<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Health sector &#8211; Peepal Media</title>
	<atom:link href="https://peepalmedia.com/tag/health-sector/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 03 Feb 2025 07:19:54 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Health sector &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಅಂಕಿಅಂಶಗಳು ಹೇಳುವ ಕತೆ: ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಗಳಿಗೆ ಕಳಪೆ ಅನುದಾನ</title>
		<link>https://peepalmedia.com/the-statistics-tell-a-story-poor-funding-for-public-health-and-education-systems/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 03 Feb 2025 07:19:53 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[bengaluru]]></category>
		<category><![CDATA[bjp]]></category>
		<category><![CDATA[budget-2025-26]]></category>
		<category><![CDATA[central budget]]></category>
		<category><![CDATA[education]]></category>
		<category><![CDATA[Health sector]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[nirmala sitaraman]]></category>
		<guid isPermaLink="false">https://peepalmedia.com/?p=53273</guid>

					<description><![CDATA[ಮುಖ್ಯವಾಹಿನಿಯ ಸುದ್ದಿ ಮುಖ್ಯಾಂಶಗಳ ಆಚೆಗೆ, ಬಜೆಟ್ ಅಂಕಿಅಂಶಗಳನ್ನು ಕೂಲಂಕೂಶವಾಗಿ ನೋಡುವುದು ನಿರ್ಣಾಯಕ ಒಳನೋಟಗಳನ್ನು ನೀಡುತ್ತದೆ. ಭಾರತದ ರಕ್ಷಣಾ ಬಜೆಟ್ ಕಳೆದ ದಶಕದಲ್ಲಿಯೇ ದ್ವಿಗುಣಗೊಂಡಿದೆ,&#160;ಇತ್ತೀಚೆಗೆ ಘೋಷಿಸಲಾದ ಬಜೆಟ್‌ನಲ್ಲಿ&#160;&#160;6.8 ಲಕ್ಷ&#160;ಕೋಟಿ&#160;ರುಪಾಯಿಯಾಗಿದೆ. ಆದರೂ, ಈ ದಿಗ್ಭ್ರಮೆಗೊಳಿಸುವ ಅಂಕಿ ಅಂಶದ ಹೊರತಾಗಿಯೂ, ಸಶಸ್ತ್ರ ಪಡೆಗಳಿಗೆ ತೃಪ್ತಿಯಾಗಿಲ್ಲ. ಖರೀದಿಸಿದ ಸೇನಾ ಆಯುಧಗಳು ತಡವಾಗಿ ಬರುತ್ತವೆ, ನಿರ್ಣಾಯಕ ಆಧುನೀಕರಣ ಯೋಜನೆಗಳು ವರ್ಷಗಳಿಂದ ಜಾರಿಯಾಗಿಲ್ಲ, ಬಜೆಟ್‌ನ ಸುಮಾರು ಕಾಲು ಭಾಗವನ್ನು ಪಿಂಚಣಿಗಳೇ ನುಂಗುತ್ತವೆ. ದಾಖಲೆಯ ಹೆಚ್ಚಿನ ಖರ್ಚು ಮಾಡಿದರೂ ಸಹ, ಮಿಲಿಟರಿ ಇನ್ನೂ ಫೈರ್‌ಪವರ್ ಅನ್ನು ಹೊಂದಿಲ್ಲ. [&#8230;]]]></description>
										<content:encoded><![CDATA[
<pre class="wp-block-code"><code><strong>ಯಾವುದೇ ರಾಷ್ಟ್ರವು ತನ್ನ ಜನರು ಆರೋಗ್ಯವಂತರು, ಕೌಶಲ್ಯವಂತರೂ ಮತ್ತು ಸಬಲರು ಆಗಿದ್ದಾರೋ ಎಂದು ಮೊದಲು ಖಚಿತಪಡಿಸಿಕೊಳ್ಳದೆ ನಿರಂತರ ಸಮೃದ್ಧಿಯನ್ನು ಸಾಧಿಸಿಲ್ಲ. </strong></code></pre>



<pre class="wp-block-code"><code><em><strong>ದೀಪಾಂಶು ಮೋಹನ್ </strong></em>ಮತ್ತು <em><strong>ಅಂಕುರ್ ಸಿಂಗ್ </strong></em>ಅವರ ಈ ಲೇಖನ ಮಿಲಿಟರಿಗೆ ಕೇಂದ್ರ ಸರ್ಕಾರ ಹೆಚ್ಚಿನ ಹಣವನ್ನು ಖರ್ಚು ಮಾಡಿ, ಶಿಕ್ಷಣ ಹಾಗೂ ಆರೋಗ್ಯ ವ್ಯವಸ್ಥೆಯನ್ನು ಕಡೆಗಣಿಸಿರುವ ಬಗ್ಗೆ ಆತಂಕಕಾರಿ ಒಳನೋಟಗಳನ್ನು ನೀಡುತ್ತದೆ.</code></pre>



<p>ಮುಖ್ಯವಾಹಿನಿಯ ಸುದ್ದಿ ಮುಖ್ಯಾಂಶಗಳ ಆಚೆಗೆ, ಬಜೆಟ್ ಅಂಕಿಅಂಶಗಳನ್ನು ಕೂಲಂಕೂಶವಾಗಿ ನೋಡುವುದು ನಿರ್ಣಾಯಕ ಒಳನೋಟಗಳನ್ನು ನೀಡುತ್ತದೆ. ಭಾರತದ ರಕ್ಷಣಾ ಬಜೆಟ್ ಕಳೆದ ದಶಕದಲ್ಲಿಯೇ ದ್ವಿಗುಣಗೊಂಡಿದೆ,&nbsp;ಇತ್ತೀಚೆಗೆ ಘೋಷಿಸಲಾದ ಬಜೆಟ್‌ನಲ್ಲಿ&nbsp;&nbsp;<a href="https://thewire.in/economy/defence-ministry-gets-largest-chunk-of-union-budget">6.8 ಲಕ್ಷ&nbsp;ಕೋಟಿ&nbsp;ರುಪಾಯಿಯಾಗಿದೆ.</a></p>



<p>ಆದರೂ, ಈ ದಿಗ್ಭ್ರಮೆಗೊಳಿಸುವ ಅಂಕಿ ಅಂಶದ ಹೊರತಾಗಿಯೂ, ಸಶಸ್ತ್ರ ಪಡೆಗಳಿಗೆ ತೃಪ್ತಿಯಾಗಿಲ್ಲ. ಖರೀದಿಸಿದ ಸೇನಾ ಆಯುಧಗಳು ತಡವಾಗಿ ಬರುತ್ತವೆ, ನಿರ್ಣಾಯಕ ಆಧುನೀಕರಣ ಯೋಜನೆಗಳು ವರ್ಷಗಳಿಂದ ಜಾರಿಯಾಗಿಲ್ಲ, ಬಜೆಟ್‌ನ ಸುಮಾರು ಕಾಲು ಭಾಗವನ್ನು ಪಿಂಚಣಿಗಳೇ ನುಂಗುತ್ತವೆ. ದಾಖಲೆಯ ಹೆಚ್ಚಿನ ಖರ್ಚು ಮಾಡಿದರೂ ಸಹ, ಮಿಲಿಟರಿ ಇನ್ನೂ ಫೈರ್‌ಪವರ್ ಅನ್ನು ಹೊಂದಿಲ್ಲ.</p>



<p>ಇದೆಲ್ಲವೂ ಶಿಕ್ಷಣ ಮತ್ತು ಆರೋಗ್ಯದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಮಾಡಬೇಕಾದ ವೆಚ್ಚದ ಮೇಲೆ ಪರಿಣಾಮ ಬೀರುತ್ತಿವೆ, ಆ ಕ್ಷೇತ್ರಗಳು ಹಿಂದುಳಿಯುತ್ತಲೇ ಇವೆ. </p>



<p>ದೇಶಾದ್ಯಂತ ಶಾಲೆಗಳಿಗೆ ಕಡಿಮೆ ಅನುದಾನ ಸಿಗುತ್ತಿವೆ, ಅನೇಕ ಮೂಲಭೂತ ಮೂಲಸೌಕರ್ಯಗಳ ಕೊರತೆಯನ್ನು ಅನುಭವಿಸುತ್ತಿವೆ. ಬಿಕ್ಕಟ್ಟು ಎಷ್ಟು ತೀವ್ರವಾಗಿದೆ ಎಂದರೆ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಮಾಣವು ಈಗ ರೈತರನ್ನು ಮೀರಿಸಿದೆ, ಇದು ಶಿಕ್ಷಣ ವಲಯದಲ್ಲಿರುವ ಒತ್ತಡ ಮತ್ತು ನಿರ್ಲಕ್ಷ್ಯವನ್ನು ಇದು ಕಠೋರವಾಗಿ ಪ್ರತಿಬಿಂಬಿಸುತ್ತದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅಷ್ಟೇ ಭೀಕರ ಸ್ಥಿತಿಯಲ್ಲಿದೆ. ಭಾರತದ&nbsp;<a href="https://thesouthfirst.com/health/india-has-only-0-79-beds-per-1000-population-in-government-hospitals-short-by-2-4-million-hospital-beds/">24 ಲಕ್ಷ ಆಸ್ಪತೆಗಳಲ್ಲಿ ಹಾಸಿಗೆಗಳ ಕೊರತೆ ಇದೆ</a>, ಲಕ್ಷಾಂತರ ಜನರಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ. </p>



<p>ಭಾರತವು ತನ್ನ ಗಡಿಗಳನ್ನು ಬಲಪಡಿಸಲು ಸರ್ಕಸ್‌ ಮಾಡುತ್ತಿದ್ದರೆ, ಇನ್ನೊಂದು ಕಡೆ ತನ್ನ ಅತ್ಯಮೂಲ್ಯ ಆಸ್ತಿಯಾದ ಜನರನ್ನು ಕಡೆಗಣಿಸುತ್ತಿದೆ.&nbsp;</p>



<p><strong>ಭಾರತದ ಶಿಕ್ಷಣ ಬಿಕ್ಕಟ್ಟು: ತುರ್ತು ಸುಧಾರಣೆಯ ಅಗತ್ಯ</strong></p>



<p>ಶಿಕ್ಷಣವು ಭಾರತದ ಭವಿಷ್ಯದ ಅಡಿಪಾಯ ಎಂದು ಹಿಂದಿನಿಂದಲೂ ಹೇಳಲಾಗುತ್ತಿದೆ, ಆದರೆ ಬಜೆಟ್ ಹಂಚಿಕೆಗಳು ಮತ್ತು ಅಸಮರ್ಥತೆಗಳು ಬೇರೆಯೇ ಕಥೆಯನ್ನು ಹೇಳುತ್ತವೆ. ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚವು&nbsp;<a href="https://timesofindia.indiatimes.com/business/budget/interim-union-budget-202425-the-need-for-6-of-gdp-in-the-indian-education-sector-major-roadblocks-and-more/articleshow/107233546.cms">ಜಿಡಿಪಿಯ (2024) 2.9%</a>&nbsp;ರಷ್ಟು ಮಾತ್ರ ಇದೆ, ಇದು ಕೊಟ್ಟಾರಿ ಆಯೋಗವು ಶಿಫಾರಸು ಮಾಡಿದ 6% ಗುರಿಗಿಂತ ಕಡಿಮೆಯಾಗಿದೆ. 2015-16 ರಿಂದ ಫಂಡ್ ಹೆಚ್ಚಿದ್ದರೂ, ಕ್ಷೇತ್ರವು ತೀವ್ರ ಮೂಲಸೌಕರ್ಯ ಮತ್ತು ಮಾನವಶಕ್ತಿ ಕೊರತೆಯೊಂದಿಗೆ ಬಳಲುತ್ತಿದೆ.</p>



<p>ಅರ್ಹ ಶಿಕ್ಷಕರ ತೀವ್ರ ಕೊರತೆಯು ಅತ್ಯಂತ ದೊಡ್ಡ ಸಮಸ್ಯೆಯಾಗಿದೆ.&nbsp;<a href="https://educationforallinindia.com/quality-of-education-in-india-addressing-the-challenges-november-2023/">12 ಲಕ್ಷ ಶಿಕ್ಷಕರ</a>&nbsp;ಹುದ್ದೆಗಳು ರಾಷ್ಟ್ರವ್ಯಾಪಿ ಖಾಲಿ ಬಿದ್ದಿವೆ, ಇದು ಅನೇಕ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತವು 50:1 ಕ್ಕಿಂತ ಹೆಚ್ಚಾಗಿ, ತರಗತಿಗಳು ಮಕ್ಕಳೇ ಹೆಚ್ಚಾಗಿ ಶಿಕ್ಷಕರಿಲ್ಲದೆ ಕಂಗೆಟ್ಟಿವೆ. ಇದಕ್ಕಿಂತ ಕೆಟ್ಟ ಪರಿಸ್ಥಿತಿ ಎಂದರೆ, ಸುಮಾರು 40% ಸರ್ಕಾರದಿಂದ ನೇಮಕಗೊಂಡ ಶಿಕ್ಷಕರಿಗೆ ಸರಿಯಾದ ಅರ್ಹತೆಗಳಿಲ್ಲ, ಇದು ಕಲಿಕೆಯ ಫಲಿತಾಂಶಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಮಸ್ಯೆಗಳು ಮಾತ್ರವಲ್ಲದೆ, ಕಳಪೆ ಮೂಲಸೌಕರ್ಯ, ಔಟ್‌ಡೇಟೆಡ್ ಪಠ್ಯಕ್ರಮ ಮತ್ತು ಡಿಜಿಟಲ್ ವಿಭಜನೆಯಿಂದ‌ ಪರಿಸ್ಥಿತಿ ಇನ್ನೂ ಬಿಗಡಾಯಿಸಿದೆ. ಇದು ಲಕ್ಷಾಂತರ ಜನರಿಗೆ ಗುಣಮಟ್ಟದ ಶಿಕ್ಷಣ ಸಿಗದಂತೆ ಮಾಡುತ್ತಿದೆ.  </p>



<p>ವ್ಯವಸ್ಥೆಯಲ್ಲಿನ ಬಿರುಕುಗಳು ದುರಂತದ ರೀತಿಯಲ್ಲಿ ಕಾಣಿಸುತ್ತವೆ. 2020 ರಲ್ಲಿ ಪ್ರತಿ 42 ನಿಮಿಷಕ್ಕೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವಜನತೆಯ ಆತ್ಮಹತ್ಯೆ ಪ್ರಮಾಣವನ್ನು ತೋರಿಸಿದೆ. ಅಂಕಿಅಂಶಗಳು ಕಠೋರ ಚಿತ್ರಣವನ್ನು ನಮ್ಮ ಮುಂದೆ ಇಡುತ್ತವೆ. ಅದೇ ವರ್ಷ&nbsp;<a href="https://www.dw.com/en/india-exam-pressure-fuels-spike-in-student-suicides/a-66938137">11,396 ವಿದ್ಯಾರ್ಥಿಗಳ ಆತ್ಮಹತ್ಯೆಗಳು</a>&nbsp;ದಾಖಲಾಗಿವೆ. ಹೆಚ್ಚಿನವು ಶೈಕ್ಷಣಿಕ ಒತ್ತಡ, ಪೋಷಕರ ನಿರೀಕ್ಷೆಗಳು ಮತ್ತು ಆತಂಕ ಇದಕ್ಕೆ ಕಾರಣವಾಗಿದೆ. ಆದರೂ, ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಬಗ್ಗೆ ಯಾವುದೇ ಅರಿವು ಇಲ್ಲ. </p>



<p>ಇತ್ತೀಚಿನ ಬಜೆಟ್‌ನೊಂದಿಗೆ ಸರ್ಕಾರವು ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ಮತ್ತು ಡಿಜಿಟಲ್ ಸಂಪರ್ಕ ಕಾರ್ಯಕ್ರಮಗಳಂತಹ ಉಪಕ್ರಮಗಳನ್ನು ಹೆಚ್ಚಿಸಲು ಪ್ರಯತ್ನಿಸಿದೆ.  ಹೂಡಿಕೆಯ ಕೊರತೆ, ಅಸಮರ್ಪಕ ಶಿಕ್ಷಕರ ತರಬೇತಿ ಮತ್ತು ಮಾನಸಿಕ ಆರೋಗ್ಯದ ನಿರ್ಲಕ್ಷ್ಯದ ಮೂಲಭೂತ ಸಮಸ್ಯೆಗಳು ಇನ್ನೂ ಹಾಗೆಯೇ ಇರುವಾಗ ಶಿಕ್ಷಣವನ್ನು ಆಧುನೀಕರಿಸುವ ಈ ಪ್ರಯತ್ನಗಳು ಸಫಲವಾಗಲು ಸಾಧ್ಯವಿಲ್ಲ.  </p>



<p>ಬಜೆಟ್ ಹಂಚಿಕೆಯಲ್ಲಿನ ಅಸಮಾನತೆಯು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತದೆ, ಈ ಸರ್ಕಾರಕ್ಕೆ ಶಿಕ್ಷಣವು ದೊಡ್ಡ ಸಂಗತಿಯೇ ಅಲ್ಲ. ವರ್ಷದಿಂದ ವರ್ಷಕ್ಕೆ, ರಕ್ಷಣಾ ವ್ಯವಸ್ಥೆಯ ಮೇಲಿನ ವೆಚ್ಚವು ಸ್ಥಿರವಾದ ಹೆಚ್ಚಳವನ್ನು ಕಂಡರೆ, ಶಿಕ್ಷಣ ವ್ಯವಸ್ಥೆ ಹಿಂದುಳಿಯುತ್ತಲೇ ಇದೆ.  ಕೆಳಗಿನ ಗ್ರಾಫ್ ಈ ಕಟುವಾದ ವಾಸ್ತವತೆಯನ್ನು ತೋರಿಸುತ್ತದೆ:</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="695" height="540" src="https://peepalmedia.com/wp-content/uploads/2025/02/image-1.png" alt="" class="wp-image-53274" style="width:517px;height:auto" srcset="https://peepalmedia.com/wp-content/uploads/2025/02/image-1.png 695w, https://peepalmedia.com/wp-content/uploads/2025/02/image-1-300x233.png 300w, https://peepalmedia.com/wp-content/uploads/2025/02/image-1-150x117.png 150w" sizes="(max-width: 695px) 100vw, 695px" /><figcaption class="wp-element-caption">ಕೃಪೆ: ಬಜೆಟ್ 2025-26</figcaption></figure></div>


<p>ನಾವು ಭಾರತದ ರಕ್ಷಣಾ ಬಜೆಟ್ ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕಳೆದ ದಶಕದಲ್ಲಿ ಅದು ಹೇಗೆ 152% ಏರಿಕೆಯಾಗಿದೆ ಎಂಬುದನ್ನು ನಾವು ಕಾಣಬಹುದು. 2015-16 ರಲ್ಲಿ ಇದ್ದ&nbsp;<a href="https://www.oneindia.com/business/budget-2025india-defence-budget-allocations-under-modi-2014-2025-impact-modernisation-defense-forces-4056635.html">2.46 ಲಕ್ಷ ಕೋಟಿ ರುಪಾಯಿಗಳ ರಕ್ಷಣಾ ಬಜೆಟ್</a>&nbsp;2025-26 ರಲ್ಲಿ 6.8 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ತೀಕ್ಷ್ಣವಾದ ಏರಿಕೆಯು ಭಾರತದ ವಿಕಸನಗೊಳ್ಳುತ್ತಿರುವ ಭದ್ರತಾ ಕಾಳಜಿಗಳು, ಆಧುನೀಕರಣದ ಪ್ರಯತ್ನಗಳು ಮತ್ತು ಸೇನೆಯ ಆರ್ಥಿಕ ಒತ್ತಡವನ್ನು ತೋರಿಸುತ್ತದೆ.</p>



<p>ಹಾಗಿದ್ದೂ, ಅಂಕಿ ಅಂಶಗಳು ರಚನಾತ್ಮಕ ಸವಾಲುಗಳನ್ನು ಎತ್ತಿ ತೋರಿಸುತ್ತದೆ. 2020-21 ರಲ್ಲಿ, ರಕ್ಷಣೆಗಾಗಿ ಮೀಸಲಿಟ್ಟ 3.37 ಲಕ್ಷ ಕೋಟಿ ರುಪಾಯಿಗಳಲ್ಲಿ ಸುಮಾರು&nbsp;<a href="https://www.thehindu.com/business/budget/337-lakh-crore-allocated-for-defence-budget/article61637185.ece">1.34 ಲಕ್ಷ ಕೋಟಿ</a>&nbsp;(29%) ಬರೀ ನಿವೃತ್ತರ ಪಿಂಚಣಿಗಾಗಿ ಮೀಸಲಿಡಲಾಗಿದೆ. ಇದರರ್ಥ ಬಜೆಟ್‌ನ ಗಮನಾರ್ಹ ಭಾಗವು ಆಧುನೀಕರಣ ಅಥವಾ ಮೂಲಸೌಕರ್ಯಕ್ಕೆ ಹೆಚ್ಚು ಬಳಕೆಯಾಗುತ್ತಿಲ್ಲ. </p>



<p>ಈ ಎಲ್ಲಾ ಪರಿಸ್ಥಿತಿಗಳನ್ನು ನೋಡುವಾಗ ಹೆಲ್ತ್‌ಕೇರ್ ಹೆಚ್ಚು ಬಾಧಿತವಾದಂತೆ ಕಾಣುತ್ತಿಲ್ಲ. ಮೊದಲ ನೋಟಕ್ಕೆ ಭಾರತದ ಆರೋಗ್ಯ ವ್ಯವಸ್ಥೆಯ ಮೇಲಿನ ಬಜೆಟ್ ಸುಧಾರಿಸುತ್ತಿರುವಂತೆ ತೋರುತ್ತಿದೆ ಮತ್ತು ಇದು ಭಾಗಶಃ ನಿಜವಾಗಿದ್ದರೂ, ಹಂಚಿಕೆಯು&nbsp;2015-16 ರಲ್ಲಿ&nbsp;<a href="https://economictimes.indiatimes.com/industry/healthcare/biotech/healthcare/budget-2015-disappointed-healthcare-sector/articleshow/46572657.cms?from=mdr"> 33,152 ಕೋಟಿಗಳಿಂದ 2025-26 ರಲ್ಲಿ&nbsp;</a><a href="https://www.businesstoday.in/union-budget/story/indias-health-budget-sees-108-hike-as-govt-focuses-on-infrastructure-and-medical-education-463108-2025-02-02">ರೂ 95,957 ಕೋಟಿಗಳಿಗೆ</a>&nbsp;ಏರಿಕೆಯಾಗಿದೆ, ಇದು 100% ಕ್ಕಿಂತ ಹೆಚ್ಚಿನ ಏರಿಕೆಯಾಗಿದೆ. </p>



<p>ಈ ಹೆಚ್ಚಳದ ಹೊರತಾಗಿಯೂ, ಭಾರತದ ಆಸ್ಪತ್ರೆಯ ಹಾಸಿಗೆಯ ಲಭ್ಯತೆಯು ಕಡಿಮೆಯಾಗಿದೆ. ಭಾರತದ ಆಸ್ಪತ್ರೆಗಳಲ್ಲಿ ಪ್ರತಿ 1,000 ಜನರಿಗೆ ಕೇವಲ 1.4 ಹಾಸಿಗೆಗಳು ಲಭ್ಯ ಇವೆ. ಇದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದ 1,000 ಗೆ 3.5 ರಷ್ಟು ಹಾಸಿಗೆ ಇರಬೇಕು ಎಂಬುದಕ್ಕಿಂತ ಕಡಿಮೆಯಾಗಿದೆ. ಇದಕ್ಕಿಂತ ಕೆಟ್ಟದಾಗಿ, ಸರ್ಕಾರಿ ಆಸ್ಪತ್ರೆಗಳು ಇನ್ನೂ ಹೆಚ್ಚು ಆತಂಕಕಾರಿ ಅನುಪಾತವನ್ನು ಹೊಂದಿವೆ &#8211; 1,000 ಜನರಿಗೆ ಕೇವಲ 0.79 ಹಾಸಿಗೆಗಳು, ಅಂದರೆ ದೇಶದಲ್ಲಿ 24 ಲಕ್ಷ ಹಾಸಿಗೆಗಳ ಕೊರತೆ ಇದೆ. ವೈದ್ಯರ ಮತ್ತು&nbsp;<a href="https://www.indiatoday.in/health/story/j-p-nadda-takes-charge-of-health-ministry-six-challenges-ahead-modi-3-2552685-2024-06-13">ರೋಗಿಗಳ ಅನುಪಾತವು</a>&nbsp;1:1511 ರಷ್ಟಿದೆ, WHO-ಶಿಫಾರಸು ಮಾಡಿದ 1:1,000 ಅನುಪಾತವನ್ನು ಸಾಧಿಸಲು ಭಾರತ ವಿಫಲವಾಗಿದೆ.</p>



<p>ಗ್ರಾಮೀಣ-ನಗರದ ಮಧ್ಯೆ ಇರುವ ವಿಭಜನೆಯು ವ್ಯವಸ್ಥೆಯಲ್ಲಿನ ಬಿರುಕುಗಳನ್ನು ಮತ್ತಷ್ಟು ಬಹಿರಂಗಪಡಿಸುತ್ತದೆ; 70% ಭಾರತೀಯರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಆದರೆ ಕೇವಲ 40% ಆಸ್ಪತ್ರೆಯ ಹಾಸಿಗೆಗಳು ಮಾತ್ರ ಅವರಿಗೆ ಲಭ್ಯವಿವೆ. ನರ್ಸ್-ಟು-ರೋಗಿಯ ಅನುಪಾತಗಳು 1:670 ನಲ್ಲಿ ನಿಂತಿವೆ. ಇದು ಶಿಫಾರಸು ಮಾಡಿದ 1:300 ಕ್ಕಿಂತ ಕಳಪೆ. ಸಾರ್ವಜನಿಕ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ, ವ್ವವಸ್ಥೆ ಸರಿ ಮಾಡಲು ಸರಿಯಾದ ಹಣ ಇಲ್ಲ. ಅವುಗಳ ಮಿತಿಯನ್ನು ಮೀರಿ ವಿಸ್ತರಿಸಲಾಗಿದೆ, ಆದರೆ ಖಾಸಗಿ ಆಸ್ಪತ್ರೆಗಳು ಉತ್ತಮ ಸುಸಜ್ಜಿತವಾಗಿದ್ದರೂ, ಹೆಚ್ಚಿನ ವೆಚ್ಚದ ಕಾರಣದಿಂದಾಗಿ ಲಕ್ಷಾಂತರ ಜನರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. </p>



<p>ಕೆಳಗಿನ ಗ್ರಾಫ್ ಒಂದು ಸಮಸ್ಯೆಗಳ ಕಥೆಯನ್ನು ಹೇಳುತ್ತದೆ, ಆರೋಗ್ಯ ಕ್ಷೇತ್ರವು ಕಡಿಮೆ ಅನುದಾನವನ್ನು ಹೊಂದಿದೆ, ಅಲ್ಲದೆ ಸರ್ಕಾರವು ತಾನು ನಿಗದಿಪಡಿಸಿದ ಹಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದಿಲ್ಲ. ಗ್ರಾಫ್‌ನಲ್ಲಿ ತೋರಿಸಿದಂತೆ, ವಾಸ್ತವಿಕ ವೆಚ್ಚವು ಸಾಮಾನ್ಯವಾಗಿ ಬಜೆಟ್ ಅಂದಾಜುಗಳಿಗಿಂತ ಕಡಿಮೆಯಿರುತ್ತದೆ, ಇದು ವ್ಯವಸ್ಥೆಯೊಳಗೆ ಆಳವಾದ ರಚನಾತ್ಮಕ ಅಂತರವನ್ನು ಎತ್ತಿ ತೋರಿಸುತ್ತದೆ. ಅಧಿಕಾರಶಾಹಿಯ ಅಸಮರ್ಥತೆಗಳು, ಯೋಜನೆಯ ಅನುಷ್ಠಾನದಲ್ಲಿನ ವಿಳಂಬಗಳು ಅಥವಾ ದೀರ್ಘಾವಧಿಯ ಯೋಜನೆಯ ಕೊರತೆಯಿಂದಾಗಿ, ಖರ್ಚು ಮಾಡದ ನಿಧಿಗಳು ನೀತಿ ಮತ್ತು ಅನುಷ್ಠಾನದ ನಡುವೆ ವ್ಯಾಪಕವಾದ ಸಂಪರ್ಕ ಕಡಿತವನ್ನು ಉಂಟುಮಾಡಿದೆ. ಇದರ ಅರ್ಥ, ಕಾಗದದ ಮೇಲೆ ಹಣವನ್ನು ಹಂಚಿಕೆ ಮಾಡುವುದು- ನಿಜವಾದ ಸುಧಾರಣೆಗಳಲ್ಲಿ ವಿಫಲವಾಗುವುದು. ಈ ಸ್ಥಿರವಾದ ಕೊರತೆಯು ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.&nbsp;</p>


<div class="wp-block-image">
<figure class="aligncenter size-full"><img decoding="async" width="758" height="569" src="https://peepalmedia.com/wp-content/uploads/2025/02/image-2.png" alt="" class="wp-image-53275" srcset="https://peepalmedia.com/wp-content/uploads/2025/02/image-2.png 758w, https://peepalmedia.com/wp-content/uploads/2025/02/image-2-300x225.png 300w, https://peepalmedia.com/wp-content/uploads/2025/02/image-2-150x113.png 150w, https://peepalmedia.com/wp-content/uploads/2025/02/image-2-696x522.png 696w" sizes="(max-width: 758px) 100vw, 758px" /><figcaption class="wp-element-caption">ಕೃಪೆ: ಬಜೆಟ್ 2025-26</figcaption></figure></div>


<p>ಬಹುಶಃ ಅತ್ಯಂತ ವಿನಾಶಕಾರಿ ಅಂಕಿಅಂಶ ಇದು: <a href="https://pmc.ncbi.nlm.nih.gov/articles/PMC10041239/">ಭಾರತದ</a> ಒಟ್ಟು ಆರೋಗ್ಯ ವೆಚ್ಚದ 62.6% ಅನ್ನು ಜನರು ತಮ್ಮ ಜೇಬಿನಿಂದ ಪಾವತಿಸುತ್ತಾರೆ, ಇದು ವಿಶ್ವದಲ್ಲೇ ಅತಿ ಹೆಚ್ಚು. ವೈದ್ಯಕೀಯ ಬಿಲ್‌ಗಳು ಭಾರತದಲ್ಲಿ ಬಡತನಕ್ಕೆ ಪ್ರಮುಖ ಕಾರಣವಾಗಿವೆ, ಆದರೂ ಸರ್ಕಾರವು ಈ ಹೊರೆಯನ್ನು ಕಡಿಮೆ ಮಾಡಲು ಏನೇನೂ ಮಾಡಿಲ್ಲ.</p>



<p>2025-26ರಲ್ಲಿ ಕೇವಲ&nbsp;<a href="https://pib.gov.in/PressReleasePage.aspx?PRID=2098485">1.80 ಲಕ್ಷ ಕೋಟಿ ರುಪಾಯಿಗಳನ್ನು</a>&nbsp;ಬಂಡವಾಳ ವಿನಿಯೋಗಕ್ಕಾಗಿ ಮೀಸಲಿಡುವುದರೊಂದಿಗೆ ರಕ್ಷಣಾ ಬಜೆಟ್ ಸ್ಥಿರವಾದ ಏರಿಕೆಯನ್ನು ಕಂಡಿದೆ, ಆರೋಗ್ಯ ವ್ಯವಸ್ಥೆಯು ದೀರ್ಘಕಾಲಿಕವಾಗಿ ಕಡಿಮೆ ಅನುದಾನವನ್ನು ಹೊಂದಿದೆ.&nbsp;ಮಿಲಿಟರಿಯಲ್ಲಿ ಆಧುನೀಕರಣವು ಅಗತ್ಯ, ಆದರೆ ಆಸ್ಪತ್ರೆಗಳ ಆಧುನೀಕರಣ ಬಗ್ಗೆ ಯಾವಾಗ ಮಾಡುವುದು? ಹೊಸ ವೈದ್ಯಕೀಯ ಮೂಲಸೌಕರ್ಯಗಳನ್ನು ನಿರ್ಮಿಸುವುದು ಯಾವಾಗ?</p>



<p><strong>ಬಲಿಷ್ಠ ಮತ್ತು ಸಮೃದ್ಧ ಭಾರತದ ಕೀಲಿಕೈ</strong></p>



<p>ಮಧ್ಯಮ-ಆದಾಯದ ಬಲೆಯಿಂದ ಅಕಾಲಿಕ ಕೈಗಾರಿಕೀಕರಣದ ಅಪಾಯದವರೆಗೆ ಅಥವಾ ನಿರುದ್ಯೋಗ ಬೆಳವಣಿಗೆಯಿಂದ ಅರ್ಥಶಾಸ್ತ್ರಜ್ಞ ಅರವಿಂದ್ ಸುಬ್ರಮಣಿಯನ್ ಹೇಳುವ &#8220;<a href="https://watson.brown.edu/southasia/news/2021/subramanian-foreign-affiars-indias-stalled-rise">ಸ್ಥಗಿತ ಆರ್ಥಿಕತ</a>&#8221; ಆಗುವ ಅಪಾಯದವರೆಗೆ ನಮ್ಮ ಭವಿಷ್ಯ ಸಿಕ್ಕಿಹಾಕಿಕೊಳ್ಳುವ ಬಲೆಗಳಿಂದ ತಪ್ಪಿಸಿಕೊಳ್ಳಬೇಕೆಂದರೆ ನಾವು ಸಮಸ್ಯೆಗಳನ್ನು ಗುರುತಿಸಬೇಕು. ಒಂದು ದೇಶದ ಶಕ್ತಿಯನ್ನು ಕೇವಲ ರಕ್ಷಣಾ ಬಜೆಟ್ ಮತ್ತು ಜಿಡಿಪಿ ಅಂಕಿಅಂಶಗಳಲ್ಲಿ ಅಳೆಯಲಾಗುವುದಿಲ್ಲ. ಅದನ್ನು ಅದರ ಜನರ ಸಾಮರ್ಥ್ಯಗಳಲ್ಲಿ ಅಳೆಯಲಾಗುತ್ತದೆ.</p>



<p>ಯುವ ಜನಸಂಖ್ಯೆಯೊಂದಿಗೆ, ದೊಡ್ಡ ಜನಸಂಖ್ಯೆ ಲಾಭಾಂಶದ ಪ್ರಯೋಜನಗಳನ್ನು ಪಡೆದುಕೊಳ್ಳಲು ಕಡಿಮೆ ಅವಕಾಶಗಳನ್ನು ಹೊಂದಿದ್ದಾರೆ. ಆದರೆ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಲ್ಲಿ ದೃಢವಾದ ಹೂಡಿಕೆಗಳಿಲ್ಲದೆ, ಆ ಪ್ರಯೋಜನವು ಸುಲಭವಾಗಿ ಸಿಗದೆ ಡೆಮೋಗ್ರಾಫಿಕ್‌ ಡಿಸಾಸ್ಟರ್‌ ಆಗಿ ಬದಲಾಗಬಹುದು. ಭಾರತವು &#8220;ಶ್ರೀಮಂತವಾಗುವಾಗ ಮುದುಕನಾಗುವ ಅಪಾಯ&#8221;ದಲ್ಲಿದೆ ಎಂದು  <a href="https://www.mckinsey.com/mgi/our-research/dependency-and-depopulation-confronting-the-consequences-of-a-new-demographic-reality">ಮೆಕಿನ್ಸೆ ವರದಿಯು</a> ಎಚ್ಚರಿಸಿದೆ, ಏಕೆಂದರೆ ಅಸಮರ್ಪಕ ಮಾನವ ಬಂಡವಾಳ ಹೂಡಿಕೆಗಳು ದೇಶವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದುವ ಮೊದಲು ಆರ್ಥಿಕ ಪ್ರಗತಿಯನ್ನು ಸ್ಥಗಿತಗೊಳಿಸಬಹುದು.</p>



<p>ಯಾವುದೇ ರಾಷ್ಟ್ರವು ತನ್ನ ಜನರು ಆರೋಗ್ಯವಂತರು, ಕೌಶಲ್ಯವಂತರೂ ಮತ್ತು ಸಬಲರು ಆಗಿದ್ದಾರೋ ಎಂದು ಮೊದಲು ಖಚಿತಪಡಿಸಿಕೊಳ್ಳದೆ ನಿರಂತರ ಸಮೃದ್ಧಿಯನ್ನು ಸಾಧಿಸಿಲ್ಲ. ರಾಷ್ಟ್ರೀಯ ಬಲವನ್ನು ಉಳಿಸಿಕೊಳ್ಳುವ ಅಡಿಪಾಯವನ್ನು ನಿರ್ಲಕ್ಷಿಸುವಾಗ ನಾವು ಸಂಪನ್ಮೂಲಗಳನ್ನು ಮಿಲಿಟರಿ ವಿಸ್ತರಣೆಗೆ ಸುರಿಯುತ್ತಾರೆ. ಅಭಿವೃದ್ಧಿ ಹೊಂದಿದ ಭಾರತ ಎಂದರೆ ಪ್ರತಿ ಮಗುವಿಗೆ ಗುಣಮಟ್ಟದ ಶಿಕ್ಷಣ ಸಿಗುವ ನಿಜವಾದ ಸುರಕ್ಷಿತ ಭಾರತ, ಅಲ್ಲಿ ಯಾವುದೇ ಕುಟುಂಬವು ವೈದ್ಯಕೀಯ ಸಮಸ್ಯೆ ಎದುರಾದಾಗ ದಿವಾಳಿಯಾಗುತ್ತೇವೆ ಎಂದು ಹೆದರುವುದಿಲ್ಲ. ಈ ಭಾರತದಲ್ಲಿ ಮಿಲಿಟರಿ ಶಕ್ತಿ ಮಾತ್ರವಲ್ಲ, ಮಾನವ ಸಾಮರ್ಥ್ಯವೂ ಅಭಿವೃದ್ಧಿಯನ್ನು ವ್ಯಾಖ್ಯಾನಿಸುತ್ತದೆ.</p>



<p><em>ಈ ಲೇಖನವು ದಿ ವೇರ್‌ನಲ್ಲಿ ಪ್ರಕಟವಾಗಿರುವ <a href="https://thewire.in/economy/data-story-the-unseen-costs-of-underfunding-education-and-healthcare">Data Story: The Unseen Costs of Underfunding Education and Healthcare</a></em> ಯ ಕನ್ನಡ ಭಾವಾನುವಾದವಾಗಿದೆ.</p>



<p> ಈ<em> ಸಂಶೋಧನೆಗೆ ಅನನಿಯಾ ಸಿಂಘಾಲ್ ಕೂಡ ಕೊಡುಗೆ ನೀಡಿದ್ದಾರೆ. </em></p>



<p><em><strong>ದೀಪಾಂಶು ಮೋಹನ್ </strong>ಅವರು <em>IDEAS</em></em>ನ<em> ಅರ್ಥಶಾಸ್ತ್ರದ ಪ್ರೊಫೆಸರ್, ಡೀನ್ ಮತ್ತು ಸೆಂಟರ್‌ ಫಾರ್‌ ನ್ಯೂ ಎಕನಾಮಿಕ್‌ ಸ್ಟಡೀಸ್‌ನ ನಿರ್ದೇಶಕರು. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದು, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ AMES ಗೆ ಶೈಕ್ಷಣಿಕ ಸಂದರ್ಶಕ ಫೆಲೋ ಆಗಿದ್ದಾರೆ.</em></p>



<p><em><strong>ಅಂಕುರ್ ಸಿಂಗ್ </strong>ಅವರು ಸೆಂಟರ್ ಫಾರ್ ನ್ಯೂ ಎಕನಾಮಿಕ್ಸ್ ಸ್ಟಡೀಸ್ (CNES) ನ ಸಂಶೋಧನಾ ಸಹಾಯಕರಾಗಿದ್ದು, ಅದರ ಇನ್ಫೋಸ್ಪಿಯರ್ ಉಪಕ್ರಮದ ತಂಡದ ಸದಸ್ಯರಾಗಿದ್ದಾರೆ.</em></p>
]]></content:encoded>
					
		
		
			</item>
		<item>
		<title>ಭಾರತದಲ್ಲಿ 19.5 ಕೋಟಿ ಜನ ಅಪೌಷ್ಟಿಕರು- ವಿಶ್ವದಲ್ಲೇ ಅತೀ ಹೆಚ್ಚು: ವಿಶ್ವಸಂಸ್ಥೆ ವರದಿ</title>
		<link>https://peepalmedia.com/19-5-undernourished-in-india-un-report/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 25 Jul 2024 09:33:10 +0000</pubDate>
				<category><![CDATA[ದೇಶ]]></category>
		<category><![CDATA[Global Hunger Index]]></category>
		<category><![CDATA[health ministry]]></category>
		<category><![CDATA[Health sector]]></category>
		<category><![CDATA[Health system]]></category>
		<category><![CDATA[india]]></category>
		<category><![CDATA[Undernourished]]></category>
		<category><![CDATA[United nations]]></category>
		<guid isPermaLink="false">https://peepalmedia.com/?p=42731</guid>

					<description><![CDATA[ಬೆಂಗಳೂರು: ಭಾರತವು 19.5 ಕೋಟಿ ಅಪೌಷ್ಟಿಕ ಜನರಿಂದ ತುಂಬಿಹೋಗಿದೆ &#8211; ಇದು ವಿಶ್ವದಲ್ಲೇ ಅತಿ ಹೆಚ್ಚು- ಎಂದು ಜುಲೈ 24 ರಂದು ಬಿಡುಗಡೆಯಾದ ಈ ವರ್ಷದ &#8216;ಸ್ಟೇಟ್ ಆಫ್ ಫುಡ್ ಸೆಕ್ಯುರಿಟಿ ಅಂಡ್ ನ್ಯೂಟ್ರಿಷನ್ ಇನ್ ದಿ ವರ್ಲ್ಡ್&#8216; (SOFI) ವರದಿ ಹೇಳಿದೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಈ ವರದಿಯನ್ನು ಸಿದ್ಧಪಡಿಸಿದೆ ಮತ್ತು ವಿಶ್ವಸಂಸ್ಥೆ ಮತ್ತು ಯುನಿಸೆಫ್ ಸೇರಿದಂತೆ ಇತರ ನಾಲ್ಕು ವಿಶ್ವಸಂಸ್ಥೆಯ ಏಜೆನ್ಸಿಗಳು ಜಂಟಿಯಾಗಿ ಪ್ರಕಟಿಸಿದೆ. FAO ಅಪೌಷ್ಟಿಕತೆಯನ್ನು ಸಾಮಾನ್ಯ ಮತ್ತು [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಭಾರತವು 19.5 ಕೋಟಿ ಅಪೌಷ್ಟಿಕ ಜನರಿಂದ ತುಂಬಿಹೋಗಿದೆ &#8211; ಇದು ವಿಶ್ವದಲ್ಲೇ ಅತಿ ಹೆಚ್ಚು- ಎಂದು ಜುಲೈ 24 ರಂದು ಬಿಡುಗಡೆಯಾದ ಈ ವರ್ಷದ &#8216;<a href="https://openknowledge.fao.org/items/18143951-4b0a-46d6-860b-0f8908745da1" data-type="link" data-id="https://openknowledge.fao.org/items/18143951-4b0a-46d6-860b-0f8908745da1">ಸ್ಟೇಟ್ ಆಫ್ ಫುಡ್ ಸೆಕ್ಯುರಿಟಿ ಅಂಡ್ ನ್ಯೂಟ್ರಿಷನ್ ಇನ್ ದಿ ವರ್ಲ್ಡ್</a>&#8216; (SOFI) ವರದಿ ಹೇಳಿದೆ.</p>



<p>ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಈ ವರದಿಯನ್ನು ಸಿದ್ಧಪಡಿಸಿದೆ ಮತ್ತು ವಿಶ್ವಸಂಸ್ಥೆ ಮತ್ತು ಯುನಿಸೆಫ್ ಸೇರಿದಂತೆ ಇತರ ನಾಲ್ಕು ವಿಶ್ವಸಂಸ್ಥೆಯ ಏಜೆನ್ಸಿಗಳು ಜಂಟಿಯಾಗಿ ಪ್ರಕಟಿಸಿದೆ.</p>



<p>FAO ಅಪೌಷ್ಟಿಕತೆಯನ್ನು ಸಾಮಾನ್ಯ ಮತ್ತು ಸಕ್ರಿಯ ಜೀವನವನ್ನು ನಡೆಸಲು ಅಗತ್ಯವಿರುವ ಆಹಾರದ ಪ್ರಮಾಣವನ್ನು ಪಡೆಯಲು ಮತ್ತು ಸೇವಿಸಲು ಸಾಧ್ಯವಾಗದ ಸ್ಥಿತಿಯೆಂದು ವ್ಯಾಖ್ಯಾನಿಸಿದೆ. ಅಪೌಷ್ಟಿಕತೆಯ ವ್ಯಾಪಕತೆಯನ್ನು ಹಸಿವನ್ನು ಅಳೆಯಲು ಬಳಸಲಾಗುತ್ತದೆ.</p>



<p>ಈ ವರ್ಷ ಭಾರತದ ಅಂಕಿಅಂಶಗಳು ಹಿಂದಿನದಕ್ಕಿಂತ ಸ್ವಲ್ಪಮಟ್ಟಿಗೆ ಸುಧಾರಣೆಯಾಗಿದೆ: ಉದಾಹರಣೆಗೆ 2004-06ರ ಅವಧಿಯಲ್ಲಿ ದೇಶದಲ್ಲಿ ಅಪೌಷ್ಟಿಕತೆಯ ಸಂಖ್ಯೆ 24 ಕೋಟಿ ಇತ್ತು.</p>



<p>SOFI ವರದಿಯು ಅರ್ಧಕ್ಕಿಂತ ಹೆಚ್ಚು ಭಾರತೀಯರು (55.6%) ಇನ್ನೂ &#8216;ಆರೋಗ್ಯಕರ ಆಹಾರ&#8217;ವನ್ನು ಪಡೆಯಲು ಅಸಮರ್ಥರಾಗಿದ್ದಾರೆ ಎಂಬುದನ್ನು ಎತ್ತಿ ತೋರಿಸಿದೆ. ಈ ಪ್ರಮಾಣವು ದಕ್ಷಿಣ ಏಷ್ಯಾದಲ್ಲಿ ಅತ್ಯಧಿಕವಾಗಿದ್ದು, ಈ ಸಂಖ್ಯೆ ಭಾರತದಲ್ಲಿ 79 ಕೋಟಿಯಾಗಿದೆ.</p>



<p>ಬೇರೆ ರೀತಿಯಲ್ಲಿ ಹೇಳುವುದಾದರೆ, ಸಾಮಾನ್ಯ ದಿನದಲ್ಲಿ ದಿನನಿತ್ಯದ ಚಟುವಟಿಕೆಗಳನ್ನು ಮಾಡಲು ಬೇಕಾದ ಶಕ್ತಿಯನ್ನು ಹೊಂದಲು ಸಾಕಷ್ಟು ಆಹಾರವನ್ನು ತಿನ್ನುವುದು ಮತ್ತು ಪೌಷ್ಟಿಕಾಂಶದ ಕೊರತೆ ಇಲ್ಲದಿರುವುದು ಅತೀ ಮುಖ್ಯ. ಆದರೆ ಬಹುಪಾಲು ಭಾರತೀಯರು ಈ ರೀತಿ ಬದುಕಲು ಸಮರ್ಥರಾಗಿದ್ದಾರೆ. ಇನ್ನೊಂದು ವಿಚಾರವೆಂದರೆ, ಗುಣಮಟ್ಟದ ಅಥವಾ &#8216;ಆರೋಗ್ಯಕರ ಆಹಾರ&#8217; ಸೇವಿಸುವುದು. ಅರ್ಧಕ್ಕಿಂತ ಹೆಚ್ಚು ಭಾರತೀಯರಿಗೆ ಇದನ್ನು ಪಡೆಯಲು ಸಾಧ್ಯವಾಗುತ್ತಿಲ್ಲ.</p>



<p>FAO ನಾಲ್ಕು ಪ್ರಮುಖ ಅಂಶಗಳನ್ನು ಒಳಗೊಂಡಿರುವ &#8216;ಆರೋಗ್ಯಕರ ಆಹಾರ&#8217;ವನ್ನು ವಿವರಿಸುತ್ತದೆ: ಆಹಾರ ವೈವಿಧ್ಯತೆ (diversity), ಸಮರ್ಪಕತೆ (adequacy), ಮಿತಗೊಳಿಸುವಿಕೆ (moderation) ಮತ್ತು ಸಮತೋಲನ (balance).</p>



<p>ಆರೋಗ್ಯಕರ ಆಹಾರವನ್ನು ಪಡೆಯಲು ಸಾಧ್ಯವಾಗದ ಭಾರತದ ಪ್ರಸ್ತುತ ಅನುಪಾತವು (2023 ರಂತೆ) 2022 ರಲ್ಲಿದ್ದಕ್ಕಿಂತ ಸುಮಾರು ಮೂರು ಶೇಕಡಾವಾರು ಅಂಕಗಳು ಉತ್ತಮವಾಗಿದೆ. ಕಳೆದ ಐದು ವರ್ಷಗಳಲ್ಲಿ, ಈ ಜನರ ಅನುಪಾತದಲ್ಲಿ ಈ ಪ್ರಮಾಣದಲ್ಲಿ ಮಾತ್ರ ಇಳಿಮುಖವಾಗುತ್ತಿದೆ.</p>



<p>ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ &#8216;ಸುಸ್ಥಿರ ಅಭಿವೃದ್ಧಿ ಗುರಿಗಳ ಭಾರತ ಸೂಚ್ಯಂಕ 2023-24&#8217; ಕುರಿತು <a href="https://www.niti.gov.in/sites/default/files/2024-07/SDA_INDIA.pdf" data-type="link" data-id="https://www.niti.gov.in/sites/default/files/2024-07/SDA_INDIA.pdf">ನೀತಿ ಆಯೋಗದ ವರದಿ</a>ಯು 99% ಅರ್ಹ ಫಲಾನುಭವಿಗಳು 2023-2024 ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013 ರ ಅಡಿಯಲ್ಲಿ ಒಳಪಡುತ್ತಾರೆ ಎಂದು ಹೇಳಿದೆ .</p>



<p>ಪಡಿತರ ವಿತರಣೆ ವ್ಯವಸ್ಥೆ ಈ ಕಾಯಿದೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು &#8216;ಅಂತ್ಯೋದಯ ಅನ್ನ ಯೋಜನೆʼಯ ಅಡಿಯಲ್ಲಿ ತಿಂಗಳಿಗೆ ಒಂದು ಮನೆಗೆ 35 ಕೆಜಿ ಆಹಾರಧಾನ್ಯಗಳನ್ನು ಮತ್ತು &#8216;ಆದ್ಯತಾ ಕುಟುಂಬಗಳಿಗೆ&#8217; 5 ಕೆಜಿ ಆಹಾರಧಾನ್ಯಗಳನ್ನು ನೀಡುತ್ತದೆ. ಧಾನ್ಯಗಳು, ಗೋಧಿ ಮತ್ತು ಅಕ್ಕಿಯನ್ನು ಅನುಕ್ರಮವಾಗಿ ರೂ. 1, ರೂ. 2 ಮತ್ತು ರೂ. 3 ರ ಸಬ್ಸಿಡಿ ಬೆಲೆಯಲ್ಲಿ ನೀಡಲಾಗುತ್ತದೆ.</p>



<p>ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಮೇಲೆ ನರೇಂದ್ರ ಮೋದಿ ಸರ್ಕಾರವು ಏಪ್ರಿಲ್ 2020 ರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಪ್ರಾರಂಭಿಸಿತು ಮತ್ತು ಜನವರಿ 1, 2023 ರಿಂದ ಇದನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲಾಯಿತು. ಈ ಯೋಜನೆಯಡಿಯಲ್ಲಿ, ಪ್ರತಿ ಅರ್ಹ ಕುಟುಂಬಕ್ಕೆ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು ಪ್ರತಿ ಕುಟುಂಬಕ್ಕೆ 1 ಕೆಜಿ ಬೇಳೆಯನ್ನು ಉಚಿತವಾಗಿ ನೀಡಲಾಗುತ್ತದೆ. ಸುಮಾರು 80.48 ಕೋಟಿ ಫಲಾನುಭವಿಗಳು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ.</p>



<p>SOFI ವರದಿಯ ಸಂಶೋಧನೆಗಳು ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಲು ಈ ಎರಡು ಯೋಜನೆಗಳಿಗಿಂತ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದೆ.</p>



<p>ಆಹಾರದ ಪ್ರಮಾಣ ಮತ್ತು ಗುಣಮಟ್ಟದ ಮೇಲಿನ ಈ ಎರಡು ಸೂಚಕಗಳ ಹೊರತಾಗಿ, ವರದಿಯು ಸರಳವಾಗಿ &#8216;ಹಸಿವು&#8217; ಎಂದರೇನು ಅಥವಾ ದೀರ್ಘಕಾಲದ ಅಪೌಷ್ಟಿಕತೆ ಎಂದರೇನು ಎಂಬುದನ್ನು ವಿವರಿಸುತ್ತದೆ.</p>



<p>&#8220;ಇದು ಆಹಾರದಿಂದ ಸಾಕಷ್ಟು ಶಕ್ತಿ ಸಿಗದೆ ಉಂಟಾಗುವ ಅಹಿತಕರ ಅಥವಾ ನೋವು. ಈ ವರದಿಯಲ್ಲಿ, ಹಸಿವು ಎಂಬ ಪದವು ದೀರ್ಘಕಾಲದ ಅಪೌಷ್ಟಿಕತೆಗೆ ಸಮಾನಾರ್ಥಕವಾಗಿದೆ ಮತ್ತು ಇದನ್ನು prevalence of undernourishment (ಪಿಒಯು) ದಿಂದ ಅಳೆಯಲಾಗುತ್ತದೆ&#8221; ಎಂದು ವರದಿ ಹೇಳುತ್ತದೆ.</p>



<p>ಭಾರತದ ಜನಸಂಖ್ಯೆಯ ಸುಮಾರು 13% ಜನರು ದೀರ್ಘಕಾಲದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.</p>



<p>ಕಳೆದ ವರ್ಷ ಹೊರಬಂದ <a href="https://www.globalhungerindex.org/pdf/en/2023.pdf" data-type="link" data-id="https://www.worldbank.org/en/country/india/overview">ಜಾಗತಿಕ ಹಸಿವು ಸೂಚ್ಯಂಕ</a> (GHI) ವರದಿಯಲ್ಲಿ ಭಾರತ 111 ನೇ ಸ್ಥಾನದಲ್ಲಿದೆ, ಕೇವಲ 14 ದೇಶಗಳು ಭಾರತಕ್ಕಿಂತ ಕೆಟ್ಟದಾಗಿವೆ. ಐರ್ಲೆಂಡ್ ಮತ್ತು ಜರ್ಮನಿಯ &#8216;ಕನ್ಸರ್ನ್ ವರ್ಲ್ಡ್‌ವೈಡ್&#8217; ಮತ್ತು &#8216;ವೆಲ್ಟ್ ಹಂಗರ್‌ಹಿಲ್ಫ್&#8217; ಎಂಬ ಎರಡು ಎನ್‌ಜಿಒಗಳು ಈ ವರದಿಯನ್ನು ಸಿದ್ಧಪಡಿಸಿದ್ದವು. ಈ ವರದಿಯಲ್ಲಿ ತನ್ನನ್ನು ಹಾಡಿ ಹೊಗಳದ ಕಾರಣ ಭಾರತ ಸರ್ಕಾರ ಅದನ್ನು ತಿರಸ್ಕರಿಸಿತು.</p>



<p><strong>ಇತರ ಸೂಚ್ಯಂಕಗಳು:</strong></p>



<p>ಬಾಲ್ಯಾವಸ್ಥೆಯ ಪೋಷಣೆಗೆ ಸಂಬಂಧಿಸಿದಂತೆ, ಭಾರತದಲ್ಲಿ ಐದು ವರ್ಷದೊಳಗಿನ ಮಕ್ಕಳಲ್ಲಿ ಕ್ಷೀಣಿಸುವ (ಎತ್ತರಕ್ಕೆ ಇರಬೇಕಾದ ತೂಕಕ್ಕಿಂತ ಕಡಿಮೆ ಇರುವುದು) ಸಮಸ್ಯೆ 18.7% ಆಗಿದೆ. ಇದು ದಕ್ಷಿಣ ಏಷ್ಯಾದಲ್ಲೇ ಅತಿ ಹೆಚ್ಚು. ಐದು ವರ್ಷದೊಳಗಿನ ಮಕ್ಕಳಲ್ಲಿ ಬೆಳವಣಿಗೆ ಕುಂಠಿತ (ವಯಸ್ಸಿಗೆ ಇರಬೇಕಾದ ಎತ್ತರಕ್ಕಿಂತ ಕಡಿಮೆ ಬೆಳೆಯುತ್ತಿರುವುದು) 31.7% ಇದೆ.</p>



<p>ಭಾರತದಲ್ಲಿ ಕಡಿಮೆ ತೂಕದ ಜನನದ ಪ್ರಮಾಣವು 27.4% ಇದೆ, ಇದು ವಿಶ್ವದಲ್ಲೇ ಅತಿ ಹೆಚ್ಚು. ಮಗುವಿನ ಜನನದ ಸಮಯದಲ್ಲಿ 2,500 ಗ್ರಾಂಗಿಂತ ಕಡಿಮೆ ತೂಕವಿದ್ದರೆ, ಅದನ್ನು ಕಡಿಮೆ ತೂಕದ ಮಗು ಎಂದು ಕರೆಯಲಾಗುತ್ತದೆ. <a href="https://www.who.int/data/nutrition/nlis/info/low-birth-weight" data-type="link" data-id="https://www.who.int/data/nutrition/nlis/info/low-birth-weight">ವಿಶ್ವ ಆರೋಗ್ಯ ಸಂಸ್ಥೆ</a>ಯ ಪ್ರಕಾರ , ಕಡಿಮೆ ಜನನ ತೂಕದ ಶಿಶುಗಳು ಹೆಚ್ಚಿನ ತೂಕದ ಶಿಶುಗಳಿಗಿಂತ (ಒಂದು ವರ್ಷದೊಳಗಿನ ಮಕ್ಕಳು) ಸಾಯುವ ಸಾಧ್ಯತೆ 20 ಪಟ್ಟು ಹೆಚ್ಚು. ಕಡಿಮೆ ತೂಕದ ಮಕ್ಕಳ ಜನನ ಗರ್ಭಿಣಿಯರಲ್ಲಿ ಇರುವ  ಅಪೌಷ್ಟಿಕತೆಯ ಸೂಚಕವಾಗಿದೆ.</p>



<p>&#8220;ಜನಸಂಖ್ಯೆಯ ಮಟ್ಟದಲ್ಲಿ, ಕಡಿಮೆ ತೂಕ ಹೊಂದಿರುವ ಶಿಶುಗಳ ಜನನ ಪ್ರಮಾಣವು ಬಹುಮುಖಿ ಸಾರ್ವಜನಿಕ ಆರೋಗ್ಯ ಸಮಸ್ಯೆಯ ಸೂಚಕವಾಗಿದೆ, ಇದು ದೀರ್ಘಾವಧಿಯ ತಾಯಿಯ ಅಪೌಷ್ಟಿಕತೆ, ಅನಾರೋಗ್ಯ ಮತ್ತು ಗರ್ಭಾವಸ್ಥೆಯಲ್ಲಿ ಸಿಗುವ ಕಳಪೆ ಆರೋಗ್ಯ ಸೇವೆಯನ್ನು ಒಳಗೊಂಡಿರುತ್ತದೆ&#8221; ಎಂದು WHO ಹೇಳುತ್ತದೆ.</p>



<p>2030 ರಲ್ಲಿ 14.2% ನವಜಾತ ಶಿಶುಗಳು ಕಡಿಮೆ ಜನನ ತೂಕವನ್ನು ಹೊಂದಿರುತ್ತಾರೆ ಎಂದು ಅಂದಾಜಿಸಲಾಗಿದ್ದು, <a href="https://www.who.int/teams/nutrition-and-food-safety/monitoring-nutritional-status-and-food-safety-and-events/joint-low-birthweight-estimates/" data-type="link" data-id="https://www.who.int/teams/nutrition-and-food-safety/monitoring-nutritional-status-and-food-safety-and-events/joint-low-birthweight-estimates/">2012 ರ ಮಟ್ಟಕ್ಕೆ ಹೋಲಿಸಿದರೆ </a>2030 ರ ಜಾಗತಿಕ ಗುರಿಯ 30% ರಷ್ಟು ಕಡಿಮೆಯಾಗಿದೆ.</p>



<p>ಅದೇ SOFI ವರದಿಯು 53.0% ರಷ್ಟು ಭಾರತದ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಹೇಳುತ್ತದೆ. ಇದು ವಿಶ್ವದಲ್ಲೇ ಅತಿ ಹೆಚ್ಚು. ಮಹಿಳೆಯರಲ್ಲಿ ರಕ್ತಹೀನತೆಯ, ವಿಶೇಷವಾಗಿ ಸಂತಾನೋತ್ಪತ್ತಿ ವಯಸ್ಸಿನಲ್ಲಿ, ಅವರ ಮೇಲೆ ಪರಿಣಾಮ ಬೀರಬಹುದು. ಅಲ್ಲದೇ ಹೆರಿಗೆಯ ಸಮಯದಲ್ಲಿ ಭ್ರೂಣದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.</p>



<p>ಜಾಗತಿಕವಾಗಿ, ಮಹಿಳೆಯರಲ್ಲಿ (15 ರಿಂದ 49 ವರ್ಷಗಳು) ರಕ್ತಹೀನತೆಯ ಪ್ರಮಾಣವು 2012 ರಲ್ಲಿ 28.5% ರಿಂದ 2019 ರಲ್ಲಿ 29.9% ಕ್ಕೆ ಏರಿಕೆಯಾಗಿದೆ. ಇದು 2030 ರ ವೇಳೆಗೆ 32.3% ಅನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ.</p>



<p>ಒಂದು ಕಡೆ ಮಕ್ಕಳು ಮತ್ತು ವಯಸ್ಕರಲ್ಲಿರುವ ಅಪೌಷ್ಟಿಕತೆ ಆತಂಕದ ಸಂಗತಿಯಾಗಿದ್ದರೆ, ಈ ವರದಿಯು ಭಾರತದಲ್ಲಿರುವ ಸ್ಥೂಲಕಾಯದ ಸಮಸ್ಯೆಯ ಬಗ್ಗೆಯೂ ಬೆಳಕು ಚೆಲ್ಲಿದೆ.</p>



<p>ಇದು ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಕಾಡುತ್ತಿದೆ. ಐದು ವರ್ಷದೊಳಗಿನ ಎಲ್ಲಾ ಮಕ್ಕಳಲ್ಲಿ ಸುಮಾರು 2.8% ಅಧಿಕ ತೂಕವನ್ನು ಹೊಂದಿದ್ದಾರೆ. ಇದು 2012 ರಲ್ಲಿ ಇದ್ದ 2.2% ಗಿಂತ ಹೆಚ್ಚು.</p>



<p>ವಯಸ್ಕರಲ್ಲಿ, ಸ್ಥೂಲಕಾಯತೆಯ ಪ್ರಮಾಣವು 7.3% ಇದೆ. ಇದು 2022 ರಲ್ಲಿ 4.1% ಆಗಿತ್ತು. ಇತ್ತೀಚಿನ <a href="https://www.who.int/teams/health-promotion/physical-activity/global-status-report-on-physical-activity-2022" data-type="link" data-id="https://www.who.int/teams/health-promotion/physical-activity/global-status-report-on-physical-activity-2022">ವಿಶ್ವ ಆರೋಗ್ಯ ಸಂಸ್ಥೆ</a> ವರದಿಯು ಭಾರತದಲ್ಲಿ ಪ್ರತಿ ಎರಡನೇ ವ್ಯಕ್ತಿ ದೈಹಿಕವಾಗಿ ಯಾವುದೇ ಕೆಲಸವನ್ನು ಮಾಡುತ್ತಿಲ್ಲ ಎಂದು ಹೇಳುತ್ತದೆ.</p>



<p>ಸ್ಥೂಲಕಾಯತೆಯ ನಿರಂತರ ಹೆಚ್ಚಳವು ವಿಶ್ವಾದ್ಯಂತ ಇರುವ ಸಮಸ್ಯೆಯಾಗಿದೆ. &#8220;ವಯಸ್ಕರಲ್ಲಿರುವ ಸ್ಥೂಲಕಾಯದ ಸಮಸ್ಯೆ ಕಳೆದ ದಶಕದಿಂದ ಸ್ಥಿರವಾದ ಹೆಚ್ಚಳವನ್ನು ಕಂಡಿದೆ, 2012 ರಲ್ಲಿ ಇದ್ದ 12.1%, 2022 ರಲ್ಲಿ 15.8% ಕ್ಕೆ ಏರಿಕೆಯಾಗಿದೆ. 2030ರಲ್ಲಿ 1.2 ಶತಕೋಟಿಗೂ ಹೆಚ್ಚು ಸ್ಥೂಲಕಾಯದ ವಯಸ್ಕರು ಭಾರತದಲ್ಲಿ ಇರಲಿದ್ದಾರೆ,” ಎಂದು SOFI ವರದಿ ಹೇಳುತ್ತದೆ.</p>
]]></content:encoded>
					
		
		
			</item>
	</channel>
</rss>
