<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>hindutva rajakaranada kathe &#8211; Peepal Media</title>
	<atom:link href="https://peepalmedia.com/tag/hindutva-rajakaranada-kathe/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 24 Jun 2024 06:53:34 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>hindutva rajakaranada kathe &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಹಿಂದುತ್ವ ರಾಜಕಾರಣದ ಕಥೆ &#8211; 21 : ಹಿಂದುತ್ವದ ಆಂತರಿಕ ವೈರುಧ್ಯಗಳು</title>
		<link>https://peepalmedia.com/inner-contradictions-of-hinduism/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 24 Jun 2024 06:53:18 +0000</pubDate>
				<category><![CDATA[ಅಂಕಣ]]></category>
		<category><![CDATA[hindutva rajakaranada kathe]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=41239</guid>

					<description><![CDATA[ಸಾವರ್ಕರ್‌ ಹೀಗೆಲ್ಲ ಬರೆಯುವಾಗ ನಾವು ಗಮನಿಸಬೇಕಿರುವುದು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭುಗಳಾದಿ ಶರಣರ ವಚನಗಳು ಬ್ರಾಹ್ಮಣಧರ್ಮವನ್ನು ಕಟುವಾಗಿ ಟೀಕಿಸುವ ರಚನೆಗಳಾಗಿದ್ದವು ಎಂಬುದನ್ನು. ಅಥವಾ ಜೈನ ರಾಮಾಯಣವು ಬ್ರಾಹ್ಮಣ ರಾಮಾಯಣವನ್ನು ನಿರಾಕರಿಸುತ್ತದೆ ಎಂಬುದನ್ನು. ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮನ್ನು ಹಿಂದೂ ಜನಾಂಗೀಯವಾದವಾಗಿ ಬೆಳೆಸುವ ಪ್ರಯತ್ನದ ಭಾಗವಾಗಿ ಇತಿಹಾಸವನ್ನು ಬ್ರಾಹ್ಮಣಿಕತೆಯೊಂದಿಗೆ ಕಲಸುಮೇಲೋಗರ ಮಾಡುವುದುರ ಮುಂದುವರಿಕೆಯೇ ಹೆಸರುಗಳ ಕುರಿತಾದ ಚರ್ಚೆ ಎಂದು ಒತ್ತಿ ಹೇಳಬೇಕಾದ ಅಗತ್ಯವಿಲ್ಲವಲ್ಲ. ಸಾವರ್ಕರ್‌ ದನಿ ಇಲ್ಲಿ ಒಬ್ಬ ಮುದಿಜ್ಞಾನಿಯಂತಿದೆ. ಲೋಕ ಅದನ್ನು ಸುಮ್ಮನೆ ಕೇಳಿಸಿಕೊಳ್ಳಬೇಕು. ಅಧಿಕೃತತೆಯನ್ನು ಅದು ಉತ್ಪಾದಿಸುತ್ತಿರುವುದು ಅದರ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಸಾವರ್ಕರ್‌ ಹೀಗೆಲ್ಲ ಬರೆಯುವಾಗ ನಾವು ಗಮನಿಸಬೇಕಿರುವುದು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭುಗಳಾದಿ ಶರಣರ ವಚನಗಳು ಬ್ರಾಹ್ಮಣಧರ್ಮವನ್ನು ಕಟುವಾಗಿ ಟೀಕಿಸುವ ರಚನೆಗಳಾಗಿದ್ದವು ಎಂಬುದನ್ನು. ಅಥವಾ ಜೈನ ರಾಮಾಯಣವು ಬ್ರಾಹ್ಮಣ ರಾಮಾಯಣವನ್ನು ನಿರಾಕರಿಸುತ್ತದೆ ಎಂಬುದನ್ನು.</p>
</blockquote>



<p></p>



<p></p>



<p></p>



<p></p>



<p>ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮನ್ನು ಹಿಂದೂ ಜನಾಂಗೀಯವಾದವಾಗಿ ಬೆಳೆಸುವ ಪ್ರಯತ್ನದ ಭಾಗವಾಗಿ ಇತಿಹಾಸವನ್ನು ಬ್ರಾಹ್ಮಣಿಕತೆಯೊಂದಿಗೆ ಕಲಸುಮೇಲೋಗರ ಮಾಡುವುದುರ ಮುಂದುವರಿಕೆಯೇ ಹೆಸರುಗಳ ಕುರಿತಾದ ಚರ್ಚೆ ಎಂದು ಒತ್ತಿ ಹೇಳಬೇಕಾದ ಅಗತ್ಯವಿಲ್ಲವಲ್ಲ. ಸಾವರ್ಕರ್‌ ದನಿ ಇಲ್ಲಿ ಒಬ್ಬ ಮುದಿಜ್ಞಾನಿಯಂತಿದೆ. ಲೋಕ ಅದನ್ನು ಸುಮ್ಮನೆ ಕೇಳಿಸಿಕೊಳ್ಳಬೇಕು. ಅಧಿಕೃತತೆಯನ್ನು ಅದು ಉತ್ಪಾದಿಸುತ್ತಿರುವುದು ಅದರ ದನಿಯ ಮೂಲಕ. ಹಿಂದೂ ಎಂಬ ಸಂಜ್ಞೆಯೇ ಅನುಮಾನಾಸ್ಪದವಾದ ಭಾಷಾ ವ್ಯವಹಾರ ಮಾತ್ರವೇ ಆಗಿರುವಾಗಲೂ ಹಿಂದೂಗಳು ಎಂದು ಕರೆಯಲ್ಪಡುವವರನ್ನು ಹೊರತುಪಡಿಸಿ, ಉಳಿದವರೆಲ್ಲರನ್ನು ಬದಿಗೆ ಸರಿಸುವ ಅಥವಾ ಬಹಿಷ್ಕರಿಸುವ ಮಾದರಿಯೊಂದನ್ನು ಸಾವರ್ಕರ್‌ ಇಲ್ಲಿ ಅವಲಂಬಿಸುತ್ತಾರೆ. ಉಳಿದ ಕೆಲವರನ್ನು ಇತಿಹಾಸದಲ್ಲಿ ಸೋತ ಮಾದರಿಗಳೆಂಬಂತೆ ಚಿತ್ರಿಸುತ್ತಾರೆ. ಇನ್ನು ಕೆಲವರನ್ನು ಶತ್ರುಗಳಾಗಿಸುತ್ತಾರೆ. ಹೀಗೆ ಇತಿಹಾಸದಲ್ಲೂ ಪುರಾಣಗಳಲ್ಲೂ ಯಾರು ಗೆಲ್ಲುತ್ತಾರೋ ಅವರು ಹಿಂದೂಗಳು ಎಂಬಂತೆ ಬ್ರಾಹ್ಮಣ ಮೇಧಾವಿತ್ವದ, ಪ್ರಶ್ನಿಸಲಾಗದ ಸ್ಮೃತಿಗಳನ್ನು ಬಳಸಿಕೊಂಡು ಇಲ್ಲದ ಅಧಿಕಾರವನ್ನು ಪಡೆಡುಕೊಂಡ ಅದೇ ತಂತ್ರವನ್ನು ಬಳಸಿಕೊಂಡು, ಇತಿಹಾಸದ ಮೇಲೆ ಅಧಿಕಾರ ಸ್ಥಾಪಿಸುವ ಕೆಲಸವನ್ನು ಸಾವರ್ಕರ್‌ ಮಾಡುತ್ತಾರೆ. ಬಳಸಿ ಪರಿಚಯವಿರುವ ಆರ್ಯಾವರ್ತದಿಂದ, ತಾನು ಯೋಚಿಸಿರುವ ಹಿಂದುಸ್ತಾನಕ್ಕೆ, ಬಹುತ್ವವೇ ತುಂಬಿಕೊಂಡಿರುವ ಜನಮುದಾಯವನ್ನು ಹಿಪ್ನೋಟೈಸ್‌ ಮಾಡಿ ನಡೆಸಿಕೊಂಡು ಹೋಗಲು ಸಾವರ್ಕರ್‌ ಪ್ರಯತ್ನಿಸುತ್ತಾರೆ. ಇಲ್ಲಿ ಇತಿಹಾಸವನ್ನು ಮಾತ್ರವಲ್ಲ, ಪುರಾಣಗಳನ್ನೂ ತನಗೆ ಬೇಕಾದಂತೆ ಬದಲಿಸಿಕೊಳ್ಳುತ್ತಾರೆ. ಸ ಎಂಬುದು ಉಳಿದ ಭಾಷಿಕರಿಗೆ ಹ ಎಂದಾದರೆ ನಾವು ಅದನ್ನು ಯಾಕೆ ಬಳಸಬೇಕು? ಸಾವರ್ಕರ್‌ ಅನ್ನು ಹವರ್ಕರ್‌ ಎಂದು ಪರ್ಷಿಯನ್ನರು ಉಚ್ಛರಿಸುವುದಾದರೆ ಅದನ್ನು ಬಳಸಲು ನಾವು ಹಿಂದೇಟು ಹಾಕಬೇಕೆ?</p>



<p><em>ಅಂತರಾಷ್ಟ್ರೀಯ ಬದುಕು </em>ಎಂಬ ಮುಂದಿನ ಉಪಅಧ್ಯಾಯದಲ್ಲಿ ಇದೇ ತಂತ್ರಗಾರಿಕೆಯನ್ನು ಸಾವರ್ಕರ್‌ ಮುಂದುವರಿಸುತ್ತಾರೆ. ಬುದ್ಧಿಸಂಗಿಂತಲೂ ಮೊದಲೇ ಈ ದೇಶದ ಜನಜೀವನ ಇತರ ದೇಶಗಳ ಜನರನ್ನು ಆಕರ್ಷಿಸಿತ್ತು ಎಂಬುದಕ್ಕೆ ಉದಾಹರಣೆಯಾಗಿ ಮನುವಿನ, ಸಾವರ್ಕರ್‌ ಭಾಷೆಯಲ್ಲಿ ಹೇಳುವುದಾದರೆ ಕವಿಪಂಡಿತರ ಪ್ರಧಾನಿಯ ಮಾತುಗಳನ್ನು ಉದ್ಧರಿಸುತ್ತಾರೆ. ʼಲೋಕದ ಮನುಷ್ಯರೆಲ್ಲ ಈ ನಾಡಿನ ಹಿರಿಯರಿಂದ ಕಲಿತುಕೊಳ್ಳಲಿʼ ಎಂಬರ್ಥದ ಸಾಲನ್ನು ಸಾವರ್ಕರ್‌ ಮನುಸ್ಮೃತಿಯಿಂದ ಎತ್ತಿಕೊಳ್ಳುತ್ತಾರಾದರೂ ಬುದ್ಧಿಸಂ ನಂತರದ ಭಾರತದ ಅಂತರಾಷ್ಟ್ರ ಸಂಬಂಧವನ್ನು ಚರ್ಚಿಸಲು ಸಾವರ್ಕರ್‌ ಪ್ರಯತ್ನಿಸುತ್ತಾರೆ. ಬೌದ್ಧ ಧರ್ಮ ಪ್ರಪಂಚವನ್ನು ಭಾರತದ ಕಡೆಗೆ ಆಕರ್ಷಿಸುವಾಗಲೂ ಸಿಂಧೂ/ಹಿಂದೂ ಎಂಬ ಗುರುತಿಗೆ ಯಾವ ಲೋಪವೂ ಉಂಟಾಗಿರಲಿಲ್ಲ. ಬೌದ್ಧ ಧರ್ಮದ ಬೆಳವಣಿಗೆಯು ಸಿಂಧೂ/ಹಿಂದೂ ಗುರುತನ್ನು ದೇಶದ ಹೊರಗೆ ಬೆಳೆಸಿತು. ಅದೇ ಹೊತ್ತು ಅದರ ಪತನವೂ ಅದೇ ಧರ್ಮದ ಕಾರಣದಿಂದ ನಡೆಯಿತು ಎಂದು ಸಾವರ್ಕರ್‌ ವಾದಿಸುತ್ತಾರೆ. ಈ ವಾದ ತೀರಾ ಅಪರಿಚಿತವಾಗಿ ಅನಿಸುತ್ತದೆಯಾದರೂ ಇದೇ ಸತ್ಯವೆಂದು ಸಾವರ್ಕರ್‌ ಗಟ್ಟಿಯಾಗಿ ಹೇಳುತ್ತಾರೆ. ಇದನ್ನು ಸಾಬೀತು ಪಡಿಸುವ ಉಪಅಧ್ಯಾಯವೇ <em>ಬುದ್ಧಿಸಮ್ಮಿನ ಪತನ</em> ಎಂಬ ಮುಂದಿನ ಉಪಅಧ್ಯಾಯ.</p>



<p>ದೇಶವು ಬುದ್ಧಿಸಮ್ಮಿಗೆ ಎದುರಾಗಿ ನಿಲ್ಲಲು ಅದರ ದಾರ್ಶನಿಕ ವ್ಯತ್ಯಾಸಗಳು ಕಾರಣವಲ್ಲ, ಬೌದ್ಧ ಧರ್ಮದ ಪೋಷಣಾರಾಹಿತ್ಯದಿಂದಲೂ ಅಲ್ಲ, ಅದರೊಳಗಡೆ ನಡೆದ ನೈತಿಕ ಅಧಃಪತನದಿಂದಲೂ ಅಲ್ಲವೆಂದು ಸಾವರ್ಕರ್‌ ಹೇಳುತ್ತಾರೆ. ಕೆಲವು ಬೌದ್ಧ ವಿಹಾರಗಳಲ್ಲಿ ಗಂಡು ಹೆಣ್ಣುಗಳ ಗುಂಪು ಬದುಕಿನ ಸಾಮಾನ್ಯ ನೈತಿಕ ನಿಯಮಗಳನ್ನು ಲಂಘಿಸಿದರು ಎಂಬುದು ನಿಜವೇ. ಆದರೆ, ಆ ಕಾರಣ ಮಾತ್ರದಿಂದ ಆಧ್ಯಾತ್ಮಿಕ ಭೀಮಕಾಯರಾದ ಭಿಕ್ಷುಗಳಿಂದ ತುಂಬಿಕೊಂಡಿದ್ದ ಧರ್ಮವೊಂದು ನಾಶಗೊಳ್ಳಬೇಕಾದ ಅಗತ್ಯವಿಲ್ಲ. ಬದಲಿಗೆ ಅದು ಮುಂದಿಟ್ಟಿದ್ದ ಅಹಿಂಸಾ ಸಿದ್ಧಾಂತವೇ ಅದನ್ನು ನಾಶಕ್ಕೆಳೆಯಿತು. ಬುದ್ಧನ ಕಾಲದಲ್ಲಿಯೇ ಶಾಕ್ಯರ ಆದಿವಾಸಿ ರಾಜ್ಯ ಪತನದ ಅಂಚಿಗೆ ತಲುಪಿತ್ತು. ಲಿಚ್ಚಿಗಳು ಮತ್ತು ಹೂಣರು ಅದನ್ನು ಆಕ್ರಮಿಸಿಕೊಂಡರು. ಸಾವರ್ಕರ್‌ ಬರೆಯುತ್ತಾರೆ. ʼಆದರೆ, ಉಳಿದ ಹಿಂದೂಗಳು ಈ ಕಹಿ ಕಷಾಯವನ್ನು ಶಾಂತವಾಗಿ ಕುಡಿಯಲು ತಯಾರಿರಲಿಲ್ಲ. ಪ್ರಾಕೃತವಾದ ಹಿಂಸೆ ನಡೆಸುವವರಿಗೆ ರಾಜಕೀಯ ಸೇವೆ ಮಾಡಲು ಮತ್ತು ಅವರ ಹಿಂಸಾತ್ಮಕತೆಯನ್ನು ಅಹಿಂಸೆಯ ಮತ್ತು ಆಧ್ಯಾತ್ಮಿಕ ಸಹೋದರತೆಯ ಚೂರುಪಾರು ಸಮೀಕರಣಗಳಿಂದ ಎದುರಿಸಲು ಅವರು ತಯಾರಿರಲಿಲ್ಲ. ಅವರ ಖಡ್ಗದಂಚನ್ನು ಮೃದುವಾದ ತಾಳೆಗರಿಗಳು ಮತ್ತು ಸುಮಧುರವಾದ ಮಂತ್ರೋಚ್ಛಾರಗಳಿಂದ ತಡೆಯಬಹುದು ಎಂಬ ಮೂರ್ಖತನಕ್ಕೆ ಅವರು ಬಲಿಯಾಗಲಿಲ್ಲ. ಮಹತ್ತರವಾದ ಸಹೋದರತೆಯ ಸೇವೆಯನ್ನು ಮತ್ತು ದಿವ್ಯವಾದ ಅವರ ಗುರಿಯನ್ನು ಕೀಳಾಗಿ ಕಾಣುವುದೋ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದೋ ಅಲ್ಲ.ʼ ಸಾವರ್ಕರ್‌ ಮುಂದುವರಿಸುತ್ತಾರೆ. ʼಬುದ್ಧಿಸಮ್ಮಿಗೆ ಹೇಳಿಕೊಳ್ಳಲು ವಿಜಯಗಳಿವೆ. ಆದರೆ, ಅವರ ಬದುಕು ಇದ್ದದ್ದು ನಮ್ಮ ವಾಸ್ತವ ಲೋಕದಿಂದ ಬಹಳ ದೂರವಾಗಿ ಬೇರೆಯದೇ ಲೋಕದಲ್ಲಾಗಿತ್ತು. ವಾಸ್ತವ ಲೋಕದಲ್ಲಿ ಮಣ್ಣಿನ ಕಾಲುಗಳು ಬಹಳ ಸಮಯ ನಿಲ್ಲುವುದಿಲ್ಲ. ಅಲ್ಲಿ ಖಡ್ಗಗಳು ಸುಲಭದಲ್ಲಿ ಹರಿತಗೊಳ್ಳುತ್ತವೆ ಮತ್ತು ತೃಷಾದಾಹವು ಅಷ್ಟು ಶಕ್ತಿಶಾಲಿಯೂ ವಾಸ್ತವವೂ ಆಗಿರುತ್ತದೆ. ಸ್ವರ್ಗದಲ್ಲಿ ನಿತ್ಯ ಹರಿಯುವ ವರ್ಣಮಯ ತೊರೆಗಳನ್ನು ಅದು ಪ್ರತಿಬಿಂಬಿಸುತ್ತದೆ. ಹೂಣರು ಮತ್ತು ಶಕರು ಅಗ್ನಿಪರ್ವತಗಳ ಹಾಗೆ ಬೆಂಕಿಯ ಮಳೆ ಸುರಿಸಿ ಎಲ್ಲ ಬಿದಿರುಗಳನ್ನು ಅಗ್ನಿಗೆರವಾಗಿಸುವಾಗ ನಮ್ಮ ದೇಶಪ್ರೇಮಿಗಳ ಮತ್ತು ಚಿಂತಕರ ಹೃದಯದಲ್ಲಿ ಉದಿಸಿದ್ದು ಮತ್ತು ಅವರನ್ನು ತಂತಮ್ಮ ಮನೆಗಳ ಕಡೆಗೆ ಓಡಿಸಿದ್ದು ಇವೇ ಆಲೋಚನೆಗಳಾಗಿರಬಹುದು.ʼ ಮತ್ತೆ ಮುಂದುವರಿಸುತ್ತಾರೆ. ʼತೀರ್ಮಾನ ಸ್ಪಷ್ಟವಾಗಿತ್ತು. ಬುದ್ಧಿಸ್ಟ್‌ ಚಿಂತನೆಗೆ ಈ ಹೊಸ, ಆಕ್ರಮಣಕಾರಿ ದ್ವಂದ್ವವಾದವನ್ನು, ದ್ವೈತವನ್ನು, ಅಗ್ನಿ ಮತ್ತು ಖಡ್ಗಗಳ ಅಪರಿಚಿತ ಧರ್ಮಗ್ರಂಥವನ್ನು ಎದುರಿಸಲು ಬೇಕಾದ ವಾದವನ್ನು ಎತ್ತಿಹಿಡಿಯಲಾಗಲಿಲ್ಲ. ಆದ್ದರಿಂದ ನಮ್ಮ ವಂಶದ ಚಿಂತನೆಗಳು ಮತ್ತು ಕಾರ್ಯಗಳ ನಾಯಕರು ತಮ್ಮ ಯಾಗಾಗ್ನಿಯನ್ನು ಈ ಧರ್ಮದ್ರೋಹಿ ಚಿಂತಕರನ್ನು ಎದುರಿಸಲೆಂದು ಜ್ವಲಿಸಿದರು. ಖಡ್ಗಗಳನ್ನು ಮತ್ತೆ ಕೈಗತ್ತಿಕೊಳ್ಳಲು ವೇದ ಚಿಂತನೆಗಳ ಗಣಿಯನ್ನು ಪುನಹ ತೆರೆದು ಕಾಳಿಯ ಬಲಿಪೀಠದಲ್ಲಿ ಅವನ್ನು ಹರಿತಗೊಳಿಸಿದರು. ಭಯಾನಕ ಸಂಗತಿಯೇನೆಂದರೆ, ಮಹಾಕಾಲನು, ಕಾಲದ ಆತ್ಮನು ಸಂಪ್ರೀತಿಗೊಂಡನು.ʼ ʼಸಮೀಕರಣಗಳು ಸೋಲುವಲ್ಲಿ ಧೈರ್ಯ ಗೆಲ್ಲುತ್ತದೆ. ಮತ್ತೊಮ್ಮೆ ವಿಜಯದ ಎಲ್ಲ ಪದರಗಳನ್ನು ಬೆಳಗಿಸುವ ಮಹತ್ತರ ಎತ್ತರಕ್ಕೆ ಜನರು ತಲುಪಿದರು. ಕಾವ್ಯ ತತ್ವಶಾಸ್ತ್ರ, ಕಲೆ ವಾಸ್ತುವಿದ್ಯೆ, ಕೃಷಿ ವಹಿವಾಟು, ಯೋಚನೆ ಕರ್ಮ ಎಲ್ಲವೂ ವಿಜಯಕ್ಕೆ ಮಾತ್ರ ದಯಪಾಲಿಸಬಹುದಾದ ಸ್ವಾತಂತ್ರ್ಯ, ಶಕ್ತಿ ಮತ್ತು ಪ್ರಬುದ್ಧತೆಯ ಆವಾಹನೆಗಾಗಿ ಆವೇಶಗೊಂಡವು. ವೇದಗಳಿಗೆ ಮರಳುವ ಆಹ್ವಾನವು ಮತ್ತಷ್ಟು ಗಟ್ಟಿ ದನಿಯಲ್ಲಿ ಮೊಳಗಲು ಶುರುವಾಯಿತು ಎಂದು ಇಲ್ಲಿ ಸಾವರ್ಕರ್‌ ಹೇಳುತ್ತಾರೆ.</p>



<p>ಭಾರತೀಯ ಮತ್ತು ವಿದೇಶಿ ಇತಿಹಾಸ ಪಂಡಿತರು ಬೌದ್ಧಧರ್ಮದ ಕುರಿತು ಸಂಶೋಧನೆ ನಡೆಸಿ ಒದಗಿಸಿದ ವಾಸ್ತವತೆಗಳೊಂದಿಗೆ ಸಾವರ್ಕರ್‌ ಎಳ್ಳಷ್ಟೂ ಸಂಬಂಧವನ್ನು ಸಾಧಿಸುವುದಿಲ್ಲ ಎಂಬುದು ಮಾತ್ರವೇ ಇಲ್ಲಿ ಪ್ರಶ್ನೆಯಲ್ಲ. ಬೌದ್ಧಧರ್ಮದ ಲಭ್ಯ ದಾಖಲೆಗಳೆಲ್ಲವೂ ಬ್ರಾಹ್ಮಣ ವಿರೋಧಿ ಘೋಷಣೆಗಳಾಗಿವೆ ಎಂಬ ವಾಸ್ತವವನ್ನು ಸಾವರ್ಕರ್‌ ಗಮನಿಸುವುದೇ ಇಲ್ಲ. ಅದನ್ನು ಮರೆಮಾಚಿ, ಬ್ರಾಹ್ಮಣ್ಯಕ್ಕೆ ವಿರುದ್ಧವಾಗಿದ್ದ ಶ್ರಮಣ ಸಂಸ್ಕೃತಿಯ ಬಗ್ಗೆ ಸೊಲ್ಲೆತ್ತದೆ ವಾಚ್ಯವಾಗಿ ಸಾವರ್ಕರ್‌ ಮುಂದಕ್ಕೆ ಹಾರುತ್ತಾರೆ. ಬೌದ್ಧಧರ್ಮ ಬ್ರಾಹ್ಮಣ ಧರ್ಮವನ್ನು ಎದುರಿಸಿದ್ದು ಹೇಗೆ? ಬ್ರಾಹ್ಮಣ ಧರ್ಮದ ಅಡಿಪಾಯವಾದ ಜಾತಿ ವ್ಯವಸ್ಥೆಯನ್ನು ಅದು ಹೇಗೆ ಎದುರಿಸಿತು? ಬ್ರಾಹ್ಮಣ ಧರ್ಮದಿಂದ ತುಳಿಯಲ್ಪಟ್ಟಿದ್ದ ಮಹಿಳೆಯರಿಗೆ ಪ್ರಪಂಚದ ಮೊಟ್ಟ ಮೊದಲ ಮಹಿಳಾ ಕಾವ್ಯಸಂಪುಟವಾದ <em>ಥೇರಿಗಾಥಾ</em>ವನ್ನು ಬೌದ್ಧಧರ್ಮದ ಕಾಲದಲ್ಲಿ ಹೊರತರುವಷ್ಟು ಬುದ್ಧಿಸಂ ಮಹಿಳೆಯರಿಗೆ ಸಾಮಾಜಿಕ ಚಲನಾತ್ಮಕೆಯನ್ನು ಹೇಗೆ ನೀಡಿತು? ಅಹಿಂಸೆಯೆಂಬುದು ಶೂನ್ಯದಿಂದ ಹುಟ್ಟಿದ ಮೌಲ್ಯವಾಗಿತ್ತೇ? ಅಥವಾ ಬ್ರಾಹ್ಮಣ್ಯದ ಹಿಂಸಾತ್ಮಕೆತೆಗೆ, ಅಂದರೆ ವ್ಯವಸ್ಥಿತವೂ ಅಲ್ಲದೆಯೂ ಇದ್ದ ಹಿಂಸಾತ್ಮಕತೆಗೆ ಪರ್ಯಾಯ ದರ್ಶನವಾಗಿತ್ತೇ? ಒಬ್ಬ ಸಾಮಾನ್ಯ ಅಧ್ಯಯನಕಾರ ಹಾದು ಹೋಗಬೇಕಾದ ಯಾವ ಸಂದರ್ಭವನ್ನೂ ಸಾವರ್ಕರ್‌ ಎದುರುಗೊಳ್ಳುವುದಿಲ್ಲ. ಬುದ್ಧಿಗಿಂತಲೂ ಪರಸ್ಪರ ಸ್ನೇಹದ ಆಧಾರದಲ್ಲಿ ನೆಲೆನಿಲ್ಲುವ ಸಾಮಾಜಿಕ ಸಂಬಂಧಗಳಿಗಿಂತಲೂ ತೋಳ್ಬಲ ಮತ್ತು ಖಡ್ಗವೆಂಬ ಪುರಾತನ ಕಾಲದ ರಾಜಾಡಳಿತ ಸಂದರ್ಭದ ಕಲ್ಪನೆಗಳನ್ನು ಸಾವರ್ಕರ್‌ ಇಲ್ಲಿ ಎತ್ತಿ ಹಿಡಿಯುತ್ತಾರೆ. ಅದು ಯಾವ ಸಂದರ್ಭದಲ್ಲಿ ಎಂಬುದನ್ನೂ ನಾವಿಲ್ಲಿ ಗಮನಿಸಬೇಕು. ಇಂಡಿಯಾ ಅದರ ಅತ್ಯಂತ ದೊಡ್ಡ ಗುಲಾಮಗಿರಿಯಲ್ಲಿ ಕಳೆಯುತ್ತಿರುವಾಗ, ಅದಕ್ಕೆದುರಾಗಿ ಕೆಲಸ ಮಾಡಿದನೆಂಬ ಕಾರಣಕ್ಕೆ ಕೈ ಮುಗಿದು ಕ್ಷಮೆ ಕೇಳಿ ಕಾಡಿಬೇಡಿ ದಕ್ಕಿಸಿಕೊಂಡ ಜೈಲಿನೊಳಗೆ ಕುಳಿತುಕೊಂಡು.</p>



<p>ತನ್ನ ಅನುಭವಗಳ ಆಧಾರದಲ್ಲಿ ಇತಿಹಾಸದ ವಿಶ್ಲೇಷಣೆ ಎಂಬುದಕ್ಕಿಂತಲೂ ಗಾಂಧಿಯ ಅಹಿಂಸಾ ರಾಜಕಾರಣ ಗಳಿಸಿದ ಜನಪ್ರಿಯತೆಯನ್ನು ನುಚ್ಚುನೂರು ಮಾಡುವ ಬ್ರಿಟಿಷ್ ಪ್ರಯತ್ನದ ಭಾಗವಾಗಿಯೂ <em>ಹಿಂದುತ್ವ</em>ವನ್ನು ಕಾಣಬೇಕಿರುವುದು ಈ ಕಾರಣದಿಂದಲೇ ಆಗಿದೆ. ಬಹುಜನ ಹೋರಾಟದಲ್ಲಿ ನಂಬಿಕೆಯಿಟ್ಟಿದ್ದ, ಅಹಿಂಸಾ ಕೇಂದ್ರಿತ ಗಾಂಧಿಯನ್ನು ಎದುರಿಸಲು ಮತ್ತು ತನ್ನ <em>ಅಭಿನವಭಾರತ</em> ಮುಂದಿಟ್ಟಿದ್ದ ಹಿಂಸಾತ್ಮಕ ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮಿನ ‘ಐತಿಹಾಸಿಕತೆ’ಯನ್ನು ಖಚಿತಗೊಳಿಸಲು ಬುದ್ಧಿಸಮ್ಮನ್ನು ಮುಂದಿಟ್ಟುಕೊಂಡ ತಂತ್ರಗಾರಿಕೆಯನ್ನು ಸಾವರ್ಕರ್ ಬಳಸುತ್ತಾರೆ. ಮುಂದಿನ <em>ಬುದ್ಧಿಸಂ, ಒಂದು ವಿಶ್ವಧರ್ಮ</em> ಎಂಬ ಉಪಅಧ್ಯಾಯದಲ್ಲೂ ಇದೇ ತಂತ್ರವನ್ನು ಸಾವರ್ಕರ್‌ ಪ್ರಯೋಗಿಸುತ್ತಾರೆ. ಸಕಲ ಮಾನವರನ್ನು ಪರಸ್ಪರ ಬಂಧಿಸುವ ಮೈತ್ರಿ, ಕರುಣೆ ಮೊದಲಾದ ಕಲ್ಪನೆಗಳನ್ನೂ ಬೌದ್ಧಧರ್ಮದ ಸಾರ್ವತ್ರಿಕ ಮೌಲ್ಯಗಳನ್ನೂ ಕೀಳಾಗಿ ಕಾಣುವ ಶೈಲಿಯನ್ನು ಸಾವರ್ಕರ್‌ ಅವಲಂಬಿಸುತ್ತಾರೆ ಎಂಬುದನ್ನು ನಾವು ಗಮನಿಸಿದೆವು. ರಾಷ್ಟ್ರೀಯತೆಯನ್ನು ವಿಶ್ವಮಾನವತೆಗಿಂತಲೂ ದೊಡ್ಡದಾಗಿ ಪ್ರತಿಷ್ಠಾಪಿಸುವ ಪ್ರಯತ್ನವನ್ನು ಸಾವರ್ಕರ್‌ ಇದಕ್ಕಾಗಿ ಮಾಡುತ್ತಾರೆ. ಅಂದರೆ, ಪೇಶ್ವಾಸಾಮ್ರಾಜ್ಯದ ಮುಂದುವರಿಕೆಯಾಗಿರುವಂತಹ ಒಂದು ರಾಷ್ಟ್ರೀಯ ಕಲ್ಪನೆಯನ್ನು ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಂ ಅದರ ಆಧುನಿಕತೆಯಾಗಿ ಪ್ರತಿಷ್ಠಾಪಿಸಿತ್ತು. ಆ ರಾಷ್ಟ್ರೀಯ ಕಲ್ಪನೆ ಇಲ್ಲಿ ಪ್ರಜಾಪ್ರಭುತ್ವದ ಮೇಲೆ ನೆಲೆನಿಲ್ಲುವಂಥದ್ದಲ್ಲ. ಜನಾಂಗೀಯತೆಯೇ ಅದರ ಆಧಾರ. ಹೀಗೆ, ಇಂತಹದ್ದೊಂದು ರಾಷ್ಟ್ರೀಯತೆಯನ್ನು, ಜನಾಂಗೀಯ ರಾಷ್ಟ್ರೀಯತೆಯನ್ನು ಬೆಳೆಸಲು ಅಗತ್ಯವಾಗಿದ್ದ ವಾದಗಳನ್ನು ಸಾವರ್ಕರ್‌ ಎತ್ತಿದ್ದರು. ಆದ್ದರಿಂದ ಬುದ್ಧನ ವಿಶ್ವಮಾನವತ್ವವನ್ನು ಎರಡು ರೀತಿಯಲ್ಲಿ ಸಾವರ್ಕರ್‌ ಎದುರಿಸಬೇಕಾಗಿ ಬಂದಿತ್ತು. ಒಂದು, ಜಾತಿ ವಿರೋಧಿ ಮತ್ತು ಆ ಮೂಲಕ ಬ್ರಾಹ್ಮಣ್ಯ ಮೇಲುಗೈ ವಿರೋಧಿ ಆಗಿತ್ತೆಂಬುದು. ಎರಡು, ಅದು ಜನಾಂಗೀಯತೆಯ ಬದಲಿಗೆ ಸಮಾನತೆಯನ್ನು ಪ್ರತಿಪಾದಿಸುವುದರಿಂದ. ಸಾವರ್ಕರ್‌ ಹೇಳುತ್ತಾರೆ, ಆದ್ದರಿಂದ ಚಿಂತನೆಗಳ ಮತ್ತು ಕರ್ಮಗಳ ನಾಯಕರು ವಿಶ್ವಮಾನವತೆಯೆ ಪುನರಾವರ್ತಿತ ಮಾತುಗಳಿಂದ ರೋಸಿ ಹೋಗಿ ದೊಡ್ಡ ತಕರಾರುಗಳನ್ನು ಎತ್ತಿದರು:</p>



<p><em>೧. ದೇವರೇ, ತಮ್ಮ ಕೈಗಳಿಂದ ಒಂದು ಕಾಲದಲ್ಲಿ ವಧಿಸಲ್ಪಟ್ಟವರೂ ವಿಷ್ಣುವಿನಿಂದ ಕೊಲ್ಲಲ್ಪಟ್ಟ ಅಸುರರೂ ಮ್ಲೇಚ್ಛರ ರೂಪದಲ್ಲಿ ಈ ಭೂಮಿಯ ಮೇಲೆ ಮತ್ತೆ ಹುಟ್ಟಿ ಬಂದಿದ್ದಾರೆ.</em></p>



<p><em>೨. ಅವರು ಬ್ರಾಹ್ಮಣರನ್ನು ಕೊಲ್ಲುತ್ತಿದ್ದಾರೆ. ಯಾಗದಂತಹ ಧಾರ್ಮಿಕ ಅನುಷ್ಠಾನಗಳನ್ನು ನಾಶಗೊಳಿಸುತ್ತಿದ್ದಾರೆ. ಮುನಿಗಳ ಹೆಣ್ಣುಮಕ್ಕಳನ್ನು ಅಪಮಾನಿಸುತ್ತಿದ್ದಾರೆ. ಅವರಿನ್ನು ಯಾವ ಪಾಪ ಮಾಡದೆ ಬಿಟ್ಟಿದ್ದಾರೆ!</em></p>



<p><em>೩. ಭೂಮಿಯು ಮ್ಲೇಚ್ಛರಿಂದ ಆಕ್ರಮಿಸಲ್ಪಟ್ಟರೆ ದೇವರುಗಳ ಈ ಜಾಗ ಇಲ್ಲವಾಗುತ್ತದೆ. ಯಾಕೆಂದರೆ, ಯಾಗ ಮತ್ತಿತರ ಧಾರ್ಮಿಕ ಕರ್ಮಗಳೆಲ್ಲ ನಿಷೇಧಿಸಲ್ಪಡುತ್ತವೆ. (ಗುಣಾಢ್ಯ)</em><em>ʼ</em></p>



<p>ಸಾವರ್ಕರ್‌ ಉದಾಹರಿಸುವ ಗುಣಾಢ್ಯನದ್ದೆಂದು ಹೇಳಲಾಗುವ ಈ ವಿಲಾಪ, ಒಂದೇ ನೋಟಕ್ಕೆ ಬ್ರಾಹ್ಮಣ ರೋಧನೆಯೆಂಬುದು ಮನದಟ್ಟಾಗುತ್ತದೆ. ಯಾಗ ಮತ್ತಿತರ ಕರ್ಮಗಳಲ್ಲಿ ನಂಬಿಕೆಯಿಟ್ಟಿದ್ದ ಜಾತಿ ಬ್ರಾಹ್ಮಣನ ರೋಧನೆ. ರಾಷ್ಟ್ರ ಕಲ್ಪನೆಯಾಗಲೀ, ರಾಷ್ಟ್ರೀಯ ಕಲ್ಪನೆಯಾಗಲೀ, ಜನತಾ ಕಲ್ಪನೆಯಾಗಲೀ ಇಲ್ಲಿಲ್ಲ. ಅಷ್ಟೇ ಅಲ್ಲ, ವಾಸ್ತವದಲ್ಲಿ ಹೂಣರ ವಿರುದ್ಧವೋ, ಸಾವರ್ಕರ್‌ ವಿದೇಶಿಯರೆಂದು ಕರೆಯುವ ಆಕ್ರಮಣಕಾರಿಗಳ ವಿರುದ್ಧ ನಿಲ್ಲುವುದೋ ಎಂಬುದಕ್ಕಿಂತ ಈ ವಿಲಾಪವು ಯಾಗಗಳ ನಿಷ್ಫಲತೆಯನ್ನು ಎತ್ತಿ ತೋರಿಸಿದ, ಬ್ರಾಹ್ಮಣ ಧರ್ಮಕ್ಕೆದುರಾಗಿ ನಿಂತ ಬೌದ್ಧಧರ್ಮ ವಿರುದ್ಧವಾಗಿದೆ. ಅಷ್ಟೇ ಅಲ್ಲ, ಬೌದ್ಧರು ಶತ್ರುಗಳ ಜೊತೆ ಸೇರುವವರು ಎಂದೂ ಸಾವರ್ಕರ್‌ ಸೇರಿಸುತ್ತಾರೆ. ಹಲವು ರಾಜಪ್ರಭುತ್ವಗಳ, ಹಲವು ರೀತಿಯ ಆಡಳಿತ ಶೈಲಿಗಳ ಮಿಶ್ರಣವಾಗಿತ್ತು ಅವರ ಲೋಕ ಎಂಬುದನ್ನು ಮರೆಮಾಚಿ ಒಂದೇ ದೇಶದಲ್ಲಿ ಭೌದ್ಧಧರ್ಮ ಕಾರ್ಯಾಚರಿಸುತ್ತಿತ್ತು ಎಂಬ ರೀತಿಯಲ್ಲಿ ಸಾವರ್ಕರ್‌ ವಿವರಿಸುತ್ತಾರೆ. ಶಕ್ತಿಶಾಲಿ ಗಡಿಗಳನ್ನು ಮತ್ತು ನಾಗರಿಕ ನಿಯಮಗಳನ್ನು ಒಳಗೊಂಡ ದೇಶವಾಗಿ ಸಾವರ್ಕರ್‌ ಇದನ್ನು ಬರೆಯುವ ಹೊತ್ತಲ್ಲೂ ಭಾರತ ಬದಲಾಗಿರಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು.</p>



<p><em>ಆಗ ತಿರುಗೇಟು ಬಂದಿತು</em> ಎಂಬ ಉಪಅಧ್ಯಾಯದಲ್ಲಿ ಚಾತುರ್ವರ್ಣದ ಪ್ರೀತಿಯೂ ಸ್ವಾರಸ್ಯಕರವಾಗಿದೆ. ಸಾವರ್ಕರ್‌ ಪ್ರತಿನಿಧಿಸುವ ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣ್ಯ ಹೇಗೆ ಕೆಲವು ಕಡೆಗಳಲ್ಲಿ ಸಂಪ್ರದಾಯವಾದಿ ಬ್ರಾಹ್ಮಣ್ಯದೊಂದಿಗೆ ವ್ಯತ್ಯಾಸಗೊಳ್ಳುತ್ತದೆ ಎಂಬುದನ್ನು ನಾವು ಗಮನಿಸಿದೆವು. ರಾಜಕೀಯ ಬ್ರಾಹ್ಮಣ್ಯದ ಗುರಿ ಬ್ರಾಹ್ಮಣ ಮೇಲುಗೈಯನ್ನು ಕೇಂದ್ರವಾಗಿರಿಸಿಕೊಂಡ ಹಿಂದೂ ಜಾತಿಗಳ ಸಂಘಟನಾ ರೂಪವನ್ನು ಕಟ್ಟುವುದಾಗಿತ್ತು. ಅದಕ್ಕಾಗಿಯೇ, ಜನಾಂಗವಾದದ ಒಂದು ಸಾಮಾನ್ಯ ಪ್ರಜ್ಞೆಯನ್ನು ಹಿಂದೂಗಳ ನಡುವೆ ನಿರಂತರ ಕಾಯ್ದುಕೊಳ್ಳಲು ಅವರು ಶ್ರಮಿಸುತ್ತಿದ್ದರು. ಸಂಪ್ರದಾಯವಾದಿ ಬ್ರಾಹ್ಮಣ್ಯವನ್ನು ಎದುರಿಸಿ ಸೋಲಿಸುವುದು ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣ್ಯದ ಗುರಿಯಾಗಿರಲಿಲ್ಲ. ಬದಲಿಗೆ ಸಂಪ್ರದಾಯವಾದಿ ಬ್ರಾಹ್ಮಣ್ಯವನ್ನು ತನ್ನೊಳಗೆ ಆವಾಹಿಸಿಕೊಳ್ಳುವುದು ಅದರ ಗುರಿಯಾಗಿತ್ತು. ಯಾಕೆಂದರೆ ಎರಡು ವಿಭಾಗಗಳೂ ಬ್ರಾಹ್ಮಣ ಮೇಲುಗೈಯೆಂಬ ತತ್ವದಲ್ಲಿ ಗಟ್ಟಿಯಾಗಿ ನಂಬಿಕೆಯಿಟ್ಟಿದ್ದವು. ಅಂಡಮಾನಿನ <em>ಶುದ್ಧಿಚಳುವಳಿ</em>ಯ ಸಂದರ್ಭದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಿಸಲ್ಪಡುವಾಗ ಜಾತಿ ಹೇಗೆ ತಡೆಯಾಗಿ ನಿಲ್ಲುತ್ತದೆ ಎಂದು ಸಾವರ್ಕರ್‌ ಅರ್ಥ ಮಾಡಿಕೊಂಡದ್ದನ್ನು ನಾವು ಗಮನಿಸಿದೆವು. ಬುದ್ಧನೇ ಎದುರಿಸಿದರೂ ಕೂಡ ಚಾತುರ್ವರ್ಣ ನಾಶಗೊಳ್ಳಲಿಲ್ಲವೆಂದು ಸಾವರ್ಕರ್‌ ಹೇಳುತ್ತಾರೆ. ಬದಲಿಗೆ ಅದು ಜನಪ್ರಿಯಗೊಂಡಿತು. ರಾಜರುಗಳು ಚಾತುರ್ವರ್ಣ್ಯವನ್ನು ಪ್ರವರ್ಧಮಾನಕ್ಕೆ ತಂದವರೆಂದು ಗುರುತಿಸಿಕೊಳ್ಳಲು ಬಯಸುತ್ತಿದ್ದರು. ನಮ್ಮ ರಾಷ್ಟ್ರೀಯತೆ ಸುಮಾರಾಗಿ ಈ ವ್ಯವಸ್ಥೆಯೊಂದಿಗೆ ಬೆರೆತುಕೊಂಡಿತು. ಆದ್ದರಿಂದಲೇ ಹೊರಗಿನಿಂದ ಬರುವವರನ್ನು ಮ್ಲೇಚ್ಛರಾಗಿ ಕಾಣುವ ಸಂಸ್ಕೃತಿ ಹುಟ್ಟಿಕೊಂಡಿತು. ಇದರ ಭಾಗವಾಗಿಯೇ ಸಾಗರೋಲ್ಲಂಘನೆ ಮಾಡುವವರನ್ನು ಭ್ರಷ್ಟರಾಗಿ ಕಾಣಲು ಶುರು ಮಾಡಿದರು. ಇಂದು ಅದು ಪ್ರಸಕ್ತವಲ್ಲವೆಂದೂ ಸಾವರ್ಕರ್‌ ಹೇಳುತ್ತಾರೆ. ನಾವೂ ಈಗಾಗಲೇ ನೋಡಿದ ಹಾಗೆ, ಭಾರತದ ಜನಸಾಮಾನ್ಯರ ಆತಂಕಗಳು ಎಂಬಂತೆ ಇಲ್ಲಿಯೂ ಸಾವರ್ಕರ್‌ ಎತ್ತುವುದು ಬ್ರಾಹ್ಮಣರ ಆಂತರಿಕ ಸಮಸ್ಯೆಗಳನ್ನು. ಬಹುಜನರಾದ ಭಾರತದ ಇತರೇ ಜನಜೀವನದೊಂದಿಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದವು. ಆದರೆ, ಅದನ್ನು ರಾಷ್ಟ್ರೀಯತೆಯೊಂದಿಗೆ ಜೋಡಿಸಲು ಸಾವರ್ಕರ್‌ ಎಳ್ಳಷ್ಟೂ ಸಂಕೋಚ ಪಡುವುದಿಲ್ಲ. ಅದಕ್ಕೆ ಕಾರಣ, ಸಾವರ್ಕರ್‌ಗೆ ರಾಷ್ಟ್ರೀಯತೆ ಎಂಬುದು ಪ್ರಜಾಪ್ರಭುತ್ವ ಮಧ್ಯಸ್ಥಿಕೆಯಲ್ಲಿ ನಿರ್ಣಯಿಸಲ್ಪಡಬೇಕಾದ ಸಂಗತಿಯಲ್ಲ. ಅದು ಜನಾಂಗೀಯತೆಯ ಮುಂದುವರಿಕೆ ಮಾತ್ರ.</p>



<p><em>ಜನಾಂಗಗಳ ಮಿಶ್ರಣ</em> ಎಂಬ ಮುಂದಿನ ಉಪಅಧ್ಯಾಯದಲ್ಲೂ ಇದೇ ವಾದಗಳನ್ನು ಸಾವರ್ಕರ್‌ ಪುನಹ ಮಂಡಿಸುತ್ತಾರೆ. ಬೌದ್ಧಧರ್ಮಕ್ಕೆ ಭೌಗೋಳಿಕ ಚೌಕಟ್ಟು ಇರಲಿಲ್ಲ. ಆದ್ದರಿಂದ ಒಂದು ದೇಶದ ಚೌಕಟ್ಟು ಹೊಂದಲು ಬಯಸುತ್ತಿರುವ ಭಾರತದೊಂದಿಗೆ ಅದಕ್ಕೆ ತಾದಾತ್ಮ್ಯಗೊಳ್ಳಲು ಸಾಧ್ಯವಾಗಲಿಲ್ಲ. ದೇಶ ಒಂದು ಜೈವಿಕ ದೇಹದಂತೆ ಪ್ರಜ್ಞಾಪೂರ್ವಕವಾಗಿ ಬೆಳೆಯುವಾಗ ಅದರ ಹೊರಗಿನ, ಅನ್ಯರೊಂದಿಗೆ ಸಂಘರ್ಷಗಳು ನಡೆಯುತ್ತವೆ. ಆದ್ದರಿಂದ ತಮ್ಮ ಮತ್ತು ಪರರ ನಡುವೆ ಗಡಿರೇಖೆಗಳನ್ನು ಗುರುತಿಸಬೇಕಾಗುತ್ತದೆ. ಅಂದರೆ, ತಮ್ಮನ್ನು ಒಂದು ವಿಶೇಷ ಜನವಿಭಾಗವಾಗಿ ಗುರುತಿಸಲ್ಪಡಬೇಕಾಗುತ್ತದೆ. ಜನಾಂಗೀಯ ಮತ್ತು ರಾಷ್ಟ್ರೀಯವಾಗಿ ಮಾತ್ರವಲ್ಲ ಭೌಗೋಳಿಕವಾಗಿಯೂ ರಾಜಕೀಯವಾಗಿಯೂ. ಇಲ್ಲಿಯೇ ಸಾವರ್ಕರ್‌ ರಾಷ್ಟ್ರ ಪರಿಕಲ್ಪನೆಯ ತಪ್ಪಾದ ವ್ಯಾಖ್ಯಾನದ ಮೂಲಕ ಒಂದು ಫ್ಯಾಸಿಸ್ಟ್‌ ರಾಷ್ಟ್ರ ಕಲ್ಪನೆಯನ್ನು ಮುಂದಿಡುವುದು. ಭಾರತೀಯರು ಯಾವ ಕಾಲದಲ್ಲೂ ಏಕ ಜನಾಂಗವಾಗಿರಲಿಲ್ಲ. ನಮ್ಮ ಸಾಮುದಾಯಿಕ ನೆನಪುಗಳ ಪಾತಾಳಕ್ಕಿಳಿದರೂ ವಿಭಿನ್ನ ಜನಸಮುದಾಯಗಳ ಸಂಚಯವನ್ನಷ್ಟೇ ನಾವು ಎಂದು ಗುರುತಿಸಲ್ಪಡುತ್ತಿದ್ದದ್ದು. <em>ಹಿಂದುತ್ವ</em> ಎಂಬ ಈ ಪುಸ್ತಕದ ಒಂದು ಅತಿ ಮುಖ್ಯ ಸಾರಾಂಶ ಬ್ರಾಹ್ಮಣರಾದ ʼತಮ್ಮನ್ನುʼ ಭಾರತೀಯರಾದ ʼನಾವುʼ ಮಾಡಲು ಬಹುಸಂಖ್ಯಾತರಾದ ಇತರ ಜನರೊಂದಿಗೆ ಕೇಳಿಕೊಳ್ಳುತ್ತಿರುವುದು. ಈ ತಮಗೆ, ಅಂದರೆ ಪ್ರಬಲ ಬ್ರಾಹ್ಮಣರಿಗೆ ಅದನ್ನು ನೆಲೆನಿಲ್ಲಿಸಲು ಬೇಕಾದ ದೇಶದ ಭೂಪಟ ಬಿಡಿಸುವ ಕ್ರಿಯೆಯನ್ನು ಮುಂದಿನ <em>ವೇದಗಳಿಗೆ ಮರಳಿರಿ</em> ಎಂಬ ಉಪಅಧ್ಯಾಯದಲ್ಲಿ ಸಾವರ್ಕರ್‌ ನಡೆಸುತ್ತಾರೆ.</p>



<p>ಮಹಾತ್ಮನಾದ ವಿಕ್ರಮಾದಿತ್ಯನ ಮಗ ಶಾಲಿವಾಹನ ಈ ಕಡೆಗೆ ಬರುತ್ತಿದ್ದ ವಿದೇಶಿಯರನ್ನು ತಡೆದು ಸಿಂಧೂ ನದಿಯ ಆಚೆಗೆ ಅಟ್ಟಿದ್ದ. ಭಾರತ ಮತ್ತು ವಿದೇಶೀ ನೆಲಗಳ ನಡುವಿನ ಗಡಿಯಾಗಿ ಸಿಂಧೂ ನದಿಯನ್ನು ನಿರ್ಣಯಿಸಿಕೊಂಡು ರಾಜಕೀಯ ಘೋಷಣೆ ಹೊರಡಿಸಿದ್ದ ಎಂದು ಸಾವರ್ಕರ್‌ ಹೇಳುತ್ತಾರೆ. <em>ಭವಿಷ್ಯಪುರಾಣ</em> ಎಂಬ, ಇತಿಹಾಸದೊಂದಿಗೆ ಯಾವ ಸಂಬಂಧವೂ ಇಲ್ಲದ ಬ್ರಾಹ್ಮಣ ಪಠ್ಯವೇ ಇದಕ್ಕೆ ಅಡಿಪಾಯವೆಂಬುದನ್ನು ನಾವಿಲ್ಲಿ ಗಮನಿಸಬೇಕು. ಬ್ರಾಹ್ಮಣರ ಕಲ್ಪನಾ ವಿಲಾಸದಲ್ಲಿ ಹುಟ್ಟಿಕೊಳ್ಳುವ ಕಥೆಗಳನ್ನು ಇತಿಹಾಸವೆಂದು ತಪ್ಪಾಗಿ ವ್ಯಾಖ್ಯಾನಿಸುವುದು ಮಾತ್ರವಲ್ಲ, ಭಾರತಕ್ಕೆ ಒಂದು ಭೂಪಟ ಮತ್ತು ನಾಗರಿಕ ಕಾನೂನನ್ನೂ ಸಾವರ್ಕರ್‌ ಸೃಷ್ಟಿಸುತ್ತಾರೆ. ತನ್ನದೇ ವಾದಗಳಿಗೆ ಅಷ್ಟೇನು ಅಧಿಕೃತತೆ ಇಲ್ಲವೆಂದು ಅನಿಸಿದ್ದರಿಂದಲೇ ಇರಬಹುದು, ಪುನರಾವರ್ತನೆಯ ಮೂಲಕ ಇಲ್ಲದ ಅಧಿಕೃತತೆಯನ್ನು ಸೃಷ್ಟಿಸಲೆಂದೇ ಇರಬೇಕು, ಇದೇ ವಾದಗಳನ್ನು ಸಾವರ್ಕರ್‌ ಮತ್ತೆ ಮತ್ತೆ ಈ ಉಪಅಧ್ಯಾಯಗಳಲ್ಲಿ ಮುಂದಿಡುತ್ತಾರೆ.</p>



<p><em>ಸಿಂಧೂಸ್ತಾನ್</em>‌ ಎಂಬ ಉಪಅಧ್ಯಾಯದಲ್ಲಿ ಈ ಪುನರಾವರ್ತನೆಯ ಒಳ್ಳೆಯ ಉದಾಹರಣೆಯನ್ನು ಕಾಣಬಹುದು. ನಮ್ಮ ದೇಶದ ಅತ್ಯಂತ ಪುರಾತನ ಹೆಸರು ಸಪ್ತಸಿಂಧೂ ಅಥವಾ ಸಿಂಧೂ ಎಂದಾಗಿತ್ತು. ನಂತರ ಭರತವರ್ಷ ಎಂದೆಲ್ಲ ಹೆಸರು ಲಭಿಸಿತಾದರೂ ಅದು ಸಂಪೂರ್ಣ ಅರ್ಥವತ್ತಾಗಿರಲಿಲ್ಲ. ಯಾಕೆಂದರೆ, ಅದು ಭರತ ಎಂಬ ವ್ಯಕ್ತಿ ಕೇಂದ್ರಿತವಾಗಿತ್ತು. ಭರತ ಚಕ್ರವರ್ತಿ ಮಣ್ಣಾಗಿ ಹೋದ. ಅದರ ನಂತರ ಹಲವಾರು ಮಹಾನ್‌ ಚಕ್ರವರ್ತಿಗಳು ಆಗಿ ಹೋದರು. ಆದರೆ, ಸಿಂಧೂ ನದಿ ಆಗಲೂ ಹರಿಯುತ್ತಲೇ ಇತ್ತು. ಅದು ಅತ್ಯಂತ ಪುರಾತನ ಭೂತವನ್ನು ಅತ್ಯಂತ ದೂರದ ಭವಿಷ್ಯತ್ತಿನೊಂದಿಗೆ ಜೋಡಿಸುವ ಜೈವಿಕ ನಾಡಿ. ಸಾವರ್ಕರ್‌ ಮುಂದುವರಿಸುತ್ತಾರೆ. ಆದ್ದರಿಂದ ನಮ್ಮ ಚಿಂತನೆಗಳ ಮತ್ತು ಕರ್ಮಗಳ ನಾಯಕರಿಗೆ ಆ ಪುರಾತನ ನಾಮ, ʼಸಿಂಧುಸ್ತಾನ್‌ʼ ಎಂಬ ಹೆಸರನ್ನು ಮರಳಿ ತರುವ ಎಚ್ಚರ ಮೂಡಿತು. ಅಷ್ಟೇ ಅಲ್ಲ, ಸಿಂಧೂ ಎಂಬ ಹೆಸರಿಗೆ ಭಾಷಾಶಾಸ್ತ್ರಪರವಾದ ಒಂದು ಸೌಭಾಗ್ಯವೂ ಇದೆ. ದಕ್ಷಿಣ ಭೂಖಂಡಲ್ಲಿ ಅದು ಸಮುದ್ರವನ್ನು ಸೂಚಿಸುತ್ತದೆ. ದಕ್ಷಿಣ ಭೂಪ್ರದೇಶದ ಗಡಿ ಸಮುದ್ರ ಎಂಬ ಸಿಂಧೂ. ಆದ್ದರಿಂದ ಸಿಂಧೂ ಎಂಬ ಒಂದೇ ಪದದ ಮೂಲಕ ಇಡಿಯ ದೇಶವನ್ನು ನಿರ್ವಚಿಸಬಹುದು. ಪೂರ್ವದ ಗಡಿಗುರುತಾದ ಬ್ರಹ್ಮಪುತ್ರ, ಸಿಂಧೂನದಿಯ ಉಪನದಿಯೆಂಬ ನಂಬಿಕೆ ಇಲ್ಲದಿದ್ದರೂ ಸಿಂಧೂನದಿ ನಮ್ಮ ಉತ್ತರ ಮತ್ತು ಪೂರ್ವ ದಿಕ್ಕುಗಳನ್ನು ಬಳಸಿ ಹರಿಯುತ್ತಿದೆ. ಆದ್ದರಿಂದ ʼಸಿಂಧೂಸ್ತಾನ್‌ʼ ಎಂಬ ಹೆಸರು ಸಿಂಧೂ (ನದಿ)ಯಿಂದ ಹಿಡಿದು ಸಿಂಧೂ (ಸಮುದ್ರ)ದ ತನಕದ ನಮ್ಮ ಮಾತೃಭೂಮಿಯ ರೂಪವನ್ನು ಬಿಡಿಸುತ್ತದೆ.</p>



<p>ಒಂದು ದೇಶಕ್ಕೆ ಅಥವಾ ಪ್ರದೇಶಕ್ಕೆ ಹೆಸರಿಡುವುದೆಂದರೆ ಅದು ತನ್ನ ಮನೆಗೆ ಹೆಸರಿಡುವ ರೀತಿಯಲ್ಲೋ ಅಥವಾ ತನ್ನ ಮಕ್ಕಳಿಗೆ ನಾಮಕರಣ ಮಾಡುವಂಥದ್ದೋ ಖಾಸಗಿ ಸಂಗತಿಯಲ್ಲ. ಅಥವಾ ಒಂದು ರಸ್ತೆಗೆ ಮಹತ್ಮಾ ಗಾಂಧಿ ರಸ್ತೆ ಎಂದು ಹೆಸರಿಡುವ ಹಾಗೆ ಆಡಳಿತಾತ್ಮಕ ತೀರ್ಮಾನವೂ ಅಲ್ಲ. ಅದು ತನ್ನಷ್ಟಕ್ಕೇ ಬೆಳೆಯುವ ಸಾಮುದಾಯಿಕ ಪ್ರಜ್ಞೆ. ಅಂತಹದ್ದೊಂದು ಸಂಗತಿಯನ್ನು ತನ್ನದೇ ಖಚಿತ ವಾದದೊಂದಿಗೆ ತಾನೇ ನಿರೂಪಿಸಲು <em>ಹಿಂದುತ್ವ</em>ದ ಮೂಲಕ ಸಾವರ್ಕರ್‌ ಪ್ರಯತ್ನಿಸುವುದು. ಒಬ್ಬ ರಾಜಗುರುವಿನ ಅಧಿಕಾರ ಧ್ವನಿಯೊಂದಿಗೆ. ಮನಶ್ಶಾಸ್ತ್ರದ ದೃಷ್ಟಿಯಿಂದ ನೋಡುವಾಗ ಸಾವರ್ಕರ್‌ ಬದುಕಿನುದ್ದಕ್ಕೂ ಈ ಗುರು ಕಾಂಪ್ಲೆಕ್ಸ್‌ ಇರುವುದನ್ನು ಕಾಣಬಹುದು. ಅಂಡಮಾನಿನ ಜೈಲು ಶಿಕ್ಷೆಯ ಅವಧಿಯನ್ನು ಬಿಟ್ಟು. ಅಲ್ಲಿ ಜೈಲು ಶಿಕ್ಷೆಯ ಭಾಗವಾಗಿ ಹಗ್ಗದ ಮಿಲ್ಲಿನಲ್ಲೂ ಕೊಬ್ಬರಿ ಮಿಲ್ಲಿನಲ್ಲೂ ಕೆಲಸ ಮಾಡಬೇಕಾಗಿ ಬಂದಾಗ, ಶೂದ್ರರು ಮತ್ತು ಪಂಚಮರು ನಿತ್ಯ ಮಾಡುವ ಕೆಲಸಗಳನ್ನು ತಾನು ಮಾಡಬೇಕಾಗಿ ಬಂದಾಗ, ಸಾವರ್ಕರ್‌ ಸಂಪೂರ್ಣ ಶರಣಾಗತನಾಗಿ ಕ್ಷಮಾಪಣೆಯಿಂದ ಕ್ಷಮಾಪಣೆಗೆ ಲಜ್ಜಾಹೀನನಾಗಿ ಜಿಗಿಯುವುದನ್ನು ಕಾಣಬಹುದು. ಬಹುಷ, ಬ್ರಿಟಿಷ್‌ ವಿರೋಧಿ ಹೋರಾಟದಲ್ಲಿ ರಾಜಗುರುವಿನ ಸ್ಥಾನದಲ್ಲಿ ಮುಂದುವರಿಯಲಾಗದ ಹತಾಶೆಯೂ <em>ಹಿಂದುತ್ವ </em>ಎಂಬ ಪುಸ್ತಕ ಬರೆಯಲು ಪ್ರಚೋದನೆಯಾಗಿರಬಹುದು. ಒಂದು ದೇಶವನ್ನು ನಿರ್ವಚಿಸುವ, ಅದಕ್ಕೆ ಹೆಸರಿಡುವ ಇತ್ಯಾದಿ ಇತಿಹಾಸಕಾರರ ಕೆಲಸವನ್ನಲ್ಲ <em>ಹಿಂದುತ್ವ</em>ದ ಲೇಖಕ ಇಲ್ಲ ಮಾಡುತ್ತಿರುವುದು.</p>



<p>ಮತ್ತೆ ಪುಸ್ತಕಕ್ಕೆ ಮರಳುವುದಾದರೆ, <em>ಆರ್ಯನೆಂದರೆ ಏನು?</em> ಎಂಬ ಉಪಅಧ್ಯಾಯದಲ್ಲಿ, ನಮ್ಮ ಬಹುತ್ವದ ಪರಂಪರೆಗೆ ಸಂಪೂರ್ಣವಾಗಿ ಗುಂಡಿ ತೋಡುವ ಕೆಲಸ ನಡೆಯುತ್ತದೆ. ಸಿಂಧುಸ್ತಾನ್/ಹಿಂದುಸ್ತಾನ್‌ ಎಂಬ ಹೆಸರು ಭೌಗೋಳಿಕವಾಗಿ ಎಷ್ಟು ಸೂಕ್ತವೋ ಅಷ್ಟೇ ರಾಷ್ಟ್ರೀಯವಾಗಿಯೂ ಸೂಕ್ತವೆಂದು ಸಾವರ್ಕರ್‌ ಹೇಳುತ್ತಾರೆ. ವೇದ ಕಾಲದಿಂದ ಅದು ಅಲ್ಲಿನ ಜನರನ್ನು ಮತ್ತು ಸಂಸ್ಕೃತಿಯನ್ನು ದಾಖಲಿಸುತ್ತದೆ. ಸಿಂಧುಸ್ತಾನ್‌ ಎಂದರೆ ಆರ್ಯರ ವಾಸಕೇಂದ್ರ. ಮ್ಲೇಚ್ಛಸ್ತಾನ್‌ ಎಂದರೆ ವಿದೇಶ. ಸಾವರ್ಕರ್‌ ಪ್ರಕಾರ ಆರ್ಯರೆಂದರೆ ವೈದಿಕರೆಂದೋ ಅವೈದಿಕರೆಂದೋ ಬ್ರಾಹ್ಮಣರೆಂದೋ ಚಾಂಡಾಲರೆಂದೋ ವ್ಯತ್ಯಾಸವಿಲ್ಲದೆ ಸಿಂಧೂ ನದಿಯ ಇತ್ತ ಕಡೆಯಲ್ಲಿ ವಾಸಿಸುವವರು ಎಂದರ್ಥ. ಒಂದು ಸಮಾನ ಸಂಸ್ಕೃತಿ, ಒಂದೇ ರಕ್ತ, ಒಂದೇ ದೇಶ ಮತ್ತು ಒಂದೇ ರಾಜಕೀಯ ಚಲನೆಯನ್ನು ಹೊಂದಿರುವವರು. ಮ್ಲೇಚ್ಛರೆಂದರೆ ನಮ್ಮ ರಾಷ್ಟ್ರೀಯತೆ ಮತ್ತು ಜನಾಂಗೀಯತೆಯನ್ನು ಹಂಚಿಕೊಳ್ಳದ ವಿದೇಶಿಯರು ಎಂದೂ ಅದಕ್ಕೆ ಧಾರ್ಮಿಕ ಆಯಾಮ ಇಲ್ಲವೆಂದೂ ಸಾವರ್ಕರ್‌ ಹೇಳುತ್ತಾರೆ. ಇದನ್ನು ಬರೆಯುವ 1923ರ ಮಹಾರಾಷ್ಟ್ರದಲ್ಲಿಯೇ ದಲಿತರಿಗೆ ಮತ್ತು ಬ್ರಾಹ್ಮಣರಿಗೆ ಒಂದೇ ಪಂಕ್ತಿಯಲ್ಲಿ ಕೂರಲು ಸಾಧ್ಯವಿರಲಿಲ್ಲ. 1927ರಲ್ಲಿ ಕೊಂಕಣದ ಮಹಾಡಿನಲ್ಲಿ ಚೌಡಾರ್‌ ಕೆರೆಯ ನೀರನ್ನು ದಲಿತರಿಗೆ ಬಳಸಲು ನಿರಾಕರಿಸಿದ ಸವರ್ಣೀಯರ ವಿರುದ್ಧ ಅಂಬೇಡ್ಕರರ ನೇತೃತ್ವದಲ್ಲಿ ದಲಿತರು ಅಲ್ಲಿಗೆ ಬಲವಂತವಾಗಿ ಪ್ರವೇಶಿಸಿದ್ದರು. ಮೇಲೆ ಹೇಳಿದ ಸಿಂಧುಸ್ತಾನದಲ್ಲಿ ಹುಟ್ಟಿಕೊಂಡದ್ದಾದರೂ ಬುದ್ಧಿಸಂ ಬೆಳೆದದ್ದು ಅದಕ್ಕಿಂತ ಹೊರಗಿನ ಪ್ರದೇಶದಲ್ಲಾಗಿದ್ದರಿಂದ ʼಮ್ಲೇಚ್ಛರನ್ನುʼ ಗುರುತಿಸುವಾಗ ಧಾರ್ಮಿಕತೆಯನ್ನು ಬಳಸಲಾಗುವುದಿಲ್ಲ.</p>



<p>ಆದರೆ, ಬುದ್ಧಿಸಮ್ಮನ್ನು ವಿಮರ್ಶಿಸಲು ಬಳಸಿದ ಪುಟಗಳು ಫಲಪ್ರದವಾಗಿ ಮೂಡುತ್ತಿಲ್ಲವೆಂದು ಅನಿಸಿದ್ದರಿಂದಲೇ ಇರಬೇಕು <em>ಬುದ್ಧನ ಮೇಲಿನ ಗೌರವ</em> ಎಂಬ ಉಪಅಧ್ಯಾಯದಲ್ಲಿ ಈಗಾಗಲೇ ಹೇಳಿದ ಸಂಗತಿಗಳನ್ನು ಸಾವರ್ಕರ್‌ ಪುನಹ ವಾದಿಸುತ್ತಾರೆ. ಬುದ್ಧ ಮತ್ತು ಆತನ ಬಿಕ್ಷುಗಳು ಗೌರವಕ್ಕರ್ಹರಾದರೂ ಅದಕ್ಕೆ ಲೋಕವಿನ್ನೂ ಪಕ್ವಗೊಂಡಿಲ್ಲವೆಂದು ಸಾವರ್ಕರ್‌ ಹೇಳುತ್ತಾರೆ. ಅದನ್ನು ನ್ಯಾಯೀಕರಿಸಲು ಬಳಸುವುದು ಮಾತ್ರ <em>ಮನುಸ್ಮೃತಿ</em>ಯನ್ನು. ʼಚಲಿಸದವು ಚಲಿಸುವುದಕ್ಕೆ ಬೇಗನೇ ಆಹಾರವಾಗುತ್ತವೆ / ಹಲ್ಲಿಲ್ಲದವು ಕೋರೆ ಹಲ್ಲುಲ್ಲವುಗಳ ಆಹಾರವಾಗುತ್ತವೆ / ಕೈಯಿಲ್ಲದವು ಕೈ ಇರುವುದಕ್ಕೆ ಶರಣಾಗುತ್ತವೆ / ಪುಕ್ಕಲರು ಧೀರರಿಗೂ.ʼ ದೈಹಿಕ ಸಾಮರ್ಥ್ಯವನ್ನು ಮುಂದಿಟ್ಟುಕೊಂಡಿರುವ ಈ ಅವಸ್ಥೆಯಿಂದ ನಾವೆಷ್ಟು ಮುಂದಕ್ಕೆ ಚಲಿಸಿದ್ದೇವೆ ಎಂಬುದು ಒಂದು ರೀತಿಯಲ್ಲಿ ನಮ್ಮ ನಾಗರೀಕತೆಯ ಅಳತೆಗೋಲಾಗಿ ಇರುವಾಗ, ಇದನ್ನೇ ಮುಂದಕ್ಕೆ ತರುವುದು ಬ್ರಾಹ್ಮಣ ರಾಜಕಾರಣದ ಶೃತಿಯಂತಿರುವ ಸ್ಮೃತಿಗಳಿಗೆ ಅಧಿಕಾರ ಪ್ರಯೋಗಿಸುವ ಶಕ್ತಿಯಿದೆ ಎಂದು ಸಾಬೀತು ಪಡಿಸಲು ಮಾತ್ರವಲ್ಲದೆ ಬೇರೇನು ಅಲ್ಲ.</p>



<p><em>ಹಿಂದೂ: ನಾವೆಲ್ಲ ಒಂದು, ಏಕ ರಾಷ್ಟ್ರ</em> ಎಂಬ ಹೆಸರಿನ ಉಪಅಧ್ಯಾಯದಲ್ಲಿ ಚಾತುರ್ವರ್ಣದ ಬಗ್ಗೆ ಏನಾದರೊಂದು ಹೇಳಬೇಕು ಎಂಬ ನೆಲೆಯಲ್ಲಿ ಬಿಡುಬೀಸಾಗಿ ಮಾತನಾಡುತ್ತಾರೆ. ಚಾತುರ್ವರ್ಣ ವ್ಯವಸ್ಥೆಯು ಸಮಾಜಕ್ಕಾಗಿಯೇ ಇದೆ ಹೊರತು ಸಮಾಜ ಅದಕ್ಕಾಗಿ ಇರುವುದಲ್ಲವೆಂದು ಸಾವರ್ಕರ್‌ ವಾದ. ಅದರ ಧರ್ಮವನ್ನು ಹಿಂಬಾಲಿಸಿದರೆ ಅದು ಹಿಮ್ಮೆಟ್ಟುತ್ತದೆ. ಚಾತುರ್ವರ್ಣ ಪದ್ಧತಿಯನ್ನು ಪಾಲಿಸದ ಸನ್ಯಾಸಿಗಳು, ಆರ್ಯಸಮಾಜದವರು, ಸಿಕ್ಖರು ಮತ್ತಿತರ ಹಲವಾರು ಜನರು ರಕ್ತ ಸಂಬಂಧ ಮತ್ತು ಜನಾಂಗೀಯತೆ, ದೇಶ ಮತ್ತು ದೇವರ ಕಾರಣಗಳಿಂದಾಗಿ ನಮ್ಮವರಾಗುತ್ತಾರೆ ಎಂದು ಸಾವರ್ಕರ್‌ ಹೇಳುತ್ತಾರೆ. ಹಿಂದೂಗಳೆಲ್ಲ ಒಂದು ಮತ್ತು ಒಂದೇ ದೇಶದವರು. ಅಂದರೆ, ಬ್ರಾಹ್ಮಣಿಸಮ್ಮಿನ ತಾತ್ವಿಕತೆಯು ಹೊಸ ರಾಷ್ಟ್ರ ಕಲ್ಪನೆಯ ಕಾಲದಲ್ಲಿ ಚಾತುರ್ವರ್ಣದಂತಹ ಸ್ಮೃತಿನಿಯಮಗಳಿಂದ ದೂರವಾಗಿ ರಾಷ್ಟ್ರೀಯತೆ ಮತ್ತು ಜನಾಂಗೀಯತೆಯಂತಹ ಕಲ್ಪನೆಗಳಿಗೆ ಆತುಕೊಳ್ಳಬೇಕು ಎಂದು ಸಾವರ್ಕರ್‌ ಇಲ್ಲಿ ಬೊಟ್ಟು ಮಾಡಿ ತೋರಿಸುತ್ತಾರೆ. ಆರ್ಯಸಮಾಜ ಮತ್ತು ದಯಾನಂದ ಸರಸ್ವತಿಯವರ ಅನುಭವಗಳು ಇಲ್ಲಿ ಸಾವರ್ಕರ್‌ಗೆ ನೆರವಾಗುತ್ತವೆ. ಹಿಂದೂ ಸಂಘಟನೆ ಎಂಬ ಆಶಯ ಇಟ್ಟುಕೊಂಡು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕಾರ್ಯಾರಂಭಿಸಿದ ಪ್ರಮುಖ ವ್ಯಕ್ತಿ ದಯಾನಂದ ಸರಸ್ವತಿ ಎಂದು ನಾವು ಈಗಾಗಲೇ ಗಮನಿಸಿದೆವು. ಪುರಾತನ ನಿಯಮಗಳ ಆಧಾರದಲ್ಲಿರುವ ಬ್ರಾಹ್ಮಣ ಧರ್ಮಕ್ಕೆ ಆಧುನಿಕ ಯುಗದಲ್ಲಿ ನೆಲೆ ನಿಲ್ಲಲು ಸಾಧ್ಯವಿಲ್ಲವೆಂದು ಮೊದಲು ಮನಗಂಡ ವ್ಯಕ್ತಿ. ಆದ್ದರಿಂದ ಗೋರಕ್ಷಣೆಯಂತಹ ಒಂದು ಕೃಷಿಯಾಧಾರಿತ ಸಮುದಾಯಕ್ಕೆ ಸುಲಭದಲ್ಲಿ ತಾದಾತ್ಮ್ಯಗೊಳ್ಳಬಹುದಾದ ಮಾದರಿಗಳನ್ನು ಮುಂದಿಟ್ಟುಕೊಂಡು ಹಿಂದೂಗಳನ್ನು ಸಂಘಟಿಸಲು ಅವರು ಮುಂದಾಗಿದ್ದರು. ಜಾತಿ ಭಿನ್ನತೆಗಳನ್ನು ತಾತ್ಕಾಲಿಕವಾಗಿಯಾದರೂ ಪುನರ್‌ ನಿರ್ಮಿಸದಿದ್ದರೆ ಹಿಂದೂಗಳನ್ನು ಧಾರ್ಮಿಕವಾಗಿ ಸಂಘಟಿಸುವುದು ಅಸಾಧ್ಯವೆಂದು ಅವರು ಮನಗಂಡಿದ್ದರು. ಸಾವರ್ಕರ್‌ ಅವರ ಹಿಂದೂ ಸಂಘಟನೆಯ ಕಲ್ಪನೆ ಜನಾಂಗೀಯವಾದದ ರೂಪದಲ್ಲಿತ್ತು. ಆದ್ದರಿಂದಲೇ ಅವರು ಆರ್ಯ ಎಂಬ ಕಲ್ಪನೆಯನ್ನು ವಿಕಾಸಗೊಳಿಸಲು ಹೊರಡುವುದು.</p>



<p>ಅದರ ಜೊತೆಗೆ ಭಾರತದ ಬಹುತ್ವವು ಅತ್ಯಂತ ಪ್ರಖರವಾಗಿ ಪ್ರಕಟಗೊಳ್ಳುವುದು ಇಲ್ಲಿನ ಭಾಷೆಗಳ ಮೂಲಕ ಎಂಬ ವಾಸ್ತವವೂ ಸಾವರ್ಕರನ್ನು ಚಿಂತೆಗೀಡು ಮಾಡಿತ್ತು. ಹಲವು ಜಾತಿಗಳನ್ನು ಧರ್ಮ, ಜನಾಂಗ, ರಾಷ್ಟ್ರೀಯತೆಗಳ ಭ್ರಾಂತಿಯನ್ನು ಬಳಸಿಕೊಂಡು ಒಂದೇ ಚೀಲದೊಳಕ್ಕೆ ತುರುಕಲು ನಡೆಸಿದ ಪ್ರಯತ್ನಗಳ ಹಾಗೆ ಹಿಂದಿಯನ್ನು ಹಿಂದೂಸ್ತಾನದ ಭಾಷೆಯಾಗಿಸುವ ಪ್ರಯತ್ನವನ್ನು <em>ಹಿಂದೂಸ್ತಾನಿ ಭಾಷಾ</em> ಎಂಬ ಉಪಅಧ್ಯಾಯದಲ್ಲಿ ಸಾವರ್ಕರ್‌ ನಡೆಸುತ್ತಾರೆ. ಬೌದ್ಧಧರ್ಮದ ಬೆಳವಣಿಗೆಯೊಂದಿಗೆ ಸಂಸ್ಕೃತ ಮೂಲೆಗುಂಪಾಗಿ ಪ್ರಾಕೃತ ಭಾಷೆ ಬೆಳೆಯಿತು. ನಮ್ಮ ವಂಶದ (ಆರ್ಯನ್‌ / ಹಿಂದೂ) ಭಾಷೆ ಸಂಸ್ಕೃತವಾಗಿದ್ದರೂ, ಅದು ಜನರ ಮೂಲಭೂತ ಬದುಕಿನ ಏಕತೆಗೆ ಬಹುದೊಡ್ಡ ಕೊಡುಗೆ ನೀಡಿದ್ದರೂ ಜನಸಾಮಾನ್ಯರ ಭಾಷೆ ಎಂಬ ಪದವಿಯನ್ನು ಪ್ರಾಕೃತ ಭಾಷೆಯು ಅದಾಗಲೇ ಹೊತ್ತುಕೊಂಡಿತ್ತೆಂದು ಸಾವರ್ಕರ್‌ ಬೊಟ್ಟು ಮಾಡಿ ತೋರಿಸುತ್ತಾರೆ. ಅಂದರೆ, ಸಂಸ್ಕೃತದ ಮೊದಲ ಕೂಸು ಎಂದು ಕರೆಯಬಹುದಾದ ಹಿಂದಿ. ಬ್ರಿಟಿಷರು ಬರುವ ಮೊದಲೇ ಅದು ವಿಕಸನಗೊಂಡಿತ್ತು. ರಾಮೇಶ್ವರದಿಂದ ಹರಿದ್ವಾರಕ್ಕೆ ಹೊರಡುವ ಸನ್ಯಾಸಿಗೆ ತನ್ನ ದಾರಿಯುದ್ದಕ್ಕೂ ಜನಸಾಮಾನ್ಯರ ಬಳಿ ಆ ಭಾಷೆಯ ಮೂಲಕ ವ್ಯವಹರಿಸಬಹುದಾಗಿತ್ತು. ಅದೇ ಹೊತ್ತು ಪಂಡಿತರು ಮತ್ತು ರಾಜಕುಮಾರರ ಬಳಿ ಸಂಸ್ಕೃತದಲ್ಲೂ. ʼರಾಷ್ಟ್ರಭಾಷೆಯ ಬೆಳವಣಿಗೆಯು ದೇಶದ ಸಕಲ ಜೀವನವೂ ದಿವ್ಯವೆಂದು ಕರೆಯುಬಹುದಾದ ಲಯಬದ್ಧತೆಗೆ ತಂದು, ನಮ್ಮ ಬದುಕಿನ ಆಂತರಿಕ ಏಕತೆಗೆ ಬಾಹ್ಯ ಸ್ವರೂಪವೆಂದು ಕರೆಯಬಹುದಾದ ಗುಣವನ್ನು ನೀಡಿತುʼ ಎಂದು ಸಾವರ್ಕರ್‌ ಹೇಳುತ್ತಾರೆ.</p>



<p>ಇವತ್ತು ಕೂಡ ನಮ್ಮ ನಾಡಿನಲ್ಲಿ ಹಲವು ಭಾಷೆಗಳಿವೆ. ನಮ್ಮ ಸಂವಿಧಾನದ ಎಂಟನೇ ಶೆಡ್ಯೂಲಿನಲ್ಲಿ ೨೨ ಭಾಷೆಗಳಿವೆ. ೬ ಭಾಷೆಗಳಿಗೆ ಕ್ಲಾಸಿಕಲ್‌ ಪದವಿ ದೊರೆತಿದೆ. ಸುಮಾರು ೭೮೦ ಭಾಷೆಗಳು ನಮ್ಮ ದೇಶದಲ್ಲಿ ಈಗಲೂ ಇವೆಯೆಂದು ಹಲವು ಅಂಕಿಅಂಶಗಳು ತೋರಿಸುತ್ತಿವೆ. ಒಂದೇ ಭಾಷೆ ಮಾತನಾಡುವ ಮೂಲಕ ಈ ಕಾಲದಲ್ಲೂ ರಾಮೇಶ್ವರದಿಂದ ಹರಿದ್ವಾರದ ತನಕ ಹೋಗಲು ಸಾಧ್ಯವಿಲ್ಲ. ಸಾವರ್ಕರ್‌ ತಾನು ಗುರಿಯಿಡುತ್ತಿರುವ ಜನಾಂಗೀಯತೆಯನ್ನು ಇಲ್ಲಿ ಐತಿಹಾಸಿಕ ಸತ್ಯವೆಂಬಂತೆ ದಾಖಲಿಸಲು ಹೊರಟಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.</p>



<p>ಮುಂದಿನ ಉಪಅಧ್ಯಾಯದ ಹೆಸರು, <em>ವಿದೇಶಿ ಆಕ್ರಮಣಕಾರರು</em> ಎಂದು. ಮುಹಮ್ಮದ್‌ ಘಜ್ನಿ ಸಿಂಧೂನದಿಯನ್ನು ಹಾದು ಭಾರತ ಪ್ರವೇಶಿಸಿದ ದಿನ ಒಬ್ಬ ಸಮಾನ ಶತ್ರುವಿನ ವಿರುದ್ಧ ರಾಷ್ಟ್ರವೆಂಬ ನೆಲೆಯಲ್ಲಿ ಸಿಂಧೂಸ್ತಾನ್‌ ಎಚ್ಚರಗೊಂಡಿತು ಎಂದು ಬಳಾಂಗ್ ಬಿಡುತ್ತಾರೆ ಸಾವರ್ಕರ್.‌ ಆ ಕಾಲದಲ್ಲಿ ಸಾವಿರಾರು ರಾಜ್ಯಗಳಾಗಿ ಹರಿದು ಹಬ್ಬಿದ್ದ, ಯಾವ ರೀತಿಯಲ್ಲೂ ಒಂದೇ ದೇಶವೆಂಬ ಕಲ್ಪನೆಯೂ ಇರದಿದ್ದ ಒಂದು ಜಾಗವಾಗಿತ್ತು ಇಂದು ನಾವು ಇಂಡಿಯಾ ಎಂದು ಕರೆಯುವ ಭೂಪ್ರದೇಶ ಎಂಬುದು ವಾಸ್ತವ ಸತ್ಯ. ದಕ್ಷಿಣ ಭಾರತದ ಯಾವ ಚರಿತ್ರೆ ಪುಸ್ತಕದಲ್ಲೂ ಘಜ್ನಿ ಎಂಬ ಹೆಸರೇ ಕಾಣ ಸಿಗದು. ಬದಲಿಗೆ ತನ್ನ ಜನಾಂಗೀಯ ರಾಷ್ಟ್ರಕ್ಕೆ ಇತಿಹಾಸದಲ್ಲಿ ನೆಲೆ ಕಟ್ಟಿಕೊಳ್ಳಬೇಕೆಂದರೆ, ತಾನು ಎತ್ತಿ ಹಿಡಿದಿದ್ದ ಭಾರತದೊಳಗಿನ ಮುಸ್ಲಿಂ ವಿರೋಧಿ ನೀತಿ ಸಿದ್ಧಾಂತವಾಗಿಯಾದರೂ ನೆಲೆ ನಿಲ್ಲಬೇಕೆಂದರೆ ಘಜ್ನಿಯನ್ನು ಒಬ್ಬ ಪ್ಯಾನ್‌ ಇಸ್ಲಾಮಿಕ್‌ ಆಕ್ರಮಣಕಾರನಾಗಿ ಬಿಂಬಿಸಲೇಬೇಕಾಗಿತ್ತು. ಸಾವರ್ಕರ್‌ ಇದನ್ನು ಬರೆಯುವ ಹೊತ್ತಿಗೆ ಮುಸ್ಲಿಂ ರಾಷ್ಟ್ರಗಳು ಕೂಡ ಅಸ್ಥಿರಗೊಂಡಿದ್ದವು ಎಂಬುದನ್ನು ಇಲ್ಲಿ ಗಮನಿಸಬೇಕು. ಟರ್ಕಿಯಲ್ಲಿಯೇ ಮುಸ್ತಫಾ ಕೆಮಾಲ್‌ ಪಾಷ ತನ್ನ ಹಿಡಿತ ಬಿಗಿಗೊಳಿಸುತ್ತಿದ್ದ. ಅಂದರೆ ಖಲೀಫಾ ಕೂಡ ನಾಮಕಾವಾಸ್ತೆಯಾಗಿದ್ದ ಕಾಲದಲ್ಲಿ ಸಾವರ್ಕರ್‌ ʼಬೇಟೆಯ ಶಕ್ತಿಯು ಗೆದ್ದವನ ಶಕ್ತಿಗಿಂತ ಮಿಗಿಲಾದದ್ದುʼ ಎಂದೆಲ್ಲ ಬಡಾಯಿ ಕೊಚ್ಚಿಕೊಳ್ಳುವುದು. ಭಾರತದ ದೇಸೀ ಸಂಸ್ಥಾನಗಳಲ್ಲಿ ಕೆಲವು ಸಂಸ್ಥಾನಗಳ ಚರಿತ್ರೆಯನ್ನು ಸಾಮಾನ್ಯೀಕರಿಸುತ್ತಿರುವುದು. ಸಾವರ್ಕರ್‌ ಬರೆಯುತ್ತಾರೆ. ʼಭಾರತಕ್ಕೆ ಒಬ್ಬಂಟಿಯಾಗಿ ಅರಬಿಗಳನ್ನು, ಪರ್ಷಿಯನ್ನರನ್ನು, ಪಠಾಣಿಗಳನ್ನು, ಬಲೂಚಿಗಳನ್ನು, ಟಾರ್ಟಾರುಗಳನ್ನು, ಟರ್ಕರನ್ನು, ಮಂಗೋಲಿಯನ್ನರನ್ನು ಎದುರಿಸಿಬೇಕಾಗಿ ಬಂದಿತ್ತು. ಸಂಪೂರ್ಣ ಮನುಷ್ಯ ಸಹಾರವೊಂದು ಆಕ್ರಮಣಕಾರಿ ಬಿರುಗಾಳಿಯ ರೂಪದಲ್ಲಿ ಬಂದಿತು. ಧರ್ಮವೇ ಅದರ ಮೂಲ ಪ್ರೇರಣೆ.ʼ ಇಷ್ಟೊಂದು ಸುಳ್ಳುಗಳೇ ತುಂಬಿದ ಚಾರಿತ್ರಿಕ ಉಲ್ಲೇಖ ಬೇರೆ ಸಿಗಲಿಕ್ಕಿಲ್ಲ. ಸಾವರ್ಕರ್‌ ಪುಣ್ಯಕ್ಕೆ ಅರಬಿಗಳು ಯಾವ ಕಾಲದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದರು ಎಂದು ಯಾರು ಕೂಡ ತಿರುಗಿ ಕೇಳಲಿಲ್ಲ. ಮುಸ್ಲಿಮರ ವಿರುದ್ಧ ಹಿಂದೂ ಭಾರತ ಹೋರಾಡಿತು ಎಂದು ಹೇಳುವ ಅದೇ ಕಾಲದಲ್ಲಿ ಭಾರತದ ಮಲಬಾರ್‌ ತೀರದಲ್ಲಿ ಕೇರಳೀಯರು ಮತ್ತು ಅರಬ್ಬರ ನಡುವಿನ ವ್ಯಾಪಾರ ಸಂಬಂಧ ಉಚ್ಛ್ರಾಯ ಸ್ಥಿತಿಯಲ್ಲಿತ್ತು! ಉಳಿದ ಆಕ್ರಮಣಗಳು ಒಂದು ದೇಶ ಇನ್ನೊಂದು ದೇಶದ ಮೇಲೆ ದಾಳಿ ನಡೆಸುವುದಷ್ಟೇ ಆಗಿತ್ತು. ಆರ್ಥಿಕತೆ, ಅಧಿಕಾರ ಮತ್ತು ಭೌಗೋಳಿಕ ವ್ಯಾಪ್ತಿ ಹೆಚ್ಚಿಸಿಕೊಳ್ಳುವ ಬಯಕೆಯಲ್ಲದೆ ಇಲ್ಲಿ ಧರ್ಮಕ್ಕೆ ಯಾವ ಪಾಲೂ ಇರಲಿಲ್ಲ. ಅದು ಗೆದ್ದವರಿಗೂ ಸೋತವರಿಗೂ.</p>



<p>ಪುನಹ ಸಾವರ್ಕರ್‌ ಇತಿಹಾಸದ ವಾಸ್ತವಗಳಲ್ಲದ ತನ್ನ ಕಥಾನಕವನ್ನು ಮುಂದುವರಿಸುತ್ತಾರೆ. ಅಕ್ಬರ್‌ ಮತ್ತು ದಾರಾಶಿಕೋ ಭಾರತದಲ್ಲಿ ಘಟಿಸಲು ಕಾರಣ ಹಿಂದೂಸ್ತಾನವು ಮುಸ್ಲಿಮರ ಮೇಲೆ ನಡೆಸಿದ ಧಾರ್ಮಿಕ ವಿಜಯವೆಂದು ಸಾವರ್ಕರ್‌ ವ್ಯಾಖ್ಯಾನಿಸುತ್ತಾರೆ. ರಾಜಾಡಳಿತದ ಕಾಲದಲ್ಲಿ ರಾಜನಿಗೆ ಪರಮಾಧಿಕಾರವಿತ್ತು. ಬಹುತೇಕ ಸಂದರ್ಭದಲ್ಲಿ ಜನಸಾಮಾನ್ಯರು ತೀರ್ಮಾನಗಳನ್ನು ತೆಗೆದುಕೊಳ್ಳುವಷ್ಟು ಶಕ್ತಿಯುತ ಘಟಕವಾಗಿರಲಿಲ್ಲ. ಪ್ರಜಾಪ್ರಭುತ್ವದ ಯುಗದಲ್ಲಿ ಮಾತ್ರವೇ ಅಂತಹದ್ದೊಂದು ಶಕ್ತಿ ಸೀಮಿತವಾಗಿಯಾದರೂ ಜನರ ಕೈಗೆ ಲಭಿಸುವುದು. ವಾಸ್ತವ ಹೀಗಿರುವಾಗ, ಅಕ್ಬರನ ನೀತಿಗಳ ಹಕ್ಕುಬಾಧ್ಯತೆಗಳನ್ನು ಅಕ್ಬರ್‌ ಮತ್ತು ಆತನ ದರ್ಬಾರಿಗೆ ಬಿಟ್ಟುಕೊಡುವುದು ಸರಿಯಾದ ರೀತಿ. ಅದರ ಬದಲಿಗೆ ಇಲ್ಲದ ಹಿಂದೂ ಜನತೆಯ ಮೇಲೆ ಅದನ್ನು ಹೇರುವುದು ಅತಿ ಕ್ರೂರತೆಯೆಂದೇ ಹೇಳಬೇಕಾಗುತ್ತದೆ. ಶೇರ್‌ಷಾನಂತಹ ರಾಜನೊಬ್ಬ ಹುಮಾಯೂನನ ಮೇಲೆ ದಾಳಿ ಮಾಡಿ ಗೆಲ್ಲುವಾಗ ಮತ್ತು ಮರುದಾಳಿ ನಡೆಸಿ ಮುಘಲ್‌ ರಾಜ್ಯವನ್ನು ಮರಳಿ ಗೆಲ್ಲುವಾಗ ಧರ್ಮವನ್ನು ನಡುವೆ ತಂದಿಡಲು ಯಾವ ಕಾರಣಕ್ಕೂ ಸಾಧ್ಯವಾಗುವುದಿಲ್ಲ. ಔರಂಗಜೇಬ್‌ ಬರುವಾಗಲಂತು ಈ ಮೇಲೆ ಹೇಳಿದ ಧಾರ್ಮಿಕ ವಿಜಯದ ಅಡಿಪಾಯವೇ ಬುಡಮೇಲಾಗುತ್ತದೆ.</p>



<p>ಸಾವರ್ಕರ್‌ ಅವರ ಈ ಸತ್ಯೋತ್ತರ ಕಥನಕ್ಕೆ ಇರುವುದು ಒಂದೇ ಗುರಿ. ಸಾವಿರಾರು ಸಂಸ್ಥಾನಗಳಾಗಿ ಹೋಳಾಗಿದ್ದ ಚರಿತ್ರೆಯನ್ನು ಭಾರತದ, ಹಿಂದೂಸ್ತಾನದ ಚರಿತ್ರೆಯಾಗಿ ಕಟ್ಟಬೇಕು. ಅದರ ಅತ್ಯಂತ ದೊಡ್ಡ ಶತ್ರುವಾಗಿ ಮಸ್ಲಿಮನನ್ನು, ಇಸ್ಲಾಮನ್ನು ತಂದು ನಿಲ್ಲಿಸಬೇಕು. ಔರಂಗಜೇಬನೊಂದಿಗೆ ಯುದ್ಧ ಮಾಡಿದ ಮರಾಠಾ ಸಾಮ್ರಾಜ್ಯದ ಚರಿತ್ರೆಯನ್ನು ಹಿಂದೂಸಾಮ್ರಾಜ್ಯದ ಚರಿತ್ರೆಯಾಗಿಸಬೇಕು. ಇದರೊಂದಿಗೆ ಚಿತ್ಪಾವನ ಬ್ರಾಹ್ಮಣರ ರಾಜ್ಯನಾಶದೊಂದಿಗೆ ಆರಂಭಗೊಂಡ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ರಾಜಕಾರಣವನ್ನು ಪುನಹ ರಂಗದ ಮುನ್ನೆಲೆಗೆ ತರಬೇಕು. ಇದರೊಂದಿಗೆ ಹಿಂದೂ ಜನಾಂಗೀಯತೆ ಆ ಬ್ರಾಹ್ಮಣಿಸ್ಟ್‌ ಚರಿತ್ರೆಯ ವಿಕಾಸದ ಹಂತವಾಗಿ ಮಾರ್ಪಾಡಾಗುತ್ತದೆ. ಅಷ್ಟೇ ಅಲ್ಲ, ಬ್ರಿಟಿಷರೊಂದಿಗಿನ ಶನಿವಾರವಾಡಾದ ಯುದ್ಧವನ್ನು ಸೋಲುವ ಮುನ್ನ ಮರಾಠರು ಮೂರನೇ ಪಾಣಿಪತ್‌ ಯುದ್ಧದಲ್ಲಿ ಅಫ್ಘನ್ನರೊಂದಿಗೆ ಸೋತಿದ್ದರು. ಅದನ್ನು ಸಾವರ್ಕರ್‌ ವ್ಯಾಖ್ಯಾನಿಸುವುದನ್ನು ಒಮ್ಮೆ ಕೇಳಿ ನೋಡಿ. ʼಹಿಂದೂಗಳು ಹೋರಾಟದಲ್ಲಿ ಸೋತರೂ ಯುದ್ಧದಲ್ಲಿ ಗೆದ್ದರು. ಆ ಯುದ್ಧದ ನಂತರ ಒಬ್ಬನೇ ಒಬ್ಬ ಅಫ್ಘನ್‌ ದೆಹಲಿಗೆ ನುಸುಳುವ ಧೈರ್ಯ ತೋರಿಸಲಿಲ್ಲ. ನಮ್ಮ ಮರಾಠರು ಅಟೋಕಿಗೆ ಎತ್ತಿಕೊಂಡು ಹೋದ ಹಿಂದೂ ಪತಾಕೆಯನ್ನು ಸಿಕ್ಖರು ಎತ್ತಿಕೊಂಡರು. ಮತ್ತು ಅದನ್ನು ಸಿಂಧೂವಿನ ಆಚೆ ಕಾಬೂಲ್‌ ತನಕ ಹಾರಿಸಿದರು.ʼ ಸಾವರ್ಕರ್‌ ಇಲ್ಲಿ ಸೋಲನ್ನು ಗೆಲುವಾಗಿ, ಅದೂ ಕೂಡ ಬೃಹತ್‌ ಗೆಲುವಾಗಿ ಚಿತ್ರಿಸಲು ಇರುವುದು ಒಂದೇ ಕಾರಣ. ಅದು ಚಿತ್ಪಾವನ ಪೇಶ್ವೆಗಳ ಯುದ್ಧವಾಗಿತ್ತು. ಇನ್ನೊಂದು ಧರ್ಮವಾದ ಸಿಕ್ಖ್‌ ಧರ್ಮದ ಜನರು ತಮ್ಮ ಸಂಸ್ಥಾನದ ಚರಿತ್ರೆಯಲ್ಲಿ ಹಿಂದೂ ಪತಾಕೆಯನ್ನು ಹಾರಿಸಿದ್ದರೆಂದು ಸುಳ್ಳೇ ಸುಳ್ಳು ಹೇಳಲು ಸಾವರ್ಕರ್‌ ಎಳ್ಳಷ್ಟೂ ಸಂಕೋಚ ಪಡುವುದಿಲ್ಲ ಎಂಬುದು ಆಶ್ಚರ್ಯಕರ.</p>



<p><em>ಕಾರ್ಯನಿರತ ಹಿಂದೂಧರ್ಮ</em> ಎಂಬ ಹೆಸರಿನ ಉಪಅಧ್ಯಾಯದಲ್ಲೂ ಸತ್ಯೋತ್ತರ ಕಥನಗಳ ಮೆರವಣಿಗೆಯೇ ನಡೆಯುತ್ತದೆ. ಹಲವು ಸಲ ಪುನರಾವರ್ತಿಸಿದ ವಾದವನ್ನೇ ಸಾವರ್ಕರ್‌ ಮತ್ತೆ ಮತ್ತೆ ಮಂಡಿಸುತ್ತಾರೆ. ಆರ್ಯಾವರ್ತವಾಗಲಿ, ದಕ್ಷಿಣಾಪಥವಾಗಲಿ, ಜಂಬೂದ್ವೀಪವಾಗಲಿ, ಭರತವರ್ಷವಾಗಲಿ ಹಿಂದೂಸ್ತಾನ್‌ ಎಂಬ ಸಂಜ್ಞೆಯಷ್ಟು ಶಕ್ತಿಶಾಲಿಯಾಗಿ ರಾಜಕೀಯ ಮತ್ತು ಸಾಂಸ್ಕೃತಿಕ ಹೊಣೆಯನ್ನು ಹೊತ್ತುಕೊಳ್ಳುವುದಿಲ್ಲ ಎಂಬುದು. ತನ್ನನ್ನು ತಾನೇ ನಂಬಿಸಲೆಂಬಂತೆ ಅಟೋಕಿನಿಂದ ಕಟಕ್‌ ತನಕದ ಜನರು ಒಟ್ಟುಗೂಡಿ ಜೈವಿಕ ಏಕತೆ ಸಾರಿದರು ಎಂಬ ಸುಳ್ಳನ್ನು ಮತ್ತೆ ಮತ್ತೆ ಹೇಳುತ್ತಾರೆ. ಸಾವರ್ಕರ್‌ ಬರೆಯುವುದನ್ನು ಗಮನಿಸಿ ನೋಡಿ. ʼಹಿಂದುತ್ವ ಎಂಬ ಆ ಶಬ್ದ ನಮ್ಮ ಸಂಪೂರ್ಣ ರಾಜಕೀಯ ದೇಹದ ಮೂಲಕ ಜೀವಚೈತನ್ಯದ ನಾಡಿಯಂತೆ ಹರಡಿಕೊಂಡು, ಮಲಬಾರಿನ ನಾಯರುಗಳು ಕಾಶ್ಮೀರದ ಬ್ರಾಹ್ಮಣರ ಯಾತನೆಗಳಿಗೆ ಅಳುವಂತೆ ಪ್ರೇರೇಪಿಸಿತು.ʼ ಮಲಯಾಳಿಗಳಿಗೆ ಇದರ ಸತ್ಯಾಸತ್ಯತೆ ಗೊತ್ತು. ಸಾವರ್ಕರ್‌ ಹೀಗೆ ಬರೆದಿಡುವುದಕ್ಕಿಂತ ಮುಂಚೆಯೇ ತಿರುವಾಂಕೂರಿನ ನಾಯರುಗಳು ತಮಿಳುನಾಡಿನ ಪಟ್ಟರುಗಳು, ಪರದೇಶಿ ಬ್ರಾಹ್ಮಣರು ತಮ್ಮ ಉದ್ಯೋಗಾವಕಾಶಗಳನ್ನು ಎಗರಿಸಿಕೊಳ್ಳುತ್ತಿರುವ ಬಗ್ಗೆ ರಾಜನಿಗೆ ಬೃಹತ್‌ ಅರ್ಜಿ ಬರೆದಿದ್ದರು. ಈಗಲೂ ಕಾಶ್ಮೀರಿ ಪಂಡಿತರು ಮತ್ತು ಮಲಬಾರಿನ ನಾಯರುಗಳ ನಡುವೆ ಜ್ಞಾನದ ವಿಷಯದಲ್ಲಿ ಬಿಟ್ಟರೆ ಬೇರೆ ರೀತಿಯ ಭಾವನಾತ್ಮಕ ಸಂಬಂಧ ಇರಲು ಸಾಧ್ಯವಿಲ್ಲ.</p>



<p>ಹಿಂದೂ ಸಾಮ್ರಾಜ್ಯ ಇಲ್ಲಿ ಅಸ್ತಿತ್ವದಲ್ಲಿತ್ತು ಎಂದು ಸಾಧಿಸಲು ಸಾವರ್ಕರ್‌ ಬಳಸುವುದು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ರಚಿಸಲ್ಪಟ್ಟ ಸಾಹಿತ್ಯ ಕೃತಿಗಳನ್ನು. ಅವುಗಳಲ್ಲಿ ಬಹುತೇಕ ಕೃತಿಗಳು ರಾಜದರ್ಬಾರಿನ ಸದಸ್ಯರು ಅಥವಾ ಸ್ವತಃ ರಾಜನನ್ನು ಹೊಗಳಲೆಂದೇ ರಚಿಸಲ್ಪಟ್ಟವು. ಚಾಂದ್‌ ಬರ್ದಾಯಿಯ <em>ಪೃಥ್ವಿರಾಜ್‌ ರಾಸೋ</em> ಸಾವರ್ಕರ್‌ ಎತ್ತಿ ಹಿಡಿಯುವ ಮೊದಲ ಪುಸ್ತಕ. ಚಾಂದ್‌ ಬರ್ದಾಯಿ ಪೃಥ್ವಿರಾಜ್‌ ಚೌಹಾಣನ ಆಸ್ಥಾನ ಕವಿಯಾಗಿದ್ದ. ಆಸ್ಥಾನ ಕವಿಗಳ ಕೆಲಸ ಈಗಿನ ಪಬ್ಲಿಕ್‌ ರಿಲೇಶನ್ಸ್‌ ಆಫೀಸರ್‌ಗಳಿಗೆ ಸಮಾನವಾದ ಕೆಲಸವಾಗಿತ್ತು. ಅದರ ಜೊತೆಗೆ, <em>ಪೃಥ್ವಿರಾಜ್‌ ರಾಸೋ </em>ಕೃತಿಯ ಒಂದು ಸಣ್ಣ ಭಾಗ ಮಾತ್ರವೇ ಇದುವರೆಗೆ ಲಭ್ಯವಾಗಿರುವುದು ಎಂಬುದನ್ನೂ ನಾವಿಲ್ಲಿ ಗಮನಿಸಬೇಕು.</p>



<p>ಅದೊಂದು ಸಾಹಿತ್ಯ ಕೃತಿ, ಇತಿಹಾಸವಲ್ಲ ಎಂಬ ಬಗ್ಗೆ ಎಲ್ಲ ಬಗೆಯ ಇತಿಹಾಸಕಾರರ ನಡುವೆ ಒಮ್ಮತದ ಅಭಿಪ್ರಾಯವಿದೆ. ಅದರಲ್ಲಿ ಹೇಳಲಾಗುವ ಘಟನೆಗಳೆಲ್ಲ ಪೃಥಿರಾಜ್‌ ಚೌಹಾಣನಿಗೆ ಅತಿಮಾನುಷ ಶಕ್ತಿಯ ಪ್ರತೀತಿ ಸೃಷ್ಠಿಸುವ ಉದ್ದೇಶದಿಂದ ನಿರ್ಮಿಸಿರುವಂತವು. ಉದಾಹರಣೆಗೆ, ಮುಹಮ್ಮದ್‌ ಗೋರಿಯೊಂದಿಗೆ ಯುದ್ಧದಲ್ಲಿ ಸೋತ ಪೃಥ್ವಿರಾಜ್‌ ಚೌಹಾಣನ್ನು ಬಂಧಿಸಿ ಗೋರಿಗೆ ಸಾಗಿಸಲಾಗುತ್ತದೆ. ಚಾಂದ್‌ ಬರ್ದಾಯಿ ಆತನನ್ನು ರಕ್ಷಿಸಲು ಅಲ್ಲಿಗೆ ಬರುತ್ತಾನೆ. ಅಲ್ಲಿ ಪೃಥ್ವಿರಾಜ್‌ ಚೌಹಾಣನ ಕಣ್ಣು ಕಟ್ಟಿ ಶಸ್ತ್ರ ಪರೀಕ್ಷೆ ನಡೆಸಲಾಗುತ್ತದೆ. ಆತ, ಕಣ್ಣು ಕಟ್ಟಿದ್ದರೂ ಕೂಡ, ಮುಹಮ್ಮದ್‌ ಗೋರಿಯ ದನಿ ಕೇಳಿ, ಆತ ನಿಂತಿರುವ ಜಾಗವನ್ನು ಮನಸ್ಸಿನಲ್ಲೇ ಲೆಕ್ಕ ಹಾಕಿ ಗುರುತಿಸಿ ಬಾಣ ಹೂಡುತ್ತಾನೆ. ಗೋರಿಯನ್ನು ಕೊಲ್ಲುತ್ತಾನೆ. ಇದು <em>ಪೃಥ್ವಿರಾಜ್‌ ರಾಸೋ</em>ದ ಒಂದು ಮುಖ್ಯ ಭಾಗ. ಆದರೆ, ಇತಿಹಾಸದಲ್ಲಿ ಅಂತಹದ್ದೊಂದು ಘಟನೆ ನಡೆದೇ ಇಲ್ಲೆವೆಂದು ಮಾತ್ರವಲ್ಲ, ಗೋರಿಯೊಂದಿಗಿನ ಯುದ್ಧದಲ್ಲಿ ಪೃಥ್ವಿರಾಜ್‌ ಚೌಹಾಣನ್ನು ಕೊಲ್ಲಲಾಗಿತ್ತು. ಅಷ್ಟೇ ಅಲ್ಲ, ಈ ಕವಿತೆಯನ್ನು ಬರೆದಿರುವುದು ಬೃಜ್‌ ಬಿಹಾರಿ ಎಂಬ ಉಪಭಾಷೆಯಲ್ಲಿ. ಹಿಂದಿಯಲ್ಲಿ ಎಂದು ಹೇಳಲಾಗದು. ಆದರೆ, ಒಬ್ಬ ರಜಪೂತ ಸಂಸ್ಥಾನದ ರಾಜ ಮತ್ತು ಗೋರಿಯ ನಡುವೆ ನಡೆದ ಯುದ್ಧವನ್ನು, ಹಿಂದೂ ರಾಷ್ಟ್ರ ಮತ್ತು ಇಸ್ಲಾಂ ಆಕ್ರಮಣಕಾರರ ನಡುವಿನ ಹೋರಾಟವಾಗಿ ಸಾವರ್ಕರ್‌ ಚಿತ್ರಿಸುತ್ತಾರೆ. ಹಿಂದಿ, ಹಿಂದೂಗಳು, ಹಿಂದ್‌ ಮೊದಲಾದ ಪದಗಳನ್ನು ತೋರಿಸಿ ಹಿಂದೂರಾಷ್ಟ್ರದ ಅಸ್ತಿತ್ವವನ್ನು ಭೂತಕಾಲದಲ್ಲಿ ಸ್ಥಾಪಿಸಲು ಪ್ರಯತ್ನಿಸುತ್ತಾರೆ.</p>



<p>ರಾಷ್ಟ್ರ ಎಂಬ ಪರಿಕಲ್ಪನೆಯೇ ಅಪರಿಚಿತವಾಗಿದ್ದ ಕಾಲದಲ್ಲಿ, ಇತಿಹಾಸದೊಂದಿಗೆ ನೇರ ಸಂಬಂಧ ಹೊಂದಿರದ ಸಾಹಿತ್ಯ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಹಿಂದೂ ರಾಷ್ಟ್ರಕ್ಕೆ ಇತಿಹಾಸ ಬರೆಯಲು ಸಾವರ್ಕರ್‌ ಹೊರಡುತ್ತಾರೆ. ಹಿಂದಿ ಭಾಷೆಗೆ ಸಾವರ್ಕರ್‌ ಹೇಳುವ <em>ಹಿಂದುತ್ವ</em>ದೊಂದಿಗೆ ಯಾವ ರೀತಿಯ ಸಂಬಂಧವೂ ಇಲ್ಲ. ಹಲವು ಉಪಭಾಷೆಗಳಿಂದ ಹುಟ್ಟಿಕೊಂಡ ಒಂದು ಭಾಷೆ ಹಿಂದಿ. <em>ಹಿಂದುತ್ವ</em>ದ ಭಾಷೆಯಾಗಿ ಅದನ್ನು ಸ್ಥಾಪಿಸುವ ಕೆಲಸವನ್ನು ಸಾವರ್ಕರ್‌ ಮಾಡುತ್ತಿರುವುದು. ಅದೇ ರೀತಿ ಹಿಂದ್‌ ಎಂಬ ಪದದ ಕಥೆ. ೧೯೦೯ರಲ್ಲಿ ಗಾಂಧಿ ಬರೆದ ಪ್ರಮುಖ ಪುಸ್ತಕದ ಹೆಸರು ‌ʼ<em>ಹಿಂದ್ ಸ್ವರಾಜ್‌</em><em>ʼ</em><em> </em>ಎಂದು. ಅದರ ಹಿಂದ್‌ ಪದಕ್ಕೆ ಹೈಂದವದೊಂದಿಗೆ ಯಾವ ಸಂಬಂಧವೂ ಇಲ್ಲ. <em>ಪೃಥ್ವಿರಾಜ್‌ ರಾಸೊ</em> ಬರೆಯುವ ಕಾಲದಲ್ಲಿ ಹೈಂದವ ಎಂಬ ಪದಕ್ಕೆ ಹಿಂದೂ ಧರ್ಮದೊಂದಿಗೆ ಯಾವ ರೀತಿಯ ಸಂಬಂಧವನ್ನೂ ಹುಡುಕಲಾಗದು. ಸ್ವತಹ ಸಾವರ್ಕರ್ ಹೇಳುವಂತೆ ಸಿಂಧೂತಟದ ನಿವಾಸಿಗಳು ಎಂಬ ಅರ್ಥ ಮಾತ್ರವೇ ಅದಕ್ಕಿರುವುದು. <em>ರಾಸೋ</em>ದಲ್ಲಿ ಬರುವ ಭಾರತ ಎಂಬ ಪದ <em>ಮಹಾಭಾರತ</em>ವನ್ನು ಕುರಿತಾಗಿದೆಯೆಂದು ಸಾವರ್ಕರ್‌ ಸಮ್ಮತಿಸುತ್ತಾರೆ. ಅದನ್ನು ಭರತವರ್ಷವೆಂದು ಪರಿಗಣಿಸಬೇಕೆಂಬ ವಾದವನ್ನೂ ಹೂಡುತ್ತಾರೆ.</p>



<p>ಹೀಗೆ ಐತಿಹಾಸಿಕ ಘಟನೆಗಳ ಸಣ್ಣ ಸಣ್ಣ ಕ್ಷಣಗಳಿಂದ ಹೆಕ್ಕಿ ಕಟ್ಟಿದ ಭಾವನಾತ್ಮಕ ಸಾಹಿತ್ಯ ಸಾಮ್ರಾಜ್ಯದಲ್ಲಿ <em>ಹಿಂದುತ್ವ</em>ವನ್ನು ಕಾಯಿಸಿ ಹುರಿಗೊಳಿಸುತ್ತಾರೆ ಸಾವರ್ಕರ್‌. ಔರಂಗಜೇಬನೊಂದಿಗಿನ ಯುದ್ಧದ ನಡುವೆ ಶಿವಾಜಿಯ ಬಳಿ ತಾನು ಕಂಡ ವಿಜಯದ ಕನಸಿನ ಕುರಿತು ರಾಮದಾಸರು ಹೇಳುವಾಗ ಹಿಂದೂಸ್ತಾನವೆಂದು ಉಲ್ಲೇಖಿಸುವುದು ಇನ್ನೊಂದು ಉದಾಹರಣೆ. ಶಿವಾಜಿ ಮತ್ತು ಛತ್ರಸಾಲ್‌ ಕುರಿತು ಬರೆದ ಭೂಷಣ್‌ ಎಂಬ ಕವಿ, ಛತ್ರಸಾಲ್‌ ಕುರಿತು ಕಲ್ಪನೆಯಿಂದಲೇ ಹೆಕ್ಕಿ ಬರೆದ ಲಾಲ್‌ಕವಿ ಮೊದಲಾದವರ ಸಾಹಿತ್ಯ ಕೃಷಿಗಳಿಂದೆಲ್ಲ ಹಿಂದೂಸ್ತಾನ್‌, ಹೈಂದವ ಮೊದಲಾದ ಪದಗಳು ಕಾಣಿಸಿಕೊಂಡ ಜಾಗಗಳನ್ನು ಹೆಕ್ಕಿ ತೆಗೆಯುತ್ತಾರೆ. <em>ಹಿಂದೂಪದ್‌-ಪದಷಾಹಿ</em>ಯನ್ನು ಪೂರ್ತಿಗೊಳಿಸಿದ ಪೇಶ್ವಾ ಆಡಳಿತದ ತನಕ ಸಾವರ್ಕರ್‌ ತಲುಪುತ್ತಾರೆ. ಅಂದರೆ, ತನ್ನದೇ ಚಿತ್ಪಾವನ ಚರಿತ್ರೆಗೆ. ಅಂದರೆ , ತನ್ನಿಂದಾಚೆಗೆ ಹೊರ ಜಗತ್ತಿಗೆ ಕತ್ತೆತ್ತಿ ನೋಡಲಾಗದ ಬ್ರಾಹ್ಮಣ ಪ್ರಾಬಲ್ಯದ ಚರಿತ್ರೆಯನ್ನು ಇಂಡಿಯಾದ ಚರಿತ್ರೆ ಎಂಬರ್ಥದಲ್ಲಿ ಸಾವರ್ಕರ್‌ ವ್ಯಾಖ್ಯಾನಿಸುತ್ತಿರುವುದು. ಆ ವ್ಯಾಖ್ಯಾನದಲ್ಲಿ ಎಲ್ಲೂ ಕೂಡ ಭಾರತದ ಜನಸಾಮಾನ್ಯರ ಪ್ರಿತಿನಿಧಿ ಇಲ್ಲವೇ ಇಲ್ಲ. ಮಹಿಳೆಯರೂ ಇಲ್ಲ. ಇರುವುದು ಸವರ್ಣರು ಮತ್ತು ಅವರನ್ನು ಯಾವುದಾದರೂ ಒಂದು ರೀತಿಯಲ್ಲಿ ಅಸ್ವಸ್ಥಗೊಳಿಸಿದ ಇತರ ಸಂಸ್ಥಾನಗಳ ಅಧಿಕಾರವಂತರು ಮಾತ್ರ.</p>



<p><em>ಮೂರ್ಖ ಚಿಂತನೆಗಳು ತೊಲಗಬೇಕು</em> ಎಂಬ ಹೆಸರಿನ ಮುಂದಿನ ಉಪಅಧ್ಯಾಯದಲ್ಲಿ ತನ್ನ ಹಿಂದುತ್ವ ಕಲ್ಪನೆಗೆ ಅಡ್ಡಲಾಗಿ ನಿಂತಿರುವ ತಡೆಗೋಡೆಗೆ ಮುಖಾಮುಖಿಯಾಗಲು ಸಾವರ್ಕರ್‌ ನಿರ್ಬಂಧಿತರಾಗುತ್ತಾರೆ. ಕಾರಣ, ಪುರಾತನ ಸಂಸ್ಕೃತ ಗ್ರಂಥಗಳಲ್ಲಿ ಎಲ್ಲಿಯೂ ಹಿಂದೂ ಎಂಬ ಪದಪ್ರಯೋಗ ಕಾಣ ಸಿಗುವುದಿಲ್ಲ. ಅದಕ್ಕೆ ಸಾವರ್ಕರ್‌ ನೀಡುವ ಸಮಜಾಯಿಷಿ ಒಂದರ್ಥದಲ್ಲಿ ಪರಿಹಾಸ್ಯವೇ ಆಗಿದೆ. ಬನಾರಸ್‌ ಎಂಬ ಪದ ಸಂಸ್ಕೃತದಲ್ಲಿ ಇಲ್ಲ. ಆದರೆ, ಪ್ರಾಕೃತದಲ್ಲಿ ವಾರಣಾಸಿ ಎಂಬ ಪದವಿದೆ. ಕ್ಲಾಸಿಕಲ್‌ ಸಂಸ್ಕೃತದಲ್ಲಿ ಪ್ರಾಕೃತ ಭಾಷೆಯ ಪದವನ್ನು ನಿರೀಕ್ಷಿಸಬಾರದು. ಮರಾಠ, ಪಾಟ್ನಾ ಮೊದಲಾದ ಹೆಸರುಗಳು ಸಂಸ್ಕೃತದಲ್ಲಿ ಇಲ್ಲದಿದ್ದರೆ ಅದರರ್ಥ ಆ ಊರುಗಳೇ ಇಲ್ಲ ಎಂದಾಗುತ್ತದೆಯೇ ಎಂಬ ತರ್ಕವನ್ನು ಸಾವರ್ಕರ್‌ ಎತ್ತುತ್ತಾರೆ. <em>ಹಿಂದುತ್ವ </em>ಅದರ ಆಸ್ತಿಯಾಗಿ ಎತ್ತಿಹಿಡಿದಿರುವುದು ಸಂಸ್ಕೃತ ಸಾಹಿತ್ಯವನ್ನು ಎಂಬುದನ್ನು ಮರೆತು ಸಾವರ್ಕರ್‌ ಈ ತರ್ಕವನ್ನು ಹೂಡುತ್ತಾರೆ. ಸ್ವತಹ ಸಾವರ್ಕರ್‌ ಹಿಂದುತ್ವದ ಹುಟ್ಟಿದ ದಿನವಾಗಿ ರಾವಣನನ್ನು ಗೆದ್ದು ಶ್ರೀರಾಮಚಂದ್ರನು ಅಯೋಧ್ಯೆಗೆ ಮರಳಿ ಬಂದ ದಿನವನ್ನು ಎಂದು ನಾವು ಗಮನಿಸಿದೆವು. ಸಂಸ್ಕೃತದಲ್ಲಿ ಹಿಂದೂ ಎಂಬ ಪದವೇ ಇಲ್ಲದಿದ್ದರೆ ಯಾವ ಆಧಾರದಲ್ಲಿ ಶ್ರೀರಾಮಚಂದ್ರನನ್ನು ಹಿಂದೂರಾಷ್ಟ್ರದ ಅಧಿಪತಿಯಾಗಿ ಸಾವರ್ಕರ್‌ ಆಯ್ದುಕೊಳ್ಳುವುದು?</p>



<p>ಅಂದರೆ, ಹಿಂದೂ ಎಂಬ ಹೆಸರು ನಿಜವಾಗಿ ನಾವಿಂದು ಇಂಡಿಯಾ ಎಂದು ಕರೆಯುವ ಭೂಪ್ರದೇಶಕ್ಕೆ ಹೊರಗಿನವರು ಇಟ್ಟ ಹೆಸರು. ಅದರಲ್ಲೂ ವಿಶೇಷವಾಗಿ, ಸಾವರ್ಕರ್‌ ಯಾವ ಧರ್ಮಾನುಯಾಯಿಗಳ ಮೇಲೆ ತನ್ನ ಅಸ್ತ್ರ ಪ್ರಯೋಗಿಸುತ್ತಿದ್ದಾರೋ, ಅದೇ ಮುಸ್ಲಿಮರು ಹಿಂದೂ ಎಂಬ ಹೆಸರನ್ನು ನೀಡಿದ್ದರು ಎಂಬ ವಾಸ್ತವ ಸಾವರ್ಕರನ್ನು ಇಲ್ಲಿ ಚಿಂತೆಗೀಡು ಮಾಡುತ್ತಿರುವುದು. ತಾನೇ ಮುಂದಿಟ್ಟ ವಾದದ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿರುವ ಸಾವರ್ಕರನ್ನು ಇಲ್ಲಿ ಕಾಣಬಹುದು. ಹಿಂದುತ್ವ ಎಂಬ ಪದ ಮತ್ತು ಹಿಂದೂಯಿಸಂ ಅಥವಾ ಹಿಂಧೂಧರ್ಮ ಎಂಬ ಪದಗಳ ನಡುವಿನ ಸಂಬಂಧ ಭಿನ್ನತೆಗಳೇ ಇಂತಹ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳಲು ಕಾರಣವೆಂದು ಸಾವರ್ಕರ್‌ ಹೇಳುತ್ತಾರೆ. ಅಂದರೆ, ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮನ್ನು ಜನಾಂಗೀಯತೆಯೊಂದಿಗೆ ಬೆರೆಸಲೆಂದು ಸಾವರ್ಕರ್‌ ಆವಿಷ್ಕರಿಸಿದ ಯೋಜನೆಯನ್ನು, ಬ್ರಾಹ್ಮಣೇತರರು ಮತ್ತು ಸವರ್ಣೇತರರ ಮೇಲೆ ಹೇರಬಹುದಾದ ಒಂದು ರಾಜಕೀಯ ಸಿದ್ಧಾಂತವಾಗಿ ಮಾರ್ಪಡಿಸಲು <em>ಹಿಂದುತ್ವ</em> ಪುಸ್ತಕದ ಮೂಲಕ ಪ್ರಯತ್ನಿಸುತ್ತಿರುವುದು. ಜೊತೆಗೆ, ಆ ಜನಾಂಗೀಯತೆಗೆ ಜೈನರು ಮತ್ತು ಸಿಕ್ಖರನ್ನು ಒಳಗೊಳ್ಳಿಸಲು ಕೂಡ.</p>



<p><em>ಹಿಂದುತ್ವದ ಅಡಿಪಾಯ ಸಂಗ್ರಹಗಳು</em> ಎಂಬ ಹೆಸರಿನ ಉಪಅಧ್ಯಾಯದಲ್ಲಿ ಪೌರತ್ವದ ಕುರಿತಾದ ಕಲ್ಪನೆಯನ್ನು ಸಾವರ್ಕರ್‌ ಮುಂದಿಡುತ್ತಾರೆ. ಒಬ್ಬ ಅಮೆರಿಕನ್‌ ಭಾರತದ ಪೌರನಾದರೆ, ನಮ್ಮ ರಕ್ತದ ಮೂಲಕ ಹರಿದು ಬಂದ ಸಂಸ್ಕೃತಿ ಮತ್ತು ಚರಿತ್ರೆಯ ಭಾಗವಾಗಲು ಆತನಿಗೆ ಸಾಧ್ಯವಿಲ್ಲ ಎಂಬ ವಾದವನ್ನು ಇಲ್ಲಿ ಮುಂದಿಡುತ್ತಾರೆ. ಆತನಿಗೆ ನಮ್ಮ ಸಂಸ್ಕೃತಿಯ ಬಗ್ಗೆ ಪ್ರೀತಿ ಮೂಡಬಹುದು. ಅಭಿಮಾನವನ್ನೂ ಆತ ಹೊಂದಬಹುದು. ಹಿಂದೂ ಎಂಬ ಮಂಡಲದೊಳಗೆ ಯಾವ ಕಾಲಕ್ಕೂ ಆತನಿಗೆ ತನ್ನನ್ನು ತಾನು ಹೊಂದಿಸಿಕೊಳ್ಳಲಾಗುವುದಿಲ್ಲ. ಕಾರಣ, ಹಿಂದುತ್ವದ ಪ್ರಾಥಮಿಕ ನಿರ್ಣಯಗಳಲ್ಲಿ ಒಂದು, ತಾನು ಅಥವಾ ತನ್ನ ಪೂರ್ವಿಕರು ಹಿಂದೂಸ್ತಾನದ ಪೌರರಾಗಿರಬೇಕು ಎಂಬುದು. ಅದೇ ಹೊತ್ತು ಇದು ಮಾತ್ರವೇ ಈ ನಿರ್ಣಯದಲ್ಲಿ ಅಂತಿಮವಲ್ಲ. ಯಾಕೆಂದರೆ, ಹಿಂದೂ ಎಂಬ ಪದಕ್ಕೆ ಭೌಗೋಳಿಕತೆಯಿಂದಾಚೆಗೆ ಬೇರೆ ಅರ್ಥಗಳೂ ಇವೆ. ಆಧುನಿಕತೆಯ ವಿರೋಧಿಯೂ ಶುದ್ಧವಾದಿಯೂ ಆದ ತನ್ನ ಬ್ರಾಹ್ಮಣ ವಾಂಛೆಯನ್ನು ಹೊರತೆಗೆಯುವ ಸಾವರ್ಕರನ್ನು ಇಲ್ಲಿ ಕಾಣಬಹುದು. ಪೌರತ್ವದ ಕುರಿತು <em>ಹಿಂದುತ್ವ</em>ದಲ್ಲಿ ಇನ್ನಷ್ಟು ಸ್ಪಷ್ಟವಾಗಿ ಪ್ರತಿಪಾದಿಸಲಾಗಿದೆಯೆಂಬ ಕಾರಣಕ್ಕೆ ನಮ್ಮ ವಿಮರ್ಶೆಯನ್ನು ವಿವರವಾಗಿ ಆಮೇಲೆ ನೋಡೋಣ.</p>



<p><em>ಒಂದೇ ರಕ್ತದ ಬಂಧನ</em> ಎಂಬ ಮುಂದಿನ ಉಪಅಧ್ಯಾಯದಲ್ಲಿ ಸಾವರ್ಕರ್‌ ಈ ಜನಾಂಗೀಯ ರಾಜಕಾರಣವನ್ನು ಮುಂದಕ್ಕೊಯ್ಯಲು ಪ್ರಯತ್ನಿಸುತ್ತಾರೆ. ಹಿಂದೂಸ್ತಾನದಲ್ಲಿ ಜನಿಸಿದವರೆಲ್ಲರೂ ಒಂದೇ ರಕ್ತದಲ್ಲಿ ಬಂಧಿಸಲ್ಪಟ್ಟವರೆಂದೂ, ಹಿಂದೂ ರಕ್ತ ಎಂಬುದು ಇಂಗ್ಲಿಷ್‌ ರಕ್ತ, ಫ್ರೆಂಚ್‌ ರಕ್ತ ಎಂದೆಲ್ಲ ಹೇಳುವ ಹಾಗೆ ರಾಷ್ಟ್ರೀಯತೆಯೊಂದಿಗೆ ಸಂಬಂಧ ಹೊಂದಿರುವ ಸಂಗತಿಯಾಗಿದೆಯೆಂದು ಸಾವರ್ಕರ್‌ ಹೇಳುತ್ತಾರೆ. ಆದರೆ, ಇಂಗ್ಲಿಷ್‌ ರಕ್ತ ಅಥವಾ ಫ್ರೆಂಚ್‌ ರಕ್ತ ಎಂಬುದೆಲ್ಲ ಕ್ರಿಶ್ಚಿಯನ್‌ ರಕ್ತ, ಮುಸ್ಲಿಂ ರಕ್ತ ಎಂದೆಲ್ಲ ಹೇಳುವ ಹಾಗೆ ಧರ್ಮಾಧಾರಿತವಲ್ಲವೆಂಬುದನ್ನು ಸಾವರ್ಕರ್‌ ಮುಚ್ಚಿಡುತ್ತಾರೆ. ಅಂದರೆ, ಹಿಂದೂ ರಕ್ತ ಎಂದು ಹೇಳುವುದು ಮುಸ್ಲಿಂ ರಕ್ತ ಅಥವಾ ಕ್ರಿಶ್ಚಿಯನ್‌ ರಕ್ತ ಎಂದೆಲ್ಲ ಹೇಳುವ ಹಾಗೆ ಧರ್ಮಾಧಾರಿತವಾಗಿದೆ. ಅದು ಭಾರತೀಯ ರಕ್ತ ಎಂದು ಹೇಳುವ ಹಾಗೆ ಅಲ್ಲ. ಈ ವಾಸ್ತವವನ್ನು ಸಾವರ್ಕರ್‌ ಬಹಳ ಕಷ್ಟಪಟ್ಟು ಮುಚ್ಚಿಡುತ್ತಾರೆ. ಒಂದೇ ರಕ್ತದ ಬಗ್ಗೆ ಮಾತನಾಡುವಾಗಲೂ ಬ್ರಾಹ್ಮಣರ ಆರಾಧನಾಲಯಗಳಿಗೆ ದಲಿತರಿಗೆ ಮತ್ತು ಕೆಳಜಾತಿಯವರಿಗೆ ಪ್ರವೇಶವಿಲ್ಲವೆಂಬ ತನ್ನ ಸಮಕಾಲೀನ ವಾಸ್ತವದ ಬಗ್ಗೆ ಸಾವರ್ಕರ್‌ ತಿರುಗಿಯೂ ನೋಡುವುದಿಲ್ಲ. ಸಾವರ್ಕರ್‌ ಇಷ್ಟುದ್ದ ಬರೆಯುವಾಗಲೂ ಒಂದೇ ರಕ್ತದಲ್ಲಿ ಜನಿಸಿದವರಿಗೆ ಕೂಡ ಒಟ್ಟಿಗೆ ಒಂದೇ ಪಂಕ್ತಿಯಲ್ಲಿ ಕೂತು ಉಣ್ಣಲಾಗಲೀ, ಒಂದೇ ದಾರಿಯಲ್ಲಿ ಒಟ್ಟಿಗೆ ಸಂಚರಿಸಲಾಗಲೀ ಅವಕಾಶವಿರಲಿಲ್ಲ. ಅವರು ಪರಸ್ಪರ ಮುಖಗಳನ್ನೇ ನೋಡಿಕೊಳ್ಳುವಂತಿರಲಿಲ್ಲ. ಅನುಲೋಮ-ವಿಲೋಮ ವಿವಾಹಗಳನ್ನು ವೈದಿಕ ಗ್ರಂಥಗಳು ಅಂಗೀಕರಿಸುತ್ತವೆ ಎಂದು ಹೇಳುವ ಮೂಲಕ ಜಾತೀಯತೆಯ ಕಡು ವಾಸ್ತವವನ್ನು ಸಾವರ್ಕರ್‌ ಎಂಬ ಬ್ರಾಹ್ಮಣವಾದಿ ಎದುರಿಸುತ್ತಾರೆ.<sup>17</sup> ಮಲಬಾರಿನ ಬ್ರಾಹ್ಮಣರು ವಿವಾಹ ಮಾಡಿಕೊಳ್ಳುವುದು ಕೆಳಜಾತಿಯಿಂದ ಎಂಬ ʼವಾಸ್ತವʼವನ್ನೂ ಸಾವರ್ಕರ್‌ ಮುಂದಿಡುತ್ತಾರೆ.<sup>18</sup> ಆದರೆ, ಆ ಕಾಲದ ನಂಬೂದಿರಿ ಸಮುದಾಯದ ಹಿರಿಯ ಸಹೋದರ ಸ್ವಜಾತಿಯಿಂದಲೇ ವಿವಾಹ ಮಾಡಿಕೊಳ್ಳಬೇಕಾಗಿತ್ತು ಎಂಬ ನಿಜವಾದ ವಾಸ್ತವವನ್ನು ಮುಚ್ಚಿಡುತ್ತಾರೆ. ಉಳಿದ ಸಹೋದರರು ಹೊಂದುವ ʼಸಂಬಂಧʼ ಎಂದು ಕರೆಯುವ, ಕೆಳಜಾತಿಯ ಸವರ್ಣರೊಂದಿಗೆ ಹೊಂದುವ ಬಾಂಧವ್ಯಕ್ಕೆ ಕಾನೂನಾತ್ಮಕವಾದ ಅಂಗೀಕಾರವಾಗಲಿ, ಅವರಿಗೆ ಜನಿಸುವ ಮಕ್ಕಳಿಗೆ ಆಸ್ತಿಯ ಮೇಲೆ ಹಕ್ಕಾಗಲಿ ಇರಲಿಲ್ಲ ಎಂಬ ಸಂಗತಿಯ ಬಗ್ಗೆ ಸಾವರ್ಕರ್‌ ತುಟಿ ಬಿಚ್ಚುವುದಿಲ್ಲ. ಕೇರಳದಲ್ಲಿ ನಂಬೂದಿರಿ ನವೋತ್ಥಾನಕ್ಕೆ ಕಾರಣವಾದ ಹಲವು ಕಾರಣಗಳಲ್ಲಿ ಒಂದು ಈ ಪದ್ಧತಿಯಾಗಿತ್ತು. ಶೂದ್ರನಿಗೆ ಬ್ರಾಹ್ಮಣನಾಗಬಹುದೆಂದೂ ಬ್ರಾಹ್ಮಣನಿಗೆ ಶೂದ್ರನಾಗಬಹುದೆಂದೂ, ಯಾವ ರೀತಿಯಲ್ಲೂ ವಾಸ್ತವದ ಸಾಮಾಜಿಕ ಸಂರಚನೆಯನ್ನು ಮುಟ್ಟದ, ಬಡಾಯಿಗಳನ್ನು ಮಾತ್ರವೇ ಇಲ್ಲಿ ಸಾವರ್ಕರ್‌ ಕೊಚ್ಚಿಕೊಳ್ಳುತ್ತಿರುವುದು. ಸಾವರ್ಕರ್‌ ಹೇಳುವುದನ್ನು ಒಮ್ಮೆ ಗಮನಿಸಿ:</p>



<p>ʼನಮ್ಮಲ್ಲಿ ಕೆಲವರು ಆರ್ಯರು ಮತ್ತು ಕೆಲವರು ಅನಾರ್ಯರು. ಆದರೆ, ಅಯ್ಯರಾದರೂ, ನಾಯರ್‌ ಆದರೂ ನಾವೆಲ್ಲ ಹಿಂದೂಗಳು. ಒಂದೇ ರಕ್ತದ ಹಕ್ಕುದಾರರು. ನಮ್ಮಲ್ಲಿ ಕೆಲವರು ಬ್ರಾಹ್ಮಣರು ಮತ್ತು ಇನ್ನು ಕೆಲವರು ನಾಮಶೂದ್ರರು ಮತ್ತು ಪಂಚಮರು. ಬ್ರಾಹ್ಮಣನಾದರೂ ಪಂಚಮನಾದರೂ ನಾವೆಲ್ಲ ಹಿಂದೂಗಳು, ಒಂದೇ ರಕ್ತವನ್ನು ಹೊಂದಿರುವವರು. ನಮ್ಮಲ್ಲಿ ಕೆಲವರು ದಕ್ಷಿಣಾತ್ಯರು ಮತ್ತು ಗೌಡರು. ಆದರೆ, ಗೌಡರಾದರೂ ಸಾರಸ್ವತರಾದರೂ ನಾವೆಲ್ಲ ಹಿಂದೂಗಳು, ಒಂದೇ ರಕ್ತವನ್ನು ಹೊಂದಿರುವವರು. ನಮ್ಮಲ್ಲಿ ಕೆಲವರು ಜೈನರು ಮತ್ತು ಕೆಲವರು ಜಂಗಮರು. ಆದರೆ ನಾವೆಲ್ಲ ಹಿಂದೂಗಳು, ಒಂದೇ ರಕ್ತದ ಹಕ್ಕುದಾರರು. ನಮ್ಮಲ್ಲಿ ಕೆಲವರು ಏಕದೇವ ವಿಶ್ವಾಸಿಗಳು ಮತ್ತು ಕೆಲವರು ಬಹುದೈವ ವಿಶ್ವಾಸಿಗಳು. ಕೆಲವರು ವಿಶ್ವಾಸಿಗಳು ಮತ್ತು ಕೆಲವರು ನಾಸ್ತಿಕರು. ಆದರೆ, ಏಕದೇವ ವಿಶ್ವಾಸಿಗಳು, ನಾಸ್ತಿಕರು ಮತ್ತು ಹಿಂದೂಗಳು ಒಂದೇ ರಕ್ತವನ್ನು ಹೊಂದಿದವರಾಗಿದ್ದಾರೆ. ನಾವು ಏಕ ರಾಷ್ಟ್ರವೆಂದು ಮಾತ್ರವಲ್ಲ, ನಾವೆಲ್ಲ ಒಂದೇ ಜಾತಿ ಕೂಡ ಹೌದು. ಹುಟ್ಟಿನಿಂದಲೇ ಸಹೋದರರು.ʼ</p>



<p>ಬಹುತ್ವವನ್ನೇ ಉಸಿರಾಗಿಸಿಕೊಂಡಿದ್ದ ಜನತೆಯನ್ನು ಜನಾಂಗೀಯತೆಯಲ್ಲಿ ಮುಳುಗಿಸುವ ಆತುರವನ್ನು ಇಲ್ಲಿ ಕಾಣಬಹುದು. ಬೌದ್ಧನೂ ಜೈನನೂ ಎಲ್ಲರೂ ಒಂದೇ ಜನಾಂಗೀಯತೆಯಲ್ಲಿ ವಿಲೀನಗೊಳ್ಳುತ್ತಾರೆ. ಆದರೆ, ಎಲ್ಲೂ ತಪ್ಪಿಯೂ ಕೂಡ ಈ ಜಾತಿಪದ್ಧತಿಗೆ ಮೂಲಕಾರಣವಾದ ಬ್ರಾಹ್ಮಣ ಮೇಲಾಧಿಪತ್ಯವನ್ನು ಸಾವರ್ಕರ್‌ ಎದುರಿಸುವುದೇ ಇಲ್ಲ. ಎಲ್ಲವೂ ಬಂದು ವಿಲೀನಗೊಳ್ಳಬಹುದಾದ ಉದಾತ್ತತೆಯಾಗಿ ಅದನ್ನು ಹಾಗೆಯೇ ನೆಲೆನಿಲ್ಲಿಸುತ್ತಾರೆ. ಭಾರತದ ವಿಶೇಷ ಸಂದರ್ಭದಲ್ಲಿ ಒಂದು ಜನಾಂಗೀಯವಾದವು ನೆಲೆ ಕಂಡುಕೊಳ್ಳಬೇಕಾದರೆ ಅದಕ್ಕೆ ಜಾತಿವ್ಯವಸ್ಥೆಯೊಂದಿಗೆ ಹೊಂದಿಕೊಳ್ಳುವ ರೀತಿನೀತಿಗಳನ್ನು ಅಳವಡಿಸಿಕೊಳ್ಳಲೇಬೇಕಾಗುತ್ತದೆ. ಆದ್ದರಿಂದಲೇ ಇಲ್ಲಿ ಸಾವರ್ಕರ್‌ ʼನಾವು ಒಂದು ರಾಷ್ಟ್ರ ಮಾತ್ರವಲ್ಲ, ಒಂದು ಜಾತಿಯೂ ಹೌದುʼ ಎಂದು ಒತ್ತಿ ಹೇಳುತ್ತಿರುವುದು. ಹಿಂದೂಯಿಸಂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸವನ್ನು ಸರಿಯಾಗಿ ನಮಗೆ ಗ್ರಹಿಸಲು ಸಾಧ್ಯವಾಗುವುದು ಈ ಮಾತುಗಳಿಂದಲೇ. ಹಿಂದೂಯಿಸಂ ಅಥವಾ ಹಿಂದೂಧರ್ಮ ಶ್ರೇಣೀಕೃತವಾದ ಒಂದು ಬಹುತ್ವವನ್ನು ಹೊಂದಿದೆಯಾದರೆ <em>ಹಿಂದುತ್ವ </em>ಅದಕ್ಕೆ ವಿರುದ್ಧವಾಗಿ ಏಕಶಿಲಾತ್ಮಕವಾದ ಒಂದು ಜಾತಿಯಾಗಿದೆ. ಬ್ರಾಹ್ಮಣ್ಯ ಎಂಬುದು ಹಿಂದೂಯಿಸಮ್ಮಿನಲ್ಲಿ ಪ್ರಾಬಲ್ಯದ ಹೆಸರಾಗಿದ್ದರೆ, ಹಿಂದುತ್ವದಲ್ಲಿ ಅದು ಫ್ಯಾಸಿಸಂ ಮತ್ತು ಜನಾಂಗೀಯ ಮೇಲಧಿಕಾರದ ಹೆಸರಾಗುತ್ತದೆ.</p>



<p>ಬೌದ್ಧರನ್ನು ಮತ್ತು ಜೈನರನ್ನು ಹಿಂದೂ ಜನಾಂಗೀಯತೆಯಲ್ಲಿ ವಿಲೀನಗೊಳಿಸುವ ಸಾವರ್ಕರ್, ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ಅದೇ ತಂತ್ರ ಬಳಸಿಕೊಂಡು ಭಾರತೀಯ ಜನಸಮೂಹದಿಂದ ಪ್ರತ್ಯೇಕಿಸುತ್ತಾರೆ. ಲೈಂಗಿಕ ಆಕರ್ಷಣೆ ಎಂಬುದು ಎಲ್ಲಾ ಪ್ರವಾದಿಗಳ ಸಕಲ ಬೋಧನೆಗಳಿಗಿಂತಲೂ ಶಕ್ತಿಯುತವಾದದ್ದು ಎಂದು ಸಾಬೀತಾಗಿರುವುದರಿಂದ ಅಂಡಮಾನಿನ ಮೂಲನಿವಾಸಿಗಳ ರಕ್ತದಲ್ಲೂ ಆರ್ಯರಕ್ತದ ಹನಿಗಳನ್ನು ಕಾಣಬಹುದುದು ಎಂದು ಸಾವರ್ಕರ್‌ ಹೇಳುತ್ತಾರೆ. ಅದರ ಜೊತೆಗೆ, ಈ ಲೋಕದಲ್ಲಿ ಒಂದು ಜನಾಂಗ ಎಂಬ ನೆಲೆಯಲ್ಲಿ ಹಿಂದೂಗಳ ಜೊತೆಗೆ ಬೇರೆ ಯಾರಿಗಾದರೂ ಹಕ್ಕು ಮಂಡಿಸುವ ಅವಕಾಶ ಇದ್ದರೆ ಅದು ಯಹೂದಿಗಳಿಗೆ ಮಾತ್ರವೇ ಎಂದು ಕೂಡ ಸೇರಿಸುತ್ತಾರೆ.</p>



<p>ಅದೇ ಹೊತ್ತು, ಒಂದು ರಾಷ್ಟ್ರ ಮತ್ತು ಒಂದು ಜನಾಂಗ ಎಂಬುದರ ಮೂಲಕ ಮಾತ್ರವೇ ಹಿಂದುತ್ವದ ಹಕ್ಕುದಾರರಾಗಲು ಸಾಧ್ಯವಿಲ್ಲವೆಂದು <em>ಸಮಾನ ಸಂಸ್ಕೃತಿ</em> ಎಂಬ ಹೆಸರಿನ ಉಪಅಧ್ಯಾಯದಲ್ಲಿ ಸಾವರ್ಕರ್‌ ಬರೆಯುತ್ತಾರೆ. ಯಾಕೆಂದರೆ, ಇಲ್ಲಿ ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್ನರನ್ನು ಅನ್ಯರಾಗಿಸಿಕೊಂಡರೆ ಮಾತ್ರವೇ ಬ್ರಾಹ್ಮಣ ಹಿಂದೂ ಜನಾಂಗೀಯತೆಗೆ ಕೆಲಸ ಮಾಡಲು ಸಾಧ್ಯವಾಗುವುದು.</p>



<p>ಇದರ ನಡುವೆ ಆಸಕ್ತಿಕರವಾದ ವಿವರಣೆಯೊಂದು ಬರುತ್ತದೆ. ಆಧುನಿಕ ಪರ್ಷಿಯನ್‌ ಭಾಷೆಯಲ್ಲಿ (ಇಸ್ಲಾಮೀಕರಣಗೊಂಡ ಪರ್ಷಿಯನ್‌ ಭಾಷೆ ಎಂಬುದು ಸಾವರ್ಕರ್‌ ವಾದ) ಹಿಂದೂ ಎಂದರೆ ʼಕಪ್ಪಗಿನವನು/ಕಪ್ಪಗಿನವಳುʼ ಎಂದು ಅರ್ಥ. ಇದು ಸಾವರ್ಕರನ್ನು ಇನ್ನಿಲ್ಲದಂತೆ ಕೆರಳಿಸುತ್ತದೆ. ಸಾವರ್ಕರ್‌ ಹೇಳುವುದನ್ನು ನೋಡಿ. ‌ʼಸೆಂಟ್ ಅವೆಸ್ಟಾ ಕಾಲದಲ್ಲಿ ಪುರಾತನ ಸಪ್ತಸಿಂಧೂಗಳು ಅಂದರೆ ಹಿಂದೂಗಳು ಇರಾನಿಗಳಂತೆ ಸುಂದರರೂ (ಬೆಳ್ಳಗಿನ) ಪ್ರಾಯೋಗಿಕವಾಗಿ ಅವರೊಂದಿಗೆ ಬೆರೆತು ಬಾಳಿದವರೂ ಆಗಿದ್ದರು. ಕ್ರಿಶ್ಚಿಯನ್‌ ಯುಗದ ಆರಂಭದಲ್ಲೂ ನಮ್ಮ ಗಡಿಪ್ರದೇಶದ ಪಾರ್ಥಿಯನ್ನರು ಶ್ವೇತಭಾರತ ಅಥವಾ ಬೆಳ್ಳಗಿನ ಭಾರತ ಎಂದು ಕರೆಯುತ್ತಿದ್ದರು. ಆದ್ದರಿಂದ ಮೌಲಿಕವಾಗಿ ನೋಡುವುದಾದರೆ ಹಿಂದೂ ಎಂದರೆ ನಿಜಾರ್ಥದಲ್ಲಿ ಕಪ್ಪಗಿನವ ಎಂದಲ್ಲ.ʼ ಭಾರತದ ಹಿಂದೂಗಳಲ್ಲಿ ಬಹುಪಾಲು ಜನರು ಕೂಡ ಕಪ್ಪಗಿನ ಮೈಬಣ್ಣ ಹೊಂದಿದವರಾಗಿದ್ದರೂ, ಅವರಿಗೆ ಅವರದ್ದೇ ಆದ ಚರಿತ್ರೆ ಇರುವಾಗಲೂ ಬಿಳಿ ಮೈಬಣ್ಣ ಮತ್ತು ಆರ್ಯಚರಿತ್ರೆಯನ್ನು ಹೇರಿಕೊಂಡು <em>ಹಿಂದುತ್ವ</em>ದ ಜನಾಂಗೀಯ ಇಟ್ಟಿಗೆಗಳ ಮೂಲಕ ಸಾವರ್ಕರ್‌ ಸುಳ್ಳು ಸುಳ್ಳೇ ಇತಿಹಾಸವನ್ನು ಕಟ್ಟುತ್ತಿದ್ದಾರೆ. ಆ ಕೆರಳುವಿಕೆ ಅಲ್ಲಿಗೆ ನಿಲ್ಲುವುದಿಲ್ಲ. ಮುಸಲ್ಮಾನರನ್ನು, ಆಫ್ರಿಕನ್ ಸಂಜ್ಞೆಯಾದ ಮುಸಾಂತ ಎಂದು ಕರೆಯಬಹುದೇ ಎಂಬೆಲ್ಲ ಅಸಂಬದ್ಧಗಳಿಗೆ ಅದು ಏರುತ್ತಲೇ ಹೋಗುತ್ತದೆ.</p>



<p>ಮುಂದಿನ ಉಪಅಧ್ಯಾಯ <em>ನಾಗರಿಕತೆ ಎಂದರೆ ಏನು? </em>ಎಂಬ ಪ್ರಶ್ನೆ. ಸಾವರ್ಕರ್‌ ನಾಗರೀಕತೆಯನ್ನು ವ್ಯಾಖ್ಯಾನಿಸುವುದು ಹೀಗೆ:</p>



<p>ʼನಾಗರೀಕತೆ ಎಂದರೆ ಮನುಷ್ಯ ಮನಸ್ಸಿನ ಬಾಹ್ಯ ಪ್ರದರ್ಶನ. ದ್ರವ್ಯವನ್ನು ಮನುಷ್ಯ ಏನು ಮಾಡಿದ ಎಂಬುದರ ಲೆಕ್ಕವೇ ನಾಗರೀಕತೆ. ದ್ರವ್ಯ ಭಗವಂತನ ಸೃಷ್ಟಿಯಾದರೆ, ನಾಗರೀಕತೆ ಸಣ್ಣ ಮಟ್ಟಿನಲ್ಲಾದರೂ ಮನುಷ್ಯನ ಪುನರ್‌ ಸೃಷ್ಠಿ. ಅತ್ಯಂತ ಉನ್ನತ ಹಂತದಲ್ಲಿ ಅದು ದ್ರವ್ಯದ ಸುತ್ತ ಮತ್ತು ಮನುಷ್ಯನ ಸುತ್ತ ಆತ್ಮದ ಉದಾತ್ತವಾದ ವಿಜಯ. ತನ್ನಾತ್ಮದ ಸಂತೋಷಕ್ಕೋಸ್ಕರ ದ್ರವ್ಯವನ್ನು ಎಲ್ಲಿ, ಯಾವ ಮಟ್ಟಕ್ಕೆ ಪಳಗಿಸಲು ಶ್ರಮಿಸುತ್ತಾನೋ, ಅಲ್ಲಿ ನಾಗರೀಕತೆ ಹುಟ್ಟಿಕೊಳ್ಳುತ್ತದೆ. ಶಕ್ತಿ, ಸೌಂದರ್ಯ, ಸ್ನೇಹಗಳ ಮೇಲಿನ ತನ್ನ ನಿಜದ ಅಧ್ಯಾತ್ಮಿಕ ಉನ್ಮುಖಗಳನ್ನು ತೃಪ್ತಿಪಡಿಸುವ ರೀತಿಯಲ್ಲಿ ಒಬ್ಬನು ತನ್ನ ಪರಮೋನ್ನತ ಆನಂದದ ಎಲ್ಲಾ ಮೂಲಗಳನ್ನು ಬಾಚಿಕೊಳ್ಳುವಾಗ ಅದು ಗೆಲ್ಲುತ್ತದೆ.ʼ</p>



<p>ಗಾಂಧಿಯ ಪಾಶ್ಚಿಮಾತ್ಯ ನಾಗರಿಕತೆಯ ವಿಮರ್ಶೆಗೆ, <em>ಹಿಂದ್‌ ಸ್ವರಾಜ್</em>ಗೆ, ಒಂದು ಉತ್ತರವೆಂಬಂತೆ ಅಮೂರ್ತ ಮತ್ತು ಮುಸುಕಾದ ಒಂದು ವ್ಯಾಖ್ಯಾನವನ್ನು ಸಾವರ್ಕರ್‌ ಮುಂದಿಡುತ್ತಾರೆ. ಈ ವ್ಯಾಖ್ಯಾನವನ್ನು ಬ್ರಾಹ್ಮಣಿಸಮ್ಮಿಗೆ ಪರಿಚಿತವಾದ ನಿರ್ವಾಣ, ಮೋಕ್ಷ ಮೊದಲಾದ ಕಲ್ಪನೆಗಳ ಮೂಲಕ ನಿರ್ಮಿಸಲಾಗಿದೆಯೆಂದು ಅರ್ಥ ಮಾಡಿಕೊಳ್ಳಲು ವಿಶೇಷ ಅಧ್ಯಯನ ಮಾಡಬೇಕಾದ ಅಗತ್ಯವೇ ಇಲ್ಲ. ಆತ್ಮ ಮತ್ತು ಭಗವಂತ ಎಂಬ ಎರಡು ಅಮೂರ್ತ ಕಲ್ಪನೆಗಳ ನಡುವೆ ಈ ವ್ಯಾಖ್ಯಾನ ನಿಲ್ಲುತ್ತದೆ. ಸಾಮಾನ್ಯವಾಗಿ ನಾಗರೀಕತೆಯ ವ್ಯಾಖ್ಯಾನ ಧಾರ್ಮಿಕ ಸಂಗತಿಯಲ್ಲ. ಸಿಂಧೂನದಿ ತೀರದ ನಾಗರೀಕತೆ, ಮೆಸಪೊಟೇಮಿಯನ್‌ ನಾಗರೀಕತೆ ಎಂದೆಲ್ಲ ಭೌಗೋಳಿಕತೆ ಮತ್ತು ಜೀವನಶೈಲಿಯಂತಹ ಘಟಕಗಳನ್ನು ಆಧಾರವಾಗಿಟ್ಟುಕೊಂಡು ನಾಗರೀಕತೆಯನ್ನು ವ್ಯಾಖ್ಯಾನಿಸಲಾಗುತ್ತದೆ. ಆರಾಧನಾ ರೀತಿ ಮತ್ತಿತರ ಸಂಗತಿಗಳನ್ನು ನಾಗರೀಕತೆಯ ಘಟಕಗಳಾಗಿ ಪರಿಗಣಿಸಲಾಗುತ್ತದೆ. ಇಲ್ಲಿ, ಧಾರ್ಮಿಕವಾಗಿ ಮತ್ತು ಜನಾಂಗೀಯವಾಗಿ ನಾಗರೀಕತೆಯನ್ನು ನಿರ್ಣಿಯಿಸಲೆಂದೇ ಸಾವರ್ಕರ್‌ ತನ್ನದೇ ಆದ ವ್ಯಾಖ್ಯಾನವನ್ನು ಹೊತ್ತು ತರುತ್ತಾರೆ. ಅಂದರೆ, ಭಾರತವೆಂಬ ದೊಡ್ಡ ದೇಶದಲ್ಲಿ, ಸಾವರ್ಕರ್‌ ವ್ಯಾಖ್ಯಾನವನ್ನು ಬಳಸಿಕೊಂಡು, ಸಿಂಧೂನದಿಯಿಂದ ಹಿಡಿದು ಹಿಂದೂ ಮಹಾಸಮುದ್ರದವರೆಗಿನ ಭೂಪ್ರದೇಶದ ಒಂದೇ ಕಾಲಘಟ್ಟದ ವಿಭಿನ್ನ ಜನಜೀವನವನ್ನು ʼಹಿಂದೂನಾಗರೀಕತೆʼಯಲ್ಲಿ ಒಂದುಗೂಡಿಸಬೇಕಾಗಿತ್ತು.</p>



<p>ಈ ʼಹಿಂದೂನಾಗರೀಕತೆʼಯ ಹಿನ್ನೆಲೆಯಲ್ಲಿ ಕೆಲಸ ಮಾಡುವ ಹಿಂದೂ ಸಂಸ್ಕೃತಿಯನ್ನು ಸಾವರ್ಕರ್‌ ಮುಂದಿಡುವುದು ಭಾಷೆ ಮತ್ತು ಸಾಹಿತ್ಯದ ಆಧಾರಗಳನ್ನು ಹಿಡಿದುಕೊಂಡು. ಈ ಮೊದಲು ಹಿಂದೂ ಎಂಬ ಸಂಜ್ಞೆಯು ಸಂಸ್ಕೃತದಲ್ಲಿ ಕಾಣಿಸದಿದ್ದಾಗ ಪ್ರಾಕೃತದ ಮೊರೆ ಹೋದ ಸಾವರ್ಕರ್‌ ಇಲ್ಲಿ ಪುನಹ ಬಹಳವಾಗಿ ಸಂಸ್ಕೃತದ ಮೊರೆ ಹೋಗುತ್ತಾರೆ. ʼನಮ್ಮ ಜನಾಂಗದ ತಾಯಂದಿರು ಮಾತನಾಡಿದ ಅದೇ ಭಾಷೆ ವರ್ತಮಾನ ಭಾರತದ ಎಲ್ಲ ಭಾಷೆಗಳಿಗೂ ಜನ್ಮ ನೀಡಿರುವುದು. ನಮ್ಮ ದೇವರು ಸಂಸ್ಕೃತದಲ್ಲಿ ಮಾತನಾಡಿದರು. ನಮ್ಮ ಮುನಿಗಳು ಸಂಸ್ಕೃತದಲ್ಲಿ ಚಿಂತನೆ ನಡೆಸಿದರು. ನಮ್ಮ ಕವಿಗಳು ಸಂಸ್ಕೃತದಲ್ಲಿ ಬರೆದರು. ನಮ್ಮ ಎಲ್ಲ ಉತ್ತಮ – ಉತ್ತಮ ಚಿಂತನೆ, ಉತ್ತಮ ಸಿದ್ಧಾಂತ, ಉತ್ತಮ ಸಾಲು – ಯಾವ ಪ್ರೇರಣೆಯೂ ಇಲ್ಲದೆ ಸಂಸ್ಕೃತದ ಅಂಗಿ ತೊಟ್ಟುಕೊಂಡವು. ಲಕ್ಷಾಂತರ ಜನರಿಗೆ ಅದು ಈಗಲೂ ಅವರ ದೇವರ ಭಾಷೆಯಾಗಿದೆ. ಉಳಿದವರಿಗೆ ಅವರ ಪೂರ್ವಿಕರ ಭಾಷೆ. ಸರ್ವರಿಗೂ ಅದು ಅತ್ಯಂತ ಉದಾತ್ತ ಭಾಷೆಯಾಗಿದೆ. ಸಮಾನವಾದ ಒಂದು ಪರಂಪರೆಯಾಗಿ, ಸಮಾನ ನಿಧಿಯಾಗಿ, ಅದು ನಮ್ಮ ಸಹೋದರಿ ಭಾಷೆಗಳ ಕುಟುಂಬಗಳನ್ನು ಸಂಪನ್ನಗೊಳಿಸಿತು. ನಮ್ಮೆಲ್ಲರ ಮೂಲಕ ಹರಿದು ಹೋಗುತ್ತಿರುವ ಪೋಷಕನಾಡಿವ್ಯೂಹವನ್ನು ನಿರ್ಣಿಯಿಸಿದ ಗುಜರಾತಿ ಮತ್ತು ಗುರುಮುಖಿ, ಸಿಂಧೀ ಮತ್ತು ಹಿಂದಿ, ತಮಿಳು, ತೆಲುಗು, ಮರಾಠಿ, ಮಲಯಾಳಂ, ಬಂಗಾಳಿ ಮತ್ತು ಸಿಂಹಳಿಗಳು ನಮ್ಮ ಭಾವನೆಗಳನ್ನು ಮತ್ತು ವಾಂಛೆಗಳನ್ನು ಲಯಬದ್ಧವಾದ ಒಟ್ಟು ಮೊತ್ತವಾಗಿ ಸಂಪನ್ನಗೊಳಿಸಿತು. ಅದೊಂದು ಭಾಷೆ ಮಾತ್ರವೇ ಆಗಿರಲಿಲ್ಲ. ಬಹುಪಾಲು ಹಿಂದೂಗಳಿಗೆ ಅದೊಂದು ಮಂತ್ರವೇ ಆಗಿತ್ತು. ಎಲ್ಲರಿಗೂ ಅದೊಂದು ಸಂಗೀತವಾಗಿತ್ತು.ʼ</p>



<p>ಯಾವ ಕಾಲದಲ್ಲೂ ಸಂಸ್ಕೃತ ಜನಪರ ಭಾಷೆಯಾಗಿರಲಿಲ್ಲ. ಒಂದು ಭಾಷೆಗೆ ಉಳಿದ ಭಾಷೆಗಳಂತೆಯೇ ಅರ್ಹವಾದ ಅಂಗೀಕಾರವನ್ನು ನೀಡುವ ಕೆಲಸವನ್ನಲ್ಲ ಇಲ್ಲಿ ಸಾವರ್ಕರ್‌ ಮಾಡುತ್ತಿರುವುದು. ಬದಲಿಗೆ ಅದನ್ನು ಪವಿತ್ರಗೊಳಿಸಿಕೊಂಡು ಅದಕ್ಕಿಲ್ಲದ ಸ್ಥಾನಕ್ಕೆ ಅದನ್ನು ಏರಿಸುವ ಕೆಲಸವನ್ನು ಮಾಡಲಾಗುತ್ತಿದೆ. ಸಂಸ್ಕೃತವನ್ನಲ್ಲ, ಅದರ ಪ್ರತಿಬಿಂಬವನ್ನು ಸಾವರ್ಕರ್‌ ಸೃಷ್ಠಿಸುತ್ತಿರುವುದು. ಅದರ ಫಲವಾಗಿ ಅದರಿಂದ ವಾಸ್ತವತೆಗಳು ಸೋರಿ ಹೋಗುತ್ತಿವೆ. ತಮಿಳಿನಂತಹ ದ್ರಾವಿಡ ಭಾಷೆಗೆ, ಸಂಸ್ಕೃತದ ಯಾವ ಸಹಾಯವೂ ಇಲ್ಲದೆ ನಿಲ್ಲಬಹುದಾದ ಭಾಷೆಗೆ ಸಂಸ್ಕೃತದ ಪರಂಪರೆಯನ್ನು ಹೊರಿಸುವುದು ಭಾಷಿಕ ಆಧ್ಯಯನಕ್ಕೆ ಎಸಗುವ ಘೋರ ಅವಮಾನ.</p>



<p>ಇದರ ನಂತರ ಸಾವರ್ಕರ್‌ ಪ್ರಯತ್ನಿಸುವುದು ಸಾಹಿತ್ಯ ಕೃತಿಗಳನ್ನು ಮುಂದಿಟ್ಟುಕೊಂಡು ಹಿಂದೂ ಸಂಸ್ಕೃತಿ ಎಂಬುದೊಂದು ಇದೆಯೆಂದು ಸಾಬೀತು ಪಡಿಸಲು ಹೆಣಗುವುದು. ಇಲ್ಲಿಯೂ ಕೂಡ ಸಾಹಿತ್ಯವೆಂದರೆ ಅದರ ಸಾರಾಂಶವೋ, ವಿಮರ್ಶೆಗಳೋ ಅಲ್ಲ. ರೂಪಕಗಳು ಮಾತ್ರ. ಆದ್ದರಿಂದ ತಾನು ಹೇಳುತ್ತಿರುವುದಕ್ಕಿಂತ ಆಚೆ ಜನರು ತಲೆಯೆತ್ತಿ ನೋಡಬಹುದು ಎಂದೆಲ್ಲ ಸಾವರ್ಕರ್‌ ಯೋಚಿಸುವುದೇ ಇಲ್ಲ. ಯಾವ ಧರ್ಮಕ್ಕೂ ಸ್ವಂತವಲ್ಲದ ವೇದಗಳು ಜೈನರಿಗೆ ಅಧಿಕೃತ ಗ್ರಂಥವಲ್ಲದಿದ್ದರೂ ಕೂಡ ವೇದಗಳನ್ನು ಸೃಷ್ಠಿಸಿದ ಅದೇ ಜನರ ಪರಂಪರೆಯಲ್ಲಿಯೇ ಜೈನರೂ ಸ್ಥಾನ ಪಡೆಯುತ್ತಾರೆ ಎಂದು ಸಾವರ್ಕರ್‌ ಹೇಳುತ್ತಾರೆ. <em>ಆದಿಪುರಾಣ</em> ಬರೆದವರು ಸನಾತನ ಹಿಂದೂಗಳು ಅಲ್ಲದಿದ್ದರೂ ಅದು ಕೂಡ ಜೈನರಂತೆ ಸನಾತನಿಗಳಿಗೂ ಸಮಾನ ಪರಂಪರೆಯಾಗುತ್ತದೆ. ಲಿಂಗಾಯತರ ಬೈಬಲ್‌ ಆಗಿರುವ <em>ಬಸವಪುರಾಣ</em> (ವಸವ್‌ ಪುರಾಣ್‌ ಎಂದು ಸಾವರ್ಕರ್‌ ಹೇಳುವುದು) ಲಿಂಗಾಯತರಿಗೂ ಅಲಿಂಗಾಯತರಿಗೂ ಕನ್ನಡದ ಪ್ರಥಮ ಮತ್ತು ಐತಿಹಾಸಿಕವಾಗಿ ನೆಲೆ ನಿಲ್ಲುವ ಸಂಗತಿಯಾಗಿದೆ.</p>



<p>ಸಾವರ್ಕರ್‌ ಹೀಗೆಲ್ಲ ಬರೆಯುವಾಗ ನಾವು ಗಮನಿಸಬೇಕಿರುವುದು ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭುಗಳಾದಿ ಶರಣರ ವಚನಗಳು ಬ್ರಾಹ್ಮಣಧರ್ಮವನ್ನು ಕಟುವಾಗಿ ಟೀಕಿಸುವ ರಚನೆಗಳಾಗಿದ್ದವು ಎಂಬುದನ್ನು. ಅಥವಾ <em>ಜೈನ ರಾಮಾಯಣ</em>ವು <em>ಬ್ರಾಹ್ಮಣ ರಾಮಾಯಣ</em>ವನ್ನು ನಿರಾಕರಿಸುತ್ತದೆ ಎಂಬುದನ್ನು. ಆದರೆ, ಸಾವರ್ಕರ್‌ ಇಂತಹ ಸೂಕ್ಷ್ಮಗಳನ್ನು ಗಮನಿಸದೆ, ವೈವಿಧ್ಯತೆಗಳ ತಿರುಳು ಕಾಣದೆ ಜನಾಂಗೀಯವಾದದ ನಿರೂಪಣೆಯಡಿಯಲ್ಲಿ ಎಲ್ಲವನ್ನೂ ತುರುಕುತ್ತಾರೆ. ಮುಸ್ಲಿಮರನ್ನು ಕಿತ್ತು ಹಾಕಿದರೆ ಸಾವರ್ಕರ್‌ಗೆ ಉಳಿಯುವುದೆಲ್ಲವೂ ಹಿಂದೂ ಚರಿತ್ರೆ. ಕಲೆ ಮತ್ತು ವಾಸ್ತುಶಿಲ್ಪ ಹಿಂದೂ, ಕೂಲಿಕಾರನೂ ಯಜಮಾನನೂ ಹಿಂದೂ, ತೆರಿಗೆ ಕಟ್ಟುವವನೂ ಕಟ್ಟಿಸಿಕೊಳ್ಳುವವನೂ ಹಿಂದೂ. ಹೀಗೆ ಮುಂದುವರಿಯುತ್ತದೆ ಸಾವರ್ಕರ್‌ ವಾದ.</p>



<p>ಮುಂದಿನ ಉಪಅಧ್ಯಾಯದಲ್ಲಿ ಇವುಗಳ ಜೊತೆಗೆ ಸೇರಿಸುವುದು ಆಚರಣೆಗಳನ್ನು ಮತ್ತು ಉತ್ಸವಗಳನ್ನು. ಹೋಳಿ ಮತ್ತು ರಕ್ಷಾಬಂಧನದಂತಹ ಆಚರಣೆಗಳು ಕೇರಳಕ್ಕೆ ಅಪರಿಚಿತ. ಓಣಂ ಪಂಜಾಬಿಗೆ ಅಪರಿಚಿತ. ಸಾವರ್ಕರ್‌ ತನ್ನ ಭಾಷಾ ಪ್ರಯೋಗದ ಮೂಲಕ ಅವುಗಳನ್ನು ಪರಸ್ಪರ ಬಂಧಿಸುವ ಕೆಲಸವನ್ನು <em>ಸಮಾನ ಸಂಹಿತೆ ಮತ್ತು ಆಚರಣೆಗಳು</em> ಎಂಬ ಉಪಅಧ್ಯಾಯದಲ್ಲಿ ಮಾಡುತ್ತಾರೆ. ಹಿಂದೂಗಳು ಒಂದು ಸಾಂಸ್ಕೃತಿಕ ಏಕತೆಯೆಂದು ಸಾಧಿಸಲು ಪುನಹ ಇಲ್ಲಿ ಪ್ರಯತ್ನಿಸುತ್ತಾರೆ. ಪ್ರವಾದಿ ಮುಹಮ್ಮದರನ್ನು ಹನ್ನೊಂದನೇ ಅವತಾರವೆಂದು ಪರಿಗಣಿಸುವ ಬೋಹ್ರಾಗಳನ್ನು ಮತ್ತು ಖೋಜಾಗಳನ್ನು ಕೂಡ ಹಿಂದೂ ಸಂಸ್ಕೃತಿಯ ಪುಟಗಳಿಗೆ ಸೇರಿಸಲು ಸಾವರ್ಕರ್‌ ಹಿಂದೇಟು ಹಾಕುವುದಿಲ್ಲ.</p>



<p><em>ಹಿಂದೂ ಎಂದರೆ ಯಾರು?</em> ಎಂಬಲ್ಲಿಂದ ಶುರುವಾದ ಅದೇ ಜಾಗಕ್ಕೆ ಸಾವರ್ಕರ್‌ ಪುನಹ ಮರಳಿ ಬರುತ್ತಾರೆ. <em>ಹಿಂದುತ್ವದ </em>ಆರಂಭದಲ್ಲಿಯೇ ಹಿಂದೂಯಿಸಂ ಮತ್ತು ಹಿಂದುತ್ವದ ನಡುವಿನ ವ್ಯತ್ಯಾಸದ ಬಗ್ಗೆ ಸಾವರ್ಕರ್‌ ವಿವರಿಸುವುದನ್ನು ನಾವು ನೋಡಿದ್ದೆವು. ಅದರ ವಿವರಣೆಯನ್ನೂ ಸಾವರ್ಕರ್‌ ಈ ಉಪಅಧ್ಯಾಯದಲ್ಲಿ ನೀಡುತ್ತಾರೆ.</p>
]]></content:encoded>
					
		
		
			</item>
		<item>
		<title>ಹಿಂದುತ್ವ ರಾಜಕಾರಣದ ಕಥೆ &#8211; 19 : ಸಾವರ್ಕರ್‌ ಪಶ್ಚಾತ್ತಾಪ</title>
		<link>https://peepalmedia.com/savarkar-repents/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 12 Jun 2024 09:32:58 +0000</pubDate>
				<category><![CDATA[ಅಂಕಣ]]></category>
		<category><![CDATA[hindutva rajakaranada kathe]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=40666</guid>

					<description><![CDATA[ಸಾವರ್ಕರ್‌ ತನ್ನ ಆರನೇ ಕ್ಷಮಾಪಣಾ ಪತ್ರವನ್ನು ಬರೆಯುವುದು ಭಾರತದ ಗವರ್ನರ್‌ ಜನರಲ್‌ ಆಗಿದ್ದ ರೂಫಸ್‌ ಡೇನಿಯಲ್‌ ಐಸಕ್ಸಿಗೆ. ೧೯೨೧ ಆಗಸ್ಟ್‌ ೧೯ರಂದು ಆ ಪತ್ರವನ್ನು ಸಮರ್ಪಿಸಿದ್ದರು. ನಿಯಮ ಪ್ರಕಾರ ಬಾಂಬೆ ಗವರ್ನರ್‌ ಮೂಲಕ. ಅದು ಇದಾಗಿತ್ತು. ́ರತ್ನಗಿರಿ ಜಿಲ್ಲಾ ಜೈಲಿನಲ್ಲಿ ಖೈದಿ ನಂಬರ್‌ ೫೫೮ ಆದ ವಿನಾಯಕ್‌ ದಾಮೋದರ್‌ ಸಾವರ್ಕರ್‌ ಎಂಬ ನಾನು ವಿನಯಪೂರ್ವಕ ವಿನಂತಿಸಿಕೊಳ್ಳುವುದೇನೆಂದರೆ: ೧. ೧೯೧೦ರಲ್ಲಿ ದೋಷಾರೋಪ ಹೊರಿಸಲ್ಪಟ್ಟು ೧೯೧೧ರಲ್ಲಿ ಅಂಡಮಾನಿಗೆ ಗಡೀಪಾರು ಮಾಡಲ್ಪಟ್ಟ ಈ ಅರ್ಜಿದಾರ ಈ ವರ್ಷ ಭಾರತದ ಜೈಲಿಗೆ ವರ್ಗವಾಗಿ [&#8230;]]]></description>
										<content:encoded><![CDATA[
<p></p>



<p></p>



<p></p>



<p></p>



<p></p>



<p>ಸಾವರ್ಕರ್‌ ತನ್ನ ಆರನೇ ಕ್ಷಮಾಪಣಾ ಪತ್ರವನ್ನು ಬರೆಯುವುದು ಭಾರತದ ಗವರ್ನರ್‌ ಜನರಲ್‌ ಆಗಿದ್ದ ರೂಫಸ್‌ ಡೇನಿಯಲ್‌ ಐಸಕ್ಸಿಗೆ. ೧೯೨೧ ಆಗಸ್ಟ್‌ ೧೯ರಂದು ಆ ಪತ್ರವನ್ನು ಸಮರ್ಪಿಸಿದ್ದರು. ನಿಯಮ ಪ್ರಕಾರ ಬಾಂಬೆ ಗವರ್ನರ್‌ ಮೂಲಕ. ಅದು ಇದಾಗಿತ್ತು.</p>



<p>́ರತ್ನಗಿರಿ ಜಿಲ್ಲಾ ಜೈಲಿನಲ್ಲಿ ಖೈದಿ ನಂಬರ್‌ ೫೫೮ ಆದ ವಿನಾಯಕ್‌ ದಾಮೋದರ್‌ ಸಾವರ್ಕರ್‌ ಎಂಬ ನಾನು ವಿನಯಪೂರ್ವಕ ವಿನಂತಿಸಿಕೊಳ್ಳುವುದೇನೆಂದರೆ:</p>



<p>೧. ೧೯೧೦ರಲ್ಲಿ ದೋಷಾರೋಪ ಹೊರಿಸಲ್ಪಟ್ಟು ೧೯೧೧ರಲ್ಲಿ ಅಂಡಮಾನಿಗೆ ಗಡೀಪಾರು ಮಾಡಲ್ಪಟ್ಟ ಈ ಅರ್ಜಿದಾರ ಈ ವರ್ಷ ಭಾರತದ ಜೈಲಿಗೆ ವರ್ಗವಾಗಿ ಬಂದಿರುತ್ತಾನೆ. ಹೀಗೆ ಒಟ್ಟು ಹನ್ನೊಂದು ವರ್ಷಗಳಿಂದ ಅರ್ಜಿದಾರನು ಜೈಲೊಳಗೆ ಕಳೆಯುತ್ತಿದ್ದಾನೆ. ಭಾರತದ ಜೈಲುಗಳಲ್ಲಿ ಆಗಿದ್ದರೆ ಎರಡು ಮೂರು ವರ್ಷಗಳ ಹಿಂದೆಯೇ ಈ ಅರ್ಜಿದಾರನಿಗೆ ಫಾರ್ಮ್ಯಾನ್‌ ಪದವಿಗೆ ಭಡ್ತಿ ಲಭಿಸಿರುತ್ತಿತ್ತು. ಆದ್ದರಿಂದ ಪ್ರಾಯೋಗಿಕವಾಗಿ ಹದಿನಾಲ್ಕು ವರ್ಷಗಳ ಕಾಲ ಜೈಲಿನಲ್ಲಿ ಕಳೆಯುತ್ತಿದ್ದೆನು. ಸಾಮಾನ್ಯವಾಗಿ ಒಬ್ಬ ಖೈದಿಗೆ ನಿಬಂಧನೆಗಳಿಗೆ ಒಳಪಟ್ಟುಕೊಂಡು ಬಿಡುಗಡೆ ಹೊಂದಬಹುದಾದ ಕಾಲ.</p>



<p>೨. A. ಅದಕ್ಕೂ ಮಿಗಿಲಾಗಿ, ರಾಜಪ್ರಮುಖ ವೈಸ್‌ ರಾಜಕುಮಾರರ ಈ ಬರಲಿರುವ ಸಂದರ್ಶನದ ಘೋಷಣೆಯಲ್ಲಿ ಅರ್ಜಿದಾರನ ಭೂತಕಾಲದ ಅಕ್ರಮ ಚಟುವಟಿಕೆಗಳನ್ನೆಲ್ಲ ಕ್ಷಮಿಸಿ, ಮಾನ್ಯ ವೈಸ್ರಾಯ್‌ ಮತ್ತು ಬಾಂಬೆ ಗವರ್ನರ್‌ ಎದುರು ಇಷ್ಟು ದಿನ ನಿರಾಕರಿಸಲ್ಪಟ್ಟಿದ್ದ ಕ್ಷಮಾಪಣೆಯನ್ನು ಅರ್ಜಿದಾರನಿಗೆ ದಯಪಾಲಿಸುವರೆಂಬ ನಿರೀಕ್ಷೆಯು ಅರ್ಜಿದಾರನೊಳಗೆ ಅಂಕುರಿಸಿದೆ.</p>



<p>B. ಇದಕ್ಕಾಗಿ ಯಾಚಿಸುವಾಗ ಅರ್ಜಿದಾರನು ಯಾವುದೇ ರೀತಿಯಲ್ಲೂ ರಾಜಕೀಯ ಘೋಷಣೆಯ ಹೊಸ ವ್ಯಾಖ್ಯಾನವನ್ನು ಬಯಸುತ್ತಿಲ್ಲ. ಯಾಕೆಂದರೆ, ಅರ್ಜಿದಾರನ ಪ್ರಕರಣಕ್ಕಿಂತಲೂ ಗಂಭೀರವಾದ ಪ್ರಕರಣಗಳ ಅಪರಾಧಿಗಳಿಗೆ ಈಗಾಗಲೇ ಬಿಡುಗಡೆ ನೀಡಲಾಗಿದೆ.</p>



<p>ಉದಾಹರಣೆಗೆ, ಕೊಲೆಗೆ ಆಹ್ವಾನ ನೀಡಿದ್ದೆನೆಂದು ತಪ್ಪೊಪ್ಪಿಗೆ ನೀಡಿದ ಬಾರಿನ್‌ ಘೋಷ್‌, ಯಾವುದಕ್ಕೆ ಬಳಸಲಾಗುತ್ತದೆ ಎಂಬುದು ಸ್ಪಷ್ಟವಾಗಿ ತಿಳಿದುಕೊಂಡೇ ಬಾಂಬ್‌ ತಯಾರಿಸಿದ ಹೇಮಚಂದ್ರದಾಸ್ (ರೌಲತ್ ರಿಪೋರ್ಟ್‌ ಪ್ರಕಾರ); ಸಾಂಕೇತಿಕವಾಗಿ ಪ್ರಭುತ್ವದ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸದೆ, ದರೋಡೆಗಳನ್ನು ನಡೆಸಿದ ಪಂಜಾಬ್‌ ಪ್ರಕರಣದ ಪ್ಯಾರಾಸಿಂಗ್‌ ಮತ್ತಿತರು. ಕ್ಷಮಾಪಣೆಯ ಹಿನ್ನೆಲೆಯಲ್ಲಿ ಇವರಿಗೆಲ್ಲ ಈಗಾಗಲೇ ಬಿಡುಗಡೆ ಲಭಿಸಿದೆ.</p>



<p>C. ತಮ್ಮ ಮುಂದೆ ಈ ಅರ್ಜಿದಾರನು ನೀಡುವ ವಾಗ್ದಾನವೇನೆಂದರೆ, ಕಾನೂನು ವೀರೋಧಿ ಕೃತ್ಯಗಳನ್ನು ಎಸಗುತ್ತಿದ್ದ ಕಾಲದ ವ್ಯಕ್ತಿಯಲ್ಲ ಈಗ ಈ ಅರ್ಜಿದಾರನು. ಆ ಕಾಲದಲ್ಲಿ ಆತ ಒಬ್ಬ ಪುಟ್ಟ ಬಾಲಕನಾಗಿದ್ದ. ಅಂದಿನಿಂದ ಆತ ಪ್ರಾಯದಲ್ಲಿ ಮಾತ್ರ ಬೆಳೆಯಲಿಲ್ಲ, ಅನುಭವದಲ್ಲೂ ಬೆಳೆದ. ಅಷ್ಟೇ ಅಲ್ಲ, ಇನ್ನು ಮುಂದೆ ಯಾವ ಕಾರಣಕ್ಕೂ ರಾಜಕೀಯ ಮೋಹಗಳ ಮರುಳಿಗೆ ಬಿದ್ದು, ಈಗಾಗಲೇ ಲಭಿಸಬೇಕಿದ್ದ ಉಜ್ವಲವಾದ ಪದವಿಯನ್ನು ನಷ್ಟಗೊಳಿಸಿಕೊಳ್ಳುವುದಿಲ್ಲ ಎಂದು ಅರ್ಜಿದಾರನು ಪಶ್ಚಾತ್ತಾಪ ಪಡುತ್ತಿದ್ದಾನೆ. ಗೌರವಾನ್ವಿತ ಮಿಸ್ಟರ್‌ ಮೊಂಟಾಗು ಭಾರತ ಸಂದರ್ಶನ ನಡೆಸಿದ ಅಂದಿನಿಂದ ಅರ್ಜಿದಾರನಿಗೆ ಸುಧಾರಣೆಗಳು ಮತ್ತು ಭರವಸೆಗಳಲ್ಲಿರುವ ನಂಬಿಕೆಯನ್ನು ಸರಕಾರಕ್ಕೆ ಈ ಹಿಂದಿನ ನಿವೇದನೆಗಳ ಮೂಲಕ ಮತ್ತೆ ಮತ್ತೆ ಸ್ಪಷ್ಟವಾಗಿ ತಿಳಿಸುತ್ತಾ ಬಂದಿರುತ್ತಾನೆ. ಪರಸ್ಪರ ಸಂಬಂಧ ಹೊಂದಿರುವ ಏಷ್ಯನ್‌ ಭಯೋತ್ಪಾದಕರು ಭಾರತದ ಮೇಲೆ, ವಿಶೇಷವಾಗಿ ಮುಹಮ್ಮದೀಯೇತರ ಭಾರತದ ಮೇಲೆ, ಪರಂಪರಾಗತವಾಗಿ ಹಿಡಿದ ಶಾಪದಂತಿರುವವರು, ಗಡಿಗಳಲ್ಲಿ ಈಗ ನಿಯೋಜನೆಗೊಳ್ಳುತ್ತಿರುವ ವಾರ್ತೆ, ಬ್ರಿಟಿಷ್‌ ಸಾಮ್ರಾಜ್ಯದೊಂದಿಗೆ ಅತ್ಯಂತ ಹತ್ತಿರದ ಮತ್ತು ವಿನೀತವಾದ ಸಹಕಾರವೊಂದು ಎರಡೂ ಕಡೆಗಳಿಗೆ ಉತ್ತಮವೂ ಅತ್ಯಂತ ಅಪೇಕ್ಷಿತವೂ ಆಗಿರುತ್ತದೆ ಎಂಬ ನಂಬಿಕೆಗೆ ಈ ಅರ್ಜಿದಾರನನ್ನು ದೂಡಿದೆ. ಅದು ದೀರ್ಘಕಾಲೀನ ಮತ್ತು ನೆಲೆ ನಿಲ್ಲುವಂತಹದ್ದಾಗಿರಬೇಕೆಂಬುದೇ ಈಗ ಈ ಅರ್ಜಿದಾರನ ಪ್ರಾರ್ಥನೆ.</p>



<p>D. ಆದರೆ, ಬೇರೆ ಯಾರಾದರು, ಬೇರೆ ಏನಾದರು ಪ್ರೇರಣೆಯನ್ನು ಅರ್ಜಿದಾರನ ಮೇಲೆ ಆರೋಪಿಸುವುದೇ ಆಗಿದ್ದರೆ, ಅಂತಹ ರಹಸ್ಯ ವರದಿಗಳನ್ನು ಅರ್ಜಿದಾರನ ಈ ಮೇಲಿನ ಮನಃಪೂರ್ವಕವೂ ಪರಿಪೂರ್ಣವೂ ಆದ ನಂಬಿಕಾರ್ಹ ತಪ್ಪೊಪ್ಪಿಗೆಯೊಂದಿಗೆ ತುಲನೆ ಮಾಡಿ ನಿರಾಕರಿಸಬೇಕೆಂದು ಭಿನ್ನವಿಸಿಕೊಳ್ಳುತ್ತಿದ್ದೇನೆ. ಅರ್ಜಿದಾರನು ತನ್ನ ಪಾಲನ್ನು ವಹಿಸದ ಯಾವ ನಂಬಿಕೆಯನ್ನೂ ಸ್ವಯಂ ಹೊತ್ತು ನಡೆಯುವುದಿಲ್ಲ ಎಂದು ಅರ್ಜಿದಾರನ ಭೂತಕಾಲ ಸ್ಪಷ್ಟಪಡಿಸುತ್ತಿದೆ. ಸರಕಾರವನ್ನು ಸಂಪ್ರೀತಿಗೊಳಿಸಲು ಅತ್ಯಂತ ಕೀಳುಮಟ್ಟದ ದಾಸ್ಯ ಮನೋಭಾವವನ್ನೂ ಅತಿಯಾದ ಆತಂಕವನ್ನೂ ತೋರ್ಪಡಿಸುವವರು ಅವರ ಭೂತಕಾಲದ ಕೆಟ್ಟ ನಡತೆಯನ್ನು ಮರೆಮಾಚಲು ತಲೆಬುಡವಿಲ್ಲದ ಮಾತುಗಳನ್ನು ಮತ್ತು ಚಟುವಟಿಕೆಗಳನ್ನು ಅರ್ಜಿದಾರನ ಮೇಲೆ ಆರೋಪಿಸಿ ಹರಕೆಯ ಕುರಿಯಾಗಿಸಲು ಯಾವಾಗಲೂ ಪ್ರಯತ್ನಿಸುತ್ತಿರುತ್ತಾರೆ.</p>



<p>E. ಅದೇ ಹೊತ್ತು ಸರಕಾರದ ಕಡೆಯಿಂದ ಏನಾದರೂ ಸಂಶಯಗಳು ಉಳಿದಿದ್ದರೆ, ಅದನ್ನು ಇಲ್ಲವಾಗಿಸಲು, ಅರ್ಜಿದಾರನು ಯಾವ ರೀತಿಯಲ್ಲೂ ರಾಜಕೀಯ ಚಟುವಟಿಕೆಯಲ್ಲಿ ಪಾಲುಗೊಳ್ಳುವುದಿಲ್ಲವೆಂಬ ಪ್ರತಿಜ್ಞೆಯನ್ನು ಉತ್ತಮ ನಂಬಿಕೆಯೊಂದಿಗೆ ಸ್ವೀಕರಿಸುತ್ತಿದ್ದೇನೆ. ಅರ್ಜಿದಾರನ ಕುಸಿಯುತ್ತಿರುವ ಆರೋಗ್ಯ ಮತ್ತು ದೀರ್ಘಕಾಲದ ಸಹನೆಯು, ಯಾವ ಹಂತದಲ್ಲೂ (ರಾಜಕಾರಣದಿಂದ) ವಿರಮಿಸಿ, ಖಾಸಗೀ ಬದುಕನ್ನು ನಡೆಸಲು ಬೇಕಾದ ಕಠಿಣ ನಿಲುವಿಗೆ ಅರ್ಜಿದಾರನನ್ನು ತಲುಪಿಸಿದೆ. ಆದ್ದರಿಂದ ಇದನ್ನು ಅಥವಾ ಸರಕಾರ ಸೂಚಿಸುವ ಬೇರೆ ಯಾವುದೇ ನಿಶ್ಚಿತವೂ ಸಕಾರಣವೂ ಆದ ನಿಬಂಧನೆಗಳಿಗಳನ್ನು ಸ್ವೀಕರಿಸಿ ಮನಃಪೂರ್ವಕವಾಗಿ ಕಾರ್ಯಗತಗೊಳಿಸಲು ಅರ್ಜಿದಾರನು ಸಮ್ಮತಿ ಸೂಚಿಸುತ್ತಿದ್ದಾನೆ.</p>



<p>F. ಅರ್ಜಿದಾರನಿಗಿಂತ ಮೊದಲು ಮತ್ತು ನಂತರ ದೇಶದ್ರೋಹ ಎಸಗಿದ ಸಾವಿರಾರು ಖೈದಿಗಳಲ್ಲಿ ಯಾರು ಕೂಡ ಅರ್ಜಿದಾರ ಮತ್ತು ಸಹೋದರ ಕಳೆದಷ್ಟು ಕಾಲವನ್ನು ಜೈಲಿನಲ್ಲಿ ಕಳೆದಿಲ್ಲ (ಅವರ ಜೊತೆ ಜೀವಾವಧಿ ಶಿಕ್ಷೆ ವಿಧಿಸಲ್ಪಟ್ಟವರೆಲ್ಲ ಬಿಡುಗಡೆಗೊಂಡರು). ಆದ್ದರಿಂದಲೇ ಗೌರವಾನ್ವಿತ ರಾಜಕುಮಾರರ ಸಂದರ್ಶನ ಅವರ ದುರಿತಗಳಿಗೆ ಅಂತ್ಯ ಹಾಡುತ್ತದೆಂದು ಅರ್ಜಿದಾರ ಮತ್ತು ಆತನ ಸಹೋದರ ಜಿ.ಡಿ. ಸಾವರ್ಕರ್‌ (ಆತನ ವಿಷಯದಲ್ಲಿ ಇನ್ನಷ್ಟು ನ್ಯಾಯಯುತ ಸಂಗತಿಗಳಿವೆ) ಬಿಡುಗಡೆಗೊಳ್ಳುತ್ತಾರೆಂದು ಆತ್ಮವಿಶ್ವಾಸ ಮೂಡುತ್ತಿದೆ.</p>



<p>೩. ಆದರೆ, ಅರ್ಜಿದಾರನ ದೌರ್ಭಾಗ್ಯಕ್ಕೆ ಕ್ಷಮಾಪಣೆಯ ದನಿಯನ್ನು ಪುನಃ ತುಳಿಯುವುದೇ ಆದರೆ, ಒಂದು ಬದಲಿ ಸೌಕರ್ಯ ಎಂಬ ನೆಲೆಯಲ್ಲಿ ಅಂಡಮಾನಿಂದ ಹಠಾತ್ತನೆ ನಡೆದ ಈ ವರ್ಗಾವಣೆಯು ಸೃಷ್ಠಿಸಿದ ತೊಂದರೆಗಳಿಗೆ ಪರಿಹಾರ ಒದಗಿಸಬೇಕಾಗಿದೆ. ಭಾರತದ ಜೈಲುಗಳಲ್ಲಿ ಆಗಿರುತ್ತಿದ್ದರೆ ಈ ಹನ್ನೊಂದು ವರ್ಷಗಳ ಅವಧಿಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಕಡಿತ ಅರ್ಜಿದಾರನಿಗೆ ದೊರೆಯುತ್ತಿತ್ತು. ಅಂಡಮಾನಿನಲ್ಲಿ ಆಗಿರುತ್ತಿದ್ದರೆ, ಅಲ್ಲಿನ ನಿಯಮಗಳ ಪ್ರಕಾರ ಈ ಹೊತ್ತಿಗೆ ರಜಾ ಅಥವಾ ಕುಟುಂಬವನ್ನು ಕರೆಸಿಕೊಳ್ಳುವ ಅನುಮತಿ ದೊರೆಯುತ್ತಿತ್ತು. ಈಗ ಎರಡು ವ್ಯವಸ್ಥೆಗಳ ಅನುಕೂಲತೆಗಳೂ ಅರ್ಜಿದಾರನಿಗೆ ಅನ್ಯವಾಗಿಬಿಟ್ಟಿವೆ. ಆದ್ದರಿಂದ ಅರ್ಜಿದಾರ ನಿವೇದಿಸಿಕೊಳ್ಳುವುದೇನೆಂದರೆ:</p>



<p>A. ಎರಡರಿಂದ ಮೂರು ವರ್ಷಗಳ ಶಿಕ್ಷಾ ಕಡಿತವನ್ನು ಅರ್ಜಿದಾರನಿಗೆ ನೀಡಬೇಕು.</p>



<p>B. ಅರ್ಜಿದಾರನಿಗೆ ರಜಾ ನೀಡಿ ತನ್ನ ಕುಟುಂಬವನ್ನು ಜೊತೆ ಸೇರಿಸಿ ಅಂಡಮಾನಿಗೆ ಮರಳಿ ಕಳಿಸಬೇಕು. ಅತ್ಯಂತ ಭೀಕರ ಖೈದಿಗಳಿಗೂ ಕೂಡ ಒಂಭತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ವರ್ಷ ಉತ್ತಮ ನಡವಳಿಕೆ ಹೊಂದಿದ್ದರೆ ರಜಾ ಪದ್ದತಿಯಂತೆ ಅಲ್ಲಿ ಖಾಸಗಿ ಬದುಕನ್ನು ನಡೆಸಬಹುದು. ಹನ್ನೊಂದು ವರ್ಷಗಳ ಕಾಲ ಜೈಲಲ್ಲಿ ಕಳೆದ, ಅದರಲ್ಲಿ ಏಳು ವರ್ಷಗಳ ಕಾಲ ಉತ್ತಮ ನಡವಳಿಕೆ ಹೊಂದಿದ್ದ ಅರ್ಜಿದಾರನು ಕನಿಷ್ಠ ಅದನ್ನಾದರೂ ಆಗ್ರಹಿಸುತ್ತಿದ್ದಾನೆ. ಇದಕ್ಕಾದರೂ ಅನುಮತಿ ದೊರೆಯುವುದೇ ಆಗಿದ್ದರೆ, ದೌರ್ಭಾಗ್ಯವೊಂದೇ ಬಂಡವಾಳವಾಗಿ ಹೊಂದಿರುವ, ಕುಸಿಯುತ್ತಿರುವ ಒಬ್ಬ ಮನುಷ್ಯನಾದ ಅರ್ಜಿದಾರನು ಅದರ ಸುರಕ್ಷತೆಗೆ ಮಾತ್ರ ಹೆದರಿಕೊಂಡು, ಲೋಕದಿಂದಲೇ ಮರೆಯಲ್ಪಟ್ಟು, ಲೋಕವನ್ನು ಮರೆತು, ನಿವೃತ್ತಿ ಹೊಂದಿದ ಖಾಸಗಿ ಬದುಕನ್ನು ನಡೆಸಿಕೊಂಡು, ಮಧುರವಾದ ಕೌಟುಂಬಿಕ ಬದುಕಿನ ಅನುಗ್ರಹಗಳ ನಡುವೆ ಸಂತೋಷದಿಂದ ಬಾಳುತ್ತಾನೆ.</p>



<p>೪. ಸಂಕ್ಷಿಪ್ತವಾಗಿ ಅರ್ಜಿದಾರನು ವಿನಯಪೂರ್ವಕ ಖಚಿತವಾಗಿ ಹೇಳಿಕೊಳ್ಳಲು ಯಾಚಿಸುತ್ತಿರುವುದೇನೆಂದರೆ, ಭಾರತದಲ್ಲಿ ಈಗ ನಡೆಯುತ್ತಿರುವ ಕ್ಷೋಭೆಗಳು ಅರ್ಜಿದಾರನಿಗೆ ಒಲವಿರುವ ಸಂಗತಿಯೆಂಬ ಪೂರ್ವಾಗ್ರಹವನ್ನು ಯಾವ ಕಾರಣಕ್ಕೂ ಒಪ್ಪಿಕೊಳ್ಳಬಾರದು. ಇದನ್ನು ಇಲ್ಲಿ ಹೇಳಿಕೊಳ್ಳುವುದು ಮಾತ್ರವಲ್ಲ, ಪತ್ರಿಕೆಗಳ ಮೂಲಕ ಘೋಷಿಸಿಕೊಳ್ಳಲೂ ಅರ್ಜಿದಾರನು ತಯಾರಿರುತ್ತಾನೆ. ದಶಲಕ್ಷದಷ್ಟು ಜನರ ಮೇಲೆ ಯಾವ ನಿಯಂತ್ರಣವನ್ನೂ ಹೊಂದಿರದ ಅರ್ಜಿದಾರ ಮತ್ತು ಸಹೋದರನನ್ನು ಆಡಳಿತಾತ್ಮಕ ಕಾರಣಗಳಿಗಾಗಿ ಈಗಲೂ ಶಿಕ್ಷಿಸುತ್ತಿರುವುದು ಬೇರೆ ಯಾರೋ ಮಾಡಿದ ತಪ್ಪಿಗೆ ಇವರನ್ನು ಶಿಕ್ಷಿಸುವುದಕ್ಕೆ ಸಮನಾಗಿರುತ್ತದೆ. ಅರ್ಜಿದಾರನ ವ್ಯಾಪ್ತಿ ಮೀರಿ ನಿಲ್ಲುವ, ಪರಿಶೋಧನೆಗೂ ದಾರಿಯಿಲ್ಲದ ಸಂಗತಿಗಳು ಮಾತ್ರ ಅವು.</p>



<p>೫. ಅರ್ಜಿದಾರ ಮತ್ತು ಸಹೋದರನ ತಕ್ಷಣದ ಬಿಡುಗಡೆಗೆ ಗೌರವಾನ್ವಿತ ಗವರ್ನರ್‌ ಜನರಲ್‌ ಮತ್ತು ಬಾಂಬೆ ಗವರ್ನರ್‌ ಅವರುಗಳನ್ನು ಪ್ರೇರೇಪಿಸುವುದರಲ್ಲಿ ಈ ನಿವೇದನೆ ಸೋಲುವುದಿಲ್ಲ ಎಂಬುದರಲ್ಲಿ ಅರ್ಜಿದಾರನಿಗೆ ಸಂಪೂರ್ಣ ನಂಬಿಕೆಯಿದೆ. ಆ ಕಾರುಣ್ಯಕ್ಕಾಗಿ ಅವರ ದೀರ್ಘಾಯುಸ್ಸು ಮತ್ತು ಉನ್ನತಿಗಾಗಿ ಪ್ರಾರ್ಥಿಸುತ್ತೇನೆ.ʼ</p>



<p>೧೯೨೨ ಜಲೈ ೪ರಂದು ಸಬರಮತಿ ಜೈಲಿನಿಂದ ಗಣೇಶ್‌ ದಾಮೋದರ್‌ ಸಾವರ್ಕರ್‌ ಕೂಡ ಸುಮಾರಾಗಿ ಇದೇ ರೀತಿಯ ನಿವೇದನೆಯನ್ನು ಬಾಂಬೆ ಗವರ್ನರಿಗೆ ಸಮರ್ಪಿಸಿದ್ದ.</p>



<p>೧೯೨೧ ನವೆಂಬರ್‌ ೨೩ರಂದು ಬಾಂಬೆ ಸರಕಾರ ವಿನಾಯಕರ ಪತ್ರವನ್ನು ಪರಿಗಣಿಸುವುದಾಗಿ ಉತ್ತರ ನೀಡಿತು. ೧೯೨೨ ಸೆಪ್ಟಂಬರಿನಲ್ಲಿ ಬಾಬಾರವ್‌ಗೆ ಬಿಡುಗಡೆ ಭಾಗ್ಯ ದೊರೆಯಿತು.</p>



<p>ಅಂಡಮಾನ್‌ ಜೈಲುವಾಸದ ನಡುವೆ ಸಾವರ್ಕರ್‌ ಮತ್ತು ಆ ಮೂಲಕ ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮಿಗೆ ಉಂಟಾದ ಬದಲಾವಣೆಗಳನ್ನು ಸಂಕ್ಷಿಪ್ತವಾಗಿ ಹೀಗೆ ಹೇಳಬಹುದು. ೧೮೧೮ರಲ್ಲಿ ಪೇಶ್ವಾಸಾಮ್ರಾಜ್ಯ ಪತನಗೊಂಡ ನಂತರ ಸಾಮಾಜಿಕ ರಾಜಕೀಯ ಮೇಲುಗೈಯನ್ನು ಮರಳಿ ಪಡೆಯಲು ಆಗ್ರಹಿಸುತ್ತಿದ್ದ ಚಿತ್ಪಾವನ ಭಾವನಾತ್ಮಕತೆಯ ಬ್ರಿಟಿಷ್‌ ವಿರೋಧಿತನವೇ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಕೇಂದ್ರಬಿಂದುವಾಗಿತ್ತು. ಅದನ್ನು ಬದಿಗಿಡಲಾಯಿತು. ಸಾಮಾನ್ಯವಾಗಿ ಮುಸ್ಲಿಂ ವಿರೋಧಿತನವೇ ಮುಖ್ಯವಾಗಿದ್ದರೂ ಬ್ರಿಟಿಷ್‌ ವಿರೋಧದ ಉಚ್ಛ್ರಾಯ ಹಂತದಲ್ಲಿ ಪ್ರಧಾನ ಶತ್ರುವನ್ನು ಮುಂದಿಟ್ಟುಕೊಂಡು ರಾಜಿ ಮಾಡಿಕೊಳ್ಳಬಹುದು ಎಂಬ ನೆಲೆಯಲ್ಲಿ ಉಂಟಾಗಿದ್ದ ಮುಸ್ಲಿಮರ ಬಗೆಗಿನ ಮೃದು ಧೋರಣೆಯನ್ನೂ ಬದಿಗಿಡಲಾಯಿತು. ಬದಲಿಗೆ, ಬ್ರಿಟಿಷರಿಗೆ ಅತ್ಯಂತ ಅನುಕೂಲಕರವಾದ ರಾಜಕೀಯ ವಾತಾವರಣವನ್ನು ಸೃಷ್ಟಿಸಲು, ಒಡೆದು ಆಳುವ ಅವರ ಅಜೆಂಡಾವನ್ನು ಕಾರ್ಯಗತಗೊಳಿಸಲು ಕಠೋರ ಮುಸ್ಲಿಂ ವಿರೋಧಿತನವನ್ನು ಘೋಷಿಸಲಾಯಿತು. ಹೀಗೆ, ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡದ ನಂತರ ಉಂಟಾಗಿದ್ದ ಅಸಹಕಾರ ಚಳುವಳಿಯ ಬ್ರಿಟಿಷ್‌ ವಿರೋಧಿ ಹಿಂದೂ-ಮುಸ್ಲಿಂ ಹೋರಾಟ ಮೈತ್ರಿಯಲ್ಲಿ ಬಿರುಕು ಮೂಡಿಸುವುದು, ಗಾಂಧಿಯ ಆಗಮನದಿಂದ ರಾಷ್ಟ್ರೀಯ ಆಂದೋಲನದಿಂದ ಹೊರಗುಳಿಯಬೇಕಾಗಿ ಬಂದ ತಿಲಕೈಟ್‌ಗಳು ಮತ್ತು ಇತರ ನವ-ಸಂಪ್ರದಾಯವಾದಿ ಬ್ರಾಹ್ಮಣರಿಗೆ ಹೊಸ ಚೈತನ್ಯ ತುಂಬುವುದು, ಅಹಿಂಸೆಯಂತಹ ಪರಸ್ಪರ ಗೌರವಾದರಗಳಿಂದ ಕೂಡಿದ ಆಧುನಿಕ ರಾಜಕೀಯ ಚಿಂತನೆಗಳನ್ನು ಉರುಳಿಸಿ ಬ್ರಾಹ್ಮಣಿಸಮ್ಮಿಗೆ ಅನುಕೂಲಕರವಾದ ಒಂದು ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವುದು ಮೊದಲಾದವು ಮುಖ್ಯ ಅಜೆಂಡಾಗಳಾದವು.</p>



<p>ಹೀಗೆ ೧೯೨೩ರಲ್ಲಿ ಆ ಪುಸ್ತಕ ಹುಟ್ಟಿಕೊಂಡಿತು; <em><strong>ಹಿಂದುತ್ವ</strong></em> ಎಂಬ ಹೆಸರಿನೊಂದಿಗೆ.</p>
]]></content:encoded>
					
		
		
			</item>
		<item>
		<title>ಹಿಂದುತ್ವ ರಾಜಕಾರಣದ ಕಥೆ &#8211; 18 : ದಡ ಸೇರಿದ ನಿವೇದನೆ</title>
		<link>https://peepalmedia.com/statement-of-belonging-to-the-bank/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 04 Jun 2024 15:00:06 +0000</pubDate>
				<category><![CDATA[ಅಂಕಣ]]></category>
		<category><![CDATA[hindu jagarana vedike]]></category>
		<category><![CDATA[hindutva rajakaranada kathe]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=40364</guid>

					<description><![CDATA[ಮೊಂಟಾಗು ಮತ್ತು ಚೆಮ್ಸ್‌ಫೋರ್ಡ್‌ ಜಂಟಿಯಾಗಿ ಸೂಚಿಸಿದ್ದ ಆಡಳಿತ ಸುಧಾರಣಾ ಕಾರ್ಯಕ್ರಮಗಳನ್ನು ೧೯೧೯ರಲ್ಲಿ ಬ್ರಿಟನ್‌ ರಾಜನಾಗಿದ್ದ ಐದನೇ ಜಾರ್ಜ್‌ ರಾಜಕೀಯ ಘೋಷಣೆಯ ಮೂಲಕ ಅಂಗೀಕರಿಸಿದ್ದರು. ಅದರ ಆರನೇ ಕಲಂ ರಾಜಕೀಯ ಖೈದಿಗಳಿಗೆ ಕ್ಷಮಾಪಣೆ ನೀಡುವುದರ ಕುರಿತಾಗಿತ್ತು. ಭಾರತದ ಜೈಲುಗಳಲ್ಲಿ ಖೈದಿಗಳಾಗಿದ್ದ ಬಹುಪಾಲು ಜನರನ್ನು ಇದರಡಿಯಲ್ಲಿ ಬಿಡುಗಡೆಗೊಳಿಸಲಾಯಿತು. ಅರವಿಂದ ಘೋಷರ ಸಹೋದರ ಬಾರಿನ್‌ ಘೋಷ್‌, ತ್ರೈಲೋಕ್ಯನಾಥ್‌ ಚಕ್ರವರ್ತಿ, ಹೇಮ ಚಂದ್ರದಾಸ್‌, ಭಾಯ್‌ ಪರಮಾನಂದ್‌ ಮೊದಲಾದವರು ಬಿಡುಗಡೆಗೊಂಡವರಲ್ಲಿ ಪ್ರಮುಖರು. ಆದರೆ, ವಿನಾಯಕ್‌ ಮತ್ತು ಸಹೋದರ ಬಾಬಾರಾವ್‌ಗೆ ಬಿಡುಗಡೆ ಭಾಗ್ಯ ಲಭಿಸಲಿಲ್ಲ. ಈ [&#8230;]]]></description>
										<content:encoded><![CDATA[
<p></p>



<p></p>



<p></p>



<p></p>



<p></p>



<p>ಮೊಂಟಾಗು ಮತ್ತು ಚೆಮ್ಸ್‌ಫೋರ್ಡ್‌ ಜಂಟಿಯಾಗಿ ಸೂಚಿಸಿದ್ದ ಆಡಳಿತ ಸುಧಾರಣಾ ಕಾರ್ಯಕ್ರಮಗಳನ್ನು ೧೯೧೯ರಲ್ಲಿ ಬ್ರಿಟನ್‌ ರಾಜನಾಗಿದ್ದ ಐದನೇ ಜಾರ್ಜ್‌ ರಾಜಕೀಯ ಘೋಷಣೆಯ ಮೂಲಕ ಅಂಗೀಕರಿಸಿದ್ದರು. ಅದರ ಆರನೇ ಕಲಂ ರಾಜಕೀಯ ಖೈದಿಗಳಿಗೆ ಕ್ಷಮಾಪಣೆ ನೀಡುವುದರ ಕುರಿತಾಗಿತ್ತು. ಭಾರತದ ಜೈಲುಗಳಲ್ಲಿ ಖೈದಿಗಳಾಗಿದ್ದ ಬಹುಪಾಲು ಜನರನ್ನು ಇದರಡಿಯಲ್ಲಿ ಬಿಡುಗಡೆಗೊಳಿಸಲಾಯಿತು. ಅರವಿಂದ ಘೋಷರ ಸಹೋದರ ಬಾರಿನ್‌ ಘೋಷ್‌, ತ್ರೈಲೋಕ್ಯನಾಥ್‌ ಚಕ್ರವರ್ತಿ, ಹೇಮ ಚಂದ್ರದಾಸ್‌, ಭಾಯ್‌ ಪರಮಾನಂದ್‌ ಮೊದಲಾದವರು ಬಿಡುಗಡೆಗೊಂಡವರಲ್ಲಿ ಪ್ರಮುಖರು. ಆದರೆ, ವಿನಾಯಕ್‌ ಮತ್ತು ಸಹೋದರ ಬಾಬಾರಾವ್‌ಗೆ ಬಿಡುಗಡೆ ಭಾಗ್ಯ ಲಭಿಸಲಿಲ್ಲ. ಈ ಸಂದರ್ಭದಲ್ಲಿಯೇ ನಾವು ಕಳೆದ ಅಧ್ಯಾಯದಲ್ಲಿ ಕಂಡ ಕ್ಷಮಾಪಣಾ ಪತ್ರವನ್ನು ವಿನಾಯಕ್‌ ದಾಮೋದರ್‌ ಸಾವರ್ಕರ್‌ ಸಮರ್ಪಿಸುವುದು. ಯುದ್ಧ ಆರಂಭವಾದ ಕಾಲದಲ್ಲಿ ಬರೆದಿದ್ದ ಕ್ಷಮಾಪಣಾ ಪತ್ರದಲ್ಲಿ ರಾಜಕೀಯ ಖೈದಿಗಳಿಗೆ ಕ್ಷಮಾಪಣೆ ನೀಡಬೇಕಾಗಿರುವುದು ತನ್ನ ವೈಯಕ್ತಿಕ ಇಚ್ಛೆಯಲ್ಲವೆಂದೂ ತನ್ನನ್ನು ಬಿಟ್ಟು ಉಳಿದ ಖೈದಿಗಳನ್ನು ಬಿಡುಗಡೆಗೊಳಿಸಿದರೆ ತಾನು ಸಂತುಷ್ಟನಾಗುತ್ತೇನೆಂದೂ ವಿನಾಯಕ್‌ ಹೇಳಿಕೊಂಡಿದ್ದರು. ಆ ಹೇಳಿಕೆಯ ಮುಖವಾಡ ಪೂರ್ತಿ ಕಳಚಿ ಬೀಳುವುದನ್ನು ನಾವು ಈ ಪತ್ರದಲ್ಲಿ ಕಾಣಬಹುದು. ಬಾರಿನ್‌ ಘೋಷ್‌ ಮತ್ತು ಇತರರನ್ನು ಬಿಡುಗಡೆಗೊಳಿಸಿದ ಕಾರಣಕ್ಕೆ ಸಂತೋಷಗೊಂಡಿರುವ ಸಾವರ್ಕರನ್ನು ಇಲ್ಲಿ ಕಾಣಲು ಸಿಗುವುದಿಲ್ಲ. ಬದಲಿಗೆ, ತನ್ನನ್ನು ಬಿಡುಗಡೆಗೊಳಿಸದೆ ಅವರನ್ನು ಮಾತ್ರ ಬಿಡುಗಡೆಗೊಳಿಸಿದ ಕಾರಣಕ್ಕೆ ಅಸಹನೆಗೊಂಡಿರುವ ಸಾವರ್ಕರನ್ನು ಇಲ್ಲಿ ಕಾಣಬಹುದು. ಬಾರಿನ್‌ ಘೋಷ್‌ ಮತ್ತು ಇತರರು ಅಂಡಮಾನ್‌ ದ್ವೀಪದಲ್ಲಿ ಜೈಲಿನಿಂದ ಹೊರಗೆ ಬದುಕಬಹುದು ಎಂಬ ರೀತಿಯಲ್ಲಿ ಶಿಕ್ಷೆಯಿಂದ ರಿಯಾಯಿತಿ ಪಡೆದುಕೊಂಡು ಬದುಕುತ್ತಿದ್ದಾಗ ಅವರು ಬಾಂಬ್‌ ತಯಾರಿಸುತ್ತಿದ್ದರು ಎಂಬ ಆರೋಪ ಹೊರಿಸಿ ಅವರನ್ನು ಪುನಃ ಜೈಲಿಗೆ ಹಾಕಲಾಗಿತ್ತು. ಆ ಘಟನೆಯನ್ನು ಸಾವರ್ಕರ್‌ ಪುನಃ ಇಲ್ಲಿ ಎತ್ತಿ ಹಾಕುವುದನ್ನು ಈ ಪತ್ರದಲ್ಲಿ ಕಾಣಬಹುದು.‌ ಅದು ಕೂಡ ಬಾರಿನ್‌ ಘೋಷ್ ಮತ್ತು ಹೇಮ ಚಂದ್ರದಾಸ್‌ ಅವರ ಹೆಸರುಗಳನ್ನು ಹೇಳಿಕೊಂಡು.</p>



<p>ಇನ್ನೊಂದು ವೈರುಧ್ಯ ಅಫ್ಘಾನ್–ಟರ್ಕಿ ʼಭಯೋತ್ಪಾದಕʼ ದಾಳಿಯ ವಿರುದ್ಧ ಹೋರಾಡಲು ತನಗಿರುವ ಸನ್ನದ್ಧತೆಯ ಕುರಿತು. ಇಂಡಿಯಾ ಹೌಸಿನಲ್ಲಿದ್ದ ತನ್ನ ಸಹವರ್ತಿ ವೀರೇಂದ್ರನಾಥ್‌ ಚಟ್ಟೋಪಾಧ್ಯಾಯ ಮತ್ತಿತರರು ಒಟ್ಟಾಗಿ ಜರ್ಮನ್‌–ಟರ್ಕಿ ಮೈತ್ರಿಕೂಡದೊಂದಿಗೆ ಸೇರಿಕೊಂಡು ಹಿಂದೂ ಮಹಾಸಾಗರದ ಮೂಲಕ ಅಂಡಮಾನ್‌ ತಲುಪಿ ಅಲ್ಲಿಂದ ಸಾವರ್ಕರನ್ನು ಪಾರು ಮಾಡುವ ಯೋಜನೆ ಹಾಕಿಕೊಂಡಿದ್ದರು ಎಂಬ ಸಾವರ್ಕರ್‌ ಆತ್ಮಕಥೆಗಾರರ ಬರಹಗಳನ್ನು ಬುಡಮೇಲು ಮಾಡುವಂತಿದೆ ಈ ಸನ್ನದ್ಧತೆ. ವಿವರವಾದ ಸಾವರ್ಕರ್‌ ಆತ್ಮಕತೆ ಬರೆದ ವಿಕ್ರಂ ಸಂಪತ್‌ ಸ್ವತಃ ಈ ಕ್ಷಮಾಪಣಾ ಪತ್ರವನ್ನು ಸಾವರ್ಕರ್‌ ಆಮೇಲೆ ಬರೆದ <em>ನನ್ನ ಗಡೀಪಾರು (</em><em>My Transportation For Life)</em> ಎಂಬ ಅಂಡಮಾನ್‌ ನೆನಪಿನ ಟಿಪ್ಪಣಿಗಳೊಂದಿಗೆ ತುಲನೆ ಮಾಡಿಕೊಂಡು ಇನ್ನೂ ಕೆಲವು ವೈರುಧ್ಯಗಳನ್ನು ಎತ್ತಿ ತೋರಿಸುತ್ತಾರೆ. ಈ ಕ್ಷಮಾಪಣಾ ಪತ್ರದಲ್ಲಿ ಬ್ರಿಟಿಷ್‌ ಸಂವಿಧಾನಕ್ಕೆ ನಿಷ್ಠೆ ಮತ್ತು ಅಹಿಂಸೆಯೊಂದಿಗೆ ತನಗಿರುವ ಗೌರವವನ್ನು ತೋರ್ಪಡಿಸುವ ಸಾವರ್ಕರ್‌ ನೆನಪಿನ ಟಿಪ್ಪಣಿಯಲ್ಲಿ ಇನ್ನೊಂದು ತರಹದ ರಾಜಕೀಯ ಪ್ರಚೋದನೆಗಳ ಬಗ್ಗೆ ಹೇಳಿಕೊಳ್ಳುತ್ತಾರೆ ಎಂದು ವಿಕ್ರಂ ಸಂಪತ್‌ ಬೊಟ್ಟು ಮಾಡುತ್ತಾರೆ.</p>



<p>ಏನೇ ಆದರೂ ಈ ಸಲ ಜೈಲಿನ ಅಧಿಕಾರಿಗಳು ಸಾವರ್ಕರ್‌ ನಿವೇದನೆಯನ್ನು ಮೇಲಕ್ಕೆ ಕಳುಹಿಸಿಕೊಡುತ್ತಾರೆ. ಸಾವರ್ಕರ್‌ ಮತ್ತು ಬಾಬಾರಾವ್‌ಗೆ ಜೈಲಿನ ʼಒಳ್ಳೆಯ ಮಕ್ಕಳುʼ ಎಂದು ರಿಪೋರ್ಟ್‌ ಕೊಟ್ಟರು. ಆದರೆ ಬಾಂಬೆ ಸರಕಾರ ಅದನ್ನೂ ತಳ್ಳಿ ಹಾಕಿತು.</p>



<p>೨೦೨೧ರಲ್ಲಿ ಪ್ರಕಟಗೊಂಡ ಉದಯ ಮಹೂರ್ಕರ್‌ ಮತ್ತು ಚಿರಾಯು ಪಂಡಿತ್‌ ಜಂಟಿಯಾಗಿ ಬರೆದ, ಆರ್‌ ಎಸ್‌ ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಮುನ್ನುಡಿ ಬರೆದಿರುವ, <em>ವೀರ್‌ ಸಾವರ್ಕರ್:‌ ದಿ ಮ್ಯಾನ್‌ ಕುಡ್‌ ಹ್ಯಾವ್‌ ಪ್ರಿವೆಂಟೆಡ್‌ ಪಾರ್ಟಿಷನ್</em>‌ ಎಂಬ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅವರು ಗಾಂಧಿಯ ಸಲಹೆಯ ಪ್ರಕಾರ ಸಾವರ್ಕರ್‌ ಕ್ಷಮಾಪಣಾ ಪತ್ರಗಳನ್ನು ಬರೆದಿದ್ದರು ಎಂದು ಭಾಷಣ ಮಾಡಿದ್ದು ದೊಡ್ಡ ಮಟ್ಟದ ವಿವಾದವಾಗಿತ್ತು. ಲಂಡನ್ನಿನಲ್ಲಿ ಕನಿಷ್ಠ ಎರಡು ಬಾರಿಯಾದರೂ ಗಾಂಧಿ ಮತ್ತು ಸಾವರ್ಕರ್‌ ಭೇಟಿ ನಡೆದಿರುವುದರ ಬಗ್ಗೆ ಇತಿಹಾಸ ಹೇಳುತ್ತದೆ. ಈ ಎರಡು ಭೇಟಿಗಳಲ್ಲೂ ಪರಸ್ಪರ ಅಭಿಪ್ರಾಯಗಳಲ್ಲಿ ಯಾವ ಒಮ್ಮತವೂ ಮೂಡಿರಲಿಲ್ಲ. ನಾವು ವಿವರವಾಗಿ ನೋಡಿದ ೧೯೧೧ರಿಂದ ೧೯೨೦ರ ತನಕ ಸಾವರ್ಕರ್‌ ಬರೆದ ಯಾವ ನಿವೇದನೆಯಲ್ಲೂ ಗಾಂಧಿ ಬರುವುದೇ ಇಲ್ಲ. ಅಂದರೆ, ದಾರಿ ತಪ್ಪಿದ ಮಗ ಮರಳಿ ಬರುವಾಗ ಸರಕಾರ ತನ್ನ ಬಾಗಿಲುಗಳನ್ನು ತೆರೆದು ಕೊಡದೆ ಬೇರೇನು ತಾನೇ ಮಾಡೀತು ಎಂದೂ, ಸಾಮ್ರಾಜ್ಯದ ಏಳಿಗೆಗಾಗಿ ಮೊದಲ ಮಹಾಯುದ್ಧದ ಮುಂಚೂಣಿಯಲ್ಲಿ ನಿಂತು ಬ್ರಿಟಿಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಯುದ್ಧ ಮಾಡುವ ಆಗ್ರಹ ವ್ಯಕ್ತಪಡಿಸುವಾಗಲೂ, ಬ್ರಿಟಿಷ್‌ ಸಂವಿಧಾನಕ್ಕೆ ಅನುಗುಣವಾಗಿ ನಡೆದುಕೊಳ್ಳುತ್ತೇನೆಂದು ಮತ್ತೆ ಮತ್ತೆ ಆಣೆ ಪ್ರಮಾಣ ಮಾಡುವಾಗಲೂ, ಬ್ರಿಟಿಷರು ಸೂಚಿಸುವಷ್ಟು ಕಾಲಕ್ಕೆ ರಾಜಕೀಯ ಚಟುವಟಿಕೆಗಳಿಂದ ಹಿಂದೆ ಸರಿಯುತ್ತೇನೆಂದು ಕಾಡಿ ಬೇಡುತ್ತಿರುವಾಗಲೂ ಗಾಂಧಿಯ ಚಿತ್ರಣ ಬರುವುದೇ ಇಲ್ಲ. ಈ ಕಾಲವೆಲ್ಲ, ಅದರಲ್ಲೂ ೧೯೧೯ರ ನಂತರ ಗಾಂಧಿ ಬ್ರಿಟಿಷರೊಂದಿಗೆ ರಾಜಿಯಿಲ್ಲದ ಹೋರಾಟಕ್ಕೆ ಧುಮುಕಿದ್ದರು.</p>



<p>ಗಾಂಧಿ ಸಾವರ್ಕರ್‌ ಬಿಡುಗಡೆಗಾಗಿ ಮಾನವೀಯ ನೆಲೆಯಲ್ಲಿ ಹಸ್ತಕ್ಷೇಪ ನಡೆಸುವುದು ಇದೆಲ್ಲದರ ನಂತರ. ಸಾವರ್ಕರ್‌ ಸಹೋದರರಲ್ಲಿ ಕಿರಿಯವನಾಗಿದ್ದ ನಾರಾಯಣ ರಾವ್‌ ೧೯೨೦ ಜನವರಿ ೧೮ರಂದು ಗಾಂಧಿಗೆ ಪತ್ರ ಬರೆದಿದ್ದ. ರಾಜಕೀಯ ಘೋಷಣೆಯ ಭಾಗವಾಗಿ ಸಾವರ್ಕರ್‌ ಸಹೋದರರನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲವೆಂದು ಸರಕಾರ ತಿಳಿಸಿದ ನಂತರ ನಾರಾಯಣ ರಾವ್‌ ಗಾಂಧಿಗೆ ಪತ್ರ ಬರೆದಿದ್ದ. ಈ ಸನ್ನಿವೇಶದಲ್ಲಿ ಏನು ಮಾಡಬೇಕೆಂಬ ಸಲಹೆಯನ್ನು ಕೇಳಿಕೊಳ್ಳುವ ಪತ್ರವಾಗಿತ್ತದು. ಅವರ ರಾಜಕೀಯ ನಿಲುವಿನ ಕುರಿತು ಯಾವ ಚರ್ಚೆಯೂ ಆ ಪತ್ರದಲ್ಲಿರಲಿಲ್ಲ. ಕೇವಲ ಮಾನವೀಯವಾದ ವಿಷಯ ಅದಾಗಿತ್ತು.</p>



<p>ʼಅವರ ದೇಹತೂಕ ೧೧೮ ಪೌಂಡ್‌ನಿಂದ ೯೫-೧೦೦ ಪೌಂಡ್‌ ಆಗಿ ಕುಸಿದಿದೆ. ಈಗ ಅವರಿಗೆ ಆಸ್ಪತ್ರೆಯಿಂದ ಸೂಚಿಸಿದ ಆಹಾರ ಕೊಡುತ್ತಿದ್ದಾರಾದರೂ ಅವರ ಆರೋಗ್ಯ ಸುಧಾರಿಸುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಕಮ್ಮಿಯೆಂದರೂ (ಅಂಡಮಾನಿಗಿಂತ) ಉತ್ತಮವಾದ ಹವಾಮಾನ ಇರುವ ಯಾವುದಾದರು ಭಾರತದ ಜೈಲಿಗೆ ಅವರನ್ನು ವರ್ಗಾಯಿಸುವುದು ಅತ್ಯಂತ ಉತ್ತಮವಾಗಿರುತ್ತದೆ. ಅವರಲ್ಲಿ ಒಬ್ಬರ ಪತ್ರ ಈ ನಡುವೆ ನನಗೆ ಲಭಿಸಿತ್ತು. ಅದರಲ್ಲಿ ಈ ಸಂಗತಿಗಳನ್ನೆಲ್ಲ ಹೇಳಿಕೊಂಡಿದ್ದಾರೆ. ಇದರ ಕುರಿತು ತಾವು ಏನು ಮಾಡಬಹುದು ಎಂದು ತಿಳಿಸಲು ಕೋರುತ್ತಿದ್ದೇನೆ.ʼ ಎಂದು ಆ ಪತ್ರ ಕೊನೆಯಾಗಿತ್ತು. ೧೯೨೦ ಜನವರಿ ೨೫ರಂದು ಗಾಂಧಿ ಅದಕ್ಕೆ ಉತ್ತರ ಬರೆದರು. ಈ ಕುರಿತು ಸಲಹೆ ನೀಡುವುದು ಕಷ್ಟಕರ ಎಂದು ಗಾಂಧಿ ಬರೆದಿದ್ದರು. ತಮ್ಮ ಸಹೋದರ ಜೈಲು ಸೇರಿರುವುದು ಪೂರ್ಣವಾದ ರಾಜಕೀಯ ಕಾರಣಗಳಿಗಾಗಿ ಎಂದು ಘೋಷಿಸುವ ಒಂದು ಬೃಹತ್‌ ಅರ್ಜಿಯನ್ನು ತಯಾರಿಸಲು ಗಾಂಧಿ ಹೇಳುತ್ತಾರೆ. ಅದರ ಜೊತೆಗೆ ತನ್ನ ಮಟ್ಟಿನಲ್ಲಿ ಆಗುವ ಕೆಲಸಗಳನ್ನು ಮಾಡುತ್ತೇನೆಂದೂ ಭರವಸೆ ನೀಡುತ್ತಾರೆ.</p>



<p>ಗಾಂಧಿ ಮಾತಿನಂತೆ ನಡೆದುಕೊಂಡರು. ೧೯೨೦ ಮೇ ೨೬ರಂದು <em>ಯಂಗ್‌ ಇಂಡಿಯಾ</em>ದಲ್ಲಿ <em>ಸಾವರ್ಕರ್‌ ಸಹೋದರರು</em> ಎಂಬ ತಲೆಬರಹದ ಲೇಖನದಲ್ಲಿ ಗಾಂಧಿ ಅವರ ಬಿಡುಗಡೆಗಾಗಿ ಆಗ್ರಹಿಸಿದರು. ರಾಜಕೀಯ ಖೈದಿಗಳಿಗೆ ಕ್ಷಮಾಪಣೆ ನೀಡಿ ಬಿಡುಗಡೆಗೊಳಿಸುವ ರಾಜಕೀಯ ಘೋಷಣೆಯನ್ನು ಗಾಂಧಿ ಸ್ವಾಗತಿಸಿದರು. ಆ ಪ್ರಕಾರ ಹಲವಾರು ರಾಜಕೀಯ ಖೈದಿಗಳ ಬಿಡುಗಡೆ ಮಾಡಿರುವುದನ್ನೂ ಶ್ಲಾಘಿಸಿದರು. ಅದರ ಜೊತೆಗೆ ಸಾವರ್ಕರ್‌ ಸಹೋದರರಿಗೂ ಆ ಬಿಡುಗಡೆ ಭಾಗ್ಯವನ್ನು ಅನ್ವಯಿಸಬೇಕೆಂದು ಗಾಂಧಿ ಆಗ್ರಹಿಸಿದರು. ʼಹಿರಿಯ ಸಾವರ್ಕರ್‌ ಮೇಲೆ ಆರೋಪಿಸಲಾಗಿರುವ ಎಲ್ಲ ಆರೋಪಗಳು ಸಾಮಾನ್ಯ ಸ್ವಭಾವದವು. ಆತ ನೇರವಾಗಿ ಅಕ್ರಮಗಳಲ್ಲಿ ಭಾಗಿಯಾಗಿಲ್ಲ. ವಿವಾಹಿತನಾಗಿರುವ ಆತನಿಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಅವರಿ ತೀರಿ ಹೋದರು. ಸುಮಾರು ಹದಿನೆಂಟು ತಿಂಗಳುಗಳ ಹಿಂದೆ ಪತ್ನಿಯೂ ತೀರಿ ಹೋದರು. …ಇನ್ನೊಬ್ಬ ಸಹೋದರ… ಲಂಡನ್ನಿನಲ್ಲಿ ನಡೆಸಿದ ಕೃತ್ಯಗಳ ಆಧಾರದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಅವರು ೧೯೧೧ರ ಕೊಲೆಯ ಗೂಢಾಲೋಚನೆ ಪ್ರಕರಣದಲ್ಲಿ ಬಂಧಿತರಾದವರು. ಅವರ ವಿರುದ್ಧವೂ ಹಿಂಸಾತ್ಮಕ ಚಟುವಟಿಕೆಗಳು ಸಾಬೀತಾಗಿಲ್ಲ.ʼ<sup></sup></p>



<p>ನಾರಾಯಣ ರಾವ್‌, ತನ್ನ ಅಣ್ಣಂದಿರ ಬಿಡುಗಡೆಯನ್ನು ಗುರಿಯಾಗಿಟ್ಟುಕೊಂಡು ಹಲವು ಅರ್ಜಿಗಳನ್ನು ಕಳುಹಿಸಿದ. ನಾವು ಈಗಾಗಲೆ ಕಂಡ ಹಾಗೆ ೧೯೧೫ರಲ್ಲಿ ವಿನಾಯಕ್‌ ಪತ್ನಿ ಯಮುನ ಮತ್ತು ಬಾಬಾರಾವ್‌ ಪತ್ನಿ ಯೆಶುವಾಹಿನಿ ಒಂದೊಂದು ದಯಾ ಅರ್ಜಿಯನ್ನು ಹಾಕಿದ್ದರು. ೧೯೨೦ರಲ್ಲಿ ವಿನಾಯಕ್‌ ಕಳುಹಿಸಿದ, ನಾವು ಕಳೆದ ಅಧ್ಯಾಯದಲ್ಲಿ ಗಮನಿಸಿದ ಅರ್ಜಿಯನ್ನೂ ಬ್ರಿಟಿಷ್‌ ಅಧಿಕಾರಿಗಳು ತಳ್ಳಿ ಹಾಕಿದರು. ಕ್ಷಮಾಪಣೆಯನ್ನು ಇನ್ನಷ್ಟು ವಿಸ್ತರಿಸುವ ಕುರಿತು ನಾವು ಯೋಚಿಸಿಲ್ಲ ಎಂದು ಸರಕಾರ ಅದಕ್ಕೆ ಕಾರಣವಾಗಿ ತಿಳಿಸಿತ್ತು.</p>



<p>ಅಂಡಮಾನ್‌ ಬದುಕಿನ ಸಮಯದಲ್ಲಿ ಮುಸ್ಲಿಂ ವಿರೋಧವನ್ನು ಎತ್ತಿಹಿಡಿದಿದ್ದ ಸಾವರ್ಕರ್‌ಗೋಸ್ಕರ ಬಾಂಬೆ ಲೆಜಿಸ್ಲೇಟಿವ್‌ ಅಸೆಂಬ್ಲಿಯಲ್ಲಿ ದನಿಯೆತ್ತಿದ್ದು ಮಾತ್ರ ಮುಸ್ಲಿಂ ಸದಸ್ಯನಾಗಿದ್ದ ಮುಹಮ್ಮದ್‌ ಫಯಾಜ್‌ ಖಾನ್.‌ ಅಸೆಂಬ್ಲಿ ದಾಖಲೆಗಳ ಪ್ರಕಾರ ೧೯೨೧ ಫೆಬ್ರವರಿ ೧೫ರ ಅಲಹಾಬಾದಿನಿನಂದ ಪ್ರಸಾರವಾಗುತ್ತಿದ್ದ <em>ಲೀಡರ್</em>‌ ಪತ್ರಿಕೆಯಲ್ಲಿ ಸಾವರ್ಕರ್‌ ಸಹೋದರರ ಕುರಿತು ಬಂದ ಸುದ್ದಿಯನ್ನು ಮುಂದಿಟ್ಟುಕೊಂಡು ಫಯಾಜ್‌ ಖಾನ್‌ ಅಸೆಂಬ್ಲಿಯಲ್ಲಿ ಪ್ರಶ್ನೆಗಳನ್ನು ಎತ್ತಿದ್ದರು. ಅಸೆಂಬ್ಲಿ ದಾಖಲೆಗಳಿಂದ ನಮಗೆ ಸಿಗುವ ಪ್ರಶ್ನೆಗಳು ಇಂತಿವೆ:</p>



<ol class="wp-block-list" style="list-style-type:lower-alpha">
<li>ಕಳೆದ ಹನ್ನೊಂದೋ ಹನ್ನೆರಡೋ ವರ್ಷಗಳಿಂದ ಅವರನ್ನು ಸೆಲ್ಲಿನೊಳಗೆ ಕಠಿಣ ಬಂಧನದಲ್ಲಿಡಲಾಗಿದೆ.</li>



<li>ಅವರಿಗೆ ಕಠಿಣವಾದ ಕೆಲಸಗಳನ್ನು ವಹಿಸಲಾಗಿದೆ.</li>



<li>ಇಬ್ಬರಲ್ಲಿ ಹಿರಿಯ ಸಹೋದರನಿಗೆ, ಗಣೇಶ್‌ ದಾಮೋದರ್‌ಗೆ ಜ್ವರ ಮತ್ತು ದೇಹತೂಕ ಇಳಿತ ದಿನೇ ದಿನೇ ಕಾಡುತ್ತಿದೆ.</li>



<li>ಮೆಡಿಕಲ್‌ ಆಫೀಸರ್‌ ಆತನಿಗೆ ಕ್ಷಯದ ಔಷಧೋಪಚಾರಗಳನ್ನು ಮಾಡುತ್ತಿದ್ದಾರೆ.</li>



<li>ಆಸ್ಪತ್ರೆ ಸೂಚಿಸಿದ ಆಹಾರವನ್ನು ಆತನಿಗೆ ನೀಡಲಾಗುತ್ತಿದೆಯಾದರೂ, ಸೆಲ್ಲಿನಿಂದ ಹೊರಗೆ ಬಿಡದೆ ಬಂಧನದಲ್ಲಿಡಲಾಗಿದೆ.</li>
</ol>



<p>ಈ ಮೇಲಿನ ವಿಷಯಗಳು ನಿಜವಾಗಿದ್ದರೆ ಕೆಳಗಿನ ಸಂಗತಿಗಳಿಗೆ ಸ್ಪಷ್ಟತೆಯನ್ನು ನೀಡಬೇಕೆಂದು ನಾನು ಸರಕಾರದ ಬಳಿ ಕೇಳಿಕೊಳ್ಳುತ್ತಿದ್ದೇನೆ.</p>



<ol class="wp-block-list" style="list-style-type:upper-alpha">
<li>ಈ ಸಹೋದರರ ಮೇಲೆ ನಡೆಯುತ್ತಿರುವ ಈ ದಬ್ಬಾಳಿಕೆ ಸರಕಾರದ ಸಮ್ಮತಿಯೊಂದಿಗೆ ನಡೆಯುತ್ತಿದೆಯೇ?</li>



<li>ಈ ದಬ್ಬಾಳಿಕೆ ಸರಕಾರದ ನೀತಿ ಮತ್ತು ಆಗ್ರಹಗಳಿಗೆ ವಿರುದ್ಧವಾಗಿದ್ದರೆ, ಇದನ್ನು ನಡೆಸಿದ ಅಧಿಕಾರಿಗಳ ವಿರುದ್ಧ ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಸರಕಾರ ಉದ್ದೇಶಿಸಿದೆ.</li>



<li>ಅಂಡಮಾನಿಗೆ ತನ್ನ ಕುಟುಂಬವನ್ನು ಕರೆತರಲು ಅವರಿಗೆ ಸಮ್ಮತಿ ನಿರಾಕರಿಸಲಾಯಿತು ಎಂಬುದು ನಿಜವಾಗಿದ್ದರೆ, ಹತ್ತು ವರ್ಷಗಳ ಜೈಲುವಾಸ ಅನುಭವಿಸಿದ ನಂತರ ಶಿಕ್ಷಾನಿಯಮಗಳ ಪ್ರಕಾರ ಇರುವ ಅನುಕೂಲತೆಗಳು ಯಾವಾಗ ಅವರಿಗೆ ದೊರೆಯುತ್ತವೆ.</li>
</ol>



<p>ಈ ಪ್ರಶ್ನೆಗಳಿಗೆ ದೊರೆತ ಉತ್ತರವನ್ನು ಕೆಳಗೆ ನೀಡಲಾಗಿದೆ:</p>



<ol class="wp-block-list" style="list-style-type:upper-alpha">
<li>ಅಂಡಮಾನ್‌ ತಲುಪಿದ ದಿನದಿಂದ ಸಾವರ್ಕರ್‌ ಸಹೋದರರು ಜೈಲಿನಲ್ಲಿದ್ದಾರಾದರೂ ಅದು ಕಠಿಣ ಬಂಧನವಲ್ಲ. ಅವರು ರಾತ್ರಿ ಹೊತ್ತು ಸೆಲ್ಲಿನಲ್ಲಿ ಮಲಗುತ್ತಾರೆ ಮತ್ತು ಹಗಲಿನಲ್ಲಿ ಹೊರಗಡೆ ಕೆಲಸ ಮಾಡುತ್ತಾರೆ.</li>



<li>ಅವರ ಕೆಲಸಗಳು ಸಣ್ಣ ಮಟ್ಟಿನ ದೈಹಿಕ ಶ್ರಮ ಬೇಡುವಂತವು ಮಾತ್ರ.</li>



<li>ಗಣೇಶ್ ವೈದ್ಯರ ನಿಗಾದಲ್ಲಿದ್ದಾರೆ. ಒಂದು ಸಂಜೆ ಅವರ ದೇಹದ ಉಷ್ಣತೆ ೯೯ ಡಿಗ್ರಿ ತನಕ ಏರಿತು. ದೇಹತೂಕ ೧೧೦ ಪೌಂಡ್.‌ ಹತ್ತು ವರ್ಷಗಳ ಹಿಂದೆ ಇಲ್ಲಿ ತಲುಪಿದ ಸಮಯದಲ್ಲಿ ತೂಕ ೧೧೩ ಪೌಂಡ್‌ ಆಗಿತ್ತು.</li>
</ol>



<p>d ಮತ್ತು e. ಆವರ ರೋಗ ಕ್ಷಯವೆಂದು ಪರೀಕ್ಷೆಯಲ್ಲಿ ಸಾಬೀತಾಗಿಲ್ಲ. ಆದರೆ, ಮುಂಜಾಗ್ರತೆ ಎಂಬ ನೆಲೆಯಲ್ಲಿ ಸೆಲ್ಲಿಗೆ ತಾಗಿಕೊಂಡಿರುವ ವರಾಂಡದಲ್ಲಿ ಅವರಿಗೆ ವ್ಯವಸ್ಥೆ ಮಾಡಲಾಗಿದೆ.</p>



<p>ಅದರ ನಂತರ ವಿಠ್ಠಲ್‌ ಭಾಯ್‌ ಪಟೇಲ್‌, ಜಿ.ಎಸ್‌. ಖಪಾರ್ಡೆ ಮೊದಲಾದವರು ೧೯೨೧ರಲ್ಲಿ ಸಾವರ್ಕರ್‌ ಬಿಡುಗಡೆಯ ಕುರಿತು ಅಸೆಂಬ್ಲಿಯಲ್ಲಿ ದನಿಯೆತ್ತಿದರು. ೧೯೨೧ ಮಾರ್ಚ್‌ ತಿಂಗಳಲ್ಲಿ ರಂಗಸ್ವಾಮಿ ಅಯ್ಯಂಗಾರ್‌ ಮಂಡಿಸಿದ ನಿರ್ಣಯದಲ್ಲಿ ಸಂವಿಧಾನಬದ್ಧವಾಗಿ ಬದುಕಲು ಸಾವರ್ಕರ್‌ ತೆಗೆದುಕೊಂಡ ನಿಲುವು ಪರಮಸತ್ಯವೆಂದು ಹೇಳಲಾಗಿದೆ. ಸ್ವತಃ ಸಾವರ್ಕರ್‌ ಮತ್ತು ನಂತರದ ಕಾಲದಲ್ಲಿ ಸಾವರ್ಕರೈಟುಗಳು ಎಂದು ಗುರುತಿಸಿಕೊಂಡಿರುವ ಶಿಷ್ಯಗಣಗಳು ನಿರಂತರವಾಗಿ ನಿರಾಕರಿಸಿಕೊಂಡು ಬಂದಿರುವ ವಾಸ್ತವವನ್ನು ಇಲ್ಲಿ ರಂಗಸ್ವಾಮಿ ಅಯ್ಯಂಗಾರ್‌ ನಿಜವೆಂದೇ ಒಪ್ಪಿಕೊಳ್ಳುತ್ತಿದ್ದಾರೆ.</p>



<p>ಈ ನಡುವೆ ಅಂಡಮಾನ್‌ ಜೈಲಿನ ಮುಖ್ಯ ಉತ್ಪನ್ನಗಳಲ್ಲಿ ಒಂದಾಗಿದ್ದ ಕೊಬ್ಬರಿ ಎಣ್ಣೆಯ ತಯಾರಿಯ ಮುಂದಾಳಾಗಿ ಸಾವರ್ಕರ್‌ ಅವರನ್ನು ನೇಮಿಸಲಾಗಿತ್ತು. ಪ್ರತಿ ತಿಂಗಳು ಒಂದು ರೂಪಾಯಿ ಸಂಬಳ ಲಭಿಸುತ್ತಿತ್ತು. ಇದರ ಜೊತೆಗೆ ಹಿಂದಿ ರಾಷ್ಟ್ರಭಾಷೆಯಾಗಬೇಕೆಂಬ ನಿಟ್ಟಿನಲ್ಲಿ ಪ್ರಚಾರ ಕಾರ್ಯಗಳನ್ನು <em>ಶುದ್ಧಿಚಳುವಳಿ</em>ಯ ಜೊತೆಗೆ ನಡೆಸುತ್ತಿದ್ದರು. ನಂತರದ ಕಾಲದ ಹಿಂದುತ್ವದ ಶಕ್ತಿಶಾಲಿ ಘೋಷಣೆಗಳಲ್ಲಿ ಒಂದಾದ ಹಿಂದು, ಹಿಂದಿ, ಹಿಂದೂಸ್ತಾನ್‌ ಎಂಬುದರಲ್ಲಿ ಮೊದಲೆರಡು ಚಟುವಟಿಕೆಗಳನ್ನು ಸಾವರ್ಕರ್‌ ಅಂಡಮಾನಿನಲ್ಲಿಯೇ ಆರಂಭಿಸಿದ್ದರು. <em>ಅಭಿನವ್‌ ಭಾರತ್‌</em>ನ ಭಾಷಾ ಶೈಲಿಯಲ್ಲಿಯೇ ಇದರ ನೆರಳು ಕಾಣಬಹುದಾಗಿತ್ತು. ದೇವನಾಗರಿ ಲಿಪಿಯನ್ನು ಭಾರತದ ಎಲ್ಲ ಭಾಷೆಗಳ ಬರವಣಿಗೆಗೆ ಬಳಸಬೇಕೆಂಬುದು <em>ಅಭಿನವ್‌ ಭಾರತ್‌ </em>ಮುಂದಿಟ್ಟಿದ್ದ ಲಿಪಿ ಪರಿಕಲ್ಪನೆ. ಮರಾಠಾ ಪ್ರಾಂತ್ಯದ ಹೊರಗೆ ಹಿಂದೂ ಸಂಘಟನಾತ್ಮಕ ಚಳುವಳಿಗೆ ಮುಂದಾಳುತ್ವ ನೀಡಿದ್ದ <em>ಆರ್ಯಸಮಾಜ</em> ತರಹದ ಸಂಘಟನೆಗಳು ಮತ್ತು ಬನಾರಸಿನ <em>ನಗರಪ್ರಚಾರಿಣಿ ಸಭೆ</em>ಗಳು ಹಿಂದಿ ಮತ್ತು ದೇವನಾಗರಿ ಲಿಪಿಗಳಿಗೆ ದೊಡ್ಡ ಮಟ್ಟದ ಪ್ರಚಾರ ಕಾರ್ಯಗಳನ್ನು ನಡೆಸಿದವು.</p>



<p>ಹಿಂದಿ ಎಂಬ ಭಾಷೆಯ ಮೇಲಿನ ಪ್ರೀತಿಗಿಂತ ಉರ್ದು ಭಾಷೆಯ ಮೇಲಿನ ದ್ವೇಷವೇ ಹಿಂದೂ ಸಂಘಟಬೆಗಳ ಹಿಂದಿ ಪ್ರೇಮದ ಹಿನ್ನೆಲೆಯಲ್ಲಿ ಕೆಲಸ ಮಾಡಿತ್ತು. ಜೊತೆಗೆ ದೇವನಾಗರಿ ಲಿಪಿಗಾಗಿ ವಾದಿಸುವುದರ ಹಿಂದೆ ಸಂಸ್ಕೃತದ ಮೇಲಿನ ಮೋಹವೂ ಇತ್ತು. ಹಿಂದುತ್ವ ರಾಜಕಾರಣದ ಮೂಲಬಿಂದುವೆಂದು ಕರೆಯಬಹುದಾದ ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮಿನ ಅತ್ಯಂತ ಪ್ರಮುಖ ಮುಖಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವುದು ಮುಸ್ಲಿಂ ವಿರೋಧಿತನ ಆಗಿತ್ತು. ಅದು ಸಾಮಾಜಿಕವಾಗಿ ಮಾತ್ರ ಪ್ರಕಟಗೊಂಡಿರಲಿಲ್ಲ. ಸಂಸ್ಕೃತಿಯೊಳಗೆ ನುಸುಳುವುದು ಆರಂಭದಿಂದಲೂ ಅದರ ಶೈಲಿಯಾಗಿತ್ತು. ಸರಕಾರಿ ದಾಖಲೆಗಳೆಲ್ಲವೂ ಉರ್ದು ಭಾಷೆಯಲ್ಲಿ ಇರುತ್ತಿದ್ದವು. ಉರ್ದು ಭಾಷೆಯನ್ನು ಬರೆಯಲು ಬಳಸುವ ಪರ್ಷಿಯನ್‌ ಲಿಪಿಯಲ್ಲಿಯೇ ಹಿಂದಿ ಭಾಷೆಯನ್ನೂ ಬರೆಯಲಾಗುತ್ತಿತ್ತು. ಭಾಷೆಗೆ ಧಾರ್ಮಿಕತೆಯನ್ನು ಲೇಪಿಸುವುದು ನವ-ಸಂಪ್ರದಾಯವಾದಿ ರಾಜಕೀಯ ಬ್ರಾಹ್ಮಣಿಸಮ್ಮಿನ ಮುಖ್ಯ ಸಾಂಸ್ಕೃತಿಕ ಹಸ್ತಕ್ಷೇಪ. ಈ ಹಸ್ತಕ್ಷೇಪವನ್ನೇ ಸಾವರ್ಕರ್‌ ಜೈಲೊಳಗೆ ನಡೆಸುತ್ತಿದ್ದದ್ದು. ಶಾಲೆಗಳಲ್ಲಿ ಉರ್ದು ಭಾಷೆಯನ್ನು ಮುಖ್ಯ ಭಾಷೆಯಾಗಿ ಕಲಿಸುವುದರ ವಿರುದ್ಧವೂ ಸಾವರ್ಕರ್‌ ಇದೇ ಹೊತ್ತಲ್ಲಿ ದನಿಯೆತ್ತಿದ್ದರು.</p>



<p>೧೯೨೦ ಆಗಸ್ಟ್‌ ೧ರಂದು ಬಾಲಗಂಗಾಧರ ತಿಲಕ್‌ ನಿಧನ ಹೊಂದಿದರು. ಕಾಂಗ್ರೆಸ್ಸನ್ನು ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಬೃಹತ್‌ ಚಳುವಳಿಯಾಗಿಸುವ ಕನಸು ಕೈ ಮೀರಿ ಹೋಗಿತ್ತು. ಗಾಂಧಿ ಅದನ್ನು ಬಹುಜನ ಚಳುವಳಿಯಾಗಿ ಬೆಳೆಸಲು ಅತಿ ಕಠಿಣವಾಗಿ ದುಡಿಯುತ್ತಿದ್ದರು. ಮುಸ್ಲಿಮರನ್ನು ಜೊತೆಸೇರಿಸಿಕೊಂಡು ಮಾತ್ರವೇ ಅದು ಸಾಧ್ಯವಾಗುವುದು ಎಂದು ಭಾರತದ ಬಹುತ್ವದ ಮೂಲಭೂತ ಅರಿವು ಇರುವ ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದ್ದ ವಾಸ್ತವಕ್ಕೆ ಗಾಂಧಿ ತಲುಪಿದ್ದರು. ಹಿಂದೂ ಸಂಘಟನಾ ಚಳುವಳಿಗಳು ವಿವಿಧ ಜಾತಿಗಳ ಜನರನ್ನು ಒಂದೇ ಕೊಡೆಯಡಿಗೆ ತರುವ ಪ್ರಯತ್ನದಲ್ಲಿ ಮುಳುಗಿದ್ದಾಗ, ಗಾಂಧಿ ಭಾರತದ ಬಹುತ್ವವನ್ನು ಒಂದು ಸಾಮುದಾಯಿಕ ಸಂಗೀತದ ಕಡೆಗೆ, ಸಾಮಾಜಿಕ ಬದುಕು ಮತ್ತು ರಾಜಕೀಯ ಬದುಕುಗಳ ನಡುವಿನ ಸಾಮಾನ್ಯ ರಂಗಕ್ಕೆ, ಸಂಗ್ರಹಿಸುವ ಪ್ರಯತ್ನದಲ್ಲಿ ಮುಳುಗಿದ್ದರು. ಇದು ಸಹಜವಾಗಿಯೇ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮನ್ನು ಸಂಘರ್ಷಕ್ಕೆ ಈಡು ಮಾಡಿತು. ಸಾಮ್ರಾಜ್ಯಶಾಹಿ ವಿರೋಧ ಗಾಂಧಿಯನ್‌ ರಾಜಕಾರಣದ ಕೇಂದ್ರಬಿಂದುವಾಗಿ ಬದಲಾಗಿತ್ತು. ಅದೇ ಹೊತ್ತು ಬ್ರಿಟಿಷ್‌ ವಿರೋಧ ಎಂಬುದು ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಅಜೆಂಡಾದಿಂದ ಸಂಪೂರ್ಣವಾಗಿ ಮಾಯವಾಗಿತ್ತು.</p>



<p>ಟರ್ಕಿಯ ಅಟೋಮನ್‌ ಸಾಮ್ರಾಜ್ಯ ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಜರ್ಮನಿ ನೇತೃತ್ವದ ಶಕ್ತಿಗಳೊಂದಿಗೆ ಸೇರಿಕೊಂಡು ಬ್ರಿಟನ್‌ ಸದಸ್ಯ ರಾಷ್ಟ್ರವಾಗಿದ್ದ ಮಿತ್ರರಾಷ್ಟ್ರಗಳ ವಿರುದ್ಧ ಯುದ್ಧಕ್ಕೆ ಹೊರಟದ್ದನ್ನು ನಾವು ಈಗಾಗಲೇ ಚರ್ಚಿಸಿದೆವು. ಯುದ್ಧದ ಕೊನೆಯಲ್ಲಿ ಟರ್ಕಿ ಸೋತರೂ ಕೂಡ ಬ್ರಿಟಿಷ್ ಪ್ರಧಾನ ಮಂತ್ರಿ ಲಾಯ್ಡ್‌ ಜಾರ್ಜ್‌ ಮತ್ತು ಅಮೇರಿಕಾ ಅಧ್ಯಕ್ಷ ವುಡ್ರೋ ವಿಲ್ಸನ್‌ ಸೇರಿಕೊಂಡು ಟರ್ಕಿ ಸುಲ್ತಾನ್‌ ಮತ್ತು ಇಸ್ಲಾಂ ಚರಿತ್ರೆಯಲ್ಲಿ ಮುಖ್ಯ ಪಾತ್ರ ವಹಿಸುವ ಖಲೀಫಾಗೆ, ಯುದ್ಧದಲ್ಲಿ ಸೋತರೂ ಕೂಡ, ಗೌರವಯುತವಾದ ರಾಜಿ ಒಪ್ಪಂದಗಳ ವಾಗ್ದಾನ ನೀಡಿದ್ದರು. ಆದರೆ, ಕೊನೆಗೆ ಅವರು ಅದು ಯಾವುದನ್ನೂ ಪಾಲಿಸದೆ ಟರ್ಕಿಯನ್ನು ಒಡೆದು ಚೂರು ಮಾಡಿದರು. ಟರ್ಕಿ ವಿಭಜನೆಗೊಂಡು ಒಂದು ಭಾಗ ಗ್ರೀಸ್‌ಗೂ ಇನ್ನೊಂದು ಭಾಗ ಬ್ರಿಟನ್‌ ಮತ್ತು ಫ್ರಾನ್ಸ್‌ಗಳಿಗೂ ಲಭಿಸಿತು. ಖಲೀಫಾ ಬರಿಯ ನೆರಳು ಮಾತ್ರವಾಗಿ ಬದಲಾದ.</p>



<p>ಇದರ ಅಲೆಗಳು ಇಂಡಿಯನ್‌ ಮುಸ್ಲಿಮರ ನಡುವೆಯೂ ಮಾರ್ದನಿಸಿತು. ಮೌಲಾನಾ ಮುಹಮ್ಮದ್‌ ಅಲಿ ಜೌಹರ್‌, ಶೌಕತ್‌ ಅಲಿ, ಮೌಲಾನಾ ಅಬುಲ್‌ ಕಲಾಂ ಆಝಾದ್‌, ಹಕೀಂ ಅಜ್ಮಲ್‌ ಖಾನ್‌ ಮೊದಲಾದವರು ಸೇರಿಕೊಂಡು ಈ ವಿಷಯದ ಮೇಲೆ ರಚಿಸಿದ ಮೈತ್ರಿಕೂಟದೊಂದಿಗೆ ಗಾಂಧಿಯೂ ಸಹಮತ ಸೂಚಿಸಿದರು. ೧೯೧೯ ನವೆಂಬರ್‌ ೨೩ರಂದು ಗಾಂಧಿಯನ್ನು ಖಿಲಾಫತ್‌ ಚಳುವಳಿಯ ಅಧ್ಯಕ್ಷನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಲ್ಲಿಯ ತನಕ ಕಾಣದಿದ್ದ ರೀತಿಯಲ್ಲಿ ಹಿಂದೂ ಧರ್ಮದ ವಿಭಿನ್ನ ಜಾತಿಗಳ ಜನರು ಮತ್ತು ಮುಸ್ಲಿಮರು ಸಾಮ್ರಾಜ್ಯಶಾಹಿ ವಿರೋಧವನ್ನೇ ತಮ್ಮ ಮೂಲಭೂತ ಧ್ಯೇಯವಾಗಿಸಿ ರಾಜಕಾರಣದಲ್ಲಿ ಕೈಗೂಡಿಸಿದರು. ಇದು ತಿಲಕರ ವಾರೀಸುದಾರರಾಗಿದ್ದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸ್ಟ್‌ಗಳಿಗೆ ಅರಗಿಸಿಕೊಳ್ಳುವ ಸಂಗತಿಯಾಗಿರಲಿಲ್ಲ. ಅವರಿಗೆ ಮತ್ತು ಇತರ ರೀತಿಯಲ್ಲಿ ಭಿನ್ನಮತ ಹೊಂದಿದ್ದವರಿಗೆ ೧೯೨೦ ಜೂನ್‌ ೨ರ <em>ಯಂಗ್‌ ಇಂಡಿಯಾ</em>ದಲ್ಲಿ ಗಾಂಧಿ ಉತ್ತರ ನೀಡಿದರು.</p>



<p>‘ಭಾರತದ ಮುಹಮ್ಮದೀಯರ ಬಗ್ಗೆ ನನಗೆ ಆಸಕ್ತಿ ಇಲ್ಲದಿರುತ್ತಿದ್ದರೆ ಟರ್ಕಿಯ ಕ್ಷೇಮ ಸಮಾಚಾರದಲ್ಲಿ ಆಸ್ಟ್ರಿಯಾ ಅಥವಾ ಪೋಲೆಂಡಿನ ಸಮಾಚಾರದಂತೆ ನನಗೆ ಯಾವ ಆಸಕ್ತಿಯೂ ಇರುತ್ತಿರಲಿಲ್ಲ. ಆದರೆ, ಒಬ್ಬ ಭಾರತೀಯನೆಂಬ ನೆಲೆಯಲ್ಲಿ ಸಹ ಭಾರತೀಯನ ದುರಿತಗಳನ್ನೂ ಯೋಚನೆಗಳನ್ನೂ ಹಂಚಿಕೊಳ್ಳಬೇಕಾಗಿರುವುದು ನನ್ನ ಕರ್ತವ್ಯ. ಹಿಂದೂಗಳಿಗೆ ಮುಹಮ್ಮದೀಯರೊಂದಿಗೆ ಕೈ ಜೋಡಿಸಲು ಇರುವ ವ್ಯಾಪ್ತಿ… ಅದಕ್ಕಿರುವ ಸುಲಭ ದಾರಿ ಎಂದರೆ… ನನ್ನ ಮುಹಮ್ಮದೀಯ ಸ್ನೇಹಿತನಿಗಾಗಿ, ನ್ಯಾಯಯುತವಾದ ಕಾರ್ಯವೊಂದರಲ್ಲಿ, ಇನ್ನಿಲ್ಲದ ಹಾಗೆ ಸಹಿಷ್ಣುತೆ ಹೊಂದುವುದೇ ಆಗಿದೆ. ಆದ್ದರಿಂದ ನಾನು ಆ ದಾರಿಯ ಕೊನೆಯವರೆಗೆ ಆತನ ಜೊತೆ ನಡೆಯಬಲ್ಲೆ̤.ʼ<sup></sup></p>



<p>ತಿಲಕರ ಹಾಗೆ, ಅದರ ನಂತರ ಸಾವರ್ಕರ್‌ ಹಾಗೆ ಚಿತ್ಪಾವನ ಬ್ರಾಹ್ಮಣರೊಂದಿಗೋ ಅಥವಾ ಬ್ರಾಹ್ಮಣ ಕುಲದೊಂದಿಗೋ ಮಾತ್ರ ಸಂವಾದ ನಡೆಸುವ ಮಾತು ಅದಾಗಿರಲಿಲ್ಲ. ಸಾಮಾಜಿಕ ಪ್ರಾಬಲ್ಯವನ್ನು ವಾಸ್ತವವಾಗಿಟ್ಟುಕೊಂಡಿದ್ದ ಸಂಪ್ರದಾಯವಾದಿ ಬ್ರಾಹ್ಮಣರನ್ನು ರಾಜಕೀಯದಲ್ಲೂ ಮೇಲುಗೈ ಸಾಧಿಸುವವರನ್ನಾಗಿಸಲು, ಅದರ ಫಲಾನುಭವಿಗಳನ್ನಾಗಿಸಲು ಪ್ರೇರೇಪಿಸುವ, ಪ್ರಗತಿಪರ ವಿಚಾರಧಾರೆಯ ವಕ್ತಾರರನ್ನು ಹಿಮ್ಮೆಟ್ಟಿಸುವ, ಇತರ ಧರ್ಮಗಳೊಂದಿಗೆ ಸಂವಾದ ಸಾಧ್ಯವಲ್ಲದ ಒಂದೇ ಒಂದು ಪದವಾಗಲೀ, ಮಾತಾಗಲೀ ಅದರಲ್ಲಿ ಇರಲಿಲ್ಲ. ಅದು ಮಾತನಾಡುತ್ತಿರುವುದು ಹಿಂದೂ ಎಂಬ ವಿಶಾಲ ವ್ಯಾಪ್ತಿಯಲ್ಲಿ ಇರುವವರೊಂದಿಗೆ ಹೌದಾದರೂ, ತಮ್ಮೊಳಗೆ ಕೇಂದ್ರೀಕರಿಸಲು ಇಲ್ಲಿ ಹೇಳುತ್ತಿಲ್ಲ. ಬದಲಿಗೆ ಸುತ್ತಲು ವ್ಯಾಪಿಸಿಕೊಂಡು ಬೆಳೆಯುವ ಮಾತು ಇಲ್ಲಿದೆ. ಗೋಖಲೆ ಮತ್ತು ಅಗರ್ಕರ್‌ ಅವರುಗಳ ಬೌದ್ಧಿಕ ತಾಲೀಮುಗಳೂ ಇದರಲ್ಲಿ ಕಾಣಿಸುವುದಿಲ್ಲ. ಬದಲಿಗೆ, ತಮ್ಮೊಳಗೆ ಬೌದ್ದಿಕತೆ ಬೆಳೆಯುವುದಲ್ಲಿ, ತಾವು ಯಾರ ಬಳಿ ಹೋಗಿ ನಿಲ್ಲಬೇಕಾಗಿದೆಯೋ ಆ ಒರೆಗಲ್ಲಿನಲ್ಲಿ ಬೌದ್ದಿಕತೆ ಬೆಳೆಯಬೇಕಾಗಿರುವುದು ಎಂಬ ಹೊಸತೇ ಒಂದು ದರ್ಶನವನ್ನು ಇಲ್ಲಿ ಕಾಣಬಹುದು. ಶರೀರದ ಮೂಲಕವೂ, ಚಿಂತನೆಗಳ ಮೂಲಕವೂ ಸಹಿಷ್ಣುತೆ ಹೊಂದುವುದರಿಂದ ಸಮಾನತೆಯಿಂದ ಕೂಡಿದ ಸಾಂಸ್ಕೃತಿಕ ಮತ್ತು ಸಾಮಾಜಿಕ ವಾತಾವರಣ ನಿರ್ಮಿಸುವುದು ಸಾಧ್ಯ ಎಂಬ ಅಪಾರ ಆತ್ಮವಿಶ್ವಾಸವನ್ನೂ ಇಲ್ಲಿ ಕಾಣಬಹುದು.</p>



<p>ಆ ಹೊಸ ದನಿ ಹೊಸ ರಾಜಕಾರಣವನ್ನು ಹುಟ್ಟು ಹಾಕಿತು. ಅದು ಸೃಷ್ಟಿಸಿದ ಹೊಸ ಶಕ್ತಿ ಅಸಹಕಾರ ಚಳುವಳಿಯಲ್ಲಿ ಭಾರತದ ಎಲ್ಲ ಜಾತಿಯ ಜನರ ಜೊತೆಗೆ ಮುಸ್ಲಿಮರನ್ನೂ ಅಣಿನೆರೆಸಲು ಸಾಧ್ಯವಾಗಿಸಿತು. ಹಳೆಯ ರಾಜಕಾರಣವನ್ನು ಅದು ಹಿಮ್ಮೆಟ್ಟಿಸಿತು.</p>



<p>೧೯೨೧ ಜಜವರಿ ೧೯ರಂದು ಗುಜರಾತಿನಲ್ಲಿ ಗಾಂಧಿ ಮಾಡಿದ ಭಾಷಣದಲ್ಲೂ ಈ ಹೊಸ ಭಾಷೆಯನ್ನು ಕಾಣಬಹುದು.</p>



<p>ʼಹಿಂದೂ ಸನ್ಯಾಸಿಗಳ ಬಳಿ ನಾನು ಹೇಳುವುದೇನೆಂದರೆ, ಅವರು ತಮ್ಮೆಲ್ಲವನ್ನು ಖಿಲಾಫತಿಗೋಸ್ಕರ ತ್ಯಾಗ ಮಾಡುತ್ತಾರಾದರೆ, ಹಿಂದೂ ಧರ್ಮವನ್ನು ರಕ್ಷಿಸಲು ಬೇಕಾಗಿ ಮಾಡುವ ಅತ್ಯಂತ ದೊಡ್ಡ ಕಾರ್ಯ ಅದಾಗಿರುತ್ತದೆ. ಇಂದು ಮುಸ್ಲಿಮರನ್ನು ಆಪತ್ತಿನಿಂದ ರಕ್ಷಿಸಬೇಕಾಗಿರುವುದು ಪ್ರತಿಯೊಬ್ಬ ಹಿಂದೂವಿನ ಕರ್ತವ್ಯವಾಗಿದೆ. ನೀವು ಅದನ್ನು ಮಾಡುವುದೇ ಆದರೆ, ಹಿಂದೂಗಳನ್ನು ತಮ್ಮ ಸಹೋದರರಂತೆ ಕಾಣಲು ದೇವರು ಅವರನ್ನು ಪ್ರೇರೇಪಿಸುತ್ತಾನೆ. ಹಿಂದೂಗಳು ಮುಸ್ಲಿಮರನ್ನೂ ಗೆಳೆಯರಂತೆ ಕಾಣುತ್ತಾರೆ.ʼ</p>



<p>ತಿಲಕ್‌, ತಿಲಕೈಟ್‌ಗಳು, ಸಾವರ್ಕರ್‌, <em>ಅಭಿನವ್‌ ಭಾರತ್</em>‌, ಭಾಯ್‌ ಪರಮಾನಂದ್‌, ಬಂಗಾಲಿ ಕ್ರಾಂತಿಕಾರಿಗಳಲ್ಲಿ ಹಲವರು… ಇವರು ಯಾರು ಕೂಡ ಮಾತನಾಡಿದ ಭಾಷೆ ಅದಾಗಿರಲಿಲ್ಲ. ಹಳೆಯ ಜಾತ್ಯಾತೀತತೆಯ ಭಾಷೆಯೂ ಅಲ್ಲ. ಬದಲಿಗೆ, ಪ್ರಜಾಪ್ರಭುತ್ವ ಪ್ರಜ್ಞೆಯ ಅಧ್ಯಾತ್ಮವನ್ನಾಗಿ ಸೌಹಾರ್ದತೆಯನ್ನು ಪ್ರತಿಷ್ಠಾಪಿಸುವ ಭಾಷೆಯಾಗಿತ್ತದು. ೧೯೨೦ರ ನಾಗ್ಪುರ ಕಾಂಗ್ರೆಸ್‌ ಅಧಿವೇಶನದಲ್ಲೂ ಈ ಸ್ವರವನ್ನು ಗುರುತಿಸಬಹುದು. ಗಾಂಧಿಯ ಅಸಹಕಾರ ಚಳುವಳಿಯನ್ನು ರಾಜಕೀಯವಾಗಿ ಆ ಅಧಿವೇಶನ ಕೈಗೆತ್ತಿಕೊಂಡಿತ್ತು.</p>



<p>ಇದೇ ಹೊತ್ತು ಕ್ಷಮಾಪಣಾ ಪತ್ರಗಳ ಮೂಲಕ ಬ್ರಿಟಿಷರೊಂದಿಗೆ ಒಪ್ಪಂದಕ್ಕೆ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದ ವಿನಾಯಕ್‌, ಖಿಲಾಫತ್‌ ಚಳುವಳಿಯನ್ನು ಹೀಗಳೆಯುವ ಮೂಲಕ ಬ್ರಿಟಿಷರೊಂದಿಗೆ ಆತ್ಮೀಯತೆ ಸಾಧಿಸಬಹುದು ಎಂದು ಭಾವಿಸಿರಬಹುದು. ಅಥವಾ, ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ರಾಜಕೀಯ ಕೀಲಿಗೈಯಂತೆ ಮುಸ್ಲಿಂ ವಿರೋಧಿ ಚಿಂತನೆಯನ್ನು ಗಟ್ಟಿಗೊಳಿಸಿದ್ದ ಸಾವರ್ಕರ್‌ಗೆ ಹಿಂದೂ-ಮುಸ್ಲಿಂ ಸೌಹಾರ್ದತೆಯೆಂಬುದು ಬೆಚ್ಚಿ ಬೀಳಿಸುವ ಸಂಗತಿಯಾಗಿ ಕಂಡಿರಬಹುದು. ಖಿಲಾಫತನ್ನು ‌ʼಆಪತ್ʼ (ಆಪತ್ತು) ಎಂದು ಸಾವರ್ಕರ್‌ ಕರೆದಿದ್ದರು.</p>



<p>ಅಸಹಕಾರ ಚಳುವಳಿಯಲ್ಲಿ ಗಾಂಧಿ ಬಂಧಿತರಾದರು. ಗಾಂಧಿಯ ನಾಯಕತ್ವದಲ್ಲಿ ಭಿನ್ನಮತ ಹೊಂದಿದ ಮೋತಿಲಾಲ್‌ ನೆಹರು ಮತ್ತು ಚಿತ್ತರಂಜನ್‌ ದಾಸ್‌ ಕಾಂಗ್ರೆಸ್ಸಿಗೆ ರಾಜಿನಾಮೆ ನೀಡಿದರು. ತಿಲಕರ ಹಿಂಬಾಲಕ ಬ್ರಾಹ್ಮಣರು ಸೇರಿಕೊಂಡು ೧೯೨೨ರಲ್ಲಿ <em>ಸ್ವರಾಜ್‌ ಪಾರ್ಟಿ</em> ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದರು.</p>



<p>ಬ್ರಿಟಿಷರೊಂದಿಗೆ ನೇರ ಹಣಾಹಣಿಗೆ ಇಳಿದಿದ್ದ ಗಾಂಧಿ ಜೈಲು ಪಾಲಾಗುವ ಹಂತದಲ್ಲಿರುವಾಗ, ಅತ್ತ ಕಡೆ ಸಾವರ್ಕರ್‌ ಬ್ರಿಟಿಷರೊಂದಿಗೆ ಸ್ನೇಹ ಸಾಧಿಸಿ ಜೈಲಿನಿಂದ ಹೊರ ಬರುವ ಯೋಜನೆಯಲ್ಲಿದ್ದರು. ೫೦ ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿ ಅಂಡಮಾನ್‌ ಪಾಲಾಗಿದ್ದ ಸಾವರ್ಕರ್‌ಗೆ ೧೯೨೧ರಲ್ಲಿ ಅಲ್ಲಿಂದ ಬಿಡುಗಡೆ ಲಭಿಸುತ್ತದೆ. ಭಾರತ ಭೂಖಂಡಕ್ಕೆ ಜೈಲುಶಿಕ್ಷೆಯನ್ನು ವರ್ಗಾಯಿಸುವ ಆಜ್ಞೆ ಸಾವರ್ಕರ್‌ ಕೈ ಸೇರುತ್ತದೆ. ಕ್ಷಮಾಪಣಾ ಪತ್ರಗಳ ಅತಿಮುಖ್ಯ ಬೇಡಿಕೆ ನೆರವೇರಿಸದಿದ್ದರೂ ಒಂದು ಉಪ ಬೇಡಿಕೆಯನ್ನು ನೆರವೇರಿಸುವ ಮೂಲಕ ಭವಿಷ್ಯತ್ತಿನ ಹಸಿರು ಬಾವುಟವನ್ನು ಬ್ರಿಟಿಷರು ಸಾವರ್ಕರ್‌ ಎದುರಿಗೆ ಮೊದಲ ಬಾರಿ ಹಿಡಿದು ನಿಂತಿದ್ದರು. ಸಾವರ್ಕರನ್ನು ಸಾಮ್ರಾಜ್ಯಶಾಹಿಗೆ ಭಾರತದಲ್ಲಿ ಬಳಸಬಹುದಾದ ಬಲಿಷ್ಠ ಆಯುಧವಾಗಿ ಕಂಡ ಬ್ರಿಟಿಷರು, ವಿಲ್ಲಿ ಮತ್ತು ಜಾಕ್ಸನ್‌ ಕೊಲೆಗಳನ್ನು ಮರೆಯಲು ಪ್ರಯತ್ನಿಸಿದರು.</p>



<p>೧೯೨೧ ಮೇ ೨೬ರಂದು, ತನ್ನನ್ನು ಪೋರ್ಟ್‌ ಬ್ಲೇರಿಗೆ ಕೊಂಡು ಹೋಗಿದ್ದ ಅದೇ ಎಸ್‌.ಎಸ್. ಮಹಾರಾಜ ಹಡಗಿನಲ್ಲಿ ವಿನಾಯಕ್‌ ದಾಮೋದರ್‌ ಸಾವರ್ಕರ್‌ ಮತ್ತು ಗಣೇಶ್‌ ದಾಮೋದರ್‌ ಸಾವರ್ಕರ್‌ ಎಂಬ ಬಾಬಾರಾವ್‌ ಕಲ್ಕತ್ತಾ ತಲುಪಿದರು. ಅವರನ್ನು ಮೊದಲಿಗೆ ಅಲಿಪುರ ಜೈಲಿನಲ್ಲಿ ಇಡಲಾಗಿತ್ತು. ಅಲ್ಲಿ ಇಬ್ಬರು ಪೊಲೀಸರ ಮಾತುಕತೆಯ ಮೂಲಕ ತಾನು ಅಂಡಮಾನಿನಲ್ಲಿದ್ದಾಗ ಭಾರತದ ರಾಜಕಾರಣದಲ್ಲಿ ಗಾಂಧಿ ಎಷ್ಟೆಲ್ಲ ವ್ಯಾಪಿಸಿದರು ಎಂಬ ಬಗ್ಗೆ ಸಾವರ್ಕರ್‌ ಮೊದಲ ಬಾರಿಗೆ ಅರಿಯುವುದು. ರಾಜಕಾರಣದ ಗಡಿರೇಖೆಗಳಾಚೆ ಜನಪದ ಪುರಾಣಗಳ ನಾಯಕನಾಗಿ ಗಾಂಧಿ ಬದಲಾದ ದೃಷ್ಟಾಂತವನ್ನು ಪೊಲೀಸ್‌ ಸಿಪಾಯಿಗಳ ಸಂಭಾಷಣೆಯಲ್ಲಿ ಸಾವರ್ಕರ್‌ ಕೇಳಿಸಿಕೊಳ್ಳುವುದು. ಗಾಂಧಿ ಒಬ್ಬ ಮಹಾಯೋಗಿ, ಜೈಲು ಕೋಣೆಗಳನ್ನು ಬೇಧಿಸುವ ಯೋಗಶಕ್ತಿ ಗಾಂಧಿಗಿದೆ, ಆದ್ದರಿಂದ ಭಾರತದ ಸ್ವಾತಂತ್ರ್ಯ ಇನ್ನು ಬಹಳ ದೂರವೇನಿಲ್ಲ ಎಂಬುದು ಆ ಮಾತುಕತೆಯ ಸಾರವಾಗಿತ್ತು.</p>



<p>ಒಂದು ವಾರದ ನಂತರ ಅಲಿಪುರ ಜೈಲಿನಿಂದ ಬಾಂಬೆ ಪ್ರೆಸಿಡೆನ್ಸಿಯ ರತ್ನಗಿರಿ ಜಿಲ್ಲಾ ಕಾರಾಗೃಹಕ್ಕೆ ೫೫೮ನೇ ನಂಬರ್‌ ಖೈದಿಯಾಗಿ ಸಾವರ್ಕರನ್ನು ವರ್ಗಾಯಿಸಿದರು. ಕರ್ನಾಟಕದ ಬಿಜಾಪುರ ಜೈಲಿಗೆ ಬಾಬಾರಾವನ್ನು ಕಳಿಸಿದರು.</p>



<p>ಸಾವರ್ಕರ್‌ ಕಾಂಗ್ರೆಸ್‌ ಮತ್ತು ಗಾಂಧಿಯನ್ನು ತನ್ನ ವಿರೋಧಿ ಸ್ಥಾನದಲ್ಲಿ ಕೂರಿಸಿದರೂ ಕೂಡ ಬಿಡುಗಡೆಗಾಗಿ ಅವರನ್ನು ಆಶ್ರಯಿಸಬೇಕಾಗಿ ಬಂದಿತ್ತು ಎಂಬುದು ಸ್ಪಷ್ಟವಾಯಿತು. ನಾರಾಯಣ್‌ ರಾವ್‌ ಈ ಬೇಡಿಕೆಯಿಟ್ಟುಕೊಂಡು ಗಾಂಧಿಗೆ ಆರು ಪತ್ರಗಳನ್ನು ಬರೆದಿದ್ದ. ೧೯೨೧ ಸೆಪ್ಟೆಂಬರ್‌ ೧೫ರಂದು ನಾರಾಯಣ್‌ ರಾವ್‌ ಅಂದು <em>ಯಂಗ್‌ ಇಂಡಿಯಾ</em>ದ ಸಂಪಾದಕರಾಗಿದ್ದ ಜಮ್ನಾದಾಸ್‌ ದ್ವಾರಕಾದಾಸರಿಗೆ ಇದೇ ಬೇಡಿಕೆಯಿಟ್ಟುಕೊಂಡು ಪತ್ರ ಬರೆದಿದ್ದ. ಅದಕ್ಕೂ ಮೊದಲು ಸ್ವತಃ ಸಾವರ್ಕರ್‌ ಮತ್ತೊಂದು ಕ್ಷಮಾಪಣಾ ಪತ್ರವನ್ನು ಬ್ರಿಟಿಷ್‌ ಸರಕಾರದ ಮುಂದಿಟ್ಟಿದ್ದರು. ಹಿಂದಿನ ಕ್ಷಮಾಪಣಾ ಪತ್ರಗಳಿಗಿಂತಲೂ ದಯನೀಯವಾಗಿ ಬೇಡಿಕೊಳ್ಳುವ ಪತ್ರವಾಗಿತ್ತದು. ತನ್ನ ಭೂತಕಾಲದ ಬ್ರಿಟಿಷ್‌ ವಿರೋಧಿ ಚಿಂತನೆಯನ್ನು ನೆನೆದುಕೊಂಡ ಪಶ್ಚಾತ್ತಾಪ ಆ ಪತ್ರದಲ್ಲಿ ತುಂಬಿ ತುಳುಕುತ್ತಿತ್ತು.</p>
]]></content:encoded>
					
		
		
			</item>
		<item>
		<title>ಹಿಂದುತ್ವ ರಾಜಕಾರಣದ ಕಥೆ &#8211; 17 : ಹಿಂದುತ್ವದ ಆರಂಭ ಮತ್ತು ಕ್ಷಮಾಪಣೆಯ ಮುಂದುವರಿಕೆ</title>
		<link>https://peepalmedia.com/beginnings-of-hinduism-and-continuity-of-apology/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 29 May 2024 15:49:34 +0000</pubDate>
				<category><![CDATA[ಅಂಕಣ]]></category>
		<category><![CDATA[hindutva rajakaranada kathe]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Sunaif]]></category>
		<category><![CDATA[V D SAVARKAR]]></category>
		<guid isPermaLink="false">https://peepalmedia.com/?p=40069</guid>

					<description><![CDATA[ನನ್ನ ಕಡೆಯಿಂದ ಇನ್ನಷ್ಟು ಭದ್ರತೆಯನ್ನು (ಬ್ರಿಟಿಷ್)‌ ಸರಕಾರ ನಿರೀಕ್ಷಿಸುತ್ತದೆಯಾದರೆ, ಸರಕಾರ ಸೂಚಿಸುವ ನಿರ್ದಿಷ್ಟ ಮತ್ತು ಯುಕ್ತವೂ ಆದ ಸಮಯದ ತನಕ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಲು ನನಗೆ ಮತ್ತು ನನ್ನ ಸಹೋದರನಿಗೆ ಸಂಪೂರ್ಣ ಒಪ್ಪಿಗೆಯಿದೆ. ಇತೀ ತಮ್ಮ ಅತ್ಯಂತ ವಿಶ್ವಸ್ಥ ಸೇವಕ,ವಿ.ಡಿ. ಸಾವರ್ಕರ್‌ಖೈದಿ ಸಂಖ್ಯೆ ೩೨೭೭೮ ಸಾವರ್ಕರ್‌ ಮೊಂಟಾಗುವಿಗೆ ಬರೆದ ಈ ಕ್ಷಮಾಪಣಾ ಪತ್ರವನ್ನು ಕೂಡ ತಳ್ಳಿ ಹಾಕಲಾಯಿತು. ಈ ನಡುವೆ ಸಾವರ್ಕರ್‌ ಸಹೋದರರಲ್ಲಿ ಕಿರಿಯವನಾಗಿದ್ದ ನಾರಯಣ ರಾವ್‌ ವೈದಶಾಸ್ತ್ರ ಕಲಿತು ಡಾಕ್ಟರ್‌ ಆಗಿದ್ದ. [&#8230;]]]></description>
										<content:encoded><![CDATA[
<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow" style="flex-basis:100%">
<blockquote class="wp-block-quote is-layout-flow wp-block-quote-is-layout-flow">
<p>ನನ್ನ ಕಡೆಯಿಂದ ಇನ್ನಷ್ಟು ಭದ್ರತೆಯನ್ನು (ಬ್ರಿಟಿಷ್)‌ ಸರಕಾರ ನಿರೀಕ್ಷಿಸುತ್ತದೆಯಾದರೆ, ಸರಕಾರ ಸೂಚಿಸುವ ನಿರ್ದಿಷ್ಟ ಮತ್ತು ಯುಕ್ತವೂ ಆದ ಸಮಯದ ತನಕ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಲು ನನಗೆ ಮತ್ತು ನನ್ನ ಸಹೋದರನಿಗೆ ಸಂಪೂರ್ಣ ಒಪ್ಪಿಗೆಯಿದೆ.                             </p>
</blockquote>
</div>
</div>



<blockquote class="wp-block-quote is-layout-flow wp-block-quote-is-layout-flow">
<p>ಇತೀ ತಮ್ಮ ಅತ್ಯಂತ ವಿಶ್ವಸ್ಥ ಸೇವಕ,<br>ವಿ.ಡಿ. ಸಾವರ್ಕರ್‌<br>ಖೈದಿ ಸಂಖ್ಯೆ ೩೨೭೭೮</p>
</blockquote>



<p></p>



<p></p>



<p></p>



<p></p>



<p></p>



<p>ಸಾವರ್ಕರ್‌ ಮೊಂಟಾಗುವಿಗೆ ಬರೆದ ಈ ಕ್ಷಮಾಪಣಾ ಪತ್ರವನ್ನು ಕೂಡ ತಳ್ಳಿ ಹಾಕಲಾಯಿತು. ಈ ನಡುವೆ ಸಾವರ್ಕರ್‌ ಸಹೋದರರಲ್ಲಿ ಕಿರಿಯವನಾಗಿದ್ದ ನಾರಯಣ ರಾವ್‌ ವೈದಶಾಸ್ತ್ರ ಕಲಿತು ಡಾಕ್ಟರ್‌ ಆಗಿದ್ದ. ಬಾಬುರಾವನ ಹೆಂಡತಿ ಯಶುವಾಹಿನಿ ತೀರಿ ಹೋಗಿದ್ದಳು. ಅದಕ್ಕೂ ಮೊದಲು ೧೯೧೫ ಜುಲೈ ೨೮ ಮತ್ತು ಅಕ್ಟೋಬರ್‌ ೧೧ರಂದು ಯಶುವಾಹಿನಿ ಮತ್ತು ಸಾವರ್ಕರ್‌ ಪತ್ನಿ ಯಮುನಾ ಬಾಯಿ ಸೇರಿಕೊಂಡು ತಮ್ಮ ಗಂಡಂದಿರ ಬಿಡುಗಡೆಯನ್ನು ಕೋರಿಕೊಂಡು ವೈಸ್‌ರಾಯ್‌ ಆಗಿದ್ದ ಹಾರ್ಡಿಂಗ್‌ ಪ್ರಭುವಿಗೆ ಎರಡು ಪತ್ರಗಳನ್ನು ಬರೆದಿದ್ದರು.</p>



<p>ಮದನ್‌ ಲಾಲ್‌ ಡಿಂಗ್ರ ಮತ್ತು ಅನಂತ್‌ ಕನ್ಹಾರೆಯನ್ನು ಬ್ರಿಟಿಷರ ವಿರುದ್ಧ ಕಟೆದು ನಿಲ್ಲಿಸಿದ್ದ ಅದೇ ಸಾವರ್ಕರ್‌ ಬ್ರಿಟಿಷರ ಬಳಿ ಕ್ಷಮಾಪಣೆಗಾಗಿ ಯಾಚಿಸುತ್ತಿರುವ ಹೊತ್ತಲ್ಲಿ ಭಾರತದಲ್ಲಿ ಬಹಳ ದೊಡ್ಡ ರಾಜಕೀಯ ಬದಲಾವಣೆಗಳು ನಡೆಯುತ್ತಿದ್ದವು. ಬ್ರಾಹ್ಮಣರ ನಾಯಕತ್ವದ ಭೂಗತ ಸಂಘಟನೆಗಳ ಬ್ರಿಟಿಷ್‌ ವಿರೋಧಿ ಹೋರಾಟದ ಬದಲಿಗೆ ಸಾಮ್ರಾಜ್ಯಶಾಹಿ ವಿರೋಧಿ ಬಹುಜನ ಸಮರವೊಂದು ರಾಜಕಾರಣದ ಕೇಂದ್ರ ರಂಗಭೂಮಿಯಗಿ ಬಿಟ್ಟಿತ್ತು. ಗಾಂಧಿಯ ಪ್ರವೇಶ ಅದಕ್ಕೆ ಮೂಲ ಕಾರಣವಾಗಿತ್ತು. ನವ-ಸಂಪ್ರದಾಯವಾದಿ ಬ್ರಾಹ್ಮಣರ ಹೋರಾಟ ಮ್ಲೇಚ್ಛರಾದ ಬ್ರಿಟಿಷರ ವಿರುದ್ಧವಾಗಿದ್ದರೆ, ಗಾಂಧಿಯ ಹೋರಾಟ ಸಾಮ್ರಾಜ್ಯಶಾಹಿಯ ವಿರುದ್ಧವಾಗಿತ್ತು. ಜಾತಿ ಪ್ರಾಬಲ್ಯವನ್ನು ಮುಂದಿಟ್ಟುಕೊಂಡು ನಡೆಸುತ್ತಿದ್ದ ಹೋರಾಟ ಈಗ ರಾಜಕೀಯ ಮತ್ತು ಆರ್ಥಿಕ ಕಾರಣಗಳ ಹೊರಾಟವಾಗಿ ಬದಲಾಗಿತ್ತು. ಅದಕ್ಕೆ ಕಾರಣವಾಗಿದ್ದು ಜಸ್ಟಿಸ್‌ ಎಸ್.ಎ.ಟಿ. ರೌಲತ್ ನೇತೃತ್ವದ ಸಮಿತಿ ತಂದ ಕೆಲವು ಶಿಫಾರಸ್ಸುಗಳಾಗಿದ್ದವು. ೧೯೧೫ರ ಡಿಫೆನ್ಸ್‌ ಆಫ್‌ ಇಂಡಿಯಾ ಆಕ್ಟ್‌ ಬದಲಿಗೆ ಹೊಸದೊಂದು ಕಾನೂನನ್ನು ಆ ಸಮಿತಿ ಮುಂದಿಟ್ಟಿತ್ತು. ಅದರ ಆಧಾರದಲ್ಲಿ ಎರಡು ಬಿಲ್ಲುಗಳನ್ನು ಬ್ರಿಟಿಷ್‌ ಸರಕಾರ ರಚಿಸಿತು. ೧೯೧೯ರ ಇಂಡಿಯನ್‌ ಶಿಕ್ಷಾ ಅಧಿನಿಯಮ (ತಿದ್ದುಪಡಿ) ಒಂದನೇ ಬಿಲ್‌ ಮತ್ತು ಎರಡನೇ ಬಿಲ್.‌ ಅಪೀಲ್‌ ಹೋಗಲು ನಿರಾಕರಣೆ, ಸ್ಥಳೀಯಾಡಳಿತಗಳಿಗೆ ಅನುಮಾನದ ಮೇಲೆ ವಾರೆಂಟ್‌ ಇಲ್ಲದೆಯೇ ಮನೆಗಳ ತಪಾಸನೆಗೆ ಅನುಮತಿ ಮೊದಲಾದವುಗಳನ್ನು ಒಳಗೊಂಡಿದ್ದ ಕರಾಳ ಕಾನೂನಿನ ಆರಂಭವಾಗಿತ್ತದು. ಈ ಬಿಲ್ಲುಗಳು ಪಾಸಾಗುವುದರೊಂದಿಗೆ ಜನವಿರೋಧಿ ರೌಲತ್ ಕಾಯ್ದೆ ಜಾರಿಗೆ ಬಂದಿತು. ಗಾಂಧಿ, ವಲ್ಲಭಭಾಯಿ ಪಟೇಲ್‌, ಸರೋಜಿನಿ ನಾಯ್ಡು ಅವರನ್ನು ಒಳಗೊಂಡ ಒಂದು ಸಣ್ಣ ತಂಡ ರೌಲತ್ ಸತ್ಯಾಗ್ರಹವೆಂಬ ಹೆಸರಿನಲ್ಲಿ ಪ್ರತಿಭಟನಾ ಸತ್ಯಾಗ್ರಹ ಶುರು ಮಾಡಿದರು.ಇದು ದೊಡ್ಡ ಮಟ್ಟದಲ್ಲಿ ಜನಮನ ಸೆಳೆಯಿತು. ಪಂಜಾಬಿನಲ್ಲಿ ಈ ಚಳುವಳಿ ಜನಶಕ್ತಿ ಗಳಿಸುವುದನ್ನು ಗಮನಿಸಿದ ಸರಕಾರ ಆ ಪ್ರಾಂತ್ಯಕ್ಕೆ ಗಾಂಧಿಯ ಪ್ರವೇಶವನ್ನು ನಿಷೇಧಿಸಿತು. ಸರಕಾರ ಕರಾಳ ಕಾನೂನನ್ನು ಘೋಷಿಸಿತು. ಬ್ರಿಗೇಡಿಯರ್‌ ಜನರಲ್‌ ರೆಜಿನಾಲ್ಡ್‌ ಡಯರ್‌ಗೆ ಈ ಕಾನೂನು ಜಾರಿಗೊಳಿಸುವ ಜವಾಬ್ದಾರಿಯನ್ನು ವಹಿಸಲಾಯಿತು.</p>



<p>೧೯೧೯ ಏಪ್ರಿಲ್‌ ೧೩ರಂದು ಅಮೃತಸರದ ಜಲಿಯನ್‌ ವಾಲಾಬಾಗ್‌ ಎಂಬಲ್ಲಿ ಸುಮಾರು ಹತ್ತು ಸಾವಿರದಷ್ಟು ಜನರು ಒಂದು ಮೈದಾನದಲ್ಲಿ ಒಟ್ಟುಗೂಡಿದರು. ಅವರೆಲ್ಲ ನಿರಾಯುಧರಾಗಿದ್ದರು. ಮೈದಾನದ ಬಾಗಿಲುಗಳನ್ನು ಬ್ರಿಟಿಷರು ಮುಚ್ಚಿದರು. ಡಯರನ ಆಜ್ಞೆಯಂತೆ ಪೋಲೀಸರು ಗುಂಡಿನ ಸುರಿಮಳೆಗೈದರು. ೧೫೦೦ ಸುತ್ತು ಗುಂಡು ಹೊಡೆದದ್ದಾಗಿ ಹೇಳಲಾಗುತ್ತದೆ. ಸರಕಾರದ ಲೆಕ್ಕದ ಪ್ರಕಾರ ೩೭೯ ಜನರು ಸಾವನ್ನಪ್ಪಿ ೧೨೦೦ಕ್ಕೂ ಅಧಿಕ ಜನರು ಗಾಯಗೊಂಡರು. ಇತಿಹಾಸಕಾರರು ಈ ಲೆಕ್ಕಕ್ಕಿಂತ ಅದೆಷ್ಟೋ ಪಾಲು ಹೆಚ್ಚು ಜನರು ಸತ್ತರು ಮತ್ತು ಗಾಯಗೊಂಡರು ಎಂದು ಹೇಳುತ್ತಾರೆ. ಈ ದಾರುಣ ಘಟನೆಯ ಕುರಿತ ವರದಿಗಾಗಿ ಗಾಂಧಿ ಆಗ್ರಹಿಸಿದಾಗ ಹಂಟರ್ ಕಮಿಷನನ್ನು ಅದಕ್ಕಾಗಿ ನೇಮಿಸಲಾಯಿತು. ಆದರೆ, ಬ್ರಿಟಿಷ್‌ ಸರಕಾರದೊಂದಿಗೆ ಅಸಹಕಾರ ಮತ್ತು ಹಿಂದೂ ಮುಸ್ಲಿಂ ಸೌಹಾರ್ದತೆಗಾಗಿ ಕೆಲಸ ಮಾಡಲು ಸತ್ಯಾಗ್ರಹಿಗಳಿಗೆ ಗಾಂದಿ ಕರೆ ನೀಡಿದರು.</p>



<p>ಹೀಗೆ ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ಬ್ರಿಟಿಷರು ಭಾರತೀಯರ ಮೇಲೆ ಕ್ರೌರ್ಯ ಮೆರೆಯುತ್ತಿರುವ ಹೊತ್ತಿನಲ್ಲಿ ಸಾವರ್ಕರ್‌ ಒಳಗಿನ ಬ್ರಿಟಿಷ್‌ ವಿರೋಧಿತನ ಶೂನ್ಯಸುತ್ತಿ ಋಣಾತ್ಮಕವಾಗುತ್ತಲೇ ಹೋಯಿತು. ಅದರ ಜೊತೆಗೆ <em>೧೮೫೭ರ ಮೊದಲ ಸ್ವಾತಂತ್ರ್ಯ ಯುದ್ಧ</em> ಎಂಬ ಪುಸ್ತಕದಲ್ಲಿ ತಂತ್ರವೆಂಬ ನೆಲೆಯಲ್ಲಿಯಾದರೂ, ತಿಲಕರ ಲಕ್ನೋ ಒಪ್ಪಂದಕ್ಕೆ ಸಮಾನವಾಗಿ ಸಾವರ್ಕರ್‌ ಸ್ವೀಕರಿಸಿದ್ದ ಹಿಂದೂ ಮುಸ್ಲಿಂ ಮೈತ್ರಿಯಿಂದ ಸಾವರ್ಕರ್‌ ಸಂಪೂರ್ಣವಾಗಿ ಹಿಮ್ಮೆಟ್ಟಿಕೊಂಡು ಚಿತ್ಪಾವನ ಬ್ರಾಹ್ಮಣರು ಪೇಶ್ವೆಗಳ ಕಾಲದಲ್ಲಿ ಹೊಂದಿದ್ದ ಮುಸ್ಲಿಂ ವಿರೋಧಿ ಮನಸ್ಥಿತಿಗೆ ಬದಲಾಗಿದ್ದರು. ನಾವು ಇಂದು ಕಾಣುತ್ತಿರುವ ಹಿಂದುತ್ವ ರಾಜಕಾರಣದ ಲಕ್ಷಣಗಳು ಪ್ರತ್ಯಕ್ಷವಾಗಿ ಕಂಡು ಬರುವುದು ಇದೇ ಹಂತದಲ್ಲಿ. ಮಾರಾಠ ಪ್ರಾಂತ್ಯದ ಹೊರಗೆ ಸ್ವಾಮಿ ದಯಾನಂದ ಸರಸ್ವತಿ (೧೮೨೪-೧೮೮೩) ಬೆಳೆಸಿದ್ದ ಹಿಂದೂ ಪುನರುಜ್ಜೀವನದೊಂದಿಗೆ ತನ್ನ ಚಿತ್ಪಾವನ ಕೇಂದ್ರಿತ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮನ್ನು ಸಾವರ್ಕರ್‌ ಎದುರು ಬದುರಾಗಿ ನಿಲ್ಲಿಸುವುದು ಕೂಡ ಇದೇ ಹಂತದಲ್ಲಿ. ವೇದಗಳಿಗೆ ಮರಳಿರಿ ಎಂಬುದು ದಯಾನಂದ ಸರಸ್ವತಿ ಅವರ ಘೋಷಣೆಯಾಗಿತ್ತು. ವೈದಿಕರ ಪ್ರಾಬಲ್ಯದ ಅಡಿಯಲ್ಲಿ ಬ್ರಾಹ್ಮಣ ಅಧಿಪತ್ಯದ ಒಂದು ಹಿಂದೂ ಸಂಘಟನೆಯನ್ನು ಕಟ್ಟಿ ನಿಲ್ಲಿಸುವುದು ಅವರ ಉದ್ಧೇಶವಾಗಿತ್ತು. ಈ ಬ್ರಾಹ್ಮಣ ಸಂಕಲ್ಪದ ಸೆಮಿಟಿಕ್‌ ರೂಪಾಂತರಕ್ಕೆ ಅವರು ಆರಂಭಿಸಿದ್ದ ಚಳುವಳಿಯೇ <em>ಶುದ್ಧಿ ಚಳುವಳಿ</em>. ಬೇರೆ ಧರ್ಮಗಳ ಜನರನ್ನು ಹಿಂದೂ ಧರ್ಮಕ್ಕೆ ಮತಾಂತರಿಸುವುದು <em>ಶುದ್ಧಿ ಚಳುವಳಿಯ</em> ಮುಖ್ಯ ಗುರಿಯಾಗಿತ್ತು. ದಯಾನಂದ ಸರಸ್ವತಿಯ ನಂತರ ಸ್ವಾಮಿ ಶ್ರದ್ಧಾನಂದ ಅದನ್ನು ಮುಂದುವರಿಸಿದರು.</p>



<p>ವಿನಾಯಕ್‌ ಪ್ರತಿನಿಧಿಸುತ್ತಿದ್ದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮನ್ನು ಹಿಂದೂ ಸಂಘಟನಾ ಚಳುವಳಿಯೊಂದಿಗೆ ಬೆರೆಸಿದ್ದು ಭಾಯ್‌ ಪರಮಾನಂದ್.‌ <em>ಆರ್ಯಸಮಾಜ</em>ದ ಕಾರ್ಯಕರ್ತನಾಗಿ ಪರಮಾನಂದ್‌ ಬ್ರಿಟಿಷ್‌ ಗಯಾನ ತಲುಪಿದ್ದರು. ನಂತರ ಕಲಿಕೆಗೆಂದು ಎರಡು ವರ್ಷ ಅಮೇರಿಕಾದಲ್ಲಿ ಕಳೆದರು. ಅಲ್ಲಿ <em>ಗದ್ದರ್</em>‌ ಚಳುವಳಿಯ ನಾಯಕ ಲಾಲಾ ಹರ್‌ದಯಾಳ್‌ ಪರಿಚಯವಾಗಿ ಆ ಮೂಲಕ <em>ಗದ್ದರ್‌</em> ಚಳುವಳಿಯಲ್ಲಿ ಸೇರಿಕೊಂಡರು. ನಂತರ ಭಾರತಕ್ಕೆ ಮರಳಿ ಬಂದು ಪೇಶ್ವಾರ್‌ ಮತ್ತು ಅಂದಿನ ಪಂಜಾಬ್‌ ಸಹಿತದ North West Frontier Provinceನ ಹಲವು ಕಡೆಗಳಲ್ಲಿ ವಿಧ್ವಂಸಕ ಚಟುವಟಿಕೆಗಳಿಗೆ ನೇತೃತ್ವವನ್ನು ನೀಡಿದರು. ೧೯೧೫ರಲ್ಲಿ ಲಾಹೋರ್‌ ಗೂಢಾಲೋಚನೆ ಪ್ರಕರಣದಲ್ಲಿ ಬಂಧಿತನಾಗಿ ಗಲ್ಲುಶಿಕ್ಷೆಗೆ ಗುರಿಯಾದರು. ಆದರೆ, ವೈಸ್‌ರಾಯ್‌ ಆಗಿದ್ದ ಹಾರ್ಡಿಂಗ್‌ ಪ್ರಭು ಆತನ ಗಲ್ಲುಶಿಕ್ಷೆಯನ್ನು ಗಡೀಪಾರು ಶಿಕ್ಷೆಯಾಗಿ ಕಡಿತಗೊಳಿಸಿದ. ಹೀಗೆ ಆತ ಅಂಡಮಾನಿನ ಸೆಲ್ಯುಲಾರ್‌ ಜೈಲು ತಲುಪಿದ್ದರು.</p>



<p>ಪರಮಾನಂದ್‌ ಜೈಲಿನಲ್ಲಿ <em>ಶುದ್ಧಿ ಚಳುವಳಿ</em>ಯನ್ನು ಕೈಗೆತ್ತಿಕೊಂಡರು. ಹಿಂದೂ ಧರ್ಮದಿಂದ ಹೊರಗಡೆ ಮಾತ್ರವೇ ಮತಾಂತರ ಸಾಧ್ಯವೆಂದು ನಂಬಿದ್ದ ವಿನಾಯಕರ ನಂಬಿಕೆಯನ್ನು ಪರಮಾನಂದ್‌ ತಿದ್ದಿದರು. ಹಿಂದೂ ಸಂಘಟನೆ ಎಂಬ ಸಿದ್ಧಾಂತ ತನ್ನ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿಗೆ ಬೆಳೆಯಲು ಹೊಸ ಪರಿಸರ ವ್ಯವಸ್ಥೆಯನ್ನು ಸೃಷ್ಠಿಸಿಕೊಡುತ್ತದೆಯೆಂದು ಅರಿತ ವಿನಾಯಕ್‌ ಜೈಲಿನಲ್ಲಿ <em>ಶುದ್ಧಿ ಚಳುವಳಿ</em>ಗೆ ದೊಡ್ಡ ಮಟ್ಟದ ಪ್ರಚಾರ ನೀಡಿದರು. ಸ್ವತಃ ವಿನಾಯಕ್‌ ಮಾತುಗಳನ್ನು ನೋಡಿ:</p>



<p>ʼಅಲ್ಲಿಯ ತನಕ ನಮ್ಮ ಮುಂದೆ ಯಾವಾಗಲೂ ಎದ್ದು ನಿಲ್ಲುತ್ತಿದ್ದ ಪ್ರಶ್ನೆಯೆಂದರೆ ಒಬ್ಬ ಹಿಂದೂವಿಗೆ ಮುಸಲ್ಮಾನನಾಗಬಹುದು, ಆದರೆ, ಒಬ್ಬ ಮುಸಲ್ಮಾನ ಹೇಗೆ ಹಿಂದೂವಾಗುತ್ತಾನೆ? ನೂರಾರು ಹಿಂದೂಗಳು ನನ್ನ ಬಳಿ ಈ ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರವಿಲ್ಲ ಎಂದು ನಾನು ನಿಜವಾಗಿ ನಂಬಿಕೊಂಡು ಬಿಟ್ಟಿದ್ದೆ. ಆದರೆ, ಅಂತಹದ್ದೊಂದು ಪ್ರಶ್ನೆ ಇನ್ನು ಮುಂದೆ ನಮ್ಮೆದುರು ಎದ್ದು ನಿಲ್ಲುವುದಿಲ್ಲ. <em>ಶುದ್ಧಿ ಚಳುವಳಿ</em> ಅದು ಸಾಧ್ಯವಿದೆಯೆಂದು ತೋರಿಸಿಕೊಟ್ಟಿದೆ. ಮುಸ್ಲಿಮರು ಮುಟ್ಟಿದ್ದೋ ಅಥವಾ ಬೇಯಿಸಿದ್ದೋ ಆದ ಆಹಾರ ಹೊಟ್ಟೆಯನ್ನು ಹಾಳು ಮಾಡದೆಯೂ, ಆತನ ಜಾತಿ ಮತ್ತು ಧರ್ಮವನ್ನು ಕೆಡಿಸದೆಯೂ ನಮಗೆಲ್ಲ ತಿನ್ನಬಹುದು ಎಂದಾಯಿತು.ʼ<sup></sup></p>



<p>ಹಿಂದೂ ಧರ್ಮಕ್ಕೆ ಮತಾಂತರ ಮಾಡುವ ರೀತಿ ಹೀಗಿತ್ತು. ಅವರ ಬಳಿ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಬರಲು ಹೇಳಲಾಗುತ್ತಿತ್ತು. ತುಳಸಿ ಎಲೆಗಳನ್ನು ತಿನ್ನಲು ಕೊಡಲಾಗುತ್ತಿತ್ತು. <em>ಭಗವತ್‌ಗೀತೆ</em>ಯ ಕೆಲವು ಶ್ಲೋಕಗಳನ್ನು ಹೇಳಬೇಕಿತ್ತು. <em>ತುಳಸಿದಾಸ ರಾಮಾಯಣ</em>ದ ಒಂದು ಕಾಂಡ ಪಾರಾಯಣ ಮಾಡಬೇಕು. ಅದರ ನಂತರ ಸಿಹಿತಿಂಡಿಗಳನ್ನು ವಿತರಣೆ ಮಾಡಲಾಗುತ್ತಿತ್ತು. ಇದರೊಂದಿಗೆ ಅವರು ಹಿಂದೂಗಳಾಗಿ ಬದಲಾಗುತ್ತಾರೆ.</p>



<p>ರೌಲತ್ ನಿಯಮ ಮತ್ತು ಜಲಿಯನ್‌‌ ವಾಲಾಬಾಗ್‌ ಭಾರತೀಯ ಸಮಾಜದಲ್ಲಿ ಹೊತ್ತಿ ಉರಿಯುತ್ತಿರಬೇಕಾದರೆ ವಿನಾಯಕ್‌ ತನ್ನ ಕ್ಷಮಾಪಣಾ ಪತ್ರದಲ್ಲಿ ಬ್ರಿಟಿಷರ ಎದುರು ಇಟ್ಟಿದ್ದ ಸಂಗತಿಗಳನ್ನು ನಿಜಾರ್ಥದಲ್ಲಿ ಕಾರ್ಯಗತಗೊಳಿಸುತ್ತಿದ್ದರು. ಒಡೆದು ಆಳುವ ಬ್ರಿಟಿಷ್‌ ರಾಜಕಾರಣದೊಂದಿಗೆ ಸೇರಿಕೊಂಡೇ ಇದ್ದು ತನ್ನ ಬ್ರಿಟಿಷ್‌ ವಿರೋಧಿ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮನ್ನು ಹಿಂದೂ ರಾಜಕಾರಣವಾಗಿ ವಿಕಸನಗೊಳಿಸುತ್ತಿದ್ದರು. ಅದು ಕೂಡ ಭಾರತೀಯರ ಬ್ರಿಟಿಷ್‌ ವಿರೋಧಿ ಮನೋಭಾವವು ಹಿಂದೆಂದಿಗಿಂತಲೂ ಉಚ್ಛ್ರಾಯ ಹಂತ ತಲುಪಿದ್ದ ಸಂದರ್ಭದಲ್ಲಿ. ವಿನಾಯಕ್‌ ಬರೆಯುತ್ತಾರೆ, ʼ<em>ಶುದ್ಧಿ ಚಳುವಳಿ</em> ಒಂದು ದೊಟ್ಟ ವಿಜಯವಾಗಿತ್ತು. ಅದು ಜನರು ಒಗ್ಗೂಡುವುದಕ್ಕೆ ದೊಡ್ಡ ಪಾಲು ನೀಡಿತು. ಅದರ ಜೊತೆಗೆ ನಿಷೇಧಿಸಿರದಿದ್ದರೂ ಹಿಂದೂಗಳ ಪ್ರಾಂತ್ಯ, ಜಾತಿ, ಆಚಾರಗಳ ಆಧಾರದ ವ್ಯತ್ಯಾಸಗಳು ಲಘುಗೊಂಡು ಅವರೆಲ್ಲ ಒಂದೇ ಸಮೂಹದ ಕೊಂಬೆಗಳು ಎಂದು ನಂಬಿಸಲೂ ಸಾಧ್ಯವಾಯಿತು.ʼ<sup></sup></p>



<p>ಸಾವರ್ಕರ್‌ ಜಾತಿ ವಿರೋಧಿಯಾಗಿದ್ದರು ಎಂದೂ ಜಾತಿ ವಿರೋಧಿ ಕೆಲಸಗಳಲ್ಲಿ ಇನ್ನಿಲ್ಲದಂತೆ ಮುಳುಗಿದ್ದರು ಎಂದೂ ಅವರ ಬ್ರಾಹ್ಮಣ ರಾಜಕಾರಣವನ್ನು ಮರೆಮಾಚಲು ಹಲವರು ಹೇಳುತ್ತಾರೆ. ಆ ವಾದವನ್ನು ಪರಿಶೋಧಿಸಲು ಸಾವರ್ಕರ್‌ ಅವರ ಮೇಲಿನ ಮಾತುಗಳು ಸಹಕಾರಿಯಾಗುತ್ತವೆ. <em>ಶುದ್ಧಿ ಚಳುವಳಿ</em>ಗೆ, ಹಿಂದೂ ಧರ್ಮಕ್ಕೆ ಇತರ ಧರ್ಮೀಯರನ್ನು ಸ್ವೀಕರಿಸುವುದರಲ್ಲಿ ಅತ್ಯಂತ ಪ್ರಧಾನವಾಗಿದ್ದ ತಡೆಯೆಂದರೆ ಹಿಂದೂ ಧರ್ಮದ ಆಂತರಿಕ ವೈರುಧ್ಯ. ಬ್ರಾಹ್ಮಣ ರಾಜಕಾರಣದ ಆರಂಭದಲ್ಲಿಯೇ ಈ ಪ್ರಶ್ನೆ ತಡೆಗೋಡೆಯಾಗಿ ನಿಂತಿತ್ತು. ಸ್ವತಃ ಬ್ರಾಹ್ಮಣರೇ ಹಿಂದೂ ಸಮುದಾಯದಲ್ಲಿ ಅಲ್ಪಸಂಖ್ಯಾತರು. ಆದರೆ, ಮನುಸ್ಮೃತಿ ಮತ್ತು ಇತರ ಸ್ಮೃತಿಗಳು ಮತ್ತು ಹಲವು ಸನ್ನಿವೇಶಗಳು ಸೇರಿಕೊಂಡು ಸೃಷ್ಠಿಯಾದ ಸಾಂಸ್ಕೃತಿಕ ವಾತಾವರಣವು ಬ್ರಾಹ್ಮಣ ಪ್ರಾಬಲ್ಯವನ್ನು ನೆಲೆನಿಲ್ಲಿಸುವ ಸಾಮಾಜಿಕ ಪರಿಸ್ಥಿತಿಯನ್ನು ಹಲವು ಶತಮಾನಗಳ ಕಾಲ ಹಿಡಿದಿಟ್ಟಿತ್ತು. ಮರಾಠ ಪ್ರಾಂತ್ಯದಲ್ಲಿ, ಅವರಲ್ಲಿ ಒಂದು ವಿಭಾಗವಾದ ಚಿತ್ಪಾವನ ಬ್ರಾಹ್ಮಣರು, ಒಂದು ಶತಮಾನ ಕಾಲ ನೇರವಾಗಿ ರಾಜಕೀಯ ಅಧಿಕಾರವನ್ನು ಕೂಡ ಅನುಭವಿಸಿದರು. ಆಂಗ್ಲರ ಆಗಮನವು ಅವರ ರಾಜಕೀಯ ಮತ್ತು ಸಾಮಾಜಿಕ ಅಧಿಕಾರಕ್ಕೆ ಹಲವು ಮಟ್ಟದ ಹೊಡೆತ ನೀಡಿತು. ಅದರ ಜೊತೆಗೆ ಬ್ರಾಹ್ಮಣ ಪ್ರಾಬಲ್ಯವನ್ನು ಇನ್ನಿಲ್ಲದಂತೆ ಕಂಗೆಡಿಸಿದ್ದು ಜಾತಿವಿರೋಧಿ ಕೆಳಜಾತಿ ಚಳುವಳಿಗಳ ಹುಟ್ಟಾಗಿತ್ತು. ಶತಮಾನಗಳಿಂದ ಚಿರಸ್ಥಾಯಿಯಾಗಿದ್ದ ಹಿಂದೂ ಧರ್ಮದೊಳಗಿನ ಉಚ್ಛನೀಚತ್ವಕ್ಕೆ ಕೊಳ್ಳಿಯಿಡುವಂತಹ ಪ್ರಶ್ನೆಗಳು ಈ ಕಾಲದಲ್ಲಿ ಎದುರಾದವು. ಮಹಾತ್ಮ ಫುಲೆ ಮತ್ತಿತರರ ನೇತೃತ್ವದಲ್ಲಿ ಎಚ್ಚೆತ್ತುಕೊಂಡ ಈ ಚಳುವಳಿ ಮರಾಠ ಪ್ರಾಂತ್ಯದ ಬ್ರಾಹ್ಮಣ ಪ್ರಾಬಲ್ಯವನ್ನು ನಿಜಾರ್ಥದಲ್ಲಿ ಬೆದರಿಸಿದವು. ಒಂದು ಕಡೆ ರಾಜಕೀಯ ಅಧಿಕಾರವನ್ನು ಕಿತ್ತುಕೊಂಡ ಬ್ರಿಟಿಷರು. ಮತ್ತೊಂದು ಕಡೆ, ಸಾಮಾಜಿಕ ಅಧಿಕಾರವನ್ನು ನೆಲೆನಿಲ್ಲಿಸುವ ಮೂಲಭೂತ ಕಲ್ಪನೆಗಳ ಬುಡಕ್ಕೆ ಕೊಡಲಿಯೇಟು ನೀಡುತ್ತಿರುವ ಕೆಳಜಾತಿ ಚಳುವಳಿಗಳು. ಈ ಎರಡೆರಡು ಏಟಿನಿಂದಲೇ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಂ ಹುಟ್ಟಿಕೊಂಡಿದ್ದು ಎಂದು ನಾವೀಗಾಗಲೇ ಗಮನಿಸಿದೆವು. ತಮ್ಮ ಪ್ರಾಬಲ್ಯ ದೈವದತ್ತವೆಂದು ನಂಬಿಕೊಂಡಿದ್ದ, ಬ್ರಾಹ್ಮಣರೇ ಸೃಷ್ಠಿಸಿದ್ದ ಪುರಾಣಗಳನ್ನು ಚರಿತ್ರೆಗಳೆಂದು ನಂಬಿಕೊಂಡಿದ್ದ ಸಂಪ್ರದಾಯವಾದಿ ಬ್ರಾಹ್ಮಣರು ಸ್ಮೃತಿಗಳನ್ನು ತಬ್ಬಿಕೊಂಡರು. ಆದರೆ, ಕಾಲಕ್ಕೆ ತಕ್ಕುದಲ್ಲದ ಅಂತಹ ಆಲಿಂಗನವು ಬ್ರಾಹ್ಮಣ ಮೇಧಾವಿತ್ವವನ್ನು ಪತನಮುಖಿಯಾಗಿಸುವುದಲ್ಲದೆ ಬೇರೆ ಯಾವ ಉಪಯೋಗವೂ ಇಲ್ಲವೆಂದು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದಲೇ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಂ ಹುಟ್ಟಿಕೊಳ್ಳುವುದು ಮತ್ತು ಬೆಳೆಯುವುದು.</p>



<p>ಹೀಗೆ ಹೊಸ ಸಾಮಾಜಿಕ ಪರಿಸ್ಥಿತಿಯಲ್ಲಿ ಬ್ರಾಹ್ಮಣಿಸಂ ನೆಲೆನಿಲ್ಲಬೇಕಾದರೆ ಅದರ ಅಲ್ಪಸಂಖ್ಯಾತ ಪದವಿಯನ್ನು ಮೀರಬೇಕಾಗಿತ್ತು. ಆದ್ದರಿಂದ ಚಿತ್ಪಾವನ ಬ್ರಾಹ್ಮಣರ ನೇತೃತ್ವದಲ್ಲಿ ರೂಪುಗೊಂಡ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಂ ಮೊದಲು ಪ್ರಯತ್ನಿಸುವುದು ಬ್ರಾಹ್ಮಣರ ನಡುವಿನ ಭಿನ್ನತೆಗಳನ್ನು ಮೀರಿ ಬ್ರಾಹ್ಮಣಿಸಮ್ಮಿಗೆ ಸ್ವತಂತ್ರವಾಗಿ ನಡೆದಾಡಲು ಒಂದು ಸಾಮಾನ್ಯ ಮೆಟ್ಟಿಲು ಕಟ್ಟಲು ಆಗಿತ್ತು. ಮರಾಠ ಪ್ರಾಂತ್ಯದ ಅತ್ಯಂತ ದೊಡ್ಡ ಬ್ರಾಹ್ಮಣ ಸಮುದಾಯವಾಗಿದ್ದ ದೇಶಸ್ಥ ಬ್ರಾಹ್ಮಣರೊಂದಿಗೆ ತಿಲಕ್‌ ಒಪ್ಪಂದಕ್ಕೆ ಹೋಗುವುದು ಈ ಸಂದರ್ಭದಲ್ಲೇ ಆಗಿತ್ತೆಂದು ನಾವು ಈಗಾಗಲೇ ಗಮನಿಸಿದೆವು. ಒಂದು ಕಾಲದಲ್ಲಿ ದೇಶಸ್ಥ ಬ್ರಾಹ್ಮಣರ ಸೇವಕರಾಗಿದ್ದ ಚಿತ್ಪಾವನರು ಶಿವಾಜಿಯ ಮರಾಠಾ ಸಾಮ್ರಾಜ್ಯದ ಅವಿಭಾಜ್ಯ ಘಟಕವಾಗಿ ಬದಲಾದ ನಂತರ ಅವರಿಗಿಂತಲೂ ಮೇಲಿನ ಪ್ರಾಬಲ್ಯ ಸಾಧಿಸಿದ್ದು ದೇಶಸ್ಥರನ್ನು ಕಂಗೆಡಿಸಿತ್ತು. ಹಾಗಾಗಿಯೇ ಚಿತ್ಪಾವನರೊಂದಿಗಿನ ಬಹುತೇಕ ಎಲ್ಲ ರೀತಿಯ ಸಾಮಾಜಿಕ ಸಂಬಂಧಗಳನ್ನು ದೇಶಸ್ಥರು ನಿಷೇಧಿಸಿಕೊಂಡಿದ್ದರು. ತಿಲಕ್ ಮಂದೆ ನಿಂತುಕೊಂಡು ಈ ನಿಷೇಧಗಳಿಗೆ ಕೊನೆ ಹಾಡಿದರು. ಕೆಳಜಾತಿ ಚಳುವಳಿಗಳು ಬ್ರಾಹ್ಮಣ ಪ್ರಾಬಲ್ಯವನ್ನು ಬುಡಮೇಲು ಮಾಡುತ್ತವೆಯೆಂಬ ಭೀತಿಯ ಹಿನ್ನೆಲೆಯಲ್ಲಿ ಈ ಒಪ್ಪಂದ ನಡೆದಿತ್ತು. ಒಟ್ಟಿಗೆ ಕುಳಿತು ಊಟ ಮಾಡುವುದು ಕೂಡ ನಿಷೇಧವಾಗಿದ್ದ ವಿಭಿನ್ನ ಬ್ರಾಹ್ಮಣ ಸಮುದಾಯಗಳನ್ನು ಒಟ್ಟಿಗೆ ಕೂರಿಸಿ ಪಂಕ್ತಿಭೋಜನ ನಡೆಸಲು ತಿಲಕರಿಗೆ ಸಾಧ್ಯವಾಗಿತ್ತು. ಇವುಗಳ ಜೊತೆಗೆ ವೈರುಧ್ಯಗಳ ಬದಲಿಗೆ ಒಪ್ಪಂದಗಳ ಮೂಲಕ ಮಾತ್ರವೇ ಬ್ರಾಹ್ಮಣ ಪ್ರಾಬಲ್ಯವನ್ನು ನೆಲೆನಿಲ್ಲಸಲು ಸಾಧ್ಯವೆಂದು ಕಂಡುಕೊಂಡು ಇತರ ಜನಸಮುದಾಯಗಳನ್ನು ಹಿಂದೂ ಎಂಬ ಒಂದೇ ಛತ್ರಿಯಡಿಗೆ ತರುವ ಪ್ರಯತ್ನಗಳು ಕೂಡ ಇದೇ ಸಮಯದಲ್ಲಿ ಆರಂಭವಾಗಿದ್ದವು. ಸಂಪ್ರದಾಯವಾದಿ ಬ್ರಾಹ್ಮಣ್ಯಕ್ಕೆ ಇದೆಲ್ಲವನ್ನು ಒಪ್ಪಿಕೊಳ್ಳುವ ಶಕ್ತಿಯಿರಲಿಲ್ಲ. ವೈಯಕ್ತಿಕವಾದ ಶುದ್ಧಾಶುದ್ಧಗಳ ಅಡಿಪಾಯದ ಮೇಲೆ ನೆಲೆ ಕಂಡುಕೊಂಡಿದ್ದ ಪ್ರಾಬಲ್ಯವಾಗಿತ್ತು ಅವರ ಪರಿಸರ. ಅದಕ್ಕೆ ಬಹುಜನರ ಸಮ್ಮತಿಯ ಅಗತ್ಯವಿರಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಬಹುಜನರ ಸಮ್ಮತಿಯ ಕವಚವೊಂದು ಬ್ರಾಹ್ಮಣಿಸಮ್ಮಿನ ಪ್ರಾಬಲ್ಯವನ್ನು ಮುಂದುವರಿಸಲು ಅತ್ಯಂತ ಅಗತ್ಯವೆಂದು ನವ-ಸಂಪ್ರದಾಯವಾದಿ ಬ್ರಾಹ್ಮಣವಾದಿಗಳು ನಂಬಿದ್ದರು. ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳು ಅದನ್ನು ಒಂದು ಹಂತದವರೆಗೆ ಸಾಧಿಸಿದ್ದವು ಎಂಬುದನ್ನು ಕೂಡ ನಾವು ಈಗಾಗಲೆ ಗಮನಿಸಿದೆವು.</p>



<p><em>ಶುದ್ಧಿಚಳುವಳಿ</em>ಯ ಧರ್ಮದ ಕಲ್ಪನೆ ತಮ್ಮ ನವ-ಸಂಪ್ರದಾಯವಾದಿ ಬ್ರಾಹ್ಮಣ್ಯಕ್ಕೆ ಬೇರುಬಿಟ್ಟು ಬೆಳೆಯಲು ಬೇಕಾದ ಪರಿಸರವನ್ನು ಸೃಷ್ಠಿಸುತ್ತದೆ ಎಂದು ಸಾವರ್ಕರ್‌ ನಂಬಿದರು. ಅದರ ಜೊತೆಗೆ ಜಾತಿ ಅಸ್ಮಿತೆಯನ್ನು ಅರಗಿಸಿಕೊಂಡ ಒಂದು ಧಾರ್ಮಿಕ ಅಸ್ಮಿತೆಯನ್ನು ಕಟ್ಟಿಕೊಟ್ಟರೆ ಜಾತಿ ವಿಷಯದ ಮೇಲೆ ಒಂದು ಪರದೆಯನ್ನು ಹಾಕಿ ಮುಚ್ಚಿಬಿಡಬಹುದೆಂದು ಕೂಡ ಸಾವರ್ಕರ್‌ ಯೋಚಿಸಿರಬಹುದು. ಹಾಗೇನಾದರು ಸಾಧ್ಯವಾದರೆ ಕೆಳಜಾತಿ ಚಳುವಳಿಗಳಿಗೆ ದೊಡ್ಡ ಮುನ್ನಡೆ ಸಿಗದೆ ಹಿಂದೂ ಎಂಬ ಮೇಲ್ಪದರದಲ್ಲಿ ಅವೆಲ್ಲವು ಮುಳುಗಿ ಹೋಗುತ್ತವೆ.</p>



<p>ಅದರ ಜೊತೆಗೆ <em>ಶುದ್ಧಿಚಳುವಳಿ</em> ಎದುರಿಸುತ್ತಿದ್ದ ದೊಡ್ಡದೊಂದು ಪ್ರಶ್ನೆಯನ್ನು ಕೂಡ ಪರಿಹರಿಸಬೇಕಾಗಿತ್ತು. ಹಿಂದೂ ಧರ್ಮ ಜಾತಿ ಮತ್ತು ವರ್ಣಗಳ ಮೇಲೆ ಕಟ್ಟಲ್ಪಟ್ಟಿದ್ದ ಸಂಗತಿಯಾಗಿರುವುರಿಂದ ಮತಾಂತರಗೊಂಡು ಹಿಂದೂಗಳಾದವರ ಜಾತಿ ಯಾವುದು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಹಾಗೆ ಮತಾಂತರಗೊಳ್ಳುವವರು ಬ್ರಾಹ್ಮಣರೋ, ಕ್ಷತ್ರಿಯರೋ, ವೈಶ್ಯರೋ, ಶೂದ್ರರೋ ಅಥವಾ ಪಂಚಮರೋ? ಆದ್ದರಿಂದ ಕೇವಲ ಹಿಂದೂ ಎಂಬ ಪರಿಕಲ್ಪನೆಯನ್ನು ವಿಕಾಸಗೊಳಿಸಬೇಕಾದ ತುರ್ತು ಸಾವರ್ಕರ್‌ ನೇತೃತ್ವದ &nbsp;ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿಗೆ ಇತ್ತು. ಸಂಪ್ರದಾಯವಾದಿ ಬ್ರಾಹ್ಮಣರ ಹಾಗೆ ಸ್ಮೃತಿಗಳಲ್ಲಿ ಮುಳುಗಿ ನಿಂತರೆ ಅದು ಸಾಧ್ಯವಾಗುವುದಿಲ್ಲ ಎಂಬ ವಾಸ್ತವ <em>ಶುದ್ಧಿಚಳುವಳಿ</em>ಯ ಅನುಭವದಿಂದ ಸಾವರ್ಕರ್‌ಗೆ ಮನದಟ್ಟಾಗಿತ್ತು. ಆದ್ದರಿಂದ ಪುರಾಣಗಳ, ಕಟ್ಟುಕತೆಗಳ ಮತ್ತು ಆಚಾರಗಳ ಆಧಾರದಲ್ಲಿ ಕಟ್ಟಲ್ಪಟ್ಟಿದ್ದ ಹಿಂದೂ ಧರ್ಮವನ್ನು ಸೆಮೆಟಿಕ್‌ ಧರ್ಮಗಳಿಗೆ ಸಮಾನವಾದ ಚಾರಿತ್ರಿಕ ಹಿನ್ನೆಲೆ ಇರುವ ಧರ್ಮವಾಗಿ ಬದಲಾಯಿಸಲು ಇನ್ನಷ್ಟು ತೀವ್ರವಾದ ಪ್ರಯತ್ನಗಳನ್ನು ನಡೆಸಬೇಕಾದ ತುರ್ತಿನ ಬಗ್ಗೆ ಸಾವರ್ಕರ್‌ಗೆ ಮನದಟ್ಟಾಗಿತ್ತು. ತಿಲಕ್‌ ಮತ್ತು ಆ ಕಾಲದ ಕೆಲವು ಇತಿಹಾಸಕಾರರು ಸೇರಿಕೊಂಡು ಶಿವಾಜಿಯ ಸಾಮ್ರಾಜ್ಯವನ್ನು ಹಿಂದೂ ಸಾಮ್ರಾಜ್ಯವಾಗಿ ವ್ಯಾಖ್ಯಾನಿಸುವ ಮೂಲಕ ಆ ಕಾಲದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸ್ಟ್‌ ಚಳುವಳಿಗೆ ದೊರೆತ ಮುನ್ನಡೆ, ಆ ಚರಿತ್ರೆಯನ್ನು ಇನ್ನಷ್ಟು ವಿಸ್ತಾರಗೊಳಿಸುವ ಮೂಲಕ ಸಾಧಿಸಬಹುದು ಎಂದು ಕೂಡ ಸಾವರ್ಕರ್‌ ಯೋಚಿಸುತ್ತಾರೆ.</p>



<p>ಅದೇ ಹೊತ್ತು ತಾನು ನೀಡಿದ ನಾಲ್ಕು ಕ್ಷಮಾಪಣಾ ಪತ್ರಗಳನ್ನು ಸಾಮ್ರಾಜ್ಯಶಾಗಿ ಪ್ರಭುತ್ವ ತಳ್ಳಿ ಹಾಕಿದ ನಂತರ, ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ ನಡೆಸಿದ ಅದೇ ಪ್ರಭುತ್ವಕ್ಕೆ, ಆ ಕ್ರೌರ್ಯ ನಡೆದು ವರ್ಷ ತುಂಬುವ ಮೊದಲೇ, ೧೯೨೦ ಮಾರ್ಚ್‌ ೨೦ರಂದು ಸಾವರ್ಕರ್‌ ಮತ್ತೊಂದು ಕ್ಷಮಾಪಣಾ ಪತ್ರ ಬರೆಯುತ್ತಾರೆ.</p>



<p>ʼಭಾರತೀಯ ಸರಕಾರದ ಗೌರವಯುತರಾದ ಗೃಹ ಇಲಾಖೆಯ ಮೆಂಬರ್‌, ಯಾವ ವ್ಯಕ್ತಿಯದ್ದೇ ಆಗಿರಲಿ ಅರ್ಜಿಯೊಂದು ತಮ್ಮ ಮುಂದೆ ಬಂದಿತೆಂದರೆ ಅತ್ಯಂತ ಗೌರವಯುತವಾದ ಪರಿಗಣನೆಯನ್ನು ನೀಡುತ್ತಾರೆಂದೂ, ಒಬ್ಬ ವ್ಯಕ್ತಿಯ ಬಿಡುಗಡೆ ಸರಕಾರಕ್ಕೆ ಅಪಾಯಕಾರಿಯಲ್ಲವೆಂದು ಮನದಟ್ಟಾದರೆ ರಾಜಕೀಯ ಕ್ಷಮಾಪಣೆಯನ್ನು ಆತನಿಗೂ ನೀಡಲು ಸರಕಾರದ ತೀರ್ಮಾನ ವಿಸ್ತರಿಸುತ್ತದೆʼ ಎಂಬರ್ಥದಲ್ಲಿ ಈ ನಡುವೆ ನಡೆಸಿದ ಘೋಷಣೆಯ ಬೆಳಕಿನಲ್ಲಿ ಈ ಅರ್ಜಿದಾರ ಅತ್ಯಂತ ವಿನೀತನಾಗಿ ಅಪೇಕ್ಷಿಸುವುದು ಏನೆಂದರೆ, ತನ್ನ ಪ್ರಶ್ನೆ ಬಹಳ ತಡವಾಗುವ ಮೊದಲು ಕೊನೆಯ ಪ್ರಯತ್ನವೆಂಬಂತೆ ಸರಕಾರದ ಎದುರು ಸಮರ್ಪಿಸಲು ಸಮ್ಮತಿಸಬೇಕು ಎಂಬುದು. ಸರ್‌, ಯಾವ ರೀತಿಯಲ್ಲೂ ಈ ಪತ್ರವನ್ನು ವೈಸ್‌ರಾಯ್‌ ಅವರ ಮುಂದಿಡುವುದರಿಂದ ನನ್ನನ್ನು ತಡೆಯಬಾರದು ಎಂದು ಕೇಳಿಕೊಳ್ಳುತ್ತಿದ್ದೇನೆ. ಸರಕಾರದ ತೀರ್ಮಾನ ಅದೇನೇ ಆಗಿದ್ದರು ನನ್ನ ಅಹವಾಲು ಕೇಳಿಸಿಕೊಂಡಿತು ಎಂಬ ತೃಪ್ತಿ ಅದರಿಂದ ನನಗೆ ಲಭಿಸುತ್ತದೆ.</p>



<p>೧. ʼರಾಜಕೀಯ ಮುನ್ನಡೆಗಾಗಿ ಬಯಕೆʼ ಮುಂದಿಟ್ಟುಕೊಂಡು ಕಾನೂನು ಉಲ್ಲಂಘನೆ ನಡೆಸಿದ ಅಪರಾಧಿಗಳಿಗೆ ಕೂಡ ರಾಜಕೀಯ ಕ್ಷಮಾಪಣೆಯನ್ನು ವಿಸ್ತರಿಸುವುದರ ಕುರಿತು, ರಾಜಿಕೀಯ ಘೋಷಣೆ ಉದಾರತೆಯಿಂದ ಪ್ರತಿಪಾದಿಸುತ್ತಿದೆ. ನನ್ನ ಮತ್ತು ನನ್ನ ಸಹೋದರನ ಪ್ರಕರಣಗಳು ಖಂಡಿತವಾಗಿಯೂ ಈ ವಿಭಾಗದಲ್ಲಿ ಬರುವಂತವು. ನಾನಾಗಲೀ ನನ್ನ ಕುಟುಂಬವಾಗಲೀ ಸರಕಾರ ನಮ್ಮೊಂದಿಗೆ ಯಾವುದಾದರು ವೈಯಕ್ತಿಕ ಅಪರಾಧ ಎಸಗಿತ್ತೆಂದಾಗಲೀ ಏನಾದರು ವೈಯಕ್ತಿಕ ಸವಲತ್ತುಗಳನ್ನು ನಿಷೇಧಿಸಿತ್ತೆಂದಾಗಲೀ ಎಂದೂ ದೂರಿಕೊಂಡಿಲ್ಲ. ನನ್ನ ಮುಂದೆ ಉಜ್ವಲವಾದ ಉದ್ಯೋಗ ಸಾಧ್ಯತೆಗಳು ಇರುವಾಗಲೂ ನಾನು ಅಪಾಯಕಾರಿಯಾದ ಹಾದಿ ಆಯ್ದುಕೊಳ್ಳುವ ಮೂಲಕ ಏನೇನೂ ಸಾಧಿಸಿಲ್ಲವೆಂದು ಮಾತ್ರವಲ್ಲ ಇರುವುದೆಲ್ಲವನ್ನು ಕಳೆದುಕೊಂಡೂ ಬಿಟ್ಟಿರುವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ೧೯೧೩ರಲ್ಲಿ ಗೃಹ ಇಲಾಖೆಯ ಗೌರವಯುತರಾದ ಸದಸ್ಯರುಗಳಲ್ಲಿ ಒಬ್ಬರು ನನ್ನ ಬಳಿ ವೈಯಕ್ತಿಕವಾಗಿ ಹೀಗೆ ಹೇಳಿದ್ದರು, ʼ…ಇಷ್ಟೊಂದು ವಿದ್ಯೆ ಮತ್ತು ಇಷ್ಟೊಂದು ಓದು… ನೀವು ನಮ್ಮ ಸರಕಾರದಲ್ಲಿ ಉನ್ನತವಾದ ಉದ್ಯೋಗದಲ್ಲಿರಬೇಕಾದ ವ್ಯಕ್ತಿ.ʼ ಈ ಪ್ರಮಾಣಪತ್ರದಿಂದ ಆಚೆ, ನನ್ನ ಚಿಂತನೆಗಳು ಏನಾದರು ಅಡಗಿಕೊಂಡಿವೆಯೆಂದು ಯಾರಾದರು ಭಾವಿಸುವುದಾದರೆ ಅವರಿಗೆ ಹೇಳಿಲಿಕ್ಕಿರುವುದು ೧೯೦೯ರ ತನಕ ನನ್ನ ಕುಟುಂಬದ ಯಾರು ಕೂಡ ಪ್ರಾಸಿಕ್ಯೂಷನ್‌ ಎದುರಿಸಿಲ್ಲ ಎಂದು. ಪ್ರಾಸಿಕ್ಯೂಷನ್‌, ಜಡ್ಜುಗಳು ಮತ್ತು ರೌಲತ್‌ &nbsp;ರಿಪೋರ್ಟ್‌ ಎತ್ತಿ ತೋರಿಸುವ, ೧೮೯೯ ರಿಂದ ೧೯೦೯ರ ವರೆಗಿನ ವರ್ಷಗಳಲ್ಲಿ ಮಸ್ಸಿನಿಯ ಆತ್ಮಕತೆ ಬರೆದ ಕುರಿತು, ವಿವಿಧ ಸಂಘಟನೆಗಳನ್ನು ಬಹಳ ಚೆನ್ನಾಗಿ ಕಟ್ಟಿದ ಕುರಿತು, ಅದಕ್ಕೂ ಮಿಗಿಲಾಗಿ ನನ್ನ ಸಹೋದರರ ಅರೆಸ್ಟಿಗಿಂತ ಮೊದಲು ಆಯುಧಗಳ ಪಾರ್ಸೆಲ್‌ ಕಳುಹಿಸಿದ ಕುರಿತು ನನಗೆ ವೈಯಕ್ತಿಕವಾದ ದೂರುಗಳೇನೂ ಇಲ್ಲ. (ರೌಲತ್ ವರದಿ ಪುಟ ೬). ಆದರೆ ಯಾರಾದರೊಬ್ಬರು ನಮ್ಮ ಪ್ರಕರಣಗಳ ವಿಷಯದಲ್ಲಿ ಇಂತಹದ್ದೊಂದು ದೃಷ್ಟಿಕೋಣ ಇಟ್ಟುಕೊಂಡಿದ್ದರೇ? ಹೌದು. ೫೦೦೦ಕ್ಕಿಂತ ಕಡಿಮೆಯಿಲ್ಲದ ಸಹಿಗಳೊಂದಿಗೆ ಭಾರತೀಯ ಜನತೆ ತಮ್ಮ ಮುಂದಿಟ್ಟ ಬೃಹತ್ ಅರ್ಜಿಯಲ್ಲಿ ನನ್ನ ಹೆಸರನ್ನು ಕೂಡ ವಿಶೇಷವಾಗಿ ಹೇಳಲಾಗುತ್ತಿದೆ. ವಿಚಾರಣೆಯಲ್ಲಿ ನನಗಾಗಿ ವಾದಿಸಲು ಜ್ಯೂರಿ ನಿರಾಕರಿಸಲಾಯಿತು. ರಾಜಕೀಯ ಮುನ್ನಡೆಯ ಬಯಕೆಯೇ ನನ್ನ ಕೃತ್ಯಗಳ ಹಿಂದೇ ಇದ್ದದ್ದು ಮತ್ತು ಪಶ್ಚಾತಾಪ ಪಡುವ ರೀತಿಯಲ್ಲಿ ಕಾನೂನು ಉಲ್ಲಂಘನೆಗೆ ನನ್ನನ್ನು ನಡೆಸಿದ್ದು ಎಂದು ಈಗ ಎಲ್ಲ ದೇಶಗಳ ಜ್ಯೂರಿಗಳು ಅಭಿಪ್ರಾಯ ಪಡುತ್ತಿದ್ದಾರೆ.</p>



<p>೨. ಕೊಲೆಗೆ ಪ್ರೇರಣೆಯ ಹೆಸರಿನಲ್ಲಿ ದಾಖಲಾಗಿರುವ ಎರಡನೆಯ ಪ್ರಕರಣವೂ ರಾಜಕೀಯ ಕ್ಷಮಾಪಣೆಯ ಪರಿಧಿಗೆ ಬಾರದೆ ಇರುವುದಿಲ್ಲ. ಕಾರಣ:</p>



<p>a. ರಾಜಕೀಯ ಘೋಷಣೆಯು ಅಪರಾಧದ ಸ್ವಭಾವದ ಬಗ್ಗೆಯಾಗಲೀ, ಅಪರಾಧದ ಇಲಾಖೆಯ ಕುರಿತಾಗಲೀ, ಯಾವ ಕೋರ್ಟ್‌ ಶಿಕ್ಷೆ ವಿಧಿಸಿತು ಎಂಬುದರ ಬಗ್ಗೆಯಾಗಲೀ ಯಾವ ರೀತಿಯಲ್ಲೂ ಹೆಚ್ಚಿನ ಪ್ರಾಶಸ್ತ್ಯ ನೀಡುವುದಿಲ್ಲ. ಬದಲಿಗೆ ಅದು ಪ್ರಾಶಸ್ತ್ಯ ನೀಡುವುದು ಅಪರಾಧದ ಪ್ರಚೋದನೆಯ ಕುರಿತು. ಪ್ರಚೋದನೆ ವೈಯಕ್ತಿಕವಲ್ಲದೆ ರಾಜಕೀಯವಾಗಿರಬೇಕು ಎಂಬುದಕ್ಕೆ ಮಾತ್ರ ಅದು ಪ್ರಾಶಸ್ತ್ಯ ನೀಡುವುದು.</p>



<p>b. ಎರಡನೆಯದಾಗಿ, ಸರಕಾರವೇ ಅದನ್ನು ವಿವರಿಸಿರುವುದು ಇದನ್ನು ಮುಂದಿಟ್ಟುಕೊಂಡೇ ಆಗಿದೆ. ಆ ಪ್ರಕಾರ ಬಾರ್‌ (ಬಾರಿನ್‌ ಘೋಷ್)‌ ಮತ್ತು ಹೇಮು (ಹೇಮ ಚಂದ್ರದಾಸ್)‌ ಸಹಿತ ಉಳಿದವರನ್ನು ಬಿಡುಗಡೆಯೂ ಮಾಡಲಾಗಿದೆ. ಅವರ ಗೂಢಾಲೋಚನೆಯ ಒಂದು ಗುರಿ ʼಉನ್ನತ ಅಧಿಕಾರಿಗಳ ಕೊಲೆʼ ಆಗಿತ್ತು ಎಂದು ಸ್ವತಃ ಅವರುಗಳೇ ತಮ್ಮ ತಪ್ಪೊಪ್ಪಿಗೆಯಲ್ಲಿ ಹೇಳಿಕೊಂಡಿದ್ದರು. ಮ್ಯಾಜಿಸ್ಟ್ರೇಟರ್‌ ಮತ್ತಿತರರನ್ನು ಕೊಲೆ ಮಾಡಲು ಮಕ್ಕಳನ್ನು ಕಳುಹಿಸಿದ ಬಗ್ಗೆಯೂ ಅವರು ತಪ್ಪೊಪ್ಪಿಗೆಯಲ್ಲಿ ದಾಖಲಿಸಿದ್ದಾರೆ. ಈ ಮ್ಯಾಜಿಸ್ಟ್ರೇಟ್‌ ಬಾರ್‌ನ ಸಹೋದರ ಅರಬಿಂದೋರನ್ನು ಮೊದಲ <em>ಬಂದೇಮಾತರಂ ನ್ಯೂಸ್‌ ಪೇಪರ್‌ ಪ್ರಕರಣ</em>ದಲ್ಲಿ ಶಿಕ್ಷಿಸಿದ ತಂಡದಲ್ಲಿ ಒಬ್ಬರಾಗಿದ್ದರು. ಆದರೂ ಕೂಡ ಸಂಶಯಾತೀತವಾಗಿ ಬಾರ್‌ನನ್ನು ರಾಜಕೀಯ ಖೈದಿಯಾಗಿ (ವೈಯಕ್ತಿಕ ದ್ವೇಷಕ್ಕೆ ಅಪರಾಧ ಎಸಗಿದವನಲ್ಲ) ಪರಿಗಣಿಸಲಾಯಿತು. ನನ್ನ ವಿಷಯದಲ್ಲಿ ತಡೆಯಾಗಿರುವುದು ಅದಕ್ಕಿಂತಲೂ ದುರ್ಬಲ ಕಾರಣವೆಂದು ನಾನು ನಂಬಿದ್ದೇನೆ. ಮಿಸ್ಟರ್‌ ಜಾಕ್ಸನ್‌ ಅವರನ್ನು ಕೊಲ್ಲುವ ಗೂಢಾಲೋಚನೆಯ ಬಗ್ಗೆ ಆ ಕಾಲದಲ್ಲಿ ಇಂಗ್ಲೆಂಡಿನಲ್ಲಿದ್ದ ನನಗೆ ಯಾವ ಮಾಹಿತಿಯೂ ಇರಲಿಲ್ಲವೆಂದೂ, ನನ್ನ ಸಹೋದರನ ಅರೆಸ್ಟಿಗಿಂತಲೂ ಮೊದಲೇ ನಾನು ಬಂದೂಕುಗಳನ್ನು ಕಳುಹಿಸಿದ್ದೆನೆಂದೂ, ಆದ್ದರಿಂದಲೇ ಯಾವುದಾದರು ನಿರ್ದಿಷ್ಟ ಅಧಿಕಾರಿಯ ವಿರುದ್ಧ ನನಗೆ ನಿರ್ದಿಷ್ಟ ಕಾರಣಕ್ಕೆ ಶತೃತ್ವ ಇರಲಿಲ್ಲವೆಂದೂ ಪ್ರಾಸಿಕ್ಯೂಷನ್‌ ಒಪ್ಪಿಕೊಂಡಿದೆ. ಅದೇ ಹೊತ್ತು, ಕೆನಡಿಗಳನ್ನು ಕೊಂದ ಬಾಂಬನ್ನು ಸ್ವತಃ ಹೇಮು ತಯಾರಿಸಿದ್ದ. ಅದರ ಬಳಕೆಯ ಫಲದ ಸಂಪೂರ್ಣ ಅರಿವಿನೊಂದಿಗೆ ಅದನ್ನು ಮಾಡಿರುವುದು (ರೌಲತ್ ವರದಿ ಪುಟ ೩೩). ಆದರೂ ಇವೆಲ್ಲದರ ಆಧಾರದಲ್ಲಿ ಹೇಮುವನ್ನು ರಾಜಕೀಯ ಕ್ಷಮಾಪಣೆಯಿಂದ ಹೊರಗೆ ನಿಲ್ಲಿಸಲಿಲ್ಲ. ಬಾರ್‌ ಮತ್ತಿತರಿಗೆ ವ್ಯತಿರಿಕ್ತವಾದ ಪ್ರೇರಣಾಪರಾಧಕ್ಕೆ ಬೇರೆ ಬೇರೆ ದೋಷಾರೋಪ ಹೊರಿಸದಿರಲು ಕಾರಣ ಗೂಢಾಲೋಚನೆ ಪ್ರಕರಣದಲ್ಲಿ ಅವರಿಗೆ ಈಗಾಗಲೇ ಗಲ್ಲುಶಿಕ್ಷೆ ವಿಧಿಸಲಾಗಿತ್ತು ಎಂಬುದು. ನನ್ನ ಮೇಲೆ ಬೇರೆಯದೇ ದೋಷಾರೋಪ ಹೊರಿಸಲು ಕಾರಣ ನಾನು ಹಾಗಲ್ಲದಿರುವುದರಿಂದ ಮತ್ತು ಫ್ರಾನ್ಸ್‌ಗೆ ನನ್ನನ್ನು ಮರಳಿಸುವುದಾದರೆ ನನಗೆ ಸಿಗಬಹುದಾಗಿದ್ದ ಅಂತರಾಷ್ಟ್ರೀಯ ಸೌಲಭ್ಯಗಳ ಕಾರಣದಿಂದ. ಆದ್ದರಿಂದ ಅಧಿಕಾರಿಗಳ ಕೊಲೆಯ ಗೂಢಾಲೋಚನೆಯಲ್ಲಿ ಪಾಲುಗೊಂಡ ಬಗ್ಗೆ ಇನ್ನಷ್ಟು ವಿಶಾಲವಾಗಿ ತಪ್ಪೊಪ್ಪಿಗೆ ಮಾಡಿಕೊಂಡ ಬಾರ್‌ ಮತ್ತು ಹೇಮು ಅವರಿಗೆ ನೀಡಿದ ಕ್ಷಮಾಪಣೆಯನ್ನು ನನ್ನ ತನಕವೂ ವಿಸ್ತರಿಸಬೇಕೆಂದು ನಾನು ವಿನಯಪೂರ್ವಕ ವಿನಂತಿಸಿಕೊಳ್ಳುತ್ತಿದ್ದೇನೆ. ಕಾನೂನಿನ ಒಂದು ಕಾಲಂ ಎಂಬುದು ಆ ಕಾಲಮ್ಮಿನಡಿಯಲ್ಲಿ ಬರುವ ಅಪರಾಧಕ್ಕಿಂತ ದೊಡ್ಡದಲ್ಲ. ನನ್ನ ಸಹೋದರನ ಪ್ರಕರಣದಲ್ಲಿ ಈ ಪ್ರಶ್ನೆ ಉದ್ಭವಿಸುವುದೇ ಇಲ್ಲ. ಯಾಕೆಂದರೆ, ಆ ಪ್ರಕರಣ ಯಾವ ಕೊಲೆಯ ಬಗ್ಗೆಯೂ ಇರುವುದಲ್ಲ.</p>



<p>೩. ಆದ್ದರಿಂದ, ಬಾರ್‌ ಮತ್ತು ಹೇಮು ಅವರುಗಳ ಪ್ರಕರಣದಲ್ಲಿ ಸರಕಾರ ಈಗ ಮಾಡಿರುವ ಪ್ರಕಾರ (ರಾಜಕೀಯ) ಘೋಷಣೆಯನ್ನು ವ್ಯಾಖ್ಯಾನಿಸುವುದಾದರೆ ನಾನು ಮತ್ತು ನನ್ನ ಸಹೋದರ ʼಪೂರ್ಣಾರ್ಥದಲ್ಲಿʼ ರಾಜಕೀಯ ಕ್ಷಮಾಪಣೆಗೆ ಅರ್ಹರಿದ್ದೇವೆ. ಆದರೆ, ಅದು ಸಾರ್ವಜನಿಕ ಸುರಕ್ಷತೆಯೊಂದಿಗೆ ಹೊಂದಿಕೊಳ್ಳುತ್ತದೆಯೇ? ಹೊಂದಿಕೊಳ್ಳುತ್ತದೆಯೆಂದು ನಾನು ಸಂಪೂರ್ಣವಾಗಿ ನಂಬಿಕೊಂಡಿದ್ದೇನೆ. ಕಾರಣ:</p>



<p>a. ಗೃಹ ಕಾರ್ಯದರ್ಶಿಗಳು ಹೇಳಿದ ಹಾಗೆ ನಾವು ʼಅರಾಜಕತೆಯ ಕ್ರಿಮಿಗಳʼ ಸಾಲಿಗೆ ಸೇರುವವರಲ್ಲ ಎಂದು ಗಟ್ಟಿಯಾಗಿ ಘೋಷಿಸುತ್ತಿದ್ದೇವೆ. ಇಲ್ಲಿಯ ತನಕದ ತೀವ್ರವಾದಿ ಶಾಲೆಗಳಾದ ಕುರೋಪಾಟ್ಕಿನ್ ಅಥವಾ ಟಾಲ್‌ಸ್ಟಾಯ್‌ ಅವರುಗಳ ಶಾಂತಿ ಮತ್ತು ತತ್ವಚಿಂತಾ ಪರವಾದ ಅರಾಜಕತಾವಾದಕ್ಕೆ ಕೂಡ ನಾನೇನೂ ಕೊಡುಗೆ ನೀಡಿಲ್ಲ. ನನ್ನ ಭೂತಕಾಲದ ಕ್ರಾಂತಿಕಾರಿ ನಾಯಕತ್ವದ ಕುರಿತು ಹೇಳುವುದಾದರೆ, ೧೯೧೮ರ ಮತ್ತು ೧೯೧೪ರ ನನ್ನ ನಿವೇದನೆಗಳಲ್ಲಿ ಸಂವಿಧಾನವನ್ನು ಗೌರವಿಸುವ ನನ್ನ ದೃಢನಿಶ್ಚಯವನ್ನು ಮತ್ತು ಮಿಸ್ಟರ್‌ ಮೊಂಟಾಗು ರೂಪುರೇಷೆ ನೀಡಿದ ಕಾರ್ಯಕರ್ಮ ನಡೆಯುವುದೇ ಆದರೆ, ಅದರಂತೆ ನಡೆದುಕೊಳ್ಳಲು ನಾನು ತಯಾರಾಗಿರುವುದನ್ನೂ ಹೇಳಿಕೊಂಡಿದ್ದೇನೆ. ಸುಧಾರಣೆಗಳು ಮತ್ತು ಅದರ ಬೆನ್ನಿಗೆ ಬಂದ ಘೋಷಣೆಯು ನನ್ನ ನಿಲುವಿಗೆ ಕಟಿಬದ್ಧನಾಗಿರಲು ನನ್ನನ್ನು ಪ್ರೇರೇಪಿಸುತ್ತಿವೆ. ಈ ನಡುವೆ ಕ್ರಮಬದ್ಧವೂ ಸಂವಿಧಾನತ್ಮಕವೂ ಆದ ಅಭಿವೃದ್ಧಿಯ ಪಕ್ಷ ಸೇರುವುದರ ಬಗ್ಗೆ ನನಗಿರುವ ನಂಬಿಕೆ ಮತ್ತು ಸಮ್ಮತಿಯನ್ನು ನಾನು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದೇನೆ. ಭೂತಕಾಲದಲ್ಲಿ ಶತ್ರುಗಳಾಗಿದ್ದ, ಭವಿಷ್ಯತ್ತಿನಲ್ಲೂ ಶತ್ರುಗಳಾಗಬಹುದಾದ, ಉತ್ತರದ ತೀವ್ರವಾದಿಗಳಾದ ಏಷ್ಯನ್‌ ದೇಶಗಳಿಂದ ನಮ್ಮ ದೇಶ ಎದುರಿಸುತ್ತಿರುವ ಆತಂಕದ ಹಿನ್ನೆಲೆಯಲ್ಲಿ ಭಾರತವನ್ನು ಆತ್ಯಂತಿಕವಾಗಿ ಪ್ರೀತಿಸುವ ಪ್ರತಿಯೊಬ್ಬರೂ ದೇಶದ ಹಿತಕ್ಕಾಗಿ ಹೃದಯಪೂರ್ವಕವಾಗಿ, ವಿನೀತರಾಗಿ ಬ್ರಿಟಿಷರೊಂದಿಗೆ ಕೈ ಜೋಡಿಸಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದಲೇ ೧೯೧೪ರಲ್ಲಿ ಯುದ್ಧ ಶುರುವಾದಾಗ ಭಾರತದ ವಿರುದ್ಧ ಆಗಬಹುದಾಗಿದ್ದ ಜರ್ಮನ್-ಟರ್ಕಿ-ಅಫ್ಘಾನ್‌ ದಾಳಿಯ ವಿರುದ್ಧ ಸ್ವಯಂ ಸೇವಕನಾಗಿ ನನ್ನನ್ನು ನಾನೇ ವಾಗ್ದಾನ ಮಾಡಿಕೊಂಡಿದ್ದೆ. ತಾವು ನಂಬಿದರೂ ಬಿಟ್ಟರೂ ಸಂವಿಧಾನಾತ್ಮಕವಾಗಿ ನಡೆದುಕೊಳ್ಳಲು ಮತ್ತು ಪರಸ್ಪರ ಸಹಕಾರದ ಸ್ನೇಹ ಮತ್ತು ಗೌರವವನ್ನು ಬ್ರಿಟಿಷ್‌ ಡೊಮಿನಿಯನ್ನಲ್ಲಿ ತರಲು ನಾನು ನನ್ನ ಕೈ ಮೀರಿ ಪ್ರಯತ್ನ ಪಡುತ್ತೇನೆಂದು ಆತ್ಮಾರ್ಥವಾಗಿ ದಾಖಲಿಸುತ್ತಿದ್ದೇನೆ. ಅಂತಹದ್ದೊಂದು ಸಾಮ್ರಾಜ್ಯ ಘೋಷಣೆಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಅದು ಹೃದಯವನ್ನು ತಾಕಿದೆ. ಖಂಡಿತವಾಗಿಯೂ ಭಾರತೀಯರಲ್ಲ ಎಂಬ ಕಾರಣಕ್ಕೆ ನಾನು ಯಾವ ವರ್ಗದವರನ್ನೂ ಗೋತ್ರದವರನ್ನೂ ಜನರನ್ನೂ ದ್ವೇಷಿಸಲಾರೆ.</p>



<p>b. ನನ್ನ ಕಡೆಯಿಂದ ಇನ್ನಷ್ಟು ಭದ್ರತೆಯನ್ನು ಸರಕಾರ ನಿರೀಕ್ಷಿಸುತ್ತದೆಯಾದರೆ, ಸರಕಾರ ಸೂಚಿಸುವ ನಿರ್ದಿಷ್ಟ ಮತ್ತು ಯುಕ್ತವೂ ಆದ ಸಮಯದ ತನಕ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರತಿಜ್ಞೆ ಸ್ವೀಕರಿಸಲು ನನಗೆ ಮತ್ತು ನನ್ನ &nbsp;ಸಹೋದರನಿಗೆ ಸಂಪೂರ್ಣ ಒಪ್ಪಿಗೆಯಿದೆ. ಅಂತಹದ್ದೊಂದು ಪ್ರತಿಜ್ಞೆ ಸ್ವೀಕರಿಸದಿದ್ದರೂ ಕೂಡ ನನ್ನ ಕೆಡುತ್ತಿರುವ ಆರೋಗ್ಯ, ನನಗೆ ನಾನೇ ನಿಷೇಧಿಸಿಕೊಂಡಿರುವ ಮನೆಯ ಮಧುರಾನುಗ್ರಹಗಳು ಮತ್ತು ಶಾಂತವೂ ಮೌನವೂ ಆದ ಬದುಕು ನಡೆಸಲು ನನ್ನಲ್ಲಿರುವ ಬಯಕೆಯ ಕಾರಣದಿಂದ ರಾಜಕಾರಣದಲ್ಲಿ ಸಕ್ರಿಯನಾಗುವುದಕ್ಕೆ ನನ್ನನ್ನು ಪ್ರಚೋದಿಸಲಾರವು.</p>



<p>C. ಇದಲ್ಲದಿದ್ದರೆ ಇನ್ನೊಂದು ಪ್ರತಿಜ್ಞೆ, ಉದಾಹರಣೆಗೆ ಯಾವುದಾದರು ಒಂದು ಪ್ರಾಂತ್ಯದಲ್ಲಿ ನಿಂತುಕೊಂಡು, ಬಿಡುಗಡೆಯ ನಂತರ ಒಂದು ನಿರ್ದಿಷ್ಟ ಸಮಯದ ತನಕ ನಮ್ಮ ಚಲನವಲನಗಳನ್ನು ಪೊಲೀಸರಿಗೆ ತಿಳಿಸುತ್ತಾ, ಮೊದಲಾಗಿ ಪ್ರಭುತ್ವದ ಸುರಕ್ಷೆ ಖಚಿತಗೊಳಿಸುವ ರೀತಿಯಲ್ಲಿ ಇತರ ಯಾವುದೇ ನಿಬಂಧನೆಗಳನ್ನು ನಾನು ಮತ್ತು ನನ್ನ ಸಹೋದರ ಸಂತೋಷಪೂರ್ವಕವಾಗಿ ಸ್ವೀಕರಿಸುತ್ತೇವೆ. ಕೊನೆಯದಾಗಿ ನಾನು ಕೇಳಿಕೊಳ್ಳುತ್ತಿರುವುದೇನೆಂದರೆ, ಪ್ರಭುತ್ವದ ನಿಜವಾದ ಸೃಷ್ಠಿಕರ್ತರಾದ ಜನರಲ್ಲಿ ಬಹುಪಾಲು ಜನರು, ಗೌರವಯುತರಾದ ಹಿರಿಯ ನಾಯಕರೂ ಮಿತವಾದಿಗಳೂ ಆದ ಸುರೇಂದ್ರನಾಥ್‌ ಅವರಿಂದ ಹಿಡಿದು ಬೀದಿಯ ಸಾಧಾರಣ ಮನುಷ್ಯರ ತನಕ, ಪತ್ರಿಕೆಗಳು ಮತ್ತು ಮಾಧ್ಯಮಗಳು, ಪಂಜಾಬಿನಿಂದ ಮದ್ರಾಸ್‌ ತನಕದ ಹಿಂದೂಗಳು ಮತ್ತು ಮುಹಮ್ಮದೀಯರು, ಎಲ್ಲರೂ ನಮ್ಮ ತಕ್ಷಣದ, ಸಂಪೂರ್ಣ ಬಿಡುಗಡೆಗಾಗಿ ಆಗ್ರಹಿಸುತ್ತಿದ್ದಾರೆ ಮತ್ತು ಅದು ಅವರ ಸುರಕ್ಷೆಯೊಂದಿಗೆ ಬೆರೆಯುವ ಸಂಗತಿಯಾಗಿದೆಯೆಂದು ಅವರು ಸ್ಪಷ್ಟಪಡಿಸಿದ್ದಾರೆ. (ರಾಜಕೀಯ) ಘೋಷಣೆ ಗುರಿಯಿಟ್ಟಿರುವ ಜನರ ನಡುವಿನ ʼಕಹಿ ಭಾವನೆʼಗಳನ್ನು ತೊಡೆದು ಹಾಕುವುದು ಎಂಬ ಗುರಿಯನ್ನು ಮುಟ್ಟಲು ಸಹಕಾರಿಯಾಗುವ ಸಂಗತಿ ಅದಾಗಿರುತ್ತದೆಯೆಂದು ಜನರು ಸ್ಪಷ್ಟವಾಗಿ ಹೇಳುತ್ತಿದ್ದಾರೆ. ಆದ್ದರಿಂದ ಉದಾರವಾದ ಕ್ಷಮಾಪಣೆಯ ಪಾಲು ಇದುವರೆಗೆ ಲಭಿಸದಿರುವ ನಾವಿಬ್ಬರು ಮತ್ತು ನಮ್ಮಂತಹ ಇತರರ ಬಿಡುಗಡೆ ಖಚಿತವಾಗದ ಹೊರತು ಘೋಷಣೆಯ ನಿಜವಾದ ಗುರಿಯಾದ ಕಹಿ ಭಾವನೆಗಳನ್ನು ತೊಡೆದು ಹಾಕುವುದು ಅಸಾಧ್ಯವೆಂದು ನಾನು ಮುನ್ನೆಚ್ಚರಿಕೆ ನೀಡುತ್ತಿದ್ದೇನೆ.</p>



<p>೪. ಅಷ್ಟೇ ಅಲ್ಲದೆ, ಒಂದು ಶಿಕ್ಷೆಯನ್ನು ಪೂರ್ಣವಾಗಿ ನಾವು ಅನುಭವಿಸಿದ್ದೇವೆ. ಕಾರಣ:</p>



<p>a. ನಾವು ಹತ್ತು ಹನ್ನೊಂದು ವರ್ಷಗಳಿಂದ ಜೈಲಿನಲ್ಲಿ ಕಳೆಯುತ್ತಿದ್ದೇವೆ. ಅದೇ ಹೊತ್ತು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸನ್ಯಾಲ್‌ (ಸಚೀಂದ್ರನಾಥ್‌ ಸನ್ಯಾಲ್)‌ ನಾಲ್ಕು ವರ್ಷ ಪೂರ್ಣವಾಗುವಷ್ಟರಲ್ಲಿ ಬಿಡುಗಡೆಗೊಂಡರು. ಗಲಭೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದವರು ಒಂದು ವರ್ಷದ ಒಳಗಡೆ ಬಿಡುಗಡೆಗೊಂಡರು.</p>



<p>b. ನಾವು ಮಿಲ್ ಮತ್ತು ಎಣ್ಣೆಗಾಣಗಳಲ್ಲಿ ಕಠಿಣವಾದ ಕೆಲಸ ಮಾಡಿಕೊಂಡು, ಭಾರತದಲ್ಲಿ ಮತ್ತು ಇಲ್ಲಿ ಜೈಲು ವಾಸದ ಭಾಗವಾಗಿ ನೀಡಿರುವ ಇತರ ಕೆಲಸಗಳನ್ನು ಮಾಡುತ್ತಿದ್ದೇವೆ.</p>



<p>c. ಜೈಲಿನಲ್ಲಿ ನಮ್ಮ ಸ್ವಭಾವ ಈಗ ಬಿಡುಗಡೆಗೊಂಡವರ ಸ್ವಭಾವಕ್ಕಿಂತ ಚೂರೂ ಕಡಿಮೆಯಿರಲಿಲ್ಲ. ಅವರೆಲ್ಲ, ಪೋರ್ಟ್‌ ಬ್ಲೇರಿನಲ್ಲಿ ಕೂಡ ಹೊಸತೊಂದು ಗುಢಾಲೋಚನೆ ಪ್ರಕರಣದಲ್ಲಿ ಸಂಶಯಾಸ್ಪದರಾಗಿ ಪುನಹ ಜೈಲು ಸೇರಿದ್ದಾರೆ. ಆದರೆ ನಾವಿಬ್ಬರು ಇದಕ್ಕೆ ವ್ಯತಿರಿಕ್ತವಾಗಿ ಈ ದಿನದ ತನಕ ಸಾಮಾನ್ಯಕ್ಕಿಂತ ಹೆಚ್ಚೇ ಶಿಸ್ತು ಮತ್ತು ಗಂಭೀರತೆಯನ್ನು ಪಾಲಿಸಿಕೊಂಡು ಬಂದಿದ್ದೇವೆ ಮತ್ತು ಕಳೆದ ಆರು ವರ್ಷಗಳಲ್ಲಿ ಒಂದು ಶಿಸ್ತು ಕ್ರಮವೂ ನಮ್ಮ ಮೇಲೆ ಬಾರದ ಹಾಗೆ ನಡೆದುಕೊಂಡಿದ್ದೇವೆ.</p>



<p>೫. ಕೊನೆಯದಾಗಿ, ಅಂಡಮಾನಿಂದ ಬಿಡುಗಡೆಗೊಂಡವರು ಸಹಿತ ನೂರಾರು ರಾಜಕೀಯ ಖೈದಿಗಳನ್ನು ಬಿಡುಗಡೆಗೊಳಿಸಿದರ ಬಗ್ಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸಲು ನನಗೆ ಅವಕಾಶ ನೀಡಬೇಕು. ಆ ಮೂಲಕ ೧೯೧೪ರ ಮತ್ತು ೧೯೧೮ರ ನನ್ನ ನಿವೇದನೆಗಳನ್ನು ಭಾಗಶಃ ನೆರವೇರಿಸಿದಕ್ಕೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಆದ್ದರಿಂದಲೇ ನಾನು ಮತ್ತು ನನ್ನ ಸಹೋದರ ಸಹಿತ ಅದೇ ಅಪರಾಧ ಎಸಗಿದ ಉಳಿದ ಖೈದಿಗಳನ್ನು ಗೌರವಯುತರಾದ ಮಹಾಪ್ರಭುಗಳು ತಕ್ಷಣವೇ ಬಿಡುಗಡೆಗೊಳಿಸುತ್ತಾರೆ ಎಂದು ನಿರೀಕ್ಷಿಸುವುದಿಲ್ಲ. ಅದರಲ್ಲೂ ವಿಶೇಷವಾಗಿ ಮಹರಾಷ್ಟ್ರದ ರಾಜಕೀಯ ವಾತಾವರಣ ಕಳೆದ ಕೆಲ ಕಾಲದಿಂದ ಯಾವ ರೀತಿಯ ಅಸ್ವಸ್ಥತೆಗಳನ್ನೂ ಅನುಭವಿಸದಿರುವಾಗ. ಆದರೂ ನಾನಿಲ್ಲಿ ಅರುಹುತ್ತಿರುವುದೇನೆಂದರೆ, ನಮ್ಮ ಬಿಡುಗಡೆಯ ನಿಬಂಧನೆಗಳು ಈಗ ಬಿಡುಗಡೆಗೊಂಡವರದ್ದೋ ಅಥವಾ ಬೇರೆ ಯಾರದ್ದೋ ಸ್ವಭಾವದ ಆಧಾರದಲ್ಲಿ ಆಗಿರಬಾರದು. ಯಾಕೆಂದರೆ ನಮ್ಮ ಬಿಡುಗಡೆಯನ್ನು ನಿರಾಕರಿಸುವುದು ಮತ್ತು ಇತರರ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವುದು ಅಸಂಬದ್ಧವಾಗಿರುತ್ತದೆ.</p>



<p>೬. ಈ ಸಂಗತಿಗಳ ಹಿನ್ನೆಲೆಯಲ್ಲಿ, ವಿವೇಕಪೂರ್ಣವಾದ ಯಾವ ಪ್ರತಿಜ್ಞೆಯನ್ನು ಬೇಕಾದರು ಸ್ವೀಕರಿಸಲು ನನ್ನ ಸ್ವಯಂ ಸನ್ನದ್ದತೆ, ಕಾರ್ಯಗತಗೊಳಿಸಿದ ಮತ್ತು ವಾಗ್ದಾನ ನೀಡಿದ ಸುಧಾರಣೆಗಳು, ಉತ್ತರದ ಟರ್ಕಿ-ಅಫ್ಘಾನ್‌ ಭಯೋತ್ಪಾದಕರ ದಾಳಿಯ ಆತಂಕ ಎಲ್ಲವೂ ಸೇರಿ ನನ್ನನ್ನು ನಮ್ಮ ಎರಡು ರಾಷ್ಟ್ರಗಳ ನಡುವಿನ ಸಮಾನ ಆಸಕ್ತಿಗಳ ನಂಬಿಕೆಯ ಸಹಕಾರದ ವಕ್ತಾರನನ್ನಾಗಿ ಬದಲಾಯಿಸಿದೆ. ಅದನ್ನು ಮುಂದಿಟ್ಟುಕೊಂಡು ಸರಕಾರ ನನ್ನನ್ನು ಬಿಡುಗಡೆಗೊಳಿಸುತ್ತದೆಯೆಂದೂ ನನ್ನ ವೈಯಕ್ತಿತ ಕೃತಜ್ಞತೆಗಳನ್ನು ಸ್ವೀಕರಿಸುತ್ತದೆಯೆಂದೂ ಭಾವಿಸಿದ್ದೇನೆ. ನನ್ನ ಆರಂಭ ಕಾಲದ ಬದುಕಿನ ಉಜ್ವಲ ಬಯಕೆಗಳು ದಿಢೀರನೆ ನಂದಿ ಹೋದವು. ಅದು ನೋವುಭರಿತವಾಗಿತ್ತು. ಬಿಡುಗಡೆ ನನಗೆ ಹೊಸ ಹುಟ್ಟು ನೀಡುತ್ತದೆಯೆಂದೂ, ಅದು ನನ್ನ ಹೃದಯವನ್ನು ಸ್ಪರ್ಶಿಸುತ್ತದೆಯೆಂಬ ಭಾವನಾತ್ಮಕತೆಯೂ, ಆ ಕ್ಷಮಾಪಣೆಗೆ ಶರಣಾಗಿರುವ ನನ್ನ ಪಶ್ಚಾತಾಪದ ಮೂಲ ರಾಜಕೀಯವಾಗಿ ನನ್ನ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ. ಧೈರ್ಯ ಸೋಲುವಲ್ಲಿ ಉದಾರತೆ ಗೆಲ್ಲುತ್ತದೆ.</p>



<p>ತಮ್ಮ ಔದ್ಯೋಗಿಕ ಕಾಲಘಟ್ಟದಲ್ಲಿ ನಾನು ಯಾವತ್ತೂ ತೋರಿಸಿಕೊಂಡಿದ್ದ ವೈಯಕ್ತಿಕವಾದ ಗೌರವ ಮತ್ತು ಆ ಕಾಲದಲ್ಲಿ ನಾನು ಆಗಾಗ ಅನುಭವಿಸಿದ್ದ ಅತ್ಯಂತ ನಿರಾಸೆಗಳನ್ನೂ ಮುಂದಿಟ್ಟುಕೊಂಡು ಚೀಫ್‌ ಕಮಿಷನರ್‌ ನನ್ನ ನಿರಾಸೆಯ ನಿರ್ದೋಷವಾದ ಈ ಬಹಿರ್ಗಮನವನ್ನು ನಿಷೇಧಿಸಲಾರರೆಂದೂ, ಈ ನಿವೇದನೆಯನ್ನು ಮೇಲೆ ಕಳುಹಿಸಿ ತಮ್ಮ ಶಿಫಾರಸ್ಸಿನೊಂದಿಗೆ ವೈಸ್‌ರಾಯ್‌ ಅವರಿಗೆ ಸಮರ್ಪಿಸಿ ನನ್ನೊಂದಿಗೆ ಕೊನೆಯದಾಗಿ ಮಾಡಬಹುದಾದ ಉಪಕಾರವನ್ನು ಮಾಡುತ್ತಾರೆಂದೂ ನಿರೀಕ್ಷಿಸುತ್ತಿದ್ದೇನೆ.</p>



<p>ಇತೀ ತಮ್ಮ ಅತ್ಯಂತ ನಂಬಿಕಸ್ತ ಸೇವಕ,</p>



<p>ವಿ.ಡಿ. ಸಾವರ್ಕರ್‌</p>



<p>ಖೈದಿ ಸಂಖ್ಯೆ 32778</p>
]]></content:encoded>
					
		
		
			</item>
		<item>
		<title>ಹಿಂದುತ್ವ ರಾಜಕಾರಣದ ಕಥೆ &#8211; 16 : &#8220;ಸಾರಿ… ಸಾರಿ…&#8221;</title>
		<link>https://peepalmedia.com/sorry-sorry/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 20 May 2024 13:15:28 +0000</pubDate>
				<category><![CDATA[ಅಂಕಣ]]></category>
		<category><![CDATA[hindutva rajakaranada kathe]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Sunaif]]></category>
		<category><![CDATA[writing]]></category>
		<guid isPermaLink="false">https://peepalmedia.com/?p=39725</guid>

					<description><![CDATA[೧೯೧೧ ಆಗಸ್ಟ್‌ ೩೦ರಂದು ಸಾವರ್ಕರ್‌ ಮೊದಲ ಕ್ಷಮಾಪಣಾ ಪತ್ರ ಸಮರ್ಪಿಸಿದ್ದರು. ಅಂಡಮಾನ್‌ ತಲುಪಿ ಎರಡು ತಿಂಗಳುಗಳು ಕಳೆಯುವ ಮೊದಲೇ! ಅದು ತಳ್ಳಿ ಹಾಕಲ್ಪಟ್ಟಿತು. ೧೯೧೨ ಅಕ್ಟೋಬರ್‌ ೨೯ರಂದು ʼತನ್ನ ಸ್ವಭಾವ ಉತ್ತಮಗೊಂಡಿದೆʼ ಎಂದು ವಾದಿಸಿ ಎರಡನೇ ಕ್ಷಮಾಪಣಾ ಪತ್ರ ಬರೆದರಾದರೂ ಅನುಮತಿಯಿಲ್ಲದೆ ಪತ್ರ ಬರೆಯಕೂಡದು ಎಂಬ ಕಾರಣದಿಂದ ಅದನ್ನು ಮುಟ್ಟುಗೋಲು ಹಾಕಲಾಯಿತು. ಅದರ ನಂತರ ನಾವು ಈ ಹಿಂದಿನ ಅಧ್ಯಾಯದಲ್ಲಿ ಕಂಡ ಕ್ಷಮಾಪಣಾ ಪತ್ರವನ್ನು ಸಾವರ್ಕರ್‌ ಬರೆಯುವುದು. ೧೯೧೪ರಲ್ಲಿ ಮೊದಲ ಮಹಾಯುದ್ಧ ಶುರುವಾಗುತ್ತದೆ. ಇದನ್ನು ಮುಂದಿಟ್ಟುಕೊಂಡು ಮುಂದಿನ [&#8230;]]]></description>
										<content:encoded><![CDATA[
<p></p>



<p></p>



<p></p>



<p></p>



<p></p>



<p>೧೯೧೧ ಆಗಸ್ಟ್‌ ೩೦ರಂದು ಸಾವರ್ಕರ್‌ ಮೊದಲ ಕ್ಷಮಾಪಣಾ ಪತ್ರ ಸಮರ್ಪಿಸಿದ್ದರು. ಅಂಡಮಾನ್‌ ತಲುಪಿ ಎರಡು ತಿಂಗಳುಗಳು ಕಳೆಯುವ ಮೊದಲೇ! ಅದು ತಳ್ಳಿ ಹಾಕಲ್ಪಟ್ಟಿತು. ೧೯೧೨ ಅಕ್ಟೋಬರ್‌ ೨೯ರಂದು ʼತನ್ನ ಸ್ವಭಾವ ಉತ್ತಮಗೊಂಡಿದೆʼ ಎಂದು ವಾದಿಸಿ ಎರಡನೇ ಕ್ಷಮಾಪಣಾ ಪತ್ರ ಬರೆದರಾದರೂ ಅನುಮತಿಯಿಲ್ಲದೆ ಪತ್ರ ಬರೆಯಕೂಡದು ಎಂಬ ಕಾರಣದಿಂದ ಅದನ್ನು ಮುಟ್ಟುಗೋಲು ಹಾಕಲಾಯಿತು. ಅದರ ನಂತರ ನಾವು ಈ ಹಿಂದಿನ ಅಧ್ಯಾಯದಲ್ಲಿ ಕಂಡ ಕ್ಷಮಾಪಣಾ ಪತ್ರವನ್ನು ಸಾವರ್ಕರ್‌ ಬರೆಯುವುದು.</p>



<p>೧೯೧೪ರಲ್ಲಿ ಮೊದಲ ಮಹಾಯುದ್ಧ ಶುರುವಾಗುತ್ತದೆ. ಇದನ್ನು ಮುಂದಿಟ್ಟುಕೊಂಡು ಮುಂದಿನ ಕ್ಷಮಾಪಣಾ ಪತ್ರವನ್ನು ಅಂಡಮಾನಿನ ಚೀಫ್‌ ಕಮಿಷನರಿಗೆ ಸಾವರ್ಕರ್‌ ಬರೆಯುತ್ತಾರೆ. ೧೯೧೪ ಅಕ್ಟೋಬರಿನಲ್ಲಿ ಸಮರ್ಪಿಸಿದ ಪತ್ರ ಇದಾಗಿತ್ತು.</p>



<p>‌ʼಸರ್,</p>



<p>ಈ ಕೆಳಗೆ ಸಹಿ ಹಾಕಿರುವ ವಿಧೇಯನು, ಭಾರತ ಸರಕಾರಕ್ಕೆ ಕಳಿಹಿಸಿಕೊಡಲಾಗುವುದು ಎಂಬ ಅತ್ಯಂತ ನಿರೀಕ್ಷೆಯಲ್ಲಿ, ತಮ್ಮ ಮುಂದೆ ವಿನೀತವಾಗಿ ಸಮರ್ಪಿಸುವ ಅರ್ಜಿ ಏನೆಂದರೆ:</p>



<p>೧. ಈಗ ಆರಂಭವಾಗಿರುವ ಈ ಲೋಕವನ್ನೇ ನಡುಗಿಸುವ ಯುದ್ಧದ ತೀವ್ರತೆ ಯುರೋಪನ್ನು ನಲುಗಿಸುತ್ತಿರುವಾಗ, ಬೇರೆ ಯಾವುದು ಕೂಡ ನೀಡಲಾಗದಷ್ಟು ನಿರೀಕ್ಷೆ, ಉಲ್ಲಾಸ ಮತ್ತು ಉತ್ಸಾಹವನ್ನು ಪ್ರತಿಯೊಬ್ಬ ನಿಷ್ಠಾವಂತ ಭಾರತೀಯ ದೇಶಪ್ರೇಮಿಯ ಒಳಗೆ ಅದು ತುಂಬುತ್ತಿದೆ. ಅದು ಈ ದೇಶದ ಮತ್ತು (ಬ್ರಿಟಿಷ್)‌ ಸಾಮ್ರಾಜ್ಯದ ರಕ್ಷಣೆಗಾಗಿ ಸಮಾನ ಶತ್ರುವಿನ ವಿರುದ್ಧ ಸಶಸ್ತ್ರಧಾರಿಗಳಾಗಲು ಯುವಜನತೆಯ ಸಹಿತ ಎಲ್ಲ ಭಾರತೀಯರನ್ನು ಪ್ರಾಪ್ತರನ್ನಾಗಿಸುತ್ತದೆ ಎಂಬುದೇ ವಾಸ್ತವ. ಒಡೆತನದ ಪ್ರಜ್ಞೆ ಹುಟ್ಟಿಸುವ ಒಂದನ್ನು ರಕ್ಷಿಸಲು ಒಬ್ಬನಿಗೆ ಸ್ವಾತಂತ್ರ್ಯವಿದೆ ಎಂಬ ಸಂಗತಿಯ ಜೊತೆಗೆ (ಬ್ರಿಟಿಷ್)‌ ಸಾಮ್ರಾಜ್ಯದ ಉಳಿದ ಪೌರರೊಂದಿಗೆ ಭುಜಕ್ಕೆ ಭುಜ ತಾಗಿಸಿ ಹೋರಾಡುವಾಗ, ಭಾರತದಲ್ಲಿ ಬೆಳೆಯುತ್ತಿರುವ ಒಂದು ತಲೆಮಾರಿಗೆ ಸಮತೆಯ ಭಾವನೆಯೊಂದು ಹರಿದು ಸಿಗಲಿದೆ ಮತ್ತು ಅದರ ಮೇಲೆ ಅವರು ಇನ್ನಿಲ್ಲದ ನಿಷ್ಠೆ ಹೊಂದುತ್ತಾರೆ ಎಂಬುದು ಖಡಾಖಂಡಿತ.</p>



<p>೨. ಎಲ್ಲ ರಾಜಕೀಯ ಸಿದ್ಧಾಂತಗಳ ಮತ್ತು ಪ್ರಯೋಗಗಳ ಆದರ್ಶವೆಂಬುದು ಒಂದು ಮೌಲಿಕ ಅವಸ್ಥೆಯೆಂಬುದನ್ನು ನಂಬಿಕೊಂಡೇ; ಮನುಷ್ಯತ್ವವೆಂಬುದು ಉನ್ನತ ದೇಶಪ್ರೇಮ ಎಂದೂ, ಆದ್ದರಿಂದ ಪರಸ್ಪರ ಕಲಹದಲ್ಲಿ ಮುಳುಗಿರುವ ಜನಾಂಗಗಳನ್ನು ಮತ್ತು ದೇಶಗಳನ್ನು ಲಯಬದ್ಧವಾದ ಒಂದು ಏಕತೆಯಲ್ಲಿ ತಂದು, ಅದರಲ್ಲಿ ಯಾವುದಾದರು ಒಂದರ ಬೆಳವಣಿಗೆ ಇನ್ನೊಂದರ ಅಧಿಪತ್ಯದ ಕಾರಣದಿಂದ ತಡೆಯಲ್ಪಡದಿರುವುದು ಆದರ್ಶದ ವಾಸ್ತವೀಕರಣ ಆಗಿರುತ್ತದೆ ಎಂಬುದನ್ನು ನಂಬಿಕೊಂಡು; ಸ್ವಯಂಸೇವೆಗೆ ಸಿದ್ಧಗೊಂಡಿರುವ ಪ್ರಸ್ಥಾನವೊಂದು ಗೆಲ್ಲುವುದು ಮತ್ತು ಹಾರ್ಡಿಂಗ್ಸ್‌ ಪ್ರಭುವಿನ ಆಡಳಿತದಲ್ಲಿ ಉದ್ಘಾಟನೆಗೊಂಡ ದೂರದೃಷ್ಟಿಯುಳ್ಳ, ಆಕರ್ಷಕವಾದ ನೀತಿಯ ಮೂಲಕ ಬರಲಿರುವ ಆತ್ಯಂತಿಕ ವಿಜಯದಲ್ಲಿ ದೃಢವಾದ ನಂಬಿಕೆ ಇರಿಸುವುದರಲ್ಲಿ ನಾನು ಸಂತೋಷಪಡುತ್ತೇನೆ. ಸರಕಾರ ಅದನ್ನು ಮುಂದುವರಿಯಲು ಬಿಡುವುದಾದರೆ, ದೇಶದ ಗಂಡಸ್ತನ (ಬ್ರಿಟಿಷ್)‌ ಸಾಮ್ರಾಜ್ಯದ ಮಹತ್ವ ಮತ್ತು ಜವಾಬ್ದಾರಿಯನ್ನು ಉಳಿದ ಪ್ರಜೆಗಳೊಂದಿಗೆ ಹಂಚಿಕೊಳ್ಳಲು ಸಮ್ಮತಿಸುವುದಾದರೆ ಭಿನ್ನ ವರ್ಣಗಳಲ್ಲಿ ಮತ್ತು ಭಿನ್ನ ಅಭಿಪ್ರಾಯಗಳಲ್ಲಿ ವ್ಯವಹರಿಸುತ್ತಿರುವ ಭಾರತದ ಜನರಲ್ಲಿ ಒಬ್ಬನಿಗೆ ಸ್ವಂತ ದೇಶದ ಮೇಲೆ ಮೂಡುವ ದೇಶಭಕ್ತಿಯ ಉತ್ಕಟತೆಯನ್ನು ನಿಜವಾಗಿ ಅನುಭವಿಸಲು ಸಾಧ್ಯವಾಗುತ್ತದೆ.</p>



<p>೩. ಆದ್ದರಿಂದ ಈಗಿನ ಯುದ್ಧದ ಯಾವ ಸೇವೆಯಲ್ಲಿ ಬೇಕಾದರು ಕಾರ್ಯನಿರ್ವಹಿಸಲು ನನ್ನನ್ನೇ ನಾನು ವಿನಯಪೂರ್ವಕವಾಗಿ ವಾಗ್ದಾನ ಮಾಡುತ್ತಿದ್ದೇನೆ. ಸರಕಾರಕ್ಕೆ ನನ್ನ ಸೇವೆ ಎಲ್ಲಿ ಉತ್ತಮವೆಂದು ತೋರುವುದೋ ಅಲ್ಲಿ. ದೇಶ ನನ್ನಂತಹ ಅಪ್ರಸಕ್ತನಾದ ವ್ಯಕ್ತಿಯ ಸಹಾಯವನ್ನು ಆಶ್ರಯಿಸಿಕೊಂಡು ಮುಂದುವರಿಯುತ್ತಿಲ್ಲ. ಅದೇ ಹೊತ್ತು ಒಬ್ಬ ವ್ಯಕ್ತಿ ಅದೆಷ್ಟೇ ಅಪ್ರಸಕ್ತನಾಗಿದ್ದರೂ ದೇಶವನ್ನು ಸಂರಕ್ಷಿಸಲು ತನ್ನ ಸನ್ನದ್ಧತೆಯನ್ನು ತೋರ್ಪಡಿಸುವುದು ಆತನ ಅಥವಾ ಆಕೆಯ ಕರ್ತವ್ಯವೆಂದೂ ನನಗೆ ತಿಳಿದಿದೆ. ಭಾರತದಲ್ಲಿ ರಾಜಕೀಯ ಅಕ್ರಮಗಳನ್ನು ನಡೆಸಿದ ಕಾರಣಕ್ಕೆ ಬಂಧಿತರಾದವರನ್ನು ಬಿಡುಗಡೆಗೊಳಿಸುವ ಮೂಲಕ ಭಾರತೀಯರ ನಿಷ್ಠೆಯನ್ನು ಇನ್ನಷ್ಟು ವಿಸ್ತರಿಸಲು ಮತ್ತು ಅಗಾಧಗೊಳಿಸಲು ಸಾಧ್ಯವೆಂದು ಇದೇ ಹೊತ್ತು ತಾಳ್ಮೆಯಿಂದ ನೆನಪಿಸುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಕೈಗೊಳ್ಳುವ ಇಂತಹದ್ದೊಂದು ತೀರ್ಮಾನದಿಂದ ವಿದೇಶಿಯರ ಆಡಳಿತದಡಿಯಲ್ಲಿ ಬದುಕುತ್ತಿರುವ ಭಾರತೀಯರು ತಮಗೆ ಸಮಾನ ಹಕ್ಕುಗಳು ಸಿಗಬೇಕೆಂದರೆ ಸಾಮ್ರಾಜ್ಯದ ಒಳಗಡೆ ಇದ್ದುಕೊಂಡೇ ಹೋರಾಡಬೇಕು ಎಂಬ ಮಾಯಾಚಿಂತನೆಯನ್ನೇ ತಳ್ಳಿಹಾಕುತ್ತದೆ. ಜೊತೆಗೆ ಅದನ್ನು (ವಿದೇಶಿ ಆಡಳಿತವನ್ನು) ತೊಡೆದು ಹಾಕಲು ಹೋರಾಡುವುದು ಮತ್ತು ಅದಕ್ಕಾಗಿ ನಮ್ಮ ಜೊತೆಗೆ ಸೇರಿರಿ ಎಂದು ಉಳಿದವರೊಂದಿಗೆ ಹೇಳುವುದು ಮೊದಲಾದ ನೀಚ ಕಾರ್ಯಗಳನ್ನು ಇಲ್ಲವಾಗಿಸುತ್ತದೆ. ಎರಡನೆಯದಾಗಿ, ಈ ಖೈದಿಗಳು ಅಗಾಧವಾಗಿ ಸಂಬಂಧ ಹೊಂದಿರುವ ಶಕ್ತಿಗಳಿಗೆ, ಅವರನ್ನು ತಿದ್ದುವ ಮೂಲಕ ಬಲಶಾಲಿಗಳಿಗೆ ಮಾತ್ರವೇ ಕ್ಷಮಿಸಲು ಮತ್ತು ಮರೆಯಲು ಸಾಧ್ಯ ಎಂದು ತೋರಿಸಿಕೊಡಲೂ ಸಾಧ್ಯವಾಗುತ್ತದೆ. ಅದಕ್ಕಿಂತ ಮಿಗಿಲಾಗಿ ಹಾರ್ಡಿಂಗ್‌ ಪ್ರಭುಗಳ ಸಂವಿಧಾನದ ವಿಜಯದ ರಾಜಬೀದಿಯ ಉದ್ಘಾಟನೆಯು ನೆತ್ತರು ಮತ್ತು ಅಕ್ರಮಗಳ ಮುಳ್ಳು ತುಂಬಿದ ದಾರಿಯಾದ ಕೆಡುಕು ಮತ್ತು ಭಯೋತ್ಪಾದನೆಯಿಂದ ಅವರನ್ನು ರಕ್ಷಿಸುವುದಿಲ್ಲವೇ? ಎಲ್ಲಕ್ಕಿಂತ ಮಿಗಿಲಾಗಿ, ಭಾರತದ ಸಾವಿರಾರು ಕುಟುಂಬಗಳು, ಅವರಿಗೆ ಜರ್ಮನ್ನರ ಮೇಲೆ ಅದೆಷ್ಟೇ ಸಿಟ್ಟಿದ್ದರೂ, ಅವರ ಗಂಡನೋ ಮಗನೋ ಅಪ್ಪನೋ ಗೆಳೆಯನೋ ಜೈಲಿನಲ್ಲಿ ನರಕ ಯಾತನೆ ಅನುಭವಿಸುತ್ತಿರುವಾಗ, ರಕ್ತವು ನೀರಿಗಿಂತ ಗಟ್ಟಿಯಾಗಿರುವುದರಿಂದ ಸರಕಾರದೊಂದಿಗೆ ಸಂಪೂರ್ಣವಾದ ಸಮರ್ಪಣೆಯಿಂದ ಕೂಡಿದ ನಿಜವಾದ ತಮ್ಮತನವನ್ನು ತೋರ್ಪಡಿಸುವುದಿಲ್ಲ ಎಂಬುದು ಪರಮ ಸತ್ಯವೇ ಆಗಿದೆ. ಆದರೆ, (ರಾಜಕೀಯ ಖೈದಿಗಳ) ಬಿಡುಗಡೆ, ವಿಶೇಷವಾಗಿ ಇಂತಹದ್ದೊಂದು ಮುಹೂರ್ತದಲ್ಲಿ, ಭಾರತದ ಮಹಾಜನತೆಯ ಒಳಗಡೆ ಆಳವಾದ ಅನುಭವವನ್ನು ಸೃಷ್ಠಿಸುತ್ತದೆ. ಯುದ್ಧ ಮುಗಿಯುವಾಗ ನಡೆಸುವ ಎಲ್ಲ ವಿಜೃಂಭನೆಗಳಿಗಿಂತಲೂ ಮಹತ್ತರವಾದ ಎತ್ತರಕ್ಕೆ ಅವರ ಭಾವನೆಯನ್ನು ಬಡಿದೆಬ್ಬಿಸಲು ಇದರಿಂದ ಸಾಧ್ಯವಾಗುತ್ತದೆ. ಅದು ಎಲ್ಲ ಕೆಡುಕುಗಳಾಚೆ, (ಬ್ರಿಟಿಷ್)‌ ಸಾಮ್ರಾಜ್ಯದ ರಕ್ಷಣೆಯ ವಿಷಯದಲ್ಲಿ, ಭಾರತ ಮತ್ತು ಇಂಗ್ಲೆಂಡಿನ ಮಕ್ಕಳ ನಡುವೆ ಸಂಪೂರ್ಣವಾದ ನಂಬಿಕೆಯನ್ನು ಹುಟ್ಟಿಸುತ್ತದೆ.</p>



<p>೪. ಇದನ್ನೆಲ್ಲ ಬರೆಯುವುದರ ಹಿಂದಿನ ಉದ್ದೇಶ ನನ್ನ ಬಿಡುಗಡೆ ಮಾತ್ರವೇ ಆಗಿದೆಯೆಂದು ಸರಕಾರಕ್ಕೆ ಸಂಶಯವಿರುವುದೇ ಆಗಿದ್ದರೆ, ನನ್ನನ್ನು ಮಾತ್ರವೇ ಬಿಡುಗಡೆ ಮಾಡಬೇಕಾಗಿಲ್ಲವೆಂದು ವಿನಂತಿಸಿಕೊಳ್ಳುತ್ತಿದ್ದೇನೆ. ನನ್ನನ್ನು ಬಿಟ್ಟು ಉಳಿದ (ರಾಜಕೀಯ) ಖೈದಿಗಳ ಬಿಡುಗಡೆ ಮಾಡುವ ಮೂಲಕ ಚಳುವಳಿ ಮುಂದುವರಿಯಲಿ. ಆ ಮೂಲಕ ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದ ಸಂತೋಷವನ್ನು ಮಾತ್ರ ನಾನು ಪಡೆದುಕೊಳ್ಳುತ್ತೇನೆ. ಒಂದು ಉತ್ತಮ ಕೆಲಸವನ್ನು ಪೂರ್ತಿಗೊಳಿಸುವ ನಿಜವಾದ ಆಗ್ರಹದಿಂದಲೇ ನಾನು ನಿಷ್ಠೆಯಿಂದಲೂ ತೆರೆದ ಮನಸ್ಸಿನಿಂದಲೂ ಈ ನಿವೇದನೆಯನ್ನು ತಮ್ಮ ಮಹತ್ತರವಾದ ಪರಿಗಣನೆಗಾಗಿ ಸಮರ್ಪಿಸುತ್ತಿದ್ದೇನೆ.ʼ</p>



<p>೧೯೧೩ರಲ್ಲಿ ರೆಜಿನಾಲ್ಡ್‌ ಕ್ರಡೋಕಿಗೆ ನೀಡಿದ ಕ್ಷಮಾಪಣಾ ಪತ್ರವನ್ನು ತಳ್ಳಿ ಹಾಕಲಾಯಿತೆಂದು ನಾವು ಗಮನಿಸಿದೆವು. ಸಾವರ್ಕರ್‌ ಹೇಳುತ್ತಿದ್ದ ಮನಃಪರಿವರ್ತನೆ ಮತ್ತು ವಿಧೇಯತೆಗೆ ಅಷ್ಟು ಬೇಗ ತಲೆ ಕೊಡಲು ಬ್ರಿಟಿಷ್‌ ಅಧಿಕಾರಿಗಳು ತಯಾರಿರಲಿಲ್ಲ. ಜೈಲಿನ ಹೊರಗೆ ಅಂಡಮಾನ್‌ ದ್ವೀಪದಲ್ಲಿ ಇರಬಹುದೆಂಬ ಗಡೀಪಾರು ಶಿಕ್ಷೆಯಾಗಿ ಶಿಕ್ಷೆಯನ್ನು ಕಡಿತಗೊಳಿಸಿದರೆ, ಯುರೋಪಿನಲ್ಲಿರುವ ಸಾವರ್ಕರ್‌ ಅನುಯಾಯಿಗಳು ಮತ್ತು ಇತರ ಅರಾಜಕತಾವಾದಿಗಳು ಸೇರಿಕೊಂಡು ದೋಣಿಯ ಮೂಲಕ ಸಾವರ್ಕರನ್ನು ಭಾರತಕ್ಕೆ ಅಥವಾ ಬೇರೆ ಇತರ ದೇಶಕ್ಕೆ ಪಾರು ಮಾಡಿಬಿಡಬಹುದೆಂದು ಅವರು ಅಂದಾಜಿಸಿದ್ದರು.</p>



<p>೧೯೧೪ರಲ್ಲಿ ಮೇಲೆ ಹೇಳಿದ ಕ್ಷಮಾಪಣಾ ಪತ್ರದಲ್ಲಿ ಬ್ರಿಟಿಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಹೋರಾಡಲು ಆಗ್ರಹ ವ್ಯಕ್ತಪಡಿಸುವ ಸಂದರ್ಭದಲ್ಲಿಯೇ, ಹಿಂದೂ ಮಹಾಸಾಗರದ ಬ್ರಿಟಿಷ್‌ ಅಧಿಪತ್ಯವನ್ನು ಎದುರಿಸಲು ಕೈಸರನ ಜರ್ಮನಿ ಆಟ್ಟೊಮನ್‌ ಟರ್ಕಿಯೊಂದಿಗೆ ಒಪ್ಪಂದಕ್ಕೆ ಬರುತ್ತಿತ್ತು. ಅದರ ಭಾಗವಾಗಿ ಭಾರತದಲ್ಲಿ ಹಲವು ಭೂಗತ ಪಕ್ಷಗಳಲ್ಲಿ ಕೆಲಸ ಮಾಡುತ್ತಿದ್ದವರು, ಸ್ವತಃ ಸಾವರ್ಕರ್‌ ಅವರ <em>ಅಭಿನವ್‌ ಭಾರತ್</em>‌ ಕಾರ್ಯಕರ್ತರು ಕೂಡ ಆ ಹೊತ್ತು ಸಾವರ್ಕರ್‌ ನಿರ್ಧಾರಕ್ಕೆ ವಿರುದ್ಧವಾಗಿ ಜರ್ಮನಿಯೊಂದಿಗೆ ಕೂಡಿಕೊಂಡು ಬ್ರಿಟಿಷರನ್ನು ಎದುರಿಸುವ ಹಾದಿಯಲ್ಲಿ ಮುಂದುವರಿದಿದ್ದರು. ಒಂದು ಕಾಲದಲ್ಲಿ ಸಾವರ್ಕರ್‌ ಗೆಳೆಯನೂ ಪಾಲುದಾರನೂ ಆಗಿದ್ದ ವೀರೇಂದ್ರ ಕುಮಾರ್‌ ಚಟ್ಟೋಪಾಧ್ಯಾಯ ಎಂಬ ಚಟ್ಟೋ, ಲಾಲಾ ಹರ್‌ ದಯಾಲ್‌, ಮಲಯಾಳಿಯಾದ ಡಾ. ಚೆಂಬನ್‌ ರಾಮನ್‌ ಪಿಳ್ಳೆ, ತಮಿಳನೂ ಇಂಡಿಯಾ ಹೌಸಿನ ನಿವಾಸಿಯೂ ಆಗಿದ್ದ ಎಂ.ಪಿ.ಟಿ. ತಿರುಮಲ ಆಚಾರ್ಯ ಎಲ್ಲ ಸೇರಿಕೊಂಡು <em>ಇಂಡಿಯನ್‌ ನ್ಯಾಷನಲ್‌ ಪಾರ್ಟಿ</em> ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದರು. ಜರ್ಮನಿಯೊಂದಿಗೆ ಸೇರಿಕೊಂಡು ಬ್ರಿಟಿಷ್‌ ಇಂಡಿಯಾದ ಮೇಲೆ ದಾಳಿ ಮಾಡುವುದು ಅವರ ಗುರಿಯಾಗಿತ್ತು. ಇದೇ ಹೊತ್ತಲ್ಲಿ ತನ್ನ ಬಿಡುಗಡೆಯನ್ನೇ ಗುರಿಯಾಗಿಸಿಕೊಂಡು, ಒಂದು ಕಾಲದಲ್ಲಿ ತನ್ನ ಅನುಯಾಯಿಗಳೂ ತನ್ನ ಸಿದ್ಧಾಂತಕ್ಕೆ ಹೊಂದಿಕೊಂಡವರೂ ಆದ ಯಾರಿಗೂ ಕೂಡ ತಿಳಿಸದೆ ಸಾವರ್ಕರ್‌ ಕ್ಷಮಾಪಣಾ ಪತ್ರ ಬರೆಯುತ್ತಾರೆ. ಮತ್ತೆ ಮತ್ತೆ ಬ್ರಿಟಿಷರ ಸಂವಿಧಾನದ ಪ್ರಕಾರ ಕೆಲಸ ಮಾಡಲು ಮತ್ತು ಬ್ರಿಟಿಷ್‌ ಸಾಮ್ರಾಜ್ಯದ ವಿಜಯಕ್ಕಾಗಿ ಯುದ್ಧ ಮಾಡಲು ತಾನು ತಯಾರಿದ್ದೇನೆಂದೂ ಹೇಳುತ್ತಾರೆ.</p>



<p>ನಂತರದ ಕಾಲದಲ್ಲಿ ಧನಂಜಯ್‌ ಕೀರ್‌ ತರಹದ ಆತ್ಮಕತೆಗಾರರು ಮತ್ತು ಸ್ವತಃ ಸಾವರ್ಕರ್‌ ಕೂಡ ಅದನ್ನು ಒಂದು ʼತಂತ್ರʼ ಮಾತ್ರವಾಗಿ ನ್ಯಾಯೀಕರಿಸುತ್ತಾರೆ. ಇಲ್ಲಿ ನಾವು ಗಮನಿಸಬೇಕಾಗಿರುವುದು ಸಾವರ್ಕರ್‌ ತನ್ನನ್ನು ಬಿಡುಗಡೆ ಮಾಡಿ ಎಂದು ಸುಮ್ಮನೆ ವಿನಂತಿಸಿಕೊಳ್ಳುತ್ತಿರುವುದಲ್ಲ. ಬ್ರಿಟಿಷ್‌ ಸಾಮ್ರಾಜ್ಯಕ್ಕೋಸಕ್ಕರ ಕೆಲಸ ಮಾಡುತ್ತೇನೆ ಎಂಬ ನಿಬಂಧನೆಯನ್ನೂ ಸೇರಿಸಿಕೊಂಡು ಕೇಳಿಕೊಳ್ಳುತ್ತಿರುವುದು. ಕ್ರಡೋಕಿಗೆ ನೀಡಿದ ಕ್ಷಮಾಪಣಾ ಪತ್ರದಲ್ಲಿ ಮೋರ್ಲಿ-ಮಿಂಟೋ ಸುಧಾರಣೆಗಳ ಬಗ್ಗೆ, ಅದರಲ್ಲೂ ಅತ್ಯಂತ ಮುಖ್ಯವಾಗಿ ಮುಸ್ಲಿಮರಿಗೆ ಪ್ರಾದೇಶಿಕ ಕೌನ್ಸಿಲ್‌ಗಳು ಮತ್ತು ಇತರ ಅನೇಕ ಉನ್ನತ ಕೌನ್ಸಿಲ್‌ಗಳಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿತು ಎಂಬುದನ್ನು ಸಾವರ್ಕರ್‌ ಇಲ್ಲಿ ಮುಕ್ತಕಂಠದಿಂದ ಹೊಗಳುತ್ತಿರುವುದು. ಜರ್ಮನ್‌-ಟರ್ಕಿ ಒಪ್ಪಂದ ನಡೆದರೆ, ಅದು ಭಾರತೀಯ ಮುಸ್ಲಿಮರಲ್ಲಿ ಸೃಷ್ಠಿಸಬಹುದಾದ ಬ್ರಿಟಿಷ್‌ ವಿರೋಧಿ ಭಾವನೆಯನ್ನು ತಡೆಯುವುದು ಮತ್ತು ಬೆಳೆಯುತ್ತಿರುವ ಇಂಡಿಯನ್‌ ರಾಷ್ಟ್ರೀಯತೆಯನ್ನು ಒಡೆಯುವುದು ಅದರ ಮುಖ್ಯ ಉದ್ದೇಶವಾಗಿತ್ತು ಎಂದು ಇತಿಹಾಸಕಾರರು ದಾಖಲಿಸಿದ ಸಂಗತಿಯನ್ನು ಸಾವರ್ಕರ್‌ ಮುಕ್ತಕಂಠದಿಂದ ಶ್ಲಾಘಿಸುತ್ತಿರುವುದು. ಅದರ ನಂತರ ಬರೆದ ಪತ್ರದಲ್ಲಿ ಬ್ರಿಟಿಷರಿಗಾಗಿ ಯುದ್ಧ ಮಾಡಬಲ್ಲೆ ಎಂಬ ಸಂದೇಶವೂ ಇದೆ. ಅಂದರೆ , ಬ್ರಿಟಿಷರು ಆ ನಿಬಂಧನೆಗೆ ಒಪ್ಪಿ ಬಿಡುಗಡೆ ಮಾಡುವುದೇ ಆಗಿದ್ದರೆ, ಮೊದಲನೇ ವಿಶ್ವಯುದ್ಧದಲ್ಲಿ, ಅಲ್ಲಿಯ ತನಕ ಬುಡಮೇಲು ಮಾಡಲು ಪ್ರಯತ್ನಿಸುತ್ತಿದ್ದ, ತನ್ನ ಬ್ರಾಹ್ಮಣ ಸಾಮ್ರಾಜ್ಯವನ್ನು ಕೊನೆಗಾಣಿಸಿದ ಅದೇ ಬ್ರಿಟಿಷ್‌ ಸಾಮ್ರಾಜ್ಯಕ್ಕೋಸ್ಕರ ಯುದ್ಧ ಮಾಡಬೇಕಾಗಿ ಬರುತ್ತಿತ್ತು. ಆದ್ದರಿಂದಲೇ ನಂತರದ ಕಾಲದಲ್ಲಿ ಔರಂಗಜೇಬ್‌ ಮತ್ತು ಶಿವಾಜಿಯನ್ನು ತೋರಿಸಿಕೊಂಡು ನ್ಯಾಯೀಕರಿಸಲು ಇನ್ನಿಲ್ಲದ ಸಾಹಸ ಮಾಡಿದ ಸಾವರ್ಕರ್‌ ಅವರ ಕಾರಣಗಳೆಲ್ಲವೂ ದುರ್ಬಲವೂ ಪೊಳ್ಳೂ ಆಗಿದ್ದವು. ಉಳಿದವರಿಂದ ಇತಿಹಾಸದ ಕೆಂಡ ಬಾಚಿಸಿಕೊಂಡು ಅವರ ಬದುಕನ್ನೇ ಮೋಹಿಸಿದ ಸಾವರ್ಕರ್‌ ತಾನರಿಯದೆ ಸಿಲುಕಿದ ಪರಿಸ್ಥಿತಿಯಿಂದ ಬಚಾವಾಗಲು ತೋರಿಸುತ್ತಿರುವ ಲಜ್ಜಾಹೀನವಾದ ಶರಣಾಗತಿ ಮಾತ್ರವೇ ಆ ಕ್ಷಮಾಪಣಾ ಪತ್ರಗಳು.</p>



<p>ಸಾವರ್ಕರ್‌ ನೇತೃತ್ವದ <em>ಅಭಿನವ್‌ ಭಾರತ್ ಸಂಘಟನೆಯ</em> ತೀವ್ರವಾದಿ ಮತ್ತು ಭೂಗತ ಸ್ವಭಾವವನ್ನೇ ಹೊಂದಿದ್ದ ಲಾಲಾ ಹರ್‌ ದಯಾಲ್‌ನ <em>ಗದ್ದರ್‌ ಪಾರ್ಟಿ</em> ಮತ್ತು ಬಂಗಾಳದ ಜತೀಂದ್ರನಾಥ್‌ ಮುಖರ್ಜಿಯ <em>ಯುಗಾಂತರ್</em>‌ ಸಂಘಟನೆಗಳು ಜರ್ಮನಿಯೊಂದಿಗೆ ಸೇರಿಕೊಂಡು ಬ್ರಿಟಿಷ್‌ ಇಂಡಿಯಾದ ಮೇಲೆ ದಾಳಿ ಮಾಡುವ ಸಂಚಿಗೆ ಸಾವರ್ಕರ್‌ ಕೂಡ ಪಾಲುದಾರ ಎಂಬಂತೆ ವಿಕ್ರಂ ಸಂಪತ್‌ ಮಾಡುವ ವಾದವೂ ಕುಸಿದು ಬೀಳುವುದು ಈ ಕ್ಷಮಾಪಣಾ ಪತ್ರಗಳ ಬೆಳಕಿನಲ್ಲಿ. ಇನ್ನೂ ಚೂರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ೧೯೧೭ ಅಕ್ಟೋಬರ್‌ ೫ರಂದು ಸಾವರ್ಕರ್‌ ಬರೆದ ಕ್ಷಮಾಪಣಾ ಪತ್ರವನ್ನು ಒಮ್ಮೆ ನೋಡೋಣ. ೧೯೧೪ರ ಪತ್ರವನ್ನು ಬ್ರಿಟಿಷರು ತಳ್ಳಿ ಹಾಕಿದ ಕಾರಣದಿಂದ ಈ ಪತ್ರವನ್ನು ಬರೆಯುತ್ತಿರುವುದು. ಈ ಸಲ ಸಾವರ್ಕರ್‌ ಪತ್ರ ಬರೆಯುತ್ತಿರುವುದು ಗೃಹ ಇಲಾಖೆಯ ಸೆಕ್ರೆಟರಿಗೆ.</p>



<p>ʼತಾಳ್ಮೆಯಿಂದ ತಮ್ಮ ಮುಂದೆ ನಿವೇದಿಸಿಕೊಳ್ಳುತ್ತಿರುವುದೇನೆಂದರೆ:</p>



<p>ಸುಮಾರು ಮೂರು ವರ್ಷಗಳ ಹಿಂದೆ ೧೯೧೪ರಲ್ಲಿ ಈ ಕೆಳಗೆ ನೀಡಿರುವ ಸಂಗತಿಗಳನ್ನು ಎತ್ತಿ ತೋರಿಸಿಕೊಂಡು ಭಾರತ ಸರಕಾರಕ್ಕೆ ನಾನೊಂದು ಪತ್ರ ಬರೆದಿದ್ದೆ. ಹಾರ್ಡಿಂಗ್‌ ಪ್ರಭು ಅದಕ್ಕೆ ʼಅಸಾಧ್ಯʼ ಎಂಬ ಉತ್ತರವನ್ನು ನೀಡುವ ಮನಸ್ಸು ಮಾಡಿದರು. ಸರಕಾರ ಆ ಸಂಗತಿಗಳಿಗೆ ಅಸಮ್ಮತಿ ಸೂಚಿಸುತ್ತಿದೆ ಎಂಬ ಅರ್ಥದಲ್ಲಿ ಅಲ್ಲ, ಬದಲಿಗೆ ಸಧ್ಯದ ಪರಿಸ್ಥಿತಿಯಲ್ಲಿ ನನ್ನ ಯೋಚನೆಗಳನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂಬ ಅರ್ಥದಲ್ಲಿ.</p>



<p>ಯುದ್ಧ, ಅದರ ಪೂರ್ಣಾರ್ಥದಲ್ಲಿ ಖಂಡಿತವಾಗಿಯೂ ಎಲ್ಲ ಜನ, ಸರಕಾರಗಳು ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಭೌತಿಕವಾಗಿ ಬದಲಾಯಿಸಿಬಿಟ್ಟಿದೆ. ಎಲ್ಲ ಮನುಷ್ಯರ ಒಳಗಡೆ ಮತ್ತು ದೇಶಗಳ ಒಳಗಡೆ ಎದ್ದು ಬರುತ್ತಿರುವ, ಹೊಸ ಕಾಣ್ಕೆಗಳು ಮತ್ತು ಸಿದ್ಧಾಂತಗಳಿಂದ ಚಲಿಸಲ್ಪಡುತ್ತಿರುವ ಪ್ರಜ್ಞೆಯೊಂದು ಅದನ್ನು ಸಾಬೀತುಪಡಿಸುತ್ತಿದೆ. ಅದು ರಾಷ್ಟ್ರನಾಯಕರ ಮತ್ತು ಸಾಮ್ರಾಜ್ಯಗಳ ಮಂತ್ರಿಗಳ ಮಾತುಗಳಲ್ಲಿ ಸ್ವಯಂ ಹೊಳೆಯುತ್ತಿದೆ. ಭಾರತಕ್ಕೆ ಅಥವಾ ಒಟ್ಟು ಬ್ರಿಟಿಷ್‌ ಸಾಮ್ರಾಜ್ಯಕ್ಕೆ ಲೋಕದ ಈ ಮಹತ್ತರವಾದ ಪ್ರಜಾಪ್ರಭುತ್ವವಾದೀ ಕಂಪನದಿಂದ ಬಚಾವಾಗಲು ಸಾಧ್ಯವಿಲ್ಲ. ಜನಾಂಗೀಯ ಪ್ರಾಬಲ್ಯ ಮತ್ತು ಜನಾಂಗೀಯ ಪ್ರಜೆಗಳು ಎಂಬ ಹಳೆಯ ಶೈಲಿ ಈಗ ಸಹಕಾರ ಮತ್ತು ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತಿರುವುದಾಗಿ ಅವರು ಅರಿಯುತ್ತಿದ್ದಾರೆ. ಸಾಮ್ರಾಜ್ಯವಾದದ ಮಂತ್ರಿಮಂಡಲದ ಕೇಂದ್ರದಲ್ಲಿ, ನಾಮಿನೇಟ್‌ ಮಾಡಲ್ಪಟ್ಟವರಾದರೂ ಸರಿ, ಕಾಲನಿಗಳಿಂದ ಇಬ್ಬರು ಮತ್ತು ಭಾರತದಿಂದ ಇಬ್ಬರು ಪ್ರತಿನಿಧಿಗಳು ಇದ್ದಾರೆ. ಭೂಸೇನೆಯಲ್ಲಿ ಸನ್ನದ್ಧರಾಗಿ ಸೇವೆ ಸಲ್ಲಿಸಲು ಯುವಕರಿಗೆ ಬಾಗಿಲು ತೆರೆದು ಕೊಡಲಾಗಿದೆ. ಬ್ರಿಟಿಷ್‌ ಪ್ರಧಾನ ಮಂತ್ರಿಗಳ ಮಹತ್ತರವಾದ ಭಾಷಣದಲ್ಲಿ, ಬ್ರಿಟಿಷ್‌ ರಾಜತಾಂತ್ರಿಕತೆಯ ನಿಜವಾದ ಗೆಲುವು ಒಂದು ಹಂತದವರೆಗೆ ದಶಲಕ್ಷದಷ್ಟು ಭಾರತೀಯರಿಗೆ ಆಶ್ರಯ ತತ್ವಕ್ಕಿಂತ ಮಿಗಿಲಾಗಿ ʼನಿಜವಾದ ಪಾಲುದಾರಿಕೆʼಯ ಮನೋಭಾವವನ್ನು ಅಂಕುರಿಸುವ ಸಂಗತಿಯಾಗಿತ್ತು ಎಂದು ಘೋಷಿಸಿದರು. ಅಷ್ಟೇ ಅಲ್ಲ, ಅತ್ಯಂತ ಮುಖ್ಯವಾದ ಸಂಗತಿಯೆಂದರೆ ರಾಜನಿಗೋಸ್ಕರ (ಇಂಡಿಯನ್)‌ ಪ್ರಭುತ್ವದ ಸೆಕ್ರೆಟರಿ ನಡೆಸಿದ, ಭಾಗಶಃವಾದರೂ ಭಾರತದ್ದೇ ಆದ ಒಂದು ಆಡಳಿತ ವ್ಯವಸ್ಥೆಯ ನಿಶ್ಚಿತ ಮತ್ತು ಖಚಿತವಾದ ಘೋಷಣೆಯಾಗಿತ್ತದು. ಒಂದು ಗುರಿ ಎಂಬ ನಿಟ್ಟಿನಲ್ಲಿ ಮಾತ್ರವಲ್ಲ, ಆ ದಿಕ್ಕಿಗೆ ಸರಿಯಾದ ಹೆಜ್ಜೆ ಎಂಬ ನೆಲೆಯಲ್ಲಿ ಆ ಘೋಷಣೆ ನಡೆಯಿತು. ಈ ವಾಸ್ತವಗಳೆಲ್ಲವೂ ಸಂಶಯಾತೀತವಾಗಿ ಬೊಟ್ಟು ಮಾಡುತ್ತಿರುವುದು ಇನ್ನು ಮುಂದೆ ಭಾರತ ಸರಕಾರ ಭಾರತದ ಜನರ ಅಭಿಲಾಷೆಗಳಿಗೆ ತಕ್ಕಂತೆ ನಿರಂತರವಾಗಿ ಆಡಳಿತ ನಡೆಸುತ್ತದೆಯೆಂದು ಮಾತ್ರವಲ್ಲ, ಪ್ರಗತಿಯ ಮೊದಲ ತತ್ವ, ಅಭಿಲಾಷೆಗಳನ್ನು ತೀರ್ಮಾನಿಸುವ ಅತ್ಯಂತ ಪ್ರಮುಖ ಘಟಕ ಜನರಲ್ಲದೆ ಬೇರೆ ಯಾರೂ ಅಲ್ಲ ಎಂಬ ಅರಿವು ಮೂಡಿದೆ ಎಂಬುದು. ಆದ್ದರಿಂದ ಸನ್ನಿವೇಶಗಳು, ಹಾರ್ಡಿಂಗ್‌ ಪ್ರಭು ಬೊಟ್ಟು ಮಾಡಿದಂತೆ, ಮತ್ತಷ್ಟು ಒಳಿತಿಗಾಗಿ ಬದಲಾಯಿಸುತ್ತಲೂ ಬದಲಾಗುತ್ತಲೂ ಇವೆ.</p>



<p>ಆದ್ದರಿಂದ ನಾನು ಬೊಟ್ಟು ಮಾಡುವುದೇನೆಂದರೆ, ಎಲ್ಲೆಲ್ಲ ಇದನ್ನು ಕಾರ್ಯಗತಗೊಳಿಸಿದೆವೋ ಅಲ್ಲೆಲ್ಲ ದೊಡ್ಡ ವಿಜಯಗಳಿಸಿದ ಸಹಕಾರ ಮತ್ತು ಕಲ್ಯಾಣದ ನೀತಿಯನ್ನು, ಭಾರತದ ಆಡಳಿದ ರಂಗದಲ್ಲಿ ನಂತರ ಕಾರ್ಯಗತಗೊಳಿಸಿದ್ದನ್ನು, ದರ್ಬಾರುಗಳು ಮತ್ತು ವಿಜೃಂಭನೆಗಳಿಂದ ಸರಿಯಾಗಿ ಕೊಂಡಾಡಿದ್ದನ್ನು, ರಾಜಕೀಯ ಖೈದಿಗಳ ಬಿಡುಗಡೆಯ ತನಕ ಮುಂದುವರಿಸಬಾರದೇ? ರಾಜಕೀಯ ಘೋಷಣೆಗಳಿಗೂ ಗಜಘೋಷಯಾತ್ರೆಗಳಿಗೂ ನೀಡಲು ಅಸಾಧ್ಯವಾದ ಮಟ್ಟದಲ್ಲಿ ಭಾರತದ ಜನರ ಭಾವನೆಯನ್ನು ಮಾತ್ರವಲ್ಲ, ಹೃದಯಗಳನ್ನು ಮುಟ್ಟಲು ಮತ್ತು ಮುಂದಕ್ಕೆ ಚಲಿಸುವಂತೆ ಮಾಡಲು ಅವರ ಬಂಧು ಬಳಗದ ಬಿಡುಗಡೆಯಿಂದ ಸಾಧ್ಯವಿದೆ. ಆತ್ಮವಿಶ್ವಾಸವನ್ನು ಹೊರಗಡೆ ತೋರಿಸಿಕೊಂಡರೆ ಮಾತ್ರವೇ ಆತ್ಮವಿಶ್ವಾಸವನ್ನು ಬಡಿದೆಬ್ಬಿಸಲು ಸಾಧ್ಯ. ಕೆನಡಾದಲ್ಲಿ ಅಕ್ರಮಗಳು ಮತ್ತು ಕ್ರಾಂತಿಗಳು ಇದರ ಕ್ರಮವಾಗಿ ಬದಲಾಗಿತ್ತು. ಡುರ್‌ಹಾಂ ಪ್ರಭುವಿನಂತಹ ಒಬ್ಬ ಸಶಕ್ತ ರಾಜನೀತಿಜ್ಞ ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಆತ್ಮವಿಶ್ವಾಸ ತೋರಿಸಿಕೊಟ್ಟರು. ಈಗ ಆ ಕ್ರಾಂತಿಕಾರಿಗಳ ಮೊಮ್ಮಕ್ಕಳು ಬ್ರಿಟಿಷರೊಂದಿಗೆ ನಿಂತುಕೊಂಡು ಫ್ಲಾಂಡೆರ್ಸಲ್ಲಿ ಯುದ್ಧ ಮಾಡುತ್ತಿದ್ದಾರೆ. ಬೋವರ್‌ಗಳು ಹೋರಾಡಿ ಸೋತು ಹೋದರು. ಆದರೆ, ಇಂಗ್ಲಿಷರು ಸನ್ನಿವೇಶದ ಗಂಭೀರತೆ ಅರ್ಥ ಮಾಡಿಕೊಂಡು ಅಮೇರಿಕಾ ಮತ್ತು ಕೇಪ್‌ ಕಾಲನಿಯ ಚರಿತ್ರೆಯನ್ನು ನೆನಪಿಸಿಕೊಂಡು, ಬುದ್ಧಿವಂತರಂತೆ ನಡೆದುಕೊಂಡು ಅವರಿಗೆ ಸ್ವಯಂ ಆಡಳಿತ ನೀಡಿದರು. ಅದರ ಫಲವಾದರೋ, ಒಂದು ಡಿವೆಟ್‌ ಅದನ್ನು ವಿರೋಧಿಸಿದರೆ, ಒಂದು ಡಿವೆಟನ್ನು ಮಾತ್ರವೇ ಸೋಲಿಸಬೇಕಾಯಿತು. ಇನ್ನೊಬ್ಬ ಬೋತೆಯನ್ನು ಬೀಳಿಸಬೇಕಾಗಿ ಬರಲಿಲ್ಲ! ಅಥವಾ ಇಂಡಿಯಾ ಎಂಬುದು, ಬ್ರಿಟಿಷ್‌ ಜನರನ್ನು ಮನಃಪೂರ್ವಕವಾಗಿ ಮತ್ತು ಉದಾರವಾಗಿ ನಡೆಸಿಕೊಳ್ಳುವುದರಲ್ಲಿ ನಂಬಿಕೆಯಿಲ್ಲದ, ಇಡುಕಿರಿದ ಜಾಗವಾಗಿ ಸಂಶಯಿಸಲ್ಪಡುತ್ತಿದೆಯೇ? ಇತಿಹಾಸ ತೋರಿಸುತ್ತಿರುವುದು – ಭಾರತದ ತಪ್ಪು, ಅದು ತಪ್ಪೇ ಆಗಿದ್ದರೆ – ಭಾರತ ಹೆಚ್ಚು ಉದಾರತೆ ಮತ್ತು ನಂಬಿಕೆ ತೋರಿಸಿತು ಎಂದು. ಅದಲ್ಲದೆ ಇದರ ತದ್ವಿರುದ್ಧ ಅಲ್ಲ. ಸ್ವಯಂ ಆಡಳಿತವನ್ನು, ಪೂರ್ತಿ ಮನಸ್ಸಿನೊಂದಿಗೆ ನೀಡುವುದೇ ಆದರೆ ನಮ್ಮ ಜನರನ್ನು ನಮ್ಮ ಅಭಿಲಾಷೆಗಳಿಗಾಗಿ ಈ ಸಾಮ್ರಾಜ್ಯದೊಂದಿಗೆ ಇನ್ನಷ್ಟು ಹತ್ತಿರವಾಗಿಸುತ್ತದೆ. ನಮ್ಮ ಅಭಿಲಾಷೆಗಳನ್ನು ಸಂರಕ್ಷಿಸುವಷ್ಟು ಕಾಲವೂ, ಯಾವ ಕಾಲನಿಯಲ್ಲೂ ಇಲ್ಲಿಯ ತನಕ ಉಂಟಾಗದ ರೀತಿಯ ಗಟ್ಟಿ ಸಂಬಂಧ ಅದಾಗಿರುತ್ತದೆ.</p>



<p>ಎರಡನೆಯದಾಗಿ, ಗುಂಪಿನಲ್ಲಿ ಒಬ್ಬ ಎಂಬ ನೆಲೆಯಲ್ಲಿ, ನನಗೆ ಹೇಳಲು ಸಾಧ್ಯವಿದೆ. ನನ್ನ ಪರಿಚಯದ ಅಷ್ಟೂ ಜನರಲ್ಲಿ ಬಹುಪಾಲು ಜನರಿಗೆ ಸಾಮ್ರಾಜ್ಯದೊಂದಿಗೆ ಸಾಸಿವೆಯಷ್ಟೂ ಕೂಡ ಶತೃತ್ವ ಇಲ್ಲ. ಅದು ಯಾಕೆ ಹೀಗೆ ಅಂದರೆ, ಅದು ಹೀಗೆಯೇ ಇದ್ದದ್ದು ಎಂದು ಅರ್ಥವೇ? ಖಂಡಿತಾ ಅಲ್ಲ. ಎಲ್ಲ ರಾಜಕೀಯ ತತ್ವಶಾಸ್ತ್ರಗಳ ಮತ್ತು ರಾಜಕೀಯ ಚಟುವಟಿಕೆಗಳ ಆದರ್ಶ ಎಂಬುದು ಅಥವಾ ಮನುಷ್ಯಾವಸ್ಥೆಯ ಆದರ್ಶ ಎಂಬುದು, ಪ್ರಗತಿಯ ಮತ್ತು ತನ್ನನ್ನು ತಾನು ಉಳಿದವರ ನಡುವೆ ಗೌರವಿಸುವ ಸ್ವಾತಂತ್ರ್ಯದ ಸಂಪೂರ್ಣವಾದ ಸಮಾನ ಅವಕಾಶದ ಅಡಿಪಾಯದಲ್ಲಿ ಉಳಿದ ಎಲ್ಲ ರಾಷ್ಟ್ರಗಳನ್ನು ಆಲಿಂಗನ ಮಾಡುವುದು ಎಂಬುದೇ ಆಗಿದೆ. ಮನುಷ್ಯಕುಲದ ಬಹುಪಾಲು ಇರುವ ಒಂದು ಪ್ರದೇಶದ ಸಾಮ್ರಾಜ್ಯ ಇಡಿಯಾಗಿ ನಮ್ಮ ನಡುವೆ ಆ ಆದರ್ಶದ ಸನಿಹ ನಿಲ್ಲುವ ಸಂಗತಿಯನ್ನು ತರುವುದೇ ಆದರೆ, ಆ ಸಾಮ್ರಾಜ್ಯದೊಂದಿಗೆ ಸಹಾನುಭೂತಿಯಲ್ಲದೆ ಬೇರೇನು ನನಗೆ ಮೂಡುತ್ತಿಲ್ಲ. ಭಾರತ ಒಂದು ಸಮಾನಕಲ್ಯಾಣದ (Commonwealth) ಭಾಗವಾಗಿ ಇದ್ದುಕೊಂಡು ಮತ್ತು ಸದ್ಯೋಭವಿಷ್ಯತ್ತಿನಲ್ಲಿ ಅತ್ಯಂತ ಕಮ್ಮಿಯೆಂದರೂ ಭಾರತದ ವೈಸ್‌ರಾಯಿಯ ಕೌನ್ಸಿಲ್‌ ಬಹುಮತ ಗಳಿಸಿದರೆ, ನಾವು ಇಲ್ಲಿಯ ತನಕ ಗಳಿಸಿದ ಗೆಲುವುಗಳನ್ನು ನೆಲೆನಿಲ್ಲಿಸಲು ನಮ್ಮ ಪೂರ್ತಿ ಶಕ್ತಿಯನ್ನು ವಿನಿಯೋಗಿಸಿ ಸಮಾಜದಲ್ಲಿ ಕೆಲ ಒತ್ತಡಗಳನ್ನು ಮತ್ತು ಶುದ್ದೀಕರಣಗಳನ್ನು ಮಾಡಬೇಕಾಗುತ್ತದೆ. ಅದು ತೀವ್ರವಾದ ಪರ ಅಲ್ಲ, ಎಲ್ಲ ಸಾಮ್ರಾಜ್ಯಗಳಿಗೂ ಎದುರು ನಿಲ್ಲುವ ಅರಾಜಕತಾವಾದಕ್ಕಿಂತ ಚೂರು ಕೆಳ ಮಟ್ಟದ್ದು. ಆದರೆ, ಒಂದು ಪ್ರಚೋದನೆ ಪ್ರಗತಿಯ ಕಡೆಗಿರುವ ಎಲ್ಲ ದಾರಿಗಳೂ ʼಅತಿಕ್ರಮ ಪ್ರವೇಶ ಮಾಡಿದವರನ್ನು ಶಿಕ್ಷಿಸಲಾಗುತ್ತದೆʼ ಎಂಬ ಸೂಚನೆಯಲ್ಲಿ ಮುಚ್ಚಿ ಹಾಕಲಾಗಿರುವ ನಾಡಿನಲ್ಲಿ ನಿರಾಶೆಯ ಮನಃಪೂರ್ವಕವಾದ ವಿನಾಶಕಾರಿ ಗುಣ ಏನಾದರೂ ದೊಡ್ಡ ಮಟ್ಟದ ಮುನ್ನಡೆಯನ್ನು ತರಬಲ್ಲದು. ಅದುವೇ ನಮ್ಮನ್ನು ರಾಜಕೀಯದ ಅಪಾಯಕಾರಿ ಕಾಲುದಾರಿಗಳಿಗೆ ಓಡಿಸಿತ್ತು. ಸಂವಿಧಾನವೇ ಇಲ್ಲದಿರುವಾಗ ಸಾಂವಿಧಾನಿಕ ನಡೆಗಳ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಆದರೆ, ಈಗ ಒಂದು ಸಂವಿಧಾನ ಇರುವಾಗ, ಸ್ವಯಂ ಆಡಳಿತವು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾದ ಧಾರಾಳ ಚಟುವಟಿಕೆಗಳನ್ನು ನಡೆಸಲು ತೀರ್ಮಾನಿಸಿರುವಾಗ, ಆ ಚಟುವಟಿಕೆಗಳನ್ನು ಸಂವಿಧಾನಾತ್ಮಕವಾಗಿ ಸರಕಾರ ನಡೆಸುತ್ತಿರುವಾಗ, ಈಗಿನ ರಾಜಕೀಯ ಖೈದಿಗಳಲ್ಲಿ ಯಾರು ಕೂಡ ವಿನೋದಕ್ಕಾಗಿ ಭೂಗತ ಚಟುವಟಿಕೆಗಳನ್ನು ನಡೆಸಿ, ಎಂದೂ ಕೇಳಿರದ ಯಾತನೆಯ ಕಥೆಗಳನ್ನು ಸ್ವಯಂ ಅನುಭವಿಸಬೇಕಾದ ಅಗತ್ಯವಿಲ್ಲ. ಆದ್ದರಿಂದ ರಾಜಕೀಯ ಖೈದಿಗಳ ಬಿಡುಗಡೆ, (ಬ್ರಿಟಿಷ್)‌ ಸಾಮ್ರಾಜ್ಯದ ಒಳಗಡೆ ಭಾರತದ ಪದವಿಯನ್ನು ಮತ್ತು ಅದರ ಆಡಳಿತ ಶೈಲಿಯನ್ನು ಬದಲಾಯಿಸುವ ಮನಃಪೂರ್ವಕವಾದ ಕೆಲಸಗಳನ್ನು ಬ್ರಿಟಿಷ್‌ ಸರಕಾರ ಆರಂಭಿಸಿದೆ ಎಂದು ಮನದಟ್ಟಾದರೆ, ಅದು ಭಾರತೀಯರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಸಿಗಬಹುದಾದ ಈ ಲಾಭದ ಜೊತೆಗೆ ಭವಿಷ್ಯದಲ್ಲಿ ಅದು ಯಾವ ತೊಂದರೆಯನ್ನು ಕೂಡ ಸೃಷ್ಟಿಸುವುದಿಲ್ಲ ಎಂಬ ಖಾತರಿಯೂ ಅದರಿಂದ ಸಿಗುತ್ತದೆ.</p>



<p>ಮೂರನೆಯದಾಗಿ, ಖೈದಿಗಳ ಬಿಡುಗಡೆಯಿಂದ ಮಾತ್ರವೇ ಭಾರತದ ಅಶಾಂತಿಯ ತಾಯಿಬೇರನ್ನು ಕೀಳಲಾಗುವುದಿಲ್ಲ. ಅದರ ಜೊತೆ ಜೊತೆಗೆ ದೂರಗಾಮಿಯಾದ ಸುಧಾರಣಾ ಕ್ರಮಗಳನ್ನು ಅದರ ಬೆನ್ನ ಹಿಂದೆಯೇ ನಡೆಸಬೇಕು. ಹಾಗೆಯೇ, ಜನರ ಮನಸ್ಸು ಹೃದಯಗಳನ್ನು ಗೆದ್ದು ಅವರನ್ನು ಸಂತೃಪ್ತರನ್ನಾಗಿಸಿದರೆ ಮಾತ್ರವೇ ಆ ಸುಧಾರಣೆಗಳ ಕಂತುಗಳನ್ನು ಸ್ವೀಕರಿಸಲು ಅವರು ತಯಾರಾಗುತ್ತಾರೆ. ಖೈದಿಗಳ ಬಿಡುಗಡೆ ನಡೆಯದಿದ್ದರೆ ಅದು ಅಸಾಧ್ಯ. ಸಾವಿರಗಟ್ಟಲೆ ಕುಟುಂಬಗಳು ನಿಜಾರ್ಥದಲ್ಲಿ ಹರಿದು ಚೂರಾಗಿ ಹೋಗಿರುವಾಗ, ಪ್ರತಿ ಎರಡರಲ್ಲಿ ಒಂದು ಮನೆಯ ಮಡಿಲಿನಿಂದ ಸಹೋದರ, ಮಗ, ಗಂಡ, ಪ್ರಿಯತಮರನ್ನು ಕಿತ್ತುಕೊಂಡು ಜೈಲಿಗೆ ಹಾಕಿರುವಾಗ, ಅದು ಹೇಗೆ ಈ ನಾಡಿನಲ್ಲಿ ಶಾಂತಿ ಮತ್ತು ಪರಸ್ಪರ ನಂಬಿಕೆ, ಸ್ನೇಹಗಳು ಹುಟ್ಟಿಕೊಳ್ಳುವುದು? ಅದು ಮನುಷ್ಯತ್ವಕ್ಕೆ ವಿರುದ್ಧವಾದ ಕೆಲಸ. ಯಾಕೆಂದರೆ, ರಕ್ತ ನೀರಿಗಿಂತ ಗಟ್ಟಿಯಾಗಿರುತ್ತದೆ.</p>



<p>ನಾಲ್ಕನೆಯದಾಗಿ, ರಾಜಕೀಯದ ಹೆಸರಿನಲ್ಲಿ ಬಂಧಿಸಲ್ಪಟ್ಟಿರುವ ಎಲ್ಲರಿಗೂ ಜೈಲಿನ ಬಾಗಿಲುಗಳನ್ನು ವಿಶ್ವದೆಲ್ಲೆಡೆ ತೆರೆದು ಕೊಡಲಾಗುತ್ತಿದೆ. ರಷ್ಯಾದಲ್ಲಿ ಹೇಳಲೇ ಬೇಕಾಗಿಲ್ಲ. ಜೊತೆಗೆ ಫ್ರಾನ್ಸ್‌, ಐರ್ಲೆಂಡ್‌ ಮತ್ತು ಟ್ರಾನ್ಸ್‌ವಾಲಲ್ಲಿ. ಯುದ್ಧ ಈಗಲೂ ಅವರ ಮೇಲೆ ಭಾರವಾಗಿ ತೂಗಿ ನಿಲ್ಲುತ್ತಿದ್ದರೂ ಆಸ್ಟ್ರಿಯಾ ಕೂಡ ರಾಜಕೀಯ ಖೈದಿಗಳ ಬಿಡುಗಡೆಯನ್ನು ನಿಷೇಧಿಸಲಿಲ್ಲ. ಹಾಗೆ ಬಿಡುಗಡೆಗೊಂಡ ಖೈದಿಗಳು ʼಸಾಮಾನ್ಯ ಪಾಲುದಾರಿಕೆಯನ್ನು ಮಾತ್ರʼ ಹೊಂದಿದ್ದವರೆಂದು ಹೇಳಲೂ ಆಗದು. ಯಾಕೆಂದರೆ, ವೋಟಿಂಗ್‌ ಹಕ್ಕಿಗಾಗಿ ಹೋರಾಡಿದವರನ್ನೇ ತೆಗೆದು ನೋಡುವುದಾದರೆ ಅವರಲ್ಲಿ ಬಹುಪಾಲು ಜನರು ಕೂಡ ʼವೈಯಕ್ತಿಕ ಕೃತ್ಯಗಳಿಗಾಗಿʼ ಜೈಲಿಗೆ ಹಾಕಲ್ಪಟ್ಟವರಾಗಿದ್ದರು. ಮಿಸ್ಟರ್‌ ಬೋನಾರ್‌ ಲೋಯ ಮಾತನ್ನೇ ಹೇಳುವುದಾದರೆ, ಕಟ್ಟಡಗಳಿಗೆ ಅನಧಿಕೃತವಾಗಿ ಬೆಂಕಿಯಿಟ್ಟವರು ಕೂಡ ಯುದ್ಧ ಶುರುವಾದ ನಂತರ ಬಿಡುಗಡೆಗೊಂಡರು. ಪ್ರಪಂಚದ ಎಲ್ಲ ದೇಶಗಳಲ್ಲೂ ಉತ್ತಮವೆಂದು ಅಂಗೀಕರಿಸಿದ ಈ ಕೆಲಸವನ್ನು, ಭಾರತದಲ್ಲಿ ಮಾತ್ರ ವಿನಾಶಕಾರಿ ಎಂದು ನಂಬಲಾಗಿದೆ.</p>



<p>ಐದನೆಯದಾಗಿ, ಸರಿಯೋ ತಪ್ಪೋ, ಸಾವಿರಗಟ್ಟಲೆ ಜನರಿಂದ ಆರಾಧಿಸಲ್ಪಡುವವರು ಸಮಕಾಲೀನ ಚಟುವಟಿಕೆಗಳ ಎದುರಾಳಿಗಳೆಂದು ಬಗೆದು ಜೈಲಲ್ಲಿ ಕೊಳೆಸುವ ತನಕವೂ ಅಧಿಕಾರಿಗಳನ್ನು ಎದುರಿಸುವ ಒಂದು ಪರಂಪರೆಯನ್ನು, ಅವರ ಭಕ್ತರನ್ನು ಮತ್ತು ಅಂಧರಾದ ಅನುಯಾಯಿಗಳನ್ನು ಸೃಷ್ಠಿಸುತ್ತಲೇ ಇರುತ್ತದೆ. ಆದರೆ, ಈ ಮನುಷ್ಯರನ್ನು ಬಿಡುಗಡೆಗೊಳಿಸುವುದಾದರೆ, ಅವರಲ್ಲಿ ಕೆಲವರಾದರೂ ದೇಶದ ಒಳಿತಿಗಾಗಿ ಬ್ರಿಟಿಷರೊಂದಿಗೆ ಸಹಕರಿಸುವುದು ಅಪಾಯಕಾರಿಯಲ್ಲವೆಂದು ಅರ್ಥಮಾಡಿಕೊಂಡು, ಅದನ್ನು ಭಾಷಣಗಳ ಮೂಲಕ ಹೇಳಿಕೊಂಡು, ಆ ಪ್ರಭಾವಕ್ಕಾಗಿ ಉದಾಹರಣೆಯನ್ನೂ ಸೃಷ್ಠಿಸಿದರೆಂದರೆ, ಅವರನ್ನು ಮಾದರಿಯಗಿ ಕಾಣುವವರು ಒಂದು ಹೊಸದಿನ ಹುಟ್ಟಿತೆಂದೂ ಭೂತಕಾಲದ ಕತ್ತಲಿಗೆ ಸಾಹಸಯಾತ್ರೆ ಮಾಡುವುದನ್ನು ಕೈಬಿಟ್ಟುಕೊಂಡು ಶುದ್ಧಗಾಳಿ ಮತ್ತು ಸೂರ್ಯನ ಬೆಳಕು ತುಂಬಿದ ಹೊಸ ದಾರಿಯಲ್ಲಿ ಹೊಸ ಆರಂಭ ಶುರುವಾಗಿದೆಯೆಂದೂ ಅವರು ನಂಬುತ್ತಾರೆ.</p>



<p>ಆರನೆಯದಾಗಿ, ಭಾರತದ ಖೈದಿಗಳಲ್ಲಿ ಬಹುತೇಕ ಖೈದಿಗಳನ್ನು ಬಂಧಿಸಿರುವುದು ಗೂಢಾಲೋಚನೆ ಪ್ರಕರಣಗಳಲ್ಲಿ. ಇಂತಹ ಪ್ರಕರಣಗಲ್ಲಿ ತನ್ನ ಚಟುವಟಿಕೆಯ ಫಲದ ಜೊತೆಗೆ ಉಳಿದವರ ಚಟುವಟಿಕೆಯ ಫಲವನ್ನೂ ಸಹಿಸಬೇಕಾಗುತ್ತದೆ. ಅವರಲ್ಲಿ ಕೆಲವರು ಈಗಾಗಲೇ ಹತ್ತೋ ಒಂಭತ್ತೋ ಎಂಟೋ ವರ್ಷಗಳಿಂದ ಜೈಲಲ್ಲಿ ಕಳೆಯುತ್ತಿದ್ದಾರೆ. ಕೆಲವರು ಎರಡು ವರ್ಷಗಳಿಂದ ಕಠಿಣವೂ ತ್ರಾಸದಾಯಕವೂ ಇನ್ನಿಲ್ಲದ ಕೆಟ್ಟ ದಾಸ್ಯದಲ್ಲೂ. ಇಂಡಿಯನ್‌ ಜೈಲು ವ್ಯವಸ್ಥೆಯ ಪ್ರಕಾರವೇ, ಕಾಲ ಮತ್ತು ಆರೋಗ್ಯದ ಪರಿಸ್ಥಿತಿಯನ್ನು ಗಮನಿಸಿಕೊಂಡು ಅವರಲ್ಲಿ ಹಲವರು ಬಿಡುಗಡೆಗೆ ಅರ್ಹರಾಗಿದ್ದಾರೆ.</p>



<p>ಈ ಎಲ್ಲ ಕಾರಣಗಳಿಂದ ನಾನು ಈ ನಿವೇದನೆಯನ್ನು ನನ್ನ ಉತ್ತಮ ನಂಬಿಕೆ ಮತ್ತು ನಿರೀಕ್ಷೆಯೊಂದಿಗೆ ಗೃಹ ಕಾರ್ಯದರ್ಶಿಗಳು ನಮ್ಮ ದ್ವೀಪಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ಅವರ ಗಮನಕ್ಕೆ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಮುಕ್ತ ಮನಸ್ಸಿನಿಂದ ಸಮರ್ಪಿಸುತ್ತಿದ್ದೇನೆ.</p>



<p>ಸಂಕ್ಷಿಪ್ತವಾಗಿ, ಎಲ್ಲ ನಿಷ್ಠೆಯನ್ನು ಸೇರಿಸಿಕೊಂಡು ನಾನು ಸೇರಿಸಲು ಬಯಸುವುದೇನೆಂದರೆ, ನನ್ನ ಮಾತ್ರ ಬಿಡುಗಡೆ ಬಯಸಿ ನಾನಿದನ್ನು ಬರೆಯುತ್ತಿದ್ದೇನೆಂದು ಸರಕಾರ ಭಾವಿಸುವುದೇ ಆಗಿದ್ದರೆ ಅಥವಾ ಈ ಬಿಡುಗಡೆಗೆ ನನ್ನ ಹೆಸರು ಮಾತ್ರವೇ ಅಡ್ಡಗಾಲಾಗಿ ನಿಂತಿರುವುದಾದರೆ, ಸರಕಾರ ನನ್ನ ಹೆಸರನ್ನು ಕೈಬಿಟ್ಟು ಉಳಿದ ಎಲ್ಲರನ್ನು ಬಿಡುಗಡೆ ಮಾಡಬೇಕು. ಅದು ನನಗೆ ಬಿಡುಗಡೆ ಸಿಕ್ಕಷ್ಟೇ ಸಂತೋಷವನ್ನು ನನಗೆ ನೀಡುತ್ತದೆ. ಸರಕಾರ ಅಂತಹದ್ದೊಂದು ನಿರ್ಧಾರ ತೆಗೆದುಕೊಳ್ಳುವುದೇ ಆಗಿದ್ದರೆ, ಭಾರತದಿಂದ ದೂರಕ್ಕೆ ಗಡೀಪಾರು ಶಿಕ್ಷೆಗೆ ಗುರಿಯಾದವರು ಕೂಡ ಬಿಡುಗಡೆ ಕಾಣುವಂತಾಗುತ್ತಾರೆ. ಸ್ವಂತ ನಾಡಿನಲ್ಲಿ ಅಪರಿಚಿತರಾಗಿ ಬದುಕುತ್ತಿರುವ ಅವರು ಭಾರತ ಸರಕಾರದೊಂದಿಗೆ ವಿರೋಧಿ ನಿಲುವನ್ನು ತಳೆಯುವ ಸಾಧ್ಯತೆ ಇದೆ. ಆದರೆ, ಮರಳಿ ಬರಲು ಅನುವು ಮಾಡಿಕೊಡುವುದಾದರೆ, ಈ ಹೊಸ ಮತ್ತು ನಿಜವಾದ ಸಂವಿಧಾನವನ್ನು ಕಾರ್ಯಗತಗೊಳಿಸುವುದೇ ಆಗಿದ್ದರೆ ಅವರಲ್ಲಿ ಬಹುತೇಕ ಜನರು ಮಾತೃಭೂಮಿಗಾಗಿ ಪ್ರತ್ಯಕ್ಷವಾಗಿ ಮತ್ತು ಸಂವಿಧಾನಾತ್ಮಕವಾಗಿ ಕೆಲಸವನ್ನೂ ಮಾಡುತ್ತಾರೆ.</p>



<p>ಗೌರವಯುತರಾದ ತಾವು ಸ್ಟೇಟ್‌ ಸೆಕ್ರೆಟರಿ ಎದುರು ನನ್ನ ನಿವೇದನೆಯನ್ನು ಸಮರ್ಪಿಸುವಲ್ಲಿ ಹಿಂದೇಟು ಹಾಕುವುದಿಲ್ಲವೆಂದು ನಂಬಿಕೊಂಡು, ಜನರಿಗಾಗಿ ಒಬ್ಬ ಖೈದಿ.</p>



<p>ಇತೀ ತಮ್ಮ ವಿಶ್ವಾಸಿ,</p>



<p>ಸಹಿ,</p>



<p>ವಿ.ಡಿ. ಸಾವರ್ಕರ್</p>
]]></content:encoded>
					
		
		
			</item>
		<item>
		<title>ಹಿಂದುತ್ವ ರಾಜಕಾರಣದ ಕಥೆ- 15 : ಬ್ರಿಟಿಷ್‌ ವಿರೋಧದ ಅವಸಾನಕಾಂಡ</title>
		<link>https://peepalmedia.com/story-of-hindutva-politics-15-the-end-of-british-opposition/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 13 May 2024 13:41:10 +0000</pubDate>
				<category><![CDATA[ಅಂಕಣ]]></category>
		<category><![CDATA[hindutva rajakaranada kathe]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Sunaif]]></category>
		<guid isPermaLink="false">https://peepalmedia.com/?p=39406</guid>

					<description><![CDATA[ಸಾವರ್ಕರ್ ಈಜು ಸಾಹಸದ ಬಗ್ಗೆ ನಂತರದ ಕಾಲದಲ್ಲಿ ಹಲವು ಕಥೆಗಳು ಹುಟ್ಟಿಕೊಂಡಿದ್ದವು. ಸಮುದ್ರದಲ್ಲಿ ಈಜಿ ದಾಟಿದ ಮೈಲುಗಳು, ತೀರದಲ್ಲಿ ಓಡಿದ ದೂರ ಎಲ್ಲವೂ ಬಣ್ಣ ಬಣ್ಣದ ಕಥೆಗಳಾದವು. ಅವೆಲ್ಲವನ್ನು ಧನಂಜಯ್‌ ಕೀರ್‌ ಜೊತೆಗಿನ ಮಾತುಕತೆಯಲ್ಲಿ ಸಾವರ್ಕರ್‌ ನಿರಾಕರಿಸುತ್ತಾರೆ. ಬಂದರಿನಲ್ಲಿ ಲಂಗರು ಹಾಕಿದ್ದ ಹಡಗಿನಿಂದ ತಾನು ಹಾರಿ ದಡ ಸೇರಿದೆ ಎಂದು ಸಾವರ್ಕರ್‌ ಸ್ಪಷ್ಟವಾಗಿ ಹೇಳುತ್ತಾರೆ. ಮಾರ್ಸೆಲ್ಸ್‌ನಿಂದ ಜುಲೈ ೯ಕ್ಕೆ ಹೊರಟ ಎಸ್‌.ಎಸ್.‌ ಮೊರಿಯಾ ೧೭ರಂದು ಯೆಮನಿನ ಏಡನ್‌ ಬಂದರು ತಲುಪುತ್ತದೆ. ಅಲ್ಲಿಂದ ಸಾಲ್ಸೆಟ್‌ ಎಂಬ ಹಡಗಿನಲ್ಲಿ ಸಾವರ್ಕರನ್ನು [&#8230;]]]></description>
										<content:encoded><![CDATA[
<p></p>



<p></p>



<p></p>



<p></p>



<p></p>



<p>ಸಾವರ್ಕರ್ ಈಜು ಸಾಹಸದ ಬಗ್ಗೆ ನಂತರದ ಕಾಲದಲ್ಲಿ ಹಲವು ಕಥೆಗಳು ಹುಟ್ಟಿಕೊಂಡಿದ್ದವು. ಸಮುದ್ರದಲ್ಲಿ ಈಜಿ ದಾಟಿದ ಮೈಲುಗಳು, ತೀರದಲ್ಲಿ ಓಡಿದ ದೂರ ಎಲ್ಲವೂ ಬಣ್ಣ ಬಣ್ಣದ ಕಥೆಗಳಾದವು. ಅವೆಲ್ಲವನ್ನು ಧನಂಜಯ್‌ ಕೀರ್‌ ಜೊತೆಗಿನ ಮಾತುಕತೆಯಲ್ಲಿ ಸಾವರ್ಕರ್‌ ನಿರಾಕರಿಸುತ್ತಾರೆ. ಬಂದರಿನಲ್ಲಿ ಲಂಗರು ಹಾಕಿದ್ದ ಹಡಗಿನಿಂದ ತಾನು ಹಾರಿ ದಡ ಸೇರಿದೆ ಎಂದು ಸಾವರ್ಕರ್‌ ಸ್ಪಷ್ಟವಾಗಿ ಹೇಳುತ್ತಾರೆ.</p>



<p>ಮಾರ್ಸೆಲ್ಸ್‌ನಿಂದ ಜುಲೈ ೯ಕ್ಕೆ ಹೊರಟ ಎಸ್‌.ಎಸ್.‌ ಮೊರಿಯಾ ೧೭ರಂದು ಯೆಮನಿನ ಏಡನ್‌ ಬಂದರು ತಲುಪುತ್ತದೆ. ಅಲ್ಲಿಂದ ಸಾಲ್ಸೆಟ್‌ ಎಂಬ ಹಡಗಿನಲ್ಲಿ ಸಾವರ್ಕರನ್ನು ಬಾಂಬೆಗೆ ಕರೆತರಲಾಗುತ್ತದೆ. ಈ ರೀತಿ ೧೯೧೦ ಜುಲೈ ೨೨ರಂದು ಸಾವರ್ಕರ್‌ ಬಾಂಬೆ ಪೊಲೀಸರ ಕಸ್ಟಡಿ ಸೇರುತ್ತಾರೆ.</p>



<p>ಆದರೆ, ಸಾವರ್ಕರನ್ನು ಫ್ರೆಂಚ್‌ ನೆಲದಿಂದ ಬ್ರಿಟಿಷ್‌ ಪೊಲೀಸರು ಅರೆಸ್ಟ್‌ ಮಾಡಿದ ಪ್ರಸಂಗ ವಿವಾದವಾಗುತ್ತದೆ. ಕಾರ್ಲ್‌ ಮಾರ್ಕ್ಸ್‌ನ ಮೊಮ್ಮಗ ಯಾಂಗ್‌ ಲೋಂಗಟ್‌ ಈ ಮಾನವ ಹಕ್ಕು ಉಲ್ಲಂಘನೆಯನ್ನು ಎತ್ತಿ ತೋರಿಸಿದ ಮೊದಲಿಗ. ನಂತರ ಫ್ರೆಂಚ್‌ ಸೋಶ್ಯಲಿಸ್ಟ್‌ ನಾಯಕ ಯಾಂಗ್‌ ಜೋರಸ್‌ ಈ ಪ್ರಕರಣವನ್ನು ಮುಂದುವರಿಸುತ್ತಾನೆ. ಅದು ನಂತರ ಬ್ರಿಟಿಷ್‌-ಫ್ರೆಂಚ್‌ ಸರಕಾರಗಳ ನಡುವಿನ ವಿವಾದವಾಗಿ ಬದಲಾಗುತ್ತದೆ. ಇದು ಉತ್ತುಂಗಕ್ಕೇರಿದಾಗ ೧೯೧೦ ಅಕ್ಟೋಬರ್‌ ೨೫ರಂದು ಎರಡೂ ಸರಕಾರಗಳು ಒಟ್ಟಿಗೆ ಮಾರ್ಸೆಲ್ಸ್‌ ಪ್ರಕರಣಕ್ಕೆ ಅಂತಿಮ ತೀರ್ಪು ನೀಡಲು ಸಮಿತಿಯೊಂದನ್ನು ರಚಿಸಲು ತೀರ್ಮಾನಿಸುತ್ತಾರೆ. ಹೇಗ್‌ನ ಅಂತರಾಷ್ಟ್ರೀಯ ವಿವಾದ ಪರಿಹಾರ ಸಮಿತಿಯ ಐವರು ಮತ್ತು ಬ್ರಿಟನ್‌ ಮತ್ತು ಫ್ರಾನ್ಸಿನಿಂದ ತಲಾ ಒಬ್ಬರು ಈ ಸಮಿತಿಯಲ್ಲಿದ್ದರು. ಅದೇ ಹೊತ್ತು ಈ ಸಮಿತಿ ಮಾರ್ಸೆಲ್ಸ್‌ನಲ್ಲಿ ನಡೆದ ಬಂಧನದ ಪ್ರಕರಣವನ್ನು ಕೈಗೆತ್ತಿಕೊಳ್ಳುವ ಮೊದಲೇ ಭಾರತದಲ್ಲಿ ಸಾವರ್ಕರ್ ವಿಚಾರಣೆ ಆರಂಭಿಸಲು ಬ್ರಿಟಿಷ್‌ ಸರಕಾರ ತೀರ್ಮಾನಿಸಿತ್ತು. ಇದು ಕೂಡ ಇನ್ನೊಂದು ಅಂತರಾಷ್ಟ್ರೀಯ ವಿವಾದವಾಗುತ್ತದೆ.</p>



<p>ಸಾವರ್ಕರ್‌ ಮೇಲೆ ಇದ್ದ ಪ್ರಕರಣಗಳಲ್ಲಿ ಮೊದಲನೆಯ ಪ್ರಕರಣ ನಾಸಿಕ್‌ ಗೂಢಾಲೋಚನೆಯಾಗಿತ್ತು. ಅದರ ವಿಚಾರಣೆ ೧೯೧೦ ಸೆಪ್ಟೆಂಬರ್‌ ೧೫ರಂದು ಆರಂಭವಾಗಿತ್ತು. ಕಾಶಿನಾಥ್‌ ಅಂಕುಷ್ಕರ್‌, ದತ್ತಾತ್ರೇಯ ಜೋಷಿ, ಡಬ್ಲ್ಯೂ.ಆರ್. ಕುಲಕರ್ಣಿ, ಲಂಡನ್ನಿನಿಂದ ಭಾರತಕ್ಕೆ ಸಾವರ್ಕರ್‌ ಆಜ್ಞೆಯಂತೆ ಆಯುಧ ಸಾಗಿಸಿದ್ದ ಚತುರ್ಭುಜ್‌ ಅಮೀನ್‌ ಮೊದಲಾದವರು ಮಾಫಿ ಸಾಕ್ಷಿಗಳಾಗಿದ್ದರು. ಆದರೆ, ಸಾವರ್ಕರ್‌ ಪರ ವಕೀಲ ವಾದಿಸಿದ್ದು ಮಾತ್ರ ಮಾರ್ಸೆಲ್ಸ್‌ನ ಘಟನೆಯನ್ನು ತಪ್ಪಾಗಿ ವಿವರಿಸುವ ಮೂಲಕವಾಗಿತ್ತು. ಎಸ್.ಎಸ್. ‌ಮೋರಿಯಾ ಮಾರ್ಸೆಲ್ಸ್‌ ತಲುಪಿದಾಗ ಸಾವರ್ಕರ್‌ ತನ್ನನ್ನು ತಪ್ಪಾಗಿ ಅರೆಸ್ಟ್‌ ಮಾಡಲಾಗಿದೆಯೆಂದೂ ಆದ್ದರಿಂದ ತನಗೆ ಹಡಗಿನಿಂದ ಇಳಿಯಲು ಸ್ವಾತಂತ್ರ್ಯವಿದೆಯೆಂದೂ ಹೇಳುತ್ತಾರೆ. ಆದರೆ ಅದನ್ನು ನಿರಾಕರಿಸಲಾಯಿತು. ಜೊತೆಗೆ ಇಬ್ಬರು ಫ್ರೆಂಚ್‌ ಅಧಿಕಾರಿಗಳು ತನ್ನನ್ನು ಕಾಣಲೆಂದು ಹಡಗಿಗೆ ಬಂದಿದ್ದರು, ಅವರನ್ನು ಕೂಡ ತಡೆದು ಭೇಟಿ ನಿರಾಕರಿಸಲಾಯಿತು. ಈ ಹಂತದಲ್ಲಿ ಸಾವರ್ಕರ್‌ ಬೇರೆ ದಾರಿಯಿಲ್ಲದೆ ಹಡಗಿನಿಂದ ಹೊರಗೆ ಹಾರಲು ತೀರ್ಮಾನಿಸುವುದು ಎಂಬುವುದು ವಕೀಲರ ವಾದ.</p>



<p>ನಾಸಿಕ್‌ ಗೂಢಾಲೋಚನೆ ಕೇಸಿನಲ್ಲಿ ೩೮ ಜನರು ಆರೋಪಿಗಳಾಗಿದ್ದರು. ನಾಸಿಕ್‌, ಪುಣೆ, ಔರಂಗಾಬಾದಿನಿಂದ ಹಿಡಿದು ದಖ್ಖನ್ ಪ್ರಸ್ಥಭೂಮಿಯ ತನಕದ ಜನರು ಆರೋಪ ಪಟ್ಟಿಯಲ್ಲಿದ್ದರು. ಆದರೆ, ಅವರನ್ನೆಲ್ಲ ಪರಸ್ಪರ ಬಂಧಿಸುವ ಇನ್ನೊಂದು ಅಂಶ ಅಲ್ಲಿತ್ತು. ಅವರಲ್ಲಿ ಒಬ್ಬನನ್ನು ಬಿಟ್ಟು ಉಳಿದವರೆಲ್ಲರು ಚಿತ್ಪಾವನ ಬ್ರಾಹ್ಮಣರಾಗಿದ್ದರು. ಅವರಲ್ಲಿಯೇ ಮೂವರು, ಶಂಕರ್‌ ಬಲವಂತ್‌ ವೈದ್ಯ, ವಿನಾಯಕ್‌ ಸದಾಶಿವ್‌ ಬಾರ್ವೇ, ವಿನಾಯಕ್‌ ಕಾಶಿನಾಥ್‌ ಪುಲಂಬ್ರಿಕರ್‌ ಮಾಫಿ ಸಾಕ್ಷಿಗಳಾಗಿ ಬದಲಾದ ಕಾರಣ ಆರೋಪ ಪಟ್ಟಿಯಿಂದ ಅವರನ್ನು ಕೈಬಿಡಲಾಗಿತ್ತು.</p>



<p><em>ಅಭಿನವ್‌ ಭಾರತ್</em>‌ನ ಹೊಸ ಸದಸ್ಯರಲ್ಲಿ ಒಬ್ಬನಾಗಿದ್ದ ರಘುನಾಥ್‌ ವೆಂಕಟೇಶ್‌ ಗೋಸಾವಿ ಸಾವರ್ಕರ್‌ ವಿರುದ್ಧ ಹೇಳಿಕೆ ಕೊಟ್ಟ. ಇದರಲ್ಲಿ ಗಮನಿಸಬೇಕಾದ ವಿಶೇಷತೆಯೆಂದರೆ, ಆತನ ಹೇಳಿಕೆ <em>ಅಭಿನವ್‌ ಭಾರತ್‌</em> ಎಂಬ ಸಂಘಟನೆಯ ನಿಜವಾದ ರೂಪವನ್ನು ತೋರಿಸಿಕೊಡುವಂತದ್ದಾಗಿತ್ತು ಎಂಬುದು. <em>ಅಭಿನವ್‌ ಭಾರತ್ </em>ಮೂರು ಗುಂಪುಗಳನ್ನು ಒಳಗೊಂಡಿತ್ತು. ಮೊದಲನೆಯದು ಬ್ರಿಟಿಷರ ವಿರುದ್ಧ ಯುದ್ಧ ಮಾಡುವ ಕ್ರಾಂತಿಕಾರಿಗಳದ್ದು. ವಿನಾಯಕ್‌ ದಾಮೋದರ್‌ ಸಾವರ್ಕರ್, ಬಾಬಾರಾವ್‌, ಆಬಾ ದಾರೇಕರ್‌ ಮೊದಲಾದವರು ಈ ಗುಂಪಿಗೆ ಸೇರುವವರು. ಎರಡನೆಯ ಗುಂಪು ದೈಹಿಕ ತಾಲೀಮಿನಲ್ಲಿ ಆಸಕ್ತಿ ಇರುವವರದ್ದು. ವಿಷ್ಣು ಮಹಾದೇವ್‌ ಕೇಲ್ಕರ್‌, ಧನಪ್ಪ ಮೊದಲಾದವರು ಈ ಗುಂಪಿನಲ್ಲಿದ್ದರು. ಬೆಂಕಿಯುಗುಳುವ ಭಾಷಣಗಳ ಮೂಲಕ ಕೇಳುಗರ ಮನಃಪರಿವರ್ತನೆ ಮಾಡುವ ಗುಂಪಿಗೆ ಸೇರುವವರು ನಾರಾಯಣ್‌ ರಾವ್‌ ಸಾವರ್ಕರ್‌, ಬಾಪು ಜೋಷಿ ಮೊದಲಾದವರು. ಹೊಸಬರನ್ನು ಈ ಮೂರನೇ ಗುಂಪಿಗೆ ಸೇರಿಸಲಾಗುತ್ತದೆ. ಕಾಲಕ್ರಮೇಣ ಎರಡನೆಯ ಗುಂಪಿಗೂ, ಮೊದಲನೆಯ ಗುಂಪಿಗೂ ವ್ಯಕ್ತಿಗಳ ಪಕ್ವತೆಯ ಆಧಾರದಲ್ಲಿ ʼಬಡ್ತಿʼ ನೀಡಲಾಗುತ್ತದೆ. ಮೊದಲನೆಯ ಗುಂಪಿಗೆ ಸೇರಬೇಕಾದರೆ ಪ್ರತಿಜ್ಞೆ ಸ್ವೀಕರಿಸಬೇಕಾಗಿತ್ತು.</p>



<p>ಇಂಡಿಯಾ ಹೌಸಿನ ಬಾಣಸಿಗನಾಗಿದ್ದ ಚತುರ್ಭುಜ್ ಅಮೀನನ ಹೇಳಿಕೆ ಸಾವರ್ಕರನ್ನು ನಿಜವಾಗಿ ಇಕ್ಕಟ್ಟಿಗೆ ಸಿಲುಕಿಸುತ್ತದೆ. <em>ಅಭಿನವ್‌ ಭಾರತ್</em>ನ ಬ್ರಾಹ್ಮಣ ಗುಣವನ್ನು ಸ್ಪಷ್ಟವಾಗಿ ತೋರಿಸಿಕೊಡುವ ಹೇಳಿಕೆಯಾಗಿತ್ತದು. ಶಿವಾಜಿಯ ಪಟದ ಮುಂದೆ ಒಂದು ದೀಪ ಹಚ್ಚಿಟ್ಟು ಅದರ ಮುಂದೆ ಕೂರಿಸಿ ಚತುರ್ಭುಜ್‌ ಅಮೀನನಿಗೆ ಸಾವರ್ಕರ್‌ <em>ಅಭಿನವ್‌ ಭಾರತ್‌ </em>ಸೇರುವ ಪ್ರತಿಜ್ಞೆ ಹೇಳಿಕೊಟ್ಟಿದ್ದರು. ಅಷ್ಟೇ ಅಲ್ಲ ಚತುರ್ಭುಜ್‌ ಅಮೀನನ ಚಾಚಿದ ಕೈಗೆ ನೀರು ಚಿಮುಕಿಸಿ ಹತ್ತು ನಿಮಿಷಗಳ ಕಾಲ ಸಂಸ್ಕೃತ ಶ್ಲೋಕ ಹೇಳಿದ ನಂತರವೇ ಈ ಪ್ರತಿಜ್ಞೆ ಹೇಳಿಕೊಡಲಾಗಿತ್ತು. ಒಂದು ಸಂಘಟನೆಗೆ ಸದಸ್ಯರಾಗಿಸಲು ಆಧುನಿಕವಾದ ರೀತಿ ನೀತಿಗಳನ್ನು ಅನುಸರಿಸದೆ ಅದರಿಂದ ಬಹಳ ಹಿಂದಕ್ಕೆ ಚಲಿಸುವ ಈ ಶೈಲಿ ಬ್ರಾಹ್ಮಣ ಅನುಷ್ಠಾನ ಕರ್ಮಗಳನ್ನು ನೆನಪಿಗೆ ತರುತ್ತದೆ. ಪಿಸ್ತೂಲ್‌ ಕೊಟ್ಟು ಕಳುಹಿಸಿದ್ದು ಹರಿ ಆನಂದ್‌ ತಟ್ಟೇಯ ಹೆಸರಿನಲ್ಲಿ. ಹೆಚ್ಚು ತಪಾಸಣೆ ಇಲ್ಲದಿರಲು ಇಟಾಲಿಯನ್‌ ಹಡಗನ್ನು ಆಯ್ದುಕೊಳ್ಳಲಾಗಿತ್ತು. ತಟ್ಟೇ ಸಿಗದಿದ್ದರೆ ವಿಷ್ಣು ಮಹಾದೇವ್‌ ಭಟ್‌ ಕೈಯಲ್ಲಿ ಆಯುಧಗಳನ್ನು ನೀಡಲು ಸಾವರ್ಕರ್‌ ಆಜ್ಞಾಪಿಸಿದ್ದರು. ಇದೆಲ್ಲವನ್ನು ಮಾಡಿಕೊಡುವುದಕ್ಕಾಗಿ ಐದು ಪೌಂಡ್ ಸಾಲ ಕೊಡಲೂ ಸಾವರ್ಕರ್‌ ಒಪ್ಪಿದ್ದರು.</p>



<p>೧೯೧೦ ಡಿಸೆಂಬರ್‌ ೨೩ರಂದು ನ್ಯಾಯಾಲಯ ತೀರ್ಪು ನೀಡಿತು. ಅಂದಿನ ಇಂಡಿಯನ್‌ ಪೀನಲ್‌ ಕೋಡ್‌ ೧೨೧ ಎ ಪ್ರಕಾರ ವಿನಾಯಕ್‌ ದಾಮೋದರ್‌ ಸಾವರ್ಕರನ್ನು ಗಡಿಪಾರು ಮಾಡಲು (ಜೀವಾವಧಿ ಜೈಲು ಶಿಕ್ಷೆಯೊಂದಿಗೆ) ಮತ್ತು ಸೊತ್ತು ಮುಟ್ಟುಗೋಲು ಹಾಕಲು ವಿಧಿಸಲಾಯಿತು. ನಾರಾಯಣ್‌ ರಾವ್‌ ಸಾವರ್ಕರ್‌ಗೆ ಆರು ತಿಂಗಳ ಕಠಿಣ ಸಜೆಯನ್ನೂ ನೀಡಲಾಯಿತು.</p>



<p>ಜಾಕ್ಸನ್‌ ಕೊಲೆ ಪ್ರೇರೇಪಣೆಯ ಪ್ರಕರಣದ ವಿಚಾರಣೆ ಅದರ ನಂತರವೇ ಆರಂಭವಾಗುವುದು. ೧೯೧೧ ಜನವರಿ ೩೦ರಂದು ನೀಡಿದ ತೀರ್ಪಿನಂತೆ ಇನ್ನೊಂದು ಗಡಿಪಾರು (ಜೀವಾವಧಿ ಜೈಲು ಶಿಕ್ಷೆಯೊಂದಿಗೆ) ಶಿಕ್ಷೆಯೂ ಸಾವರ್ಕರ್‌ಗೆ ಲಭಿಸುತ್ತದೆ. ಅಂದಿನ ಕಾನೂನು ಪ್ರಕಾರ ಒಂದು ಜೀವಾವಧಿ ಶಿಕ್ಷೆ ೨೫ ವರ್ಷಗಳಾಗಿದ್ದವು. ಎರಡು ಜೀವಾವಧಿ, ಅಂದರೆ ೫೦ ವರ್ಷಗಳ ಜೈಲುಶಿಕ್ಷೆ ಸಾವರ್ಕರ್‌ಗೆ ಲಭಿಸಿತ್ತು.</p>



<p>ಸುಮಾರು ಈ ಹೊತ್ತಿನಲ್ಲಿಯೇ ಹೇಗ್‌ನಲ್ಲಿ ಮಾರ್ಸೆಲ್ಸ್‌ ಘಟನೆ ಕುರಿತ ಫ್ರೆಂಚ್-ಇಂಗ್ಲೆಂಡ್‌ ವಿವಾದವನ್ನು ಪರಿಹಾರ ಸಮಿತಿ ಪರಿಶೋಧಿಸುತ್ತಿತ್ತು. ೧೯೧೧ ಫೆಬ್ರವರಿ ೨೪ರಂದು ಸಮಿತಿ ಅದರ ತೀರ್ಪು ಪ್ರಕಟಿಸಿತು. ಅದು ಕೂಡ ಸಾವರ್ಕರ್‌ಗೆ ಪ್ರತಿಕೂಲವಾಗಿತ್ತು. ʼಬ್ರಿಟಿಷ್‌ ಸರಕಾರ ವಿನಾಯಕ್‌ ದಾಮೋದರ್‌ ಸಾವರ್ಕರನ್ನು ಫ್ರೆಂಚ್‌ ರಿಪಬ್ಲಿಕಿಗೆ ಹಸ್ತಾಂತರಿಸಬೇಕಾದ ಅಗತ್ಯವಿಲ್ಲʼ ಎಂಬುದು ಆ ತೀರ್ಪಿನ ಸಾರಾಂಶ.</p>



<p>೧೯೧೧ ಜೂನ್‌ ೨೭ರಂದು ವಿನಾಯಕ್‌ ದಾಮೋದರ್‌ ಸಾವರ್ಕರನ್ನು ಹೊತ್ತ ಎಸ್.ಎಸ್.‌ ಮಹಾರಾಜ ಎಂಬ ಹಡಗು ಮದ್ರಾಸ್‌ ಬಂದರಿನಿಂದ ಅಂಡಮಾನಿನ ಸೆಲ್ಯುಲರ್‌ ಜೈಲಿಗೆ ಯಾತ್ರೆ ಆರಂಭಿಸಿತು. ಸುಮಾರು ಹತ್ತು ದಿನಗಳ ಯಾತ್ರೆಯ ನಂತರ ಹಡಗು ಪೋರ್ಟ್‌ ಬ್ಲೇರ್‌ ತಲುಪಿತು. ಸೆಲ್ಯುಲಾರ್‌ ಜೈಲಿನಲ್ಲಿ ಅಂದು ಇದ್ದ ರಾಜಕೀಯ ಖೈದಿಗಳಲ್ಲಿ ಪ್ರಮುಖರು ಬಾಬಾರಾವ್‌ ಎಂಬ ಗಣೇಶ್‌ ದಾಮೋದರ್‌ ಸಾವರ್ಕರ್‌, ವಾಮನ್‌ ರಾವ್‌ ಜೋಷಿ, ಖುದಿರಾಂ ಬೋಸ್‌ನನ್ನು ಗಲ್ಲಿಗೇರಿಸಿದ ಬಾಂಬ್‌ ದಾಳಿ ಪ್ರಕರಣದ ಆರೋಪಿಗಳಾದ ಉಲ್ಲಾಸ್ಕರ್‌ ದತ್, ಅರಬಿಂದ್‌ ಘೋಷ್‌ (ನಂತರದ ಕಾಲದಲ್ಲಿ ಮಹರ್ಷಿ ಅರಬಿಂದೋ) ಅವರ ಸಹೋದರ ಬಾರಿನ್‌ ಘೋಷ್‌, ಇಂದುಭೂಷಣ್‌ ರಾಯ್‌, ಹೇಮಚಂದ್ರದಾಸ್‌, ಬಿಭೂತಿ ಭೂಷಣ್‌ ಸರ್ಕಾರ್‌, ಸಚೀಂದ್ರನಾಥ್‌ ಸನ್ಯಾಳ್‌ ಮೊದಲಾದವರಾಗಿದ್ದರು. ಒಟ್ಟು ನೂರರಷ್ಟು ರಾಜಕೀಯ ಖೈದಿಗಳು ಅಲ್ಲಿದ್ದರು. ʼಕಾಲಾಪಾನಿʼಗೆ ತಲುಪಿದ ಸಾವರ್ಕರ್‌ ಅದಕ್ಕಿಂತ ಮುಂಚೆ ಇದ್ದ ಸಾವರ್ಕರ್‌ ಆಗಿರಲಿಲ್ಲ. ಐವತ್ತು ವರ್ಷಗಳ ಜೈಲುಶಿಕ್ಷೆ ತನ್ನನ್ನು ಇರಿಯುವಂತೆ ನೋಡುತ್ತಿತ್ತು. ಸ್ವತಃ ಸಾವರ್ಕರ್ ಬರೆದಿರುವಂತೆ, ʼನಾನು ಒಳಗೆ ಹೋದೆ. ಸಾವಿನ ಕಾಳೊಂದು ಗಂಟಲಿನಲ್ಲಿ ಸಿಲುಕಿಕೊಂಡಂತೆ ನನಗೆ ಭಾಸವಾಯಿತು.ʼ ಡೇವಿಡ್‌ ಬಾರಿ ಎಂಬ ಐರ್ಲೆಂಡಿನ ವ್ಯಕ್ತಿ ಜೈಲರ್‌ ಆಗಿದ್ದ. ೩೨೭೭೮ ಎಂಬ ನಂಬರ್‌ ಸಾವರ್ಕರ್‌ಗೆ ನೀಡಲಾಯಿತು. ಮಿರ್ಸಾಖಾನ್‌ ಎಂಬ ವ್ಯಕ್ತಿ ಸಾವರ್ಕರ್‌ ಸಹಾಯಕನಾಗಿದ್ದ.</p>



<p>ಸೆಲ್ಯುಲಾರ್‌ ಜೈಲಿನ ರಾಜಕೀಯ ಖೈದಿಗಳು ಕಲೋನಿಯಲ್‌ ಅಧಿಕಾರಿಗಳಿಂದ ಕ್ರೂರ ಹಿಂಸೆಯನ್ನು ಅನುಭವಿಸುತ್ತಿದ್ದರು. ಕಠಿಣ ಕೆಲಸಗಳನ್ನು ಅವರು ಮಾಡಬೇಕಾಗಿತ್ತು. ಬಹುತೇಕ ಸಂದರ್ಭದಲ್ಲಿ ತುಚ್ಛವಾದ ಆಹಾರ ಮಾತ್ರ ಅವರಿಗೆ ನೀಡಲಾಗುತ್ತಿತ್ತು. ರೋಗಪೀಡಿತ ಖೈದಿಗಳಿಗೆ ಅಗತ್ಯ ಚಿಕಿತ್ಸೆಗಳೂ ಸಿಗುತ್ತಿರಲಿಲ್ಲ. ಈ ನಡುವೆ ಬಾಂಬೆ ಯುನಿವರ್ಸಿಟಿ ಕೇಸಿನ ಭಾಗವಾಗಿ ಸಾವರ್ಕರ್ ಬಿರುದನ್ನು ಕೂಡ ಕಿತ್ತುಕೊಳ್ಳಲಾಗಿತ್ತು.</p>



<p>೧೯೧೧ ಡಿಸೆಂಬರ್‌ ತಿಂಗಳಲ್ಲಿ ಐದನೇ ಜಾರ್ಜ್‌ ಬ್ರಿಟಿಷ್‌ ಚಕ್ರವರ್ತಿಯಾಗಿ ಅಧಿಕಾರಕ್ಕೇರಲಿರುವ ಸುದ್ದಿ ಮಾಧ್ಯಮಗಳಲ್ಲಿ ಬರುತ್ತದೆ. ಹೊಸ ರಾಜ ಅಧಿಕಾರಕ್ಕೇರುವುದರ ಭಾಗವಾಗಿ ರಾಜಕೀಯ ಖೈದಿಗಳಿಗೆ ಕ್ಷಮಾಪಣೆ ಸಿಗಲಿದೆ ಎಂಬ ಸುದ್ದಿಯೂ ಅದರ ಜೊತೆಗೆ ಹರಡುತ್ತದೆ. ವಿನಾಯಕ್‌ ದಾಮೋದರ್‌ ಸಾವರ್ಕರ್‌ ಒಂದು ಕ್ಷಮಾಪಣಾ ಪತ್ರವನ್ನು ಅಧಿಕಾರಿಗಳಿಗೆ ನೀಡುತ್ತಾರೆ. ೧೯೧೧ ಆಗಸ್ಟ್‌ ೩೦ರಂದು ಅಧಿಕಾರಿಗಳು ಆ ಅರ್ಜಿಯನ್ನು ಸ್ವೀಕರಿಸುತ್ತಾರೆ. ೧೯೧೧ ಸೆಪ್ಟೆಂಬರ್‌ ೩ರಂದು ಕ್ಷಮಾಪಣಾ ಅರ್ಜಿಯನ್ನು ತಳ್ಳಿ ಹಾಕಿರುವುದಾಗಿ ಅಧಿಕಾರಿಗಳು ಸಾವರ್ಕರ್‌ಗೆ ಮಾಹಿತಿ ನೀಡುತ್ತಾರೆ.</p>



<p>ಅಲಿಪುರ ಪ್ರಕರಣದ ಖೈದಿ ಇಂದುಭೂಷಣ್‌ ರಾಯ್‌ ಜೈಲಿನ ಹಿಂಸೆ ಸಹಿಸಲಾಗದೆ ೧೯೧೨ ಏಪ್ರಿಲ್‌ ೨೯ರಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದರ ನಂತರ ಹೋತಿಲಾಲ್‌ ವರ್ಮ ಎಂಬ ಖೈದಿ ಒಂದಷ್ಟು ಕಾಗದಗಳನ್ನು ಸಂಗ್ರಹಿಸಿ ಜೈಲು ಜೀವನದ ದಾರುಣ ಅನುಭವನಗಳನ್ನು ವಿವರಿಸುವ ಒಂದು ಪತ್ರ ಬರೆದ. ಹಲವು ತ್ಯಾಗಗಳನ್ನು ಸಹಿಸಿ ಆ ಪತ್ರವನ್ನು ಆತ ಹೊರ ತಂದ. ಕಾಂಗ್ರೆಸ್‌ ನಾಯಕ ಸುರೇಂದ್ರನಾಥ್‌ ಬ್ಯಾನರ್ಜಿಯ ಕೈ ಸೇರಿದ ಪತ್ರವನ್ನು ಅವರು ತಮ್ಮ ಪತ್ರಿಕೆ <em>ಬಂಗಾಳಿ</em>ಯಲ್ಲಿ ಪ್ರಕಟಿಸುತ್ತಾರೆ. ಅದರ ಜೊತೆಗೆ ಲಾಹೋರಿನ <em>ಟ್ರಿಬ್ಯೂನಲ್‌</em> ಮತ್ತು <em>ಅಮೃತ್‌ ಬಜಾರ್</em>‌ ಪತ್ರಿಕೆಗಳಲ್ಲೂ ಅವು ಪ್ರಕಟವಾಗುತ್ತವೆ.</p>



<p>ಅದರ ನಂತರ ಸ್ವರಾಜ್‌ ಪತ್ರಿಕೆಯ ಸಂಪಾದಕರಾಗಿದ್ದ ಲತಾರಾಂ ಮತ್ತು ಬರೀ ಹದಿನೇಳು ವರ್ಷ ಪ್ರಾಯದ ಬಂಗಾಳಿ ನಾನಿ ಗೋಪಾಲ್‌ ಜೈಲು ಹಿಂಸೆಯ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸುತ್ತಾರೆ. ಈ ನಡುವೆ ಜೈಲಿನಿಂದ ಹೊರಗೆ ಕೆಲಸಕ್ಕೆ ಹೋಗುವ ಖೈದಿಗಳು ಬಾಂಬ್‌ ತಯಾರಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬುತ್ತದೆ. ಕೆಲವು ಗ್ರಾಮಫೋನ್‌ ಸೂಜಿಗಳು ಮತ್ತು ಕಬ್ಬಿಣದ ಚೂರುಗಳು ಅವರ ಕೆಲಸದ ಜಾಗದಿಂದ ಸಿಕ್ಕಾಗ ಸಾವರ್ಕರ್‌ ಭಯಗೊಳ್ಳುತ್ತಾರೆ. ಸ್ವತಹ ಸಾವರ್ಕರ್‌ ತನ್ನ ಭಯದ ಕುರಿತು ಬರೆದುಕೊಂಡಿರುವುದು ಹೀಗೆ:</p>



<p>ʼಅದು ನನಗಾಗಿ ಮೀಸಲಿಟ್ಟಿರುವ ಭವಿಷ್ಯದ ಕುರಿತು ನನ್ನೊಳಗೆ ಆತಂಕವನ್ನು ಸೃಷ್ಟಿಸಿತು. ನಾನೀಗಾಗಲೆ ಒಂದು ಗೂಢಾಲೋಚನೆ ಪ್ರಕರಣವನ್ನು ಎದುರಿಸುತ್ತಿದ್ದೇನೆ. ಇದು ಕೂಡ ನನ್ನ ಮೇಲೆ ಬಂದೆರಗಬಹುದೆಂದು ನಾನು ಭಯಗೊಂಡೆ. ನಾವು ಈಗಾಗಲೆ ಜೀವಾವಧಿ ಜೈಲು ಶಿಕ್ಷೆಯಲ್ಲಿದ್ದೇವೆ. ನನ್ನ ಜೀವಾವಧಿ ಶಿಕ್ಷೆ ಐವತ್ತು ವರ್ಷಗಳದ್ದು. ದೇವರು ನೀಡಿದ ಕೆಟ್ಟ ಗಳಿಗೆಯಲ್ಲಿದ್ದ ನಾನು ಇದರಲ್ಲೂ ಸಿಕ್ಕಿಕೊಂಡರೆ ನಿಜಕ್ಕೂ ಕೈ ಮೀರಿ ಹೋಗುತ್ತದೆ. ನಾನು ಹೊರಹೋಗುವುದರ ಕುರಿತು ಯೋಚಿಸಿಯೂ ಇರಲಿಲ್ಲ. ಬಾಂಬ್‌ ತಯಾರಿಸುವುದಾಗಲೀ, ಬಚಾವಾಗಲು ಬೋಟ್‌ ಸಜ್ಜುಗೊಳಿಸುವುದಾಗಲೀ ನನ್ನಿಂದ ಯೋಚಿಸಲೂ ಸಾಧ್ಯವಿರಲಿಲ್ಲ. ನನ್ನೊಂದಿಗೆ ಆತ್ಮೀಯತೆಯಿಂದಲೇ ಇದ್ದ ಅಧಿಕಾರಿಯೊಬ್ಬ ಇನ್ನು ಮುಂದೆ ಅಂತಹ ಯೋಚನೆಗಳನ್ನು ಮಾಡಲೇಬೇಡ ಎಂದು ಹೇಳಿಯೂ ಬಿಟ್ಟ. ಶಿಕ್ಷೆಯ ಕಾಲಾವಧಿ ಮುಗಿಯದೆ ನನ್ನನ್ನು ಬಿಡುಗಡೆಗೊಳಿಸಬಾರದೆಂದು ಇಂಡಿಯಾ ಸರಕಾರ ಅವರಿಗೆ ಸೂಚನೆ ಕೊಟ್ಟಿತ್ತು. ಅಲ್ಲದಿದ್ದರೆ ಅದಕ್ಕೂ ಮೊದಲು ನಾನು ಸಾಯಬೇಕು.ʼ<sup></sup></p>



<p>ಮದನ್‌ ಲಾಲ್‌ ಡಿಂಗ್ರನ ಕೈಯಲ್ಲಿ ಪಿಸ್ತೂಲ್‌ ಕೊಟ್ಟು, ವಿಲ್ಲಿಯನ್ನು ಕೊಲ್ಲಲು ವಿಫಲನಾದರೆ ನಿನ್ನ ಮುಖವನ್ನು ನನಗೆ ತೋರಿಸಬೇಡ ಎಂದು ಹೇಳಿದ ಸಾವರ್ಕರ್‌ ಇಲ್ಲಿ ನಾಪತ್ತೆಯಾಗಿದ್ದಾರೆ. ಬಲಿದಾನಕ್ಕೆ ಗಾಳಿ ತುಂಬಿಸಿ ಉಬ್ಬಿಸಿ ಆದರ್ಶಗೊಳಿಸಿ ಯುವಕರೊಳಗೆ ತುಂಬಿಸುತ್ತಿದ್ದ ಬ್ರಾಹ್ಮಣ ಕ್ರಾಂತಿಕಾರಿಯೂ ಇಲ್ಲಿ ಇಲ್ಲ. ಬ್ರಿಟಿಷ್‌ ವಿರೋಧವೂ ನಿಧಾನಕ್ಕೆ ಇಳಿಯುತ್ತಿರುವುದನ್ನು ಇಲ್ಲಿ ಗಮನಿಸಬಹುದು.</p>



<p>ಜೈಲಿನ ಹಿಂಸೆಯ ಕಥೆಗಳು ಹೊರಬಂದ ನಂತರ ಬ್ರಿಟಿಷ್‌ ಇಂಡಿಯಾ ಸರಕಾರದ ಹೋಂ ಮೆಂಬರ್‌ ಆಗಿದ್ದ ಸರ್‌ ರೆಜಿನಾಲ್ಡ್‌ ಹೆಚ್‌. ಕ್ರಡೋಕ್‌ ಅಂಡಮಾನ್‌ ಜೈಲು ಸಂದರ್ಶನ ನಡೆಸಲು ತೀರ್ಮಾನಿಸುತ್ತಾನೆ. ರಾಜಕೀಯ ಖೈದಿಗಳಲ್ಲಿ ಕೆಲವರನ್ನು ನೇರವಾಗಿ ಭೇಟಿಯಾಗಿ ಮಾತನಾಡುವುದು ಕ್ರಡೋಕ್‌ನ ಯೋಜನೆಯಾಗಿತ್ತು. ವಿ.ಡಿ. ಸಾವರ್ಕರ್‌, ಹೃಷಿಕೇಶ್‌ ಕಾಂಚಿಲಾಲ್‌, ಬಾರಿನ್‌ ಘೋಷ್‌, ನಂದ್‌ ಗೋಪಾಲ್, ಸುಧೀರ್‌ ಕುಮಾರ್‌ ಸರ್ಕಾರ್‌ ಅವರುಗಳು ತನ್ನನ್ನು ಬಂದು ಕಾಣುವಂತೆ ಕ್ರಡೋಕ್‌ ಕರೆಯುತ್ತಾನೆ. ಜೊತೆಗೆ, ಉಪೇಂದ್ರನಾಥ ಬ್ಯಾನರ್ಜಿ, ಹೋತಿಲಾಲ್‌ ವರ್ಮ, ಪುಲಿನ್‌ ಬಿಹಾರಿ ಅವರುಗಳನ್ನು ಅವರ ಜೈಲುಕೋಣೆಗಳಿಗೆ ಹೋಗಿ ಕ್ರಡೋಕ್‌ ಭೇಟಿಯಾಗುತ್ತಾನೆ.</p>



<p>ಈ ಭೇಟಿಯಲ್ಲಿ ಬ್ರಿಟಿಷ್‌ ವಿರೋಧವನ್ನು ತಾನು ಸಂಪೂರ್ಣವಾಗಿ ತೊರೆಯುತ್ತೇನೆಂದು ವಿನಾಯಕ್‌ ದಾಮೋದರ್‌ ಸಾವರ್ಕರ್‌ ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಸಾವರ್ಕರ್‌ ಅವರ ಅಲ್ಲಿಯ ತನಕದ ಚಿಂತನೆಗಳನ್ನೂ ಆತನನ್ನು ನಿಯಂತ್ರಿಸುತ್ತಿದ್ದ ಸೈದ್ಧಾಂತಿಕ ಹಿನ್ನೆಲೆಯನ್ನೂ ಒಟ್ಟಿಗೆ ಇಟ್ಟು ನೋಡುವುದಾದರೆ, ಬ್ರಿಟಿಷ್‌ ವಿರೋಧದ ಹಾದಿಯನ್ನು ತೊರೆಯಲು ನೀಡಿದ ಕಾರಣಗಳು ತೀರಾ ಬಾಲಿಶವೆಂದು ಅನಿಸುತ್ತವೆ. ಬ್ರಿಟಿಷ್‌ ಸರಕಾರ ನಡೆಸುತ್ತಿರುವ ಸುಧಾರಣೆಗಳನ್ನು ಮುಂದಿಟ್ಟುಕೊಂಡು ತಾನು ಮತ್ತು ತನ್ನ ಸಹಚರರು ಸಶಸ್ತ್ರ ದಾರಿ ಬಿಟ್ಟು ಶಾಂತಿಯ ಹಾದಿ ಸ್ವೀಕರಿಸುತ್ತೇವೆಂದು ಸಾವರ್ಕರ್‌ ಮಾತು ಕೊಡುತ್ತಾರೆ. ಇದಕ್ಕೆ ಸಾವರ್ಕರ್‌ ಎತ್ತಿಹಿಡಿಯುವುದು ಮಾತ್ರ ತಾನು ಅತ್ಯಂತ ಕಠಿಣವಾಗಿ ವಿರೋಧಿಸುತ್ತಿದ್ದ ಗೋಖಲೆಯವರನ್ನು. ಪ್ರಾಥಮಿಕ ವಿದ್ಯಾಭ್ಯಾಸ ಎಲ್ಲರಿಗು ಸಿಗುವಂತಾಗಲು ಒಂದು ಕಾನೂನು ತರಬೇಕೆಂದು ಗೋಖಲೆ ಬಹಳ ಪ್ರಯತ್ನ ಪಟ್ಟಿದ್ದರು. ಅವರ ಪ್ರಯತ್ನವನ್ನು ಗಮನಿಸಿದ ಬ್ರಿಟಿಷ್‌ ಸರಕಾರ ಅದಕ್ಕಾಗಿ ಐವತ್ತು ಲಕ್ಷ ರೂಪಾಯಿಗಳನ್ನು ಐದನೇ ಜಾರ್ಜ್‌ ದೊರೆಯ ಕೊಡುಗೆಯಾಗಿ ಮಂಜೂರು ಮಾಡಿತ್ತು. ಇದು ಮತ್ತು ಮಿಂಟೋ-ಮೋರ್ಲಿ ಸುಧಾರಣೆಗಳನ್ನು ಮುಂದಿಟ್ಟುಕೊಂಡು ಸಾವರ್ಕರ್‌ ಸಶಸ್ತ್ರ ಹಾದಿಯಿಂದ ಹೊರಬರುವ ಭರವಸೆಯನ್ನು ನೀಡಿದ್ದರು.</p>



<p>ಒಂದು ಕಾಲದಲ್ಲಿ ಗೋಖಲೆಯ ಸುಧಾರಣಾ ಹೋರಾಟವನ್ನು ತನ್ನ ಉಗುರು-ಹಲ್ಲು-ಬಂದೂಕುಗಳನ್ನು ಬಳಸಿ ವಿರೋಧಿದುತ್ತಿದ್ದ ವ್ಯಕ್ತಿ ಸಾವರ್ಕರ್.‌ ಸಮಾಜದ ವಿಷಯದಲ್ಲಿ ಸರಕಾರ ಹಸ್ತಕ್ಷೇಪ ಮಾಡುವುದರ ವಿರುದ್ಧ ನಿಲುವು ತಾಳಿದ್ದ ತಿಲಕರ ಈ ಕಟ್ಟಾ ಅನುಯಾಯಿ, ಸಂದರ್ಭ ಬಂದಾಗಲೆಲ್ಲ ಗೋಖಲೆ ಸಹಿತ ಎಲ್ಲ ಸುಧಾರಣಾವಾದಿಗಳನ್ನು ನಿರಂತರವಾಗಿ ಪರಿಹಾಸ ಮಾಡುತ್ತಿದ್ದ ವ್ಯಕ್ತಿ. <em>ಅಭಿನವ್‌ ಭಾರತ್</em>ನ ಹುಟ್ಟಿನ ಹಿನ್ನೆಲೆಯಲ್ಲಿ ಕೇವಲ ಬ್ರಿಟಿಷ್‌ ವಿರೋಧ ಮಾತ್ರ ಇರಲಿಲ್ಲ. ಗೋಖಲೆಯಂತವರ ನಿಲುವುಗಳ ವಿರುದ್ಧದ ನವ-ಸಂಪ್ರದಾಯವಾದಿ ಭೂಗತ ಬ್ರಾಹ್ಮಣಿಕ ಸಂಘಟನೆಯೂ ಆಗಿತ್ತದು ಎಂಬುದನ್ನು ಮರೆಯಬಾರದು.</p>



<p>ಬದುಕು ಪೂರ್ತಿ ತಾನು ಎತ್ತಿ ಹಿಡಿದ ನಿಲುವುಗಳ ಕಾರಣ ತನಗೆ ಬಂದೊದಗಿದ ಪರಿಸ್ಥಿತಿಯ ಉಚ್ಛಾವಸ್ಥೆಯಲ್ಲಿ ಅದೆಲ್ಲವನ್ನು ಕಿತ್ತು ಬಿಸಾಡುತ್ತೇನೆಂದು ವಾಗ್ದಾನ ನೀಡಿದ ಸಾವರ್ಕರನ್ನು ನಂಬಲು ಕ್ರಡೋಕ್‌ ತಯಾರಿರಲಿಲ್ಲ. ಕುಟಿಲನಾಗಿದ್ದ ಕ್ರಡೋಕ್‌ ಈ ಹೊಸ ನಿಲುವನ್ನು ಪತ್ರದ ಮೂಲಕ ಸರಕಾರದ ಗಮನಕ್ಕೆ ತರಲು ಸಾವರ್ಕರ್‌ಗೆ ಸೂಚಿಸುತ್ತಾನೆ. ಬಹುಷ ತನ್ನ ಅನುಯಾಯಿಗಳ ನಡುವೆ ಅದು ಸೃಷ್ಠಿಸಬಹುದಾದ ಅವಮಾನವನ್ನು ನೆನೆದು, ಸಾವರ್ಕರ್‌ ಇನ್ನೊಂದು ಉಪಾಯವನ್ನು ಮುಂದಿಡುತ್ತಾರೆ. ಸರಕಾರಕ್ಕೆ ತಿಳಿಸುವ ಬದಲು ತನ್ನ ಪ್ರಸ್ತಾವನೆಯಾಗಿ ಈ ಮನಃಪರಿವರ್ತನೆಯನ್ನು ಹೊರಹಾಕಬಹುದು ಎಂಬುದಾಗಿತ್ತು ಅದು. ಆದರೆ, ಕ್ರಡೋಕ್‌ ಅದನ್ನೂ ತಳ್ಳಿ ಹಾಕುತ್ತಾನೆ.</p>



<p>ಏನೇ ಆದರೂ, ಒಂದು ಕ್ಷಮಾಪಣಾ ಪತ್ರವನ್ನು ಸರಕಾರದ ಮುಂದಿಡಲು ಕ್ರಡೋಕ್‌ ಸಾವರ್ಕರ್‌ಗೆ ಅವಕಾಶ ನೀಡಿದ. ಮೊದಲ ಕ್ಷಮಾಪಣಾ ಪತ್ರವನ್ನು ಜೈಲಿಗೆ ಬಂದ ಹೊಸದರಲ್ಲಿಯೇ ವಿನಾಯಕ್‌ ನೀಡಿದ್ದರು. ಆದರೆ, ಅದನ್ನು ತಳ್ಳಿ ಹಾಕಲಾಗಿತ್ತೆಂದು ನಾವು ಈಗಾಗಲೇ ನೋಡಿದೆವು.</p>



<p>೧೯೧೩ ನವೆಂಬರ್‌ ೧೪ರಂದು ನೀಡಿದ ಕ್ಷಮಾಪಣಾ ಪತ್ರದ ಪೂರ್ಣರೂಪ ಹೀಗಿತ್ತು.</p>



<p>ʼತಮ್ಮ ಪರಿಗಣನೆಗಾಗಿ ಈ ಕೆಳಗೆ ನೀಡಿರುವ ಸಂಗತಿಗಳನ್ನು ವಿನಯದಿಂದ ಸಮರ್ಪಿಸುತ್ತಿದ್ದೇನೆ.</p>



<p>೧. ೧೯೧೧ರ ಜೂನ್‌ ತಿಂಗಳಲ್ಲಿ ನಾನು ಇಲ್ಲಿಗೆ ತಲುಪಿದಾಗ ಗುಂಪಿನ ಉಳಿದವರ ಜೊತೆಗೆ ನನ್ನನ್ನು ಚೀಫ್‌ ಕಮಿಷನರ್‌ ಕಛೇರಿಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ನನ್ನನ್ನು ಡಿ ಕ್ಲಾಸಿಗೆ, ಅಂದರೆ ಆಪತ್ಕಾರಿ ಗುಂಪಿಗೆ (Dangerous), ಸೇರಿಸಿದರು. ಆದರೆ ಉಳಿದವರನ್ನು ಆ ಗುಂಪಿಗೆ ಸೇರಿಸಲಿಲ್ಲ. ಅದರ ನಂತರ ನಾನು ಆರು ತಿಂಗಳ ಕಾಲ ಏಕಾಂತ ಶಿಕ್ಷೆಗೆ ಗುರಿಯಾದೆ. ಉಳಿದವರಿಗೆ ಹಾಗೇನು ಇರಲಿಲ್ಲ. ಆ ಸಮಯದಲ್ಲಿ ಹಗ್ಗ ಹುರಿಗೊಳಿಸುವ ಕೆಲಸಕ್ಕೆ ನನ್ನನ್ನು ನೇಮಿಸಿದರು. ನನ್ನ ಕೈಗಳು ಸಿಡಿದು ರಕ್ತ ಹರಿದರೂ ನನ್ನನ್ನು ಅಲ್ಲಿಂದ ಜೈಲಿನ ಅತ್ಯಂತ ಕಠಿಣ ಕೆಲಸವಾದ ಎಣ್ಣೆಗಾಣದ ಕೆಲಸದಲ್ಲಿ ತೊಡಗಿಸಿದರು. ಈ ಕಾಲದಲ್ಲಿ ನನ್ನ ಸ್ವಭಾವ ಅಸಾಮಾನ್ಯ ರೀತಿಯಲ್ಲಿ ಉತ್ತಮಗೊಂಡಿದ್ದರೂ ಕೂಡ, ಆರು ತಿಂಗಳುಗಳು ಕಳೆದರೂ ಕೂಡ ನನ್ನನ್ನು ಜೈಲು ಕೋಣೆಯಿಂದ ಹೊರಗೆ ಬಿಡುತ್ತಿರಲಿಲ್ಲ. ನನ್ನ ಜೊತೆಗೆ ಬಂದಿದ್ದ ಉಳಿದ ಖೈದಿಗಳಿಗೆ ಆ ಸ್ವಾತಂತ್ರ್ಯವಿತ್ತು. ಅಲ್ಲಿಂದ ಇಂದಿನ ತನಕವೂ ನನ್ನ ಸ್ವಭಾವವನ್ನು ನನ್ನಿಂದಾದಷ್ಟು ಉತ್ತಮವಾಗಿರಿಸಲು ಶ್ರಮಿಸುತ್ತಲೇ ಬಂದಿದ್ದೇನೆ.</p>



<p>೨. ಶಿಕ್ಷೆಯಲ್ಲಿ ಕಡಿತಕ್ಕಾಗಿ ನಾನು ನಿವೇದನೆ ನೀಡಿದಾಗ, ವಿಶೇಷ ವಿಭಾಗದಲ್ಲಿ ಬರುವ ಖೈದಿಯಾದ ಕಾರಣ ಕಡಿತ ಸಾಧ್ಯವಲ್ಲವೆಂಬ ಉತ್ತರ ಬಂದಿತು. ನಮ್ಮಲ್ಲಿ ಯಾರಾದರು ಚೂರು ಒಳ್ಳೆಯ ಆಹಾರ ಅಥವಾ ವಿಶೇಷ ಉಪಚಾರವೋ ಕೇಳಿದರೆ ಆಗೆಲ್ಲ ಹೇಳುವ ಮಾತು ನೀವು ಸಾಮಾನ್ಯ ಖೈದಿಗಳಾದ ಕಾರಣ ನೀವು ಎಲ್ಲರು ತಿನ್ನುವ ಆಹಾರವನ್ನೇ ತಿನ್ನಬೇಕು ಎಂದು. ಈ ಮೂಲಕ ಗೌರವಯುತರಾದ ತಾವು ಅರ್ಥ ಮಾಡಿಕೊಳ್ಳಬೇಕಿರುವುದು ವಿಶೇಷ ಖೈದಿಗಳಾದ ನಮಗೆ ಇಲ್ಲಿ ವಿಶೇಷವಾದ ಅವಗಣನೆ ಇದೆ ಎಂದು.</p>



<p>೩. ಕೇಸಿನಲ್ಲಿ ಸಿಲುಕಿದ್ದ ಬಹುಪಾಲು ಜನರನ್ನು ಹೊರಗೆ ಬಿಟ್ಟಾಗ ನನ್ನ ಬಿಡುಗಡೆಯನ್ನೂ ನಾನು ಕೇಳಿಕೊಂಡಿದ್ದೆ. ಎರಡೋ ಮೂರೋ ಸಲ ಛಡಿಯೇಟು ಶಿಕ್ಷೆಗೆ ಗುರಿಯಾಗಿ ಕೂಡ, ಉಳಿದವರು ಒಂದು ಡಜನ್‌ಗಿಂತ ಹೆಚ್ಚು ಸಲ ಜೈಲು ಕೋಣೆಯಿಂದ ವಿಮೋಚನೆ ಪಡೆದುಕೊಂಡಿದ್ದರೂ, ನಾನು ಅವರಲ್ಲಿ ಒಬ್ಬನಾಗಿದ್ದರೂ ಕೂಡ, ನನ್ನನ್ನು ಬಿಡುಗಡೆಗೊಳಿಸಲಿಲ್ಲ. ನಂತರ ಜೈಲುಕೋಣೆಯಿಂದ ಹೊರಹೋಗಲು ನನಗೆ ಅನುಮತಿ ಸಿಕ್ಕಿತಾದರೂ ಹೊರಗಿದ್ದ ಕೆಲ ರಾಜಕೀಯ ಖೈದಿಗಳು ಮಾಡಿದ ತಾಪತ್ರಯಗಳಿಂದ ಮತ್ತೆ ನನ್ನನ್ನು ಜೈಲುಕೋಣೆಯೊಳಗೆ ಬಂಧಿಸಿಟ್ಟರು.</p>



<p>೪. ನಾನು ಭಾರತದ ಜೈಲಿನಲ್ಲಿ ಇರುತ್ತಿದ್ದರೆ ಈ ಹೊತ್ತಿಗಾಗಲೇ ಒಂದಷ್ಟು ಸೌಲಭ್ಯಗಳು ಸಿಕ್ಕಿರುತ್ತಿದ್ದವು. ಇನ್ನಷ್ಟು ಪತ್ರಗಳನ್ನು ಮನೆಗೆ ಬರೆಯಬಹುದಿತ್ತು. ಇನ್ನಷ್ಟು ಸಂದರ್ಶಕರ ಭೇಟಿ ಸಾಧ್ಯವಾಗಿರುತ್ತಿತ್ತು. ನಾನು ಗಡಿಪಾರು ಶಿಕ್ಷೆಗೆ ಗುರಿಯಾಗಿರುತ್ತಿದ್ದರೆ ಈ ಹೊತ್ತಿಗಾಗಲೆ ಶಿಕ್ಷೆಯಿಂದ ಬಿಡುಗಡೆ ಪಡೆದಿರುತ್ತಿದ್ದೆ. ಟಿಕೆಟ್‌ ಮತ್ತು ರಜೆಗೆ ಕಾಯುವ ಒಬ್ಬ ವ್ಯಕ್ತಿಯಾಗಿರುತ್ತಿದ್ದೆ. ಆದರೆ, ಈಗ ನನಗೆ ಭಾರತದ ಜೈಲುಗಳ ಸೌಲಭ್ಯಗಳೊಂದೂ ದೊರೆಯುತ್ತಿಲ್ಲ, ವಸಾಹತು ಪ್ರಕಾರದ ಸೌಲಭ್ಯಗಳೂ ದೊರೆಯುತ್ತಿಲ್ಲ. ಬದಲಿಗೆ ಈ ಎರಡರ ಅಸೌಲಭ್ಯಗಳನ್ನು ನಾನು ಅನುಭವಿಸುತ್ತಿದ್ದೇನೆ.</p>



<p>೫. ಆದ್ದರಿಂದ, ಬಹುಮಾನಿತರಾದ ತಾವು ಕರುಣೆ ತೋರಿಸಿ, ನನ್ನನ್ನು ತಂದಿಟ್ಟಿರುವ ಈ ಅಸಾಧಾರಣ ಸ್ಥಿತಿಗೆ ಅಂತ್ಯ ಹಾಡಬೇಕು. ಒಂದೋ ನನ್ನನ್ನು ಭಾರತದ ಜೈಲಿಗೆ ಹಾಕಬೇಕು. ಅಲ್ಲದಿದ್ದರೆ ಉಳಿದ ಖೈದಿಗಳಂತೆ ಗಡಿಪಾರಾದವನೆಂದು ಪರಿಗಣಿಸಬೇಕು. ನಾನು ಯಾವ ಪ್ರಾಧಾನ್ಯತೆಯನ್ನೂ ಕೇಳುವುದಿಲ್ಲ; ಒಬ್ಬ ರಾಜಕೀಯ ಖೈದಿ ಎಂಬ ನೆಲೆಯಲ್ಲಿ ಪ್ರಪಂಚದ ಸ್ವತಂತ್ರ ದೇಶಗಳ ನಾಗರಿಕ ಆಡಳಿತ ರೀತಿಗಳು ಅದನ್ನು ನೀಡುತ್ತವೆಯಾದರೂ ಕೂಡ. ಬದಲಿಗೆ ಅತ್ಯಂತ ಕ್ರೂರಿಗಳು ಮತ್ತು ನಿರಂತರವಾಗಿ ತಪ್ಪುಗಳನ್ನು ಮಾಡುವ ಆಕ್ರಮಣಕಾರಿ ಖೈದಿಗಳಿಗೆ ನೀಡುವ ಅನುಕೂಲತೆಗಳನ್ನು ಮಾತ್ರ ನಾನು ಕೇಳುತ್ತಿದ್ದೇನೆ. ಪುನಹ ಜೈಲು ಕೋಣೆಯೊಳಗೆ ಬಂಧಿಸಿಡುವ ಈ ತೀರ್ಮಾನ ನನ್ನ ಬದುಕು ಮತ್ತು ನಿರೀಕ್ಷೆಗಳನ್ನು ಹಿಡಿದಿಡುವ ಸಾಧ್ಯತೆಯನ್ನೂ ನುಚ್ಚುನೂರಾಗಿಸುತ್ತಿದೆ. ಒಂದು ನಿರ್ದಿಷ್ಟ ಸಮಯದ ಜೈಲು ಶಿಕ್ಷೆ ವಿಧಿಸಲ್ಪಟ್ಟವರ ಕಥೆ ಬೇರೆ. ಆದರೆ, ಸರ್‌, ನನಗೆ ನನ್ನ ಮುಖವನ್ನೇ ತಿವಿಯುವಂತೆ ನೋಡುತ್ತಿರುವ ಐವತ್ತು ವರ್ಷಗಳು ನನ್ನ ಕಣ್ಣ ಮುಂದಿದೆ. ಅತ್ಯಂತ ಕ್ರೂರಿ ಖೈದಿಗಳಿಗೂ ಕೇಳಬಹುದಾದ, ಅವರ ಬದುಕನ್ನು ಚೂರಾದರೂ ಬೆಳಗಿಸಬಹುದಾದ ಸೌಲಭ್ಯಗಳನ್ನು ಕೂಡ ನಿಷೇಧಿಸಲ್ಪಟ್ಟು ಜೈಲು ಕೋಣೆಯೊಳಗೆ ಆ ವರ್ಷಗಳನ್ನು ದಾಟಲು ಬೇಕಾದ ಶಕ್ತಿ ನನಗೆ ಸಿಗುವುದಾದರು ಎಲ್ಲಿಂದ? ಒಂದೋ ನನ್ನನ್ನು ಭಾರತದ ಜೈಲಿಗೆ ಕಳಿಸಿರಿ. ಅಲ್ಲಿ ನನಗೆ a) ಸೌಲಭ್ಯಗಳು ಸಿಗುತ್ತವೆ. b) ಪ್ರತಿ ನಾಲ್ಕು ತಿಂಗಳಿಗೊಮ್ಮೆ ಬಂಧುಮಿತ್ರಾದಿಗಳಿಗೆ ನನ್ನನ್ನು ಬಂದು ಕಾಣಲು ಅವಕಾಶ ದೊರೆಯುವುದರಿಂದ ದೌರ್ಭಾಗ್ಯಕರವಾಗಿ ಜೈಲಲ್ಲಿ ಬಂಧಿಸಲ್ಪಟ್ಟಿರುವವರಿಗೆ ತಮ್ಮ ಪ್ರೀತಿ ಪಾತ್ರರನ್ನು ಆಗಾಗ ಕಾಣುವ ಮೂಲಕ ಸಿಗುವ ವಿವರಿಸಲಾಗದ ನೆಮ್ಮದಿ ದೊರೆಯುತ್ತದೆ. c) ಎಲ್ಲಕ್ಕಿಂತ ಮುಖ್ಯವಾಗಿ ಹದಿನಾಲ್ಕು ವರ್ಷ ಕಳೆಯುವಾಗ ಬಿಡುಗಡೆ ಸಿಗಬಹುದಾದ ನೈತಿಕ, ಆದರೆ ಕಾನೂನಾತ್ಮಕವಲ್ಲದ, ಸಾಧ್ಯತೆ ಇದೆ. d) ಇವುಗಳ ಜೊತೆಗೆ ಇನ್ನಷ್ಟು ಪತ್ರಗಳು ಮತ್ತು ಅನುಕೂಲತೆಗಳು ದೊರೆಯುತ್ತವೆ. ನನ್ನನ್ನು ಭಾರತಕ್ಕೆ ಕಳುಹಿಸುವುದಿಲ್ಲದಿದ್ದರೆ, ಜೈಲು ಕೋಣೆಯಿಂದ ಬಿಡುಗಡೆಗೊಳಿಸಿ ಹೊರಗೆ ಕಳಿಸಿರಿ. ಉಳಿದ ಎಲ್ಲ ಖೈದಿಗಳಂತೆ ಐದು ವರ್ಷಗಳ ನಂತರದ ಸಂದರ್ಶನಗಳು, ಟಿಕೆಟ್‌ ರಜೆ, ನನ್ನ ಕುಟುಂಬಕ್ಕೆ ಇಲ್ಲಿ ಬಂದು ಭೇಟಿಯಾಗುವ ಅವಕಾಶ ಎಲ್ಲವೂ ದೊರೆಯಲಿದೆ. ಅದು ನನಗೆ ಸಿಗುವುದಾದರೆ ಒಂದೇ ಒಂದು ದುಃಖ ನನ್ನಲ್ಲಿ ಉಳಿದು ಬಿಡುತ್ತದೆ. ನನ್ನ ತಪ್ಪುಗಳಿಗೆ ನಾನೊಬ್ಬನೇ ಹೊಣೆಗಾರ, ಬೇರೆ ಯಾರೂ ಅಲ್ಲವೆಂಬ ಪಶ್ಚಾತಾಪ ಅದು. ಅದು ಪ್ರತಿಯೊಂದು ಮಾನವಜೀವಿಯ ಮೂಲಭೂತ ಹಕ್ಕು ಆಗಿರುವುದರಿಂದ ಅದಕ್ಕಾಗಿ ಬೇಡಿಕೊಳ್ಳುವುದು ಎಂತಹ ದಯನೀಯ ದುರವಸ್ಥೆ. ಒಂದು ಕಡೆ ಇಪ್ಪತ್ತರಷ್ಟು ಯುವ, ಸಕ್ರಿಯ, ಅಸ್ವಸ್ಥಗೊಂಡಿರುವ ರಾಜಕೀಯ ಖೈದಿಗಳು ಮತ್ತು ಇನ್ನೊಂದು ಕಡೆ ಕಾಲನಿ ಜೈಲು ಕಾನೂನುಗಳು. ಅವುಗಳ ನಿಜರೂಪ ಯೋಚನೆ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಅತ್ಯಂತ ಕ್ಷೀಣ ಮಟ್ಟಕ್ಕೆ ತರುತ್ತದೆ ಎಂಬುದು. ಆಗೊಮ್ಮೆ ಈಗೊಮ್ಮೆ ಅವರಲ್ಲಿ ಯಾರೋ ಒಬ್ಬರು ಒಂದೋ ಎರಡೋ ನಿಯಮ ಉಲ್ಲಂಘಿಸುವುದನ್ನು ತಡೆಯಲಾಗದು. ಆದರೆ, ಅದರ ಹೊಣೆಯನ್ನು ಎಲ್ಲರ ತಲೆಯ ಮೇಲೆ ಹೊರಿಸುವುದರಿಂದ, ಈಗ ನಡೆದಂತೆ ನನ್ನ ಮಟ್ಟಿಗೆ ಬಿಡುಗಡೆಗೊಳ್ಳುವುದನ್ನು ಅಸಾಧ್ಯವಾಗಿಸುತ್ತದೆ.</p>



<p>ಕೊನೆಯದಾಗಿ ಗೌರವಾನ್ವಿತರಾದ ತಮ್ಮ ಗಮನಕ್ಕೆ ನೆನಪಿಸುವುದೇನೆಂದರೆ ೧೯೧೧ರಲ್ಲಿ ನಾನು ಕಳುಹಿಸಿದ ಕ್ಷಮಾಪಣಾ ಪತ್ರವನ್ನು ಮತ್ತೊಮ್ಮೆ ಓದುವುದು ಒಳಿತು ಎಂಬುದು. ಅದನ್ನು ಸರಕಾರಕ್ಕೆ ಕಳುಹಿಸಲು ತಾವು ಅನುಮತಿ ನೀಡಿದಿರೇ? ಭಾರತದ ರಾಜಕಾರಣದ ಹೊಸ ಬೆಳವಣಿಗೆಗಳು ಮತ್ತು ಸರಕಾರ ಮುಂದಿಟ್ಟಿರುವ ಸೌಹಾರ್ದಯುತವಾದ ನೀತಿಗಳು ಮತ್ತೊಮ್ಮೆ ಸಂವಿಧಾನಾತ್ಮಕ ದಾರಿಯನ್ನು ತೆರೆದು ಕೊಡುತ್ತಿದೆ. ಈಗ ಭಾರತದ ಒಳಿತಿಗಾಗಿ ಕೆಲಸ ಮಾಡುವ, ಹೃದಯದಲ್ಲಿ ಮನುಷ್ಯತ್ವವಿರುವ ಯಾರು ಕೂಡ ೧೯೦೬-೧೯೦೭ರ ನಮ್ಮನ್ನು ಶಾಂತಿ ಮತ್ತು ಪ್ರಗತಿಯ ದಾರಿಯಿಂದ ಹಿಮ್ಮೆಟ್ಟಲು ಪ್ರಚೋದಿಸಿದ, ಮುಳ್ಳುಗಳೇ ತುಂಬಿದ ಹಾದಿಗೆ ಕಣ್ಣುಮುಚ್ಚಿ ಹೆಜ್ಜೆಯಿಡಲು ಆವೇಶಗೊಳಿಸಿದ, ಆ ನಿರಾಸೆ ತುಂಬಿದ ಪರಿಸ್ಥಿತಿ ಈಗಿಲ್ಲ. ಆದ್ದರಿಂದ ಸರಕಾರ ತನ್ನ ಉದಾರವಾದ ಹಾದಿಯಲ್ಲಿ ಒಳಗೊಳ್ಳಿಸಿ ನನ್ನನ್ನು ವಿಮೋಚನೆಗೊಳಿಸಲು ದಯೆ ತೋರಿಸುವುದೇ ಆದರೆ, ನನ್ನಂತೆ ಇಂಗ್ಲಿಷ್‌ ಸರಕಾರಕ್ಕೆ ವಿಧೇಯನು, ಸಾಂವಿಧಾನಿಕ ಪ್ರಗತಿಯ ಅತ್ಯಂತ ಶಕ್ತ ವಕ್ತರಾನು ಇನ್ನೊಬ್ಬರು ಇರಲಿಕ್ಕಿಲ್ಲ. ಅದಲ್ಲವೇ ಪ್ರಗತಿಯ ಪ್ರಾಥಮಿಕ ಅವಸ್ಥೆ? ನಾವು ಜೈಲೊಳಗೆ ಇರುವಷ್ಟು ಕಾಲವೂ ಗೌರವಾನ್ವಿತ ದೊರೆಯ ಪ್ರಜೆಗಳ ನೂರಾರು ಸಾವಿರಾರು ಮನೆಗಳಲ್ಲಿ ನಿಜವಾದ ಸಂತೋಷ ತುಂಬಿ ತುಳುಕುವುದಿಲ್ಲ. ಯಾಕೆಂದರೆ ನೆತ್ತರು ನೀರಿಗಿಂತ ಗಟ್ಟಿಯಾದದ್ದು. ಆದರೆ, ನಾವು ವಿಮೋಚಿತರಾಗುವುದೇ ಆದರೆ ಈ ಮನುಷ್ಯರು, ಆತ್ಮ ಪರಿವರ್ತನೆ, ಕ್ಷಮೆ ಕೇಳುವುದು ಎಲ್ಲವೂ ಕೆಟ್ಟ ದಾರಿಯನ್ನು ಎತ್ತಿಹಿಡಿಯುವುದಕ್ಕಿಂತ ಮತ್ತು ಪ್ರತಿಕಾರ ತೀರಿಸುವುದಕ್ಕಿಂತ ಮೇಲಿನದು ಎಂಬ ಅರಿವುಳ್ಳವರು, ಆನಂದ ತುಂಬಿದ ಒಂದು ದೊಡ್ಡ ನಗು ಹೊತ್ತವರು ಮತ್ತು ಸರಕಾರದೊಂದಿಗೆ ಕೃತಜ್ಞತೆ ವ್ಯಕ್ತಪಡಿಸುವವರಾಗುತ್ತಾರೆ. ಅದಕ್ಕಿಂತ ಮುಖ್ಯವಾಗಿ ಸಾಂವಿಧಾನಿಕವಾದ ದಾರಿಯೆಡೆಗಿನ ನನ್ನ ಬದಲಾವಣೆ ಭಾರತದಲ್ಲಿ ಮತ್ತು ವಿದೇಶದಲ್ಲಿ ತಪ್ಪಾಗಿ ಮುನ್ನಡೆಸಲ್ಪಟ್ಟ, ಒಂದೊಮ್ಮೆ ನನ್ನನ್ನು ಮಾರ್ಗದರ್ಶಕನಾಗಿ ಕಂಡ ಯುವಕರನ್ನು ಪೂರ್ತಿಯಾಗಿ ಸಾಂವಿಧಾನಿಕ ದಾರಿಗೆ ಮರಳಿ ತರುತ್ತದೆ. ಸರಕಾರ ಬಯಸುವ ಯಾವ ರೀತಿಯಲ್ಲೂ ಅವರಿಂದ ಸೇವೆ ಸಲ್ಲಿಸಲು ನಾನು ಸಿದ್ದನಾಗಿದ್ದೇನೆ. ನನ್ನ ಬದಲಾವಣೆ ಪೂರ್ಣಾರ್ಥದ ಬದಲಾವಣೆಯಾಗಿರುವುದರಿಂದ ಅದು ಮುಂದೆಯೂ ಹಾಗೆಯೇ ಇರುತ್ತದೆ. ನನ್ನನ್ನು ಜೈಲಿನಲ್ಲಿ ಬಂಧಿಸಿಡುವುದರಿಂದ, ಬಂಧಿಸಿಡದಿದ್ದರೆ ಸಿಗುವ ಲಾಭಗಳ ಜೊತೆಗೆ ಯಾವ ರೀತಿಯಲ್ಲೂ ತುಲನೆ ಮಾಡಲು ಸಾಧ್ಯವಿಲ್ಲ. ಧೀರರು ಮಾತ್ರವೇ ದಯಾಳುಗಳಾಗಿರುತ್ತಾರೆ. ಆದ್ದರಿಂದ ಸರಕಾರದ ರಕ್ಷಣೆಯ ಬಾಗಿಲುಗಳ ಕಡೆಗಲ್ಲದೆ ಬೇರೆಲ್ಲಿಗೆ ಧೂರ್ತಪುತ್ರನಿಗೆ ಮರಳಲು ಸಾಧ್ಯ?ʼ</p>



<p>ಫಾಡ್ಕೆ ಮತ್ತು ಚಾಪೇಕರ್‌ ಸಹೋದರರ ಕುರಿತು ಕವಿತೆ ಬರೆದ, <em>ಅಭಿನವ್‌ ಭಾರತ್</em>‌ ಎಂಬ ಬ್ರಿಟಿಷ್‌ ವಿರೋಧಿ ಸಂಘಟನೆ ಕಟ್ಟಿದ, ಕರ್ಜನ್‌ ವಿಲ್ಲಿ ಮತ್ತು ಜಾಕ್ಸನ್‌ನನ್ನು ಕೊಲ್ಲಲು ಪ್ರೇರೇಪಿಸಿದ, ಬ್ರಿಟಿಷ್‌ ವಿರೋಧಿ ಹೋರಾಟದಲ್ಲಿ ಕೊಲ್ಲಲು ಮತ್ತು ಸಾಯಲು ಯುವಕರನ್ನು ಪ್ರೇರೇಪಿಸಿದ ಸಾವರ್ಕರ್ ಎಂಬ ವ್ಯಕ್ತಿಯ ಸಂಪೂರ್ಣ ಶರಣಾಗತಿಯನ್ನು ನಾವಿಲ್ಲಿ ಕಾಣಬಹುದು. ಡಿಂಗ್ರನಿಗೆ ಸಾವರ್ಕರ್‌ ಬರೆದು ಕೊಟ್ಟದ್ದು ಎಂದು ಹೇಳುವ ಹೇಳಿಕೆಯೊಂದಿಗೆ ಇದನ್ನಿಟ್ಟು ನೋಡಿದರೆ ಇದರ ದಯನೀಯತೆ ಎಷ್ಟು ಆಳವಾದದ್ದು ಎಂದು ಅರ್ಥ ಮಾಡಿಕೊಳ್ಳಬಹುದು. ಅನುಯಾಯಿಗಳಿಗೋಸ್ಕರ ಮಾತನಾಡಬೇಕಾದ ನಾಯಕ ಇಲ್ಲಿ ಅವರು ಅನುಭವಿಸುತ್ತಿರುವ ಸುಖ ನೆಮ್ಮದಿಯನ್ನು ಕಂಡು ಅಸೂಯೆಗೊಂಡು ಅದು ತನಗೂ ಬೇಕು ಎಂದು ಕೇಳುತ್ತಿದ್ದಾನೆ. ಅಷ್ಟೇ ಅಲ್ಲ, ಬ್ರಾಹ್ಮಣರೊಂದಿಗೆ ಉತ್ತೇಜಕ ಭಾಷೆಯಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಇಲ್ಲಿ ದಯನೀಯವಾದ ಬಿಕ್ಕಳಿಕೆಯ ಭಾಷೆಯಲ್ಲಿ ತನ್ನ ಭಯ ಮತ್ತು ಆತಂಕವನ್ನು ವ್ಯಕ್ತಪಡಿಸುತ್ತಾನೆ. ಡಿಂಗ್ರ ಮತ್ತು ಅನಂತ್‌ ಕನ್ಹಾರೆಯ ಶವಗಳು ಇದನ್ನು ಅರಿಯುತ್ತವೆಯಾದರೆ, ತಮ್ಮ ಆತ್ಮಗಳು ಮಗ್ಗುಲು ಬದಲಾಯಿಸಿಕೊಳ್ಳುತ್ತವೆ ಎಂದು ಖಂಡಿತವಾಗಿ ಹೇಳಬಹುದಾದ ಅತ್ಯಂತ ನೀಚ ಶರಣಾಗತಿಯಾಗಿತ್ತು ಆ ಪತ್ರ. ಅದರಲ್ಲೂ ವಿಶೇಷವಾಗಿ ಕೊನೆಯ ಪ್ಯಾರಾ.</p>
]]></content:encoded>
					
		
		
			</item>
		<item>
		<title>ಹಿಂದುತ್ವ ರಾಜಕಾರಣದ ಕಥೆ &#8211; 14 : ಸಾವರ್ಕರ್ ಎಸ್ಕೇಪ್</title>
		<link>https://peepalmedia.com/story-of-hindutva-politics-14-savarkar-escape/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 15 Apr 2024 12:46:04 +0000</pubDate>
				<category><![CDATA[ಅಂಕಣ]]></category>
		<category><![CDATA[ಇತಿಹಾಸ]]></category>
		<category><![CDATA[ಕಲೆ – ಸಾಹಿತ್ಯ]]></category>
		<category><![CDATA[hindutva rajakaranada kathe]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Sunaif]]></category>
		<category><![CDATA[VD Savarkar]]></category>
		<guid isPermaLink="false">https://peepalmedia.com/?p=38363</guid>

					<description><![CDATA[ವಿಚಾರಣೆ ತಿಂಗಳುಗಳ ಕಾಲ ನಡೆಯಿತು. ಲಂಡನ್ನಿನ ಕಾನೂನುಗಳ ಪ್ರಕಾರ ತನಗೆ ಸಣ್ಣ ಪ್ರಮಾಣದ ಶಿಕ್ಷೆ ಮಾತ್ರ ಲಭಿಸಲಿದೆ ಎಂಬ ಸಾವರ್ಕರ್ ಲೆಕ್ಕಾಚಾರಗಳು ಬುಡಮೇಲಾದವು. ಗೂಢಾಲೋಚನೆಯ ಆರಂಭಿಕ ಹಂತ ಭಾರತದಲ್ಲಿ ಶುರುವಾಗಿತ್ತು ಎಂದು ನಾಸಿಕ್‌ ಮತ್ತು ಪುಣೆಗಳಲ್ಲಿ ಸಶಸ್ತ್ರ ಹೋರಾಟವನ್ನು ಬೆಂಬಲಿಸಿಕೊಂಡು ಸಾವರ್ಕರ್‌ ಮಾಡಿದ್ದ ಭಾಷಣಗಳನ್ನು ಮುಂದಿಟ್ಟು ಪ್ರಾಸಿಕ್ಯೂಷನ್‌ ವಾದಿಸಿತು. ಭಾರತದಲ್ಲಿ ದೇಶದ್ರೋಹಕ್ಕೆ ದೊಡ್ಡ ಬೆಲೆ ತೆರಬೇಕಾದೀತೆಂದು ಸಾವರ್ಕರ್‌ಗೆ ತಿಳಿದಿತ್ತು. ಆದ್ದರಿಂದ ಪೊಲೀಸ್‌ ಕಸ್ಟಡಿಯಿಂದ ಪಾರಾಗುವುದು ಸಾವರ್ಕರ್‌ ಯೋಜನೆಯಾಗಿತ್ತು. ಸಾವರ್ಕರ್ ವಿಚಾರಣೆ ಲಂಡನ್ನಿನಲ್ಲಿ ಆರಂಭವಾಗುವಾಗ ಅವರ ವಿರುದ್ಧ ಸಾಕ್ಷಿ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ವಿಚಾರಣೆ ತಿಂಗಳುಗಳ ಕಾಲ ನಡೆಯಿತು. ಲಂಡನ್ನಿನ ಕಾನೂನುಗಳ ಪ್ರಕಾರ ತನಗೆ ಸಣ್ಣ ಪ್ರಮಾಣದ ಶಿಕ್ಷೆ ಮಾತ್ರ ಲಭಿಸಲಿದೆ ಎಂಬ ಸಾವರ್ಕರ್ ಲೆಕ್ಕಾಚಾರಗಳು ಬುಡಮೇಲಾದವು. ಗೂಢಾಲೋಚನೆಯ ಆರಂಭಿಕ ಹಂತ ಭಾರತದಲ್ಲಿ ಶುರುವಾಗಿತ್ತು ಎಂದು ನಾಸಿಕ್‌ ಮತ್ತು ಪುಣೆಗಳಲ್ಲಿ ಸಶಸ್ತ್ರ ಹೋರಾಟವನ್ನು ಬೆಂಬಲಿಸಿಕೊಂಡು ಸಾವರ್ಕರ್‌ ಮಾಡಿದ್ದ ಭಾಷಣಗಳನ್ನು ಮುಂದಿಟ್ಟು ಪ್ರಾಸಿಕ್ಯೂಷನ್‌ ವಾದಿಸಿತು. ಭಾರತದಲ್ಲಿ ದೇಶದ್ರೋಹಕ್ಕೆ ದೊಡ್ಡ ಬೆಲೆ ತೆರಬೇಕಾದೀತೆಂದು ಸಾವರ್ಕರ್‌ಗೆ ತಿಳಿದಿತ್ತು. ಆದ್ದರಿಂದ ಪೊಲೀಸ್‌ ಕಸ್ಟಡಿಯಿಂದ ಪಾರಾಗುವುದು ಸಾವರ್ಕರ್‌ ಯೋಜನೆಯಾಗಿತ್ತು.</p>
</blockquote>



<p>ಸಾವರ್ಕರ್ ವಿಚಾರಣೆ ಲಂಡನ್ನಿನಲ್ಲಿ ಆರಂಭವಾಗುವಾಗ ಅವರ ವಿರುದ್ಧ ಸಾಕ್ಷಿ ಹೇಳಲು ಬಂದವರು ಸ್ವತಃ ಸಾವರ್ಕರ್‌ ಅನುಯಾಯಿಗಳೇ ಆಗಿದ್ದರು. ಹಿಂದುತ್ವದ ಇತಿಹಾಸ ಕೆದಕುವಾಗ ನಾವು ವಿಶೇಷವಾಗಿ ಗಮನಿಸಬೇಕಿರುವುದು ವಿಚಾರಣೆಗಳ ಇತಿಹಾಸವನ್ನು. ಸೈದ್ಧಾಂತಿಕ ಸಂವಾದಗಳ ಮೂಲಕ ಬೆಳೆದು ಬಂದ ಸಂಗತಿಯಲ್ಲ ಅದು. ಅದು ಸಂವಾದಗಳ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವ ಕೆಲಸ ಮಾಡುವುದಿಲ್ಲ. ಸಾಮಾಜಿಕ ಪ್ರಜ್ಞೆಯೆಂಬುದು ತಾವು ಹೇರಬೇಕಾದ ಸಂಗತಿಯೆಂದು ಭಾವಿಸಿಕೊಂಡು ನಡೆಸುತ್ತಿದ್ದ ಹಸ್ತಕ್ಷೇಪಗಳು ಅವರದ್ದಾಗಿದ್ದವು. ಪುರಾಣ ಮತ್ತು ಇತಿಹಾಸಗಳನ್ನು ಕಲಸುಮೇಲೋಗರ ಮಾಡುವ ಕೆಲಸಕ್ಕೆ ತಿಲಕ್‌ ಕೈ ಹಾಕಿದ್ದರು. ಒಂದು ಗೋತ್ರ ಭಾವನಾತ್ಮಕತೆಯಾಗಿ ಸ್ವಾತಂತ್ರ್ಯ ಹೋರಾಟವನ್ನು ವ್ಯಾಖ್ಯಾನಿಸಿದ್ದರು.</p>



<p>ಇದರ ಒಂದು ಪ್ರತಿಫಲವಾಗಿ ಭೂಗತ ಸಂಘಟನೆಗಳು ಹುಟ್ಟಿಕೊಂಡವು. ಭೌತಿಕವಾಗಿ ಕಬ್ಜಗೊಳಿಸಬೇಕಾದ ಸಂಗತಿಯಾಗಿ ದೇಶ ಎಂಬ ಕಲ್ಪನೆ ಬದಲಾಯಿತು. ಹೋರಾಟಗಳಿಂದ ಆಧುನಿಕ ಮನೋಭಾವವನ್ನು ಕಿತ್ತು ಹಾಕಿದರೆ ಅದು ಯುದ್ಧಗಳಾಗುತ್ತವೆ ಎಂದು ಭೂಗತ ಸಂಘಟನೆಗಳ ಹುಟ್ಟು ಸಾಬೀತು ಪಡಿಸಿದವು. ಯುದ್ಧದಲ್ಲಿ ಬೇಕಿರುವುದು ನಿಷ್ಠೆ. ಸೈದ್ಧಾಂತಿಕತೆಯಲ್ಲ. ಆಧುನಿಕ ಮೌಲ್ಯಗಳಿಗೆ ಯುದ್ಧದಲ್ಲಿ ಯಾವ ಜಾಗವೂ ಇಲ್ಲ. <em>ಅಭಿನವ್‌ ಭಾರತ್</em>‌ ಮೊದಲಾದ ಸಂಘಟನೆಗಳಲ್ಲಿ ಸದಸ್ಯರಾಗಿ ಸೇರುವುದು ಯಾವುದಾದರು ಕಾರ್ಯಕ್ರಮಗಳ ಮೂಲಕ ಆಗಿರಲೇ ಇಲ್ಲ. ಪ್ರತಿಜ್ಞೆ ಸ್ವೀಕರಿಸಿ ನಿಷ್ಠೆ ಸಾಬೀತು ಪಡಿಸುವ ಮೂಲಕವಾಗಿತ್ತು.</p>



<p>ಆದರೆ, ನ್ಯಾಯಾಲಯ ತರಹದ ಸುಮಾರಾಗಿ ಆಧುನಿಕವಾದ ಜಾಗ ತಲುಪುವಾಗ ಈ ಗೋತ್ರ ಭಾವನಾತ್ಮಕತೆ ಚಿಂದಿಯಾಗುವುದನ್ನು ಕಾಣಬಹುದು. ಈ ವಿಚಾರಣೆಗಳ ಇತಿಹಾಸ ಕೆದಕಿದರೆ ಮಾಫಿ ಸಾಕ್ಷಿಗಳ ದೊಡ್ಡ ಪಡೆಯನ್ನೇ ಕಾಣಬಹುದು. ಮಾತ್ರವಲ್ಲ, ಈ ಸಂಘಟನೆಗಳ ಭರ್ಜಿಗಳಾಗುವವರು ತಮ್ಮ ಕೃತ್ಯದ ಸಂಪೂರ್ಣ ಜಾವಾಬ್ದಾರಿಯನ್ನು ಹೊರಲು ತಯಾರಾಗುವಂತಹ ಮಾನಸಿಕತೆಯನ್ನು ಹೊಂದಿದವರಾಗಿರುತ್ತಾರೆ. ಉದಾಹರಣೆಗೆ, ಡಿಂಗ್ರ. ವಿಲ್ಲಿಯನ್ನು ಕೊಂದ ಪೂರ್ತಿ ಜವಾಬ್ದರಾರಿಯನ್ನು ತಾನೇ ಹೊತ್ತುಕೊಂಡು ನೇಣುಗಂಬ ಏರಿದ. ಒಂದು ದೊಡ್ಡ ಭೂಗತ ಸಂಘಟನೆಯ ಅನಿವಾರ್ಯ ಘಟಕ ತಾನಾಗಿದ್ದೆ ಎಂಬುದನ್ನು ಡಿಂಗ್ರ ಎಲ್ಲಿಯೂ ಬಾಯಿ ಬಿಡಲಿಲ್ಲ. ತನ್ನೊಳಗೆ ಹುಟ್ಟಿಕೊಂಡ ಸಂಘರ್ಷದ ಫಲವಾಗಿ ತಾನು ನಡೆದುಕೊಂಡ ಪರಿಣಾಮವೇ ವಿಲ್ಲಿಯ ಕೊಲೆಯೆಂದು ಡಿಂಗ್ರ ನ್ಯಾಯಾಲಯದಲ್ಲಿ ವಾದಿಸಿದ. ಅದರ ಶಿಕ್ಷೆಯನ್ನು ತಾನೇ ಸ್ವೀಕರಿಸಿದ.</p>



<p>ಆದರೆ, ಜಾಕ್ಸನ್‌ ಕೊಲೆ ಪ್ರಕರಣ ಹಾಗಾಗಿರಲಿಲ್ಲ. ಅದರ ಹಿಂದಿನ ಗೂಢಾಲೋಚನೆಯನ್ನು ಹೊರತರುವಲ್ಲಿ ಮಾಫಿಸಾಕ್ಷಿಗಳು ದೊಡ್ಡ ಪಾತ್ರ ವಹಿಸಿದರು. ಗಾಂಧಿ ಹತ್ಯೆ ಸಹಿತ, ದುರಭಿಮಾನ ಮತ್ತು ಪ್ರತಿಕಾರ ಕೊಲೆಗಳ ಕುರಿತು ಇವತ್ತು ನಮ್ಮ ಮುಂದೆ ಇರುವ ಮಾಹಿತಿಗಳ ಮೂಲ ಈ ಮಾಫಿಸಾಕ್ಷಿಗಳ ದಾಖಲೆಗಳೇ ಆಗಿದೆ. ಇದು ವಿಚಾರಣೆಗಳು ಅವರ ಒಳಗೆ ಮೂಡಿಸಿದ ಸಂಘರ್ಷಗಳ ಪರಿಣಾಮವೂ ಹೌದು. ಆಧುನಿಕ ವಿರೋಧಿಯಾದ ಅಂತಃಸತ್ವವೊಂದು ಮೊದಲ ಬಾರಿಗೆ ಆಧುನಿಕತೆಯೊಂದಿಗೆ ಮುಖಾಮುಖಿಯಾಗುವಾಗ ಉಂಟಾಗುವ ಪ್ರತಿಕ್ರಿಯೆಯ ಉಪಉತ್ಪನ್ನವಾಗಿ ಈ ಮಾಫಿಸಾಕ್ಷಿಗಳನ್ನು ಪರಿಗಣಿಸಬಹುದು.</p>



<p>ಸಾವರ್ಕರ್ ವಿಷಯದಲ್ಲೂ ಇಂತಹ ಮಾಫಿಸಾಕ್ಷಿಗಳ ದೊಡ್ಡ ಸರಣಿಯನ್ನೇ ನೋಡಬಹುದು. ಅದರಲ್ಲಿ ಮೊದಲ ವ್ಯಕ್ತಿ ಹರಿಶ್ಚಂದ್ರ ಕೃಷ್ಣರಾವ್‌ ಕೋರೆಗಾಂವ್ಕರ್‌ ಎಂಬ ಮರಾಠಿ ಇಂಜಿನಿಯರ್. ಗ್ವಾಲಿಯರ್‌ ಮೂಲದ ಆತ ೧೯೦೬ರಲ್ಲಿ ಇಂಜಿನಿಯರಿಂಗ್‌ ಕಲಿಯಲೆಂದು ಲಂಡನ್‌ ತಲುಪಿದ್ದ. ಆ ವರ್ಷವೇ ಗುರು ಗೋವಿಂದ್‌ ಸಿಂಗ್‌ ಜಯಂತಿ ಆಚರಣೆಯಲ್ಲಿ ಪಾಲ್ಗೊಳ್ಳಲು ಇಂಡಿಯಾ ಹೌಸಿಗೆ ಮೊದಲ ಬಾರಿ ಭೇಟಿ ನೀಡುತ್ತಾನೆ. ನಂತರ ಅಲ್ಲಿಯೇ ವಾಸ ಮುಂದುವರಿಸುತ್ತಾನೆ. ಸಾವರ್ಕರ್‌, ಇಂಡಿಯಾ ಹೌಸಿನ ವಿದ್ಯಾರ್ಥಿಗಳಿಗಾಗಿ ಮಾಡಿದ ಎರಡು ಭಾಷಣಗಳನ್ನು ಕೋರೆಗಾಂವ್ಕರ್‌ ನೆನೆಯುತ್ತಾನೆ. ಮೊದಲನೆಯದು, ಬ್ರಿಟಿಷ್‌ ಇಂಡಿಯಾದ ರಾಜಾಡಳಿತ ಸಂಸ್ಥಾನಗಳಲ್ಲಿ ಶೇಖರಿಸಿರುವ ಆಯುಧಗಳನ್ನು ಬಳಸಿಕೊಂಡು ಬ್ರಿಟಿಷರನ್ನು ಸೋಲಿಸುವ ಕುರಿತು. ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ದೇಶೀ ಸಂಸ್ಥಾನಗಳು ವಹಿಸಬೇಕಾದ ಜವಾಬ್ದಾರಿಯ ಕುರಿತು ಸಾವರ್ಕರ್‌ ಬಹಳ ಹಿಂದೆಯೇ ಯೋಚಿಸಿದ್ದರು ಎಂಬುದಕ್ಕೆ ಕೋರೆಗಾಂವ್ಕರನ ಮಾತುಗಳು ಸಾಕ್ಷಿ ಒದಗಿಸುತ್ತವೆ.</p>



<p>ಎರಡನೆಯದು, ಹಾಗೆ ಉಂಟಾಗುವ ಹೊಸ ರಾಷ್ಟ್ರದ ರಚನೆ ಹೇಗಿರಬೇಕು ಎಂಬುದರ ಕುರಿತು. ದೇಶೀಯ ರಾಜರುಗಳು ಸದಸ್ಯರಾಗಿರುವ ಒಂದು ಮೇಲ್ಮೈ ಸಭೆ ಮತ್ತು ಆಯ್ದ ಸದಸ್ಯರನ್ನು ಒಳಗೊಂಡ ಒಂದು ಭೂಗತ ಸಭೆ ಸಾವರ್ಕರ್‌ ಮುಂದಿಟ್ಟ ಯೋಜನೆಯಾಗಿತ್ತು. ಇದರ ಜೊತೆಗೆ ಬ್ರಿಟಿಷರ ವಿರುದ್ಧ ಹೋರಾಡಲು ಅತ್ಯಂತ ಹೆಚ್ಚು ಸಹಾಯ ಮಾಡಿದ ಒಬ್ಬ ರಾಜನನ್ನು ದೇಶದ ರಾಜ ಎಂದು ಪಟ್ಟಾಭಿಷೇಕ ಮಾಡುವುದು.</p>



<p>ಸಾವರ್ಕರ್‌ ಅವರ ದೇಶದ ಕಲ್ಪನೆ ಫಾಡ್ಕೇ ಮತ್ತಿತರು ಕನಸು ಕಂಡಿದ್ದ ಪೇಶ್ವಾ ಸಾಮ್ರಾಜ್ಯದ ಪುನರ್‌ ಸ್ಥಾಪನೆ ಎಂಬ ಆಶಯಕ್ಕಿಂತ ಹೆಚ್ಚೇನು ಭಿನ್ನವಲ್ಲ ಎಂಬುದನ್ನು ಕೋರೆಗಾಂವ್ಕರನ ಈ ಹೇಳಿಕೆಗಳು ತೋರಿಸಿಕೊಡುತ್ತವೆ. ಅಷ್ಟೇ ಅಲ್ಲ, ಹಾಗೆ ಹುಟ್ಟುವ ಹೊಸ ರಾಷ್ಟ್ರದ ಭಾಷೆಯಾಗಿ ಹಿಂದಿಯನ್ನು ಸಾವರ್ಕರ್‌ ಸೂಚಿಸುತ್ತಾರೆ. ನಂಬಿಕೆ ಮತ್ತು ಆಯುಧಗಳನ್ನು ಬಳಸಿಕೊಂಡು ಮಾಡಿದ ಇನ್ನೊಂದು ಭಾಷಣವನ್ನೂ ಕೋರೆಗಾಂವ್ಕರ್‌ ನೆನೆಯುತ್ತಾನೆ.</p>



<p>ಕೋರೆಗಾಂವ್ಕರ್‌ ಮತ್ತು ಡಿಂಗ್ರ ಲಂಡನ್ನಿಗೆ ಒಂದೇ ಹಡಗಿನಲ್ಲಿ ಯಾತ್ರೆ ಮಾಡಿದ್ದರು. ವಿಲ್ಲಿಯನ್ನು ಕೊಲ್ಲುವ ದಿನ ಡಿಂಗ್ರ ರಸೆಲ್‌ ಸ್ಕ್ವೇರ್‌ನಲ್ಲಿರುವ ಕೋರೆಗಾಂವ್ಕರನ ಮನೆಗೆ ಬಂದಿದ್ದ. ಘಟನೆ ನಡೆಯುವ ದಿನ ಡಿಂಗ್ರನನ್ನು ಹಿಂಬಾಲಿಸಬೇಕೆಂದೂ ಇದರಲ್ಲಿ ಡಿಂಗ್ರ ಸೋತರೆ ಆ ಗುರಿಯನ್ನು ಕೋರೆಗಾಂವ್ಕರ್‌ ನೆರವೇರಸಿಬೇಕೆಂದೂ ವಿನಾಯಕ್‌ ಮತ್ತು ವಿ.ವಿ.ಎಸ್.‌ ಅಯ್ಯರ್‌ ಆತನಿಗೆ ಮನವರಿಕೆ ಮಾಡಿಕೊಟ್ಟಿದ್ದರು. ವಿಲ್ಲಿಯನ್ನು ಕೊಲ್ಲುವ ಸಭಾಂಗಣಕ್ಕೆ ವಿಲ್ಲಿ ಬರುವ ಸೂಚನೆಯನ್ನು ನೀಡಿದ್ದು ಕೂಡ ಕೋರೆಗಾಂವ್ಕರ್‌ ಆಗಿದ್ದ.</p>



<p>ಎರಡನೆಯ ಮಾಫಿಸಾಕ್ಷಿ ಚಂಚೇರಿ ರಾಮರಾವ್.<sup>‌</sup> ದೇಶಸ್ಥ ಬ್ರಾಹ್ಮಣನಾಗಿದ್ದ ಆತ ೧೯೦೯ರಲ್ಲಿ ಸ್ಯಾನಿಟರಿ ಇಂಜಿನಿಯರಿಂಗ್‌ ಕಲಿಯಲು ಲಂಡನ್‌ ತಲುಪಿದ್ದ. ಬಹಳ ಬೇಗನೆ ವಿನಾಯಕ್‌ ಜೊತೆ ಭೇಟಿ ಸಾಧ್ಯವಾಗಿ ಪ್ರತಿಜ್ಞೆ ಸ್ವೀಕರಿಸಿ <em>ಅಭಿನವ್‌ ಭಾರತ್</em>‌ ಸದಸ್ಯನೂ ಆದ. ಜಾಕ್ಸನ್‌ ಕೊಲೆಯ ನಂತರ ವಿನಾಯಕ್‌ ಪ್ಯಾರಿಸಿನ ಮೇಡಂ ಕಾಮಾರ ಮನೆಯಲ್ಲಿ ವಾಸವಿದ್ದಾಗ ರಾಮರಾವ್‌ ಅಲ್ಲಿಗೆ ಭೇಟಿ ನೀಡಿದ್ದ. ಆತನ ಮೂಲಕ ಪಿಸ್ತೂಲುಗಳನ್ನು ಪ್ಯಾರಿಸಿನಿಂದ ಭಾರತಕ್ಕೆ ಕಳುಹಿಸಲಾಯಿತು. ಜೊತೆಗೆ ಸಾವರ್ಕರ್‌ ಬರೆದಿದ್ದ <em>೧೮೫೭ರ ಸ್ವಾತಂತ್ರ್ಯ ಯುದ್ಧ</em>ದ ಹತ್ತು ಪ್ರತಿಗಳನ್ನೂ. ಅದಲ್ಲದೆ ಮದನ್‌ ಲಾಲ್‌ ಡಿಂಗ್ರನ ಭಾವಚಿತ್ರವನ್ನು ಒಂದು ಶಿಲ್ಲಿಂಗ್‌ ಬೆಲೆಗೆ ರಾಮರಾವ್‌ಗೆ ನೀಡಿದ್ದರು.</p>



<p>ಬಾಂಬೆ ತಲುಪಿದ ರಾಮರಾವ್‌ ಬಂಧಿತನಾದ. ಆತ ಸಾಗಾಟ ಮಾಡಿದ ಆಯುಧಗಳ ಕುರಿತ ತನಿಖೆ ಆತನನ್ನು ಮಾಫಿಸಾಕ್ಷಿಯನ್ನಾಗಿಸಿತು. ಚತುರ್ಭುಜ್‌ ಅಮೀನನ ಹೇಳಿಕೆಯೂ ಸಾವರ್ಕರ್‌ಗೆ ವಿರುದ್ಧವಾಗಿತ್ತು.</p>



<p>ವಿಚಾರಣೆ ತಿಂಗಳುಗಳ ಕಾಲ ನಡೆಯಿತು. ಲಂಡನ್ನಿನ ಕಾನೂನುಗಳ ಪ್ರಕಾರ ತನಗೆ ಸಣ್ಣ ಪ್ರಮಾಣದ ಶಿಕ್ಷೆ ಮಾತ್ರ ಲಭಿಸಲಿದೆ ಎಂಬ ಸಾವರ್ಕರ್ ಲೆಕ್ಕಾಚಾರಗಳು ಬುಡಮೇಲಾದವು. ಗೂಢಾಲೋಚನೆಯ ಆರಂಭಿಕ ಹಂತ ಭಾರತದಲ್ಲಿ ಶುರುವಾಗಿತ್ತು ಎಂದು ನಾಸಿಕ್‌ ಮತ್ತು ಪುಣೆಗಳಲ್ಲಿ ಸಶಸ್ತ್ರ ಹೋರಾಟವನ್ನು ಬೆಂಬಲಿಸಿಕೊಂಡು ಸಾವರ್ಕರ್‌ ಮಾಡಿದ್ದ ಭಾಷಣಗಳನ್ನು ಮುಂದಿಟ್ಟು ಪ್ರಾಸಿಕ್ಯೂಷನ್‌ ವಾದಿಸಿತು. ಭಾರತದಲ್ಲಿ ದೇಶದ್ರೋಹಕ್ಕೆ ದೊಡ್ಡ ಬೆಲೆ ತೆರಬೇಕಾದೀತೆಂದು ಸಾವರ್ಕರ್‌ಗೆ ತಿಳಿದಿತ್ತು. ಆದ್ದರಿಂದ ಪೊಲೀಸ್‌ ಕಸ್ಟಡಿಯಿಂದ ಪಾರಾಗಲು ಸಾವರ್ಕರ್‌ ಯೋಚಿಸಿದರು.</p>



<p>ಆಗ ಸಾವರ್ಕರ್‌ ಸಹಾಯಕ್ಕೆ ಬರುವವನು ಡೇವಿಡ್‌ ಗಾರ್ನೆಟ್‌ ಎಂಬ ಯುವ ಲೇಖಕ. ಸಾವರ್ಕರ್‌ಗೆ ಬಚಾವಾಗಲು ಯೋಜನೆಯೊಂದನ್ನು ಆತ ರೂಪಿಸಿದ. ಪ್ರತಿವಾರ ಸಾವರ್ಕರನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕೊಂಡು ಹೋಗುತ್ತಿದ್ದರು. ಸಾಮಾನ್ಯವಾಗಿ ಇಬ್ಬರು ಪೊಲೀಸರು ಕಾವಲಿಗೆ ಜೊತೆಗಿರುತ್ತಿದ್ದರು. ಹೀಗೆ ಕೊಂಡು ಹೋಗುವಾಗ ಜೈಲ್‌ ಗೇಟಿನ ಬಳಿಯೇ ಪೊಲೀಸರು ಮತ್ತು ಜೈಲು ಕಾವಲುಗಾರನ ಮೇಲೆ ದಾಳಿ ಮಾಡಿ ಸಾವರ್ಕರನ್ನು ರಕ್ಷಿಸಿ ಕಾರಿನಲ್ಲಿ ಬೋಟ್‌ ಜೆಟ್ಟಿಗೆ ತಲುಪಿಸುವುದು. ಅಲ್ಲಿಂದ ಬೋಟ್‌ ಮೂಲಕ ಫ್ರಾನ್ಸಿಗೆ ಪಲಾಯನ. ಇದು ಯೋಜನೆ. ಇದನ್ನು ಕಾರ್ಯಗತಗೊಳಿಸಲು ಲಂಡನ್ನಿನಲ್ಲಿದ್ದ ಸಾವರ್ಕರ್‌ ಅನುಯಾಯಿಯನ್ನು ಗಾರ್ನೆಟ್‌ ಭೇಟಿಯಾಗುತ್ತಾನೆ. ʼಸಿ.ಸಿ.ʼ ಎಂದು ಆ ಅನುಯಾಯಿಯನ್ನು ಗಾರ್ನೆಟ್‌ ಕರೆಯುತ್ತಾನೆ. ಜೊತೆಗೆ ಫ್ರಾನ್ಸಿಗೆ ಕೊಂಡು ಹೋಗಲು ಬೇಕಾದ ಬೋಟ್‌ ವ್ಯವಸ್ಥೆ ಮಾಡಲೆಂದು ಫ್ರಾನ್ಸಿನಲ್ಲಿದ್ದ ʼಎ.ಎʼ ಎಂಬ ಕ್ರಾಂತಿಕಾರಿಯನ್ನು ಸಂಪರ್ಕಿಸುತ್ತಾನೆ. ಆ ಪ್ರಯತ್ನ ವಿಫಲಗೊಳ್ಳಲು ಕಾರಣ ವಿಧಿಯ ಆಟವೆಂದು ವಿಕ್ರಂ ಸಂಪತ್‌ ತನ್ನ ಪುಸ್ತಕದಲ್ಲಿ ಹೇಳಿಕೊಳ್ಳುತ್ತಾರೆ. ಯಾಕೆಂದರೆ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಜೈಲಿನಿಂದ ಹೊರಬರುವ ಸಾವರ್ಕರ್‌ನನ್ನು ಬೋಟ್‌ ಜೆಟ್ಟಿಗೆ ತಲುಪಿಸಲು ಐರಿಷ್‌ ಕ್ರಾಂತಿಕಾರಿ ಸಂಘಟನೆಯಾಗಿದ್ದ <em>ಸಿನ್‌ಫಿನ್ </em>ನ ಇಬ್ಬರು ಸದಸ್ಯರು ತಯಾರಾಗಿ ನಿಂತಿದ್ದರು. ಆದರೆ, ಹೊರಬಂದ ಕಾರಿನಲ್ಲಿ ಸಾವರ್ಕರ್‌ ಇರಲಿಲ್ಲ. ಆ ಹೊತ್ತಿಗೆ ಮುಂದಿನ ವಿಚಾರಣೆಗಾಗಿ ಸಾವರ್ಕರನ್ನು ಭಾರತಕ್ಕೆ ಕಳುಹಿಸುವ ನಿರ್ಧಾರ ತೆಗೆದುಕೊಂಡಾಗಿತ್ತು.</p>



<p>ಆದರೆ ವೈಭವ್‌ ಪುರಂದರೆ ಬೇರೆಯದೇ ಚಿತ್ರಣವೊಂದನ್ನು ಕಟ್ಟಿಕೊಡುತ್ತಾರೆ. ಪ್ಯಾರಿಸಿನ ಕ್ರಾಂತಿಕಾರಿ ʼಎ.ಎʼ ಬೋಟ್‌ ವ್ಯವಸ್ಥೆ ಮಾಡುವುದರಲ್ಲಿ ಸಹಾಯ ಮಾಡಲಿಲ್ಲ. ಆತನ ಕಡೆಯಿಂದ ಯಾವ ಸಹಾಯವೂ ಸಿಗುವುದಿಲ್ಲವೆಂದು ಖಚಿತವಾದ ನಂತರ ಗಾರ್ನೆಟ್‌ ಸ್ವತಃ ತಾನೇ ಪ್ಯಾರೀಸಿಗೆ ಹೋಗಿ ಬೋಟ್‌ ವ್ಯವಸ್ಥೆ ಮಾಡುತ್ತಾನೆ. ಆದರೆ, ಗಾರ್ನೆಟ್ಟನ ತಂದೆ ಅದಾಗಲೇ ಫ್ರಾನ್ಸ್‌ ತಲುಪಿ ಫ್ರೆಂಚ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾನೆಂದು ʼಎ.ಎʼ ಗಾರ್ನೆಟ್‌ಗೆ ವಿವರಿಸುತ್ತಾನೆ. ಹಾಗಾಗಿ ಸಾವರ್ಕರನ್ನು ರಕ್ಷಿಸುವ ಆ ಯೋಜನೆಯನ್ನು ಅವರು ಕೈ ಬಿಡುತ್ತಾರೆ. ʼಎ.ಎʼ ಈ ಯೋಜನೆಯನ್ನು ಬುಡಮೇಲು ಮಾಡಿದನೆಂದು ಗಾರ್ನೆಟ್‌ ಭಾವಿಸುತ್ತಾನೆ. ʼಇಂಡಿಯನ್‌ ಕ್ರಾಂತಿಕಾರಿಗಳುʼ ತಮ್ಮ ಅಗತ್ಯಕ್ಕೆ ಬೇಕಾಗಿ ತನಗೆ ವಿದೂಷಕನ ವೇಷ ತೊಡಿಸಿದರೆಂದೂ ಆತ ಅಂದುಕೊಳ್ಳುತ್ತಾನೆ.</p>



<p>ಧನಂಜಯ್‌ ಕೀರ್‌ ಬರೆದ ಆತ್ಮಕತೆಯಲ್ಲೂ ಸುಮಾರಾಗಿ ಇಂತಹದ್ದೇ ಚಿತ್ರಣವಿದೆ. ಜೈಲಿನಿಂದ ಹೊರಬರುವ ಸಾವರ್ಕರನ್ನು ರಕ್ಷಿಸಲು ಬೇಕಾದ ಏರ್ಪಾಟುಗಳಿಗೆ ಮುಂದಾಳುತ್ವ ವಹಿಸಿದ್ದು ಮೋಡ್‌ಗಾನ್‌ ಎಂಬ ಯುವತಿ ಎಂದು ಧನಂಜಯ್‌ ಕೀರ್‌ ಹೇಳುತ್ತಾರೆ. ನಮಗೆಲ್ಲ ತಿಳಿದಿರುವಂತೆ ಮಹಾಕವಿ ಡಬ್ಲ್ಯೂ.ಬಿ. ಯೇಟ್ಸ್‌ನ ಪ್ರೇಯಸಿಯಾಗಿದ್ದಳು ಮೋಡ್‌ಗಾನ್.‌ <em>ಈಸ್ಟರ್‌ ೧೯೧೬</em> ಎಂಬ ಕವಿತೆಯಲ್ಲಿ ಮೋಡ್‌ಗಾನಳ ಪತಿಯಾಗಿದ್ದ, ನಂತರ ವಿಚ್ಛೇದನಗೊಂಡ, ಮೇಜರ್‌ ಜಾನ್‌ ಮ್ಯಾಕ್‌ಬ್ರೈಡನ ಕುರಿತು ʼನನ್ನ ಹೃದಯಕ್ಕೆ ಅತ್ಯಂತ ಹತ್ತಿರದ ವ್ಯಕ್ತಿಯ ಮೇಲೆ ಅತಿ ದೊಡ್ಡ ತಪ್ಪೆಸಗಿದ ವ್ಯಕ್ತಿʼ ಎಂದು ಯೇಟ್ಸ್‌ ನೆನೆಯುತ್ತಾನೆ. ಈಸ್ಟರ್‌ ದಿನ ದಂಗೆಯಲ್ಲಿ ಜಾನ್‌ ಮ್ಯಾಕ್‌ಬ್ರೈಡನನ್ನು ಕೊಲ್ಲಲಾಗಿರುತ್ತದೆ. ಆದರೆ ಈ ಮಾಹಿತಿ ಪೊಲೀಸರಿಗೆ ಅದು ಹೇಗೋ ಸೋರಿಕೆಯಾದ ಕಾರಣ ಬೇರೊಂದು ದಾರಿಯಲ್ಲಿ ಸಾವರ್ಕರನ್ನು ಕೊಂಡು ಹೋಗಲಾಗಿತ್ತು ಎಂದು ಕೀರ್‌ ಬರೆಯುತ್ತಾರೆ. ಆದರೆ, ಅದಕ್ಕಿಂತಲೂ ದೊಡ್ಡ ಆರೋಪವೊಂದನ್ನು ಕೀರ್‌ ಸಂಶಯ ರೂಪದಲ್ಲಿ ಎತ್ತುತ್ತಾರೆ. ʼಎ.ಎ.ʼ ಅಂದರೆ ಅರುಣಾ ಅಸಫ್‌ ಅಲಿಯ ಪತಿ ಅಸಫ್‌ ಅಲಿ ಎಂಬುದು ಆ ಸಂಶಯ. ಸಾವರ್ಕರ್‌ ಜೊತೆಗಿನ ದೀರ್ಘ ಸಂವಾದದ ನಂತರ ತಾನು ಆತ್ಮಕತೆ ಬರೆದೆ ಎಂದು ಧನಂಜಯ್‌ ಕೀರ್‌ ಹೇಳುತ್ತಾರೆ. ವಿರೋಧಿಗಳನ್ನು ವೈಯಕ್ತಿಕ ತೇಜೋವಧೆ ಮಾಡುವುದು ಸಾವರ್ಕರ್‌ ಶೈಲಿಯಾಗಿದ್ದರಿಂದ, ಸ್ವತಃ ಸಾವರ್ಕರೇ ಅಂತಹದ್ದೊಂದು ಸಂಶಯಾತ್ಮಕ ಸಂಗತಿಯನ್ನು ತೇಲಿಬಿಟ್ಟಿರಬಹುದು ಎಂದು ಕೂಡ ಊಹಿಸಬಹುದು.</p>



<p>ತನ್ನ ಪ್ರಯತ್ನ ವಿಫಲವಾದುದರ ಕುರಿತು ಗಾರ್ನೆಟ್‌ ಸಾವರ್ಕರ್‌ಗೆ ವಿವರಿಸಿದಾಗ, ಸಾವರ್ಕರ್‌ ಗಾರ್ನೆಟನ್ನು ಸಮಾಧಾನಪಡಿಸುತ್ತಾನೆ. ಪಾರಾಗಲು ಬೇರೆ ದಾರಿಗಳನ್ನು ತಾನು ಹುಡುಕುತ್ತಿರುವ ಸೂಚನೆಯನ್ನೂ ಸಾವರ್ಕರ್‌ ನೀಡುತ್ತಾರೆ. ನಿಜದಲ್ಲಿ ಜೈಲಿನಲ್ಲಿ ತನ್ನನ್ನು ಕಾಣಲು ಬರುತ್ತಿದ್ದ ವಿ.ವಿ.ಎಸ್‌. ಅಯ್ಯರ್‌ ಜೊತೆಗೆ ಅಂತಹದ್ದೊಂದು ಯೋಜನೆಯನ್ನು ಸಾವರ್ಕರ್‌ ಸಿದ್ದಪಡಿಸುತ್ತಿದ್ದರು. ಭೇಟಿಯ ಸಮಯದಲ್ಲಿ ಅವರಿಬ್ಬರು ಪರಸ್ಪರ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಕಾವಲು ನಿಲ್ಲುತ್ತಿದ್ದ ಪೊಲೀಸನಿಗೆ ಹಿಂದಿ ಬಾರದಿದ್ದ ಕಾರಣ ಎಲ್ಲ ಸಂಗತಿಗಳನ್ನು ಚರ್ಚಿಸಲು ಅವರಿಗೆ ಸುಲಭವಾಗಿತ್ತು. ಅವರ ಮಾತುಕತೆ ದೀರ್ಘವಾದರೆ ಮಾತ್ರ ಪೊಲೀಸ್‌ ನಡುವೆ ಬರುತ್ತಿದ್ದ.</p>



<p>೧೯೧೦ ಜೂನ್‌ ೨೯ರಂದು ಅಂದಿನ ಬ್ರಿಟನ್ನಿನ ಗೃಹ ಕಾರ್ಯದರ್ಶಿಯಾಗಿದ್ದ ವಿನ್ಸಂಟ್‌ ಚರ್ಚಿಲ್ ಸಾವರ್ಕರನ್ನು ವಿಚಾರಣೆಗಾಗಿ ಪೊಲೀಸ್‌ ಕಸ್ಟಡಿಯಲ್ಲಿ ಭಾರತಕ್ಕೆ ಕಳುಹಿಸಿಕೊಡಲು ಆದೇಶಿಸಿದ.</p>



<p>ಅದರಂತೆ ೧ ಜುಲೈ ೧೯೧೦ರಂದು ಸಾವರ್ಕರನ್ನು ಹೊತ್ತ ಎಸ್‌.ಎಸ್. ಮೋರಿಯಾ ಎಂಬ ಹಡಗು ಲಂಡನ್ನಿನಿಂದ ಬಾಂಬೆಗೆ ಹೊರಟಿತು. ಲಂಡನ್‌ ಮೆಟ್ರೋಪಾಲಿಟನ್‌ ಇನ್ಸ್‌ಪೆಕ್ಟರ್‌ ಆಗಿದ್ದ ಎಡ್ವರ್ಡ್‌ ಜಾನ್‌ ಪಾರ್ಕರ್‌, ಬಾಂಬೆ ಡೆಪ್ಯೂಟಿ ಸೂಪರಿಂಟೆಂಡೆಂಟ್‌ ಸಿ.ಜೆ. ಪೊವಾರ್‌, ಭಾರತದಿಂದ ಪೊವಾರ್‌ ಜೊತೆಗೆ ಬಂದಿದ್ದ ಮುಹಮ್ಮದ್‌ ಸಿದ್ದೀಕ್‌ ಎಂಬ ಪುಣೆಯ ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌, ಅಮರ್‌ ಸಿಂಗ್‌ ಸಖಾರಾಂ ಸಿಂಗ್‌ ಎಂಬ ನಾಸಿಕಿನ ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌ ಇವರುಗಳಿಗೆ ಸಾವರ್ಕರನ್ನು ಭಾರತಕ್ಕೆ ತಲುಪಿಸುವ ಜವಾಬ್ದಾರಿ ವಹಿಸಲಾಗಿತ್ತು.</p>



<p>ಈ ನಡುವೆ ಸಾವರ್ಕರ್ ಸಹವರ್ತಿ ಬ್ರಾಹ್ಮಣ ಎಂಬ ನೆಲೆಯಲ್ಲಿ ವಿ.ವಿ.ಎಸ್.‌ ಅಯ್ಯರ್‌ ಕೂಡ ಪೊಲೀಸ್‌ ನಿಗಾದಲ್ಲಿದ್ದ. ವಿ.ವಿ.ಎಸ್.‌ ಅಯ್ಯರ್‌ ಸಾವರ್ಕರನ್ನು ರಕ್ಷಿಸಲು ಗೂಢಾಲೋಚನೆ ಮಾಡುತ್ತಿದ್ದಾನೆ ಎಂಬ ಗಟ್ಟಿ ಗುಮಾನಿಯೂ ಪೊಲೀಸರಿಗೆ ಇತ್ತು. ಆದ್ದರಿಂದಲೇ ಅಯ್ಯರ್‌ ಮೇಲಿನ ಕಣ್ಗಾವಲು ತೀವ್ರವಾಗಿತ್ತು. ಅದರಲ್ಲೂ ಇಂಗ್ಲೆಂಡಿಗೆ ಯಾವ ರೀತಿಯ ಪ್ರಾಬಲ್ಯವೂ ಇಲ್ಲದ ಫ್ರಾನ್ಸಿನಲ್ಲಿ ಶ್ಯಾಂಜಿ ಕೃಷ್ಣವರ್ಮ, ಮೇಡಂ ಬಿಕ್ಕಾಜಿ ಕಾಮ, ಸರ್ದಾರ್‌ ಸಿಂಗ್‌ ರಾಣ, ಚಟ್ಟೋ ಎಂಬ ವೀರೇಂದ್ರನಾಥ್‌ ಚಟ್ಟೋಪಾಧ್ಯಾಯ ಮೊದಲಾದವರು ಸಕ್ರಿಯರಾಗಿದ್ದ ಕಾರಣ ಅವರ ಜೊತೆಗೆ ಸೇರಿಕೊಂಡು ಅಯ್ಯರ್‌ ಗೂಢಾಲೋಚನೆ ಮಾಡುತ್ತಿದ್ದಾನೆ ಎಂಬ ಗುಮಾನಿಯೂ ಪೊಲೀಸರಿಗೆ ಇತ್ತು. ಆದ್ದರಿಂದ ಅಯ್ಯರ್‌ ಲಂಡನ್‌ ಬಿಟ್ಟು ಫ್ರಾನ್ಸಿಗೆ ಪಲಾಯನ ಮಾಡುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಲಂಡನ್‌ ಫ್ರಾನ್ಸ್‌ ಸಂಚಾರಿ ಪಥಗಳು ಪೊಲೀಸರ ತೀವ್ರ ನಿಗಾದಲ್ಲಿದ್ದವು. ಇದೆಲ್ಲವನ್ನು ನಿರೀಕ್ಷಿಸಿದ್ದ ಅಯ್ಯರ್‌ ಯಾರು ಕೂಡ ಅಷ್ಟಾಗಿ ಗಮನಿಸಿದ್ದ ಹಾಲೆಂಡಿಗೆ ಹೊರಡುವ ಹಡಗನ್ನು ಆಯ್ದುಕೊಂಡು ಲಂಡನ್‌ ತೊರೆಯುತ್ತಾನೆ. ಸಾಮಾನ್ಯವಾಗಿ ಸನ್ಯಾಸಿಗಳ ಹಾಗೆ ಉದ್ದ ಗಡ್ಡ ಬೆಳೆಸಿಕೊಂಡಿದ್ದ ಅಯ್ಯರ್‌ಗೆ ಸಿಕ್‌ ವೇಷ ಹಾಕಿಕೊಳ್ಳುವುದು ಕಷ್ಟದ ಕೆಲಸವಾಗಿರಲಿಲ್ಲ.</p>



<p>ಹಡಗಿನ ಡೆಕ್ಕಿನಲ್ಲಿ ಅಯ್ಯರ್‌ನನ್ನು ಕಂಡು ಸಂಶಯಗೊಂಡ ಪೊಲೀಸ್‌ ಒಬ್ಬ ವಿ.ವಿ.ಎಸ್.‌ ಎಂಬ ಹೆಸರಿನಲ್ಲಿ ಟೆಲಿಗ್ರಾಮನ್ನು ತಂದು ಕೊಡುತ್ತಾನೆಂದೂ ಅಯ್ಯರ್‌ ಅದನ್ನು ನೋಡಿ ʼಇದು ತನಗಲ್ಲ, ಯಾವುದೋ ಅಯ್ಯರ್‌ ಹೆಸರಿನಲ್ಲಿದೆಯೆಂದುʼ ಹೇಳಿ ಮರಳಿಸದನೆಂದೂ ಕಥೆಯೊಂದು ʼಹಿಂದುತ್ವ ಕಥಾಮಾಲಿಕೆʼಯ ಭಾಗವಾಗಿ ಪ್ರಚಲಿತದಲ್ಲಿದೆ. ಟೆಲಿಗ್ರಾಂ ಸ್ವೀಕರಿಸಿದ್ದರೆ ಅದು ಅಯ್ಯರ್‌ ಎಂದು ಗುರುತಿಸಿ ಅರೆಸ್ಟ್‌ ಮಾಡುವವನಿದ್ದ. ಆದರೆ, ಚೂರೇ ಚೂರು ಭಾವ ವ್ಯತ್ಯಾಸವಿಲ್ಲದೆ ಆ ಟೆಲಿಗ್ರಾಮನ್ನು ಮರಳಿಸುವ ಮೂಲಕ ಆ ಖೆಡ್ಡಾದಿಂದ ಪಾರಾಗುತ್ತಾನೆ. ಅದರ ಜೊತೆಗೆ ತನ್ನ ಪೆಟ್ಟಿಗೆಯ ಮೇಲೆ ವಿ.ವಿ.ಎಸ್.‌ ಎಂಬ ಇಂಗ್ಲೀಷ್‌ ಅಕ್ಷರಗಳನ್ನು ಕಂಡ ಪೊಲೀಸ್‌ ಸಂಶಯದಿಂದ ಮತ್ತೆ ನೋಡುತ್ತಾನೆ. ಆಗ ಅಯ್ಯರ್‌ ತನ್ನ ಹೆಸರು ‌ʼವೀರ್ ವಿಕ್ರಂ ಸಿಂಗ್‌ʼ ಎಂದು ಹೇಳುತ್ತಾನೆ. ಅದರೊಂದಿಗೆ ವಿ.ವಿ.ಎಸ್‌. ಅಕ್ಷರಗಳ ಪೂರ್ಣರೂಪ ತಿಳಿದ ಪೊಲೀಸ್‌ ಸಂತೃಪ್ತಿಯಿಂದ ಮರಳಿದ ಎಂಬುದು ಕಥೆ.</p>



<p>ಏನೇ ಆಗಿದ್ದರೂ ಅಯ್ಯರ್‌ ಹಾಲೆಂಡ್‌ ತಲುಪುತ್ತಾನೆ. ಅಲ್ಲಿಂದ ರಸ್ತೆ ಮಾರ್ಗದ ಮೂಲಕ ಪ್ಯಾರಿಸ್‌ಗೆ. ಅಲ್ಲಿದ್ದ ಆಗಲೇ ಹೇಳಿದ ಇತರರೊಂದಿಗೆ ಚರ್ಚಿಸುತ್ತಾನೆ. ಲಂಡನ್ನಿನಿಂದ ಬಾಂಬೆಗೆ ಹೋಗುವ ಮಾರ್ಗ ಮಧ್ಯೆ ಎಸ್.‌ಎಸ್.‌ ಮೋರಿಯಾ ಫ್ರಾನ್ಸಿನ ಮಾರ್ಸೆಲ್ಸ್‌ನಲ್ಲಿ ಲಂಗರು ಹಾಕುತ್ತದೆ. ಆಗ ಸಾವರ್ಕರನ್ನು ಹಡಗಿನಿಂದ ರಕ್ಷಿಸುವುದು ಅವರ ಯೋಜನೆಯಾಗಿತ್ತು. ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ನಡುವೆ ಖೈದಿಗಳನ್ನು ಹಸ್ತಾಂತರಿಸುವ ಒಪ್ಪಂದ ಇರಲಿಲ್ಲವಾದ್ದರಿಂದ ಸಾವರ್ಕರ್‌ಗೆ ಫ್ರಾನ್ಸ್‌ನಲ್ಲಿ ರಾಜಕೀಯ ರಕ್ಷಣೆ ದೊರೆಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇಂತಹದ್ದೊಂದು ಯೋಜನೆ ರೂಪಿಸಲಾಗಿತ್ತು.</p>



<p>ಜುಲೈ ೭ರಂದು ಹಡಗು ಫ್ರಾನ್ಸಿನ ಮಾರ್ಸೆಸ್ಸಿನಲ್ಲಿ ಲಂಗರು ಹಾಕಿತು. ಅಂದು ವಿಶೇಷವಾಗಿ ಏನೂ ನಡೆಯಲಿಲ್ಲ. ಆದರೆ ಮರುದಿನ ಮುಂಜಾನೆ ೬:೧೫ಕ್ಕೆ ಶೌಚಾಲಯಕ್ಕೆ ಹೋಗಬೇಕೆಂದು ಸಾವರ್ಕರ್‌ ಹೇಳುತ್ತಾರೆ. ಸಾಮಾನ್ಯವಾಗಿ ಬೆಳಿಗ್ಗೆ ಎಂಟು ಗಂಟೆಗೆ ಸಾವರ್ಕರನ್ನು ಶೌಚಾಲಯಕ್ಕೆ ಕೊಂಡು ಹೋಗುತ್ತಿದ್ದರು. ಪೊವಾರ್‌ ಇನ್ನೂ ನಿದ್ದೆ ಬಿಟ್ಟಿರದಿದ್ದ ಕಾರಣ, ಅಂದು ಪಾರ್ಕರ್‌ ಸಾವರ್ಕರನ್ನು ಕರೆದುಕೊಂಡು ಹೋಗುತ್ತಾನೆ. ಇಬ್ಬರು ಹೆಡ್‌ ಕಾನ್ಸ್‌ಟೇಬಲ್‌ಗಳು ಬಾಗಿಲ ಬಳಿ ಕಾವಲಿಗೆ ನಿಲ್ಲುತ್ತಾರೆ. ಅಲ್ಲಿ ನಿಂತುಕೊಂಡು ಅವರು ತಮ್ಮ ಸಮವಸ್ತ್ರ ಧರಿಸುವ ಕೆಲಸದಲ್ಲಿ ನಿರತರಾಗುತ್ತಾರೆ. ಪಾರ್ಕರ್‌ ತೆರೆದಿದ್ದ ಹಡಗಿನ ಕಿಟಕಿಯನ್ನು (Porthole) ಗಮನಿಸಲೂ ಇಲ್ಲ. ಸಾಮಾನ್ಯವಾಗಿ ಸಾವರ್ಕರ್‌ ಶೌಚಾಲಯ ಬಳಸುವಾಗ ಆ ಕಿಟಕಿಯನ್ನು ಸುಲಭದಲ್ಲಿ ತೆರೆಯಲಾಗದಂತೆ ಮುಚ್ಚಲಾಗುತ್ತದೆ.</p>



<p>ಶೌಚಾಲಯದ ಒಳಗಿನಿಂದ ಚಿಲಕ ಹಾಕಿಕೊಂಡ ಸಾವರ್ಕರ್‌ ಹನ್ನೆರಡು ಇಂಚು ವ್ಯಾಸದ ಕಿಟಿಕಿಯ ಮೂಲಕ ಸಮುದ್ರಕ್ಕೆ ಹಾರುತ್ತಾರೆ. ಬಂದರಿನ ದಡ ತಲುಪಲು ಸುಮಾರು ಹತ್ತು ಹನ್ನೆರಡು ಅಡಿ ದೂರ ಈಜಬೇಕಿತ್ತು.</p>



<p>ಶೌಚಾಲಯದ ಮೇಲೆ ಮತ್ತು ಕೆಳಗೆ ಕಿಂಡಿಗಳಿದ್ದವು. ಖೈದಿಯನ್ನು ಗಮನಿಸುವುದರ ಭಾಗವಾಗಿ ಹೆಡ್‌ ಕಾನ್ಸ್‌ಟೇಬಲ್‌ ಅಮರ್‌ ಸಿಂಗ್‌ ಕೆಳಗಿನ ಕಿಂಡಿಯ ಮೂಲಕ ಇಣುಕಿ ನೋಡುತ್ತಾನೆ. ಅಲ್ಲಿ ಸಾವರ್ಕರ್‌ ಬಳಸುತ್ತಿದ್ದ ಚಪ್ಪಲಿ ಮಾತ್ರ ಕಾಣಿಸುತ್ತದೆ. ಪುನಃ ನೋಡಿದಾಗ ಕಿಟಕಿಯ ಮೂಲಕ ತೂರಿಕೊಳ್ಳುತ್ತಿರುವ ಸಾವರ್ಕರ್ ದೇಹದ ಅರ್ಧಭಾಗ ಕಾಣಿಸುತ್ತದೆ. ಅಮರ್‌ ಸಿಂಗ್‌ ಕಿರುಚಿಕೊಂಡು ಬಾಗಿಲು ತೆರೆಯಲು ಪ್ರಯತ್ನಿಸುತ್ತಾನೆ. ಆದರೆ ಒಳಗಿನಿಂದ ಚಿಲಕ ಹಾಕಿದ್ದರಿಂದ ಅದು ಸಾಧ್ಯವಾಗಲಿಲ್ಲ. ಬಾಗಿಲಿನ ಗಾಜುಗಳನ್ನು ಒಡೆದು ಒಳಹೋಗುವಷ್ಟರಲ್ಲಿ ಸಾವರ್ಕರ್‌ ಕಡಲಿಗೆ ಧುಮುಕಿ ಆಗಿರುತ್ತದೆ.</p>



<p>ಸಮುದ್ರದಿಂದ ದಡ ತಲುಪಿದ ಸಾವರ್ಕರ್‌ ಓಡಲು ಶುರು ಮಾಡುತ್ತಾರೆ. ಹಡಗಿನಿಂದ ಇಳಿದು ಬಂದ ಹೆಡ್‌ ಕಾನ್ಸ್‌ಟೇಬಲ್‌ಗಳು ಕಿರುಚುತ್ತಾ ಬೆನ್ನಟ್ಟಲು ಶುರು ಮಾಡುತ್ತಾರೆ. ಇನ್ನೂರು ಗಜ ಓಡಿದ ಸಾವರ್ಕರ್‌ ಒಂದು ಬಾಡಿಗೆ ವಾಹನ ಹಿಡಿಯಲು ಪ್ರಯತ್ನಿಸುತ್ತಾರೆ. ಆದರೆ, ಕೂಲಿ ಕೊಡಲು ಕೈಯಲ್ಲಿ ಹಣ ಇರಲಿಲ್ಲ.</p>



<p>ಸಾವರ್ಕರನ್ನು ರಕ್ಷಿಸಲು ಯೋಜನೆ ಸಿದ್ಧಪಡಿಸಿದ್ದ ವಿ.ವಿ.ಎಸ್.‌ ಅಯ್ಯರ್‌ಗೆ ವೀರೇಂದ್ರನಾಥ್‌ ಚಟ್ಟೋಪಾಧ್ಯಾಯ ಮತ್ತು ಮೇಡಂ ಕಾಮಾರನ್ನು ಕರೆದುಕೊಂಡು ವಾಹನದಲ್ಲಿ ಅಲ್ಲಿಗೆ ಬರುವುದು ತಡವಾಗುತ್ತದೆ. ರೈಲ್ವೇ ಕ್ರಾಸಿಂಗಿನಲ್ಲಿ ಸಿಲುಕಿದ್ದರಿಂದ ಅವರು ತಲುಪುವುದು ತಡವಾಯಿತು ಎಂದು ಹೇಳಲಾಗುತ್ತದೆ. ಹಾಗಲ್ಲ, ದಾರಿ ಮಧ್ಯೆ ಚಾ ಕುಡಿಯಲು ನಿಲ್ಲಿಸಿದ್ದರಿಂದಲೇ ಅವರು ತಡವಾಗಿ ತಲುಪಿದರು ಎಂದೂ ವಾದವಿದೆ. ಏನೇ ಆದರೂ ತನ್ನ ಸಹಚರರು ಕಾಣಿಸದಿದ್ದ ಕಾರಣ ಸಾವರ್ಕರ್‌ ಅಲ್ಲಿದ್ದ ಬಂದರು ಪೊಲೀಸಿನ ಎದುರು ಓಡಿ ಬಂದು ನಿಲ್ಲುತ್ತಾರೆ. ಬ್ರಿಗೇಡಿಯರ್‌ ಪೆಸ್ಕ್ಯೂ ಎಂಬ ಆ ಅಧಿಕಾರಿಯ ಮುಂದೆ ನಿಂತು ತನ್ನನ್ನು ಅರೆಸ್ಟ್‌ ಮಾಡಿ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರು ಪಡಿಸುವಂತೆ ಸಾವರ್ಕರ್‌ ಕೇಳಿಕೊಳ್ಳುತ್ತಾರೆ. ಫ್ರಾನ್ಸ್‌ ಮತ್ತು ಇಂಗ್ಲೆಂಡ್‌ ನಡುವೆ ಖೈದಿಗಳನ್ನು ಹಸ್ತಾಂತರಿಸುವ ಒಪ್ಪಂದ ಇಲ್ಲದಿದ್ದ ಕಾರಣ ಫ್ರಾನ್ಸಿನ ಕಸ್ಟಡಿಯಲ್ಲಿ ತಾನಿದ್ದರೆ ಜಾಕ್ಸನ್‌ ಕೊಲೆ ಪ್ರಕರಣದಿಂದ ಪಾರಾಗಬಹುದು ಎಂಬುದು ಸಾವರ್ಕರ್‌ ಯೋಚನೆಯಾಗಿತ್ತು. ಆದರೆ ಪೆಸ್ಕ್ಯೂಗೆ ಇಂಗ್ಲೀಷ್ ಭಾಷೆಯ ಒಂದಕ್ಷರವೂ ಅರ್ಥವಾಗದ ಕಾರಣ ಸಾವರ್ಕರ್‌ ಹೇಳುತ್ತಿರುವುದು ಅರ್ಥವೇ ಆಗಲಿಲ್ಲ. ಹಿಂದೆಯೇ ಓಡಿ ಬಂದ ಹೆಡ್‌ಕಾನ್ಸ್‌ಟೇಬಲ್‌ಗಳ ಕೈಗೆ ಪೆಸ್ಕ್ಯೂ ಸಾವರ್ಕರನ್ನು ಒಪ್ಪಿಸುತ್ತಾನೆ. ಹೀಗೆ, ಬಚಾವಾಗುವ ಪ್ರಯತ್ನದಲ್ಲಿ ಸೋತು ಸಾವರ್ಕರ್‌ ಪುನಹ ಎಸ್.‌ಎಸ್.‌ ಮೋರಿಯಾಗೆ ಮರಳುತ್ತಾರೆ.</p>
]]></content:encoded>
					
		
		
			</item>
		<item>
		<title>ವಿಚಾರಣಾ ಸಾಹಿತ್ಯದ ಆರಂಭ ಮತ್ತು ದುರಭಿಮಾನ ಕೊ*ಲೆಗಳ ಮುಂದುವರಿಕೆ ; ಹಿಂದುತ್ವ ರಾಜಕಾರಣದ ಕಥೆ &#8211; 13</title>
		<link>https://peepalmedia.com/the-beginnings-of-investigative-literature-and-the-continuation-of-honor-killings/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 09 Apr 2024 14:58:21 +0000</pubDate>
				<category><![CDATA[ಅಂಕಣ]]></category>
		<category><![CDATA[ಜನ-ಗಣ-ಮನ]]></category>
		<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[hindutva rajakaranada kathe]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Sunaif]]></category>
		<guid isPermaLink="false">https://peepalmedia.com/?p=38145</guid>

					<description><![CDATA[ಗಾಂಧಿ ಅಲ್ಲಿಗೆ ನಿಲ್ಲಿಸುವುದಿಲ್ಲ. ʼಇಂತಹ ಕೊಲೆಗಳು ಭಾರತಕ್ಕೆ ಒಳ್ಳೆಯದು ಮಾಡುತ್ತದೆ ಎಂದು ನಂಬುವ ಮತ್ತು ವಾದಿಸುವ ಮನುಷ್ಯರು ನಿಜದಲ್ಲಿ ಏನೊಂದೂ ತಿಳಿಯದವರಾಗಿರುತ್ತಾರೆ. ಇಂತಹ ಕೊಲೆಗಳ ಕಾರಣದಿಂದ ಬ್ರಿಟಿಷರು ಭಾರತ ಬಿಟ್ಟು ಹೋದರೆಂದೇ ಇಟ್ಟುಕೊಳ್ಳಿ. ನಂತರ ಯಾರು ಅವರ ಸ್ಥಾನದಲ್ಲಿ ಕೂತು ಅಧಿಕಾರ ನಡೆಸುತ್ತಾರೆ? ಅದಕ್ಕೆ ಸಿಗುವ ಒಂದೇ ಉತ್ತರ ಈ ಕೊಲೆಗಾರರು ಎಂದಾಗಿರುತ್ತದೆ. ಅಂತಹದೊಂದು ಆಡಳಿತದಲ್ಲಿ ಭಾರತ ಪೂರ್ತಿಯಾಗಿ ನಾಶ ಹೊಂದುತ್ತದೆ. ಆ ಯುವಕರೊಳಗೆ ಇಂತಹ ಕೊಲೆಗಳಿಗೆ ಪ್ರೇರಣೆ ತುಂಬಿದ ಮನುಷ್ಯರು ದೇವರ ನ್ಯಾಯಾಲಯದಲ್ಲಿ ನಿಲ್ಲಬೇಕಾಗುತ್ತದೆ. ಅಷ್ಟೇ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಗಾಂಧಿ ಅಲ್ಲಿಗೆ ನಿಲ್ಲಿಸುವುದಿಲ್ಲ. ʼಇಂತಹ ಕೊಲೆಗಳು ಭಾರತಕ್ಕೆ ಒಳ್ಳೆಯದು ಮಾಡುತ್ತದೆ ಎಂದು ನಂಬುವ ಮತ್ತು ವಾದಿಸುವ ಮನುಷ್ಯರು ನಿಜದಲ್ಲಿ ಏನೊಂದೂ ತಿಳಿಯದವರಾಗಿರುತ್ತಾರೆ. ಇಂತಹ ಕೊಲೆಗಳ ಕಾರಣದಿಂದ ಬ್ರಿಟಿಷರು ಭಾರತ ಬಿಟ್ಟು ಹೋದರೆಂದೇ ಇಟ್ಟುಕೊಳ್ಳಿ. ನಂತರ ಯಾರು ಅವರ ಸ್ಥಾನದಲ್ಲಿ ಕೂತು ಅಧಿಕಾರ ನಡೆಸುತ್ತಾರೆ? ಅದಕ್ಕೆ ಸಿಗುವ ಒಂದೇ ಉತ್ತರ ಈ ಕೊಲೆಗಾರರು ಎಂದಾಗಿರುತ್ತದೆ. ಅಂತಹದೊಂದು ಆಡಳಿತದಲ್ಲಿ ಭಾರತ ಪೂರ್ತಿಯಾಗಿ ನಾಶ ಹೊಂದುತ್ತದೆ. ಆ ಯುವಕರೊಳಗೆ ಇಂತಹ ಕೊಲೆಗಳಿಗೆ ಪ್ರೇರಣೆ ತುಂಬಿದ ಮನುಷ್ಯರು ದೇವರ ನ್ಯಾಯಾಲಯದಲ್ಲಿ ನಿಲ್ಲಬೇಕಾಗುತ್ತದೆ. ಅಷ್ಟೇ ಅಲ್ಲ, ಅವರು ಲೋಕದ ಕಣ್ಣುಗಳ ಮುಂದೆ ತಪ್ಪಿತಸ್ಥರೇ ಆಗಿರುತ್ತಾರೆ.ʼ</p>
</blockquote>



<p>೧೯೦೯ ಜುಲೈ ೧೦ರಂದು ಮದನ್‌ ಲಾಲ್‌ ಡಿಂಗ್ರನ ವಿಚಾರಣೆ ಶುರುವಾಗುತ್ತದೆ. ಆರಂಭದಲ್ಲಿಯೇ ಆತ ಬ್ರಿಟಿಷ್‌ ಕೋರ್ಟ್‌ ತನಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಕೇಳಿಕೊಳ್ಳುತ್ತಾನೆ. ಹಾಗೆ ಕೇಳಿಕೊಳ್ಳಲು ಕಾರಣ, ತನ್ನ ಗಲ್ಲುಶಿಕ್ಷೆ ತನ್ನ ನಾಡಿನ ಸ್ವಾತಂತ್ರ್ಯ ಸಮರವನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ಯುತ್ತದೆ ಎಂಬುದಾಗಿತ್ತು. ʼಜರ್ಮಿನಿಗೆ ಇಂಗ್ಲೆಂಡನ್ನು ಆಕ್ರಮಿಸಲು ಹೇಗೆ ಅವಕಾಶವಿಲ್ಲವೋ, ಹಾಗೆಯೇ ಇಂಗ್ಲೆಂಡಿಗೆ ಇಂಡಿಯಾವನ್ನು ಆಕ್ರಮಿಸಲು ಅವಕಾಶವಿಲ್ಲ. ಆದ್ದರಿಂದಲೇ ನಮ್ಮ ಪುಣ್ಯಭೂಮಿಯನ್ನು ಅಶುದ್ಧಗೊಳಿಸುತ್ತಿರುವ ಆಂಗ್ಲರನ್ನು ಕೊಲ್ಲುವುದು ನಮ್ಮ ಜಾಗದಲ್ಲಿ ನಿಂತು ನೋಡುವಾಗ ನ್ಯಾಯೀಕರಿಸಬಹುದಾದ ಸಂಗತಿಯೇ ಆಗಿದೆ. ಆಂಗ್ಲರ ಕಪಟತನ, ನಾಟಕ, ಪರಿಹಾಸ್ಯ ಕಂಡು ನನಗೆ ಆಶ್ಚರ್ಯವಾಗುತ್ತಿದೆ.ʼ<sup></sup></p>



<p>ಡಿಂಗ್ರನ ಈ ಹೇಳಿಕೆ ಪೂರ್ತಿಯಾಗಿ ಸಾಮ್ರಾಜ್ಯವಾದದ ವಿರೋಧಿಯಾಗಿದ್ದರೂ, ಆ ವಿರೋಧದ ಅಡಿಪಾಯ ಸುಮಾರಾಗಿ ಜನಾಂಗೀಯತೆಯಲ್ಲಿ ಮುಳುಗಿಕೊಂಡಿದೆ. ಜರ್ಮನ್‌ ಜನಾಂಗ ಆಂಗ್ಲ ಜನಾಂಗವನ್ನು ಸೋಲಿಸುವುದರಲ್ಲಿರುವ ಅನೀತಿ ಭಾರತೀಯ ಹಿಂದೂಗಳನ್ನು ಆಂಗ್ಲರು ಸೋಲಿಸುವುದರಲ್ಲಿಯೂ ಡಿಂಗ್ರ ಕಾಣುತ್ತಾನೆ. ಸಾಮ್ರಾಜ್ಯವಾದದ ಶೋಷಣೆಯಾಗಲೀ, ಆಕ್ರಮಣಕಾರಿ ನೀತಿಗಳಾಗಲೀ ಯಾವುದನ್ನೂ ಡಿಂಗ್ರ ಬೊಟ್ಟು ಮಾಡುವುದಿಲ್ಲ. ಪುಣ್ಯಭೂಮಿಯನ್ನು ಮ್ಲೇಚ್ಛಗೊಳಿಸುತ್ತಿರುವುದು ಮಾತ್ರ ಅವನ ಕಾರಣ. ಈ ಪುಣ್ಯಭೂಮಿ ಎಂಬ ಸಂಗತಿ ನಂತರದ ಕಾಲದಲ್ಲಿ ಹಿಂದುತ್ವ ರಾಜಕಾರಣದ ಪ್ರಧಾನ ಅಂಶವಾಗಿ ಬದಲಾಗುತ್ತದೆ.</p>



<p>ಡಿಂಗ್ರನ ಈ ಹೇಳಿಕೆ ಆತ ಅರೆಸ್ಟ್‌ ಆದಾಗ ಪೊಲೀಸರಿಗೆ ಬರಹದ ಮೂಲಕ ನೀಡಿದ್ದಾಗಿತ್ತು. ಆದರೆ, ಪೊಲೀಸರು ಇದನ್ನು ಹೊರಗೆ ಬಿಡುಗಡೆ ಮಾಡಲಿಲ್ಲ. ಡಿಂಗ್ರನ ಹೇಳಿಕೆಯಿಂದ ಆಕರ್ಷಿತರಾಗಿ ಭಾರತದಲ್ಲಿ ಹೊಸ ಹೊಸ ಡಿಂಗ್ರಗಳು ಹುಟ್ಟುವುದು ಬ್ರಿಟಿಷರಿಗೆ ಬೇಕಿರಲಿಲ್ಲ. ಹೇಳಿಕೆಯಲ್ಲಿ ಡಿಂಗ್ರ ಮುಂದುವರಿದು ಹೇಳುತ್ತಾನೆ,</p>



<p>ʼನಾನು ಒಪ್ಪಿಕೊಳ್ಳುತ್ತಿದ್ದೇನೆ. ಕಳೆದ ದಿನ ನಾನು ಹರಿಸಿದ ಆಂಗ್ಲ ರಕ್ತ ದೇಶಪ್ರೇಮಿಗಳಾದ ಭಾರತದ ಯುವಕರನ್ನು ಮನುಷ್ಯತ್ವವಿಲ್ಲದೆ ಗಲ್ಲಿಗೇರಿಸಿದ್ದಕ್ಕೂ ಗಡಿಪಾರು ಮಾಡಿದ್ದಕ್ಕೂ ವಿನೀತ ಪ್ರತೀಕಾರ… ಒಂದು ದೇಶ ವಿದೇಶಿ ಬಯನೆಟ್ಟುಗಳ ಸಹಾಯದಿಂದ ಬಂಧಿಸಲ್ಪಟ್ಟಿದ್ದರೆ, ಆ ದೇಶ ಎಂದೆಂದಿಗೂ ಯುದ್ಧ ಪೀಡಿತವಾಗಿರುತ್ತದೆ ಎಂಬುದು ನನ್ನ ನಂಬಿಕೆ. ಆಯುಧ ರಹಿತರಾದ ಜನರಿಗೆ ಯುದ್ಧ ಸಾಧ್ಯವಿಲ್ಲದ ಕಾರಣ, ನನಗೆ ಆಯುಧ ನಿಶೇಧಿಸಲ್ಪಟ್ಟಿರುವ ಕಾರಣ, ನಾನು ಹೀಗೆ ಅನಿರೀಕ್ಷಿತ ದಾಳಿ ಮಾಡಿದೆ. ನಾನು ನನ್ನ ಪಿಸ್ತೂಲ್‌ ಎತ್ತಿ ಗುಂಡಿನ ದಾಳಿ ಮಾಡಿದೆ.ʼ ಡಿಂಗ್ರ ಮುಂದುವರಿಸುತ್ತಾನೆ, ʼನಾನೊಬ್ಬ ಹಿಂದೂ ಎಂಬ ನೆಲೆಯಲ್ಲಿ ನನ್ನ ದೇಶದೊಂದಿಗೆ ಮಾಡುವ ಅನ್ಯಾಯವನ್ನು, ದೇವರ ಮೇಲಿನ ಅನ್ಯಾಯವಾಗಿಯೇ ಕಾಣುತ್ತೇನೆ.ʼ<sup> </sup>ಅದು ಕೊನೆಗೊಳ್ಳುವುದು ಹೀಗೆ, ‌ʼಇಂಗ್ಲೆಂಡ್ ಮತ್ತು ಇಂಡಿಯಾ ನಡುವಿನ ಈ ಸ್ವಾತಂತ್ರ್ಯ ಯುದ್ಧ ಆಂಗ್ಲ ಜನಾಂಗ ಮತ್ತು ಹಿಂದೂ ಜನಾಂಗ ಇರುವವರೆಗೆ ಮುಂದುವರಿಯಲಿದೆ.ʼ<sup></sup></p>



<p>ಡಿಂಗ್ರನ ಮನಸ್ಸಿನಲ್ಲಿ ಸಾವರ್ಕರ್‌ ತುಂಬಿಸಿದ್ದು ಆಧುನಿಕ ಕ್ರಾಂತಿಯ ಸಿದ್ಧಾಂತಗಳನ್ನಾಗಲೀ ಸ್ವಾತಂತ್ರ್ಯದ ಕುರಿತ ಉದಾತ್ತ ಚಿಂತನೆಗಳನ್ನಾಗಲೀ ಆಗಿರಲಿಲ್ಲವೆಂದು ಈ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಅದೊಂದು ಯುದ್ಧ ಸಂಕಲ್ಪ. ಹಿಂದೂಗಳು ಮತ್ತು ಆಂಗ್ಲರ ನಡುವಿನ ಯುದ್ಧದಲ್ಲಿ ಆಂಗ್ಲರು ಸೋತರೆ ಹಿಂದೂ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಡಿಂಗ್ರ ಪರೋಕ್ಷವಾಗಿ ಹೇಳುತ್ತಿದ್ದಾನೆ; ಯುದ್ಧ ಮಾಡಲು ಬೇಕಾದಷ್ಟು ಆಯುಧ ಸಿಗದಿದ್ದರೆ ಭಯೋತ್ಪಾದನೆ ಮುಂದುವರಿಯಲಿದೆಯೆಂದೂ.</p>



<p>ಡಿಂಗ್ರನ ಹೆಸರಿನಲ್ಲಿ ಬಂದ ಈ ಹೇಳಿಕೆಯನ್ನು ಸ್ವತಹ ಸಾವರ್ಕರ್‌ ಬರೆದಿದ್ದರೆಂದು ಸುಮಾರಾಗಿ ಸ್ಪಷ್ಟವಾಗುತ್ತದೆ. ತಿಲಕ್‌ ಎತ್ತಿ ಹಿಡಿದಿದ್ದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಂ ಸಾವರ್ಕರಲ್ಲಿ ಹೇಗೆ ಹಿಂದುತ್ವವಾಗಿ ಬದಲಾಯಿತು ಎಂದು ನಾವು ನೋಡಿದೆವು. ಡಿಂಗ್ರನ ಹೇಳಿಕೆಯನ್ನು ಹಾಗೆ ಅನುಮಾನಿಸಲು ಕಾರಣ ಆ ಆಶಯವನ್ನು ಹೊತ್ತುಕೊಂಡಿರುವುದರಿಂದಲೋ ಅಥವಾ ಸ್ಪೋಟಕ ಶೈಲಿಯನ್ನು ಹೊಂದಿರುವುದರಿಂದಲೋ ಅಲ್ಲ. ಸಾಂದರ್ಭಿಕ ಸಾಕ್ಷಿಗಳೇ ಕಾರಣ. ಆಂಗ್ಲರು ಮುಚ್ಚಿಟ್ಟದ್ದ ಡಿಂಗ್ರನ ಹೇಳಿಕೆ, ಡಿಂಗ್ರನನ್ನು ಗಲ್ಲಿಗೇರಿಸುವ ಮೊದಲೇ ಸಾವರ್ಕರ್‌ ಇಂಗ್ಲೀಷ್‌ ಪತ್ರಿಕೆಗಳಿಗೆ ಕಳುಹಿಸಿಕೊಟ್ಟಿದ್ದರು. ಇಂಗ್ಲೀಷ್‌ ಪತ್ರಿಕೆಗಳು ಅದನ್ನು ಪ್ರಕಟಿಸದಿದ್ದಾಗ ತನ್ನ ಗೆಳೆಯನಾಗಿದ್ದ ಡೇವಿಡ್‌ ಗಾರ್ನೆಟ್‌ನ ಸಹಾಯದಿಂದ ಅಚ್ಚು ಹಾಕಿಸಿ <em>ಡೈಲಿ ನ್ಯೂಸ್</em>‌ ಎಂಬ ಪತ್ರಿಕೆಯ ಒಳಗೆ ಇಟ್ಟು ವಿತರಣೆ ಮಾಡುತ್ತಾರೆ. ಜೈಲಿನಲ್ಲಿರುವ ಡಿಂಗ್ರ ನೀಡಿದ ಹೇಳಿಕೆ ಹೇಗೆ ಸಾವರ್ಕರ್‌ ಕೈಗೆ ಸಿಕ್ಕಿತು ಎಂಬ ಪ್ರಶ್ನೆಗೆ ಸಮಂಜಸವಾದ ಒಂದೇ ಉತ್ತರ ಸಿಗುತ್ತದೆ. ಆ ವಿಚಾರಣಾ ಸಾಹಿತ್ಯವನ್ನು ಬರೆದ ವ್ಯಕ್ತಿ ಸ್ವತಹ ಸಾವರ್ಕರ್‌!</p>



<p>ಸಾವರ್ಕರ್‌ ಇಂಗ್ಲೆಂಡ್‌ ವಾಸ ಬುಡಮೇಲಾಗುತ್ತಿದ್ದ ಕಾಲವೂ ಅದಾಗಿತ್ತು. ಡಿಂಗ್ರನ ಕೃತ್ಯ ಸಾವರ್ಕರ್ ಜನಪ್ರಿಯತೆಯನ್ನು ಕುಗ್ಗಿಸಿತು. ಅದಕ್ಕಿಂತ ಮೊದಲೇ ಇಂಡಿಯಾ ಹೌಸಿನ ಜವಾಬ್ದಾರಿಯನ್ನು ಬಿಟ್ಟು ಬಂದಿದ್ದ ಸಾವರ್ಕರ್‌ ಬಿಪಿನ್‌ ಚಂದ್ರಪಾಲರ ಮನೆಯಲ್ಲಿ ವಾಸವಿದ್ದರು. ಅವರ ಮಗ ನಿರಂಜನ್‌ ಪಾಲ್‌ ಸಾವರ್ಕರ್‌ಗೆ ಗೆಳೆಯ ಮತ್ತು ಒಂದು ಹಂತದವರೆಗೆ ಅನುಯಾಯಿಯೂ ಆಗಿದ್ದ. ವಿಲ್ಲಿಯ ಕೊಲೆಯಲ್ಲಿ ಉಂಟಾದ ಜನಾಕ್ರೋಷ ಬಿಪಿನ್‌ ಚಂದ್ರಪಾಲರ ಮನೆಯನ್ನು ಒಡೆಯುತ್ತದೆ ಎಂಬ ಹಂತಕ್ಕೆ ತಲುಪಿದಾಗ ಸಾವರ್ಕರನ್ನು ಅಲ್ಲಿಂದ ಸಾಗ ಹಾಕಿದರು. ಲಂಡನ್ನಿನಲ್ಲಿ ವಾಸಿಸಲು ಸಾವರ್ಕರ್‌ಗೆ ಎಲ್ಲಿಯೂ ಜಾಗ ಸಿಗುವುದಿಲ್ಲ. ಗೆಳೆಯರೆಲ್ಲ ಕೈಬಿಟ್ಟರು. ಕೊನೆಗೆ ರೆಡ್‌ ಲಯನ್‌ ಪ್ಯಾಸೇಜಿನಲ್ಲಿದ್ದ ಒಬ್ಬ ಜರ್ಮನ್‌ ಮಹಿಳೆ ಕೆಲವು ದಿನಗಳ ಕಾಲ ವಾಸಿಸಲು ಜಾಗ ಕೊಟ್ಟರು.</p>



<p>ಈ ಸಂದರ್ಭದಲ್ಲಿ ʼಸಾಗರತಲಮಾಲಲʼ ಎಂಬ ಗೀತೆಯನ್ನು ಸಾವರ್ಕರ್‌ ರಚಿಸುವುದು. ಇಂಗ್ಲೆಂಡಿಗೆ ಬರುವ ಮೊದಲೇ ಸ್ವರಾಜ್ಯದ ಕುರಿತು ʼಜಯೋಸ್ತುತೋʼ ಎಂಬ ಹಾಡನ್ನು ಸಾವರ್ಕರ್‌ ಬರೆದಿದ್ದರು. ನಂತರದ ಕಾಲದಲ್ಲಿ ಸಾವರ್ಕರ್‌ ಜೊತೆಗೆ ಆಪ್ತ ಸಂಬಂಧ ಬೆಳೆಸಿದ್ದ ಬ್ರಾಹ್ಮಣ ಕುಟುಂಬದ ಸಂಗೀತಕಾರನೊಬ್ಬ ಆ ಹಾಡುಗಳಿಗೆ ಸಂಗೀತ ನೀಡಿದ. ತನ್ನ ಹಾಡುಗಾರ್ತಿ ಸಹೋದರಿಯರ ಮೂಲಕ ಆ ಹಾಡುಗಳನ್ನು ಹಾಡಿಸಿ ಪ್ರಕಟಿಸಿದ. ಆ ಸಂಗೀತಕಾರನ ಹೆಸರು ಹೃದಯನಾಥ್‌ ಮಂಗೇಶ್ಕರ್.‌ ಸಹೋದರಿಯರ ಹೆಸರು ಲತಾ, ಆಶಾ, ಉಶಾ, ಮೀನಾ. ಹೌದು, ಲತಾ ಮಂಗೇಶ್ಕರ್‌ ಮತ್ತು ಸಹೋದರಿಯರು.</p>



<p>ಡಿಂಗ್ರನ ವಿಚಾರಣೆ ಆರಂಭಿಸಿದ ಜುಲೈ ೧೦ರಂದು ಮಹಾತ್ಮಾ ಗಾಂಧಿ ಲಂಡನ್‌ ತಲುಪಿದ್ದರು. <em>ಇಂಡಿಯನ್‌ ಒಪೀನಿಯನ್‌ </em>ಪತ್ರಿಕೆಗೆ ಬರೆದಿದ್ದ ಲೇಖನದಲ್ಲಿ ಇಂತಹ ಕೃತ್ಯಗಳ ಕುರಿತ ತನ್ನ ನಿಲುವನ್ನು ವ್ಯಕ್ತಪಡಿಸಿದ್ದರು. ಡಿಂಗ್ರ ಹೇಡಿಯಂತೆ ವರ್ತಿಸಿದ, ಆತನ ಮೇಲೆ ಅನುಕಂಪವಲ್ಲದೆ ಬೇರೇನೂ ಸಾಧ್ಯವಿಲ್ಲವೆಂದು ಅತ್ಯಂತ ಸ್ಪಷ್ಟವಾಗಿ ಗಾಂಧಿ ಹೇಳಿದರು. ʼಈ ಕೃತ್ಯಕ್ಕಾಗಿ ಆತನನ್ನು (ಡಿಂಗ್ರ) ಬಲಿಕೊಡಲಾಗಿದೆ. ಇದನ್ನು ಆತನೊಳಗೆ ಹೇರಿದವರು ಕೂಡ ಶಿಕ್ಷಾರ್ಹರು. ಮಿಸ್ಟರ್‌ ಡಿಂಗ್ರ ನಿಜದಲ್ಲಿ ನಿಷ್ಕಳಂಕ. ಕೊಲೆ ನಡೆದಿರುವುದು ಅಮಲಿನ ಅವಸ್ಥೆಯಲ್ಲಿ. ಒಳಗೆ ಹೋದ ಮದ್ಯ ಅಥವಾ ಭಂಗಿ ಮಾತ್ರವಲ್ಲ ಒಬ್ಬ ವ್ಯಕ್ತಿಗೆ ಅಮಲೇರಿಸುವುದು. ಒಂದು ಹುಚ್ಚು ಸಿದ್ಧಾಂತವೂ ಅಮಲೇರಿಸುತ್ತದೆ.ʼ ಗಾಂಧಿ ಅಲ್ಲಿಗೆ ನಿಲ್ಲಿಸುವುದಿಲ್ಲ. ʼಇಂತಹ ಕೊಲೆಗಳು ಭಾರತಕ್ಕೆ ಒಳ್ಳೆಯದು ಮಾಡುತ್ತದೆ ಎಂದು ನಂಬುವ ಮತ್ತು ವಾದಿಸುವ ಮನುಷ್ಯರು ನಿಜದಲ್ಲಿ ಏನೊಂದೂ ತಿಳಿಯದವರಾಗಿರುತ್ತಾರೆ. ಇಂತಹ ಕೊಲೆಗಳ ಕಾರಣದಿಂದ ಬ್ರಿಟಿಷರು ಭಾರತ ಬಿಟ್ಟು ಹೋದರೆಂದೇ ಇಟ್ಟುಕೊಳ್ಳಿ. ನಂತರ ಯಾರು ಅವರ ಸ್ಥಾನದಲ್ಲಿ ಕೂತು ಅಧಿಕಾರ ನಡೆಸುತ್ತಾರೆ? ಅದಕ್ಕೆ ಸಿಗುವ ಒಂದೇ ಉತ್ತರ ಈ ಕೊಲೆಗಾರರು ಎಂದಾಗಿರುತ್ತದೆ. ಅಂತಹದೊಂದು ಆಡಳಿತದಲ್ಲಿ ಭಾರತ ಪೂರ್ತಿಯಾಗಿ ನಾಶ ಹೊಂದುತ್ತದೆ. ಆ ಯುವಕರೊಳಗೆ ಇಂತಹ ಕೊಲೆಗಳಿಗೆ ಪ್ರೇರಣೆ ತುಂಬಿದ ಮನುಷ್ಯರು ದೇವರ ನ್ಯಾಯಾಲಯದಲ್ಲಿ ನಿಲ್ಲಬೇಕಾಗುತ್ತದೆ. ಅಷ್ಟೇ ಅಲ್ಲ, ಅವರು ಲೋಕದ ಕಣ್ಣುಗಳ ಮುಂದೆ ತಪ್ಪಿತಸ್ಥರೇ ಆಗಿರುತ್ತಾರೆ.ʼ<sup></sup></p>



<p>ಡಿಂಗ್ರನ ಕೃತ್ಯದಿಂದ ಕಲುಷಿತಗೊಂಡಿದ್ದ ಲಂಡನ್ನಿನ ಭಾರತೀಯ ಸಮೂಹದಿಂದ ತನ್ನ ಕರ್ಮಭೂಮಿಯಾಗಿದ್ದ ದಕ್ಷಿಣ ಆಫ್ರಿಕಾಗೆ ಮರಳುವಾಗ ಗಾಂಧಿ ಆಳವಾಗಿ ಕದಡಿದ್ದರು. ಒಂದು ದೊಡ್ಡ ನೈತಿಕ ಪ್ರಶ್ನೆಯಾಗಿ ಗಾಂಧಿ ಅದನ್ನು ಕಂಡರು. ಕೇಪ್‌ಟೌನಿಗೆ ಹೊರಟಿದ್ದ ಹಡಗಿನಲ್ಲಿ ಕೂತು, ಆ ನೈತಿಕ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು, ಗಾಂಧಿ ಬರೆದ ಕೃತಿ <em>ಹಿಂದ್‌ ಸ್ವರಾಜ್.‌</em> &nbsp;ಎಡಿಟರ್‌, ಗಾಂಧಿ ಮತ್ತು ಓದುಗನ ನಡುವೆ ನಡೆಯುವ ಇಪ್ಪತ್ತು ಸಂಕಲ್ಪಿತ ಸಂಭಾಷಣೆಗಳು <em>ಹಿಂದ್‌ ಸ್ವರಾಜ್‌</em>ನ ಸಾರ. ಇದು ಪಾಶ್ಚಾತ್ಯ ನಾಗರಿಕತೆಯ ವಿರುದ್ಧ ದೊಡ್ಡ ವಿಮರ್ಶೆ ಎಂಬುದರ ಜೊತೆಗೇ ಹಿಂಸೆಗೆದುರಾದ ದೊಡ್ಡ ವಿಮರ್ಶೆಯೂ ಹೌದು. ಹಿಂಸೆಯನ್ನು ನ್ಯಾಯೀಕರಿಸುವ, ಸಾವರ್ಕರ್‌ ಮಾದರಿಯ, ಓದುಗ ಎಂಬ ಪಾತ್ರದ ಜೊತೆಗೆ ಎಡಿಟರ್‌ ಹೇಳುತ್ತಾನೆ, ʼನಿನ್ನಂತವರು ಭಾರತವೆಂಬ ಪುಣ್ಯ ದೇಶವನ್ನು ಅಶುದ್ಧಗೊಳಿಸುತ್ತಿದ್ದೀರಿ.ʼ ನಂತರ ಹೀಗೆ ಮುಂದುವರಿಯುತ್ತದೆ, ʼಕೊಲೆಗಳ ಮೂಲಕ ಭಾರತವನ್ನು ಸ್ವತಂತ್ರಗೊಳಿಸಬಹುದು ಎಂದು ಯೋಚಿಸುವಾಗ ನೀವೆಲ್ಲ ನಡುಗುವುದಿಲ್ಲವೇ?ʼ<sup></sup></p>



<p>ಆದರೆ, ಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆಯ ಬಗ್ಗೆ ದುರಭಿಮಾನ ಹೊಂದಿದ್ದ ಒಂದಷ್ಟು ಯುವಕರನ್ನು ಅದಾಗಲೇ ತಿಲಕರಿಂದ ಎರವಲಾಗಿ ಬಂದಿದ್ದ ನವ-ಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ಆತ್ಮಾಹುತಿ ದಾಳಿಕೋರರಾಗಿ ಸಾವರ್ಕರ್‌ ಸಜ್ಜುಗೊಳಿಸಿದ್ದರು. ತನ್ನ ಸಹೋದರ ಬಾಬಾರವ್‌ನ ಗಡಿಪಾರು ವಿಲ್ಲಿಯ ಹಾಗೆ ಸಣ್ಣ ಸಣ್ಣ ಬೇಟೆಗಳ ಮೂಲಕ ಮುಗಿಸುವ ಸಂಗತಿಯಾಗಿರಲಿಲ್ಲ.</p>



<p>ಅದರ ಬಲಿ ಏ.ಎಂ.ಟಿ ಜಾಕ್ಸನ್‌ ಎಂಬ ನಾಸಿಕ್‌ ಜಿಲ್ಲಾ ಕಲೆಕ್ಟರ್ ಆಗಿದ್ದ. ಉಳಿದ ವಸಾಹತು ಅಧಿಕಾರಿಗಳೊಂದಿಗೆ ತುಲನೆ ಮಾಡುವಾಗ ಜಾಕ್ಸನ್‌ ಭಾರತೀಯರೊಂದಿಗೆ ಮತ್ತು ಭಾರತದೊಂದಿಗೆ ಪ್ರೀತಿ ಹೊಂದಿದ್ದ ಅಧಿಕಾರಿಯಾಗಿದ್ದ. ಭಾರತೀಯ ಸಂಸ್ಕೃತಿಯ ಕುರಿತು ಆಳವಾದ ಅಧ್ಯಯನ ನಡೆಸಿದ್ದ ಅಧಿಕಾರಿಯಾಗಿದ್ದ ಆತ. ಆತನ ಭಾರತದ ಮೇಲಿನ ಪ್ರೀತಿಯನ್ನು ಗುರುತಿಸಿ ಪಂಡಿತ್‌ ಜಾಕ್ಸನ್‌ ಎಂದು ಕರೆಯುತ್ತಿದ್ದರು. ನಾಸಿಕ್‌ ಎಂಬ ೨೫೦೦೦ದಷ್ಟು ಮಾತ್ರವೇ ಜನಸಂಖ್ಯೆಯಿದ್ದ ಪುಟ್ಟ ಪಟ್ಟಣದಲ್ಲಿ ಜನಪ್ರಿಯನಾಗಿದ್ದ ಜಾಕ್ಸನ್.‌ ಅದರಲ್ಲಿ ೯೦೦೦ದಷ್ಟು ಬ್ರಾಹ್ಮಣರಿದ್ದರು. ಆ ೯೦೦೦ದಲ್ಲಿ ಒಂದು ಸಾವಿರ ಜನರು ಮಾತ್ರವೇ ಚಿತ್ಪಾವನ ಬ್ರಾಹ್ಮಣರಾಗಿದ್ದರು. ಆದರೂ, ಆ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿದ್ದ ಒಂದು ಗುಂಪು ಸಾವರ್ಕರ್‌ ನೇತೃತ್ವದ <em>ಅಭಿನವ್‌ ಭಾರತ್</em>‌ ನ್ನು ಮುನ್ನಡೆಸುತ್ತಿತ್ತು.</p>



<p>ಜಾಕ್ಸನ್‌ಗೆ ನಾಸಿಕ್‌ನ ಹುದ್ದೆಯಿಂದ ಬಾಂಬೆಯ ಕಮಿಷನರ್‌ ಆಗಿ ಪದೋನ್ನತಿ ಸಿಕ್ಕಾಗ ನಾಸಿಕ್‌ನ ಜನರು ದುಃಖಿತರಾದರು. ತಮ್ಮ ಮೆಚ್ಚಿನ ಅಧಿಕಾರಿಗೆ ಬೀಳ್ಕೊಡುವ ಹಲವು ಕಾರ್ಯಕ್ರಮಗಳು ನಾಸಿಕಿನಾದ್ಯಂತ ನಡೆದವು. ಅದರ ಭಾಗವಾಗಿ ೧೯೦೯ ಡಿಸೆಂಬರ್‌ ೨೧ರಂದು ವಿಜಯಾನಂದ್‌ ಥಿಯೇಟರಿನಲ್ಲಿ ನಾಸಿಕಿನ ಪೌರ ಪ್ರಮುಖರು ಒಂದು ಸಮ್ಮೇಳನ ಆಯೋಜಿಸಿದ್ದರು. ಬಾಂಬೆಯ ಕಿರ್ಲೋಸ್ಕರ್‌ ನಾಟಕ ಸಂಘ ಅಲ್ಲಿ <em>ಶಾರದಾ</em> ಎಂಬ ನಾಟಕವನ್ನು ಆಡಲಿತ್ತು. ಬಾಲಗಂಧರ್ವ ಎಂಬ ವರನಟ ಅದರಲ್ಲಿ ಹಾಡುತ್ತಾ ಅಭಿನಯಿಸಿದ್ದ. ಸ್ತ್ರೀವೇಷ ಬಾಲಗಂಧರ್ವನ ವಿಶೇಷತೆಯಾಗಿತ್ತು. ನಾವು ಇದನ್ನು ಈ ಮೊದಲೇ ಗಮನಿಸಿದ್ದೆವು.</p>



<p>ನಾಟಕದ ನಡುವಿನ ವಿರಾಮ ವೇಳೆಯಲ್ಲಿ ಜಾಕ್ಸನ್‌ಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಾಕ್ಸನ್‌ ಅಲ್ಲಿ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದ. ವಿಲ್ಲಿಯ ವಿಷಯದಲ್ಲಿ ನಡೆದ ಹಾಗೆ, ಒಬ್ಬ ಹದಿನೆಂಟರ ತರುಣ ಒಂದು ಬ್ರೌನಿಂಗ್‌ ಪಿಸ್ತೂಲ್‌ ತೆಗೆದು ಜಾಕ್ಸನ್‌ ಮೇಲೆ ಗುಂಡು ಹಾರಿಸಿದ. ಅದು ತಾಗಲಿಲ್ಲ. ನಂತರ ನಾಲ್ಕು ಗುಂಡುಗಳನ್ನು ಹಾರಿಸಿದ. ಜಾಕ್ಸನ್‌ ಸ್ಥಳದಲ್ಲಿಯೇ ಸತ್ತು ಬಿದ್ದ.</p>



<p>ಅನಂತ್‌ ಲಕ್ಷ್ಮಣ್‌ ಕನ್ಹಾರೆ ಎಂಬ ಚಿತ್ಪಾವನ ಬ್ರಾಹ್ಮಣ ಯುವಕ ಜಾಕ್ಸನ್‌ ಮೇಲೆ ಗುಂಡಿನ ದಾಳಿ ಮಾಡಿದ್ದ. ಅನಂತ್‌ ಲಕ್ಷ್ಮಣ್‌ ಕನ್ಹಾರೆ ತನ್ನ ಗುರಿ ಸಾಧಿಸದಿದ್ದರೆ ಅದನ್ನು ನೆರವೇರಿಸಲು ಅಲ್ಲಿ ಇನ್ನಿಬ್ಬರು ತಯಾರಾಗಿ ಬಂದಿದ್ದರು.  ಕೃಷ್ಣಾಜಿ ಗೋಪಾಲ್‌ ಕಾರ್ವೇ ಮತ್ತು ವಿನಾಯಕ್‌ ನಾರಾಯಣ್‌ ದೇಶ್‌ಪಾಂಡೆ ಎಂಬಿಬ್ಬರು. ಇವರೆಲ್ಲರು <em>ಅಭಿನವ್‌ ಭಾರತ್</em>‌ ಸದಸ್ಯರಾಗಿದ್ದರು.</p>



<p>ಕನ್ಹಾರೆ ಔರಂಗಾಬಾದಿನಲ್ಲಿ ಜನಿಸಿದ್ದ. ಬಾಬಾರಾವ್‌ನ ವಿಚಾರಣೆ ಜಾಕ್ಸನ್‌ ಸಾನಿಧ್ಯದಲ್ಲಿ ನಡೆದಿತ್ತು ಎಂಬ ಕಾರಣಕ್ಕೆ <em>ಅಭಿನವ್‌ ಭಾರತ್</em>‌ ಜಾಕ್ಸನ್‌ ವಿರುದ್ಧ ತಿರುಗಿತ್ತು. ಕನ್ಹಾರೆ ಸ್ಥಳದಲ್ಲಿಯೇ ಬಂಧಿತನಾದ. ನಂತರ ಕಾರ್ವೇ, ದೇಶ್‌ಪಾಂಡೆ, ಸೋಮ, ವಾಮನ್‌ ಜೋಷಿ, ಗಣು, ದತ್ತು ಜೋಷಿ ಅರೆಸ್ಟಾದರು. ಇವರೆಲ್ಲ <em>ಅಭಿನವ್‌ ಭಾರತ್</em>‌ ಜೊತೆಗೆ ಸಂಬಂಧ ಹೊಂದಿದ್ದವರಾಗಿದ್ದರು. ಜೊತೆಗೆ ಸಾವರ್ಕರ್‌ ಸಹೋದರರಲ್ಲಿ ಕಿರಿಯವನಾಗಿದ್ದ ನಾರಾಯಣ್‌ ರಾವ್‌ ಸಾವರ್ಕರ್‌ ಕೂಡ ಬಂಧಿತನಾದ. ೧೯೧೦ ಮಾರ್ಚ್‌ ೨೯ರಂದು ಬಾಂಬೆ ಹೈಕೋರ್ಟ್‌ ಈ ಕೇಸಿನ ತೀರ್ಪು ಪ್ರಕಟಿಸಿತು. ಅನಂತ್‌ ಲಕ್ಷ್ಮಣ್‌ ಕನ್ಹಾರೆ, ಕಾರ್ವೇ ಮತ್ತು ದೇಶ್‌ಪಾಂಡೆಗೆ ಗಲ್ಲುಶಿಕ್ಷೆ ವಿಧಿಸಿತು. ಸೋಮ, ವಾಮನ್‌ ಜೋಷಿ ಮತ್ತು ಗಣು ಗಡೀಪಾರಾದರು. ನಾರಾಯಣ್‌ ಸಾವರ್ಕರ್‌ಗೆ ಆರು ತಿಂಗಳ ಕಠಿಣ ಸಜೆ ವಿಧಿಸಿತು. ಗಣು ಮತ್ತು ದತ್ತು ನಂತರ ಸಾಕ್ಷಿಗಳಾಗಿ ಬದಲಾದ ಕಾರಣ ಅವರ ಶಿಕ್ಷೆಯನ್ನು ರದ್ದುಗೊಳಿಸಲಾಯಿತು. ೧೯೧೦ ಏಪ್ರಿಲ್‌ ೧೯ರಂದು ಕನ್ಹಾರೆ ಸಹಿತ ಮೂವರನ್ನೂ ಗಲ್ಲಿಗೇರಿಸಲಾಯಿತು.</p>



<p>ವಿಲ್ಲಿಯ ಬೆನ್ನಿಗೆ ಜಾಕ್ಸನ್‌ ಕೊಲೆಯೂ ಸೇರಿದಾಗ ಲಂಡನ್‌ ನಿವಾಸಿಗಳು <em>ಇಂಡಿಯಾ ಹೌಸ್‌</em> ವಿದ್ಯಾರ್ಥಿಗಳ ವಿರುದ್ಧ ತಿರುಗಿದರು. ಅಷ್ಟೇ ಅಲ್ಲದೆ ಕೊಲೆಗೆ ಬಳಸಿದ ಬ್ರೌನಿಂಗ್‌ ಪಿಸ್ತೂಲ್‌ ಇಂಡಿಯಾ ಹೌಸಿನ ಅಡುಗೆಗಾರ ಚತುರ್ಭುಜ ಅಮೀನ್‌ ಮುಖಾಂತರ ವಿನಾಯಕ್‌ ದಾಮೋದರ್‌ ಸಾವರ್ಕರ್‌ ಭಾರತಕ್ಕೆ ಸಾಗಾಟ ಮಾಡಿದ್ದ ಇಪ್ಪತ್ತು ಪಿಸತೂಲುಗಳಲ್ಲಿ ಒಂದು ಎಂಬುದು ಕೂಡ ಬೆಳಕಿಗೆ ಬಂತು. ಈ ಸಂಗತಿ ಮತ್ತು ಆಗಲೇ ಹೇಳಿದ ಲಂಡನ್‌ ನಿವಾಸಿಗಳ ವಿರೋಧ ಸಾವರ್ಕರನ್ನು ತಾತ್ಕಾಲಿಕವಾಗಿ ಲಂಡನ್‌ ತೊರೆಯುವಂತೆ ಮಾಡಿತು. ೧೯೧೦ ಜನವರಿ ೫ರಂದು ಸಾವರ್ಕರ್‌ ಪ್ಯಾರೀಸಿಗೆ ಪಲಾಯನ ಮಾಡಿದರು. ಅಲ್ಲಿ ಮೇಡಂ ಕಾಮರ ರೂ ಮೌಂಟೈನಿನ ಮನೆಯಲ್ಲಿ ತಂಗಿದರು.</p>



<p>ಇದರ ನಡುವೆ ಸಾವರ್ಕರ್‌ಗೆ ವಿರುದ್ಧವಾಗಿ ಹಲವು ಆರೋಪಗಳು ಅನುಯಾಯಿಗಳ ನಡುವಿನಿಂದಲೇ ಕೇಳಿ ಬರಲು ಶುರುವಾಗಿತ್ತು. ಸಾವರ್ಕರ್‌ ಉಳಿದವರ ಮೇಲೆ ಪ್ರಭಾವ ಬೀರಿ ಕೊಲೆಗಳನ್ನು ನಡೆಸುತ್ತಾರಲ್ಲದೆ ಒಮ್ಮೆಯೂ ಸ್ವತಃ ತಾನಾಗಿ ಎದುರು ನಿಂತು ಹೋರಾಡುವುದಿಲ್ಲ ಎಂಬುದು ಅವುಗಳಲ್ಲಿ ಪ್ರಧಾನ ಆರೋಪವಾಗಿತ್ತು. ಕನ್ಹಾರೆ ಮತ್ತು ಸಹಚರರನ್ನು ಗಲ್ಲಿಗೇರಿಸಿದ ನಂತರ ಅದು ಇನ್ನಷ್ಟು ಹೆಚ್ಚುತ್ತದೆಯೆಂದು ಸಾವರ್ಕರ್‌ ಹೆದರಿದರು. ಆದ್ದರಿಂದ ಲಂಡನ್ನಿಗೆ ಮರಳಲು ಸಾವರ್ಕರ್‌ ತೀರ್ಮಾನಿಸುತ್ತಾರೆ. ಇನ್ನೊಂದು ಕಾರಣ, ಲಂಡನ್ನಿನ ಕಾನೂನುಗಳ ಬಗ್ಗೆ ಇದ್ದ ನಂಬಿಕೆಯಾಗಿತ್ತು. ಮಾನವಹಕ್ಕುಗಳಿಗೆ ಲಂಡನ್‌ ನೀಡುತ್ತಿದ್ದ ಬೆಲೆಯ ಕಾರಣದಿಂದ ವಿಶ್ವದಾದ್ಯಂತದ ಹಲವು ಕ್ರಾಂತಿಕಾರಿಗಳ ಕೇಂದ್ರವಾಗಿ ಲಂಡನ್‌ ನಗರ ಬದಲಾಗಿತ್ತು. ಆದ್ದರಿಂದ ಬಂಧಿಸಲ್ಪಟ್ಟರೂ ಕೂಡ ತನಗೆ ಪ್ರೇರಣೆಗೆಂದು ಸಣ್ಣ ಶಿಕ್ಷೆಯನ್ನಷ್ಟೇ ವಿಧಿಸಬಹುದೆಂದು ಸಾವರ್ಕರ್‌ ಭಾವಿಸಿರಬಹುದು.</p>



<p>ಆದರೆ, ಇದೇ ಹೊತ್ತಿಗೆ ಸಾವರ್ಕರ್ ವಿರುದ್ಧ ಭಾರತದ ಕೋರ್ಟ್‌ ಕೂಡ ವಾರೆಂಟ್‌ ಹೊರಡಿಸಿತ್ತು. ಐದು ಆರೋಪಗಳನ್ನು ಸಾವರ್ಕರ್‌ ಮೇಲೆ ಹೊರಿಸಲಾಗಿತ್ತು. ಒಂದು, ಬ್ರಿಟಿಷ್‌ ರಾಜನ ವಿರುದ್ಧ ಯುದ್ಧ ಮಾಡಲು ಪ್ರೇರಣೆ ನೀಡಿರುವುದು. ಎರಡು, ಬ್ರಿಟಿಷ್‌ ಇಂಡಿಯಾದಲ್ಲಿ ರಾಜನಿಗಿರುವ ಪರಮಾಧಿಕಾರವನ್ನು ಪ್ರಶ್ನಿಸಿರುವುದು. ಮೂರು, ೧೯೦೮ರಲ್ಲಿ ಲಂಡನ್ನಿನಲ್ಲಿ ಆಯುಧಗಳನ್ನು ಸಂಗ್ರಹಿಸಿ, ಅದನ್ನು ವಿತರಣೆ ಮಾಡಿ, ಜಾಕ್ಸನ್‌ ಕೊಲೆಗೆ ಪ್ರೇರಣೆ ನೀಡಿರುವುದು. ನಾಲ್ಕು, ೧೯೦೮ರಲ್ಲಿ ಲಂಡನ್ನಿನಲ್ಲಿ ಆಯುಧ ಸಂಗ್ರಹ ಮಾಡಿ ರಾಜನ ವಿರುದ್ಧ ಯುದ್ಧ ಮಾಡಲು ಪ್ರೇರಣೆ ನೀಡಿರುವುದು. ಐದು, ೧೯೦೬ರಲ್ಲಿ ಭಾರತದಲ್ಲಿ ನಾಸಿಕ್‌ ಮತ್ತು ಪುಣೆಗಳಲ್ಲಿ ಮತ್ತು ೧೯೦೮ರಲ್ಲಿ ಲಂಡನ್ನಿನಲ್ಲಿ ದೇಶದ್ರೋಹಿ ಭಾಷಣ ಮಾಡಿರುವುದು.</p>



<p>ಇವುಗಳ ಜೊತೆಗೆ ಲಂಡನ್ನಿಗೆ ಮರಳಿ ಬರಲು ಸಾವರ್ಕರ್‌ಗೆ ಪ್ರೇರಣೆಯಾದ, ಆದರೆ ಅಂತಹ ಸಾಕ್ಷಿಗಳೇನೂ ಇಲ್ಲದ ಹಲವು ಕಾರಣಗಳು ಪ್ರಚಲಿತದಲ್ಲಿದ್ದವು. ಅವುಗಳಲ್ಲಿ ಕೆಲವನ್ನು ಸಾವರ್ಕರ್ ಆತ್ಮಕತೆ ಬರೆದ ವೈಭವ್‌ ಪುರಂದರೇ ಮತ್ತು ವಿಕ್ರಂ ಸಂಪತ್‌ ವಿವರಿಸುತ್ತಾರೆ. ಮೊದಲನೆಯದು, ಲಾರೆನ್ಸ್‌ ಮಾರ್ಗರೇಟ್‌ ಎಂಬ ಆಂಗ್ಲ ಪ್ರೇಯಸಿಯ ಬಗ್ಗೆ. ಬ್ರಿಟಿಷ್‌ ಏಜೆನ್ಸಿಗಳು ಸಾವರ್ಕರನ್ನು ಉರುಳಿಸಲು ಬಳಸಿದ ಹನಿ ಟ್ರಾಪ್‌ ಆ ಪ್ರೇಯಸಿ ಎಂದು ವಿಕ್ರಂ ಸಂಪತ್‌ ಹೇಳುತ್ತಾರೆ. ಆದರೆ ಆ ಕುರಿತ ಸಾಕ್ಷಿಗಳು ಇಲ್ಲವೆಂದೂ ಒಪ್ಪಿಕೊಳ್ಳುತ್ತಾರೆ. ಜೊತೆಗೆ ಸಾವರ್ಕರ್ ಅವರ ಓಪಿಯಮ್‌ ಬಳಕೆ ಮತ್ತು ಸಲಿಂಗ ಕಾಮದ ಕುರಿತು ಇಂತಹ ಕಥೆಗಳು ಹರಡಿದ್ದವು. ಶ್ಯಾಂಜಿ ಕೃಷ್ಣ ವರ್ಮ ಮೊದಲಾದವರು ನಿರಂತರವಾಗಿ ನೀಡಿದ ಮುನ್ನೆಚ್ಚರಿಕೆಗಳನ್ನು ಕಡೆಗಣಿಸಿ ಸಾವರ್ಕರ್‌ ತಾನು ಲಂಡನ್ನಿಗೆ ಮರಳುವ ನಿರ್ಧಾರ ಕೈಗೊಂಡದ್ದೇ ಇಂತಹ ಕಾರಣಗಳಿಗೆ ಪುಷ್ಠಿ ನೀಡುತ್ತದೆ ಎಂದು ಭಾವಿಸಬಹುದು.</p>



<p>ಗ್ರೇ ಇನ್‌ ಬ್ಯಾರಿಸ್ಟರ್‌ ಪದವಿ ನಿರಾಕರಿಸಿದ್ದರೂ ಸಾವರ್ಕರ್‌ ಬ್ರಿಟಿಷ್‌ ಕಾನೂನುಗಳನ್ನು ಓದಿ ಪರೀಕ್ಷೆ ಪಾಸಾಗಿದ್ದರು. ಈ ಕಾನೂನು ಜ್ಞಾನವೇ ಲಂಡನ್ನಿಗೆ ಮರಳಲು ಉತ್ತೇಜನವಾಗಿರಬಹುದು. ತನಗೆ ದೊಡ್ಡ ಮಟ್ಟದ ಶಿಕ್ಷೆ ಲಭಿಸಲಿದೆಯೆಂದು ಸಾವರ್ಕರ್‌ ಒಮ್ಮೆಯೂ ಯೋಚಿಸಿರಲಿಕ್ಕಿಲ್ಲ. ೧೯೧೦ ಮಾರ್ಚ್‌ ೧೩ರಂದು ನಮಗಿನ್ನೂ ಅಜ್ಞಾತವಾಗಿರುವ ಕಾರಣಗಳಿಂದ ಸಾವರ್ಕರ್‌ ಪ್ಯಾರಿಸ್‌ ತೊರೆಯುತ್ತಾರೆ. ಲಂಡನ್‌ ತಲುಪಿದ ಕೂಡಲೇ ಬಂಧಿತನಾಗುತ್ತಾರೆ.</p>



<p>ವಿ.ವಿ.ಎಸ್.‌ ಅಯ್ಯರ್‌ ತನ್ನನ್ನು ಜೈಲಿನಲ್ಲಿ ಕಾಣಲು ಬಂದ ಕುರಿತು ನಂತರದ ತನ್ನ ಆತ್ಮಕತೆಯಲ್ಲಿ ಕಾಣಬಹುದು. ʼಕಣ್ಣೀರು ಹರಿಯಿತು. ಅದನ್ನು ಅದುಮಿಟ್ಟುಕೊಂಡು ನಾವು ಹೇಳಿದೆವು, ಕೂಡದು, ಕೂಡದು, ನಾವು ಹಿಂದೂಗಳು, <em>ಗೀತೆ</em> ಓದಿದವರು. ಈ ಅನುಕಂಪ ರಹಿತ ಜನರ ನಡುವೆ ನಾವು ಅಳಬಾರದು.ʼ ಮಾನವ ಸಂಸ್ಕೃತಿಯ ಅತ್ಯಂತ ಮೂಲಭೂತ ಸಂಜ್ಞೆಗಳಲ್ಲಿ ಒಂದಾದ, ದುರ್ಬಲರ ಕೃತ್ಯವೆಂದು ಸಾವರ್ಕರ್‌ ಮತ್ತು ಅಯ್ಯರ್‌ ಗಟ್ಟಿಯಾಗಿ ನಂಬಿಕೊಂಡಿದ್ದ ಅಳುವನ್ನು ಅವರಿಬ್ಬರು ಅದುಮಿಟ್ಟುಕೊಳ್ಳುವುದು ತಾವು ಭಾರತೀಯರು ಎಂಬ ನೆಲೆಯಲ್ಲಿಯೋ, ರಾಷ್ಟ್ರವಾದಿಗಳು ಎಂಬ ನೆಲೆಯಲ್ಲಿಯೋ ಅಲ್ಲವೇ ಅಲ್ಲ. <em>ಗೀತೆ</em>ಯ ಸಹಾಯದಿಂದ ಕಟ್ಟಲ್ಪಟ್ಟಿದ್ದ ಒಂದು ಹಿಂದೂ ಕಲ್ಪನೆಯ ಕಾರಣದಿಂದ. ಅದು ಕೂಡ, ತಿಲಕ್‌ ತನ್ನ <em>ಗೀತಾರಹಸ್ಯ </em>ಎಂಬ ವ್ಯಾಖ್ಯಾನದ ಮೂಲಕ ಅಜರಾಮರಗೊಳಿಸಿದ್ದ ಸಾರಾಂಶವನ್ನು ಆವಾಹಿಸಿಕೊಂಡು.</p>
]]></content:encoded>
					
		
		
			</item>
		<item>
		<title>ದುರಭಿಮಾನ ಕೊಲೆಗಳ ಮುಂದುವರಿಕೆ : ಹಿಂದುತ್ವ ರಾಜಕಾರಣದ ಕಥೆ &#8211; 12</title>
		<link>https://peepalmedia.com/continuation-of-honor-killings/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 03 Apr 2024 04:15:02 +0000</pubDate>
				<category><![CDATA[ಅಂಕಣ]]></category>
		<category><![CDATA[ಇತಿಹಾಸ]]></category>
		<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[hindutva rajakaranada kathe]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Sunaif]]></category>
		<guid isPermaLink="false">https://peepalmedia.com/?p=37886</guid>

					<description><![CDATA[ಅಷ್ಟೇ ಅಲ್ಲ, ಮದನ್‌ ಲಾಲ್‌ ಡಿಂಗ್ರನ ಅಣ್ಣ ಕೆ.ಎಲ್‌. ಡಿಂಗ್ರ, ತನ್ನ ತಮ್ಮ ಇಂಗ್ಲೆಂಡಿನಲ್ಲಿದ್ದಾನೆಂದೂ ಅವನನ್ನು ಚೂರು ನೋಡಿಕೊಳ್ಳಿ ಎಂದೂ ಕೋರಿದ್ದನ್ನು ಪರಿಗಣಿಸಿ ಮದನ್‌ ಲಾಲ್‌ ಡಿಂಗ್ರನಿಗೆ ಪತ್ರವನ್ನೂ ಬರೆದಿದ್ದ. ಆ ಕಾರಣದಿಂದಲೂ ಅಂದು ಆ ಸತ್ಕಾರಕೂಟದಲ್ಲಿ ಡಿಂಗ್ರನ ಜೊತೆ ದೀರ್ಘ ಹೊತ್ತು ಮಾತಕತೆ ನಡೆಸಿದ್ದ. ಆ ಮಾತುಕತೆಯ ಕೊನೆಗೆ ಸಣ್ಣ ಕೋಲ್ಟ್‌ ಪಿಸ್ಟಲ್‌ ಬಳಸಿ ವಿಲ್ಲಿಯ ಕಣ್ಣಿಗೆ ಗುಂಡು ಹೊಡೆದ ಡಿಂಗ್ರನನ್ನು ಪಾರ್ಟಿಯಲ್ಲಿ ಭಾಗವಹಿಸಿದ್ದವರು ಕಾಣುತ್ತಾರೆ. ಡಿಂಗ್ರ ನಾಲ್ಕು ಗುಂಡುಗಳನ್ನು ವಿಲ್ಲಿಯ ಮೆದುಳಿಗೆ ಹೊಡೆದಿದ್ದ. ವಿಲ್ಲಿ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಅಷ್ಟೇ ಅಲ್ಲ, ಮದನ್‌ ಲಾಲ್‌ ಡಿಂಗ್ರನ ಅಣ್ಣ ಕೆ.ಎಲ್‌. ಡಿಂಗ್ರ, ತನ್ನ ತಮ್ಮ ಇಂಗ್ಲೆಂಡಿನಲ್ಲಿದ್ದಾನೆಂದೂ ಅವನನ್ನು ಚೂರು ನೋಡಿಕೊಳ್ಳಿ ಎಂದೂ ಕೋರಿದ್ದನ್ನು ಪರಿಗಣಿಸಿ ಮದನ್‌ ಲಾಲ್‌ ಡಿಂಗ್ರನಿಗೆ ಪತ್ರವನ್ನೂ ಬರೆದಿದ್ದ. ಆ ಕಾರಣದಿಂದಲೂ ಅಂದು ಆ ಸತ್ಕಾರಕೂಟದಲ್ಲಿ ಡಿಂಗ್ರನ ಜೊತೆ ದೀರ್ಘ ಹೊತ್ತು ಮಾತಕತೆ ನಡೆಸಿದ್ದ. ಆ ಮಾತುಕತೆಯ ಕೊನೆಗೆ ಸಣ್ಣ ಕೋಲ್ಟ್‌ ಪಿಸ್ಟಲ್‌ ಬಳಸಿ ವಿಲ್ಲಿಯ ಕಣ್ಣಿಗೆ ಗುಂಡು ಹೊಡೆದ ಡಿಂಗ್ರನನ್ನು ಪಾರ್ಟಿಯಲ್ಲಿ ಭಾಗವಹಿಸಿದ್ದವರು ಕಾಣುತ್ತಾರೆ. ಡಿಂಗ್ರ ನಾಲ್ಕು ಗುಂಡುಗಳನ್ನು ವಿಲ್ಲಿಯ ಮೆದುಳಿಗೆ ಹೊಡೆದಿದ್ದ. ವಿಲ್ಲಿ ಅಲ್ಲಿಯೇ ಕುಸಿದು ಬಿದ್ದ. ಅಲ್ಲಿಯೇ ಮರಣ ಹೊಂದಿದ.</p>
</blockquote>



<p>ಸಾವರ್ಕರ್‌ ಲಂಡನ್ ವಾಸ ಬ್ರಾಹ್ಮಣಿಸಮ್ಮಿಗೆ ಕ್ರಾಂತಿಕಾರಕವಾದ ಆವೇಶವೊಂದನ್ನು ನೀಡಲು ಸಹಕಾರಿಯಾಯಿತು. ಲಂಡನ್‌ ಅಂದು ಅಂತರಾಷ್ಟ್ರೀಯ ಕ್ರಾಂತಿಕಾರಿಗಳ ರಾಜಧಾನಿಯಾಗಿತ್ತು. ಸಾಮ್ರಾಜ್ಯಶಾಹಿ ದೇಶಗಳಲ್ಲಿಯೇ ಅತ್ಯಂತ ದೊಡ್ಡ ದೇಶವಾಗಿತ್ತು ಬ್ರಿಟನ್.‌ ಆದರೂ, ತಮ್ಮ ನಾಡಿನಲ್ಲಿ ಒಂದು ಹಂತದವರೆಗೆ ಪ್ರಜಾಪ್ರಭುತ್ವವನ್ನೂ ಮಾನವ ಹಕ್ಕುಗಳನ್ನೂ ಸಂರಕ್ಷಿಸಲು ಅವರು ಕಟಿಬದ್ಧರಾಗಿದ್ದರು. ವಸಾಹತು ದೇಶಗಳಲ್ಲಿ ಅವರ ಕಾನೂನುಗಳು ಅತಿ ಕಠಿಣವೂ ಜನದ್ರೋಹಿಯೂ ಆಗಿದ್ದರು ಕೂಡ ತಮ್ಮ ದೇಶದಲ್ಲಿ ಆ ಕಾನೂನುಗಳು ಸಡಿಲವೂ ವೈಚಾರಿಕವೂ ಆಗಿದ್ದವು. ಆದ್ದರಿಂದಲೇ ಐರಿಷ್‌ ಕ್ರಾಂತಿಕಾರಿಗಳೂ ರಷ್ಯನ್‌ ಕ್ರಾಂತಿಕಾರಿಗಳೂ ಲಂಡನ್ನಿನಲ್ಲಿ ಬೇರುಬಿಟ್ಟಿದ್ದರು. ಸ್ವಂತ ದೇಶಗಳಿಗಿಂತ ಚೂರು ಹೆಚ್ಚೇ ಸ್ವಾತಂತ್ರ್ಯವನ್ನು ಬ್ರಿಟನ್‌ ಎಂಬ ಸಾಮ್ರಾಜ್ಯವಾದಿ ದೇಶ ತನ್ನ ಗಡಿಯೊಳಗೆ ಅವರಿಗೆಲ್ಲ ನೀಡಿತ್ತು ಎಂಬುದು ವಾಸ್ತವ.</p>



<p>ಹಲವು ದೇಶಗಳಿಂದ ಬರುವ ಕ್ರಾಂತಿಕಾರಿಗಳ ಎದುರು, ತಮ್ಮ ಧಾರ್ಮಿಕವೂ ಜಾತಿವಾದಿಯೂ ಆದ ಆಲೋಚನೆಗಳನ್ನು ಮರೆಮಾಚಿಕೊಂಡು, ಸಾಮ್ರಾಜ್ಯವಾದದ ವಿರೋಧಿಗಳಾಗಿ ಮಾತ್ರ ತಮ್ಮನ್ನು ಗುರುತಿಸಿಕೊಳ್ಳಲು ಇಂಡಿಯಾ ಹೌಸಿನ ಸಾವರ್ಕರ್‌ ಸಹಿತದ <em>ಅಭಿನವ್‌ ಭಾರತ್‌</em> ಕಾರ್ಯಕರ್ತರಿಗೆ ಸಾಧ್ಯವಾಗಿತ್ತು. ಭಾರತದ ಧಾರ್ಮಿಕ ರೀತಿಗಳೋ ಜಾತಿ ಪದ್ದತಿಗಳೋ ಅವರಿಗೆ ತಿಳಿದಿರಲಿಲ್ಲ. ಬದಲಿಗೆ, ಲೋಕವೆಲ್ಲ ಆ ಕಾಲದಲ್ಲಿ ಸಶಸ್ತ್ರ ಕ್ರಾಂತಿಗೆ ಸಜ್ಜಾಗುತ್ತಿದ್ದ ಹೊತ್ತಲ್ಲಿ, ಅದರಲ್ಲೂ ಯುವಜನರ ನಡುವೆ ಇದ್ದ ಸೈದ್ಧಾಂತಿಕ ಅಂಗೀಕಾರವೂ ಸಾಮ್ರಾಜ್ಯವಾದಿ ಮಾದರಿಯ ಮೇಲಿದ್ದ ವಿರೋಧದ ಕಾರಣದಿಂದಲೂ ಪಾಶ್ಚಿಮಾತ್ಯ ಲೋಕದಲ್ಲಿ ಹೊಸ ಲೋಕಕ್ಕಾಗಿ ಹೋರಾಡುವ ಕ್ರಾಂತಿಕಾರಿಗಳಾಗಿ ಅವರೆಲ್ಲ ಅರಿಯಲ್ಪಟ್ಟರು. ಭಾರತದೊಳಗೆ ವಿಭಿನ್ನ ಧರ್ಮ ಮತ್ತು ಜಾತಿಗಳ ನಡುವೆ ಅವರು ತೋರಿಸುತ್ತಿದ್ದ ಮನೋಭಾವವನ್ನು ಉಳಿದವರು ಅರ್ಥಮಾಡಿಕೊಳ್ಳುವುದು ಅಸಾಧ್ಯವಾಗಿತ್ತು; ವಿಶೇಷವಾಗಿ ಭಾರತದ ಜಾತಿಪದ್ಧತಿಯ ಸಂಕೀರ್ಣತೆಗಳು ಪಾಶ್ಚಿಮಾತ್ಯ ದೇಶಗಳಿಗೆ ತೀರಾ ಅಪರಿಚಿತವಾಗಿದ್ದ ಕಾಲದಲ್ಲಿ.</p>



<p>೧೯೦೯ರಲ್ಲಿ ನಡೆದಿತ್ತು ಎಂದು ಹೇಳಲ್ಪಡುವ ಘಟನೆಯೊಂದು ಈ ಹಿನ್ನೆಲೆಯಲ್ಲೇ ನಡೆದಿತ್ತು ಎಂದು ಹೇಳಬಹುದು. ಮಾರ್ಚ್‌ ಮಧ್ಯದಲ್ಲಿ ಗಯ್ ಎ. ಆಲ್ಡ್ರೆಡ್‌ ಎಂಬ ಕಮ್ಯುನಿಸ್ಟ್‌ ಒಬ್ಬ ರಷ್ಯನ್ ಕ್ರಾಂತಿಕಾರಿಯನ್ನು ಇಂಡಿಯಾಹೌಸಿಗೆ ಕರೆದುಕೊಂಡು ಬಂದಿದ್ದನಂತೆ. ಮದನ್‌ ಲಾಲ್‌ ಡಿಂಗ್ರನೊಂದಿಗೆ ಸಾವರ್ಕರ್‌ ಆ ಕ್ರಾಂತಿಕಾರಿಯನ್ನು ಭೇಟಿಯಾಗಿದ್ದರು ಎಂದು ಹೇಳುಲಾಗುತ್ತದೆ. ಜೊತೆಗೆ ಆ ರಷ್ಯನ್‌ ಕ್ರಾಂತಿಕಾರಿ ವ್ಲಾದಿಮಿರ್‌ ಇಲ್ಲಿಚ್‌ ಲೆನಿನ್‌ ಎಂದೂ. ಈ ಕಥೆಗಳೆಲ್ಲ ಕಥೆಗಳಾಗಿ ಮಾತ್ರವೇ ಯಾಕೆ ಉಳಿದು ಬಿಟ್ಟವು? ಅದಕ್ಕೆ ಒಂದು ಕಾರಣ, ಅವರು ಅಂದು ಏನನ್ನು ಚರ್ಚಿಸಿದರು ಎಂಬುದರ ಕುರಿತಾಗಲಿ, ಕೇವಲ ಒಂದು ಭೇಟಿಗೆ ಮಾತ್ರವೇ ಅವರ ನಡುವಿನ ಸಂಬಂಧ ಯಾಕೆ ಮುಗಿಯಿತು ಎಂಬುದರ ಕುರಿತಾಗಲಿ ಯಾವ ಸಾಕ್ಷಿಯೂ ಬಾಕಿಯಾಗಲಿಲ್ಲ ಎಂಬುದು. ಸಾವರ್ಕರ್‌ ವಿಷಯದಲ್ಲಿ ತಾನೇ ಬರೆದಿಟ್ಟ ಲೇಖನಗಳು ಮತ್ತು ಅನುಭವಗಳು ಮಾತ್ರವೇ ಪ್ರಾಥಮಿಕ ಸಾಕ್ಷಿ ಎಂಬುದು ಕೂಡ ಈ ಕುರಿತ ತನಿಖೆಗೆ ಮಿತಿಯೊಡ್ಡತ್ತವೆ.</p>



<p>ಸೈದ್ಧಾಂತಿಕ ಪ್ರಚಾರ ಕಾರ್ಯಕ್ಕಿಂತಲೂ ಶಸ್ತ್ರ ಸಂಗ್ರಹಣೆಯೇ <em>ಅಭಿನವ್‌ ಭಾರತ್</em>ನ ವಿದೇಶಿ ಶಾಖೆಯಾಗಿದ್ದ <em>ಫ್ರೀ ಇಂಡಿಯಾ ಸೊಸೈಟಿ</em>ಯ ಪ್ರಧಾನ ಗುರಿಯಾಗಿತ್ತು. ಆ ಕಾಲದ ಸಾವರ್ಕರ್‌ ಬರಹಗಳೆಲ್ಲವೂ, ಅವು ಮಸ್ಸಿನಿಯ ಕುರಿತಾಗಿರಲಿ, ೧೮೫೭ರ ʼಯುದ್ಧʼದ ಕುರಿತಾಗಿರಲಿ ತನ್ನ ಅನುಯಾಯಿಗಳ ಶೌರ್ಯವನ್ನು ಕಾಯ್ದಿಟ್ಟುಕೊಳ್ಳಲು ಮಾತ್ರ ಉಳ್ಳವಾಗಿದ್ದವು. ಧಾರ್ಮಿಕವೂ ರಾಷ್ಟ್ರೀಯವೂ ಆದ ದುರಭಿಮಾನವನ್ನು ಮೇಲ್ಮಟ್ಟಕ್ಕೇರಿಸುವ ಗುರಿಯನ್ನು ಮಾತ್ರವೇ ಅವು ಬಹಳ ಸಲ ಹೊಂದಿರುತ್ತಿದ್ದವು. ಸ್ಪೆನ್ಸರನ ಯುಟಿಲಿಟೇರಿಯನ್‌ ಥಿಯರಿ ತರಹದ ಪಾಶ್ಚಾತ್ಯ ಸಿದ್ಧಾಂತಗಳನ್ನು ಪ್ರಯೋಗಿಸಲು ಅವರು ಮುಂದಾಗಿದ್ದರು. ಬ್ರಾಹ್ಮಣಿಸಮ್ಮಿನ ಸಾರ್ವಕಾಲಿಕ ಗ್ರಂಥವಾದ ಗೀತೆಯನ್ನು ತಿಲಕ್‌ ಉಪಯೋಗಿಸಿದರು. ಇತ್ತ ಸಾವರ್ಕರ್‌ ಯುದ್ಧಸನ್ನಾಹ, ಬ್ರಾಹ್ಮಣ ಶೌರ್ಯ, ಕೊಲ್ಲುವುದು, ಸಾಯುವುದು ಅಂತೆಲ್ಲ ಆಧುನಿಕಪೂರ್ವ ಕುಲಾಭಿಮಾನವನ್ನು ಮಾತ್ರ ಬಿತ್ತುತ್ತಿದ್ದರು. ಆದರೆ, ಸಾಮ್ರಾಜ್ಯಶಾಹಿ ವಿರೋಧಿಗಳು ಎಂಬ ಅಂತರಾಷ್ಟ್ರೀಯ ಮಾನವತಾವಾದಿಗಳ ಅಜೆಂಡಾದೊಳಗೆ ತಮ್ಮನ್ನು ತಾವು ತೂರಿಸಿಕೊಳ್ಳಲೂ ಒಂದು ಹಂತದವರೆಗೆ ಅವರಿಂದ ಸಾಧ್ಯವಾಗಿತ್ತು.</p>



<p>ಇದರ ನಡುವೆ <em>ಇಂಡಿಯಾ ಹೌಸಿನ</em> ಉಸ್ತುವಾರಿ ಶ್ಯಾಂಜಿಯಿಂದ ಸಾವರ್ಕರ್‌ ಕೈಗೆ ಬಂದು ಬಿದ್ದಿತು. ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಐವತ್ತನೇ ವರ್ಷದ ನೆನಪಿನಲ್ಲಿ ಬಂದ <em>ಇಂಡಿಯನ್‌ ಸೋಶ್ಯಲಜಿಸ್ಟ್‌</em>ನಲ್ಲಿ ಪ್ರಕಟವಾದ ಲೇಖನವೊಂದು ಅದಕ್ಕೆ ದಾರಿ ಮಾಡಿಕೊಟ್ಟಿತ್ತು. ೧೯೦೭ರಲ್ಲಿ ಲಾಲಾ ಲಜಪತ್‌ ರಾಯ್‌ ಅವರನ್ನು ಅರೆಸ್ಟ್‌ ಮಾಡಿ ಮಂಡಾಲೆ ಜೈಲಿಗೆ ಕಳುಹಿಸಿದ್ದು ಶ್ಯಾಂಜಿಯನ್ನು ಕೋಪೋದ್ರಿಕ್ತಗೊಳಿಸಿತ್ತು. ಅದರ ವಿರುದ್ಧ <em>ಇಂಡಿಯಾ ಹೌಸ್‌</em>ನಲ್ಲಿ ಒಂದು ಪ್ರತಿಭಟನಾ ಸಭೆಯನ್ನು ಶ್ಯಾಂಜಿ ಕರೆಯುತ್ತಾರೆ. ಅಷ್ಟೇ ಅಲ್ಲದೆ, ತನ್ನ ಪರಿಚಿತ ವಲಯವಾದ ಆರ್ಥಿಕ ಕ್ಷೇತ್ರದಲ್ಲಿ ಬ್ರಿಟನ್ನಿಗೆದುರಾಗಿ ನಿಲುವು ತೆಗೆದುಕೊಂಡು ಲೇಖನವನ್ನು ಬರೆಯುತ್ತಾರೆ. ಇಂಡಿಯನ್‌ ಸೆಕ್ಯೂರಿಟಿಗಳಲ್ಲಿ ಹಣ ತೊಡಗಿಸಿಕೊಳ್ಳುವುದು ಅಪಾಯಕಾರಿ ಎಂದು ಹೇಳುತ್ತಾ ಬಂಡವಾಳಗಾರರನ್ನು ಅದರಿಂದ ಹಿಂದೇಟು ಹಾಕಲು ಪ್ರೇರೇಪಿಸುವ ರೀತಿಯಲ್ಲಿತ್ತು ಆ ಲೇಖನ. ಇದು ಬ್ರಿಟಿಷ್‌ ಅಧಿಕಾರಿಗಳನ್ನು ಇನ್ನಿಲ್ಲದಂತೆ ಸಿಟ್ಟಿಗೇಳಿಸಿತು. ಅದರೊಂದಿಗೆ ಭಾರತದಲ್ಲಿ ವಿತರಣೆಗೆಂದು ಕಳುಹಿಸಿದ್ದ <em>ಇಂಡಿಯನ್‌ ಸೋಶ್ಯಲಜಿಸ್ಟ್‌</em> ನ ಆ ಸಂಚಿಕೆಯನ್ನು ಮುಟ್ಟುಗೋಲು ಹಾಕಲಾಯಿತು.</p>



<p>ಇಂಗ್ಲೆಂಡಿನಲ್ಲಿ ಉಳಿಯುವುದು ಅಸಾಧ್ಯವೆಂದರಿತ ಶ್ಯಾಂಜಿ ಕೃಷ್ಣವರ್ಮ ೧೯೦೭ರ ಸೆಪ್ಟಂಬರಿನಲ್ಲಿ ಇಂಗ್ಲೆಂಡ್‌ ತೊರೆದು ಪ್ಯಾರಿಸ್‌ಗೆ ಹೋಗುತ್ತಾರೆ. ಮೇಡಂ ಬಿಕ್ಕಾಜಿ ಕಾಮ ಅದಕ್ಕೂ ಮೊದಲೇ ಪ್ಯಾರಿಸ್‌ ತಲುಪಿರುತ್ತಾರೆ. ೧೯೦೭ರ ಅಕ್ಟೋಬರ್‌ ಸಂಚಿಕೆಯಿಂದ <em>ಇಂಡಿಯನ್‌ ಸೋಶ್ಯಲಜಿಸ್ಟ್</em>‌ ಪ್ಯಾರಿಸಿನಿಂದ ಪ್ರಕಟವಾಗತೊಡಗಿತು.</p>



<p>ಹಲವು ಯುರೋಪಿಯನ್‌ ದೇಶಗಳ ಕ್ರಾಂತಿಕಾರಿಗಳೊಂದಿಗೆ ಇದ್ದ ಸಂಪರ್ಕದ ಕಾರಣದಿಂದ ಭಾರತದ ಬಂಡಾಯಗಾರರಿಗೆ ೧೯೦೭ ಆಗಸ್ಟ್‌ ೧೮ರಿಂದ ೨೪ರವರೆಗೆ ಜರ್ಮಿನಿಯ ಸ್ಟುಟ್‌ಗರ್ಟಿನಲ್ಲಿ ನಡೆದ ಅಂತರಾಷ್ಟ್ರೀಯ ಸೋಶ್ಯಲಿಸ್ಟ್‌ ಕಾಂಗ್ರೆಸ್‌ನಲ್ಲಿ ಭಾಗವಹಿಸಲು ಅವಕಾಶ ಲಭಿಸಿತ್ತು. ಮೇಡಂ ಬಿಕ್ಕಾಜಿ ಕಾಮ ಮತ್ತು ಸರ್ದಾರ್‌ ಸಿಂಗ್‌ ರಾಣ ಅದರಲ್ಲಿ ಭಾಗವಹಿಸಿದ್ದರು. ಇವರಿಬ್ಬರು ಬ್ರಾಹ್ಮಣಿಸಮ್ಮಿನ ಪ್ರವರ್ತಕರಾಗಿರಲಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕು. ಒಬ್ಬರು ಪಾರ್ಸಿ ಇನ್ನೊಬ್ಬರು ಸಿಖ್.‌ ಮೇಡಂ ಬಿಕ್ಕಾಜಿ ಕಾಮ ಅಲ್ಲಿ ತಾನು ತಯಾರಿಸಿದ್ದ ಭಾರತದ ಧ್ವಜವನ್ನು ಅನಾವರಣಗೊಳಿಸುತ್ತಾರೆ. ಬ್ರಿಟಿಷ್‌ ರಾಜಕೀಯ ನಾಯಕನಾಗಿದ್ದ ರಾಮ್ಸೇ ಮ್ಯಾಕ್‌ಡೊನಾಲ್ಡ್‌ ಅದನ್ನು ಪ್ರತಿಭಟಿಸಿ ವೇದಿಕೆ ತೊರೆಯುತ್ತಾನೆ.</p>



<p>ಅಂದು ಮೇಡಂ ಬಿಕ್ಕಾಜಿ ಕಾಮ ಅಲ್ಲಿ ನಡೆಸಿದ ಭಾಷಣ ತಿಲಕ್ ಅಥವಾ ಸಾವರ್ಕರ್ ಚಿಂತನೆಗಳನ್ನು ಬೆಂಬಲಿಸಿಕೊಂಡದ್ದಾಗಿರಲಿಲ್ಲ. ಬದಲಿಗೆ ಭಾರತೀಯ ನಾಗರೀಕರಿಗೆ ಸ್ವಯಂ ಆಡಳಿತ ಸಿಗಲು ಎಲ್ಲ ದೇಶಗಳ ಬೆಂಬಲವನ್ನು ಕೋರಿದ್ದರು. ಅದರ ನಂತರ ಅಮೆರಿಕಾ ಪ್ರವಾಸದಲ್ಲೂ ಆಕೆ ಎತ್ತಿ ಹಿಡಿದ ಮಾತುಗಳು ಇವೇ ಆಗಿದ್ದವು.</p>



<p>ʼನಾವು ಶಾಂತಿಯ ಪ್ರತಿಪಾದಕರು. ನಾವು ಯಾವ ರೀತಿಯ ರಕ್ತಸಿಕ್ತ ಹಿಂಸಾತ್ಮಕ ಕ್ರಾಂತಿಯನ್ನೂ ಬಯಸುವುದಿಲ್ಲ. ಆದರೆ, ಸರ್ವಾಧಿಕಾರವನ್ನು ಕಿತ್ತೆಸೆಯಲು ಜನರಿಗೆ ಇರುವ ಹಕ್ಕಿನ ಬಗ್ಗೆ ಅವರನ್ನು ಜಾಗೃತಗೊಳಿಸುತ್ತೇವೆ.ʼ</p>



<p>ಆದರೆ, ಸಾವರ್ಕರ್‌ ಮತ್ತು ಸಂಗಡಿಗರು ಆಯುಧ ಸಂಗ್ರಹದಲ್ಲಿಯೇ ಮುಳುಗಿದ್ದರು. ರಷ್ಯಾ, ಚೀನಾ, ಐರ್ಲೆಂಡ್, ಈಜಿಪ್ಟ್‌ ಮೊದಲಾದ ದೇಶಗಳ ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಸಾಧಿಸುವಾಗ ಅದು ಯಾವ ರೀತಿಯಲ್ಲೂ ಸೈದ್ಧಾಂತಿಕ ಹೊಂದಾಣಿಕೆಯಿಂದಾಗಿರಲಿಲ್ಲ. ಸಾವರ್ಕರ್‌ ಮತ್ತು ವಿ.ವಿ.ಎಸ್.‌ ಅಯ್ಯರ್‌ ಟರ್ಕಿಯ ಮುಸ್ತಫಾ ಕಮಾಲ್‌ನನ್ನು ಭೇಟಿಯಾಗಿದ್ದರು ಎಂದು ಹೇಳಲಾಗುತ್ತದೆ. ಹೇಮಚಂದ್ರ ದಾಸ್‌ ಮತ್ತು ಸೇನಾಪತಿ ಬಾಪುಟ್‌ರನ್ನು ಬಾಂಬ್‌ ತಯಾರಿಸುವ ಮ್ಯಾನುವೆಲ್‌ ತರಲೆಂದು ಸಾವರ್ಕರ್‌ ಪ್ಯಾರಿಸ್‌ಗೆ ಕಳುಹಿಸಿದ್ದ. ರಷ್ಯನ್‌ ಭಾಷೆಯ ಬಾಂಬ್‌ ಮ್ಯಾನುವೆಲ್‌ ಅನ್ನು ಅವರು ಅಲ್ಲಿಂದ ತಂದಿದ್ದರು. ನಂತರ ಅದನ್ನು ಇಂಗ್ಲೀಷಿಗೆ ಅನುವಾದ ಮಾಡಿ ಭಾರತಕ್ಕೆ ಕಳುಹಿಸಿ ಕೊಡಲಾಗಿತ್ತು.</p>



<p>ಇದರ ನಂತರವೇ ನಾವು ಹಿಂದೆ ಚರ್ಚಿಸಿದ ಮುಜಾಫರ್‌ ಪುರದ ಬಾಂಬ್‌ ದಾಳಿ ನಡೆಯುವುದು. ಖುದಿರಾಂ ಬೋಸ್‌ ಮತ್ತು ಪ್ರಫುಲ್ಲ ಚಕ್ರವರ್ತಿ ಎಂಬ ಪ್ರಫುಲ್ಲ ಚಕ್ಕಿ ಕಲ್ಕತ್ತಾದ ಮ್ಯಾಜಿಸ್ಟ್ರೇಟ್‌ ಆಗಿದ್ದ ಡಗ್ಲಾಸ್‌ ಕಿಂಗ್‌ ಫೋರ್ಡ್‌ನ ವಾಹನವೆಂದು ಭಾವಿಸಿ ಬೇರೆಯೊಂದು ವಾಹನದ ಮೇಲೆ ಬಾಂಬನ್ನು ಎಸೆಯುತ್ತಾರೆ. ಅದರಲ್ಲಿ ಇಬ್ಬರು ಯುವತಿಯರು ಸಾವಿಗೀಡಾಗುತ್ತಾರೆ. ಪ್ರಫುಲ್ಲ ಚಕ್ಕಿ ನಂತರ ಆತ್ಮಹತ್ಯೆ ಮಾಡಿಕೊಂಡ. ಖುದಿರಾಂ ಬೋಸ್‌ನನ್ನು ವಿಚಾರಣೆಯ ನಂತರ ಗಲ್ಲಿಗೇರಿಸಲಾಯಿತು. ಈ ಘಟನೆಯ ಸಂಬಂಧ ತಿಲಕರಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಮಂಡಾಲೆ ಜೈಲಿಗೆ ಹಾಕಲಾಯಿತು. ಇಂಡಿಯಾ ಹೌಸ್‌ ಪೊಲೀಸರ ಕಣ್ಗಾವಲಿಗೆ ಒಳಪಟ್ಟಿತು.</p>



<p>ಇದರ ನಡುವೆ ಸಾವರ್ಕರ್‌ ಇಪ್ಪತ್ತು ಅಟೋಮ್ಯಾಟಿಕ್‌ ಬ್ರೌನಿಂಗ್‌ ಪಿಸ್ತೂಲುಗಳನ್ನು ಏಜೆಂಟರ ಮುಖಾಂತರ ಖರೀದಿಸಿ ಭಾರತಕ್ಕೆ ಕಳಿಸಿಕೊಡುತ್ತಾರೆ. ಇಂಡಿಯಾ ಹೌಸಿನ ಅಡುಗೆಯವನಾಗಿದ್ದ ಚತುರ್ಭುಜ್‌ ಅಮೀನ್‌ ೧೯೦೯ ಫೆಬ್ರವರಿ ೧೫ರಂದು ಅವನ್ನು ಭಾರತಕ್ಕೆ ತಲುಪಿಸಲು ಯಾತ್ರೆ ಹೊರಟಿದ್ದ. ಮಾರ್ಚ್‌ ೬ರಂದು ಅಮೀನ್‌ ಅಧಿಕಾರಿಗಳ ಕಣ್ಣು ತಪ್ಪಿಸಿ ಆ ಆಯುಧಗಳನ್ನು ಭಾರತದ <em>ಅಭಿನವ್‌ ಭಾರತ್</em>‌ ಕಾರ್ಯಕರ್ತರಿಗೆ ಹಸ್ತಾಂತರಿಸಿ ಮರಳುತ್ತಾನೆ.</p>



<p>ಬಾಬುರಾವ್‌ ಇದನ್ನು ಬೇರೆಲ್ಲೋ ಹೇಳಿಕೊಂಡ ಪರಿಣಾಮ ೧೯೦೯ ಫೆಬ್ರವರಿ ೨೮ರಂದು ಪೊಲೀಸ್‌ ಕಸ್ಟಡಿಗೆ ಒಳಗಾಗುತ್ತಾನೆ. ಅದರ ಭಾಗವಾಗಿ ಆತನ ಮನೆಯಲ್ಲಿ ನಡೆದ ತಪಾಸಣೆಯಲ್ಲಿ ಸಾವರ್ಕರ್‌ ಮತ್ತು ಸಂಗಡಿಗರು ಭಾರತಕ್ಕೆ ಕಳುಹಿಸಿದ್ದ ಬಾಂಬ್‌ ಮ್ಯಾನುವೆಲ್‌ ದೊರೆಯುತ್ತದೆ. ಮುಜಾಫರ್‌ಪುರ ಬಾಂಬ್‌ ದಾಳಿಯ ಆರೋಪಿಗಳಿಂದ ಇದೇ ಬಾಂಬ್‌ ಮ್ಯಾನುವೆಲ್‌ನ ಪ್ರತಿಗಳು ದೊರೆತಿದ್ದವು.</p>



<p>ಬಾಬುರಾವನ ವಿಚಾರಣೆ ನಾಸಿಕ್‌ ಜಿಲ್ಲಾ ಕಲೆಕ್ಟರ್ ಆಗಿದ್ದ ಆರ್ಥರ್‌ ಮೇಸನ್‌ ಟಿಪ್ಸ್‌ ಜಾಕ್ಸನ್‌ ಎಂಬ ವ್ಯಕ್ತಿಯ ಸುಮ್ಮುಖದಲ್ಲಿ ನಡೆದಿತ್ತು. ಎಂ.ಎಂ.ಟಿ. ಜಾಕ್ಸನ್‌ ಅದಾಗಲೇ ಜನರ ಪ್ರೀತಿ ಗಳಿಸಿದ್ದ ಕಲೆಕ್ಟರ್ ಆಗಿದ್ದ. ‌೧೯೦೯ ಜೂನ್‌ ೮ರಂದು ಜಸ್ಟಿಸ್‌ ಬಿ.ಸಿ.ಕೆನಡಿ ಬಾಬುರಾವ್‌ಗೆ ಜೀವಪರ್ಯಂತ ಜೈಲು ಶಿಕ್ಷೆ ವಿಧಿಸಿ ಅಂಡಮಾನಿನ ಸೆಲ್ಯುಲಾರ್‌ ಜೈಲಿಗೆ ಕಳುಹಿಸಲು ಆದೇಶಿಸುತ್ತಾನೆ. ಕಾಲಾಪಾನಿ ಎಂಬ ಹೆಸರಿನಲ್ಲಿ ಕುಪ್ರಸಿದ್ದವಾಗಿದ್ದ ಅಂಡಮಾನಿನ ಜೈಲುವಾಸ ಅತ್ಯಂತ ಕಠಿಣವೂ ಕ್ರೂರವೂ ಆಗಿತ್ತು. ೧೯೦೯ ನವೆಂಬರ್‌ ೨೧ರಂದು ಎಸ್.‌ಎಸ್‌. ಮಹಾರಾಜ ಎಂಬ ಹಡಗಿನಲ್ಲಿ ಬಾಬುರಾವ್‌ನನ್ನು ಅಂಡಮಾನಿಗೆ ಕರೆದುಕೊಂಡು ಹೋಗಲಾಯಿತು.</p>



<p>ಅದು ಇನ್ನೊಂದು ದುರಭಿಮಾನ ಕೊಲೆಗೆ ದಾರಿ ಮಾಡಿಕೊಟ್ಟಿತು. ಬಾಬುರಾವ್‌ನ ಅರೆಸ್ಟ್‌ ಈ ಕೊಲೆಗೆ ಮೊದಲ ಕಾರಣ ಆಗಿತ್ತು. ಎರಡನೇ ಕಾರಣ ಬ್ಯಾರಿಸ್ಟರ್‌ ಆಗಿ ಬಾರಲ್ಲಿ ರಿಜಿಸ್ಟರ್‌ ಮಾಡಲು ಸಾವರ್ಕರ್‌ಗೆ ಅವಕಾಶ ನೀಡಿರಲಿಲ್ಲ. ಇವೆರಡಕ್ಕೂ ಪ್ರತಿಕಾರ ತೀರಿಸಲು ಸಾವರ್ಕರ್‌ ತೀರ್ಮಾನಿಸುತ್ತಾರೆ. ಇದೊಂದು ರಾಜಕೀಯ ತೀರ್ಮಾನ ಎಂಬುದಕ್ಕಿಂತ ತನ್ನ ಮತ್ತು ಕುಟುಂಬದ ಮೇಲೆ ಬ್ರಿಟಿಷರು ನಡೆಸಿದ ಕ್ರೌರ್ಯಕ್ಕೆ ಅದಕ್ಕಿಂತಲೂ ದೊಡ್ಡದಾದ ತಿರುಗೇಟು ನೀಡುವ ಯೋಚನೆಯೇ ಆಗಿತ್ತು. ಸಾವರ್ಕರ್‌ ತನ್ನ ಬದುಕಿನುದ್ದಕ್ಕೂ ಉಳಿದವರನ್ನು ಬಲಿಕೊಟ್ಟು ತನ್ನನ್ನು ಸುರಕ್ಷಿತವಾಗಿಡುವ ಕೆಲಸವನ್ನೇ ಮಾಡಿದ್ದರು. ಅದು ಶುರುವಾದದ್ದು ೧೯೦೯ ಜುಲೈ ೧ರಂದು. ನಾವು ಆಗಲೇ ಗಮನಿಸಿದ ಮದನ್‌ಲಾಲ್‌ ಡಿಂಗ್ರ ಎಂಬ ಪಂಜಾಬಿ ಯುವಕ ಅದರ ಮೊದಲ ಬಲಿಯಾಗಿದ್ದ.</p>



<p>ಅಂದು ನ್ಯಾಷನಲ್‌ ಇಂಡಿಯನ್‌ ಅಸೋಸಿಯೇಷನ್ನಿನ ಸತ್ಕಾರ ನಡೆಯುವ ದಿನ. ಭಾರತೀಯರ ಮತ್ತು ಬ್ರಿಟಿಷರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಅಂತಹ ಪಾರ್ಟಿಗಳು ಆ ಕಾಲದಲ್ಲಿ ಲಂಡನ್ನಿನಲ್ಲಿ ನಡೆಯುವುದು ಸಾಮಾನ್ಯವಾಗಿತ್ತು. ಲಂಡನ್ನಿನ ಸೌತ್‌ ಕೆನ್ಸಿಂಗ್ಟನ್ನಿನ ಜಹಾಂಗೀರ್‌ ಹಾಲ್‌ನಲ್ಲಿ ಈ ಸಮ್ಮಿಲನ ನಡೆದಿತ್ತು. ಅಲ್ಲಿಗೆ ಸುಮಾರು ಒಂಭತ್ತೂವರೆ ಹೊತ್ತಿಗೆ ಮದನ್‌ಲಾಲ್ ಡಿಂಗ್ರ ಬರುತ್ತಾನೆ. ನ್ಯಾಷನಲ್‌ ಇಂಡಿಯನ್‌ ಅಸೋಸಿಯೇಷನ್ನಿನ ಸೆಕ್ರೆಟರಿಯಾಗಿದ್ದ ಮಿಸ್‌ ಬೆಕ್‌ ನಂತರದ ದಿನಗಳಲ್ಲಿ ಆತ ಬಂದಿದ್ದರ ಕುರಿತು ನೆನಪಿಸಿಕೊಂಡಿದ್ದಳು.‌ ಜೊತೆಗೆ ಆತನ ಜೊತೆ ನಡೆಸಿದ ಉಭಯಕುಶಲೋಪರಿಯನ್ನೂ. ತನ್ನ ಇಂಜಿನಿಯರಿಂಗ್‌ ಡಿಪ್ಲೋಮಾ ಮುಗಿಯಿತೆಂದೂ ಇನ್ಸ್ಟಿಟ್ಯೂಟ್‌ ಆಫ್‌ ಸಿವಿಲ್‌ ಇಂಜಿನಿಯರ್ಸಲ್ಲಿ ಅಸೋಸಿಯೇಟ್‌ ಮೆಂಬರ್‌ ಆಗಲು ಬಯಸುತ್ತಿದ್ದೇನೆಂದೂ ಅದಕ್ಕೆ ಬೇಕಾದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆಂದೂ ಆ ಪಂಜಾಬಿ ಯುವಕ ಹೇಳಿದ್ದ. ರಾತ್ರಿ ಹನ್ನೊಂದು ಗಂಟೆಯ ಹೊತ್ತಿಗೆ ಸರ್‌ ಕರ್ಜನ್‌ ವಿಲ್ಲಿ ಅಲ್ಲಿಗೆ ಬಂದಿದ್ದ.</p>



<p>ಸರ್‌ ವಿಲಿಯಂ ಕರ್ಜನ್‌ ವಿಲ್ಲಿ ಭೂಸೇನೆಯಲ್ಲಿ ಆಫೀಸರ್‌ ಆಗಿ ತನ್ನ ವೃತ್ತಿಜೀವನ ಆರಂಭಿಸಿದ್ದ. ನಂತರ ಲೆಫ್ಟಿನೆಂಟ್‌ ಕರ್ನಲ್‌ ಆಗಿ ಬಡ್ತಿ ಹೊಂದುತ್ತಾನೆ. ಭಾರತ ಮತ್ತು ನೇಪಾಳದಲ್ಲಿ ಸೇವೆ ಸಲ್ಲಿಸುತ್ತಾನೆ. ಭಾರತೀಯ ಕಾರ್ಯಗಳ ಕಾರ್ಯದರ್ಶಿಯಾಗಿ ಲಂಡನ್ನಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಾರ್ಡ್‌ ಹ್ಯಾಮಿಲ್ಟನ್‌ಗೆ ಸಹಾಯಕನಾಗಿ ವಿಲ್ಲಿ ಕರ್ತವ್ಯ ನಿರ್ವಹಿಸುತಿದ್ದ. ಇಂಗ್ಲೆಂಡಿನಲ್ಲಿರುವ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸೌಹಾರ್ದತೆ ಬೆಳೆಸಿಕೊಂಡಿದ್ದ ಕೆಲವೇ ಕೆಲವು ಬ್ರಿಟಿಷ್‌ ಅಧಿಕಾರಿಗಳಲ್ಲಿ ಒಬ್ಬನಾಗಿದ್ದ. ವಿನಾಯಕ್‌ ದಾಮೋದರ್‌ ಸಾವರ್ಕರ್ ಲಂಡನ್‌ ತಲುಪಿದ ಶುರುವಿನಲ್ಲಿ ಬ್ರಿಟಿಷ್‌ ಪಾರ್ಲಿಮೆಂಟಿನ ಬಜೆಟ್‌ ಮಂಡನೆಯನ್ನು ಕಾಣಬೇಕೆಂದು ಬಯಸಿದಾಗ, ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟವನು ಇದೇ ವಿಲ್ಲಿಯಾಗಿದ್ದ.</p>



<p>ಅಷ್ಟೇ ಅಲ್ಲ, ಮದನ್‌ ಲಾಲ್‌ ಡಿಂಗ್ರನ ಅಣ್ಣ ಕೆ.ಎಲ್‌. ಡಿಂಗ್ರ, ತನ್ನ ತಮ್ಮ ಇಂಗ್ಲೆಂಡಿನಲ್ಲಿದ್ದಾನೆಂದೂ ಅವನನ್ನು ಚೂರು ನೋಡಿಕೊಳ್ಳಿ ಎಂದೂ ಕೋರಿದ್ದನ್ನು ಪರಿಗಣಿಸಿ ಮದನ್‌ ಲಾಲ್‌ ಡಿಂಗ್ರನಿಗೆ ಪತ್ರವನ್ನೂ ಬರೆದಿದ್ದ. ಆ ಕಾರಣದಿಂದಲೂ ಅಂದು ಆ ಸತ್ಕಾರಕೂಟದಲ್ಲಿ ಡಿಂಗ್ರನ ಜೊತೆ ದೀರ್ಘ ಹೊತ್ತು ಮಾತಕತೆ ನಡೆಸಿದ್ದ. ಆ ಮಾತುಕತೆಯ ಕೊನೆಗೆ ಸಣ್ಣ ಕೋಲ್ಟ್‌ ಪಿಸ್ಟಲ್‌ ಬಳಸಿ ವಿಲ್ಲಿಯ ಕಣ್ಣಿಗೆ ಗುಂಡು ಹೊಡೆದ ಡಿಂಗ್ರನನ್ನು ಪಾರ್ಟಿಯಲ್ಲಿ ಭಾಗವಹಿಸಿದ್ದವರು ಕಾಣುತ್ತಾರೆ. ಡಿಂಗ್ರ ನಾಲ್ಕು ಗುಂಡುಗಳನ್ನು ವಿಲ್ಲಿಯ ಮೆದುಳಿಗೆ ಹೊಡೆದಿದ್ದ. ವಿಲ್ಲಿ ಅಲ್ಲಿಯೇ ಕುಸಿದು ಬಿದ್ದ. ಅಲ್ಲಿಯೇ ಮರಣ ಹೊಂದಿದ.</p>



<p>ಕೊಲೆಗಾರನನ್ನು ಹಿಡಿಯಲು ಮುಂದೆ ಬಂದ ಕವಾಸ್‌ ಲಾಲ್‌ ಚಾಚ ಎಂಬ ಪಾರ್ಸಿ ಡಾಕ್ಟರ್‌ ಮೇಲೆಯೂ ಡಿಂಗ್ರ ಗುಂಡಿನ ದಾಳಿ ಮಾಡಿದ. ಆತನೂ ನಂತರ ಮರಣ ಹೊಂದಿದ.</p>



<p>ನಂತರದ ಕಾಲದಲ್ಲಿ ತನ್ನ ಆತ್ಮಕಥೆ ಬರೆಯಲು ಬಂದಿದ್ದ ಧನಂಜಯ್‌ ಕೀರ್‌ ಜೊತೆಗೆ ಸಾವರ್ಕರ್‌ ನೆನಪಿಸಿಕೊಂಡಿದ್ದರು. ʼಈ ಬಾರಿ ನೀನು ಸೋತರೆ, ಮತ್ತೆ ನಿನ್ನ ಮುಖವನ್ನು ನನಗೆ ತೋರಿಸಬೇಡ.ʼ ಡಿಂಗ್ರ ತನ್ನ ನಾಯಕನ ಆಜ್ಞೆಯನ್ನು ನಡೆಸಿಕೊಡಲು ಯಾವ ಹಂತಕ್ಕೂ ಹೋಗಲು ವಿಧಿಸಲ್ಪಟ್ಟಿದ್ದ ಅನುಯಾಯಿಯಾಗಿದ್ದ. ಸಾವರ್ಕರ್ ಜೀವನ ಪೂರ್ತಿ ಇಂತಹ ಅರ್ಪಣಾ ಮನೋಭಾವದ ಅನುಯಾಯಿಗಳಿದ್ದರು. ಸಾವರ್ಕರ್ ಮಾತ್ರ ಅವರನ್ನೆಲ್ಲ ಚೆನ್ನಾಗಿಯೇ ಬಳಸಿಕೊಂಡರು. ಜೀವ ತೆಗೆಯಲೂ ಜೀವ ಕೊಡಲೂ. ದಸ್ತೋವೆಸ್ಕಿಯ ದಿ ಡೆಮನ್ಸ್‌ ಕಾದಂಬರಿಯ ಪೀಟರನ ಹಾಗೆ.</p>



<p>ಕರ್ಜನ್‌ ವಿಲ್ಲಿಯ ಕೊಲೆ ಇಂಗ್ಲೆಂಡನ್ನು ಅಲ್ಲೋಲಕಲ್ಲೋಲಗೊಳಿಸಿತು. ಸಾವರ್ಕರ್ ನೇತೃತ್ವದ ಭಯೋತ್ಪಾದನಾ ಕೃತ್ಯಗಳನ್ನು ಸಮರ್ಥಿಸುವವರನ್ನು ಬಿಟ್ಟು, ಉಳಿದ ಬಹುತೇಕ ಭಾರತೀಯರು ಈ ಕೊಲೆಯನ್ನು ಖಂಡಿಸಿದರು. ಡಿಂಗ್ರನ ತಂದೆ (ಡಾ. ದತ್ತ ಡಿಂಗ್ರ) ಮತ್ತು ಸಹೋದರರು (ಭಜನ್‌ ಲಾಲ್‌ ಡಿಂಗ್ರ, ಬಿಹಾರಿ ಲಾಲ್‌ ಡಿಂಗ್ರ) ಈ ಕೊಲೆಯನ್ನು ಖಂಡಿಸಿದರೆಂದು ಮಾತ್ರವಲ್ಲ ತಮ್ಮ ಮಗ/ಸಹೋದರನನ್ನು ಕೈ ಬಿಟ್ಟರು. ಸುರೇಂದ್ರನಾಥ ಬ್ಯಾನರ್ಜಿ, ಗೋಪಾಲಕೃಷ್ಣ ಗೋಖಲೆ ಮೊದಲಾದವರೂ ಡಿಂಗ್ರನ ಕೃತ್ಯವನ್ನು ಖಂಡಿಸಿದರು. ಆದರೆ, ಮೇಡಂ ಕಾಮಾ ಅವರ <em>ಬಂದೇಮಾತರಂ </em>ಮತ್ತು<em> ತಲ್ವಾರ್‌ </em>ಪತ್ರಿಕೆಗಳು ಡಿಂಗ್ರನನ್ನು ಬೆಂಬಲಿಸಿ ಬರೆದವು. ಗೋಖಲೆಯ ಜಾತ್ಯಾತೀತ ಆಧುನಿಕ ಚಿಂತನೆಯನ್ನು ಅಪಹಾಸ್ಯ ಮಾಡಲು<em> ಬಂದೇಮಾತರಂ</em> ಈ ಸಂದರ್ಭವನ್ನು ಬಳಸಿಕೊಂಡಿತು. ʼಪ್ರಜ್ಞೆಯೂ ಲಜ್ಜೆಯೂ ಇಲ್ಲದ ಹೇಡಿʼ ಎಂದು ಗೋಖಲೆಯನ್ನು ಛೇಡಿಸಲಾಯಿತು. ಯುವಜನರ ಶೌರ್ಯವನ್ನು ಪರಿಹಾಸ ಮಾಡುವ ಗೋಖಲೆ ಮತ್ತು ಸಹಚರರನ್ನು ʼನಕಲಿ ದೇಶಭಕ್ತರುʼ ಎಂದು ಮುದ್ರೆಯೊತ್ತಲಾಯಿತು. ಗೋಖಲೆ ಮತ್ತು ಸಹಚರರ ಮಂದವಾದ ನುಚ್ಚು ನೂರಾಗುತ್ತಿರುವ ಸಿದ್ಧಾಂತವೆಂದು ಹೇಳಿಕೊಂಡರು. ಒಂದು ಭವನ ಅದಕ್ಕೆದುರಾಗಿ ಒಡೆಯತೊಡಗಿದರೆ, ಮತ್ತದು ಉಳಿಯುವುದಿಲ್ಲ. ಈಗಾಗಲೇ ಈ ಮಂದಗಾಮಿಗಳು ಒಗ್ಗಟ್ಟಿಲ್ಲದಿರುವಿಕೆ ಮತ್ತು ಆಂತರಿಕ ಒಡಕಿನ ಎಲ್ಲ ಲಕ್ಷಣಗಳನ್ನು ತೋರಿಸುತ್ತಿದ್ದಾರೆ. ಗೋಖಲೆ ಜನರನ್ನು ತನ್ನ ಸುಂದರ ಭಾಷಣಗಳ ಮೂಲಕ ರಂಜಿಸುತ್ತಿದ್ದಾರೆ. ಕೆಡುಕು ತುಂಬಿದ ಮೂರ್ಖತನದ ಮೇಲೆ ಏರುದನಿಯ ಭಾಷಣಗಳನ್ನು ಹೊದೆಸುವ ಕಲೆಯಲ್ಲಿ ಅವರು ಅಗ್ರಗಣ್ಯರು. ಇತ್ತ ಸುರೇಂದ್ರನಾಥ ಬ್ಯಾನರ್ಜಿಯವರಾದರೋ, ಬ್ರಿಟಿಷರ ಬೂಟು ನೆಕ್ಕುವ ಮೂಲಕ ಎಲ್ಲರ ಮುಂದೆ ತನ್ನನ್ನು ತಾನೇ ನಗೆಪಾಟಲಿಗೀಡು ಮಾಡುತ್ತಿದ್ದಾರೆ.ʼ ತಿಲಕರ ಮತ್ತು ನವಸಂಪ್ರದಾಯವಾದಿ ಬ್ರಾಹ್ಮಣಿಸಮ್ಮಿನ ವಿರೋಧಿಗಳ ಮೇಲೆ <em>ಬಂದೇಮಾತರಂ</em> ಬೆಂಕಿ ಕಾರಿತು.</p>



<p>ಅದೇ ಹೊತ್ತು ವ್ಯಾಲೆಂಟೈನ್‌ ಚಿರೋಲ್‌ ಎತ್ತಿ ತೋರಿಸಿದ ʼಪ್ರಾಯೋಗಿಕ ಚಿಂತನೆಯ ಬುದ್ಧಿ ಇರುವ, ಮೌನವಾಗಿಯೇ ಕೆಲಸಗಳನ್ನು ಸಾಧಿಸುವʼ ಚಿತ್ಪಾವನ ಬ್ರಾಹ್ಮಣನ ಕೌಶಲ್ಯವನ್ನು ಸಾವರ್ಕರ್‌ ಒಳಗೆ ಕಾಣಲು ಜೊತೆಗೊದ್ದ ಕೆಲವರಾದರೂ ಬಯಸಿದ್ದರೆಂದು ಕಾಣುತ್ತದೆ. ಬಾಬಾರಾವ್‌ನನ್ನು ಗಡೀಪಾರು ಶಿಕ್ಷೆಗೆ ಗುರಿಪಡಿಸಿದ ದಿನವೇ (ಜೂನ್‌ ೮) ಬಂಗಾಲ ವಿಭಜನೆಗೆ ಕಾರಣನಾಗಿದ್ದ ಲಾರ್ಡ್‌ ಕರ್ಜನ್‌ನನ್ನು ಕೊಲ್ಲಲು ಡಿಂಗ್ರನಿಗೆ ವಹಿಸಿದ್ದ. ಆತ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ನಡೆಯುತ್ತಿದ್ದ ಕಲೋನಿಯಲ್‌ ಇನ್ಸ್ಟಿಟೂಟಿಗೆ ಆಯುಧದಾರಿ ಡಿಂಗ್ರ ಹೋದನಾದರೂ, ತಡವಾಗಿದ್ದರಿಂದ ಸಮ್ಮೇಳನದ ಸಭಾಂಗಣದ ಬಾಗಿಲುಗಳು ಮುಚ್ಚಿದ್ದವು. ಖಿನ್ನನಾಗಿ ಮರಳಿ ಬಂದ ಡಿಂಗ್ರನನ್ನು ಹುರಿದುಂಬಿಸಿ ತನ್ನ ಗುರಿ ಸಾಧಿಸಲೆಂದೇ, ಕರ್ಜನ್‌ ವಿಲ್ಲಿಯನ್ನು ಕೊಲ್ಲಲು ಹೊರಡುವಾಗ ʼಈ ಸಲ ಗುರಿ ಸಾಧಿಸದಿದ್ದರೆ ಮತ್ತೆ ನಿನ್ನ ಮುಖ ತೋರಿಸಬೇಡʼ ಎಂದು ಬರೀ ಇಪ್ಪತ್ತರ ಪ್ರಾಯ ತಲುಪಿದ್ದ ಯುವಕನ ಬಳಿ ಸಾವರ್ಕರ್‌ ಹೇಳುವುದು. ಅದರಂತೆ ಬಾಬಾರಾವ್‌ನ ತೀರ್ಪು ಬಂದು ಇಪ್ಪತ್ತಮೂರು ದಿನಗಳ ನಂತರ ಸಾವರ್ಕರನಿಗೋಸ್ಕರ, ಒಂದರ್ಥದಲ್ಲಿ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ವಿದೇಶದಲ್ಲಿ ನಡೆದ ದುರಭಿಮಾನ ಕೊಲೆಯ ಹೊಣೆಯನ್ನು ಡಿಂಗ್ರ ಹೊತ್ತುಕೊಳ್ಳುತ್ತಾನೆ.</p>



<p>ಕರ್ಜನ್‌ ವಿಲ್ಲಿ ತರಹದ ಅಷ್ಟೇನೂ ಪ್ರಮುಖನಲ್ಲದ, ಆದರೆ ಎಲ್ಲರ ಕೈಗೂ ಸಿಗುತ್ತಿದ್ದ ವ್ಯಕ್ತಿಯನ್ನು ಕೊಲೆಗೆ ಆಯ್ದುಕೊಂಡ ಬಗ್ಗೆ ಹಲವು ಕಾರಣಗಳನ್ನು ದಾಖಲಿಸಲಾಗಿದೆ. ಬಾಬಾರಾವ್‌ನ ಶಿಕ್ಷೆಗೆ ತಕ್ಷಣ ಪ್ರತಿಕಾರ ತೀರಸಬೇಕು ಎಂದು ಸಾವರ್ಕರ್‌ಗೆ ಇದ್ದ ತೀರಾ ವೈಯಕ್ತಿಕ ಇಚ್ಛೆಯೇ ಅವುಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಅದರ ಜೊತೆಗೆ ಇಂಡಿಯಾ ಹೌಸಿನಲ್ಲಿ ಉಂಟಾದ ವಿಭಾಗೀಯತೆ ಇನ್ನೊಂದು ಕಾರಣವೆಂದು ಸಾವರ್ಕರ್ ಆತ್ಮಕತೆ ಬರೆದ ವೈಭವ್‌ ಪುರಂದರೆ ಎತ್ತಿ ತೋರಿಸುತ್ತಾರೆ. ೫೦ ವಿದ್ಯಾರ್ಥಿಗಳಿಗೆ ವಾಸಿಸಲು ಬೇಕಾದ ವ್ಯವಸ್ಥೆಯಿದ್ದ ಹಾಸ್ಟೆಲ್‌ನಲ್ಲಿ ಬರೀ ಐದು ಜನರಷ್ಟೇ ಉಳಿದುಕೊಂಡಿದ್ದರು. ಬರೀ ಬಾಯಿ ಮಾತಲ್ಲದೆ ರಾಜಕೀಯವಾಗಿ ಏನೂ ನಡೆಯುವುದಿಲ್ಲವೆಂಬ ವಾಸ್ತವ ಹಲವು ವಿದ್ಯಾರ್ಥಿಗಳ ಅರಿವಿಗೆ ಬಂದಿತ್ತು. ಇದು ಸಾವರ್ಕರ್‌ಗೆ ತಲೆನೋವಾಗಿತ್ತು. ಮದನ್‌ ಲಾಲ್‌ ಡಿಂಗ್ರನಂತಹ ತನ್ನ ಪ್ರಭಾವಲಯದಲ್ಲಿ ಸಂಪೂರ್ಣವಾಗಿ ಬಿದ್ದಿರುವ ಒಬ್ಬನನ್ನು ರಾಜಕೀಯವಾಗಿ ಬಳಸಲು ಸಾವರ್ಕರ್‌ ತೀರ್ಮಾನಿಸುವುದು ಇದರಿಂದಲೇ ಆಗಿರಬಹುದೆಂದು ಅನುಮಾನಿಸಬಹುದು. ಧನಂಜಯ್‌ ಕೀರ್‌ ಬರೆದ ಸಾವರ್ಕರ್ ಆತ್ಮಕತೆಯಲ್ಲಿ ಒಂದು ಭಾಗ ಮದನ್‌ ಲಾಲ್‌ ಡಿಂಗ್ರನ ಮನಸ್ಥಿತಿಯನ್ನು ವಿವರಿಸುತ್ತದೆ. ಕರ್ಜನ್‌ ವಿಲ್ಲಿಯನ್ನು ಕೊಲ್ಲುವ ಕೆಲವು ದಿನಗಳ ಮುಂಚೆ ಡಿಂಗ್ರ ಶಹೀದ್‌ ಆಗಲು ಸಮಯವಾಯಿತೇ ಎಂದು ಸಾವರ್ಕರ್‌ ಬಳಿ ಕೇಳುತ್ತಾನೆ. ಅದಕ್ಕೆ ಸಾವರ್ಕರ್‌ ನೀಡಿದ ಉತ್ತರ ಹೀಗಿತ್ತು. ʼಒಬ್ಬ ವೀರ ತಾನು ಶಹೀದ್‌ ಆಗಲು ತಯಾರಾಗಿದ್ದೇನೆಂದು ತೀರ್ಮಾನಿಸಿದರೆ, ಶಹೀದ್‌ ಆಗುವ ಸಮಯ ಆಗಿದೆಯೆಂದೇ ಅರ್ಥ.ʼ</p>



<p>ಆದರೆ, ಡಿಂಗ್ರನ ಕೃತ್ಯ ಸಾವರ್ಕರ್‌ ಯೋಜಿಸಿದ್ದಕ್ಕಿಂತ ವಿಪರೀತವಾದ ಪ್ರತಿಕ್ರಿಯೆಯನ್ನು ಸೃಷ್ಠಿಸಿತ್ತು ಎಂದು ನೋಡಿದೆವು. ಕೆಲವೇ ಕೆಲವರನ್ನು ಬಿಟ್ಟು, ಬಹುತೇಕ ಭಾರತೀಯರು, ಡಿಂಗ್ರನ ಕುಟುಂಬಿಕರು ಸಹಿತ ಆ ಕೊಲೆಯನ್ನು ತೀವ್ರವಾಗಿ ಖಂಡಿಸಿದರು. ೧೯೦೯ ಜುಲೈ ೫ರಂದು ಭಾರತೀಯರು ಲಂಡನ್ನಿನ ಕಾಕ್‌ಸ್ಟನ್‌ ಹಾಲಲ್ಲಿ ಡಿಂಗ್ರನ ಕೃತ್ಯವನ್ನು ಖಂಡಿಸಲು ಸಭೆ ಸೇರಿದ್ದರು. ಅವರಲ್ಲಿ ಬಹುತೇಕರು ಬ್ರಿಟಿಷ್‌ ವಿರೋಧಿಗಳಾಗಿದ್ದರು. <em>ಮುಸ್ಲಿಂ ಲೀಗ್</em>‌ ನಾಯಕ ಅಗಖಾನ್, ಕಾಂಗ್ರೆಸ್‌ ನಾಯಕ ಸುರೇಂದ್ರನಾಥ್‌ ಬ್ಯಾನರ್ಜಿ, ತಿಲಕರ ಸಹವರ್ತಿಗಳಾಗಿದ್ದ ಬಿಪಿನ್‌ ಚಂದ್ರಪಾಲ್‌, ಖಪಾರ್ಡೇ ಮೊದಲಾದವರು ಆ ಸಭೆಯಲ್ಲಿ ಭಾಗವಹಿಸಿದರು. ಡಿಂಗ್ರನ ಸಹೋದರ ಕೂಡ ಆ ಸಭೆಯಲ್ಲಿದ್ದ. ಸುಖಾಸುಮ್ಮನೆ ಶಹೀದ್‌ಗಳನ್ನು ಸೃಷ್ಠಿಸಲಾಗುತ್ತಿದೆ ಎಂಬ ಆರೋಪವನ್ನು ತನ್ನ ತಲೆಯಿಂದ ತೊಳೆದುಕೊಳ್ಳಲು ಸಾವರ್ಕರ್‌ ಏನಾದರು ಮಾಡಲೇಬೇಕಾಗಿತ್ತು. ಹಾಗಾಗಿ ಆ ಸಭೆ ಐಕ್ಯಕಂಠದಿಂದ ಡಿಂಗ್ರನ ಕೃತ್ಯವನ್ನು ಖಂಡಿಸುತ್ತದೆ ಎಂದು ಘೋಷಿಸಿದಾಗ ಸಾವರ್ಕರ್‌ ಏನಾದರು ಮಾಡಲೇಬೇಕಾದ ಒತ್ತಡಕ್ಕೆ ಸಿಲುಕುತ್ತಾರೆ. ಆತ ಎದ್ದು ನಿಂತು ವಿರೋಧ ವ್ಯಕ್ತಪಡಿಸುತ್ತಾರೆ. ಸಭೆಯಲ್ಲಿದ್ದವರು ಕೋಪಗೊಂಡ ಆತನ ಮೇಲೆ ಹಲ್ಲೆಗೆ ಮುಂದಾದಾಗ ರಕ್ಷಣೆಗೆ ಬರುವುದು ವಿ.ವಿ.ಎಸ್‌. ಅಯ್ಯರ್‌. ಆತ ಪಿಸ್ತೂಲ್‌ ತೆಗೆದು ಸಭಿಕರ ಮೇಲೆ ದಾಳಿ ಮಾಡಲು ಮುಂದಾದಾಗ ಸಾವರ್ಕರ್‌ ತಡೆಯುತ್ತಾರೆ. ಅಷ್ಟು ದಿನಗಳ ಕಾಲವೂ ತಮ್ಮ ನಾಯಕರೆಂದು ಪರಿಗಣಿಸಿದ್ದ ಬಿಪಿನ್‌ ಚಂದ್ರಪಾಲ್‌ ಕೂಡ ಡಿಂಗ್ರನನ್ನು ಒಬ್ಬ ಹೇಡಿ ಕೊಲೆಗಾರ ಎಂದು ಕರೆದಾಗ ಅವರು ತೀರಾ ನಿರಾಸೆಗೊಂಡರು. ಸಾವರ್ಕರ್ ಶಿಷ್ಯನಾಗಿದ್ದ ಎಂ.ಪಿ.ಟಿ. ಆಚಾರ್ಯ ಬಿಪಿನ್‌ ಚಂದ್ರಪಾಲರ ಹಿಂದಿನ ಚಟುವಟಿಕೆಗಳ ಬಗ್ಗೆ ಗೌರವವಿದ್ದರೂ ಇನ್ನು ಮುಂದೆ ಬಹಿಷ್ಕರಿಸುತ್ತೇವೆ ಎಂದು <em>ಇಂಡಿಯನ್‌ ಸೋಶ್ಯಲಜಿಸ್ಟ್</em> ನಲ್ಲಿ ಬರೆದ ಪತ್ರದ ಮೂಲಕ ಸಾರಿದ.</p>



<p>ಈ ಪ್ರಯತ್ನದಲ್ಲಿ ಗುರಿ ಸಾಧಿಸದಿದ್ದರೆ ನಿನ್ನ ಮುಖ ತೋರಿಸಬೇಡ ಎಂದು ಹೇಳಿ ಕರ್ಜನ್‌ ವಿಲ್ಲಿಯನ್ನು ಕೊಲ್ಲಲು ಡಿಂಗ್ರನನ್ನು ಕಳುಹಿಸಿದ ಸಾವರ್ಕರ್‌ ಅವರ ಕುಟಿಲ ಮಾನಸಿಕತೆಯನ್ನು ತೋರಿಸುವ ಒಂದು ಘಟನೆಯೂ ಈ ಸಭೆಯಲ್ಲಿ ನಡೆಯಿತು. ಸತ್ತು ಬಿದ್ದಿದ್ದ ವಿಲ್ಲಿಯ ಮೇಲೆ ಆತನ ಹೆಂಡತಿ ಆರ್ತನಾದದೊಂದಿಗೆ ಬಂದು ಬಿದ್ದ ಘಟನೆಯನ್ನು ಒಬ್ಬ ಭಾರತೀಯ ವಿದ್ಯಾರ್ಥಿ ನಗುತ್ತಾ ವಿವರಿಸುತ್ತಿದ್ದನಂತೆ. ಆಗ ಸಾವರ್ಕರ್‌ ಹೀಗೆ ಹೇಳಿದರಂತೆ. ʼತನ್ನ ಗಂಡನ ಸಾವು ಕಂಡು ಆಕ್ರಂದನ ಮಾಡುತ್ತಿರುವ ಒಬ್ಬ ಹೆಣ್ಣನ್ನು ಅಪಹಾಸ್ಯ ಮಾಡುತ್ತಿರುವ ನಿನ್ನನ್ನು ನಾನು ನಂಬಿಕಸ್ಥನೆಂದು ಪರಿಗಣಿಸುವುದಿಲ್ಲ.ʼ ನಿರಂಜನ್‌ ಪಾಲ್‌ ಎಂಬ ಇಂಡಿಯಾ ಹೌಸಿನ ಇನ್ನೊಬ್ಬ ವಿದ್ಯಾರ್ಥಿ ಈ ಘಟನೆಯನ್ನು ಎತ್ತಿ ತೋರಿಸಿ ಸಾವರ್ಕರ್‌ ಒಳಗಿದ್ದ ಮನುಷ್ಯತ್ವವನ್ನು ಹೊಗಳುತ್ತಾನೆ. ಆತನೊಳಗಿನ ಕವಿಯನ್ನೂ ತತ್ವಜ್ಞಾನಿಯನ್ನೂ ಆತನೊಳಗೆ ತುಂಬಿ ತುಳುಕುತ್ತಿರುವ ಮನುಷ್ಯತ್ವವನ್ನೂ ತೋರಿಸುವ ಸಂದರ್ಭ ಅದಾಗಿತ್ತು ಎಂದು ನಿರಂಜನ್‌ ಪಾಲ್‌ ಹೇಳುತ್ತಾನೆ. ಕ್ರೂರ ಕೊಲೆಯ ನಂತರದ ಮನುಷ್ಯತ್ವ!</p>



<p>ಇತ್ತ ಭಾರತದಲ್ಲೂ ಕರ್ಜನ್‌ ವಿಲ್ಲಿಯ ಕೊಲೆಯ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದವು. ತಿಲಕರ ತೀವ್ರ ಅನುಯಾಯಿಯಾಗಿದ್ದ ಎನ್.‌ಸಿ. ಕೇಲ್ಕರ್‌ ಬೃಹತ್‌ ಪ್ರತಿಭಟನೆಯನ್ನು ದಾಖಲಿಸಿದರು. ಡಿಂಗ್ರನ ಕೃತ್ಯ ಒಂದು ವಿಷವೃಕ್ಷವನ್ನು ಬೊಟ್ಟು ಮಾಡುತ್ತಿದೆ, ಅದು ತೀರಾ ಅನಗತ್ಯ ಮೂಲೆಯಲ್ಲೂ ಚಿಗುರೊಡೆಯಲು ಬಿಡಬಾರದೆಂದು ಅವರು ಅಭಿಪ್ರಾಯಪಟ್ಟರು. ಗೋಖಲೆ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸುಮಾರು ಐವತ್ತರಷ್ಟು ವಿದ್ಯಾರ್ಥಿಗಳ ಮೇಲೆ ಇಂತಹ ಭಾವನೆಗಳನ್ನು ಹೇರುತ್ತಿರುವ ಸಾವರ್ಕರ್‌ ಬಂಧನವಾಗದಿದ್ದರೆ ಇಂತಹ ಕೊಲೆಗಳು ನಿಲ್ಲುವುದಿಲ್ಲ ಎಂದು ಹೇಳಿದರು.</p>



<p>೧೯೦೯ ಜುಲೈ ೨೨ರಂದು ಸಾವರ್ಕರ್‌ ಡಿಂಗ್ರನನ್ನು ಜೈಲಿನಲ್ಲಿ ಭೇಟಿಯಾಗುತ್ತಾರೆ. ʼನಾನು ನಿನ್ನ ದರ್ಶನ ಪಡೆಯಲು ಬಂದಿದ್ದೇನೆʼ ಎಂಬ ಸಾವರ್ಕರ್ ಮಾತು ತನ್ನ ಅನುಯಾಯಿಗೆ ಅತೀವ ಸಂತೋಷ ನೀಡಿತ್ತು.</p>



<p>ನಿರೀಕ್ಷಿಸಿದಂತೆ ಡಿಂಗ್ರನಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು. ಹಿಂದೂಗಳಲ್ಲದೆ ಬೇರೆ ಯಾರು ಕೂಡ ತನ್ನ ಮೃತದೇಹವನ್ನು ಮುಟ್ಟಬಾರದೆಂದು ಹೇಳಿಕೊಂಡು ಕೊನೆಯವರೆಗು ತನ್ನ ಹಿಂದುತ್ವವನ್ನು ಪಾಲಿಸಿದ. ತನ್ನ ನಾಯಕನ ವಿನೀತ ಹಿಂಬಾಲಕನಾದ.</p>



<p><em>ಮುಂದುವರೆಯುವುದು&#8230; To be continued&#8230;</em></p>
]]></content:encoded>
					
		
		
			</item>
		<item>
		<title>ಲಂಡನ್ನಿನಲ್ಲಿ ಸಾವರ್ಕರ್ &#8211; ಹಿಂದುತ್ವ ರಾಜಕಾರಣದ ಕಥೆ ಅಧ್ಯಾಯ 11</title>
		<link>https://peepalmedia.com/savarkar-in-london-a-story-of-hindutva-politics/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 25 Mar 2024 15:11:10 +0000</pubDate>
				<category><![CDATA[ಅಂಕಣ]]></category>
		<category><![CDATA[hindutva rajakaranada kathe]]></category>
		<category><![CDATA[kannada]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Sunaif]]></category>
		<guid isPermaLink="false">https://peepalmedia.com/?p=37490</guid>

					<description><![CDATA[ಇತ್ತೀಚೆಗೆ ಬಿಜೆಪಿಯ ಅಧ್ಯಕ್ಷರಾಗಿದ್ದಾಗ ಅಮಿತ್‌ ಷಾ ಸಾವರ್ಕರನ್ನು ಹೊಗಳಿ ಮಾತನಾಡಿದ್ದರು. ಅದಕ್ಕೆ ಅವರು ನೀಡಿದ ಒಂದು ಕಾರಣ ೧೮೫೭ರ ಸಂಗ್ರಾಮವನ್ನು ಸಿಪಾಯಿ ದಂಗೆಯೆಂದು ಬ್ರಿಟಿಷರು ಕರೆದಾಗ ಅದನ್ನು ಮೊದಲನೇ ಸ್ವಾತಂತ್ರ್ಯ ಹೋರಾಟವೆಂದು ಪುನರ್‌ ವ್ಯಾಖ್ಯಾನ ನೀಡಿದ್ದು ಸಾವರ್ಕರ್‌ ಎಂಬುದಾಗಿತ್ತು. ನಿಜದಲ್ಲಿ ಸಾವರ್ಕರ್‌ ಅದನ್ನು ಕರೆದಿರುವುದು ಹಾಗಲ್ಲ. ೧೮೫೭ರ ಭಾರತೀಯ ಸ್ವಾತಂತ್ರ್ಯ ಯುದ್ಧ ಎಂದು. ಹೋರಾಟ ಮತ್ತು ಯುದ್ಧದ ನಡುವಿನ ವ್ಯತ್ಯಾಸ ಗುರುತಿಸದಿದ್ದರೆ ಸಾವರ್ಕರ್‌ ಮತ್ತು ಅಭಿನವ್‌ ಭಾರತ್‌ ಮುಂದಿಟ್ಟ ಬ್ರಟಿಷ್‌ ವಿರೋಧಿ ಹೋರಾಟಕ್ಕೂ ನಂತರದ ಕಾಲದಲ್ಲಿ ರಾಷ್ಟ್ರೀಯ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಇತ್ತೀಚೆಗೆ ಬಿಜೆಪಿಯ ಅಧ್ಯಕ್ಷರಾಗಿದ್ದಾಗ ಅಮಿತ್‌ ಷಾ ಸಾವರ್ಕರನ್ನು ಹೊಗಳಿ ಮಾತನಾಡಿದ್ದರು. ಅದಕ್ಕೆ ಅವರು ನೀಡಿದ ಒಂದು ಕಾರಣ ೧೮೫೭ರ ಸಂಗ್ರಾಮವನ್ನು ಸಿಪಾಯಿ ದಂಗೆಯೆಂದು ಬ್ರಿಟಿಷರು ಕರೆದಾಗ ಅದನ್ನು ಮೊದಲನೇ ಸ್ವಾತಂತ್ರ್ಯ ಹೋರಾಟವೆಂದು ಪುನರ್‌ ವ್ಯಾಖ್ಯಾನ ನೀಡಿದ್ದು ಸಾವರ್ಕರ್‌ ಎಂಬುದಾಗಿತ್ತು. ನಿಜದಲ್ಲಿ ಸಾವರ್ಕರ್‌ ಅದನ್ನು ಕರೆದಿರುವುದು ಹಾಗಲ್ಲ. ೧೮೫೭ರ ಭಾರತೀಯ ಸ್ವಾತಂತ್ರ್ಯ ಯುದ್ಧ ಎಂದು. ಹೋರಾಟ ಮತ್ತು ಯುದ್ಧದ ನಡುವಿನ ವ್ಯತ್ಯಾಸ ಗುರುತಿಸದಿದ್ದರೆ ಸಾವರ್ಕರ್‌ ಮತ್ತು ಅಭಿನವ್‌ ಭಾರತ್‌ ಮುಂದಿಟ್ಟ ಬ್ರಟಿಷ್‌ ವಿರೋಧಿ ಹೋರಾಟಕ್ಕೂ ನಂತರದ ಕಾಲದಲ್ಲಿ ರಾಷ್ಟ್ರೀಯ ಚಳುವಳಿಗಳು ಮತ್ತು ಗಾಂಧೀಜಿ ಮುಂದಿಟ್ಟ ಬ್ರಿಟಿಷ್‌ ವಿರೋಧಿ ಹೋರಾಟಕ್ಕೂ ನಡುವಿನ ವ್ಯತ್ಯಾಸ ಅರ್ಥವಾಗದೆ ಹೋಗಬಹುದು.</p>
</blockquote>



<p>೧೯೦೬ರಲ್ಲಿ ಸಾವರ್ಕರ್‌ ಲಂಡನ್‌ ತಲುಪುತ್ತಾರೆ. ಶ್ಯಾಂಜಿ ಕೃಷ್ಣವರ್ಮ ನೀಡಿದ ಶಿವಾಜಿ ಸ್ಕಾಲರ್ಶಿಪ್‌ ಅದಕ್ಕೆ ದಾರಿ ಮಾಡಿಕೊಟ್ಟಿತ್ತು. ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಈಗಿನ ಗುಜರಾತಿನ ಕಛ್‌ ಪ್ರಾಂತ್ಯದ ಮಾಂಡವಿಯಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ಶ್ಯಾಂಜಿ ಕೃಷ್ಣವರ್ಮ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಗುಜರಾತಿನ ಭುಜ್‌ನಲ್ಲಿ ಪಡೆಯುತ್ತಾರೆ. ನಂತರ ಬಾಂಬೆಯ ವಿಲ್ಸನ್‌ ಹೈಸ್ಕೂಲಿನಲ್ಲಿ ಮೆಟ್ರಿಕ್ಯುಲೇಷನ್‌ ತನಕ ಕಲಿಯುತ್ತಾರೆ. ಅದರ ನಂತರದ ವಿದ್ಯಾಭ್ಯಾಸ ಬ್ರಿಟಿಷರು ಸ್ಥಾಪಿಸಿದ ಎಲ್ಫಿನ್ಸ್‌ಟೈನ್‌ ಶಾಲೆಯಲ್ಲಿ. ಆಧುನಿಕ ವಿದ್ಯಾಭ್ಯಾಸಕ್ಕೆ ಸಮಾಂತರವಾಗಿ ವಿಶ್ವನಾಥ ಶಾಸ್ತ್ರಿ ನಡೆಸುತ್ತಿದ್ದ ಸಂಸ್ಕೃತ ಶಾಲೆಯಲ್ಲಿ ಸಂಸ್ಕೃತವನ್ನೂ ಕಲಿಯುತ್ತಾರೆ. <em>ಆರ್ಯಸಮಾಜ</em> ಸ್ಥಾಪಕರಾಗಿದ್ದ ದಯಾನಂದ ಸರಸ್ವತಿಯವರ ಶಿಷ್ಯನಾಗಿ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ಅವರ ಯಾತ್ರೆಗಳಲ್ಲಿ ಜೊತೆಯಾಗುತ್ತಿದ್ದರು. ಪ್ರಮುಖ ಇಂಡೋಲಜಿಸ್ಟ್‌ ಎಂದು ಪಾಶ್ಚಾತ್ಯ ದೇಶಗಳು ಅಂಗೀಕರಿಸಿದ್ದ ಪ್ರೊಫೆಸರ್‌ ಮೋನಿಯರ್ ವಿಲಿಯಮ್ಸ್‌ಗೆ ಸಹಾಯಕನಾಗಿ ಇಂಗ್ಲೆಂಡಿಗೆ ಹೋಗಲು ೧೮೭೯ರಲ್ಲಿ ಅವರಿಗೆ ಅವಕಾಶ ಸಿಗುತ್ತದೆ. ಅಲ್ಲಿ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿಯನ್ನೂ ಪಡೆಯುತ್ತಾರೆ. ಜೊತೆಗೆ ರಾಯಲ್‌ ಏಷ್ಯಾಟಿಕ್‌ ಸೊಸೈಟಿಯಲ್ಲಿ ಸದಸ್ಯತ್ವವನ್ನೂ ಪಡೆದುಕೊಳ್ಳುತ್ತಾರೆ. ೧೮೮೧ರಲ್ಲಿ ಬರ್ಲಿನ್‌ನಲ್ಲಿ ಓರಿಯಂಟಲಿಸ್ಟುಗಳ ಸಮ್ಮೇಳನ ನಡೆದಾಗ ಭಾರತೀಯ ಕಾರ್ಯಗಳ ಸೆಕ್ರೆಟರಿ ಅವರನ್ನು ಪ್ರಿತಿನಿಧಿಯಾಗಿ ಕಳುಹಿಸಿಕೊಡುತ್ತಾರೆ. ಬ್ರಿಟಿಷ್‌ ಸರಕಾರದ ಸಹಾಯ ಮತ್ತು ಪ್ರೀತಿ ಎಷ್ಟರ ಮಟ್ಟಿಗೆ ಅವರ ಮೇಲಿತ್ತು ಎಂಬುದನ್ನು ಅವರ ಬದುಕಿನ ಈ ಪ್ರಮುಖ ಹಂತಗಳು ತಿಳಿಸಿಕೊಡುತ್ತವೆ.</p>



<p>೧೮೮೫ರಲ್ಲಿ ಬ್ಯಾರಿಸ್ಟರ್‌ ಆಗಿ ಭಾರತಕ್ಕೆ ಮರಳುವ ಶ್ಯಾಂಜಿ ಕೃಷ್ಣವರ್ಮ ಭಾರತದ ಮೂರು ಸಂಸ್ಥಾನಗಳಲ್ಲಿ ದಿವಾನರಾಗಿಯೋ ಅಥವಾ ಆಡಳಿತ ಕಾರ್ಯದಲ್ಲಿ ಭಾಗವಹಿಸುವ ಕೌನ್ಸಿಲ್‌ ಮೆಂಬರ್‌ ಆಗಿಯೋ ಕೆಲಸ ಮಾಡುತ್ತಾರೆ. ರತ್ಲಂ, ಉದಯಪುರ ಮತ್ತು ಜುನಗಡ್‌ ಆ ಮೂರು ರಾಜಾಡಳಿತ ಸಂಸ್ಥಾನಗಳು. ಜುನಗಡದಲ್ಲಿ ಕೌನ್ಸಿಲ್‌ ಮೆಂಬರಾಗಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ಬ್ರಟಿಷ್‌ ಅಧಿಕಾರಿಯಾಗಿದ್ದ ಮಾಕ ನೋಚಿಯೊಂದಿಗೆ ಕೆಲ ವಿಷಯಗಳಲ್ಲಿ ತಕರಾರು ಶುರುವಾಗುತ್ತದೆ. ಅದು ಶ್ಯಾಂಜಿಯನ್ನು ಹೊರದಬ್ಬುವಲ್ಲಿಗೆ ಬಂದು ನಿಲ್ಲುತ್ತದೆ. ೧೮೯೭ರಲ್ಲಿ ಮರಳಿ ಇಂಗ್ಲೆಂಡಿಗೆ ಹೋಗುವಷ್ಟರಲ್ಲಿ ಶ್ಯಾಂಜಿ ತಿಲಕರ ಕಡು ಹಿಂಬಾಲಕರಾಗಿ ಬದಲಾಗಿರುತ್ತಾರೆ.</p>



<p>ಆಂಗ್ಲ ಅಧಿಕಾರಿಗಳೊಂದಿಗೆ ಈಗಾಗಲೇ ಮೈಮನಸ್ಸು ಬೆಳೆಸಿದ್ದರಿಂದ ಇಂಗ್ಲೆಂಡ್‌ ತಲುಪಿದ ಶ್ಯಾಂಜಿ, ಆರ್ಥಿಕ ಕ್ಷೇತ್ರದ ಹೊಸ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಬದುಕಲು ದಾರಿ ಕಂಡುಕೊಳ್ಳುತ್ತಾರೆ. ಸ್ಟಾಕ್‌ ಮಾರ್ಕೆಟ್‌ ಮತ್ತು ಶೇರುಗಳಲ್ಲಿ ಭಾಗ್ಯ ಪರೀಕ್ಷಿಸುವ ಶ್ಯಾಂಜಿ ಅದರಲ್ಲಿ ಜಯಿಸುತ್ತಾರೆ. ಬಂಗಾಲ ವಿಭಜನೆಯ ಹಿನ್ನೆಲೆಯಲ್ಲಿ ಮೊಳಗಿದ್ದ ಸ್ವಯಂ ಆಡಳಿತದ ಘೋಷಣೆಯನ್ನು ಪ್ರಚಾರ ಪಡಿಸಲು <em>ಇಂಡಿಯನ್‌ ಸೋಶ್ಯಲಜಿಸ್ಟ್‌ </em>ಎಂಬ ಮಾಸಪತ್ರಿಕೆಯನ್ನು ಆರಂಭಿಸುತ್ತಾರೆ. ೧೯೦೫ರಲ್ಲಿ ಲಂಡನ್ನಿನ ಹೈಗೇಟ್‌ ಪ್ರಾಂತ್ಯದಲ್ಲಿ ಭಾರತೀಯ ವಿದ್ಯಾರ್ಥಿಗಳಿಗಾಗಿ ಇಂಡಿಯಾ ಹೌಸ್‌ ಎಂಬ ಹೆಸರಿನಲ್ಲಿ ಹಾಸ್ಟೆಲ್‌ ಒಂದನ್ನು ತೆರೆಯುವುದಾಗಿ ಘೋಷಿಸುತ್ತಾರೆ. ಆರಂಭದಲ್ಲಿ ೨೫ ವಿದ್ಯಾರ್ಥಿಗಳಿಗೆ <em>ಇಂಡಿಯಾ ಹೌಸಿ</em>ನಲ್ಲಿ ವಾಸಕ್ಕೆ ವ್ಯವಸ್ತೆ ಮಾಡುತ್ತಾರೆ. ಅದನ್ನು ಬೇಗನೇ ೫೦ಕ್ಕೆ ಏರಿಸುವುದಾಗಿಯೂ ಅವರ ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದರು. ವಾಸದ ಸೌಕರ್ಯದ ಜೊತೆಗೆ ಒಂದು ಲೆಕ್ಚರ್‌ ಹಾಲ್‌, ಗ್ರಂಥಾಲಯ ಮತ್ತು ವಾಚನಾಲಯವನ್ನು ಇಂಡಿಯಾ ಹೌಸಿನಲ್ಲಿ ಮಾಡಿಕೊಂಡಿದ್ದರು. ಅದರ ಜೊತೆಗೆ ವಿದ್ಯಾರ್ಥಿಗಳ ಮನರಂಜನೆಗಾಗಿ ಟೆನಿಸ್‌ ಕೋರ್ಟ್‌ ಮತ್ತು ಆರೋಗ್ಯಕ್ಕಾಗಿ ಜಿಮ್‌ ಕೂಡ ಅಲ್ಲಿತ್ತು.</p>



<p>ಶ್ಯಾಂಜಿ ಕೃಷ್ಣವರ್ಮ ನೀಡುವ ಟ್ರಾವೆಲಿಂಗ್‌ ಫೆಲೋಷಿಪ್‌ ಮೂಲಕ ಲಂಡನ್ನಿಗೆ ಬರುವ ವಿದ್ಯಾರ್ಥಿಗಳಿಂದ ವಾರಕ್ಕೆ ೧೬ ಷಿಲ್ಲಿಂಗ್‌ ಖರ್ಚಿನ ಬಾಬ್ತು ವಸೂಲು ಮಾಡುವ ಹಾಗೆ ಆರ್ಥಿಕ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು.</p>



<p>೧೯೦೫ರ <em>ಇಂಡಿಯನ್‌ ಸೋಶ್ಯಲಜಿಸ್ಟ್‌ನ </em>ಡಿಸೆಂಬರ್‌ ಸಂಚಿಕೆಯಲ್ಲಿ ಈ ಸುದ್ದಿ ಕಂಡ ಸಾವರ್ಕರ್‌ ಅದಕ್ಕೆ ಅರ್ಜಿ ಸಲ್ಲಿಸುತ್ತಾರೆ. ಶ್ಯಾಂಜಿಯ ಸಹಪಾಠಿಯಾಗಿದ್ದ ಎಸ್.ಆರ್‌. ರಾಣೆ ಕೂಡ ಫೆಲೋಷಿಪ್‌ ಘೋಷಿಸಿದ್ದರು. ಲಂಡನ್ನಿನಲ್ಲಿ ಶ್ಯಾಂಜಿ ಕಟ್ಟಿದ್ದ <em>ಇಂಡಿಯನ್‌ ಹೋಂ ರೂಲ್</em>‌ ಚಳುವಳಿಯ ಸ್ಥಾಪಕರಲ್ಲಿ ರಾಣೆಯೂ ಒಬ್ಬರಾಗಿದ್ದರು.</p>



<p>ರಾಣೆ ಘೋಷಿಸಿದ ಮೂರು ಫೆಲೋಷಿಪ್‌ಗಳು ಮೂವರು ಭಾರತೀಯ ರಾಜರುಗಳ ಹೆಸರಿನಲ್ಲಿದ್ದವು. ಮೊವಾರಿನ ಮಹಾರಾಣ ಪ್ರತಾಪ್‌, ಶಿವಾಜಿ ಮತ್ತು ಅಕ್ಬರ್‌ ಚಕ್ರವರ್ತಿಯ ಹೆಸರುಗಳಲ್ಲಿ. ಅಂದಿನ ದೊಡ್ಡ ಮೊತ್ತವಾಗಿದ್ದ ೨೦೦೦ ರೂಪಾಯಿಗಳನ್ನು ಪ್ರತಿ ಫೆಲೋಷಿಪ್‌ಗೆ ನೀಡಲಾಗುತ್ತಿತ್ತು. ಅದನ್ನು ಪಡೆಯುವವರು ಭಾರತದಲ್ಲೋ ಇಂಗ್ಲೆಂಡಿನಲ್ಲೋ ಸರಕಾರಿ ಕೆಲಸಕ್ಕೆ ಸೇರುವಂತಿಲ್ಲ ಎಂಬ ನಿಬಂಧನೆಯನ್ನು ಹಾಕಲಾಗಿತ್ತು. ಅದರ ಜೊತೆಗೆ ಹತ್ತು ವರ್ಷಗಳ ಒಳಗೆ ನಾಲ್ಕು ಶೇಕಡಾ ಬಡ್ಡಿ ದರದಲ್ಲಿ ವಿದ್ಯಾರ್ಥಿ ವೇತನವನ್ನು ಮರಳಿಸಬೇಕೆಂಬ ಷರತ್ತನ್ನೂ ಹಾಕಲಾಗಿತ್ತು. ವಿದ್ಯಾರ್ಥಿ ವೇತನ ಪಡೆದು ಇಂಗ್ಲೆಂಡಿಗೆ ಹೊರಡುವ ವಿದ್ಯಾರ್ಥಿಗಳು ೫೦೦೦ ರೂಪಾಯಿಗೆ ಕಡಿಮೆಯಿಲ್ಲದ ಜೀವವಿಮೆ ತೆಗೆದುಕೊಳ್ಳಬೇಕೆಂದೂ ಅದನ್ನು ಸ್ಕಾಲರ್‌ಷಿಪ್‌ ಹಣಕ್ಕೆ ಜಾಮೀನಾಗಿ ನೀಡಬೇಕೆಂದೂ ಷರತ್ತಿನಲ್ಲಿ ಸೇರಿಸಲಾಗಿತ್ತು. ೪೦೦ ರೂಪಾಯಿಗಳಂತೆ ಐದು ಕಂತುಗಳಾಗಿ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುತ್ತಿತ್ತು.</p>



<p>ತಿಲಕ್‌ ಮತ್ತು ಎಸ್‌.ಎಂ. ಪರಾಂಜಪೆ ಶಿಫಾರಸ್ಸಿನಂತೆ ವಿನಾಯಕ್‌ ದಾಮೋದರ್‌ ಸಾವರ್ಕರ್‌ಗೆ ಶಿವಾಜಿಯ ಹೆಸರಿನಲ್ಲಿರುವ ಸ್ಕಾಲರ್‌ಷಿಪ್‌ ಲಭಿಸಿರುತ್ತದೆ. ಮೊದಲ ಕಂತಿನ ೪೦೦ ರೂಪಾಯಿಗಳನ್ನು ತಿಲಕ್‌ ಮುಖಾಂತರ ಸಾವರ್ಕರ್‌ ಪಡೆದುಕೊಂಡರು. ಹೀಗೆ ೧೯೦೬ ಜೂನ್‌ ೯ರಂದು <em>ಎಸ್.ಎಸ್.‌ ಪರ್ಷಿಯಾ</em> ಎಂಬ ಹಡಗಿನಲ್ಲಿ ಸಾವರ್ಕರ್‌ ಇಂಗ್ಲೆಂಡ್ ಯಾತ್ರೆ ಶುರುವಾಗುತ್ತದೆ. ಆಗ ಪತ್ನಿ ಯಮುನಾ ಮೊದಲ ಮಗ ಪ್ರಭಾಕರ್‌ಗೆ ಜನ್ಮ ನೀಡಿದ್ದರು.</p>



<p>ಅಮೃತಸರದ ಹರ್ಣಾಸಿಂಗ್‌ ಹಡಗಿನಲ್ಲಿ ಸಾವರ್ಕರ್‌ ಸಹಯಾತ್ರಿಕನಾಗಿದ್ದ. ನಾಭ ಎಂಬ ಸಂಸ್ಥಾನದ ರಾಜ ನೀಡಿದ್ದ ಧನಸಹಾಯ ಪಡೆದುಕೊಂಡು ಇಂಗ್ಲೆಂಡಿನ ರಾಯಲ್‌ ಕಾಲೇಜ್‌ ಆಫ್‌ ಅಗ್ರಿಕಲ್ಚರ್‌ ಅಲ್ಲಿ ಕೃಷಿ ವಿಜ್ಞಾನ ಕಲಿಯಲು ಹರ್ಣಾಸಿಂಗ್‌ ಯಾತ್ರೆ ಹೊರಟಿದ್ದ. ಇವರಷ್ಟೇ ಅಲ್ಲದೆ ಇನ್ನಿಬ್ಬರು ಭಾರತೀಯರು ಆ ಹಡಗಿನಲ್ಲಿದ್ದರು. ಮೂರು ವಾರಗಳಷ್ಟು ದೀರ್ಘವಾದ ಆ ಯಾತ್ರೆಯಲ್ಲಿ ಹರ್ಣಾಸಿಂಗ್‌ ಮತ್ತು ಉಳಿದ ಇಬ್ಬರನ್ನು <em>ಅಭಿನವ್‌ ಭಾರತ್‌ಗೆ</em> ಸೆಳೆಯಲು ಸಾವರ್ಕರ್‌ಗೆ ಸಾಧ್ಯವಾಗುತ್ತದೆ. ಫ್ರಾನ್ಸಿನ ಮಾರ್ಸೆಲಲ್ಲಿ ಹಡಗು ದಡ ಸೇರಿ ಲಂಗರು ಹಾಕುತ್ತದೆ. ಅಲ್ಲಿಂದ ಪ್ಯಾರಿಸ್‌ ಮತ್ತು ಕಲೇಸಿಗೆ ರೈಲು ಯಾತ್ರೆ. ನಂತರ ಇಂಗ್ಲೀಷ್‌ ಕಾಲುವೆ ದಾಟಿ ಡೋವರ್‌ ತಲುಪಿ ಅಲ್ಲಿಂದ ೧೯೦೬ ಜೂನ್‌ ೩ರಂದು ಲಂಡನ್ನಿಗೆ ತಲುಪುತ್ತಾರೆ. ೧೯೦೬ ಜುಲೈ ೨೬ರಂದು ಲಂಡನ್ನಿನ <em>ಗ್ರೇಸ್‌ ಇನ್‌</em> ನಲ್ಲಿ ಸಾವರ್ಕರ್‌ ಕಾನೂನು ವಿದ್ಯಾಭ್ಯಾಸ ಆರಂಭಿಸುತ್ತಾರೆ.</p>



<p>ಇಂಡಿಯಾ ಹೌಸ್‌ ಮತ್ತು ಇತರ ಕಡೆಗಳಲ್ಲಿ ಸಾವರ್ಕರ್‌ ಜೊತೆಗಿದ್ದವರು ಸರೋಜಿನಿ ನಾಯ್ಡು ಅವರ ಸಹೋದರ ವೀರೇಂದ್ರನಾಥ್‌ ಚಟ್ಟೋಪಾಧ್ಯಾಯ, ಲಾಲಾ ಹರ್‌ದಯಾಳ್‌, ವಿ.ವಿ.ಎಸ್.‌ ಅಯ್ಯರ್‌, ಪಿ.ಟಿ. ಆಚಾರ್ಯ, ಜೆ.ಸಿ. ಮುಖರ್ಜಿ, ಮೇಡಂ ಬಿಕಾಜಿ ಕಾಮ, ಭಾಯ್‌ ಪರಮಾನಂದ್‌, ಮದನ್‌ ಲಾಲ್‌ ಡಿಂಗ್ರ ಮೊದಲಾದವರು. ಇನ್ನೊಬ್ಬ ಚಿತ್ಪಾವನ ಬ್ರಾಹ್ಮಣನೂ ಚಾಪೇಕರ್‌ ಸಹೋದರರ ಸಂಘದಲ್ಲಿದ್ದ ಬಲ್ವಂತ್‌ ಬಿಡೇಯ ಶಿಷ್ಯನೂ ಆಗಿದ್ದ ಪಾಂಡರಂಗ್‌ ಮಹಾದೇವ್‌ ಬಾಪುಟ್‌ ಎಂಬ ಸೇನಾಪತಿ ಬಾಪುಟ್.‌ ಇವರಲ್ಲಿ ಮೇಡಂ ಬಿಕ್ಕಾಜಿ ಕಾಮ ಬಾಂಬೆಯ ಒಂದು ಸಂಪನ್ನ ಪಾರ್ಸಿ ಕುಟುಂಬದಿಂದ ಬಂದವರಾಗಿದ್ದರು. ಆಕೆ ರುಸ್ತುಂ ಕಾಮ ಜೊತೆ ಮದುವೆಯಾದರಾದರೂ ಆ ದಾಂಪತ್ಯ ಬಹಳ ಕಾಲ ಉಳಿಯಲಿಲ್ಲ. ೧೮೯೬ರಲ್ಲಿ ಪ್ಲೇಗ್‌ ಬಾಂಬೆಯನ್ನು ಅಟ್ಟಾಡಿಸುತ್ತಿದ್ದಾಗ ಆಕೆ ಪ್ಲೇಗ್‌ ರೋಗಿಗಳನ್ನು ಶುಶ್ರೂಷೆ ಮಾಡುತ್ತಾ ರೋಗ ಬಾಧಿತರಾಗಿದ್ದರು. ೧೯೦೧ರಲ್ಲಿ ಆಕೆಯ ತಂದೆ ಆಕೆಯನ್ನು ಇಂಗ್ಲೆಂಡಿಗೆ ಕಳುಹಿಸುತ್ತಾರೆ. ಅಲ್ಲಿ ಶ್ಯಾಂಜಿ ಕೃಷ್ಣವರ್ಮರನ್ನು ಭೇಟಿಯಾಗುತ್ತಾರೆ. ನಂತರ <em>ಇಂಡಿಯನ್‌ ಸೋಶ್ಯಲಜಿಸ್ಟ್‌ </em>ಗೆ ನಿರಂತರವಾಗಿ ಬರೆಯಲು ಶುರು ಮಾಡುತ್ತಾರೆ.</p>



<p>ಆ ಸಂಘದಲ್ಲಿದ್ದ ಇನ್ನೊಬ್ಬ ಗಮನಾರ್ಹ ವ್ಯಕ್ತಿ ಮದನ್‌ ಲಾಲ್‌ ಡಿಂಗ್ರ ಎಂಬ ಪಂಜಾಬ್‌ ಯುವಕ. ೧೮೮೩ ಸೆಪ್ಟೆಂಬರ್‌ ೧೮ರಂದು ಅಮೃತಸರದಲ್ಲಿ ಮದನ್‌ ಲಾಲ್‌ ಡಿಂಗ್ರ ಜನಿಸಿದ್ದ. ಆತನ ತಂದೆ ಮತ್ತು ಇಬ್ಬರು ಸಹೋದರರು ಡಾಕ್ಟರುಗಳಾಗಿದ್ದರು. ಮತ್ತಿಬ್ಬರು ಸಹೋದರರು ಬ್ಯಾರಿಸ್ಟರಾಗಿದ್ದರು. ೧೯೦೬ರಲ್ಲಿ ತನ್ನ ಇಪ್ಪತ್ತಮೂರನೇ ವಯಸ್ಸಿನಲ್ಲಿ ಸಿವಿಲ್‌ ಇಂಜಿನಿಯರಿಂಗ್‌ ಕಲಿಯಲೆಂದು ಡಿಂಗ್ರ ಲಂಡನ್‌ ತಲುಪಿದ್ದ. ರಾಜಕೀಯ ವಿಚಾರಗಳು ಯಾವುದೂ ಇಲ್ಲದಿದ್ದ ಡಿಂಗ್ರ ಬಹಳ ಬೇಗನೆ ಸಾವರ್ಕರ್‌ ವಲಯಕ್ಕೆ ಪ್ರಭಾವಿತನಾಗಿ ಸಾವರ್ಕರ್‌ಗೆ ನಂಬಿಕಸ್ಥ ಹಿಂಬಾಲಕನಾಗಿ ಬದಲಾದ.</p>



<p><em>ಅಭಿನವ್‌ ಭಾರತ್‌</em>ನ ವಿದೇಶಿ ಶಾಖೆಯಾಗಿ <em>ಫ್ರೀ ಇಂಡಿಯಾ ಸೊಸೈಟಿ</em>ಯನ್ನು ಲಂಡನ್ನಿನಲ್ಲಿ ಶುರು ಮಾಡಲು ಬಹಳ ಸಮಯವೇನೂ ಹಿಡಿಯಲಿಲ್ಲ. ಶಿವಾಜಿ ಉತ್ಸವ ಮತ್ತು ಗಣೇಶೋತ್ಸವಗಳನ್ನು ಮಾದರಿಯಾಗಿಸಿ ಲಂಡನ್ನಿನಲ್ಲಿ ದಸರಾ, ಗುರುನಾನಕ್‌ ಜಯಂತಿ, ಗುರುಗೋವಿಂದ್‌ಸಿಂಗ್‌ ಜಯಂತಿ ಮೊದಲಾದವನ್ನು ಆಚರಿಸಲು ಶುರು ಮಾಡುತ್ತಾರೆ. ರಾಜಕೀಯಕ್ಕೋಸ್ಕರ ಧಾರ್ಮಿಕತೆಯನ್ನು ವಿಜೃಂಭನೆ ಮಾಡುವ ಬ್ರಾಹ್ಮಣಿಸಮ್ಮಿನ ಅದೇ ಭಾರತೀಯ ಶೈಲಿಯನ್ನು ಸಾವರ್ಕರ್‌ ಲಂಡನ್ನಿನಲ್ಲಿ ಪ್ರಯೋಗಿಸಿದ್ದರು. ಆ ಮೂಲಕ ಕೇಂಬ್ರಿಡ್ಜ್, ಆಕ್ಸ್‌ಫರ್ಡ್‌, ಎಡಿನ್‌ಬರೋ ಮೊದಲಾದ ಕಡೆಗಳಲ್ಲಿ ಓದುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು <em>ಇಂಡಿಯಾ ಹೌಸ್‌ಗೆ</em> ಆಕರ್ಷಿಸಲು ಸಾವರ್ಕರ್‌ಗೆ ಸಾಧ್ಯವಾಗುತ್ತದೆ. ಮಾತ್ರವಲ್ಲದೆ, ಲಾಲಾ ಲಜಪತ್‌ ರಾಯ್‌, ಬಿಪಿನ್‌ ಚಂದ್ರಪಾಲ್‌ ಮೊದಲಾದ ಭಾರತದ ರಾಷ್ಟ್ರೀಯ ನಾಯಕರನ್ನು, ಅದರಲ್ಲೂ ತಿಲಕರ ಸಿದ್ಧಾಂತದ ಜೊತೆಗೆ ನಿಲ್ಲುವ ನಾಯಕರನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಮಾಡುವಲ್ಲಿಯೂ ಸಾವರ್ಕರ್‌ ಯಶಸ್ವಿಯಾಗಿದ್ದರು.</p>



<p>ನವಸಂಪ್ರದಾಯವಾದಿ ಬ್ರಾಹ್ಮಣಿಸಂ ಮುಂದಿಟ್ಟಿದ್ದ ಹಿಂಸಾತ್ಮಕ ಬ್ರಿಟಿಷ್‌ ವಿರೋಧಿ ಹೋರಾಟವನ್ನೂ, ಧಾರ್ಮಿಕ ರಾಷ್ಟ್ರೀಯತೆಯನ್ನೂ ಅಂತರಾಷ್ಟ್ರೀಯ ಮಟ್ಟಕ್ಕೇರಿಸುವುದು ಅತ್ಯಗತ್ಯವೆಂದು ಸಾವರ್ಕರ್‌ಗೆ ಲಂಡನ್‌ ದಿನಗಳು ಕಲಿಸಿದವು. ಆಸ್ಟ್ರಿಯನ್‌ ಸಾಮ್ರಾಜ್ಯದ ಭಾಗವಾಗಿದ್ದ ಪ್ರಾಂತ್ಯಗಳನ್ನು ಒಟ್ಟುಗೂಡಿಸಿ ಇಟಲಿ ಎಂಬ ದೇಶವನ್ನು ಕಟ್ಟಿದ ಮಸಿನಿಯ ಪ್ರಯತ್ನಗಳನ್ನು ಮುಂದಿಟ್ಟುಕೊಂಡು, ಬ್ರಿಟಿಷರ ಅಧೀನದಲ್ಲಿರುವ ಭಾರತದ ಪ್ರಾಂತ್ಯಗಳನ್ನು ಬೆಸೆದು ಬ್ರಾಹ್ಮಣ ದೇಶ ಸ್ಥಾಪನೆ ಎಂಬ ಗುರಿಯನ್ನು ಹಿಡಿದಿಟ್ಟುಕೊಳ್ಳುವುದು ಈ ಕಾಲದಲ್ಲಿ ಸಾವರ್ಕರ್‌ ಪ್ರಯತ್ನವಾಗಿತ್ತು. ಜಾತಿ ಪ್ರಾಬಲ್ಯವನ್ನು ಜನಾಂಗೀಯತೆಯೊಂದಿಗೆ ಸಮೀಕರಿಸುವ ಮೊದಲ ಪ್ರಯತ್ನ ಇದಾಗಿತ್ತು. ಇಂಡಿಯಾದಿಂದ ಹೊರಡುವಾಗಲೇ ಈ ಯೋಚನೆಯ ಬೀಜ ಸಾವರ್ಕರ್‌ ಮನಸ್ಸಿನಲ್ಲಿತ್ತು. ಮಾರ್ಸೆಲ್ಸಿಗೆ ಹಡಗು ತಲುಪಿದಾಗ ಅಲ್ಲಿ ನಿಂತು ಇಟಲಿಯ ಏಕೀಕರಣಕ್ಕೆ ಮಸ್ಸಿನಿ ಪಟ್ಟ ಶ್ರಮಗಳ ಕುರಿತು ತಾನು ಯೋಚಿಸಿದೆ ಎಂದು ಸಾವರ್ಕರ್‌ ತನ್ನ ಸ್ಮರಣ ಪುಸ್ತಕದಲ್ಲಿ ಬರೆದಿದ್ದಾರೆ. ಆ ಊರಿನವರಿಗೆ ಇದರ ಕುರಿತು ಯಾವ ಮಾಹಿತಿಯೂ ಇರಲಿಲ್ಲ ಎಂಬುದು ತನ್ನನ್ನು ಖಿನ್ನನಾಗಿಸಿತು ಎಂದೂ ಬರೆಯುತ್ತಾರೆ.</p>



<p>ಬ್ರಜಿಲ್, ಉರುಗ್ವೇ ಮುಂತಾದ ಕಡೆಗೆ ಗಡಿಪಾರು ಮಾಡಲ್ಪಟ್ಟಿದ್ದ ಗಾರಿಬಾಲ್ಡಿ ಹಾಗೂ ಸಾರ್ಡೀನಿಯಾ ದೇಶವನ್ನು ಸೇರಿಸಿಕೊಂಡು ಮಸ್ಸಿನಿ ಆಸ್ಟ್ರಿಯಾ ಸಾಮ್ರಾಜ್ಯದ ವಿರುದ್ಧ ಮಾಡಿದ ಯುದ್ಧವನ್ನು ಬ್ರಾಹ್ಮಣರ ನಾಯಕತ್ವದಲ್ಲಿ ಹಿಂದೂಗಳೆಲ್ಲರು ಸೇರಿಕೊಂಡು ಬ್ರಿಟಿಷರಿಗೆದುರಾಗಿ ಮಾಡುವ ಯುದ್ಧದೊಂದಿಗೆ ಸಮೀಕರಿಸಿಕೊಂಡು ಸಾವರ್ಕರ್‌ ಹಲವು ಕಡೆಗಳಲ್ಲಿ ಭಾಷಣ ಮಾಡಿದ್ದರು. ಯುದ್ಧ ಗೆಲ್ಲದಿದ್ದರೂ ಗೆಲ್ಲಬಹುದಾದ ಯುದ್ಧಗಳಿಗೆ ಅದು ಬಾಗಿಲು ತೆರೆದು ಕೊಟ್ಟಿತು.</p>



<p>ಮಸ್ಸಿನಿಯ ಕುರಿತ ಈ ದಿಕ್ಕಿನ ಅಧ್ಯಯನವನ್ನು ಪೂರ್ತಿಗೊಳಿಸಲು ಸಾವರ್ಕರ್‌ಗೆ ಇಂಡಿಯಾ ಹೌಸಿನ ಗ್ರಂಥಾಲಯ ಸಹಾಯ ಮಾಡಿತು. ರಹಸ್ಯ ಸಂಘಟನೆಗಳ ಮತ್ತು ಶಸ್ತ್ರ ಶೇಖರಣೆಯ ಅಗತ್ಯತೆಯ ಸಂದೇಶವನ್ನು ಎತ್ತಿಹಿಡಿಯಲು ಹಾಗೂ ಅದನ್ನು ಬ್ರಾಹ್ಮಣರು ಮತ್ತು ಇತರ ಹಿಂದೂಗಳ ನಡುವೆ ಪ್ರಚಾರ ಪಡಿಸಲು ಈ ಅಧ್ಯಯನವನ್ನು ಸಾವರ್ಕರ್‌ ಕೈಗೊಳ್ಳುವುದು. ಭಾರತದ ಸ್ವಾತಂತ್ರ್ಯ ಎಂಬುದು ಬ್ರಾಹ್ಮಣರು ಮತ್ತು ಬ್ರಿಟಿಷರ ನಡುವಿನ ಯುದ್ಧದ ಫಲವೇ ಆಗಿರುತ್ತದೆ ಎಂದು ಗಟ್ಟಿಯಾಗಿ ಇಲ್ಲಿ ಸಾವರ್ಕರ್‌ ವಾದಿಸುತ್ತಾರೆ. ಮಂದಗಾಮಿಗಳು ʼಬಾಲಿಶʼ ಎಂದು ಕರೆಯುವ ಈ ಯುದ್ಧಸನ್ನಾಹವೇ ಸರಿಯಾದ ದಾರಿ ಎಂದು ಮಸ್ಸಿನಿಯನ್ನು ಎತ್ತಿ ಹಿಡಿದುಕೊಂಡು ಸಾವರ್ಕರ್‌ ವಾದಿಸುತ್ತಾರೆ.</p>



<p>ʼಮಸ್ಸಿನಿ ಮತ್ತು ಆತನ ಸಹ ಕ್ರಾಂತಿಕಾರಿಗಳು ಇದೇ ರೀತಿಯಲ್ಲಿ ೧೮೩೦ರ ಕಾಲದ ಇಟಲಿಯಲ್ಲಿ ಅವರ ಸಮಕಾಲೀನ ʼಹಿರಿಯರಿಗೆʼ ʼಬಾಲಿಶʼರಾಗಿಯೂ ʼಅಸಂಬದ್ಧʼರಾಗಿಯೂ ಕಂಡಿದ್ದರು. ಅಂತಹ ಅಪಹಾಸ್ಯಗಳಿಗೆ ಮಸ್ಸಿನಿ ತನ್ನ ಲೇಖನಗಳ ಮೂಲಕ ತಿರುಗೇಟು ನೀಡಿದ್ದ. ತಮಾಷೆಯ ಸಂಗತಿ ಏನೆಂದರೆ ೧೯೦೬ರಲ್ಲಿ ಮಸ್ಸಿನಿ ಮತ್ತು ಗಾರಿಬಾಲ್ಡಿ ತರಹದ ವ್ಯಕ್ತಿಗಳನ್ನು ‌ʼಮಹಾನ್ ದೇಶಪ್ರೇಮಿʼಗಳೆಂದು ಭಾರತದ ನಾಯಕರು ಕರೆದಿದ್ದರು. ತಮ್ಮ ಕಾಲದಲ್ಲಿ ಮಸ್ಸಿನಿ ಮತ್ತು ಗಾರಿಬಾಲ್ಡಿ ಮೂರ್ಖರೆಂದೂ ಬಾಲಿಶರೆಂದೂ ಮುದ್ರೆಯೊತ್ತಲ್ಪಟ್ಟಿದ್ದರೆಂದು ಇವರುಗಳಿಗೆ ತಿಳಿದೇ ಇರಲಿಲ್ಲ. ಮಸ್ಸಿನಿಯ ಬರಹಗಳು ನಮ್ಮ ಚಟುವಟಿಕೆಗಳಿಗೆ ಪೂರಕವಾಗಿವೆ ಮತ್ತು ನಮ್ಮ ಶೈಲಿ ಭಾರತದ ಜನರಿಗೆ ವಿಶ್ವಾಸ ಮೂಡುವಂತೆ ಮಾಡುತ್ತವೆ.ʼ<sup></sup></p>



<p>ಮಸ್ಸಿನಿಯ ಆತ್ಮಕತೆಯನ್ನು ಸಾವರ್ಕರ್‌ ಮರಾಠಿಯಲ್ಲಿ ಭಾಷೆಯಲ್ಲಿ ಬರೆದು ಪೂರ್ತಿಗೊಳಿಸಿದರು. <em>ಜೋಸೆಫ್‌</em> <em>ಮಸ್ಸಿನಿಯಾಂಚೆ ಆತ್ಮಚರಿತ ವ ರಾಜ್‌ಕರಣ್ </em>(ಜೋಸೆಫ್‌ ಮಸ್ಸಿನಿಯ ಆತ್ಮಕತೆ ಮತ್ತು ರಾಜಕಾರಣ) ಪುಸ್ತಕದ ಹೆಸರು. ೧೯೦೬ರ ಅಕ್ಟೋಬರಿನಲ್ಲಿ ಹಸ್ತಪ್ರತಿಯನ್ನು ಬಾಬಾರಾವ್‌ಗೆ ಕಳುಹಿಸಿಕೊಡುತ್ತಾರೆ. ಬಾಬಾರಾವ್‌ ಅದನ್ನು ತಿಲಕ್‌ ಮತ್ತು ಪರಾಂಜಪೆ ಅವರಿಗೆ ಅದನ್ನು ಓದಲು ಕೊಡುತ್ತಾರೆ. ಅಪಾರ ಮುನ್ನೋಟವಿದ್ದ ತಿಲಕ್‌ ಇದನ್ನು ಪ್ರಕಟಿಸಿದರೆ ಘಟಿಸಬಹುದಾದ ಆಪತ್ತುಗಳ ಬಗ್ಗೆ ಬಾಬಾರಾವ್‌ಗೆ ಎಚ್ಚರಿಕೆ ನೀಡುತ್ತಾರೆ. <em>ಜಗತಹಿತೇಚ್ಛು</em> ಎಂಬ ಪತ್ರಿಕೆಯ ಪ್ರೆಸ್‌ನಲ್ಲಿ <em>ಅಭಿನವ್‌ ಭಾರತ್</em>‌ ಕಾರ್ಯಕರ್ತರು ಇದರ ಮುದ್ರಣವನ್ನು ಪೂರ್ತಿಗೊಳಿಸುತ್ತಾರೆ. ಪರಾಂಜಪೆಯ <em>ಕಾಲ್</em>‌ ಈ ಪುಸ್ತಕವನ್ನು ಹೊಗಳಿಕೊಂಡು ಪ್ರಬಂಧ ಪ್ರಕಟಿಸಿತು. ಮಸ್ಸಿನಿಯ ರಾಷ್ಟ್ರೀಯತೆಯನ್ನು ಬ್ರಾಹ್ಮಣಿಸಂ ಜೊತೆಗೆ ತಳುಕು ಹಾಕಿಕೊಂಡ ಹೊಗಳಿಕೆಯಾಗಿತ್ತದು.</p>



<p>ʼಮಸ್ಸಿನಿಯ ಈ ಲೇಖನಗಳು ಅಮೃತದಂತೆ. ವೇದಮಂತ್ರಗಳ ಹಾಗೆ ಇವಕ್ಕೆ ಅಸಾಮಾನ್ಯ ಶಕ್ತಿಯಿದೆʼ ಎಂದು <em>ಕಾಲ್‌</em> ಬರೆಯಿತು. ಎರಡನೇ ಮುದ್ರಣ ಬರುವ ಮೊದಲೇ ೧೯೦೭ರಲ್ಲಿ ಬ್ರಿಟಿಷ್‌ ಅಧಿಕಾರಿಗಳು ಆ ಪುಸ್ತಕವನ್ನು ನಿಷೇಧಿಸಿದರು.</p>



<p>ಈ ನಡುವೆ ಆಗ ಇಂಗ್ಲೆಂಡಿನಲ್ಲಿದ್ದ ಗಾಂಧಿ ಇಂಡಿಯಾ ಹೌಸ್‌ ಸಂದರ್ಶಿಸಿದ್ದರು. ಸಾವರ್ಕರ್‌ ಮತ್ತು ಗಾಂಧಿಯ ಮೊದಲ ಭೇಟಿಯಾಗಿತ್ತದು. ಆಗ ಚಿತ್ಪಾವನ ಬ್ರಾಹ್ಮಣನಾಗಿದ್ದ ಸಾವರ್ಕರ್‌ ತನಗೆಂದು ಸೀಗಡಿ ಅಡುಗೆ ಮಾಡುತ್ತಿರುವುದನ್ನು ಕಂಡು ಗಾಂಧಿ ಆಶ್ಚರ್ಯಗೊಂಡರೆಂದು ಹೇಳುತ್ತಾರೆ. ಸಸ್ಯಾಹಾರಿಯಾಗಿದ್ದ ಗಾಂಧಿ ಊಟ ನಿರಾಕರಿಸಿದರು. ವಿನಾಯಕ್‌ ಅದನ್ನು ಕಂಡು ತಿರುಗೇಟು ನೀಡಿದ್ದರಂತೆ, ʼತಾವು ನಮ್ಮೊಂದಿಗೆ ಊಟ ಮಾಡುವುದಿಲ್ಲವಾದರೆ, ನಮ್ಮೊಂದಿಗೆ ಹೋರಾಡಲು ಈ ಭೂಮಿಯ ಮೇಲೆ ನಿಮ್ಮನ್ನು ಪ್ರೇರೇಪಿಸುವ ಶಕ್ತಿ ಯಾವುದು? ಅದಕ್ಕೂ ಮಿಗಿಲಾಗಿ ಇದು ಬರಿಯ ಕರಿದ ಸೀಗಡಿ. ನಾವು ಬಯಸುವುದು ಜನರು ಬ್ರಟಿಷರನ್ನು ಹಸಿಯಾಗಿಯೇ ಹರಿದು ತಿನ್ನಬೇಕೆಂದು.ʼ</p>



<p>ಸಾವರ್ಕರ್ ಯುದ್ಧ ಅರ್ಧ ದಾರಿಯಲ್ಲಿ ನಿಂತದ್ದನ್ನೂ ಗಾಂಧಿಯ ಹೋರಾಟ ದೀರ್ಘಕಾಲ ಮುಂದುವರಿದು ಗೆದ್ದಿದ್ದನ್ನೂ ಈ ಭೇಟಿ ದಾಖಲಿಸಿದ ಹರೀಂದ್ರ ಶ್ರೀವಾಸ್ತವ ನೆನೆಯುವುದೇ ಇಲ್ಲ.</p>



<p>ಮಸ್ಸಿನಿಯ ಆತ್ಮಕತೆ ಪೂರ್ತಿಗೊಳಿಸಿದ ನಂತರ, ಚಿತ್ಪಾವನ ಬ್ರಾಹ್ಮಣ ನಾನಾಸಾಹೇಬ್‌ ಭಾಗವಹಿಸಿದ್ದ ೧೮೫೭ರ ಸಂಗ್ರಾಮವನ್ನು ಆ ರೀತಿಯಲ್ಲಿ ಚಿತ್ರೀಕರಿಸಲು ಸಾವರ್ಕರ್‌ ಶ್ರಮಿಸಿದ್ದರು. ಸಿಪಾಯಿ ದಂಗೆಯೆಂದು ಬ್ರಿಟಿಷರು ಕರೆದ ಹೋರಾಟವನ್ನು ಬ್ರಾಹ್ಮಣಿಸಮ್ಮಿನ ನೋಟಕ್ರಮದಲ್ಲಿ ಪುನರ್‌ ರಚಿಸುವ ಪ್ರಯತ್ನಕ್ಕೆ ಸಾವರ್ಕರ್‌ ಮುಂದಾಗಿದ್ದರು. ಅದು ಮಾತ್ರ ಸುಲಭದ ದಾರಿಯಾಗಿರಲಿಲ್ಲ. ಯಾಕೆಂದರೆ ಅದರಲ್ಲಿದ್ದ ಮೌಲವಿ ಅಹಮ್ಮದ್‌ ಷಾ ಮತ್ತು ಬಹದೂರ್‌ ಷಾ ಜಫರ್‌ ತರದ ಮುಸ್ಲಿಮರ ಪಾಲ್ಗೊಳ್ಳುವಿಕೆಯನ್ನು ಮರೆಮಾಚುವುದು ಅಸಾಧ್ಯವಾಗಿತ್ತು. ಬ್ರಾಹ್ಮಣಿಸಮ್ಮಿನ ಅಡಿಪಾಯ ತತ್ವಗಳಲ್ಲಿ ಒಂದಾಗಿದ್ದ ಮುಸ್ಲಿಂ ದ್ವೇಷದಲ್ಲಿ ನೀರು ಬೆರೆಸಲು ಮೊದಲನೇ ಸ್ವಾತಂತ್ರ್ಯ ಸಂಗ್ರಾಮದ ಸ್ವಭಾವ ಸಾವರ್ಕರನ್ನು ಪ್ರೇರೇಪಿಸಿತು. ಲಂಡನ್ನಿನಲ್ಲಿ ನಿಂತುಕೊಂಡು ಮಾಡುತ್ತಿದ್ದ ಬ್ರಾಹ್ಮಣಿಸಂ ಪ್ರಚಾರ ಕಾರ್ಯದಲ್ಲಿ ಮುಸ್ಲಿಂ ದ್ವೇಷ ಎಂಬುದು ತೀರಾ ಅಪ್ರತ್ಯಕ್ಷವಾಗಿತ್ತು. ಅಷ್ಟೇ ಅಲ್ಲದೆ, <em>ಇಂಡಿಯಾ ಹೌಸ್‌</em> ಕೇಂದ್ರೀಕರಿಸಿ ನಡೆಯುತ್ತಿದ್ದ ಬ್ರಿಟಿಷ್‌ ವಿರೋಧಿ ಹೋರಾಟಗಳಲ್ಲಿ ಭಾರತೀಯ ಮುಸ್ಲಿಂ ವಿದ್ಯಾರ್ಥಿಗಳು ಕೂಡ ದೊಡ್ಡ ಪಾತ್ರ ವಹಿಸಿದ್ದರು. ಹೀಗೆ ಒಳಗೂ ಹೊರಗೂ ಇದ್ದ ಮುಸ್ಲಿಮರ ಸಾನಿಧ್ಯ ಪ್ರತ್ಯಕ್ಷವಾಗಿ ಮುಸ್ಲಿಂ ವಿರೋಧಿ ನಿಲುವನ್ನು ತೆಗೆದುಕೊಳ್ಳಲು ಸಾವರ್ಕರ್‌ ಹಿಂದೇಟು ಹಾಕುವಂತೆ ಮಾಡಿತ್ತು.</p>



<p>೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಐವತ್ತನೇ ವಾರ್ಷಿಕದಂದು ʼ೧೮೫೭ರ ರಕ್ತಸಾಕ್ಷಿಗಳ ನೆನಪಿಗೆʼ ಎಂಬ ಬ್ಯಾಡ್ಜ್‌ ಧರಿಸಿ ಕಾಲೇಜಿಗೆ ಹೋದ ರಫೀಕ್‌ ಮುಹಮ್ಮದ್‌ ಖಾನ್‌ಎಂಬ ವಿದ್ಯಾರ್ಥಿ ಮುಸ್ಲಿಂ ಆಗಿದ್ದ. ಅದಕ್ಕಾಗಿ ಆತ ಅಧಿಕಾರಿಗಳಿಂದ ಶಿಕ್ಷೆಗೂ ಒಳಪಟ್ಟ. ಇಂತಹ ಘಟನೆಗಳ ಹಿನ್ನೆಲೆಯಲ್ಲಿಯೇ ಸಾವರ್ಕರ್‌ ಆ ಹೋರಾಟದ ಚರಿತ್ರೆ ಬರೆಯಲು ಮುಂದಾಗುವುದು.</p>



<p>ಇತ್ತೀಚೆಗೆ ಬಿಜೆಪಿಯ ಅಧ್ಯಕ್ಷರಾಗಿದ್ದಾಗ ಅಮಿತ್‌ ಷಾ ಸಾವರ್ಕರನ್ನು ಹೊಗಳಿ ಮಾತನಾಡಿದ್ದರು. ಅದಕ್ಕೆ ಅವರು ನೀಡಿದ ಒಂದು ಕಾರಣ ೧೮೫೭ರ ಸಂಗ್ರಾಮವನ್ನು ಸಿಪಾಯಿ ದಂಗೆಯೆಂದು ಬ್ರಿಟಿಷರು ಕರೆದಾಗ ಅದನ್ನು ಮೊದಲನೇ ಸ್ವಾತಂತ್ರ್ಯ ಹೋರಾಟವೆಂದು ಪುನರ್‌ ವ್ಯಾಖ್ಯಾನ ನೀಡಿದ್ದು ಸಾವರ್ಕರ್‌ ಎಂಬುದಾಗಿತ್ತು. ನಿಜದಲ್ಲಿ ಸಾವರ್ಕರ್‌ ಅದನ್ನು ಕರೆದಿರುವುದು ಹಾಗಲ್ಲ. ೧೮೫೭ರ ಭಾರತೀಯ ಸ್ವಾತಂತ್ರ್ಯ ಯುದ್ಧ ಎಂದು. ಹೋರಾಟ ಮತ್ತು ಯುದ್ಧದ ನಡುವಿನ ವ್ಯತ್ಯಾಸ ಗುರುತಿಸದಿದ್ದರೆ ಸಾವರ್ಕರ್‌ ಮತ್ತು <em>ಅಭಿನವ್‌ ಭಾರತ್</em>‌ ಮುಂದಿಟ್ಟ ಬ್ರಟಿಷ್‌ ವಿರೋಧಿ ಹೋರಾಟಕ್ಕೂ ನಂತರದ ಕಾಲದಲ್ಲಿ ರಾಷ್ಟ್ರೀಯ ಚಳುವಳಿಗಳು ಮತ್ತು ಗಾಂಧೀಜಿ ಮುಂದಿಟ್ಟ ಬ್ರಿಟಿಷ್‌ ವಿರೋಧಿ ಹೋರಾಟಕ್ಕೂ ನಡುವಿನ ವ್ಯತ್ಯಾಸ ಅರ್ಥವಾಗದೆ ಹೋಗಬಹುದು. ಬ್ರಿಟಿಷರು ಭಾರತದಲ್ಲಿ ಗೆದ್ದ ಯುದ್ಧಗಳನ್ನು ಹಾಗೆಯೇ ಉಲ್ಟಾ ಮಾಡುವುದೇ ಸಾವರ್ಕರ್‌ ಮತ್ತಿತರರು ಘೋಷಿಸಿದ ಬ್ರಾಹ್ಮಣಿಸಮ್ಮಿನ ಸ್ವಾತಂತ್ರ್ಯ ಹೋರಾಟದ ಮುಖ್ಯ ಆಶಯ. ಒಂದಷ್ಟು ಜನರು ಸೈನ್ಯಕಟ್ಟಿಕೊಂಡು ಆಕ್ರಮಣಗಳು ಮತ್ತು ಬಲಿದಾನಗಳ ಮೂಲಕ ಯುದ್ಧ ಗೆಲ್ಲುವುದು ಸಾವರ್ಕರ್‌ ಯೋಜನೆಯಾಗಿತ್ತು. ಅದರ ಭೂತಕಾಲವಾಗಿ ಮಾತ್ರವೇ ಸಾವರ್ಕರ್‌ ೧೮೫೭ರ ಹೋರಾಟವನ್ನು ಕಂಡಿದ್ದ. ಸ್ವರಾಜ್ಯ ಮತ್ತು ಸ್ವಧರ್ಮ, ಅಂದರೆ ಜನ್ಮಭೂಮಿಯೊಂದಿಗೂ ಹುಟ್ಟಿದ ಧರ್ಮದೊಂದಿಗೂ ನಿಷ್ಠೆಯಿಂದಿರುವುದು ಮಾತ್ರವೇ ಸಾವರ್ಕರ್‌ ಯೋಜಿಸಿದ್ದ ʼಕ್ರಾಂತಿʼಗೆ ಅಡಿಪಾಯ. ಅದು ನಂತರದ ಕಾಲದಲ್ಲಿ ಹುಟ್ಟಿಕೊಂಡ ಮಾರ್ಕ್ಸಿಸ್ಟ್‌ ಕ್ರಾಂತಿಕಾರಿ ಚಿಂತನೆಗಳಿಂದಲೂ ಬೇರೆಯಾಗಿ ನಿಲ್ಲಲು ಕಾರಣವೂ ಇದುವೇ ಆಗಿದೆ. ಸಾವರ್ಕರ್‌ಗೆ ಮತ್ತು ಸಾವರ್ಕರಿಸಂಗೆ ದೇಶ ಮತ್ತು ಧರ್ಮ ಎಂಬುದು ಪ್ರಶ್ನಿಸಲಾಗದ ಮತ್ತು ಬದಲಾವಣೆಗೆ ಒಳಪಡಿಸಲಾಗದ ಚಿರ ಕಲ್ಪನೆಗಳಾಗಿದ್ದವು. ಅವನ್ನು ಚಿರವಾಗಿ ಉಳಿಸುವುದೇ ಹೋರಾಟಗಳ ಆತ್ಯಂತಿಕ ಗುರಿ. ಧರ್ಮ ಅಧರ್ಮಗಳ ಬದಲಿಗೆ ಹಿಂಸೆ ಮಾತ್ರವೇ ಅದರ ಏಕೈಕ ದಾರಿಯಾಗಿ ಬದಲಾಗುವುದು ಕೂಡ ಅದರಿಂದಾಗಿಯೆ.</p>



<p>೧೮೫೭ರ <em>ಸ್ವಾಂತಂತ್ರ್ಯಯುದ್ಧ</em>ದಲ್ಲಿ ಮುಸ್ಲಿಮರ ಕುರಿತಾದ ತನ್ನ ದೃಷ್ಟಿಕೋನವನ್ನು ಹೀಗೆ ಪರಿಷ್ಕರಿಸುತ್ತಾರೆ:</p>



<p>ʼವಿದೇಶಿ ಆಡಳಿತಗಾರರು ಎಂಬ ನೆಲೆಯಲ್ಲಿ ಮುಸ್ಲಿಮರು ಭಾರತದಲ್ಲಿ ಬದುಕಿದ್ದಷ್ಟು ಕಾಲವೂ ಅವರನ್ನು ಸಹೋದರರಂತೆ ಕಂಡು ಒಟ್ಟಿಗೆ ಬಾಳುವುದು ರಾಷ್ಟ್ರೀಯ ದೌರ್ಬಲ್ಯವನ್ನು ಎತ್ತಿಹಿಡಿಯುವ ಕಾರ್ಯವೇ ಆಗಿತ್ತು. ಆದ್ದರಿಂದ ಅಲ್ಲಿಯ ತನಕ ಮುಸ್ಲಿಮರನ್ನು ಪರಕೀಯರಾಗಿ ಕಾಣಲೇಬೇಕಾದದ್ದು ಹಿಂದೂಗಳ ಕರ್ತವ್ಯವಾಗಿತ್ತು. ಅದಕ್ಕಿಂತ ಮಿಗಿಲಾಗಿ ಪಂಜಾಬಿನಲ್ಲಿ ಗುರುಗೋವಿಂದ್‌ ಸಿಂಗ್‌, ರಜಪೂತರಲ್ಲಿ ರಾಣಾ ಪ್ರತಾಪ್‌, ಬುಂದೇಲ್‌ ಖಂಡದಲ್ಲಿ ಛತ್ರಶಾಲೆ ಮತ್ತು ದೆಹಲಿಯ ಸಿಂಹಾಸನದ ಮೇಲೆ ಮರಾಠರು ಕೂರುವ ಮೂಲಕ ಮುಹಮ್ಮದೀಯರ ಆಡಳಿತವನ್ನು ನಾಶಗೊಳಿಸಲಾಯಿತು. ಶತಮಾನಗಳ ಕಾಲ ನಡೆದ ಯುದ್ಧಗಳ ನಂತರ ಹಿಂದೂಗಳ ಪರಮಾಧಿಕಾರ ಮುಹಮ್ಮದೀಯರ ಆಡಳಿತವನ್ನು ಕೊನೆಗಾಣಿಸಿ ಪೂರ್ತಿ ಭಾರತವನ್ನು ಅದರಡಿಯಲ್ಲಿ ಒಟ್ಟುಗೂಡಿಸಿತು. ಅಂದು ಮುಹಮ್ಮದೀಯರೊಂದಿಗೆ ಕೈಜೋಡಿಸುವುದು ತಲೆತಗ್ಗಿಸುವ ಕೆಲಸವಾಗಿತ್ತು. ಆದರೆ ಈಗ ಅದು ಉದಾರ ಕಾರ್ಯವಾಗಿದೆ. ಆದ್ದರಿಂದಲೇ ಈಗ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಶತೃತ್ವ ಎಂಬುದು ಭೂತಕಾಲದ ಒಂದು ಸಂಗತಿ ಮಾತ್ರವಾಗಿದೆ. ಅವರ ಇಂದಿನ ಸಂಬಂಧ ಪ್ರಭುತ್ವ-ಪ್ರಜೆಗಳು, ಸ್ವದೇಶಿಗಳು-ಪರಕೀಯರು ಎಂಬ ಹಂತವನ್ನು ಮೀರಿ ಸಹೋದರತ್ವಕ್ಕೆ ಬಂದು ನಿಂತಿದೆ. ನಮ್ಮ ನಡುವಿನ ಒಂದೇ ವ್ಯತ್ಯಾಸ ಧರ್ಮ ಮಾತ್ರವೇ ಆಗಿ ಉಳಿದಿದೆ. ಹಿಂದೂಸ್ತಾನದ ಮಣ್ಣಿನ ಮಕ್ಕಳು ನಾವಿಬ್ಬರು. ಅವರ ಹೆಸರುಗಳು ಭಿನ್ನವಾಗಿದ್ದರೂ ನಾವು ಒಂದೇ ತಾಯಿಯ ಮಕ್ಕಳು. ರಕ್ತದ ಮೂಲಕ ಅವರು ನಮ್ಮ ಸಹೋದರರಾಗಿದ್ದಾರೆ. ನಾನಾಸಾಹೇಬ್‌, ದೆಹಲಿಯ ಬಹಾದೂರ್‌ ಷಾ, ಮೌಲವಿ ಅಹಮ್ಮದ್‌ ಷಾ ಮೊದಲಾದವರು ಮತ್ತು ೧೮೫೭ರ ಇತರ ನಾಯಕರು ಈ ಸಂಬಂಧವನ್ನು ಒಂದು ಹಂತದವರೆಗೆ ಗುರುತಿಸಿ ತಮ್ಮೊಳಗಿನ ಶತೃತ್ವವನ್ನು ಅತಾರ್ಕಿಕ ಮತ್ತು ಮೂರ್ಖತನಗಳಾಗಿ ಕಂಡು ಅದನ್ನು ಬದಿಗೆ ಸರಿಸಿ ಸ್ವದೇಶೀ ಪತಾಕೆಯ ಸುತ್ತ ನೆರೆದರು. ಒಟ್ಟಿನಲ್ಲಿ ಹೇಳುವುದಾದರೆ, ನಾನಾಸಾಹೇಬ್‌ ಮತ್ತು ಅಜೀಮುಲ್ಲಾರ ನಿಲುವುಗಳ ಅತ್ಯಂತ ವಿಶಾಲವಾದ ಅಂಶ ಏನೆಂದರೆ, ಹಿಂದೂ ಮುಸ್ಲಿಮರು ಒಗ್ಗಟ್ಟಾಗಿ ಎದೆಗೆ ಎದೆ ಕೊಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು, ಸ್ವಾತಂತ್ರ್ಯ ಲಭಿಸಿದರೆ ಭಾರತದ ಆಡಳಿತಗಾರರ ಮತ್ತು ರಾಜರುಗಳ ಅಡಿಯಲ್ಲಿ ಭಾರತದ ಒಕ್ಕೂಟ ಸಂಸ್ಥಾನಗಳನ್ನು ರೂಪೀಕರಿಸಬೇಕು ಎಂಬುದೇ ಆಗಿತ್ತು.ʼ</p>



<p>ಸಾವರ್ಕರ್‌ ತನ್ನ ಜೀವನಮಾನ ಪೂರ್ತಿ ಬೆಳೆಸಿಕೊಂಡಿದ್ದ ನಂಬಿಕೆಗಳಿಂದ ದೂರ ನಡೆಯುವುದನ್ನು ಇಲ್ಲಿ ಗಮನಿಸಬಹುದಾದರೂ ಅದರ ಸೂಕ್ಷ್ಮಗಳನ್ನು ಗಮನಿಸಬೇಕಾಗುತ್ತದೆ. ʼಸೋತ ಮುಸ್ಲಿಮರೊಂದಿಗೆʼ ಮಾತ್ರವೇ ಇಲ್ಲಿ ಸಾವರ್ಕರ್‌ ಐಕ್ಯತೆ ಸಾರುತ್ತಿರುವುದು. ಅದು ಎರಡೂ ಕಡೆಯವರನ್ನು ಸೋಲಿಸಿದ ಬೃಹತ್‌ ಶಕ್ತಿಯೊಂದಿಗೆ ಹೋರಾಡಲು ಬೇಕಾದ ತಾತ್ಕಾಲಿಕ ಒಪ್ಪಂದ ಮಾತ್ರ. ತನ್ನ ಹಿಂದೂ ನಿಲುವಿನಲ್ಲಿ ನಿಂತುಕೊಂಡೇ ಸಾವರ್ಕರ್‌ ಈ ವಿವರಣೆಯನ್ನು ನೀಡುತ್ತಿರುವುದು. ಎಂದಿನಂತೆ ಮಾತನಾಡುತ್ತಿರುವುದು ಕೂಡ ತನ್ನ ಹಿಂದೂ ಸಮುದಾಯದೊಂದಿಗೆ ಮಾತ್ರ. ಇಂತಹ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳದೆ ೧೮೫೭ರ ಮೊದಲ ಸ್ವಾತಂತ್ರ್ಯ ಹೋರಾಟದ ನಿಷೇಧಿಸಲಾಗದ ಇತಿಹಾಸವನ್ನು ಸಾವರ್ಕರ್‌ ಪುನರ್‌ ರಚಿಸುತ್ತಿದ್ದರು.</p>



<p>ಈ ಪುಸ್ತಕದ ಪ್ರಕಟನೆಯೂ ಸುಲಭವಾಗಿರಲಿಲ್ಲ. ಹಸ್ತಪ್ರತಿ ಭಾರತಕ್ಕೆ ತಲುಪಿಸಲಾಯಿತಾದರೂ ಪ್ರಕಟಿಸಲು ಯಾರೂ ಮುಂದೆ ಬರಲಿಲ್ಲ. ನಂತರ ಬಾಬುರಾವ್‌ ಅದನ್ನು ಫ್ರಾನ್ಸ್‌ಗೆ ಕಳುಹಿಸಿದರು. ಅಲ್ಲಿಯೂ ಮುದ್ರಣ ಸಾಧ್ಯವಾಗದ ಕಾರಣ ಜರ್ಮಿನಿಯಲ್ಲಿ ಸಾಧ್ಯವೇ ಎಂದು <em>ಅಭಿನವ್‌ ಭಾರತ್</em>‌ ಕಾರ್ಯಕರ್ತರು ವಿಚಾರಿಸಿದರು. ಮರಾಠಿ ಭಾಷೆಯ ಮುದ್ರಣ ಜರ್ಮನಿಯಲ್ಲಿ ಕಷ್ಟವಾಗಿದ್ದರಿಂದ ಅದನ್ನು ಇಂಗ್ಲೀಷಿಗೆ ಅನುವಾದ ಮಾಡಲಾಯಿತು. ವಿ.ವಿ.ಎಸ್.‌ ಅಯ್ಯರ್‌ ಮೇಲ್ನೋಟದಲ್ಲಿ ಅನುವಾದ ಕಾರ್ಯ ನಡೆಯಿತು. ಈ ಇಂಗ್ಲೀಷ್‌ ಅನುವಾದವನ್ನು ಮುದ್ರಿಸಲು ಕೂಡ ಹಲವಾರು ಅಡೆತಡೆಗಳು ಎದುರಾದವು. ಕೊನೆಗೆ ಅದು ಹಾಲೆಂಡಿನಲ್ಲಿ ಮುದ್ರಣ ಕಂಡಿತು. ಮಸ್ಸಿನಿಯ ಪುಸ್ತಕದಂತೆ ಇದಕ್ಕೂ ಬ್ರಿಟಿಷರು ನಿಷೇಧ ಹೇರಿದರು. ಮುಖಪುಟ ಬದಲಾಯಿಸಿ ಡಿಕೆನ್ಸನ್‌ ಮತ್ತು ಸೆರ್ವಾಂಟಿಸ್‌ ಕೃತಿಗಳು ಎಂಬಂತೆ ಬಿಂಬಿಸಿ ಅವನ್ನು ಭಾರತಕ್ಕೆ ತರಲಾಗಿತ್ತು.<em><sup></sup></em></p>
]]></content:encoded>
					
		
		
			</item>
	</channel>
</rss>
