<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>health department &#8211; Peepal Media</title>
	<atom:link href="https://peepalmedia.com/tag/health-department/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 26 Apr 2025 19:10:12 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>health department &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕೊಡಗು ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಬೀತಿ ಜಿಲ್ಲಾಡಳಿತ ಎಚ್ಚರಿಕೆ</title>
		<link>https://peepalmedia.com/district-administration-warns-of-outbreak-of-infectious-diseases-in-kodagu-district/</link>
		
		<dc:creator><![CDATA[ರಮೇಶ್‌ ಹಾಸನ್‌]]></dc:creator>
		<pubDate>Sat, 26 Apr 2025 19:10:12 +0000</pubDate>
				<category><![CDATA[ಕೊಡಗು]]></category>
		<category><![CDATA[ರಾಜ್ಯ]]></category>
		<category><![CDATA[health department]]></category>
		<category><![CDATA[news]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=57967</guid>

					<description><![CDATA[ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ,ಜೊತೆಗೆ ಮಳೆಯೂ ಆಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಆತಂಕ ಎದುರಾಗಿದ್ದು, ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಜಿಲ್ಲೆಯಲ್ಲಿ ಕಳೆದ ತಿಂಗಳು ವಿಪರೀತ ಬಿಸಿಲು ಕಾಣಿಸಿಕೊಂಡಿತ್ತು. ಇದೀಗ ವಾತಾವರಣ ಬದಲಾಗಿದ್ದು, ಬಿಸಿಲಿನೊಂದಿಗೆ ಸಂಜೆ ಸಮಯದಲ್ಲಿ ಮಳೆಯಾಗುತ್ತಿದೆ. ಮಳೆಯ ನೀರು ಅಲ್ಲಲ್ಲಿ ಸಂಗ್ರಹವಾಗುವುದರಿಂದ ಸೊಳ್ಳೆಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜಿಲ್ಲೆಯಾದ್ಯಂತ ಲಾರ್ವಾ ಉತ್ಪತ್ತಿ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮ ಮಟ್ಟದಲ್ಲಿ [&#8230;]]]></description>
										<content:encoded><![CDATA[
<p><strong>ಮಡಿಕೇರಿ:</strong> ಕೊಡಗು ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ,ಜೊತೆಗೆ ಮಳೆಯೂ ಆಗುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಆತಂಕ ಎದುರಾಗಿದ್ದು, ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.ಜಿಲ್ಲೆಯಲ್ಲಿ ಕಳೆದ ತಿಂಗಳು ವಿಪರೀತ ಬಿಸಿಲು ಕಾಣಿಸಿಕೊಂಡಿತ್ತು. ಇದೀಗ ವಾತಾವರಣ ಬದಲಾಗಿದ್ದು, ಬಿಸಿಲಿನೊಂದಿಗೆ ಸಂಜೆ ಸಮಯದಲ್ಲಿ ಮಳೆಯಾಗುತ್ತಿದೆ. ಮಳೆಯ ನೀರು ಅಲ್ಲಲ್ಲಿ ಸಂಗ್ರಹವಾಗುವುದರಿಂದ ಸೊಳ್ಳೆಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.</p>



<p>ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಜಿಲ್ಲೆಯಾದ್ಯಂತ ಲಾರ್ವಾ ಉತ್ಪತ್ತಿ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಸೊಳ್ಳೆಗಳ ಸಂತತಿ ಹೆಚ್ಚಾಗದಿರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತದೆ.ಕಳೆದ ವರ್ಷ ಬೇಸಿಗೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಡೆಂಗ್ಯು ಪ್ರಕರಣಗಳು ಪತ್ತೆಯಾಗಿದ್ದವು. ಸುಂಟಿಕೊಪ್ಪ, ಸಿದ್ದಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಡೆಂಗ್ಯು ಪ್ರಕರಣಗಳು ಹೆಚ್ಚು ಕಾಣಿಸಿಕೊಂಡಿದ್ದವು. ಆದರೆ ಈ ಬಾರಿ ಈ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದ್ದು, ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಂದೇ ಒಂದು ಡೆಂಗ್ಯು ಪ್ರಕರಣ ವರದಿಯಾಗಿದೆ.</p>



<p>ಬೇಸಿಗೆ ಬಿಸಿಲಿನ ಝಳದಿಂದ ಬಳಲಿಕೆ ಉಂಟಾಗುವುದು ಮಾತ್ರವಲ್ಲದೆ, ನಿಧಾನವಾಗಿ ಕಾಯಿಲೆಗಳೂ ಬರಲಾರಂಭಿಸಿವೆ. ಸೂಕ್ತ ರೀತಿಯಲ್ಲಿ ಮುಂಜಾಗ್ರತೆ ವಹಿಸದೇ ಹೋದರೆ ಖಾಯಿಲೆ ಮತ್ತಷ್ಟು ಹರಡುವ ಸಾಧ್ಯತೆ ಇದೆ.ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 492 ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ. ಇವರೆಲ್ಲ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದರೊಂದಿಗೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದೇ ತಾವೇ ಸ್ವಯಂ ಆರೈಕೆ ಮಾಡಿಕೊಂಡು, ಔಷಧ ಅಂಗಡಿಗಳಲ್ಲಿ ತಾವೇ ಮಾತ್ರೆ ಖರೀದಿಸಿ ಬಳಸಿ ಸುಧಾರಿಸಿಕೊಂಡವರೂ ಬಹಳ ಮಂದಿ ಇದ್ದಾರೆ. ಹೀಗಾಗಿ ಬೇಸಿಗೆಯ ಸಂದರ್ಭ ಆಹಾರ, ಪರಿಸರ ಸ್ವಚ್ಛತೆ ಮತ್ತು ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಆರೋಗ್ಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.</p>



<p>ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಆಹಾರ ಕಲುಷಿತಗೊಳ್ಳುವುದೂ ಅಧಿಕ. ಬೇಸಿಗೆ ವೇಳೆ ಸೊಳ್ಳೆಗಳು ಮಾತ್ರವಲ್ಲ ನೊಣಗಳೂ ಅಧಿಕ ಸಂಖ್ಯೆಯಲ್ಲಿ ವೃದ್ಧಿಯಾಗುತ್ತವೆ. ರೋಗವಾಹಕಗಳೆಂದೇ ಗುರುತಿಸಲಾಗುವ ಇವುಗಳು ಚರಂಡಿ ಸೇರಿದಂತೆ ಕಲುಷಿತ ನೀರು ಮತ್ತು ಕಲುಷಿತ ವಸ್ತುಗಳ ಮೇಲೆ ಕುಳಿತು ನಂತರ ಆಹಾರ ಪದಾರ್ಥಗಳ ಮೇಲೂ ಕುಳಿತು ರೋಗಾಣುಗಳನ್ನು ಅತ್ಯಂತ ಸುಲಭವಾಗಿ ಹರಡುತ್ತವೆ. ಹಾಗಾಗಿ, ಈ ವೇಳೆ ಅತಿ ಎಚ್ಚರ ವಹಿಸುವುದು ಒಳಿತು ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆಯಾಗಿದೆ.</p>



<p><strong>ಬೇಸಿಗೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆ </strong></p>



<p>ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು. ತೆರೆದಿಟ್ಟ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಆಹಾರ ಪದಾರ್ಥಗಳನ್ನು ಜಿರಲೆ, ನೊಣಗಳಿಂದ ರಕ್ಷಿಸುವ ಸಲುವಾಗಿ ಮುಚ್ಚಿಡಬೇಕು. ವಾಂತಿ, ಭೇದಿ ಕಾಣಿಸಿಕೊಂಡರೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು. ಬಿಸಿ ಇರುವ ಆಹಾರವನ್ನೇ ಸೇವಿಸಬೇಕು. ಮೀನು, ಮಾಂಸವನ್ನು ಸಮರ್ಪಕವಾಗಿ ಬೇಯಿಸಿ ತಿನ್ನಬೇಕು. ತಾಜಾ, ಮೀನು, ಮಾಂಸಾಹಾರವನ್ನೇ ಸೇವಿಸಬೇಕು. ಸೊಳ್ಳೆ, ನೊಣಗಳಿಂದ ರಕ್ಷಿಸಿಕೊಳ್ಳಬೇಕು. ಎಳನೀರು, ಒಆರ್‌ಎಸ್, ತಾಜಾ ಹಣ್ಣಿನ ರಸ, ಮಜ್ಜಿಗೆಯನ್ನು ಸೇವಿಸಬೇಕು. ವಾಂತಿ ಭೇದಿ ಕಾಣಿಸಿಕೊಂಡಾಗ ಮೂಢನಂಬಿಕೆಗಳನ್ನು ಅನುಸರಿಸದೆ ವೈದ್ಯರ ಸಲಹೆ ಪಡೆಯಬೇಕು. ಬೇಸಿಗೆಯಲ್ಲಿ ವಾಂತಿ ಭೇದಿಯಂತಹ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅಲ್ಲದೆ ಈಗ ಬಿಸಿಲಿನ ಜತೆ ಮಳೆಯೂ ಬೀಳುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತದೆ. ಹೀಗಾಗಿ ಆರೋಗ್ಯ ಇಲಾಖೆ ಡೆಂಗ್ಯು ಮತ್ತಿತರ ರೋಗಗಳು ಹರಡದಂತೆ ಎಚ್ಚರ ವಹಿಸುತ್ತಿದೆ. ಜನರು ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಮನೆ ಸುತ್ತಮುತ್ತ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.</p>



<p><strong>– ಡಾ. ಕೆ. ಎಂ. ಸತೀಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ</strong></p>
]]></content:encoded>
					
		
		
			</item>
		<item>
		<title>ಡೆಂಗ್ಯೂ : ಈ ಮಾರ್ಗಸೂಚಿ ಪಾಲಿಸದೇ ಇದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ</title>
		<link>https://peepalmedia.com/failure-to-follow-this-guideline-is-dangerous/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 20 Sep 2023 06:10:48 +0000</pubDate>
				<category><![CDATA[ಆರೋಗ್ಯ]]></category>
		<category><![CDATA[Dengue]]></category>
		<category><![CDATA[Dengue cases]]></category>
		<category><![CDATA[health department]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=28123</guid>

					<description><![CDATA[ರಾಜ್ಯದಲ್ಲಿ ಮಳೆಯ ಕಣ್ಣಾಮುಚ್ಚಾಲೆ ಜೊತೆಗೆ ಡೆಂಗ್ಯೂ (Dengue) ಜ್ಯರದ ಅಬ್ಬರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದೆ. ಮುಂಜಾಗ್ರತೆಯಿಂದ ಈ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ. ಪ್ರಸ್ತುತ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆಗಾಗ್ಗೆ ಬರುತ್ತಿರುವ ಮಳೆಯಿಂದ ಹಾಗೂ ನೀರು ಸರಬರಾಜಿನ ಕೊರತೆಯಿಂದಾಗಿ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದೆ ಎಂದು ಆರೋಗ್ಯ ಇಲಾಖೆ ಅಭಿಪ್ರಾಯ ಪಟ್ಟಿದೆ. ಹಾಗೆಯೇ ಡೆಂಗ್ಯೂ ಜ್ವರ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯು ಕೈಗೊಂಡಿರುವ [&#8230;]]]></description>
										<content:encoded><![CDATA[
<p>ರಾಜ್ಯದಲ್ಲಿ ಮಳೆಯ ಕಣ್ಣಾಮುಚ್ಚಾಲೆ ಜೊತೆಗೆ ಡೆಂಗ್ಯೂ (Dengue) ಜ್ಯರದ ಅಬ್ಬರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದೆ. ಮುಂಜಾಗ್ರತೆಯಿಂದ ಈ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲು ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ.</p>



<p>ಪ್ರಸ್ತುತ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆಗಾಗ್ಗೆ ಬರುತ್ತಿರುವ ಮಳೆಯಿಂದ ಹಾಗೂ ನೀರು ಸರಬರಾಜಿನ ಕೊರತೆಯಿಂದಾಗಿ ಡೆಂಗ್ಯೂ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದೆ ಎಂದು ಆರೋಗ್ಯ ಇಲಾಖೆ ಅಭಿಪ್ರಾಯ ಪಟ್ಟಿದೆ. ಹಾಗೆಯೇ ಡೆಂಗ್ಯೂ ಜ್ವರ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು ಯಶಸ್ವಿಯಾಗುವಲ್ಲಿ ಸಮುದಾಯ / ಸಾರ್ವಜನಿಕರ ಪಾತ್ರವು ಮಹತ್ವದ್ದಾಗಿದೆ.</p>



<p><font style="vertical-align: inherit;"><font style="vertical-align: inherit;">ಸಧ್ಯಕ್ಕೆ </font></font>ಡೆಂಗ್ಯೂ ಜ್ವರದ<font style="vertical-align: inherit;"><font style="vertical-align: inherit;"> ಲಕ್ಷಣಗಳು, ತೀವ್ರತೆ, ಚಿಕಿತ್ಸೆ ಮತ್ತು ನಿರ್ವಹಣೆ ಮತ್ತು ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಮತ್ತು ಸಾರ್ವಜನಿಕರು ಪಾಲಿಸಬೇಕಾದ ಸ್ವಯಂ ರಕ್ಷಣಾ ವಿಧಾನಗಳು (ಮಾಡಬೇಕಾದವುಗಳು ಮತ್ತು ಮಾಡಬಾರದು) ಕುರಿತು ಈ ಸುತ್ತೋಲೆಯಲ್ಲಿ ಲಗತ್ತಿಸಲಾಗಿದೆ.</font></font></p>



<p><strong>ಮಾರ್ಗಸೂಚಿ ಈ ಕೆಳಗಿನಂತಿವೆ.</strong></p>



<figure class="wp-block-image size-full is-resized"><img fetchpriority="high" decoding="async" src="https://peepalmedia.com/wp-content/uploads/2023/09/n539333562169518983092057177e383a7b82da746a4f946bfa9c4478cbdf1a9548fc31ffcaf98ff3ccc79a.jpg" alt="" class="wp-image-28124" style="width:441px;height:625px" width="441" height="625" srcset="https://peepalmedia.com/wp-content/uploads/2023/09/n539333562169518983092057177e383a7b82da746a4f946bfa9c4478cbdf1a9548fc31ffcaf98ff3ccc79a.jpg 720w, https://peepalmedia.com/wp-content/uploads/2023/09/n539333562169518983092057177e383a7b82da746a4f946bfa9c4478cbdf1a9548fc31ffcaf98ff3ccc79a-212x300.jpg 212w, https://peepalmedia.com/wp-content/uploads/2023/09/n539333562169518983092057177e383a7b82da746a4f946bfa9c4478cbdf1a9548fc31ffcaf98ff3ccc79a-150x212.jpg 150w, https://peepalmedia.com/wp-content/uploads/2023/09/n539333562169518983092057177e383a7b82da746a4f946bfa9c4478cbdf1a9548fc31ffcaf98ff3ccc79a-300x425.jpg 300w, https://peepalmedia.com/wp-content/uploads/2023/09/n539333562169518983092057177e383a7b82da746a4f946bfa9c4478cbdf1a9548fc31ffcaf98ff3ccc79a-696x985.jpg 696w" sizes="(max-width: 441px) 100vw, 441px" /></figure>



<figure class="wp-block-image size-full"><img decoding="async" width="720" height="1019" src="https://peepalmedia.com/wp-content/uploads/2023/09/n5393335621695189841037fc31f65cfd97238a9ea9454394acedf135514be15e7f7744d32a16d2b4444a6a.jpg" alt="" class="wp-image-28126" srcset="https://peepalmedia.com/wp-content/uploads/2023/09/n5393335621695189841037fc31f65cfd97238a9ea9454394acedf135514be15e7f7744d32a16d2b4444a6a.jpg 720w, https://peepalmedia.com/wp-content/uploads/2023/09/n5393335621695189841037fc31f65cfd97238a9ea9454394acedf135514be15e7f7744d32a16d2b4444a6a-212x300.jpg 212w, https://peepalmedia.com/wp-content/uploads/2023/09/n5393335621695189841037fc31f65cfd97238a9ea9454394acedf135514be15e7f7744d32a16d2b4444a6a-150x212.jpg 150w, https://peepalmedia.com/wp-content/uploads/2023/09/n5393335621695189841037fc31f65cfd97238a9ea9454394acedf135514be15e7f7744d32a16d2b4444a6a-300x425.jpg 300w, https://peepalmedia.com/wp-content/uploads/2023/09/n5393335621695189841037fc31f65cfd97238a9ea9454394acedf135514be15e7f7744d32a16d2b4444a6a-696x985.jpg 696w" sizes="(max-width: 720px) 100vw, 720px" /></figure>



<figure class="wp-block-image size-full"><img decoding="async" width="720" height="1019" src="https://peepalmedia.com/wp-content/uploads/2023/09/n5393335621695189852734c73e18ea18fb772dfe04223dd995098d07af419c32ddd0c5e42f9c5915f8afb2.jpg" alt="" class="wp-image-28127" srcset="https://peepalmedia.com/wp-content/uploads/2023/09/n5393335621695189852734c73e18ea18fb772dfe04223dd995098d07af419c32ddd0c5e42f9c5915f8afb2.jpg 720w, https://peepalmedia.com/wp-content/uploads/2023/09/n5393335621695189852734c73e18ea18fb772dfe04223dd995098d07af419c32ddd0c5e42f9c5915f8afb2-212x300.jpg 212w, https://peepalmedia.com/wp-content/uploads/2023/09/n5393335621695189852734c73e18ea18fb772dfe04223dd995098d07af419c32ddd0c5e42f9c5915f8afb2-150x212.jpg 150w, https://peepalmedia.com/wp-content/uploads/2023/09/n5393335621695189852734c73e18ea18fb772dfe04223dd995098d07af419c32ddd0c5e42f9c5915f8afb2-300x425.jpg 300w, https://peepalmedia.com/wp-content/uploads/2023/09/n5393335621695189852734c73e18ea18fb772dfe04223dd995098d07af419c32ddd0c5e42f9c5915f8afb2-696x985.jpg 696w" sizes="(max-width: 720px) 100vw, 720px" /></figure>



<p>ಸದರಿ ಮಾಹಿತಿಯನ್ನು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ವಿವಿಧ ಮಾಧ್ಯಮಗಳ ಮೂಲಕ ಪ್ರಚುರಪಡಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಡೆಂಗ್ಯೂ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರದ ಕುರಿತು ಮನವರಿಕೆ ಮಾಡಲು ತಿಳಿಸುತ್ತಾ, ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಲು ಕೋರುವಂತೆ ಸೂಚಿಸಿದೆ.</p>
]]></content:encoded>
					
		
		
			</item>
		<item>
		<title>ಕೋವಿಡ್ ಸಾವಿನ ಸಂಖ್ಯೆಯಲ್ಲಿ ಸುಳ್ಳು ಲೆಕ್ಕ ಕೊಟ್ಟ ಬಿಜೆಪಿ ಸರ್ಕಾರ : PAC ವರದಿ (ವರದಿಯಲ್ಲಿವೆ ಆಘಾತಕಾರಿ ಅಂಶಗಳು)</title>
		<link>https://peepalmedia.com/bjp-government-gave-false-count-of-covid-deaths/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 19 Jul 2023 03:56:47 +0000</pubDate>
				<category><![CDATA[ರಾಜ್ಯ]]></category>
		<category><![CDATA[bjp govt]]></category>
		<category><![CDATA[covid 19]]></category>
		<category><![CDATA[Covid Scam]]></category>
		<category><![CDATA[health department]]></category>
		<category><![CDATA[karnataka]]></category>
		<category><![CDATA[PAC]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=23952</guid>

					<description><![CDATA[WHO ಒಪ್ಪಿಗೆ ನೀಡದಿದ್ದರೂ Ivermectin ಟ್ಯಾಬ್ಲೆಟ್ ಗಳನ್ನು ಹೆಚ್ಚು ಪ್ರಮಾಣದಲ್ಲಿ ಖರೀದಿ ಮಾಡಲಾಗಿದೆ. ಪಿಎಂ ಕೇರ್ಸ್ ಫಂಡ್ ಮೂಲಕ ನೀಡಲಾದ ವೆಂಟಿಲೇಟರ್ ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗಿದೆ ಎಂಬುದನ್ನು ಸಮಿತಿ ಕಂಡುಹಿಡಿದಿದೆ. 2020 ಹಾಗೂ 2021 ರ ಅವಧಿಯಲ್ಲಿ ಸಂಭವಿಸಿದ ಭೀಕರ ಕೋವಿಡ್ ಸೋಂಕಿನಲ್ಲಿ ಅಂದಿನ ಬಿಜೆಪಿ ಸರ್ಕಾರ ಮಾಡಿದ ಅಕ್ರಮಗಳನ್ನು PAC ವರದಿ ಬಹಿರಂಗಪಡಿಸಿದೆ. ವಿಶೇಷವಾಗಿ ಆ ಸಂದರ್ಭದಲ್ಲಿ ಆದ ಸಾವಿನ ಸಂಖ್ಯೆಯಲ್ಲಿ ಆಗಿನ ಸರ್ಕಾರ ಕಡಿಮೆ ಲೆಕ್ಕ ನೀಡಿದೆ ಎಂದು ರಾಜ್ಯ ಶಾಸಕಾಂಗದ ಸಾರ್ವಜನಿಕ [&#8230;]]]></description>
										<content:encoded><![CDATA[
<p><strong><mark style="background-color:#ffffff;color:#ee6300" class="has-inline-color"><code>WHO ಒಪ್ಪಿಗೆ ನೀಡದಿದ್ದರೂ Ivermectin ಟ್ಯಾಬ್ಲೆಟ್ ಗಳನ್ನು ಹೆಚ್ಚು ಪ್ರಮಾಣದಲ್ಲಿ ಖರೀದಿ ಮಾಡಲಾಗಿದೆ. ಪಿಎಂ ಕೇರ್ಸ್ ಫಂಡ್ ಮೂಲಕ ನೀಡಲಾದ ವೆಂಟಿಲೇಟರ್ ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗಿದೆ ಎಂಬುದನ್ನು ಸಮಿತಿ ಕಂಡುಹಿಡಿದಿದೆ</code>.</mark></strong></p>



<p>2020 ಹಾಗೂ 2021 ರ ಅವಧಿಯಲ್ಲಿ ಸಂಭವಿಸಿದ ಭೀಕರ ಕೋವಿಡ್ ಸೋಂಕಿನಲ್ಲಿ ಅಂದಿನ ಬಿಜೆಪಿ ಸರ್ಕಾರ ಮಾಡಿದ ಅಕ್ರಮಗಳನ್ನು PAC ವರದಿ ಬಹಿರಂಗಪಡಿಸಿದೆ. ವಿಶೇಷವಾಗಿ ಆ ಸಂದರ್ಭದಲ್ಲಿ ಆದ ಸಾವಿನ ಸಂಖ್ಯೆಯಲ್ಲಿ ಆಗಿನ ಸರ್ಕಾರ ಕಡಿಮೆ ಲೆಕ್ಕ ನೀಡಿದೆ ಎಂದು ರಾಜ್ಯ ಶಾಸಕಾಂಗದ ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC) ವರದಿ ತಿಳಿಸಿದೆ.&nbsp;ಜುಲೈ 17, ಸೋಮವಾರ ಕರ್ನಾಟಕ ಅಸೆಂಬ್ಲಿಯಲ್ಲಿ ವರದಿಯನ್ನು ಮಂಡಿಸಿದ ಸಮಿತಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೋವಿಡ್ ಸಂದರ್ಭದ ನಿರ್ವಹಣೆಯನ್ನು ತೀವ್ರವಾಗಿ ಟೀಕಿಸಿದೆ.</p>



<p>ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ಪೂರೈಕೆಗೆ ಬಿಡ್ ಗಳಲ್ಲಿ ಆಯ್ಕೆಯಾದ ಕಂಪನಿಗಳು, ವೈದ್ಯಕೀಯ ಉಪಕರಣಗಳನ್ನು ದುಬಾರಿ ಬೆಲೆಗೆ ಖರೀದಿಸಲಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಬೇಡಿಕೆ ಇದ್ದ ಔಷಧಿಗಳನ್ನೂ ಪೂರೈಸಿಲ್ಲ. ಅಗತ್ಯವಿಲ್ಲದಿದ್ದಾಗ ಹೆಚ್ಚು ಔಷಧಿಗಳನ್ನು ಖರೀದಿಸಲಾಗಿದೆ ಎಂದು ಸಮಿತಿ ಹೇಳಿದೆ. ಸಮಿತಿಯು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ ಮತ್ತು ಈ ಬಗ್ಗೆ ಸ್ವತಂತ್ರ ತನಿಖೆಗೂ ಕೂಡ ಒತ್ತಾಯಿಸಿದೆ.</p>



<p>ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಹಾಗೂ ಡಾ.ಕೆ.ಸುಧಾಕರ್ ಆರೋಗ್ಯ ಸಚಿವರಾಗಿದ್ದ ಸಂದರ್ಭದ 2020 ರ ಸಂದರ್ಭದಲ್ಲಿ ಮೊದಲು ಕಾಂಗ್ರೆಸ್ ಸಚಿವ ಎಚ್‌ಕೆ ಪಾಟೀಲ್ ನೇತೃತ್ವದಲ್ಲಿ ಮತ್ತು ನಂತರ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ, ಕೋವಿಡ್ -19 ಗೆ ಸಂಬಂಧಿಸಿದ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿನ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಯಿತು.</p>



<p>ಕೋವಿಡ್ ಕಾರಣದಿಂದಾದ ಸಾವುಗಳು ಸಂಖ್ಯೆ ತೀರಾ ಕಡಿಮೆ ವರದಿ ಮಾಡಿದ್ದಕ್ಕಾಗಿ ಆರೋಗ್ಯ ಇಲಾಖೆಯನ್ನು ಟೀಕಿಸುವ ಸಂದರ್ಭದಲ್ಲಿ, ಇತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಸಾವುಗಳು ಹೆಚ್ಚು ಎಂದು ಸಮಿತಿಯು ಕಂಡುಹಿಡಿದಿದೆ.&nbsp;“ದೇಶದ ಬೇರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರವು ಅತಿ ಹೆಚ್ಚು ಸಾವಿನ ಪ್ರಮಾಣವನ್ನು ಹೊಂದಿದೆ. ಅಷ್ಟೆ ಅಲ್ಲದೆ&nbsp;ಸೋಂಕಿತ ರೋಗಿಗಳನ್ನು ಪತ್ತೆಹಚ್ಚುವಲ್ಲಿ ವಿಳಂಬ, ಪರೀಕ್ಷಾ ಸಾಮರ್ಥ್ಯದಲ್ಲಿ ವಿಫಲ, ಪರೀಕ್ಷಾ ವರದಿಗಳನ್ನು ನೀಡುವಲ್ಲಿ ವಿಳಂಬ, ಔಷಧದ ಕೊರತೆ ಮತ್ತು ಆಮ್ಲಜನಕದ ಕೊರತೆಯಂತಹ ರಾಜ್ಯದ ಚಿಕಿತ್ಸಾ ವ್ಯವಸ್ಥೆಯಲ್ಲಿನ ದೋಷಗಳ ಬಗ್ಗೆಯೂ ಸಮಿತಿ ಬಹಿರಂಗಪಡಿಸಿದೆ.</p>



<p><strong>ಸಾವಿನ ಸಂಖ್ಯೆಯಲ್ಲಿ ಸುಳ್ಳು ಲೆಕ್ಕ</strong><br>ಲೆಕ್ಕಪತ್ರ ಮತ್ತು ಅಂಕಿ ಅಂಶಗಳ ನಿರ್ದೇಶನಾಲಯದಿಂದ ಪಡೆದ ಮಾಹಿತಿಯ ಪ್ರಕಾರ ಜನವರಿಯಿಂದ ಜುಲೈ 2020 ರವರೆಗೆ 2,69,029 ಮತ್ತು ಜನವರಿಯಿಂದ ಜುಲೈ 2021 ರವರೆಗೆ 4,26,943 ಸಾವುಗಳಲ್ಲಿ ಹಿಂದಿನ ಅವಧಿಗಿಂತ 1,57,914 ರಷ್ಟು ಹೆಚ್ಚಳವಾಗಿದೆ ಎಂದು ಸಮಿತಿಯ ತನಿಖಾ ವರದಿ ತೋರಿಸಿದೆ.</p>



<figure class="wp-block-image size-full"><img loading="lazy" decoding="async" width="739" height="415" src="https://peepalmedia.com/wp-content/uploads/2023/07/images-2023-07-19T092142.551.jpeg" alt="" class="wp-image-23954" srcset="https://peepalmedia.com/wp-content/uploads/2023/07/images-2023-07-19T092142.551.jpeg 739w, https://peepalmedia.com/wp-content/uploads/2023/07/images-2023-07-19T092142.551-300x168.jpeg 300w, https://peepalmedia.com/wp-content/uploads/2023/07/images-2023-07-19T092142.551-150x84.jpeg 150w, https://peepalmedia.com/wp-content/uploads/2023/07/images-2023-07-19T092142.551-696x391.jpeg 696w" sizes="auto, (max-width: 739px) 100vw, 739px" /></figure>



<p><font style="vertical-align: inherit;"><font style="vertical-align: inherit;">“ಆತಂಕಕಾರಿ ಸಂಗತಿಯೆಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಾವಿನ ಸಂಖ್ಯೆ ಕೇವಲ 3206 ಎಂದು ತಪ್ಪು ಮಾಹಿತಿ ನೀಡಲಾಗಿದೆ. </font><font style="vertical-align: inherit;">ಸುಮಾರು 1,20,708% ಇದ್ದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಅಧಿಕಾರಿಗಳು ಘೋರ ಅನ್ಯಾಯ ಮತ್ತು ಅಪರಾಧ ಮಾಡಿದ್ದಾರೆ ಎಂದು ಸಮಿತಿ ಅಭಿ</font></font>ಪ್ರಾಯ<font style="vertical-align: inherit;"><font style="vertical-align: inherit;"> ಪಟ್ಟಿ ಮಾಡಿದೆ. </font><font style="vertical-align: inherit;">ಈ ಮೃತರ ಕುಟುಂಬಗಳನ್ನು ಗುರುತಿಸಿ ಅವರಿಗೆ ಪರಿಹಾರ ನೀಡಲು ಪ್ರಯತ್ನಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.</font></font></p>



<p><strong>ಐವರ್ಮೆಕ್ಟಿನ್ ಔಷಧಿ ಖರೀದಿ ಗೊಂದಲ ಮತ್ತು ಭ್ರಷ್ಟಾಚಾರ</strong><br>ಕೋವಿಡ್-19 ಚಿಕಿತ್ಸೆಗಾಗಿ ಶಿಫಾರಸು ಮಾಡಲಾದ ಐವರ್‌ಮೆಕ್ಟಿನ್ ಟ್ಯಾಬ್ಲೆಟ್ ಅನ್ನು ಇಲಾಖೆಯು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದೆ ಎಂದು ಸಮಿತಿಯು ಕಂಡುಹಿಡಿದಿದೆ. 2021 ರ ಸಂದರ್ಭದಲ್ಲಿ WHO, &#8216;ಕೋವಿಡ್ ಸೋಂಕಿತರಿಗೆ ಐವರ್ಮೆಕ್ಟಿನ್ ಔಷಧಿ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ&#8217; ಎಂದು ಐವರ್ಮೆಕ್ಟಿನ್ ಔಷಧಿ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಹ ಇಲಾಖೆ WHO ಎಚ್ಚರಿಕೆಯನ್ನು ಬದಿಗೊತ್ತಿ ಅದೇ ಔಷಧಿಗಳನ್ನು ಖರೀದಿ ಮಾಡಿದೆ‌. ಏಪ್ರಿಲ್ 2021 ರಲ್ಲಿ, WHO ಎಚ್ಚರಿಕೆ ನೀಡಿದ ನಂತರವೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 1.10 ಕೋಟಿ ಮಾತ್ರೆಗಳನ್ನು ಖರೀದಿಸಿದೆ.&nbsp;ಖರೀದಿಗೆ ಖರ್ಚು ಮಾಡಿದ ಮೊತ್ತ ಮತ್ತು ಅದನ್ನು ರಾಜ್ಯದಲ್ಲಿ ಎಲ್ಲಿ ವಿತರಿಸಲಾಗಿದೆ ಎಂಬ ಬಗ್ಗೆ PAC ಮಾಹಿತಿ ನೀಡಿಲ್ಲ.</p>



<figure class="wp-block-image size-full"><img loading="lazy" decoding="async" width="711" height="400" src="https://peepalmedia.com/wp-content/uploads/2023/07/images-2023-07-19T090846.544.jpeg" alt="" class="wp-image-23955" srcset="https://peepalmedia.com/wp-content/uploads/2023/07/images-2023-07-19T090846.544.jpeg 711w, https://peepalmedia.com/wp-content/uploads/2023/07/images-2023-07-19T090846.544-300x169.jpeg 300w, https://peepalmedia.com/wp-content/uploads/2023/07/images-2023-07-19T090846.544-150x84.jpeg 150w, https://peepalmedia.com/wp-content/uploads/2023/07/images-2023-07-19T090846.544-696x392.jpeg 696w" sizes="auto, (max-width: 711px) 100vw, 711px" /></figure>



<p>ಈ ಹಿನ್ನೆಲೆಯಲ್ಲಿ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ಮತ್ತು ಅನುಮಾನಾಸ್ಪದ ರೋಗಿಗಳಿಗೆ ಚಿಕಿತ್ಸಾ ವಿಧಾನವಾಗಿ ಶಿಫಾರಸು ಮಾಡುವುದನ್ನು ಮುಂದುವರಿಸಿದ ಅಧಿಕಾರಿಗಳನ್ನು ಪರಿಶೀಲಿಸಿ, ತನಿಖೆ ನಡೆಸಿ ಶಿಕ್ಷೆಗೆ ಗುರಿಪಡಿಸುವಂತೆ PAC ಶಿಫಾರಸು ಮಾಡಿದೆ.&nbsp;</p>



<p><strong>ವೆಂಟಿಲೇಟರ್ ಹಗರಣ</strong><br>ಮೊದಲಿನಿಂದಲೂ ಗೊಂದಲದ ಗೂಡಾಗಿದ್ದ, ಇಂದಿಗೂ ಸಹ ಅದರ ಮಾಹಿತಿಯ ಬಗ್ಗೆ ಗೌಪ್ಯತೆ ತೋರ್ಪಡಿಸುವ ಪಿಎಂ ಕೇರ್ಸ್&nbsp;ಫಂಡ್ ಬಗ್ಗೆಯೂ ಸಮಿತಿಯ ವರದಿ ಸಿದ್ದಪಡಿಸಿದೆ. ಅದರಂತೆ ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಕರ್ನಾಟಕಕ್ಕೆ ನೀಡಲಾದ ಸುಮಾರು 165 ವೆಂಟಿಲೇಟರ್‌ಗಳನ್ನು ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗಿದೆ. ಇದು ಸ್ಪಷ್ಟವಾಗಿ ನ್ಯಾಯಸಮ್ಮತವಲ್ಲ ಎಂದು PAC ಹೇಳಿದೆ. ಇಷ್ಟಾದರೂ ಬಡ ಮತ್ತು ಮಧ್ಯಮ ವರ್ಗದ, ಆರ್ಥಿಕವಾಗಿ ಸಬಲರಲ್ಲದ ರೋಗಿಗಳು ಖಾಸಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲೂ&nbsp;ಖಾಸಗಿ ಆಸ್ಪತ್ರೆಗಳು ತಮ್ಮ ವೆಚ್ಚದಲ್ಲಿ ಯಾವುದೇ ವಿನಾಯಿತಿ ನೀಡದೇ ಬಡವರಿಂದ ಸುಲಿಗೆ ಮಾಡಿವೆ.&nbsp;ಇಲಾಖೆಯ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳೊಂದಿಗೆ ಶಾಮೀಲಾಗಿ ಸಾರ್ವಜನಿಕ ಹಿತಾಸಕ್ತಿ ಕಡೆಗಣಿಸಿದ್ದಾರೆ ಎಂದು ಸಮಿತಿ ಹೇಳಿದೆ.</p>



<figure class="wp-block-image size-large"><img loading="lazy" decoding="async" width="1024" height="576" src="https://peepalmedia.com/wp-content/uploads/2023/07/ventilators3-1024x576.jpg" alt="" class="wp-image-23957" srcset="https://peepalmedia.com/wp-content/uploads/2023/07/ventilators3-1024x576.jpg 1024w, https://peepalmedia.com/wp-content/uploads/2023/07/ventilators3-300x169.jpg 300w, https://peepalmedia.com/wp-content/uploads/2023/07/ventilators3-768x432.jpg 768w, https://peepalmedia.com/wp-content/uploads/2023/07/ventilators3-150x84.jpg 150w, https://peepalmedia.com/wp-content/uploads/2023/07/ventilators3-696x392.jpg 696w, https://peepalmedia.com/wp-content/uploads/2023/07/ventilators3-1068x601.jpg 1068w, https://peepalmedia.com/wp-content/uploads/2023/07/ventilators3.jpg 1200w" sizes="auto, (max-width: 1024px) 100vw, 1024px" /></figure>



<p>&#8216;ಅನೇಕ ಖಾಸಗಿ ಆಸ್ಪತ್ರೆಗಳು ಸೋಂಕಿತರ ಚಿಕಿತ್ಸೆಗಾಗಿ ಇಲಾಖೆ ನಿಗದಿಪಡಿಸಿದ ದರ ಪಟ್ಟಿಯನ್ನು ಅನುಸರಿಸದೆ ಸಾರ್ವಜನಿಕರಿಂದ ಹೆಚ್ಚಿನ ದರದಲ್ಲಿ ಹಣವನ್ನು ಸುಲಿಗೆ ಮಾಡಿವೆ ಮತ್ತು ಕೆಲವು ಸಂದರ್ಭಗಳಲ್ಲಿ ಮೃತದೇಹಗಳನ್ನು ಅವರ ಸಂಬಂಧಿಕರಿಗೆ ಹಿಂದಿರುಗಿಸಲು ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇಟ್ಟಿವೆ,&#8217; ಎಂದು ಸಮಿತಿ ಹೇಳಿದೆ. ಕೋವಿಡ್ ಮೊದಲ ಅಲೆಯಲ್ಲಿ ಎಚ್ಚೆತ್ತುಕೊಳ್ಳಬೇಕಾದ ಇಲಾಖೆ ಎರಡನೇ ಅಲೆಯಲ್ಲೂ ಎಚ್ಚೆತ್ತುಕೊಳ್ಳದ ಬಗ್ಗೆ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ. ಎರಡನೇ ಅಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಾಗ ವೆಂಟಿಲೇಟರ್‌ಗಳ ಅಲಭ್ಯತೆ, ಆಕ್ಸಿಜನ್ ಅಲಭ್ಯತೆ ಮತ್ತು ಪರಿಹಾರ ಸಾಧನಗಳ ಲಭ್ಯತೆಯಿಲ್ಲ ಎಂದು ಅದು ಸೂಚಿಸಿದೆ.</p>



<p>ಇಂತಹ ಗಂಭೀರ ಪರಿಸ್ಥಿತಿಯ ಹೊರತಾಗಿಯೂ, ಅಧಿಕಾರಿಗಳು ಸಮಿತಿಗೆ ನೀಡಿದ ಉತ್ತರದಲ್ಲಿ &#8220;ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಕೊರತೆಯಿಲ್ಲ&#8221; ಎಂದು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಸಮಿತಿಯು ತನ್ನ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.</p>



<p><strong>ವೈದ್ಯಕೀಯ ಉಪಕರಣಗಳ ಖರೀದಿಯಲ್ಲೂ ಭ್ರಷ್ಟಾಚಾರ</strong><br>ತುರ್ತು ಸಂದರ್ಭದ ಹೆಲ್ತ್ ಕಿಟ್ ಗಳು, ರಕ್ತ ಪರೀಕ್ಷೆಯ ಕಿಟ್ ಗಳು, ಯುಪಿಎಸ್‌ನಂತಹ ಉಪಕರಣಗಳ ಖರೀದಿಯಲ್ಲಿ ಇತರ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶಕ್ಕೆ ಹೋಲಿಸಿದರೆ ಇಲಾಖೆಯು ಹೆಚ್ಚಿನ ವೆಚ್ಚದಲ್ಲಿ ಉಪಕರಣಗಳನ್ನು ಖರೀದಿಸಿದೆ ಎಂದು ಸಮಿತಿಯು ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.&nbsp;ಕೆಲವು ಸಲಕರಣೆಗಳಿಗೆ ಅವಶ್ಯಕತೆ ಇಲ್ಲದಿದ್ದರೂ ಬಿಡ್‌ಗಳನ್ನು ಹಾಕಲಾಗಿದೆ. ಉಪಕರಣಗಳ ಆರ್ಡರ್‌ಗಳ ಒಂದು ಭಾಗವನ್ನು ಮಾತ್ರ ಪೂರೈಸಿದ ಸಂಸ್ಥೆಗಳನ್ನು ಈವರೆಗೂ ಕಪ್ಪುಪಟ್ಟಿಗೆ ಸೇರಿಸಲಾಗಿಲ್ಲ. ಪರೀಕ್ಷೆಯ ಸಂದರ್ಭದಲ್ಲಿ ದೋಷಯುಕ್ತ ಉತ್ಪನ್ನಗಳು ಕಂಡುಬಂದ ಕಂಪನಿಗಳೊಂದಿಗೇ ಮತ್ತೆ ವ್ಯವಹಾರ ನಡೆಸಲಾಗಿದೆ. ಒಟ್ಟಾರೆ ಯಾವುದೇ ವೈದ್ಯಕೀಯ ಉಪಕರಣಗಳ ಸಂಗ್ರಹಣೆಯಲ್ಲಿ ಇಲಾಖೆ ಪಾರದರ್ಶಕತೆ ತೋರಿಲ್ಲ ಎಂದು ಸಮಿತಿ ಹೇಳಿದೆ.</p>



<figure class="wp-block-image size-full"><img loading="lazy" decoding="async" width="743" height="413" src="https://peepalmedia.com/wp-content/uploads/2023/07/images-2023-07-19T090640.936.jpeg" alt="" class="wp-image-23958" srcset="https://peepalmedia.com/wp-content/uploads/2023/07/images-2023-07-19T090640.936.jpeg 743w, https://peepalmedia.com/wp-content/uploads/2023/07/images-2023-07-19T090640.936-300x167.jpeg 300w, https://peepalmedia.com/wp-content/uploads/2023/07/images-2023-07-19T090640.936-150x83.jpeg 150w, https://peepalmedia.com/wp-content/uploads/2023/07/images-2023-07-19T090640.936-696x387.jpeg 696w" sizes="auto, (max-width: 743px) 100vw, 743px" /></figure>



<p><strong>ಬ್ಲಾಕ್ ಫಂಗಸ್ ಚಿಕಿತ್ಸೆಯಲ್ಲೂ ಗೊಂದಲ</strong><br>ಕೋವಿಡ್ ಸಾಂಕ್ರಾಮಿಕದ ನಂತರ ಕಂಡುಬಂದ ಬ್ಲಾಕ್ ಫಂಗಸ್ ಪರೀಕ್ಷೆಯಲ್ಲೂ ಸಹ ಇಲಾಖೆಯ ಅವ್ಯವಹಾರವನ್ನು PAC ವರದಿ ನೀಡಿದೆ. ಬ್ಲಾಕ್ ಫಂಗಸ್ ಚಿಕಿತ್ಸೆಯಲ್ಲಿ ಬಳಸಲಾಗುವ ಆಂಫೊಟೆರಿಸಿನ್ ಔಷಧಿಯ 25,000 ಬಾಟಲುಗಳನ್ನು ಅತಿ ಕಡಿಮೆ 2 ನೇ ಬಿಡ್ ದಾರ ಮೈಲಾನ್ ಫಾರ್ಮಾಸ್ಯುಟಿಕಲ್ಸ್‌ನೊಂದಿಗೆ ಹೆಚ್ಚಿನ ಬೆಲೆಗೆ ಖರೀದಿಸಲು ಇಲಾಖೆ ಆದೇಶ ನೀಡಿದೆ ಎಂದು PAC ಕಂಡುಹಿಡಿದಿದೆ.</p>



<p>&#8220;ಭಾರತ್ ಸೀರಮ್ಸ್ ಮತ್ತು ಲಸಿಕೆಗಳಿಂದ ಆರ್ಡರ್ ಮಾಡಿದ 50,000 ಬಾಟಲುಗಳಲ್ಲಿ, ಅವರು ಹೆಚ್ಚು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಹೇಳುವ ಮೂಲಕ ಕೇವಲ 1,092 ಬಾಟಲುಗಳನ್ನು ಪೂರೈಸಿದ್ದಾರೆ.&nbsp;ಅವರು ತಮ್ಮ ಆದೇಶಗಳನ್ನು ಪೂರೈಸಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಯಾವುದೇ ಪ್ರಯತ್ನಗಳನ್ನು ಮಾಡಲಾಗಿಲ್ಲ,&#8221; PAC ಗಮನಿಸಿದೆ.</p>



<p>ಔಷಧಿಗಳನ್ನು ಹೆಚ್ಚಿನ ಬೆಲೆಗೆ ಖರೀದಿಸಿ, ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯುವಲ್ಲಿ ಇಲಾಖೆ ವಿಫಲವಾಗಿದೆ.&nbsp;ಕೋವಿಡ್-19 ಸಮಯದಲ್ಲಿ ಮಾಡಿದ ಅನೇಕ ಖರೀದಿಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿಯನ್ನು ಇಲಾಖೆಯಿಂದ ಪಡೆಯುವಲ್ಲಿ ವಿಫಲವಾಗಿದೆ ಎಂದು PAC ಸಮಿತಿಯು ಬಹಿರಂಗಪಡಿಸಿದೆ. ಹಾಗೂ ಒಟ್ಟಾರೆ ಈ ವರದಿಗೆ ಅನುಗುಣವಾಗಿ ಸ್ವತಂತ್ರ ತನಿಖೆಗೆ ಆದೇಶಿಸುವಂತೆ ಶಿಫಾರಸು ಮಾಡಲಾಗಿದೆ.<br><strong>(ಆಧಾರ : TNM ಮತ್ತು PAC ವರದಿ)</strong></p>
]]></content:encoded>
					
		
		
			</item>
		<item>
		<title>ತುರ್ತು ಚಿಕಿತ್ಸೆ ನಿರಾಕರಿಸಿದರೆ ಕ್ರಿಮಿನಲ್‌ ಮೊಕದ್ದಮೆ: ಆರೋಗ್ಯ ಇಲಾಖೆ ಎಚ್ಚರಿಕೆ</title>
		<link>https://peepalmedia.com/thurthu-chikithse-nirakarisidare-criminal-mokaddame-arogya-ilakhe-eccharige/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 07 Nov 2022 07:52:24 +0000</pubDate>
				<category><![CDATA[ರಾಜ್ಯ]]></category>
		<category><![CDATA[bengalure]]></category>
		<category><![CDATA[criminal mokaddame]]></category>
		<category><![CDATA[govt hospital]]></category>
		<category><![CDATA[health department]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state politics]]></category>
		<category><![CDATA[turthu chikithse]]></category>
		<category><![CDATA[writing]]></category>
		<guid isPermaLink="false">https://peepalmedia.com/?p=14549</guid>

					<description><![CDATA[ಬೆಂಗಳೂರು: ಸಾರ್ವಜನಿಕ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ರೋಗಿಗಳಿಗೆ ತುರ್ತು ಚಿಕಿತ್ಸೆ ನಿರಾಕರಿಸಿ, ಏನಾದರೂ ಅಹಿತಕರ ಘಟನೆ ಸಂಭವಿಸಿದಲ್ಲಿ, ಸಂಬಂಧಪಟ್ಟ ಅಧಿಕಾರಿ, ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗುವುದಲ್ಲದೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದೆ. ತುಮಕೂರಿನಲ್ಲಿ ಇತ್ತೀಚಿಗೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿ ಮಹಿಳೆಗೆ ತಾಯಿ ಕಾರ್ಡ್‌, ಆಧಾರ್‌ ಕಾರ್ಡ್‌ ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿದ ಪರಿಣಾಮವಾಗಿ ಆಕೆ ಮತ್ತು ಆಕೆಯ ಅವಳಿ ಶಿಶುಗಳು ಮೃತಪಟ್ಟಿದ್ದರು. ಈ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಸಾರ್ವಜನಿಕ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ರೋಗಿಗಳಿಗೆ ತುರ್ತು ಚಿಕಿತ್ಸೆ ನಿರಾಕರಿಸಿ, ಏನಾದರೂ ಅಹಿತಕರ ಘಟನೆ ಸಂಭವಿಸಿದಲ್ಲಿ, ಸಂಬಂಧಪಟ್ಟ ಅಧಿಕಾರಿ, ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗುವುದಲ್ಲದೆ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಚ್ಚರಿಕೆ ನೀಡಿದೆ.</p>



<p>ತುಮಕೂರಿನಲ್ಲಿ ಇತ್ತೀಚಿಗೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದಿದ್ದ ಗರ್ಭಿಣಿ ಮಹಿಳೆಗೆ ತಾಯಿ ಕಾರ್ಡ್‌, ಆಧಾರ್‌ ಕಾರ್ಡ್‌ ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿದ ಪರಿಣಾಮವಾಗಿ ಆಕೆ ಮತ್ತು ಆಕೆಯ ಅವಳಿ ಶಿಶುಗಳು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೊಸ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಚಿಕಿತ್ಸೆ ನಿರಾಕರಿಸುವ ವೈದ್ಯರು, ಶುಶ್ರೂಷಕರಿಗೆ ಗಂಭೀರ ಎಚ್ಚರಿಕೆ ನೀಡಿದೆ.</p>



<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/11/4a11e011-71de-4823-b979-94b29304bc15-674x1024.jpg" alt="" class="wp-image-14552" width="301" height="453"/></figure>



<p>ತುರ್ತುಪರಿಸ್ಥಿತಿಯಲ್ಲಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಗಳ ಬಳಿ ಯಾವುದೇ ದಾಖಲೆ ಇಲ್ಲದೇ ಇದ್ದರೂ ತಕ್ಷಣ ಚಿಕಿತ್ಸೆ ನೀಡಬೇಕು. ಆಧಾರ್‌ ಕಾರ್ಡ್‌, ತಾಯಿ ಕಾರ್ಡ್‌, ರೇಷನ್‌ ಕಾರ್ಡ್‌ ಇಲ್ಲದೇ ಇದ್ದರೂ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಚಿಕಿತ್ಸೆ ನೀಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.</p>



<p>ರೋಗಿಗಳಿಗೆ ಚಿಕಿತ್ಸೆ ನೀಡುವಾಗ ರೋಗಿಯ ರಾಷ್ಟ್ರೀಯತೆ, ವರ್ಗ, ಜಾತಿ ಮತ್ತು ಆರ್ಥಿಕ ಸ್ಥಿತಿಯನ್ನು ಪರಿಗಣಿಸಬಾರದು. ತುರ್ತು ಪರಿಸ್ಥಿತಿಗೆ ರೋಗಿಗೆ ಚಿಕಿತ್ಸೆ ಅವಶ್ಯಕವಾಗಿರುವುದರಿಂದ, ವೈದ್ಯರು, ಶುಶ್ರೂಷಕರು ಮತ್ತು ಇತರೆ ಸಿಬ್ಬಂದಿಗಳು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸುತ್ತೋಲೆ ತಿಳಿಸಿದೆ.</p>



<p>ತುರ್ತು ಚಿಕಿತ್ಸೆಗೆ ಸಂಬಂಧಿಸಿದಂತೆ, ರೋಗಿಗಳಿಂದ ಯಾವುದೇ ರೀತಿಯ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸಬಾರದು, ದಾಖಲೆಗಳು ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಿ ಅಹಿತಕರ ಘಟನೆಗಳು ನಡೆದಲ್ಲಿ ಅಧಿಕಾರಿ, ನೌಕರರನ್ನು ಹೊಣೆ ಮಾಡಿ, ಸೇವೆಯಿಂದ ವಜಾಗೊಳಿಸಲಾಗುವುದು. ಅಷ್ಟೇ ಅಲ್ಲದೆ ಅವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.</p>
]]></content:encoded>
					
		
		
			</item>
	</channel>
</rss>
