<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>health day &#8211; Peepal Media</title>
	<atom:link href="https://peepalmedia.com/tag/health-day/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 23 Nov 2024 12:22:46 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>health day &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಮಹಿಳೆಯರನ್ನು ಖಿನ್ನತೆಗೆ ತಳ್ಳುವ ಬಾಡಿ ಶೇಮಿಂಗ್‌ ಅನ್ನುವ ಕೆಟ್ಟ ಚಾಳಿ</title>
		<link>https://peepalmedia.com/body-shaming-is-a-bad-habit-that-pushes-women-into-depression/</link>
		
		<dc:creator><![CDATA[Peepal Media]]></dc:creator>
		<pubDate>Sat, 23 Nov 2024 12:22:44 +0000</pubDate>
				<category><![CDATA[LGBTQ+]]></category>
		<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[health]]></category>
		<category><![CDATA[health day]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[she]]></category>
		<category><![CDATA[state politics]]></category>
		<category><![CDATA[women]]></category>
		<category><![CDATA[women empowerment]]></category>
		<category><![CDATA[women reservation bill]]></category>
		<category><![CDATA[women&#039;s]]></category>
		<category><![CDATA[writing]]></category>
		<guid isPermaLink="false">https://peepalmedia.com/?p=49509</guid>

					<description><![CDATA[&#8211;ಅಂಜನಿ ನೋಡಪ್ಪ ಇವ್ಳು ಎಷ್ಟು ಸಣ್ಣ ಇದಾಳೆ , ಹೇ ನೋಡೋ ಅವಳು ಎಷ್ಟು ದಪ್ಪ ಇದ್ದಾಳೆ, ಅವಳ ಬಾಡಿ ಕಾಡಂದಿ ತರ ಇದೆ, ಕಾಡೆಮ್ಮೆಯಂಗವಳೆ.. .ಹೀಗೆ ಅತ್ಯಂತ ಹೀನಾಯ ಕಮೆಂಟ್‌ ಪಾಸ್‌ ಮಾಡೋ ಅಂತವ್ರು ನಮ್ಮ ಸುತ್ತ ಮುತ್ತಲೇ ಇದ್ದಾರೆ .ಇಂಥವರಿಗೆ ಬಿಗ್‌ ಬಾಸ್‌ ಮನೆಯಿಂದ ಹೊರಬಂದಂತಹ ಮಾನಸ ದಪ್ಪ ಇದ್ದರೆ….ಏನ್‌ ಪ್ರಾಬ್ಲಮ್ಮೋ ಗೊತ್ತಿಲ್ಲ…….ನಿವೇದಿತ ಗೌಡ ದಪ್ಪ ಆದ್ರೆ ಇವರಿಗೇನು ಖುಷಿನೋ….ಅಥವಾ ಸಮಸ್ಯೆನೋ ಗೊತ್ತಾಗ್ತಿಲ್ಲ……..ಹಾಗೇನೇ ದೊಡ್ಮನೆ ಕುಡಿ ಅಂತ ಈಗೀಗ ಟ್ರೋಲ್‌ಗೆ ಬಲಿಯಾಗ್ತೀರೋ ಹ್ಯಾಟ್ರಿಕ್‌ ಹೀರೋ [&#8230;]]]></description>
										<content:encoded><![CDATA[
<p>&#8211;<strong>ಅಂಜನಿ</strong></p>



<p>ನೋಡಪ್ಪ ಇವ್ಳು ಎಷ್ಟು ಸಣ್ಣ ಇದಾಳೆ , ಹೇ ನೋಡೋ ಅವಳು ಎಷ್ಟು ದಪ್ಪ ಇದ್ದಾಳೆ, ಅವಳ ಬಾಡಿ ಕಾಡಂದಿ ತರ ಇದೆ, ಕಾಡೆಮ್ಮೆಯಂಗವಳೆ.. .ಹೀಗೆ ಅತ್ಯಂತ ಹೀನಾಯ ಕಮೆಂಟ್‌ ಪಾಸ್‌ ಮಾಡೋ ಅಂತವ್ರು ನಮ್ಮ ಸುತ್ತ ಮುತ್ತಲೇ ಇದ್ದಾರೆ .ಇಂಥವರಿಗೆ ಬಿಗ್‌ ಬಾಸ್‌ ಮನೆಯಿಂದ ಹೊರಬಂದಂತಹ ಮಾನಸ ದಪ್ಪ ಇದ್ದರೆ….ಏನ್‌ ಪ್ರಾಬ್ಲಮ್ಮೋ ಗೊತ್ತಿಲ್ಲ…….ನಿವೇದಿತ ಗೌಡ ದಪ್ಪ ಆದ್ರೆ ಇವರಿಗೇನು ಖುಷಿನೋ….ಅಥವಾ ಸಮಸ್ಯೆನೋ ಗೊತ್ತಾಗ್ತಿಲ್ಲ……..ಹಾಗೇನೇ ದೊಡ್ಮನೆ ಕುಡಿ ಅಂತ ಈಗೀಗ ಟ್ರೋಲ್‌ಗೆ ಬಲಿಯಾಗ್ತೀರೋ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಮಗಳು ನೋಡೋಕೆ ಕಪ್ಪಗಿದ್ರೆ….ದಪ್ಪ ಇದ್ರೆ ಇವರು ಯಾಕೆ ಯೋಚನೆ ಮಾಡ್ತಾರೆ ಅನ್ನೋದೂ ಸಹ ಗೊತ್ತಾಗ್ತಿಲ್ಲ….</p>



<p>ಬಾಡಿ ಶೇಮಿಂಗ್! ಉಫ್‌… ಈಗೀಗ ಬಾಡಿ ಶೇಮಿಂಗ್‌ ಅನ್ನೋ ಒಂದು ಕೆಟ್ಟ ಮಾನಸಿಕ ಕಿರುಕುಳವನ್ನು ಕೋಟ್ಯಾಂತರ ಜನ ಗಂಡಸರೂ…ಹೆಂಗಸರೂ ಅನುಭವಿಸ್ತಾಲೇ ಇರ್ತಾರೆ….ಆದರೆ, ನಾನೀಗ ಪರ್ಟಿಕ್ಯುಲರ್‌ ಹೆಣ್ಣು ಮಕ್ಕಳ ಬಾಡೀ ಶೇಮಿಂಗ್‌ ಬಗ್ಗೆ ಮಾತಾಡ್ತಿದಿನಿ. ಹಾಗೇನೇ ಸೋಶಿಯಲ್‌ ಮೀಡಿಯಾ ಅವರಿಗೆ Sexual ಹರಾಸ್‌ ಮಾಡುವಂತಹ, ಮಾನಸಿಕವಾಗಿ ಹಲ್ಲೆ ಮಾಡುವಂತಹ, ಹಾಗೇನೇ ಕಮೆಂಟ್ಸ್‌ ಮುಖಾಂತರ ಹೆಣ್ಣು ಮಕ್ಕಳ ಮಾನಸಿಕ ರೇಪ್‌ ಮಾಡುವಂತಹ ಅಸಹ್ಯ ಮನಸ್ಥಿತಿಗಳ ಬಗ್ಗೆ ಮಾತಾಡ್ತಿದಿನಿ. </p>



<p>ಇನ್ನೂ ಕನ್ನಡದ ಬಿಗ್‌ ಬಾಸ್‌ನಲ್ಲಿ ಲಾಯರ್‌ ಜಗದೀಶ್‌ ಮತ್ತೆ ಆ ಮನೆಯಲ್ಲಿದ್ದ ಮಾನಸ, ಚೈತ್ರ, ಹಂಸ ಮತ್ತಷ್ಟು ಮಂದಿಯ ನಡುವೆ ಆದ ಕೆಲವೊಂದಿಷ್ಟು ಜಗಳದಲ್ಲಿ ಜಗದೀಶ್‌ ವಿರುದ್ಧ ಅವರು ನಡೆದುಕೊಂಡ ರೀತಿ ಅಷ್ಟು ಸರಿ ಇರಲಿಲ್ಲ… ಹೌದು ಒಪ್ಕೊಳೋಣ. ಮಾನಸ ಮಾತನಾಡಿದ್ದು ತಪ್ಪು ಅಂತಾದ್ರೆ ಆಕೆಯ ತಪ್ಪಿನ ಬಗ್ಗೆ ಪ್ರಶ್ನೆ ಮಾಡುವುದು ಒಕೆ. ಆದ್ರೆ, ಆಕೆಯ ದೇಹದ ಆಕಾರದ ವಿಚಾರಕ್ಕೆ ಯಾಕೆ ಬರ್ತೀರಿ ಅನ್ನೋದು ಪ್ರಶ್ನೆ. ಮಾನಸಾಳ ದೇಹವನ್ನು ಆಕೆಯ ಮುಖವನ್ನು ಹಂದಿಗೆ ಹೋಲಿಸೋದು ಸರಿನಾ?</p>



<p>ಇನ್ನು ಚಂದನ್‌ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್‌ ಮಾಡಿಕೊಂಡ್ರು. …ಪರಸ್ಪರ ಅವರೇ ಒಬ್ಬರಿಗೊಬ್ಬರು ಗೌರವಿಸಿ ಡಿವೋರ್ಸ್‌ ಪಡೆದುಕೊಂಡು ಅವರ ಮುಂದಿನ ಜೀವನ ನೋಡಿಕೊಳ್ತಾ ಇದ್ದಾರೆ. ಆದರೆ ಕೆಲವರು ನಿವೇದಿತಾ ಬಾಡಿ ವೇರಿಯೇಶನ್‌ಗಳನ್ನು ಇಟ್ಟುಕೊಂಡು ಆಕೆಗೆ ಕ್ಯಾರೆಕ್ಟರ್‌ ಲೆಸ್‌ ಸರ್ಟಿಫಿಕೇಟ್‌ಗಳನ್ನು ಕೊಟ್ಟು ಕಮೆಂಟ್‌ ಮಾಡ್ತೀರೋರು ಎಷ್ಟು ಸರಿ? ಹೀಗೆ ಹೇಳ್ತಾ ಹೋದ್ರೆ ಕೋಟಿಗಟ್ಟಲೆ ಹೆಣ್ಣು ಮಕ್ಕಳ ಲಿಸ್ಟ್‌ ಆಗ್ತಾ ಹೋಗುತ್ತೆ.</p>



<p>ಈ ರೀತಿ ಕಮೆಂಟ್‌ ಮಾಡುವವರು ಮೊದಲು ನಿಮ್ಮ ನಿಮ್ಮ ದೇಹದ ಸ್ಥಿತಿಯನ್ನು ಒಮ್ಮೆ ಸ್ವತಃ ನೀವೇ ನೋಡ್ಕೋಳೋದು ಉತ್ತಮ ಅನಿಸುತ್ತೆ. ಹಾಗೇನೇ ನಿಮ್ಮ ಮನೆಯಲ್ಲಿರುವಂತಹ ನಿಮ್ಮ ಅಮ್ಮ, ಅಕ್ಕ, ತಂಗಿ. ಹೆಂಡತಿ, ಮಕ್ಕಳ ದೇಹದ ಸ್ಥಿತಿಯನ್ನು , ಅವರ ಬಣ್ಣವನ್ನೂ ಒಮ್ಮೆ ಯೋಚನೆ ಮಾಡಿ …….ಎಲ್ಲರೂ ಫಿಟ್‌ ಅಂಡ್‌ ಫೈನ್‌..ಫೇರ್‌ ಆಗಿನೇ ಇದಾರ ಅಂತ ಮೊದಲು ನಮ್ಮನ್ನ ನಾವು ಪ್ರಶ್ನೆ ಮಾಡಿಕೊಳ್ಳುವುದು ಒಳ್ಳೆಯದು ಅನಿಸುತ್ತೆ. </p>



<p>ಹೆಣ್ಣು ಅಥವಾ ಗಂಡಿನ ದೇಹ ಫಿಟ್‌ ಇಲ್ಲದೇ ತೀರಾ ದಪ್ಪಾನೋ ಸಣ್ಣನೋ ಇದೆ ಅಂದ್ರೆ ಅವರಿಗೆ ಅವರದ್ದೇ ಆದಂತಹ ಕೆಲವು ಆರೋಗ್ಯ ಸಮಸ್ಯೆಗಳು ಕಾಋಣವಾಗಿರುತ್ತವೆ. ಇಬ್ಬರ ಬಗ್ಗೆನೂ ಯೋಚನೆ ಮಾಡಬೇಕು ಅಂತ ಬಂದಾಗ ಕೆಲವರಿಗೆ ಜನಟಿಕ್ಸ್‌ ಪ್ರಾಬ್ಲಮ್‌ ಅಂದ್ರೆ, ಹಲವರಿಗೆ ಒತ್ತಡದ ಜೀವನ…..ಅವರ ಲೈಫ್‌ ಸ್ಟೈಲ್‌…..ಫುಡ್‌ ರೋಟೀನ್‌…..ನಿದ್ದೆ…….ಟೈಮ್‌ ಮ್ಯಾನೇಜ್‌ಮೆಂಟ್‌ ಇವೆಲ್ಲವೂ ಒಂದು ರೀತಿ ಕಾರಣ ಆಗಿರುತ್ತವೆ. ಇವೆಲ್ಲವನ್ನೂ ಒಂದು ಕಡೆ ಇಟ್ಟು ಕೇವಲ ಹೆಣ್ಣಿನ ದೇಹದ ಬಗ್ಗೇನೇ ಮಾತಾಡ್ಬೇಕು ಅಂದ್ರೆ ಆಕೆಯ ಬಾಡಿ ಹಾರ್ಮೋನಲ್‌ ಚೇಂಚಸ್‌, ಆಕೆಯ ದೇಹದ ಏರು ಪೇರಿನ ಮೇಲೆ ಹೆಚ್ಚು ಪರಿಣಾಮವನ್ನು ಬೀರತ್ತೆ……ಸಾಮಾನ್ಯವಾಗಿ 15 ವರ್ಷದಿಂದ 45 ವರ್ಷದ ಹೆಣ್ಣು ಮಕ್ಕಳಿಗೆ pcos ಅಂದ್ರೆ polycystic ovary syndrome ಮತ್ತೆ PCOD ಮೀನ್ಸ್‌ Polycystic Ovarian Disease ಈ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳೋದ್ರಿಂದ ಅವರ ಪೀರಿಯಡ್ಸ್‌ irregular ಆಗುತ್ತೆ, ಅವರ ದೇಹದ ತೂಕ ಹೆಚ್ಚಾಗುತ್ತೆ…..ಅವರ ಮುಖದಲ್ಲಿ ಎಕ್ಸೆಸ್‌ ಆಫ್‌ ಹೇರ್‌ ಕಾಣಿಸಿಕೊಳ್ಳುತ್ತೆ… ಮೊಡವೆಗಳು, ಬ್ಲಾಕ್‌ ಪಿಗ್‌ ಮೆಂಟೇಶನ್‌ ಕಾಣಿಸಿಕೊಳ್ಳುತ್ತೆ ….ಸಮ್‌ ಟೈಮ್ಸ್‌ ಈ ಟೈಮಲ್ಲಿ ಅವರು ಏನೇ ವರ್ಕ್‌ಔಟ್‌ ಮಾಡಿದ್ರು ವರ್ಕ್‌ ಆಗದೇ ಇರುವಂತಹ ಸ್ಥಿತಿ ಇರುತ್ತೆ…..ಇನ್ನೂ ಕೆಲವರು ಈ ಸಮಸ್ಯೆಯ ಟ್ರೀಟ್‌ಮೆಂಟ್‌ ಸಂದರ್ಭದಲ್ಲಿ ತೆಗೆದುಕೊಳ್ಳುವಂತಹ ಮೆಡಿಸಿನ್ಸ್‌ಯಿಂದ ದಪ್ಪ ಆಗಿರೋರು ಇರ್ತಾರೆ……….ಇನ್ನೂ ಸಾಮಾನ್ಯವಾಗಿ ಹೆಣ್ಣು ಮಕ್ಕಳು 40 ವಯಸ್ಸಿನ ನಂತರ ತನ್ನ Menopause ಸ್ಥಿತಿಗೆ ಹೋಗೋದ್ರಿಂದ ಅವರ ಆ ಮುಟ್ಟು ನಿಲ್ಲುವಿಕೆಯ ಸಂದರ್ಭದಲ್ಲಿ ದೇಹದಲ್ಲಿ ಇಷ್ಟ್ರೋಜನ್‌ ಎನ್ನುವ ಹಾರ್ಮೋನ್‌ ಉತ್ಪತ್ತಿ ಆಗೋದು ಕಡಿಮೆ ಆಗುತ್ತೆ…ಹಾಗೇನೇ ಅವರ ದೇಹದ ವ್ಯಾಯಾಮದ ಶಕ್ತಿ ಸಹ ಕಡಿಮೆ ಆಗ್ತಾ ಬರುತ್ತೆ… ಇದರಿಂದ ದೇಹದಲ್ಲಿರೊ ಕ್ಯಾಲೋರೀಸ್‌ ಬೇಗ ಬರ್ನ್‌ ಆಗಲಿಕ್ಕೆ ಶುರುವಾಗಿ ಕೆಲವರಿಗೆ ಫ್ಯಾಟ್‌ಕಂಟೆಂಟ್‌ ಶುರುವಾಗ್ತಾ ಬರುತ್ತೆ …ದೇಹದಲ್ಲಿ ಸೊಂಟದ ಸುತ್ತ ಬೊಜ್ಜು ಬೆಳೆಯೋದಕ್ಕೆ ಸ್ಟಾರ್ಟ್‌ ಆಗುತ್ತೆ.</p>



<p>ಇನ್ನೂ ಕೆಲವರಿಗೆ ಮೆನೋಪಾಸ್‌ ಟೈಮಲ್ಲಿ ಸರಿಯಾಗಿ ನಿದ್ರೆ ಮಾಡಲಿಕ್ಕೆ ಆಗೋದಿಲ್ಲ. ಆಗ ದೇಹದಲ್ಲಿ ಕಾರ್ಟಿಸೋಲ್‌ ಅನ್ನುವಂತಹ ಅಂಶ ಹೆಚ್ಚಾಗೋದ್ರಿಂದ ಶುಗರ್‌ ಲೆವೆಲ್‌ ಕಡಿಮೆ ಆಗಿ, ಆ ಸಮಯದಲ್ಲಿ ಕೊಬ್ಬಿನಾಂಶ ಇರುವಂತಹ ಆಹಾರವನ್ನು ತಿನ್ನಬೇಕು ಅಂತ ದೇಹ ಬಯಸುತ್ತೆ…. ಅಂತಹ ಆಹಾರವನ್ನು ಸೇವಿಸೋದ್ರಿಂದ ದಪ್ಪ ಆಗ್ತಾರೆ….ಮತ್ತೆ ಮೆನೋಪಾಸ್‌ ನಂತರ ಇಷ್ಟ್ರೋಜನ್‌ ಮತ್ತು ಕ್ಯಾಲ್ಶಿಯಂ ಕಂಟೆಂಟ್‌ ಕಡಿಮೆ ಆಗೋದ್ರಿಂದ ಅವರಿಗೆ ಮಂಡಿ ನೋವು ಸ್ಟಾರ್ಟ್‌ ಆಗಿ ಸರಿಯಾಗಿ ನಡೆಯಲಿಕ್ಕೆ ಆಗದೆ ಕೆಲವು ಹೆಂಗಸರು ದಪ್ಪ ಆಗ್ತಾರೆ…..ಕೆಲವರು ಮಕ್ಕಳನ್ನು ಹಡೆದ ನಂತರ ದಪ್ಪ ಆಗ್ತಾರೆ…ಹೀಗೆ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ  ದೇಹದಲ್ಲಿ ಸವಾಲುಗಳನ್ನು ಫೇಸ್‌ ಮಾಡ್ತಿರುವಾಗ ಅವರ ದೇಹದ ಬಗ್ಗೆ ಕೆಟ್ಟದಾಗಿ ಮಾತಾನಾಡೋದಿಕ್ಕೆ ನಿಮಗೆಲ್ಲಾ ಯಾವ ನೈತಿಕತೆ ಇದೆ ಅಂತ….ಈ ರೀತಿ ಒಂದು ಹೆಣ್ಣಿಗೆ ಆಕೆಯ ದೇಹ ಆರೋಗ್ಯಕ್ಕೆ ಎದುರಾಗುವ ಸಮಸ್ಯೆಗಳಿಗೂ ಒಬ್ಬ ಗಂಡಿಗೆ ಆತನ ದೇಹಕ್ಕೆ ಎದುರಾಗುವ ಸವಾಲುಗಳಿಗೂ ತುಂಬಾ ಡಿಫರೆನ್ಸ್‌ಗಳು ಇರೋದ್ರಿಂದ ಒಬ್ಬ ಹೆಣ್ಣಿನ ದೇಹದ ಆಕಾರದ ಬಗ್ಗೆ ಕೀಳಾಗಿ ಮಾತನಾಡುವ ಮುನ್ನ First Educate your Mind about women Issues.</p>



<p>ನಮ್ಮ ನಿಮ್ಮೆಲ್ಲರ ಹಾಗೇ ಕುಟುಂಬ ಒಂದಿಷ್ಟು ಸ್ನೇಹಿತರು ತಮ್ಮದೇ ಪುಟ್ಟ ಪ್ರಪಂಚ ಹೊಂದಿದ ವ್ಯಕ್ತಿಗೆ ಸಂಬಂಧವೇ ಇಲ್ಲದೆ ಆಕೆಯ ರೂಪದ ಕುರಿತ ಹೋಲಿಕೆ ನಡೆಸಲು ಸಾವಿರಾರು ಜನರು ಮುಗಿಬಿದ್ದಿದ್ದಾರೆ. ಇನ್ನೂ ಮಾನಸಳನ್ನೇ ಉದಾಹರಣೆಯಾಗಿ ತೆಗೆದುಕೊಂಡ್ರೆ ಆಕೆ ಮತ್ತು ಆಕೆಯ ಪತಿ ಈ ರೀತಿಯ ಕಮೆಂಟ್‌ಗಳಿಗೆ ಕುಗ್ಗದೇ ಅದನ್ನು ಜೊತೆಯಾಗಿ ನಿಂತು ಎದುರಿಸಿದ್ದು ಧೈರ್ಯದ ನಡೆ. ಆದರೆ ಈ ಮನಸ್ಥಿತಿ ಎಲ್ಲರಿಗೂ ಇರೋದಿಲ್ಲ. ಇರೋದಿಕ್ಕೆ ಸಾಧ್ಯನೂ ಇಲ್ಲ. ನಿಮ್ಮ ಈ ರೀತಿಯ ಬಾಡಿ ಶೇಮಿಂಗ್‌ನಿಂದ ಅವಮಾನಗೊಂಡು ಮಾನಸಿಕ ಹಿಂಸೆಯಿಂದ ಅದೆಷ್ಟೋ ಜನ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ಬಹಳಷ್ಟು ಇವೆ.</p>



<p>ಇನ್ನೂ ಈ ರೀತಿ ಬೇರೋಬ್ಬ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ದೃಷ್ಟಿಯಲ್ಲಿ ನೋಡ್ತಿರೋರಿಗೆ ನಿಮ್ಮ ನಿಮ್ಮ ಮನೆಯಲ್ಲಿರುವಂತಹ ಹೆಣ್ಣು ಮಕ್ಕಳ ಸೇಫ್ಟಿ ಬಗ್ಗೆ ಮಾತನಾಡುವಂತಹ ಯಾವುದೇ ರೀತಿಯ ನೈತಿಕತೆ ನಿಮಗೆ ಇರೋದಿಲ್ಲ……ಯಾಕಂದ್ರೆ ನೀವು ಬೇರೊಬ್ಬ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಕೋನದಲ್ಲಿ, ನೀವು ಅವರ ಬಗ್ಗೆ ಯೋಚನೆ ಮಾಡುವ ರೀತಿಯಲ್ಲೇ ಮತ್ತೊಂದು ಕಡೆ, ಹೀಗೇನೇ ನಿಮ್ಮಂತಹದ್ದೇ ಮನಸ್ಥಿತಿಯುಳ್ಳ, ನಿಮ್ಮದೇ ರೀತಿ ಯೋಚನೆ ಮಾಡುವಂತಹ ಗುಂಪೊಂದು ಈ ಕಡೆ ನಿಮ್ಮ ನಿಮ್ಮ ಮನೆಯ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಕೆಟ್ಟ ರೀತಿಯಲ್ಲಿ ಕಮೆಂಟ್‌ ಪಾಸ್‌ ಮಾಡ್ತಿರ್ತಾರೆ ಅನ್ನೋದನ್ನೂ ನಿಮ್ಮ ತಲೆಯಲ್ಲಿ ಇರಲಿ.</p>



<p>ಹೆಣ್ಣು ಮಕ್ಕಳು ತನ್ನ ಪೀರಿಯಡ್ಸ್‌ ಟೈಮ್‌ನಲ್ಲಿ ಒಂದು ಸ್ಯಾನಿಟರಿ ಪ್ಯಾಡ್‌ಗಳನ್ನ ಅಂಗಡಿಯಲ್ಲಿ ಕೇಳಲು ಮುಜುಗರ ಮಾಡ್ಕೋತಾಳೆ….ಇನ್ನೂ ಈ ರೀತಿ ಹೆಣ್ಣನ್ನ ಹಿಯಾಳಿಸುವಂತಹ ಮನಸ್ಥಿತಿಗಳಿಗೆ ಹೆದರಿ ಹೆಣ್ಣು ಪೀರಿಯಡ್ಸ್‌ ಆಗೋದೇ ದೊಡ್ಡ ಅಪರಾಧವೇನೋ ಎಂಬಂತೆ ಸ್ಯಾನಿಟರಿ ಪ್ಯಾಡ್‌ಗಳನ್ನು ತರುವಾಗ ಅದನ್ನ ಯಾರೂ ನೋಡಬಾರದು…ನೋಡಿದ್ರೆ ನನ್ನ ಏನೆಲ್ಲಾ ಅನ್ಕೊತಾರೋ ಅನ್ನುವ ಮನಸ್ಥಿತಿಯಿಂದ ಅದನ್ನು ಕಾಣದಂತೆ ಬ್ಲಾಕ್‌ ಕವರ್‌ ಅಥವಾ ಪೇಪರ್‌ನಲ್ಲಿ ಫುಲ್‌ ಕವರ್‌ ಮಾಡಿ ಬಚ್ಚಿಟ್ಕೊಂಡು ತರುವಂತೆ ಆಗಿದೆ…</p>



<p>ಒಬ್ಬ ಮಹಿಳೆಯ ಇಡೀ ಅಸ್ತಿತ್ವವನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕಿಡುವುದು ಮತ್ತು ಹಾಸ್ಯಾಸ್ಪದವನ್ನಾಗಿಸುವುದು ಅಷ್ಟು ಸಾಮಾನ್ಯವಾಗಿದ್ದರೆ ನಮ್ಮಲ್ಲಿ ಮಾನವೀಯತೆ ಮತ್ತು ನೈತಿಕತೆ ಕೆಟ್ಟು ನಾರುತ್ತಿದೆ ಎನ್ನುವುದರಲ್ಲಿ ಯಾವುದೇ ತಪ್ಪಿಲ್ಲ. ಟ್ರೋಲ್‌ ಮಾಡುವ ಪ್ರತಿಯೊಬ್ಬರೂ ಕೆಟ್ಟವರಲ್ಲ…. ಕಮೆಂಟ್‌ ಮಾಡುವ ಎಲ್ಲರೂ ಕೆಟ್ಟವರು ಅಂತ ಇಲ್ಲಿ ನಾನು ಹೇಳ್ತಿಲ್ಲ….ಕೆಲ ಮನಸ್ಥಿತಿಗಳು ಟ್ರೋಲ್‌ ಮಾಡೋದು ಮಾಡ್ತೀವಿ ಕಮೆಂಟ್‌ ಮಾಡೋದು ಮಾಡ್ತೀವಿ ಎದುರಿಸೋದು ಬಿಡೋದು ನಿಮ್ಮಿಷ್ಟ ಅಂತ ಕೆಲವರು ಕ್ರೂರ ಮೃಗಗಳ ರೀತಿ ಯೋಚನೆ ಮಾಡ್ತಿರೋರು ಇರ್ತಾರೆ…ಹಾಗಾಗೀ ಪರ್ಟಿಕ್ಯುಲರ್‌ ಅಂತವರಿಗೆ ಮತ್ತೆ ಎಲ್ಲಾ ಗಂಡು ಮನಸ್ಥಿತಿಗಳು ಎಲ್ಲಾ ರೀತಿಯ ಹೆಣ್ಣಿನ ಸಮಸ್ಯೆಗಳನ್ನ ಅರಿತುಕೊಳ್ಳಬೇಕಾದದ್ದು ನಾವುಗಳು ನಮ್ಮ ತಾಯಿಗೆ ಅಥವಾ ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಕೊಡುವ ಗೌರವ ಆಗುತ್ತೆ.</p>



<p>ಕೊನೆಯದಾಗಿ, ಸೋಶಿಯಲ್‌ ಮೀಡಿಯಾಗಳಲ್ಲಿ ಬರುವಂತಹ ಯಾವುದೇ ಪೋಸ್ಟ್‌ಗಳು ಅಸಮಾಧಾನ ಉಂಟು ಮಾಡಿದ್ರೆ….ಅಸಮಾಧಾನ ಉಂಟು ಮಾಡಿದ ವಿಷಯವನ್ನು ಅವರಿಗೆ ಅರಿವು ಮೂಡಿಸುವಂತೆ ಕಮೆಂಟ್‌ ಮಾಡಿ ತಿಳಿಸಿ…..ಅದನ್ನು ಬಿಟ್ಟು ಇನ್ನೊಬ್ರ ಬಾಡಿ ಶೇಮೀಂಗ್‌ ಮಾಡಿ ನಿಮಗೆ ಬರುವಂತಹದ್ದು ಏನೂ ಇಲ್ಲ….…..ಪುಟ್ಟ ಪುಟ್ಚ ಮಕ್ಕಳ ಕೈಲೂ ಈಗ ಫೋನ್‌ಗಳು ಬಳಕೆ ಆಗೋದ್ರಿಂದ …..ನೀವು ಒಂದು ಹೆಣ್ಣನ್ನ ಕೆಟ್ಟ ದೃಷ್ಟಿಕೋನದಲ್ಲಿ ನೋಡಿ ಕಮೆಂಟ್‌ ಮಾಡಿದ್ರೆ ನಿಮ್ಮ ನೆಕ್ಸ್ಟ್‌ ಜನರೇಶನ್‌ ಗೆ ನೀವು ಇದನ್ನೇ ಪ್ರವೋಕ್‌ ಮಾಡಿದಾಗೆ ಆಗುತ್ತೆ… …..ನಮ್ಮ ಸಾಮಾಜಿಕ ಜಾಲತಾಣಗಳ ಬಳಕೆ ಸಮಾಜದ ಒಳ್ಳೆ ರೀತಿಯ ಬದಲಾವಣೆಗೆ ಉಪಯೋಗಿಸಿಕೊಳ್ಳೋಣ.</p>



<p></p>
]]></content:encoded>
					
		
		
			</item>
		<item>
		<title>ಮನೋರೋಗಕ್ಕೆ ಮದ್ದಿದೆ</title>
		<link>https://peepalmedia.com/mnorogakke-maddide/</link>
		
		<dc:creator><![CDATA[Yogesh Master]]></dc:creator>
		<pubDate>Mon, 10 Oct 2022 06:16:39 +0000</pubDate>
				<category><![CDATA[ವಿಶೇಷ]]></category>
		<category><![CDATA[bengalure]]></category>
		<category><![CDATA[health day]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mental health]]></category>
		<category><![CDATA[mental health day]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[world]]></category>
		<guid isPermaLink="false">https://peepalmedia.com/?p=9788</guid>

					<description><![CDATA[ಮಾನಸಿಕ, ಭಾವನಾತ್ಮಕ ಮತ್ತು ಸಾಂದರ್ಭಿಕ ಸಮಸ್ಯೆಗಳು ಮನೋರೋಗವಾಗಿ ಉಲ್ಬಣಿಸುವ ಮುನ್ನವೇ ಎಚ್ಚೆತ್ತುಕೊಳ್ಳುವ ಮತ್ತು ಉಪಚರಿಸಿಕೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಖ್ಯಾತ ಆಪ್ತ ಸಮಾಲೋಚಕರಾದ ಯೋಗೇಶ್ ಮಾಸ್ಟರ್. ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಬೆಳಕಿಗೆ ಬಂದ ವಿಷಯವಿದು. ಭಾರತದ ಜನಸಂಖ್ಯೆಯಲ್ಲಿ ನೂರಕ್ಕೆ ಸುಮಾರು 7.5 ರಷ್ಟು ಜನ ಒಂದಲ್ಲಾ ಒಂದು ಮನೋರೋಗದಿಂದ ಬಳಲುತ್ತಿದ್ದಾರೆ. ಈ ಮನೋರೋಗ&#160; ಆರನೇ ಒಂದರಷ್ಟು ಆರೋಗ್ಯದ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ವಿಶ್ವದ ಸುಮಾರು ಶೇಕಡಾ ಹದಿನೈದರಷ್ಟು ಮಾನಸಿಕ ಮತ್ತು ನರದೌರ್ಬಲ್ಯದ ಸಮಸ್ಯೆಗಳನ್ನು ಭಾರತ [&#8230;]]]></description>
										<content:encoded><![CDATA[
<p><strong>ಮಾನಸಿಕ, ಭಾವನಾತ್ಮಕ ಮತ್ತು ಸಾಂದರ್ಭಿಕ ಸಮಸ್ಯೆಗಳು ಮನೋರೋಗವಾಗಿ ಉಲ್ಬಣಿಸುವ ಮುನ್ನವೇ ಎಚ್ಚೆತ್ತುಕೊಳ್ಳುವ ಮತ್ತು ಉಪಚರಿಸಿಕೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಖ್ಯಾತ ಆಪ್ತ ಸಮಾಲೋಚಕರಾದ ಯೋಗೇಶ್ ಮಾಸ್ಟರ್.</strong></p>



<p>ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ಬೆಳಕಿಗೆ ಬಂದ ವಿಷಯವಿದು. ಭಾರತದ ಜನಸಂಖ್ಯೆಯಲ್ಲಿ ನೂರಕ್ಕೆ ಸುಮಾರು 7.5 ರಷ್ಟು ಜನ ಒಂದಲ್ಲಾ ಒಂದು ಮನೋರೋಗದಿಂದ ಬಳಲುತ್ತಿದ್ದಾರೆ. ಈ ಮನೋರೋಗ&nbsp; ಆರನೇ ಒಂದರಷ್ಟು ಆರೋಗ್ಯದ ಮೇಲೆ ನೇರವಾಗಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ. ವಿಶ್ವದ ಸುಮಾರು ಶೇಕಡಾ ಹದಿನೈದರಷ್ಟು ಮಾನಸಿಕ ಮತ್ತು ನರದೌರ್ಬಲ್ಯದ ಸಮಸ್ಯೆಗಳನ್ನು ಭಾರತ ತಾನೊಂದೇ ಹೊತ್ತುಕೊಂಡಿದೆ. ಇನ್ನೂ ಗಾಬರಿಯ ವಿಷಯವೆಂದರೆ ಭಾರತದಲ್ಲಿ ನುರಿತ ಮತ್ತು ವೃತ್ತಿಪರ ಮನೋರೋಗ ತಜ್ಞರು ಸುಮಾರು ನಾಲ್ಕು ಸಾವಿರಕ್ಕೂ ಕಡಿಮೆ ಇದ್ದಾರೆ.</p>



<p>ಭಾರತದಲ್ಲಿ ಮಾನಸಿಕ ಸಮಸ್ಯೆಗಳು ಮತ್ತು ಮನೋರೋಗಗಳು ಇಷ್ಟರ ಮಟ್ಟಿಗೆ ತೀವ್ರತರವಾಗಿದ್ದರೂ, ಕೆಲವು ಅಂಕಿಅಂಶಗಳ ಪ್ರಕಾರ ಸೈಕ್ರಿಯಾಟಿಸ್ಟ್‌ಗಳ ಸಂಖ್ಯೆ ಪ್ರತಿ ಹತ್ತು ಸಾವಿರ ಜನಕ್ಕೆ ಒಂದಕ್ಕಿಂತ ಕಡಿಮೆ ಇದ್ದಾರೆ. ಇನ್ನು ಸಮಾಲೋಚಕರು ಎಂದರೆ ಒಂದೋ ಕನಿಷ್ಠ ತರಬೇತಿ ಪಡೆದವರು ಅಥವಾ ತರಬೇತಿಯನ್ನೇ ಪಡೆಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ವಿಶ್ಲೇಷಣೆಗಳು ವೈಜ್ಞಾನಿಕವಾಗಿರದೇ ಕೆಲವು ಸಲ ಸಹಾಯವಾಗುವುದಕ್ಕಿಂತ ತೊಂದರೆಯೇ ಆಗಬಹುದು.</p>



<p>ಒಟ್ಟಾರೆ ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆ ಮಾತನ್ನು ನಿಜವಾಗಿಸುವಂತಹ ಪ್ರಯತ್ನದಲ್ಲಿದೆ ನಮ್ಮ ಸದ್ಯದ ಮಾನಸಿಕ ಆರೋಗ್ಯ ನಿರ್ವಹಣೆಯ ವ್ಯವಸ್ಥೆ.</p>



<p></p>


<div class="wp-block-image">
<figure class="aligncenter size-full is-resized"><img fetchpriority="high" decoding="async" src="https://peepalmedia.com/wp-content/uploads/2022/10/WhatsApp-Image-2022-10-10-at-12.18.30-PM.jpeg" alt="" class="wp-image-9846" width="712" height="396"/></figure></div>


<p><strong>ಹದಗೆಟ್ಟ ವ್ಯವಸ್ಥೆಗೆ ಕಾರಣಗಳು..</strong></p>



<p>ಭಾರತದಲ್ಲಿ ಮಾನಸಿಕ ಆರೋಗ್ಯ ನಿರ್ವಹಣೆಯ ವ್ಯವಸ್ಥೆ ಹದಗೆಡಲು ಕಾರಣವೇನು ಎಂಬುದನ್ನು ಗಮನಿಸಿದರೆ ಮೊಟ್ಟ ಮೊದಲನೆಯದಾಗಿ ನಿರ್ಲಕ್ಷ್ಯ, ತನ್ನಲ್ಲಿ ಮಾನಸಿಕ ಸಮಸ್ಯೆ ಇರುವುದೇ ಇಲ್ಲ ಎಂಬ ಭ್ರಮೆ, ಆತ್ಮಾವಲೋಕನ ಅಥವಾ ಸ್ವಯಂವಿಶ್ಲೇಷಣೆಗೆ ತಯಾರಿಲ್ಲದಿರುವುದು, ಸಾಮಾಜಿಕ ಕಳಂಕವೆಂಬಂತೆ ಮನೋರೋಗವನ್ನು ಕಾಣುವುದು; ಹೀಗೆ ಹಲವು ಕಾರಣಗಳಿವೆ. ಆದರೆ ಮಾನಸಿಕ ಆರೋಗ್ಯದ ವ್ಯವಸ್ಥೆಯನ್ನು ಕಾಪಾಡುವ ವಾತಾವರಣವನ್ನು ನಿರ್ಮಾಣ ಮಾಡುವುದರಲ್ಲಿ ಮತ್ತು ಅದರ ಬಗ್ಗೆ ಅರಿವು ನೀಡುವುದರಲ್ಲಿ ಶಿಕ್ಷಣ ಸಂಸ್ಥೆಗಳು ಮೊಟ್ಟ ಮೊದಲನೆಯ ಸ್ಥಾನವನ್ನು ಹೊಂದಲು ಸಾಧ್ಯ. ವಾಸ್ತವವಾಗಿ ಇದು ಮನೆಯಲ್ಲಿಯೇ ಪ್ರಾರಂಭವಾಗಬೇಕು. ಆದರೆ ಭಾರತವಿನ್ನೂ ಗುಣಮಟ್ಟದ ಜೀವನ, ಆಲೋಚನೆ, ಆರ್ಥಿಕ ಸ್ಥಿತಿ, ಶಿಕ್ಷಣ, ಉದ್ಯೋಗ, ಗಳಿಕೆ, ಸಂವಹನ, ಸಂವೇದನೆ, ಸಂಬಂಧ, ಆಡಳಿತ ವ್ಯವಸ್ಥೆಗಳನ್ನು ಅಗತ್ಯವಿರುವಷ್ಟರ ಮಟ್ಟಿಗೆ ಖಂಡಿತ ಹೊಂದಿಲ್ಲ. ಹಾಗಾಗಿ ಮನೆಯೇ ಮೊದಲ ಪಾಠಶಾಲೆಯಾದರೂ, ಮನೆಗಳನ್ನು ನೆಚ್ಚಿಕೊಳ್ಳುವಷ್ಟು ಧೈರ್ಯ ತಾಳಲಾಗದು. ಹೋಗಲಿ, ಶಿಕ್ಷಣ ಸಂಸ್ಥೆಗಳಾದರೂ ಈ ಪಾತ್ರವನ್ನು ವಹಿಸಬೇಕು. ಆದರೆ ಮಗುವಿನ ಉಚ್ಚಾರಣೆಯ ಸಮಸ್ಯೆಯನ್ನು ಅಥವಾ ಕಲಿಕೆಯ ನ್ಯೂನ್ಯತೆಯನ್ನು ಅಣಕಿಸುವ ಅಥವಾ ದಂಡಿಸುವ ಕುಚೇಷ್ಟೆಯ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸರಿಸುತ್ತಾ ಮಜ ತೆಗೆದುಕೊಳ್ಳುವ ಶಿಕ್ಷಕರು ಶಿಕ್ಷಣ ಸಂಸ್ಥೆಗಳಲ್ಲಿದ್ದರೆ ಎಂತಹ ಮಾನಸಿಕ ಆರೋಗ್ಯದ ಪ್ರತಿನಿಧಿಗಳನ್ನು ನಾವು ನಿರೀಕ್ಷಿಸಬಹುದು!</p>



<p></p>



<p></p>



<p><strong>ಮನೋರೋಗ ಅಂದರೆ ಯಾವುದು? ಮನೋರೋಗಿಗಳು ಎಂದರೆ ಯಾರು?</strong></p>



<p>ಯಾರನ್ನೂ ಸೇರದೇ, ತಮ್ಮ ಪಾಡಿಗೆ ತಾವು ಏನೇನೋ ಮಾತಾಡಿಕೊಂಡು, ಯಾವುದೋ ಮೂಲೆಯಲ್ಲಿ, ಕತ್ತಲೆಯಲ್ಲಿ, ಯಾರಿಗೂ, ಯಾವುದಕ್ಕೂ ಸ್ಪಂದಿಸದೇ, ಅಥವಾ ಎಲ್ಲಕ್ಕೂ ಭಯಂಕರವಾಗಿ ಪ್ರತಿಕ್ರಿಯಿಸುತ್ತಾ ಇರುವವರೋ ಅಥವಾ ಬಟ್ಟೆ ಹರಿದುಕೊಂಡು, ಯಾರನ್ನೂ ಗುರುತಿಸದೇ, ಯಾರೆಂದರೆ ಅವರಿಗೆ ಕಲ್ಲುಗಳಲ್ಲಿ ಹೊಡೆಯುತ್ತಾ ಇರುವವರು ಎಂದೇನಾದರೂ ಅಂದುಕೊಂಡಿದ್ದರೆ ಅವರ ಬಗ್ಗೆ ನನಗೆ ತೀವ್ರ ಅನುಕಂಪವಿದೆ.</p>



<p>ತಲೆಗೆ, ಕಣ್ಣಿಗೆ, ಹೊಟ್ಟೆಗೆ, ಬೆನ್ನಿಗೆ, ಚರ್ಮಕ್ಕೆ, ಕೈ ಕಾಲಿಗೆ ನೋವೋ, ಬಾವೋ, ತುರಿಕೆಯೋ, ಊತವೋ, ಉರಿಯೋ ಎಂತದ್ದೋ ಬರುತ್ತದೆ. ಯಾವುದೇ ಕಾರಣದಿಂದ ಸಮಸ್ಯೆ ಬಂದು ಅದು ಆ ಹೊತ್ತಿಗೆ, ಒಂದು ಮಟ್ಟಕ್ಕೆ ಕಾಣಿಸಿಕೊಳ್ಳುವುದು. ಅದಕ್ಕೆ ಬೇಕಾದ ಔಷಧವನ್ನು ತೆಗೆದುಕೊಳ್ಳುತ್ತೇವೆ. ನಿವಾರಿಸಿಕೊಳ್ಳುತ್ತೇವೆ. ನೋವು, ಬಾವು, ಊತ, ಉರಿ ಹೋಯಿತೆಂದರೆ ಸಮಸ್ಯೆ ಹೋಯಿತೆಂದರ್ಥ. ಒಂದು ವೇಳೆ ಯಾವುದೇ ಒಂದು ಸಮಸ್ಯೆ ಬಂದು, ಸಣ್ಣ ಪುಟ್ಟ ಮದ್ದುಗಳಿಂದ, ಉಪಚಾರಗಳಿಂದ ಹೋಗದೇ ಒಂದೇ ಸಮನೆ ಕಾಡುತ್ತಿದ್ದರೆ ಅದಕ್ಕೆ ರೋಗ ಎನ್ನಬಹುದೇನೋ. ಅದಕ್ಕೂ ದೀರ್ಘಕಾಲದ ಉಪಚಾರ, ನಿಯಮಿತ ಮದ್ದಿನ ಸೇವನೆ ಇರುತ್ತದೆ. ಒಟ್ಟಾರೆ ದೇಹಕ್ಕೆ ಏನಾದರೂ ಆದರೆ ಕಾಣುವಂತಹ ಲಕ್ಷಣಗಳಿಂದ ಸಮಸ್ಯೆಯನ್ನೋ, ರೋಗವನ್ನೋ ಪತ್ತೆ ಹಚ್ಚಿ ಅದಕ್ಕೆ ಅಗತ್ಯವಿರುವ ಚಿಕಿತ್ಸೆ ಮಾಡುತ್ತೇವೆ ಅಥವಾ ಮಾಡಿಕೊಳ್ಳುತ್ತೇವೆ. ಅದೇ ರೀತಿ ಮನಸ್ಸಿಗೂ ಆಗಾಗ ಸಮಸ್ಯೆ ಬರುತ್ತದೆ. ಆ ಸಮಸ್ಯೆಯನ್ನು, ಲಕ್ಷಣಗಳನ್ನು ನಿರ್ಲಕ್ಷಿಸಿದರೆ ಅದು ರೋಗವಾಗಿ ಮುಂದುವರಿಯುತ್ತದೆ. ವಿಪರ್ಯಾಸವೆಂದರೆ ತಮಗೆ ತಲೆನೋವು ಇದೆ ಎಂದು ಒಪ್ಪಿಕೊಂಡಂತೆ, ಸಕ್ಕರೆ ಖಾಯಿಲೆ ಅಥವಾ ರಕ್ತದೊತ್ತಡ ಇದೆ ಎಂದು ಒಪ್ಪಿಕೊಂಡಂತೆ ಮನೋರೋಗವಿದೆ ಎಂದು ಒಪ್ಪಿಕೊಳ್ಳಲು ಸಾಮಾನ್ಯವಾಗಿ ತಯಾರಿರುವುದಿಲ್ಲ. ಅದೇ ಸಮಸ್ಯೆ.</p>



<p></p>


<div class="wp-block-image">
<figure class="aligncenter size-full is-resized"><img decoding="async" src="https://peepalmedia.com/wp-content/uploads/2022/10/image-39.png" alt="" class="wp-image-9797" width="764" height="342" srcset="https://peepalmedia.com/wp-content/uploads/2022/10/image-39.png 780w, https://peepalmedia.com/wp-content/uploads/2022/10/image-39-300x135.png 300w, https://peepalmedia.com/wp-content/uploads/2022/10/image-39-768x345.png 768w, https://peepalmedia.com/wp-content/uploads/2022/10/image-39-150x67.png 150w, https://peepalmedia.com/wp-content/uploads/2022/10/image-39-696x312.png 696w" sizes="(max-width: 764px) 100vw, 764px" /></figure></div>


<p></p>



<p>ಮೂಡುವ ಭಾವನೆಗಳಿಂದಾಗಿ, ಮಾಡುವ ಆಲೋಚನೆಗಳಿಂದಾಗಿ, ತೋರುವ ವರ್ತನೆಗಳಿಂದಾಗಿ, ನೀಡುವ ಪ್ರತಿಕ್ರಿಯೆಗಳಿಂದಾಗಿ, ಸ್ಪಂದಿಸುವ ರೀತಿಗಳಿಂದಾಗಿ ರೋಗಗ್ರಸ್ತ ಮನಸ್ಥಿತಿಯು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಆದರೆ ಅದನ್ನು ಆ ಹೊತ್ತಿನ ಸಂಗತಿ ಅಥವಾ ಸನ್ನಿವೇಶಕ್ಕೆ ತಮ್ಮ ಪ್ರತಿಕ್ರಿಯೆ ಅಥವಾ ತಮ್ಮ ಮೇಲಾಗಿರುವ ಪ್ರಭಾವ ಎಂದುಕೊಂಡು ಸುಮ್ಮನಾಗಿಬಿಡುತ್ತಾರೆ. ಅದು ಮತ್ತೂ ದೊಡ್ಡ ಸಮಸ್ಯೆ. ಹೀಗಾಗಿ ತಾವೇ ತಮ್ಮ ಮನೋರೋಗವನ್ನು ಪತ್ತೆ ಹಚ್ಚಿಕೊಳ್ಳುವುದಿಲ್ಲ. ಒಂದು ವೇಳೆ ಬೇರೆಯವರು ಪತ್ತೆ ಹಚ್ಚಿದರೆ ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಸಮಾಜದಲ್ಲಿ ಮನೋರೋಗಿಗಳು ತುಂಬಾ ಸಹಜವಾಗಿ ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನೋಡಿ ಸ್ವಾಮಿ ನಾವಿರೋದು ಹೀಗೆ ಅಂತ ಅವರೂ ಇರ್ತಾರೆ. ಅವರಿರೋದೇ ಹಾಗೆ ಅಂತ ಉಳಿದವರೂ ಇರ್ತಾರೆ.</p>



<p>ತನ್ನನ್ನು ತಾನು ಅರಿಯುವಂತಹ, ತನ್ನೊಳಗಿನ ಮತ್ತು ವಿಶ್ವದ ಆಂತರ್ಯದ ರಹಸ್ಯವನ್ನು ತಿಳಿಯುವಂತಹ ಆಧ್ಯಾತ್ಮದಲ್ಲಿ ಆತ್ಮ ಸಾಕ್ಷಾತ್ಕಾರ ಅತ್ಯಂತ ಮಹತ್ತರವಾದದ್ದು ಮತ್ತು ಉನ್ನತವಾದದ್ದು. ಹಾಗೆಯೇ ಯಾರೊಬ್ಬರೂ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ತನ್ನನ್ನು ತಾನು ಮಾನಸಿಕ ನೆಲೆಯಿಂದ ತಿಳಿಯುವುದು ಮತ್ತು ಸಮಸ್ಯೆಗಳಿದ್ದಲ್ಲಿ ಪತ್ತೆ ಹಚ್ಚುವುದು, ರೋಗವಾಗಿದ್ದಲ್ಲಿ ಅದನ್ನು ಗುಣಪಡಿಸಿಕೊಳ್ಳೋದು ಬಹಳ ಮುಖ್ಯವಾದದ್ದು. ಇದು ಆಧ್ಯಾತ್ಮಿಕ ಸಾಧನೆಗಿಂತಲೂ ಬಹಳ ಹೆಚ್ಚಿನದು ಎಂದು ನನ್ನ ಅಭಿಪ್ರಾಯ. ತಾನೂ, ತನ್ನೊಂದಿಗೆ ಇತರರು, ಕುಟುಂಬ, ಸಮಾಜ, ದೇಶ ಎಲ್ಲವೂ ಆರೋಗ್ಯವಾಗಿರಲು ಸಾಧ್ಯವಾಗುವುದು ಇದರಿಂದ ಎಂದೇ ನನ್ನ ಅಂಬೋಣ.</p>



<p></p>



<figure class="wp-block-image size-large"><img decoding="async" width="1024" height="768" src="https://peepalmedia.com/wp-content/uploads/2022/10/image-38-1024x768.png" alt="" class="wp-image-9796" srcset="https://peepalmedia.com/wp-content/uploads/2022/10/image-38-1024x768.png 1024w, https://peepalmedia.com/wp-content/uploads/2022/10/image-38-300x225.png 300w, https://peepalmedia.com/wp-content/uploads/2022/10/image-38-768x576.png 768w, https://peepalmedia.com/wp-content/uploads/2022/10/image-38-150x113.png 150w, https://peepalmedia.com/wp-content/uploads/2022/10/image-38-696x522.png 696w, https://peepalmedia.com/wp-content/uploads/2022/10/image-38-1068x801.png 1068w, https://peepalmedia.com/wp-content/uploads/2022/10/image-38.png 1200w" sizes="(max-width: 1024px) 100vw, 1024px" /></figure>



<p></p>



<p>ಯಾವುದೇ ಒಬ್ಬ ವ್ಯಕ್ತಿಯು ತನ್ನನ್ನು ತಾನು ಮತ್ತು ಇತರರನ್ನು ಅವರವರ ವರ್ತನೆಗಳ, ಭಾವನೆಗಳ, ವಿಚಾರಗಳ, ಕ್ರಿಯೆ-ಪ್ರತಿಕ್ರಿಯೆಗಳ ಮೂಲಕ ಮನೋವೈಜ್ಞಾನಿಕವಾಗಿ ಅರಿಯುತ್ತಾನೋ ಆಗ ಅವನಿಗೆ ಸಮಸ್ಯೆಗಳನ್ನು, ಸಂಘರ್ಷಗಳ ಕಾರಣಗಳನ್ನು, ಸಂಬಂಧಗಳಲ್ಲಿನ ಬಿರುಕುಗಳನ್ನು, ಖಿನ್ನತೆಗೆ ಮೂಲಗಳನ್ನು, ಭಿನ್ನ ಮನಸ್ಥಿತಿಗಳನ್ನು ಅರಿಯಲು ಸಾಧ್ಯವಾಗುತ್ತದೆ. ಆಗ್ರಹ ತೋರುವ&nbsp; ಎಡೆಯಲ್ಲಿ ಅನುಕಂಪ ತೋರಲು ಸಾಧ್ಯವಾಗುತ್ತದೆ. ದ್ವೇಷ ಸಾಧಿಸುವ ಬದಲು ಪ್ರೀತಿಸಲು ಸಾಧ್ಯವಾಗುತ್ತದೆ. ದೂರುವ ಬದಲು ತಿದ್ದಲು ಸಾಧ್ಯವಾಗುತ್ತದೆ. ದೂಷಿಸುವ ಬದಲು ಅರಿಯಲು ಸಾಧ್ಯವಾಗುತ್ತದೆ. ವ್ಯಕ್ತಿಯೊಬ್ಬನ ಮಾತಿಗೆ, ಕೃತ್ಯಕ್ಕೆ ಆತನನ್ನೇ ಎತ್ತಿ ಎಸೆಯುವ ಬದಲು, ಅವನ ಯಾವುದೋ ದೋಷಪೂರಿತ ಗುಣದ ಕಣವನ್ನು ಹೆಕ್ಕಿ ಎಸೆಯಲು ಸಾಧ್ಯವಾಗುತ್ತದೆ. ಮೆತ್ತಿಕೊಂಡಿರುವ ಮಲಿನವನ್ನು ತೊಳೆಯಲು ಸಾಧ್ಯವಾಗುತ್ತದೆ. ಕಾಟ ಕೊಡುವ ಅವರ್ಯಾರದೋ ಹಟಕ್ಕೆ, ಮುಂದುವರಿಯಲು ಬಿಡದ ಇವರ್ಯಾರದೋ ಮೌಢ್ಯಕ್ಕೆ, ಎಷ್ಟೇ ತಿಳಿಯಾದ ತಿಳುವಳಿಕೆಯನ್ನು ನೀಡಿದರೂ ತಾವೆಂದಿಗೂ ಬಿಡದ ತಮ್ಮ ವಾದಕ್ಕೆ ಕಾರಣಗಳು ತಿಳಿಯುತ್ತವೆ.</p>



<p>ಹೀಗೆ ಮನೋವಿಜ್ಞಾನವು ವ್ಯಕ್ತಿಯ ಮತ್ತು ಸಮಾಜದ ಹೂರಣವನ್ನು ಅರಿವಿಗೆ ತರುತ್ತಾ ವ್ಯಕ್ತಿಗತವಾದ ಮಾನಸಿಕ ಮತ್ತು ಸಾಮಾಜಿಕ ಆರೋಗ್ಯವನ್ನು ಕಾಪಾಡುವುದರಲ್ಲಿ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ಯಾವುದೇ ಸಮಾಜದ ಮಟ್ಟಿಗಾದರೂ ರಾಕೆಟ್ ವಿಜ್ಞಾನವು ಮನೋವಿಜ್ಞಾನದ ಅಗತ್ಯದ ಮುಂದೆ ಮೊದಲನೆಯ ಪ್ರಾಧಾನ್ಯತೆ ಆಗಲಾರದು ಎಂಬುದು ನನ್ನ ಗ್ರಹಿಕೆ.</p>



<p></p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/10/image-42.png" alt="" class="wp-image-9800" width="720" height="417"/></figure>



<p></p>



<p>ಮನೋರೋಗಕ್ಕೆ ನಾನಾ ಕಾರಣಗಳಿದ್ದಂತೆ, ನಾನಾ ಆಯಾಮಗಳೂ, ಮುಖಗಳೂ, ರೀತಿಗಳೂ ಇವೆ. ಯಾವುದೇ ಆದರೂ ಗುರುತು ಹಚ್ಚಲು ಸಾಕಷ್ಟು ಸಾಧ್ಯವಿದೆ. ಮಾನಸಿಕ, ಭಾವನಾತ್ಮಕ ಮತ್ತು ಸಾಂದರ್ಭಿಕ ಸಮಸ್ಯೆಗಳು ಮನೋರೋಗವಾಗಿ ಉಲ್ಬಣಿಸುವ ಮುನ್ನವೇ ಎಚ್ಚೆತ್ತುಕೊಳ್ಳುವ ಮತ್ತು ಉಪಚರಿಸಿಕೊಳ್ಳುವ ಅಗತ್ಯವಿದೆ.</p>



<p><strong>ಮನೋರೋಗದ ಹಾಳು ಗಾದೆ</strong></p>



<p>ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆಯ ಮಾತು ತಿಳಿವಿನ ಕಾಲ ಪಕ್ವವಾಗಿಲ್ಲದಿದ್ದಾಗ ಹುಟ್ಟಿದೆ. ಆದರೆ ಇಂದು ಹಾಗಿಲ್ಲ. ವೇದ ಸುಳ್ಳಾದರೂ ಗಾದೆ ಸುಳ್ಳಲ್ಲ ಎಂಬುದೇನೂ ನಿಜವಲ್ಲ. ಆಯಾ ಕಾಲಘಟ್ಟದಲ್ಲಿ, ಆಯಾ ವ್ಯವಸ್ಥೆಗಳಿಗೆ ಅನುಗುಣವಾಗಿ ಹುಟ್ಟಿರುವ ಗಾದೆಗಳು ಎಲ್ಲ ಕಾಲಕ್ಕೂ ಸಲ್ಲುವುದಿಲ್ಲ. ಇರಲಿ, ಸದ್ಯಕ್ಕೆ ಇಷ್ಟು ನಂಬೋಣ. ಯಾವುದೇ ಮನೋರೋಗಕ್ಕೆ ಮದ್ದಿದೆ. ಆದರೆ ಗುರುತಿಸಬೇಕು, ಒಪ್ಪಿಕೊಳ್ಳಬೇಕು ಮತ್ತು ಚಿಕಿತ್ಸೆ ನೀಡಬೇಕು. ವ್ಯಕ್ತಿಗತವಾಗಿ ಒಬ್ಬ ಮಾನಸಿಕವಾಗಿ ಆರೋಗ್ಯವಂತನಾದರೆ ಅವನು ಆರೋಗ್ಯಕರವಾದಂತಹ ಪರಿಸರ ನಿರ್ಮಿಸುವುದರಲ್ಲಿ, ಆರೋಗ್ಯಕರವಾದಂತಹ ವಾತಾವರಣವನ್ನು ಮೂಡಿಸುವುದರಲ್ಲಿ ತನ್ನ ಪಾತ್ರ ನಿರ್ವಹಿಸುತ್ತಾನೆ. ತಾನೂ ನೆಮ್ಮದಿಯಾಗಿ ಬಾಳುತ್ತಾನೆ, ಇತರರನ್ನೂ ಬಾಳಗೊಡುತ್ತಾನೆ.</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/10/mental.jpg" alt="" class="wp-image-9837" width="645" height="575" srcset="https://peepalmedia.com/wp-content/uploads/2022/10/mental.jpg 518w, https://peepalmedia.com/wp-content/uploads/2022/10/mental-300x268.jpg 300w, https://peepalmedia.com/wp-content/uploads/2022/10/mental-150x134.jpg 150w" sizes="auto, (max-width: 645px) 100vw, 645px" /></figure></div>


<p>ತನ್ನಲ್ಲಿ ಮತ್ತು ಇತರರಲ್ಲಿ ರೋಗಲಕ್ಷಣಗಳನ್ನು ಕಂಡುಕೊಂಡು, ಎಚ್ಚೆತ್ತುಕೊಂಡು ಮಾನಸಿಕವಾಗಿ ಎಲ್ಲರೂ ಗುಣಮುಖರಾಗಲಿ ಎಂಬುದೇ ಈ ಲೇಖನಮಾಲೆಯ ಉದ್ದೇಶ.</p>



<p class="has-text-align-right">(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ.)</p>



<p><strong>ಯೋಗೇಶ್ ಮಾಸ್ಟರ್</strong><br>ಕಾದಂಬರಿ, ನಾಟಕ, ಕವಿತೆ, ಮಕ್ಕಳ ಸಾಹಿತ್ಯ ಇತ್ಯಾದಿ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಿರುವ ಇವರು ಖ್ಯಾತ ಆಪ್ತ ಸಮಾಲೋಚಕರು.</p>
]]></content:encoded>
					
		
		
			</item>
	</channel>
</rss>
