಮೃತಿಯನ್ನು ಓದಿ, ವಾರಕ್ಕೆ ಒಂದತ್ತು ಪೇಜ್‌ ಓದಿ. ಈ ಮನುಸ್ಮೃತಿ ಆರ್‌ಎಸ್‌ಎಸ್‌ ನವರ ಸಂವಿಧಾನ.&nbsp;</p>



<p>ಆರ್‌ ಎಸ್‌ ಎಸ್‌ ಸರಸಂಘಚಾಲಕಬನಾಗಿದ್ದ ಗೋಲ್ವಲ್ಕರ್ ಹೇಳುತ್ತಾರೆ ʼಈ ಸಂವಿಧಾನ ನಮಗೆ ಬೇಡ, ಮನುಸ್ಮೃತಿಯ ಯಾವುದೇ ಅಂಶಗಳು ಈ ಸಂವಿಧಾನದಲ್ಲಿ ಇಲ್ಲʼ ಎಂದು. ಆರ್‌ಎಸ್‌ಎಸ್‌ ನವರ ಆರ್ಗನೈಸರ್‌ ಪತ್ರಿಕೆಯಲ್ಲಿ ಈ ಸಂವಿಧಾನ ನಮಗೆ ಬೇಡ ಎಂಬ ಲೇಖನ ಪ್ರಕಟಗೊಂಡಿತ್ತು. ರಾಜಸ್ಥಾನದ ಕೋರ್ಟಿನ ಮುಂದೆ ಮನುವಿನ ಪ್ರತಿಮೆ ಇದೆ. ನಮ್ಮ ನ್ಯಾಯಾಲಯಗಳು ಕೆಲಸ ಮಾಡಬೇಕಿರುವುದು ಸಂವಿಧಾನದ ಆಧಾರದಲ್ಲಿ. ಪುರುಷನ ತಲೆಯಿಂದ ಬ್ರಾಹ್ಮಣ, ಭುಜದಿಂದ ಕ್ಷತ್ರಿಯಾ, ತೊಡೆಯಿಂದ ವೈಶ್ಯ ಮತ್ತು ಪಾದದಿಂದ ಶೂದ್ರರು ಹುಟ್ಟಿದರು ಎಂದು ಮನುಸ್ಮೃತಿ ಹೇಳುತ್ತದೆ. ಇದರ ಪ್ರಕಾರ ಒಬ್ಬ ಬ್ರಾಹ್ಮಣ ಒಂದು ಕೊಲೆ ಮಾಡಿದರೆ ಅವನಿಗೆ ಯಾವ ಶಿಕ್ಷೆಯೂ ಇಲ್ಲ. ಆದರೆ ಒಬ್ಬ ಶೂದ್ರ ಕೊಲೆ ಮಾಡಿದರೆ ಮರಣದಂಡನೆ ವಿಧಿಸಬೇಕೆಂದು ಹೇಳಲಾಗಿದೆ. ಬ್ರಾಹ್ಮಣ ವರ್ಗದವರು ಅವರಿಗಾಗಿ ಬರೆದುಕೊಂಡ ಮ್ಯಾನುಯಲ್‌ ಎಂದರೆ, ಅದು ಮನುಸ್ಮೃತಿ. ಮಹಿಳೆಯರ ಬಗ್ಗೆ ಮನು ಏನು ಹೇಳುತ್ತಾನೆ ಎಂದರೆ ದುಷ್ಟತನಕ್ಕೆ ಮೂಲ ಕಾರಣವೇ ಮಹಿಳೆ ಎಂದು. ತಳಸಮುದಾಯಗಳನ್ನು ಅತ್ಯಂತ ತುಚ್ಛವಾಗಿ ಕಾಣುವ ಒಂದು ಗ್ರಂಥವನ್ನು ಸಂವಿಧಾನವಾಗಿ ಅಳವಡಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ.&nbsp;</p>



<p>ಬಾಬಾ ಸಾಹೇಬರು ಬರೆದ ಸಂವಿಧಾನದ 17ನೇ ಆರ್ಟಿಕಲ್‌ ಪ್ರಕಾರ ಅಸ್ಪೃಶ್ಯತೆಯನ್ನು ಯಾರೂ ಆಚರಿಸಬಾರದು. ಆದರೆ ಮನುಸ್ಮೃತಿ ಅಸ್ಪೃಶ್ಯತೆಯನ್ನು ಆಚರಿಸುತ್ತದೆ. ಶ್ರೇಣೀಕರಣ ವ್ಯವಸ್ಥೆ ಎಂಬುದೊಂದು ಬಹುಮಹಡಿಗಳ ಕಟ್ಟಡ. ಇಲ್ಲಿ ಮೆಟ್ಟಿಲುಗಳು ಇರುವುದಿಲ್ಲ ಎಂದು 1920ರಲ್ಲಿ ಮೂಕನಾಯಕ ಪತ್ರಿಕೆಯಲ್ಲಿ ಅಂಬೇಡ್ಕರ್‌ ಬರೆಯುತ್ತಾರೆ. ಎಲ್ಲಿಯವರೆಗೂ ಈ ವರ್ಣಾಶ್ರಮದ ವ್ಯವಸ್ಥೆ ಇರುತ್ತದೋ ಅಲ್ಲಿಯವರೆಗೂ ಸಂವಿಧಾನ ಅನುಷ್ಠಾನ ಕಷ್ಟವಾಗುತ್ತದೆ. ಹಿಂದೂ ಧರ್ಮದ ಮೂಲ ಆಧಾರವೇ ವರ್ಣಾಶ್ರಮ ವ್ಯವಸ್ಥೆ.‌</p>



<p>ಕಬಡ್ಡಿ ಆಟದಲ್ಲಿ ಕ್ಯಾಚರ್‌ ಆದವನು ರೈಡ್‌ ಮಾಡಲು ಬಂದವನ ಕಣ್ಣುಗಳನ್ನೇ ನೋಡುತ್ತಾ ಕಾಲಿಗೆ ಕ್ಯಾಚ್‌ ಹಾಕುತ್ತಾನೆ. ಸಮಾಜದಲ್ಲಿ ಇವತ್ತೂ ಕೂಡಾ ಹಾಗೇ ಆಗುತ್ತಿರುವುದು. ನಮಗೆ ಬೊಟ್ಟು ಮಾಡಿ ತೋರಿಸುತ್ತಿರುವುದು ಮುಸಲ್ಮಾನರನ್ನು ಮತ್ತು ಕ್ರಿಶ್ಚಿಯನ್ನರನ್ನು. ಆದರೆ ಅವರ ಗುರಿ ಇರುವುದು ಶೂದ್ರರು ಮತ್ತು ದಲಿತರು. ವರ್ಣಾಶ್ರಮ- ಅಸ್ಪೃಶ್ಯತೆ ಆಧರಿಸಿದ ಅವರ ಧರ್ಮವನ್ನು ಉಳಿಸಿಕೊಳ್ಳುವುದೇ ಅವರು ನಿಜವಾದ ಉದ್ದೇಶ. ನಮ್ಮ ದೇಶದ ಫ್ಯಾಸಿಸಂ ಇರುವುದು ಈ ರೀತಿಯಲ್ಲಿ. ಈ ಫ್ಯಾಸಿಸಂ ನಿಂದ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಮ್ಮ ಜನರನ್ನು ಆಚೆಗೆ ತರಬೇಕಿದೆ. ತಳಸಮುದಾಯದ ಮಹಿಳೆಯರ, ಆದಿವಾಸಿಗಳ ಬದುಕು ಸಬಲೀಕರಣವಾಗಬೇಕಿದೆ. ಈ ದೇಶವನ್ನು ಕಟ್ಟಿದವರು ನಾವು. ಅದನ್ನು ನಾವು ಯಾವುದೇ ಕಾರಣಕ್ಕೂ ಮರೆಯಕೂಡದು.</p>



<p>ಈಗ ನಾವು 2022ರಲ್ಲಿದ್ದೀವಿ. ಇತ್ತೀಚೆಗೆ ಬಂದ ಸಂಶೋಧನೆಗಳ ಪ್ರಕಾರ ಇಲ್ಲಿನ ನಾಗರೀಕತೆಯನ್ನು ಕಟ್ಟಿರುವುದು ತಳಸಮುದಾಯಗಳೇ ಹೊರತು ಮೇಲ್ವರ್ಗಗಳಲ್ಲ. ಇವತ್ತು ಯಾವ ಸಮುದಾಯಗಳು ನಿಕೃಷ್ಟವಾಗಿ ಬದುಕುತ್ತಿವೆಯೋ ಇದೇ ಎಸ್‌ಸಿ/ಎಸ್‌ಟಿ, ಓಬಿಸಿ ಸಮುದಾಯಗಳ ಪೂರ್ವಿಕರು ಜಗತ್ತಿನಲ್ಲೇ ಅದ್ಭುತವಾದ ನಾಗರೀಕತೆಯನ್ನು ಕಟ್ಟಿದ್ದಾರೆ. ಈ ನಾಗರೀಕತೆಯನ್ನು ಕಟ್ಟುವ ಸಮಯದಲ್ಲಿ ಯಜ್ಞ ಯಾಗಾದಿ ಮಾಡುವ ಜನರಿಗೆ ನಾಗರೀಕತೆಯ ಕಲ್ಪನೆಯೆ ಇರಲಿಲ್ಲ, ನಗರಗಳನ್ನು ಕಟ್ಟುವ ಬಗ್ಗೆಯೇ ಗೊತ್ತಿರಲಿಲ್ಲ. ನಮ್ಮ ಪೂರ್ವಜರು ಅತ್ಯಂತ ವ್ಯವಸ್ಥಿತವಾಗಿ ಒಳಚರಂಡಿಗಳನ್ನು ಕಟ್ಟಿದ್ದರು,  ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿದ್ದರು. ಪ್ರತಿ ಮನೆಗಳಲ್ಲಿ ಶೌಚಾಲಯಗಳು ಇರುತ್ತಿದ್ದವು, ಅದ್ಭುತವಾದ ನೀರಾವರಿ ವ್ಯವಸ್ಥೆ ಇತ್ತು. ನೀರಿನ ಕೊರತೆಯಲ್ಲೂ ಸುಸ್ಥಿರ ಬೇಸಾಯವನ್ನು ಸಾಧ್ಯವಾಗಿಸಿದ್ದರು. ಹೊರದೇಶಗಳೊಂದಿಗೆ ವಾಣಿಜ್ಯ ವ್ಯವಹಾರಗಳು ಇದ್ದವು, ಹಡಗು ಇತ್ತು, ಇಷ್ಟೆಲ್ಲಾ ಇಂಜಿನಿಯರ್‌, ವಿಜ್ಞಾನ ಇತ್ತು, ಇವೆಲ್ಲವನ್ನೂ ಮಾಡಿದವರು ಇವತ್ತಿನ ತಳಸಮುದಾಯಗಳ ಪೂರ್ವಿಕರು ಎಂಬುದನ್ನು ಮರೆಯಬಾರದು.&nbsp;</p>



<p>ನಾವು ನಾಗರೀಕತೆ ಕಟ್ಟಿಕೊಂಡಾಗ ಅವರಿಗೆ ನಾಗರೀಕತೆಯೇ ಗೊತ್ತಿರಲಿಲ್ಲ. ಹಾಗಾಗಿ ನಿಜವಾದ ಸಬಲೀಕರಣದ ಕಡೆ ನಮ್ಮ ದೇಶವನ್ನು ಕೊಂಡೊಯ್ಯಬೇಕೆಂದರೆ ಈ ಅರಿವು ನಮ್ಮಲ್ಲಿ ಮೊದಲು ಮೂಡಬೇಕಿದೆ. ಈ ಸರ್ಕಾರಗಳನ್ನು ನಂಬಿಕೊಂಡರೆ ಹೀಗೆಯೇ ಹೋಗಬೇಕಾಗುತ್ತದೆ. ಜನರನ್ನು ಸಬಲೀಕರಣ ಮಾಡಲು ಯಾವುದೇ ಯೋಜನೆಗಳು ಇಲ್ಲದೇ ಇರುವ ರೀತಿಯಲ್ಲಿ ಮಾಡುತ್ತಿದ್ದಾರೆ. ಫ್ಯಾಸಿಸಂಗೂ ನಿರುದ್ಯೋಗಕ್ಕೂ ನೇರ ಸಂಬಂಧ ಇದೆ. ಇದನ್ನು ನಾವು ಮೆಟ್ಟಿ ನಿಲ್ಲಬೇಕಿದೆ, ಹೊಸ ನಾಡನ್ನು ಕಟ್ಟಬೇಕಿದೆ.</p>



<p>(ಸ್ಲಂ ಜನಾಂದೋಲನ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಂಡಿಸಿದ ಉಪನ್ಯಾಸ)</p>



<p></p>



<p><strong>ಹರ್ಷಕುಮಾರ್‌ ಕುಗ್ವೆ</strong></p>



<p>ಚಿಂತಕ, ಲೇಖಕ</p>
]]></content:encoded>
					
		
		
			</item>
		<item>
		<title>ನಾನು ಬಾಬಾಸಾಹೇಬರಿಂದ ಪ್ರೇರಣೆ ಸ್ಪೂರ್ತಿ ಪಡೆದಿದ್ದೇನೆ: ಡಾ.ಕೆ.ಪಿ.ಅಶ್ವಿನಿಯವರ ಸಂದರ್ಶನ</title>
		<link>https://peepalmedia.com/nanu-babasahebarinda-prerane-spurti-padediddene-dr-k-p-ashwini/</link>
		
		<dc:creator><![CDATA[Peepal Media]]></dc:creator>
		<pubDate>Wed, 19 Oct 2022 11:31:10 +0000</pubDate>
				<category><![CDATA[ವಿಶೇಷ]]></category>
		<category><![CDATA[Dr. KP Ashwini]]></category>
		<category><![CDATA[Harsha Kumar Kugve]]></category>
		<category><![CDATA[india]]></category>
		<category><![CDATA[Interview]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kolara]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[UN]]></category>
		<category><![CDATA[UNHRC]]></category>
		<guid isPermaLink="false">https://peepalmedia.com/?p=11952</guid>

					<description><![CDATA[ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವರ್ಣಭೇದ ನೀತಿ ಮತ್ತು ಅಸಹಿಷ್ಣುತೆ ಕುರಿತು ವಿಶೇಷ ತಜ್ಞರಾಗಿ ಭಾರತದ ಪ್ರಪ್ರಥಮ ತಜ್ಞೆ ಕೋಲಾರ ಮೂಲದ ಡಾ  ಕೆ ಪಿ ಅಶ್ವಿನಿ ನೇಮಕವಾಗಿದ್ದಾರೆ. ಇವರು  ಹೆಮ್ಮೆಯ ಕನ್ನಡತಿಯಾಗಿ, ಅಂಬೇಡ್ಕರ್‌ವಾದಿ ಯುವತಿಯಾಗಿ, ಸ್ವಾಭಿಮಾನಿ ದಲಿತ ಚಿಂತಕಿಯಾಗಿ ದೇಶದ ಮುಡಿಗೊಂದು ಹೆಮ್ಮೆಯ ಕಿರೀಟ ತೊಡಿಸಿದ್ದಾರೆ; ಯುವಜನತೆಯಲ್ಲಿ ಕನಸುಗಳನ್ನು ಬಿತ್ತಿದ್ದಾರೆ. ಇವರ ಅದ್ಭುತ ಸಾಧನೆಯನ್ನು ಪೀಪಲ್‌ ಮೀಡಿಯಾವು ಸಂಭ್ರಮಿಸುತ್ತಾ ಆಭಿನಂದನೆಗಳು ಮತ್ತು ಅಭಿವಂದನೆಗಳನ್ನು ಸಲ್ಲಿಸುತ್ತದೆ. ಪೀಪಲ್‌ ಟೀವಿಗಾಗಿ ಪತ್ರಕರ್ತ, ಲೇಖಕ ಹರ್ಷಕುಮಾರ್‌ ಕುಗ್ವೆ ನಡೆಸಿರುವ ಮಾತುಕತೆಯ [&#8230;]]]></description>
										<content:encoded><![CDATA[
<p><strong>ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವರ್ಣಭೇದ ನೀತಿ ಮತ್ತು ಅಸಹಿಷ್ಣುತೆ ಕುರಿತು ವಿಶೇಷ ತಜ್ಞರಾಗಿ ಭಾರತದ ಪ್ರಪ್ರಥಮ ತಜ್ಞೆ ಕೋಲಾರ ಮೂಲದ ಡಾ  ಕೆ ಪಿ ಅಶ್ವಿನಿ ನೇಮಕವಾಗಿದ್ದಾರೆ. ಇವರು  ಹೆಮ್ಮೆಯ ಕನ್ನಡತಿಯಾಗಿ, ಅಂಬೇಡ್ಕರ್‌ವಾದಿ ಯುವತಿಯಾಗಿ, ಸ್ವಾಭಿಮಾನಿ ದಲಿತ ಚಿಂತಕಿಯಾಗಿ ದೇಶದ ಮುಡಿಗೊಂದು ಹೆಮ್ಮೆಯ ಕಿರೀಟ ತೊಡಿಸಿದ್ದಾರೆ; ಯುವಜನತೆಯಲ್ಲಿ ಕನಸುಗಳನ್ನು ಬಿತ್ತಿದ್ದಾರೆ. ಇವರ ಅದ್ಭುತ ಸಾಧನೆಯನ್ನು ಪೀಪಲ್‌ ಮೀಡಿಯಾವು ಸಂಭ್ರಮಿಸುತ್ತಾ ಆಭಿನಂದನೆಗಳು ಮತ್ತು ಅಭಿವಂದನೆಗಳನ್ನು ಸಲ್ಲಿಸುತ್ತದೆ. ಪೀಪಲ್‌ ಟೀವಿಗಾಗಿ ಪತ್ರಕರ್ತ, ಲೇಖಕ ಹರ್ಷಕುಮಾರ್‌ ಕುಗ್ವೆ ನಡೆಸಿರುವ ಮಾತುಕತೆಯ ಪೂರ್ಣ ಪಾಠವನ್ನು ನಿಮಗಾಗಿ ಇದು ಪ್ರಸ್ತುತ ಪಡಿಸುತ್ತಿದೆ.</strong></p>



<p><strong>ಪೀಪಲ್‌ ಮೀಡಿಯಾ:</strong> ಮೇಡಂ, ಮೊದಲನೆಯದಾಗಿ ನಿಮಗೆ ಅಭಿನಂದನೆಗಳು. ನೀವು ವಿಶ್ವಸಂಸ್ಥೆಯ <strong>UNHRC</strong> ಯ ವಿಶೇಷ ತಜ್ಞರಾಗಿ ಆಯ್ಕೆಯಾಗಿದ್ದೀರಿ ಈ ಪ್ರಕ್ರಿಯೆಯ ಬಗ್ಗೆ ತಿಳಿಸಿ ಹಾಗೂ ನಿಮ್ಮ ಕೆಲಸದ ಸ್ವರೂಪ ಹೇಗಿರುತ್ತದೆ ತಿಳಿಸಿಕೊಡಿ.</p>



<p><strong>ಡಾ.ಕೆ.ಪಿ.ಅಶ್ವಿನಿ:</strong>&nbsp; ವಿಶ್ವಸಂಸ್ಥೆಯ ಸ್ಪೆಷಲ್‌ ರಾಪೊರ್ಟರ್‌ (rapporteur) ಒಂದು ಸ್ವತಂತ್ರ ಪರಿಣಿತರ ಹುದ್ದೆಯಾಗಿದೆ, ವಿಶ್ವಸಂಸ್ಥೆಯಲ್ಲಿ ಬಹಳ ನಿಯೋಗಗಳಿವೆ (mandates). &nbsp;ಇಲ್ಲಿ ಜನಾಂಗೀಯ ಭೇದ, ಮೈನಾರಿಟಿ ಇಶ್ಯೂ, ಸ್ಯಾನಿಟೇಶನ್‌, ಹೌಸಿಂಗ್‌ ಈ ರೀತಿ ಬೇರೆ ಬೇರೆ ಮ್ಯಾಂಡೇಟ್ಸ್‌ ಇದೆ. ಪ್ರತೀ ಮ್ಯಾಂಡೇಟ್‌ಗಳಿಗೆ ಒಬ್ಬರು ತಜ್ಞರಿರುತ್ತಾರೆ. ಸ್ಪೆಷಲ್‌ ರಾಪೊರ್ಟರ್‌ ಅಂದರೆ ಸ್ವತಂತ್ರ ತಜ್ಞರು ಅಂತ. ನನ್ನದು ರೇಸಿಸಂ, ಜನಾಂಗೀಯ ತಾರತಮ್ಯ, ಕ್ಸೆನೋಫೋಬಿಯಾಕ್ಕೆ (ಬೇರೆ ದೇಶದವರ ಮೇಲಿನ ದ್ವೇಷ) ಸಂಬಂಧಿಸಿದ ಅಸಹನೆ. ವರ್ಣಭೇದ, ಜನಾಂಗೀಯ ಭೇದನೀತಿ ಇವುಗಳ ಕುರಿತು ಗಮನ ಹರಿಸುವುದಿರುತ್ತದೆ.&nbsp; ಒಬ್ಬ ಸ್ಪೆಷಲ್‌ ರಾಪರ್ಟರ್‌ ಆಗಿ ನಾನು ಬೇರೆ ಬೇರೆ ದೇಶಗಳನ್ನು ಭೇಟಿ ಮಾಡಬಹುದು. ಯಾವುದಾದರೂ ದೇಶದಲ್ಲಿ ಜನಾಂಗೀಯ ಭೇದದ ಘಟನೆಗಳು ನಡೆದಾಗ ಅವುಗಳ ಕುರಿತು ಎಮರ್ಜೆನ್ಸಿ ಅಪೀಲ್ಸ್ ಕೊಡಬಹುದು. ಹಾಗೆಯೇ ಇಂಡಿಪೆಂಡೆಂಟ್‌ ಎಕ್ಸ್‌ಪರ್ಟ್‌ ಆಗಿರುವುದರಿಂದ UN ನಲ್ಲಿ ರೇಸಿಸಂ ಅನ್ನು ಅಡ್ರೆಸ್‌ ಮಾಡೋದಿಕ್ಕೆ ಬೇರೆ ಬೇರೆ ರೀತಿಯ ಮೆಕಾನಿಸಮ್‌ &#8211; ಕನ್ವೆನ್ಷನ್ಸ್‌ ಇವೆ. ಆ ವಿಷಯಗಳ ಮೇಲೆ ಯುನೈಟೆಡ್‌ ನೇಶನ್ಸ್‌&nbsp; &nbsp;ಎಷ್ಟು ಎಫೆಕ್ಟೀವ್‌ ಆಗಿ ಅಡ್ರೆಸ್‌ ಮಾಡುತ್ತದೆ ಎಂಬುದನ್ನು ಮಾನಿಟರ್‌ ಮಾಡುವಂತಹ ಜವಾಬ್ದಾರಿ ಸ್ಪೆಷಲ್‌ ರಾಪೊರ್ಟರ್‌ ಗೆ ಇರುತ್ತೆ.&nbsp;</p>



<p><strong>ಪೀಪಲ್‌ ಮೀಡಿಯಾ:</strong> ಈವರೆಗೆ ಆ ಪೊಸಿಶನ್‌ ಗೆ ಆಯ್ಕೆ ಆಗುತ್ತಿದ್ದುದು ಆಫ್ರಿಕನ್ಸ್‌.&nbsp; ಆದ್ರೆ ಈಗ ಮೊದಲ ಬಾರಿಗೆ ಭಾರತದಿಂದ ಆಯ್ಕೆ ಆಗಿದ್ದೀರಾ. ನೀವೇ ಆಯ್ಕೆಯಾಗಿದ್ದು ಹೇಗೆ?&nbsp;</p>



<figure class="wp-block-image size-full"><img fetchpriority="high" decoding="async" width="749" height="398" src="https://peepalmedia.com/wp-content/uploads/2022/10/Annotation-2022-10-19-165046.jpg" alt="" class="wp-image-11961" srcset="https://peepalmedia.com/wp-content/uploads/2022/10/Annotation-2022-10-19-165046.jpg 749w, https://peepalmedia.com/wp-content/uploads/2022/10/Annotation-2022-10-19-165046-300x159.jpg 300w, https://peepalmedia.com/wp-content/uploads/2022/10/Annotation-2022-10-19-165046-150x80.jpg 150w, https://peepalmedia.com/wp-content/uploads/2022/10/Annotation-2022-10-19-165046-696x370.jpg 696w" sizes="(max-width: 749px) 100vw, 749px" /></figure>



<p><strong>ಡಾ.ಕೆ.ಪಿ.ಅಶ್ವಿನಿ:</strong> ಜಾತಿ ಮತ್ತು ಜನಾಂಗೀಯ ತಾರತಮ್ಯದ ಕುರಿತಾಗಿಯೇ ನಾನು ಪಿಎಚ್‌ಡಿ ಫೋಕಸ್ ಮಾಡಿರುವುದು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಈ ಹುದ್ದೆಗೆ ವೇಕೆನ್ಸಿ ಇತ್ತು. ನಾನು ಇದಕ್ಕೆ ಅಪ್ಲೈ ಮಾಡಿದ್ದೆ. ಇದಕ್ಕೆ ಪ್ರಪಂಚದ ಎಲ್ಲಾ ಕಡೆಗಳಿಂದ ಬಂದಿರುವ ಅರ್ಜಿಗಳನ್ನು ಸ್ವೀಕರಿಸಿ 12 ಜನರನ್ನು ಅಂತಿಮ ಗೊಳಿಸಿದ್ದರು. ಅಮೆರಿಕ, ಚೀನಾ, ಇಂಡಿಯಾ ಮತ್ತು&nbsp; ಬೇರೆ ಬೇರೆ ಆಫ್ರಿಕನ್ನರು ತುಂಬಾ ಜನ ಇದ್ರು. ಅವರನ್ನ ಶಾರ್ಟ್‌ ಲಿಸ್ಟ್‌ ಮಾಡಿ ಸಂದರ್ಶನ ಮಾಡ್ತಾರೆ. ಅದನ್ನು ಸಂದರ್ಶನ ಪ್ರತಿನಿಧಿಗಳು ಮಾಡ್ತಾರೆ. ಇನ್‌ಕ್ಲೂಡಿಂಗ್‌ ಕನ್ಸಲ್ಟೇಟೀವ್ಸ್‌ ಸೇರಿ ಮೂವರು ಪರ್ಮನೆಂಟ್‌ ರೆಪ್ರೆಸೆಂಟೇಟಿವ್ಸ್‌ ಇರ್ತಾರೆ. ಸಂದರ್ಶನ ಬಹಳ ಇಂಟೆನ್ಸಾಗಿರುತ್ತದೆ. ಸಂದರ್ಶನದ&nbsp; ನಂತರ ಮೂರು ಜನರ ಹೆಸರನ್ನು ಶಾರ್ಟ್‌ಲಿಸ್ಟ್‌ ಮಾಡಿ, ಅದನ್ನು ಮತ್ತೆ ಮಾನವ ಹಕ್ಕು ಮಂಡಳಿಯ ಅಧ್ಯಕ್ಷರಿಗೆ ಕಳಿಸಿ, ಅಲ್ಲಿ ಮತ್ತೆ ನಮ್ಮ ಪರಿಣತಿ, ಪ್ರಾತಿನಿಧ್ಯ, ಜೆಂಡರ್‌ ಡೈವರ್ಸಿಟಿ ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡು ಆಯ್ಕೆ ಮಾಡ್ತಾರೆ. ನನ್ನ ತಿಳುವಳಿಕೆ ಪ್ರಕಾರ&nbsp; ನನ್ನ ಪರಿಣತಿ, ಐಡೆಂಟಿಟಿ ಎಲ್ಲವನ್ನೂ ಪರಿಗಣಿಸಿ ನನ್ನ ನೇಮಕ ಮಾಡಿದ್ದಾರೆ.&nbsp;</p>



<p><strong>ಪೀಪಲ್‌ ಮೀಡಿಯಾ:</strong> ನಿಮ್ಮ ಹಿನ್ನೆಲೆ ಮತ್ತು ನಿಮ್ಮ ಕುಟುಂಬದ ಹಿನ್ನೆಲೆ ಬಗ್ಗೆ ಕೊಂಚ ತಿಳಿಸಿಕೊಡಿ.</p>



<p><strong>ಡಾ.ಕೆ.ಪಿ.ಅಶ್ವಿನಿ:</strong> ಬೇಸಿಕಲಿ ನನ್ನ ಊರು ಕೋಲಾರ. ನಮ್ಮ ತಂದೆ ಕೆಎಎಸ್‌ ಅಧಿಕಾರಿಯಾಗಿದ್ರು. ಅದರಿಂದಾಗಿ ನಾನು&nbsp; ಕರ್ನಾಟಕದ ಉದ್ದಗಲಕ್ಕೆ&nbsp; ವಿದ್ಯಾಭ್ಯಾಸ ಮಾಡಿದ್ದೀನಿ- ಮಂಗಳೂರು, ಗುಲ್ಬರ್ಗ, ಮೈಸೂರು ಇಲ್ಲೆಲ್ಲ. ಮೌಂಟ್‌ ಕಾರ್ಮೆಲ್‌ ಕಾಲೇಜಿನಲ್ಲಿ ಬಿ ಎ ಪದವಿ ಓದಿದೆ.&nbsp; ಸೆಂಟ್‌ ಜೋಸೆಫ್‌ ಕಾಲೇಜ್‌ ಬೆಂಗಳೂರಲ್ಲಿ ಎಂಎ ಓದಿದೆ. ದೆಹಲಿಯ JNU – ಜವಾಹರಲಾಲ್‌ ನೆಹರೂ ಯೂನಿವರ್ಸಿಟಿಯಲ್ಲಿ ಎಂ ಫಿಲ್‌, ಪಿಎಚ್ ಡಿ ಮಾಡಿದೆ. ನನ್ನ ಪಿಎಚ್ ಡಿ ವಿಷಯ ಇದ್ದಿದ್ದು ಸೌತ್‌ ಏಷಿಯನ್‌ ಸ್ಟಡೀಸ್‌ ಕುರಿತು. ಹೀಗಾಗಿ ದಲಿತ್‌ ಹ್ಯೂಮನ್‌ ರೈಟ್ಸ್‌ ಬಗ್ಗೆ ಫೋಕಸ್‌ ಮಾಡಿ, ಇಂಡಿಯಾ ನೇಪಾಳ ಎರಡೂ ದೇಶಗಳು ಕ್ಯಾಸ್ಟ್‌ನ್ನು ಹೇಗೆ ಗ್ಲೋಬಲ್‌ ಪ್ಲಾಟ್‌ಫಾರ್ಮ್‌ ನಲ್ಲಿ ಅಡ್ರೆಸ್‌ ಮಾಡಿದಾರೆ ಅನ್ನೋದರ ಬಗ್ಗೆ <a>ಕಂಪೇರಿಟೀವ್‌</a> ಸ್ಟಡಿ ಮಾಡಿದಿನಿ.</p>



<p><strong>ಪೀಪಲ್‌ ಮೀಡಿಯಾ:</strong> ರೇಸಿಸಂ ಅಂತ ಹೇಳ್ದಾಗ ಈ ಹಿಂದೆ ಇಂಡಿಯಾದಲ್ಲಿರುವ ಅಸ್ಪೃಶ್ಯತೆ, ಕ್ಯಾಸ್ಟಿಸಂ ʼಈಸ್‌ ಇಟ್‌ ಎ ಫಾರ್ಮ್‌ ಆಫ್‌ ರೇಸಿಸಂ? ಎಂಬ ಪ್ರಶ್ನೆಯ ಸುತ್ತ ಚರ್ಚೆಗಳು ನಡೆದಿವೆ.&nbsp; ಈ ಹಿಂದೆ ವಾಜಪೇಯಿ ಸರ್ಕಾರ ಇದ್ದಾಗ 2002ರಲ್ಲಿ ಡರ್ಬನ್‌ನಲ್ಲಿ ಒಂದು ಕನ್ವೆನ್ಶನ್‌ ನಡೆದಾಗ ಭಾರತ ಸರ್ಕಾರದ ನಿಲುವು ಕ್ಯಾಸ್ಟಿಸಂ ಅನ್ನೋದು ರೇಸಿಸಂ ಅಲ್ಲ ಅನ್ನೋ ರೀತಿಲಿ ಇತ್ತು. ಸೋ ಇದನ್ನು ನಾವು ಅಂದ್ರೆ ಭಾರತದ ಜಾತಿ ವ್ಯವಸ್ಥೆಯನ್ನು ಅಲ್ಲಿ ರೇಸಿಸಂ ಚೌಕಟ್ಟಿನಲ್ಲಿ ತರಲು ಸಾಧ್ಯವೇ? ಈ ಕುರಿತು ನಿಮ್ಮ ಅಭಿಪ್ರಾಯ?&nbsp;&nbsp;</p>


<div class="wp-block-image">
<figure class="alignleft size-full is-resized"><img decoding="async" src="https://peepalmedia.com/wp-content/uploads/2022/10/WhatsApp-Image-2022-10-19-at-4.45.24-PM.jpeg" alt="" class="wp-image-11962" width="285" height="284" srcset="https://peepalmedia.com/wp-content/uploads/2022/10/WhatsApp-Image-2022-10-19-at-4.45.24-PM-150x150.jpeg 150w, https://peepalmedia.com/wp-content/uploads/2022/10/WhatsApp-Image-2022-10-19-at-4.45.24-PM-24x24.jpeg 24w, https://peepalmedia.com/wp-content/uploads/2022/10/WhatsApp-Image-2022-10-19-at-4.45.24-PM-48x48.jpeg 48w, https://peepalmedia.com/wp-content/uploads/2022/10/WhatsApp-Image-2022-10-19-at-4.45.24-PM-96x96.jpeg 96w, https://peepalmedia.com/wp-content/uploads/2022/10/WhatsApp-Image-2022-10-19-at-4.45.24-PM-300x300.jpeg 300w" sizes="(max-width: 285px) 100vw, 285px" /><figcaption><strong>ಡಾ.ಕೆ.ಪಿ.ಅಶ್ವಿನಿ</strong></figcaption></figure></div>


<p><strong>ಡಾ.ಕೆ.ಪಿ.ಅಶ್ವಿನಿ:</strong>&nbsp; ಇದು ತುಂಬಾ ಟ್ರಿಕ್ಕಿ ಪ್ರಶ್ನೆ. ನಿಜಾ ಅಂದ್ರೆ&nbsp; ಸುಮಾರು 30 ವರ್ಷಗಳಿಂದ ಗ್ಲೋಬಲ್‌ ಪ್ಲಾಟ್‌ಫಾರ್ಮ್ ನಲ್ಲಿ ಕ್ಯಾಸ್ಟ್‌, ರೇಸ್‌ ಬಗ್ಗೆ ತುಂಬಾ ಡಿಬೇಟ್ಸ್‌ ನಡೆದಿದೆ. ಅದರಲ್ಲೂ ಡರ್ಬನ್‌ ಕಾನ್ಫ್‌ರೆನ್ಸ್ ಆದಮೇಲೆ ಕ್ಯಾಸ್ಟ್‌ ಮೇಲೆ ಬಹಳ ಫೋಕಸ್‌ ಮಾಡಿದಾರೆ. ದಲಿತ್‌ ಆಕ್ಟಿವಿಸ್ಟ್‌ ಆಗ್ಲಿ, ಅಕಾಡೆಮಿಕ್ಸ್‌ ಆಗ್ಲಿ, ಸರ್ಕಾರದ ಪ್ರತಿನಿಧಿಗಳಾಗಲೀ ಗಂಭೀರವಾಗಿ ಪರಿಗಣಿಸಿದ್ದಾರೆ. ಸರ್ಕಾರ ಕೂಡಾ ಇದನ್ನು ಗಂಭೀರ ವಿಷಯ ಎಂದು ಪರಿಗಣಿಸಿದೆ. ಇದೊಂದು, ಮೇಜರ್‌ ಕನ್ಸರ್ನ್‌, ಇದನ್ನು ನಾವು ಪರಿಣಾಮಕಾರಿಯಾಗಿ ಅಡ್ರೆಸ್‌ ಮಾಡಬೇಕು. UN ಅಲ್ಲಿ ಒಂದು ಕನ್ವೆನ್ಶನ್‌ ಇದೆ- ಎಲಿಮಿನೇಶನ್‌ ಆಫ್‌ ರೇಶಿಯಲ್‌ ಡಿಸ್ಕ್ರಿಮಿನೇಶನ್‌ ಅಂತ. ಇದರಲ್ಲಿ ಬೇರೆ ಬೇರೆ ಅಂಶಗಳನ್ನು ಸೇರಿಸಿದ್ದಾರೆ. ರೇಸ್‌,&nbsp; ಕ್ಸೆನೋಫೋಬಿಯಾ ಅದರಲ್ಲಿ ಡಿಸೆಂಟ್‌ (ಕುಲಮೂಲ) ಮತ್ತು ಉದ್ಯೋಗಾಧಾರಿತ ತಾರತಮ್ಯ ಹೇಗೆ ಎಂದು ನೋಡಲಾಗುತ್ತದೆ.&nbsp; ಭಾಗಶಃವಾಗಿ ನೋಡಿದರೆ ಜಾತಿ ಅನ್ನೋದು ಹುಟ್ಟಿನಿಂದ ಬರುವ ಮತ್ತು ಉದ್ಯೋಗಾಧಾರಿತ ತಾರತಮ್ಯ. ಆದರೆ ಬಹಳ ಮಂದಿ ದಲಿತ್‌ ಆಕ್ಟಿವಿಸ್ಟ್‌, ಅಕಾಡೆಮಿಶಿಯನ್ಸ್‌, ಪ್ರೊಗ್ರೆಸ್ಸೀವ್‌ ಲಿಬರಲ್ಸ್‌ ಅಭಿಪ್ರಾಯದಲ್ಲಿ ಜಾತಿ ಎಂದೇ ಸ್ಪಷ್ಟವಾಗಿ ಹೇಳುವುದರಿಂದ ಅದನ್ನ ಪರಿಣಾಮಕಾರಿಯಾಗಿ ಅಡ್ರೆಸ್‌ ಮಾಡಬಹುದು. ಯಾಕೆಂದರೆ ಈಗ ಕ್ಯಾಸ್ಟ್‌ ಎಂಬುದು ಇಂಡಿಯಾ, ಸೌತ್‌ ಏಷ್ಯಾಗೆ ಸೀಮಿತವಾದುದಲ್ಲ. ಬದಲಿಗೆ ಅದೊಂದು ಗ್ಲೋಬಲ್‌ ಫಿನಾಮಿನಾನ್‌ ಆಗಿದೆ ಅಂತ. ನನಗಿಂತ ಮುಂಚೆ ಇದ್ದ ರಾಪೋರ್ಟರ್ ಕೂಡಾ ತಮ್ಮ ವರದಿಯಲ್ಲಿ ಜಾತಿ ಕುರಿತು ತಿಳಿಸಿದ್ದಾರೆ. ಯಾರೂ ಗುರುತಿಸುತ್ತಿಲ್ಲ ಎಂದಲ್ಲ. ಕ್ಯಾಸ್ಟ್‌ ಈಸ್‌ ಎ ಗ್ಲೋಬಲ್‌ ಫಿನಾಮೆನಾನ್‌;&nbsp; ಇಟ್‌ ಶುಡ್‌ ಬಿ ಅಡ್ರೆಸ್ಡ್‌&nbsp; ಅಂಡ್‌ ಯುನೈಟೆಡ್‌ ನೇಶನ್ಸ್‌ನಲ್ಲಾಗಲೀ ಬೇರೆ ಸಿವಿಲ್‌ ಸೊಸೈಟಿ ಗುಂಪುಗಳಲ್ಲಾಗಲೀ ಈ ಬಗ್ಗೆ ಮಾತನಾಡಿದಾರೆ. ಆದರೆ ಅಕಾಡೆಮಿಕ್‌ ನರೆಟಿವ್‌ ಏನು ಎಂದರೆ ಜಾತಿ ಅಸ್ಪೃಶ್ಯತೆಗಳು ರೇಸಿಸಂಗಿಂತಲೂ ಕೆಟ್ಟದ್ದು ಅಂತ.&nbsp; ಸ್ಪಲ್ಪ ಅಕಾಡೆಮಿಶಿಯನ್ಸ್‌ ಮತ್ತು ಆಕ್ಟಿವಿಸ್ಟ್‌ ದೃಷ್ಟಿಕೋನ ಅದು. ಆದರೆ ಈಗ ಈ ವಿಷಯ ನೋಡುವುದರಲ್ಲಿ ಬದಲಾವಣೆಯಾಗಿದೆ. ಇಂದು ಜಾತಿ ತಾರತಮ್ಯದ ವಿಷಯವನ್ನು ಅಧಿಕೃತವಾಗಿಯೇ ಗುರುತಿಸುವ ಕೆಲಸ ಕೂಡಾ ಆಗುತ್ತಿದೆ.&nbsp;</p>



<p><strong>ಪೀಪಲ್‌ ಮೀಡಿಯಾ:</strong> ಇಂಡಿಯಾ ಅಂದರೆ ದೊಡ್ಡ ಕಲ್ಚರ್‌ ಅಂತಾ ಹೇಳ್ತಾ ಭಾರತದ ಸಮಸ್ಯೆಗಳಾದ ಕ್ಯಾಸ್ಟ್‌, ರೇಸಿಸಂ ಈ ರೀತಿಯದನ್ನು ಮುಚ್ಚಿಡುವ ಪ್ರಯತ್ನಗಳು ನಡಿತಾ ಇವೆ. ಬಹುಶಃ ಈಗ, ನೀವು ಇಂಡಿಯಾದಿಂದ ಈ ಸಮಸ್ಯೆ ಬಗ್ಗೆ ಮಾತಾಡ್ಲಿಕ್ಕೆ ಹೋಗ್ತಿದಿರಾ, ಭಾರತದ ಸಮಸ್ಯೆಯನ್ನು ಹೊರಗಡೆ ನೀವು ಮಾತಾನಾಡೋದಕ್ಕೆ ಅಥವಾ ರೆಪ್ರಸೆಂಟ್‌ ಮಾಡೋದಿಕ್ಕೆ&nbsp; ಹೊರಟಿದ್ದಿರಾ. ಇದನ್ನು ಎಲ್ಲರೂ ಸಕಾರಾತ್ಮಕವಾಗಿ ಸ್ವೀಕರಿಸುತ್ತಾರೆ ಎಂದು ನಿಮಗೆ ಅನಿಸಿದೆಯಾ?</p>



<p><strong>ಡಾ.ಕೆ.ಪಿ.ಅಶ್ವಿನಿ:</strong> ನಾನು ಇಂಡಿಯಾ ರೆಪ್ರೆಸೆಂಟ್‌ ಮಾಡಲ್ಲ . ನಾನು ಒಬ್ಬ ಸ್ವತಂತ್ರ ಪರಿಣತಳಾಗಿರುತ್ತೇನೆ. ನಾನು ವಿಶ್ವಸಂಸ್ಥೆಯನ್ನೂ ಪ್ರತಿನಿಧಿಸುವುದಿಲ್ಲ. ಒಬ್ಬ ಸ್ವತಂತ್ರ ತಜ್ಞೆಯಾಗಿ ವಿಶ್ವಸಂಸ್ಥೆಯ ಮಿತಿಗಳನ್ನು ಸಹ ಹೈಲೆಟ್‌ ಮಾಡಿ ಹೇಳಬಹುದು. ನನ್ನ ಮ್ಯಾಂಡೇಟ್‌ ಅಲ್ಲಿ ಏನ್‌ ಬರುತ್ತೆ ಅಂದ್ರೆ ಮುಖ್ಯವಾಗಿ ವರ್ಣಬೇಧ, ರೇಸಿಸಂ, ರೇಶಿಯಲ್‌ ಡಿಸ್ಕ್ರಿಮಿನೇಶನ್‌, ಕ್ಸೆನೋಫೋಬಿಯಾಗಳಿರುತ್ತವೆ. ಇದನ್ನು ಜಾತಿ ತಾರತಮ್ಯಕ್ಕೂ ವಿಸ್ತರಿಸಬಹುದು. ನಾನು ಪಿಎಚ್ ಡಿ ಮಾಡುವಾಗ ವಿಶ್ವಸಂಸ್ಥೆಯ ರಾಯಭಾರಿಯೊಬ್ಬರು ಈ ವಿಷಯವನ್ನು ಅಲ್ಲಿ ಗುರುತಿಸಿ ಹೇಳಿರುವ ಕುರಿತು ಓದಿದ್ದೆ. ದಲಿತರು ಹೇಗೆ ತಾರತಮ್ಯಕ್ಕೊಳಗಾಗುತ್ತಾರೆ ಎಂಬ ಸಂಗತಿಗಳನ್ನು ಅವರು ದಾಖಲಿಸಿದ್ದರು. ಅದೇ ರೀತಿ ಅದನ್ನು ಹೈಲೈಟ್‌ ಮಾಡಿ ಜನಾಂಗೀಯ ತಾರತಮ್ಯ ಎಷ್ಟು ಮುಖ್ಯವಾದದ್ದು ಎಂದು ತಿಳಿಸುವ ರೀತಿಯಲ್ಲಿ ಭಾರತದ ಪ್ರತಿನಿಧಿಗಳು ಪ್ರೊಆಕ್ಟೀವ್‌ ಆಗಿ ಇನ್ವಾಲ್ವ್‌ ಅಗಿದಾರೆ. ಈಗಿರೋ ಟೆಕ್ನಾಲಾಜಿಕಲ್‌ ಅಡ್ವಾನ್ಸ್‌ಮೆಂಟ್‌ನಲ್ಲಿ ಯಾವ ಮೂಲೇಲಿ ಏನು ನಡೆಯುತ್ತೆ ಅಂತ ಎಲ್ಲರಿಗೂ ಗೊತ್ತಾಗುತ್ತೆ. ಅದನ್ನು ಎಷ್ಟು ಮುಚ್ಚಿಟ್ಟರೂ ಮುಚ್ಚಿಡೋ ಅಂತ ಸ್ಥಿತಿ ಇಲ್ಲ ಈಗ. ಎಲ್ಲರೂ ಮಾತಾಡ್ತಾರೆ. ಮಾತಾಡ್ಲೇ ಬೇಕಾಗಿದೆ ಈಗ.&nbsp;&nbsp;</p>



<p><strong>ಪೀಪಲ್‌ ಮೀಡಿಯಾ:</strong> ಕ್ಸೆನೋಪೋಭಿಯಾದ ಬಗ್ಗೆ ಹೇಳಿದ್ರಿ, ಒಂದು ದೇಶದವರು ಮತ್ತೊಂದು ದೇಶದವರ ಮೇಲೆ ತೋರುವ ದ್ವೇಷ-&nbsp; ಇದರ ಬಗ್ಗೆ ನಿಮ್ಮ ಅನಿಸಿಕೆ ಏನು ? ಇದು ಬೇರೆ ಕಡೆಗಳಲೆಲ್ಲಾ ಹೇಗಿದೆ?&nbsp;</p>



<p><strong>ಡಾ.ಕೆ.ಪಿ.ಅಶ್ವಿನಿ:</strong> ಹೆಚ್ಚಾಗಿ ಡಯಾಸ್ಪೋರಾ ಕಮ್ಯೂನಿಟಿ, ಅನಿವಾಸಿ ಪ್ರಜೆಗಳು ಇರುವ ಕಡೆ ಇದನ್ನು ಕಾಣುತ್ತೇವೆ. ತುಂಬಾ ಕಡೆ ಏಷಿಯನ್ನರನ್ನು ತಾರತಮ್ಯದಿಂದ ನೋಡಲಾಗತ್ತೆ.&nbsp; ಯುರೋಪ್‌ನಲ್ಲಾಗಲೀ, ನಾರ್ತ್‌ ಅಮೇರಿಕಾದಲ್ಲಾಗಲಿ ಏಷಿಯನ್ಸ್‌ ನ ಡಿಸ್ಕ್ರಿಮಿನೇಟ್‌ ಮಾಡೋದೊಂದು ರೀತಿ ಜನಾಂಗೀಯ ತಾರತಮ್ಯದ ರೀತಿ. ನನ್ನ ಮ್ಯಾಂಡೇಟ್‌ ನಲ್ಲಿ ಅದು ಒಂದು ಭಾಗ. ಹೇಗೆ ಮುಸ್ಲಿಂ ಸಮುದಾಯಗಳು, ಅಲ್ಪಸಂಖ್ಯಾತ ಸಮುದಾಯಗಳು ತಾರತಮ್ಯಕ್ಕೆ ಒಳಗಾಗುತ್ತವೆ ಎಂದು ನೋಡುವುದು.&nbsp; ನನಗಿಂತ ಮೊದಲಿದ್ದ ಸ್ಪೆಶಲ್ ರಾಪೋರ್ಟರ್ ಮಾಡಿದ್ದ ಒಂದು ವರದಿಯಲ್ಲಿ ಹೇಗೆ ವಲಸಿತ ಸಮುದಾಯಗಳ ಮೇಲೆ ತಾರತಮ್ಯ ಎಸಗಲಾಗಿದೆ ಎಂದು ತಿಳಿಸಿದ್ದರು. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಲಸೆ ಹೋಗಿ ಜೀವನಾವಕಾಶಗಳನ್ನು ಹುಡುಕುವ ಸಮುದಾಯಗಳಿರುತ್ತವೆ. ಇಂತಹ ವಲಸಿಗರನ್ನು ಬೇರೆ ರೀತಿಯಾಗಿ ನೋಡುವುದು ಕೂಡಾ ಜನಾಂಗೀಯ ತಾರತಮ್ಯದ ಒಂದು ರೀತಿ. ಇದು ತುಂಬಾ ಮುಖ್ಯ . ಈಗ ಓದೋದಿಕ್ಕೆ ಅಂತ ತುಂಬಾ ಜನ ಹೋಗ್ತಾರೆ. ಭಾರತೀಯ ವಿದ್ಯಾರ್ಥಿಗಳು ಎಲ್ಲಾ ಕಡೆ ಇದ್ದಾರೆ. ಅವರಿಗೆ ಈ ಜನಾಂಗೀಯ ತಾರತಮ್ಯ ಅನುಭವಕ್ಕೆ ಬಂದಿರುತ್ತದೆ. ಜೊತೆಗೆ ಉದ್ಯೋಗಕ್ಕಾಗಿ ತುಂಬಾ ಜನ ಭಾರತೀಯರು ಹೊರದೇಶಗಳಲ್ಲಿದ್ದಾರೆ. ಅಮೆರಿಕ ಮತ್ತು ಎಲ್ಲಾ ದೇಶಗಳಲ್ಲಿ. ನೀವು ವೆಸ್ಟ್‌ ಏಷಿಯನ್‌ ದೇಶಗಳಲ್ಲಿ ನೋಡಿದರೆ ಅಲ್ಲಿರುವುದು ವೈಟ್‌ ಕಾಲರ್‌ ಜಾಬ್ಸ್‌ ಅಲ್ಲ. ಬ್ಲೂ ಕಾಲರ್‌ ಜಾಬ್ಸ್‌, ಲೇಬರ್ಸ್‌ ಕಾಲರ್‌ ಅಲ್ಲಿಯೂ ಇದೆ.&nbsp; ಅವರೆಲ್ಲಾ ಯಾವ ರೀತಿ ಡಿಸ್ಕ್ರಿಮಿನೇಟ್‌ ಮಾಡ್ತಾರೆ ಅನ್ನೋದರ ಬಗ್ಗೆ ಫೋಕಸ್‌ ಮಾಡಬಹುದು.</p>



<figure class="wp-block-image size-full"><img decoding="async" width="747" height="414" src="https://peepalmedia.com/wp-content/uploads/2022/10/Annotation-2022-10-19-165111.jpg" alt="" class="wp-image-11963" srcset="https://peepalmedia.com/wp-content/uploads/2022/10/Annotation-2022-10-19-165111.jpg 747w, https://peepalmedia.com/wp-content/uploads/2022/10/Annotation-2022-10-19-165111-300x166.jpg 300w, https://peepalmedia.com/wp-content/uploads/2022/10/Annotation-2022-10-19-165111-150x83.jpg 150w, https://peepalmedia.com/wp-content/uploads/2022/10/Annotation-2022-10-19-165111-696x386.jpg 696w" sizes="(max-width: 747px) 100vw, 747px" /></figure>



<p><strong>ಪೀಪಲ್‌ ಮೀಡಿಯಾ:</strong> ಕೆಲವು ಬಾರಿ ನಮ್ಮ ದೇಶದಲ್ಲೇ, ನಮ್ಮ ದೇಶದ ಒಂದು ಭಾಗದವರ ತಾರತಮ್ಯ ಆಗುತ್ತೆ. ಉದಾಹರಣೆಗೆ ಈಗ ಈಶಾನ್ಯ ಭಾರತದ ಮಣಿಪುರದಂತಹ ಕಡೆಗಳಿಂದ ಬರುವ ಜನರನ್ನು ಚೈನೀಸ್‌ ನೇಪಾಳೀಸ್‌ ಅಂತ ಟ್ರೀಟ್‌ ಮಾಡ್ತಾರೆ. ಅದೂ ಕೂಡ ಬರುತ್ತಾ ಇದರಲ್ಲಿ?</p>



<p><strong>&nbsp;</strong><strong>ಡಾ.ಕೆ.ಪಿ.ಅಶ್ವಿನಿ </strong>ಖಂಡಿತಾ. ಅದೂ ಸಹ ಸೇರಿಕೊಳ್ಳುತ್ತದೆ. ಅದೇ ರೇಸಿಸಂ. ನೀವು ಅವರನ್ನು ಒಂದು ರೀತಿ &nbsp;ಕಾಣ್ತೀರಾ ಅನ್ನುವ ಕಾರಣದಿಂದ &nbsp;ಅದು ಇದರಲ್ಲಿ ಸೇರುತ್ತೆ.&nbsp;</p>



<p><strong>ಪೀಪಲ್‌ ಮೀಡಿಯಾ:</strong> ನಿಮಗೆ ಈ ರೀತಿಯ ವಿಷಯಗಳು ಮುಖ್ಯ ಅನ್ನಿಸಲು ಮತ್ತು ನಿಮ್ಮ ಪಿಎಚ್‌ಡಿ ಅಧ್ಯಯನದಲ್ಲೂ ಇಂತಹ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು?</p>



<p><strong>ಡಾ.ಕೆ.ಪಿ.ಅಶ್ವಿನಿ:</strong> ನನಗೆ ಚಿಕ್ಕವಳಿಂದ ಸ್ವಲ್ಪ ದಲಿತ್‌ ಮೂವ್ ಮೆಂಟ್‌ ಬಗ್ಗೆ ಓರಿಯೆಂಟೇಶನ್‌ ಮನೆಯಿಂದಲೇ ಸಿಕ್ಕಿದೆ. ನನ್ನ ಪೇರೆಂಟ್ಸ್‌ನ ಅಕಾಡೆಮಿಕ್‌ ಓರಿಯೆಂಟೇಶನ್‌ ನಂಗೆ ಬಹಳ&nbsp; ಸಿಕ್ಕಿದೆ. ಎಸ್ಪೆಶಲಿ ಆಂಟಿ ಕಾಸ್ಟ್ ಮೂವ್‌ಮೆಂಟ್‌ ವಿಷಯದಲ್ಲಿ. ಅಂಬೇಡ್ಕರೈಟ್‌ ಐಡಿಯಾಲಜಿ, ಫಿಲಾಸಫಿ ವಿಷಯಗಳಲ್ಲಿ. ಚಿಕ್ಕವಳಾಗಿದ್ದಾಗಿಂದಲೂ ಈ ರೀತಿಯ ಸೋಶಿಯಲ್‌ ಇಶ್ಯೂ, ಪೊಲಿಟಿಕಲ್‌ ಇಶ್ಯೂ ಬಗ್ಗೆ ಓದೋದಿಕ್ಕೆ ಬಹಳ ಆಸಕ್ತಿ ಇತ್ತು. ನಾನು&nbsp; ಮಾಸ್ಟರ್ಸ್‌ ಥೀಸೀಸ್‌ ಮಾಡಿದಾಗ ಸೈಂಟ್&nbsp; ಜೋಸೆಫ್‌ ಕಾಲೇಜಿನಲ್ಲಿ ಕ್ಯಾಸ್ಟ್‌ ಅಂಡ್‌ ಲ್ಯಾಂಡ್‌ ರಿಫಾರ್ಮ್ಸ್‌ ಬಗ್ಗೆ ಮಾಡಿದ್ದೆ. ಸೋ ಅದರಲ್ಲಿ ಜಾತಿ ತಾರತಮ್ಯದ ವಿಷಯವನ್ನು ನನ್ನ ಅಕಾಡೆಮಿಕ್‌ ಅಧ್ಯಯನ ಮತ್ತು ಆಕ್ಟಿವಿಸಂನಲ್ಲಿ ಸೇರಿಸಿಕೊಳ್ಳಲು ಪ್ರಯತ್ನ ಮಾಡಿದ್ದೆ.&nbsp; ನಮ್ಮ ಫ್ಯಾಮಿಲಿ ಫ್ರೆಂಡ್ಸ್‌ ತುಂಬಾ ಜನ ದಲಿತ್‌ ಆಕ್ಟಿವಿಸಂ ನಲ್ಲಿದಾರೆ. ಆರ್ಗನೈಸೇಶನ್ಸ್‌ ಇದೆ. ಸೋ ನಾನು ವಾಲೆಂಟ್ರಿ ಮಾಡ್ತಿನಿ. ಹೀಗಾಗಿ ನನಗೆ ಒಂದು ನಿಜವಾದ ಕನ್ವಿಕ್ಷನ್‌ ಇತ್ತು. ಜೊತೆಗೆ ದಮನಿತ ಸಮುದಾಯದಿಂದ ಬಂದಿರೋದ್ರಿಂದ ಒಂದು ಅನುಭವ ಇರುತ್ತದೆ. ಈಗ ನೀವೊಂದು ಶೋಷಿತ ವರ್ಗದಿಂದ ಬಂದಿರ್ತೀರಾ ಅಂದ್ರೆ ಅಥವಾ ನೀವು ಒಂದು ಎಜುಕೇಟೆಡ್‌, ಅಪ್ಪರ್‌ ಮಿಡಲ್‌ ಕ್ಲಾಸ್‌ ಫ್ಯಾಮಿಲಿಯಿಂದ&nbsp; ಬಂದ್ರೂ ಎಲ್ಲೋ ಒಂದು ಕಡೆ ನಿಮ್ಮನ್ನ ಟಾಂಟ್‌ ಮಾಡ್ತಾರೆ. ʼಓ ರಿಸರ್ವೇಶನ್‌ʼ ಅಂತ ಮಾತನಾಡಬಹುದು. ಮೆರಿಟ್‌ ಅಂತ ಮಾತನಾಡಬಹುದು. ಇಂತದನ್ನೆಲ್ಲಾ ನೋಡಿ ನನಗೆ, ಇಟ್ಸ್‌ ಇಂಪಾರ್ಟೆಂಟ್‌ ಟು ಸ್ಪೀಕ್‌ ಅಬೌಟ್‌ ದೀಸ್‌ ಇಶ್ಯೂಸ್‌ ಅನಿಸಿತು. ಅದರಲ್ಲೂ ಒಂದು ಎಜುಕೇಟೆಡ್‌ ಫ್ಯಾಮಿಲಿಯಿಂದ ಬಂದಾಗ, ಒಂದು ಬ್ಯಾಕಪ್‌ ಇದ್ದಾಗ, ಒಂದು ಸೋಶಿಯಲ್‌ ಕ್ಯಾಪಿಟಲ್‌ ಇದ್ದಾಗ ಕಮ್ಯೂನಿಟಿಯಲ್ಲಿ ಇರೋರಿಗೆ ಅಸರ್ಟೀವ್‌ ಆಗಿ ಮಾತಾಡುವ ಅವಶ್ಯಕತೆ ಇದೆ ಅಂತ ಅನಿಸಿತು. ಅಂಡ್‌ ಐ ಟೇಕ್‌ ಇನ್ಸ್ಪಿರೇಶನ್‌ ಬೈ ಬಾಬಾಸಾಹೇಬ್ಸ್‌ ಫಿಲಾಸಫಿ. (ಬಾಬಾಸಾಹೇಬರ ತತ್ವಸಿದ್ಧಾಂತದಿಂದ ನಾನು ಪ್ರೇರಣೆ ಸ್ಪೂರ್ತಿ ಪಡೆಯುತ್ತೇನೆ)</p>



<figure class="wp-block-image size-full"><img loading="lazy" decoding="async" width="781" height="404" src="https://peepalmedia.com/wp-content/uploads/2022/10/Annotation-2022-10-19-164838.jpg" alt="" class="wp-image-11964" srcset="https://peepalmedia.com/wp-content/uploads/2022/10/Annotation-2022-10-19-164838.jpg 781w, https://peepalmedia.com/wp-content/uploads/2022/10/Annotation-2022-10-19-164838-300x155.jpg 300w, https://peepalmedia.com/wp-content/uploads/2022/10/Annotation-2022-10-19-164838-768x397.jpg 768w, https://peepalmedia.com/wp-content/uploads/2022/10/Annotation-2022-10-19-164838-150x78.jpg 150w, https://peepalmedia.com/wp-content/uploads/2022/10/Annotation-2022-10-19-164838-696x360.jpg 696w" sizes="auto, (max-width: 781px) 100vw, 781px" /></figure>



<p><strong>ಪೀಪಲ್‌ ಮೀಡಿಯಾ:</strong> ನಿಮ್ಮ ರೀತಿ ಯೋಚನೆ ಮಾಡೋರು ತುಂಬಾ ಕಡಿಮೆ ಇದಾರೆ. ಸಾಮಾನ್ಯವಾಗಿ ದಲಿತ ಮತ್ತಿತರ ತುಳಿತಕ್ಕೊಳಗಾದ ಸಮುದಾಯಗಳಿಗೆ ಹೊರಗಡೆ ತಮ್ಮ ಬಗ್ಗೆ, ತಮ್ಮ ಜಾತಿಯ ಬಗ್ಗೆ ಹೇಳಿಕೊಳ್ಳೋದಿಕ್ಕೆ ಹಿಂಜರಿಕೆ ಇರುತ್ತೆ. ಅಥವಾ ಅವರಲ್ಲಿ ಕೀಳರಿಮೆ ಇರಬಹುದು. ಈ ರೀತಿಯ ಸಮಸ್ಯೆಯನ್ನು ನೀವು ಹೇಗೆ ನೋಡ್ತಿರಾ?</p>



<p><strong>ಡಾ.ಕೆ.ಪಿ.ಅಶ್ವಿನಿ:</strong>&nbsp; &nbsp;ಈ ಪ್ರಶ್ನೆಯನ್ನು ತುಂಬಾ ಜನ ಕೇಳ್ತಾರೆ. ನಾನು ವಿದ್ಯಾರ್ಥಿಯಾಗಿದ್ದಾಗ, ಫ್ಯಾಕಲ್ಟಿಯಾಗಿ ಪಾಠ ಮಾಡುವಾಗ, ಯೂನಿವರ್ಸಿಟಿಯಲ್ಲಿರುವಾಗ ಈ ಪ್ರಶ್ನೆ ಬಂದಿದೆ. ಕೆಲವರಿಗೆ ಸೋಶಿಯಲ್‌ ಕ್ಯಾಪಿಟಲ್‌ ಇರುತ್ತೆ. ಈಗ ನನಗೆ ಒಂದು ಸರ್ಟನ್‌ ಪ್ರಿವಿಲೈಜ್ಡ್‌ ಸೋಶಿಯಲ್‌ ಕ್ಯಾಪಿಟಲ್‌ ಇದೆ. ಧೈರ್ಯವಾಗಿ, ಅಸರ್ಟೀವ್‌ ಆಗಿ ಮಾತಾಡುವ ಸ್ಪೇಸ್‌ ಇದೆ. ನಂಗೆ ಆ ಓರಿಯೆಂಟೇಶನ್‌ ಸಿಕ್ಕಿದೆ. ನಾನು ಅದಕ್ಕೆ ತುಂಬಾ ಲಕ್ಕಿ. ನಾನು ಯಾವತ್ತೂ ನನ್ನ ಐಡೆಂಟಿಟಿಯನ್ನು ಹೇಳ್ಕೋಳೋದ್ರಲ್ಲಿ ಹಿಂಜರಿದಿಲ್ಲ. ಆದರೆ ಆದೇ ವೇಳೆಗೆ ನಾನು ಎಲ್ಲರಿಗೂ ನೀವು ಐಡೆಂಟಿಟಿಯನ್ನ ಹೇಳಿಕೊಳ್ಳಿ ಎಂದೂ ಹೇಳೋಕಾಗಲ್ಲ ಅನ್ನೋದನ್ನೂ ಗುರುತಿಸಿಕೊಂಡಿದ್ದೇನೆ. ಕೆಲವರು ಹಣಕಾಸು ಸ್ಥಿತಿ, ಸಾಮಾಜಿಕ ಸ್ಥಿತಿಗತಿ ಇತ್ಯಾದಿ ಕಾರಣದಿಂದ ತಮ್ಮ ಜಾತಿ ಬಗ್ಗೆ ಹೇಳ್ಕೊಳೋಕೆ ಆಗದೇ ಇರಬಹುದು. ನಾನು ಅವರನ್ನು ದೂರುವುದಿಲ್ಲ. ಇದಕ್ಕೆ ಕೀಳರಿಮೆ ಅಂತ ಹೇಳುವುದಕ್ಕಿಂತಲೂ ಅವರು ಹೇಳ್ಕೊಂಡಾಗ ಒಂದು ಪ್ರಿವಿಲೈಜ್ಡ್‌ ಕಮ್ಯೂನಿಟಿಯಿಂದ ಬರುವಂತಹ ಪ್ರತಿಕ್ರಿಯೆಗಳಿಗೆ ಅಂಜಿ ಅವರು ಹೇಳಿಕೊಳ್ಳದೇ ಇರಬಹುದು. ಆದರೆ ನಾನು ಯಾವಾಗಲೂ ಹೇಳುವುದೇನೆಂದರೆ ಅಕಡೆಮಿಕ್ಸ್‌ನಲ್ಲಿ, ಬ್ಯೂರೋಕ್ರಸಿಯಲ್ಲಿ ಅಥವಾ ರಾಜಕಾರಣದಲ್ಲಿ ಇರುವ ಎಜುಕೇಟೆಡ್‌ ಕ್ಲಾಸ್‌ ಧೈರ್ಯದಿಂದ ತಮ್ಮ ಐಡೆಂಟಿಟಿಯನ್ನು ಅಸರ್ಟೀವ್‌ ಆಗಿ ಹೇಳ್ಕೊಳ್ಳಬಹುದು. ಅವರು ಅಂಬೇಡ್ಕರ್‌ವಾದದ ಬಗ್ಗೆ , ಬಾಬಾಸಾಹೇಬರ ಫಿಲಾಸಫಿ ಬಗ್ಗೆ, ತಮ್ಮ ಐಡೆಂಟಿಟಿ ಬಗ್ಗೆ ಹೇಳ್ಕೊಬಹುದು. ಸೋ ಐ ಫೀಲ್‌ ದಟ್‌ ಎಜುಕೇಟೆಡ್‌ ಕ್ಲಾಸ್‌ ಅಟ್ಲೀಸ್ಟ್‌ ಶುಡ್‌ ಬಿ ಅಸರ್ಟೀವ್.&nbsp;</p>



<p><strong>ಪೀಪಲ್‌ ಮೀಡಿಯಾ:</strong> ಇತ್ತೀಚೆಗೆ 15-20 ವರ್ಷಗಳಿಂದ ನಾವು ಅಂಬೇಡ್ಕರ್‌ ಬಗ್ಗೆ ಹೆಚ್ಚು ಮಾತಾಡ್ತಾ ಇದೀವಿ. ನಿಮಗೆ ಅಂಬೇಡ್ಕರ್‌ ಚಿಂತನೆ&nbsp; ಯಾವ ರೀತಿ ಪ್ರೇರಣೆ ನೀಡಿದೆ ಅಥವಾ ಇಂದು ಅಂಬೇಡ್ಕರ್ ಅವರ ಪಾತ್ರ ಏನು?&nbsp;</p>



<p><strong>ಡಾ.ಕೆ.ಪಿ.ಅಶ್ವಿನಿ:</strong>&nbsp; ಬಾಬಾಸಾಹೇಬ್‌ ಅಂಬೇಡ್ಕರ್‌&nbsp; ಅವರನ್ನು ನಾನು ಒಬ್ಬ ಆದರ್ಶ ವ್ಯಕ್ತಿಯಾಗಿ ನೋಡುತ್ತೇನೆ.&nbsp; ಯಾಕಂದ್ರೆ ನಾನು ಚಿಕ್ಕವಳಿದ್ದಾಗಿನಿಂದಲೂ ಮನೇಲಿ ಬಾಬಾಸಾಹೇಬರ ಕಥೆಗಳನ್ನು ಕೇಳಿಕೊಂಡು ಬೆಳೆದಿರೋದು. ಅದು ಯಾವ ರೀತಿ ನನ್ನ ಮೇಲೆ ಪ್ರಭಾವ ಆಗಿದೆ&nbsp; ಅಂದ್ರೆ, ಇಟ್ಸ್‌&nbsp; ರಿಯಲಿ ಇಂಪಾರ್ಟೆಂಟ್‌ ಲೈಕ್‌… ಯು ಕೆನಾಟ್ ಡಿಸ್ಮಿಸ್‌ ಬಾಬಾಸಾಹೇಬ್‌ ಅಂಬೇಡ್ಕರ್‌ ಫ್ರಂ ಅಕಾಡೆಮಿಕ್ಸ್‌, ಆಕ್ಟಿವಿಸಂ, ಈವನ್‌ ಇನ್ ಡೈಲಿ ಲೈಫ್ ಸಿಚುಯೇಶನ್‌. 20 ವರ್ಷದಿಂದ ಅನ್ನೋದಕ್ಕಿಂತ 1950ರ ದಶಕದಿಂದಲೂ&nbsp; ಅವರು ಯಾವಾಗ ಸೋಶಿಯಲ್‌ ಮೂವ್‌ಮೆಂಟ್‌ನ ಮೈನ್‌ಸ್ಟ್ರೀಮ್‌ ಗೆ ತಂದ್ರೋ ಆಗ್ಲಿಂದ ಬಾಬಾ ಸಾಹೇಬ್‌ ಬಗ್ಗೆ ಎಲ್ಲಾ ಕಡೆ ಮಾತನಾಡಿದಾರೆ.&nbsp;</p>



<p><strong>ಪೀಪಲ್‌ ಮೀಡಿಯಾ:</strong> ನಿಜ, ದಲಿತ್‌ ಮೂವ್‌ಮೆಂಟ್ಸ್‌ ಆ ಕೆಲಸವನ್ನು ಮೊದಲಿಂದಲೂ ಮಾಡ್ತಾನೇ ಇವೆ. ಆದರೆ ದಲಿತೇತರರು ಅಥವಾ&nbsp; ಜನರಲ್‌ ಪಬ್ಲಿಕ್‌, ಅಥವಾ ಪಬ್ಲಿಕ್‌ ಇಂಟಲೆಕ್ಚುಯಲ್ಸ್‌, ಲೆಫ್ಟ್‌ ಐಡಿಯಾಲಜಿ ಇರುವಂತವರು ಕೂಡ ಅಂಬೇಡ್ಕರ್‌ ಬಗ್ಗೆ ಮಾತಾಡ್ತಿರೋದು ತೀರಾ ಇತ್ತೀಚೆಗೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/10/WhatsApp-Image-2022-10-19-at-4.45.24-PM-1.jpeg" alt="" class="wp-image-11966" width="506" height="504" srcset="https://peepalmedia.com/wp-content/uploads/2022/10/WhatsApp-Image-2022-10-19-at-4.45.24-PM-1-150x150.jpeg 150w, https://peepalmedia.com/wp-content/uploads/2022/10/WhatsApp-Image-2022-10-19-at-4.45.24-PM-1-24x24.jpeg 24w, https://peepalmedia.com/wp-content/uploads/2022/10/WhatsApp-Image-2022-10-19-at-4.45.24-PM-1-48x48.jpeg 48w, https://peepalmedia.com/wp-content/uploads/2022/10/WhatsApp-Image-2022-10-19-at-4.45.24-PM-1-96x96.jpeg 96w, https://peepalmedia.com/wp-content/uploads/2022/10/WhatsApp-Image-2022-10-19-at-4.45.24-PM-1-300x300.jpeg 300w" sizes="auto, (max-width: 506px) 100vw, 506px" /></figure></div>


<p><strong>ಡಾ.ಕೆ.ಪಿ.ಅಶ್ವಿನಿ:</strong>&nbsp; &nbsp;ನಿಜ ಸರ್‌..&nbsp; ಈಗ ಯಾವ ಕಂಡೀಷನ್‌ ಗೆ ಬಂದಿದೆ ಅಂದ್ರೆ ಒಂದು ಕ್ಲಾಸ್‌ ಕ್ರಿಯೇಟ್‌ ಆಗಿದೆ. ದಲಿತ ಸಮುದಾಯದೊಳಗೇ ಒಂದು ವರ್ಗ. ಅವರಲ್ಲಿ ಬಹಳ ಜನ ಅಸರ್ಟಿವ್‌ ಆಗಿ ದಲಿತ್‌ ಇಶ್ಯೂಸ್‌ ಬಗ್ಗೆ ಮಾತಾಡ್ತಾರೆ. ನಾನು ವಿದ್ಯಾರ್ಥಿ ಚಳವಳಿಯಲ್ಲಿದ್ದೆ. ಜೆ ಎನ್‌ ಯುನಲ್ಲಿ ನಾನು&nbsp; ಯುನೈಟೆಡ್‌ ದಲಿತ್‌ ಸ್ಟೂಡೆಂಟ್ಸ್‌ ಫ್ರಂಟ್‌ ನ ಭಾಗವಾಗಿದ್ದೆ . ಸೋ ದಲಿತ್‌ ಆಕ್ಟಿವಿಸಂ, ಸ್ಟೂಡೆಂಟ್‌ ಆಕ್ಟಿವಿಸಂನಲ್ಲಿ ತುಂಬಾ ಅಸರ್ಟೀವ್‌ ಆಗಿ, ಆಕ್ಟೀವ್‌ ಆಗಿ ಕ್ಯಾಂಪಸ್‌ ಗಳಲ್ಲಿವೆ. ಸೋ ನಾವು ಕ್ಯಾಸ್ಟ್‌ ಬಗ್ಗೆ, ಡಿಸ್ಕ್ರಿಮಿನೇಶನ್‌ ಬಗ್ಗೆ ಮಾತಾಡಿದಾಗ, ಸಂವಿಧಾನದ ಬಗ್ಗೆ ಮಾತಾಡಿದಾಗ ಅದರ ಸಿದ್ಧಾತಗಳು ಲೆಫ್ಟ್‌ ಆಗಲೀ, ಮತ್ಯಾವುದೇ ರಾಜಕೀಯ ಪಕ್ಷಗಳಾಗಲಿ ಯಾರೂ ಇಂದು ಅಂಬೇಡ್ಕರ್‌ ಅವರನ್ನು ಕಡೆಗಣಿಸಲು ಆಗದಂತಹ ಪರಿಸ್ಥಿತಿ ಬಂದೊದಗಿದೆ. ಈಗ ಅವರಿಗೆ ಬಾಬಾಸಾಹೇಬರ ಬಗ್ಗೆ ಮಾತಾಡಲೇ ಬೇಕು. ಅದೇನೋ ಮಾತಾಡಲೇಬೇಕು ಅಂತಲ್ಲ. ಅಂಬೇಡ್ಕರ್‌ ನೀಡಿರುವ ಕೊಡುಗೆಗಳು ಹಾಗಿವೆ. ಒಂದು ಸಂವಿಧಾನದಿಂದ ಹಿಡಿದು ಪಾಲಿಸಿ ಮೇಕಿಂಗ್‌ ಆಗಲೀ, ಯಾವ ರೀತಿ ಒಂದು ಡೆಮೋಕ್ರಟಿಕ್‌ ಸ್ಟೇಟ್‌ ಆಪರೇಟ್‌ ಮಾಡಬೇಕು, ಹೇಗೆ ಫಂಕ್ಷನ್‌ ಮಾಡಬೇಕು ಇವುಗಳನ್ನೆಲ್ಲಾ&nbsp; ಯಾವುದೇ ಸಿದ್ಧಾಂತ ಇರುವ ಯಾವುದೇ ರಾಜಕೀಯ ಪಕ್ಷವೂ ಇಗ್ನೋರ್‌ ಮಾಡಲು ಸಾಧ್ಯವಿಲ್ಲ. ಅಕಾಡೆಮಿಕ್‌ ಆಗ್ಲಿ, ಆಕ್ಟಿವಿಸಂ ಆಗ್ಲಿ, ಬಾಬಾಸಾಹೇಬರ ಫಿಲಾಸಫಿ ಈ ಜಂಕ್ಚರ್‌ ಗೆ ಎಷ್ಟು ಇಂಪಾರ್ಟೆಂಟ್‌ ಇದೆ ಅನ್ನೋದನ್ನ ಸಿದ್ಧಾಂತಗಳ ಆಚೆಗೂ ಯಾರೂ ಕಡೆಗಣಿಸಲು ಸಾಧ್ಯವಿಲ್ಲ.&nbsp;&nbsp;</p>



<p><strong>ಪೀಪಲ್‌ ಮೀಡಿಯಾ</strong>: ನೀವು ಈಗ ಈ ಹುದ್ದೆಗೆ ಅಪಾಯಿಂಟ್‌ ಆಗಿದ್ದೀರಾ… ನಿಮ್ಮಿಂದ ನಾವೆಲ್ಲಾ ಯಾವ ನಿರೀಕ್ಷೆ ಇಟ್ಟುಕೊಳ್ಳಬಹುದು?&nbsp;</p>



<p><strong>ಡಾ.ಕೆ.ಪಿ.ಅಶ್ವಿನಿ:</strong>&nbsp; ಇದು ಬಹುದೊಡ್ಡ ಹೊಣೆಗಾರಿಕೆ. ಯಾವುದೇ ಒಂದೇ ದೇಶದ ಮೇಲೆ ಫೋಕಸ್‌ ಮಾಡಲ್ಲ. ಗ್ಲೋಬಲಿ ಐ ವುಡ್‌ ಬಿ ಫೋಕಸಿಂಗ್‌ ಆನ್‌ ಡಿಫರೆಂಟ್‌ ಇಶ್ಯೂಸ್‌ ಅಂಡ್‌ ಡಿಫರೆಂಟ್ ಕಂಟ್ರೀಸ್‌. ನಿಮಗೇ ಗೊತ್ತು ರೇಸಿಸಂ ಅಂದ್ರೆ ಜಸ್ಟ್‌ ರೇಸಿಸಂ ಅಲ್ಲ. ಅದ್ರಲ್ಲಿ ಬೇರೆ ಬೇರೆ ಇಶ್ಯೂಸ್‌ ಇರತ್ತೆ. ಕ್ಸೆನೋಫೋಬಿಯಾ ಅಂದರೆ ಪ್ರಾಯಶಃ ಇಂಡಿಯಾದಲ್ಲಿ ಬೇರೆ ತರ ಇರುತ್ತೆ ಶ್ರೀಲಂಕಾದಲ್ಲಿ ಬೇರೆ ಇರುತ್ತೆ. ಅಮೆರಿಕದಲ್ಲಿ &nbsp;ಬೇರೆ ರೀತಿಯಾಗಿರುತ್ತದೆ.&nbsp; &nbsp;ಆದರೆ ನಾನು ಯಾವಾಗಲೂ ಗಮನ ನೀಡುವ ಒಂದು ಮುಖ್ಯ ವಿಷಯ ಅಂದರೆ ಜೆಂಡರ್‌. ರೇಸಿಸಂ ಇರಲಿ, ಜಾತಿ ತಾರತಮ್ಯ ಇರಲಿ, ಕ್ಸೆನೋಫೋಬಿಯಾ ಇರಲಿ, ಅದರಲ್ಲಿ ಜೆಂಡರ್‌ ಹೇಗೆ ಕೆಲಸ ಮಾಡುತ್ತದೆ ಎಂದು ಗುರುತಿಸಿರುವುದು ಕಡಿಮೆ.&nbsp;ಬಟ್‌ ರೇಸಿಸಂ ಅಂತ ಬಂದಾಗ ಜೆಂಡರ್‌ ನಲ್ಲಿ ರೇಸಿಸಂ ಹೇಗೆ ಅಪ್ಲೈ ಅಗತ್ತೆ ಅಂತ. ಒಂದು ವುಮೆನ್‌, ಎಲ್‌ಜಿಬಿಟಿಕ್ಯೂ ಕಮ್ಯೂನಿಟಿ ಆಗ್ಲಿ, ಅವರ ಮೇಲೆ ರೇಸಿಸಂ ನ&nbsp; ಟ್ರಿಪಲ್‌ ಡಿಸ್ಕ್ರಿಮಿನೇಶನ್‌ ಇರತ್ತೆ, ಮಲ್ಟಿಲೇಯರ್ಸ್‌, ಇಂಟರ್‌ಸೆಕ್ಷಾನಾಲಿಟಿ ಇರುತ್ತೆ. ಆ ವಿಷಯಾನ ಹೈಲೈಟ್‌ ಮಾಡಬೇಕು ಅಂತ ನಂಗೆ ತುಂಬಾ ಇಂಟರೆಸ್ಟ್‌ ಇದೆ.&nbsp;</p>



<p><strong>ಪೀಪಲ್‌ ಮೀಡಿಯಾ:</strong> ನೀವು ಹೇಳಿದ ಜೆಂಡರ್‌ ಇಂಟರ್‌ ಸೆಕ್ಷನಾಲಿಟಿ ಆಫ್ರಿಕನ್ಸ್‌ ಅಮೇರಿಕನ್ಸ್‌ ಡಿಸ್‌ಕೋರ್ಸ್‌ನಲ್ಲಿ ಬಹಳ ಮುಖ್ಯವಾಗಿ ಬಂದಿದೆ. ಕೆಲವು ಜನಪ್ರಿಯ ಸಿನಿಮಾಗಳು ಸಹ ಇದನ್ನು ಮುನ್ನೆಲೆಗೆ ತಂದಿವೆ. ಉದಾಹರಣೆಗೆ ಕಲರ್‌ ಪರ್ಪಲ್‌. ಆದರೆ ಇಂಡಿಯಾದಲ್ಲಿ ಒಂದೋ ಜೆಂಡರ್‌ ನೋಡ್ತೀವಿ ಇಲ್ವೇ ಕ್ಯಾಸ್ಟ್‌ ಇಶ್ಯೂ ನೋಡ್ತಿವಿ. ಜೆಂಡರ್‌ ಮೂವ್‌ಮೆಂಟ್ಸ್‌ ಇದೆ ಅಥವಾ ಕ್ಯಾಸ್ಟ್‌ ಮೂವ್‌ಮೆಂಟ್ಸ್‌ ಇದೆ. ಆದರೆ ಅವೆರಡನ್ನೂ ಬ್ಲೆಂಡ್, ಮಾಡೋ ರೀತಿಯಲ್ಲಿ ಜೆಂಡರ್‌ ಒಳಗೆ ಕ್ಯಾಸ್ಟ್‌ ಇಶ್ಯೂ ಅಥವಾ ಕ್ಯಾಸ್ಟ್‌ ಒಳಗೆ ಜೆಂಡರ್‌ ಇಶ್ಯೂನ ನೋಡೋ ಅಂತಹ ಬ್ಯಾಲೆನ್ಸ್‌ ಇಲ್ಲ ಅಂತ ಅನಿಸುತ್ತೆ ನನಗೆ. ಇದರ ಬಗ್ಗೆ ನಿಮ್ಮ ಅನಿಸಿಕೆ?</p>



<p><strong>ಡಾ.ಕೆ.ಪಿ.ಅಶ್ವಿನಿ:</strong>&nbsp; &nbsp;ಕಂಪ್ಲೀಟ್ಲಿ ಇಲ್ಲ ಅಂತ ಹೇಳೋಕಾಗಲ್ಲ. ಬಟ್‌ ಅದಕ್ಕೆ ಸ್ಪೇಸ್‌ ಸ್ವಲ್ಪ ಲಿಮಿಟೆಟ್‌ ಆಗಿದೆ ಅದನ್ನು ಹೇಳ್ತಿನಿ. ಟ್ವೆಂಟಿಯತ್ ಸೆಂಚುರಿಯಿಂದ ತಗೊಂಡ್ರೆ ಮೂವ್‌ಮೆಂಟ್‌ನಲ್ಲಿ ದಲಿತ್‌ ಕಮ್ಯೂನಿಟಿಯ ಬಹಳ ಹೆಣ್ಣು ಮಕ್ಕಳ ರೆಪ್ರೆಸೆಂಟೇಶನ್‌ ಕಾಣಬಹುದು. ಬಾಬಾ ಸಾಹೇಬರ ಮೂವ್‌ಮೆಂಟ್‌ ನಡೀಬೇಕಾದ್ರೆ ಕಾಳಾರಾಂ ದೇವಸ್ಥಾನ ಎಂಟ್ರಿಯಿಂದ ಹಿಡಿದು ಹಲವು ಚಳವಳಿಗಳಲ್ಲಿ ಕಮ್ಯುನಿಟಿ ಹೆಣ್ಣು ಮಕ್ಕಳು ತುಂಬಾ ಪ್ರೋಆಕ್ಟೀವ್‌ ಆಗಿ ಪಾರ್ಟಿಸಿಪೇಟ್‌ ಮಾಡಿದಾರೆ. ಅಲ್ಲದೇ ಬೇಬಿತಾಯಿ ಕಾಂಬ್ಳೆ, ಶಿವಗಾಮಿ, ಆಗ್ಲಿ ಬೇರೆ ಬೇರೆ ದಲಿತ್‌ ರೈಟರ್ಸ್‌, ಬಾಮಾ ಇವರೆಲ್ಲರೂ ದಲಿತ್‌ ವಿಮೆನ್‌ ಎಕ್ಸಪೀರಿಯನ್ಸ್‌ ನ ತುಂಬಾ ಆರ್ಗನಿಕ್‌ ಆಗಿ ಹೇಗಿದೆಯೋ ಹಾಗೆ ಬರೆದಿದ್ದಾರೆ. ಈಗ ಇರೋ ಪರಿಸ್ಥಿತಿಯಲ್ಲಿ ಜೆಂಡರ್‌ ನ ಸಂಪೂರ್ಣ ಇಗ್ನೋರ್‌ ಮಾಡಿದಾರೆ ಅಂತ ಹೇಳಲ್ಲ ನಾನು. ದಲಿತ್‌ ಮೂವ್‌ಮೆಂಟ್‌ ಅಲ್ಲಿ ಜೆಂಡರ್‌ ಮಾತಾಡ್ತಿದಾರೆ.&nbsp;</p>



<figure class="wp-block-image size-full"><img loading="lazy" decoding="async" width="779" height="408" src="https://peepalmedia.com/wp-content/uploads/2022/10/Annotation-2022-10-19-164937.jpg" alt="" class="wp-image-11965" srcset="https://peepalmedia.com/wp-content/uploads/2022/10/Annotation-2022-10-19-164937.jpg 779w, https://peepalmedia.com/wp-content/uploads/2022/10/Annotation-2022-10-19-164937-300x157.jpg 300w, https://peepalmedia.com/wp-content/uploads/2022/10/Annotation-2022-10-19-164937-768x402.jpg 768w, https://peepalmedia.com/wp-content/uploads/2022/10/Annotation-2022-10-19-164937-150x79.jpg 150w, https://peepalmedia.com/wp-content/uploads/2022/10/Annotation-2022-10-19-164937-696x365.jpg 696w" sizes="auto, (max-width: 779px) 100vw, 779px" /></figure>



<p><strong>ಪೀಪಲ್‌ ಮೀಡಿಯಾ:</strong> ಚಳವಳಿಯಲ್ಲಿ ಆ ರೀತಿ ಆಗಿದ್ದಿದೆಯಾ?</p>



<p><strong>ಡಾ.ಕೆ.ಪಿ.ಅಶ್ವಿನಿ:</strong>&nbsp; &nbsp;ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲೂ ತುಂಬಾ ಕಡೆ ನೋಡಿದರೆ ಒಂದು ದಲಿತ್‌ ಫೆಮಿನಿಸಂ ಅನ್ನೋ ಕಾನ್ಸೆಪ್ಟೇ ಬಂದಿದೆ. ಬೇಬಿತಾಯಿ ಕಾಂಬ್ಳೆ ಅವರು ತುಂಬಾ ವರ್ಷದ ಹಿಂದೆಯೇ ಬರೆದಿದ್ರು. ಅದು ಒಂದು ಅಕಾಡೆಮಿಕ್‌ ಅಮ್ನೀಶಿಯಾ ಅಂತಾರಲ್ವಾ.. ಹಾಗೆ..&nbsp;&nbsp;</p>



<p><strong>ಪೀಪಲ್‌ ಮೀಡಿಯಾ:</strong> ಕರ್ನಾಟಕದಲ್ಲಿ ಅಷ್ಟು ದೊಡ್ಡ ದಲಿತ್‌ ಮೂವ್‌ಮೆಂಟ್‌ ಆದ್ರೂ ಕೂಡ ಒಬ್ಬ ದಲಿತ್‌ ವುಮನ್ ರೈಟರ್‌ ಕಾಣೋದಿಲ್ಲ ಅಲ್ವಾ?</p>



<p><strong>ಡಾ.ಕೆ.ಪಿ.ಅಶ್ವಿನಿ:</strong> ಹಾಗೇನಿಲ್ಲ … ಇದಾರೆ ತುಂಬಾ ಜನ…ದು. ಸರಸ್ವತಿ ನೋಡಿ ಅವರು ಬಹಳ ಬರ್ದಿದಾರೆ.&nbsp; &nbsp;</p>



<p><strong>ಪೀಪಲ್‌ ಮೀಡಿಯಾ:</strong> ಅವರು ಇತ್ತೀಚಿನವರು. ದಲಿತ್‌ ಮೂವ್‌ ಮೆಂಟ್‌ ತುಂಬಾ ಉತ್ತುಂಗದಲ್ಲಿದ್ದಾಗ ಆತರದ್ದು ಒಂದು ಆಗ್ಲಿಲ್ಲ ಅಂತ.. ಅಲ್ಲಿ ಇನ್‌ಕ್ಲೂಶನ್‌ ಕಡಿಮೇ ಅಂತನಾ?</p>



<p><strong>ಡಾ.ಕೆ.ಪಿ.ಅಶ್ವಿನಿ:</strong> ಹಾ ಇರಬಹುದು… ಈಗ ನೀವು ನೋಡಿದರೆ… ಸ್ವಲ್ಪ ಬದಲಾವಣೆ ಆಗಿದೆ… ಅಂಡ್‌ ಅಟ್‌ ಸಮ್‌ ಪಾಯಿಂಟ್‌ ಆಫ್‌ ಟೈಮ್‌ ನೀವು ಬ್ಲಾಕ್‌ ಮೂವ್‌ಮೆಂಟ್‌ ಆಗ್ಲಿ, ದಲಿತ್‌ ಮೂವ್‌ಮೆಂಟ್‌ ಆಗ್ಲಿ ನೋಡಿದ್ರೆ ಅದರ ಪ್ರೈಯಾರಿಟೀಸ್, ಟೈಮ್‌ ಗೆ ತಕ್ಕಂತೆ ಇದನ್ನ ಅಡ್ರೆಸ್‌ ಮಾಡೋಣ ಅನ್ನುವ ರೀತಿಯ ಒಂದು ಡೈನಮಿಕ್ಸ್‌ ಕೂಡಾ ಇರತ್ತೆ. ಬಟ್‌ ಈಗ್ಲೂ ಕೂಡ ಇಟ್ಸ್‌ ರಿಯಲಿ ಇಂಪಾರ್ಟೆಂಟ್‌, ಜೆಂಡರ್‌ನ ನಾವು ಹೇಗೆ ಅಡ್ರೆಸ್‌ ಮಾಡಬೇಕು ಅಂತ. ಈಗ ದಲಿತ್‌ ಅಕಾಡೆಮಿಶಿಯನ್ಸ್‌ ಇದಾರೆ. ವಿಮೆನ್‌ ಅಕಾಡೆಮಿಶಿಯನ್ಸ್‌, ಪೊಲಿಟಿಶಿಯನ್ಸ್‌ ಇದಾರೆ, ಆಕ್ಟಿವಿಸಂ ಅಲ್ಲಿ ಇದಾರೆ ,&nbsp; ಐ ಥಿಂಕ್‌ ಇಟ್ಸ್‌ ಹೈ ಟೈಮ್‌ ದಟ್‌ ನಾವು ವಿಮೆನ್‌ ರೆಪ್ರೆಸೆಂಟೇಟಿವ್ಸ್‌ ಗೆ ಫ್ರಂಟ್‌ ಆಫ್‌ ಪ್ಲೇಸ್‌ ಕೊಡಬೇಕು.</p>



<p> <strong>ಪೀಪಲ್‌ ಮೀಡಿಯಾ:</strong> ತುಂಬಾ ಧನ್ಯವಾದಗಳು.</p>



<p><strong>ಸಂದರ್ಶನ: ಹರ್ಷಕುಮಾರ್‌ ಕುಗ್ವೆ</strong></p>
]]></content:encoded>
					
		
		
			</item>
		<item>
		<title>ಫಿಲಂಫೇರ್‌ 2022 ಪ್ರಶಸ್ತಿ ಘೋಷಣೆ: ಪುನೀತ್ ರಾಜ್‍ಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ</title>
		<link>https://peepalmedia.com/filamfer-2022-prashasti-ghoshane-punit-rajkumar-avrige-jivamana-sadane-prashasti/</link>
		
		<dc:creator><![CDATA[Peepal Media]]></dc:creator>
		<pubDate>Mon, 10 Oct 2022 08:08:40 +0000</pubDate>
				<category><![CDATA[ಸಿನಿಮಾ]]></category>
		<category><![CDATA[Allu Arjun]]></category>
		<category><![CDATA[B Suresh]]></category>
		<category><![CDATA[bengalure]]></category>
		<category><![CDATA[Biju Menon]]></category>
		<category><![CDATA[Dali Dhananjay]]></category>
		<category><![CDATA[filmfare awards]]></category>
		<category><![CDATA[filmfare awards south]]></category>
		<category><![CDATA[Harsha Kumar Kugve]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[kannada cinema]]></category>
		<category><![CDATA[kannada news]]></category>
		<category><![CDATA[karnataka]]></category>
		<category><![CDATA[Lojmol Jose]]></category>
		<category><![CDATA[news]]></category>
		<category><![CDATA[Nimisha Sajayan]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[punith rajkumar]]></category>
		<category><![CDATA[Raaj B Shetty]]></category>
		<category><![CDATA[Sai Pallavi]]></category>
		<category><![CDATA[Suriya]]></category>
		<category><![CDATA[Umashree]]></category>
		<category><![CDATA[Yajna Shetty]]></category>
		<guid isPermaLink="false">https://peepalmedia.com/?p=9856</guid>

					<description><![CDATA[ಬಹುನಿರೀಕ್ಷಿತ ಫಿಲ್ಮ್ ಫೇರ್ ಪ್ರಶಸ್ತಿ ಬೆಂಗಳೂರಿನಲ್ಲಿ ನಡೆದಿದೆ. ನಿನ್ನೆ ಭಾನುವಾರ ನಡೆದ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. 67ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಬಹಳ ದಿನಗಳ ಬಳಿಕ ಬೆಂಗಳೂರಿನಲ್ಲಿ ನಡೆದಿದ್ದು ವಿಶೇಷವಾಗಿತ್ತು. ಮತ್ತೊಂದು ವಿಷಯವೇನೆಂದರೆ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರತಿಷ್ಟಿತ ಫಿಲಂಪೇರ್‌ ಸೌತ್‌ 2022 ಪ್ರಶಸ್ತಿಗಳು ಘೋಷಣೆಯಾಗಿವೆ. ಕನ್ನಡದ ವಿಭಾಗದಲ್ಲಿ ಆಕ್ಟ್‌ 1978 ಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ, ರಾಜ್‌ ಬಿ ಶೆಟ್ಟಿ [&#8230;]]]></description>
										<content:encoded><![CDATA[
<p>ಬಹುನಿರೀಕ್ಷಿತ ಫಿಲ್ಮ್ ಫೇರ್ ಪ್ರಶಸ್ತಿ ಬೆಂಗಳೂರಿನಲ್ಲಿ ನಡೆದಿದೆ. ನಿನ್ನೆ ಭಾನುವಾರ ನಡೆದ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. 67ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಬಹಳ ದಿನಗಳ ಬಳಿಕ ಬೆಂಗಳೂರಿನಲ್ಲಿ ನಡೆದಿದ್ದು ವಿಶೇಷವಾಗಿತ್ತು. ಮತ್ತೊಂದು ವಿಷಯವೇನೆಂದರೆ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.</p>



<p>ಪ್ರತಿಷ್ಟಿತ ಫಿಲಂಪೇರ್‌ ಸೌತ್‌ 2022 ಪ್ರಶಸ್ತಿಗಳು ಘೋಷಣೆಯಾಗಿವೆ. ಕನ್ನಡದ ವಿಭಾಗದಲ್ಲಿ ಆಕ್ಟ್‌ 1978 ಚಿತ್ರಕ್ಕೆ ಅತ್ಯುತ್ತಮ ಪ್ರಶಸ್ತಿ, ರಾಜ್‌ ಬಿ ಶೆಟ್ಟಿ ಅವರಿಗೆ ಗರುಡ ಗಮನ ವೃಷಭ ವಾಹನ ಸಿನಿಮಾಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಬಡವಾ ರ್ಯಾಸ್ಕರಲ್‌ ಸಿನಿಮಾದ ನಟನೆಗಾಗಿ ಡಾಲಿ ಧನಂಜಯ್‌ ಅವರಿಗೆ ಅತ್ಯುತ್ತಮ ನಾಯಕ ನಟ ಪ್ರಶಸ್ತಿ, ಆಕ್ಟ್‌ 1978 ಸಿನಿಮಾದ ನಟನೆಗಾಗಿ ಯಜ್ಞಾ ಶೆಟ್ಟಿ ಅವರಿಗೆ ಅತ್ಯುತ್ತಮ ನಾಯಕಿ ನಟಿ ಪ್ರಶಸ್ತಿ, ಅದೇ ಸಿನಿಮಾದ ನಟನೆಗಾಗಿ ಬಿ. ಸುರೇಶ್‌ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ರತ್ನನ್‌ ಪ್ರಪಂಚ ಸಿನಿಮಾದಲ್ಲಿನ ನಟೆನೆಗಾಗಿ ಉಮಾಶ್ರೀ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ದೊರೆತಿವೆ.</p>



<p>ಅಲ್ಲದೇ ವಾಸುಕಿ ವೈಭವ್‌ ಅವರಿಗೆ ಅತ್ಯುತ್ತಮ ಮ್ಯೂಸಿಕ್‌ ಅಲ್ಬಂ ಪ್ರಶಸ್ತಿ (ಬಡವಾ ರ್ಯಾಸ್ಕಲ್), ಜಯಂತ್‌ ಕಾಯ್ಕಿಣಿ ಅವರಿಗೆ ಅತ್ಯುತ್ತಮ ಗೀತ ರಚನೆ (ಲಿರಿಕ್ಸ್) ಪ್ರಶಸ್ತಿ (ತೇಲದು ಮುಗಿಲೇ &#8211; ಆಕ್ಟ್‌ 1978), ರಘು ದೀಕ್ಷಿತ್‌ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ (ಮಳೆಯೇ ಮಳೆಯೇ ಮಳೆಯೇ- ನಿನ್ನ ಸನಿಹಕೆ), ಅನುರಾಧಾ ಭಟ್‌ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ದೊರೆತಿವೆ. ಹಾಗೆಯೇ ವಿಮರ್ಶಕರ ಅತ್ಯುತ್ತಮ ನಟಿಯಾಗಿ ಅಮೃತಾ ಅಯ್ಯಂಗಾರ್‌, ಮತ್ತು ಮಿಲನಾ ನಾಗರಾಜ್‌, ವಿಮರ್ಶಕರ ಅತ್ಯುತ್ತಮ ನಟರಾಗಿ ಡಾರ್ಲಿಂಗ್‌ ಕೃಷ್ಣ (ಲವ್‌ ಮಾಕ್ಟೇಲ್) ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಕೋರಿಯೋಗ್ರಫಿ ಪ್ರಶಸ್ತಿಗೆ ಯುವರತ್ನ ಸಿನಿಮಾದ ನೃತ್ಯ ಸಂಯೋಜನೆಗಾಗಿ ಜಾನಿ ಮಾಸ್ಟರ್‌ ಪ್ರಶಸ್ತಿ ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿಯನ್ನು ರತ್ನನ್‌ ಪ್ರಪಂಚ ಸಿನಿಮಾಕ್ಕಾಗಿ ಶ್ರೀಷ ಕೂದುವಳ್ಳಿ ಪಡೆದಿದ್ದಾರೆ. ಅತ್ಯುತ್ತಮ ಡೆಬ್ಯು ಫೀಮೇಲ್‌ ಪ್ರಶಸ್ತಿಯನ್ನು ಧನ್ಯ ರಾಮ್‌ಕುಮಾರ್‌ ನಿನ್ನ ಸನಿಹಕೆ ಚಿತ್ರಕ್ಕೆ ಪಡೆದಿದ್ದಾರೆ.</p>



<figure class="wp-block-image size-large"><img loading="lazy" decoding="async" width="1024" height="896" src="https://peepalmedia.com/wp-content/uploads/2022/10/WhatsApp-Image-2022-10-10-at-12.52.01-PM-1024x896.jpeg" alt="" class="wp-image-9862" srcset="https://peepalmedia.com/wp-content/uploads/2022/10/WhatsApp-Image-2022-10-10-at-12.52.01-PM-1024x896.jpeg 1024w, https://peepalmedia.com/wp-content/uploads/2022/10/WhatsApp-Image-2022-10-10-at-12.52.01-PM-300x263.jpeg 300w, https://peepalmedia.com/wp-content/uploads/2022/10/WhatsApp-Image-2022-10-10-at-12.52.01-PM-768x672.jpeg 768w, https://peepalmedia.com/wp-content/uploads/2022/10/WhatsApp-Image-2022-10-10-at-12.52.01-PM-150x131.jpeg 150w, https://peepalmedia.com/wp-content/uploads/2022/10/WhatsApp-Image-2022-10-10-at-12.52.01-PM-696x609.jpeg 696w, https://peepalmedia.com/wp-content/uploads/2022/10/WhatsApp-Image-2022-10-10-at-12.52.01-PM-1068x935.jpeg 1068w, https://peepalmedia.com/wp-content/uploads/2022/10/WhatsApp-Image-2022-10-10-at-12.52.01-PM.jpeg 1200w" sizes="auto, (max-width: 1024px) 100vw, 1024px" /></figure>



<p>ಈ ಪ್ರಶಸ್ತಿಗಳನ್ನು ಕಾಮಾರ್‌ ಫ್ಯಾಕ್ಟರಿ ಸಹಯೋಗದಲ್ಲಿ ನೆನ್ನೆ ತಡರಾತ್ರಿಯವರೆಗೆ ಬೆಂಗಳೂರಿನಲ್ಲಿ ನಡೆದ 67ನೇ ಫಿಲಂಫೇರ್‌ ಅವಾರ್ಡ್ಸ್‌ 2022 ಕಾರ್ಯಕ್ರಮದಲ್ಲಿ ಘೋಷಿಸಲಾಯ್ತು. ಫಿಲಂಫೇರ್‌ ಸೌತ್‌ ಪ್ರಶಸ್ತಿಗಳನ್ನು ದಕ್ಷಿಣ ಭಾರತದ ಕನ್ನಡ, ತೆಲುಗು ತಮಿಳು ಮತ್ತು ಮಲಯಾಳಂ ಸಿನಿಮಾಗಳಿಗೆ ನೀಡಲಾಗುತ್ತದೆ. ಈ ಬಾರಿ 2020 ಮತ್ತು 2021ರಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಮತ್ತು ಪ್ರತಿ ಭಾಷೆಯ ಸಿನಿಮಾಗಳಿಗೆ ನೀಡಲಾಗಿದೆ.</p>



<p>ದಕ್ಷಿಣ ಭಾರತದ ಸಿನಿಮಾಗಳನ್ನು ಮತ್ತು ಸಿನಿರಂಗದ ಪ್ರತಿಭೆಗಳನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು 1976ರಿಂದ ಫಿಲಂಫೇರ್‌ ಮ್ಯಾಗನೀನ್‌ ವತಿಯಿಂದ ನೀಡಲಾಗುತ್ತದೆ. ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಪೂಜಾ ಹೆಗ್ಡೆ, ಮೃಣಾಲ್‌ ಥಾಕೂರ್‌, ಕೃತಿ ಶೆಟ್ಟಿ, ಸಾನಿಯಾ ಐಯ್ಯಪ್ಪನ್‌ ಮತ್ತು ಐಂದ್ರಿತಾ ರೇ ಅವರ ನೃತ್ಯ ಪ್ರದರ್ಶನಗಳು ಸಭಿಕರ ಮನಸೂರೆಕೊಂಡವು.<br>ಕನ್ನಡದಂತೆ ತೆಲುಗು ಭಾಷೆಯಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪುಷ್ಪಾ- ದ ರೈಸ್‌ ಸಿನಿಮಾದ ಪಾಲಾಗಿದೆ. ಇದೇ ಸಿನಿಮಾದ ನಿರ್ದೇಶನಕ್ಕಾಗಿ ಸುಕುಮಾರ್‌ ಬಂಡರೆಡ್ಡಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನೂ ಅಲ್ಲು ಅರ್ಜುನ್‌ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾರೆ. ಲವ್‌ ಸ್ಟೋರಿ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.</p>



<p>ಇನ್ನು ತಮಿಳಿನಲ್ಲಿ ಬಹುಚರ್ಚಿತ ಜೈ ಭೀಮ್‌ ಸಿನಿಮಾ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ. ಸೂರರಾಯಿ ಪೊಟ್ಟೂರು ಸಿನಿಮಾ ನಿರ್ದೇಶಕಿ ಸುಧಾ ಕೊಂಗಾರಾ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿಯನ್ನೂ ಅದೇ ಚಿತ್ರದಲ್ಲಿ ನಾಯಕ ಪಾತ್ರದ ಅಭಿನಯಕ್ಕಾಗಿ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಜೈ ಭೀಮ್‌ ಸಿನಿಮಾದಲ್ಲಿನ ನಟನೆಗಾಗಿ ಲಿಜ್ಮೋಲ್‌ ಜೋಸ್‌ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.</p>



<p>ಮಲಯಾಳಂ ವಿಭಾಗದಲ್ಲಿ ಅಯ್ಯಪ್ಪನುಂ ಕೋಶಿಯುಂ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸಿ ಪಡೆದುಕೊಂಡಿದೆ. ತಿಂಕಳಾಚ್ಚಾ ನಿಶ್ಚಯಂ ಸಿನಿಮಾ ನಿರ್ದೇಶಕ ಸೆನ್ನಾ ಹೆಗ್ಡೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಬಿಜು ಮೆನನ್ ಅಯ್ಯಪ್ಪನುಂ ಕೋಶಿಯುಂ ಸಿನಿಮಾ ನಟನೆಗಾಗಿ ಪಡೆದಿದ್ದಾರಲ್ಲದೆ ನಿಮಿಷಾ ಸಜಯನ್‌ ಅವರು ದ ಗ್ರೇಟ್‌ ಇಂಡಿಯನ್‌ ಸಿನಿಮಾದಲ್ಲಿನ ತಮ್ಮ ನಟನೆಗೆ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.</p>



<p><strong>ಕನ್ನಡ ಚಿತ್ರರಂಗಕ್ಕೆ ಬಂದ ಪ್ರಶಸ್ತಿಗಳು</strong></p>



<p>ಉತ್ತಮ ನಟ -ಧನಂಜಯ ( ಬಡವ ರಾಸ್ಕಲ್ )<br>ಉತ್ತಮ ನಟಿ -ಯಜ್ಞಾ ಶೆಟ್ಟಿ ( ಆಕ್ಟ್ 1978 )<br>ಉತ್ತಮ ಸಿನಿಮಾ- ಆಕ್ಟ್ 1978<br>ಉತ್ತಮ ನಿರ್ದೇಶಕ-ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ )<br>ಉತ್ತಮ ಪೋಷಕ ನಟ- ಬಿ ಸುರೇಶ ( ಆಕ್ಟ್ 1978 )<br>ಉತ್ತಮ ಪೋಷಕ ನಟಿ-ಉಮಾಶ್ರೀ ( ರತ್ನನ್ ಪ್ರಪಂಚ )<br>ಉತ್ತಮ ಮ್ಯೂಸಿಕ್ ಆಲ್ಬಮ್ -ವಾಸುಕಿ ವೈಭವ್ (ಬಡವ ರಾಸ್ಕಲ್ )<br>ಉತ್ತಮ ಸಾಹಿತ್ಯ-ಜಯಂತ್ ಕಾಯ್ಕಿಣಿ (ತೇಲಾಡು ಮುಗಿಲೆ- ಆಕ್ಟ್ 1978 )<br>ಉತ್ತಮ ಹಿನ್ನಲೆಗಾಯಕ-ರಘು ದೀಕ್ಷಿತ್ (ಮಳೆ ಮಳೆಯೇ ಹಾಡು) ( ನಿನ್ನ ಸನಿಹಕೆ )<br>ಉತ್ತಮ ಹಿನ್ನಲೆಗಾಯಕಿ-ಅನುರಾಧಾ ಭಟ್ ( ಧೀರ ಸಮ್ಮೋಹಗಾರ ) ಬಿಚ್ಚುಗತ್ತಿ ಸಿನಿಮಾ<br>ಉತ್ತಮ ಛಾಯಾಗ್ರಹಣ-ಶ್ರೀಶ ಕುಡುವಲ್ಲಿ ( ರತ್ನನ್ ಪ್ರಪಂಚ )<br>ಉತ್ತಮ ಕೊರಿಯೋಗ್ರಫಿ-ಜಾನಿ ಮಾಸ್ಟರ್ ( ಯುವರತ್ನ )<br>ಜೀವಮಾನ ಸಾಧನೆ ಪ್ರಶಸ್ತಿ-ಪುನೀತ್ ರಾಜ್‌ಕುಮಾರ್</p>
]]></content:encoded>
					
		
		
			</item>
	</channel>
</rss>
