<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>indipendence day &#8211; Peepal Media</title>
	<atom:link href="https://peepalmedia.com/tag/indipendence-day/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 24 Jan 2023 11:05:29 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>indipendence day &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಇಂದು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನ</title>
		<link>https://peepalmedia.com/international-girl-child-day/</link>
		
		<dc:creator><![CDATA[Peepal Media]]></dc:creator>
		<pubDate>Tue, 11 Oct 2022 04:37:41 +0000</pubDate>
				<category><![CDATA[ವಿಶೇಷ]]></category>
		<category><![CDATA[daughter]]></category>
		<category><![CDATA[indipendence day]]></category>
		<category><![CDATA[International girl child day]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[UNICEF]]></category>
		<guid isPermaLink="false">https://peepalmedia.com/?p=9958</guid>

					<description><![CDATA[ಪ್ರತಿ ವರ್ಷ ನವೆಂಬರ್‌ ತಿಂಗಳ ಹನ್ನೊಂದನೆಯ ದಿನವನ್ನು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಜಗತ್ತಿನೆಲ್ಲೆಡೆ ಹೆಣ್ಣು ಮಕ್ಕಳು ಎದುರಿಸುತ್ತಿರುವ ಲಿಂಗ ಅಸಮಾನತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ದಿನದಂದು ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ವಿಶ್ವಸಂಸ್ಥೆ ಮತ್ತು ಇತರ ಸಂಸ್ಥೆಗಳು ಬಾಲ್ಯ ವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯ, ಶಿಕ್ಷಣದ ಪ್ರವೇಶ ಮತ್ತು ಹೆಚ್ಚಿನ ವಿಷಯಗಳ ಕುರಿತು ಕಾರ್ಯಕ್ರಮಗಳು ಮತ್ತು ಚರ್ಚೆಗಳನ್ನು ನಡೆಸುತ್ತವೆ. UNICEF ಈ ವರ್ಷದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ [&#8230;]]]></description>
										<content:encoded><![CDATA[
<p>ಪ್ರತಿ ವರ್ಷ ನವೆಂಬರ್‌ ತಿಂಗಳ ಹನ್ನೊಂದನೆಯ ದಿನವನ್ನು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಜಗತ್ತಿನೆಲ್ಲೆಡೆ ಹೆಣ್ಣು ಮಕ್ಕಳು ಎದುರಿಸುತ್ತಿರುವ ಲಿಂಗ ಅಸಮಾನತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ದಿನದಂದು ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು, ವಿಶ್ವಸಂಸ್ಥೆ ಮತ್ತು ಇತರ ಸಂಸ್ಥೆಗಳು ಬಾಲ್ಯ ವಿವಾಹ, ಮಹಿಳೆಯರ ಮೇಲಿನ ದೌರ್ಜನ್ಯ, ಶಿಕ್ಷಣದ ಪ್ರವೇಶ ಮತ್ತು ಹೆಚ್ಚಿನ ವಿಷಯಗಳ ಕುರಿತು ಕಾರ್ಯಕ್ರಮಗಳು ಮತ್ತು ಚರ್ಚೆಗಳನ್ನು ನಡೆಸುತ್ತವೆ.</p>



<p>UNICEF ಈ ವರ್ಷದ ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಕ್ಕೆ ಆಯ್ಕೆ ಮಾಡಿಕೊಂಡಿರುವ ಘೋಷ ವಾಕ್ಯ, ʼಇದು ನಮ್ಮ ಕಾಲ &#8211; ನಮ್ಮ ಹಕ್ಕುಗಳು ನಮ್ಮ ಭವಿಷ್ಯ.ʼ ಈ ಬಾರಿ ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ದಶಮಾನೋತ್ಸವವೂ ಹೌದು.</p>



<p>ಡಿಸೆಂಬರ್ 2011ರಲ್ಲಿ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ 66/170 ನಿರ್ಣಯವನ್ನು ಅಂಗೀಕರಿಸಿತು, ಇದು 2012ರ ಅಕ್ಟೋಬರ್ ತಿಂಗಳ 11ನೇ ದಿನವನ್ನು ಉದ್ಘಾಟನಾ ದಿನವೆಂದು ಘೋಷಿಸಿತು ಮತ್ತು ಹೆಣ್ಣು ಮಕ್ಕಳ ಸಬಲೀಕರಣ ಮತ್ತು ಅವರಿಗೆ ಸಂಬಂಧಿಸಿದ ವಿಷಯಗಳ ಮೇಲಿನ ಹೂಡಿಕೆಯ ಅಗತ್ಯವನ್ನು ಗುರುತಿಸುವುದು ಕೂಡಾ ಇದರ ಉದ್ದೇಶವಾಗಿತ್ತು.</p>



<p>ಈ ವರ್ಷ ತನ್ನ 10ನೇ ವಾರ್ಷಿಕೋತ್ಸವವನ್ನು ಆಚರಿಸುವ ಈ ದಿನದ ಉದ್ದೇಶವು, ಮೊದಲ ಉಸಿರಾಟದ ಕ್ಷಣದಿಂದಲೂ ಗಂಡು ಮಕ್ಕಳಿಗಿಂತ ಹೆಚ್ಚು ತಾರತಮ್ಯ ಮತ್ತು ಹಿಂಸಾಚಾರಕ್ಕೆ ಗುರಿಯಾಗುವ ಹೆಣ್ಣು ಮಕ್ಕಳ ಪರವಾಗಿ ಅವರೊಂದಿಗೆ ನಿಲ್ಲುವುದು ಈ ದಿನದ ಧ್ಯೇಯ. ಅವಳ ಸಾಮರ್ಥ್ಯವು ಗಂಡಿನ ಸಾಮರ್ಥ್ಯಕ್ಕೆ ಸಮಾನವಾಗಿದ್ದರೂ, ಅಂತಹ ಸಾಮರ್ಥ್ಯಕ್ಕೆ ಇಲ್ಲಿ ಬೆಲೆ ನೀಡಲಾಗುವುದಿಲ್ಲ ಮತ್ತು ಅದನ್ನು ಪೋಷಿಸಲಾಗುವುದಿಲ್ಲ. ಲಿಂಗ ತಾರತಮ್ಯದಿಂದಾಗಿ ಈ ಭೂಮಿಯಿಂದ ಸುಮಾರು 14 ಕೋಟಿ ಹೆಣ್ಣು ಮಕ್ಕಳು ಕಣ್ಮರೆಯಾಗಿದ್ದಾರೆ. ಅಲ್ಲದೆ ಇಂದು 15ರಿಂದ 19 ವರ್ಷ ವಯಸ್ಸಿನ 4 ಹೆಣ್ಣು ಮಕ್ಕಳಲ್ಲಿ ಒಬ್ಬರು ಶಾಲೆ, ಉದ್ಯೋಗ ಅಥವಾ ತರಬೇತಿಯನ್ನು ಪಡೆಯುತ್ತಿಲ್ಲ, ಅದೇ ಗಂಡುಮಕ್ಕಳ ವಿಷಯದಲ್ಲಿ ಈ ಸಂಖ್ಯೆ 10 ಗಂಡು ಮಕ್ಕಳಿಗೆ ಒಬ್ಬರಷ್ಟಿದೆ.</p>



<p>66/140 ನಿರ್ಣಯವು ಬಾಲ್ಯ ಮತ್ತು ಹದಿಹರೆಯದ ಹಕ್ಕುಗಳು, ಅವಕಾಶಗಳು ಮತ್ತು ಪ್ರಯೋಜನಗಳನ್ನು ಆನಂದಿಸಲು ಇರುವ ತೊಡಕುಗಳನ್ನು ಸಹ ಪಟ್ಟಿ ಮಾಡುತ್ತದೆ. ಬಾಲ್ಯ ಮತ್ತು ಬಲವಂತದ ವಿವಾಹಗಳು ಸಣ್ಣ ವಿವಾಹಿತ ಹೆಣ್ಣು ಮಕ್ಕಳನ್ನು ಎಚ್ಐವಿ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳ ಹೆಚ್ಚಿನ ಅಪಾಯಕ್ಕೆ ಈಡು ಮಾಡುತ್ತವೆ. ಇದಲ್ಲದೆ ಅಪ್ರಾಪ್ತ ವಯಸ್ಸಿನ ಹೆರಿಗೆ, ಅಂಗವೈಕಲ್ಯದಂತಹ ಅಪಾಯಕ್ಕೂ ಇದು ಕಾರಣವಾಗುತ್ತದೆ. ಶಿಶು ಮರಣ ಮತ್ತು ಪ್ರಸವ ಸಮಯದಲ್ಲಿ ತಾಯಿಯ ಮರಣಕ್ಕೂ ಇಂತಹ ವಿವಾಹಗಳು ಕಾರಣವಾಹುವುದನ್ನು ಇದು ಗುರುತಿಸುತ್ತದೆ. ಇಂತಹ ಮದುವೆಗಳು ಅವರ ಶಿಕ್ಷಣ ಪೂರ್ಣಗೊಳಿಸಲು ತೊಡಕಾಗುವುದರ ಜೊತೆಗೆ ಸಮಗ್ರ ಜ್ಞಾನ ಗಳಿಸಲು, ಸಮುದಾಯದಲ್ಲಿ ತೊಡಗಿಸಿಕೊಳ್ಳಲು ಹಾಗೂ ಉದ್ಯೋಗ ಸಂಬಂಧಿ ಕೌಶಲಗಳನ್ನು ಕಲಿಯಲು ಅಡ್ಡಗಾಲು ಹಾಕುತ್ತವೆ. ಅಲ್ಲದೆ ಓರ್ವ ಬಾಲಕಿಯಾಗಿ ಆಕೆ ಬದುಕನ್ನು ಅನುಭವಿಸಲು ಇರುವ ಹಕ್ಕುಗಳನ್ನು ಸಹ ಇದು ಇಲ್ಲವಾಗಿಸುತ್ತದೆ.”</p>



<p>ಇಂದು, ಅಂತರಾಷ್ಟ್ರೀಯ ದಿನದಂದು ನಾವು ನಮ್ಮ ಸುತ್ತಮುತ್ತಲಿನ ಹೆಣ್ಣು ಮಕ್ಕಳೊಡನೆ ಸೌಜನ್ಯದಿಂದ ನಡೆದುಕೊಳ್ಳುವ, ಅವರ ಹಕ್ಕುಗಳನ್ನು ಪ್ರೋತ್ಸಾಹಿಸುವ, ಅವರನ್ನು ನಮ್ಮಂತೆಯೇ ಎಂದು ಪರಿಭಾವಿಸಿ ನಡೆದುಕೊಳ್ಳುವ ಮೂಲಕ ಈ ದಿನದ ಆಚರಣೆಯನ್ನು ಅರ್ಥಪೂರ್ಣಗೊಳಿಸೋಣ. &#8220;ಬೇಟಿ ಬಚಾವೋ, ಬೇಟಿ ಪಡಾವೋ,&#8221; ಎನ್ನುವುದು ಕೇವಲ ಘೋಷಣೆ ಮಾತ್ರವಾಗಿ ಉಳಿಯದೆ ಬದುಕಿನ ಧ್ಯೇಯವೂ ಆಗಲಿ ಎಂದು ಹಾರೈಸೋಣ.</p>



<p></p>
]]></content:encoded>
					
		
		
			</item>
		<item>
		<title>ಭಾರತದ ತ್ರಿವರ್ಣ ಧ್ವಜವೆಂದರೆ&#8230;..</title>
		<link>https://peepalmedia.com/bharatada-trivarna-dhvajavendare/</link>
		
		<dc:creator><![CDATA[Peepal Media]]></dc:creator>
		<pubDate>Mon, 15 Aug 2022 12:23:19 +0000</pubDate>
				<category><![CDATA[ವಿಶೇಷ]]></category>
		<category><![CDATA[flag]]></category>
		<category><![CDATA[freedom fighters]]></category>
		<category><![CDATA[history]]></category>
		<category><![CDATA[india]]></category>
		<category><![CDATA[indian flag]]></category>
		<category><![CDATA[indipendence day]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=1894</guid>

					<description><![CDATA[ಒಂದು ರಾಷ್ಟ್ರವಾಗಿ ಭಾರತದ ಮಟ್ಟಿಗೆ, ರಾಷ್ಟ್ರ ಧ್ವಜವು ಮೂಲಭೂತವಾದ ಕೆಲವು ಮೌಲ್ಯಗಳನ್ನು ಬಿಂಬಿಸುತ್ತದೆ. ಧ್ವಜವು ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು, ಮತಧರ್ಮವನ್ನು ಮೀರಿದ ಸೆಕ್ಯುಲರ್ ಪೌರತ್ವದ ದೇಶಪ್ರೇಮವನ್ನು ಆಧರಿಸಿತ್ತು. ಈ ಮೌಲ್ಯಗಳು ಇದೀಗ ಅಧಿಕಾರದಲ್ಲಿರುವವರಿಂದ ಮತ್ತು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಬಲಪಡಿಸಿದ ಮಂದಿಯಿಂದ ಪ್ರಬಲ ಸವಾಲು ಎದುರಿಸುತ್ತಿದ್ದು, ಭಾರತ ಎಂಬ ಪರಿಕಲ್ಪನೆಯ ಮೂಲಾಧಾರವಾಗಿರುವ ಆ ಮೌಲ್ಯಗಳನ್ನು ನಾವು ರಕ್ಷಿಸಲು ಕಂಕಣ ಬದ್ಧರಾಗಬೇಕಿದೆ 75 ನೇ ಸ್ವಾತಂತ್ರ್ಯೋತ್ಸವವನ್ನು ದೇಶ ಸಂಭ್ರಮ, ಸಡಗರದಿಂದ ಆಚರಿಸುತ್ತಿದೆ. ಈ [&#8230;]]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><strong>ಒಂದು ರಾಷ್ಟ್ರವಾಗಿ ಭಾರತದ ಮಟ್ಟಿಗೆ, ರಾಷ್ಟ್ರ ಧ್ವಜವು ಮೂಲಭೂತವಾದ ಕೆಲವು ಮೌಲ್ಯಗಳನ್ನು ಬಿಂಬಿಸುತ್ತದೆ. ಧ್ವಜವು ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು, ಮತಧರ್ಮವನ್ನು ಮೀರಿದ ಸೆಕ್ಯುಲರ್ ಪೌರತ್ವದ ದೇಶಪ್ರೇಮವನ್ನು ಆಧರಿಸಿತ್ತು. ಈ ಮೌಲ್ಯಗಳು ಇದೀಗ ಅಧಿಕಾರದಲ್ಲಿರುವವರಿಂದ ಮತ್ತು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಬಲಪಡಿಸಿದ ಮಂದಿಯಿಂದ ಪ್ರಬಲ ಸವಾಲು ಎದುರಿಸುತ್ತಿದ್ದು, ಭಾರತ ಎಂಬ ಪರಿಕಲ್ಪನೆಯ ಮೂಲಾಧಾರವಾಗಿರುವ ಆ ಮೌಲ್ಯಗಳನ್ನು ನಾವು ರಕ್ಷಿಸಲು ಕಂಕಣ ಬದ್ಧರಾಗಬೇಕಿದೆ</strong></p></blockquote>



<figure class="wp-block-image size-large"><img fetchpriority="high" decoding="async" width="1024" height="576" src="https://peepalmedia.com/wp-content/uploads/2022/08/flage-1-1024x576.jpg" alt="" class="wp-image-1914" srcset="https://peepalmedia.com/wp-content/uploads/2022/08/flage-1-1024x576.jpg 1024w, https://peepalmedia.com/wp-content/uploads/2022/08/flage-1-300x169.jpg 300w, https://peepalmedia.com/wp-content/uploads/2022/08/flage-1-768x432.jpg 768w, https://peepalmedia.com/wp-content/uploads/2022/08/flage-1-1536x864.jpg 1536w, https://peepalmedia.com/wp-content/uploads/2022/08/flage-1.jpg 1600w" sizes="(max-width: 1024px) 100vw, 1024px" /></figure>



<p class="has-text-align-justify has-medium-font-size"><mark style="background-color:rgba(0, 0, 0, 0)" class="has-inline-color has-vivid-red-color">75 ನೇ ಸ್ವಾತಂತ್ರ್ಯೋತ್ಸವವನ್ನು ದೇಶ ಸಂಭ್ರಮ, ಸಡಗರದಿಂದ ಆಚರಿಸುತ್ತಿದೆ. ಈ ಬಾರಿ ವಿಶೇಷವೆಂಬಂತೆ, ದೇಶದ ಉದ್ದಗಲಕ್ಕೂ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಕರೆಕೊಡಲಾಗಿದೆ. ಇಂತಹ ಹೊತ್ತಿನಲ್ಲಿ, ಈ ತ್ರಿವರ್ಣ ಧ್ವಜ ಹೇಗೆ ಅಸ್ತಿತ್ವಕ್ಕೆ ಬಂತು, ಅದರ ಹಿಂದಿನ ಚರಿತ್ರೆ ಏನು, ಎಂಬುದನ್ನು ಸ್ಥೂಲವಾಗಿಯಾದರೂ ತಿಳಿದುಕೊಳ್ಳುವುದು ಉಚಿತವಲ್ಲವೇ? ಬನ್ನಿ&#8230;</mark></p>



<div class="wp-block-cover is-light"><span aria-hidden="true" class="wp-block-cover__background has-light-green-cyan-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<h2 class="wp-block-heading"><strong>ಧ್ವಜ ಸಮಿತಿ</strong></h2>



<p class="has-text-align-justify has-medium-font-size">ತ್ರಿವರ್ಣ ಧ್ವಜಕ್ಕೂ ಭಾರತದ ಸಂವಿಧಾನಕ್ಕೂ ನಿಕಟ ಸಂಬಂಧವಿದೆ. ಭಾರತದ ರಾಷ್ಟ್ರೀಯ ಧ್ವಜ ಯಾವುದಾಗಬೇಕು ಎಂಬುದನ್ನು ನಿರ್ಧರಿಸಲು ಸಂವಿಧಾನ ಸಭೆಯು 12 ಮಂದಿಯ ಒಂದು ಹಂಗಾಮಿ ಸಮಿತಿಯನ್ನು ಜೂನ್ 1947 ರಲ್ಲಿ ರಚಿಸಿತ್ತು. ಧ್ವಜ ಸಮಿತಿ (ಫ್ಲಾಗ್ ಕಮಿಟಿ) ಎನ್ನುವುದು ಆ ಸಮಿತಿಯ ಹೆಸರು. ಅದರ ಅಧ್ಯಕ್ಷರು ರಾಜೇಂದ್ರ ಪ್ರಸಾದ್. ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಮೌಲಾನಾ ಅಬುಲ್ ಕಲಾಂ ಅಜಾದ್, ಫ್ರಾಂಕ್ ಆಂಟನಿ, ಸರೋಜಿನಿ ನಾಯ್ಡು, ಸಿ ರಾಜಗೋಪಾಲಾಚಾರಿ, ಕೆ ಎಂ ಮುನ್ಶಿ, ಕೆ ಎಂ ಪಣಿಕ್ಕರ್, ಪಟ್ಟಾಭಿ ಸೀತಾರಾಮಯ್ಯ, ಹೀರಾಲಾಲ್ ಶಾಸ್ತ್ರಿ, ಬಲದೇವ್ ಸಿಂಗ್, ಸತ್ಯನಾರಾಯಣ ಸಿನ್ಹಾ ಮತ್ತು ಎಸ್ ಎನ್ ಗುಪ್ತಾ ಇದರ ಸದಸ್ಯರು. ಚರಕಾದ ಜಾಗದಲ್ಲಿ ಅಶೋಕ ಚಕ್ರವನ್ನು ಇರಿಸಿ ತ್ರಿವರ್ಣ ಧ್ವಜವನ್ನು ರಾಷ್ಟ್ರೀಯ ಧ್ವಜವನ್ನಾಗಿ ಅಳವಡಿಸಿಕೊಳ್ಳುವ ಪ್ರಸ್ತಾವ ಮಾಡುವುದು ಎಂದು ಆ ಸಮಿತಿಯಲ್ಲಿ ನಿರ್ಧಾರವಾಯಿತು.</p>



<p class="has-text-align-justify has-medium-font-size">ತ್ರಿವರ್ಣ ಬಾವುಟವನ್ನು 1931 ರಲ್ಲಿ ಮೊದಲು ಕಾಂಗ್ರೆಸ್ ಪಕ್ಷ ಅಳವಡಿಸಿಕೊಂಡಿತ್ತಾದರೂ, ಬಳಕೆಯಲ್ಲಿ ಮುಂದೆ ಇದು ಕಾಂಗ್ರೆಸ್ ಪಕ್ಷದಾಚೆ ಸರಿದು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯರ ಕೈಯ ಬಾವುಟವಾಯಿತು. ಸಂವಿಧಾನ ಸಭೆಯ ಚರ್ಚೆಯಲ್ಲಿ ‘ಸ್ವತಂತ್ರ ಭಾರತಕ್ಕಾಗಿ ಮಾಡಿದ ತ್ಯಾಗದ ಸಂಕೇತ ಈ ಬಾವುಟ’ ಎಂದು ಸಮಿತಿಯ ಸದಸ್ಯರು ಮತ್ತೆ ಮತ್ತೆ ಹೇಳಿದರು. “ಭಾರತದ ಸ್ವಾತಂತ್ರ್ಯಕ್ಕಾಗಿ ಎಷ್ಟೊಂದು ಮಂದಿ ಬಲಿದಾನ ಗೈದರು! ಈ ಬಾವುಟವನ್ನು ನಾಶಪಡಿಸಲು ಬ್ರಿಟಿಷ್ ಚಕ್ರಾಧಿಪತ್ಯ ತನ್ನೆಲ್ಲ ಶಕ್ತಿಯನ್ನು ಬಳಸಿತು. ಆದರೂ ನಾವು ಈ ದೇಶದ ಜನರು ಅದನ್ನು ಹೃದಯದಲ್ಲಿರಿಸಿಕೊಂಡೆವು ಮತ್ತು ಸಂರಕ್ಷಿಸಿದೆವು” ಎಂದರು ಎಚ್ ಕೆ ಖಾಂಡೇಕರ್.</p>



<p class="has-text-align-justify has-medium-font-size">ಹಾಗೆ ನೋಡಿದರೆ, ಸ್ವಾತಂತ್ರ್ಯ ಹೋರಾಟದಲ್ಲಿ ಬಳಕೆಯಲ್ಲಿದ್ದುದು ಈ ತ್ರಿವರ್ಣ ಬಾವುಟ ಮಾತ್ರವಲ್ಲ. ಇತರ ಬಾವುಟಗಳೂ ಇದ್ದವು. ಕಮ್ಯುನಿಸ್ಟರು, ಕಾರ್ಮಿಕರು ಮತ್ತು ರೈತರು ತಮ್ಮ ಹೋರಾಟದ ಉದ್ದಕ್ಕೂ ಕೆಂಪು ಬಾವುಟ ಬಳಸಿದ್ದರು. ಅದು ಅವರ ಪ್ರಕಾರ ಸಂಘರ್ಷ ಮತ್ತು ತ್ಯಾಗದ ಸಂಕೇತವಾಗಿತ್ತು. ಇನ್ನು ಆದಿವಾಸಿಗಳು ಕೂಡಾ ಬ್ರಿಟಿಷ್ ರ ವಿರುದ್ಧದ ತಮ್ಮ ದಂಗೆಗಳಲ್ಲಿ ತಮ್ಮದೇ ಪ್ರತ್ಯೇಕ ಬಾವುಟ ಬಳಸಿದ್ದರು. ಆದರೆ, ಅಂತಿಮವಾಗಿ ತ್ರಿವರ್ಣ ಧ್ವಜವನ್ನು ಎಲ್ಲರೂ ರಾಷ್ಟ್ರಧ್ವಜ ಎಂದು ಒಪ್ಪಿ, ಸ್ವೀಕರಿಸಿದ್ದರು.</p>



<h2 class="wp-block-heading"><strong>ಬಾವುಟದ ಬಣ್ಣಕ್ಕೆ ಮತೀಯವಾದಿ ಮಹತ್ವವಿಲ್ಲ</strong></h2>



<p class="has-text-align-justify has-medium-font-size">ಸಂವಿಧಾನ ಸಭೆಯ ಚರ್ಚೆಯಲ್ಲಿ ಕಾಣಿಸಿಕೊಂಡ ಇನ್ನೊಂದು ಅಂಶವೆಂದರೆ, ಈ ಬಾವುಟದಲ್ಲಿರುವ ಬಣ್ಣವು ಯಾವುದೇ ಒಂದು ಧಾರ್ಮಿಕ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂಬ ವಿಚಾರ. ಇದೊಂದು ಧರ್ಮ ನಿರಪೇಕ್ಷ ಬಾವುಟ. ರಾಷ್ಟ್ರ ಧ್ವಜವನ್ನು ಕುರಿತ ಪ್ರಸ್ತಾವನೆ ಮಂಡಿಸುತ್ತಾ ಜವಾಹರಲಾಲ್ ನೆಹರೂ ಅವರು, “ಕೆಲವರು ಇದರ ಮಹತ್ವದ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಅದನ್ನು ಮತೀಯವಾದಿ (ಕಮ್ಯುನಲ್) ಕೋನದಲ್ಲಿ ಆಲೋಚಿಸಿದ್ದಾರೆ. ಅದರ ಕೆಲ ಭಾಗ ಈ ಸಮುದಾಯವನ್ನು, ಇನ್ನು ಕೆಲ ಭಾಗ ಆ ಸಮುದಾಯವನ್ನು ಬಿಂಬಿಸುತ್ತದೆ ಎಂದೆಲ್ಲ ಭಾವಿಸಿದ್ದಾರೆ. ಆದರೆ ಈ ಬಾವುಟವನ್ನು ರಚಿಸುವಾಗ ಯಾವುದೇ ತೆರನ ಮತೀಯವಾದಿ ಆಲೋಚನೆ ನಮ್ಮಲ್ಲಿ ಇರಲಿಲ್ಲ ಎಂದರು. ಇನ್ನೊಬ್ಬ ಸದಸ್ಯ ಶಿಬನ್ ಲಾಲ್ ಸಕ್ಸೇನಾ, “ಮೂರು ಬಣ್ಣಗಳಿಗೆ ಯಾವುದೇ ಮತೀಯವಾದಿ ಮಹತ್ವ ಇಲ್ಲ ಎಂಬುದನ್ನು ಸ್ಪಷ್ಟ ಪದಗಳಲ್ಲಿ ಘೋಷಿಸುತ್ತೇವೆ. ಮತೀಯವಾದದ ಹುಚ್ಚುಹಿಡಿಸಿಕೊಂಡವರು ಈ ಬಾವುಟವನ್ನು ಮತೀಯವಾದಿ ಬಾವುಟ ಎಂದು ಪರಿಗಣಿಸಬಾರದು” ಎಂದರು. ಇದರ ಮುಂದುವರಿದ ಚರ್ಚೆಯಲ್ಲಿ ಬಾವುಟದ ಬಣ್ಣದ ಬಗ್ಗೆ ಅನೇಕ ಸೃಜನಶೀಲ ವ್ಯಾಖ್ಯಾನಗಳು ಕೂಡಾ ಕಾಣಿಸಿಕೊಂಡವು. ಕೇಸರಿ ಎಂದರೆ ತ್ಯಾಗ, ಶಾಂತಿ, ಹಸಿರು ಎಂದರೆ ಪ್ರಕೃತಿಗೆ ಹತ್ತಿರವಿರುವುದು, ಬಿಳಿಯೆಂದರೆ ಶಾಂತಿ ಮತ್ತು ಅಹಿಂಸೆ ಹೀಗೆ. ಸದರಿ ಬಾವುಟಕ್ಕೆ ಮತೀಯವಾದಿ ಬಣ್ಣ ಇಲ್ಲ ಎಂಬುದು ಮಾತ್ರ ಎಲ್ಲರ ಸಹಮತದ ಅಭಿಪ್ರಾಯವಾಗಿತ್ತು. ಬಾವುಟದ ಬಗ್ಗೆ ಸರ್ವಪಲ್ಲಿ ರಾಧಾಕೃಷ್ಣನ್ ಅವರು, “ ಸದಾ ಎಚ್ಚರಿರು, ಚಲಿಸುತ್ತಲೇ ಇರು, ಕ್ರಿಶ್ಚಿಯನ್ನರು, ಸಿಖ್ಖರು, ಮುಸ್ಲಿಮರು, ಹಿಂದೂಗಳೂ, ಬೌದ್ಧರು ಎಲ್ಲರಿಗೂ ಸುರಕ್ಷಿತ ಆಶ್ರಯ ಇರುವ ಮುಕ್ತ, ಸಹಾನುಭೂತಿಯಿಂದ ಕೂಡಿರುವ, ಸಭ್ಯ, ಪ್ರಜಾತಾಂತ್ರಿಕ ಸಮಾಜ ನಿರ್ಮಿಸಲು ಮುಂದಡಿ ಇಡು, ಶ್ರಮಿಸು” ಎಂದು ವ್ಯಾಖ್ಯಾನಿಸಿದರು.</p>



<h2 class="wp-block-heading"><strong>ಬಾವುಟವು ಸಾಮಾಜಿಕ ನ್ಯಾಯ , ತುಳಿತ ಹಾಗೂ ಹಸಿವಿನಿಂದ ಮುಕ್ತಿಯ ಪ್ರತೀಕ</strong></h2>



<p class="has-text-align-justify has-medium-font-size">ಈ ಚರ್ಚೆಯಲ್ಲಿನ ಮೂರನೇ ಅಂಶವೆಂದರೆ, ಸಾಮಾಜಿಕ ನ್ಯಾಯ ಮತ್ತು ತುಳಿತ ಮತ್ತು ಹಸಿವಿನಿಂದ ಮುಕ್ತಿ. ಈ ಬಾವುಟವು ಸ್ವಾತಂತ್ರ್ಯದ ಪ್ರತೀಕ ಎಂಬುದನ್ನು ವಿವರಿಸುತ್ತ ನೆಹರೂ ಅವರು, “ ದೇಶದಲ್ಲಿ ಉಪವಾಸ, ಹಸಿವು, ಉಡುಪಿನ ಕೊರತೆ, ಬದುಕಿನ ಅಗತ್ಯಗಳ ಕೊರತೆ ಮತ್ತು ಪ್ರತಿಯೋರ್ವನಿಗೂ ಬೆಳವಣಿಗೆ ಹೊಂದುವ ಅವಕಾಶದ ಕೊರತೆ ಇರುವವರೆಗೂ ಸಂಪೂರ್ಣ ಸ್ವಾತಂತ್ರ್ಯ ಇರುವುದಿಲ್ಲ” ಎಂದರು. ಇತರ ಅನೇಕರ ಭಾಷಣಗಳಲ್ಲಿಯೂ ಈ ಅಂಶ ಪ್ರತಿಧ್ವನಿಸಿತು.</p>



<p class="has-text-align-justify has-medium-font-size">ಜುಲೈ 22, 1947 ರಂದು ತ್ರಿವರ್ಣ ಧ್ವಜವನ್ನು ಸಂವಿಧಾನ ಸಭೆಯು ಅಂಗೀಕರಿಸಿದಾಗ ದೇಶದ ಸ್ವಾತಂತ್ರ್ಯ, ಅದನ್ನು ಸಾಧಿಸಲು ಒಗ್ಗಟ್ಟು ಮತ್ತು ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಈ ವಿಷಯಗಳನ್ನು ಸಾಮಾನ್ಯವಾಗಿ ಮತ್ತೆ ಮತ್ತೆ ಉಲ್ಲೇಖಸಿಲಾಗಿತ್ತು. ದುರದೃಷ್ಟವಶಾತ್ ಸ್ವಾತಂತ್ರ್ಯದ 75 ವರ್ಷಗಳ ಬಳಿಕವೂ ದೇಶದ ಎಲ್ಲ ಪ್ರಜೆಗಳೂ ತ್ರಿವರ್ಣ ಬಾವುಟ ಹಾರಿಸಲಾರದಂತಹ ಪರಿಸ್ಥಿತಿ ಇದೆ. ಯಾಕೆಂದರೆ ಅವರಲ್ಲಿ ಅನೇಕರು ಮನೆಯೇ ಇಲ್ಲದವರು, ಭೂರಹಿತರು, ಕನಿಷ್ಠ ಆದಾಯವಿರುವವರು. ಆಳುವವರ ತಪ್ಪು ಆರ್ಥಿಕ ನೀತಿಯಿಂದಾಗಿ ಮತ್ತು ಬಂಡವಾಳಶಾಹಿ ಶಕ್ತಿಗಳ ಅಬ್ಬರದಿಂದಾಗಿ ದೇಶದಲ್ಲಿ ಆರ್ಥಿಕ ಅಸಮಾನತೆ ವಿಪರೀತವಿದೆ. ಬಡವರು ಮತ್ತು ಧನಿಕರ ನಡುವಿನ ಕಂದಕ ಇನ್ನಷ್ಟು ಹಿಗ್ಗಿದೆ.</p>



<h2 class="wp-block-heading"><strong>ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳದ ಆರ್ ಎಸ್ ಎಸ್</strong></h2>


<div class="wp-block-image">
<figure class="aligncenter size-large is-resized"><img decoding="async" src="https://peepalmedia.com/wp-content/uploads/2022/08/RSS-flag-1024x1024.png" alt="" class="wp-image-1913" width="321" height="321" srcset="https://peepalmedia.com/wp-content/uploads/2022/08/RSS-flag-1024x1024.png 1024w, https://peepalmedia.com/wp-content/uploads/2022/08/RSS-flag-300x300.png 300w, https://peepalmedia.com/wp-content/uploads/2022/08/RSS-flag-150x150.png 150w, https://peepalmedia.com/wp-content/uploads/2022/08/RSS-flag-768x768.png 768w, https://peepalmedia.com/wp-content/uploads/2022/08/RSS-flag.png 1200w" sizes="(max-width: 321px) 100vw, 321px" /><figcaption><strong>RSS flag</strong></figcaption></figure></div>


<p class="has-text-align-justify has-medium-font-size">ಈ ನಡುವೆ, ಭಾರತ ತ್ರಿವರ್ಣ ಧ್ವಜವನ್ನು ಒಪ್ಪಿಕೊಳ್ಳದ ಒಂದು ಸಂಘಟನೆಯೆಂದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಸಂಘದ ಮುಖವಾಣಿ ‘ಆರ್ಗನೈಸರ್’ 1947 ರಲ್ಲಿ ಹೀಗೆ ಬರೆಯಿತು, “ಅದೃಷ್ಟವಶಾತ್ ಅಧಿಕಾರಕ್ಕೆ ಬಂದವರು ನಮ್ಮ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಕೊಡಬಹುದು. ಆದರೆ ಹಿಂದೂಗಳು ಅದನ್ನು ಎಂದಿಗೂ ಗೌರವಿಸುವುದಿಲ್ಲ,ಅದನ್ನು ತಮ್ಮದು ಎಂದು ಪರಿಗಣಿಸುವುದೂ ಇಲ್ಲ. ಮೂರು ಎಂಬ ಸಂಖ್ಯೆಯೇ ಅಪಶಕುನದ್ದು. ಮೂರು ಬಣ್ಣಗಳನ್ನು ಹೊಂದಿರುವ ಬಾವುಟ ಖಂಡಿತವಾಗಿಯೂ ಕೆಟ್ಟ ಮಾನಸಿಕ ಪರಿಣಾಮ ಬೀರುತ್ತದೆ ಮತ್ತು ಅದು ದೇಶಕ್ಕೆ ಹಾನಿಕರ”.</p>



<p class="has-text-align-justify has-medium-font-size">ಮಹಾತ್ಮಾ ಗಾಂಧಿಯವರ ಹತ್ಯೆ ನಡೆದ ಬೆನ್ನಿಗೇ ಆರ್ ಎಸ್ ಎಸ್ ಮೇಲೆ ನಿಷೇಧ ಹೇರಲಾಯಿತು. ಒಂದು ವರ್ಷದ ಬಳಿಕ ಅನೇಕ ಷರತ್ತುಗಳನ್ನು ವಿಧಿಸಿ ಆ ನಿಷೇಧವನ್ನು ಹಿಂದೆಗೆಯಲಾಯಿತು. ಆ ಷರತ್ತುಗಳಲ್ಲಿ ಒಂದು ಷರತ್ತೆಂದರೆ ‘ರಾಷ್ಟ್ರ ಧ್ವಜವನ್ನು ಒಪ್ಪಿಕೊಳ್ಳುವುದು’. 1949 ರ ಮೇ ತಿಂಗಳಲ್ಲಿ ಆಗಿನ ಗೃಹ ಕಾರ್ಯದರ್ಶಿ ಎಚ್ ವಿ ಆರ್ ಐಯ್ಯಂಗಾರ್ ಅವರು ಆಗಿನ ಆರ್ ಎಸ್ಎಸ್ ಮುಖ್ಯಸ್ಥ ಎಂ ಎಸ್ ಗೋಲ್ವಾಲ್ಕರ್ ಅವರಿಗೆ ಹೀಗೆ ಬರೆದರು, “ಪ್ರಭುತ್ವಕ್ಕೆ ವಿಧೇಯವಾಗಿರಲು ಯಾವುದೇ ಅಭ್ಯಂತರ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುವುದಕ್ಕಾಗಿ, ರಾಷ್ಟ್ರ ಧ್ವಜವನ್ನು ನಿಶ್ಶರ್ತವಾಗಿ ಒಪ್ಪಿಕೊಳ್ಳುವುದು ಅತ್ಯಗತ್ಯ”. ಇದನ್ನು ಒಪ್ಪಿಕೊಳ್ಳದೆ ಆರ್ ಎಸ್ ಎಸ್ ಗೆ ಬೇರೆ ಆಯ್ಕೆಯೇ ಇರಲಿಲ್ಲ.</p>



<h2 class="wp-block-heading"><strong>ರಾಷ್ಟ್ರ ಧ್ವಜದ ಮೌಲ್ಯಗಳನ್ನು ರಕ್ಷಿಸಿಕೊಳ್ಳಬೇಕಿದೆ.</strong></h2>



<p class="has-text-align-justify has-medium-font-size">ಒಂದು ರಾಷ್ಟ್ರವಾಗಿ ಭಾರತದ ಮಟ್ಟಿಗೆ, ರಾಷ್ಟ್ರ ಧ್ವಜವು ಮೂಲಭೂತವಾದ ಕೆಲವು ಮೌಲ್ಯಗಳನ್ನು ಬಿಂಬಿಸುತ್ತದೆ. ಧ್ವಜವು ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು, ಮತಧರ್ಮವನ್ನು ಮೀರಿದ ಸೆಕ್ಯುಲರ್ ಪೌರತ್ವದ ದೇಶಪ್ರೇಮವನ್ನು ಆಧರಿಸಿತ್ತು. ಬಾವುಟ ಹಾರಾಟ ಅಭಿಯಾನವು ಸಂವಿಧಾನದ ಪೀಠಿಕಾ ಭಾಗದ ಜತೆ ಜತೆಯಲ್ಲಿಯೇ ಸಾಗಬೇಕು. ಪೀಠಿಕಾ ಭಾಗದ ಮಹತ್ವದ ಸಾಲು ‘ವಿ ದ ಪೀಪಲ್ ಆಫ್ ಇಂಡಿಯಾ’ ಅಂದರೆ, ‘ನಾವು ಭಾರತದ ಜನತೆ’ ಎನ್ನುತ್ತದೆಯೇ ಹೊರತು, ‘ಹಿಂದೂಗಳಾದ ನಾವು, ಮುಸ್ಲಿಮರಾದ ನಾವು’ ಎಂದು ಹೇಳುವುದಿಲ್ಲ. ಈ ಮೌಲ್ಯಗಳು ಇದೀಗ ಅಧಿಕಾರದಲ್ಲಿರುವವರಿಂದ ಮತ್ತು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ಬ್ರಿಟಿಷರ ಒಡೆದು ಆಳುವ ನೀತಿಯನ್ನು ಬಲಪಡಿಸಿದ ಮಂದಿಯಿಂದ ಪ್ರಬಲ ಸವಾಲು ಎದುರಿಸುತ್ತಿದ್ದು, ಭಾರತ ಎಂಬ ಪರಿಕಲ್ಪನೆಯ ಮೂಲಾಧಾರವಾಗಿರುವ ಆ ಮೌಲ್ಯಗಳನ್ನು ನಾವು ರಕ್ಷಿಸಲು ಕಂಕಣ ಬದ್ಧರಾಗಬೇಕಿದೆ.</p>
</div></div>



<p class="has-text-align-right has-medium-font-size"><strong>(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</strong></p>



<figure class="wp-block-image size-large is-resized"><img decoding="async" src="https://peepalmedia.com/wp-content/uploads/2022/08/WhatsApp-Image-2022-08-08-at-5.55.02-PM-1024x1024.jpeg" alt="" class="wp-image-1018" width="222" height="222" srcset="https://peepalmedia.com/wp-content/uploads/2022/08/WhatsApp-Image-2022-08-08-at-5.55.02-PM-1024x1024.jpeg 1024w, https://peepalmedia.com/wp-content/uploads/2022/08/WhatsApp-Image-2022-08-08-at-5.55.02-PM-300x300.jpeg 300w, https://peepalmedia.com/wp-content/uploads/2022/08/WhatsApp-Image-2022-08-08-at-5.55.02-PM-150x150.jpeg 150w, https://peepalmedia.com/wp-content/uploads/2022/08/WhatsApp-Image-2022-08-08-at-5.55.02-PM-768x768.jpeg 768w, https://peepalmedia.com/wp-content/uploads/2022/08/WhatsApp-Image-2022-08-08-at-5.55.02-PM.jpeg 1280w" sizes="(max-width: 222px) 100vw, 222px" /></figure>



<p class="has-medium-font-size"><strong>ಗುಲಾಬಿ ಬಿಳಿಮಲೆ</strong><br>ಮಂಗಳೂರು ಮೂಲದವರಾದ ಇವರು,<br>ವೃತ್ತಿಯಿಂದ ಪತ್ರಕರ್ತೆ ಹಾಗು ಪ್ರವೃತ್ತಿಯಿಂದ ಬರಹಗಾರ್ತಿಯಾಗಿದ್ದಾರೆ.</p>
]]></content:encoded>
					
		
		
			</item>
		<item>
		<title>ಅಸ್ಸಾಮಿನಲ್ಲೊಬ್ಬರು ಮಂಗಳೂರಿನ ಗಾಂಧೀವಾದಿ</title>
		<link>https://peepalmedia.com/assaminallobbaru-mangalurina-gandhivaadi/</link>
		
		<dc:creator><![CDATA[Charan Aivarnad]]></dc:creator>
		<pubDate>Mon, 15 Aug 2022 12:22:18 +0000</pubDate>
				<category><![CDATA[ವಿಶೇಷ]]></category>
		<category><![CDATA[asssm]]></category>
		<category><![CDATA[freedom fighters]]></category>
		<category><![CDATA[india]]></category>
		<category><![CDATA[indipendence day]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mahatma gandhi]]></category>
		<category><![CDATA[mangalore]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=1919</guid>

					<description><![CDATA[ಅಸ್ಸಾಮಿನ ಜನರು ಭಂಡಾರಿಯವರಲ್ಲಿ ಓರ್ವ ಸಂತನನ್ನು ಕಂಡಿದ್ದಾರೆ. ಗಾಂಧಿಯ ಕರೆಗೆ ಓಗೊಟ್ಟು ಅಸ್ಸಾಮಿಗೆ ಧಾವಿಸಿ ತನ್ನ ಜೀವನದ ಬಹುತೇಕ ಕಾಲವನ್ನು ಜನಸೇವೆಗೆ ಮೀಸಲಿಟ್ಟ ಮಹಾ ಗಾಂಧೀವಾದಿ ಬೈಲು ಕೋಚಣ್ಣ ಭಂಡಾರಿಯವರು ಕರಾವಳಿಯ ಹೆಮ್ಮೆ. (ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.) ಚರಣ್ ಐವರ್ನಾಡುಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು.ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳುಇವರ ಬರವಣಿಗೆಯ ಕ್ಷೇತ್ರಗಳು]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><mark style="background-color:rgba(0, 0, 0, 0)" class="has-inline-color has-vivid-red-color">ಅಸ್ಸಾಮಿನ ಜನರು ಭಂಡಾರಿಯವರಲ್ಲಿ ಓರ್ವ ಸಂತನನ್ನು ಕಂಡಿದ್ದಾರೆ. ಗಾಂಧಿಯ ಕರೆಗೆ ಓಗೊಟ್ಟು ಅಸ್ಸಾಮಿಗೆ ಧಾವಿಸಿ ತನ್ನ ಜೀವನದ ಬಹುತೇಕ ಕಾಲವನ್ನು ಜನಸೇವೆಗೆ ಮೀಸಲಿಟ್ಟ ಮಹಾ ಗಾಂಧೀವಾದಿ ಬೈಲು ಕೋಚಣ್ಣ ಭಂಡಾರಿಯವರು ಕರಾವಳಿಯ ಹೆಮ್ಮೆ.</mark></p></blockquote>



<div class="wp-block-cover is-light"><span aria-hidden="true" class="wp-block-cover__background has-pale-cyan-blue-background-color has-background-dim-100 has-background-dim"></span><div class="wp-block-cover__inner-container is-layout-flow wp-block-cover-is-layout-flow">
<p class="has-medium-font-size">ಅಸ್ಸಾಮಿನ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕ ಮತ್ತು ಗಾಂಧಿ ಚಿಂತನೆಯ ಪ್ರಬಲ ಪ್ರತಿಪಾದಕರಲ್ಲಿ &#8216;ಬಿ.ಕೆ ಭಂಡಾರಿ&#8217;ಯವರ ಓರ್ವರು. ನಾನು ಈಶಾನ್ಯ ಭಾರತದ ಪ್ರವಾಸದಲ್ಲಿದ್ದಾಗ ಗುವಾಹಟಿಯ ಕಸ್ತೂರ್ಬಾ ಗಾಂಧಿ ಆಶ್ರಮದಲ್ಲಿ ಉಳಿದುಕೊಂಡಿದ್ದೆ. ಆ ಆಶ್ರಮದ ಗೋಡೆಯ ಮೇಲೆ ಅಸ್ಸಾಮಿನ ಮಹನೀಯರ ಭಾವಚಿತ್ರಗಳ ಮಧ್ಯೆ ಬಿ ಕೆ ಭಂಡಾರಿಯವರ ಚಿತ್ರವೂ ಇತ್ತು. ಕುತೂಹಲದಿಂದ ಅವರೆಲ್ಲರ ಬಗ್ಗೆ ಆಶ್ರಮವಾಸಿಗಳಲ್ಲಿ ಕೇಳುವಾಗ ಬಿ ಕೋಚಣ್ಣ ಭಂಡಾರಿಯವರ ಹೆಸರು ನನ್ನ ಕುತೂಹಲವನ್ನು ಕೆರಳಿಸಿತು. ಇದಂತು ಅಪ್ಪಟ ಕರಾವಳಿಯ ಬಂಟ ಸಮುದಾಯದ ಹೆಸರು !</p>



<p class="has-medium-font-size">ಆಶ್ರಮದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಿ ಕೆ ಭಂಡಾರಿಯವರ ಮಗಳು ನಯನ್ ಭಂಡಾರಿ ಶರ್ಮ ಬಂದಿದ್ದರು. ಇವರು ಅಸ್ಸಾಮಿನ ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಇಂಜಿನೀಯರ್ ಆಗಿ ನಿವೃತ್ತಿ ಹೊಂದಿದವರು. ಕಾರ್ಯಕ್ರಮದಲ್ಲಿ ಮಂಗಳೂರಿನ ನಾನು ಇದ್ದದ್ದನ್ನು ಅರಿತ ಅವರು ತಮ್ಮ ತಂದೆ ಮಂಗಳೂರು ಸಮೀಪದವರು, ಮಹಾತ್ಮ ಗಾಂದಿಯವರು ಮಂಗಳೂರಿಗೆ ಬಂದಿದ್ದಾಗ ಅವರೊಂದಿಗೆ ಅಸ್ಸಾಮಿಗೆ ತಮ್ಮ ಪತ್ನಿಯೊಂದಿಗೆ ಬಂದು ಇಲ್ಲಿಯೇ ನೆಲೆಸಿದರು ಎಂದರು. ಮಂಗಳೂರಿನ ಬಜ್ಪೆಯ ಸಮೀಪದ ಬೈಲು ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಓರ್ವ ರಾಷ್ಟ್ರೀಯ ಚಳುವಳಿಯ ಹೋರಾಟಗಾರ!</p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/08/WhatsApp-Image-2022-08-15-at-2.18.50-PM.jpeg" alt="" class="wp-image-1921" width="502" height="616" srcset="https://peepalmedia.com/wp-content/uploads/2022/08/WhatsApp-Image-2022-08-15-at-2.18.50-PM.jpeg 480w, https://peepalmedia.com/wp-content/uploads/2022/08/WhatsApp-Image-2022-08-15-at-2.18.50-PM-244x300.jpeg 244w" sizes="auto, (max-width: 502px) 100vw, 502px" /></figure></div>


<p class="has-medium-font-size">ಮಹಾತ್ಮ ಗಾಂಧೀಜಿಯವರು ಮಂಗಳೂರಿಗೆ ಮೂರು ಬಾರಿ ಬೇಟಿ ನೀಡಿದ್ದಾರೆ. 1920ರಲ್ಲಿ ಅಸಹಕಾರ ಚಳುವಳಿಯನ್ನು ಆರಂಭಿಸಿ ಅದರೊಂದಿಗೆ ಖಿಲಾಫತ್ ಚಳುವಳಿಗೆ ಭಾರತೀಯರ ಬೆಂಬಲ ಪಡೆಯಲು ಆಲಿ ಸಹೋದರರೊಂದಿಗೆ ರಾಷ್ಟ್ರವ್ಯಾಪಿ ಖಿಲಾಫತ್ ಪ್ರವಾಸ ಕೈಗೊಂಡು 19 ನೇ ಅಗಸ್ಟ್ 1920 ಕೇಂದ್ರ ಮೈದಾನದಲ್ಲಿ ಸಾರ್ವಜನಿಕ ಭಾಷಣ ಮಾಡಿದ್ದರು. ಸ್ವದೇಶಿ ಖಾದಿಯ ಪ್ರಚಾರ ಮಾಡುತ್ತಾ 26ನೇ ಅಕ್ಟೋಬರ್ 1927ರಂದು ಮಂಗಳೂರಿನಲ್ಲಿ ಜನತೆಯನ್ನು ಉದ್ಧೇಶಿಸಿ ಮಾತನಾಡಿದ್ದರು. 1933-34ರಲ್ಲಿ ಗಾಂಧೀಜಿಯವರ ಅಸ್ಪøಶ್ಯತೆಯ ವಿರುದ್ಧ ಅರಿವು ಮೂಡಿಸಲು ದೇಶಪ್ರವಾಸ ಮಾಡಿದಾಗ ಅವರು ಮಂಗಳೂರಿಗೆ ಮೂರನೇಯ ಭೇಟಿ ನೀಡಿದ್ದರು. 24ನೇ ಫೆಬ್ರವರಿ 1934ರಂದು ಮಡಿಕೇರಿಯಿಂದ ಸಂಪಾಜೆ, ಸುಳ್ಯ ಮೂಲಕ ಪುತ್ತೂರನ್ನು ತಲುಪಿ ಸಾರ್ವಜನಿಕ ಭಾಷಣ ಮಾಡಿದ್ದರು. ಅಲ್ಲಿನ ಹರಿಜನಕೇರಿಗೆ ಭೇಟಿ ನೀಡಿದ್ದರು. ಅಲ್ಲಿಂದ ಮಂಗಳೂರಿಗೆ ಬಂದು ನಾಲ್ಕು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಮೂರು ಭೇಟಿಗಳು ಕರಾವಳಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸಿದವು. ಅನೇಕ ತರುಣರು ರಾಷ್ಟ್ರೀಯ ಚಳುವಳಿಗೆ ಧುಮುಕಿದರು. ಅಂತ ಮಹನೀಯರಲ್ಲಿ ಬೈಲು ಕೋಚಣ್ಣ ಭಂಡಾರಿ ಓರ್ವರು.</p>



<p class="has-medium-font-size">ಬೈಲು ಕೋಚಣ್ಣ ಭಂಡಾರಿಯವರು 1935ರಲ್ಲಿ ಮಂಗಳೂರಿನ ಬಜ್ಪೆಯಲ್ಲಿ ವಾಸಿಸುತ್ತಿದ್ದರೆಂದು ಶಿವರಾಮ ಕಾರಂತರು ಹೇಳುತ್ತಾರೆ. ಇವರ ಪತ್ನಿ ಸಾವಿತ್ರಿಯವರು ಕಾರಂತರ ಪತ್ನಿ ಲೀಲಾರವರ ಸಹೋದರಿ. ಕಾಂಗ್ರೇಸಿನ ಸಕ್ರೀಯ ಕಾರ್ಯಕರ್ತರಾಗಿದ್ದ ಬಿ ಕೆ ಭಂಡಾರಿಯವರು ಪ್ರಸಿದ್ಧ ಸಮಾಜ ಸೇವಕ &#8216;ಥಕ್ಕರ್ ಬಾಪಾ&#8217;ರ ಅನುಯಾಯಿಯಾಗಿದ್ದರು. 1933ರಲ್ಲಿ ಗಾಂಧೀಜಿ ಅಸ್ಪøಶ್ಯತೆಯ ವಿರುದ್ಧ ಅರಿವು ಮೂಡಿಸಲು &#8216;ಹರಿಜನ ಸೇವಾ ಸಂಘ&#8217; ಸ್ಥಾಪಿಸಿ ಭಾರತದಾದ್ಯಂತ ಪ್ರವಾಸ ಆರಂಭಿಸಿದರು. ಥಕ್ಕರ್ ಬಾಪಾ ಈ ಸಂಘದ ಕಾರ್ಯದರ್ಶಿಯಾಗಿ ಅಸ್ಸಾಂನಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸೇವೆ ಮಾಡುತ್ತಿದ್ದರು. ಇದು ಬಿ ಕೆ ಭಂಡಾರಿಯವರನ್ನು ಆಕರ್ಷಿಸಿ 1936ರಲ್ಲಿ ಅಸ್ಸಾಂ ಕಡೆ ಪಯಣ ಬೆಳೆಸುವಂತೆ ಮಾಡಿತು. ಗಾಂಧೀಜಿಯವರ ಪ್ರವಾಸಗಳಲ್ಲಿ ಅವರ ಕಾರನ್ನು ತಾವೇ ಚಲಾಯಿಸುತ್ತಾರೆ. ಕಾಮರೂಪವನ್ನು ಕೇಂದ್ರವಾಗಿಟ್ಟುಕೊಂಡು ಸೇವೆಯನ್ನು ಅರಂಭಿಸಿದ ಭಂಡಾರಿಯವರು ಬಕ್ಸಾ ಎಂಬ ಜಾಗದ ಶೈಕ್ಷಣಿಕವಾಗಿ ಮತ್ತು ಸ್ವಚ್ಛತೆಯಲ್ಲಿ ಹಿಂದುಳಿದಿದ್ದ ಬೋರೊ ಮೊದಲಾದ ಬುಡಕಟ್ಟುಗಳ ಸೇವೆಯನ್ನು ಮಾಡುತ್ತಾರೆ. ಇದು ದಟ್ಟವಾದ ಕಾಡಿನಿಂದ ಆವೃತವಾದ ಸ್ಥಳವಾಗಿದ್ದು ಮಲೇರಿಯಾ, ಕಾಲಾರಗಳಿಂದ ಬಾಧಿತವಾಗಿತ್ತು. ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಾರೆ.</p>



<figure class="wp-block-image size-large"><img loading="lazy" decoding="async" width="1024" height="1013" src="https://peepalmedia.com/wp-content/uploads/2022/08/WhatsApp-Image-2022-08-15-at-2.12.29-PM-2-1024x1013.jpeg" alt="" class="wp-image-1922" srcset="https://peepalmedia.com/wp-content/uploads/2022/08/WhatsApp-Image-2022-08-15-at-2.12.29-PM-2-1024x1013.jpeg 1024w, https://peepalmedia.com/wp-content/uploads/2022/08/WhatsApp-Image-2022-08-15-at-2.12.29-PM-2-300x297.jpeg 300w, https://peepalmedia.com/wp-content/uploads/2022/08/WhatsApp-Image-2022-08-15-at-2.12.29-PM-2-768x760.jpeg 768w, https://peepalmedia.com/wp-content/uploads/2022/08/WhatsApp-Image-2022-08-15-at-2.12.29-PM-2.jpeg 1280w" sizes="auto, (max-width: 1024px) 100vw, 1024px" /></figure>



<p class="has-medium-font-size">ಕೋಚಣ್ಣ ಭಂಡಾರಿಯವರ ಮೊದಲ ಪತ್ನಿ ಸುಮತಿಯವರು ಅಸ್ಸಾಮಿನಲ್ಲಿ ಮರಣಹೊಂದಿದ ನಂತರ ಅವರು ಮಂಗಳೂರು ಮೂಲದ &#8216;ಸಾವಿತ್ರಿ ಆಳ್ವ&#8217;ರನ್ನು ವಿವಾಹವಾಗುತ್ತಾರೆ. ಸಾವಿತ್ರಿಯವರು ತುಳು ಮೂಲದವರಾದರೂ ಅಸ್ಸಾಮಿ ಕಲಿತು ಅಸ್ಸಾಮಿ ಬಟ್ಟೆ ತೊಡಲು ಆರಂಭಿಸಿದರು. ಹೈನುಗಾರಿಕೆ, ಜೇನು, ಹೂದೋಟ, ತರಕಾರಿ ಮೊದಲಾದವನ್ನು ಬೆಳೆಸುವ ಅರಿವನ್ನು ಇವರು ಅಲ್ಲಿಯ ಮಹಿಳೆಯರಲ್ಲಿ ಮೂಡಿಸಿದರು. ಕೋಚಣ್ಣ ಭಂಡಾರಿಯವರಿಗೆ ಡಾ.ಸುಮನ್, ನಯನ್ ಭಂಡಾರಿ ಶರ್ಮ, ಶೋಭನ್ ಭಂಡಾರಿ ದೇಕಾ ಮತ್ತು ಮಲಯ ಭಂಡಾರಿ ದೇಕಾ ಎಂಬ ಪುತ್ರಿಯರು ಹಾಗೂ ಮೋಹನದಾಸ್ ಎಂಬ ಓರ್ವ ಪುತ್ರ. ಇವರಲ್ಲಿ ಡಾ. ಸುಮನ್ ಮರಣಹೊಂದಿದ್ದು ಉಳಿದವರೆಲ್ಲರೂ ಕುಟುಂಬದೊಂದಿಗೆ ಅಸ್ಸಾಮಿನಲ್ಲೇ ನೆಲೆಸಿದ್ದಾರೆ.</p>



<p class="has-medium-font-size">ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಬರಮದಲ್ಲಿ ಆರಂಭಿಸಿದ ಅಸ್ಸಾಂ ಸೇವಾ ಸಂಘ್ ಬಕ್ಸಾ, ಬರಮ ಮೊದಲಾದ ಹಿಂದುಳಿದ ಪ್ರದೇಶಗಳಲ್ಲಿ ಶಾಲೆಗಳು, ವಸತಿ ನಿಲಯಗಳ ಮತ್ತು ಆರೋಗ್ಯ ಕೇಂದ್ರಗಳನ್ನು ಆರಂಭಿಸಿತು. ಭಂಡಾರಿಯವರು ಅಸ್ಸಾಮಿನಲ್ಲಿ ಸೇವೆಯನ್ನು ಆರಂಭಿಸುವಾಗ ಅನೇಕ ಕೊರತೆಗಳಿದ್ದವು. ಸಂಘದ ಕಟ್ಟಡದ ನಿರ್ಮಾಣದ ಕೆಲಸವನ್ನು ಸ್ವತಃ ತಾವೇ ಮಾಡಿದ್ದರು. ಈ ಸಂಘದ ಅಡಿಯಲ್ಲಿ ಗೋರೊ, ಖಾಸಿ ಮೊದಲಾದ ಗಿರಿ ಪ್ರದೇಶಗಳಲ್ಲಿ ಕುಷ್ಠರೋಗಿಗಳ ಚಿಕಿತ್ಸಾ ಕೇಂದ್ರವನ್ನು ತೆರೆದಿದ್ದರು. ಮಂಗಳೂರಿನ ಬೈಲು ಕೋಚಣ್ಣ ಭಂಡಾರಿಯವರು ಅಸ್ಸಾಮಿನ ಜನತೆಯ ಸೇವೆಯನ್ನು ಮಾಡಿ ಅಜರಾಮರರಾಗಿದ್ದಾರೆ.</p>



<p class="has-medium-font-size">ಅಸ್ಸಾಮಿನ ಜನರು ಭಂಡಾರಿಯವರಲ್ಲಿ ಓರ್ವ ಸಂತನನ್ನು ಕಂಡಿದ್ದಾರೆ. ಗಾಂಧಿಯ ಕರೆಗೆ ಓಗೊಟ್ಟು ಅಸ್ಸಾಮಿಗೆ ಧಾವಿಸಿ ತನ್ನ ಜೀವನದ ಬಹುತೇಕ ಕಾಲವನ್ನು ಜನಸೇವೆಗೆ ಮೀಸಲಿಟ್ಟ ಮಹಾ ಗಾಂಧೀವಾದಿ ಬೈಲು ಕೋಚಣ್ಣ ಭಂಡಾರಿಯವರು ಕರಾವಳಿಯ ಹೆಮ್ಮೆ.</p>
</div></div>



<p class="has-text-align-right has-medium-font-size"><strong>(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</strong></p>



<figure class="wp-block-image size-large is-resized"><img loading="lazy" decoding="async" src="https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1024x1024.jpeg" alt="" class="wp-image-1925" width="205" height="205" srcset="https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-1024x1024.jpeg 1024w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-300x300.jpeg 300w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-150x150.jpeg 150w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM-768x768.jpeg 768w, https://peepalmedia.com/wp-content/uploads/2022/08/WhatsApp-Image-2022-08-15-at-5.48.16-PM.jpeg 1151w" sizes="auto, (max-width: 205px) 100vw, 205px" /></figure>



<p class="has-medium-font-size"><strong>ಚರಣ್ ಐವರ್ನಾಡು</strong><br>ಬರಹಗಾರ, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು.<br>ಇತಿಹಾಸ, ಜಾನಪದ, ರಾಜಕೀಯ ಮತ್ತು ಸಬಾಲ್ಟ್ರನ್ ಅಧ್ಯಯನಗಳು<br>ಇವರ ಬರವಣಿಗೆಯ ಕ್ಷೇತ್ರಗಳು</p>
]]></content:encoded>
					
		
		
			</item>
		<item>
		<title>ಸ್ವಾತಂತ್ರ್ಯ ಸತ್ಯಾಗ್ರಹದ ಕಾರ್ನಾಡ ಸದಾಶಿವ ರಾವ್</title>
		<link>https://peepalmedia.com/svatantra-satyaagrahada-karnad-sadashiva-rao/</link>
		
		<dc:creator><![CDATA[Peepal Media]]></dc:creator>
		<pubDate>Mon, 15 Aug 2022 10:52:08 +0000</pubDate>
				<category><![CDATA[ವಿಶೇಷ]]></category>
		<category><![CDATA[freedom fighters]]></category>
		<category><![CDATA[indipendence day]]></category>
		<category><![CDATA[kannada]]></category>
		<category><![CDATA[Karnad Sadashiva Rao]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=1880</guid>

					<description><![CDATA[1881 ರಲ್ಲಿ ರಾಧಾಬಾಯಿ ಮತ್ತು ರಾಮಚಂದ್ರ ರಾವ್ ಅವರ ಏಕೈಕ ಮಗನಾಗಿ ಜನಿಸಿದ ಕಾರ್ನಾಡ ಸದಾಶಿವ ರಾವ್, ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ನಂತರ ಕಾನೂನು ಅಧ್ಯಯನ ಮಾಡಲು ಬಾಂಬೆಗೆ ಹೋದರು. 1909 ರಲ್ಲಿ&#160; ವಕೀಲರಾಗಿ ಮಂಗಳೂರಿಗೆ ಹಿಂದಿರುಗಿದರು ಮತ್ತು ಬಹುಬೇಗ ಖ್ಯಾತಿ ಪಡೆದರು. 1911 ರಲ್ಲಿ&#160; ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಅವರ ಮುಖ್ಯ ಧ್ಯೇಯ/ಗುರಿ ಮಹಿಳೆಯರ ಅಭ್ಯುದಯವಾಗಿತ್ತು. ಅವರು ತಮ್ಮ ಪತ್ನಿ ಶಾಂತಾಬಾಯಿಯವರ ಸಹಾಯದಿಂದ ಮಹಿಳೆಯರನ್ನು, ತಮ್ಮ ಮನೆಯಿಂದ ಹೊರ ಬರಲು ಪ್ರೋತ್ಸಾಹಿಸಿದ್ದರು ಮತ್ತು ಮಹಿಳಾ [&#8230;]]]></description>
										<content:encoded><![CDATA[
<p class="has-medium-font-size">1881 ರಲ್ಲಿ ರಾಧಾಬಾಯಿ ಮತ್ತು ರಾಮಚಂದ್ರ ರಾವ್ ಅವರ ಏಕೈಕ ಮಗನಾಗಿ ಜನಿಸಿದ ಕಾರ್ನಾಡ ಸದಾಶಿವ ರಾವ್, ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ನಂತರ ಕಾನೂನು ಅಧ್ಯಯನ ಮಾಡಲು ಬಾಂಬೆಗೆ ಹೋದರು. 1909 ರಲ್ಲಿ&nbsp; ವಕೀಲರಾಗಿ ಮಂಗಳೂರಿಗೆ ಹಿಂದಿರುಗಿದರು ಮತ್ತು ಬಹುಬೇಗ ಖ್ಯಾತಿ ಪಡೆದರು. 1911 ರಲ್ಲಿ&nbsp; ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಅವರ ಮುಖ್ಯ ಧ್ಯೇಯ/ಗುರಿ ಮಹಿಳೆಯರ ಅಭ್ಯುದಯವಾಗಿತ್ತು. ಅವರು ತಮ್ಮ ಪತ್ನಿ ಶಾಂತಾಬಾಯಿಯವರ ಸಹಾಯದಿಂದ ಮಹಿಳೆಯರನ್ನು, ತಮ್ಮ ಮನೆಯಿಂದ ಹೊರ ಬರಲು ಪ್ರೋತ್ಸಾಹಿಸಿದ್ದರು ಮತ್ತು ಮಹಿಳಾ ಸಭೆಗಳನ್ನು ಆರಂಭಿಸಿದರು. ಮಹಿಳೆಯರಿಗೆ ಪ್ರಾಥಮಿಕ ಶಿಕ್ಷಣ ನೀಡುವುದರ ಜೊತೆಗೆ ತಮ್ಮ ಪತ್ನಿಯ ಸಹಾಯದಿಂದ ಮಹಿಳೆಯರಿಗೆ ಹೊಲಿಗೆ, ಬುಟ್ಟಿ ತಯಾರಿಕೆ ಮತ್ತು ಇತರ ಉಪಯುಕ್ತ ತರಗತಿಗಳನ್ನು ಪ್ರಾರಂಭಿಸಿದರು. ವಿಧವೆಯ ಸಬಲೀಕರಣದ ಭಾಗವಾಗಿ, ವಿಧವಾ ಸಂಪ್ರದಾಯವನ್ನು ಮುರಿದು ಈ ತರಗತಿಗಳಿಗೆ ಸೇರಲು ಪ್ರೋತ್ಸಾಹಿಸಿದರು.&nbsp;</p>



<p class="has-medium-font-size">ಮಂಗಳೂರಿನ ಅಸ್ಪೃಶ್ಯರಲ್ಲಿ ಮತ್ತೊಬ್ಬ ಸಮಾಜ ಸೇವಕ ಕುದ್ಮುಲ್ ರಂಗ ರಾವ್ ರವರೊಂದಿಗೆ ಕೈ ಜೋಡಿಸಿ ಹರಿಜನರ ಉನ್ನತಿಗಾಗಿ ಶ್ರಮಿಸಿದರು. ಮೇಲ್ಜಾತಿಯ ದೇವಾಲಯಗಳು ಅಸ್ಪೃಶ್ಯರಿಗೆ ಪ್ರವೇಶ ನೀಡದ ಕಾರಣ,&nbsp; ಅಸ್ಪೃಶ್ಯತೆಯನ್ನು ತೊಡೆದುಹಾಕಲು ದೇವಾಲಯದ ಬಳಿ&nbsp; ಅಸ್ಪೃಶ್ಯರಿಗೆ ಭೋಜನವನ್ನು ಏರ್ಪಡಿಸಿ, ಅವರೊಂದಿಗೆ ಕುಳಿತು ಆಹಾರವನ್ನು ಸೇವಿಸಿದರು.</p>



<p class="has-medium-font-size">1919 ರ ಹೊತ್ತಿಗೆ, ಸದಾಶಿವ ರಾವ್‌ ರವರು, ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿ ಕೊಂಡರು. ಗಾಂಧಿಯವರ ಸತ್ಯಾಗ್ರಹ ಚಳುವಳಿಯಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದವರಲ್ಲಿ ಕರ್ನಾಟಕದಿಂದ ಮೊದಲಿಗರಾಗಿದ್ದರು.&nbsp; ಕಾಂಗ್ರೆಸ್ ಪಕ್ಷದ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿದ್ದ ಸದಾಶಿವ ರಾವ್‌ ರವರಿಗೆ, ಕರ್ನಾಟಕದಲ್ಲಿ ಪಕ್ಷವನ್ನು ವಿಸ್ತರಿಸುವ ಜವಾಬ್ದಾರಿ ನೀಡಲಾಗಿತ್ತು. ಇವರು ಇಡೀ ದಕ್ಷಿಣ ಕೆನರಾ ಜಿಲ್ಲೆಯ ಅಸಹಕಾರ ಚಳವಳಿಯ ಆತ್ಮವಾಗಿದ್ದರು. ಸದಾಶಿವ ರಾವ್ ರವರನ್ನು 1937 ರ ಪ್ರಾಂತೀಯ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಪರಿಗಣಿಸಲಾಗಿತ್ತು.</p>



<p class="has-medium-font-size">1967 ರಲ್ಲಿ ಅಂದಿನ ರಾಷ್ಟ್ರಪತಿಗಳು ಉದ್ಘಾಟಿಸಿದ ಮಂಗಳೂರಿನ ಕೇಂದ್ರ ಗ್ರಂಥಾಲಯಕ್ಕೆ ಕಾರ್ನಾಡ್ ಸದಾಶಿವ ರಾವ್ ರವರ ಹೆಸರನ್ನು ಇಡಲಾಗಿದೆ.</p>
]]></content:encoded>
					
		
		
			</item>
		<item>
		<title>ಭಾರತೀಯ ಕ್ರಾಂತಿಕಾರಿ ಕಲ್ಪನಾ ದತ್ತಾ</title>
		<link>https://peepalmedia.com/bharatada-krantikaari-kalpana_dutt/</link>
		
		<dc:creator><![CDATA[Peepal Media]]></dc:creator>
		<pubDate>Mon, 15 Aug 2022 10:40:37 +0000</pubDate>
				<category><![CDATA[ವಿಶೇಷ]]></category>
		<category><![CDATA[freedom fighters]]></category>
		<category><![CDATA[india]]></category>
		<category><![CDATA[indipendence day]]></category>
		<category><![CDATA[Kalpana_Dutt]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=1869</guid>

					<description><![CDATA[ಕಲ್ಪನಾ ದತ್ತಾ ಅವರು ಮಾಸ್ಟರ್ ಡಾ.ಸೂರ್ಯ ಸೇನ್ ಅವರ ಕ್ರಾಂತಿಕಾರಿ ಗುಂಪಿನ ಸದಸ್ಯರಲ್ಲಿ ಒಬ್ಬರು (ಪ್ರಭಾವಿ ಭಾರತೀಯ ಕ್ರಾಂತಿಕಾರಿ). ಈಕೆ ಪ್ರೀತಿಲತಾ ವಡ್ಡೆದಾರ್ ಅವರ ಕೆಲಸವನ್ನು ಮುಂದುವರೆಸಿದ್ದರು. ಛಾತ್ರಿ ಸಂಘಟನೆಯ (ಮಹಿಳೆಯರ ಅರೆ ಕ್ರಾಂತಿಕಾರಿ ಸಂಸ್ಥೆ, ಕೋಲ್ಕತ್ತಾ) ಸದಸ್ಯರಾಗಿದ್ದರು. ಅವರು ಶಸ್ತ್ರಾಗಾರದ ಲೂಟಿ ಮತ್ತು ಪಹರ್ತೋಲಿ ಕ್ಲಬ್ ಅನ್ನು ಸುಡುವ ಮೊದಲ ಪ್ರಯತ್ನ ಮಾಡಿದ ತಂಡದ ಭಾಗವಾಗಿದ್ದರು (ಈ ದಾಳಿಯು ಪ್ರೀತಿಲತಾ ಸಾವಿಗೆ ಕಾರಣವಾಯಿತು). ಕಲ್ಪನಾ ದತ್ತಾ ಮತ್ತು ಮಾಸ್ಟರ್ ದಾ ಮಾಡಿದ ಎರಡನೇ ದಾಳಿಯ ಪ್ರಯತ್ನದಲ್ಲಿ, [&#8230;]]]></description>
										<content:encoded><![CDATA[
<p class="has-medium-font-size">ಕಲ್ಪನಾ ದತ್ತಾ ಅವರು ಮಾಸ್ಟರ್ ಡಾ.ಸೂರ್ಯ ಸೇನ್ ಅವರ ಕ್ರಾಂತಿಕಾರಿ ಗುಂಪಿನ ಸದಸ್ಯರಲ್ಲಿ ಒಬ್ಬರು (ಪ್ರಭಾವಿ ಭಾರತೀಯ ಕ್ರಾಂತಿಕಾರಿ). ಈಕೆ ಪ್ರೀತಿಲತಾ ವಡ್ಡೆದಾರ್ ಅವರ ಕೆಲಸವನ್ನು ಮುಂದುವರೆಸಿದ್ದರು. ಛಾತ್ರಿ ಸಂಘಟನೆಯ (ಮಹಿಳೆಯರ ಅರೆ ಕ್ರಾಂತಿಕಾರಿ ಸಂಸ್ಥೆ, ಕೋಲ್ಕತ್ತಾ) ಸದಸ್ಯರಾಗಿದ್ದರು. ಅವರು ಶಸ್ತ್ರಾಗಾರದ ಲೂಟಿ ಮತ್ತು ಪಹರ್ತೋಲಿ ಕ್ಲಬ್ ಅನ್ನು ಸುಡುವ ಮೊದಲ ಪ್ರಯತ್ನ ಮಾಡಿದ ತಂಡದ ಭಾಗವಾಗಿದ್ದರು (ಈ ದಾಳಿಯು ಪ್ರೀತಿಲತಾ ಸಾವಿಗೆ ಕಾರಣವಾಯಿತು). ಕಲ್ಪನಾ ದತ್ತಾ ಮತ್ತು ಮಾಸ್ಟರ್ ದಾ ಮಾಡಿದ ಎರಡನೇ ದಾಳಿಯ ಪ್ರಯತ್ನದಲ್ಲಿ, ಬ್ರಿಟಿಷರು ಮೊದಲೇ ಸಿದ್ಧರಾಗಿದ್ದರು. ಆ ಸಮಯದಲ್ಲಿ ಕಲ್ಪನಾ ದತ್ತಾ ತಪ್ಪಿಸಿಕೊಂಡರು, ಆದರೆ ಮಾಸ್ಟರ್ ದ ರವರು 1933 ರಲ್ಲಿ ಸೆರೆಹಿಡಿಯಲ್ಪಟ್ಟರು.  ಮೂರು ತಿಂಗಳ ನಂತರ, ಚಿತ್ತಗಾಂಗ್ ಶಸ್ತ್ರಾಸ್ತ್ರ ಲೂಟಿಯಲ್ಲಿ ಭಾಗವಹಿಸಿದ್ದಕ್ಕಾಗಿ ಈಕೆಯನ್ನು ಬಂಧಿಸಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆರು ವರ್ಷಗಳ ನಂತರ  ಬಿಡುಗಡೆ ಮಾಡಲಾಯಿತು.</p>



<p class="has-medium-font-size">ಕಲ್ಪನಾ ದತ್ತಾ ವಿಜ್ಞಾನ ಕಲಿತ ವಿದ್ಯಾರ್ಥಿನಿ. ಖುದಿರಾಮ್ ಬೋಸ್ ಅವರ ಪ್ರಾಣತ್ಯಾಗದಿಂದ  ಪ್ರಭಾವಗೊಂಡಿದ್ದರು. ಚಿತ್ತಗಾಂಗ್‌ ನಲ್ಲಿದ್ದಾಗಲೇ ದೇಶಭಕ್ತಿಯು ಈಕೆಯ ಜೀವನದಲ್ಲಿ ಪ್ರವೇಶ ಮಾಡಿತ್ತು. ಕೋಲ್ಕತ್ತಾದ ಬೆಥೂನ್ ಕಾಲೇಜಿನಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿದ್ದಾಗ ಇದು ಮತ್ತಷ್ಟು ದೃಢವಾಯಿತು. ಹೋರಾಟದ ಹಾದಿಯಲ್ಲೇ, ಕಲ್ಪನಾ, 1995 ರಲ್ಲಿ ಕೊನೆಯುಸಿರೆಳೆದರು.</p>
]]></content:encoded>
					
		
		
			</item>
		<item>
		<title>ಸ್ವಾತಂತ್ರ್ಯ ಹೋರಾಟಗಾರ ಉಳ್ಳಾಲ ಶ್ರೀನಿವಾಸ ಮಲ್ಯ</title>
		<link>https://peepalmedia.com/svatantra-horaatagaara-ullala-srinivas-mallya/</link>
		
		<dc:creator><![CDATA[Peepal Media]]></dc:creator>
		<pubDate>Mon, 15 Aug 2022 10:30:48 +0000</pubDate>
				<category><![CDATA[ವಿಶೇಷ]]></category>
		<category><![CDATA[freedom fighters]]></category>
		<category><![CDATA[india]]></category>
		<category><![CDATA[indipendence day]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[Srinivas Mallya]]></category>
		<category><![CDATA[writing]]></category>
		<guid isPermaLink="false">https://peepalmedia.com/?p=1864</guid>

					<description><![CDATA[1902 ರಲ್ಲಿ ಉಳ್ಳಾಲ ಮಂಜುನಾಥ್ ಮಲ್ಯ ಮತ್ತು ರುಕ್ಮಾ ಬಾಯಿ ದಂಪತಿಗೆ ಜನಿಸಿದ ಉಳ್ಳಾಲ ಶ್ರೀನಿವಾಸ ಮಲ್ಯರವರು ಮಂಗಳೂರಿನಲ್ಲಿ ಜನಿಸಿದರು ಮತ್ತು ಅಲ್ಲಿಯೇ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು. 1920 ರಲ್ಲಿ ಮಂಗಳೂರಿಗೆ ಗಾಂಧೀಜಿಯವರ ಖಿಲಾಫತ್ ಭೇಟಿಯು, ಯುವಕ ಶ್ರೀನಿವಾಸ್ ಮಲ್ಯರ ಮೇಲೆ ಹೆಚ್ಚಿನ ಪ್ರಭಾವ ಬೀರಿತ್ತು.ಆ ವೇಳೆಗಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ನಿರ್ಧರಿಸಿದ್ದರು.  ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಸ್ವಯಂಸೇವಕರಾಗಿದ್ದರು. ಮಲ್ಯರಲ್ಲಿದ್ದ ಅಪಾರ ಸಾಮರ್ಥ್ಯಗಳು, ಬುದ್ಧಿಶಕ್ತಿ ಮತ್ತು ನಿಷ್ಠೆಯ ಕೆಲಸದಿಂದಾಗಿ ಅವರನ್ನು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ [&#8230;]]]></description>
										<content:encoded><![CDATA[
<p class="has-medium-font-size">1902 ರಲ್ಲಿ ಉಳ್ಳಾಲ ಮಂಜುನಾಥ್ ಮಲ್ಯ ಮತ್ತು ರುಕ್ಮಾ ಬಾಯಿ ದಂಪತಿಗೆ ಜನಿಸಿದ ಉಳ್ಳಾಲ ಶ್ರೀನಿವಾಸ ಮಲ್ಯರವರು ಮಂಗಳೂರಿನಲ್ಲಿ ಜನಿಸಿದರು ಮತ್ತು ಅಲ್ಲಿಯೇ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದರು.</p>



<p class="has-medium-font-size">1920 ರಲ್ಲಿ ಮಂಗಳೂರಿಗೆ ಗಾಂಧೀಜಿಯವರ ಖಿಲಾಫತ್ ಭೇಟಿಯು, ಯುವಕ ಶ್ರೀನಿವಾಸ್ ಮಲ್ಯರ ಮೇಲೆ ಹೆಚ್ಚಿನ ಪ್ರಭಾವ ಬೀರಿತ್ತು.ಆ ವೇಳೆಗಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಲು ನಿರ್ಧರಿಸಿದ್ದರು.  ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಸ್ವಯಂಸೇವಕರಾಗಿದ್ದರು. ಮಲ್ಯರಲ್ಲಿದ್ದ ಅಪಾರ ಸಾಮರ್ಥ್ಯಗಳು, ಬುದ್ಧಿಶಕ್ತಿ ಮತ್ತು ನಿಷ್ಠೆಯ ಕೆಲಸದಿಂದಾಗಿ ಅವರನ್ನು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ‍ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. ಅವರು, ಮಂಗಳೂರಿನ ಕಲಮಾದೇವಿ ಚಟ್ಟೋಪಾದ್ಯಾಯರಿಂದಲೂ  ಪ್ರಭಾವಿತಗೊಂಡಿದ್ದರು. 1930 ರ ದಶಕದಲ್ಲಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ, ಅನೇಕ ಸಂದರ್ಭಗಳಲ್ಲಿ ಭೂಗತರಾಗಬೇಕಾಯಿತು. ಮಲ್ಯ ರವರು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು ಮತ್ತು ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ  ಜೈಲುವಾಸವನ್ನು ಅನುಭವಿಸಿದ್ದರು. ಗಾಂಧೀಜಿಯವರ ಖಾದಿ ಮತ್ತು ಗ್ರಾಮೋದ್ಯೋಗ, ದಲಿತರ ದೇವಾಲಯ ಪ್ರವೇಶ, ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಅನುಷ್ಠಾನಗೊಳಿಸುವುದು, ಅಸ್ಪೃಶ್ಯತೆ ನಿರ್ಮೂಲನೆ ಮುಂತಾದ ಕಾರ್ಯಕ್ರಮಗಳನ್ನು ಉತ್ತೇಜಿಸುವಲ್ಲಿ  ಸಕ್ರಿಯವಾಗಿ ಭಾಗವಹಿಸಿದರು.</p>



<p class="has-medium-font-size">ಶ್ರೀನಿವಾಸ್ ಮಲ್ಯರವರನ್ನು ದೆಹಲಿ ಸಮಿತಿಯ ಸಂವಿಧಾನ ಸಭೆಯ ಸದಸ್ಯರನ್ನಾಗಿ ನೇಮಿಸಲಾಯಿತು. 1948 ರಿಂದ ಅವರ ಮರಣದವರೆಗೂ ಮುಖ್ಯ ಸಚೇತಕರಾಗಿ ಕಾರ್ಯ ನಿರ್ವಹಿಸಿದರು. 1952 ರಲ್ಲಿ ದೇಶದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ, ಲಾಲ್ ಬಹದ್ದೂರ್ ಶಾಸ್ತ್ರಿಯವರೊಂದಿಗೆ ಪಕ್ಷದ ‍ಕಾರ್ಯದರ್ಶಿಯಾಗಿ ನೇಮಕಗೊಂಡರು. ನಂತರ ಅವರು ಮಂಗಳೂರು ಉತ್ತರ ಕ್ಷೇತ್ರಕ್ಕೆ ಸಂಸದರಾಗಿ ನೇಮಕವಾದರು.</p>



<p class="has-medium-font-size">ಮಲ್ಯರವರು ತಮ್ಮ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದ್ದರು. ಅವರನ್ನು &#8220;ಆಧುನಿಕ ದಕ್ಷಿಣ ಕನ್ನಡ ಜಿಲ್ಲೆಯ ಪಿತಾಮಹ&#8221; ಎಂದು ಕರೆಯಲಾಗುತ್ತದೆ.</p>
]]></content:encoded>
					
		
		
			</item>
		<item>
		<title>ಸ್ವಾತಂತ್ರ್ಯ ಸತ್ಯಾಗ್ರಹದ ದಕ್ಷ ಸತ್ಯಾಗ್ರಹಿ ಸ್ನೇಹಲತಾ ವರ್ಮಾ</title>
		<link>https://peepalmedia.com/svatantrya-satyagrahada-daksha-satyagrahi-snehalataa-varmaa/</link>
		
		<dc:creator><![CDATA[Peepal Media]]></dc:creator>
		<pubDate>Mon, 15 Aug 2022 10:20:36 +0000</pubDate>
				<category><![CDATA[ವಿಶೇಷ]]></category>
		<category><![CDATA[freedom fighters]]></category>
		<category><![CDATA[india]]></category>
		<category><![CDATA[indipendence day]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=1860</guid>

					<description><![CDATA[ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಾಣಿಕ್ಯಲಾಲ್ ವರ್ಮಾರವರ ಪುತ್ರಿ ಶ್ರೀಮತಿ. ಸ್ನೇಹಲತಾ ವರ್ಮಾಅವರು ತಮ್ಮ ಅಜ್ಜಿಯೊಂದಿಗೆ, ತಂದೆಯವರ ನೇತೃತ್ವದ ಬಿಜೋಲಿಯಾ ರೈತ ಚಳವಳಿಯಲ್ಲಿ ಭಾಗವಹಿಸಿದ್ದರು. ತಮ್ಮ ತಂದೆಯ ದಾರಿಯಲ್ಲಿಯೇ ಸಾಗಿದ ಸ್ನೇಹಲತಾರವರು, ಇದೇ ಕಾರಣಕ್ಕಾಗಿ ಎಷ್ಟೋ ಬಾರಿ ದೌರ್ಜನ್ಯವನ್ನು ಎದುರಿಸಬೇಕಾಯಿತು. ಆಕೆಯ ಈ ಪ್ರಯತ್ನಕ್ಕೆ, ಪತಿ ಶ್ರೀ ಹರೀಶ್ ಚಂದ್ರ ಪ್ರವಾಸಿಯವರ ಸಂಪೂರ್ಣ ಸಹಕಾರವಿತ್ತು. ಉದಯಪುರದಲ್ಲಿ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಯಿತು. ಅವರ ತಾಯಿ &#8216;ಮಹಿಳಾ ಸಂಘಟನೆ&#8217;ಯನ್ನು ಸ್ಥಾಪಿಸಿದರು. ಮುಂದೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳಲು ಸ್ನೇಹಲತಾ [&#8230;]]]></description>
										<content:encoded><![CDATA[
<p class="has-medium-font-size">ಸ್ವಾತಂತ್ರ್ಯ ಹೋರಾಟಗಾರ ಶ್ರೀ ಮಾಣಿಕ್ಯಲಾಲ್ ವರ್ಮಾರವರ ಪುತ್ರಿ ಶ್ರೀಮತಿ. ಸ್ನೇಹಲತಾ ವರ್ಮಾಅವರು ತಮ್ಮ ಅಜ್ಜಿಯೊಂದಿಗೆ, ತಂದೆಯವರ ನೇತೃತ್ವದ ಬಿಜೋಲಿಯಾ ರೈತ ಚಳವಳಿಯಲ್ಲಿ ಭಾಗವಹಿಸಿದ್ದರು. ತಮ್ಮ ತಂದೆಯ ದಾರಿಯಲ್ಲಿಯೇ ಸಾಗಿದ ಸ್ನೇಹಲತಾರವರು, ಇದೇ ಕಾರಣಕ್ಕಾಗಿ ಎಷ್ಟೋ ಬಾರಿ ದೌರ್ಜನ್ಯವನ್ನು ಎದುರಿಸಬೇಕಾಯಿತು. ಆಕೆಯ ಈ ಪ್ರಯತ್ನಕ್ಕೆ, ಪತಿ ಶ್ರೀ ಹರೀಶ್ ಚಂದ್ರ ಪ್ರವಾಸಿಯವರ ಸಂಪೂರ್ಣ ಸಹಕಾರವಿತ್ತು. ಉದಯಪುರದಲ್ಲಿ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಆಕೆಯನ್ನು ಬಂಧಿಸಲಾಯಿತು. ಅವರ ತಾಯಿ &#8216;ಮಹಿಳಾ ಸಂಘಟನೆ&#8217;ಯನ್ನು ಸ್ಥಾಪಿಸಿದರು. ಮುಂದೆ, ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರನ್ನು ತೊಡಗಿಸಿಕೊಳ್ಳಲು ಸ್ನೇಹಲತಾ ವರ್ಮಾರವರು ಈ ಸಂಘಟನೆಯನ್ನು ಹೋರಾಟದ ವೇದಿಕೆಯನ್ನಾಗಿ ಮಾಡಿಕೊಂಡರು. ಮಹಿಳೆಯರ ಅಭಿವೃದ್ಧಿಗಾಗಿ ಹಲವಾರು ಕಾರ್ಯಗಳನ್ನು ನಿರ್ವಹಿಸಿದರು.  ಸ್ವಾತಂತ್ರ್ಯದ ಅಗತ್ಯದ ಬಗ್ಗೆ ಮತ್ತು ಮೇವಾರದ ಅಭಿವೃದ್ಧಿಯ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.</p>
]]></content:encoded>
					
		
		
			</item>
		<item>
		<title>ಇಚ್ಛಾಶಕ್ತಿಯುಳ್ಳ ಕ್ರಾಂತಿಕಾರಿ ಹೆಣ್ಣು ಲೀಲಾ ರೈ</title>
		<link>https://peepalmedia.com/lila_roy/</link>
		
		<dc:creator><![CDATA[Peepal Media]]></dc:creator>
		<pubDate>Mon, 15 Aug 2022 09:06:53 +0000</pubDate>
				<category><![CDATA[ವಿಶೇಷ]]></category>
		<category><![CDATA[india]]></category>
		<category><![CDATA[indipendence day]]></category>
		<category><![CDATA[kannada]]></category>
		<category><![CDATA[Lila_Roy]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=1855</guid>

					<description><![CDATA[ಶ್ರೀಮತಿ ಲೀಲಾ ರೈ ಬಲವಾದ ಇಚ್ಛಾಶಕ್ತಿಯುಳ್ಳ ಮಹಿಳೆ ಮತ್ತು ಕ್ರಾಂತಿಕಾರಿ ಹೆಣ್ಣು. ಭಾರತದ ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿ, ತಮ್ಮ ಜೀವನದ ಹನ್ನೆರಡು ವರ್ಷಗಳನ್ನು ಜೈಲಿನಲ್ಲಿ ಕಳೆದಂತಹ ದಿಟ್ಟ ಮಹಿಳೆ. ಆಕೆಯ ತ್ಯಾಗವು, ಆಕೆಯ ಸ್ನೇಹಿತರು ಮತ್ತು ಅವರ ಸುತ್ತಲಿನ ಜನರನ್ನು ರಾಷ್ಟ್ರದ ಸಲುವಾಗಿ ದುಡಿಯಲು ಪ್ರೇರೇಪಿಸಿತು. ಅವರು ಶೈಕ್ಷಣಿಕ ಉತ್ಕೃಷ್ಟತೆಯುಳ್ಳವರಾಗಿದ್ದ ಮತ್ತು ಶ್ರದ್ದೆಯುಳ್ಳ ವಿದ್ಯಾರ್ಥಿನಿಯಾಗಿದ್ದರು. 1930 ರಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ಲೀಲಾ ರೈ, ಒಬ್ಬ ವಿದ್ಯಾರ್ಥಿ ನಾಯಕಿಯೂ ಹೌದು. ಅವರ ತಂದೆ ಬಂಗಾಳ ಸರ್ಕಾರದಲ್ಲಿ [&#8230;]]]></description>
										<content:encoded><![CDATA[
<p class="has-medium-font-size">ಶ್ರೀಮತಿ ಲೀಲಾ ರೈ ಬಲವಾದ ಇಚ್ಛಾಶಕ್ತಿಯುಳ್ಳ ಮಹಿಳೆ ಮತ್ತು ಕ್ರಾಂತಿಕಾರಿ ಹೆಣ್ಣು. ಭಾರತದ ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿ, ತಮ್ಮ ಜೀವನದ ಹನ್ನೆರಡು ವರ್ಷಗಳನ್ನು ಜೈಲಿನಲ್ಲಿ ಕಳೆದಂತಹ ದಿಟ್ಟ ಮಹಿಳೆ. ಆಕೆಯ ತ್ಯಾಗವು, ಆಕೆಯ ಸ್ನೇಹಿತರು ಮತ್ತು ಅವರ ಸುತ್ತಲಿನ ಜನರನ್ನು ರಾಷ್ಟ್ರದ ಸಲುವಾಗಿ ದುಡಿಯಲು ಪ್ರೇರೇಪಿಸಿತು. ಅವರು ಶೈಕ್ಷಣಿಕ ಉತ್ಕೃಷ್ಟತೆಯುಳ್ಳವರಾಗಿದ್ದ ಮತ್ತು ಶ್ರದ್ದೆಯುಳ್ಳ ವಿದ್ಯಾರ್ಥಿನಿಯಾಗಿದ್ದರು. 1930 ರಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ಲೀಲಾ ರೈ, ಒಬ್ಬ ವಿದ್ಯಾರ್ಥಿ ನಾಯಕಿಯೂ ಹೌದು.</p>



<p class="has-medium-font-size">ಅವರ ತಂದೆ ಬಂಗಾಳ ಸರ್ಕಾರದಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಅವರೇನಾದರೂ ಬಯಸಿದ್ದರೆ, ತಮಗಿದ್ದ ಐಶಾರಾಮಿ ಸೌಕರ್ಯಗಳೊಂದಿಗೆ ಸುಖವಾದ ಜೀವನ ಕಳೆಯುತ್ತಿದ್ದರು. ಆದರೆ ಆಕೆ ಹಾಗೆ ಮಾಡಲಿಲ್ಲ. ಬದಲಾಗಿ ರಾಷ್ಟ್ರಕ್ಕಾಗಿ ಹೋರಾಡುವ &nbsp;ದೃಢಸಂಕಲ್ಪ ಹೊಂದಿದ್ದರು. &nbsp;ದೇಶದ ವಿಧವೆಯರ ಮತ್ತು ಅನಾಥರ ಕಷ್ಟಗಳ ಬಗ್ಗೆ ಕಾಳಜಿಯನ್ನು ಹೊಂದಿದ್ದ ಹೃದಯ ಅವರದಾಗಿತ್ತು. &nbsp;ರವೀಂದ್ರನಾಥ ಟ್ಯಾಗೋರ್ ಅವರಂತಹ ಮಹಾನ್ ಸಮಕಾಲೀನ ಸಮಾಜ ಸುಧಾರಕರಿಗೆ ಪತ್ರಗಳನ್ನು ಬರೆಯುವ ಮೂಲಕ ಸಂವಹನವನ್ನು ಪ್ರಾರಂಭಿಸಿದರು. ಢಾಕಾಗೆ ಭೇಟಿ ನೀಡಿದ ಸಂದರ್ಭದಲ್ಲಿ, ಟ್ಯಾಗೋರ್ ಅವರು ಲೀಲಾ ರೈ ಅವರ ನಾಯಕತ್ವ ಗುಣವನ್ನು &#8216;ಪೂರ್ವದ ಮಹಿಳೆಯರಲ್ಲಿ ಅತ್ಯುತ್ತಮ ವ್ಯಕ್ತಿ&#8217; ಎಂದು ಶ್ಲಾಘಿಸಿದ ಹೆಗ್ಗಳಿಕೆ ಲೀಲಾ ರೈ ಅವರದ್ದು.&nbsp; ಟ್ಯಾಗೋರರುಶಾಂತಿನಿಕೇತನದಲ್ಲಿ ಮಹಿಳೆಯರ ತರಬೇತಿಯನ್ನು ಮುನ್ನಡೆಸಬೇಕೆಂದು &nbsp;ಕೂಡ ಕೇಳಿಕೊಂಡಿದ್ದರು.</p>



<p class="has-medium-font-size">&nbsp;ಮಹಿಳಾ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಕೆಲಸವನ್ನು ಪ್ರಾರಂಭಿಸಿದ ಲೀಲಾ ರೈ,&nbsp; ಅದಕ್ಕಾಗಿಯೆ ʼದೀಪಾವಳಿ ಅಸೋಸಿಯೇಷನ್ʼ ಸಂಸ್ಥೆಯನ್ನು ಸ್ಥಾಪಿಸಿದರು. ಈ ಉದ್ದೇಶಕ್ಕಾಗಿ ನಿಷ್ಟಾಔಂತ ಸಹೋದ್ಯೋಗಿಗಳ ಬೆಂಬಲ ಪಡೆದು, ಢಾಕಾದಲ್ಲಿ ಮಹಿಳೆಯರಿಗಾಗಿ ಎರಡನೇ ಶಾಲೆಯನ್ನು ತೆರೆದರು. ತಾವೇ ಪ್ರಿನ್ಸಿಪಾಲ್ ಸಾರ‍ಥ್ಯ ಹೊತ್ತು, ಈ ಶಾಲೆಯನ್ನು ಮುನ್ನಡೆಸಿದರು ಮತ್ತು ಎಲ್ಲಾ ಆರ್ಥಿಕ ಜವಾಬ್ದಾರಿಯನ್ನು ತೆಗೆದುಕೊಂಡರು. ಇಲ್ಲಿ ಶಿಕ್ಷಣದ ಜೊತೆಗೆ, ವಿದ್ಯಾರ್ಥಿಗಳಿಗೆ ಹೊಲಿಗೆ ತರಬೇತಿ ಕೂಡ ನೀಡಲಾಯಿತು. ಅನಾಥ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಗಮನ ಹರಿಸಲಾಗುತ್ತಿತು. ಢಾಕಾದಲ್ಲಿ &#8216;ದೀಪಾವಳಿ ಅಸೋಸಿಯೇಷನ್&#8217; ಬೆಂಬಲದಿಂದ ಅನೇಕ ಶಾಲೆಗಳನ್ನು ಯಶಸ್ವಿಯಾಗಿ ನಡೆಸಿದರು. ಸಂಸ್ಥೆಯಿಂದ ವಾರ್ಷಿಕ ಪ್ರದರ್ಶನಗಳು ನಡೆದವು, ಅಲ್ಲಿ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು.</p>



<p class="has-medium-font-size">ಶ್ರೀಮತಿ ಲೀಲಾ ರೈ ಮಹಿಳಾ ಚಳವಳಿಯನ್ನು ಮುನ್ನಡೆಸುತ್ತಾ ತಮ್ಮ ಬದುಕನ್ನು ಮುನ್ನೆಡೆಸಿದರು. ಈ ಹಾದಿಯಲ್ಲಿ ಅವರ ನೇತೃತ್ವದಲ್ಲಿ &#8216;ಚತ್ರಿ ಸಿಂಗ್&#8217; ಎಂಬ ಇನ್ನೊಂದು ಸಂಸ್ಥೆಯನ್ನು ಸ್ಥಾಪನೆಯಾಯಿತು.</p>



<p class="has-medium-font-size">1930 ರಲ್ಲಿ ಢಾಕಾ ಜಿಲ್ಲೆಯಲ್ಲಿ ಉಪ್ಪಿನ ಸತ್ಯಾಗ್ರಹವನ್ನು ಮುನ್ನಡೆಸಿದರು. ಆಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದರು. 1931 ರಲ್ಲಿ ಜೈಲು ಸೇರುವ ಮೊದಲು, ಆಕೆ &nbsp;&#8216;ಜೈ ಶ್ರೀ&#8217; ಮಾಸಿಕದ (ಬಂಗಾಳಿಯಲ್ಲಿ) ಸಂಪಾದಕರಾಗಿದ್ದರು. ಈ ಮಾಸಿಕವನ್ನು 22 ಜೂನ್ 1942 ರಂದು ರಾಜ್ ಅವರು ನಿಷೇಧಿಸಿದರು ಮತ್ತು ಕಚೇರಿಯನ್ನು ಮುಚ್ಚಲಾಯಿತು. 1940 ರಲ್ಲಿ ನೇತಾಜಿಯವರ ಬಂಧನದ ನಂತರ, ಅವರು ಫಾರ್ವರ್ಡ್‌ ಬ್ಲಾಕ್‌ ಪತ್ರಿಕೆಯ ಸಂಪಾದಕಿಯಾದರು ಮತ್ತ‍ಸರ್ಕಾರವು ಅದನ್ನು ನಿಷೇಧಿಸುವವರೆಗೆ ಪತ್ರಿಕೆಯನ್ನು ಬದ್ಧತೆಯಿಂದ ಮುನ್ನೆಡೆಸಿದರು. ಅವರ ನಾಯಕತ್ವದ ಮಜಲುಗಳು ಇಷ್ಟಕ್ಕೇ ಸೀಮಿತವಾಗಿರಲಿಲ್ಲ. ಆಕೆ ಲೆಜಿಸ್ಲೇಟಿವ್ ಕೌನ್ಸಿಲ್ ಸಮಿತಿಯ ಸದಸ್ಯರಾಗಿದ್ದರು ಮತ್ತು 1937 ರಲ್ಲಿ ನೇತಾಜಿ ಅವರು ರಚಿಸಿದ ರಾಷ್ಟ್ರೀಯ ಯೋಜನಾ ಸಮಿತಿಯ ಸದಸ್ಯರಾಗಿದ್ದರು. ಲೀಲಾರವರು ಕೌನ್ಸಿಲ್ ಮತ್ತು ಅಸೆಂಬ್ಲಿಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳ &nbsp;ನಿರಂತರವಾಗಿ ದನಿ ಎತ್ತುತ್ತಿದ್ದರು.</p>



<p class="has-medium-font-size">ಢಾಕಾ ಅವಿಭಜಿತ ಭಾರತದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ಲೀಲಾ ರೈ ಅವರು ಆ ಕಾಲದ ಅತ್ಯಂತ ಜನಪ್ರಿಯ ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿದ್ದರು, ಬ್ರಿಟಿಷರು ಅವರನ್ನು 1931-1938 ರವರೆಗೆ ವಿಚಾರಣೆಯಿಲ್ಲದೆ ಕಂಬಿಗಳ ಹಿಂದೆ ಇಡಬೇಕಾಯಿತು. 1940ರಲ್ಲಿ ಕಲ್ಕತ್ತಾದಲ್ಲಿ ನೇತಾಜಿ ನಡೆಸಿದ ಹಾಲ್ವೆಲ್ ಸ್ಮಾರಕ ತೆಗೆಯುವ ಚಳವಳಿಯ ಸಂದರ್ಭದಲ್ಲಿ, 1941ರಲ್ಲಿ ಅವರನ್ನು ಮತ್ತೆ ಬಂಧಿಸಲಾಯಿತು.</p>



<p class="has-medium-font-size">ಆಕೆ, 1942 ರಲ್ಲಿ ಕೊನೆಯ ಬಾರಿಗೆ ಬಂಧನವಾಗಿದ್ದರು ಮತ್ತು 1946 ರಲ್ಲಿ ಬಂಗಾಳದಲ್ಲಿ ಬಿಡುಗಡೆಯಾದ ಕೈದಿಗಳ ಕೊನೆಯ ಬ್ಯಾಡ್ಜ್ʼನಲ್ಲಿ ಬಿಡುಗಡೆ ಮಾಡಲಾಯಿತು.</p>
]]></content:encoded>
					
		
		
			</item>
		<item>
		<title>ರಾಂಪ ದಂಗೆಯ ಹೀರೋ ಅಲ್ಲೂರಿ ಸೀತಾರಾಮ ರಾಜು</title>
		<link>https://peepalmedia.com/alluri-sitarama-raju/</link>
		
		<dc:creator><![CDATA[Peepal Media]]></dc:creator>
		<pubDate>Mon, 15 Aug 2022 08:58:29 +0000</pubDate>
				<category><![CDATA[ವಿಶೇಷ]]></category>
		<category><![CDATA[india]]></category>
		<category><![CDATA[indipendence day]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=1838</guid>

					<description><![CDATA[ಜುಲೈ 4, 1997 ರಂದು ಅಲ್ಲೂರಿ ವೆಂಕಟ ರಾಮರಾಜು ಮತ್ತು ಸತ್ಯನಾರಾಯಣಮ್ಮ ದಂಪತಿಗಳಿಗೆ ಜನಿಸಿದ ಅಲ್ಲೂರಿ ಸೀತಾರಾಮರು, ಬುಡಕಟ್ಟು ಪ್ರದೇಶಗಳಲ್ಲಿ, ಬ್ರಿಟಿಷರ ಶೋಷಣೆಗೆ ತುತ್ತಾಗಿದ್ದ ಮುಗ್ಧ, ದುರ್ಬಲ ಜನರ ಧ್ವನಿಯಾಗಿ,  ಶಕ್ತಿಯಾಗಿ ನಿಂತಂತಹ ಮಹಾನ್‌ ಹೋರಾಟಗಾರ. ಆ ದಿನಗಳಲ್ಲಿ,ಆದಿವಾಸಿಗಳನ್ನೆಲ್ಲಾ ಒಂದುಗೂಡಿಸಿ, ಅವರಿಗೆ ಗೆರಿಲ್ಲಾ ಯುದ್ಧವನ್ನು ಕಲಿಸಿದರು ಮತ್ತು ವಸಾಹತುಶಾಹಿ ಶಕ್ತಿಯೊಂದಿಗೆ ಹೋರಾಡಲು  ತರಬೇತಿ ನೀಡಿದರು. ಅವರು ಸಾಹಸಿ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸೀತಾರಾಮರು,  ಧೈರ್ಯಶಾಲಿ ಕ್ರಾಂತಿಕಾರಿಯಾಗಿ ಬದುಕಿದ್ದು,  ಇಂದಿಗೂ ಆಂಧ್ರಪ್ರದೇಶದ ಬುಡಕಟ್ಟು ಜನಾಂಗದವರಿಗೆ ಆರಾಧ್ಯ ದೈವವಾಗಿ ಉಳಿದಿದ್ದಾರೆ. [&#8230;]]]></description>
										<content:encoded><![CDATA[
<p class="has-medium-font-size">ಜುಲೈ 4, 1997 ರಂದು ಅಲ್ಲೂರಿ ವೆಂಕಟ ರಾಮರಾಜು ಮತ್ತು ಸತ್ಯನಾರಾಯಣಮ್ಮ ದಂಪತಿಗಳಿಗೆ ಜನಿಸಿದ ಅಲ್ಲೂರಿ ಸೀತಾರಾಮರು, ಬುಡಕಟ್ಟು ಪ್ರದೇಶಗಳಲ್ಲಿ, ಬ್ರಿಟಿಷರ ಶೋಷಣೆಗೆ ತುತ್ತಾಗಿದ್ದ ಮುಗ್ಧ, ದುರ್ಬಲ ಜನರ ಧ್ವನಿಯಾಗಿ,  ಶಕ್ತಿಯಾಗಿ ನಿಂತಂತಹ ಮಹಾನ್‌ ಹೋರಾಟಗಾರ. ಆ ದಿನಗಳಲ್ಲಿ,ಆದಿವಾಸಿಗಳನ್ನೆಲ್ಲಾ ಒಂದುಗೂಡಿಸಿ, ಅವರಿಗೆ ಗೆರಿಲ್ಲಾ ಯುದ್ಧವನ್ನು ಕಲಿಸಿದರು ಮತ್ತು ವಸಾಹತುಶಾಹಿ ಶಕ್ತಿಯೊಂದಿಗೆ ಹೋರಾಡಲು  ತರಬೇತಿ ನೀಡಿದರು. ಅವರು ಸಾಹಸಿ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸೀತಾರಾಮರು,  ಧೈರ್ಯಶಾಲಿ ಕ್ರಾಂತಿಕಾರಿಯಾಗಿ ಬದುಕಿದ್ದು,  ಇಂದಿಗೂ ಆಂಧ್ರಪ್ರದೇಶದ ಬುಡಕಟ್ಟು ಜನಾಂಗದವರಿಗೆ ಆರಾಧ್ಯ ದೈವವಾಗಿ ಉಳಿದಿದ್ದಾರೆ.</p>



<p class="has-medium-font-size">ಬ್ರಿಟಿಷ್ ಸರ್ಕಾರವು ಅರಣ್ಯ ಕಾಯಿದೆ, 1882 ಅನ್ನು ಅಂಗೀಕರಿಸಿದಾಗ (ಇದು ಅಲ್ಲಿನ ಜನರ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು, ‍ವರ್ಗಾವಣೆಯ ಕೃಷಿ ಅಭ್ಯಾಸ ಮಾಡುವುದನ್ನು ನಿಷೇಧಿಸಿತು. ಒಂದು ರೀತಿಯ ಬೆಳೆಗಳನ್ನು ಬೆಳೆಸಲು ಒತ್ತಾಯಿಸಿತು) ಆ ವೇಳೆಯಲ್ಲಿ ಅಲ್ಲೂರಿ ಸೀತಾರಾಮರು&nbsp; &#8220;ರಾಂಪ ದಂಗೆ&#8221; / ಮಾನ್ಯಂ ದಂಗೆಯನ್ನು ಪ್ರಾರಂಭಿಸಿದರು (1922-1924). ಸತತವಾಗಿ ಎರಡು ವರ್ಷಗಳ ಕಾಲ,&nbsp; ಬ್ರಿಟಿಷ್ ಪಡೆಗಳೊಂದಿಗೆ ಅನೇಕ ಬಾರಿ ಹೋರಾಡಿ ಜಯಿಸಿದರು. ಇದರಿಂದ ಅವರಿಗೆ &#8220;ಮಾನ್ಯಂ ವೀರುಡು&#8221; ಅಥವಾ &#8220;ಜಂಗಲ್ ಹೀರೋ&#8221; ಎಂಬ ಬಿರುದು ಸಿಕ್ಕಿತು. &nbsp;ಬ್ರಿಟಿಷರು ಸೀತಾರಾಮರನ್ನು ಸೆರೆಹಿಡಿಯಲು ತುಂಬಾ ಶ್ರಮಿಸಿದರು. ಕೊನೆಗೆ ಬ್ರಿಟಿಷ್ ನಿಯೋಜಿತ ಅಸ್ಸಾಂ ರೈಫಲ್ ಬೆಟಾಲಿಯನ್ ಗೆ ಸೆರೆಯಾಗಬೇಕಾಯಿತು.</p>



<p class="has-medium-font-size">1986 ರಲ್ಲಿ, ಭಾರತೀಯ ಅಂಚೆ ಇಲಾಖೆಯು ಅವರ ಸ್ವಾತಂತ್ರಯ ಹೋರಾಟದ ಪ್ರತೀಕ ಒಂದು ಅಂಚೆಚೀಟಿಯನ್ನು ಬಿಡುಗಡೆ ಮಾಡಿತು.</p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/08/Alluri-Sitarama-Raju-1.jpg" alt="" class="wp-image-1845" width="324" height="479" srcset="https://peepalmedia.com/wp-content/uploads/2022/08/Alluri-Sitarama-Raju-1.jpg 220w, https://peepalmedia.com/wp-content/uploads/2022/08/Alluri-Sitarama-Raju-1-203x300.jpg 203w" sizes="auto, (max-width: 324px) 100vw, 324px" /></figure>
]]></content:encoded>
					
		
		
			</item>
		<item>
		<title>ಗಾಂಧೀಜಿಯವರ ನೈಜ ಅನುಯಾಯಿ ಮೃದುಲಾ ಸಾರಾಭಾಯಿ</title>
		<link>https://peepalmedia.com/mridula-sarabhai/</link>
		
		<dc:creator><![CDATA[Peepal Media]]></dc:creator>
		<pubDate>Mon, 15 Aug 2022 08:49:42 +0000</pubDate>
				<category><![CDATA[ವಿಶೇಷ]]></category>
		<category><![CDATA[india]]></category>
		<category><![CDATA[indipendence day]]></category>
		<category><![CDATA[kannada]]></category>
		<category><![CDATA[mridula-sarabhai]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[special]]></category>
		<category><![CDATA[special story]]></category>
		<category><![CDATA[writing]]></category>
		<guid isPermaLink="false">https://peepalmedia.com/?p=1832</guid>

					<description><![CDATA[ಮೃದುಲಾ ಸಾರಾಭಾಯಿ ಅವರು ಅಹಮದಾಬಾದ್ನಲ್ಲಿ ಅತ್ಯಂತ&#160; ದೊಡ್ಡ ಕುಟುಂಬವೊಂದರಲ್ಲಿ ಜನಿಸಿದರು. ಈಕೆ ಪರಮಾಣು ವಿಜ್ಞಾನಿ ವಿಕ್ರಮ್ ಸಾರಾಭಾಯ್ ಅವರ ಸಹೋದರಿ. ಆ ದಿನಗಳಲ್ಲಿ, ಮಹಿಳಾ ಸತ್ಯಾಗ್ರಹಿಗಳಿಗೆ ತರಬೇತಿ ನೀಡಲು ಸಬರಮತಿ ಆಶ್ರಮದಲ್ಲಿ ವಿಶೇಷ ತರಗತಿಗಳನ್ನು ಕೈಗೊಳ್ಳಲಾಗುತ್ತಿತು. ಮೃದುಲಾ, ವಿದೇಶ್ ಕಪಾಡಾ ಬಹಿಷ್ಕರ್ ಸಮಿತಿಯ (ವಿದೇಶಿ ಬಟ್ಟೆ ಬಹಿಷ್ಕಾರ ಸಂಘ) ಕಾರ್ಯದರ್ಶಿಯಾಗಿದ್ದರು. ಈ ಸಂಘವನ್ನು ಸರಳಾದೇವೆ ಸಾರಾಭಾಯಿಯವರ ಅಧ್ಯಕ್ಷತೆಯಲ್ಲಿ ಅಹಮದಾಬಾದ್‌ ನಲ್ಲಿ ಸ್ಥಾಪಿಸಲಾಯಿತು. ದಿನನಿತ್ಯ ಮಹಿಳೆಯರು ಸ್ವಯಂಸೇವಕರ ಬ್ಯಾಡ್ಜ್‌ ಗಳೊಂದಿಗೆ ಕೇಸರಿ ಸೀರೆಗಳನ್ನು ಧರಿಸಿ ಮೆರವಣಿಗೆ ನಡೆಸುತ್ತಿದ್ದರು,&#160; ಸಭೆಗಳನ್ನು [&#8230;]]]></description>
										<content:encoded><![CDATA[
<p class="has-medium-font-size">ಮೃದುಲಾ ಸಾರಾಭಾಯಿ ಅವರು ಅಹಮದಾಬಾದ್ನಲ್ಲಿ ಅತ್ಯಂತ&nbsp; ದೊಡ್ಡ ಕುಟುಂಬವೊಂದರಲ್ಲಿ ಜನಿಸಿದರು. ಈಕೆ ಪರಮಾಣು ವಿಜ್ಞಾನಿ ವಿಕ್ರಮ್ ಸಾರಾಭಾಯ್ ಅವರ ಸಹೋದರಿ. ಆ ದಿನಗಳಲ್ಲಿ, ಮಹಿಳಾ ಸತ್ಯಾಗ್ರಹಿಗಳಿಗೆ ತರಬೇತಿ ನೀಡಲು ಸಬರಮತಿ ಆಶ್ರಮದಲ್ಲಿ ವಿಶೇಷ ತರಗತಿಗಳನ್ನು ಕೈಗೊಳ್ಳಲಾಗುತ್ತಿತು. ಮೃದುಲಾ, ವಿದೇಶ್ ಕಪಾಡಾ ಬಹಿಷ್ಕರ್ ಸಮಿತಿಯ (ವಿದೇಶಿ ಬಟ್ಟೆ ಬಹಿಷ್ಕಾರ ಸಂಘ) ಕಾರ್ಯದರ್ಶಿಯಾಗಿದ್ದರು. ಈ ಸಂಘವನ್ನು ಸರಳಾದೇವೆ ಸಾರಾಭಾಯಿಯವರ ಅಧ್ಯಕ್ಷತೆಯಲ್ಲಿ ಅಹಮದಾಬಾದ್‌ ನಲ್ಲಿ ಸ್ಥಾಪಿಸಲಾಯಿತು. ದಿನನಿತ್ಯ ಮಹಿಳೆಯರು ಸ್ವಯಂಸೇವಕರ ಬ್ಯಾಡ್ಜ್‌ ಗಳೊಂದಿಗೆ ಕೇಸರಿ ಸೀರೆಗಳನ್ನು ಧರಿಸಿ ಮೆರವಣಿಗೆ ನಡೆಸುತ್ತಿದ್ದರು,&nbsp; ಸಭೆಗಳನ್ನು ನಡೆಸುತ್ತಿದ್ದರು ಮತ್ತು ನಗರದಾದ್ಯಂತ ಕರಪತ್ರಗಳನ್ನು ಹಂಚುತ್ತಿದ್ದರು. ಮಹಿಳಾ ಸ್ವಯಂಸೇವಕರು ವಿದೇಶಿ ಬಟ್ಟೆ ಮತ್ತು ಮದ್ಯ ಮಾರಾಟ ಮಾಡುವ ಅಂಗಡಿಗಳ ಮುಂದೆ ನಿಂತು ಈ ಉತ್ಪನ್ನಗಳನ್ನು ಖರೀದಿಸದಂತೆ ಜನರಿಗೆ ಮನವರಿಕೆ ಮಾಡುತ್ತಿದ್ದರು.</p>



<p class="has-medium-font-size">ಮೃದುಲಾ ಸಾರಾಭಾಯ್ ಅವರ ಧೈರ್ಯ, ಕೆಚ್ಚೆದೆ, ಕಂಡುಬಂದಿದ್ದು ಅಹಮದಾಬಾದ್ (1941) ಮತ್ತು ಮೀರತ್ ನಲ್ಲಿ ನಡೆದ (1946) ಕೋಮು ಗಲಭೆಗಳಲ್ಲಿ ಭಾಗವಹಿಸಿದ ಸಂದರ್ಭದಲ್ಲಿ. ಈಕೆ,  ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಹೋಗಿ, ಗಲಭೆಕೋರರಿಂದ ಜನರನ್ನು ರಕ್ಷಿಸಿದರು. ಆ ಪ್ರದೇಶಗಳ ಶಾಂತಿಯನ್ನು ಪುನಃಸ್ಥಾಪಿಸಲು ಶ್ರಮಿಸುವುದರ  ಮೂಲಕ ಜನರಲ್ಲಿನ ಭಯವನ್ನು ಹೋಗಲಾಡಿಸಿದರು. ಇವರ ಧೈರ್ಯವನ್ನು ಮಹಾತ್ಮ ಗಾಂಧಿಯವರು ಸ್ವತಃ ಶ್ಲಾಘಿಸಿದ್ದಾರೆ. ಮೃದುಲಾ, ಹೊಸದಾಗಿ ರಚಿಸಲಾದ ಶಾಂತಿ ಸೇವಕ ಸಂಘದ (ಶಾಂತಿ ಕಾರ್ಯಕರ್ತರ ಒಕ್ಕೂಟ) ಸದಸ್ಯರಾಗಿದ್ದರು. ಗಾಂಧೀಜಿಯವರು ಮೃದುಲಾರನ್ನು,  ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ (ಕೆಜಿಎನ್ಎಂಟಿ) ಟ್ರಸ್ಟಿಯಾಗಿ ಕೂಡ ನೇಮಿಸಿದ್ದರು. ಅವರು ಟ್ರಸ್ಟ್ ನ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಸೇವಾಗ್ರಾಮ್ ನಲ್ಲಿ ನಡೆದ ಹತ್ತನೇ ಕೆಜಿಎನ್ಎಂಟಿ ಸಭೆಯಲ್ಲಿ,  ಮೇಡಮ್ ಆಂಗ್ ಸಾನ್ (ಸ್ವತಂತ್ರ ಬರ್ಮಾದ  ಮೊದಲ ಪ್ರಧಾನ ಮಂತ್ರಿಯ ವಿಧವಾ ಪತ್ನಿ) ಅವರನ್ನು ಆಹ್ವಾನಿಸಿದರು. ದೇಶವಿಭಜನೆಯ ನಂತರ, ಅಪಹರಣಕ್ಕೊಳಗಾದ ಮಹಿಳೆಯರನ್ನು ಕಾಪಾಡುವ ಕಾರ್ಯಾಚರಣೆಯು ಮೃದುಲಾ ಸಾರಾಬಾಯಿಯವರ ನೇತೃತ್ವದಲ್ಲಿ ಜರುಗಿತ್ತು.</p>
]]></content:encoded>
					
		
		
			</item>
	</channel>
</rss>
