<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>hijab &#8211; Peepal Media</title>
	<atom:link href="https://peepalmedia.com/tag/hijab/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 23 Dec 2023 11:25:37 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>hijab &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸಮವಸ್ತ್ರ ನೀತಿ ಮುಸಲ್ಮಾನರಿಗೆ ಮಾತ್ರ ಅಲ್ಲ, ಹಿಂದೂಗಳಿಗೂ ಇಲ್ಲ: ಯತ್ನಾಳ್</title>
		<link>https://peepalmedia.com/uniform-policy-is-not-only-for-muslims-not-even-for-hindus/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 23 Dec 2023 11:20:05 +0000</pubDate>
				<category><![CDATA[ರಾಜಕೀಯ]]></category>
		<category><![CDATA[Basanagowda Patil Yatnal]]></category>
		<category><![CDATA[hijab]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Siddaramaiah]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=34007</guid>

					<description><![CDATA[ಹಿಜಾಬ್ ಬ್ಯಾನ್ ವಾಪಸ್ ಊಟ ಬಟ್ಟೆ ಅವರವರ ಆಯ್ಕೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯ ಕುರಿತು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯನವರು ಹಿಜಾಬ್ ಧರಿಸಬಹುದು ಎಂದು ಹೇಳುತ್ತಾ ಯಾರು ಯಾವ ಬಟ್ಟೆಯಾದರೂ ಧರಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ಹಾಗಾದರೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಭಾಗವಹಿಸಲು ನಾನು ಕರೆ ಕೊಡುತ್ತಿದ್ದೇನೆ. ಅವರಿಗಿಲ್ಲದ ಸಮವಸ್ತ್ರ [&#8230;]]]></description>
										<content:encoded><![CDATA[
<p>ಹಿಜಾಬ್ ಬ್ಯಾನ್ ವಾಪಸ್ ಊಟ ಬಟ್ಟೆ ಅವರವರ ಆಯ್ಕೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯ ಕುರಿತು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.</p>



<p>ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅವರು, ಸಿದ್ದರಾಮಯ್ಯನವರು ಹಿಜಾಬ್ ಧರಿಸಬಹುದು ಎಂದು ಹೇಳುತ್ತಾ ಯಾರು ಯಾವ ಬಟ್ಟೆಯಾದರೂ ಧರಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ಹಾಗಾದರೆ ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಭಾಗವಹಿಸಲು ನಾನು ಕರೆ ಕೊಡುತ್ತಿದ್ದೇನೆ. ಅವರಿಗಿಲ್ಲದ ಸಮವಸ್ತ್ರ ನೀತಿ ಹಿಂದೂಗಳಿಗೂ ಇಲ್ಲ ಎಂದಿದ್ದಾರೆ.</p>



<p>ಸಿದ್ದರಾಮಯ್ಯನವರಿಗೆ ಮಾಹಿತಿಯ ಕೊರತೆ ಇದೆ, ರಾಜ್ಯದಲ್ಲಿ ಹಿಜಾಬ್ ನಿಷೇಧಿಸಿ ಯಾವ ಆದೇಶವೂ ಇಲ್ಲ,<br>ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನೀತಿಯನ್ನು ಜಾರಿ ಮಾಡಿದ್ದು ಸ್ಥಳೀಯ ಕಾಲೇಜುಗಳು ನಿರ್ಧಾರ ಮಾಡಬಹುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹೇಳಿದ್ದರೂ, ರಾಜಕಾರಣಕ್ಕಾಗಿ ಶಾಲಾ ಕಾಲೇಜುಗಳ ಸಮವಸ್ತ್ರ ನೀತಿಯನ್ನೂ ಅಮಾನತು ಮಾಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ ಎಂದು ಯತ್ನಾಳ್ ದೂರಿದ್ದಾರೆ.</p>



<p>ಓಲೈಕೆ ರಾಜಕಾರಣಕ್ಕೇನಾದರೂ ಮತ್ತೊಂದು ಹೆಸರು ಇದ್ದರೇ ಅದು ಕಾಂಗ್ರೆಸ್ ಪಕ್ಷ!<br>ರಾಜ್ಯಾದ್ಯಂತ ಹಿಂದೂ ವಿದ್ಯಾರ್ಥಿಗಳೂ ಯಾವ ಬಟ್ಟೆಯಾದರೂ ಧರಿಸಿ ಕೇಸರಿ ಶಾಲು ಸಮೇತ ತರಗತಿಗಳಲ್ಲಿ ಭಾಗವಹಿಸುತ್ತಾರೆ, ಅವರಿಗೆ ಯಾವ ಕಿರುಕುಳ ನೀಡಬಾರದು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಮತ್ತಷ್ಟು ಬಿಗಿಯಾಯ್ತು KEA ಪರೀಕ್ಷಾ ನಿಯಮಗಳು ; ಹಿಜಾಬ್ ಸೇರಿದಂತೆ ತಲೆಯ ಮೇಲೆ ಯಾವುದೇ ದಿರಿಸು ತೊಡುವಂತಿಲ್ಲ</title>
		<link>https://peepalmedia.com/kea-exam-norms-are-further-tightened/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 14 Nov 2023 14:41:15 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[hijab]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[KEA Exam]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=32135</guid>

					<description><![CDATA[ಪರೀಕ್ಷಾ ಅಕ್ರಮ ತಡೆಗಟ್ಟುವ ಹಿನ್ನೆಲೆಯಲ್ಲಿ ನವೆಂಬರ್ 18 ಮತ್ತು 19 ರಂದು ನಡೆಯಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗೆ ಸರ್ಕಾರ ಮತ್ತಷ್ಟು ಬಿಗಿಯಾದ ನಿಯಮಗಳನ್ನು ಜಾರಿಗೊಳಿಸಿದೆ. ಆ ಮೂಲಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಹಿಜಾಬ್ ಸೇರಿದಂತೆ ತಲೆಯ ಮೇಲಿನ ದಿರಿಸು (ಬಟ್ಟೆ, ಕರ್ಚಿಪ್, ಟೋಪಿ) ಧರಿಸುವಂತಿಲ್ಲ ಎಂದು ಆದೇಶಿಸಿದೆ. ಪರೀಕ್ಷೆಯ ಸಮಯದಲ್ಲಿ ಅಕ್ರಮ ತಡೆಗಟ್ಟಲು ಪ್ರಾಧಿಕಾರವು ಬ್ಲೂಟೂತ್ ಇಯರ್ ಫೋನ್ ಗಳು, ಮೊಬೈಲ್ ಫೋನ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ನಿಷೇಧಿಸಿದೆ. ಪ್ರಾಧಿಕಾರ ಹೊರಡಿಸಿದ [&#8230;]]]></description>
										<content:encoded><![CDATA[
<p>ಪರೀಕ್ಷಾ ಅಕ್ರಮ ತಡೆಗಟ್ಟುವ ಹಿನ್ನೆಲೆಯಲ್ಲಿ ನವೆಂಬರ್ 18 ಮತ್ತು 19 ರಂದು ನಡೆಯಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗೆ ಸರ್ಕಾರ ಮತ್ತಷ್ಟು ಬಿಗಿಯಾದ ನಿಯಮಗಳನ್ನು ಜಾರಿಗೊಳಿಸಿದೆ. ಆ ಮೂಲಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಹಿಜಾಬ್ ಸೇರಿದಂತೆ ತಲೆಯ ಮೇಲಿನ ದಿರಿಸು (ಬಟ್ಟೆ, ಕರ್ಚಿಪ್, ಟೋಪಿ) ಧರಿಸುವಂತಿಲ್ಲ ಎಂದು ಆದೇಶಿಸಿದೆ.</p>



<p>ಪರೀಕ್ಷೆಯ ಸಮಯದಲ್ಲಿ ಅಕ್ರಮ ತಡೆಗಟ್ಟಲು ಪ್ರಾಧಿಕಾರವು ಬ್ಲೂಟೂತ್ ಇಯರ್ ಫೋನ್ ಗಳು, ಮೊಬೈಲ್ ಫೋನ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ನಿಷೇಧಿಸಿದೆ.</p>



<p>ಪ್ರಾಧಿಕಾರ ಹೊರಡಿಸಿದ ಆದೇಶದಲ್ಲಿ ಹಿಜಾಬ್ ಹೆಸರನ್ನು ಪ್ರತ್ಯೇಕವಾಗಿ ಎಲ್ಲೂ ಬರೆಯಲಾಗಿಲ್ಲ. ಆದಾಗ್ಯೂ, ಹಿಜಾಬ್ ಸ್ವಯಂಚಾಲಿತವಾಗಿ ತಲೆಯ ಮೇಲಿನ ವಸ್ತ್ರವಾಗಿದ್ದು, ನಿಶೇಧಿತ ವಸ್ತುವಿಗೆ ಸೇರಲ್ಪಟ್ಟಿದೆ. ನವೆಂಬರ್ 18 ಮತ್ತು 19 ರಂದು ರಾಜ್ಯದಲ್ಲಿ ಹಲವಾರು ನೇಮಕಾತಿ ಪರೀಕ್ಷೆಗಳು ನಡೆಯಲಿವೆ. ಅಂತಹ ಪರಿಸ್ಥಿತಿಯಲ್ಲಿ, ಸರ್ಕಾರದ ಈ ನಿರ್ಧಾರವು ಬಹಳ ಪ್ರಾಮುಖ್ಯತೆ ಪಡೆದಿದೆ.</p>



<p>ಅಕ್ಟೋಬರ್ ನಲ್ಲಿ ನಡೆದ ಪರೀಕ್ಷೆಗಳಲ್ಲಿ ಕೆಇಎ ಹಿಜಾಬ್ ಗೆ ಅವಕಾಶ ನೀಡಿತ್ತು. ಅದೇ ಸಮಯದಲ್ಲಿ, ಅನೇಕ ಸ್ಥಳಗಳಿಂದ ಮಂಗಳಸೂತ್ರದ ಬಗ್ಗೆ ವಿವಾದವಿತ್ತು. ಆದರೆ ಪ್ರಾಧಿಕಾರ ಮಂಗಳಸೂತ್ರ ನಿಷೇಧದ ಬಗ್ಗೆ ಯಾವುದೇ ನಿರ್ಧಾರ ತಳೆದಿಲ್ಲ. ಮಾಹಿತಿಯ ಪ್ರಕಾರ, ಪರೀಕ್ಷಾ ಕೊಠಡಿಯಲ್ಲಿ ಮಂಗಳಸೂತ್ರ ಧರಿಸಲು ಅನುಮತಿಸಲಾಗುವುದು.</p>



<p><strong>ನಿಯಮಗಳೇನು?</strong><br>1) ಅಭ್ಯರ್ಥಿಗಳು ಜೇಬು ಇಲ್ಲದ ಅಥವಾ ಕಡಿಮೆ ಜೇಬು ಇರುವ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.<br>2) ಕುರ್ತಾ, ಜೀನ್ಸ್, ಪೈಜಾಮು ಧರಿಸಲು ಅವಕಾಶ ಇಲ್ಲ<br>3) ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಹಾಫ್ ಶರ್ಟ್ ಧರಿಸಬೇಕು, ಫುಲ್ ಕೈ ಶರ್ಟ್ ಧರಿಸುವಂತಿಲ್ಲ.<br>4) ಅಭ್ಯರ್ಥಿಗಳು ಶೂ ಧರಿಸುವ ಹಾಗಿಲ್ಲ, ಚಪ್ಪಲಿಗಳನ್ನು ಧರಿಸಬೇಕು.<br>5) ಧರಿಸುವ ಬಟ್ಟೆಗಳಲ್ಲಿ ಜಿಪ್ ಪಾಕೆಟ್ ಗಳು, ದೊಡ್ಡ ಬಟನ್ ಇರಬಾರದು<br>6) ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವ ಹಾಗಿಲ್ಲ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್ ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವ ಹಾಗಿಲ್ಲ.<br>7) ಇತ್ತೀಚಿನ ಎರಡು ಪಾಸ್ ಪೋರ್ಟ್ ಅಳತೆಯ ಫೋಟೋ ಹಾಗೂ ಸರ್ಕಾರದಿಂದ ಮಾನ್ಯವಾದ ಫೋಟೋ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯ.<br>8) ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರ ಧರಿಸುವಂತಿಲ್ಲ.<br>9) ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಆಭರಣ ಧರಿಸುವ ಹಾಗಿಲ್ಲ. ಕಿವಿಯೋಲೆ, ಉಂಗುರ, ಕಡಗ ಧರಿಸುವುದನ್ನು ನಿರ್ಬಂಧಿಸಲಾಗಿದೆ.</p>
]]></content:encoded>
					
		
		
			</item>
		<item>
		<title>KEA ಪರೀಕ್ಷೆಯಲ್ಲಿ ಹಿಜಾಬ್ ಧರಿಸಲು ಅನುಮತಿ</title>
		<link>https://peepalmedia.com/hijab-allowed-in-kea-exam/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 20 Oct 2023 07:00:22 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[hijab]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=30223</guid>

					<description><![CDATA[ಅಕ್ಟೋಬರ್ 28 ಮತ್ತು 29 ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗೆ ನಡೆಯಲಿರುವ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅನುಮತಿ ನೀಡಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಹಿಜಾಬ್ ಗಲಾಟೆ ಮುನ್ನೆಲೆಗೆ ಬಂದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೆ ಅಲ್ಲದೆ ಮುಸ್ಲಿಂ ವಿದ್ಯಾರ್ಥಿನಿಯರು ಎಷ್ಟೋ ಮಂದಿ ಆ ವರ್ಷ ಕಾಲೇಜಿಗೆ ಹೋಗದಂತೆ ನಿರ್ಧರಿಸಿದ್ದು ಈ ಸಂದರ್ಭದಲ್ಲಿ ನೆನೆಸಿಕೊಳ್ಳಬಹುದು. ಇದೀಗ ಕೆಇಎ ವಿವಿಧ ನಿಗಮ ಮಂಡಳಿಗಳ ಹುದ್ದೆ ಪರೀಕ್ಷೆಗೆ ಹಿಜಾಬ್ [&#8230;]]]></description>
										<content:encoded><![CDATA[
<p>ಅಕ್ಟೋಬರ್ 28 ಮತ್ತು 29 ರಂದು ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗೆ ನಡೆಯಲಿರುವ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅನುಮತಿ ನೀಡಿದೆ.</p>



<p>ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಹಿಜಾಬ್ ಗಲಾಟೆ ಮುನ್ನೆಲೆಗೆ ಬಂದು ರಾಷ್ಟ್ರ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಅಷ್ಟೆ ಅಲ್ಲದೆ ಮುಸ್ಲಿಂ ವಿದ್ಯಾರ್ಥಿನಿಯರು ಎಷ್ಟೋ ಮಂದಿ ಆ ವರ್ಷ ಕಾಲೇಜಿಗೆ ಹೋಗದಂತೆ ನಿರ್ಧರಿಸಿದ್ದು ಈ ಸಂದರ್ಭದಲ್ಲಿ ನೆನೆಸಿಕೊಳ್ಳಬಹುದು.</p>



<p>ಇದೀಗ ಕೆಇಎ ವಿವಿಧ ನಿಗಮ ಮಂಡಳಿಗಳ ಹುದ್ದೆ ಪರೀಕ್ಷೆಗೆ ಹಿಜಾಬ್ ಧರಿಸಲು ಅವಕಾಶ ನೀಡಿದೆ. ಪರೀಕ್ಷೆಗೆ ಅಭ್ಯರ್ಥಿಗಳು ಒಂದು ಗಂಟೆ ಮೊದಲು ಪರೀಕ್ಷಾ ಕೇಂದ್ರದಲ್‌ಇ ಹಾಜರಿರಬೇಕು. ಅವರನ್ನು ಮಹಿಳಾ ಸಿಬ್ಬಂದಿ ತಪಾಸಣೆ ನಡೆಸಲಿದ್ದಾರೆ ಎಂದು ಕೆಇಎ ತಿಳಿಸಿದೆ.</p>



<p>ಪರೀಕ್ಷೆಗೆ ಹಾಜರಾಗುವವರು ಪ್ರವೇಶ ಪತ್ರ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ 2 ಫೋಟೋ, ಸರ್ಕಾರದ ಮಾನ್ಯ ಮಾಡಿರುವ ಗುರುತಿನ ಚೀಟಿ ತರಬೇಕು. ಪರೀಕ್ಷೆ ಮುಗಿಯುವವರೆಗೂ ಹೊರ ಹೋಗಲು ಅವಕಾಶವಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.</p>
]]></content:encoded>
					
		
		
			</item>
		<item>
		<title>ಹಿಜಾಬ್‌ ನಿಷೇಧ: ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿನ ಮೇಲಿನ ದಾಳಿಗೆ ಒಂದು ವರ್ಷ</title>
		<link>https://peepalmedia.com/hijaab-nishedhada-ondu-varshada-nantara/</link>
		
		<dc:creator><![CDATA[Peepal Media]]></dc:creator>
		<pubDate>Tue, 17 Jan 2023 04:07:56 +0000</pubDate>
				<category><![CDATA[ವಿಶೇಷ]]></category>
		<category><![CDATA[hijab]]></category>
		<category><![CDATA[Hijab ban in Karnataka]]></category>
		<category><![CDATA[hijab nisheda]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[shankar kenchanur]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=19128</guid>

					<description><![CDATA[ಕರ್ನಾಟಕದ ಕೋಮು ರಾಜಕಾರಣದ ಭಾಗವಾಗಿ ಸಮವಸ್ತ್ರದ ಹೆಸರಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳನ್ನು ತರಗತಿಗಳ ಹೊರಗೆ ನಿಲ್ಲಿಸಿ ಮೊನ್ನೆ ಡಿಸೆಂಬರ್‌ ಕೊನೆಯ ವಾರಕ್ಕೆ ಒಂದು ವರ್ಷವಾಯಿತು. ಅದರ ನಂತರ ಕರ್ನಾಟಕದ ರಾಜಕಾರಣದಲ್ಲಿ ಒಂದು ಮಳೆಗಾಲ ಸಂದು ಹೋಗಿದೆ. ಆ ಶಾಲಾವಂಚಿತ ಹೆಣ್ಣುಮಕ್ಕಳ ದಯನೀಯ ನೋಟಗಳು ಎಲ್ಲರಿಗೂ ಮರೆತುಹೋಗಿದೆ. ಆದರೆ ಜವಬ್ದಾರಿಯುತ ಮಾಧ್ಯಮಗಳು ಈ ಘಟನೆಗಳನ್ನು ಮರೆತಿಲ್ಲ. Thescroll.in ಈ ಘಟನೆಯಿಂದ ಬಾಧಿತರಾದ ಹೆಣ್ಣುಮಕ್ಕಳನ್ನು ಹುಡುಕಿ ಮಾತನಾಡಿಸಿದೆ. ದಿ ಸ್ಕ್ರಾಲ್‌ನ ವರದಿಯ ಕನ್ನಡ ಅನುವಾದವನ್ನು ಪೀಪಲ್‌ ಮೀಡಿಯಾ ಡಾಟ್‌ ಕಾಮ್‌ ಸರಣಿಯಾಗಿ [&#8230;]]]></description>
										<content:encoded><![CDATA[
<h2 class="has-text-align-center has-very-light-gray-to-cyan-bluish-gray-gradient-background has-background has-regular-font-size wp-block-heading"><strong>ಕರ್ನಾಟಕದ ಕೋಮು ರಾಜಕಾರಣದ ಭಾಗವಾಗಿ ಸಮವಸ್ತ್ರದ ಹೆಸರಿನಲ್ಲಿ ಮುಸ್ಲಿಂ ಹೆಣ್ಣುಮಕ್ಕಳನ್ನು ತರಗತಿಗಳ ಹೊರಗೆ ನಿಲ್ಲಿಸಿ ಮೊನ್ನೆ ಡಿಸೆಂಬರ್‌ ಕೊನೆಯ ವಾರಕ್ಕೆ ಒಂದು ವರ್ಷವಾಯಿತು. ಅದರ ನಂತರ ಕರ್ನಾಟಕದ ರಾಜಕಾರಣದಲ್ಲಿ ಒಂದು ಮಳೆಗಾಲ ಸಂದು ಹೋಗಿದೆ. ಆ ಶಾಲಾವಂಚಿತ ಹೆಣ್ಣುಮಕ್ಕಳ ದಯನೀಯ ನೋಟಗಳು ಎಲ್ಲರಿಗೂ ಮರೆತುಹೋಗಿದೆ. ಆದರೆ ಜವಬ್ದಾರಿಯುತ ಮಾಧ್ಯಮಗಳು ಈ ಘಟನೆಗಳನ್ನು ಮರೆತಿಲ್ಲ. Thescroll.in ಈ ಘಟನೆಯಿಂದ ಬಾಧಿತರಾದ ಹೆಣ್ಣುಮಕ್ಕಳನ್ನು ಹುಡುಕಿ ಮಾತನಾಡಿಸಿದೆ. ದಿ ಸ್ಕ್ರಾಲ್‌ನ ವರದಿಯ ಕನ್ನಡ ಅನುವಾದವನ್ನು ಪೀಪಲ್‌ ಮೀಡಿಯಾ ಡಾಟ್‌ ಕಾಮ್‌ ಸರಣಿಯಾಗಿ ಪ್ರಕಟಿಸಲಿದೆ. ಇದು ಆ ಸರಣಿಯ ಒಂದನೇ ಭಾಗ</strong></h2>



<p><strong>ಮೂಲ ವರದಿ</strong>: <strong>ಜೊಹಾನ್ನಾ ದೀಕ್ಷಾ</strong></p>



<p><strong>ದಿ ಸ್ಕ್ರಾಲ್‌</strong> <strong>ಡಾಟ್‌ ಇನ್</strong></p>



<p>ಆಯೇಷಾರಿಗೆ ಮದುವೆ ಪ್ರಸ್ತಾಪ ಬಂದಾಗ ಅವರು ಡಿಗ್ರಿ ಓದುತ್ತಿದ್ದರು. ಆಯೇಷಾಗೆ ಈ ಮದುವೆ ಪ್ರಸ್ತಾಪದಿಂದ ಖುಷಿಯೇನೂ ಆಗಿರಲಿಲ್ಲ. ಅವರಿಗೆ ತನ್ನ ಓದು ನಿಲ್ಲುವ ಭಯ ಕಾಡುತ್ತಿತ್ತು. ಅವರ ಓದು ಈಗಾಗಲೇ ಒಮ್ಮೆ ನಿಂತಿತ್ತು. ಅವರು ಪಿಯುಸಿ ಓದುತ್ತಿದ್ದ ಸಮಯದಲ್ಲಿ ಅವರ ಕುಟುಂಬ ಬಹಳ ಕಷ್ಟದಲ್ಲಿತ್ತು. ಹೀಗಾಗಿ ಅವರು ಕಾಲೇಜು ಮುಗಿದ ಕೂಡಲೇ ಓದು ನಿಲ್ಲಿಸಿ ಕಾಲ್‌ ಸೆಂಟರ್‌ ಒಂದರಲ್ಲಿ ಕೆಲಸಕ್ಕೆ ಸೇರಿದ್ದರು. ಹೀಗೆ ಕೆಲಸ ಮಾಡುತ್ತಾ ನಾಲ್ಕು ವರ್ಷದ ನಂತರ ಅವರು ಸೋಶಿಯಾಲಜಿ, ಎಕನಾಮಿಕ್ಸ್‌ ಮತ್ತು ಹಿಸ್ಟರಿಯಲ್ಲಿ ಪದವಿ ಪಡೆಯುವ ಸಲುವಾಗಿ ಮತ್ತೆ ಕಾಲೇಜಿಗೆ ಸೇರಿದ್ದರು. ಆದರೆ ಈಗ ಮತ್ತೆ ಮದುವೆ ಪ್ರಸ್ತಾಪ ತನ್ನ ಓದಿಗೆ ತೊಡರುಗಾಲು ನೀಡಬಹುದೆನ್ನುವ ಭಯ ಅವರನ್ನು ಕಾಡತೊಡಗಿತ್ತು.</p>



<p>ಕೊನೆಗೆ ಮದುವೆಯ ನಂತರವೂ ಓದು ಮುಂದುವರೆಸಲು ಒಪ್ಪಿಗೆ ಸಿಕ್ಕಿದ ಬಳಿಕವೇ ಆಯೇಷಾ ಸೈಯದ್‌ ಮದುವೆಗೆ ಒಪ್ಪಿಕೊಂಡಿದ್ದು. 2019ರಲ್ಲಿ ಅವರು ಡಿಗ್ರಿ ಮುಗಿಸಿದರು.&nbsp;</p>



<p>ಇದಾದ ನಂತರ ಆಯೇಷಾ ತನ್ನ ಬಾಲ್ಯದ ಕನಸಾದ ಎಲ್‌ಎಲ್‌ಬಿ ಓದಲು ನಿರ್ಧರಿಸಿದರು. ಚಿಕ್ಕಂದಿನಿಂದಲೂ ಭಾರತದ ಸಂವಿಧಾನದ ಕುರಿತು ವಿಶೇಷ ಆಸಕ್ತಿ ಹೊಂದಿದ್ದ ಅವರಿಗೆ ಸುಪ್ರೀಂ ಕೋರ್ಟಿನಲ್ಲಿ ವಕೀಲಿಕೆ ಮಾಡುವ ಆಸೆಯಿತ್ತು. 2021ರಲ್ಲಿ ತನ್ನ ಅತ್ತೆ-ಮಾವಂದಿರ ಮನವೊಲಿಸಿ ಲಾ ಕೋರ್ಸ್‌ ತೆಗೆದುಕೊಂಡ ಅವರಿಗೆ ಆಗ ಮೂರು ವರ್ಷದ ಪುಟ್ಟ ಮಗುವಿತ್ತು. ಹೀಗಾಗಿ ಕಾಲೇಜಿಗೆ ಹೋಗಿ ಬರುವುದು, ಮಗುವಿನ ಆರೈಕೆ ಹೀಗೆ ಎಲ್ಲವನ್ನೂ ನೋಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅವರ ಮನೆಯಿಂದ ಕಾಲೇಜಿಗೆ ಒಂದು ಗಂಟೆಯ ದಾರಿ ಹಿಡಿಯುತ್ತಿತ್ತು.</p>



<p>ಹೇಗೋ ಅತ್ತೆ ಮಾವನ ಮನವೊಲಿಸಿ ಕಾಲೇಜಿಗೆ ಸೇರಿದ ಅವರು ಮಗುವನ್ನು ನೋಡಿಕೊಳ್ಳಲು ಪಕ್ಕದ ಮನೆಯವರೊಬ್ಬರ ಸಹಾಯ ಪಡೆದರು. 2022ರ ಜನವರಿ ತಿಂಗಳಿನಲ್ಲಿ ತರಗತಿಗಳು ಆರಂಭಗೊಂಡವು. ಆಯೇಷಾ ದಿನಾಲೂ ಮಗುವನ್ನು ನೆರೆಯವರ ಸುಪರ್ದಿಗೆ ಬಿಟ್ಟು ಕಾಲೇಜಿಗೆ ಹೋಗುತ್ತಿದ್ದರು. ಕಾಲೇಜಿಗೆ ಹೋಗಲು ಬಸ್ಸನ್ನು ಅವಲಂಬಿಸಿದ್ದ ಅವರು, ಒಂದು ಗಂಟೆಯ ಪ್ರಯಾಣ, ಮಗುವಿನ ಆರೈಕೆ ಇದೆಲ್ಲದರ ನಡುವೆ ಓದನ್ನು ಮುಂದುವರೆಸುವಲ್ಲಿ ಯಶಸ್ವಿಯಾಗಿದ್ದರು.</p>



<p>ಅವರ ಪಾಲಿಗೆ ಓದಿನ ಪಯಣ ರೋಮಾಂಚಕಾರಿಯಾಗಿತ್ತು. ಅವರು ತನ್ನ ಓದನ್ನು ಆನಂದಿಸುತ್ತಿದ್ದರು. ಅಷ್ಟೇ ಅಲ್ಲದೆ ಆಯೇಷಾ ಕ್ರೀಡಾಪಟು ಕೂಡಾ ಆಗಿದ್ದರು. ಕಾಲೇಜು ಮೈದಾನದಲ್ಲಿ ತಾನು ಜಾವೆಲಿನ್‌ ಥ್ರೋವಿಂಗ್‌ನಲ್ಲಿ ಭಾಗವಹಿಸಿದ ವೀಡಿಯೊ ಒಂದನ್ನು ಅವರು ನನಗೆ ತೋರಿಸಿದರು.</p>



<p>ಆದರೆ ಅವರ ಈ ಕಾಲೇಜಿಗೆ ಹೋಗುವ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಜನವರಿ ತಿಂಗಳ ಆರಂಭದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್‌ ಅಥವಾ ತಲೆಗೆ ಬಟ್ಟೆ ಕಟ್ಟಿಕೊಂಡು ಬರುವುದನ್ನು ವಿರೋಧಿಸಿ ಉಡುಪಿಯಲ್ಲಿ ಆರಂಭಗೊಂಡ ಹೋರಾಟ ಮೆಲ್ಲನೆ ಎಲ್ಲೆಡೆ ವ್ಯಾಪಿಸ ತೊಡಗಿತ್ತು. ಕೆಲವೆಡೆಗಳಲ್ಲಿ ಈ ಕುರಿತಾದ ಹೋರಾಟ ಮುಗಿಲು ಮುಟ್ಟತೊಡಗಿತು ಕಾಲೇಜುಗಳಲ್ಲಿ ಮೊದಲಿನಿಂದಲೂ ಸಮವಸ್ತ್ರ ಇತ್ತಾದರೂ ಈ ಹೆಣ್ಣುಮಕ್ಕಳು ಶಿರವಸ್ತ್ರವನ್ನು ಧರಿಸುವುದು ಅವರ ಗುರುತು ಮತ್ತು ಅವರ ಧಾರ್ಮಿಕ ನಂಬಿಕೆಯ ಅವಿಭಾಜ್ಯ ನಂಬಿಕೆಯ ಭಾಗವೆಂದು ಭಾವಿಸಿ ಆ ಕುರಿತು ಆಕ್ಷೇಪ ಎತ್ತುತ್ತಿರಲಿಲ್ಲ.</p>



<p>ಡಿಸೆಂಬರ್ ಅಂತ್ಯದಲ್ಲಿ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದನ್ನು ನಿಷೇಧಿಸಲಾಗಿತ್ತು. ಆರು ವಿದ್ಯಾರ್ಥಿಗಳು ಈ ಕ್ರಮವನ್ನು ವಿರೋಧಿಸಿದರು. ಆಡಳಿತವು ತನ್ನ ಹೊಸ ನಿಯಮವನ್ನು ಬದಲಾಯಿಸಲು ನಿರಾಕರಿಸಿತು, ಇದು ಮುಸ್ಲಿಂ ವಿದ್ಯಾರ್ಥಿಗಳಿಂದ ಮತ್ತಷ್ಟು ಪ್ರತಿಭಟನೆಗೆ ಕಾರಣವಾಯಿತು. ತರುವಾಯ, ಜನವರಿಯಲ್ಲಿ, ನೂರಾರು ಹಿಂದೂ ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಿಗೆ ಕೇಸರಿ ಶಾಲು ಧರಿಸಿ ಬಂದು ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಆವರಣದಲ್ಲಿ ಪ್ರವೇಶವನ್ನು ನಿರಾಕರಿಸಬೇಕೆಂದು ಒತ್ತಾಯಿಸಿದರು. ಹಿಜಾಬ್‌ ಸಮವಸ್ತ್ರದ ಕುರಿತಾದ ತಮ್ಮ ಸಂಸ್ಥೆಗಳ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದರು.</p>



<p>ಇದಾದ ನಂತರ ಇತರ ಕೆಲವು ಕಾಲೇಜುಗಳು ಸಹ ವಿದ್ಯಾರ್ಥಿಗಳು ಶಿರವಸ್ತ್ರ ಧರಿಸುವುದನ್ನು ನಿಷೇಧಿಸಲು ನಿರ್ಧರಿಸಿದವು. ಮುಂದಿನ ದಿನಗಳಲ್ಲಿ, ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜು ದ್ವಾರಗಳಲ್ಲಿ ತಡೆದು, ಅವರ ಬುರ್ಖಾ ಮತ್ತು ಹಿಜಾಬುಗಳನ್ನು ಅಲ್ಲೇ ತೆಗೆಯುವಂತೆ ಒತ್ತಾಯಿಸುವುದು, ಶಿಕ್ಷಕರು ಮತ್ತು ಬಲಪಂಥೀಯ ವಿದ್ಯಾರ್ಥಿ ಗುಂಪುಗಳಿಂದ ಕಿರುಕುಳ ನೀಡುವುದು ಮತ್ತು ಕೆಲವು ಸಂದರ್ಭಗಳಲ್ಲಿ, ಹಿಜಾಬ್ ತೆಗೆಯಲು ನಿರಾಕರಿಸಿದರೆ ಅವರನ್ನು ಮನೆಗೆ ಕಳುಹಿಸುವ ಹಲವಾರು ವೀಡಿಯೊಗಳು ಓಡಾಡ ತೊಡಗಿದವು.</p>



<p>ಫೆಬ್ರವರಿ 5ರಂದು ಕರ್ನಾಟಕ ಸರ್ಕಾರವು ಹೊರಡಿಸಿದ ಆದೇಶದಲ್ಲಿ ಎಲ್ಲಾ ಕಾಲೇಜುಗಳೂ ತಮ್ಮ ಸಮವಸ್ತ್ರ ನಿಯಮಕ್ಕೆ ಬದ್ಧವಾಗಿರಬೇಕು ಮತ್ತು ಹಿಜಾಬ್‌ಗೆ ಯಾವುದೇ ರಿಯಾಯಿತಿ ನೀಡಬಾರದೆಂದು ಹೇಳಿತು.</p>



<p>ಈ ಆದೇಶವನ್ನು ವಿರೋಧಿಸಿ ಹಲವಾರು ಮುಸ್ಲಿಂ ಸಂಘಟನೆಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಕೋರ್ಟಿನಲ್ಲಿ ಅರ್ಜಿಗಳನ್ನು ಸಲ್ಲಿಸಿದರು. ಫೆಬ್ರವರಿ ಹತ್ತನೇ ತಾರೀಖಿನಂದು ಕರ್ನಾಟಕ ಹೈಕೋರ್ಟ್‌ “ಕೇಸರಿ ಶಾಲುಗಳು, ಸ್ಕಾರ್ಫ್, ಹಿಜಾಬ್‌, ಧಾರ್ಮಿಕ ಧ್ವಜ ಅಥವಾ ಅಂತಹವುಗಳನ್ನು ಧರಿಸಿ ತರಗತಿಗಳಿಗೆ ಪ್ರವೇಶಿಸುವುದನ್ನು ನಿರ್ಬಂಧಿಸಿ ಮಧ್ಯಂತರ ಆದೇಶವನ್ನು ಹೊರಡಿಸಿತು. ಆಗ ಆಯೇಷಾ ಕಾಲೇಜು ಸೇರಿ ಒಂದು ತಿಂಗಳಷ್ಟೇ ಆಗಿತ್ತು.</p>



<p class="has-text-align-center has-vivid-cyan-blue-color has-text-color"><strong>ಈ ಆದೇಶವು ಅನೇಕರನ್ನು ಆಘಾತಕ್ಕೀಡುಮಾಡಿತು. 2017-18ರ ಅಖಿಲ ಭಾರತ ಉನ್ನತ ಶಿಕ್ಷಣ <a href="https://epsiindia.org/wp-content/uploads/2019/02/AISHE-2017-18.pdf">ಸಮೀಕ್ಷೆಯ ಪ್ರಕಾರ</a>, ಪರಿಶಿಷ್ಟ ಪಂಗಡಗಳು ಮತ್ತು ಪರಿಶಿಷ್ಟ ಜಾತಿಗಳು ಸೇರಿದಂತೆ ಎಲ್ಲಾ ಅವಕಾಶ ವಂಚಿತ ಗುಂಪುಗಳಲ್ಲೇ <a href="https://educationofmuslimsindia.org/air.html">ಉನ್ನತ ಶಿಕ್ಷಣದಲ್ಲಿ</a> ಮುಸ್ಲಿಮರ <a href="https://scroll.in/article/812272/muslims-have-the-lowest-rate-of-enrolment-in-higher-education-in-india">ದಾಖಲಾತಿ</a> ಅತ್ಯಂತ ಕಡಿಮೆ. ಈ ಆದೇಶದ ನಂತರ ಡಿಬಾರ್‌ ಭಯದಿಂದಾಗಿ ಹಲವು ವಿದ್ಯಾರ್ಥಿಗಳು ತಮ್ಮ ಹಿಜಾಬ್‌ ತೆಗೆದಿಟ್ಟು ತರಗತಿಗೆ ಹಾಜರಾಗಬೇಕಾಯಿತು. ಕೆಲವರು ಹಿಜಾಬ್‌ ನಿಷೇಧವಿಲ್ಲದ ಕಾಲೇಜಿಗೆ ಸೇರಿಕೊಂಡರು-ಇಂತಹ ಹೆಚ್ಚಿನ ಕಾಲೇಜುಗಳನ್ನು ಮುಸ್ಲಿಂ ಸಂಘಟನೆಗಳು ನಡೆಸುತ್ತಿದ್ದವು. ಇವೆರಡೂ ಸಾಧ್ಯವಿಲ್ಲದವರು ಕಾಲೇಜಿನ ಕನಸಿಗೆ ನೀರು ಚೆಲ್ಲಿದರು.</strong></p>



<p>ಪ್ರತಿಭಟನೆಯ ಆರಂಭಿಕ ದಿನಗಳಲ್ಲಿ ತನ್ನ ಕಾಲೇಜಿನ ತರಗತಿಯಲ್ಲಿ ಹಿಜಾಬ್‌ ಧರಿಸುವ ಏಕೈಕ ವಿದ್ಯಾರ್ಥಿಯಾಗಿದ್ದ ಆಯೇಷಾ, ಈ ಪ್ರತಿಭಟನೆ ತನ್ನ ಕಾಲೇಜಿನ ಮೇಲೆ ಪರಿಣಾಮ ಬೀರಲಾರದು ಎಂದುಕೊಂಡಿದ್ದರು. ಅವರ ನಂಬಿಕೆ ಒಂದಿಷ್ಟು ಸರಿಯಾಗಿತ್ತು. ಅವರ ಕಾಲೇಜಿನ ಆಡಳಿತ ಹೈಕೋರ್ಟ್‌ ಇಂಟರಿಮ್ ಆರ್ಡರಿನ ನಂತರವೂ ಹಿಜಾಬ್‌ ಮೇಲೆ ನಿಷೇಧ ಹೇರಿರಲಿಲ್ಲ.</p>



<p>ಆದರೆ ಮಾರ್ಚ್‌ ತಿಂಗಳಿನಲ್ಲಿ ಹೈಕೋರ್ಟ್‌, ಕಾಲೇಜುಗಳಲ್ಲಿ ಹಿಜಾಬ್‌ ತೊಡುವುದನ್ನು ನಿಷೇಧಿಸುವ ಕಾಲೇಜುಗಳ ಹಕ್ಕುಗಳನ್ನು ಎತ್ತಿ ಹಿಡಿದು ತೀರ್ಪು ನೀಡಿದ ನಂತರ ಕಾಲೇಜುಗಳು ಹಿಜಾಬ್‌ ನಿಷೇಧವನ್ನು ಜಾರಿಗೆ ತರಲಾರಂಭಿಸಿದವು. ಇದನ್ನು ವ್ಯಾಪಕವಾಗಿ ಹಿಜಾಬ್‌ ನಿಷೇಧವೆಂದು ಕರೆಯಲಾಯಿತು. “ಇಸ್ಲಾಮಿನಲ್ಲಿ ಹಿಜಾಬ್‌ ಧರಿಸುವುದು ಕಡ್ಡಾಯವೆಂದು ನಿರೂಪಿಸಲು ಅರ್ಜಿದಾರರು ವಿಫಲರಾಗಿದ್ದಾರೆ. ಅದೊಂದು ʼಅಗತ್ಯ ಧಾರ್ಮಿಕ ಆಚರಣೆʼ ಎನ್ನುವುದನ್ನು ಅವರು ಸಾಬೀತುಪಡಿಸಿಲ್ಲ” ಎಂದು ಕೋರ್ಟ್‌ ತನ್ನ ತೀರ್ಪಿನಲ್ಲಿ ಹೇಳಿತ್ತು.</p>



<p>ವಸ್ತ್ರ ಸಂಹಿತೆಯ ಶಿಫಾರಸ್ಸು &#8220;ವಿಮೋಚನೆಯ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ&#8221; ಎಂದು ನ್ಯಾಯಾಲಯ ಹೇಳಿತ್ತು. &#8220;ಇದು ಮಹಿಳೆಯರ ಸ್ವಾಯತ್ತತೆಯನ್ನು ಅಥವಾ ಅವರ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವುದಿಲ್ಲ ಎಂದು ಹೇಳಬೇಕಾಗಿಲ್ಲ, ಏಕೆಂದರೆ ಅವರು ತರಗತಿಯ ಹೊರಗೆ ತಮ್ಮ ಆಯ್ಕೆಯ ಯಾವುದೇ ಉಡುಪನ್ನು ಧರಿಸಬಹುದು&#8221; ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ತೀರ್ಪಿನಿಂದ ತೃಪ್ತರಾಗದ ಅರ್ಜಿದಾರರು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು &#8211; ಅಕ್ಟೋಬರ್ 2022ರಲ್ಲಿ, ಇಬ್ಬರು ನ್ಯಾಯಾಧೀಶರ ನ್ಯಾಯಪೀಠವು ವಿಭಜಿತ ತೀರ್ಪನ್ನು ನೀಡಿತು, ನಂತರ ಈ ವಿಷಯವನ್ನು ಭಾರತದ ಮುಖ್ಯ ನ್ಯಾಯಮೂರ್ತಿಗೆ ವರ್ಗಾಯಿಸಲಾಯಿತು. ಪರಿಣಾಮಕಾರಿಯಾಗಿ, ಹೈಕೋರ್ಟ್ ತೀರ್ಪಿನ ಸಮಯದಿಂದ, ಪ್ರಸ್ತುತ, ಅರ್ಜಿದಾರರು ಈ ವಿಷಯವನ್ನು ಆಲಿಸಲು ಹೊಸ ಪೀಠದ ರಚನೆಗಾಗಿ ಕಾಯುತ್ತಿರುವಾಗ, ಹಿಜಾಬ್ ನಿಷೇಧವು ಪರಿಣಾಮಕಾರಿಯಾಗಿ ಜಾರಿಯಲ್ಲಿದೆ.</p>



<p>ಹೈಕೋರ್ಟ್‌ ತೀರ್ಪಿನ ನಂತರ ಕಾಲೇಜು ಅಧಿಕಾರಿಗಳು ಆಯೇಷಾ ಅವರ ಬಳಿ ಹಿಜಾಬ್‌ ತೆಗೆದಿಟ್ಟು ಬರದಿದ್ದರೆ ತರಗತಿಗೆ ಅನುಮತಿಸಲಾಗದು ಎಂದು ಹೇಳಿದರು. “ನಾನು ಹಲವು ಬಾರಿ ಅವರ ಮನವೊಲಿಸಲು ಪ್ರಯತ್ನಿಸಿದೆ. ಆದರೆ ಅವರು ನನ್ನ ಮಾತುಗಳನ್ನು ಕನಿಷ್ಟ ಕೇಳುವ ಸ್ಥಿತಿಯಲ್ಲೂ ಇದ್ದಿರಲಿಲ್ಲ.” ಎನ್ನುತ್ತಾರೆ ಆಯೇಷಾ.</p>



<p>ಕೆಲವು ವಾರಗಳ ನಂತರ ಆಯೇಷಾ ಮನೆಯಲ್ಲೇ ಉಳಿಯತೊಡಗಿದರು. ಮನೆಯಲ್ಲಿ ಮಗನನ್ನು ನೋಡಿಕೊಳ್ಳುವುದು ಮತ್ತೆ ಮನೆಗೆಲಸ ನೋಡಿಕೊಳ್ಳುವುದರಲ್ಲಿ ಅವರ ದಿನ ಮುಗಿದು ಹೋಗುತ್ತಿತ್ತು. ಈಗ ಓದು ಮುಂದುವರೆಸಲು ಹಿಜಾಬ್‌ ಇಲ್ಲದೆ ಹೊರಗೆ ಓಡಾಡಲು ಅತ್ತೆ ಮಾವನ ಅನುಮತಿ ಸಿಗುವುದು ಕಷ್ಟವಿತ್ತು. ಹಿಜಾಬ್‌ ಧರಿಸುತ್ತಿದ್ದ ಸಮಯದಲ್ಲೇ ಬಹಳ ಕಷ್ಟದಿಂದ ಓದಲು ಅನುಮತಿ ದೊರಕಿತ್ತಾದ್ದರಿಂದ ಈ ಬಾರಿ ಅವರು ಅವರನ್ನು ಕೇಳುವ ಸಾಹಸ ಮಾಡಲಿಲ್ಲ.</p>



<p>ಅವರ ಪಾಲಿಗೆ ಅದು (ಹಿಜಾಬ್ ಇಲ್ಲದೆ ಓಡಾಡುವುದು) ಅವರು ಬಯಸಿದ ಹೋರಾಟವಾಗಿರಲಿಲ್ಲ. ಅವರು ಹೇಳುವಂತೆ, “ಆಕೆ ಯಾವುದೇ ಹಿನ್ನೆಲೆಯಿಂದಲೇ ಬಂದಿರಲಿ ಪ್ರತಿಯೊಬ್ಬ ಮಹಿಳೆಗೂ ಓದುವ ಅವಕಾಶ ದೊರೆಯಬೇಕು. ಅವಳು ಬಿಕಿನಿ ತೊಟ್ಟಿದ್ದಾಳೆಯೇ, ಅಥವಾ ಮೈತುಂಬಾ ಬಟ್ಟೆ ತೊಟ್ಟಿದ್ದಾಳೆಯೇ ಎನ್ನುವುದು ಇಲ್ಲಿ ಪ್ರಶ್ನೆಯಾಗಬಾರದು. ಪ್ರತಿಯೊಬ್ಬರೂ ಶಿಕ್ಷಣಕ್ಕೆ ಅರ್ಹರು.”</p>



<p>ಆದರೆ ಆಯೇಷಾ ಹೀಗೆ ಒಂದು ಧರ್ಮದ ಜನರ ಕುರಿತಾದ ಪೂರ್ವಗ್ರಹ ತನ್ನ ಕನಸನ್ನು ದೋಚಿದ್ದನ್ನು ಕಂಡು ಆಕ್ರೋಶಿತರಾಗಿದ್ದಾರೆ. “ನನ್ನ ಬದುಕು ಈ ನಾಲ್ಕು ಗೋಡೆಗಳ ನಡುವೆ ಮುಗಿದು ಹೋಗಬಾರದು” ಎಂದು ತನ್ನ ಮಲಗುವ ಕೋಣೆಯ ಪ್ರಕಾಶಮಾನವಾದ ಹಳದಿ ಗೋಡೆಗಳನ್ನು ನೋಡುತ್ತಾ ಹೇಳುತ್ತಾರೆ. ಅವರ ತೋಳಿನಲ್ಲಿ ಅವರ ನಾಲ್ಕು ವರ್ಷದ ಮಗ ಆಡುತ್ತಿದ್ದ.</p>



<p>“ನನ್ನಮ್ಮ ನನಗೆ ಜನ್ಮ ನೀಡಿದಾಗ ನನ್ನ ಕುರಿತಾಗಿ ಒಂದು ಕನಸು ಕಂಡಿರ ಬಹುದಲ್ಲವೆ? ಆಕೆಯ ಕನಸಿನ ನನ್ನ ಬದುಕು ಹೀಗೆ ಅಡುಗೆ ಮನೆ ನೋಡಿ ಕೊಳ್ಳುವುದು, ಬಚ್ಚಲು ಮನೆ ತೊಳೆಯುವುದರಲ್ಲಿಯೇ ಕಳೆದು ಹೋಗುವುದು ನ್ಯಾಯವಲ್ಲ.” ಎಂದು ಬೇಸರದಿಂದ ಹೇಳಿದರು.</p>



<p></p>



<figure class="wp-block-table"><table><tbody><tr><td></td><td></td></tr></tbody></table></figure>



<p>ಅನು: ಶಂಕರ ಎನ್‌. ಕೆಂಚನೂರು</p>
]]></content:encoded>
					
		
		
			</item>
		<item>
		<title>ಕಾಲೇಜಿನಲ್ಲಿ ಬುರ್ಖಾ ಧರಿಸಿ ಡ್ಯಾನ್ಸ್: ನಾಲ್ವರು ವಿದ್ಯಾರ್ಥಿಗಳ ಅಮಾನತು</title>
		<link>https://peepalmedia.com/burqa-dance-in-college-suspension-of-four-students/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 09 Dec 2022 12:44:43 +0000</pubDate>
				<category><![CDATA[ದಕ್ಷಿಣ ಕನ್ನಡ]]></category>
		<category><![CDATA[bengalure]]></category>
		<category><![CDATA[dance]]></category>
		<category><![CDATA[hijab]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18064</guid>

					<description><![CDATA[ಮಂಗಳೂರು: ಕಾಲೇಜು ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಹಾಡಿಗೆ ಬುರ್ಖಾ ಧರಿಸಿ ನೃತ್ಯ ಮಾಡಿದ ಕಾರಣ, ನಾಲ್ಕು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿರುವ ಘಟನೆ ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ. ಸೇಂಟ್ ಜೋಸೆಫ್‌ ಎಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ &#8216;ಫೆವಿಕಾಲ್ ಸೆ&#8217; ಹಾಡಿಗೆ ನಾಲ್ವರು ಹುಡುಗರು ಬುರ್ಖಾ ಧರಿಸಿ ನೃತ್ಯ ಮಾಡುತ್ತಿರುವ ವೀಡಿಯೋ ವೈರಲ್‌ ಆಗಿದ್ದು, ಕಾಲೇಜಿನ ವಿದ್ಯಾರ್ಥಿಗಳು ಬುರ್ಖಾ ಧರಿಸಿ ಬುರ್ಖಾ ಮತ್ತು ಹಿಜಾಬ್‌ ಧರಿಸಿ ನೃತ್ಯ ಮಾಡಿರುವುದು ಒಂದು ರೀತಿ ಸಮುದಾಯವನ್ನು ಅಣಕಿಸುವಂತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಕಾಲೇಜಿನ [&#8230;]]]></description>
										<content:encoded><![CDATA[
<p><strong>ಮಂಗಳೂರು:</strong> ಕಾಲೇಜು ಕಾರ್ಯಕ್ರಮವೊಂದರಲ್ಲಿ ಬಾಲಿವುಡ್ ಹಾಡಿಗೆ ಬುರ್ಖಾ ಧರಿಸಿ ನೃತ್ಯ ಮಾಡಿದ ಕಾರಣ, ನಾಲ್ಕು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿರುವ ಘಟನೆ ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.</p>



<p>ಸೇಂಟ್ ಜೋಸೆಫ್‌ ಎಂಜಿನಿಯರಿಂಗ್ ಕಾಲೇಜಿನ ಕಾರ್ಯಕ್ರಮದಲ್ಲಿ &#8216;ಫೆವಿಕಾಲ್ ಸೆ&#8217; ಹಾಡಿಗೆ ನಾಲ್ವರು ಹುಡುಗರು ಬುರ್ಖಾ ಧರಿಸಿ ನೃತ್ಯ ಮಾಡುತ್ತಿರುವ ವೀಡಿಯೋ ವೈರಲ್‌ ಆಗಿದ್ದು, ಕಾಲೇಜಿನ ವಿದ್ಯಾರ್ಥಿಗಳು ಬುರ್ಖಾ ಧರಿಸಿ ಬುರ್ಖಾ ಮತ್ತು ಹಿಜಾಬ್‌ ಧರಿಸಿ ನೃತ್ಯ ಮಾಡಿರುವುದು ಒಂದು ರೀತಿ ಸಮುದಾಯವನ್ನು ಅಣಕಿಸುವಂತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಕಾಲೇಜಿನ ಪ್ರಾಂಶುಪಾಲರು ನೃತ್ಯ ಮಾಡಿರುವ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದಾರೆ.</p>



<p>ವಿಡಿಯೋದಲ್ಲಿ ಒಂದು ಸಮುದಾಯದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ನೃತ್ಯಕ್ಕೆ ಅನುಮತಿ ನೀಡಿದ್ದಕ್ಕಾಗಿ ಕಾಲೇಜು ಆಡಳಿತವನ್ನು ಅನೇಕರು ಟೀಕಿಸಿದ್ದಾರೆ.</p>



<p>ವಿಡಿಯೋದಲ್ಲಿನ ದೃಶ್ಯವು ʼಅಶ್ಲೀಲ ಹೆಜ್ಜೆಗಳನ್ನುʼ ಹೊಂದಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ನೃತ್ಯವನ್ನು ಅನುಚಿತವೆಂದು ಕರೆದಿದ್ದಾರೆ. ಆದರೆ ಬಾಲಿವುಡ್ ಹಾಡು ಅನುಮೋದಿತ ಕಾರ್ಯಕ್ರಮಗಳ ಪಟ್ಟಿಯ ಭಾಗವಾಗಿಲ್ಲ ಎಂದು ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ.</p>



<p>ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೇದಿಕೆಯ ಮೇಲೆ &nbsp;ʼಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನುʼ ಉಲ್ಲಂಘಿಸಿದ್ದಾರೆ ಎಂದು ಕಾಲೇಜು ಪ್ರತಿಕ್ರಿಯಿಸಿದೆ.</p>



<figure class="wp-block-image size-full"><img fetchpriority="high" decoding="async" width="842" height="527" src="https://peepalmedia.com/wp-content/uploads/2022/12/Screenshot-2022-12-09-181259.jpg" alt="" class="wp-image-18066" srcset="https://peepalmedia.com/wp-content/uploads/2022/12/Screenshot-2022-12-09-181259.jpg 842w, https://peepalmedia.com/wp-content/uploads/2022/12/Screenshot-2022-12-09-181259-300x188.jpg 300w, https://peepalmedia.com/wp-content/uploads/2022/12/Screenshot-2022-12-09-181259-768x481.jpg 768w, https://peepalmedia.com/wp-content/uploads/2022/12/Screenshot-2022-12-09-181259-150x94.jpg 150w, https://peepalmedia.com/wp-content/uploads/2022/12/Screenshot-2022-12-09-181259-696x436.jpg 696w" sizes="(max-width: 842px) 100vw, 842px" /></figure>



<p>&#8220;ಸಮುದಾಯಗಳು ಮತ್ತು ಎಲ್ಲರ ನಡುವಿನ ಸಾಮರಸ್ಯಕ್ಕೆ ಧಕ್ಕೆ ತರುವ ಚಟುವಟಿಕೆಗಳನ್ನು ಕಾಲೇಜು ಬೆಂಬಲಿಸುವುದಿಲ್ಲ ಅಥವಾ ಕ್ಷಮಿಸುವುದಿಲ್ಲ&#8221; ಎಂದು ಸಂಸ್ಥೆ ತಿಳಿಸಿದ್ದು, ಈ ರೀತಿ ನಡೆದಿರುವುದು ವಿದ್ಯಾರ್ಥಿಗಳ ಅನೌಪಚಾರಿಕ ಭಾಗವಾಗಿದ್ದು, ಕಾರ್ಯಕ್ರಮದಲ ಭಾಗವಲ್ಲ, ಈ ನೃತ್ಯದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳನ್ನು ಮುಂದಿನ ವಿಚಾರಣೆಯವರೆಗೆ ಅಮಾನತುಗೊಳಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಮಹಿಳೆಯರ ಮೂಲಭೂತ ಹಕ್ಕನ್ನು ರಕ್ಷಿಸಿದ ನ್ಯಾ.ಸುಧಾಂಶು : ಅಖಿಲ ಭಾರತ ಮಹಿಳಾ ಸಂಘಟನೆ</title>
		<link>https://peepalmedia.com/mahileyara-mulabhutha-hakkannu-rakshisida-nyasudhamshu-akhila-bharatha-mahila-sanghatane/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 15 Oct 2022 07:06:13 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[bengalure]]></category>
		<category><![CDATA[hijab]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sudhamshu]]></category>
		<guid isPermaLink="false">https://peepalmedia.com/?p=10745</guid>

					<description><![CDATA[ಬೆಂಗಳೂರು : ಹಿಜಾಬ್ ತೀರ್ಪಿನ ಕುರಿತು ಅಖಿಲ ಭಾರತ ಮಹಿಳಾ ಸಂಘಟನೆಯು ನ್ಯಾ. ಸುಧಾಂಶು ಧುಲಿಯಾ ಅವರು ಹಿಜಾಬ್ ಪರವಾಗಿ ಕೊಟ್ಟ ತೀರ್ಪನ್ನು ಸ್ವಾಗತಿಸಿದ್ದು, ಮುಂದೆ ವಿಸ್ತ್ರತ ಪೀಠದಲ್ಲಿ ನೀಡುವ ಹಿಜಾಬ್ ಅಂತಿಮ ತೀರ್ಪು, ಮಹಿಳೆಯರ ಶಿಕ್ಷಣದ ಮೂಲ ಭೂತ ಹಕ್ಕನ್ನು ಮತ್ತು ಆಯ್ಕೆಯ ಹಕ್ಕನ್ನು ರಕ್ಷಿಸುವಂತೆ ನಿರೀಕ್ಷಿಸಿ ಶುಕ್ರವಾರದಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ, ಕರ್ನಾಟಕ‌ ಹೈ ಕೋರ್ಟ್ ನೀಡಿದ್ದ ತೀರ್ಪಿನ ಮೇಲ್ಮನವಿಯ ವಿಚಾರಣೆ ನಡೆಸಿದ‌ ಸುಪ್ರೀಂ ಕೋರ್ಟ್, ದ್ವಿ ಸದಸ್ಯ [&#8230;]]]></description>
										<content:encoded><![CDATA[
<p style="font-size:20px"><strong>ಬೆಂಗಳೂರು </strong>: ಹಿಜಾಬ್ ತೀರ್ಪಿನ ಕುರಿತು ಅಖಿಲ ಭಾರತ ಮಹಿಳಾ ಸಂಘಟನೆಯು ನ್ಯಾ. ಸುಧಾಂಶು ಧುಲಿಯಾ ಅವರು ಹಿಜಾಬ್ ಪರವಾಗಿ ಕೊಟ್ಟ ತೀರ್ಪನ್ನು ಸ್ವಾಗತಿಸಿದ್ದು, ಮುಂದೆ ವಿಸ್ತ್ರತ ಪೀಠದಲ್ಲಿ ನೀಡುವ ಹಿಜಾಬ್ ಅಂತಿಮ ತೀರ್ಪು, ಮಹಿಳೆಯರ ಶಿಕ್ಷಣದ ಮೂಲ ಭೂತ ಹಕ್ಕನ್ನು ಮತ್ತು ಆಯ್ಕೆಯ ಹಕ್ಕನ್ನು ರಕ್ಷಿಸುವಂತೆ ನಿರೀಕ್ಷಿಸಿ ಶುಕ್ರವಾರದಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ್ದಾರೆ.</p>



<p style="font-size:20px">ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ, ಕರ್ನಾಟಕ‌ ಹೈ ಕೋರ್ಟ್ ನೀಡಿದ್ದ ತೀರ್ಪಿನ ಮೇಲ್ಮನವಿಯ ವಿಚಾರಣೆ ನಡೆಸಿದ‌ ಸುಪ್ರೀಂ ಕೋರ್ಟ್, ದ್ವಿ ಸದಸ್ಯ ಪೀಠದ ಭಿನ್ನ ಮತದ ತೀರ್ಪು ನೀಡಿದ್ದು, ಅದನ್ನು ವಿಸ್ತ್ರತ ಪೀಠಕ್ಕೆ ಕೊಡಲು ಮುಖ್ಯ‌ ನ್ಯಾಯಾಧೀಶರಿಗೆ ದ್ವಿಸದಸ್ಯ ಪೀಠ ಕೋರಿದೆ.</p>



<p style="font-size:20px">ಈ ಕುರಿತು ಪತ್ತಿಕಾ ಹೇಳಿಕೆ ಕೊಟ್ಟ ಅಧ್ಯಕ್ಷೆ ಮೀನಾಕ್ಷಿ ಬಾಳಿರವರು ʼಮಹಿಳೆಯರ ಶಿಕ್ಷಣದ ಹಕ್ಕನ್ನು ಎತ್ತಿ ಹಿಡಿದ ಮಾನ್ಯ ನ್ಯಾಯಮೂರ್ತಿ ಸುಧಾಂಶು ಧುಲಿಯಾರವರ ಅಭಿಪ್ರಾಯವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸ್ವಾಗತಿಸುತ್ತದೆʼ ಎಂದು ಹೇಳಿದ್ದಾರೆ.</p>



<p style="font-size:20px">ಹೆಣ್ಣು ಮಗುವಿಗೆ ಮನೆಯೊಳಗೆ ಅಥವಾ ಮನೆಯ ಹೊರಗೆ ಹಿಜಾಬ್ ಧರಿಸಲು ಅಧಿಕಾರ ಇದೆ. ಆ ಹಕ್ಕು ಶಾಲೆಯ ದ್ವಾರದ ಬಳಿ ಮೊಟಕುಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಸುಧಾಂಶು ದುಲಿಯಾರವರು ಹೇಳಿದ ಮಾತು ಜನವಾದಿಯ ಅಭಿಪ್ರಾಯವನ್ನು ದೃಡೀಕರಿಸಿದಂತಾಗಿದೆ ಎಂದು ಸುಧಾಂಶು ಅವರ ತೀರ್ಪಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>



<p style="font-size:20px">ನಮ್ಮ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ಮತ್ತು ಸಮವಸ್ತ್ರದ ಹೆಸರಿನಲ್ಲಿ ಎದ್ದ ವಿವಾದ&nbsp; ಸುಪ್ರೀಂ ಕೋರ್ಟ್ ನ&nbsp; ಮೆಟ್ಟಿಲೇರಿ&nbsp;&nbsp; ಹತ್ತು ತಿಂಗಳ ನಂತರ ಹೆಣ್ಣು ಮಕ್ಕಳು ಶಿಕ್ಷಣದ ಹಕ್ಕು ಮತ್ತು ಮೂಲಭೂತ ಹಕ್ಕುನ್ನು ಹೊಂದಿರುತ್ತಾರೆ ಎಂಬ ತೀರ್ಪು ನೀಡುವ ಮೂಲಕ ಆಯ್ಕೆಯ ಹಕ್ಕಿನ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಂತಾಗಿದೆ ಎಂದು ಸಂಘಟನೆಯ ಅಭಿಪ್ರಾಯ ತಿಳಿಸಿದ್ದಾರೆ.</p>



<p style="font-size:20px">ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ವಿಸ್ತ್ರತ ಪೀಠವು&nbsp; ಮಹಿಳೆಯರ ಶಿಕ್ಷಣದ ಮೂಲ ಭೂತ ಹಕ್ಕನ್ನು ಮತ್ತು ಆಯ್ಕೆಯ ಹಕ್ಕನ್ನು ರಕ್ಷಿಸುವ ನೆಲೆಯಲ್ಲಿ ಬರುತ್ತದೆ ಎಂಬ ಆಶಾದಾಯಕವಾದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೇವೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಮತ್ತು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಬಾಳಿ(ದೇವಿ) ಅವರು ಮುಂದಿನ ತೀರ್ಪಿನ ಬಗ್ಗೆ ಮಾತನಾಡಿದರು.</p>
]]></content:encoded>
					
		
		
			</item>
		<item>
		<title>ಹಿಜಾಬ್ ವಿಚಾರದಲ್ಲಿ ಸುಪ್ರೀಂ ಕೋರ್ಟಿನ ಅಂತಿಮ ತೀರ್ಪು ಬಹಳ ಮುಖ್ಯ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ</title>
		<link>https://peepalmedia.com/scs-final-verdict-on-hijab-is-very-important-chief-minister/</link>
		
		<dc:creator><![CDATA[Peepal Media]]></dc:creator>
		<pubDate>Thu, 13 Oct 2022 16:33:20 +0000</pubDate>
				<category><![CDATA[ರಾಜ್ಯ]]></category>
		<category><![CDATA[hijab]]></category>
		<category><![CDATA[Hijab ban in Karnataka]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[ಹಿಜಾಬ್‌]]></category>
		<guid isPermaLink="false">https://peepalmedia.com/?p=10557</guid>

					<description><![CDATA[ಬಳ್ಳಾರಿ; ಹಿಜಾಬ್ ಪ್ರಕರಣ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪು ಬಹಳ ಮುಖ್ಯವಾಗಿದೆ. ಇದು ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇಡೀ ದೇಶದಲ್ಲಿರುವ ವಿಚಾರ. ಹೀಗಾಗಿ ಅಂತಿಮ ತೀರ್ಪು ಬರುವವರೆಗೂ ನಾವು ಕಾದು ನೋಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಮಾಧ್ಯಮದವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು. ಹಿಜಾಬ್ ಪ್ರಕರಣ ನ್ಯಾಯಾಂಗದ ವಿಚಾರವಾಗಿದೆ. ಇಬ್ಬರು ನ್ಯಾಯಮೂರ್ತಿಗಳು ತೀರ್ಪನ್ನು ಕೊಟ್ಟಿದ್ದಾರೆ. ನ್ಯಾಯಮೂರ್ತಿಗಳ ತೀರ್ಪನ್ನು ಲಿಖಿತವಾಗಿ ನೋಡಿ ಪ್ರತಿಕ್ರಿಯೆ ಕೊಡಬೇಕಾಗುತ್ತದೆ ಎಂದು [&#8230;]]]></description>
										<content:encoded><![CDATA[
<p>ಬಳ್ಳಾರಿ; ಹಿಜಾಬ್ ಪ್ರಕರಣ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ ಅಂತಿಮ ತೀರ್ಪು ಬಹಳ ಮುಖ್ಯವಾಗಿದೆ. ಇದು ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇಡೀ ದೇಶದಲ್ಲಿರುವ ವಿಚಾರ. ಹೀಗಾಗಿ ಅಂತಿಮ ತೀರ್ಪು ಬರುವವರೆಗೂ ನಾವು ಕಾದು ನೋಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.</p>



<p>ಇಂದು ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯಲ್ಲಿ ಮಾಧ್ಯಮದವರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿದರು.</p>



<p>ಹಿಜಾಬ್ ಪ್ರಕರಣ ನ್ಯಾಯಾಂಗದ ವಿಚಾರವಾಗಿದೆ. ಇಬ್ಬರು ನ್ಯಾಯಮೂರ್ತಿಗಳು ತೀರ್ಪನ್ನು ಕೊಟ್ಟಿದ್ದಾರೆ. ನ್ಯಾಯಮೂರ್ತಿಗಳ ತೀರ್ಪನ್ನು ಲಿಖಿತವಾಗಿ ನೋಡಿ ಪ್ರತಿಕ್ರಿಯೆ ಕೊಡಬೇಕಾಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.</p>



<p>ಹಿಜಾಬ್ ವಿಚಾರದಲ್ಲಿ ಹತ್ತು ಹಲವಾರು ಆಯಾಮಗಳಿವೆ. ವಿದ್ಯಾರ್ಥಿಗಳ ಬೇಡಿಕೆ, ಸರ್ಕಾರದ ಆಜ್ಞೆ ಬೇರೆ ಬೇರೆಯಾಗಿದೆ. ರಾಷ್ಟ್ರ, ಅಂತರಾಷ್ಟ್ರೀಯ ವಿಚಾರಗಳು ಇದರಲ್ಲಿ ಆಳವಡಿಕೆ ಆಗಿರುವುದರಿಂದ ಸ್ಪಷ್ಟವಾದ ತೀರ್ಪನ್ನು ನಾವು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಸಿಎಂ‌ ಬೊಮ್ಮಾಯಿ ತಿಳಿಸಿದರು.</p>



<p><strong>ಮಳೆ ಹಾನಿಯ ಪರಿಹಾರಕ್ಕೆ ಸಿಎಂ ಬೊಮ್ಮಾಯಿ‌ ಸೂಚನೆ</strong></p>



<p>ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾದ ಹಾನಿಯ ಬಗ್ಗೆ ತಿಳಿಯಲು 16 ಜಿಲ್ಲಾಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಿದ್ದೇನೆ. ಅಕ್ಟೋಬರ್ ತಿಂಗಳಲ್ಲಿ ಸಾಮಾನ್ಯವಾಗಿ ಮಳೆ ಅಧಿಕವಾಗಿ ಆಗುತ್ತದೆ. ಅಕ್ಟೋಬರ್‌ 20 ರ ವರೆಗೂ ಅಧಿಕವಾದ ಮಳೆ ಆಗುವ ಸಾಧ್ಯತೆಯಿದೆ. ಹೀಗಾಗಿ ಅದಕ್ಕೆ ಪೂರ್ವಭಾವಿ ತಯಾರಿ ಮಾಡಿಕೊಳ್ಳಲು ಸೂಚನೆ ನೀಡಿದ್ದೇನೆ. ಈ ತಿಂಗಳಲ್ಲಿ ಮಳೆಯಿಂದಾದ ಮನೆ ಮತ್ತು ಬೆಳೆ ಹಾನಿಗೆ ಪರಿಹಾರ ನೀಡಲಾಗುತ್ತಿದ್ದೆ. ಪ್ರಾಣ ಹಾನಿಯಾದವರ ಕುಟುಂಬಕ್ಕೆ ಪರಿಹಾರವನ್ನು ಈಗಾಗಲೇ ನೀಡಲಾಗಿದ್ದು, ಇನ್ನುಳಿದವರಿಗೂ 24 ಗಂಟೆಯಲ್ಲಿ ಪರಿಹಾರ ನೀಡಲು ಆದೇಶವನ್ನು ಮಾಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.</p>



<p><strong>ಕೆಟ್ಟ ಶಕ್ತಿಗಳ ದಮನಕ್ಕೆ ಕಾನೂನು ಕ್ರಮ</strong></p>



<p>ಹಾವೇರಿಯಲ್ಲಿ ಶಾಂತಿಯುತ ಪಥ ಸಂಚಲನವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಹಮ್ಮಿಕೊಂಡಿದ್ದರು. ಒಂದು ವಾರದಿಂದ ಎಲ್ಲ ತಯಾರಿ ಅಲ್ಲಿ ನಡೆಯುತ್ತಿತ್ತು. ಪಥ ಸಂಚಲನದ ಮಾರ್ಗವನ್ನು ನೋಡಲು ಹೋದವರ ಮೇಲೆ ಅನವಶ್ಯಕವಾಗಿ ಹಲ್ಲೆ ಮಾಡಿದ್ದಾರೆ. ಇದರಿಂದ ಇಡೀ ಜಿಲ್ಲೆಯ ಶಾಂತಿಯನ್ನು ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ 20 ಜನರನ್ನು ಬಂಧಿಸಲಾಗಿದೆ.‌ ಇಂತಹ ಕೆಟ್ಟ ಶಕ್ತಿಗಳ ದಮನಕ್ಕೆ ಕಾನೂನಿನ ಮುಖಾಂತರ ಸರಿಯಾದ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದರು.</p>
]]></content:encoded>
					
		
		
			</item>
		<item>
		<title>ಮುಸ್ಲಿಂ ವಿದ್ಯಾರ್ಥಿನಿಯರ ಖಾಸಗಿ ಹಕ್ಕನ್ನು ಎತ್ತಿ ಹಿಡಿದ ಹಿಜಾಬ್ ತೀರ್ಪು</title>
		<link>https://peepalmedia.com/hijab-ruling-upheld-the-privacy-rights-of-muslim-female-students/</link>
		
		<dc:creator><![CDATA[Peepal Media]]></dc:creator>
		<pubDate>Thu, 13 Oct 2022 14:39:11 +0000</pubDate>
				<category><![CDATA[ವಿಶೇಷ]]></category>
		<category><![CDATA[Central Government]]></category>
		<category><![CDATA[high court]]></category>
		<category><![CDATA[hijab]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state government]]></category>
		<category><![CDATA[Supreme Court]]></category>
		<guid isPermaLink="false">https://peepalmedia.com/?p=10542</guid>

					<description><![CDATA[ಇಡೀ ದೇಶದ ಕುತೂಹಲ ಕೆರಳಿಸಿದ್ದ, ಇಂದು ಅಂತಿಮ ತೀರ್ಪು ಹೊರಬೀಳಬಹುದು ಎಂದೇ ಅಂದಾಜಿಸಲಾಗಿದ್ದ ಹಿಜಾಬ್ ಕುರಿತಾದ ತೀರ್ಪು ಅಂತೂ ಹೊರಬಿದ್ದಿದೆ. ಆದರೆ ದ್ವಿಸದಸ್ಯ ಪೀಠದ ಈ ತೀರ್ಪು ಭಿನ್ನ ಅಭಿಪ್ರಾಯದಿಂದ ಕೂಡಿದ್ದು ಹಿಜಾಬ್ ಪರವೂ ಅಲ್ಲದ, ಹಿಜಾಬಿನ ವಿರುದ್ಧವೂ ಅಲ್ಲದಂತೆ ವ್ಯತಿರಿಕ್ತವಾಗಿ ಕೂಡಿದೆ. ಹಾಗಾಗಿ ಹಿಜಾಬ್ ತೀರ್ಪಿನ ಕುರಿತಾದ ಕುತೂಹಲ ಮತ್ತಷ್ಟು ಜಟಿಲಗೊಂಡಿದೆ. ನ್ಯಾ.ಹೇಮಂತ್ ಗುಪ್ತಾ ಹಿಜಾಬ್ ಕುರಿತಾದ ಮೇಲ್ಮನವಿ ರದ್ದುಗೊಳಿಸಿದರೆ, ನ್ಯಾ.ಸುದಾಂಶು ಧುಲಿಯಾ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ ಮುಂದಿನ ತೀರ್ಪು ಹೊರಬರುವ ವರೆಗೂ ಶಾಲಾ [&#8230;]]]></description>
										<content:encoded><![CDATA[
<p style="font-size:20px">ಇಡೀ ದೇಶದ ಕುತೂಹಲ ಕೆರಳಿಸಿದ್ದ, ಇಂದು ಅಂತಿಮ ತೀರ್ಪು ಹೊರಬೀಳಬಹುದು ಎಂದೇ ಅಂದಾಜಿಸಲಾಗಿದ್ದ ಹಿಜಾಬ್ ಕುರಿತಾದ ತೀರ್ಪು ಅಂತೂ ಹೊರಬಿದ್ದಿದೆ. ಆದರೆ ದ್ವಿಸದಸ್ಯ ಪೀಠದ ಈ ತೀರ್ಪು ಭಿನ್ನ ಅಭಿಪ್ರಾಯದಿಂದ ಕೂಡಿದ್ದು ಹಿಜಾಬ್ ಪರವೂ ಅಲ್ಲದ, ಹಿಜಾಬಿನ ವಿರುದ್ಧವೂ ಅಲ್ಲದಂತೆ ವ್ಯತಿರಿಕ್ತವಾಗಿ ಕೂಡಿದೆ. ಹಾಗಾಗಿ ಹಿಜಾಬ್ ತೀರ್ಪಿನ ಕುರಿತಾದ ಕುತೂಹಲ ಮತ್ತಷ್ಟು ಜಟಿಲಗೊಂಡಿದೆ.</p>



<p style="font-size:20px">ನ್ಯಾ.ಹೇಮಂತ್ ಗುಪ್ತಾ ಹಿಜಾಬ್ ಕುರಿತಾದ ಮೇಲ್ಮನವಿ ರದ್ದುಗೊಳಿಸಿದರೆ, ನ್ಯಾ.ಸುದಾಂಶು ಧುಲಿಯಾ ಕರ್ನಾಟಕ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿ ಮುಂದಿನ ತೀರ್ಪು ಹೊರಬರುವ ವರೆಗೂ ಶಾಲಾ ಕಾಲೇಜುಗಳಲ್ಲಿ ಯಥಾಸ್ಥಿತಿ ಮುಂದುವರೆಯುವಂತೆ ಆದೇಶಿಸಿದ್ದಾರೆ. ಸಧ್ಯ ದ್ವಿಸದಸ್ಯ ಪೀಠದಿಂದ ಈ ಪ್ರಕರಣ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಜೊತೆಗೆ ವಿಸ್ತೃತ ಪೀಠಕ್ಕೆ 11 ಪ್ರಶ್ನೆಗಳನ್ನು ಮುಂದಿಟ್ಟು ಕರ್ನಾಟಕ ಹೈಕೋರ್ಟ್ ಆದೇಶವನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.</p>



<p style="font-size:20px">ಮಕ್ಕಳ ಶಿಕ್ಷಣದ ಹಕ್ಕುಗಳನ್ನು ಎತ್ತಿಹಿಡಿಯಬೇಕಾದ ಸಾಂವಿಧಾನಿಕ, ಸಾರ್ವಭೌಮತ್ವದ ದೇಶದಲ್ಲಿ ಧಾರ್ಮಿಕ ಹಿನ್ನೆಲೆಯ ಕಾರಣಕ್ಕೆ, ಸೈದ್ಧಾಂತಿಕ ಸಂಘರ್ಷದ ಕಾರಣಕ್ಕೆ ಮಕ್ಕಳನ್ನು ಶಿಕ್ಷಣದ ಹಕ್ಕಿನಿಂದ ವಂಚಿಸಬಾರದು ಎಂದು ನ್ಯಾ.ಸುದಾಂಶು ಧುಲಿಯಾ ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಅವರವರ ವಸ್ತ್ರದ ಆಯ್ಕೆ ಅವರವರಿಗೆ ಬಿಟ್ಟದ್ದು, ಇದರಲ್ಲಿ ಮೂರನೇ ವ್ಯಕ್ತಿ, ಸಂಘಟನೆ, ಧರ್ಮ, ಸಿದ್ಧಾಂತಗಳು ಮೂಗು ತೂರಿಸುವುದು ಅನಗತ್ಯ ಎಂದೂ ಸಹ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಹೆಣ್ಣು ಮಕ್ಕಳ ಆಯ್ಕೆ ಹಕ್ಕನ್ನು ಕಸಿದುಕೊಳ್ಳುವ ಕೆಲಸ ಮಾಡಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಸಂಗತಿ. ಜೊತೆಗೆ ನಮ್ಮ ಮುಖ್ಯ ಆಧ್ಯತೆ ಹೆಣ್ಣು ಮಕ್ಕಳ ಶಿಕ್ಷಣವಾಗಬೇಕಿದೆ, ನ್ಯಾಯಾಲಯಗಳು ಕೊಡುವ ಈ ರೀತಿಯ ತೀರ್ಪು ಕಳವಳಕಾರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.</p>



<p style="font-size:20px">ಬಹಳ ಕುತೂಹಲ ಕೆರಳಿಸಿದ್ದ ಹಿಜಾಬ್ ತೀರ್ಪು ಈಗ ಹಿಜಾಬ್ ಪರ ಮತ್ತು ವಿರುದ್ಧ ಇದ್ದ ಎರಡೂ ಗುಂಪುಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಜೊತೆಗೆ ಅಂತಿಮ ತೀರ್ಪಿನ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಈ ನಡುವೆ ಹಿಜಾಬ್ ಧರಿಸುವುದು ತಮ್ಮ ನಂಬಿಕೆಯ ಭಾಗ ಜೊತೆಗೆ ಅದು ಮೂಲಭೂತ ಹಕ್ಕು ಎಂದು ಸರ್ಕಾರದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು‌. ಆದರೆ ಕರ್ನಾಟಕ ಹೈಕೋರ್ಟ್ ಏಕರೂಪದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿತ್ತು. ಮುಸ್ಲಿಮರು ಹಿಜಾಬ್ ಧರಿಸುವುದು ಇಸ್ಲಾಮಿನ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿದೆ. ಪ್ರಸ್ತುತ ಕರ್ನಾಟಕದಲ್ಲಿ, ಮುಸ್ಲಿಮರು ನಡೆಸುತ್ತಿರುವ ಕೆಲವು ಖಾಸಗಿ ಸಂಸ್ಥೆಗಳು ಮಾತ್ರ ಕ್ಯಾಂಪಸ್‌ನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುತ್ತಿವೆ ಎಂದು ಹಿಜಾಬ್ ವಿರುದ್ಧ ವಾದ ಮಂಡಿಸಲಾಗಿತ್ತು.</p>



<p style="font-size:20px">ಎರಡೂ ಕಡೆಗಳ ಸುಧೀರ್ಘ ವಾದ ಪ್ರತಿವಾದದಲ್ಲಿ ಅರ್ಜಿದಾರರ ಪರವಾಗಿ ಸಂಜಯ್ ಹೆಗ್ಡೆ, ರಾಜೀವ್ ಧವನ್, ದುಶ್ಯಂತ್ ದವೆ, ಯೂಸುಫ್ ಮುಚ್ಚಲ, ಎಂ ಆರ್ ಶಂಶದ್, ಸಲ್ಮಾನ್ ಖುರ್ಷೀದ್, ನಿಜಾಂ ಪಾಷಾ, ಪ್ರಶಾಂತ್ ಭೂಷಣ್, ದೇವದತ್ ಕಾಮತ್, ಶೋಯೆಬ್ ಆಲಂ ಹಾಗೂ ವಕೀಲೆ ವಿ ಮೋಹನಾ ವಾದ ಮಂಡಿಸಿದ್ದರು. ಕರ್ನಾಟಕ ಸರ್ಕಾರದ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಹಾಗೂ ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು. ಸಧ್ಯ ಪ್ರಕರಣ ಸಿಜೆಐ ಗೆ ವರ್ಗಾವಣೆ ಆದ ಬೆನ್ನಲ್ಲೇ ಸಿಜೆಐ ಅವರು ಹಿಜಾಬ್ ವಿಚಾರಣೆ ಸಂಬಂಧ ಮೂವರು ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠ ರಚಿಸಬೇಕು ಎಂದು ತೀರ್ಪಿನಲ್ಲಿ ಕೋರಿದ್ದಾರೆ.</p>



<figure class="wp-block-image size-full"><img decoding="async" width="858" height="357" src="https://peepalmedia.com/wp-content/uploads/2022/10/images-2022-10-12T173140.851-2.jpeg" alt="" class="wp-image-10543" srcset="https://peepalmedia.com/wp-content/uploads/2022/10/images-2022-10-12T173140.851-2.jpeg 858w, https://peepalmedia.com/wp-content/uploads/2022/10/images-2022-10-12T173140.851-2-300x125.jpeg 300w, https://peepalmedia.com/wp-content/uploads/2022/10/images-2022-10-12T173140.851-2-768x320.jpeg 768w, https://peepalmedia.com/wp-content/uploads/2022/10/images-2022-10-12T173140.851-2-150x62.jpeg 150w, https://peepalmedia.com/wp-content/uploads/2022/10/images-2022-10-12T173140.851-2-696x290.jpeg 696w" sizes="(max-width: 858px) 100vw, 858px" /></figure>



<p style="font-size:20px">ಇನ್ನು ಇದೇ ಅಕ್ಟೋಬರ್ 16 ಕ್ಕೆ ನ್ಯಾ.ಹೇಮಂತ್ ಗುಪ್ತಾ ರಾಜೀನಾಮೆ ಹಿನ್ನೆಲೆಯಲ್ಲಿ ಪೂರ್ಣ ಹಂತದ ತೀರ್ಪು ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಆಗಲಿದೆ. ಆಗಲೂ ನ್ಯಾಯಮೂರ್ತಿಗಳ ಭಿನ್ನ ರೀತಿಯ ತೀರ್ಪು ಬಂದರೂ ಬಹುಮತದ ಆಧಾರದಲ್ಲಿ ಅಥವಾ ಸಿಜೆಐ ಪ್ರಕಟಿಸುವ ಅಭಿಪ್ರಾಯದ ಮೇಲೆ ತೀರ್ಪು ನಿರ್ಧಾರವಾಗಲಿದೆ. ಯಾವುದೇ ತೀರ್ಪು ಬಂದರೂ ಮುಂದಿನ ಹಂತದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಭವಿಷ್ಯದ ದೃಷ್ಟಿಯಿಂದ ತೀರ್ಪು ಸ್ವೀಕರಿಸಬೇಕು. ಮತ್ತು ಸರ್ಕಾರ ಕೂಡಾ ತನ್ನ ಸೈದ್ಧಾಂತಿಕ ಹಠ ಬಿಟ್ಟು ವರ್ತಿಸಿದರೆ ರಾಜ್ಯ ಕೂಡಾ ಇವೆಲ್ಲಾ ಗೊಂದಲಗಳಿಗೆ ಅಂತ್ಯ ಹಾಡಬಹುದು ಎಂಬುದು ಸಾರ್ವಜನಿಕವಾಗಿ ಕೇಳಿಬಂದ ಅಭಿಪ್ರಾಯವಾಗಿದೆ.</p>
]]></content:encoded>
					
		
		
			</item>
		<item>
		<title>ಹಿಜಾಬ್‌ ಪ್ರಕರಣ: ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಹೇಳಿರುವುದೇನು?</title>
		<link>https://peepalmedia.com/hijab-prakarana-theerpinalli-nyayamurthigalu-heliruvudenu/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 13 Oct 2022 13:47:46 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[hijab]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sudhamshu dhulia]]></category>
		<category><![CDATA[supreme court judgement]]></category>
		<category><![CDATA[writing]]></category>
		<guid isPermaLink="false">https://peepalmedia.com/?p=10539</guid>

					<description><![CDATA[ದೆಹಲಿ : ರಾಜ್ಯ ಮತ್ತು ದೇಶದಲ್ಲಿ ತಿಂಗಳುಗಳ ಕಾಲ ವಿವಾದ ಎಬ್ಬಿಸಿದ್ದ ಹಿಜಾಬ್‌ ಪ್ರಕರಣ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪು ನೀಡಿದೆ. ಅರ್ಜಿದಾರರ ಪರ-ವಿರೋಧ ವಾದಗಳನ್ನು ಆಲಿಸಿದ ನಂತರ ಈ ತೀರ್ಪು ಹೊರಬಿದ್ದಿದೆ. ಆದರೆ ಈಗ ಬಂದಿರುವ ತೀರ್ಪು ಒಮ್ಮತವಿಲ್ಲದ ತೀರ್ಪಾಗಿದ್ದು ನ್ಯಾಯಾಧೀಶರಾದ ಹೇಮಂತ್‌ ಗುಪ್ತಾ ಹಾಗೂ ನ್ಯಾ. ಸುಧಾಂಶು ಧುಲಿಯಾ ತದ್ವಿರುದ್ಧ ತೀರ್ಪು ನೀಡಿದ್ದಾರೆ.   ಐಶಾತ್‌ ಶಿಫಾ ವಿರುದ್ಧ ಸ್ಟೇಟ್‌ ಆಫ್‌ ಕರ್ನಾಟಕ ಪ್ರಕರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಹೋಗುವಂತಿಲ್ಲ [&#8230;]]]></description>
										<content:encoded><![CDATA[
<p style="font-size:20px">ದೆಹಲಿ : ರಾಜ್ಯ ಮತ್ತು ದೇಶದಲ್ಲಿ ತಿಂಗಳುಗಳ ಕಾಲ ವಿವಾದ ಎಬ್ಬಿಸಿದ್ದ ಹಿಜಾಬ್‌ ಪ್ರಕರಣ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪು ನೀಡಿದೆ. ಅರ್ಜಿದಾರರ ಪರ-ವಿರೋಧ ವಾದಗಳನ್ನು ಆಲಿಸಿದ ನಂತರ ಈ ತೀರ್ಪು ಹೊರಬಿದ್ದಿದೆ. ಆದರೆ ಈಗ ಬಂದಿರುವ ತೀರ್ಪು ಒಮ್ಮತವಿಲ್ಲದ ತೀರ್ಪಾಗಿದ್ದು ನ್ಯಾಯಾಧೀಶರಾದ ಹೇಮಂತ್‌ ಗುಪ್ತಾ ಹಾಗೂ ನ್ಯಾ. ಸುಧಾಂಶು ಧುಲಿಯಾ ತದ್ವಿರುದ್ಧ ತೀರ್ಪು ನೀಡಿದ್ದಾರೆ.  </p>



<p style="font-size:20px">ಐಶಾತ್‌ ಶಿಫಾ ವಿರುದ್ಧ ಸ್ಟೇಟ್‌ ಆಫ್‌ ಕರ್ನಾಟಕ ಪ್ರಕರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಹೋಗುವಂತಿಲ್ಲ ಎಂಬ ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ ಪ್ರಕರಣ ಇದಾಗಿದೆ.</p>



<p style="font-size:20px">ಇಂದಿನ ತೀರ್ಪಿನಲ್ಲಿ ಪೀಠದ ಮುಖ್ಯಸ್ಥ ನ್ಯಾ.ಹೇಮಂತ್‌ ಗುಪ್ತಾ ಅವರು ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದರೆ ನ್ಯಾ.ಸುಧಾಂಶು ಧುಲಿಯಾ ಕರ್ನಾಟಕ ಸರ್ಕಾರದ ಆದೇಶವನ್ನು ತಳ್ಳಿ ಹಾಕಿದರು. ಹೀಗೆ ತದ್ವಿರುದ್ಧ ತೀರ್ಪು ಬಂದ ಕಾರಣ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸುವ ಸಾಧ್ಯತೆ ಎದುರಾಗಿದೆ.</p>



<p style="font-size:20px">ನ್ಯಾ.ಸುಧಾಂಶು ಧುಲಿಯಾರವರು ತಮ್ಮ ತೀರ್ಪಿನಲ್ಲಿ, “ಹೆಣ್ಣು ಮಕ್ಕಳು ಶಾಲೆಯ ಬಾಗಿಲುಗಳನ್ನು ತೆರೆದು ಒಳಹೋಗುವ ಮೊದಲು ಹಿಜಾಬ್‌ ತೆಗೆಯುವಂತೆ&nbsp; ಹೇಳುವುದು ಅವರ ಖಾಸಗಿತನದ ಮೇಲಿನ ಆಕ್ರಮಣವಾಗಿದೆ; ಅವರ ಗೌರವ ಘನತೆಯ ಮೇಲಿನ ದಾಳಿಯಾಗಿದೆ; ಅಂತಿಮವಾಗಿ ಅವರಿಗೆ ಜಾತ್ಯತೀತ ಶಿಕ್ಷಣದ ನಿರಾಕರಣೆಯಾಗಿದೆ; ಅಷ್ಟಲ್ಲದೆ ಸಂವಿಧಾನದ 19(1)(A̧) 21 ಮತ್ತು 25(1) ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ”ಎಂದು ಹೇಳಿದ್ದಾರೆ.</p>



<p style="font-size:20px">ನಮ್ಮ ಸಾಂವಿಧಾನಿಕ ಯೋಜನೆಯಲ್ಲಿ, ಹಿಜಾಬ್‌ಅನ್ನು ಧರಿಸುವುದು ಕೇವಲ ಆಯ್ಕೆಯ ವಿಷಯವಾಗಿರಬೇಕು. ಇದು ಅತ್ಯಗತ್ಯ ಧಾರ್ಮಿಕ ಆಚರಣೆಯ ವಿಷಯವಾಗಿರಬಹುದು ಅಥವಾ ಅಲ್ಲದಿರಬಹುದು ಆದರೆ ಇದು ಆತ್ಮಸಾಕ್ಷಿ, ನಂಬಿಕೆ ಮತ್ತು ಅಭಿವ್ಯಕ್ತಿಯ ವಿಷಯವಾಗಿದೆ&#8221; ಎಂದು ತಿಳಿಸಿದ್ದಾರೆ. ಕರ್ನಾಟಕದ ಹೈ ಕೋರ್ಟು ಈ ವಿಷಯದಲ್ಲಿ ಹಿಜಾಬ್‌ ನ ಧಾರ್ಮಿಕ ಅಗತ್ಯತೆಯ ಕುರಿತು ಪರಿಶೀಲನೆಗೆ ತೊಡಗಿದ್ದು ಪ್ರಕರಣವನ್ನು ತಪ್ಪು ದಾರಿಗೆ ಎಳೆದಿದೆ’ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.</p>



<p style="font-size:20px">‘ಒಬ್ಬ ಹೆಣ್ಣು ಮಗಳು ತನ್ನ ಆಯ್ಕೆಯಿಂದ ತರಗತಿಯ ಒಳಗೂ ಹಿಜಾಬ್ ಧರಿಸಲು ಬಯಸಿದರೆ, ಅವಳನ್ನು ನಿಲ್ಲಿಸಲಾಗುವುದಿಲ್ಲ. ಏಕೆಂದರೆ ಆಕೆಯ ಸಂಪ್ರದಾಯವಾದಿ ಕುಟುಂಬವು ಅವಳನ್ನು ಶಾಲೆಗೆ ಹೋಗಲು ಅನುಮತಿ ನೀಡಬೇಕಾದರೆ ಹಿಜಾಬ್‌ ಧರಿಸುವುದೇ ಅವಳ ಏಕೈಕ ಮಾರ್ಗವಾಗಿರುತ್ತದೆ. ಶಿಕ್ಷಣದಲ್ಲಿ ಹಿಜಾಬ್‌ ಅನ್ನುವ ವಿಷಯ ಅವಳ ಆಯ್ಕೆಯ ವಿಷಯವಾಗಿರುತ್ತದೆ’ ಎಂದು ನ್ಯಾ.ಸುಧಾಂಶುರವರು ಹೆಣ್ಣು ಮಕ್ಕಳ ಪರಿಸ್ಥಿತಿಗಳನ್ನು ಮುಂದಿಟ್ಟು ತಮ್ಮ ನಿಲುವು ದಾಖಲಿಸಿದ್ದಾರೆ.</p>



<p style="font-size:20px">&#8220;ನನ್ನ ದೃಷ್ಟಿಯಲ್ಲಿ ಅತ್ಯಂತ ಮುಖ್ಯವಾದ ವಿಷಯ ಏನಾಗಿತ್ತೆಂದರೆ ಒಬ್ಬ ಹೆಣ್ಣು ಮಗುವಿನ ಶಿಕ್ಷಣ. ಒಬ್ಬ ಹೆಣ್ಣು ಮಗಳು ಅನೇಕ ಕಡೆಗಳಲ್ಲಿ ಅದರಲ್ಲೂ ಹಳ್ಳಿ ಮತ್ತು ಸಣ್ಣ ಪಟ್ಟಣಗಳಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾಳೆ. ಆಕೆ ಶಾಲೆಗೆ ಹೋಗುವ ಮೊದಲು ಪಾತ್ರೆ ತೊಳೆದು ಬಟ್ಟೆ ಒಗೆದು ಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಬೇಕೀರುತ್ತದೆ. ಹೀಗಿರುವಾಗ ಹಿಜಾಬ್‌ ನಿಷೇಧಿಸಿ ನಾವು ಆಕೆಯ ಜೀವನವನ್ನು ಉತ್ತಮಗೊಳಿಸುತ್ತಿದ್ದೇವೆಯೇ?” ಎಂಬ ಪ್ರಶ್ನೆಯನ್ನು ನ್ಯಾ. ಧುಲಿಯಾ ಅವರು ತಮಗೆ ತಾವೇ ಕೇಳಿಕೊಂಡಿದ್ದಾಗಿ ತಿಳಿಸಿದ್ದಾರೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="ತುಳುನಾಡ ಮುಸ್ಲಿಂ ದೈವಗಳ ಬಗ್ಗೆ ನಿಮಗೆ ಗೊತ್ತಾ? || MUSLIM GODS IN TULUNAADU ||" width="696" height="392" src="https://www.youtube.com/embed/La0VmNet_tw?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>
</div></figure>
]]></content:encoded>
					
		
		
			</item>
		<item>
		<title>ಮತ್ತಷ್ಟು ಜಟಿಲಗೊಂಡ ಹಿಜಾಬ್ ತೀರ್ಪು; ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಸಾಧ್ಯತೆ</title>
		<link>https://peepalmedia.com/further-complicating-matters-is-the-hijab-ruling-transfer-to-three-judge-bench/</link>
		
		<dc:creator><![CDATA[Peepal Media]]></dc:creator>
		<pubDate>Thu, 13 Oct 2022 05:44:14 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[hijab]]></category>
		<category><![CDATA[india]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=10406</guid>

					<description><![CDATA[ನ್ಯಾ.ಹೇಮಂತ್ ಗುಪ್ತಾ ಮತ್ತು ನ್ಯಾ.ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ದರಿಸುವ ಬಗೆಗಿನ ಮನವಿ ಪ್ರಕರಣದಲ್ಲಿ ಎರಡು ಪ್ರತ್ಯೇಕ ಮತ್ತು ವ್ಯತಿರಿಕ್ತ ತೀರ್ಪನ್ನು ಕೊಟ್ಟಿದ್ದಾರೆ. ಈ ಕಾರಣ ಹಿಜಾಬ್ ವಿವಾದದ ಕುರಿತಾದ ತೀರ್ಪು ಮತ್ತಷ್ಟು ಜಟಿಲಗೊಂಡಿದೆ. ಇನ್ನೇನು ಅ.16 ಕ್ಕೆ ನಿವೃತ್ತಿ ಆಗಲಿರುವ ನ್ಯಾ.ಹೇಮಂತ್ ಗುಪ್ತಾ ಮತ್ತು ಸುದಾಂಶು ಧುಲಿಯಾ ಅವರ ಪ್ರತ್ಯೇಕ ತೀರ್ಪುಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನ ಪರ ಮತ್ತು ವಿರುದ್ಧವಾದ ಎರಡೂ ರೀತಿಯ ತೀರ್ಪು ಪ್ರಕಟವಾಗಿದೆ. [&#8230;]]]></description>
										<content:encoded><![CDATA[
<p style="font-size:20px">ನ್ಯಾ.ಹೇಮಂತ್ ಗುಪ್ತಾ ಮತ್ತು ನ್ಯಾ.ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಇಂದು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ದರಿಸುವ ಬಗೆಗಿನ ಮನವಿ ಪ್ರಕರಣದಲ್ಲಿ ಎರಡು ಪ್ರತ್ಯೇಕ ಮತ್ತು ವ್ಯತಿರಿಕ್ತ ತೀರ್ಪನ್ನು ಕೊಟ್ಟಿದ್ದಾರೆ. ಈ ಕಾರಣ ಹಿಜಾಬ್ ವಿವಾದದ ಕುರಿತಾದ ತೀರ್ಪು ಮತ್ತಷ್ಟು ಜಟಿಲಗೊಂಡಿದೆ.</p>



<p style="font-size:20px">ಇನ್ನೇನು ಅ.16 ಕ್ಕೆ ನಿವೃತ್ತಿ ಆಗಲಿರುವ ನ್ಯಾ.ಹೇಮಂತ್ ಗುಪ್ತಾ ಮತ್ತು ಸುದಾಂಶು ಧುಲಿಯಾ ಅವರ ಪ್ರತ್ಯೇಕ ತೀರ್ಪುಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನ ಪರ ಮತ್ತು ವಿರುದ್ಧವಾದ ಎರಡೂ ರೀತಿಯ ತೀರ್ಪು ಪ್ರಕಟವಾಗಿದೆ. ಅದರಲ್ಲಿ ನ್ಯಾ.ಹೇಮಂತ್ ಗುಪ್ತಾ ಹಿಜಾಬ್ ವಿರುದ್ಧದ ತೀರ್ಪು ನೀಡಿದರೆ, ನ್ಯಾ.ಸುದಾಂಶು ಧುಲಿಯಾ ಹಿಜಾಬ್ ಪರವಾಗಿ ತೀರ್ಪು ನೀಡಿದ್ದಾರೆ. ಆ ಮೂಲಕ ಸುದಾಂಶು ಧುಲಿಯಾ ಪ್ರಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಬಹುದು ಎಂಬುದಾಗಿ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ತೀರ್ಪು ನೀಡಿದ್ದಾರೆ</p>



<p style="font-size:20px">ಆ ಮೂಲಕ ಹಿಜಾಬ್ ತೀರ್ಪು ಈಗ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆ ಆಗಿದೆ. ಇಲ್ಲಿಯವರೆಗೆ ನಡೆದ ವಾದ ಪ್ರತಿವಾದದಲ್ಲಿ ಅರ್ಜಿದಾರರ ಪರವಾಗಿ ಸಂಜಯ್ ಹೆಗ್ಡೆ, ರಾಜೀವ್ ಧವನ್, ದುಶ್ಯಂತ್ ದವೆ, ಯೂಸುಫ್ ಮುಚ್ಚಲ, ಎಂ ಆರ್ ಶಂಶದ್, ಸಲ್ಮಾನ್ ಖುರ್ಷೀದ್, ನಿಜಾಂ ಪಾಷಾ, ಪ್ರಶಾಂತ್ ಭೂಷಣ್, ದೇವದತ್ ಕಾಮತ್, ಶೋಯೆಬ್ ಆಲಂ ಹಾಗೂ ವಕೀಲೆ ವಿ ಮೋಹನಾ ವಾದ ಮಂಡಿಸಿದ್ದರು. ಕರ್ನಾಟಕ ಸರ್ಕಾರದ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಹಾಗೂ ಕರ್ನಾಟಕ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದರು.</p>



<p style="font-size:20px">ಸಧ್ಯ ಪ್ರಕರಣ ಸಿಜೆಐ ಗೆ ವರ್ಗಾವಣೆ ಆದ ಬೆನ್ನಲ್ಲೇ ಸಿಜೆಐ ಅವರು ಹಿಜಾಬ್ ವಿಚಾರಣೆ ಸಂಬಂಧ ಮೂವರು ನ್ಯಾಯಮೂರ್ತಿಗಳ ತ್ರಿಸದಸ್ಯ ಪೀಠ ರಚಿಸಬೇಕು ಎಂದು ತೀರ್ಪಿನಲ್ಲಿ ಕೋರಿದ್ದಾರೆ.</p>
]]></content:encoded>
					
		
		
			</item>
	</channel>
</rss>
