<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>home minister &#8211; Peepal Media</title>
	<atom:link href="https://peepalmedia.com/tag/home-minister/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 20 Jun 2025 12:07:23 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>home minister &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಇಂಗ್ಲಿಷ್ ಮಾತನಾಡುವುದು &#8216;ಅವಮಾನ&#8217; ಎಂಬ ಅಮಿತ್ ಶಾ ಹೇಳಿಕೆಯ ಐದು ಅಪಾಯಗಳು!</title>
		<link>https://peepalmedia.com/five-dangers-of-amit-shahs-statement-that-speaking-english-is-a-disgrace/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 20 Jun 2025 12:07:23 +0000</pubDate>
				<category><![CDATA[ಅಂಕಣ]]></category>
		<category><![CDATA[amit shah]]></category>
		<category><![CDATA[bjp]]></category>
		<category><![CDATA[English]]></category>
		<category><![CDATA[English Speakers]]></category>
		<category><![CDATA[hindutva]]></category>
		<category><![CDATA[home minister]]></category>
		<guid isPermaLink="false">https://peepalmedia.com/?p=61333</guid>

					<description><![CDATA[&#8220;ಈ ದೇಶದಲ್ಲಿ ಇಂಗ್ಲಿಷ್ ಮಾತನಾಡುವ ಜನರು ನಾಚಿಕೆಪಡುವ ಕಾಲ ದೂರವಿಲ್ಲ&#8221; ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯು ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ANI) ಮತ್ತು ಇತರ ಮಾಧ್ಯಮಗಳು ಆ ಭಾಷಣದ ಬಗ್ಗೆ ಮಾಡಿದ ತಮ್ಮ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳನ್ನು ಅಳಿಸಿ ಹಾಕಿವೆ. ಭಾರತೀಯ ರಾಜಕಾರಣದಲ್ಲಿ ಇಂತಹ ಹೇಳಿಕೆಗಳು ಈ ಹಿಂದೆಯೂ ಕಾಣಿಸಿಕೊಂಡಿದ್ದರೂ, ಆಡಳಿತಾರೂಢ ಬಿಜೆಪಿಯಲ್ಲಿ ವಾಸ್ತವಿಕವಾಗಿ &#8216;ನಂಬರ್ ಟು&#8217; ನಾಯಕರಾಗಿ ಮತ್ತು ಕೇಂದ್ರ ಗೃಹ ಸಚಿವರಾಗಿರುವ ಶಾ [&#8230;]]]></description>
										<content:encoded><![CDATA[
<p>&#8220;ಈ ದೇಶದಲ್ಲಿ ಇಂಗ್ಲಿಷ್ ಮಾತನಾಡುವ ಜನರು ನಾಚಿಕೆಪಡುವ ಕಾಲ ದೂರವಿಲ್ಲ&#8221; ಎಂದು ಕೇಂದ್ರ ಗೃಹ ಸಚಿವ <a href="https://thewire.in/government/time-not-far-away-when-people-speaking-in-english-in-this-country-will-feel-ashamed-amit-shah">ಅಮಿತ್ ಶಾ ಅವರ ಹೇಳಿಕೆಯು </a>ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ (ANI) ಮತ್ತು ಇತರ ಮಾಧ್ಯಮಗಳು  ಆ ಭಾಷಣದ ಬಗ್ಗೆ ಮಾಡಿದ ತಮ್ಮ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳನ್ನು ಅಳಿಸಿ ಹಾಕಿವೆ. </p>



<p>ಭಾರತೀಯ ರಾಜಕಾರಣದಲ್ಲಿ ಇಂತಹ ಹೇಳಿಕೆಗಳು ಈ ಹಿಂದೆಯೂ ಕಾಣಿಸಿಕೊಂಡಿದ್ದರೂ, ಆಡಳಿತಾರೂಢ ಬಿಜೆಪಿಯಲ್ಲಿ ವಾಸ್ತವಿಕವಾಗಿ &#8216;ನಂಬರ್ ಟು&#8217; ನಾಯಕರಾಗಿ ಮತ್ತು ಕೇಂದ್ರ ಗೃಹ ಸಚಿವರಾಗಿರುವ ಶಾ ಇಂತಹ ಮಾತುಗಳನ್ನು ಆಡುವುದು ಗಂಭೀರ ಸಂಗತಿ. </p>



<p>ಹಿಂದುತ್ವದ ದೀರ್ಘಕಾಲೀನ ಸಿದ್ದಾಂತವಾದ &#8220;ಹಿಂದಿ-ಹಿಂದೂ-ಹಿಂದೂಸ್ಥಾನ&#8221; ಘೋಷಣೆಯ ಕರಾಳತೆ ಅಡಿಯಲ್ಲಿ, ಶಾ ನೀಡಿದ ಈ ಹೇಳಿಕೆಯು ಕೇವಲ ಸಾಂಸ್ಕೃತಿಕ ಅಪಮೌಲೀಕರಣ ಮಾತ್ರ ಅಲ್ಲ, ಇದು ರಾಷ್ಟ್ರೀಯ ಗುರುತು, ಸಾಮಾಜಿಕ ಚಲನಶೀಲತೆ, ಬೌದ್ಧಿಕತೆ ಮತ್ತು ಭಾರತದ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಇರುವ ತಿಳುವಳಿಕೆಯ ಮೇಲೆ ಆಳವಾದ ರಾಜಕೀಯ ಮತ್ತು ಜಾಗತಿಕ ಪರಿಣಾಮಗಳನ್ನು ಬೀರಬಲ್ಲ ಸಂಗತಿ. </p>



<p>ಅಮಿತ್‌ ಶಾ ಹೇಳಿಕೆಯನ್ನು ಯಾಕೆ ಗಂಭೀರವಾಗಿ ತೆಗೆದುಕೊಳ್ಳಬೇಕು? </p>



<ol class="wp-block-list">
<li><strong>ಭಾಷಾಭಿಮಾನ ಮತ್ತು ವಿಭಜನೆಗೆ ತುಪ್ಪ ಸುರಿಯುತ್ತದೆ </strong></li>
</ol>



<p>ಭಾರತದ ಶಕ್ತಿಯೆಂದರೆ ಅದರ ಭಾಷಾ ವೈವಿಧ್ಯತೆ. ಭಾರತಕ್ಕೆ ಒಂದೇ ಒಂದು ರಾಷ್ಟ್ರೀಯ ಭಾಷೆ ಎಂಬುದು ಇಲ್ಲ, 22 ರಾಷ್ಟ್ರೀಯ ಅಧಿಕೃತ ಭಾಷೆಗಳಿವೆ. ಇಂಗ್ಲಿಷ್ ಅನ್ನು ವಿದೇಶಿ ಹೇರಿಕೆ ಎಂದು ಪ್ರಚಾರ ಮಾಡುವ ಮೂಲಕ ಮತ್ತು ಅದನ್ನು ಅವಮಾನ ಮಾಡುವ ಮೂಲಕ, ಶಾ ನೀಡಿದ ಈ ಹೇಳಿಕೆಯು ಭಾಷಾ ದುರಭಿಮಾನದ ಜ್ವಾಲೆಗಳನ್ನು ಹೆಚ್ಚಿಸುತ್ತಿದೆ. ಪ್ರಾದೇಶಿಕ ಮತ್ತು ಕೋಮು ಉದ್ವಿಗ್ನತೆಗಳಿಗೆ ಭಾಷೆಯೂ ಒಂದು ಪ್ರಚೋದನಕಾರಿ ಅಂಶವಾಗಿರುವ ಈ ದೇಶದಲ್ಲಿ ಇದು ಅಪಾಯಕಾರಿ.</p>



<p>ಭಾರತದಲ್ಲಿ, ವಿಶೇಷವಾಗಿ ಉನ್ನತ ಶಿಕ್ಷಣ, ವ್ಯವಹಾರ ಮತ್ತು ಅಂತರ-ರಾಜ್ಯ ಸಂವಹನದಲ್ಲಿ ಇಂಗ್ಲಿಷ್ ಹೆಚ್ಚಾಗಿ ತಟಸ್ಥ ಸೇತುವೆ ಭಾಷೆಯಾಗಿ ಕೆಲಸ ಮಾಡುತ್ತದೆ. ಹಿಂದಿ ಮಾತನಾಡದ ರಾಜ್ಯಗಳು, ವಿಶೇಷವಾಗಿ ದಕ್ಷಿಣ, ಪೂರ್ವ ಮತ್ತು ಈಶಾನ್ಯ ರಾಜ್ಯಗಳು, ಶಾ ಅವರ ಹೇಳಿಕೆಯನ್ನು ಇಡೀ ದೇಶದ ಮೇಲೆ ಹಿಂದಿ ಕೇಂದ್ರಿತ ಐಡೆಂಟಿಟಿಯನ್ನು ಹೇರಲು ಹಿಂದುತ್ವ ಆಡಳಿತವು ಮಾಡುತ್ತಿರುವ ಮತ್ತೊಂದು ಪ್ರಯತ್ನವೆಂದು ಪರಿಗಣಿಸುವ ಸಾಧ್ಯತೆಯಿದೆ. ಇದು ಪ್ರಾದೇಶಿಕ ವಿಭಜನೆಗಳು ಮತ್ತು ಭಾಷಿಕರ ನಡುವೆ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸುತ್ತದೆ.</p>



<ol start="2" class="wp-block-list">
<li><strong>ಹಿಂದುತ್ವವನ್ನು ಉತ್ತೇಜಿಸಲು ವಸಾಹತುಶಾಹಿ ಪರಂಪರೆ ಒಂದು ನೆಪವಷ್ಟೇ</strong>!</li>
</ol>



<p>ಹಿಂದಿ ಭಾಷೆಯನ್ನು ಭಾರತದ ಏಕಮಾತ್ರ ಅಸ್ಮಿತೆಯಾಗಿ ಪ್ರಚಾರ ಮಾಡುವ ಬಿಜೆಪಿಯ ದೀರ್ಘಕಾಲೀನ ಕಾರ್ಯಸೂಚಿಗೆ ಶಾ ಅವರ ಹೇಳಿಕೆ ಹೊಂದಿಕೆಯಾಗುತ್ತದೆ. ಇಂಗ್ಲಿಷ್ ಅನ್ನು ವಸಾಹತುಶಾಹಿ ಪರಂಪರೆ ಮತ್ತು &#8220;ಅವಮಾನ&#8221;ದ ಸಂಕೇತವಾಗಿ ರೂಪಿಸುವ ಮೂಲಕ, ಅವರು ಅಲ್ಟ್ರಾ ರಾಷ್ಟ್ರೀಯತಾವಾದಿಗಳನ್ನು ಉನ್ಮತ್ತರನ್ನಾಗಿಸುತ್ತಾರೆ ಮತ್ತು ತಮ್ಮ ಪಕ್ಷದ ಮೂಲ ಸೈದ್ದಾಂತಿಕ ನೆಲೆಯನ್ನು ಬಲಪಡಿಸುತ್ತಾರೆ. ನಿಜವಾದ ದೇಶಭಕ್ತಿಯೆಂದರೆ ಭಾರತೀಯ ಭಾಷೆಗಳನ್ನು ಅಳವಡಿಸಿಕೊಳ್ಳುವುದು ಎಂಬಂತೆ ಅವರ ಹೇಳಿಕೆ ಕಂಡು ಬಂದರೂ, ಅದರ ಹಿಂದೆ ಇರುವುದು ಹಿಂದಿಯ ಹೇರಿಕೆಯೇ ಆಗಿದೆ. </p>



<p>ವಸಾಹತುಶಾಹಿಯ ಹ್ಯಾಂಗೊವರ್‌ನಿಂದ ಹೊರ ಬರುವುದನ್ನು ಯೋಚಿಸುವ ಹೊತ್ತಿನಲ್ಲೇ, ಇಂಗ್ಲೀಷ್ ಜಾಗತಿಕ ಸಂಪರ್ಕ ಭಾಷೆಯಾಗಿ ಮತ್ತು ಅಂತರರಾಷ್ಟ್ರೀಯ ಸಂವಹನದ ಪ್ರಮುಖ ಸಾಧನವಾಗಿ ಬೆಳೆದಿದೆ. ಶಾ ಅವರು ಇಂಗ್ಲಿಷ್ ಅನ್ನು &#8220;ಅವಮಾನ&#8221; ಎಂದು ಕರೆಯುವ ಮೂಲಕ ಇದನ್ನು ಸೈದ್ಧಾಂತಿಕ ಮತ್ತು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಅಪಾಯವಿದೆ. ಇದು ಸಾರ್ವಜನಿಕ ಅಭಿಪ್ರಾಯವನ್ನು ಧ್ರುವೀಕರಿಸಬಹುದು ಮತ್ತು ಸಾರ್ವಜನಿಕ ಶಿಕ್ಷಣದ ಗುಣಮಟ್ಟದ ಬಗ್ಗೆ ಹೆಚ್ಚು ಅಗತ್ಯವಿರುವ ಚರ್ಚೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಬಹುದು. ಇದು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಪಠ್ಯಪುಸ್ತಕಗಳನ್ನು ತಮಗೆ ಬೇಕಾದಂತೆ ಬರೆಯುವ ತಂತ್ರವನ್ನು ಸುಲಭ ಮಾಡಬಹುದು. ಈ ದೃಷ್ಟಿಕೋನದಿಂದಲೇ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಡವರು ಜೀವನದಲ್ಲಿ ಮುಂದೆ ಬರಬಾರದು ಅಥವಾ ಪ್ರಶ್ನೆಗಳನ್ನು ಕೇಳಬಾರದು ಎಂಬ ಕಾರಣಕ್ಕಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಇಂಗ್ಲಿಷ್ ಅನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">अंग्रेज़ी बाँध नहीं, पुल है।<br>अंग्रेज़ी शर्म नहीं, शक्ति है।<br>अंग्रेज़ी ज़ंजीर नहीं &#8211; ज़ंजीरें तोड़ने का औज़ार है।<br><br>BJP-RSS नहीं चाहते कि भारत का ग़रीब बच्चा अंग्रेज़ी सीखे &#8211; क्योंकि वो नहीं चाहते कि आप सवाल पूछें, आगे बढ़ें, बराबरी करें।<br><br>आज की दुनिया में, अंग्रेज़ी उतनी ही ज़रूरी… <a href="https://t.co/VUjinqD91s">pic.twitter.com/VUjinqD91s</a></p>&mdash; Rahul Gandhi (@RahulGandhi) <a href="https://twitter.com/RahulGandhi/status/1935966665319051324?ref_src=twsrc%5Etfw">June 20, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<ol start="3" class="wp-block-list">
<li><strong>ಇಂಗ್ಲೀಷ್‌ ಕಲಿಯದಿದ್ದರೆ ಭಾರತ ಜಾಗತಿಕ ಸ್ಪರ್ಧಾತ್ಮಕತೆಗೆ ತನ್ನನ್ನು ತಾನು ಒಡ್ಡಿಕೊಳ್ಳುವುದು ಹೇಗೆ?</strong></li>
</ol>



<p>ಮಾಹಿತಿ ತಂತ್ರಜ್ಞಾನ ಮತ್ತು ಸೇವೆಗಳ ಶಕ್ತಿ ಕೇಂದ್ರವಾಗಿ ಭಾರತ ಬೆಳೆಯಲು ಇಂಗ್ಲಿಷ್ ಮಾತನಾಡುವ ಪ್ರತಿಭೆಗಳ ದೊಡ್ಡ ಗುಂಪು ಕೆಲಸ ಮಾಡಿದೆ. ಈ ಭಾಷಾ ಪ್ರಯೋಜನವು ಚೀನಾದಂತಹ ದೇಶಕ್ಕೆ ಅಸೂಯೆ ಹುಟ್ಟಿಸಿದೆ. ಇಂಗ್ಲಿಷ್ ಅನ್ನು ನಕಾರಾತ್ಮಕವಾಗಿ ಭಾರತವು ನೋಡಿದರೆ ಜಗತ್ತಿಗೆ ತಾನು ಹಿಂದುಳಿಯುತ್ತಿರುವ ಸಂದೇಶವನ್ನು ನೀಡಿದಂತಾಗುತ್ತದೆ. ಇದರಿಂದ ಜಾಗತಿಕ ಹೂಡಿಕೆದಾರರು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಶೈಕ್ಷಣಿಕ ಸಹಯೋಗಗಳಿಗೆ ಭಾರತದ ಕಡೆಗೆ ಆಕರ್ಷಣೆ ಕಡಿಮೆಯಾಗುವ ಅಪಾಯವಿದೆ.</p>



<p>ಇದು ಯುವ ಭಾರತೀಯರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ಕೌಶಲ್ಯಗಳನ್ನು ಪಡೆಯುವುದನ್ನು ನಿರುತ್ಸಾಹಗೊಳಿಸುತ್ತದೆ. ದೇಶದ ಭವಿಷ್ಯದ ಆರ್ಥಿಕ ನಿರೀಕ್ಷೆಗಳಿಗೆ ಹಾನಿಯುಂಟು ಮಾಡುತ್ತದೆ. ಶಾ ಅವರ ಹೇಳಿಕೆಯನ್ನು ಹಿಂದುತ್ವ ಆಡಳಿತದ ಅಧಿಕೃತ ನೀತಿಯೆಂದು ಪರಿಗಣಿಸಿದರೆ, ಭಾರತದ ರೂಡಿಸಿಕೊಳ್ಳುತ್ತಿರುವ ಮುಕ್ತತೆ ಮತ್ತು ಆಧುನಿಕತೆಯ ಮೇಲೆ ಪೆಟ್ಟು ಬೀಳುತ್ತದೆ. ವಿಶ್ವಮಾನವ, ಜಾಗತಿಕವಾಗಿ ಸಂಪರ್ಕ ಹೊಂದಿದ ರಾಷ್ಟ್ರವಾಗಿ ಬೆಳೆಯುತ್ತಿರುವ ಭಾರತದ ಇಮೇಜ್‌ಗೆ ದಕ್ಕೆಯಾಗುತ್ತದೆ. </p>



<ol start="4" class="wp-block-list">
<li><strong>ಸಾಮಾಜಿಕ ಚಲನಶೀಲತೆ ಮತ್ತು ಶಿಕ್ಷಣದ ಮೇಲೆ ಪರಿಣಾಮ</strong></li>
</ol>



<p>ಭಾರತದಲ್ಲಿ ಇಂಗ್ಲಿಷ್ ಭಾಷೆಯನ್ನು ಉತ್ತಮ ಶಿಕ್ಷಣ, ಉದ್ಯೋಗಗಳು ಮತ್ತು ಏಳಿಗೆಯ ಕಡೆಗಿನ ಹೆಬ್ಬಾಗಿಲು ಎಂದು ನೋಡಲಾಗುತ್ತದೆ. ಇಂಗ್ಲಿಷ್ ಅನ್ನು ಅವಮಾನಿಸುವ ಮೂಲಕ, ಶಾ ನೀಡಿದ ಹೇಳಿಕೆಯು ಆ ಭಾಷೆಯನ್ನು ಕಲಿಯಲು ಮುಂದೆ ಬರುವ ಲಕ್ಷಾಂತರ ಜನರನ್ನು ದೂರವಿಡುವ ಅಪಾಯವನ್ನುಂಟುಮಾಡುತ್ತದೆ.</p>



<p>ಇದು ಶಿಕ್ಷಣದಲ್ಲಿನ ಭಾಷೆಯ ಕುರಿತಾದ ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು. ಸಿರಿವಂತರಲ್ಲದ ಬಡ ವಿದ್ಯಾರ್ಥಿಗಳಿಗೆ ಜಾಗತಿಕ ಅವಕಾಶಗಳ ಸಿಗದಂತಾಗುವ ಸಾಧ್ಯತೆಯಿದೆ. ಇದು ನಗರ ಮತ್ತು ಗ್ರಾಮೀಣ ಜನ ಸಮುದಾಯಗಳ ನಡುವೆ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣವನ್ನು ಹೊಂದಿರುವ ಹಾಗೂ ಇಂಗ್ಲೀಷ್‌ ಮಾಧ್ಯಮದವರಲ್ಲದ ವಿದ್ಯಾರ್ಥಿಗಳ ನಡುವಿನ ಸಾಮಾಜಿಕ ವಿಭಜನೆಯನ್ನು ಇನ್ನಷ್ಟು ಹೆಚ್ಚಿಸಬಹುದು.</p>



<ol start="5" class="wp-block-list">
<li><strong>ಬೌದ್ಧಿಕ ಮತ್ತು ಸಾಂಸ್ಕೃತಿಕ ಪತನಕ್ಕೆ ದಾರಿ</strong></li>
</ol>



<p>ಇಂಗ್ಲಿಷ್ ಮಾತನಾಡುವುದನ್ನು ಸಾಂಸ್ಕೃತಿಕವಾಗಿ ಅವಮಾನವೆಂದು ಕರೆಯುವುದು ಶಾ ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಇಂಗ್ಲಿಷ್‌ನಲ್ಲಿ ಬಲ್ಲ, ಹೆಚ್ಚಾಗಿ ಅತ್ಯುತ್ತಮ ಶಿಕ್ಷಣ ಪಡೆದ ಮತ್ತು ಜಾಗತಿಕವಾಗಿ ಸಂಪರ್ಕ ಹೊಂದಿದ ಭಾರತೀಯರಿಗೆ ಮಾಡಿದ ಅವಮಾನ ಇದು. ಭಾರತ ವಿಶ್ವಮಾನವತೆಯ ದೇಶವಲ್ಲ ಎಂಬ ತಪ್ಪು ಸಂದೇಶವನ್ನು ಇದು ಜಾಗತಿಕವಾಗಿ ನೀಡುತ್ತದೆ. ಇದರಿಂದ ಸ್ವಚ್ಚಂದ ಮನಸ್ಸುಗಳು ಮುಕ್ತತೆಯನ್ನು ಕಳೆದುಕೊಳ್ಳುತ್ತವೆ. ಜಾಗತಿಕ ಜ್ಞಾನವನ್ನು ಸಂಪಾದಿಸಲು ಭಾರತದ ಯುವಜನರಿಗೆ ಅವಕಾಶ ತಪ್ಪಿ ಹೋಗುತ್ತದೆ. ಓದು ಕಡಿಮೆಯಾಗುತ್ತದೆ. ಭಾರತವು ಪ್ರಪಂಚದೊಂದಿಗೆ ತೊಡಗಿಸಿಕೊಳ್ಳಬೇಕಾದ ಸಮಯದಲ್ಲಿ ದೇಶದ ಜನರಲ್ಲಿ ಸಂಕುಚಿತ ಮನೋಭಾವವನ್ನು ಬೆಳೆಸುತ್ತದೆ.</p>



<p>ಒಟ್ಟಾರೆಯಾಗಿ ಹೇಳುವುದಾದರೆ, ಶಾ ಅವರ ಹೇಳಿಕೆಯಿಂದ ಇರುವ ಲಾಭವೆಂದರೆ ಭಾರತೀಯ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ವಿಭಜನೆಯನ್ನುಂಟುಮಾಡುವುದು. ಉಳಿದಂತೆ ಎಲ್ಲವೂ ನಷ್ಟವೇ, ಅಪಾಯಕಾರಿಯೇ!. ಇದು ಸಾಮಾಜಿಕ ಚಲನಶೀಲತೆಗೆ ಬೀಳುವ ಹೊಡೆತ, ಭಾಷಾ ವೈಷಮ್ಯವನ್ನು ಬಿತ್ತುವ ತಂತ್ರ, ಭಾರತದ ಜಾಗತಿಕ ಸ್ಥಾನಮಾನಕ್ಕೆ ಅಪಾಯವನ್ನುಂಟು ಮಾಡಬಲ್ಲ ಅವಿವೇಕದ ಹೇಳಿಕೆ. ಬೌದ್ಧಿಕತೆಯ ಬಗ್ಗೆ, ಜ್ಞಾನದ ಬೇರೆ ಬೇರೆ ಶಿಸ್ತುಗಳ ಬಗ್ಗೆ ವಿರೋಧಿ ಮನೋಭಾವವನ್ನು ಬೆಳೆಸುತ್ತದೆ. ದೇಶ ಎದುರಿಸುತ್ತಿರುವ ನೈಜ ಸವಾಲುಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತದೆ. ಶಾ ಅವರ &#8216;ನಾಚಿಕೆಗೇಡು &#8211; ಅಪಮಾನ&#8217; ಎಂಬ ಯಾವುದೇ ಒಳ್ಳೆಯ ಉದ್ದೇಶ ಇಲ್ಲದ ಹೇಳಿಕೆಯಿಂದ ದೇಶಕ್ಕೇ ಹಾನಿ!</p>
]]></content:encoded>
					
		
		
			</item>
		<item>
		<title>ಕೆನಡಾದ ಖಲಿಸ್ತಾನಿಗಳ ಮೇಲಿನ ದಾಳಿಯ ಹಿಂದೆ ಶಾ ಕೈವಾಡ: ಕೆನಡಾ ಉಪ ವಿದೇಶಾಂಗ ಸಚಿವ ಮಾರಿಸನ್</title>
		<link>https://peepalmedia.com/shah-behind-attack-on-khalistanis-in-canada/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 30 Oct 2024 07:48:05 +0000</pubDate>
				<category><![CDATA[ವಿದೇಶ]]></category>
		<category><![CDATA[ajit doval]]></category>
		<category><![CDATA[amit shah]]></category>
		<category><![CDATA[bnagalore]]></category>
		<category><![CDATA[canada]]></category>
		<category><![CDATA[canada india]]></category>
		<category><![CDATA[David Morrison]]></category>
		<category><![CDATA[home minister]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Khalistan]]></category>
		<category><![CDATA[lawrence bishnoi]]></category>
		<category><![CDATA[Ministry of External Affairs]]></category>
		<guid isPermaLink="false">https://peepalmedia.com/?p=48073</guid>

					<description><![CDATA[ಬೆಂಗಳೂರು: ಭಾರತದ ಗೃಹ ಸಚಿವ ಅಮಿತ್‌ ಶಾ ಕೆನಡಾದ ಪ್ರಜೆಗಳನ್ನು ಕೊಲ್ಲಲು ಸಂಚಿನಲ್ಲಿ ಭಾಗಿಯಾಗಿದ್ದರೆ,” ಎಂಬ ಕೆನಡಾದ ಉಪ ವಿದೇಶಾಂಗ ವ್ಯವಹಾರಗಳ ಸಚಿವ ಡೇವಿಡ್ ಮಾರಿಸನ್ ಅಕ್ಟೋಬರ್ 29, ಮಂಗಳವಾರ ಅಮೇರಿಕಾದ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಗೆ ನೀಡಿದ ಹೇಳಿಕೆ ಭಾರತ ಮತ್ತು ಕೆನಡಾದ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆಗಳನ್ನು ದೃಢಪಡಿಸಿದೆ.  ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಕೆನಡಾದ ಸಂಸದೀಯ ಸಮಿತಿಯ ವಿಚಾರಣೆಯಲ್ಲಿ ಅವರು ಈ ವಿಚಾರ ಬಹಿರಂಗಪಡಿಸಿದ್ದಾರೆ. ವಾಷಿಂಗ್ಟನ್ ಪೋಸ್ಟ್ ಅಕ್ಟೋಬರ್ 14 [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಭಾರತದ ಗೃಹ ಸಚಿವ ಅಮಿತ್‌ ಶಾ ಕೆನಡಾದ ಪ್ರಜೆಗಳನ್ನು ಕೊಲ್ಲಲು ಸಂಚಿನಲ್ಲಿ ಭಾಗಿಯಾಗಿದ್ದರೆ,” ಎಂಬ ಕೆನಡಾದ ಉಪ ವಿದೇಶಾಂಗ ವ್ಯವಹಾರಗಳ ಸಚಿವ ಡೇವಿಡ್ ಮಾರಿಸನ್ ಅಕ್ಟೋಬರ್ 29, ಮಂಗಳವಾರ ಅಮೇರಿಕಾದ <a href="https://www.washingtonpost.com/world/2024/10/14/canada-modi-sikhs-violence-india/">ವಾಷಿಂಗ್ಟನ್‌ ಪೋಸ್ಟ್‌ </a>ಪತ್ರಿಕೆಗೆ  ನೀಡಿದ ಹೇಳಿಕೆ ಭಾರತ ಮತ್ತು ಕೆನಡಾದ ರಾಜತಾಂತ್ರಿಕ ಸಂಬಂಧ ಮತ್ತಷ್ಟು ಹದಗೆಡುವ ಸಾಧ್ಯತೆಗಳನ್ನು ದೃಢಪಡಿಸಿದೆ. </p>



<p>ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತು ಕೆನಡಾದ ಸಂಸದೀಯ ಸಮಿತಿಯ ವಿಚಾರಣೆಯಲ್ಲಿ ಅವರು ಈ ವಿಚಾರ ಬಹಿರಂಗಪಡಿಸಿದ್ದಾರೆ.</p>



<p>ವಾಷಿಂಗ್ಟನ್ ಪೋಸ್ಟ್ ಅಕ್ಟೋಬರ್ 14 ರಂದು ಹೆಸರಿಸದ ಕೆನಡಾದ ಅಧಿಕಾರಿಗಳನ್ನು ಉಲ್ಲೇಖಿಸಿ, ಆ ದಿನ ದೇಶದಿಂದ ಹೊರಹೋಗಲು ಆದೇಶಿಸಲಾದ &#8220;ಭಾರತೀಯ ರಾಜತಾಂತ್ರಿಕರ ನಡುವಿನ ಸಂಭಾಷಣೆಗಳು ಮತ್ತು ಟೆಕ್ಸ್ಟ್‌ಗಳು&#8221; ಶಾ ಮತ್ತು ರಾ (RAW) ಹಿರಿಯ ಅಧಿಕಾರಿಯ &#8220;ಉಲ್ಲೇಖಗಳನ್ನು ಒಳಗೊಂಡಿವೆ&#8221; ಮತ್ತು ಇವರು ಕೆನಡಾದಲ್ಲಿ &#8220;ಸಿಖ್ ಪ್ರತ್ಯೇಕತಾವಾದಿಗಳ ಮೇಲೆ ಗುಪ್ತಚರ-ಸಂಗ್ರಹ ಕಾರ್ಯಾಚರಣೆಗಳು ಮತ್ತು ದಾಳಿಗಳನ್ನು” ನಡೆಸಿದ್ದಾರೆ ಎಂದು ಅವರು ಭಾರತ ಸರ್ಕಾರಕ್ಕೆ ತಿಳಿಸಿದ್ದರು ಎಂದು ವರದಿ ಮಾಡಿದೆ.</p>



<p>ಭಾರತದಿಂದ ಭಯೋತ್ಪಾದಕ ಎಂದು ನಿಷೇಧಿಸಲಾದ ಖಲಿಸ್ತಾನ್ ಪರ ಹೋರಾಡುತ್ತಿರುವ ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ ಒಂದು ವರ್ಷದ ನಂತರ ಅಮೇರಿಕಾದ ಪತ್ರಿಕೆಯಲ್ಲಿನ ಲೇಖನವು ರಾಜತಾಂತ್ರಿಕ ವಿವಾದಕ್ಕೆ ತುಪ್ಪ ಸುರಿದಿದೆ.</p>



<p>ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಸೇರಿದಂತೆ ಭಾರತದ ಆರು ರಾಜತಾಂತ್ರಿಕರು ಕ್ರಿಮಿನಲ್ ತನಿಖೆಯಲ್ಲಿ &#8220;ಹಿತಾಸಕ್ತಿಯ ವ್ಯಕ್ತಿಗಳು&#8221; ಎಂದು ಕೆನಡಾ ತಿಳಿಸಿದೆ ಎಂದು ಅಕ್ಟೋಬರ್ 14 ರಂದು ಭಾರತ ಘೋಷಿಸಿತ್ತು.</p>



<p>ಕೆನಡಾದ ಆರು ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿ <em>personae non gratae ಎಂದು </em>&nbsp;ಘೋಷಿಸಲು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕೆನಡಾದ ಉಸ್ತುವಾರಿಗಳನ್ನು ಕರೆಸಿಕೊಂಡಿತ್ತು.</p>



<p>ಅದೇ ಸಮಯದಲ್ಲಿ, ಒಟ್ಟಾವಾದಲ್ಲಿರುವ ಆರು ಭಾರತೀಯ ರಾಜತಾಂತ್ರಿಕರಿಗೆ ಉಚ್ಚಾಟನೆಯ ನೋಟಿಸ್ ನೀಡಲಾಗಿದೆ ಎಂದು ಕೆನಡಾ ಹೇಳಿದೆ.</p>



<p>ಆ ದಿನ, ನಿಜ್ಜರ್ ಹತ್ಯೆ ತನಿಖೆ ನಡೆಸುತ್ತಿರುವ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ( RCMP ) ಪತ್ರಿಕಾಗೋಷ್ಠಿಯನ್ನು ನಡೆಸಿ, ಭಾರತೀಯ ರಾಜತಾಂತ್ರಿಕರು ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್‌ನ ಸದಸ್ಯರನ್ನು ಭಾರತೀಯ ಮೂಲದ ಕೆನಡಾದ ಪ್ರಜೆಗಳನ್ನು ಬೆದರಿಸಲು ಬಳಸಿದ್ದಾರೆ ಎಂಬುದಕ್ಕೆ ಪುರಾವೆಗಳು ತಮ್ಮಲ್ಲಿವೆ ಎಂದು ಹೇಳಿದ್ದರು.</p>



<p>ಕೆನಡಾದ ಹಿರಿಯ ಭದ್ರತಾ ಮತ್ತು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಡುವೆ ಅಕ್ಟೋಬರ್ 12 ರಂದು ಸಿಂಗಾಪುರದಲ್ಲಿ ನಡೆದ ಸಭೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ವರದಿಯಾಗಿದೆ.</p>



<p>ವಾಷಿಂಗ್ಟನ್ ಪೋಸ್ಟ್ ಲೇಖನದ ಮುಂಚಿನ ಆವೃತ್ತಿಯಲ್ಲಿ ಶಾ ಅವರ ಹೆಸರು ಇರಲಿಲ್ಲ ಮತ್ತು ಅದು &#8220;ಭಾರತದ ಹಿರಿಯ ಅಧಿಕಾರಿ&#8221; ಭಾಗಿಯಾಗಿರುವುದನ್ನು ಮಾತ್ರ ಉಲ್ಲೇಖಿಸಿದೆ. ಲೇಖನ ಪ್ರಕಟವಾಗಿ ಕೆಲ ಗಂಟೆಗಳ ನಂತರ ಲೇಖನವನ್ನು ತಿದ್ದುಪಡಿ ಮಾಡಿ ಕೇಂದ್ರ ಗೃಹ ಸಚಿವರನ್ನೇ ಆ ಅಧಿಕಾರಿ ಎಂದು ಉಲ್ಲೇಖಿಸಿದೆ.</p>



<p>ಕೆನಡಾ ಪ್ರಧಾನ ಮಂತ್ರಿಯ ರಾಷ್ಟ್ರೀಯ ಭದ್ರತೆ ಮತ್ತು ಗುಪ್ತಚರ ಸಲಹೆಗಾರರಾದ ನಥಾಲಿ ಡ್ರೊಯಿನ್ ಅವರು ಸಂಸದೀಯ ಸಮಿತಿಗೆ ನೀಡಿದ ತನ್ನ ಆರಂಭಿಕ ಹೇಳಿಕೆಯಲ್ಲಿ ಪ್ರಕರಣದ &#8220;ಹಿನ್ನೆಲೆ&#8221; ಕುರಿತು ವಾಷಿಂಗ್ಟನ್ ಪೋಸ್ಟ್‌ನೊಂದಿಗೆ ಮಾತನಾಡುವುದು ಭಾರತ ಸರ್ಕಾರ ಹರಡುತ್ತಿರುವ &#8220;ತಪ್ಪು ಮಾಹಿತಿ&#8221; ಯನ್ನು ಎದುರಿಸುವ ಮಾಧ್ಯಮ ಕಾರ್ಯತಂತ್ರದ ಭಾಗವಾಗಿದೆ ಎಂದು ವಿವರಿಸಿದರು.</p>



<p>ಕನ್ಸರ್ವೇಟಿವ್ ಪಕ್ಷದ ಸಂಸದ ರಾಕೆಲ್ ಡ್ಯಾಂಚೋ ವಾಷಿಂಗ್ಟನ್ ಪೋಸ್ಟ್‌ನೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವ ಕೆನಡಾದ ನಿರ್ಧಾರವನ್ನು ಪ್ರಶ್ನೆ ಮಾಡಿದ್ದರು .</p>



<p>&#8220;ಉದಾಹರಣೆಗೆ, ಭಾರತೀಯ ಗೃಹ ವ್ಯವಹಾರಗಳ ಸಚಿವರು ಮತ್ತು ಕೆನಡಾದಲ್ಲಿ ನಡೆದ ಈ ಅಪರಾಧಗಳಲ್ಲಿ ಅವರು ಭಾಗಿಯಾಗಿದ್ದಾರೆಂದು ಹೇಳಲಾಗುವ ಮಾಹಿತಿಯನ್ನು ಕೆನಡಾದಲ್ಲಿ ಬಿಡುಗಡೆ ಮಾಡಲಾಗಿಲ್ಲ, ಅದು ವಾಷಿಂಗ್ಟನ್ ಪೋಸ್ಟ್‌ನಲ್ಲಿ ಮಾತ್ರ ಬಿಡುಗಡೆಯಾಗಿದ್ದು ಯಾಕೆ &#8230;?&#8221; ಎಂದು ಅವರು ಪ್ರಶ್ನೆ ಮಾಡಿದ್ದರು.</p>



<p>ಇದಕ್ಕೆ ತಾವೇ ಈ ಮಾಹಿತಿಯನ್ನು ಪತ್ರಿಕೆಗೆ ನೀಡಿಲ್ಲ ಎಂದು&nbsp; ಡ್ರೊಯಿನ್ ಪ್ರತಿಕ್ರಿಯಿಸಿದ್ದಾರೆ. &#8220;ಆದ್ದರಿಂದ ಇದು ನಾವು ಪತ್ರಕರ್ತರಿಗೆ ನೀಡಿದ ಮಾಹಿತಿಯಲ್ಲ&#8221; ಎಂದು ಅವರು ಸಮರ್ಥನೆ ನೀಡಿದ್ದಾರೆ.</p>



<p>ಅದೇ ಪ್ರಶ್ನೆಯನ್ನು ಕೆನಡಾದ ಉಪ ವಿದೇಶಾಂಗ ಸಚಿವ ಮಾರಿಸನ್ ಅವರನ್ನು ಡಾಂಚೋ ಕೇಳಿದಾಗ, ಅವರು “ಪತ್ರಕರ್ತ ನನ್ನನ್ನು ಕರೆದು ಅದು ಅದೇ ವ್ಯಕ್ತಿಯೇ ಎಂದು ಕೇಳಿದ. ನಾನು ಅದೇ ವ್ಯಕ್ತಿ ಖಚಿತಪಡಿಸಿದೆ,” ಎಂದು ಅವರು ಹೇಳಿದರು.</p>



<p>ಇಬ್ಬರು ಕೆನಡಾದ ಹಿರಿಯ ಅಧಿಕಾರಿಗಳು ವಿಚಾರಣೆಯಲ್ಲಿ ಆರ್‌ಸಿಎಂಪಿ ಕಮಿಷನರ್ ಸೇರಿದಂತೆ ಇತರ ಅಧಿಕಾರಿಗಳು ಸೇರಿಕೊಂಡು &#8220;ಭಾರತ ಸರ್ಕಾರದ ಏಜೆಂಟ್‌ಗಳಿಂದ <a href="https://www.ourcommons.ca/documentviewer/en/44-1/SECU/meeting-126/notice">ಕೆನಡಾದಲ್ಲಿ ಚುನಾವಣಾ ಹಸ್ತಕ್ಷೇಪ ಮತ್ತು ಕ್ರಿಮಿನಲ್ ಚಟುವಟಿಕೆಗಳಿಗೆ</a>,&#8221; ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರು.</p>



<p>ಸಿಖ್ ಸಮುದಾಯದ &#8220;ಮತ ಬ್ಯಾಂಕ್‌ಗಳನ್ನು&#8221; ಭದ್ರಪಡಿಸುವ ಟ್ರುಡೊ ಅವರ ವೈಯಕ್ತಿಕ ರಾಜಕೀಯ ಕಾರ್ಯಸೂಚಿಯ ಭಾಗವಾಗಿದೆ ಎಂದು ಪ್ರತಿಪಾದಿಸಿದ ಭಾರತ ಸರ್ಕಾರವು ತನ್ನ ಮೇಲಿನ ಈ ಆರೋಪಗಳನ್ನು &#8220;ಅಪರಾಧ&#8221; ಎಂದು ಪ್ರತಿಪಾದಿಸಿದೆ.</p>



<p>ತನ್ನ ಲಿಖಿತ ಉತ್ತರದಲ್ಲಿ,&nbsp; ಡ್ರೂಯಿನ್ ಸಹವರ್ತಿಗಳು, ತಾನು ಮತ್ತು ಅಜಿತ್‌ ದೋವಲ್‌ ನಡುವೆ ಆಗಸ್ಟ್ 2023 ರಿಂದ ನಡೆದ ಮೀಟಿಂಗ್‌ಗಳ ಪಟ್ಟಿಯನ್ನು ನೀಡಿದ್ದಾರೆ.</p>



<p>“ ನಾವು ಕೆನಡಾದ NSIA, ನನ್ನ ಪೂರ್ವವರ್ತಿ, ನಾನು ಅಥವಾ GAC [ಗ್ಲೋಬಲ್ ಅಫೇರ್ಸ್ ಕೆನಡಾ], CSIS [ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್] ಅಥವಾ PCO [ಪ್ರೈವಿ ಕೌನ್ಸಿಲ್ ಆಫೀಸ್] ನ ಆರು ಕೆನಡಾದ ಹಿರಿಯ ಅಧಿಕಾರಿಗಳು ಹಾಗೂ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರ ನಡುವೆ ಆರು ಕಡೆಗಳಲ್ಲಿ ಒಪ್ಪಂದದ ಮಾತುಕತೆಗಳು ನಡೆದಿವೆ. ಅಂದರೆ ಆಗಸ್ಟ್ ಮತ್ತು ಸೆಪ್ಟೆಂಬರ್ 2023 ನವದೆಹಲಿಯಲ್ಲಿ, ನವೆಂಬರ್ 2023 ರಲ್ಲಿ ದುಬೈನಲ್ಲಿ, ಡಿಸೆಂಬರ್ 2023 ಸೌದಿ ಅರೇಬಿಯಾದಲ್ಲಿ, ಜನವರಿ 2024 ರಲ್ಲಿ ಲಂಡನ್ ಮತ್ತು ಮಾರ್ಚ್ 2024 ರಲ್ಲಿ ದುಬೈನಲ್ಲಿ ಮತ್ತು ಮೇ 2024 ರಲ್ಲಿ RCMP ಈ ಪ್ರಕರಣದ ಸಂಬಂಧ ಒಂದು ಬಂಧನವನ್ನು ಮಾಡುವಾಗ ಮಾತುಕತೆ ನಡೆಸಿದ್ದೆವು, ” ಎಂದು ಅವರು ಹೇಳಿದ್ದರು.</p>



<p>2024 ರ ಆಗಸ್ಟ್ ಕೊನೆಯಲ್ಲಿ RCMP ಭಾರತದ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದೆ ಎಂದು ಅವರು ಹೇಳಿದ್ದಾರೆ. ಕೆನಡಾದ ಪ್ರಜೆಗಳ ಮೇಲೆ ಭಾರತೀಯ ರಾಜತಾಂತ್ರಿಕರು ಮತ್ತು ದೂತಾವಾಸ ಅಧಿಕಾರಿಗಳಿಂದ ನಡೆದ &#8220;ದಬ್ಬಾಳಿಕೆ ಮತ್ತು ಬೆದರಿಕೆಗಳ&#8221; ಮಾಹಿತಿಯನ್ನು ತೋರಿಸಿದೆ ಎಂದು ಅವರು ಹೇಳಿದರು.</p>



<p>&#8220;ಈ ಮಾಹಿತಿಯನ್ನು ನಂತರ ಬಿಷ್ಣೋಯ್ ಗ್ಯಾಂಗ್‌ ಬಳಸಿ ಕೆನಡಾದಲ್ಲಿ ಅಪರಾಧ ನಡೆಸಲು ನಿರ್ದೇಶನ ನೀಡಿದ್ದ ಭಾರತ ಸರ್ಕಾರದ ಉನ್ನತ ಮಟ್ಟದ ಜೊತೆಗೆ ಹಂಚಿಕೊಳ್ಳಲಾಗುತ್ತದೆ,&#8221; ಎಂದು ಅವರು ಹೇಳಿದರು.</p>



<p>&#8220;ಕೆನಡಾದಲ್ಲಿ ಇವರು ಮಾಡಿದ ಗಂಭೀರ ಅಪರಾಧಗಳಲ್ಲಿ ಕೊಲೆಗಳು, ಹತ್ಯೆಯ ಸಂಚುಗಳು, ಸುಲಿಗೆಗಳು ಮತ್ತು ಇತರ ತೀವ್ರ ಹಿಂಸಾಚಾರಗಳು ಸೇರಿವೆ,&#8221; ಕೆನಡಾದ NSA ಆರೋಪಿಸಿದೆ.</p>



<p>ಆರೋಪಗಳಿಗೆ &#8220;ಸಾಕ್ಷ್ಯಗಳನ್ನು&#8221; ಪ್ರಸ್ತುತಪಡಿಸಲು RCMP ಅಧಿಕಾರಿಗಳು ತಮ್ಮ ಭಾರತೀಯ ಸಹವರ್ತಿಗಳನ್ನು ಭೇಟಿಯಾಗಲು ಹೋಗುವುದನ್ನು ತಡೆಯಲು ಭಾರತವು ಮೊದಲು &#8220;ಆಡಳಿತಾತ್ಮಕ ತಾಂತ್ರಿಕತೆಯನ್ನು ಬಳಸಿದೆ&#8221; ಎಂದು ಡ್ರೂಯಿನ್ ಹೇಳಿದ್ದಾರೆ. ಇದಕ್ಕೆ ಭಾರತವು ಕೆನಡಾ ಅಧಿಕಾರಿಗಳು ವೀಸಾಕ್ಕಾಗಿ ಶಾರ್ಟ್‌ ನೊಟೀಸ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದೆ.</p>



<p>&#8220;ಎರಡನೆಯದಾಗಿ, ಅಕ್ಟೋಬರ್ 10 ರಂದು ಆರ್‌ಸಿಎಂಪಿ ವಾಷಿಂಗ್ಟನ್‌ಗೆ ಹೋಗಿ, ಭಾರತೀಯ ಅಧಿಕಾರಿಗಳ ಜೊತೆಗೆ ಸಭೆಯನ್ನು ನಡೆಸಿದರೂ ವಿಚಾರದ ಗಂಭೀರತೆಯನ್ನು ಪರಿಗಣಿಸಿಲ್ಲ ಎಂದು,&#8221; ಎಂದು ಡ್ರೂಯಿನ್ ಆರೋಪ ಮಾಡಿದ್ದಾರೆ.</p>



<p>ಅಕ್ಟೋಬರ್ 12 ರಂದು ಸಿಂಗಾಪುರದಲ್ಲಿ ದೋವಲ್ ಅವರೊಂದಿಗೆ ನಡೆದ ಸಭೆಯಲ್ಲಿ, ಆರ್‌ಸಿಎಂಪಿ ಡೆಪ್ಯೂಟಿ ಕಮಿಷನರ್ &#8220;ಭಾರತ ಸರ್ಕಾರದ ಏಜೆಂಟರು ಕೆನಡಾದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಅಪರಾಧ ಚಟುವಟಿಕೆಗಳ ಜೊತೆಗೆ ಸಂಬಂಧ ಇರುವ ಪುರಾವೆಗ ಬಗ್ಗೆ ಮಾತನಾಡಿ, ಅವುಗಳನ್ನು ತೋರಿಸಿದ್ದರು,” ಎಂದು ಅವರು ಹೇಳಿದರು.</p>



<p>ಭಾರತದ ಈಎಲ್ಲಾ ಆರೋಪಗಳನ್ನು ನಿರಾಕರಿಸಿದೆ, ಆದರೆ, ಅಕ್ಟೋಬರ್ 12 ರ ಸಭೆಯನ್ನು ದೋವಲ್ ಅವರ ಕೋರಿಕೆಯ ಮೇರೆಗೆ ಗೌಪ್ಯವಾಗಿಡಲಾಗುವುದು ಎಂದು ಒಪ್ಪಿಕೊಂಡ ನಂತರ ಅಕ್ಟೋಬರ್ 14 ರಂದು ಮತ್ತೊಂದು ಸಭೆ ನಡೆಸಲು ತೀರ್ಮಾನಿಸಲಾಗಿತ್ತು ಎಂದು ಡ್ರೂಯಿನ್ ಹೇಳಿದ್ದಾರೆ.</p>



<p>&#8220;ಇದರ ಬದಲಿಗೆ, ಭಾರತ ಸರ್ಕಾರವು ನಮ್ಮ ಒಪ್ಪಂದವನ್ನು ಗೌರವಿಸದೆ ಮರುದಿನ, ಅಂದರೆ ಅಕ್ಟೋಬರ್ 13,&nbsp; ಭಾನುವಾರದಂದು ಸಾರ್ವಜನಿಕವಾಗಿ ಈ ಬಗ್ಗೆ ಹೇಳಿಕೆ ನೀಡಲು ಹೋಗಿತ್ತು ಮತ್ತು ಕೆನಡಾ ಬಳಿ ಯಾವುದೇ ಪುರಾವೆಗಳಿಲ್ಲ ಎಂಬ ತಮ್ಮ ಸುಳ್ಳು ನಿರೂಪಣೆಯನ್ನು ಮತ್ತೊಮ್ಮೆ ಬಳಸಿತು. ಭಾರತ ಸರ್ಕಾರವು ಇದಕ್ಕೆಲ್ಲ ತಾವು ಜವಾಬ್ದಾರರಾಗಿರುವುದಿಲ್ಲ ಅಥವಾ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಾವು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದ್ದಾರೆ. ಇದು ಭಾರತದ ರಾಜತಾಂತ್ರಿಕರನ್ನು ನಮ್ಮ ದೇಶದಿಂದ ಹೊರಹಾಕಲು ಇದ್ದ ಪ್ರಚೋದನೆಯಾಗಿತ್ತು,” ಎಂದು ಅವರು ಆರೋಪಿಸಿದ್ದರು.</p>
]]></content:encoded>
					
		
		
			</item>
		<item>
		<title>ಭಾರತದಲ್ಲಿ ಹೆಚ್ಚಿದ ಮಹಿಳಾ ದೌರ್ಜನ್ಯ: ಅಪರಾಧದಲ್ಲಿ ಉತ್ತರಪ್ರದೇಶವೇ ಟಾಪ್!‌  NCRB ವರದಿ ಬಹಿರಂಗ</title>
		<link>https://peepalmedia.com/increase-in-crimes-against-women-ncrb/</link>
		
		<dc:creator><![CDATA[Charan Aivarnad]]></dc:creator>
		<pubDate>Tue, 05 Dec 2023 07:37:23 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ದೇಶ]]></category>
		<category><![CDATA[amit shah]]></category>
		<category><![CDATA[Bangalore]]></category>
		<category><![CDATA[breaking news]]></category>
		<category><![CDATA[children]]></category>
		<category><![CDATA[crime]]></category>
		<category><![CDATA[fir]]></category>
		<category><![CDATA[home minister]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[National Crime Records Bureau]]></category>
		<category><![CDATA[NCRB]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[women]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33396</guid>

					<description><![CDATA[ಬೆಂಗಳೂರು: 2021 ಕ್ಕೆ ಹೋಲಿಸಿದರೆ ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು 2022 ರಲ್ಲಿ ಶೇ.4 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 4,45,256 ಪ್ರಕರಣಗಳು ದಾಖಲಾಗಿದ್ದವು ಎಂದು 3 ಡಿಸೆಂಬರ್, ಭಾನುವಾರ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau &#8211; NCRB) ನ 2022 ರ ವರದಿ ಬಹಿರಂಗಪಡಿಸಿದೆ. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಣೆಯಾದ ದಿನವೇ ಎನ್‌ಸಿಆರ್‌ಬಿ ವಾರ್ಷಿಕ ವರದಿ ಬಿಡುಗಡೆಗೊಂಡಿದ್ದು, ಮಕ್ಕಳು, ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ) [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> 2021 ಕ್ಕೆ ಹೋಲಿಸಿದರೆ ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳು 2022 ರಲ್ಲಿ ಶೇ.4 ರಷ್ಟು ಏರಿಕೆಯಾಗಿದೆ. ಕಳೆದ ವರ್ಷ 4,45,256 ಪ್ರಕರಣಗಳು ದಾಖಲಾಗಿದ್ದವು ಎಂದು 3 ಡಿಸೆಂಬರ್, ಭಾನುವಾರ ಬಿಡುಗಡೆಯಾದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (National Crime Records Bureau &#8211; NCRB) ನ 2022 ರ ವರದಿ ಬಹಿರಂಗಪಡಿಸಿದೆ.</p>



<p>ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಣೆಯಾದ ದಿನವೇ ಎನ್‌ಸಿಆರ್‌ಬಿ ವಾರ್ಷಿಕ ವರದಿ ಬಿಡುಗಡೆಗೊಂಡಿದ್ದು, ಮಕ್ಕಳು, ಪರಿಶಿಷ್ಟ ಜಾತಿಗಳು (ಎಸ್‌ಸಿ), ಪರಿಶಿಷ್ಟ ಪಂಗಡಗಳು (ಎಸ್‌ಟಿ) ಮತ್ತು ಸೈಬರ್ ಅಪರಾಧಗಳ ವಿರುದ್ಧ ವರದಿಯಾದ ಅಪರಾಧಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ.</p>



<p>2022 ರಲ್ಲಿ ಪ್ರತಿದಿನ ಸರಾಸರಿ ಮೂರು ಅತ್ಯಾಚಾರ ಪ್ರಕರಣಗಳು ವರದಿಯಾಗುವುದರೊಂದಿಗೆ ದೆಹಲಿಯು ಭಾರತದಲ್ಲಿಯೇ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಮೆಟ್ರೋಪಾಲಿಟನ್ ನಗರವಾಗಿ ಬದಲಾಗಿದೆ ಮತ್ತು ಮಹಿಳೆಯ ಮೇಲಿನ ದೌರ್ಜನ್ಯದಲ್ಲಿ ಉತ್ತರ ಪ್ರದೇಶ ಪ್ರಥಮ ಸ್ಥಾನದಲ್ಲಿದೆ &nbsp;ಎಂದು ಎನ್‌ಸಿಆರ್‌ಬಿ ಡೇಟಾ ತೋರಿಸಿದೆ.</p>



<p>ಎನ್‌ಸಿಆರ್‌ಬಿ ವರದಿಯು ಮಹಿಳೆಯರ ವಿರುದ್ಧದ ಅಪರಾಧದ ಪ್ರಮಾಣವು (1 ಲಕ್ಷ ಜನಸಂಖ್ಯೆಗೆ ಘಟನೆಗಳ ಸಂಖ್ಯೆ) 2021 ರಲ್ಲಿ ಶೇ.64.5 ದಿಂದ 2022 ರಲ್ಲಿ ಶೇ.66 ಕ್ಕೆ ಏರಿಕೆಯಾಗಿದೆ ಎಂದು ತೋರಿಸಿದೆ.</p>



<p>2022 ರಲ್ಲಿ 19 ಮಹಾನಗರಗಳಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಒಟ್ಟು 48,755 ಪ್ರಕರಣಗಳು ದಾಖಲಾಗಿವೆ, ಇದು 2021 ಕ್ಕಿಂತ 12.3% ಹೆಚ್ಚಳವಾಗಿದೆ ( ಹಿಂದಿನ ವರ್ಷ43,414 ಪ್ರಕರಣಗಳು).</p>



<p>ಈ ಮಹಿಳಾ ದೌರ್ಜನ್ಯದ ಪ್ರಕರಣಗಳಲ್ಲಿ,</p>



<ul class="wp-block-list">
<li>ಪತಿ ಅಥವಾ ಅವನ ಮನೆಯವರಿಂದ ಕ್ರೌರ್ಯ: 31.4%</li>



<li>ಮಹಿಳೆಯರ ಅಪಹರಣ: 19.2%</li>



<li>ಮಹಿಳೆಯರ ಮೇಲಿನ ಹಲ್ಲೆ: 18.7%</li>



<li>ಅತ್ಯಾಚಾರ: 7.1%</li>
</ul>



<p style="font-size:20px"><strong>ರಾಜ್ಯಗಳ ಕಥೆ ಏನು?</strong></p>



<p>2022 ರಲ್ಲಿ 65,743 ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಕರಣಗಳನ್ನು ದಾಖಲಿಸಿರುವ ಉತ್ತರ ಪ್ರದೇಶ ಮಹಿಳಾ ದೌರ್ಜನ್ಯದಲ್ಲಿ ಅಗ್ರಸ್ಥಾನದಲ್ಲಿದೆ. ಇದರ ನಂತರ ಮಹಾರಾಷ್ಟ್ರ (45,331) ಮತ್ತು ರಾಜಸ್ಥಾನ (45,058) ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿವೆ.</p>



<p style="font-size:20px"><strong>ಮೆಟ್ರೋಪಾಲಿಟನ್ ಸಿಟಿಗಳ ಕಥೆ ಏನು?</strong></p>



<p>ದೆಹಲಿ, ಈ ಹಿಂದೆ ಹೇಳಿದಂತೆ ಸತತ ಮೂರನೇ ವರ್ಷಕ್ಕೆ 14,158 ಮಹಿಳೆಯರ ವಿರುದ್ಧದ ಅತಿ ಹೆಚ್ಚು ಅಪರಾಧಗಳು ದಾಖಲಾಗಿ ಮಹಿಳೆಯರಿಗೆ ಅಸುರಕ್ಷಿತವಾದ ನಗರವಾಗಿ ಉಳಿದುಕೊಂಡಿದೆ ಮತ್ತು 1,00,000 ಮಹಿಳೆಯರಿಗೆ ಸುಮಾರು 186.9 ಅಪರಾಧಗಳು ವರದಿಯಾಗಿವೆ.</p>



<p>ಎನ್‌ಸಿಆರ್‌ಬಿ ಅಂಕಿಅಂಶಗಳ ಪ್ರಕಾರ ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಕರಣಗಳು ಒಟ್ಟು ಅಪರಾಧಗಳಲ್ಲಿ ಶೇ.31.20 ರಷ್ಟಿದೆ. ʼಮಹಿಳಾ ಘನತೆಗೆ ದಕ್ಕೆ ತರಲು ನಡೆಸಿದ ದೌರ್ಜನ್ಯ’ ಮತ್ತು ‘ಮಹಿಳೆಯರ ಅಪಹರಣʼ ವಿಭಾಗಗಳಲ್ಲಿ ದೆಹಲಿಯ 19 ಮಹಾನಗರಗಳಲ್ಲಿ ಅಗ್ರಸ್ಥಾನದಲ್ಲಿದೆ.</p>



<p>ಇದರ ಜೊತೆಗೆ, ಮುಂಬೈನಲ್ಲಿ 6,176 ಪ್ರಕರಣಗಳು ಮತ್ತು ಬೆಂಗಳೂರಿನಲ್ಲಿ 3,924 ಪ್ರಕರಣಗಳು ದಾಖಲಾಗಿವೆ.</p>



<p style="font-size:20px"><strong>ಅತ್ಯಾಚಾರ ಪ್ರಕರಣಳು:</strong></p>



<p>ಭಾರತದಲ್ಲಿ 2022 ರಲ್ಲಿ ಒಟ್ಟು 31,516 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ:</p>



<ul class="wp-block-list">
<li>ರಾಜಸ್ಥಾನದಲ್ಲಿ 5,399 ಪ್ರಕರಣಗಳು</li>



<li>ಉತ್ತರ ಪ್ರದೇಶದಲ್ಲಿ 3,690 ಪ್ರಕರಣಗಳು</li>



<li>ಮಧ್ಯಪ್ರದೇಶದಲ್ಲಿ 3,029 ಪ್ರಕರಣಗಳು</li>



<li>ಮಹಾರಾಷ್ಟ್ರದಲ್ಲಿ 2,904 ಪ್ರಕರಣಗಳು</li>



<li>ಹರಿಯಾಣದಲ್ಲಿ 1,787 ಪ್ರಕರಣಗಳು</li>
</ul>



<p>ʼಅತ್ಯಾಚಾರ/ಗ್ಯಾಂಗ್‌ ರೇಪ್‌ ಹಾಗೂ ಕೊಲೆ’ವಿಭಾಗದಲ್ಲಿ ಅಡಿಯಲ್ಲಿ 62 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಉತ್ತರ ಪ್ರದೇಶ ಮತ್ತೆ ಪ್ರಥಮ ಸ್ಥಾನ ಪಡೆದಿದೆ. 41 ಪ್ರಕರಣಗಳನ್ನು ದಾಖಲಾಗಿರುವ ಮಧ್ಯಪ್ರದೇಶ ನಂತರದ ಸ್ಥಾನದಲ್ಲಿದೆ.</p>



<p>ದೆಹಲಿಯಲ್ಲಿ ಕಳೆದ ವರ್ಷ 1,204 ಅತ್ಯಾಚಾರ ಪ್ರಕರಣಗಳು ವರದಿಯಾಗಿದ್ದು, ಜೈಪುರದಲ್ಲಿ 497 ಪ್ರಕರಣಗಳು ವರದಿಯಾಗಿವೆ ಎಂದು ಎನ್‌ಸಿಆರ್‌ಬಿ ಅಂಕಿಅಂಶಗಳು ಬಹಿರಂಗಪಡಿಸಿವೆ.</p>



<p style="font-size:20px"><strong>ಮಕ್ಕಳ ಮೇಲಿನ ದೌರ್ಜನ್ಯ: ಮಹಾರಾಷ್ಟ್ರವೇ ಮೊದಲು!</strong></p>



<p>2022 ರಲ್ಲಿ ಮಕ್ಕಳ ವಿರುದ್ಧದ ಅಪರಾಧಗಳ ಒಟ್ಟು 1,62,449 ಪ್ರಕರಣಗಳು ದಾಖಲಾಗಿವೆ, ಇದು 2021 ಕ್ಕಿಂತ ಶೇ.8.7 ಹೆಚ್ಚಳವಾಗಿದೆ (1,49,404 ಪ್ರಕರಣಗಳು).</p>



<p style="font-size:20px"><strong>ಮಕ್ಕಳ ಮೇಲಿನ ಪ್ರಮುಖ ದೌರ್ಜನ್ಯಗಳು:</strong></p>



<ul class="wp-block-list">
<li>ಅಪಹರಣ &#8211; 45.7%</li>



<li>ಮಕ್ಕಳ ಮೇಲಿನ ಅತ್ಯಾಚಾರ ಸೇರಿದಂತೆ,ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ – ಪೋಕ್ಸೋ- 2012 ಪ್ರಕರಣಗಳು -39.7%</li>
</ul>



<p>2022 ರಲ್ಲಿ ಮಹಾರಾಷ್ಟ್ರದಲ್ಲಿ ಮಕ್ಕಳ ವಿರುದ್ಧ ಅತಿ ಹೆಚ್ಚು ಅಪರಾಧಗಳ 20,762 ಪ್ರಕರಣಗಳು ದಾಖಲಾಗಿದ್ದು ಅಗ್ರಸ್ಥಾನದಲ್ಲಿದೆ, ಇದರ ನಂತರ ಮಧ್ಯಪ್ರದೇಶ (20,415) ಮತ್ತು ಉತ್ತರ ಪ್ರದೇಶ (18,682) ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದಿವೆ. ಉತ್ತರ ಪ್ರದೇಶದಲ್ಲಿ ಪೋಕ್ಸೊ ಕಾಯ್ದೆಯಡಿ 7,955 ಪ್ರಕರಣಗಳು ವರದಿಯಾಗಿವೆ.</p>



<p>ದೆಹಲಿಯಲ್ಲಿ 2022 ರಲ್ಲಿ 1,529 ಪೋಕ್ಸೊ ಪ್ರಕರಣಗಳು ವರದಿಯಾಗಿವೆ. ಮುಂಬೈ ಮಹಾನಗರಗಳಲ್ಲಿ 1,195 ಪ್ರಕರಣಗಳನ್ನು ದಾಖಲಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ.</p>



<p style="font-size:20px"><strong>ಬಾಲಾಪರಾಧಿಗಳ ವಿರುದ್ಧದ ಪ್ರಕರಣಗಳು:</strong></p>



<p>2022 ರಲ್ಲಿ ಬಾಲಾಪರಾಧಿಗಳ ವಿರುದ್ಧ ಒಟ್ಟು 30,555 ಪ್ರಕರಣಗಳನ್ನು ದಾಖಲಿಸಲಾಗಿದೆ, ಇದು 2021 ಕ್ಕಿಂತ 2.0% ರಷ್ಟು ಇಳಿಕೆಯಾಗಿದೆ (31,170 ಪ್ರಕರಣಗಳು).</p>



<p style="font-size:20px"><strong>ಕೊಲೆ ಪ್ರಕರಣಗಳು:</strong></p>



<p>2022 ರಲ್ಲಿ, 2022 ರಲ್ಲಿ ಒಟ್ಟು 28,522 ಎಫ್‌ಐಆರ್‌ಗಳು ದಾಖಲಾಗಿವೆ. ಪ್ರತಿ ದಿನ ಸರಾಸರಿ 78 ಹತ್ಯೆಗಳು ಅಥವಾ ಪ್ರತಿ ಗಂಟೆಗೆ ಮೂರಕ್ಕಿಂತ ಹೆಚ್ಚು ಪ್ರಕರಣಗಳು ಭಾರತದಾದ್ಯಂತ ವರದಿಯಾಗಿವೆ. ಎನ್‌ಸಿಆರ್‌ಬಿ ಡೇಟಾ ಪ್ರಕಾರ 2020 ರಲ್ಲಿ 29,193 ರಿಂದ 2021 ರಲ್ಲಿ 29,272ಕ್ಕೆ  ಕಡಿಮೆಯಾಗಿದೆ.</p>



<p style="font-size:20px"><strong>ಪ್ರಕರಣಗಳ ಪ್ರಮುಖ ಉದ್ದೇಶಗಳು &#8211; ಮೋಟಿವ್ ಯಾವುವು?</strong></p>



<p>2022 ರಲ್ಲಿ ಅತಿ ಹೆಚ್ಚು ಕೊಲೆ ಪ್ರಕರಣಗಳಿಗೆ, 9,962 ಪ್ರಕರಣಗಳಿಗೆ ವಿವಾದ-ಡಿಸ್ಪ್ಯೂಟ್‌ ಕಾರಣವಾಗಿವೆ ವೈಯಕ್ತಿಕ ದ್ವೇಷ ಅಥವಾ ದ್ವೇಷದ (<strong>Personal vendetta or enmity)</strong> ಅಡಿಯಲ್ಲಿ 3,761 ಪ್ರಕರಣಗಳು ವರದಿಯಾಗಿವೆ 1,884 ಪ್ರಕರಣಗಳಲ್ಲಿ ʼಗಳಿಕೆ &#8211; <strong>Gain</strong> &#8216; ಮೂರನೇ ಅತಿ ದೊಡ್ಡ ಉದ್ದೇಶವಾಗಿದೆ.</p>



<p>ಎನ್‌ಸಿಆರ್‌ಬಿ ಪ್ರಕಾರ, ಕೊಲೆಗೆ ಬಲಿಯಾದವರಲ್ಲಿ 8,125 ಮಹಿಳೆಯರು ಮತ್ತು ಒಂಬತ್ತು &#8220;ತೃತೀಯ ಲಿಂಗಿಗಳು&#8221;, ಶೇ.70 ಪುರುಷರು ಇದ್ದಾರೆ.</p>



<p style="font-size:20px"><strong>ಎಸ್‌ಸಿ/ಎಸ್‌ಟಿಗಳ ವಿರುದ್ಧದ ಅಪರಾಧಗಳು:</strong></p>



<p>ಒಟ್ಟು 57,582 ಎಸ್‌ಸಿಗಳ ವಿರುದ್ಧ ಅಪರಾಧಗಳ ಪ್ರಕರಣಗಳು ದಾಖಲಾಗಿವೆ, ಇದು 2021 (50,900 ಪ್ರಕರಣಗಳು) ಗಿಂತ ಶೇ.13.1 ಹೆಚ್ಚಳವಾಗಿದೆ. ಮಧ್ಯೆ, ಪರಿಶಿಷ್ಟ ಪಂಗಡಗಳ (ಎಸ್‌ಟಿ) ವಿರುದ್ಧ ಅಪರಾಧದಲ್ಲಿ 10,064 ಪ್ರಕರಣಗಳನ್ನು ದಾಖಲಲಾಗಿದೆ, ಇದು 2021 (8,802 ಪ್ರಕರಣಗಳು) ಗಿಂತ ಶೇ.14.3 ಹೆಚ್ಚಳವಾಗಿದೆ.</p>
]]></content:encoded>
					
		
		
			</item>
		<item>
		<title>ಇಂದಿನಿಂದ 2 ದಿನ ರಾಜ್ಯ ಗೃಹ ಸಚಿವರ ಚಿಂತನಾ ಶಿಬಿರ</title>
		<link>https://peepalmedia.com/2-days-state-home-ministers-thinking-camp-from-today/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 28 Oct 2022 08:29:37 +0000</pubDate>
				<category><![CDATA[ದೇಶ]]></category>
		<category><![CDATA[amithsha]]></category>
		<category><![CDATA[bengalure]]></category>
		<category><![CDATA[chintana shibira]]></category>
		<category><![CDATA[home minister]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[narendramodi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=13238</guid>

					<description><![CDATA[ಹರಿಯಾಣ: ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಗೃಹ ಸಚಿವರ ಚಿಂತನಾ ಶಿಬಿರವು ಹರಿಯಾಣದ ಸೂರಜ್ ಕುಂಡ್‌ನಲ್ಲಿ ನಡೆಯುತ್ತಿದೆ. ಈ ಶಿಬಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಪಿರೆನ್ಸ್‌ ಮೂಲಕ ಪಾಲ್ಗೊಂಡಿದ್ದು, ಚಿಂತನಾ ಶಿಬಿರದ ಕುರಿತು ಮಾತನಾಡಿದ ಅವರು, ಸಾಂಘಿಕ ಪ್ರಯತ್ನದಿಂದ ದೇಶ ಬಲ ಹೆಚ್ಚಲಿದ್ದು, ದೇಶ ಶಕ್ತಿಶಾಲಿಯಾದರೆ ನಾಗರಿಕರು ಕೂಡ ಶಕ್ತಿಶಾಲಿಯಾಗಿ ರೂಪುಗೊಳ್ಳಲಿದ್ದಾರೆ. ಹೀಗಾಗಿ ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಹೇಳಿದರು. ಈ ಸಮಾವೇಶದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೊಸ ಹೊಸ ವಿಷಯಗಳನ್ನು [&#8230;]]]></description>
										<content:encoded><![CDATA[
<p style="font-size:20px"><strong>ಹರಿಯಾಣ:</strong> ಇಂದಿನಿಂದ ಎರಡು ದಿನಗಳ ಕಾಲ ರಾಜ್ಯ ಗೃಹ ಸಚಿವರ ಚಿಂತನಾ ಶಿಬಿರವು ಹರಿಯಾಣದ ಸೂರಜ್ ಕುಂಡ್‌ನಲ್ಲಿ ನಡೆಯುತ್ತಿದೆ.</p>



<p style="font-size:20px">ಈ ಶಿಬಿರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಪಿರೆನ್ಸ್‌ ಮೂಲಕ ಪಾಲ್ಗೊಂಡಿದ್ದು, ಚಿಂತನಾ ಶಿಬಿರದ ಕುರಿತು ಮಾತನಾಡಿದ ಅವರು, ಸಾಂಘಿಕ ಪ್ರಯತ್ನದಿಂದ ದೇಶ ಬಲ ಹೆಚ್ಚಲಿದ್ದು, ದೇಶ ಶಕ್ತಿಶಾಲಿಯಾದರೆ ನಾಗರಿಕರು ಕೂಡ ಶಕ್ತಿಶಾಲಿಯಾಗಿ ರೂಪುಗೊಳ್ಳಲಿದ್ದಾರೆ. ಹೀಗಾಗಿ ಸರ್ಕಾರದ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪಬೇಕು ಎಂದು ಹೇಳಿದರು.</p>



<p style="font-size:20px">ಈ ಸಮಾವೇಶದಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೊಸ ಹೊಸ ವಿಷಯಗಳನ್ನು ಕಲಿಯಲು&nbsp; ಸಾಧ್ಯವಾಗಲಿದ್ದು,&nbsp; ರಾಜ್ಯಗಳು ಪರಸ್ಪರ ಸಹಕಾರದ ಮೂಲಕ&nbsp; ಅಪರಾಧ ಚಟುವಟಿಕೆಗಳನ್ನು&nbsp; ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.</p>



<p style="font-size:20px">ಇನ್ನೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಮಾತನಾಡಿ, ಗಡಿಯಾಚೆಗಿನ ಭಯೋತ್ಪಾದನೆ, ಒಳನುಸುಳುವಿಕೆ, ಡ್ರೋನ್ ಮೂಲಕ ಶಸ್ತ್ರಾಸ್ತ್ರ ಪೂರೈಕೆ, ಮಾದಕ ವಸ್ತುಗಳ ಪೂರೈಕೆ ನಿಯಂತ್ರಿಸಲು, ಎಲ್ಲ ರಾಜ್ಯಗಳ ಸಹಕಾರದಿಂದ ಈ ದುಷ್ಕೃತ್ಯಗಳನ್ನು ಹತ್ತಿಕ್ಕಲು ಸಾಧ್ಯವಾಗಲಿದೆ ಎಂದರು.</p>



<p style="font-size:20px">&nbsp;ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡಿದ್ದು, ಇವುಗಳನ್ನು ಪರಿಶೀಲಿಸಲಾಗುವುದು ಅಲ್ಲದೇ, ಕೇಂದ್ರ ಸರ್ಕಾರ ರಾಜ್ಯಗಳಿಗೆ ಅಪರಾಧ ನಿಯಂತ್ರಣ ಸೇರಿದಂತೆ ಇತರೆ ನೆರವು ನೀಡಲು ಸಿದ್ಧವಿದೆ ಎಂದು ತಿಳಿಸಿದರು.</p>



<p style="font-size:20px">ಶಿಬಿರದಲ್ಲಿ ರಾಜ್ಯಗಳ ಗೃಹ ಸಚಿವರು, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.</p>
]]></content:encoded>
					
		
		
			</item>
	</channel>
</rss>
