<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>hospital &#8211; Peepal Media</title>
	<atom:link href="https://peepalmedia.com/tag/hospital/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 05 Dec 2022 07:18:32 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>hospital &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ದಾಖಲೆ ಇಲ್ಲದೇ ಹಣ ವರ್ಗಾವಣೆ ; ದೂರು ದಾಖಲು</title>
		<link>https://peepalmedia.com/transfer-of-money-without-record-in-kolar-district-hospital-file-a-complaint/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 05 Dec 2022 07:17:48 +0000</pubDate>
				<category><![CDATA[ಕೋಲಾರ]]></category>
		<category><![CDATA[corruption]]></category>
		<category><![CDATA[hospital]]></category>
		<category><![CDATA[karnataka]]></category>
		<category><![CDATA[kolara]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=17554</guid>

					<description><![CDATA[ಕೋಲಾರ : ಕೋಲಾರ ಜಿಲ್ಲಾಸ್ಪತ್ರೆಯಲ್ಲಿ 2019-20, ಮತ್ತು 2020-21 ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ ಸುಮಾರು 35.64 ಲಕ್ಷ ಅನುದಾನದ ದುರುಪಯೋಗ ಪಡಿಸಿಕೊಂಡ ಮತ್ತು ದೊಡ್ಡ ಮಟ್ಟದ ಅವ್ಯವಹಾರ ನಡೆದ ಬಗ್ಗೆ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿಯ ಮೇಲೆ ಪ್ರಕರಣ ದಾಖಲಾಗಿದೆ. ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ, ಶಸ್ತ್ರಚಿಕಿತ್ಸಕ ಡಾ. ಎಸ್.ಜಿ ನಾರಾಯಣಸ್ವಾಮಿ ಸೇರಿದಂತೆ ಪ್ರಕರಣದಲ್ಲಿ ಒಟ್ಟು 11 ಜನರ ಮೇಲೆ ದೂರು ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಾಕ್ಟರ್ ಎಸ್.ಜಿ ನಾರಾಯಣಸ್ವಾಮಿ ಮಾತ್ರವಲ್ಲದೆ ಅಲ್ಲದೆ ಸ್ಥಾನಿಕ ವೈದ್ಯಾಧಿಕಾರಿ ನಾರಾಯಣಸ್ವಾಮಿ, [&#8230;]]]></description>
										<content:encoded><![CDATA[
<p style="font-size:20px"><strong>ಕೋಲಾರ :</strong> ಕೋಲಾರ ಜಿಲ್ಲಾಸ್ಪತ್ರೆಯಲ್ಲಿ 2019-20, ಮತ್ತು 2020-21 ನೇ ಸಾಲಿನಲ್ಲಿ ನಡೆದಿದೆ ಎನ್ನಲಾದ ಸುಮಾರು 35.64 ಲಕ್ಷ ಅನುದಾನದ ದುರುಪಯೋಗ ಪಡಿಸಿಕೊಂಡ ಮತ್ತು ದೊಡ್ಡ ಮಟ್ಟದ ಅವ್ಯವಹಾರ ನಡೆದ ಬಗ್ಗೆ ನಿವೃತ್ತ ಜಿಲ್ಲಾ ವೈದ್ಯಾಧಿಕಾರಿಯ ಮೇಲೆ ಪ್ರಕರಣ ದಾಖಲಾಗಿದೆ. ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ, ಶಸ್ತ್ರಚಿಕಿತ್ಸಕ ಡಾ. ಎಸ್.ಜಿ ನಾರಾಯಣಸ್ವಾಮಿ ಸೇರಿದಂತೆ ಪ್ರಕರಣದಲ್ಲಿ ಒಟ್ಟು 11 ಜನರ ಮೇಲೆ ದೂರು ದಾಖಲಾಗಿದೆ.</p>



<p style="font-size:20px">ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಾಕ್ಟರ್ ಎಸ್.ಜಿ ನಾರಾಯಣಸ್ವಾಮಿ ಮಾತ್ರವಲ್ಲದೆ ಅಲ್ಲದೆ ಸ್ಥಾನಿಕ ವೈದ್ಯಾಧಿಕಾರಿ ನಾರಾಯಣಸ್ವಾಮಿ, ಪ್ರಥಮ ದರ್ಜೆ ಸಹಾಯಕ ಹರೀಶ್, ಕಂಪ್ಯೂಟರ್ ನಿರ್ವಾಹಕ ಕಿಶೋರ್ ಕುಮಾರ್, ಹೊರಗುತ್ತಿಗೆ ಡಿ ದರ್ಜೆ ನೌಕರ ಸೋಮಶೇಖರ್, ಶ್ರೀನಿವಾಸ್, ಪ್ರಶಾಂತ್ ಸೇರಿದಂತೆ ಒಟ್ಟು 11 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ.</p>



<p style="font-size:20px">2019-20 2020-21 ನೇ ಸಾಲಿನಲ್ಲಿ ಜಿಲ್ಲಾ ವೈದ್ಯಾಧಿಕಾರಿ ಮುಖ್ಯಸ್ಥರಾಗಿರುವ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ನಿಯಮಬಾಹಿರವಾಗಿ ಹಲವು ಬಾರಿ ಅಕ್ರಮವಾಗಿ ಹಣ ಬಿಡುಗಡೆ ಮಾಡಲಾಗಿದೆ. ಅಷ್ಟೂ ಹಣವು ಚೆಕ್ ಗಳಿಂದ ಹಣ ಪಾವತಿ ಮಾಡಲಾಗಿದೆ. ಆದರೆ ಖರ್ಚು ವೆಚ್ಚದ ಪುಸ್ತಕಗಳಲ್ಲಿ ಇದ್ದರ ಬಗ್ಗೆ ಯಾವುದೇ ದಾಖಲೆ ನಮೂದಿಸಿಲ್ಲ. ದಾಖಲೆ ಪುಸ್ತಕ ಇದ್ದರೂ ಸಹ ಯಾವುದೇ ಖರ್ಚು ವೆಚ್ಚದ ಉಲ್ಲೇಖವಿಲ್ಲ. ಇತ್ತ ಮೌಖಿಕವಾಗಿಯೂ ಇದರ ಬಗ್ಗೆ ಮಾಹಿತಿ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.</p>



<p style="font-size:20px">ಯಾವುದೇ ದಾಖಲೆ ಇಲ್ಲದ ಹಾಗೂ ಒದಗಿಸದ ಹಿನ್ನೆಲೆಯಲ್ಲಿ ನಾನು ದೂರು ದಾಖಲು ಮಾಡಿದ್ದೇನೆ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ವಿಜಯ್ ಕುಮಾರ್ ದೂರು ನೀಡಿದ್ದಾರೆ. ಹಣ ವರ್ಗಾವಣೆ ಮಾಡಿದ್ದಾರೆ ಎಂಬುದು ಸ್ಪಷ್ಟ. ಆದರೆ ಇಲ್ಲಿಯವರೆಗೂ ಯಾವುದಕ್ಕೆ ಹಣ ಖರ್ಚು ಮಾಡಿದ್ದಾರೆ ಎಂಬ ದಾಖಲೆಯನ್ನು ಒದಗಿಸಿಲ್ಲ. ಇತ್ತ ಆಸ್ಪತ್ರೆಯ ಯಾವ ಕೆಲಸಕ್ಕೆ ಆ ಹಣ ಖರ್ಚಾಗಿದೆ ಎಂಬುದಕ್ಕೂ ಸಾಕ್ಷಿಗಳಿಲ್ಲ ಎಂದು ಡಾ.ವಿಜಯ್ ಕುಮಾರ್ ಆರೋಪಿಸಿದ್ದಾರೆ.</p>



<p style="font-size:20px">&#8216;ನಾನು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕನಾಗಿ ಕಾರ್ಯನಿರ್ವಹಿಸಲು ಕೆಲಸ ವಹಿಸಿಕೊಳ್ಳುವಾಗ ಅನುಮಾನ ಬಂದು ದಾಖಲೆ ಪರಿಶೀಲಿಸಿದೆ. ಅಗತ್ಯ ದಾಖಲೆ ಸಿಗದ ಬಗ್ಗೆ ಮೇಲಾಧಿಕಾರಿಗಳಿಗೂ ದೂರು ನೀಡಿದ್ದೇನೆ. ಅವರುಗಳ ಸೂಚನೆ ಮೇರೆಗೆ ಪ್ರಕರಣ ದಾಖಲಿಸಿದ್ದೇನೆ ಎಂದು ಜಿಲ್ಲಾ ವೈದ್ಯಾಧಿಕಾರಿ ವಿಜಯ್ ಕುಮಾರ್ ತಿಳಿಸಿದ್ದಾರೆ.</p>



<p style="font-size:20px">ನಿವೃತ್ತ ವೈದ್ಯಾಧಿಕಾರಿ ಡಾಕ್ಟರ್ ಎಸ್.ಜಿ ನಾರಾಯಣಸ್ವಾಮಿ ಅವರ ಹೆಸರಿಗೆ 8.20 ಲಕ್ಷ, ಸೋಮಶೇಖರ್ ಅವರ ಹೆಸರಿಗೆ 4.23 ಲಕ್ಷ, ಶ್ರೀನಿವಾಸ್ ಹೆಸರಿಗೆ 9.42 ಲಕ್ಷ, ಸಂಜಯ್ ಎಂಬ ಹೆಸರಿಗೆ 68 ಸಾವಿರ, ಪುರುಷೋತ್ತಮ್ ಎಂಬುವರ ಹೆಸರಿಗೆ 1.22 ಲಕ್ಷ, ಪ್ರಸನ್ನ ಎಂಬುವರಿಗೆ 68 ಸಾವಿರ, ಮನೋಹರ್ ಬಾಬು ಎಂಬವರಿಗೆ 62 ಸಾವಿರ ಮತ್ತು ಕೃಷ್ಣಪ್ಪ ಎಂಬುವರ ಹೆಸರಿಗೆ 3.15 ಲಕ್ಷ ಹಣ ಪಾವತಿಯಾಗಿದೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಸಿದ್ದರಾಮಯ್ಯ ಆಸ್ಪತ್ರೆಗೆ ದಾಖಲು</title>
		<link>https://peepalmedia.com/siddaramaiah-admited-to-hospital/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 02 Dec 2022 04:40:57 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[hospital]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Siddaramaiah]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=17238</guid>

					<description><![CDATA[ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಇಂದು ಮುಂಜಾನೆ ದಾಖಲಾದ ಬಗ್ಗೆ ವರದಿಯಾಗಿದೆ. ಆರೋಗ್ಯದಲ್ಲಿ ಅಂತಹ ಏರುಪೇರುಗಳು ಕಂಡುಬಾರದೇ ಇದ್ದರೂ ಮೂಲವ್ಯಾಧಿ ಚಿಕಿತ್ಸೆಗಾಗಿ ತಮ್ಮ ವಯಕ್ತಿಕ ವೈದ್ಯರ ಸಲಹೆಯಂತೆ ಹೆಚ್ಚಿನ ತಪಾಸಣೆಗೆ ಆಸ್ಪತ್ರೆಗೆ ದಾಖಲಾದ ಬಗ್ಗೆ ಮೂಲಗಳು ತಿಳಿಸಿವೆ. ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮುಂಬರುವ ಚುನಾವಣೆ ಹಿನ್ನಲೆಯಲ್ಲಿ ಹೆಚ್ಚಿನ ಜವಾಬ್ದಾರಿ ಹೊಂದಿರುವ ಕಾರಣ ಆರೋಗ್ಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ [&#8230;]]]></description>
										<content:encoded><![CDATA[
<p>ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಹೆಚ್ಚಿನ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಇಂದು ಮುಂಜಾನೆ ದಾಖಲಾದ ಬಗ್ಗೆ ವರದಿಯಾಗಿದೆ.</p>



<p>ಆರೋಗ್ಯದಲ್ಲಿ ಅಂತಹ ಏರುಪೇರುಗಳು ಕಂಡುಬಾರದೇ ಇದ್ದರೂ ಮೂಲವ್ಯಾಧಿ ಚಿಕಿತ್ಸೆಗಾಗಿ ತಮ್ಮ ವಯಕ್ತಿಕ ವೈದ್ಯರ ಸಲಹೆಯಂತೆ ಹೆಚ್ಚಿನ ತಪಾಸಣೆಗೆ ಆಸ್ಪತ್ರೆಗೆ ದಾಖಲಾದ ಬಗ್ಗೆ ಮೂಲಗಳು ತಿಳಿಸಿವೆ. ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.</p>



<p>ಮುಂಬರುವ ಚುನಾವಣೆ ಹಿನ್ನಲೆಯಲ್ಲಿ ಹೆಚ್ಚಿನ ಜವಾಬ್ದಾರಿ ಹೊಂದಿರುವ ಕಾರಣ ಆರೋಗ್ಯದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ನಿರಂತರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರ<font style="vertical-align: inherit;"><font style="vertical-align: inherit;">ುವುದು ಗಮನಾರ್ಹ.</font></font> ಮಧ್ಯಾಹ್ನದ ವೇಳೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ. ಜೊತೆಗೆ ನಾಲ್ಕು ದಿನಗಳ ವಿಶ್ರಾಂತಿ ತಗೆದುಕೊಳ್ಳಲು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.</p>
]]></content:encoded>
					
		
		
			</item>
		<item>
		<title>ಹೆರಿಗೆ ಮಾಡಿಸಲು ಲಂಚ: ಬಿಡದಿ ವೈದ್ಯರಿಬ್ಬರ ಅಮಾನತು</title>
		<link>https://peepalmedia.com/bribery-for-delivery-two-doctors-suspended/</link>
		
		<dc:creator><![CDATA[Peepal Media Desk]]></dc:creator>
		<pubDate>Sun, 27 Nov 2022 05:19:14 +0000</pubDate>
				<category><![CDATA[ರಾಮನಗರ]]></category>
		<category><![CDATA[bengalure]]></category>
		<category><![CDATA[corruption]]></category>
		<category><![CDATA[d.sudhakar]]></category>
		<category><![CDATA[hospital]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=16706</guid>

					<description><![CDATA[ಬಿಡದಿ: ಗಾರ್ಮೆಂಟ್ಸ್ ನೌಕರರೊಬ್ಬರ ಪತ್ನಿಯ ಹೆರಿಗೆ ಮಾಡಿಸಲು ಆರು ಸಾವಿರ ರೂ ಲಂಚ ಕೇಳಿದ ಆರೋಪದ ಮೇರೆಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದೆ. ಹೆರಿಗೆ ಮಾಡಿಸಲು ಆಸ್ಪತ್ರೆ ಸಿಬ್ಬಂದಿ ಹಣ ಕೇಳುವ ದೃಶ್ಯವನ್ನು `ದಿ ಫೈಲ್’ ನಿನ್ನೆ ಪ್ರಕಟಿಸಿದ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಈ ಆದೇಶವನ್ನು ಹೊರಡಿಸಿದ್ದು, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣವೇ ಇಬ್ಬರು ವೈದ್ಯರನ್ನು ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ನಡೆಸಿ, ಇನ್ನಷ್ಟು ತಪ್ಪಿತಸ್ಥರು ಕಂಡು [&#8230;]]]></description>
										<content:encoded><![CDATA[
<p><strong>ಬಿಡದಿ</strong>: ಗಾರ್ಮೆಂಟ್ಸ್ ನೌಕರರೊಬ್ಬರ ಪತ್ನಿಯ ಹೆರಿಗೆ ಮಾಡಿಸಲು ಆರು ಸಾವಿರ ರೂ ಲಂಚ ಕೇಳಿದ ಆರೋಪದ ಮೇರೆಗೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದೆ.</p>



<p>ಹೆರಿಗೆ ಮಾಡಿಸಲು ಆಸ್ಪತ್ರೆ ಸಿಬ್ಬಂದಿ ಹಣ ಕೇಳುವ ದೃಶ್ಯವನ್ನು <a href="https://the-file.in/2022/11/governance/14228/" data-type="URL" data-id="https://the-file.in/2022/11/governance/14228/" target="_blank" rel="noreferrer noopener">`ದಿ ಫೈಲ್’ </a>ನಿನ್ನೆ ಪ್ರಕಟಿಸಿದ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಈ ಆದೇಶವನ್ನು ಹೊರಡಿಸಿದ್ದು, ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣವೇ ಇಬ್ಬರು ವೈದ್ಯರನ್ನು ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ನಡೆಸಿ, ಇನ್ನಷ್ಟು ತಪ್ಪಿತಸ್ಥರು ಕಂಡು ಬಂದರೆ ಅವರ ವಿರುದ್ಧವೂ ಕ್ರಮ ಜರುಗಿಸುವುದಾಗಿ ಅವರು ಹೇಳಿದ್ದಾರೆ.</p>



<p>ದಿ ಫೈಲ್ ವರದಿಯ ಬೆನ್ನಲ್ಲೇ, ಆಸ್ಪತ್ರೆಯಲ್ಲಿ ಲಂಚ ಕೇಳುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಇದರಿಂದ ಮುಜುಗರಕ್ಕೆ ಒಳಗಾದ ಆರೋಗ್ಯ ಸಚಿವ ಸುಧಾಕರ್, ಸರ್ಕಾರಿ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂತಹ ಭ್ರಷ್ಟಾಚಾರ, ಅಶಿಸ್ತು, ಕರ್ತವ್ಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುವ ಮನೋಧರ್ಮ ಇಲ್ಲದ ವೈದ್ಯರು, ಸಿಬ್ಬಂದಿಗಳನ್ನು ಮುಲಾಜಿಲ್ಲದೆ ಕರ್ತವ್ಯದಿಂದ ವಜಾ ಮಾಡಲಾಗುವುದು ಎಂದು ಟ್ವೀಟ್ ಮಾಡಿದ್ದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="kn" dir="ltr">ರಾಮನಗರ ತಾಲ್ಲೂಕಿನ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಂಚಕ್ಕಾಗಿ ಬೇಡಿಕೆ ಇಟ್ಟಿರುವ ಪ್ರಕರಣದಲ್ಲಿ ಆರೋಪಿ ವೈದ್ಯೆಯ ವಿರುದ್ಧ ಇಲಾಖಾ ತನಿಖೆ ನಡೆಸಲು ಆದೇಶಿಸಲಾಗಿದ್ದು, ತನಿಖೆಯ ವರದಿ ಬರುವವರೆಗೂ ಆರೋಪಿಯನ್ನು ಅಮಾನತಿನಲ್ಲಿಡಲಾಗುವುದು.<br><br>1/5</p>&mdash; Dr Sudhakar K (@mla_sudhakar) <a href="https://twitter.com/mla_sudhakar/status/1596490169917448192?ref_src=twsrc%5Etfw">November 26, 2022</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಅಷ್ಟೇ ಅಲ್ಲದೆ, ಕೇವಲ ಸುಸಜ್ಜಿತ ಕಟ್ಟಡಗಳು, ಅತ್ಯಾಧುನಿಕ ಉಪಕರಣಗಳು, ಅತ್ಯುತ್ತಮ ಭೌತಿಕ ಮೂಲಸೌಕರ್ಯಗಳಿಂದ ಒಂದು ಒಳ್ಳೆಯ ಆಸ್ಪತ್ರೆಯಾಗುವುದಿಲ್ಲ. ಸೇವಾ ಮನೋಭಾವ, ಸಾಮಾಜಿಕ ಕಳಕಳಿ, ಮಾನವೀಯತೆ ಉಳ್ಳ ವೃತ್ತಿಪರ ವೈದ್ಯರಿಂದ ಒಂದು ಆಸ್ಪತ್ರೆ ಒಳ್ಳೆಯ ಆಸ್ಪತ್ರೆ ಎನಿಸಿಕೊಳ್ಳುತ್ತದೆ ಎಂದು ಟ್ವೀಟ್ ಮಾಡಿದ್ದರು.</p>



<p>ನೀನು ಕೊಡ್ತಾ ಇರೋ ಟೂ ಥೌಸಂಡ್ ನ್ನು ನಾನೊಬ್ಬಳೇ ಇಟ್ಕೊಳ್ಳಲ್ಲ, ಎಲ್ರಿಗೂ ಡಿವೈಡ್ ಮಾಡಬೇಕು. ಟೂ ಥೌಸಂಡ್ ಯಾರು ಯಾರಿಗೆ ಕೊಡಲಿ? ಎಂದು ಮಹಿಳಾ ಸಿಬ್ಬಂದಿಯೊಬ್ಬರು ಹೇಳುತ್ತಿರುವ ದೃಶ್ಯ ನಿನ್ನೆ ವೈರಲ್ ಆಗಿತ್ತು.</p>
]]></content:encoded>
					
		
		
			</item>
		<item>
		<title>ಆಸ್ಪತ್ರೆಗೆ ಜಾಗ ಮಂಜೂರಾಗದಿದ್ದರೆ ಪ್ರತಿಭಟನೆಯ ಘೇರಾವ್ ; ಕೊಪ್ಪದಲ್ಲಿ ಬೊಮ್ಮಾಯಿಗೆ ಪ್ರತಿಭಟನೆ ಕಾವು</title>
		<link>https://peepalmedia.com/protest-if-space-is-not-allotted-for-the-hospital-protests-erupted-for-bommai-in-koppa/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 25 Nov 2022 10:00:24 +0000</pubDate>
				<category><![CDATA[ಚಿಕ್ಕಮಗಳೂರು]]></category>
		<category><![CDATA[hospital]]></category>
		<category><![CDATA[karnataka]]></category>
		<category><![CDATA[Koppa]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[protest]]></category>
		<category><![CDATA[Sringeri]]></category>
		<guid isPermaLink="false">https://peepalmedia.com/?p=16510</guid>

					<description><![CDATA[ಶೃಂಗೇರಿ-ಕೊಪ್ಪ : ಶೃಂಗೇರಿ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಅತ್ಯಂತ ವಿಶಾಲವಾದ ಭೂ ವಿಸ್ತೀರ್ಣ ಹೊಂದಿರುವ, 3 ತಾಲ್ಲೂಕು ವ್ಯಾಪ್ತಿಗೆ ವಿಸ್ತರಿಸಿಕೊಂಡಿರುವ ಕ್ಷೇತ್ರ. ಇಂತಹ ಒಂದು ಕ್ಷೇತ್ರದಲ್ಲಿ ಕೇವಲ 100 ಹಾಸಿಗೆಗಳ ಒಂದು ಸುಸಜ್ಜಿತ ಆಸ್ಪತ್ರೆಯ ವ್ಯವಸ್ಥೆ ಇಲ್ಲವೆಂದರೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಂತಹದ್ದೊಂದು ಮಹತ್ವದ ಬೇಡಿಕೆಯನ್ನು ಇಟ್ಟು ಆಸ್ಪತ್ರೆ ಹೋರಾಟ ಸಮಿತಿ &#8216;ಕೊಪ್ಪ ಚಲೋ&#8217; ಸತ್ಯಾಗ್ರಹಕ್ಕೆ ಕರೆ ಕೊಟ್ಟಿದೆ. ಕಳೆದ 15 ವರ್ಷಗಳಿಂದ ಈ ಕ್ಷೇತ್ರಕ್ಕೆ ಸುಸಜ್ಜಿತ ಆಸ್ಪತ್ರೆಗೆ ಇಲ್ಲಿನ ಜನತೆ, ವಿವಿಧ ಜನಪರ, ಪ್ರಗತಿಪರ ಸಂಘಟನೆಗಳು [&#8230;]]]></description>
										<content:encoded><![CDATA[
<p style="font-size:20px"><strong>ಶೃಂಗೇರಿ-ಕೊಪ್ಪ :</strong> ಶೃಂಗೇರಿ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಅತ್ಯಂತ ವಿಶಾಲವಾದ ಭೂ ವಿಸ್ತೀರ್ಣ ಹೊಂದಿರುವ, 3 ತಾಲ್ಲೂಕು ವ್ಯಾಪ್ತಿಗೆ ವಿಸ್ತರಿಸಿಕೊಂಡಿರುವ ಕ್ಷೇತ್ರ. ಇಂತಹ ಒಂದು ಕ್ಷೇತ್ರದಲ್ಲಿ ಕೇವಲ 100 ಹಾಸಿಗೆಗಳ ಒಂದು ಸುಸಜ್ಜಿತ ಆಸ್ಪತ್ರೆಯ ವ್ಯವಸ್ಥೆ ಇಲ್ಲವೆಂದರೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಂತಹದ್ದೊಂದು ಮಹತ್ವದ ಬೇಡಿಕೆಯನ್ನು ಇಟ್ಟು ಆಸ್ಪತ್ರೆ ಹೋರಾಟ ಸಮಿತಿ <strong>&#8216;ಕೊಪ್ಪ ಚಲೋ&#8217;</strong> ಸತ್ಯಾಗ್ರಹಕ್ಕೆ ಕರೆ ಕೊಟ್ಟಿದೆ.</p>



<figure class="wp-block-image size-large"><img fetchpriority="high" decoding="async" width="1024" height="614" src="https://peepalmedia.com/wp-content/uploads/2022/11/IMG-20221125-WA0024-1024x614.jpg" alt="" class="wp-image-16516" srcset="https://peepalmedia.com/wp-content/uploads/2022/11/IMG-20221125-WA0024-1024x614.jpg 1024w, https://peepalmedia.com/wp-content/uploads/2022/11/IMG-20221125-WA0024-300x180.jpg 300w, https://peepalmedia.com/wp-content/uploads/2022/11/IMG-20221125-WA0024-768x460.jpg 768w, https://peepalmedia.com/wp-content/uploads/2022/11/IMG-20221125-WA0024-1536x921.jpg 1536w, https://peepalmedia.com/wp-content/uploads/2022/11/IMG-20221125-WA0024-150x90.jpg 150w, https://peepalmedia.com/wp-content/uploads/2022/11/IMG-20221125-WA0024-696x417.jpg 696w, https://peepalmedia.com/wp-content/uploads/2022/11/IMG-20221125-WA0024-1068x640.jpg 1068w, https://peepalmedia.com/wp-content/uploads/2022/11/IMG-20221125-WA0024.jpg 1600w" sizes="(max-width: 1024px) 100vw, 1024px" /></figure>



<p style="font-size:20px">ಕಳೆದ 15 ವರ್ಷಗಳಿಂದ ಈ ಕ್ಷೇತ್ರಕ್ಕೆ ಸುಸಜ್ಜಿತ ಆಸ್ಪತ್ರೆಗೆ ಇಲ್ಲಿನ ಜನತೆ, ವಿವಿಧ ಜನಪರ, ಪ್ರಗತಿಪರ ಸಂಘಟನೆಗಳು ನಿರಂತರವಾಗಿ ಬೇಡಿಕೆ ಇಡುತ್ತಲೇ ಬಂದಿವೆ. ಆಸ್ಪತ್ರೆ ನಿರ್ಮಾಣಕ್ಕೆ 2007 ರಲ್ಲೇ ಹಣ ಬಿಡುಗಡೆ ಆಗಿದ್ದರೂ ಇಡೀ ಶೃಂಗೇರಿ ವ್ಯಾಪ್ತಿಯಲ್ಲಿ ಅದಕ್ಕೆ ಬೇಕಾದಂತಹ ಸೂಕ್ತ ಜಾಗದ ವ್ಯವಸ್ಥೆ ಮಾಡಲು ಇಲ್ಲಿನ ರಾಜಕಾರಣಿಗಳು ಸೋತಿರುವುದು ದುರಂತ.</p>



<p style="font-size:20px">ಶೃಂಗೇರಿ ಒಂದು ತಾಲ್ಲೂಕು ಕೇಂದ್ರವಾದರೂ ಇಲ್ಲಿ ಇರುವುದು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದಂತಹ ಸಣ್ಣ ಆಸ್ಪತ್ರೆ. ಇಲ್ಲಿನ ನಾಗರೀಕರು ಜ್ವರ, ಶೀತ ತಲೆನೋವಿನಂತಹ ಸಣ್ಣಪುಟ್ಟ ಖಾಯಿಲೆಗೂ ಸಹ ದೂರದ ಕೊಪ್ಪ, ಶಿವಮೊಗ್ಗ, ತೀರ್ಥಹಳ್ಳಿ ಬಾಳೆಹೊನ್ನೂರು ಊರಿಗೇ ಹೋಗುವ ಅನಿವಾರ್ಯತೆ ಇದೆ. ಎಷ್ಟೋ ಸಂದರ್ಭದಲ್ಲಿ ಸಣ್ಣಪುಟ್ಟ ಶೃಶ್ರೂಷೆಯಿಂದ ಉಳಿಸಿಕೊಳ್ಳಬಹುದಾದ ಎಷ್ಟೋ ಜೀವಗಳು ಸೂಕ್ತ ಚಿಕಿತ್ಸೆ ದೊರಕದೇ ದಾರಿ ಮಧ್ಯೆಯೇ ಜೀವ ಹೋದ ಉದಾಹರಣೆ ಹಲವಷ್ಟಿದೆ. ಹೀಗೆ ಜೀವ ಹೋದ ಪ್ರತೀ ಸಂದರ್ಭದಲ್ಲಿಯೂ ಆಸ್ಪತ್ರೆ ಬೇಡಿಕೆಯ ಕೂಗು ಹೊರಡುತ್ತದೆ, ಕೆಲವು ದಿನಗಳ ನಂತರ ತಣ್ಣಗಾಗುತ್ತದೆ.</p>



<p style="font-size:20px">ಇಂತಹ ಹಲವಷ್ಟು ಕಾರಣಗಳಿಂದ ಆಸ್ಪತ್ರೆ ಬೇಡಿಕೆ ಬಿಡದೇ ಕೇಳಿ ಬರುತ್ತಿದೆ. ಸುಮಾರು 25 ವರ್ಷಗಳಿಂದಲೂ ಇಲ್ಲಿನ ನಾಗರೀಕರು ಶೃಂಗೇರಿ ಕ್ಷೇತ್ರದಲ್ಲೊಂದು ವ್ಯವಸ್ಥಿತವಾದ ಆಸ್ಪತ್ರೆಗೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಹಣ ಬಿಡುಗಡೆ ಆಗಿದ್ದರೂ ಕಾಣದ ಕೈಗಳ ಕೈವಾಡದಿಂದ ಆಸ್ಪತ್ರೆಗೆ ಜಾಗ ಮಂಜೂರು ಮಾಡಲು ರಾಜ್ಯದಲ್ಲಿ ಆಡಳಿತ ನಡೆಸಿದ ಮೂರೂ ಪಕ್ಷಗಳ ನೇತೃತ್ವದ ಎಲ್ಲಾ ಸರ್ಕಾರಗಳು ಸೋತಿವೆ.</p>



<p style="font-size:20px">ಇನ್ನು ಈ ಬೇಡಿಕೆ ತೀವ್ರಗೊಳಿಸಿ ಕಳೆದ 2 ವರ್ಷಗಳಿಂದ ಮೇಲಿಂದ ಮೇಲೆ ಒತ್ತಾಯ ಮಾಡಲಾಗುತ್ತಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಇದೇ ಕಾರಣಕ್ಕೆ ಇಲ್ಲಿನ ಆಸ್ಪತ್ರೆ ಹೋರಾಟ ಸಮಿತಿಯ ಜೊತೆಗೆ ಪ್ರಮುಖ ಸಂಘಟನೆಗಳು ಇಡೀ ಶೃಂಗೇರಿಯನ್ನು ಬಂದ್ ಮಾಡಿಸಿದ್ದವು. ಅಂದು ನಡೆದ ಹೋರಾಟಕ್ಕೆ ಸರ್ಕಾರ ಶೀಘ್ರದಲ್ಲೇ ಭೂ ಮಂಜೂರು ಮಾಡಿಸುವ ಬಗ್ಗೆಯೂ ಭರವಸೆ ನೀಡಿತ್ತು ಆದರೆ ಈ ಬಗ್ಗೆ ಇಂದಿನ ವರೆಗೂ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದು ನಿಗೂಢ.</p>



<p style="font-size:20px">ಸಧ್ಯ ಶೃಂಗೇರಿ ಆಸ್ಪತ್ರೆ ಹೋರಾಟ ಸಮಿತಿ ನವೆಂಬರ್ 25 ಮತ್ತು 26 ರ ಎರಡೂ ದಿನ ಅಹೋರಾತ್ರಿ ಹೋರಾಟಕ್ಕೆ ಕರೆ ಕೊಟ್ಟು ಸತ್ಯಾಗ್ರಹ ಪ್ರಾರಂಭಿಸಿದೆ. ಶೃಂಗೇರಿ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಅಹೋರಾತ್ರಿ ಸತ್ಯಾಗ್ರಹ ನಡೆಸುತ್ತಿದ್ದು, ಬೇಡಿಕೆ ಈಡೇರದೇ ಇದ್ದಲ್ಲಿ, 27 ರ ಕೊಪ್ಪ ತಾಲ್ಲೂಕಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರುವ ದಿನ <strong>ಕೊಪ್ಪ ಚಲೋ</strong> ಹೋರಾಟಕ್ಕೆ ಮುಂದಾಗುವ ಎಚ್ಚರಿಕೆ ನೀಡಿದೆ.</p>



<p style="font-size:20px">ಇದಕ್ಕೆ ನಾಡಿನ ವಿವಿಧ ಜನಪರ ಪ್ರಗತಿಪರ ಸಂಘಟನೆಗಳ ಬೆಂಬಲ ಸಿಕ್ಕಿದ್ದು ನವೆಂಬರ್ 27 ರಂದು ನಿರ್ಣಾಯಕ ಹೋರಾಟದ ಮೂಲಕ ಮುಖ್ಯಮಂತ್ರಿಗಳಿಗೂ ಎಚ್ಚರಿಕೆ ಸಂದೇಶ ನೀಡಲು ಸಜ್ಜಾಗಿವೆ.</p>
]]></content:encoded>
					
		
		
			</item>
		<item>
		<title>ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸದೆ ರಸ್ತೆಯಲ್ಲೇ ಪ್ರಸೂತಿ ; ತಿರುಪತಿಯ ವಿಡಿಯೋ ವೈರಲ್</title>
		<link>https://peepalmedia.com/pregnant-woman-is-delivered-on-the-road-without-admitting-her-to-the-hospital-tirupatis-video-goes-viral/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 22 Nov 2022 10:36:22 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[andrapradesh]]></category>
		<category><![CDATA[hospital]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Pregnant Lady]]></category>
		<category><![CDATA[Tirupati]]></category>
		<guid isPermaLink="false">https://peepalmedia.com/?p=16207</guid>

					<description><![CDATA[100 ಹಾಸಿಗೆಗಳ ಹೆರಿಗೆ ಆಸ್ಪತ್ರೆ ಎದುರಿನಲ್ಲೇ ಇದ್ದರೂ ಮಹಿಳೆಯೊಬ್ಬರು ಬೀದಿ ಬದಿಯಲ್ಲಿ ಮಗುವಿಗೆ ಜನ್ಮ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುರಂತ ಎಂದರೆ ಪ್ರತಿದಿನ ಸಾವಿರಾರು ಜನ ಪವಿತ್ರ ಕ್ಷೇತ್ರವೆಂದು ಬಂದು ಹೋಗುವ ತಿರುಪತಿ ಕ್ಷೇತ್ರದಲ್ಲೇ ಇಂತದ್ದೊಂದು ಅಮಾನವೀಯ ದುರಂತ ನಡೆದಿದೆ‌. ಆಂಧ್ರಪ್ರದೇಶದ ತಿರುಪತಿಯ ಆಸ್ಪತ್ರೆ ಸಮೀಪ ರಸ್ತೆಯ ಮಧ್ಯದಲ್ಲಿ ಕೆಲವು ಮಹಿಳೆಯರು ಗರ್ಭಿಣಿ ಮಹಿಳೆಯನ್ನು ಬೆಡ್ ಶೀಟ್ ಮೂಲಕ ಮರೆ ಮಾಡುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಜೊತೆಗೆ ಒಬ್ಬ ಪುರುಷನು ಮಗುವಿಗೆ ಜನ್ಮ ನೀಡಲು [&#8230;]]]></description>
										<content:encoded><![CDATA[
<p style="font-size:20px">100 ಹಾಸಿಗೆಗಳ ಹೆರಿಗೆ ಆಸ್ಪತ್ರೆ ಎದುರಿನಲ್ಲೇ ಇದ್ದರೂ ಮಹಿಳೆಯೊಬ್ಬರು ಬೀದಿ ಬದಿಯಲ್ಲಿ ಮಗುವಿಗೆ ಜನ್ಮ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುರಂತ ಎಂದರೆ ಪ್ರತಿದಿನ ಸಾವಿರಾರು ಜನ ಪವಿತ್ರ ಕ್ಷೇತ್ರವೆಂದು ಬಂದು ಹೋಗುವ ತಿರುಪತಿ ಕ್ಷೇತ್ರದಲ್ಲೇ ಇಂತದ್ದೊಂದು ಅಮಾನವೀಯ ದುರಂತ ನಡೆದಿದೆ‌. </p>



<p style="font-size:20px">ಆಂಧ್ರಪ್ರದೇಶದ ತಿರುಪತಿಯ ಆಸ್ಪತ್ರೆ ಸಮೀಪ ರಸ್ತೆಯ ಮಧ್ಯದಲ್ಲಿ ಕೆಲವು ಮಹಿಳೆಯರು ಗರ್ಭಿಣಿ ಮಹಿಳೆಯನ್ನು ಬೆಡ್ ಶೀಟ್ ಮೂಲಕ ಮರೆ ಮಾಡುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಜೊತೆಗೆ ಒಬ್ಬ ಪುರುಷನು ಮಗುವಿಗೆ ಜನ್ಮ ನೀಡಲು ಸಹಾಯ ಮಾಡುತ್ತಾನೆ. ಮಹಿಳೆ ನೋವಿನಿಂದ ಕಿರುಚುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.</p>



<p style="font-size:20px">ತುಂಬು ಗರ್ಭಿಣಿಯಾಗಿದ್ದ ಮಹಿಳೆ ಹೆರಿಗೆಗೆಂದು ಆಸ್ಪತ್ರೆಗೆ ಬಂದರೆ ಆಸ್ಪತ್ರೆ ಸಿಬ್ಬಂದಿ ಮತ್ತು ಅಧಿಕಾರಿಗಳು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ನಿರಾಕರಿಸಿದ್ದಾರೆ. ಇತ್ತ ಆಸ್ಪತ್ರೆ ಮುಂಭಾಗದಲ್ಲಿ ಮಹಿಳೆಗೆ ಹೆರಿಗೆ ಮಾಡಿಸಲೂ ಸಹ ಸಿಬ್ಬಂದಿ ನಿರಾಕರಿಸಿದ ಕಾರಣ ಈ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.</p>



<p style="font-size:20px">ಇನ್ನು ಆಸ್ಪತ್ರೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಕೆಯ ಬಳಿ ಯಾವುದೇ ದಾಖಲೆಗಳು ಇಲ್ಲದ ಮತ್ತು ಆಕೆಯ ಜೊತೆಯಲ್ಲಿ ಯಾರೂ ಇಲ್ಲದ ಕಾರಣ ಆಕೆಯನ್ನು ಸೇರಿಸಲು ಸಾಧ್ಯವಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಮಹಿಳೆಗೆ ತಿಳಿಸಿದ್ದಾರೆ ಎನ್ನಲಾಗಿದೆ. ಸಾರ್ವಜನಿಕವಾಗಿ ಎಲ್ಲೆಡೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇದನ್ನು ತನಿಖೆಗೆ ಒಪ್ಪಿಸಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.</p>



<p style="font-size:20px">ಹೆರಿಗೆಯ ನಂತರ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ತಿರುಪತಿಯ ಆರೋಗ್ಯ ಇಲಾಖೆ ಸಿಬ್ಬಂದಿ ಮಹಿಳೆಗೆ ಆರೋಗ್ಯ ಕಿಟ್ ಮತ್ತು ಹಣ್ಣುಗಳನ್ನು ಕೊಟ್ಟಿದ್ದಾರೆ.</p>
]]></content:encoded>
					
		
		
			</item>
		<item>
		<title>ಗುಜರಾತ್‌ನಲ್ಲಿ ಕಳ್ಳಭಟ್ಟಿ ಸೇವನೆ:  ಮೃತರಸಂಖ್ಯೆ 37ಕ್ಕೆ ಏರಿಕೆ, ಉಳಿದವರ ಸ್ಥಿತಿ ಚಿಂತಾಜನಕ</title>
		<link>https://peepalmedia.com/gujarathnalli-kallabhatti-sevane-mrutara-sankye-37-ke-erike-ulidavara-sthiti-cintaajanaka/</link>
		
		<dc:creator><![CDATA[Peepal Media]]></dc:creator>
		<pubDate>Wed, 27 Jul 2022 08:24:47 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ದೇಶ]]></category>
		<category><![CDATA[ahmadabad]]></category>
		<category><![CDATA[country]]></category>
		<category><![CDATA[death]]></category>
		<category><![CDATA[gujarath]]></category>
		<category><![CDATA[hospital]]></category>
		<category><![CDATA[india]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[people]]></category>
		<category><![CDATA[rajkot]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=131</guid>

					<description><![CDATA[ರಾಜ್‌ಕೋಟ್‌/ಅಹ್ಮದಾಬಾದ್‌ : ಗುಜರಾತ್‌ನಲ್ಲಿ ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ 37 ಮಂದಿ ಮೃತಪಟ್ಟಿದ್ದಾರೆ. ಬೊತಾಡ್‌ ಜಿಲ್ಲೆ ಹಾಗೂ ಅಹ್ಮದಬಾದ್‌ನ ನೆರೆಯ ಗ್ರಾಮಗಳಲ್ಲಿ ಈ ದುರಂತ ಸಂಭವಿಸಿದ್ದು, ಈ ದುರಂತಕ್ಕೆ ಕಾರಣವಾಗಿರುವ ಕಳ್ಳಭಟ್ಟಿಗಳನ್ನು ಮಟ್ಟಹಾಕುವ ಸಲುವಾಗಿ ಪೊಲೀಸರು ರಾಜ್ಯಾದ್ಯಂತ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಭಾವನಗರ ಜಿಲ್ಲೆಯಲ್ಲಿ 73 ಮಂದಿ ಹಾಗೂ ಅಹ್ಮದಾಬಾದ್‌ನಲ್ಲಿ 15 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 11ಜನರ ಸ್ಥಿತಿ ಗಂಭೀರವಾಗಿದೆ. ಇನ್ನೂ ಬೊತಾಡ್‌ ಜಿಲ್ಲೆಯಲ್ಲಿ ಗರಿಷ್ಠ ಅಂದರೆ 24 ಮಂದಿ ಮೃತಪಟ್ಟಿದ್ದಾರೆ.ಈ ವಿಚಾರವಾಗಿ [&#8230;]]]></description>
										<content:encoded><![CDATA[
<p class="has-medium-font-size">ರಾಜ್‌ಕೋಟ್‌/ಅಹ್ಮದಾಬಾದ್‌ : ಗುಜರಾತ್‌ನಲ್ಲಿ ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ 37 ಮಂದಿ ಮೃತಪಟ್ಟಿದ್ದಾರೆ. ಬೊತಾಡ್‌ ಜಿಲ್ಲೆ ಹಾಗೂ ಅಹ್ಮದಬಾದ್‌ನ ನೆರೆಯ ಗ್ರಾಮಗಳಲ್ಲಿ ಈ ದುರಂತ ಸಂಭವಿಸಿದ್ದು, ಈ ದುರಂತಕ್ಕೆ ಕಾರಣವಾಗಿರುವ ಕಳ್ಳಭಟ್ಟಿಗಳನ್ನು ಮಟ್ಟಹಾಕುವ ಸಲುವಾಗಿ ಪೊಲೀಸರು ರಾಜ್ಯಾದ್ಯಂತ ಕಾರ್ಯಾಚರಣೆ ಆರಂಭಿಸಿದ್ದಾರೆ.</p>



<p class="has-medium-font-size">ಈ ಘಟನೆಗೆ ಸಂಬಂಧಿಸಿದಂತೆ ಭಾವನಗರ ಜಿಲ್ಲೆಯಲ್ಲಿ 73 ಮಂದಿ ಹಾಗೂ ಅಹ್ಮದಾಬಾದ್‌ನಲ್ಲಿ 15 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 11ಜನರ ಸ್ಥಿತಿ ಗಂಭೀರವಾಗಿದೆ. ಇನ್ನೂ ಬೊತಾಡ್‌ ಜಿಲ್ಲೆಯಲ್ಲಿ ಗರಿಷ್ಠ ಅಂದರೆ 24 ಮಂದಿ ಮೃತಪಟ್ಟಿದ್ದಾರೆ.<br>ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಪೋಲಿಸ್‌ ಮಹಾನಿರ್ದೇಶಕ ಆಶೀಶ್‌ ಭಾಟಿಯಾ, ವಶಪಡಿಸಿಕೊಂಡಿರುವ ಅಕ್ರಮ ಮದ್ಯದಲ್ಲಿ ಶೇಕಡ 99% ರಷ್ಟು ಮೆಥೆನಾಲ್‌ ಪತ್ತೆಯಾಗಿದೆ. ಈ ರಾಸಾಯನಿಕವನ್ನು ಅಹ್ಮದಾಬಾದ್‌ನ ರಾಸಾಯನಿಕ ಕಾರ್ಖಾನೆಯಿಂದ ಗೋದಾಮು ವ್ಯವಸ್ಥಾಪಕ ಕಳವುಮಾಡಿ, ಅಕ್ರಮ ಸಾರಾಯಿ ತಯಾರಿಕರಿಗೆ ನೀಡಿದ್ದಾನೆ, ತಯಾರಿಕನು ಈ ರಾಸಾಯನಿಕಕ್ಕೆ ನೀರು ಬೆರೆಸಲಾಗಿದ್ದರಿಂದ ಇದು ಮಾರಕ ಮಿಶ್ರಣವಾಗಿದೆ, ಇದರಿಂದಲೇ ಈ ದುರಂತ ಸಂಭವಿಸಿದೆ ಎಂದು ಹೇಳಿದ್ದಾರೆ.</p>



<p class="has-medium-font-size">ಈ ಸಂಬಂಧ ಬರ್ವಾಲ, ರಾಣಪುರ ಮತ್ತು ದಂಡುಕಾ ಠಾಣೆಗಳಲ್ಲಿ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿದ್ದು. 14 ಮಂದಿಯ ವಿರುದ್ಧ ದೂರು ದಾಖಲಾಗಿದೆ. ಹಾಗೂ 8 ಮಂದಿಯನ್ನು ಬಂಧಿಸಲಾಗಿದೆ. ಈ ವಿಚಾರವಾಗಿ ಗೋದಾಮು ವ್ಯವಸ್ಥಾಪಕ ಹಾಗೂ ಪ್ರಮುಖ ಆರೋಪಿ ಜಯೇಶ್ ಖವಾಡಿಯಾ ಬಂಧಿತರಲ್ಲಿ ಸೇರಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.</p>
]]></content:encoded>
					
		
		
			</item>
	</channel>
</rss>
