<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>hinduthva &#8211; Peepal Media</title>
	<atom:link href="https://peepalmedia.com/tag/hinduthva/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 06 Feb 2024 03:40:43 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>hinduthva &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಹಿಂದುತ್ವ ರಾಜಕಾರಣದ ಕಥೆ &#8211; 6 : ಸ್ವಾತಂತ್ರ್ಯ ಹೋರಾಟದ ದುರಭಿಮಾನಿ ಕೊ*ಲೆಗಳು</title>
		<link>https://peepalmedia.com/the-fanatical-murders-of-the-freedom-struggle/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 06 Feb 2024 03:32:52 +0000</pubDate>
				<category><![CDATA[ಅಂಕಣ]]></category>
		<category><![CDATA[hinduthva]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Sunaif]]></category>
		<guid isPermaLink="false">https://peepalmedia.com/?p=35613</guid>

					<description><![CDATA[ರಾನ್ಡ್ ಮತ್ತು ಅಯೆರ್ಸ್ಟ್‌ನ ಕೊಲೆಗಳನ್ನು ಸಾಮಾನ್ಯವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿಯೇ ಪರಿಗಣಿಸಲಾಗುತ್ತದೆ. ಅದು ಬ್ರಿಟಿಷ್‌ ವಿರೋಧದ ಕ್ರಿಯೆ ಆಗಿದ್ದರೂ, ಅದಕ್ಕಿಂತ ಮಿಗಿಲಾಗಿ ಬ್ರಾಹ್ಮಣ ಅಭಿಮಾನವನ್ನು ಸಂರಕ್ಷಿಸುವ ಶ್ರಮವೂ ಆಗಿತ್ತೆಂಬುದನ್ನು ಈ ಹೇಳಿಕೆ ನಿಸ್ಸಂಶಯವಾಗಿ ಸಾಬೀತು ಪಡಿಸುತ್ತದೆ. ಪ್ಲೇಗ್‌ ವೈರಸ್‌ ಜೊತೆಗಿನ ಹೋರಾಟವನ್ನು ಅವರು ಯಾವ ರೀತಿಯಲ್ಲೂ ಯಥಾವತ್ತಾಗಿ ಕಾಣಲೇ ಇಲ್ಲ. ಬದಲಿಗೆ ಬ್ರಾಹ್ಮಣರ ಜೀವನ ಪದ್ದತಿಯ ಮೇಲೆ ಮ್ಲೇಚ್ಛರ ಆಕ್ರಮಣವಾಗಿಯೇ ಅವರು ಅದನ್ನು ಕಂಡರು. ಆದ್ದರಿಂದಲೇ ರಾನ್ಡ್‌ ಮತ್ತು ಅಯೆರ್ಸ್ಟ್‌ನ ಹತ್ಯೆಗಳು ದುರಭಿಮಾನದ ಕೊಲೆಗಳಾಗಿದ್ದವು. ಇದನ್ನು [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ರಾನ್ಡ್ ಮತ್ತು ಅಯೆರ್ಸ್ಟ್‌ನ ಕೊಲೆಗಳನ್ನು ಸಾಮಾನ್ಯವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿಯೇ ಪರಿಗಣಿಸಲಾಗುತ್ತದೆ. ಅದು ಬ್ರಿಟಿಷ್‌ ವಿರೋಧದ ಕ್ರಿಯೆ ಆಗಿದ್ದರೂ, ಅದಕ್ಕಿಂತ ಮಿಗಿಲಾಗಿ ಬ್ರಾಹ್ಮಣ ಅಭಿಮಾನವನ್ನು ಸಂರಕ್ಷಿಸುವ ಶ್ರಮವೂ ಆಗಿತ್ತೆಂಬುದನ್ನು ಈ ಹೇಳಿಕೆ ನಿಸ್ಸಂಶಯವಾಗಿ ಸಾಬೀತು ಪಡಿಸುತ್ತದೆ. ಪ್ಲೇಗ್‌ ವೈರಸ್‌ ಜೊತೆಗಿನ ಹೋರಾಟವನ್ನು ಅವರು ಯಾವ ರೀತಿಯಲ್ಲೂ ಯಥಾವತ್ತಾಗಿ ಕಾಣಲೇ ಇಲ್ಲ. ಬದಲಿಗೆ ಬ್ರಾಹ್ಮಣರ ಜೀವನ ಪದ್ದತಿಯ ಮೇಲೆ ಮ್ಲೇಚ್ಛರ ಆಕ್ರಮಣವಾಗಿಯೇ ಅವರು ಅದನ್ನು ಕಂಡರು. ಆದ್ದರಿಂದಲೇ ರಾನ್ಡ್‌ ಮತ್ತು ಅಯೆರ್ಸ್ಟ್‌ನ ಹತ್ಯೆಗಳು ದುರಭಿಮಾನದ ಕೊಲೆಗಳಾಗಿದ್ದವು. ಇದನ್ನು ಇನ್ನಷ್ಟು ಅರ್ಥಮಾಡಿಕೊಳ್ಳಬೇಕೆಂದರೆ ಚಾಪೇಕರ್‌ ಸಹೋದರರ ಕುರಿತು ಇನ್ನೂ ಕೆಲವು ಮಾಹಿತಿಗಳನ್ನು ನಾವು ತಿಳಿದುಕೊಳ್ಳಬೇಕು.</p>
</blockquote>



<p>ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ (೧೮೯೬) ಬ್ಯುಬೋನಿಕ್‌ ಪ್ಲೇಗಿನ ಕಗ್ಗತ್ತಲ ಕಾಲ ಬಾಂಬೆ ಪ್ರೆಸಿಡೆನ್ಸಿಯಲ್ಲಿ ತಾಂಡವಾಡಿದ ಇತಿಹಾಸವನ್ನು ನಾವು ಈಗಾಗಲೇ ಚರ್ಚಿಸಿದೆವು. ಬ್ರಿಟಿಷರ ಮಟ್ಟಿಗೆ ಅವರ ವ್ಯಾಪಾರ ಸಾಮ್ರಾಜ್ಯದಲ್ಲಿ ಬಾಂಬೆ ಅದಾಗಲೇ ಪ್ರಧಾನ ಸ್ಥಾನವನ್ನು ಅಲಂಕರಿಸಿಕೊಂಡಾಗಿತ್ತು. ಆದ್ದರಿಂದಲೇ ಬಾಂಬೆ ಪ್ರೆಸಿಡೆನ್ಸಿಯಲ್ಲಿ ಪ್ಲೇಗ್‌ ಮಹಾಮಾರಿಯನ್ನು ತಡೆಗಟ್ಟುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯ ಜೊತೆಗೆ ಅವರ ಆರ್ಥಿಕತೆಯ ದೃಷ್ಟಿಯಿಂದಲೂ ಅತ್ಯಗತ್ಯವಾದ ಸಂಗತಿಯಾಗಿತ್ತು. ಸಾಮಾನ್ಯವಾಗಿ ತಿಲಕರ ತೀವ್ರವಾದಿ ಬ್ರಾಹ್ಮಣಿಸಂ ಎಂದು ಕರೆಯಲ್ಪಡುವ ಸಂಪ್ರದಾಯವಾದಿ ಬ್ರಾಹ್ಮಣರ ಭೂಕಂಪನ ಕೇಂದ್ರವೆಂದು ಗುರುತಿಸಲ್ಪಟ್ಟಿದ್ದ ಪುಣೆಯಲ್ಲೂ ಪ್ಲೇಗ್‌ ಅತ್ಯಂತ ವೇಗವಾಗಿ ಹರಡಿದ್ದನ್ನು ಮತ್ತು ಅದನ್ನು ನಿಯಂತ್ರಿಸಲು ಚಾರ್ಲ್ಸ್‌ ರಾನ್ಡ್‌ ಎಂಬ ಅಧಿಕಾರಿಯನ್ನು ನೇಮಿಸಿದ್ದನ್ನು ನಾವು ಈಗಾಗಲೆ ನೋಡಿದೆವು. ಪ್ಲೇಗ್‌ ತಡೆಗಟ್ಟಲು ೧೮೯೭ರಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಕಾನೂನು ಜಾರಿಗೆ ಬಂದಿತು. (ಇದೇ ಕಾನೂನನ್ನು ಬಳಸಿಕೊಂಡು ಕೋವಿಡ್‌ ಆರಂಭದ ದಿನಗಳಲ್ಲಿ ಲಾಕ್‌ಡೌನ್‌ ಸಹಿತ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು.)</p>



<p>ಪುಣೆಯ ಬ್ರಾಹ್ಮಣ ಸಮುದಾಯ, ಅದರಲ್ಲೂ ಸಂಪ್ರದಾಯವಾದಿ ಚಿತ್ಪಾವನ ಬ್ರಾಹ್ಮಣರು ರಾನ್ಡ್‌ನ ನೇಮಕ ಮತ್ತು ಆತನ ಕ್ವಾರೆಂಟೈನ್‌ ಪದ್ಧತಿಗಳನ್ನು ಶತೃತ್ವ ಮನೋಭಾವದಿಂದಲೇ ಕಂಡರು. ಬ್ರಿಟಿಷ್‌ ಸಾಮ್ರಾಜ್ಯಶಾಹಿ ಸ್ವದೇಶಿಯರ ಮೇಲೆ ನಡೆಸುತ್ತಿದ್ದ ಅಧಿಕಾರ ದರ್ಪ ಮತ್ತು ರಾಜಕೀಯ ಮೇಲುಗೈಯ ಮುಂದುವರಿಕೆಯಾಗಿಯೇ ಅವರು ರೋಗ ತಡೆಗಟ್ಟುವ ಕ್ರಮಗಳನ್ನೂ ಲೆಕ್ಕಿಸಿದರು. ಆದ್ದರಿಂದಲೇ ಪ್ಲೇಗ್‌ ಬಾಧಿತರ ಮಾಹಿತಿಯನ್ನು ಸ್ಪೆಷಲ್‌ ಪ್ಲೇಗ್‌ ಕಮಿಟಿ (ಎಸ್.ಪಿ.ಸಿ)ಗೆ ನೀಡಲಾಗಲೀ ರೋಗಿಗಳನ್ನು ಆರೋಗ್ಯ ಕೇಂದ್ರಗಳಿಗೆ ತಲುಪಿಸಲಾಗಲೀ ಅವರು ಮುಂದಾಗಲಿಲ್ಲ. ಬದಲಿಗೆ ಗೌಪ್ಯವಾಗಿ ಮನೆಗಳಲ್ಲಿಯೇ ಇರಿಸಿಕೊಂಡು ನಾಟಿ ಚಿಕಿತ್ಸಾ ಪದ್ದತಿಗಳ ಮೂಲಕ ಗುಣಪಡಿಸಲು ಪ್ರಯತ್ನಿಸಿದರು.</p>



<p>ಇದನ್ನರಿತ ರಾನ್ಡ್‌ ಮತ್ತು ತಂಡ ಮನೆ ಮನೆಗಳಿಗೆ ಹತ್ತಿಳಿದು ಪರೀಶೋಧನೆ ನಡೆಸಲಾರಂಭಿಸಿದರು. ರೋಗಿಗಳನ್ನು ಕಂಡರೆ ಅವರ ವಿರೋಧವನ್ನು ಲೆಕ್ಕಿಸದೆ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಿದರು. ಪ್ಲೇಗ್‌ ಹರಡುವಿಕೆ ತಡೆಗಟ್ಟಲು ಅತ್ಯಗತ್ಯ ಕ್ರಮವಾಗಿದ್ದ ಕ್ರಿಮಿನಾಶದ ಭಾಗವಾಗಿ ರೋಗಿಗಳ ಬಟ್ಟೆಗಳು, ಹಾಸಿಗೆ ಮತ್ತು ಬಳಸುತ್ತಿದ್ದ ವಸ್ತುಗಳಿಗೆ ಬೆಂಕಿಯಿಟ್ಟು ಸುಟ್ಟರು. ಆ ವಸ್ತುಗಳಲ್ಲಿ ಸಹಜವಾಗಿಯೇ ಧಾರ್ಮಿಕ ಗ್ರಂಥಗಳೂ ಇದ್ದವು.</p>



<figure class="wp-block-image size-large"><img fetchpriority="high" decoding="async" width="1024" height="568" src="https://peepalmedia.com/wp-content/uploads/2024/02/IMG-20240205-WA0013-1024x568.jpg" alt="" class="wp-image-35616" srcset="https://peepalmedia.com/wp-content/uploads/2024/02/IMG-20240205-WA0013-1024x568.jpg 1024w, https://peepalmedia.com/wp-content/uploads/2024/02/IMG-20240205-WA0013-300x166.jpg 300w, https://peepalmedia.com/wp-content/uploads/2024/02/IMG-20240205-WA0013-768x426.jpg 768w, https://peepalmedia.com/wp-content/uploads/2024/02/IMG-20240205-WA0013-150x83.jpg 150w, https://peepalmedia.com/wp-content/uploads/2024/02/IMG-20240205-WA0013-696x386.jpg 696w, https://peepalmedia.com/wp-content/uploads/2024/02/IMG-20240205-WA0013.jpg 1038w" sizes="(max-width: 1024px) 100vw, 1024px" /></figure>



<p>ರಾನ್ಡ್‌ನ ಚಟುವಟಿಕೆಗಳನ್ನು ಎಂದಿನಂತೆ ಧರ್ಮದ ಮೇಲಿನ, ಬ್ರಾಹ್ಮಣರ ಆಚಾರ ವಿಚಾರ ಮತ್ತು ಜೀವನಶೈಲಿಯ ಮೇಲಿನ ದಾಳಿಯಾಗಿ ಚಿತ್ರೀಕರಿಸಲು ತಿಲಕರ ನೇತೃತ್ವದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸ್ಟರು ತೊಡಗಿದರು. ಮನೆಯೊಳಗಿನ ದೇವರ ಕೋಣೆಗಳಿಗೆ ಮತ್ತು ಮಹಿಳೆಯರ ಕೋಣೆಗಳಿಗೆ ʼಮ್ಲೇಚ್ಛರುʼ ಹತ್ತಿಳಿಯುವುದನ್ನು ಇನ್ನಿಲ್ಲದಂತೆ ಪ್ರಚಾರ ಮಾಡಲಾಯಿತು. <em>ಕೇಸರಿ</em>ಯ ಮೂಲಕ ತಿಲಕ್‌ ರಾನ್ಡ್‌ನ ಮೇಲೆ ತೀವ್ರ ದಾಳಿ ಮಾಡಿದರು. <em>ಪುಣಾವೈಭವ್</em> ತರಹದ ತಿಲಕರ ಪ್ರಭಾವದಲ್ಲಿದ್ದ ಪತ್ರಿಕೆಗಳು ರಾನ್ಡ್‌ ಮತ್ತು ಬ್ರಿಟಿಷ್‌ ಸರಕಾರದ ವಿರುದ್ಧ ಆಕ್ರಮಣಕಾರಿಯಾಗಿ ಬರೆಯಲು ಶುರು ಮಾಡಿದವು. ʼರಾನ್ಡ್‌ನಂತಹ ಸಂಶಯಾಸ್ಪದ, ಕಪ್ಪು ಮನಸ್ಸಿನ, ದಮನ ಮನೋಭಾವದ ವ್ಯಕ್ತಿಯನ್ನು ಈ ನಿಯಮ (೧೮೯೭ರ ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ನಿಯಮ) ಜಾರಿಗೊಳಿಸಲು ನಿಯೋಜಿಸಬಾರದಾಗಿತ್ತು.ʼ ಎಂದು ತಿಲಕರು ಬರೆದರು.</p>



<p>ಹೀಗೆ ತಿಲಕರ ನೇತೃತ್ವದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸ್ಟುಗಳು ರಾನ್ಡ್‌ ವಿರುದ್ಧವಾಗಿ ಜನರ ಭಾವನೆಯನ್ನು ಎತ್ತಿಕಟ್ಟುತ್ತಿದ್ದ ಹೊತ್ತಲ್ಲೇ, ೧೮೯೭ರ ಜೂನ್ ೨೨ರಂದು ವಿಕ್ಟೋರಿಯಾ ರಾಣಿಯ ಕೀರೀಟಧಾರಣೆಯ ಡೈಮಂಡ್‌ ಜ್ಯುಬಿಲಿ ಪುಣೆಯ ಗಣೇಶ್‌ ಕಿಂಡಿಯಲ್ಲಿರುವ ಗವರ್ನ್‌ಮೆಂಟ್‌ ಹೌಸಿನಲ್ಲಿ ನಡೆಯುತ್ತದೆ. ಬ್ರಿಟಿಷ್‌ ಇಂಡಿಯಾದ ಪರಮಾಧಿಕಾರಿಯೂ ಆಗಿದ್ದ ರಾಣಿಯ ಕುರಿತು ನಡೆಯುವ ಕಾರ್ಯಕ್ರಮದಲ್ಲಿ ಸಿಡಿಮದ್ದು ಪ್ರದರ್ಶನವನ್ನೆಲ್ಲ ಆಯೋಜಿಸಲಾಗಿತ್ತು. ಕಣ್ಣು ಕೋರೈಸುವ ಆ ಉತ್ಸವವನ್ನು ಕಣ್ತುಂಬಿಕೊಳ್ಳಲು ಊರ ಜನರೂ ನೆರೆದಿದ್ದರು. ಕಾರ್ಯಕ್ರಮಗಳ ನಂತರ ಮರಳಿ ಬರುತ್ತಿದ್ದ ರಾನ್ಡ್‌ನ ಕುದುರೆ ಗಾಡಿಯ ಮೇಲೆ ಕತ್ತಲ ಮರೆಯಿಂದ ಒಬ್ಬ ವ್ಯಕ್ತಿ ದಾಳಿ ಮಾಡುತ್ತಾನೆ. ರಾನ್ಡ್‌ನ ಗಾಡಿ ಬರುವುದನ್ನು ಕಂಡ ಒಬ್ಬಾತ ʼಗೋಂಡಿಯಾ ಆಲಾ ರೇ ಆಲಾʼ (ನಮ್ಮ ಗುರಿ ಇದೋ ಬಂದು ಬಿಟ್ಟಿತು) ಎಂಬ ಸೂಚನೆಯನ್ನು ಕೂಗಿದ ನಂತರ ಆ ವ್ಯಕ್ತಿ ಓಡಿ ಬಂದು ಗಾಡಿಯೊಳಗೆ ಹತ್ತಿಕೊಂಡಿದ್ದ. ಅದರ ಜೊತೆಗೆ ರಾನ್ಡ್‌ನ ಅಂಗ ರಕ್ಷಕನಾಗಿದ್ದ ಅಯೆರ್ಸ್ಟ್‌ನ ಗಾಡಿಯ ಮೇಲೂ ಇನ್ನೊಬ್ಬ ಹತ್ತಿಕೊಂಡಿದ್ದ. ಅವರು ರಾನ್ಡ್‌ ಮತ್ತು ಅಯೆರ್ಸ್ಟ್‌ನ ಮೇಲೆ ಗುಂಡಿನ ದಾಳಿ ಮಾಡಿದರು. ಅಯೆರ್ಸ್ಟ್‌ ಸ್ಥಳದಲ್ಲೇ ಸಾವನ್ನಪ್ಪಿದ. ರಾನ್ಡ್‌ನನ್ನು ಸಸೂನ್‌ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಲು ಪ್ರಯತ್ನಿಸಿದರಾದರೂ ೧೮೯೭ರ ಜುಲೈ ೩ರಂದು ಆತನೂ ಮರಣವನ್ನಪ್ಪಿದ.</p>



<p>ಬಾಂಬೆ ಸರಕಾರ ಸ್ಟೇಟ್‌ ಸೆಕ್ರೆಟರಿಗೆ ಕಳುಹಿಸಿದ ವರದಿಯಲ್ಲಿ ಈ ಕೊಲೆಗಳಿಗೆ ಸಾಕ್ಷಿಯಾಗಿದ್ದ ಅಯೆರ್ಸ್ಟ್‌ನ ಪತ್ನಿಯ ಹೇಳಿಕೆಯನ್ನು ಈ ರೀತಿಯಾಗಿ ದಾಖಲಿಸಲಾಗಿದೆ:</p>



<p>‌ʼ(ಗವರ್ನ್‌ಮೆಂಟ್ ಹೌಸಿನ) ಗೇಟಿನಿಂದ ಸುಮಾರು ಆರುನೂರು ಗಜ ದಾಟಿದ ನಂತರ ನಮ್ಮ ಗಾಡಿಯ ಮುಂದಿನಿಂದ ಹೋಗುತ್ತಿದ್ದ ಗಾಡಿಯ ಹಿಂದೆ ಒಬ್ಬ ಸ್ವದೇಶಿ ಕುಳಿತಿರುವುದಾಗಿ ಮಿಸೆಸ್‌ ಅಯೆರ್ಸ್ಟ್‌ ಗಮನಿಸುತ್ತಾರೆ. ಮಿಂಚಿನಂತ ಬೆಳಕು ಮತ್ತು ದೊಡ್ಡ ಸದ್ದು ಅವರ ಗಮನಕ್ಕೆ ಬರುತ್ತದೆ. ಸ್ವದೇಶಿ ಗಾಡಿಯಿಂದ ಇಳಿದು ರಸ್ತೆಯ ಮೂಲಕ ಬಲಭಾಗದ ಬಯಲಿನ ಕಡೆಗೆ ಓಡಿ ಹೋಗುವುದನ್ನೂ ಅವರು ಕಂಡರು. ಆತ ಪಟಾಕಿ ಸಿಡಿಸಿ ತಮಾಶೆ ಮಾಡುತ್ತಿದ್ದಾನೆಂದು ಅವರು ಮೊದಲಿಗೆ ಭಾವಿಸಿದರು. ಆ ಸಂಗತಿಯನ್ನು ತನ್ನ ಪತಿಯೊಂದಿಗೆ ಕೂಡ ಹೇಳಿಕೊಂಡರು. ಮಿಂಚು ಮತ್ತು ಸದ್ದು ರಾನ್ಡ್‌ನ (ಮುಂದಿನ ಗಾಡಿಯ) ಕುದುರೆಯನ್ನು ಭಯಗೊಳಿಸಿದ ಕಾರಣ ಅದು ಬಲಭಾಗಕ್ಕೆ ತಿರುಗಿಕೊಂಡಿತು. ಅವರು ತಮ್ಮ ಗಾಡಿಯ ಹಿಂದಿನಿಂದಲೂ ಅಂತಹದ್ದೇ ದೊಡ್ಡ ಸದ್ದನ್ನು ಕೇಳಿಸಿಕೊಂಡರು. ಆಕೆಯ ಪತಿ ʼಓ ಭಗವಂತಾ ನನ್ನನ್ನು ಕೊಲ್ಲುತ್ತಿದ್ದಾರೆʼ ಎಂದು ಹೇಳುತ್ತಾ ಉರುಳಿ ಬಿದ್ದರು.ʼ</p>



<p>ಕೊಲೆಗಾರರ ಬಗ್ಗೆ ಮಾಹಿತಿ ಸಿಗದಿದ್ದರೂ ಈ ವರದಿಯಲ್ಲಿ ಸಾರ್ವಜನಿಕರನ್ನು ರಾನ್ಡ್‌ ವಿರುದ್ಧವಾಗಿ ಎತ್ತಿಕಟ್ಟಲು ತಿಲಕರ <em>ಕೇಸರಿ</em> ಮತ್ತು <em>ಪೂಣಾ ವೈಭವ್‌</em> ತರಹದ ಪತ್ರಿಕೆಗಳು ಪ್ರಯತ್ನಿಸುತ್ತಿದ್ದನ್ನು ಎತ್ತಿ ತೋರಿಸಿತು. ʼಪೂನಾ ಬ್ರಾಹ್ಮಣರುʼ ಇದರ ಹಿಂದೆ ಇರಬಹುದೆಂಬದನ್ನೂ ಆ ವರದಿ ಸೂಚಿಸಿತ್ತು. ಜೊತೆಗೆ ಕೊಲೆಗಾರರ ಬಗ್ಗೆ ಮಾಹಿತಿ ನೀಡುವವರಿಗೆ ಆ ಕಾಲದ ದೊಡ್ಡ ಮೊತ್ತವಾದ ೨೦೦೦೦ ರೂಪಾಯಿಗಳನ್ನು ಇನಾಂ ಆಗಿ ಘೋಷಿಸಬೇಕೆಂದು ಸ್ಟೇಟ್‌ ಸೆಕ್ರೆಟರಿ ಬಳಿ ಕೋರಿಕೊಳ್ಳಲಾಗಿತ್ತು. ಆ ಪ್ರಕಾರ ಇನಾಂ ಕೊಡುವುದಾಗಿ ಸರಕಾರ ವಾಗ್ದಾನ ನೀಡುತ್ತದೆ.</p>



<figure class="wp-block-image size-full is-resized"><img decoding="async" width="688" height="383" src="https://peepalmedia.com/wp-content/uploads/2024/02/IMG-20240205-WA0014.jpg" alt="" class="wp-image-35617" style="width:379px;height:auto" srcset="https://peepalmedia.com/wp-content/uploads/2024/02/IMG-20240205-WA0014.jpg 688w, https://peepalmedia.com/wp-content/uploads/2024/02/IMG-20240205-WA0014-300x167.jpg 300w, https://peepalmedia.com/wp-content/uploads/2024/02/IMG-20240205-WA0014-150x84.jpg 150w" sizes="(max-width: 688px) 100vw, 688px" /></figure>



<p>ಈ ಕೇಸನ್ನು ಎತ್ತಿಕೊಂಡದ್ದು ಬಾಂಬೆ ಪೊಲೀಸ್ ಸೂಪರಿಡೆಂಟ್ ಆಗಿದ್ದ ಬ್ರೆವಿನ್‌ ಎಂಬ ಅಧಿಕಾರಿ. ಆ ಕಾಲದಲ್ಲಿ ದುರ್ಗುಣ ಪರಿಹಾರ ಕೇಂದ್ರದಲ್ಲಿದ್ದ ಗಣೇಶ್‌ ಶಂಕರ್‌ ದ್ರಾವಿಡ್‌ ಎಂಬ ಪೂಣಾ ಬ್ರಾಹ್ಮಣ ಯುವಕನಿಂದ ಈ ಕೊಲೆಯ ಕುರಿತು ಮಾಹಿತಿ ಪಡೆಯಲು ಸಾಧ್ಯವೆಂದು ಬ್ರೆವಿನ್‌ ಭಾವಿಸಿ ಆತನನ್ನು ಭೇಟಿಯಾಗುತ್ತಾನೆ. ೧೮೯೮ ಏಪ್ರಿಲ್‌ ೨೨ ರಂದು ಬಾಂಬೆ ಪೊಲೀಸ್‌ ಕಮೀಷನರ್‌ ಆಗಿದ್ದ ಆರ್.‌ಎಚ್. ವಿನ್ಸಂಟ್‌ಗೆ ಬ್ರೆವಿನ್‌ ನೀಡಿದ ವರದಿಯಲ್ಲಿ ಈ ಘಟನೆಗಳನ್ನು ಈ ರೀತಿಯಾಗಿ ವಿವರಿಸಲಾಗಿದೆ.</p>



<p>ʼಆತ (ಗಣೇಶ್‌ ಶಂಕರ್‌ ದ್ರಾವಿಡ್)‌ ನನ್ನ ತನಿಖೆಯಲ್ಲಿ ಆಶ್ಚರ್ಯ ಪಟ್ಟುಕೊಂಡು ಕೊಲೆ ನಡೆದ ರಾತ್ರಿಗಿಂತ ಎರಡು ವರ್ಷಗಳ ಹಿಂದಿನಿಂದ ಜೈಲಿನಲ್ಲಿ ಕಳೆಯುತ್ತಿರುವ ತಾನು ಈ ವಿಷಯದ ಕುರಿತು ಅರಿತಿರಲು ಹೇಗೆ ಸಾಧ್ಯ ಎಂದು ಮರುಪ್ರಶ್ನಿಸಿದ. ಆಗ ಆತನಿಂದ ನಾನು ಯಾವ ರೀತಿಯ ಸಹಾಯ ನಿರೀಕ್ಷಿಸುತ್ತಿದ್ದೇನೆಂದೂ ಆತ ನೀಡುವ ಮಾಹಿತಿಯಿಂದ ಏನಾದರು ಸುಳಿವು ನನಗೆ ಸಿಗುವುದೇ ಆಗಿದ್ದರೆ, ಪುಣೆಯ ಪೊಲೀಸ್‌ ಸೂಪರಿಡೆಂಟ್‌ ಮತ್ತು ಬಾಂಬೆಯ ಪೊಲೀಸ್‌ ಕಮೀಷನರ್‌ಗಳ ಮೂಲಕ ಸರಕಾರದಿಂದ ಆತನ ಶಿಕ್ಷೆಯನ್ನು ಪೂರ್ತಿಯಾಗಿ ರದ್ದುಗೊಳಿಸಲು ಕೇಳಿಕೊಳ್ಳುವುದಾಗಿಯೂ ಹೇಳಿದೆ. ಸರಕಾರ ಘೋಷಸಿದ ೨೦೦೦೦ ರೂಪಾಯಿಗಳ ಇನಾಂ ಕುರಿತು ಆತನಿಗೆ ತಿಳಿಸಿ, ಆತ ನೀಡುವ ಮಾಹಿತಿಯಿಂದ ಕೊಲೆಗಾರರ ಅರೆಸ್ಟ್‌ ಆಗುವುದಾಗಿದ್ದರೆ ಆ ಹಣವನ್ನು ಆತನಿಗೆ ನೀಡಲು ಬೇಕಾದ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ತಿಳಿಸಿದೆ. ಇದೆಲ್ಲವನ್ನು ಕೇಳಿಸಿಕೊಂಡ ದ್ರಾವಿಡ್‌ ನನ್ನ ಮನವಿಯ ಕುರಿತು ಯೋಚಿಸಲು ಸ್ವಲ್ಪ ಸಮಯ ಬೇಕೆಂದೂ ಕೆಲದಿನಗಳ ಒಳಗೆ ನನಗೆ ಉತ್ತರ ನೀಡುವುದಾಗಿಯೂ ಹೇಳಿದ. ಈ ಭೇಟಿಯ ನಂತರ ನಾನು ಪುಣೆಗೆ ಮರಳಿ ಬಂದು ಪುಣೆಯ ಪೊಲೀಸ್ ಸೂಪರಿಡೆಂಟ್‌ ಬಳಿ ದ್ರಾವಿಡ್‌ನನ್ನು ಯರವಾಡ ಜೈಲಿಗೆ ಸ್ಥಳಾಂತರಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಾಗಿ ಕೇಳಿಕೊಂಡೆ. ಅದೆಲ್ಲ ಮುಗಿದ ನಂತರ ನಾನು ದ್ರಾವಿಡ್‌ನನ್ನು ಯರವಾಡ ಜೈಲಿನಲ್ಲಿ ಹೋಗಿ ಭೇಟಿಯಾದೆ.ʼ</p>



<p>ಬ್ರೆವಿನ್‌ ನಿರೀಕ್ಷಿಸಿದಂತೆ ದ್ರಾವಿಡ್‌ ಈಗ ಅನುಕೂಲಕರ ಮನಸ್ಥಿತಿಯಲ್ಲಿದ್ದ. ಹೆಣ್ಣುಮಕ್ಕಳ ಮದುವೆ ಪ್ರಾಯವನ್ನು ಹೆಚ್ಚಿಸಿದ ಕಾನೂನಿಗೆ ವಿರುದ್ಧವಾಗಿ ನಡೆದ ಪ್ರತಿಭಟನೆಯ ಸಮಯದಲ್ಲಿ ಇನ್ಸ್‌ಪೆಕ್ಟರ್‌ ಸ್ಮಿತ್‌ನ ಮೇಲೆ ದಾಳಿ ಮಾಡಿದವರು ಹಾಗೂ ಕಾಂಗ್ರೆಸ್‌ ಚಪ್ಪರಕ್ಕೆ ಬೆಂಕಿಯಿಟ್ಟು ಸುಟ್ಟು ಹಾಕಲು ಪ್ರಯತ್ನಿಸಿದವರ ಹೆಸರು ಮತ್ತು ವಿವರಗಳನ್ನು ದ್ರಾವಿಡ್‌ ಬಳಿಯಿಂದ ಬ್ರೆವಿನ್‌ ಸಂಗ್ರಹಿಸಿಕೊಳ್ಳುತ್ತಾನೆ. ಪುಣೆಯಲ್ಲಿ ತಿಲಕರಿಂದ ಪ್ರಭಾವಿತರಾಗಿದ್ದ ನವ-ಸಂಪ್ರದಾಯವಾದಿ ಬ್ರಾಹ್ಮಣ ಯುವಕರಲ್ಲಿ ಒಬ್ಬನಾಗಿದ್ದ ದ್ರಾವಿಡ್‌ ಆ ಆಕ್ರಮಣಕಾರಿ ಘಟನೆಗಳಲ್ಲಿ ಭಾಗವಹಿಸಿದ್ದವರ ಹೆಸರು ಮತ್ತು ಇತರ ಮಾಹಿತಿಗಳನ್ನು ಬ್ರೆವಿನ್‌ಗೆ ನೀಡುತ್ತಾನೆ. ಗೋಪಾಲ್‌ ಕೃಷ್ಣ ಸಾಠೇ, ಪುಣೆ ಮುನಿಸಿಪಾಲಿಟಿ ಸೆಕ್ರೆಟರಿಯ ಸಹೋದರ ಕುಂಠೇಕರ್‌, ದಾಮೋದರ್‌ ಹರಿ ಚಾಪೇಕರ್‌ ಮೊದಲಾದವರ ಹೆಸರುಗಳು ಆ ಪಟ್ಟಿಯಲ್ಲಿ ಇದ್ದವು. ಅದರ ಜೊತೆಗೆ ದಾಮೋದರ್‌ ಹರಿ ಚಾಪೇಕರ್‌ ಸಂಘವೊಂದನ್ನು ಕಟ್ಟಿಕೊಂಡಿದ್ದಾನೆ ಮತ್ತು ತನ್ನ ಸಹೋದರ ನೀಲಕಂಠ್‌ ಅದರ ಸದಸ್ಯನಾಗಿದ್ದಾನೆ ಎಂಬ ಅಮೂಲ್ಯ ಮಾಹಿತಿಯನ್ನೂ ಬ್ರೆವಿನ್‌ಗೆ ನೀಡುತ್ತಾನೆ. ನೀಲಕಂಠನ ಜೊತೆಗಿನ ಭೇಟಿಯನ್ನು ಬ್ರೆವಿನ್‌ ಈ ರೀತಿಯಾಗಿ ವಿವರಿಸುತ್ತಾನೆ.</p>





<p>ʼನಾನು ನೀಲಕಂಠನ ಬಳಿ ಹೋದೆನಾದರೂ ಆತ ಯಾವ ಮಾಹಿತಿಯನ್ನೂ ಬಿಟ್ಟು ಕೊಡಲು ತಯಾರಿರಲಿಲ್ಲ. ಅದರ ನಂತರ ಆತನನ್ನು ನಾನು ಗಣೇಶ್‌ ದ್ರಾವಿಡನ ಬಳಿ ಕರೆದುಕೊಂಡು ಹೋಗಿ ಆತನಿಗೆ ತಿಳಿದಿರುವುದನ್ನೆಲ್ಲ ಹೇಳಬೇಕೆಂದು ಒತ್ತಾಯಿಸಿದೆ. ೧೨೦ ಯುವಕರನ್ನು ಸಂಘಟಿಸಿ ದೈಹಿಕ ತಾಲೀಮು ನಡೆಸುತ್ತಿರುವ ಚಾಪೇಕರ್‌ ಸಹೋದರರ ಚಟುವಟಿಕೆಗಳ ಕುರಿತು ನೀಲಕಂಠ್ ಆಗ ನನಗೆ ಮಾಹಿತಿ ನೀಡಿದ. ಈ ಅರೆಸೇನಾ ಸಂಘ ನಂತರ ಚದುರಿ ಹೋದ ಕಾರಣಗಳನ್ನೂ, ಅದರ ನಂತರ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಯುವಕರಲ್ಲಿ ಕೆಲವರನ್ನು ಆಯ್ದುಕೊಂಡು ಒಂದು ಸಂಘ ಕಟ್ಟಿಕೊಂಡಿರುವ ಬಗ್ಗೆಯೂ ಆತ ವಿವರಿಸಿದ. ಚಾಪೇಕರ್‌ ಸಹೋದರರು ಹೇಗೆ ಆಯುಧ ಸಂಗ್ರಹಕ್ಕೆ ಮಾರ್ಗದರ್ಶನಗಳನ್ನು ನೀಡುತ್ತಿದ್ದರು, ಆ ಸಂಘ ಹೇಗೆ ಒಡೆಯಿತು, ದಾಮೋದರನಿಗಾಗಿ ಸಂಘ ಸಂಗ್ರಹಿಸಿದ ಆಯುಧಗಳನ್ನು ತಾನು ಹೇಗೆ ಕಂಡೆ ಮೊದಲಾದ ಎಲ್ಲ ಮಾಹಿತಿಗಳನ್ನೂ ಆತ ವಿವರವಾಗಿ ಹೇಳಿದ. ದಾಮೋದರ್‌ ಮತ್ತು ಗೋಪಾಲ್‌ ಕೃಷ್ಣ ಸಾಠೇ ಪಾರ್ಬತಿ ಪಕ್ಕದಲ್ಲಿ ಹಂದಿಗಳನ್ನು ಬೇಟೆಯಾಡಲು ಹೋಗುತ್ತಿದ್ದರೆಂದೂ ಆ ಮೂಲಕ ಅವರು ತುಪಾಕಿಗಳನ್ನು ಬಳಸಲು ತರಬೇತಿ ಪಡೆದರೆಂದೂ ನೀಲಕಂಠ ಹೇಳಿದ.ʼ<sup>೫</sup></p>



<p>ಬ್ರೆವಿನ್‌ ಈ ಮಾಹಿತಿಗಳ ಆಧಾರದಲ್ಲಿ ದಾಮೋದರ್‌ ಹರಿ ಚಾಪೇಕರ್‌ನನ್ನು ಅರೆಸ್ಟ್‌ ಮಾಡುತ್ತಾನೆ. ಚಾಪೇಕರ್‌ ರಾನ್ಡ್‌ನ ಕೊಲೆಯನ್ನು ಒಪ್ಪಿಕೊಳ್ಳುತ್ತಾನೆ. ಪ್ಲೇಗ್‌ ಮಹಾಮಾರಿಯನ್ನು ತಡೆಯುವ ನೆಪದಲ್ಲಿ ಬ್ರಾಹ್ಮಣ ಕುಲವನ್ನು ಅಪಮಾನಿಸುವ ರೀತಿಯಲ್ಲಿ ರಾನ್ಡ್‌ ನಡೆದುಕೊಂಡಿದ್ದ ಕಾರಣ ಆತನನ್ನು ಕೊಂದಿರುವುದಾಗಿ ದಾಮೋದರ್‌ ಹರಿ ಚಾಪೇಕರ್‌ ತನ್ನ ತಪ್ಪೊಪ್ಪಿಗೆಯಲ್ಲಿ ಹೇಳಿಕೊಳ್ಳುತ್ತಾನೆ.</p>



<p>ʼನಾನು ಪುಣೆಗೆ ಹೋದೆ. ಪ್ಲೇಗನ್ನು ತಡೆಗಟ್ಟಲು ಬೇಕಾದ ಕ್ರಮಗಳನ್ನು ಶುರು ಮಾಡಲಾಗಿತ್ತು. ಮನೆ ಮನೆ ಸಂದರ್ಶನ ಎಂಬ ನೆಪದಲ್ಲಿ ಸೈನಿಕರು ಹಲವು ತೊಂದರೆಗಳನ್ನು ತಂದಿಟ್ಟಿದ್ದರು. ಅವರು ದೇವಸ್ಥಾನಗಳ ಒಳಗೆ ಹೋಗುತ್ತಿದ್ದರು, ಮಹಿಳೆಯರನ್ನು ಅವರ ಮನೆಯಿಂದಲೇ ಹೊರ ಹಾಕುತ್ತಿದ್ದರು, ವಿಗ್ರಹಗಳನ್ನು ಒಡೆದು ಹಾಕುತ್ತಿದ್ದರು, ಪವಿತ್ರ ಗ್ರಂಥಗಳಿಗೆ ಬೆಂಕಿ ಹಚ್ಚುತ್ತಿದ್ದರು. ಈ ಹೀನಕೃತ್ಯಕ್ಕೆ ನಾವು ಪ್ರತೀಕಾರ ತೀರಿಸಲು ತೀರ್ಮಾನಿಸಿದೆವು. ಆದರೆ, ಸಾಮಾನ್ಯ ಜನರನ್ನು ಕೊಲ್ಲುವುದರಲ್ಲಿ ಅರ್ಥವಿಲ್ಲವೆಂದು ನಮಗೆ ತಿಳಿದಿತ್ತು. ನಾಯಕನನ್ನೇ ಕೊಲ್ಲಬೇಕಾಗಿತ್ತು. ಆದ್ದರಿಂದಲೇ ರಾನ್ಡ್‌ನನ್ನು, ನಾಯಕನನ್ನು, ಕೊಲ್ಲಲು ನಾವು ತೀರ್ಮಾನಿಸಿದೆವು.ʼ</p>



<p>ರಾನ್ಡ್ ಮತ್ತು ಅಯೆರ್ಸ್ಟ್‌ನ ಕೊಲೆಗಳನ್ನು ಸಾಮಾನ್ಯವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಭಾಗವಾಗಿಯೇ ಪರಿಗಣಿಸಲಾಗುತ್ತದೆ. ಅದು ಬ್ರಿಟಿಷ್‌ ವಿರೋಧದ ಕ್ರಿಯೆ ಆಗಿದ್ದರೂ, ಅದಕ್ಕಿಂತ ಮಿಗಿಲಾಗಿ ಬ್ರಾಹ್ಮಣ ಅಭಿಮಾನವನ್ನು ಸಂರಕ್ಷಿಸುವ ಶ್ರಮವೂ ಆಗಿತ್ತೆಂಬುದನ್ನು ಈ ಹೇಳಿಕೆ ನಿಸ್ಸಂಶಯವಾಗಿ ಸಾಬೀತು ಪಡಿಸುತ್ತದೆ. ಪ್ಲೇಗ್‌ ವೈರಸ್‌ ಜೊತೆಗಿನ ಹೋರಾಟವನ್ನು ಅವರು ಯಾವ ರೀತಿಯಲ್ಲೂ ಯಥಾವತ್ತಾಗಿ ಕಾಣಲೇ ಇಲ್ಲ. ಬದಲಿಗೆ ಬ್ರಾಹ್ಮಣರ ಜೀವನ ಪದ್ದತಿಯ ಮೇಲೆ ಮ್ಲೇಚ್ಛರ ಆಕ್ರಮಣವಾಗಿಯೇ ಅವರು ಅದನ್ನು ಕಂಡರು. ಆದ್ದರಿಂದಲೇ ರಾನ್ಡ್‌ ಮತ್ತು ಅಯೆರ್ಸ್ಟ್‌ನ ಹತ್ಯೆಗಳು ದುರಭಿಮಾನ ಕೊಲೆಗಳಾಗಿದ್ದವು. ಇದನ್ನು ಇನ್ನಷ್ಟು ಅರ್ಥಮಾಡಿಕೊಳ್ಳಬೇಕೆಂದರೆ ಚಾಪೇಕರ್‌ ಸಹೋದರರ ಕುರಿತು ಇನ್ನೂ ಕೆಲವು ಮಾಹಿತಿಗಳನ್ನು ನಾವು ತಿಳಿದುಕೊಳ್ಳಬೇಕು.</p>



<p>ಚಾಪೇಕರ್‌ ಸಹೋದರರು ಎಂದು ಗುರುತಿಸಲ್ಪಡುವ ದಾಮೋದರ್‌ ಹರಿ ಚಾಪೇಕರ್‌ (೧೮೭೦-೧೮೯೮), ಬಾಲಕೃಷ್ಣ ಹರಿ ಚಾಪೇಕರ್‌ (೧೮೭೩-೧೮೯೯), ವಾಸುದೇವ ಹರಿ ಚಾಪೇಕರ್‌ (೧೮೭೯-೧೮೯೯) ಎಂಬ ಮೂವರು ಹರಿಪಂತ್‌ ಮತ್ತು ದ್ವಾರಕಾ ದಂಪತಿಗಳ ಮಕ್ಕಳಾಗಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. ಚಿಂಚವಾಡಾದ ಸಮೀಪದ ಚಪ್ಪ ಎಂಬ ಗ್ರಾಮದಲ್ಲಿ ಆ ಕುಟುಂಬದ ಬೇರುಗಳು ಇದ್ದವು. ಆದರೆ, ಹರಿಪಂತ್‌ ಪುಣೆಗೆ ವಲಸೆ ಬಂದು ವಾಸಿಸಿದ. ಬ್ರಾಹ್ಮಣರ ಮನೆಗಳಲ್ಲಿ ಕೀರ್ತನೆಗಳನ್ನು ಹಾಡಿಕೊಂಡು ಹರಿಪಂತ್‌ ಕಾಲಯಾಪನೆ ಮಾಡುತ್ತಿದ್ದ. ನಂತರದ ಕಾಲದಲ್ಲಿ ಮೂವರು ಸಹೋದರರೂ ಆ ಕಲೆಯಲ್ಲಿ ನೈಪುಣ್ಯತೆ ಗಳಿಸಿ ತಂದೆಗೆ ಸಹಾಯ ಮಾಡತೊಡಗಿದರು.</p>



<p>ಆ ಕಾಲದ ಪುಣೆ ನಗರ, ಅದರಲ್ಲೂ ವಿಶೇಷವಾಗಿ ಬ್ರಾಹ್ಮಣ ಸಮುದಾಯ ಹಾದು ಹೋಗುತ್ತಿದ್ದ ಸಾಮಾಜಿಕ ಸಂದರ್ಭವನ್ನು ನಾವು ಈಗಾಗಲೇ ಪರಾಮರ್ಶಿಸಿದ್ದೇವೆ. ರಾಣಡೆ ಮತ್ತು ಅಗರ್ಕರ್‌ ತರಹದ ಪ್ರಗತಿಪರರು ಬ್ರಾಹ್ಮಣರನ್ನು ನವೋತ್ಥಾನ ಪಥಕ್ಕೆ ಮುನ್ನಡೆಸಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದರು. ಗಣೇಶ್‌ ಅಗರ್ಕರ್‌ ನೇತೃತ್ವದಲ್ಲಿ ಪ್ರಕಟವಾಗುತ್ತಿದ್ದ <em>ಸುಧಾರಕ್</em>‌ ಪತ್ರಿಕೆ ಅವರ ಮಾಧ್ಯಮ ಮುಖವಾಗಿತ್ತು. ಆದರೆ, ತಿಲಕರ ನೇತೃತ್ವದ ನವಸಂಪ್ರದಾಯವಾದಿಗಳು ತಮ್ಮ ಸಮುದಾಯಕ್ಕೆ ಹಿಂದೂ ಜಾತಿಶ್ರೇಣಿಯಲ್ಲಿ ಮತ್ತು ಸಮಾಜದಲ್ಲಿ ಇರುವ ಪ್ರಾಬಲ್ಯವನ್ನು ಹೊಸಕಾಲದಲ್ಲೂ ನೆಲೆನಿಲ್ಲಿಸುವ ತಂತ್ರಗಳನ್ನು ರೂಪಿಸುವುದರಲ್ಲಿ ನಿರತರಾಗಿದ್ದರು. <em>ಕೇಸರಿ</em> ಮತ್ತು <em>ಮರಾಠ</em> ಅವರ ಮಾಧ್ಯಮ ಮುಖಗಳಾಗಿದ್ದವು. ಬ್ರಾಹ್ಮಣ ಪ್ರಾಬಲ್ಯವನ್ನು ಬುಡಮೇಲುಗೊಳಿಸಲು ಮಹಾತ್ಮ ಫುಲೆ ಮತ್ತು ಪತ್ನಿ ಸಾವಿತ್ರಿಬಾಯಿ ಫುಲೆ ಮೊದಲಾದವರು <em>ಸತ್ಯಶೋಧಕ್‌ ಸಮಾಜ್‌ </em>ಕಟ್ಟಿಕೊಂಡು ಕೆಲಸ ಮಾಡುತ್ತಿದ್ದರು. ಈ ಕೆಳಜಾತಿ ಚಳುವಳಿಯಲ್ಲಿ ಪಂಡಿತ ರಮಾಬಾಯಿಯವರಂತಹ ಚಿತ್ಪಾವನ ಬ್ರಾಹ್ಮಣ ಕುಲದಲ್ಲಿ ಜನಿಸಿದವರು ಕೂಡ ಕೈ ಜೋಡಿಸಿದ್ದರು ಎಂಬುದನ್ನು ನಾವು ಗಮನಿಸಿದೆವು.</p>



<figure class="wp-block-image size-large"><img decoding="async" width="746" height="1024" src="https://peepalmedia.com/wp-content/uploads/2024/02/IMG-20240205-WA0016-746x1024.jpg" alt="" class="wp-image-35618" srcset="https://peepalmedia.com/wp-content/uploads/2024/02/IMG-20240205-WA0016-746x1024.jpg 746w, https://peepalmedia.com/wp-content/uploads/2024/02/IMG-20240205-WA0016-218x300.jpg 218w, https://peepalmedia.com/wp-content/uploads/2024/02/IMG-20240205-WA0016-768x1055.jpg 768w, https://peepalmedia.com/wp-content/uploads/2024/02/IMG-20240205-WA0016-150x206.jpg 150w, https://peepalmedia.com/wp-content/uploads/2024/02/IMG-20240205-WA0016-300x412.jpg 300w, https://peepalmedia.com/wp-content/uploads/2024/02/IMG-20240205-WA0016-696x956.jpg 696w, https://peepalmedia.com/wp-content/uploads/2024/02/IMG-20240205-WA0016.jpg 932w" sizes="(max-width: 746px) 100vw, 746px" /></figure>



<p>ರಮಾಡೋಂಗ್ರೆ ಎಂಬ ಹೆಸರಿನ ಮಹಿಳೆ ನಂತರದ ಕಾಲದಲ್ಲಿ ಕೆಳಜಾತಿ ಚಳುವಳಿಯ ಮತ್ತು ಸ್ತ್ರೀವಾದದ ಇತಿಹಾಸಗಳೆರಡರಲ್ಲಿಯೂ ಉಜ್ವಲ ವ್ಯಕ್ತಿತ್ವವಾಗಿ ಮೂಡಿದ ರಮಾಬಾಯಿ ಆಗಿ ಬದಲಾದರು. ಅವರು ಸ್ವಾಮಿ ವಿವೇಕಾನಂದರ ಜೊತೆಗೆ ಚಿಕಾಗೋದ ವಿಶ್ವ ಸರ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ನಂತರ ಕ್ರೈಸ್ತ ಧರ್ಮ ಸ್ವೀಕರಿಸಿ ಆ ಧರ್ಮದ ಒಳಗಿನ ಕೆಡುಕಗಳ ವಿರುದ್ಧವೂ ಹೋರಾಡಿದರು. ವಿಧವೆಗಳಿಗೋಸ್ಕರ ಶಾರದಾ ಸದನ್‌ ಸ್ಥಾಪಿಸಿ ಪುಣೆ ನಗರದಲ್ಲಿ ಅವರೂ ತಮ್ಮ ಚಟುವಿಕೆಗಳನ್ನು ಆ ಕಾಲದಲ್ಲಿ ಆರಂಭಿಸಿದ್ದರು.</p>



<p>ಆ ಕಾಲದಲ್ಲೇ ಬ್ರಾಹ್ಮಣರನ್ನು ಇಬ್ಬಾಗವಾಗಿಸಿದ ಹೆಣ್ಣುಮಕ್ಕಳ ವಿವಾಹ ಪ್ರಾಯ ಹೆಚ್ಚಿಸುವ <em>ಏಜ್‌ ಆಫ್‌ ಕನ್ಸೆಂಟ್‌ ಬಿಲ್</em>‌ ಕಾನೂನಾಗಿ ಜಾರಿಗೆ ಬರುವುದು. ತಿಲಕರ ನೇತೃತ್ವದ ನವ ಸಂಪ್ರದಾಯವಾದಿ ಬ್ರಾಹ್ಮಣಿಸಂ ಇದನ್ನು ವಿರೋಧಿಸಿಕೊಂಡು ಜನಪ್ರಿಯವಾಗತೊಡಗಿತ್ತು ಎಂಬುದನ್ನೂ ನಾವು ನೋಡಿದೆವು. ತಿಲಕ್‌ವಾದಿಗಳು ಎಂದು ಗುರುತಿಸುತ್ತಿದ್ದ ಯುವಕರು ಈ ನವ ಸಂಪ್ರದಾಯವಾದಿ ಸಂಘವನ್ನು ತೀವ್ರವಾದಿ ಸಂಘವಾಗಿ ಬದಲಾಯಿಸಿದರು. ಇವರು ಒಂದೇ ಹೊತ್ತಿಗೆ ಪ್ರಗತಿಪರ ವಿರೋಧಿಯೂ ಬ್ರಿಟಿಷ್‌ ವಿರೋಧಿಯೂ ಮುಸ್ಲಿಂ ಮತ್ತು ಅಲ್ಪಸಂಖ್ಯಾತ ವಿರೋಧಿಯೂ ಆಗಿದ್ದರು. ತಿಲಕರ ನೇತೃತ್ವದಲ್ಲಿ ಸ್ಥಾಪಿಸಿದ್ದ ಜಿಮ್ನಾಸ್ಟಿಕ್‌ ಕ್ಲಬ್‌ಗಳಲ್ಲಿ ದೈಹಿಕ ತರಬೇತಿ ಪಡೆದವರಾಗಿದ್ದರು. ತಿಲಕ್‌ ರೂಪಿಸಿದ ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳಿಗೆ ಜೀವತುಂಬಿದವರು ಕೂಡ ಅವರೇ ಆಗಿದ್ದರು.</p>



<p>ಅವರು ತಮ್ಮ ತ್ರಿಮುಖ ಗುರಿಯನ್ನು ಮುಂದಿಟ್ಟುಕೊಂಡು ಕಾರ್ಯಪ್ರವೃತ್ತರಾಗಿದ್ದರು. ಮಸ್ಲಿಮರ, ಬ್ರಿಟಿಷರ ಮತ್ತು ಪ್ರಗತಿಪರರ ವಿರೋಧಿ. ಈ ತ್ರಿಮುಖ ಚಟುವಟಿಕೆಯ ಅತ್ಯಂತ ಪ್ರಖರ ಮುಖ ದಾಮೋದರ್‌ ಹರಿ ಚಾಪೇಕರ್‌ ಆಗಿದ್ದ. ತಿಲಕರ ಸೈದ್ಧಾಂತಿಕತೆಗೆ ಪ್ರಾಯೋಗಿಕ ರೂಪ ನೀಡಬೇಕಾದ ಅಗತ್ಯವಿದೆಯೆಂದು ಆತ ಭಾವಿಸಿದ್ದ. ಅದಕ್ಕಾಗಿ ಕಟ್ಟಿದ ಸಂಘಟನೆಯೇ <em>ಹಿಂದೂಧರ್ಮ ಅಡೆತಡೆ ನಿವಾರಣಾ ಸಂಘ.</em> ನಂತರ ಹಿಂದೂಧರ್ಮ ಎಂಬುದರ ಬದಲಿಗೆ ಆರ್ಯಧರ್ಮವನ್ನು ಸೇರಿಸಿ <em>ಆರ್ಯಧರ್ಮ</em> <em>ಪ್ರತಿಬಂಧ್‌ ನಿವಾರಕ್‌ ಮಂಡಲಿ</em> ಎಂದು ಬದಲಾಯಿತು. ಪ್ರಗತಿಪರರ ಮೇಲೆ ಕಬ್ಬಿಣದ ಬಡಿಗೆಗಳ ಮೂಲಕ ದಾಳಿ ನಡೆಸುವುದರೊಂದಿಗೆ ಅವರು ತಮ್ಮ ಇರುವಿಕೆಯನ್ನು ತೋರಿಸಿದ್ದರು. <em>ಸುಧಾರಕ್‌ </em>ಪತ್ರಿಕೆಯ ಸಂಪಾದಕರಾಗಿದ್ದ ಪಟವರ್ಧನ್‌ ಮೇಲೆ ಅವರು ಮೊದಲ ದಾಳಿ ಮಾಡಿದ್ದರು. ಪ್ರಗತಿಪರರಾಗಿದ್ದ ಕುಲಕರ್ಣಿ, ಥೊರಾಟ್‌ ಮೊದಲಾದವರನ್ನೂ ಅವರು ಆಕ್ರಮಿಸಿದ್ದರು. ಕ್ರೈಸ್ತಧರ್ಮ ಸ್ವೀಕರಿಸಿದ್ದ ವೆಲಿಂಕರನ್ನೂ. ಹೀಗೆ ಬ್ರಾಹ್ಮಣ ಶುದ್ದೀಕರಣದ ಮುಂಚೂಣಿ ಹೋರಾಟಗಾರರಾಗಿ ಅವರು ತಮ್ಮನ್ನು ತಾವೇ ಘೋಷಿಸಿಕೊಂಡರು.</p>



<p>ಬಾಂಬೆಯ ವಿಕ್ಟೋರಿಯಾ ಪ್ರತಿಮೆಗೆ ಟಾರ್‌ ಬಳಿಯುವ ಮೂಲಕ ಈ ಬ್ರಾಹ್ಮಣ ಶುದ್ಧಿವಾದ ತನ್ನ ಬ್ರಿಟಿಷ್‌ ವಿರೋಧವನ್ನು ಮೊದಲ ಬಾರಿಗೆ ಹೊರಗೆಡಹಿತ್ತು. ಬಾಂಬೆ ಚೀಫ್‌ ಮ್ಯಾಜಿಸ್ಟ್ರೇಟ್‌ ಆಗಿದ್ದ ಡಬ್ಲ್ಯೂ.ಆರ್.‌ ಹ್ಯಾಮಿಲ್ಟನ್‌ ದಾಖಲಿಸಿದ ತಪ್ಪೊಪ್ಪಿಗೆಯಲ್ಲಿ ಆ ಘಟನೆಯನ್ನು ದಾಖಲಿಸಲಾಗಿದೆ. ವರ್ಷದಲ್ಲಿ ನಾಲ್ಕು ತಿಂಗಳುಗಳ ಕಾಲವಾದರೂ ಬಾಂಬೆಯಲ್ಲಿ ಕಳೆಯುತ್ತಾರೆಂದೂ ಆ ಸಮಯದಲ್ಲಿಯೇ ಇದನ್ನು ಮಾಡಲಾಗಿತ್ತು ಎಂದೂ ದಾಮೋದರ್‌ ಹೇಳುತ್ತಾನೆ. ಮುಂಜಾನೆ ನಾಲ್ಕು ಗಂಟೆಗೆ ತಾನು ಮತ್ತು ತಮ್ಮ ಬಾಲಕೃಷ್ಣ ಸೇರಿಕೊಂಡು ವಿಕ್ಟೋರಿಯಾ ಪ್ರತಿಮೆಯ ಬಳಿ ಹೋದೆವೆಂದೂ ಬಜಾರಿನಿಂದ ಆರಾಣೆಗೆ ಕೊಂಡು ತಂದಿದ್ದ ಟಾರನ್ನು ಬಾಲಕೃಷ್ಣ ಪ್ರತಿಮೆಗೆ ಬಳಿದನೆಂದೂ ತಾನು ಕಾವಲಿಗೆ ನಿಂತೆನೆಂದೂ ಹೇಳಿಕೆಯಲ್ಲಿ ದಾಖಲಿಸಲಾಗಿದೆ. ಖಂಡೇವಾಡಿಯಿಂದ ಬಾಲ್‌ ಮಂಕೇಷ್‌ ವಾಗ್ಲೆಯ ಮೆಟ್ಟಿಲುಗಳ ಅಡಿಯಲ್ಲಿ ಇಟ್ಟಿದ್ದ ಹಳೆಯ ಚಪ್ಪಲಿಗಳಿಂದ ಹಾರ ತಯಾರಿಸಿ ಪ್ರತಿಮೆಗೆ ಹಾಕಿದ್ದರು. ಉಳಿದ ದಾಳಿಗಳಲ್ಲಿ ಜೊತೆಗಾರನಾಗಿದ್ದ ಬುಸ್‌ಕುಟ್ಟೆ ಪ್ಲೇಗ್‌ ಬಾಧಿತನಾಗಿ ಮರಣ ಹೊಂದಿದ್ದರಿಂದ ಈ ಕೃತ್ಯದಲ್ಲಿ ಜೊತೆಗಿರಲಿಲ್ಲ.</p>



<p>ರಾನ್ಡ್‌ ಮತ್ತು ಅಯರ್ಸ್ಟ್‌ನನ್ನು ಕೊಂದದ್ದು ಎಂದಿನಂತೆ ತಾನು ಮತ್ತು ಸಹೋದರ ಬಾಲಕೃಷ್ಣ ಸೇರಿಕೊಂಡು ಎಂದು ತನ್ನ ತಪ್ಪೊಪ್ಪಿಗೆಯಲ್ಲಿ ದಾಮೋದರ್‌ ಹೇಳಿಕೊಳ್ಳುತ್ತಾನೆ. ಆದರೆ, ಬಾಲಕೃಷ್ಣ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ದಾಮೋದರನ ಕುರಿತ ಮಾಹಿತಿ ಒದಗಿಸಿದ್ದಕ್ಕಾಗಿ ಗಣೇಶ್‌ ಶಂಕರ್‌ ದ್ರಾವಿಡ್‌ಗೆ ಇನಾಂ ಮೊತ್ತವಾದ ೨೦೦೦೦ ರೂಪಾಯಿಯ ಅರ್ಧ ಹಣ ೧೦೦೦೦ ರೂಪಾಯಿ ನೀಡಲಾಯಿತು. ಬಾಲಕೃಷ್ಣ ಪೊಲೀಸರಿಗೆ ಸಿಗದ ಕಾರಣ ಇನಾಂ ಹಣವನ್ನು ಅರ್ಧಕ್ಕೆ ಇಳಿಸಲಾಗಿತ್ತು.</p>
]]></content:encoded>
					
		
		
			</item>
		<item>
		<title>ಹಿಂದುತ್ವ ರಾಜಕಾರಣದ ಕಥೆ : ಚಿತ್ಪಾವನ ಬ್ರಾಹ್ಮನಿಸಮ್ಮಿನ ಆರಂಭಿಕ ರಾಜಕೀಯ ಚಟುವಟಿಕೆಗಳು</title>
		<link>https://peepalmedia.com/early-political-activities-of-chitpavan-brahmanism/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 14 Jan 2024 11:43:40 +0000</pubDate>
				<category><![CDATA[ಅಂಕಣ]]></category>
		<category><![CDATA[Chitpavan Brahmin]]></category>
		<category><![CDATA[hinduthva]]></category>
		<category><![CDATA[india]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Sunaif]]></category>
		<guid isPermaLink="false">https://peepalmedia.com/?p=34961</guid>

					<description><![CDATA[ಮೇಲ್ಜಾತಿ ವೈಚಾರಿಕ ನವೋತ್ಥಾನ ಚಳುವಳಿ ಮತ್ತು ಕೆಳಜಾತಿ ಚಳುವಳಿಗಳೆರಡನ್ನೂ ಈ ಹೊಸ ಅವೈಚಾರಿಕ ಸಂಪ್ರದಾಯವಾದಿ ಬ್ರಾಹ್ಮಣ್ಯ ಎದುರಿಸಿದ್ದು ಸಾಂಸ್ಕೃತಿಕ ಮುಖಾಮುಖಿಗಳೊಂದಿಗೆ.  ಆದರೆ, ಬ್ರಿಟಿಷ್‌ ವಿರೋಧವನ್ನು ಪ್ರದರ್ಶಿಸಿದ್ದು ಬಹುತೇಕ ರಾಜಕೀಯ ಮುಖಾಮುಖಿಗಳ ಮೂಲಕವಾಗಿತ್ತು. ಬ್ರಿಟಿಷ್‌ ಇಂಡಿಯಾದಲ್ಲಿ ಬಾಂಬೆ ಗವರ್ನರ್‌ ಆಗಿದ್ದ ಸರ್‌ ರಿಚರ್ಡ್‌ ಟೆಂಪಲ್‌ ೧೮೭೯ರಲ್ಲಿ ಆಗಿನ ವೈಸ್‌ರಾಯ್‌ ಲೈಟನ್‌ಗೆ ಬರೆದ ಪತ್ರ ಓದಿದರೆ ಚಿತ್ಪಾವನ ಬ್ರಾಹ್ಮಣರು ಮತ್ತು ಬ್ರಿಟಿಷರ ನಡುವೆ ಇದ್ದ ಸಂಘರ್ಷದ ಬಗ್ಗೆ ಸ್ಪಷ್ಟವಾದ ಚಿತ್ರಣ ದೊರೆಯುತ್ತದೆ. ʼಚಿತ್ಪಾವನ ಗೋತ್ರ ರಾಷ್ಟ್ರೀಯ ಭಾವನಾತ್ಮಕತೆಯಿಂದ ಪ್ರಚೋದಿತರಾಗಿದ್ದಾರೆ. ಇಂಡಿಯಾ [&#8230;]]]></description>
										<content:encoded><![CDATA[
<p></p>



<p></p>



<p></p>



<p></p>



<p></p>



<p>ಮೇಲ್ಜಾತಿ ವೈಚಾರಿಕ ನವೋತ್ಥಾನ ಚಳುವಳಿ ಮತ್ತು ಕೆಳಜಾತಿ ಚಳುವಳಿಗಳೆರಡನ್ನೂ ಈ ಹೊಸ ಅವೈಚಾರಿಕ ಸಂಪ್ರದಾಯವಾದಿ ಬ್ರಾಹ್ಮಣ್ಯ ಎದುರಿಸಿದ್ದು ಸಾಂಸ್ಕೃತಿಕ ಮುಖಾಮುಖಿಗಳೊಂದಿಗೆ.  ಆದರೆ, ಬ್ರಿಟಿಷ್‌ ವಿರೋಧವನ್ನು ಪ್ರದರ್ಶಿಸಿದ್ದು ಬಹುತೇಕ ರಾಜಕೀಯ ಮುಖಾಮುಖಿಗಳ ಮೂಲಕವಾಗಿತ್ತು. ಬ್ರಿಟಿಷ್‌ ಇಂಡಿಯಾದಲ್ಲಿ ಬಾಂಬೆ ಗವರ್ನರ್‌ ಆಗಿದ್ದ ಸರ್‌ ರಿಚರ್ಡ್‌ ಟೆಂಪಲ್‌ ೧೮೭೯ರಲ್ಲಿ ಆಗಿನ ವೈಸ್‌ರಾಯ್‌ ಲೈಟನ್‌ಗೆ ಬರೆದ ಪತ್ರ ಓದಿದರೆ ಚಿತ್ಪಾವನ ಬ್ರಾಹ್ಮಣರು ಮತ್ತು ಬ್ರಿಟಿಷರ ನಡುವೆ ಇದ್ದ ಸಂಘರ್ಷದ ಬಗ್ಗೆ ಸ್ಪಷ್ಟವಾದ ಚಿತ್ರಣ ದೊರೆಯುತ್ತದೆ.</p>



<figure class="wp-block-image size-full"><img loading="lazy" decoding="async" width="220" height="354" src="https://peepalmedia.com/wp-content/uploads/2024/01/220px-Richard_Temple_1826-1902.jpg" alt="" class="wp-image-34969" srcset="https://peepalmedia.com/wp-content/uploads/2024/01/220px-Richard_Temple_1826-1902.jpg 220w, https://peepalmedia.com/wp-content/uploads/2024/01/220px-Richard_Temple_1826-1902-186x300.jpg 186w, https://peepalmedia.com/wp-content/uploads/2024/01/220px-Richard_Temple_1826-1902-150x241.jpg 150w" sizes="auto, (max-width: 220px) 100vw, 220px" /></figure>



<p>ʼಚಿತ್ಪಾವನ ಗೋತ್ರ ರಾಷ್ಟ್ರೀಯ ಭಾವನಾತ್ಮಕತೆಯಿಂದ ಪ್ರಚೋದಿತರಾಗಿದ್ದಾರೆ. ಇಂಡಿಯಾ ತನ್ನನ್ನು ತಾನು ಯಾವ ಉತ್ಕರ್ಷೆಯಲ್ಲಿ ಹೊದ್ದುಕೊಂಡಿದೆಯೋ ಅದೇ ಉತ್ಕರ್ಷೆಯಲ್ಲಿ ಚಿತ್ಪಾವನರು ತಮ್ಮನ್ನು ತಾವು ಹೊದ್ದುಕೊಂಡಿದ್ದಾರೆ. ನಿಜವಾದ ಚಿತ್ಪಾವನ ಸಾಹಸಿಕತೆಯನ್ನೂ ಒಬ್ಬ ಸೈನಿಕನ ಯುದ್ಧಸನ್ನಾಹದ ಎಲ್ಲ ಶಕ್ತಿಯನ್ನೂ ಒಬ್ಬ ರಾಜತಾಂತ್ರಿಕನ ಬುದ್ಧಿಯನ್ನೂ ತನ್ನೊಳಗೆ ಸಮನ್ವಯಗೊಳಿಸಿರುತ್ತಾನೆ. ವಿದ್ಯಾಭ್ಯಾಸ ಮತ್ತು ಸರಕಾರಿ ಉದ್ಯೋಗ ಮಾತ್ರವೇ ಚಿತ್ಪಾವನರನ್ನು ಸಂತೃಪ್ತಿಗೊಳಿಸಬಹುದೇ ಎಂದು ನಮಗೀಗ ತಿಳಿದಿಲ್ಲ. ಖಂಡಿತವಾಗಿ ವಿದ್ಯಾಭ್ಯಾಸ ಅವರಿಗೆ ನಮ್ಮ ಮೇಲೆ ಸಣ್ಣ ಮಟ್ಟದ ಗೌರವ ಮೂಡುವಂತೆ ಮಾಡಿದೆ. ಹಲವು ದೊಡ್ಡ ಸಂಗತಿಗಳನ್ನು ಅವರು ನಮ್ಮ ಭಾಷೆಯ ಮೂಲಕವೇ ಹೇಳುತ್ತಿದ್ದಾರೆ. ಅವರು ನಮ್ಮ ಯೋಚನೆಗಳನ್ನು ಮೈಗೂಡಿಸಿಕೊಂಡು ತಮ್ಮ ಯೋಚನೆಗಳನ್ನು ಕೈ ಬಿಡುತ್ತಲೂ ಇದ್ದಾರೆ. ಆದರೂ, ಇನ್ನೊಂದು ದಿಕ್ಕಿನಿಂದ ನೋಡುವಾಗ ವಿದ್ಯಾಭ್ಯಾಸ ಅವರನ್ನು ಅಸ್ವಸ್ಥಗೊಳಿಸಿದೆ. ಕಳೆದ ಶತಮಾನದಲ್ಲಿ ಅವರಿಗಿದ್ದ ಸ್ಥಾನಮಾನಗಳನ್ನು ಮತ್ತೆ ಪಡೆದುಕೊಳ್ಳದ ತನಕ ಅವರು ಸ್ವಸ್ಥರಾಗುವುದಿಲ್ಲ. ಈ ಮೇಲೆ ವಿವರಿಸಿದ, ಪಶ್ಚಿಮ ಇಂಡಿಯಾದ ಬ್ರಾಹ್ಮಣರಲ್ಲಿ ಒಂದು ವಿಭಾಗವಾದ ಕೊಂಕಣಸ್ತ ಬ್ರಾಹ್ಮಣರ ಹಾಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರಾಷ್ಟ್ರೀಯ ಮತ್ತು ರಾಜಕೀಯ ಮಹಾತ್ವಾಂಕ್ಷೆ ಹೊಂದಿರುವ, ಅದನ್ನು ಕಾಪಿಟ್ಟುಕೊಂಡಿರುವ, ನಮ್ಮಿಂದ ಸಂತೃಪ್ತಿಪಡಿಸಲಾಗದಷ್ಟು ಅದನ್ನು ಬೆಳೆಸಿಕೊಂಡಿರುವ ಇನ್ನೊಂದು ಜನ ಸಮುದಾಯವನ್ನು ಇಂಡಿಯಾದಲ್ಲಿ ನಾನು ಕಂಡಿಲ್ಲ.ʼ</p>



<p>೧೮೪೭ ರಿಂದ ೧೮೮೦ ರ ತನಕ ಬ್ರಿಟಿಷ್‌ ಇಂಡಿಯಾದಲ್ಲಿ ಹಲವು ಸ್ಥಾನಗಳನ್ನು ಹೊಂದಿದ್ದ ಅಧಿಕಾರಿಯಾಗಿದ್ದ ಸರ್‌ ರಿಚರ್ಡ್‌ ಟೆಂಪಲ್.‌ ಈ ಪತ್ರ ಬರೆಯುವಾಗ ಆತ ಬಾಂಬೆ ಪ್ರಾಂತ್ಯದ ಗವರ್ನರ್‌. ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮ ಮತ್ತು ಅದರ ನಂತರ ನಿರಂತರವಾಗಿ ಬ್ರಿಟಿಷ್‌ ವಿರೋಧಿ ಹೋರಾಟವನ್ನು ಎದುರಿಸಿದ್ದ ಅಧಿಕಾರಿ ಆತ. ಬ್ರಿಟಿಷ್‌ ಸಾಮ್ರಾಜ್ಯಕ್ಕೆ ನಿಷ್ಠನಾಗಿದ್ದ ಒಬ್ಬ ಅಧಿಕಾರಿಯಾಗಿ ತನ್ನ ಪ್ರಾಂತ್ಯದಲ್ಲಿ ನಡೆಯುತ್ತಿರುವ ಪ್ರತಿಯೊಂದು ಚಲನವನಲಗಳನ್ನು ಆತ ನಿರೀಕ್ಷಿಸುತ್ತಿದ್ದ. ಚಿತ್ಪಾವನ ಬ್ರಾಹ್ಮಣ ಗೋತ್ರದ ವಿಭಾಗವೊಂದು ಬ್ರಿಟಿಷರ ವಿರುದ್ಧ ರಾಜಕೀಯವಾಗಿ ಹಗೆತನದ ಮನೋಭಾವ ಹೊಂದಿರುವುದನ್ನು ಆತ ನಿರೀಕ್ಷಿಸಿದ್ದನೆಂದು ಮಾತ್ರವಲ್ಲ, ಆಡಳಿತಾಧಿಕಾರಿ ಎಂಬ ನೆಲೆಯಲ್ಲಿ ಅದು ಆತನ ಅನುಭವಕ್ಕೂ ಬಂದಿತ್ತು. ಪೇಶ್ವೆಗಳ ರಾಜಧಾನಿಯಾಗಿದ್ದ ಪುಣೆ ಕೇಂದ್ರೀಕರಿಸಿಕೊಂಡು ಅವರು ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಪತ್ರದಲ್ಲಿ ಆತ ಎತ್ತಿ ತೋರಿಸುವ ಒಂದು ಸಂಗತಿ, ʼಸಾಮಾನ್ಯವಾಗಿ ಹೇಳಲ್ಪಡುವುದು ಇಂಡಿಯಾದ ಆಡಳಿತಾಧಿಕಾರಿಗಳು ಎಂಬ ನೆಲೆಯಲ್ಲಿ ನಾವು ಮಹಮ್ಮದೀಯರನ್ನು ಸೋಲಿಸಿ ಓಡಿಸಿದೆವು ಎಂದು. ಇದು ಪೂರ್ಣಾರ್ಥದಲ್ಲಿ ನಿಜವಲ್ಲ. ನಾವು ಮುಖ್ಯವಾಗಿ ಮರಾಠರನ್ನು ಸೋಲಿಸಿದೆವು ಎಂದು ಹೇಳುವುದೇ ಸ್ವಲ್ಪವಾದರು ಸತ್ಯಕ್ಕೆ ಹತ್ತಿರವಾಗಿ ನಿಲ್ಲುವಂಥದ್ದು.ʼ</p>



<figure class="wp-block-image size-full"><img loading="lazy" decoding="async" width="500" height="729" src="https://peepalmedia.com/wp-content/uploads/2024/01/Revolutionary_Vasudev_Balwant_Phadke-500x729-1.jpg" alt="" class="wp-image-34970" srcset="https://peepalmedia.com/wp-content/uploads/2024/01/Revolutionary_Vasudev_Balwant_Phadke-500x729-1.jpg 500w, https://peepalmedia.com/wp-content/uploads/2024/01/Revolutionary_Vasudev_Balwant_Phadke-500x729-1-206x300.jpg 206w, https://peepalmedia.com/wp-content/uploads/2024/01/Revolutionary_Vasudev_Balwant_Phadke-500x729-1-150x219.jpg 150w, https://peepalmedia.com/wp-content/uploads/2024/01/Revolutionary_Vasudev_Balwant_Phadke-500x729-1-300x437.jpg 300w" sizes="auto, (max-width: 500px) 100vw, 500px" /></figure>



<p>ಸರ್‌ ರಿಚರ್ಡ್‌ ಟೆಂಪಲ್‌ ಈ ಪತ್ರ ಬರೆಯುವ ಚಾರಿತ್ರಿಕ ಸಂದರ್ಭ ಬಹಳ ಮುಖ್ಯವಾದದ್ದು. ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧರ್ಮದ ಸಂಕೀರ್ಣವಾದ ಹಸ್ತಕ್ಷೇಪವೂ ಇತ್ತು. ಕಾನ್ಪುರದಲ್ಲಿ ಇದಕ್ಕೆ ನಾಯಕತ್ವ ನೀಡಿದ್ದ ನಾನಾಸಾಹೇಬ್‌ ತರದ ಚಿತ್ಪಾವನ ಬ್ರಾಹ್ಮಣರು, ಆ ವಂಶದಲ್ಲಿ ಹುದುಗಿ ಹೋಗಿದ್ದ ಪೇಶ್ವಾ ಸಾಮ್ರಾಜ್ಯದ ದೀಪ್ತಸ್ಮರಣೆಯನ್ನು ಬಡಿದೆಬ್ಬಿಸಿದ್ದರು. ಇದು ಸಂಪ್ರದಾಯವಾದಿ ಬ್ರಾಹ್ಮಣರಿಗೆ ಇನ್ನಿಲ್ಲದ ಶಕ್ತಿ ನೀಡಿತು. ಆದರೆ, ಆ ಕ್ರಾಂತಿಯನ್ನು ಬ್ರಿಟಿಷರು ಹಿಮ್ಮೆಟ್ಟಿಸಿದ ಕಾರಣ ತಾತ್ಕಾಲಿಕವಾಗಿ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ಹುದುಗಿಸಿಟ್ಟುಕೊಳ್ಳಲು ಸಂಪ್ರದಾಯವಾದಿ ಚಿತ್ಪಾವನರು ನಿರ್ಬಂಧಿತರಾದರು. ಆದರೆ, ತಾವು ಒಂದು ಕಾಲದಲ್ಲಿ ಅನುಭವಿಸಿದ್ದ ಸಾಮಾಜಿಕ ಮೇಲುಸ್ತರದ ನೆನಪು ಅವರೊಳಗಿನ ಒಂದು ವಿಭಾಗದೊಳಗೆ ಹೊಗೆಯಾಡುತ್ತಲೇ ಇತ್ತು. ಬ್ರಿಟಿಷರು ಗೆದ್ದುಕೊಂಡಿರುವ ತಮ್ಮ ಸಾಮ್ರಾಜ್ಯವನ್ನು ಸಶಸ್ತ್ರ ಹೋರಾಟದ ಮೂಲಕವೇ ಮರಳಿ ಪಡೆದು ಪೇಶ್ವಾ ಸಾಮ್ರಾಜ್ಯವನ್ನು ಪುನರುಜ್ಜೀವನಗೊಳಿಸಲು ಬೇಕಾದ ಪ್ರಯತ್ನಗಳು ಸಣ್ಣ ಮತ್ತು ದೊಡ್ಡ ಮಟ್ಟದಲ್ಲಿ ನಡೆಯುತ್ತಲೇ ಇದ್ದವು.</p>



<p>ವಾಸುದೇವ್‌ ಬಲವಂತ್‌ ಫಾಡ್ಕೇ (೧೮೪೫-೧೮೮೩) ೧೮೫೭ರ ಮೊದಲ ಸ್ವಾತಂತ್ರ್ಯ ಸಮರದ ನಂತರ ಬ್ರಿಟಿಷರ ವಿರುದ್ಧ ರಾಜಕೀಯ ಹೋರಾಟಕ್ಕೆ ಧುಮುಕಿದ ಚಿತ್ಪಾವನ ಬ್ರಾಹ್ಮಣರಲ್ಲಿ ಪ್ರಮುಖ ವ್ಯಕ್ತಿ. ಬ್ರಿಟಿಷರನ್ನು ಭೂಗತ ಸಶಸ್ತ್ರ ಹೋರಾಟದ ಮೂಲಕ ಸೋಲಿಸಬಹುದು ಮತ್ತು ಆ ಮೂಲಕ ಚಿತ್ಪಾವನರ ನೇತೃತ್ವದಲ್ಲಿ ಪೇಶ್ವಾಸಾಮ್ರಾಜ್ಯವನ್ನು ಪುನರ್‌ ಸ್ಥಾಪಿಸಬಹುದೆಂಬ ಅಭಿಲಾಷೆಯೇ ಫಾಡ್ಕೆಯನ್ನು ಮುನ್ನಡೆಸಿದ ಪ್ರೇರಕ ಶಕ್ತಿ ಎಂಬುದಕ್ಕೆ ಧಾರಾಳ ಸಾಕ್ಷಿಗಳಿವೆ. ಫಾಡ್ಕೆ ತನ್ನನ್ನು ತಾನು ‘ಹೊಸ ಪೇಶ್ವಾ ಪ್ರಧಾನ್’‌ ಎಂದು ಗುರುತಿಸಿಕೊಂಡಿದ್ದ. ಫಾಡ್ಕೆಯ ತೀವ್ರವಾದಿ ಸಂಘಟನೆ ನಿಜದಲ್ಲಿ ಪೂರ್ಣ ಸ್ವರೂಪದ ತೀವ್ರವಾದಿ ಸಂಘಟನೆಯಾಗಿರಲಿಲ್ಲ. ಈ ವಿಷಯದಲ್ಲಿ ಶಿವಾಜಿ ಮತ್ತು ಪೇಶ್ವೆಗಳು ಅವಲಂಬಿಸಿದ್ದ ದಾರಿಯ ಹೊಸರೀತಿಯನ್ನು ಫಾಡ್ಕೆಯೂ ಅವಲಂಬಿಸಿದ್ದ. ಕೆಳಜಾತಿಯ ಜನರನ್ನು ಸಂಘಟಿಸಿ ತಮಗೆ ನಿಷ್ಠೆ ಹೊಂದಿದ ಒಂದು ಸಂಘಟನೆ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಒಂದು ಸೈನ್ಯವನ್ನು ಕಟ್ಟುವುದು. ಮರಾಠ ಪ್ರಾಂತ್ಯದ ಕೆಳಜಾತಿ ವಿಭಾಗಗಳಾದ ಕೋಳಿಯರು, ರಾಮೋಶಿಯರು ಮತ್ತಿತರರನ್ನು ತನ್ನ ಆತ್ಮಾಹುತಿ ದಳವಾಗಿಸಲು ‘ಪೇಶ್ವಾ ಪ್ರಧಾನಿ’ಗೆ ಸಾಧ್ಯವಾಗಿತ್ತು. ಇವರುಗಳೇ ಹಲವಾರು ದರೋಡೆಗಳನ್ನು ನಡೆಸಿ ಫಾಡ್ಕೆಯ ಸಂಘಟನೆಯನ್ನು ಆರ್ಥಿಕವಾಗಿ ಸಬಲರಾಗಿಸಿದವರು.</p>



<p>ಫಾಡ್ಕೆ ಆಗಿನ ಗ್ರೇಟ್‌ ಇಂಡಿಯನ್‌ ಪೆನಿನ್ಸುಲಾ ರೈಲ್ವೇಯಲ್ಲಿ ಆಡಿಟ್‌ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದ. ಚಿತ್ಪಾವನ ಬ್ರಾಹ್ಮಣರು ಪೇಶ್ವಾ ಆಡಳಿತದ ಅಡಿಯಲ್ಲಿ ಗಳಿಸಿದ ಸಾಮಾಜಿಕ ಚಲನಾತ್ಮಕತೆಯ ಫಲವಾಗಿ, ಬ್ರಿಟಿಷರ ಎದುರು ಸೋತು ಶರಣಾಗಬೇಕಾಗಿ ಬಂದಿದ್ದರು ಕೂಡ, ಸಾಮಾಜಿಕವಾಗಿ ಅಸ್ತಿತ್ವ ಕಾಯ್ದುಕೊಂಡದನ್ನು ನಾವು ಕಂಡೆವು. ಫಾಡ್ಕೆ ಅಂತವರಲ್ಲಿ ಒಬ್ಬನಾಗಿದ್ದ. ಇಂಗ್ಲಿಷ್‌ ವಿದ್ಯಾಭ್ಯಾಸ ಪಡೆದ ನಂತರ ಆತ ಉದ್ಯೋಗಕ್ಕೆ ಸೇರಿದ್ದ. ೧೫ ವರ್ಷಗಳ ತನ್ನ ಔದ್ಯೋಗಿಕ ಬದುಕಿನಲ್ಲಿ ಮಿಲಿಟರಿ ಅಕೌಂಟ್ಸ್‌ ಕಂಟ್ರೋಲರ್‌ ಆಗಿಯೂ ಭಡ್ತಿ ಹೊಂದಿದ್ದ. ಪುಣೆಯಲ್ಲಿ ಆತ ಕೆಲಸ ಮಾಡುತ್ತಿದ್ದ. ಸಹಜವಾಗಿಯೇ ಅಂದಿನ ಪ್ರಗತಿಪರ ಚಿತ್ಪಾವನ ಯುವಕರ ಹಾಗೆ ಆತನೂ ರಾಣಡೆಯ ಆಕರ್ಷಣೆಗೆ ಬಿದ್ದು <em>ಸಾರ್ವಜನಿಕ್‌ ಸಭಾ</em>ದ ಸ್ವದೇಶಿ ಘೋಷಣೆಗಳನ್ನು ಕೂಗುತ್ತಲೂ ಇದ್ದ. ಉತ್ತಮ ವಾಗ್ಮಿಯಾಗಿದ್ದ ಆತ ಜನರನ್ನು ಆಕರ್ಷಿಸುತ್ತಿದ್ದ.</p>



<p>೧೮೭೬-೭೭ ಕಾಲದ ಡೆಕ್ಕನ್‌ ಬರಗಾಲ ಬ್ರಿಟಿಷ್‌ ಅಧಿಕಾರಿಗಳನ್ನು ಇನ್ನಿಲ್ಲದ ಒತ್ತಡಕ್ಕೆ ಸಿಲುಕಿಸಿತ್ತು. ಆ ನಡುವೆ ಮರಣಶಯ್ಯೆಯಲ್ಲಿದ್ದ ತನ್ನ ತಾಯಿಯನ್ನು ಕಾಣಲು ರಜೆ ಕೇಳಿ ಫಾಡ್ಕೆ ಹಾಕಿದ ಅರ್ಜಿಯನ್ನು ಬ್ರಿಟಿಷರು ಪರಿಗಣಿಸಲಿಲ್ಲ. ಅದನ್ನು ಲೆಕ್ಕಿಸದೆ ತನ್ನ ಗ್ರಾಮಕ್ಕೆ ಹೊರಟನಾದರೂ ತಾಯಿಯನ್ನು ಜೀವಂತ ಕಾಣಲಾಗಲಿಲ್ಲ. ಇದನ್ನೇ ನಿಮಿತ್ತವಾಗಿರಿಸಿಕೊಂಡು, ಆ ಕಾಲದಲ್ಲಿ ತನ್ನೊಳಗೆ ಕಟ್ಟಿಕೊಂಡಿದ್ದ ಬ್ರಿಟಿಷ್‌ ವಿರೋಧಕ್ಕೆ ಸಂಘಟನೆಯ ರೂಪ ನೀಡಿ ಕಾರ್ಯಾಚರಿಸಲು ಫಾಡ್ಕೆ ನಿರ್ಧರಿಸಿದ. ʼಮ್ಲೇಚ್ಛʼರಾದ ಬ್ರಿಟಿಷರನ್ನು ಓಡಿಸಿ ಬ್ರಾಹ್ಮಣರ ನೇತೃತ್ವದ ಸ್ವದೇಶಿ ರಾಷ್ಟ್ರ ಸ್ಥಾಪನೆಗೆ ಒಂದು ಭೂಗತ ಸಂಘವನ್ನು ರೂಪೀಕರಿಸಿದ.</p>



<p>ನಾಲ್ಕು ವಿಧದ ಸಂಘಗಳು ಸೇರಿದ ಒಂದು ಸಂಘಟನೆಯಾಗಿತ್ತು ಫಾಡ್ಕೆಯದ್ದು. ಮೊದಲನೆಯದು ವಿದ್ಯಾರ್ಥಿಗಳನ್ನು ಸಂಘಟಿಸುವುದರಲ್ಲಿ ಗಮನ ಕೇಂದ್ರೀಕರಿಸಿತ್ತು. ಎರಡನೆಯ ಸಂಘ ಪ್ರದರ್ಶನಗಳನ್ನು ಸಂಘಟಿಸಿತು. ಪೇಶ್ವಾ ಬ್ರಾಹ್ಮಣ ಸಾಮ್ರಾಜ್ಯದ ಸ್ಮೃತಿಯನ್ನು ಬಡಿದೆಬ್ಬಿಸುವ ರೀತಿಯಲ್ಲಿ ಶಿವಾಜಿಯ ಗುರುವಾಗಿದ್ದ ರಾಮದಾಸರ ಕೀರ್ತನೆಗಳ ಮೂಲಕ ಇವರು ಪ್ರದರ್ಶನಗಳನ್ನು ನಡೆಸಿದರು. ಮೂರನೆಯದ್ದು ಗಾಯಕರ ಸಂಘ. ಇವರು ಮ್ಲೇಚ್ಛರಾದ ಬ್ರಿಟಿಷರ ಆಡಳಿತದಲ್ಲಿ ಭಾರತದ ಪ್ರಜೆಗಳು ಅನುಭವಿಸುತ್ತಿರುವ ದುರಿತಗಳನ್ನು ಹಾಸ್ಯಾತ್ಮಕವಾಗಿ ಹಾಡಿದರು. ನಾಲ್ಕನೇ ಸಂಘ ಜನರಿಂದ ದೂರ ನಿಂತು ಬ್ರಿಟಿಷ್‌ ಸರಕಾರವನ್ನು ಬುಡಮೇಲು ಮಾಡಲು ಬೇಕಾದ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿತ್ತು. ಪುಣೆಯ ನರಸಿಂಹ ದೇವಸ್ಥಾನದ ಹಿಂಭಾಗದ ಕುರುಚಲು ಕಾಡಿನಲ್ಲಿ ಖಡ್ಗ ಯುದ್ಧದ ತರಬೇತಿಯನ್ನು ಫಾಡ್ಕೆ ತನ್ನ ಸಂಘಟನೆಯ ಸದಸ್ಯರಿಗೆ ನೀಡುತ್ತಿದ್ದ.</p>



<p>ಇವತ್ತು ಹಿಂತಿರುಗಿ ನೋಡುವಾಗ ಹಿಂದುತ್ವಸಂಘಟನೆಯ ಪರಿವಾರ ಸಂರಚನೆ ಫಾಡ್ಕೆಯ ಸಂಘಟನೆಯಲ್ಲಿ ಸೂಕ್ಷ್ಮ ರೂಪದಲ್ಲಿ ನೆಲೆ ನಿಂತಿದ್ದನ್ನು ಕಾಣಬಹುದು. ದೇವಸ್ಥಾನ ಕೇಂದ್ರಿತ ಆಯುಧ ತರಬೇತಿ ಶುರು ಮಾಡಿದ ವ್ಯಕ್ತಿ ಫಾಡ್ಕೆ. ಬಾಲ ಗಂಗಾಧರ ತಿಲಕ್‌ ಕೂಡ ತನ್ನ ಯೌವನದಲ್ಲಿ ಫಾಡ್ಕೆಯ ಆಯುಧ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದಾಗಿ ಹೇಳಲಾಗುತ್ತದೆ. ಹಿಂದುತ್ವ ಸಿದ್ಧಾಂತದ ಪಿತಾಮಹ ವಿ.ಡಿ. ಸಾವರ್ಕರ್‌ <em>ಮಿತ್ರ ಮೇಳ</em> ಎಂಬ ಸಂಘಟನೆ ಕಟ್ಟಿಕೊಂಡು ಅದರ ಚಟುವಟಿಕೆಗಳನ್ನು ಶುರು ಮಾಡಿದಾಗ ದೈನಂದಿನ ದೈಹಿಕ ತರಬೇತಿ ಅದರ ಪ್ರಮುಖ ಭಾಗವಾಗಿತ್ತು. ನಂತರದ ಕಾಲದಲ್ಲಿ ಆರ್‌ಎಸ್‌ಎಸ್‌ನ ಸ್ಥಾಪಕರಲ್ಲಿ ಒಬ್ಬರಾಗಿದ್ದ ಬಿ.ಎಸ್.‌ ಮುನ್ಜೇ ದೈಹಿಕ ತರಬೇತಿಗಾಗಿ ಒಂದು ಕೇಂದ್ರವನ್ನೇ ಸ್ಥಾಪಿಸಿದ್ದ. ಆರ್‌ಎಸ್‌ಎಸ್‌ ಈಗಲೂ ಕಾರ್ಯಾಚರಿಸುತ್ತಿರುವುದು ದೇವಸ್ಥಾನದ ಮೈದಾನಗಳಲ್ಲಿ ದೈಹಿಕ ತರಬೇತಿ ನೀಡುವ ಶಾಖೆಗಳ ಮೂಲಕ. ಗಾಂಧಿಹತ್ಯೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ನಾಥುರಾಮ್‌ ಗೋಡ್ಸೆ ಮತ್ತು ನಾರಾಯಣ್‌ ಆಪ್ಟೆ ಸಾವರ್ಕರ್‌ ʼಫ್ಯೂರರ್‌ʼ ಆಗಿದ್ದ <em>ಹಿಂದು ರಾಷ್ಟ್ರ ದಳ್‌</em> ಎಂಬ ಒಳಸಂಘಟನೆಯ ಮುಖ್ಯ ಕಾರ್ಯಕರ್ತರಾಗಿದ್ದರು. ಗಾಂಧಿಹತ್ಯೆಯಲ್ಲಿ ಆರೋಪಿಯಾಗಿದ್ದ ಮತ್ತೊಬ್ಬ ವ್ಯಕ್ತಿ ಡಾ. ದತ್ತಾತ್ರೇಯ ಪರ್ಚುರೆ <em>ಹಿಂದು ರಾಷ್ಟ್ರ ಸೇನ </em>ಎಂಬ ಸಂಘಟನೆಯ ನಾಯಕನಾಗಿದ್ದ. ಈ ಸಂಘಟನೆಗಳೆಲ್ಲ ತಮ್ಮ ದೈನಂದಿನ ಚಟುವಟಿಕೆಯಲ್ಲಿ ದೈಹಿಕ ತರಬೇತಿಯನ್ನೂ ನೀಡುತ್ತಿದ್ದ ಅರೆಸೇನಾ ಸ್ವಭಾವವನ್ನು ಹೊಂದಿದ್ದವು. ಫಾಡ್ಕೆ ಇತಿಹಾಸದಲ್ಲಿ ಹೇಗೆ ಆವರಿಸಿಕೊಂಡ ಎಂಬುದರ ಬಗ್ಗೆ ಇದರಿಂದ ನಮಗೆ ಅರ್ಥವಾಗುತ್ತದೆ.</p>



<figure class="wp-block-image size-full"><img loading="lazy" decoding="async" width="580" height="408" src="https://peepalmedia.com/wp-content/uploads/2024/01/pansare1.jpg" alt="" class="wp-image-34971" srcset="https://peepalmedia.com/wp-content/uploads/2024/01/pansare1.jpg 580w, https://peepalmedia.com/wp-content/uploads/2024/01/pansare1-300x211.jpg 300w, https://peepalmedia.com/wp-content/uploads/2024/01/pansare1-150x106.jpg 150w" sizes="auto, (max-width: 580px) 100vw, 580px" /></figure>



<p>ಅಷ್ಟೇ ಅಲ್ಲ, ಚಿತ್ಪಾವನ ಬ್ರಾಹ್ಮಣ ರಾಷ್ಟ್ರ ಕಲ್ಪನೆ ನಂತರದ ಕಾಲದಲ್ಲಿ ವಿಕಾಸ ಹೊಂದಿದ್ದು ಮರಾಠ ಸಾಮ್ರಾಜ್ಯವನ್ನು ಮುಂದಿಟ್ಟುಕೊಂಡಾಗಿತ್ತು. ಶಿವಾಜಿಯ ಸಾಮ್ರಾಜ್ಯವನ್ನು ಅವರು ಹಿಂದೂ ಸಾಮ್ರಾಜ್ಯವಾಗಿ ವ್ಯಾಖ್ಯಾನಿಸಿದರು. ಗಂಭೀರವಾದ ಎಲ್ಲ ಇತಿಹಾಸ ಸಂಶೋಧನೆಗಳು ಈ ವ್ಯಾಖ್ಯಾನವನ್ನು ವಿರೋಧಿಸಿವೆ. ಶಿವಾಜಿಯ ಮುಖ್ಯ ಸೇನಾಧಿಕಾರಿ ಸಹಿತ ಹಲವರು ಮುಸ್ಲಿಮರಾಗಿದ್ದರು ಎಂಬ ಸತ್ಯವನ್ನು ಮರೆಮಾಚಿಕೊಂಡು, ಶಿವಾಜಿ ಮತ್ತು ಮೊಘಲರ ನಡುವಿನ ಯುದ್ಧವನ್ನು ಹಿಂದೂ-ಮುಸ್ಲಿಂ ಹೋರಾಟವಾಗಿ ನಿರೂಪಿಸುವ ಪ್ರಕ್ರಿಯೆಯನ್ನು ಫಾಡ್ಕೆಯಿಂದ ಹಿಡಿದು ನಂತರದ ಚಿತ್ಪಾವನ ನೇತೃತ್ವದ ಹಿಂದೂ ಸಂಘಟನೆಗಳು ನಡೆಸಿದವು. ಹಾಗಾಗಿ ಒಂದು ಬಣ್ಣವನ್ನು, ಹಿಂದೂ ಬಣ್ಣವನ್ನು ಶಿವಾಜಿ ಮತ್ತು ಮರಾಠ ಸಾಮ್ರಾಜ್ಯದ ಮೇಲೆ ಹಚ್ಚಲು ಮುಖ್ಯ ಕಾರಣ, ಶಿವಾಜಿಯ ನಂತರದ ಮರಾಠ ಸಾಮ್ರಾಜ್ಯ, ಪೇಶ್ವಾಸಾಮ್ರಾಜ್ಯ ಚಿತ್ಪಾವನ ಬ್ರಾಹ್ಮಣರ ಸುವರ್ಣ ಕಾಲವಾಗಿತ್ತು ಎಂಬುದೇ ಆಗಿದೆ. ಫಾಡ್ಕೆ ಪ್ರಯತ್ನಿಸಿದ್ದು ಪೇಶ್ವಾಸಾಮ್ರಾಜ್ಯದ ಪುನರ್‌ ಸ್ಥಾಪನೆಗೆ ಆಗಿದ್ದರೆ ತಿಲಕ್‌ ಪ್ರಯತ್ನ ಪಟ್ಟಿದ್ದು ಹಿಂದೂ ವರ್ಣ ವ್ಯವಸ್ಥೆಯ ಬುನಾದಿಯ ಮೇಲೆ ಬ್ರಾಹ್ಮಣ ರಾಷ್ಟ್ರ ಕಟ್ಟಲಾಗಿತ್ತು. ಇದು ಸಾವರ್ಕರ್‌ ತನಕ ತಲುಪುವಾಗ ಚಿತ್ಪಾವನ ಹಿಂದೂ ರಾಷ್ಟ್ರ ಕಲ್ಪನೆಯಿಂದ ಹಿಂದೂ ರಾಷ್ಟ್ರ ಕಲ್ಪನೆಯಾಗಿ ಬದಲಾಗುತ್ತದೆ. ಮನುಸ್ಮೃತಿ ಕಾಲದ ಸಾಮಾಜಿಕ ಅಧಿಪತ್ಯವನ್ನು ಹೊಸ ರಾಷ್ಟ್ರದಲ್ಲಿ ಬ್ರಾಹ್ಮಣ ಹಿಂದೂ ರಾಜಕೀಯ ಅಧಿಪತ್ಯವಾಗಿ ವಿಕಾಸ ಪಡಿಸಲು ಸಾವರ್ಕರ್‌ ಪ್ರಯತ್ನಿಸಿದ. ಈ ವಿಕಾಸದ ಉದ್ದಕ್ಕೂ ರಾಷ್ಟ್ರಾಡಳಿತದ ಮಾದರಿ ಬಿಂಬ ಮಾತ್ರ ಶಿವಾಜಿಯ ಮರಾಠಾ ಸಾಮ್ರಾಜ್ಯವೇ ಆಗಿತ್ತು. ಆದ್ದರಿಂದಲೇ ಹಿಂದೂ ವ್ಯಾಖ್ಯಾನಗಳಿಂದ ಶಿವಾಜಿಯನ್ನು ಹೊರತರುವ ಯಾವ ಇತರ ವ್ಯಾಖ್ಯಾನಗಳನ್ನೂ ಹಿಂದುತ್ವ ರಾಜಕೀಯ ಸಹಿಸಲೇ ಇಲ್ಲ. ಅದರ ಅತ್ಯಂತ ಕೊನೆಯ ಉದಾಹರಣೆ ಗೋವಿಂದ್‌ ಪನ್ಸಾರೆ. ಚಾರಿತ್ರಿಕ ದೃಷ್ಟಿಕೋನದಿಂದ ಶಿವಾಜಿಯನ್ನು ವಿಶ್ಲೇಷಿಸಿ ಪುಸ್ತಕ ಬರೆದ ಬೆನ್ನಿಗೇ ಪನ್ಸಾರೆಯನ್ನು ಹಿಂದುತ್ವ ಸಂಘಟನೆಗಳು ತಮ್ಮ ಹಿಟ್‌ಲಿಸ್ಟಿಗೆ ಸೇರಿಸಿದರು. ಕೊನೆಗೆ ಪನ್ಸಾರೆಯ ಹತ್ಯೆಯೂ ನಡೆಯಿತು.</p>



<p>ಶಿವಾಜಿಯನ್ನು ಈ ಮಟ್ಟಿಗೆ ಒಂದು ಬ್ರಾಹ್ಮಣ ಕೇಂದ್ರಿತ ರಾಜಕೀಯದ ಬಿಂಬವಾಗಿ ಬ್ರಿಟಿಷ್‌ ಇಂಡಿಯಾದಲ್ಲಿ ಮೊದಲ ಬಾರಿಗೆ ಪ್ರಯೋಗಿಸಿರುವುದು ಫಾಡ್ಕೆ. ಶಿವಾಜಿಯ ತಂತ್ರದ ಮುಂದುವರಿಕೆಯೆಂಬಂತೆ ಫಾಡ್ಕೆ ಮತ್ತು ಸಹಚರರು ಬ್ರಿಟಿಷರ ವಿರುದ್ಧ ಭೂಗತ ಹೋರಾಟ ಆರಂಭಿಸುತ್ತಾರೆ. ೧೮೭೯ ಮೇಯಲ್ಲಿ ತನ್ನ ಕೆಳಜಾತಿ ಆತ್ಮಾಹುತಿ ದಾಳಿಕೋರರನ್ನು ಬಳಸಿಕೊಂಡು ಕೊಂಕಣ ಪ್ರದೇಶದ ಸಿರಿವಂತರನ್ನು ಕೊಳ್ಳೆ ಹೊಡೆದು ೧,೫೦,೦೦೦ಕ್ಕೂ ಹೆಚ್ಚು ಹಣ ಫಾಡ್ಕೆಯ ಸಂಘ ಒಟ್ಟುಗೂಡಿಸಿತ್ತು. ದೌಲತ್‌ ರಾವ್‌ ನಾಯಕ್‌ ಎಂಬಾತನ ನೇತೃತ್ವದಲ್ಲಿ ಈ ದರೋಡೆ ನಡೆದಿತ್ತು. ಆದರೆ ಈ ದುಡ್ಡು ಪುಣೆ ತಲುಪುವ ಮೊದಲೇ ಮಾವಲದ ತುಳ್ಸಿ ಕಣಿವೆಯಲ್ಲಿ ಮೇಜರ್‌ ಡೇನಿಯಲನ ನೇತೃತ್ವದ ಬ್ರಿಟಿಷ್‌ ಸೈನ್ಯ ಭೀಕರವಾದ ಹೋರಾಟದಲ್ಲಿ ಅವರನ್ನು ಸೋಲಿಸಿತು. ದೌಲತ್‌ ರಾವ್‌ ನಾಯಕ್‌ ಈ ಯುದ್ಧದಲ್ಲಿ ಕೊಲೆಯಾದ. ಬೆನ್ನಲ್ಲೇ ಫಾಡ್ಕೆಯನ್ನು ಹುಡುಕಿ ಕೊಡಲು ಬ್ರಿಟಿಷ್‌ ಸರಕಾರ ನೋಟೀಸ್‌ ಜಾರಿಗೊಳಿಸಿತು.</p>



<p>ಪೇಶ್ವಾ ಪ್ರಧಾನ್‌ ಎಂಬ ನೆಲೆಯಲ್ಲಿ ಫಾಡ್ಕೆಯೂ ಅಂದಿನ ಬಾಂಬೆ ಗವರ್ನರ್‌ ಆಗಿದ್ದ ಸರ್‌ ರಿಚರ್ಡ್‌ ಟೆಂಪಲ್‌ನ ತಲೆ ಕಡಿದು ತರುವವರಿಗೆ ಇನಾಂ ಘೋಷಿಸಿದ. ೧೮೭೯ ಮೇ ೧೩ ರಂದು ಫಾಡ್ಕೆಯ ಸಂಘ ಪುಣೆಯ ವಿಶ್ರಂಭಾಗ್‌ ವಾಡಾ ಮತ್ತು ಬುಧವಾರ್‌ ವಾಡಾದ ಎರಡು ಬ್ರಿಟಿಷ್‌ ಬಂಗಲೆಗಳನ್ನು ಬೆಂಕಿಗಾಹುತಿಯಾಗಿಸಿತು. ಹಲವಾರು ದಾಖಲೆಗಳು ನಾಶವಾದವು. ಇದರೊಂದಿಗೆ ಫಾಡ್ಕೆಯ ಚಟುವಟಿಕೆಗಳು ಬ್ರಿಟಿಷ್‌ ಪಾರ್ಲಿಮೆಂಟಿನಲ್ಲಿ ಪ್ರತಿಧ್ವನಿಸಿತು. ಇದರ ನಡುವೆ ಕೆಳಜಾತಿಯವರಾದ ರಾಮೋಶಿಗಳು ಫಾಡ್ಕೆಯ ಸಂಘವನ್ನು ತೊರೆದಿದ್ದರು.</p>



<p>ಇವೆಲ್ಲ ತನಗೆ ಪ್ರತಿಕೂಲವಾಗಿದ್ದರು ಕೂಡ ಶಿವಾಜಿಯ ತಂತ್ರವನ್ನು ಬಳಸಿಕೊಂಡು ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರನ್ನು ಓಡಿಸಿ ಪೇಶ್ವಾ ಸಾಮ್ರಾಜ್ಯವನ್ನು ಮತ್ತೆ ಕಟ್ಟಬಹುದೆಂಬ ಯೋಜನೆಯೊಂದಿಗೆ ತನ್ನ ಚಟುವಟಿಕೆಗಳನ್ನು ಫಾಡ್ಕೆ ಯೋಜಿಸುತ್ತಿದ್ದ. ಬ್ರಿಟಿಷ್‌ ಇಂಡಿಯಾದ ಬೆನ್ನುಲುಬಾಗಿದ್ದ ಸೇತುವೆಗಳು, ಟೆಲಿಗ್ರಾಫ್‌ ಲೈನುಗಳು, ರೈಲ್ವೇ ಹಳಿಗಳು ಮೊದಲಾದವನ್ನು ನಾಶಪಡಿಸುತ್ತಾ ಬ್ರಿಟಿಷ್‌ ಸರಕಾರದ ವಾರ್ತಾಜಾಲವನ್ನು ತುಂಡರಿಸಬಹುದೆಂದು ಫಾಡ್ಕೆ ಯೋಚಿಸಿದ. ಅದರ ಜೊತೆಗೆ ಬ್ರಿಟಿಷ್ ಇಂಡಿಯಾದ ಜೈಲುಗಳನ್ನು ಹೊಡೆದುರುಳಿಸಿ ಖೈದಿಗಳನ್ನು ಬಿಡುಗಡೆಗೊಳಿಸಿ ಅವರನ್ನು ಬ್ರಟಿಷರ ವಿರುದ್ಧದ ಸಶಸ್ತ್ರ ಹೋರಾಟದಲ್ಲಿ ಬಳಸಬಹುದೆಂದು ಯೋಜನೆ ಹಾಕಿದ. ಆದರೆ ನಡೆದದ್ದು ಮಾತ್ರ ಇನ್ನೊಂದು. ಶೋಲಾಪುರ-ಕರ್ನಾಟಕ ಗಡಿಭಾಗದ ಗಂಗಾಪುರ ಎಂಬಲ್ಲಿ ಆತ ಬ್ರಿಟಿಷರ ಬಲೆಗೆ ಬಿದ್ದ. ವಿಚಾರಣೆಯ ನಂತರ ಆತನನ್ನು ಏಡನ್‌ಗೆ ಗಡಿಪಾರು ಮಾಡಲಾಯಿತು (ಯಮನಿನ ಏಡನ್‌ ಆಗ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು). ಅಲ್ಲಿಂದ ಪಾರಾಗಲು ಫಾಡ್ಕೆ ಪ್ರಯತ್ನಿಸಿದನಾದರೂ ಪರಾಜಯಗೊಂಡ. ಕೊನೆಗೆ ಆಹಾರ ತ್ಯಜಿಸಿ ೧೮೮೩ ಫೆಬ್ರವರಿ ೧೭ ರಂದು ಮರಣ ಹೊಂದಿದ.</p>



<p>೧೮೯೬-೯೭ ಕಾಲಘಟ್ಟದಲ್ಲಿ ಪ್ಲೇಗ್‌ ಸಾಂಕ್ರಾಮಿಕ ರೋಗ ಇಂಡಿಯಾ ತಲುಪಿತ್ತು. ೧೮೫೫ರಲ್ಲಿ ಚೀನಾದ ಯುನಾನ್‌ ಪ್ರಾಂತ್ಯದಲ್ಲಿ ಇದು ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಭೂಮಿಯ ಮೇಲಿಂದ ದೊಡ್ಡದೊಂದು ಜನಸಂಖ್ಯೆಯನ್ನು ಅಳಿಸಿ ಹಾಕಿದ ಮಹಾಮಾರಿಯಾಗಿತ್ತು ಪ್ಲೇಗ್.‌ ಒಟ್ಟು ಭೂಮಿಯ ಮೇಲೆ ೧೫ ದಶಲಕ್ಷದಷ್ಟು ಸಾವು ಈ ಬ್ಯುಬೋನಿಕ್‌ ಪ್ಲೇಗ್‌ ಕಾರಣದಿಂದ ಸಂಭವಿಸಿತ್ತು ಎಂದು ಅಂಕಿಅಂಶಗಳು ಹೇಳುತ್ತವೆ. ಇದು ನಿಜವಾದ ಲೆಕ್ಕ ಅಲ್ಲವೆಂದೂ ೧೦ ದಶಲಕ್ಷದಷ್ಟು ಜನರು ಭಾರತದಲ್ಲಿ ಮಾತ್ರ ಸತ್ತಿದ್ದಾರೆಂದೂ ಹೇಳುತ್ತಾರೆ. ಬಹುಷಃ ಬ್ರಿಟಿಷ್‌ ಇಂಡಿಯಾದಲ್ಲಿ ಕಾಣಿಸಿಕೊಂಡ ಅತ್ಯಂತ ದೊಡ್ಡ ಸಾಂಕ್ರಾಮಿಕ ರೋಗ ಇದೇ ಆಗಿರಬೇಕು. ಕೇರಳೀಯನೂ, ನವೋತ್ಥಾನ ಚಳುವಳಿಯ ಆರಂಭಿಕರಲ್ಲಿ ಒಬ್ಬರೂ ಆಗಿದ್ದ ಡಾ. ಪಲ್ಪು, ಮೈಸೂರಿನಲ್ಲಿ ಪ್ಲೇಗ್‌ ವಿರುದ್ಧ ಹೋರಾಡುವ ತಂಡದ ನಾಯಕತ್ವ ವಹಿಸಿದ್ದರು. ಕ್ವಾರೆಂಟೈನ್‌ ಮತ್ತು ಆಸ್ಪತ್ರೆ ಚಿಕಿತ್ಸೆಗಳನ್ನು ಒಳಗೊಂಡ ವಿಧಾನವನ್ನು ಡಾ. ಪಲ್ಪು ಕೈಗೊಂಡಿದ್ದರು. ಆದರೂ ಮನುಷ್ಯರು ಇಲಿಗಳ ಹಾಗೆ ಸತ್ತು ಬೀಳುತ್ತಿದ್ದ ದಿನಗಳ ಕುರಿತು ಡಾ. ಪಲ್ಪು ತನ್ನ ದಿನಚರಿಯಲ್ಲಿ ಹೃದಯಸ್ಪರ್ಶಿಯಾಗಿ ಬರೆದಿದ್ದಾರೆ.</p>



<figure class="wp-block-image size-full"><img loading="lazy" decoding="async" width="300" height="300" src="https://peepalmedia.com/wp-content/uploads/2024/01/file7blx73vraytqm0xqgi5-1598186565-300x300-1.jpg" alt="" class="wp-image-34972" srcset="https://peepalmedia.com/wp-content/uploads/2024/01/file7blx73vraytqm0xqgi5-1598186565-300x300-1.jpg 300w, https://peepalmedia.com/wp-content/uploads/2024/01/file7blx73vraytqm0xqgi5-1598186565-300x300-1-150x150.jpg 150w" sizes="auto, (max-width: 300px) 100vw, 300px" /></figure>



<p>೧೯೬೦ರ ತನಕವೂ ಹಬ್ಬಿದ್ದ ಮಹಾರೋಗದ ಕಾಲವನ್ನು ಈ ಪ್ಲೇಗ್‌ ಮಹಾಮಾರಿ ಅನಾವರಣಗೊಳಿಸಿತ್ತು. ಸಹಜವಾಗಿಯೇ ಬಾಂಬೆಯಲ್ಲಿ ಆರಂಭವಾದ ಮಹಾಮಾರಿಯನ್ನು ತಡೆದು ನಿಲ್ಲಿಸಬೇಕಾದ ಜವಾಬ್ದಾರಿಯೂ ಬಾಂಬೆ ಪ್ರಾಂತ್ಯದಲ್ಲಿ ಅಧಿಕಾರದಲ್ಲಿದ್ದ ಬ್ರಿಟಿಷ್‌ ಅಧಿಕಾರಿಗಳ ಹೆಗಲ ಮೇಲೆ ಬಿದ್ದಿತ್ತು. ಕ್ವಾರಂಟೈನ್‌ ಮತ್ತು ಆಸ್ಪತ್ರೆ ವ್ಯವಸ್ಥೆಗಳ ಜೊತೆಗೆ ಲಸಿಕೆ ಹಾಕಿಸುವುದನ್ನೂ ತುರ್ತಾಗಿ ಶುರು ಮಾಡಬೇಕಾಗಿತ್ತು. ಇದನ್ನೆಲ್ಲ ಜಾರಿಗೊಳಿಸಲು ವಾಲ್ಟರ್‌ ಚಾರ್ಲ್ಸ್‌ ರಾನ್ಡ್‌ ಎಂಬ ಅಧಿಕಾರಿಯನ್ನು ಪ್ಲೇಗ್‌ ಅಧಿಕಾರಿಯಾಗಿ ನೇಮಿಸಲಾಯಿತು. ಚಿಕಿತ್ಸೆಯ ಮೇಲ್ನೋಟವನ್ನು ಡಬ್ಯೂ.ಡಬ್ಯೂ. ಬೆವರಿಡ್ಜ್‌ ಎಂಬ ಸರ್ಜನ್ನಿಗೂ ವಹಿಸಲಾಯಿತು. ೧೮೯೭ರ ಫೆಬ್ರವರಿಯಲ್ಲಿ ಅವರು ಪುಣೆ ತಲುಪಿದ್ದರು. ಮಹಾಮಾರಿ ಹರಡುವಿಕೆಯನ್ನು ತಡೆಯಲು ರಚಿಸಿದ್ದ ಸ್ಪೆಷಲ್‌ ಪ್ಲೇಗ್‌ ಕಮಿಟಿಯ (ಎಸ್.ಪಿ.ಸಿ) ಸದಸ್ಯರಾಗಿದ್ದರು ಅವರಿಬ್ಬರು. ಭಾರತದಲ್ಲಿ ಪ್ಲೇಗ್‌ ಹರಡುವ ವೇಗ ನಿಯಂತ್ರಣಾತೀತವಾದಾಗ ಯುರೋಪಿನ ದೇಶಗಳು ಭಾರತದೊಂದಿಗಿನ ಆಮದು ವಹಿವಾಟನ್ನು ನಿಲ್ಲಿಸುವ ಹಂತಕ್ಕೆ ಬಂದವು. ಈ ಹೊತ್ತಲ್ಲೇ ಬ್ರಿಟಿಷ್‌ ಇಂಡಿಯಾ ಸರಕಾರ ೧೮೯೭ರ ಸಾಂಕ್ರಾಮಿಕ ರೋಗ ಕಾನೂನನ್ನು ಜಾರಿಗೆ ತರುವುದು. ಈ ಕಾನೂನಿನ ಪ್ರಕಾರ ವೈದ್ಯರುಗಳು ಮಾತ್ರವಲ್ಲದೆ ಸ್ವಯಂಸೇವಕರನ್ನೂ ಪ್ಲೇಗ್‌ ನಿಯಂತ್ರಣಕ್ಕೆ ನಿಯೋಗಿಸಬಹುದಾಗಿತ್ತು.</p>



<p>ಪ್ರತಿ ಕುಟುಂಬದ ಮುಖ್ಯ ವ್ಯಕ್ತಿ ತನ್ನ ಕುಟುಂಬದ ಪ್ಲೇಗ್‌ ಬಾಧಿತರ ಮತ್ತು ಪ್ಲೇಗ್‌ ಕಾರಣದಿಂದ ಸಾವನ್ನಪ್ಪಿದವರ ವಿವರಗಳನ್ನು ಎಸ್.ಪಿ.ಸಿಗೆ ನೀಡಬೇಕಾಗಿತ್ತು. ಆದರೆ, ಸರಿಯಾದ ಮಾಹಿತಿಗಳು ಎಸ್.ಪಿ.ಸಿಗೆ ಸಿಗದ ಕಾರಣ ರಾನ್ಡ್‌ ಮತ್ತು ತಂಡ ಮನೆ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಲು ಮುಂದಾದರು. ಪ್ಲೇಗ್‌ ರೋಗಿಗಳನ್ನು ಕಂಡರೆ ತಕ್ಷಣ ಅವರನ್ನು ಐಸೊಲೇಷನ್‌ ಕ್ಯಾಂಪುಗಳಿಗೆ ರವಾನಿಸಿದರು. ರೋಗಿಗಳ ಉಡುಪುಗಳನ್ನು ಮತ್ತು ಅವರು ಬಳಸುತ್ತಿದ್ದ ಬಟ್ಟೆಗಳನ್ನು ಬೆಂಕಿ ಹಾಕಿ ಸುಟ್ಟರು. ಸಾವು ರಿಜಿಸ್ಟರ್‌ ಮಾಡದ ಅಂತ್ಯ ಸಂಸ್ಕಾರಗಳನ್ನು ನಿಷೇಧಿಸಲಾಯಿತು. ಇದು ಮರಾಠ ಪ್ರಾಂತ್ಯದ ಬ್ರಾಹ್ಮಣರೊಳಗೆ ಇನ್ನಿಲ್ಲದ ಕೋಲಾಹಲಗಳನ್ನು ಸೃಷ್ಟಿಸಿತು.</p>
]]></content:encoded>
					
		
		
			</item>
		<item>
		<title>ಮನುವಾದಿಗಳಿಗೆ ಹಿಂದುಳಿದವರ ಶಿಕ್ಷಣದ ಮೇಲೇಕೆ ಕಣ್ಣು?</title>
		<link>https://peepalmedia.com/why-petitioners-eye-always-on-the-education-of-the-backward-classes/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 14 Dec 2022 12:51:58 +0000</pubDate>
				<category><![CDATA[ದಲಿತ ನೋಟ]]></category>
		<category><![CDATA[bengalure]]></category>
		<category><![CDATA[dalith]]></category>
		<category><![CDATA[hinduthva]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[manuvada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18529</guid>

					<description><![CDATA[ಬೆಂಗಳೂರಿನ ದೊಡ್ಡ ಗಣಪತಿ ದೇಗುಲದ ಟೆಂಡರ್ ಹೆಸರಲ್ಲಿ ಶೂದ್ರರೇ ನಿಮ್ಮ ಸ್ಥಾನ ಯಾವತ್ತಿಗೂ ಇದೇ ಎಂದು ನೆನಪಿಸಿದಂತೆ ತಮಿಳುನಾಡಿನ ಈರೋಡ್ ನ ಶಾಲೆಯೊಂದರಲ್ಲೂ ಕೂಡ ಇದೇ ರೀತಿ ದಲಿತ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಲಾಗುತ್ತಿದ್ದ ಸುದ್ದಿ ಇತ್ತೀಚೆಗೆ ಬಂದಿತ್ತು. ಎಳವೆಯಲ್ಲೇ ದಲಿತರ ಸ್ಥಾನವನ್ನು ಖುದ್ದು ಅವರಿಗೆ ಮತ್ತು ಇತರರಿಗೆ ತೋರಿಸಿ ಕೊಡುವಂತಹ ಪ್ರಕ್ರಿಯೆ ಇದು. ಮುಂದೆ ಓದಿ ಶಂಕರ್ ಸೂರ್ನಳ್ಳಿ ಅವರ ಲೇಖನ. ಹಿಂದುತ್ವವಾದಿಗಳ ಕುರಿತಂತೆ ಪ್ರಗತಿಪರ ನಿಲುವುಳ್ಳವರು ಹೇಳುವಂತಹ ಪ್ರಮುಖ ಆರೋಪವೆಂದರೆ ಅವರು ಮನುಸ್ಮೃತಿಯನ್ನ ಜಾರಿಗೆ [&#8230;]]]></description>
										<content:encoded><![CDATA[
<p><strong>ಬೆಂಗಳೂರಿನ</strong><strong> </strong><strong>ದೊಡ್ಡ</strong><strong> </strong><strong>ಗಣಪತಿ</strong><strong> </strong><strong>ದೇಗುಲದ</strong><strong> </strong><strong>ಟೆಂಡರ್</strong><strong> </strong><strong>ಹೆಸರಲ್ಲಿ</strong><strong> </strong><strong>ಶೂದ್ರರೇ</strong><strong> </strong><strong>ನಿಮ್ಮ</strong><strong> </strong><strong>ಸ್ಥಾನ</strong><strong> </strong><strong>ಯಾವತ್ತಿಗೂ</strong><strong> </strong><strong>ಇದೇ</strong><strong> </strong><strong>ಎಂದು</strong><strong> </strong><strong>ನೆನಪಿಸಿದಂತೆ</strong><strong> </strong><strong>ತಮಿಳುನಾಡಿನ</strong><strong> </strong><strong>ಈರೋಡ್</strong><strong> </strong><strong>ನ</strong><strong> </strong><strong>ಶಾಲೆಯೊಂದರಲ್ಲೂ</strong><strong> </strong><strong>ಕೂಡ</strong><strong> </strong><strong>ಇದೇ</strong><strong> </strong><strong>ರೀತಿ</strong><strong> </strong><strong>ದಲಿತ</strong><strong> </strong><strong>ಮಕ್ಕಳಿಂದ</strong><strong> </strong><strong>ಟಾಯ್ಲೆಟ್</strong><strong> </strong><strong>ಕ್ಲೀನ್</strong><strong> </strong><strong>ಮಾಡಿಸಲಾಗುತ್ತಿದ್ದ</strong><strong> </strong><strong>ಸುದ್ದಿ</strong><strong> </strong><strong>ಇತ್ತೀಚೆಗೆ</strong><strong> </strong><strong>ಬಂದಿತ್ತು</strong><strong>. </strong><strong>ಎಳವೆಯಲ್ಲೇ</strong><strong> </strong><strong>ದಲಿತರ</strong><strong> </strong><strong>ಸ್ಥಾನವನ್ನು</strong><strong> </strong><strong>ಖುದ್ದು</strong><strong> </strong><strong>ಅವರಿಗೆ</strong><strong> </strong><strong>ಮತ್ತು</strong><strong> </strong><strong>ಇತರರಿಗೆ</strong><strong> </strong><strong>ತೋರಿಸಿ</strong><strong> </strong><strong>ಕೊಡುವಂತಹ</strong><strong> </strong><strong>ಪ್ರಕ್ರಿಯೆ</strong><strong> </strong><strong>ಇದು</strong><strong>. </strong><strong>ಮುಂದೆ</strong><strong> </strong><strong>ಓದಿ</strong><strong> </strong><strong>ಶಂಕರ್</strong><strong> </strong><strong>ಸೂರ್ನಳ್ಳಿ</strong><strong> </strong><strong>ಅವರ</strong><strong> </strong><strong>ಲೇಖನ</strong><strong>.</strong></p>



<p>ಹಿಂದುತ್ವವಾದಿಗಳ ಕುರಿತಂತೆ ಪ್ರಗತಿಪರ ನಿಲುವುಳ್ಳವರು ಹೇಳುವಂತಹ ಪ್ರಮುಖ ಆರೋಪವೆಂದರೆ ಅವರು ಮನುಸ್ಮೃತಿಯನ್ನ ಜಾರಿಗೆ ತರಲು ಹೊರಟಿದ್ದಾರೆನ್ನುವುದು. ಮನುಸ್ಮೃತಿಯೆನ್ನುವುದು ಧಾರ್ಮಿಕ ಹಿನ್ನೆಲೆಯಿಂದ ಸಾಮಾಜಿಕ ಕಟ್ಟುಪಾಡು ನೀತಿ ನಿಯಮಗಳನ್ನು ಬೋಧಿಸುವ ಅಥವಾ ನಿರ್ದೇಶಿಸುವಂತಹ ಹಲವಾರು ಶ್ಲೋಕಗಳುಳ್ಳ ಸದ್ಯದ ಮಟ್ಟಿಗೆ ಹೇಳುವುದಾದರೆ ಒಂದು ದೊಡ್ಡ ಗ್ರಂಥ. ಹೆಚ್ಚಾಗಿ ಆಗಿನ ಸಾಹಿತ್ಯಿಕ ದಾಖಲಾತಿಗಳು ಶ್ರುತಿ ಮತ್ತು ಸ್ಮೃತಿಯ ರೂಪದಲ್ಲಿಯೇ ಇರುತ್ತಿದ್ದವು. ಅದರ ಹೆಸರೇ ಸೂಚಿಸುವಂತೆ ಮೂಲತ: ಅದೊಂದು ಸ್ಮೃತಿ (ನೆನಪಿನ ರೂಪದಲ್ಲಿ ದಾಖಲಿಸಿಕೊಂಡಂತಹ) ರೂಪದ ದಾಖಲೆ.</p>



<p>ಇಂದು ಯಾಗ ಹೋಮವೇ ಮೊದಲಾದ ವೈದಿಕ ಕಾರ್ಯಗಳಲ್ಲಿ ಪುಸ್ತಕಗಳನ್ನು ನೋಡಿ ಮಂತ್ರ ಪಠಿಸುವವರನ್ನು ನೋಡಬಹುದು. ಆದರೆ ಹಿಂದೆ ಅಂತಹವರನ್ನು ಕನಿಷ್ಠವಾಗಿ ನೋಡಲಾಗುತ್ತಿತ್ತಂತೆ. ಬಹುತೇಕ ಅಧ್ಯಯನಗಳಲ್ಲೇ ಇರುವ ವೈದಿಕರಿಗೆ ವೇದ, ಗೀತೆ ಮೊದಲಾದ ಸಂಸ್ಕೃತ ಸಾಹಿತ್ಯ ದಾಖಲೆಗಳನ್ನು ಕಂಠಪಾಠ ಮಾಡಿಕೊಳ್ಳುವುದು ದೊಡ್ಡ ಕಷ್ಟವೇನಲ್ಲ. ಬರವಣಿಗೆಗೆ ಸ್ವಂತ ಲಿಪಿಯೂ ಇರದ (ಇಂಗ್ಲಿಷರು ರೋಮನ್ ಲಿಪಿ ಬಳಸುವಂತೆ ಸಂಸ್ಕೃತದ ದಾಖಲೆಗಳಿರುವುದು ದೇವನಾಗರೀ ಲಿಪಿಯಲ್ಲಿ) ಹಾಗೂ ಬರವಣಿಗೆಗಾಗಿ ಇನ್ನೂ ಕಾಗದದ ಆವಿಷ್ಕಾರವಾಗದೇ ತಾಳೆಗರಿಯಂತಹ ಪ್ರಾಕೃತಿಕ ವಸ್ತುವನ್ನೇ ಅವಲಂಬಿತವಾಗಿರುವ ಅಂದಿನ ಸಂದರ್ಭದಲ್ಲಿ ಇದು ಅನಿವಾರ್ಯವಾಗಿತ್ತು ಕೂಡಾ. ತುಳುನಾಡಿನ ದೈವಾರಾಧಕರ ಪಾಡ್ದನವೂ ಇದೇ ರೀತಿಯದ್ದೇ ಆಗಿದೆ. ಈ ಬಗ್ಗೆ ಅಧ್ಯಯನ ಮಾಡಿರುವ ಜನಪದ ವಿದ್ವಾಂಸ ಡಾ. ಚಿನ್ನಪ್ಪ ಗೌಡರು ಈ ಪಾಡ್ದನಗಳ ಕುರಿತಂತೆ ಅಚ್ಚರಿಯಿಂದ ತುಳು ಪಾಡ್ದನಗಳ ಹದಿನೈದು ಸಾವಿರಕ್ಕೂ ಹೆಚ್ಚಿನ ಸಾಲುಗಳನ್ನು ಭೂತ ಕೋಲದ ಪಾಡ್ದನಕಾರರು ನೆನಪಿಟ್ಟು ಕೊಂಡಂತಹ ದಾಖಲೆಗಳಿವೆ ಎಂದಿದ್ದರು.</p>



<p><strong>ಮನುಸ್ಮೃತಿಯ</strong><strong> </strong><strong>ಜಾರಿ</strong><strong> </strong><strong>ಎನ್ನುವ</strong><strong> </strong><strong>ಅಪಾಯದ</strong><strong> </strong><strong>ಮುನ್ನೆಚ್ಚರಿಕೆ</strong><strong>&nbsp;</strong></p>



<p>ಈ ಬಗೆಯ ಸಾವಿರಾರು ವರ್ಷಗಳ ಹಿಂದಿನ ಮನುಸ್ಮೃತಿಯಂತಹ ಧಾರ್ಮಿಕ ಕಟ್ಟುಪಾಡುಗಳ ಶಾಸನವನ್ನು ಈ ಕಾಲದಲ್ಲೂ ಕೂಡ ಯಥಾವತ್ತಾಗಿ ಜಾರಿಗೆ ತರಲು ನಿಜಕ್ಕೂ ಸಾಧ್ಯವೆ? ಖಂಡಿತಾ ಇಲ್ಲ. ಆದರೆ ಈ ಕಾಲಕ್ಕೆ ಹೊಂದುವಂತೆ ಅದನ್ನು ಶಾಸನ ರೂಪದಲ್ಲಿ ಅಳವಡಿಸಿ ಕೊಳ್ಳುವ ಸಾಧ್ಯತೆಯನ್ನು ಮಾತ್ರ ಖಂಡಿತಾ ಅಲ್ಲಗಳೆಯಲಾಗದು. ಅಂದರೆ, ಜಾತೀಯತೆ, ಸ್ತ್ರೀ ಸಂಬಂಧಿ ಕಟ್ಟುಪಾಡುಗಳು, ಬ್ರಾಹ್ಮಣ್ಯದ ಹೆಚ್ಚುಗಾರಿಕೆಯ ಮರುಸ್ಥಾಪನೆ ಖಂಡಿತಾ ಸಾಧ್ಯ. ಮುಖ್ಯವಾಗಿ ಅದರ ಹಂತ ಹಂತದ ಅಳವಡಿಕೆಯನ್ನು ಇಂದು ನಾವು ಕಣ್ಣಾರೆ ನೋಡುತ್ತಿದ್ದೇವೆ ಕೂಡ. ಪ್ರಗತಿಪರರು ಎಚ್ಚರಿಸುವ ಮನುಸ್ಮೃತಿಯ ಜಾರಿ ಎನ್ನುವ ಅಪಾಯದ ಮುನ್ನೆಚ್ಚರಿಕೆಯೆಂದರೆ ಇದೇನೆ.</p>



<p>ಉದಾಹರಣೆಗೆ: ಶತಮಾನಗಳ ಹಿಂದೆ ಬ್ರಾಹ್ಮಣ ಕ್ಷತ್ರಿಯರನ್ನು ಹೊರತು ಪಡಿಸಿ ಸ್ತ್ರೀಯರನ್ನೂ ಸೇರಿ ಇತರರಿಗೆ ವಿದ್ಯೆ ಅಧಿಕಾರಗಳಿಗೆ ಅವಕಾಶವನ್ನು ನಿರಾಕರಿಸಲಾಗಿತ್ತು. (ಸ್ತ್ರೀಯರ ಕುರಿತಂತೆ ಇದನ್ನು ಹೇಳಿದಾಕ್ಷಣ ಸನಾತನವಾದಿಗಳು ಮೈತ್ರೇಯಿ, ಗಾರ್ಗೇಯಿಯರ ಕಥೆ ಶುರುವಿಟ್ಟುಕೊಳ್ಳುತ್ತಾರೆ. ಇಂತಹ ಆಕಸ್ಮಿಕ ಉದಾಹರಣೆಗಳು ಐತಿಹಾಸಿಕ ಸಂಗತಿಗಳ ನಿಜವಾದ ಪ್ರತಿನಿಧಿತ್ವವನ್ನು ಯಾವತ್ತೂ ತೋರುವುದಿಲ್ಲ. ತೀರಾ ಇತ್ತೀಚೆಗಿನವರೆಗೂ ಸ್ತ್ರೀಯರ ಮೇಲಿನ ಕಟ್ಟುಪಾಡುಗಳ ನಿರ್ಬಂಧಗಳು ಮತ್ತು ಆ ಕುರಿತ ಹೋರಾಟಗಳಿಗೆ ಲೆಕ್ಕವಿಲ್ಲದಷ್ಟು ಐತಿಹಾಸಿಕ ದಾಖಲೆಗಳೇ ನಮ್ಮ ಮುಂದಿವೆ) ಧಾರ್ಮಿಕತೆಯ ನೆವನದ ಮೂಲಕ ಪ್ರಭುತ್ವವನ್ನು ಹಂಗಿನಲ್ಲಿರಿಸಿಕೊಂಡಿದ್ದ ಸನಾತನವಾದಿಗಳ ಹಿಡಿತ ತಪ್ಪಿ ನಂತರ ಶತಮಾನಗಳ ಕಾಲ ಆಳಿದ ಬ್ರಿಟಿಷರೇ ಮೊದಲಾದ ಅನ್ಯಮತೀಯರ ದೆಸೆಯಿಂದಾಗಿ ವಿದ್ಯೆಗೆ ಅವಕಾಶವೊದಗಿಸಿಕೊಂಡ ಶೂದ್ರವರ್ಗ ಇದೀಗ ತಮ್ಮನ್ನು ಈ ತನಕ ವಿದ್ಯೆ ವಂಚಿತರನ್ನಾಗಿಸಿದ್ದ ಸಮುದಾಯಕ್ಕೆ ಪ್ರತಿಯಾಗಿ ಅಥವಾ ಕೊನೇ ಪಕ್ಷ ತಟಸ್ಥವಾಗಿ ನಿಲ್ಲುವ ಬದಲು ಅವರ ಆದೇಶ ಪರಿಪಾಲನೆಯ ಕಾಲಾಳುಗಳಾಗಿಯೇ ಮಾರ್ಪಟ್ಟಿರುವುದು ಕಾಲದ ಒಂದು ಚೋದ್ಯವೇ ಸರಿ.</p>



<p>ಬ್ರಾಹ್ಮಣರಿಗಿಂತ ಶೂದ್ರ ವರ್ಗವೇ ಕಡು ಹಿಂದುತ್ವದ ಪ್ರತಿಪಾದನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿ ಕೊಂಡಿವೆ. ಅಸ್ಪೃಶ್ಯತೆಯ ಹೆಸರಲ್ಲಿ ದೇಗುಲದ ಆವರಣಕ್ಕೂ ಪ್ರವೇಶವಿಲ್ಲದಿದ್ದ ಶೂದ್ರ ವರ್ಗ ದೇಗುಲ ಪ್ರವೇಶದ ಅವಕಾಶವನ್ನು ಪಡೆದಂದಿನಿಂದ ಇದೀಗ ದೇಗುಲದ ಧಾರ್ಮಿಕ ಕರಸೇವೆಗಳು, ಕೇಸರಿ ಬಂಟಿಂಗ್ ಕಟ್ಟುವುದು, ಬಾವುಟ ಹಾರಿಸುವುದು, ಜೈಕಾರ ಕೂಗುವುದು ಇತ್ಯಾದಿಗಳಲ್ಲಿ ನಿರತವಾಗಿವೆ. ಕುರ್ಚಿ ಬೆಂಚುಗಳಿಲ್ಲದ ಶಾಲೆಗಳಿಗೆ ಹತ್ತು ರೂ ಕೊಡಲು ಹಿಂದೇಟು ಹಾಕುವ ಕೈಗಳು ದೇಗುಲಗಳಿಗೆ ಪೂಜೆಗಳಿಗೆ ಪುರೋಹಿತರಿಗೆ ಬಿಂದಾಸ್ ದಾನ, ಧರ್ಮ, ದಕ್ಷಿಣೆ ಕೊಡುವುದು, ವ್ರತಾಚರಣೆಗಳು ಮುಂತಾದವುಗಳ ಹೆಸರಲ್ಲಿ ಬ್ರಾಹ್ಮಣರ ಸೇವೆಗಾಗೇ ಟೊಂಕ ಕಟ್ಟಿಕೊಂಡು ಶೂದ್ರ ಪಡೆ ನಿಂತಿವೆ. ಶೂದ್ರ ವರ್ಗದ ಮದುವೆ, ಗೃಹ ಪ್ರವೇಶ, ನಾಮಕರಣಗಳ ಕಡೆ ಈತನಕ ಕಣ್ಣೆತ್ತಿಯೂ ನೋಡದಿದ್ದ ಬ್ರಾಹ್ಮಣ ವರ್ಗ ಈಗ ಕೈಯಲ್ಲಿ ಕಾಸಾಡುವ ಹಾಗೂ ಧಾರ್ಮಿಕ ಪೌರೋಹಿತ್ಯದ ಕಾರ್ಯಗಳಿಗೆ ಕಣ್ಮುಚ್ಚಿಕೊಂಡು ಖರ್ಚು ಮಾಡುವ ಶೂದ್ರ ವರ್ಗದ ಕಡೆ ಇನ್ನಿಲ್ಲದ ಆಸಕ್ತಿಯನ್ನು ತೋರುತ್ತಿವೆ. ಶೂದ್ರರು ಮೇಲ್ವರ್ಗದ ಹೊರತಾಗಿ ಯಾರಿಂದಲೋ ಪಡೆದ ಅಕ್ಷರ ವಿದ್ಯೆಯನ್ನು ಇದೀಗ ಹಿಂದುತ್ವ ವಿರೋಧಿಗಳ ವಿರುದ್ಧ ಕೆಂಡ ಕಾರಲು ಬಳಸಲಾಗುತ್ತಿದೆ. ಅದೇ &nbsp; ರೀತಿ, ಯಾರದೋ ಹೋರಾಟದ ಫಲದಿಂದಲೋ ದೊರಕಿದ ದೇಗುಲ ಪ್ರವೇಶ ಈಗ ಕರಸೇವೆ ಮೆರವಣಿಗೆಗೆ ಉಪಯುಕ್ತವಾಗುತ್ತಿದೆ. ’ಸೋಲನ್ನೇ ಗೆಲುವಾಗಿಸುವ” ವೈದಿಕರ ಈ ಕಲೆಯನ್ನು ಮೆಚ್ಚಲೇ ಬೇಕು. ಇಂತಹಾ ಎಲ್ಲಾ ಪೂರಕ ವಾತಾವರಣಗಳು ಸನಾತನವಾದಿಗಳ ಮನುಸ್ಮೃತಿ ಶಾಸನದ ಅಳವಡಿಕೆಯ ಸಾಧ್ಯತೆಯನ್ನು ಮತ್ತಷ್ಟು ಸುಲಭವಾಗುವಂತೆ ಮಾಡಿರುವುದಂತೂ ಸತ್ಯ.</p>



<p><strong>ಬ್ರಾಹ್ಮಣಶಾಹಿಯ</strong><strong> </strong><strong>ತಂತ್ರಗಾರಿಕೆ</strong><strong>.</strong></p>



<p>ಈ ಹಿಂದೆ ಕೆಲವೇ ಸಮುದಾಯದ ಕಪಿಮುಷ್ಟಿಯಲ್ಲಿದ್ದ ವಿದ್ಯೆ ಇದೀಗ ಸಾರ್ವತ್ರೀಕರಣಗೊಂಡಿದೆ. ಸಮಾಜ ಸುಧಾರಕರು, ಹೋರಾಟಗಾರರ ದೆಸೆಯಿಂದಾಗಿ ಸಾಮಾಜಿಕ ನ್ಯಾಯ ವ್ಯವಸ್ಥೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಆದರೂ ಕೂಡ ಅಸಮಾನತೆ, ಮೌಢ್ಯಗಳು ಯಾವುದೋ ಒಂದು ರೂಪದಲ್ಲಿ ಆಗಾಗ ಕಾಣಿಸುತ್ತಲೇ ಇರುತ್ತವೆ. (ಬೆಂಗಳೂರಿನ ದೇಗುಲವೊಂದರಲ್ಲಿ ವಿವಿಧ ಕೆಲಸ ಕಾರ್ಯಗಳಿಗಾಗಿ ಕರೆದ ಟೆಂಡರ್ ನಲ್ಲಿ ಪರಿಶಿಷ್ಟರಿಗೆ ಚಪ್ಪಲಿ ಕಾಯುವ ಕೆಲಸಕ್ಕಾಗಿ ಅರ್ಜಿ ಕರೆಯಲಾಗಿತ್ತು. ಚಾಮರಾಜನಗರದಲ್ಲಿ ದಲಿತ ಮಹಿಳೆಯೊಬ್ಬರು ಟ್ಯಾಂಕ್ ನ ನೀರು ಕುಡಿದರೆಂಬ ಮಾತ್ರಕ್ಕೆ ಟ್ಯಾಂಕ್ ಖಾಲಿ ಮಾಡಿ ಗೋಮೂತ್ರದಿಂದ ಅದನ್ನು ಶುದ್ಧಿ ಮಾಡಲಾಗಿತ್ತು. ಇದು ಹತ್ತನೇ ಶತಮಾನದ ಕಥೆಯಲ್ಲ. ಮೊನ್ನೆ ಮೊನ್ನೆ ಹತ್ತು ದಿನ ಹಿಂದಿನದ್ದು) ಸಮಾಜದಲ್ಲಿ ಸಂಪೂರ್ಣ ನೂರಕ್ಕೆ ನೂರು ಎನ್ನುವಂಥ ಬದಲಾವಣೆಗಳು ನಡೆಯದಿದ್ದರೂ ವಿದ್ಯೆ ಹಾಗು ಧಾರ್ಮಿಕ ಆಚರಣೆಗಳಲ್ಲಿನ ಮೊದಲಿದ್ದಂತಹ ನಿರ್ಬಂಧಗಳಂತೂ ಖಂಡಿತ ಇಲ್ಲ. ಇಂತಹ ಸಂದರ್ಭವನ್ನೇ ತಮ್ಮೆಡೆಗೆ ತಿರುಗಿಸಿಕೊಂಡ ಸನಾತನವಾದಿಗಳು ಹಿಂದೆ ವಿದ್ಯೆ ವಂಚಿತವಾಗಿ ಈಗ ಶಾಲೆಗೆ ಬರುವಂತಹ ಮುಗ್ಧ ಮನಸ್ಸಿನ ಚಿಕ್ಕ ಮಕ್ಕಳ (ವಿಶೇಷವಾಗಿ ಅಬ್ರಾಹ್ಮಣ ವರ್ಗದ ಮಕ್ಕಳು) ಮೇಲೆ ಧರ್ಮದ ಅಮಲನ್ನು ತುಂಬಿ ಅವರನ್ನೇ ಹಿಂದುತ್ವದ ಕಾಲಾಳುಗಳನ್ನಾಗಿ ದುಡಿಸಿಕೊಳ್ಳುತ್ತಿದ್ದಾರೆ. ಅವರ ಮಕ್ಕಳು ಮಾತ್ರ ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮೊದಲಾದೆಡೆ ಉನ್ನತ ವ್ಯಾಸಂಗ ಪಡೆದು ಉದ್ಯೋಗದಲ್ಲಿದ್ದರೆ ಶೂದ್ರ ವರ್ಗದ ಮಕ್ಕಳು ಇಲ್ಲೇ ಹಿಂದುತ್ವದ ಹೋರಾಟಗಳಲ್ಲಿ ಸಖತ್ ಬ್ಯುಸಿ. ಒಟ್ಟಾರೆ ಒಂದೇ ಕಲ್ಲಲ್ಲಿ ಎರಡು ಹಕ್ಕಿಗಳು. ಇದು ಬ್ರಾಹ್ಮಣಶಾಹಿಯ ತಂತ್ರಗಾರಿಕೆ.</p>



<p><strong>ಶೂದ್ರರನ್ನು</strong><strong> </strong><strong>ಶಿಕ್ಷಣದಿಂದ</strong><strong> </strong><strong>ಹೊರಗಿಡುವ</strong><strong> </strong><strong>ಪ್ರಕ್ರಿಯೆಯ</strong><strong> </strong><strong>ಆರಂಭ</strong></p>



<p>ದೇಶದಲ್ಲಿ ಲೆಕ್ಕವಿಲ್ಲದಷ್ಟು ಸರಕಾರಿ ಶಾಲೆಗಳು ಮುಚ್ಚುತ್ತಿರುವುದಾಗಿ ವರದಿಯಾಗಿವೆ. ಅದನ್ನು ಉಳಿಸಿಕೊಳ್ಳುವ ಬದಲು ಇವರಿಗೆ ಶಾಲಾ ಗೋಡೆಗಳಿಗೆ ಕೇಸರಿ ಬಣ್ಣ ಬಳಿಯುವುದರಲ್ಲೇ ಆಸಕ್ತಿ. ಶಾಲೆಯಲ್ಲಿ ಪ್ರತಿ ದಿನ ಹತ್ತು ನಿಮಿಷದ ಧ್ಯಾನ ಶುರು ಮಾಡಬೇಕು ಎನ್ನುವ ಸರಕಾರಿ ಸುತ್ತೋಲೆ. ಇದೇ ಧ್ಯಾನದ ನೆಪದಲ್ಲಿ ಕ್ರಮೇಣ ಮುಗ್ದ ಮಕ್ಕಳ ಮನಸ್ಸಲ್ಲಿ ತಮ್ಮ ಅಜೆಂಡಾಗಳ ಹೇರಿಕೆಯ ಹುನ್ನಾರ ಇದರ ಹಿಂದಿದೆ. 5 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ಯಾರೂ ಬೇಕೆಂದು ಕೇಳದೇ ಇದ್ದ ವೇದಗಣಿತದ ತರಬೇತಿಯ ಹೆಸರಲ್ಲಿ ಪ. ಜಾತಿ ಪ. ಪಂಗಡಗಳ ಉಪ ಯೋಜನೆ (TSP, SCSP) ಯಲ್ಲಿನ ಅನಾಮತ್ತು ಅರುವತ್ತು ಕೋಟಿ ರೂ. ಗಳ ಬಳಕೆಗೆ ಮಸಲತ್ತು ನಡೆದು ಬಳಿಕ ಎದುರಾದ ವಿರೋಧದ ಬಳಿಕ ಇದನ್ನು ತಡೆಹಿಡಿಯಲಾಯಿತು. ಇವರಿಗೆ ದಲಿತರ ಅಭಿವೃದ್ಧಿಗಿಂತ ಸೀಮೆಗಿಲ್ಲದ ವೇದಗಣಿತ ತಲೆಗೆ ತುಂಬೋದರಲ್ಲೇ ಹೆಚ್ಚು ಆಸಕ್ತಿ. ಇತ್ತೀಚೆಗೆ ಶೈಕ್ಷಣಿಕ ಚಿಂತನೆಯ ಗಂಧ ಗಾಳಿಯೂ ಇರದವರ ಉಸ್ತುವಾರಿಯಲ್ಲಿ ರಚನೆಯಾದ ಪಠ್ಯ ಪುಸ್ತಕ ಪರಿಶೀಲನಾ ಸಮಿತಿಯ ಹಿಂದುತ್ವದ ಹುನ್ನಾರಗಳು, ಪ ಜಾತಿ/ ಪ ವರ್ಗದ ಮಕ್ಕಳ ಸ್ಕಾಲರ್ ಶಿಪ್ ರದ್ದು, ಸಂಶೋಧನಾ ವಿದ್ಯಾರ್ಥಿಗಳ ಫೆಲೋ ಶಿಪ್ ರದ್ದು, ಬೆಂಗಳೂರು ವಿ ವಿ 2 ನೇ ಸ್ನಾತಕೋತ್ತರ ಪದವಿಗಾಗಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ರದ್ದು, ಎಂಟು ಲಕ್ಷ ವಾರ್ಷಿಕ ಆದಾಯದ ಬ್ರಾಹ್ಮಣಾದಿ ಮೇಲ್ಜಾತಿಯ ಮಕ್ಕಳಿಗೆ ಮೀಸಲಾತಿ ತಂದು ಎರಡೂವರೆ ಲಕ್ಷಕ್ಕೂ ಕಡಿಮೆ ವಾರ್ಷಿಕ ಆದಾಯದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮಕ್ಕಳಿಗೆ ನೀಡಲಾಗುತ್ತಿದ್ದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನದ ಸಂಪೂರ್ಣ ನಿಲುಗಡೆ ಇವುಗಳೆಲ್ಲ ಈ ತನಕ ವಿದ್ಯೆಯಿಂದ ಮೆರೆಯುತ್ತಿದ್ದ ಶೂದ್ರರನ್ನು ಅದರಿಂದ ಹೊರಗಿಡುವ ಪ್ರಕ್ರಿಯೆಯ ಆರಂಭಿಕ ಸೂಚನೆಗಳಷ್ಟೆ ಎನ್ನಬಹುದು.</p>



<p>ಬೆಂಗಳೂರಿನ ದೊಡ್ಡ ಗಣಪತಿ ದೇಗುಲದ ಟೆಂಡರ್ ಹೆಸರಲ್ಲಿ ಶೂದ್ರರೇ ನಿಮ್ಮ ಸ್ಥಾನ ಯಾವತ್ತಿಗೂ ಇದೇನೆ ಎಂದು ನೆನೆಪಿಸಿದಂತೆ ತಮಿಳುನಾಡಿನ ಈರೋಡ್ ನ ಶಾಲೆಯೊಂದರಲ್ಲೂ ಕೂಡ ಇದೇ ರೀತಿ ದಲಿತ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಲಾಗುತ್ತಿದ್ದ ಸುದ್ದಿ ಇತ್ತೀಚೆಗೆ ಬಂದಿತ್ತು. ಎಳವೆಯಲ್ಲೇ ದಲಿತರ ಸ್ಥಾನವನ್ನು ಖುದ್ದು ಅವರಿಗೆ ಮತ್ತು ಇತರರಿಗೆ ತೋರಿಸಿಕೊಡುವಂತಹ ಪ್ರಕ್ರಿಯೆ ಇದು.</p>



<p><strong>ಮನುವಾದಕ್ಕೆ</strong><strong> </strong><strong>ಕೊಡಲಿಯೇಟು</strong><strong>..</strong><strong>&nbsp;</strong></p>



<p>ರಾಷ್ಟ್ರಕವಿ ವಿಶ್ವ ಮಾನವತಾ ಪ್ರತಿಪಾದಕ ಕುವೆಂಪುರವರು ತನಗೆ ದೊರೆತಂತಹ ಸಾಂದರ್ಭಿಕ ವಿದ್ಯಾಭಾಗ್ಯದ ಕುರಿತಂತೆ ಮಾರ್ಮಿಕವಾಗಿ ಹೀಗೆ ಹೇಳಿದ್ದರು “ ಬ್ರಿಟಿಷರು ಒಂದುವೇಳೆ ಬಾರದೇ ಇದ್ದಿದ್ದರೆ ನಾನು ಯಾವುದೋ ಮೇಲ್ವರ್ಗದವನ ಮನೆಯ ಹೊಲಸಲ್ಲಿ ಹೊರಳುತ್ತಿರುವ ಹಂದಿಯಂತಿರುತ್ತಿದ್ದೆ ಎಂದು. ವಿದ್ಯೆಯನ್ನು ಸಾರ್ವತ್ರಿಕ ಗೊಳಿಸಿ ಮನುವಾದಕ್ಕೆ ಕೊಡಲಿಯೇಟು ಕೊಟ್ಟ ಬ್ರಿಟಿಷರ ಬಗ್ಗೆ ಸನಾತನವಾದಿಗಳಿಗೆ ಬಹಳಷ್ಟು ಕೋಪವಿದೆ. (ಅವರನ್ನು ಓಡಿಸಲು ಇದೂ ಒಂದು ಕಾರಣ) ಅದೇ ರೀತಿ ಅದನ್ನು ಸ್ವಾತಂತ್ರ್ಯಾನಂತರ ಮುಂದುವರೆಸಿ ಹೋದ ನೆಹರೂರವರ ಕುರಿತಂತೆಯೂ ಕೂಡ ಅಸಾಧ್ಯ ಅಸಹನೆಯಿದೆ. ಶಿವರಾಮ ಕಾರಂತರ ಸೋದರ ಕೋಟ ವಾಸುದೇವ ಕಾರಂತರು ತಮ್ಮ ಕೃತಿಗಳಲ್ಲಿ ಈ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಸಂಸ್ಕೃತ ಹೇಳಿದ ಶೂದ್ರನ ನಾಲಗೆ ಕತ್ತರಿಸಬೇಕು, ಸಂಸ್ಕೃತ ಕೇಳಿದ ಶೂದ್ರನ ಕಿವಿಗೆ ಕಾದ ಸೀಸ ಸುರಿಯಬೇಕೆಂದ ಸನಾತನವಾದಿಗಳೆಲ್ಲಿ? ತಾರತಮ್ಯ ನೋಡದೇ ಎಲ್ಲರ ವಿದ್ಯೆಗೂ ಪ್ರೋತ್ಸಾಹ ಕೊಟ್ಟ ಅನ್ಯ ಮತೀಯರೆಲ್ಲಿ?</p>



<p>ಕೋರ್ಟಿನಲ್ಲಿರುವ ಮೇಲ್ವರ್ಗದವರ ತೀವ್ರ ಪ್ರತಿರೋಧದ ಕಾರಣ ದಲಿತನೊಬ್ಬನಿಗೆ ಆ ಕೋರ್ಟ್ ನಲ್ಲಿ ಅಟೆಂಡರ್ ಕೆಲಸ ಕೊಡಿಸಲೂ ಸಾಧ್ಯವಾಗದೇ ತೀರಾ ಖಿನ್ನರಾಗಿ ಕುಗ್ಗಿಹೋಗಿದ್ದ ಮಂಗಳೂರಿನ ಕುದ್ಮುಲ್ ರಂಗರಾಯರಿಗೆ ಬ್ರಿಟಿಷ್ ನ್ಯಾಯಾಧೀಶರು ಹತ್ತಿರ ಕರೆದು ರಾಯರೇ, ನಿಮಗೆ ಈ ಡಿಪ್ರೆಸ್ಡ್ ಕ್ಲಾಸ್ ನವರ ಉದ್ದಾರದ ಬಗ್ಗೆ ನಿಜಕ್ಕೂ/ ಕಳಕಳಿ ಇದ್ದಿದ್ದೇ ಹೌದಾದರೆ ಮೊದಲು ಅವರಿಗೆ ವಿದ್ಯೆ ಕಲಿಸಿ. ಅದೇ ಅವರಲ್ಲಿ ದೊಡ್ಡ ಸಾಮಾಜಿಕ ಬದಲಾವಣೆ ತರಬಲ್ಲದು ಎಂದು ಬೆನ್ನು ತಟ್ಟಿದ್ದರು. ಅದರ ಪರಿಣಾಮವೇ ’ಮಹಾತ್ಮ ಗಾಂಧೀಜಿಯ ಗುರು’ ಎಂಬ ಹೆಗ್ಗಳಿಕೆಯ ಮಟ್ಟಕ್ಕೆ ದೊಡ್ಡ ಸುಧಾರಕರಾಗಿ ಕುದ್ಮುಲ್ ರಂಗರಾಯರ ಸೇವೆ ನಾಡಿಗೆ ದೊರಕಿತು.</p>



<p>ಮೆರೆಯುತ್ತಿರುವ ಶೂದ್ರವರ್ಗದ ಜುಟ್ಟು ತಮ್ಮ ಕೈಯಲ್ಲಿರಬೇಕೆಂದರೆ ಮೊದಲು ಅವರನ್ನು ವಿದ್ಯೆಯಿಂದ ವಂಚಿತರನ್ನಾಗಿಸಬೇಕೆನ್ನುವ ಸನಾತನವಾದಿಗಳ ಹುನ್ನಾರವನ್ನು ತಡೆಯದಿದ್ದರೆ ಮುಂದೊಂದು ದಿನ ದೊಡ್ಡ ಗಣಪತಿ ಟೆಂಡರಿನಲ್ಲಿದ್ದ ಚಪ್ಪಲಿ ಕಾಯುವ ಕೆಲಸವೂ ಕೂಡ ಶೂದ್ರ ಸಮುದಾಯಕ್ಕೆ ದೊರೆಯದು. ಯಾಕೆಂದರೆ ದೇಗುಲದ ವಠಾರಕ್ಕೆ ಅವರಿಗೆ ಪ್ರವೇಶ ಇದ್ದರೆ ತಾನೆ ಇದೆಲ್ಲ&#8230;</p>



<p><strong>ಶಂಕರ್</strong><strong> </strong><strong>ಸೂರ್ನಳ್ಳಿ</strong><strong>.</strong></p>



<p>ಲೇಖಕರು</p>
]]></content:encoded>
					
		
		
			</item>
	</channel>
</rss>
