<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Hunger &#8211; Peepal Media</title>
	<atom:link href="https://peepalmedia.com/tag/hunger/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 17 Oct 2022 05:03:55 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Hunger &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಬಡತನ ನಿರ್ಮೂಲನಾ ದಿನದಂದು ಸಾಕವ್ವನ ಮುಂಗೈಗೆ ಬೆಲ್ಲ!</title>
		<link>https://peepalmedia.com/international-day-for-eradication-of-poverty-today/</link>
		
		<dc:creator><![CDATA[Nikhil Kolpe]]></dc:creator>
		<pubDate>Mon, 17 Oct 2022 04:47:59 +0000</pubDate>
				<category><![CDATA[ವಿಶೇಷ]]></category>
		<category><![CDATA[bengalure]]></category>
		<category><![CDATA[Hunger]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Poor]]></category>
		<category><![CDATA[Population]]></category>
		<category><![CDATA[writing]]></category>
		<guid isPermaLink="false">https://peepalmedia.com/?p=11338</guid>

					<description><![CDATA[ಬಡತನದ ಮೂಲ ಇರುವುದು ಸಂಪತ್ತಿನ, ಸಂಪನ್ಮೂಲಗಳ ಅಸಮಾನ ಹಂಚಿಕೆ ಮತ್ತು ಅನ್ಯಾಯದ ದೋಚುವಿಕೆ ಮತ್ತು ಒಡೆತನದಲ್ಲಿಯೇ. ಸಾಮಾಜಿಕ, ಸಾಂಸ್ಕೃತಿಕವಾದ ತಾರತಮ್ಯದಿಂದ ಕೂಡಿದ ಬಡತನ ಹಂಚಿಕೆಯನ್ನು ನಾವು ಗಮನಿಸಬೇಕು ಎನ್ನುತ್ತಾರೆ ಹಿರಿಯ ಪತ್ರಕರ್ತ ನಿಖಿಲ್‌ ಕೋಲ್ಪೆ ಪ್ರತೀ ವರ್ಷದಂತೆ ಅಕ್ಟೋಬರ್ 17ನ್ನು ವಿಶ್ವ ಬಡತನ ನಿರ್ಮೂಲನಾ ದಿನವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಅಡಿಯಲ್ಲಿ ಆಚರಿಸಲಾಗುವ ಇತರ ಹಲವಾರು ದಿನಗಳಂತೆ ಇದರ ಉದ್ದೇಶವು ನಿರ್ದಿಷ್ಟವಾಗಿ ಜಾಗತಿಕ ಬಡತನ ನಿರ್ಮೂಲನೆ ಕುರಿತು ಗಮನ ಕೇಂದ್ರೀಕರಿಸಿ, ಒಂದು ಸಂಕಲ್ಪ ಮಾಡುವುದು. ಈ ಸಂಕಲ್ಪವನ್ನು ಯಾರು [&#8230;]]]></description>
										<content:encoded><![CDATA[
<p></p>



<p><strong>ಬಡತನದ ಮೂಲ ಇರುವುದು ಸಂಪತ್ತಿನ, ಸಂಪನ್ಮೂಲಗಳ ಅಸಮಾನ ಹಂಚಿಕೆ ಮತ್ತು ಅನ್ಯಾಯದ ದೋಚುವಿಕೆ ಮತ್ತು ಒಡೆತನದಲ್ಲಿಯೇ. ಸಾಮಾಜಿಕ, ಸಾಂಸ್ಕೃತಿಕವಾದ ತಾರತಮ್ಯದಿಂದ ಕೂಡಿದ ಬಡತನ ಹಂಚಿಕೆಯನ್ನು ನಾವು ಗಮನಿಸಬೇಕು ಎನ್ನುತ್ತಾರೆ ಹಿರಿಯ ಪತ್ರಕರ್ತ ನಿಖಿಲ್‌ ಕೋಲ್ಪೆ</strong></p>



<p>ಪ್ರತೀ ವರ್ಷದಂತೆ ಅಕ್ಟೋಬರ್ 17ನ್ನು ವಿಶ್ವ ಬಡತನ ನಿರ್ಮೂಲನಾ ದಿನವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಅಡಿಯಲ್ಲಿ ಆಚರಿಸಲಾಗುವ ಇತರ ಹಲವಾರು ದಿನಗಳಂತೆ ಇದರ ಉದ್ದೇಶವು ನಿರ್ದಿಷ್ಟವಾಗಿ ಜಾಗತಿಕ ಬಡತನ ನಿರ್ಮೂಲನೆ ಕುರಿತು ಗಮನ ಕೇಂದ್ರೀಕರಿಸಿ, ಒಂದು ಸಂಕಲ್ಪ ಮಾಡುವುದು. ಈ ಸಂಕಲ್ಪವನ್ನು ಯಾರು ಮಾಡಬೇಕು? ಒಂದೊಂದು ರಾಷ್ಟ್ರ ಮತ್ತು ಒಟ್ಟಾಗಿ ಜಾಗತಿಕ ಸಮುದಾಯ ಮಾಡಬೇಕು. ಆದರೆ, ಸಂಕಲ್ಪ ಮಾತ್ರದಿಂದಲೇ ಬಡತನ ನಿರ್ಮೂಲನೆ ಸಾಧ್ಯವೆ? ಯಾಕೆಂದರೆ, ಬಡತನ ಎಂಬುದೇ ಮಾನವ ಜೀವನದ ಹಲವು ವಿಷಯಗಳಿಗೆ ಥಳಕು ಹಾಕಿಕೊಂಡಿರುವ ಬಹು ಆಯಾಮಗಳ ವಿಷಯ. ಈ ಆಯಾಮಗಳ ಕುರಿತು ಒಂದು ಲೇಖನ ಸರಣಿಯನ್ನೇ ಬರೆಯಬಹುದಾದುದರಿಂದ ಇಲ್ಲಿ ಈ ಸಮಸ್ಯೆಯ ಸ್ಥೂಲ ಪರಿಚಯವನ್ನಷ್ಟೇ ನೀಡಲಾಗಿದೆ.</p>



<p>ವಿಶ್ವಸಂಸ್ಥೆಯೇನೋ 2022ರ ಬಡತನ ನಿರ್ಮೂಲನಾ ದಿನಾಚರಣೆಯಲ್ಲಿ &#8220;ಆಚರಣೆಯಲ್ಲಿ ಎಲ್ಲರಿಗೂ ಘನತೆ&#8221; ಎಂಬ ವಿಷಯವನ್ನು ಇಟ್ಟುಕೊಂಡಿದೆ; ಮಾತ್ರವಲ್ಲದೆ, ಇದನ್ನು ಸಾಮಾಜಿಕ ನ್ಯಾಯ, ಶಾಂತಿ ಮತ್ತು ಈ ಭೂಮಿಗಾಗಿ ನಮ್ಮ ಬದ್ಧತೆಯ ಜೊತೆಗೆ ತಳಕುಹಾಕಿದೆ. ವಿಶ್ವಸಂಸ್ಥೆಯ ಪ್ರಕಾರ‌- &#8220;ಮಾನವ ಘನತೆ&#8221; ಎಂಬುದು ಕೇವಲ ಒಂದು ಮೂಲಭೂತ ಹಕ್ಕು ಮಾತ್ರವಲ್ಲ; ಅದು ಉಳಿದೆಲ್ಲಾ ಮೂಲಭೂತ ಹಕ್ಕುಗಳಿಗೆ ಅಡಿಪಾಯವಾಗಿದೆ. ಆದುದರಿಂದ &#8220;ಮಾನವ ಘನತೆ&#8221; ಎಂಬುದು ಒಂದು ಆಮೂರ್ತ ಕಲ್ಪನೆಯಲ್ಲ. ಅದು ಪ್ರತಿಯೊಬ್ಬ ಮಾನವ ಜೀವಿಗೂ ಸೇರಿದುದಾಗಿದೆ. ಆದರೇನು? ಇಂದು ಜಾಗತಿಕವಾಗಿ ಕೋಟ್ಯಂತರ ಜನರು ಕಿತ್ತು ತಿನ್ನುವ ಬಡತನದ ಕಾರಣದಿಂದ ಪ್ರತೀದಿನ, ಪ್ರತೀಕ್ಷಣ, ತಮ್ಮ, ಕುಟುಂಬದ, ಸಮುದಾಯದ ಮತ್ತು ದೇಶದ ಘನತೆ ಮಣ್ಣು ಪಾಲಾಗುವುದನ್ನು ನೋಡುತ್ತಿದ್ದಾರೆ.</p>



<p>ಈ ಹೊತ್ತಿನಲ್ಲಿ ವಿಶ್ವಸಂಸ್ಥೆಯ ಮೂಲಕ ವಿಶ್ವ ಸಮುದಾಯ ತೋರಿಸುತ್ತಿರುವ ಆಶಾವಾದವು ಮಾತ್ರ ಪ್ರಧಾನಿ ನರೇಂದ್ರ ಮೋದಿಯ &#8220;ಅಚ್ಛೇ ದಿನ್&#8221; ನಂತೆ ನಗೆಪಾಟಲಿನ ವಿಷಯವಾಗಿ ಕಾಣುತ್ತದೆ. ಇದಕ್ಕೆ ಕಾರಣವೇನೆಂದು ಮುಂದೆ ಓದುತ್ತಾ ಹೋದಂತೆ ಸ್ಪಷ್ಟವಾದೀತು. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಅಡಿಯಲ್ಲಿ ಬಡತನ ನಿರ್ಮೂಲನೆಗೆ, ಶಾಂತಿಗೆ ಮತ್ತು ನಮ್ಮ ಗ್ರಹದ ರಕ್ಷಣೆಗೆ 2030ರ ಗಡಿಯನ್ನು ನಿಗದಿಪಡಿಸಿದೆ. ವಿಶ್ವಸಂಸ್ಥೆಯ 2030 ಕಾರ್ಯಕ್ರಮವು (2030 ಅಜೆಂಡಾ) ಕೂಡಾ ಇದೇ ಗಡುವನ್ನು ನಿಗದಿ ಪಡಿಸಿದೆ. ಕಣ್ಣಿರುವ ಯಾರಾದರೂ ನಮ್ಮದೇ ಪರಿಸ್ಥಿತಿಯನ್ನು ಒಮ್ಮೆ ಗಮನವಿಟ್ಟು ನೋಡಿದರೆ ಇನ್ನು ಎಂಟೇ ವರ್ಷಗಳಲ್ಲಿ ಇದು ಸಾಧ್ಯವೇ ಇಲ್ಲ; ಬದಲಾಗಿ, ಬಡತನವು ಹೆಚ್ಚಲಿದೆ ಎಂಬುದು ಅರಿವಾಗುತ್ತದೆ. ಅಂದರೆ, ವಿಶ್ವಸಂಸ್ಥೆಯು ಪ್ರತಿನಿಧಿಸುವ ಜಗತ್ತಿನ ಶ್ರೀಮಂತ, ಬಡ ರಾಷ್ಟ್ರಗಳು ಅಷ್ಟೊಂದು ಕುರುಡಾಗಿವೆಯೇ? ಅಥವಾ ಬಡವರ ಮುಂಗೈಗೆ ಬೆಲ್ಲ ಹಚ್ಚುತ್ತಿವೆಯೆ? ಇದು ಸಿನಿಕತನದಂತೆ ಕಾಣಬಹುದು. ಆದರೆ, ಇಂಥಾ ದಿನಾಚರಣೆ ಮತ್ತು ಕಾರ್ಯಕ್ರಮಗಳ ಜಾತಕ ಮತ್ತು ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ, ಇದುವೇ ಕಹಿಯಾದ ವಾಸ್ತವ. ಅಧಿಕೃತ ಅಂಕಿ ಅಂಶಗಳ ಪ್ರಕಾರವೇ 130 ಕೋಟಿ ಜನರು, ಅಂದರೆ, ಹೆಚ್ಚು ಕಡಿಮೆ ಭಾರತದ ಜನಸಂಖ್ಯೆಯಷ್ಟೇ ಜನರು ಬಡತನದಿಂದ ಬಳಲುತ್ತಿದ್ದಾರೆ ಎಂಬುದೇ ಈ ವಾಸ್ತವ. ಯಾಕೆಂದರೆ, &#8220;ಕಡುಬಡತನ&#8221; ನಿವಾರಣಾ ದಿನಕ್ಕೆ 35 ವರ್ಷಗಳಾದವು. ಈಗ ಆಚರಿಸಲಾಗುತ್ತಿರುವ ದಿನಕ್ಕೆ 30 ವರ್ಷಗಳು. ಒಂದು ಬಡ ಮಗುವು ಯವ್ವನಾವಸ್ಥೆ ತಲಪುವಷ್ಟು ಸಮಯವಿದು.</p>



<figure class="wp-block-image size-full"><img fetchpriority="high" decoding="async" width="702" height="437" src="https://peepalmedia.com/wp-content/uploads/2022/10/IMG-20221017-WA0009.jpg" alt="" class="wp-image-11339" srcset="https://peepalmedia.com/wp-content/uploads/2022/10/IMG-20221017-WA0009.jpg 702w, https://peepalmedia.com/wp-content/uploads/2022/10/IMG-20221017-WA0009-300x187.jpg 300w, https://peepalmedia.com/wp-content/uploads/2022/10/IMG-20221017-WA0009-150x93.jpg 150w, https://peepalmedia.com/wp-content/uploads/2022/10/IMG-20221017-WA0009-696x433.jpg 696w" sizes="(max-width: 702px) 100vw, 702px" /></figure>



<p><strong>ಬಡತನ ಎಂದರೆ ಹಸಿವು ಮಾತ್ರವಲ್ಲ…</strong></p>



<p>ಹಾಗಾದರೆ, ಬಡತನ ಎಂದರೇನು? ಬಡತನವೆಂದರೆ ಬರೇ ಹಸಿವು ಮಾತ್ರವೆ? ಬಡತನದ ಮತ್ತದರ ಎಲ್ಲಾ ಆಯಾಮಗಳ ಅತ್ಯುತ್ತಮ ವಿವರಣೆಯು ಮೇಲೆ ಉಲ್ಲೇಖಿಸಿದ ಎರಡು ದಿನಾಚರಣೆಗಳು ಆರಂಭವಾಗುವುದಕ್ಕೆ ದಶಕಗಳ ಮೊದಲು, ನಿಖರವಾಗಿ 1978 ರಲ್ಲಿ ದೇವನೂರ ಮಹಾದೇವರು ಬರೆದ &#8220;ಒಡಲಾಳ&#8221; ಎಂಬ ಪುಟ್ಟ ಕಾದಂಬರಿಯಲ್ಲಿದೆ. ಅದು ಮುದುಕಿ, ಮನೆ ಯಜಮಾನಿ ಸಾಕವ್ವನ ಪ್ರೀತಿ, ಸಿಡುಕು, ಸ್ವಾರ್ಥ, ಹಳಹಳಿಕೆಯಲ್ಲಿದೆ. ಅದು ಅವಳ ಕುಸಿಯಲಿರುವ &#8220;ತೊಟ್ಟಿ ಮನೆ&#8221; ಎಂಬ ಹಟ್ಟಿ, ಮಳೆಯಿಲ್ಲದೇ ಪಾಳು ಬಿದ್ದ ಅವಳ ಹೊಲ, ಮನೆಯಲ್ಲಿ ನೇಣು ಹಾಕಿಕೊಂಡಿರುವ ಹಳೆಯ ಕಾಲದ ನೂಲುವ ರಾಟೆ, ಮದುವೆಯಾದರೂ ತವರು ಮನೆಗೆ ಮಕ್ಕಳೊಂದಿಗೆ ಬಂದು ಕುಂತಿರುವ ಗೌರಮ್ಮನ ಜೀವನದಲ್ಲಿದೆ. ಅದು ಅವಳ ಕೂಸು, ಮೂಲೆ ಹಿಡಿದಿರುವ &#8220;ದುಪ್ಟಿ ಕಮೀಸನರು&#8221; ತರ ಅಸಹಾಯಕವಾಗಿದೆ. ಅದು, ಕಾಳಣ್ಣ ಕದ್ದ ಕಡಲೆ ಬೀಜಗಳನ್ನು ಒಂದೂ ಕಾಳೂ ಬಿಡದೆ ತಿಂದು, ಟೀ ನೀರು ಕುಡಿದ ಭಯಾನಕ ಹಸಿವಿನಲ್ಲಿದೆ ಮತ್ತು ಹಿಟ್ಟಿಲ್ಲದ ಈ ಮನೆ ಬಾಗಿಲಿಗೂ ತಡರಾತ್ರಿ ಬಂದು ಒಲೆಯಲ್ಲಿ ನೀರಿಟ್ಟು ಅಳುತ್ತಿರುವ ಕೂಸಿಗಾಗಿ &#8220;ಅರೆ ಪಾವು ಹಸಿಟ್ಟು ಕೊಡವ್ವ&#8221; ಎಂದು ಅಂಗಲಾಚುವ ನೆರೆಮನೆ ತಾಯಿಯ ನೋವಿನಲ್ಲಿದೆ. ಶಿವುವಿನ ಓದಿಗೆ ಎಣ್ಣೆ ಇಲ್ಲದ ಬೆಳಕಿನ ಸೊಳ್ಳಿನಲ್ಲಿದೆ. ಎತ್ತಪ್ಪನವರ ಹಟ್ಟಿಯ ಗೋವುಗಳ ಸಮೃದ್ಧಿಯಲ್ಲಿದೆ. &#8220;ಅದ್ರಾಗ ಒಂದೆಮ್ಮೆ ಸಾಯಬಾರ್ದಾ&#8221; ಎಂಬ ಆಸೆಯಲ್ಲಿದೆ. &#8220;ಅಲ್ಲೊಂದು ಇಲ್ಲೊಂದು ಹೊಗೆಯಾಡುವ ಮನೆಗಳ ಹಿಟ್ಟಿನ ಮಡಕೆಗಳಲ್ಲಿವೆ&#8221;. ಅದು ಸಾಕವ್ವನ ಚಂದಗಾಣವಾಗಿ ಮನೆ ಬಿಟ್ಟ &#8220;ನನ್ನುಂಜ&#8221; ವನ್ನು ಹುಡುಕುವ ನೆಪದಲ್ಲಿ ಜತೆಗಾರ ಹುಂಜವನ್ನೂ ಜೀಪಿನಲ್ಲಿ ಎತ್ತೊಯ್ಯುವ ಪೊಲೀಸರ, ವ್ಯವಸ್ಥೆಯ ಭ್ರಷ್ಟತೆ, ಲಾಠಿ-ಕೋವಿ-ಜೈಲುಗಳ ಭಯದಲ್ಲಿದೆ. ಅದಕ್ಕಿಂತಲೂ ಹೆಚ್ಚಾಗಿ, ಶಿವುವಿನ ಬೆರಗು, ಗುರುಸಿದ್ದುವಿನ ಹೊಳೆಯುವ ವಾಚು, ಪುಟ್ಟಗೌರಿಯ ಕನಸಿನ &#8220;ಕಾಲಿನಿಂದ ತಲೆಗೆ ಬರೆದ&#8221; ನವಿಲಲ್ಲಿದೆ. ಅದು ಬಲಪಂಥೀಯ ಪ್ರಧಾನಿ ನರೇಂದ್ರ ಮೋದಿ ಫೋಟೋಶೂಟಿಗಾಗಿ ಸಾಕುವ ನವಿಲಲ್ಲಿ ಇಲ್ಲ. ಚೀತಾದಲ್ಲೂ ಇಲ್ಲ. ಮಾತೆಯಾಗಿಬಿಟ್ಟ ಗೋವಿನಲ್ಲಂತೂ ಇಲ್ಲವೇ ಇಲ್ಲ.</p>



<p>ಬಡವರ &#8220;ಮಹಾ ಭಾರತ&#8221;ವನ್ನೇ ಕಣ್ಣ ಮುಂದೆ ಇಡುವ ದೇವನೂರರ &#8220;ಒಡಲಾಳ&#8221;ವನ್ನು ಸಾಹಿತ್ಯವಾಗಿ ಮಾತ್ರವಲ್ಲ; ಬಡತನದ ಅರ್ಥಶಾಸ್ತ್ರವಾಗಿ, ನಿರ್ಜೀವ ಅಂಕಿ ಅಂಶಗಳ ಮಾಯಾಜಾಲದಲ್ಲೇ ತೊಳಲಾಡುವ, ತೊಳಲಾಡಿಸುವ, ಕನಸು ಬಿತ್ತಿ, ಓಟಿನ ಬೆಳೆ ತೆಗೆಯುವ ನಮ್ಮ ಆರ್ಥಿಕ ತಜ್ಞರ, ರಾಜಕಾರಣಿಗಳ ಪಠ್ಯವಾಗಿಸಬೇಕು. ವಿಶ್ವಸಂಸ್ಥೆಯ, (ಕೆಲವರ ಕ್ಷಮೆಕೋರಿ) ಭಾರೀ ಸಂಬಳ ಪಡೆಯುವ ವೃತ್ತಿಪರ ಸಮಾಜಸೇವಕರಿಗೂ ಇದು ಪಠ್ಯವಾಗಬೇಕು. ಯಾಕೆಂದರೆ, ಹಸಿವಿನ ಅನುಭವವಿಲ್ಲದ ಅರ್ಥಶಾಸ್ತ್ರ ಒಂದು ಆಳ-ಅಗಲ ಇರುವ ಮಾಯಾಜಾಲ. ಇಲ್ಲಿ ನಾನು ನಿರ್ಜೀವ ಅಂಕಿ ಅಂಶಗಳ ಬಗ್ಗೆ ಹೆಚ್ಚಿನ ಗಮನಕೊಡುತ್ತಿಲ್ಲ. ಆದರೂ, ಗಾಳಿಯಲ್ಲಿ ಬರೆದಂತಾಗಬಾರದು ಎಂಬ ಕಾರಣದಿಂದಾಗಿ ಮಾತ್ರವೇ, ವಿಶ್ವಸಂಸ್ಥೆಯೇ ನೀಡಿರುವ ಕೆಲವೇ ಅಂಕಿ ಅಂಶಗಳನ್ನು ಇಲ್ಲಿ ಉಲ್ಲೇಖಿಸುತ್ತೇನೆ.</p>



<p><strong>ಅಂಕಿ ಅಂಶಗಳು ಹೇಳುತ್ತವೆ…</strong></p>



<p>ಕೋವಿಡ್ ಪಿಡುಗು 14.3 ಕೋಟಿಯಿಂದ 16.3 ಕೋಟಿ ಜನರನ್ನು ಬಡತನದತ್ತ ತಳ್ಳಿರುವ ಸಾಧ್ಯತೆ ಇದೆ. ಈ &#8220;ಅಂದಾಜಿನ&#8221; ನಿಖರತೆಯನ್ನು ಎರಡು ಕೋಟಿ ಜನರ-ನೆನಪಿಡಿ, ಸಂಖ್ಯೆಗಳ ವ್ಯತ್ಯಾಸದಿಂದಲೇ ಗುರುತಿಸಬಹುದು. ನಮ್ಮಲ್ಲೇ &#8220;ನಮ್ಮ ಮೋದಿ&#8221; ಮಧ್ಯರಾತ್ರಿಯ ಅನಾಣ್ಯೀಕರಣ ಮತ್ತು ಲಾಕ್‌ಡೌನ್‌ಗಳಿಂದ ಹೊಸಕಿ ಹಾಕಿದ ಜೀವನಗಳೆಷ್ಟು? ಯಾವ ಲೆಕ್ಕವಿದೆ? ಈ ಪಿಡುಗಿನ ಮೇಲೆ, ಎಲ್ಲಾ ಸರಕಾರಗಳಂತೆಯೇ ಎಲ್ಲಾ ಭಾರ ಹೊರಿಸಿರುವ ವಿಶ್ವಸಂಸ್ಥೆಯೇ 2020ರಲ್ಲಿ ಬಡತನ 8.1 ಶೇಕಡಾ ಹೆಚ್ಚಾಯಿತು ಎಂದು ಹೇಳುತ್ತದೆ. ಅದು ತಿಣುಕಿ ತೀಡಿ ಎರಡು ವರ್ಷಗಳ ಹಿಂದಿನ ಅಂಕಿಅಂಶಗಳನ್ನಷ್ಟೇ ನೀಡುತ್ತದೆ. ಅಂತರರಾಷ್ಟ್ರೀಯ ಬಡತನದ ರೇಖೆ, ರಾಷ್ಟ್ರೀಯ ಬಡತನ ರೇಖೆ ಎಂಬ ಯಾರೂ ಘನತೆಯಿಂದ ಬದುಕಲಾಗದ ಮಾನದಂಡವನ್ನು ಮೇಲೆ ಕೆಳಗೆ ಮಾಡಿ, ಬಡವರ ಸಂಖ್ಯೆಯನ್ನು ಹೆಚ್ಚು ಕಡಿಮೆ ಮಾಡುವ ದೇವನೂರರು ಹೇಳುವ ಮಾಯಾವಿಗಳಿವರು. ಮುಖ್ಯವಾಗಿ ಆಫ್ರಿಕಾ, ಯುದ್ಧಗ್ರಸ್ತ ದೇಶಗಳಲ್ಲಿ ಬಡವರ ಸಂಖ್ಯೆ 2015ರ ನಂತರ ಈಗ ದ್ವಿಗುಣಗೊಂಡಿದೆ ಎಂದ ವಿಶ್ವಸಂಸ್ಥೆಯೇ ಯಾವ ಆಶಾವಾದ ಇಟ್ಟುಕೊಂಡು, ಹಸಿದ ಹೊಟ್ಟೆಗೆ ಕನಸು ಬಡಿಸುತ್ತಿದೆ? ಸಿರಿಯಾ ಸಹಿತ ನೂರಾರು ಅಂತರ್ಯುದ್ಧಗಳಿಂದ, ಉಕ್ರೇನ್ ಮೇಲೆ ರಷ್ಯಾ ನಡೆಸಿದಂತ ಯುದ್ಧಗಳಿಂದ ನಿರಾಶ್ರಿತರು ಮತ್ತು ಬಡತನ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ಹೇಳುತ್ತಿದೆ. ಈ ಹಲ್ಲಿಲ್ಲದ ಹುಲಿಯು ಸಂಪನ್ಮೂಲ ಇರುವ, ಪ್ರಜಾಪ್ರಭುತ್ವದ ಧ್ವಜಧಾರಿ ಬಂಡವಾಳಶಾಹಿ ದೇಶಗಳು ಮತ್ತು ಸಮೃದ್ಧ ರಾಜಾಡಳಿತಗಳು ಅಂತರ್ಯುದ್ಧಗಳನ್ನು ಪ್ರಚೋದಿಸಿ, ಹಣ ಶಸ್ತ್ರಾಸ್ತ್ರ ನೀಡಿ ಪ್ರೋತ್ಸಾಹಿಸುವ ಈ ಯುದ್ಧಗಳನ್ನು ನಿಲ್ಲಿಸಲು ತಾಕತ್ತಿಲ್ಲದ ಈ ವಿಶ್ವಸಂಸ್ಥೆಯು ಯಾರ ಮುಂಗೈಗೆ ಬೆಲ್ಲ ಮುಟ್ಟಿಸುತ್ತಿದೆ?</p>



<p>ಈ ಅಂಕಿ ಆಂಶಗಳ ಸಂಗ್ರಹವಾದರೂ ಹೇಗೆ? ವಿಶ್ವಾಸಕ್ಕೆ ಅರ್ಹವಲ್ಲದ ಕೊಳೆತ ಸರಕಾರಿ ಅಂಕಿ ಅಂಶಗಳ‌ ಸಂಗ್ರಹವೇ ಇದು. ಹಸಿವಿನಿಂದ ಬಳಲುತ್ತಿರುವವರ, ಮನೆ ಇಲ್ಲದವರ, ಅಪೌಷ್ಟಿಕತೆಯಿಂದ ನರಳುತ್ತಿರುವವರ, ಕೆಲಸ ಇಲ್ಲದವರ, ಅವಕಾಶ ವಂಚಿತರ; ಶಿಶು, ಗರ್ಭಿಣಿ, ಬಾಣಂತಿಯರಾಗಿರುವಾಗ ಸತ್ತವರ, ಅತ್ಯಾಚಾರ, ಕೊಲೆ, ದೌರ್ಜನ್ಯಕ್ಕೆ ಒಳಗಾದವರ ಅಂಕಿಅಂಶಗಳೂ ನೇರವಾಗಿ ಬಡತನಕ್ಕೆ ಸಂಬಂಧಿಸಿದವುಗಳೇ ಆಗಿವೆ. ಭಾರತದಂಥ &#8220;ವಿಶ್ವಗುರು&#8221; ದೇಶದಲ್ಲಿಯೇ, ಸಂಖ್ಯಾಶಾಸ್ತ್ರಕ್ಕೊಂದು ಸಚಿವಾಲಯ ಮತ್ತು ನಾಲಾಯಕ್ ಮಂತ್ರಿ ಇರುವ ಭಾರತದಲ್ಲಿಯೇ ಸುಳ್ಳುಗಳನ್ನು ಹೊಲಿಯುವ ನಿರ್ಮಲಾ ಸೀತಾರಾಮನ್ ಅಂಥಾ ಕಳಪೆ ದರ್ಜಿಗಳ ಅಂಕಿ ಅಂಶಗಳ ಮಾಯೆ ಮಾತ್ರವೇ ಸಿಗುವಾಗ ಈ ಅಂಕಿ ಅಂಶಗಳನ್ನು ನಂಬಲು ಹೇಗೆ ಸಾಧ್ಯ?</p>



<figure class="wp-block-image size-full"><img decoding="async" width="620" height="464" src="https://peepalmedia.com/wp-content/uploads/2022/10/IMG-20221017-WA0008.jpg" alt="" class="wp-image-11340" srcset="https://peepalmedia.com/wp-content/uploads/2022/10/IMG-20221017-WA0008.jpg 620w, https://peepalmedia.com/wp-content/uploads/2022/10/IMG-20221017-WA0008-300x225.jpg 300w, https://peepalmedia.com/wp-content/uploads/2022/10/IMG-20221017-WA0008-150x112.jpg 150w" sizes="(max-width: 620px) 100vw, 620px" /></figure>



<p><strong>ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಏರುತ್ತಿದೆ…</strong></p>



<p>ಇಡೀ ಪ್ರಪಂಚದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಏರುತ್ತಿದೆ. ಬೆರಳೆಣಿಕೆ ಜನರು ಮಾತ್ರವೇ ತ್ವರಿತವಾಗಿ ಮೇಲಕ್ಕೆ ಏರಿದರೆ, ಬಹುಸಂಖ್ಯಾತರು ಅದೇ ವೇಗದಲ್ಲಿ ಬಡತನದತ್ತ ಜಾರುತ್ತಿದ್ದಾರೆ. ಇದನ್ನು ನೇರವಾಗಿ ಭಾರತದಲ್ಲಿ ಕಾಣಬಹುದು. ಬಡವರು ತಮ್ಮ ಸ್ವಂತ ಹಣ ತೆಗೆಯಲು ತೆರಿಗೆ ಕಕ್ಕುತ್ತಿರುವಾಗ, ತೆರಿಗೆಗಳ್ಳ ಶ್ರೀಮಂತರಿಗೆ ವಿನಾಯಿತಿಗಳನ್ನು, ಇನ್ನಷ್ಟು ಸಾಲಗಳನ್ನು ನೀಡಲಾಗುತ್ತಿದೆ. ಸಾಲ ತೆಗೆದು ಕಟ್ಟಲಾಗದ ರೈತಾದಿಗಳ ಆಸ್ತಿ ಹರಾಜಾಗುತ್ತಿರುವವರ ಪುಟಗಟ್ಟಲೆ ಜಾಹೀರಾತು ನೋಡುತ್ತಿರುವ ಹೊತ್ತಿನಲ್ಲಿ, ದೇಶಭಕ್ತ ಶ್ರೀಮಂತರ ಸಾಲ ಮನ್ನಾ, ಪರಾರಿ ಸುದ್ದಿಗಳನ್ನೂ ಕೇಳುತ್ತೇವೆ. ಎಲ್ಲಾ ಕಡೆ ಸರ್ವಾಧಿಕಾರ, ಬಲಪಂಥೀಯ ಸರಕಾರಗಳು ಗೊತ್ತೇ ಆಗದಂತೆ ಬರುತ್ತಿವೆ. ನವೋತ್ತರ ಬಂಡವಾಳವಾದ, ಬೌದ್ಧಿಕ ವಸಾಹತುಶಾಹಿ ಬಂದಾಗಿದೆ. ಕತ್ತಿಯಿಂದಲ್ಲ, ಕೂದಲಿನಿಂದ ಬೆಣ್ಣೆ ಕೊಯ್ದಂತೆ ಕತ್ತು ಕುಯ್ಯುತ್ತಾರೆ.</p>



<p><strong>ಬಲಪಂಥೀಯರು ಎಂದರೆ ಯಾರು?</strong></p>



<p>ಈ ಬಲಪಂಥೀಯರು ಎಂದರೆ ಯಾರು? ಬರೇ ಮತಾಂಧರು ಮಾತ್ರವೇ ಅಲ್ಲ. ಹಸಿದ, ವಂಚಿತ ಜನರಿಗೆ ಪಡಿತರ ಅಕ್ಕಿ ಬಿಡಿ, ಮಕ್ಕಳಿಗೆ ಮಧ್ಯಾಹ್ನದ ಊಟ, ಮೊಟ್ಟೆ ಕೊಡುವುದನ್ನೂ ವಿರೋಧಿಸುವ ಶೋಷಕ ಮತ್ತವರ ಗುಲಾಮಿ, ಅಜ್ಞಾನಿ ಬಾಲಬಡುಕ ವರ್ಗವೇ ಬಲಪಂಥೀಯರು. ನಾವಿಂದು ಮೀಸಲಾತಿ, ಉಚಿತ ಕೊಡುಗೆಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಉಚಿತ ಕೊಡುಗೆ ಎಂಬುದಿಲ್ಲ. ಅದು ನಿಮ್ಮ ಸಂಪತ್ತು ದೋಚಿದವರು, ಇರಲಿ ಬಿಡು ಎಂದು ಕಿಂಚಿತ್ತನ್ನು ಕನಿಕರದಿಂದ ನಿಮಗೆ ಬಿಟ್ಟುಹೋದ ಅಥವಾ ಕೊಟ್ಟುಹೋದ ಭಿಕ್ಷೆಯೂ ಅಲ್ಲ. ಕುಂ. ವೀರಭದ್ರಪ್ಪರ &#8220;ಕತ್ತಲನು ತ್ರಿಶೂಲ ಹಿಡಿದ ಕತೆ&#8221; ಯಂತೆ ಕತ್ತಲನು ಹಸಿದು, ಕೆರಳಿ ತ್ರಿಶೂಲ ಹಿಡಿಯದಿರಲಿ ಎಂದು ಮಾಡಿರುವ ಉಪಾಯವಷ್ಟೇ. ಅದನ್ನೂ ವಿರೋಧಿಸುವ ಮೂರು ಪರ್ಸೆಂಟ್ ಮೂರ್ಖರು ಮುಂದೆ ಕತ್ತಲನ ಹಸಿದ ತ್ರಿಶೂಲ ಎದುರಿಸಬೇಕಾಗುತ್ತದೆ.</p>



<p>ಮಾಯಾಜಾಲದ ಆರ್ಥಿಕತೆಯಲ್ಲಿ ಬೆಳೆಯುತ್ತಿರುವ ಆರ್ಥಿಕತೆ, ಟ್ರಿಲಿಯನ್ ಡಾಲರ್ ಇಕಾನಮಿ, ಬೆಳೆಯುತ್ತಿರುವ ಜಿಡಿಪಿ ಇವೆಲ್ಲವೂ ನಿಮ್ಮನ್ನು ಇನ್ನಷ್ಟು ಬಡವರನ್ನಾಗಿ ಮಾಡಿ, ಅದಾನಿ, ಅಂಬಾನಿಯಂತವರನ್ನು ಇನ್ನಷ್ಟು ಕೊಬ್ಬಿಸುವುದನ್ನು, ಸರಕಾರದ ಅಂದರೆ, ನಿಮ್ಮ ಆಸ್ತಿಯನ್ನು ಅವರಿಗೆ ಮೂರುಕಾಸಿಗೆ ಮಾರುವುದನ್ನು ಮರೆಸುವ ಕಣ್ಕಟ್ಟು. ಕೋಮುವಾದ ಅವುಗಳಲ್ಲಿ ಒಂದು.</p>



<p><strong>ಬಡತನದ ಹಂಚಿಕೆ..</strong></p>



<p>ಕೊನೆಗೊಂದು ಮಾತು. ಪ್ರಭುತ್ವ ಹೇಳುವ ಪ್ರಗತಿಗೂ ಬಡತನಕ್ಕೂ ಯಾವ ಸಂಬಂಧವೂ ಇಲ್ಲ. ಯುಎಸ್‌ಎ‌ಯಂಥ ಮತ್ತು ಸಿರಿವಂತ ತೈಲ ದೇಶಗಳಲ್ಲೂ ಬೀದಿಪಾಲು ಭಿಕ್ಷುಕ ಬಡವರಿದ್ದಾರೆ. ಬಡತನದ ಮೂಲ ಇರುವುದು ಸಂಪತ್ತಿನ, ಸಂಪನ್ಮೂಲಗಳ ಅಸಮಾನ ಹಂಚಿಕೆ ಮತ್ತು ಅನ್ಯಾಯದ ದೋಚುವಿಕೆ ಮತ್ತು ಒಡೆತನದಲ್ಲಿಯೇ. ಸಾಮಾಜಿಕ, ಸಾಂಸ್ಕೃತಿಕವಾದ ತಾರತಮ್ಯದಿಂದ ಕೂಡಿದ ಬಡತನ ಹಂಚಿಕೆಯನ್ನು ನಾವು ಗಮನಿಸಬೇಕು. ಬಿಳಿಯರಲ್ಲಿ ಬಡವರಿದ್ದಾರೆ. ಆದರೆ, ಕರಿಯರಲ್ಲಿ ಆತ್ಯಂತ ಹೆಚ್ಚು. ಭಾರತದಲ್ಲಿ ಮೇಲ್ಜಾತಿಯಲ್ಲಿ ಅಪರೂಪಕ್ಕೆ ಬಡವರಿದ್ದಾರೆ. ಆದರೆ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳಲ್ಲೇ ಬಡವರು ಹೆಚ್ಚಾಗಿರುವುದು, ದಲಿತರಲ್ಲಿ ಬಹುತೇಕ ಎಲ್ಲರೂ ಬಡವರಾಗಿರುವುದು ಬರೇ ಕಾಕತಾಳೀಯವಲ್ಲ. ಆದು ನಿರಂತರ ಶೋಷಣೆಯ ಫಲ. ಆ ಕುರಿತಂತೆ ಯಾವುದೇ ಚಿಂತನೆ ಮಾಡದೆ, ಉಳಿದೆಲ್ಲಾ ದಿನಾಚರಣೆಗಳು, ಸಂಕಲ್ಪಗಳು, ಕಾರ್ಯಕ್ರಮಗಳು ಬರೇ ಮೋಸದ ಕಣ್ಕಟ್ಟು ಎಂದೇ ಹೇಳಬೇಕಾಗುತ್ತದೆ.</p>



<p>ಈ ವಿಷಯದ ಆಳ-ಆಗಲದ ಕಾರಣದಿಂದಲೇ ಇದನ್ನು ಒಂದು ಲೇಖನದ ಮಿತಿಯಲ್ಲಿ ವಿವರಿಸುವುದು ಕಷ್ಟ. ಜಾಗತಿಕವಾಗಿ ಮತ್ತು ದೇಶೀಯವಾಗಿ, ಮೇಲೆ ಹೇಳಿದ ಈ ಆಯಾಮಗಳ ಕುರಿತಾಗಿಯೇ ಮುಂದೆ ಅಂಕಿ ಅಂಶಗಳ ಆಧಾರದಲ್ಲಿಯೇ, ಇದೇ &#8220;ಪೀಪಲ್&#8221; ವೇದಿಕೆಯಲ್ಲಿ ಲೇಖನಗಳನ್ನು ಬರೆಯಲಿದ್ದೇನೆ. ಯಾಕೆಂದರೆ, ನಿರ್ಜೀವ ಅಂಕಿ ಅಂಶಗಳೂ ಮಾನವೀಯ ಕಾಳಜಿಯೊಂದಿಗೆ ಅಕ್ಕಪಕ್ಕದಲ್ಲಿ ಇಟ್ಟು ನೋಡಿದಾಗ ಜೀವ ತಳೆದು, ಹೊಸ ಒಳನೋಟಗಳನ್ನು ನೀಡಬಲ್ಲವು.<br></p>



<figure class="wp-block-image size-full is-resized"><img decoding="async" src="https://peepalmedia.com/wp-content/uploads/2022/10/IMG-20221016-WA0044.jpg" alt="" class="wp-image-11341" width="154" height="148"/><figcaption>ನಿಖಿಲ್ ಕೋಲ್ಪೆ<br>ಹಿರಿಯ ಪತ್ರಕರ್ತರು, ವೃತ್ತಿಪರ ಅನುವಾದಕರು.</figcaption></figure>



<p></p>



<hr class="wp-block-separator has-alpha-channel-opacity"/>
]]></content:encoded>
					
		
		
			</item>
		<item>
		<title>ಅನ್ನದ ಋಣ ತೀರಿಸುವ ಒಂದು ಸುವರ್ಣಾವಕಾಶ</title>
		<link>https://peepalmedia.com/annada-runa-good-time-artical-by-vivekananda-hk/</link>
		
		<dc:creator><![CDATA[Vivekananda HK]]></dc:creator>
		<pubDate>Sun, 16 Oct 2022 06:15:29 +0000</pubDate>
				<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[central politics]]></category>
		<category><![CDATA[farmers]]></category>
		<category><![CDATA[Food]]></category>
		<category><![CDATA[Hunger]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=11049</guid>

					<description><![CDATA[ದೇಶವನ್ನು ಹಸಿವು ಮುಕ್ತ ಮಾಡಲು ಪ್ರತಿಯೊಬ್ಬರೂ ತಮ್ಮ ತಮ್ಮ ನೆಲೆಯಲ್ಲಿ ಆಹಾರವನ್ನು ವ್ಯರ್ಥ ಮಾಡದಂತೆ ಒಂದಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಬೆಂಗಳೂರಿನಲ್ಲಿ ಈ ಮೂರು ದಿನಗಳಿಂದ ನಡೆಯುತ್ತಿರುವ ಆಹಾರ ಸಂರಕ್ಷಣಾ ಜಾಗೃತಿಯ ಸಂಘಟಕ ವಿವೇಕಾನಂದ ಎಚ್‌ ಕೆ. ಅಕ್ಟೋಬರ್ 16 “ವಿಶ್ವ ಆಹಾರ ದಿನ”. 1945 ರಲ್ಲಿ ವಿಶ್ವಸಂಸ್ಥೆಯು ʼಆಹಾರ ಮತ್ತು ಕೃಷಿ ಸಂಸ್ಥೆʼ ಯನ್ನು (Food and agriculture organization -FAO) ಸ್ಥಾಪಿಸಿದ ದಿನವನ್ನು ಪ್ರತಿವರ್ಷ ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಹಸಿವಿನಿಂದ [&#8230;]]]></description>
										<content:encoded><![CDATA[
<p><br></p>



<p><strong>ದೇಶವನ್ನು ಹಸಿವು ಮುಕ್ತ ಮಾಡಲು ಪ್ರತಿಯೊಬ್ಬರೂ ತಮ್ಮ ತಮ್ಮ ನೆಲೆಯಲ್ಲಿ ಆಹಾರವನ್ನು ವ್ಯರ್ಥ ಮಾಡದಂತೆ ಒಂದಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎನ್ನುತ್ತಾರೆ ಬೆಂಗಳೂರಿನಲ್ಲಿ ಈ ಮೂರು ದಿನಗಳಿಂದ ನಡೆಯುತ್ತಿರುವ ಆಹಾರ ಸಂರಕ್ಷಣಾ ಜಾಗೃತಿಯ ಸಂಘಟಕ ವಿವೇಕಾನಂದ ಎಚ್‌ ಕೆ.</strong></p>



<p>ಅಕ್ಟೋಬರ್ 16 “ವಿಶ್ವ ಆಹಾರ ದಿನ”. 1945 ರಲ್ಲಿ ವಿಶ್ವಸಂಸ್ಥೆಯು ʼಆಹಾರ ಮತ್ತು ಕೃಷಿ ಸಂಸ್ಥೆʼ ಯನ್ನು (Food and agriculture organization -FAO) ಸ್ಥಾಪಿಸಿದ ದಿನವನ್ನು ಪ್ರತಿವರ್ಷ ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ.</p>



<p>ಹಸಿವಿನಿಂದ ಪ್ರತಿ ದಿನ‌ ವಿಶ್ವದಲ್ಲಿ 19,700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿರುವ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ. ಭಾರತದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆ ಎಷ್ಟು ಎಂದು ನಿರ್ದಿಷ್ಟವಾಗಿ ತಿಳಿದಿಲ್ಲ. ಆದರೆ ಸುಮಾರು 80 ಲಕ್ಷ ಜನ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಅಧ್ಯಯನವೊಂದು ವರದಿ ಮಾಡಿದೆ. ಭಾರತದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಊಟದ ಎಲೆಗಳಲ್ಲಿ ವ್ಯರ್ಥವಾಗುವ‌ ಆಹಾರ ಪ್ರಮಾಣ ಶೇಕಡಾ 25%. ಈಗ ಬಹುಶಃ ನಿಜವಾದ ಸಮಸ್ಯೆ ಅರ್ಥವಾಗಿರಬಹುದು.</p>



<p></p>



<figure class="wp-block-image size-full"><img loading="lazy" decoding="async" width="1000" height="667" src="https://peepalmedia.com/wp-content/uploads/2022/10/IMG-20221016-WA0008.jpg" alt="" class="wp-image-11055" srcset="https://peepalmedia.com/wp-content/uploads/2022/10/IMG-20221016-WA0008.jpg 1000w, https://peepalmedia.com/wp-content/uploads/2022/10/IMG-20221016-WA0008-300x200.jpg 300w, https://peepalmedia.com/wp-content/uploads/2022/10/IMG-20221016-WA0008-768x512.jpg 768w, https://peepalmedia.com/wp-content/uploads/2022/10/IMG-20221016-WA0008-150x100.jpg 150w, https://peepalmedia.com/wp-content/uploads/2022/10/IMG-20221016-WA0008-696x464.jpg 696w" sizes="auto, (max-width: 1000px) 100vw, 1000px" /></figure>



<p><strong>ಇದಕ್ಕೆ ವಿವಿಧ ಆಯಾಮಗಳು ಇವೆ….</strong></p>



<p>ವಿಶ್ವದ ಜನಸಂಖ್ಯೆ ಹೆಚ್ಚಾಗುತ್ತಲೇ ಇರುವುದು, ಅಥವಾ ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿರುವುದು, ಅಥವಾ ಅತಿಯಾದ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿರುವುದು, ಅಥವಾ ಭೂ ಪ್ರದೇಶಗಳ ಅಸಮಾನತೆ, ಅಥವಾ ಉಳಿತಾಯ ಮತ್ತು ಹಂಚಿಕೆಯ ಲೋಪದೋಷಗಳು, ಅಥವಾ ಆಹಾರದ ದುರುಪಯೋಗ…ಇವುಗಳಲ್ಲಿ ಯಾವುದು ಹೆಚ್ಚು ಕಾರಣ ಎಂಬುದನ್ನು ಗುರುತಿಸಿ ಅದನ್ನು ಸರಿಪಡಿಸುವ ಕೆಲಸ ಆಗಬೇಕಿದೆ.</p>



<p>ಸದ್ಯದ ಪರಿಸ್ಥಿತಿಯಲ್ಲಿ ವಿಶ್ವದ ಜನಸಂಖ್ಯೆ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ, ಕೃಷಿ ಚಟುವಟಿಕೆಗಳನ್ನು ಹೆಚ್ಚಿಸುವುದು, ಫಲವತ್ತತೆ ಕಾಪಾಡುವುದು, ಉಳಿತಾಯ ಮತ್ತು ಹಂಚಿಕೆ ಎಲ್ಲವೂ ಆಯಾ ದೇಶದ ಸರ್ಕಾರ ಮತ್ತು ಆಡಳಿತದ ಜವಾಬ್ದಾರಿ. ಆದರೆ ಆಹಾರ ವ್ಯರ್ಥವಾಗುವುದನ್ನು ತಡೆಯುವ ಕರ್ತವ್ಯ, ಜವಾಬ್ದಾರಿ ಮತ್ತು ಮಾನವೀಯತೆ ನಮ್ಮಂತ ಪ್ರತಿ ನಾಗರೀಕರಿಗೂ ಸಾಧ್ಯವಿದೆ.</p>



<p></p>



<figure class="wp-block-image size-full"><img loading="lazy" decoding="async" width="500" height="333" src="https://peepalmedia.com/wp-content/uploads/2022/10/IMG-20221016-WA0010.jpg" alt="" class="wp-image-11053" srcset="https://peepalmedia.com/wp-content/uploads/2022/10/IMG-20221016-WA0010.jpg 500w, https://peepalmedia.com/wp-content/uploads/2022/10/IMG-20221016-WA0010-300x200.jpg 300w, https://peepalmedia.com/wp-content/uploads/2022/10/IMG-20221016-WA0010-150x100.jpg 150w" sizes="auto, (max-width: 500px) 100vw, 500px" /></figure>



<p><strong>ಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಾದರೆ…</strong></p>



<p>ಆ ನಿಟ್ಟಿನಲ್ಲಿ ಯೋಚಿಸಿದಾಗ, ಭಾರತ ದೇಶದ ಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಾದರೆ-ಉತ್ತರ ಕರ್ನಾಟಕದ ಭಾಗದಲ್ಲಿ ಆಹಾರ ವ್ಯರ್ಥವಾಗುವುದು ಸ್ವಲ್ಪ ಕಡಿಮೆ. ಕಾರಣ ಶರಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಅವರು ಆಹಾರವನ್ನು ಸಾಧ್ಯವಾದಷ್ಟು ದುರುಪಯೋಗ ಪಡಿಸಿಕೊಳ್ಳದೆ ಬಡಿಸಿದ ಸಂಪೂರ್ಣ ಆಹಾರ ತಿನ್ನುವ ಪ್ರಯತ್ನ ಮಾಡುವುದನ್ನು ಪಾದಯಾತ್ರೆಯ ಸಂದರ್ಭದಲ್ಲಿ ಗಮನಿಸಿದ್ದೇನೆ. ಅದಕ್ಕೆ ಕಾರಣ ಏನೇ ಇರಲಿ ಆ ಮನೋಭಾವ ಮಾತ್ರ ಸ್ವಾಗತಾರ್ಹ.</p>



<p>ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಉತ್ತರ ಕರ್ನಾಟಕದಷ್ಟು ಅಲ್ಲದಿದ್ದರೂ ಆಹಾರವನ್ನು ಸ್ವಲ್ಪ ಮಟ್ಟಿಗೆ ಗೌರವಿಸಿ ಹೆಚ್ಚು ವ್ಯರ್ಥ ಮಾಡುವುದಿಲ್ಲ. ಮುಖ್ಯವಾಗಿ ಮದುವೆ ಮುಂತಾದ ಸಾರ್ವಜನಿಕ ಸಮಾರಂಭಗಳಲ್ಲಿ ಆಹಾರ ಯಥೇಚ್ಛವಾಗಿ ವ್ಯರ್ಥವಾಗುವುದು ದಕ್ಷಿಣ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ. ಅದರಲ್ಲೂ ಬೆಂಗಳೂರಿನಲ್ಲಿ ಅತಿಹೆಚ್ಚು ಆಹಾರವನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ಸ್ವತಃ ಅನುಭವದಿಂದ ಗಮನಿಸಿದ್ದೇನೆ. ಒಂದು ಕಾಲಕ್ಕೆ ಆಹಾರ ಅತ್ಯಮೂಲ್ಯವಾಗಿತ್ತು. ಆದರೆ ಜನರ ಹಣದ ಶಕ್ತಿ ಹೆಚ್ಚಾದಂತೆ ಆಹಾರದ ಪೋಲಾಗುವುದು ಹೆಚ್ಚಾಯಿತು. ಕೆಲವೊಮ್ಮೆ ನಿರ್ಲಕ್ಷ್ಯ ಮತ್ತೆ ಹಲವು ಕಡೆ ದುರಹಂಕಾರ ಇದಕ್ಕೆ ಕಾರಣ ಇರಬಹುದು.</p>



<p><strong>ಆಹಾರ ಬೆಳೆಗಳ ದುರುಪಯೋಗ!</strong></p>



<p>ರೈತರು ಬಿತ್ತನೆ ಮಾಡಿ, ಅದು ಬೆಳೆದು ಫಸಲಾಗಿ, ಕಟಾವು ಮಾಡಿ, ಸಂಗ್ರಹಿಸಿ, ಸಾಗಾಣಿಕೆ ಮಾಡಿ, ಮಾರಾಟ ಮಾಡಿ, ಅದು ಮನೆ ಮನೆಗೆ ಸೇರಿ, ಆಹಾರವಾಗಿ ನಮ್ಮ ಎಲೆ ಅಥವಾ ತಟ್ಟೆಗೆ ಸೇರುವ ವೇಳೆಗೆ ಸಾಕಷ್ಟು ಸಹಜವಾಗಿ ಮತ್ತು ಅನಿವಾರ್ಯವಾಗಿ ನಷ್ಟವಾಗಿರುತ್ತದೆ. ಮತ್ತೆ ಆಹಾರವನ್ನು ನಾವು ಬಡಿಸಿಕೊಂಡು ತಟ್ಟೆಯಲ್ಲಿ 25% ವ್ಯರ್ಥ ಮಾಡಿದರೆ ಒಟ್ಟು ಆಹಾರ ಬೆಳೆಗಳ ದುರುಪಯೋಗ ಎಷ್ಟಾಗಬಹುದು ಊಹಿಸಿ. ಭಾರತದಲ್ಲಿ 25% ವ್ಯರ್ಥ ಎಂದರೆ ಸುಮಾರು 35 ಕೋಟಿ ಜನಸಂಖ್ಯೆಯ ಆಹಾರವನ್ನು ನಾವು ಕಬಳಿಸಿದಂತೆ ಆಗುತ್ತದೆ ಮತ್ತು ಆಹಾರ ಬೆಳೆಯಲು ಉಪಯೋಗಿಸಿದ ದೇಶದ ಪ್ರಾಕೃತಿಕ ಸಂಪನ್ಮೂಲಗಳನ್ನು ದುರುಪಯೋಗ ಪಡಿಸಿಕೊಂಡು ವ್ಯವಸಾಯದ ಮೇಲೆ ಅವಶ್ಯಕವಾಗಿ ಒತ್ತಡ ಹೇರಿದಂತೆ ಆಗುತ್ತದೆ ಹಾಗು ನಮ್ಮ ರೈತರ ಶ್ರಮಕ್ಕೆ ಅಗೌರವ ತೋರಿಸಿದಂತೆ ಆಗುತ್ತದೆ. ಹಿಂದೆ ಆಗಿದ್ದು ಆಗಿ ಹೋಯಿತು. ಕನಿಷ್ಠ ಈಗಲಾದರೂ ನಾವೆಲ್ಲರೂ ಜಾಗೃತರಾಗಿ ಈ ನಿಟ್ಟಿನಲ್ಲಿ ನಮ್ಮ ನಮ್ಮ ನೆಲೆಯಲ್ಲಿ &#8211; ವೈಯಕ್ತಿಕ ಆಸಕ್ತಿಯಿಂದ ಸಾಧ್ಯವಾದಷ್ಟು ಆಹಾರ ವ್ಯರ್ಥವಾಗುವುದನ್ನು ತಡೆಯಲು ಪ್ರಯತ್ನಿಸಬೇಕು. ಇದು ಅತ್ಯಂತ ಸರಳ ಮತ್ತು ಆತ್ಮ ತೃಪ್ತಿಯ ಕೆಲಸ.</p>



<p></p>



<figure class="wp-block-image size-full"><img loading="lazy" decoding="async" width="370" height="250" src="https://peepalmedia.com/wp-content/uploads/2022/10/IMG-20221016-WA0009.jpg" alt="" class="wp-image-11052" srcset="https://peepalmedia.com/wp-content/uploads/2022/10/IMG-20221016-WA0009.jpg 370w, https://peepalmedia.com/wp-content/uploads/2022/10/IMG-20221016-WA0009-300x203.jpg 300w, https://peepalmedia.com/wp-content/uploads/2022/10/IMG-20221016-WA0009-150x101.jpg 150w" sizes="auto, (max-width: 370px) 100vw, 370px" /></figure>



<p><strong>ಸಮಾಜದ ದಿವ್ಯ ನಿರ್ಲಕ್ಷ್ಯ…</strong></p>



<p>ಭತ್ತ ಬೆಳೆಯುವ ರೈತರಿಗಿಂತ ಅಕ್ಕಿ ಮಾರುವ, ಅನ್ನ ಮಾರುವ ವ್ಯಾಪಾರಿಗಳು ಹೆಚ್ಚು ಹಣಕಾಸಿನ ಲಾಭ ಮತ್ತು ಸಾಮಾಜಿಕ ಗೌರವ ಪಡೆಯುವ ಕಾಲಘಟ್ಟದಲ್ಲಿ, ಅತಿಯಾದ ಮಳೆ, ಬಹಳಷ್ಟು ಬೆಳೆಗಳ ನಾಶ ಒಂದು ಕಡೆ, ಮೀಸಲಾತಿ ಹೋರಾಟಗಳು, ಟಿಪ್ಪು ಸುಲ್ತಾನ್ &#8211; ಒಡೆಯರ್ ಹೆಸರುಗಳ ಕೆಸರೆರಚಾಟ, ಜನಸಂಖ್ಯೆಯ ನಿಯಂತ್ರಣ ಚರ್ಚೆ, ಭಾರತ್ ಜೋಡೋ ಪಾದಯಾತ್ರೆ ಹೀಗೆ ನಿರಂತರ ಸಂಘರ್ಷಮಯ ರಾಜಕೀಯ ವಾತಾವರಣದಲ್ಲಿ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಬಹುಮುಖ್ಯವಾದ ಆಹಾರದ ಸದುಪಯೋಗದ ಬಗ್ಗೆ ಸಮಾಜ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ!</p>



<p>ಧರ್ಮಗಳ ಆಧ್ಯಾತ್ಮಿಕ ಗುರುಗಳು ವಕ್ಫ್ ಆಸ್ತಿ ಬೆಳೆಸುವಲ್ಲಿ, ಚರ್ಚ್‌ಗಳನ್ನು ನಿರ್ಮಿಸುವ, ಶಿವ &#8211; ನಾಗ ಪ್ರತಿಮೆಗಳನ್ನು ಸ್ಥಾಪಿಸುವಲ್ಲಿ ನಿರತರಾಗಿದ್ದಾರೆ. ಆಹಾರವನ್ನು ಮರೆತಿದ್ದಾರೆ. ಕೃಷಿಯನ್ನು, ರೈತರನ್ನು ನಿರ್ಲಕ್ಷಿಸಿದ್ದಾರೆ. ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಗಳಲ್ಲಿ ಮೈ ಮರೆತಿದ್ದಾರೆ…..</p>



<p>ಯುವ ಪೀಳಿಗೆಗೆ ಆಹಾರದ ಮಹತ್ವವೇ ಅರ್ಥವಾಗುತ್ತಿಲ್ಲ. ಸ್ವಿಗ್ಗಿ, ಜೊಮೇಟೋಗಳೆಂಬ ಮೊಬೈಲ್ ಕಂಪ್ಯೂಟರ್ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ಪೇಟಿಎಮ್, ಫೋನ್‌ ಪೇ, ಗೂಗಲ್ ಪೇ ಮುಂತಾದ ಬ್ಯಾಂಕಿಂಗ್ ತಂತ್ರಜ್ಞಾನದ ಮುಖಾಂತರ ಹಣ ವರ್ಗಾಯಿಸಿ ಮನೆಯ ಬಾಗಿಲಿಗೆ ಇಷ್ಟಪಟ್ಟ ಊಟ ತಿಂಡಿಗಳನ್ನು ಸುಲಭವಾಗಿ ತರಿಸಿಕೊಂಡು ತಿಂದು ಆಹಾರದ ಪಾವಿತ್ರ್ಯವನ್ನೇ ಅವರು ಮರೆತಿದ್ದಾರೆ. ಅದರ ಉತ್ಪಾದನೆ, ಹಂಚಿಕೆ, ಸಂಗ್ರಹ, ಭವಿಷ್ಯದ ಬಗ್ಗೆ ಅವರಿಗೆ ಕನಿಷ್ಠ ತಿಳಿವಳಿಕೆಯೇ ಇಲ್ಲ. ಆಡಳಿತ ವ್ಯವಸ್ಥೆ, ಮಾಧ್ಯಮಗಳು, ಅದಕ್ಕೆ ಸಂಬಂಧಿಸಿದ ಇತರರು ತುಂಬಾ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.</p>



<p>ಬಹಳ ಮುಖ್ಯ ವಿಷಯವೊಂದನ್ನು ಇಲ್ಲಿ ಗಮನಿಸಬೇಕು. ಆಹಾರ ಒಂದು ರಾಷ್ಟ್ರೀಯ ಸಂಪನ್ಮೂಲ. ಒಮ್ಮೆ ಅ ಸಂಪನ್ಮೂಲದ (ಆಹಾರದ) ಕೊರತೆ ಉಂಟಾದರೆ ಇಡೀ ದೇಶದಲ್ಲೇ ಹಾಹಾಕಾರ ಉಂಟಾಗುತ್ತದೆ. ಆದ್ದರಿಂದ ಕನಿಷ್ಠ ನಾವುಗಳು ಒಂದು ಎಚ್ಚರಿಕೆಯನ್ನಾದರೂ ವಹಿಸಬೇಕು. ಅದಕ್ಕಾಗಿ ವಿಶ್ವ ಆಹಾರ ದಿನಾಚರಣೆ.</p>



<p></p>



<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/10/IMG-20221016-WA0007-768x1024.jpg" alt="" class="wp-image-11051" width="121" height="158"/><figcaption><strong>ವಿವೇಕಾನಂದ ಎಚ್.ಕೆ</strong><br>(ಲೋಕ ಹಿತದ ಪರ ಸದಾಶಯಗಳಿಂದ ಕೂಡಿದ ಸರಣಿ ಬರೆಹಗಳ ಮೂಲಕ ಮತ್ತು ಪಾದಯಾತ್ರೆಯ ಮೂಲಕ ನಾಡಿನಾದ್ಯಂತ ಪರಿಚಿತರು.)</figcaption></figure>



<p></p>
]]></content:encoded>
					
		
		
			</item>
	</channel>
</rss>
