<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>indira gandhi &#8211; Peepal Media</title>
	<atom:link href="https://peepalmedia.com/tag/indira-gandhi/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 02 Jul 2025 10:35:35 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>indira gandhi &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಬಿಜೆಪಿ ಹೇಳುವುದು ಸರಿಯಿದೆ, ಇನ್ನೊಂದು ಎಮರ್ಜೆನ್ಸಿ ಹೇರಿದರೆ ಭಾರತದ ಸ್ಥಿತಿ ಇನ್ನೂ ಕೆಟ್ಟದಾಗಬಹುದು</title>
		<link>https://peepalmedia.com/the-bjp-is-right-to-say-that-another-emergency-could-be-even-worse-for-india-but-what-about-now/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 02 Jul 2025 10:28:36 +0000</pubDate>
				<category><![CDATA[ಅಂಕಣ]]></category>
		<category><![CDATA[bjp]]></category>
		<category><![CDATA[Declared emergency]]></category>
		<category><![CDATA[Emergency]]></category>
		<category><![CDATA[indira gandhi]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[undeclared emergency]]></category>
		<guid isPermaLink="false">https://peepalmedia.com/?p=62002</guid>

					<description><![CDATA[ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತುರ್ತು ಪರಿಸ್ಥಿತಿಗೆ 50 ವರ್ಷವಾಗಿರುವ ಸಂದರ್ಭದಲ್ಲಿ, ಸಾಂವಿಧಾನಿಕ ಆಡಳಿತಕ್ಕೆ ತಮ್ಮನ್ನು ತಾವು ಮತ್ತೆ ಸಮರ್ಪಿಸಿಕೊಳ್ಳುವ ಬದಲು, ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ರಾಕ್ಷಸೀಕರಿಸುವ ಒಂದು ಘೋರ ನಡೆಯನ್ನು ಇಡುತ್ತಿದೆ. ತುರ್ತು ಪರಿಸ್ಥಿತಿಯನ್ನು ಔಪಚಾರಿಕವಾಗಿ ಹೇರುವ ಮೂಲಕ ಎಂದಿಗೂ ಸಂವಿಧಾನವನ್ನು ಉಲ್ಲಂಘಿಸದ ಕಾರಣ ಅವರು ತಮ್ಮನ್ನು ತಾವು ಸಂವಿಧಾನಕ್ಕೆ ಅರ್ಪಿಸಿಕೊಳ್ಳಬೇಕಾಗಿಲ್ಲ. ನರೇಂದ್ರ ಮೋದಿ ಸರ್ಕಾರವು ಈ ಸಂದರ್ಭವನ್ನು ಸಂವಿಧಾನ್ ಹತ್ಯಾ ದಿವಸ್ &#8211; ಸಂವಿಧಾನದ ಹತ್ಯೆಯ ದಿನ ಎಂದು ಬಿಂಬಿಸಲು [&#8230;]]]></description>
										<content:encoded><![CDATA[
<p>ಆಡಳಿತಾರೂಢ ಭಾರತೀಯ ಜನತಾ ಪಕ್ಷವು ತುರ್ತು ಪರಿಸ್ಥಿತಿಗೆ 50 ವರ್ಷವಾಗಿರುವ ಸಂದರ್ಭದಲ್ಲಿ, ಸಾಂವಿಧಾನಿಕ ಆಡಳಿತಕ್ಕೆ ತಮ್ಮನ್ನು ತಾವು ಮತ್ತೆ ಸಮರ್ಪಿಸಿಕೊಳ್ಳುವ ಬದಲು, ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ರಾಕ್ಷಸೀಕರಿಸುವ ಒಂದು ಘೋರ ನಡೆಯನ್ನು ಇಡುತ್ತಿದೆ.</p>



<p>ತುರ್ತು ಪರಿಸ್ಥಿತಿಯನ್ನು ಔಪಚಾರಿಕವಾಗಿ ಹೇರುವ ಮೂಲಕ ಎಂದಿಗೂ ಸಂವಿಧಾನವನ್ನು ಉಲ್ಲಂಘಿಸದ ಕಾರಣ ಅವರು ತಮ್ಮನ್ನು ತಾವು ಸಂವಿಧಾನಕ್ಕೆ ಅರ್ಪಿಸಿಕೊಳ್ಳಬೇಕಾಗಿಲ್ಲ. ನರೇಂದ್ರ ಮೋದಿ ಸರ್ಕಾರವು ಈ ಸಂದರ್ಭವನ್ನು ಸಂವಿಧಾನ್ ಹತ್ಯಾ ದಿವಸ್ &#8211; ಸಂವಿಧಾನದ ಹತ್ಯೆಯ ದಿನ ಎಂದು ಬಿಂಬಿಸಲು ತನ್ನ ಸೃಜನಶೀಲ ಪ್ರತಿಭೆಯನ್ನೆಲ್ಲಾ ಬಳಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವದ ಬಗ್ಗೆ ಕಾಂಗ್ರೆಸ್‌ನ ಕಾಳಜಿ ಒಂದು ನಾಟಕ ಮತ್ತು ಇಂದಿರಾ ಗಾಂಧಿಯವರ ಪಕ್ಷ ಅಧಿಕಾರಕ್ಕೆ ಬಂದರೆ ದೇಶ ಮತ್ತೆ ತುರ್ತು ಪರಿಸ್ಥಿತಿಯ ಭಯಾನಕ ಪರಿಸ್ಥಿತಿಗೆ ಬೀಳುತ್ತದೆ ಎಂಬ ಭಯಾನಕ ಸಂದೇಶವನ್ನು ರವಾನಿಸುವುದು ಬಿಜೆಪಿಯ ಉದ್ದೇಶವಾಗಿತ್ತು ಎಂಬುದು ಸ್ಪಷ್ಟ. </p>



<p>ಇಂದು ಮೋದಿ ಸರ್ಕಾರ ಪತನಗೊಂಡು ಮುಂದಿನ ಮೂರು-ನಾಲ್ಕು ತಿಂಗಳಲ್ಲಿ ಚುನಾವಣೆಗಳು ನಡೆಯುತ್ತವೆ ಎಂದು ಊಹಿಸೋಣ. ವಿರೋಧ ಪಕ್ಷಗಳು ಗೆದ್ದು ಕಾಂಗ್ರೆಸ್‌ನಲ್ಲಿ ಯಾರಾದರೂ ಪ್ರಧಾನಿಯಾಗುತ್ತಾರೆ ಎಂದು ಅಂದುಕೊಳ್ಳೋಣ. ಆಗ ಅವರು ಏನು ಮಾಡಬಹುದು? </p>



<p>(ಅನುವಾದಕರ ಸ್ಪಷ್ಟೀಕರಣ: ಇಲ್ಲಿಂದ ಮುಂದೆ ಸದ್ಯ ನಡೆಯುತ್ತಿರುವ ಪ್ರತಿಕೂಲ ಸಂಗತಿಗಳನ್ನು ವಿಡಂಬನಾತ್ಮಕವಾಗಿ ಬಳಸಲಾಗಿದೆ. ಮೋದಿ ಹೋಗಿ ಇನ್ನೊಂದು ಸರ್ವಾಧಿಕಾರಿ ಬಂದರೆ ಮೋದಿ ಮಾಡುತ್ತಿರುವುದನ್ನೇ ಮಾಡಬಹುದು)</p>



<p>ಅವರು ನವೆಂಬರ್‌ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುವ ಮೂಲಕ ಆಡಳಿತ ಪ್ರಾರಂಭಿಸಬಹುದು, ಬಹುಶಃ ಮಧ್ಯರಾತ್ರಿಯಿಂದ ಭಾರತೀಯ ಕರೆನ್ಸಿಯನ್ನು ಅಮಾನ್ಯ ಮಾಡುತ್ತೇವೆ ಎಂದು ಘೋಷಿಸಬಹುದು. ಅವರು ಊಹೆಯನ್ನೂ ಮಾಡದಂತೆ ರಾಷ್ಟ್ರದ ಮೇಲೆ ನೋಟು ರದ್ದತಿ ರಾಕ್ಷಸನನ್ನು ಬಿಡಬಹುದು, ಎಲ್ಲೆಡೆ ಭಯಭೀತಿಯನ್ನು ಉಂಟುಮಾಡಬಹುದು, ಸಾಮಾನ್ಯ ಜನರು ಮುಂದಿನ ಜೀವನಕ್ಕೆ ಯಾವುದೇ ತಯಾರಿ ಮಾಡುವ ಮೊದಲೇ ಈ ನಿರ್ಧಾರ ತೆಗೆದುಕೊಳ್ಳಬಹುದು. ಆಗ ಏನಾಗುತ್ತದೆ? ವ್ಯವಹಾರಗಳು ನಾಶವಾಗಬಹುದು; ಆರ್ಥಿಕತೆ ಕುಸಿಯಬಹುದು ಮತ್ತು ಜನರು ನೂರಾರು ರುಪಾಯಿ ಹಣಕ್ಕಾಗಿಯೂ ದಿಕ್ಕುಗೆಡಬಹುದು. ಸಂವೇದನೆಯೇ ಇಲ್ಲದ ಮನಸ್ಥಿತಿಯನ್ನು ಹೊಂದಿರುವ ಸರ್ವಾಧಿಕಾರಿಯಂತೆ, ಕಾಂಗ್ರೆಸ್ ಪ್ರಧಾನಿ ಲಕ್ಷಾಂತರ ಬಡ ಜನರನ್ನು &#8220;<em><a href="https://x.com/GauravPandhi/status/797676962777104384">ಘರ್ ಮೇ ಶಾದಿ ಹೈ, ಪೈಸೆ ನಹೀಂ ಹೈ</a></em> (ಮನೆಯಲ್ಲಿ ಮದುವೆ ಇದೆ, ಆದ್ರೆ ಹಣವಿಲ್ಲ)&#8221; ಎಂದು ಅಣಕಿಸಿ ನಗುತ್ತಾರೆ. ಲೀಡರ್ ಪ್ರಜಾಪ್ರಭುತ್ವವನ್ನು ನಿರ್ದಯವಾಗಿ ಕತ್ತು ಹಿಸುಕಲು ಹೋಗುತ್ತಾನೆ. ತನ್ನ ಹುಚ್ಚುತನವನ್ನು ವಿರೋಧಿಸುವ ಪ್ರತಿಯೊಬ್ಬ ನಾಗರಿಕ, ಪ್ರತಿಯೊಬ್ಬ ಅರ್ಥಶಾಸ್ತ್ರಜ್ಞ ಮತ್ತು ಪ್ರತಿಯೊಬ್ಬ ಟೀಕಾಕಾರನನ್ನೂ &#8220;ಭ್ರಷ್ಟ&#8221; ಎಂದು ಖಂಡಿಸುತ್ತಾನೆ. ತುರ್ತು ಪರಿಸ್ಥಿತಿಯನ್ನು ಜಾರಿಗೆ ತರುವ ಪಕ್ಷದ ಆ ದುಷ್ಟ ಪ್ರಧಾನಿ ನಿಜಕ್ಕೂ ಹಾಗೆ ಮಾಡುತ್ತಾನೆ.</p>



<p>ಹಾಗಲ್ಲದೇ ಇಲ್ಲದಿದ್ದರೆ, ಆ ಪ್ರಧಾನಿಯು ಇಂದಿರಾ ಗಾಂಧಿಯವರು ಮಾಡಿದಂತೆ ತುರ್ತು ಪರಿಸ್ಥಿತಿಯನ್ನು ಹೇರಿ, ಎರಡು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಅದನ್ನು ತೆಗೆದುಹಾಕುವ ಮೂರ್ಖ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ, ತುರ್ತು ಪರಿಸ್ಥಿತಿಯಂತೆ ಅರಾಜಕ ಪರಿಸ್ಥಿತಿಗಳ ಕುಂಟ ನೆಪ ಹಾಕುವ ಅಗತ್ಯವಿಲ್ಲ. ಭಾರತವನ್ನು ಅಸ್ಥಿರಗೊಳಿಸಲು ಅಂತರರಾಷ್ಟ್ರೀಯ ಪಿತೂರಿಯ ಅನುಮಾನಗಳನ್ನು ಹರಡುವ ಅಗತ್ಯವಿಲ್ಲ. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, &#8216;ಭಾರತವನ್ನು ಮತ್ತೊಮ್ಮೆ ಶ್ರೇಷ್ಠ ಮಾಡುತ್ತೇವೆ&#8217; ಎಂಬ ಬೊಗಳೆ ಪ್ರಚಾರ ಮಾಡುತ್ತಾರೆ. </p>



<p>1975 ರಂತಲ್ಲದೆ, ಮಾಧ್ಯಮಗಳ ಮೇಲೆ ಯಾವುದೇ ತಾತ್ಕಾಲಿಕ ನಿರ್ಬಂಧಗಳಿರುವುದಿಲ್ಲ. ಪ್ರಧಾನಿಯವರು ಮಾಧ್ಯಮ ಸಂಸ್ಥೆಗಳನ್ನು ವಶಪಡಿಸಿಕೊಂಡು ಪತ್ರಿಕಾ ಸ್ವಾತಂತ್ರವನ್ನು ದುರ್ಬಲಗೊಳಿಸಬಹುದು, ಇದರಿಂದಾಗಿ ದೂರದರ್ಶನ ಚಾನೆಲ್‌ಗಳು ಸರ್ಕಾರಕ್ಕೆ ಗುರಾಣಿಯಂತೆ ಮತ್ತು ವಿರೋಧಿಗಳನ್ನು ಬೇಟೆಯಾಡುವ ಬೇಟೆ ನಾಯಿಗಳಂತೆ ನೋಡಿಕೊಳ್ಳಬಹುದು. ಸ್ವತಂತ್ರ ಪತ್ರಕರ್ತರನ್ನು ನಿರುದ್ಯೋಗಿಗಳನ್ನಾಗಿ ಮಾಡಲಾಗುತ್ತದೆ, ಪ್ರಶ್ನಿಸುವ ಸುದ್ದಿ ಪೋರ್ಟಲ್‌ಗಳ ಮೇಲೆ ದಾಳಿ ಮಾಡಲಾಗುತ್ತದೆ ಮತ್ತು ಪ್ರಮುಖ ಮಾಧ್ಯಮ ಸಂಸ್ಥೆಗಳನ್ನು ಕ್ರೋನಿ ಬಂಡವಾಳಶಾಹಿಗಳು ಖರೀದಿಸುತ್ತಾರೆ. ಪ್ರಧಾನಿಯರು ನ್ಯಾಯಾಂಗವು ಚೆಂಡಾಟ ಆಡುವಂತೆ ನೋಡಿಕೊಳ್ಳುತ್ತಾರೆ; ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು ಅವರ ಸ್ನೇಹಿತರು ಮತ್ತು ಅನುಯಾಯಿಗಳಂತೆ ವರ್ತಿಸುತ್ತಾರೆ. ಹೈಕೋರ್ಟ್‌ಗಳು ಸಾಂವಿಧಾನಿಕ ತತ್ವಗಳ ವಿರುದ್ಧ ಸಂಭ್ರಮದಿಂದ ಹಾಡುತ್ತವೆ.</p>



<p>ಕಾಂಗ್ರೆಸ್ ನ ಹೊಸ ಪ್ರಧಾನಿ ಇಲ್ಲಿಗೇ ನಿಲ್ಲುವುದಿಲ್ಲ. ಭಾರತದ ಚುನಾವಣಾ ಆಯೋಗದ ಪ್ರಮುಖ ಸಂಸ್ಥೆಯನ್ನು ನಿಯಂತ್ರಿಸುವುದು ರಾಜಕೀಯದಲ್ಲಿ ಅವರಿಗೆ ಅನಿವಾರ್ಯ. ಅವರು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ತಮಗೆ ವಿಧೇಯರಾಗಿರುವ ಅಧಿಕಾರಿಗಳನ್ನು ನೇಮಿಸುತ್ತಾರೆ, <a href="https://m.thewire.in/article/government/election-commission-appointments-its-time-to-go-back-to-the-future/amp">ನೇಮಕಾತಿ ಪ್ರಕ್ರಿಯೆಯನ್ನು ತರ್ಕಬದ್ಧಗೊಳಿಸುವ ಸುಪ್ರೀಂ ಕೋರ್ಟ್‌ನ ಪ್ರಯತ್ನವನ್ನು ರದ್ದುಗೊಳಿಸುತ್ತಾರೆ ಮತ್ತು ಪಾರದರ್ಶಕತೆಯನ್ನು ಹತ್ತಿಕ್ಕಲು ನಿಯಮಗಳನ್ನು ತಿದ್ದುಪಡಿ ಮಾಡುತ್ತಾರೆ</a>. ಸಾಂಪ್ರದಾಯಿಕ ಅರ್ಥದಲ್ಲಿ ಇಲ್ಲಿ ಪ್ಲೈಬಲ್ ಎಂದರೆ ವಿಧೇಯರು ಎಂದರ್ಥವಲ್ಲ. ಪ್ಲೈಬಲ್ ಎಂದರೆ ಅಪರಾಧದಲ್ಲಿ ಪಾಲುದಾರರು; ದುಷ್ಟ ಪಿತೂರಿಗಳನ್ನು ಕುರುಡಾಗಿ ಕಾರ್ಯಗತಗೊಳಿಸುವವರು. ಕನಿಷ್ಠ ತಮ್ಮನ್ನು, ತಮ್ಮ ಹತ್ತಿರದ ಸಚಿವರು ಮತ್ತು ಕೆಲವು ಪ್ರಮುಖ ಮುಖ್ಯಮಂತ್ರಿಗಳನ್ನು ಮಾದರಿ ನೀತಿ ಸಂಹಿತೆಯ ಹಿಡಿತದಿಂದ ಹೊರಗಿಡಲು ಅವರು ಅಧಿಕಾರಿಗಳನ್ನು ಬಳಸುತ್ತಾರೆ. ಇವಿಎಂಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಾರೆ, <a href="https://thewire.in/government/rahul-gandhi-election-commission-response-falls-short">ಮತದಾರರ ಪಟ್ಟಿಗಳನ್ನು ಕುಶಲತೆಯಿಂದ ನಿರ್ವಹಿಸುತ್ತಾರೆ</a> ಮತ್ತು <a href="https://m.thewire.in/article/politics/congress-income-tax-vivek-tankha">ಚುನಾವಣೆಗೆ ಮುನ್ನ ವಿರೋಧ ಪಕ್ಷಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಾರೆ</a>. </p>



<p>ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲು ಕಾಂಗ್ರೆಸ್ ಪ್ರಧಾನಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಬಹುದು. ಕೇಂದ್ರೀಯ ತನಿಖಾ ದಳಗಳ ಕೈಯಲ್ಲಿ <a href="https://www.livelaw.in/top-stories/95-of-political-leaders-investigated-by-cbi-ed-are-opposition-leaders-non-bjp-parties-tell-supreme-court-224653">ವಿರೋಧ ಪಕ್ಷದ ನಾಯಕರ ವಿಳಾಸಗಳನ್ನು ಮಾತ್ರ ಇರುವಂತೆ ಮಾಡಬಹುದು.</a> ಆದರೆ ಕಾನೂನು ಬಾಹಿರ ಜಾರಿ ನಿರ್ದೇಶನಾಲಯವು ಮಾಟಗಾರರಂತೆ ದೈತ್ಯವಾಗಿ ಬದಲಾಗುತ್ತದೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಯಾರನ್ನೂ ಬಿಡಲಾಗುವುದಿಲ್ಲ; ವಿದ್ಯಾರ್ಥಿ ನಾಯಕರನ್ನು <a href="https://thewire.in/law/a-timeline-of-umar-khalids-bail-hearings">ಭಯೋತ್ಪಾದಕರ ಪರ ಎಂದು ದೂಷಿಸಿ</a> ಜೈಲಿಗೆ ಹಾಕಲಾಗುತ್ತದೆ, <a href="https://thewire.in/law/judiciary-in-the-modi-era-shielding-the-state-and-axing-the-people">ಘೋರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ವರದಿ ಮಾಡಲು ಹೋಗುವ ವರದಿಗಾರರನ್ನು ಕಠಿಣ ಕಾನೂನುಗಳ ಅಡಿಯಲ್ಲಿ ಬಂಧಿಸಲಾಗುತ್ತದೆ</a> , ಜಾಮೀನು ಅರ್ಜಿಗಳನ್ನು ವರ್ಷಗಳ ಕಾಲ ವಿಚಾರಣೆಗೆ ಒಳಪಡಿಸಲಾಗುವುದಿಲ್ಲ, ಭ್ರಷ್ಟ ವಿರೋಧ ಪಕ್ಷದ ನಾಯಕರನ್ನು ಬಲವಂತದ ಒತ್ತಡದಲ್ಲಿ ಬಂಧಿಸಲಾಗುತ್ತದೆ ಮತ್ತು ರಾಜ್ಯ ಸರ್ಕಾರಗಳನ್ನು ಉರುಳಿಸಲಾಗುತ್ತದೆ ಮತ್ತು ಅಧಿಕಾರ ಕಸಿದುಕೊಳ್ಳಲಾಗುತ್ತದೆ.</p>



<p>( ಅನುವಾದಕರ ಸ್ಪಷ್ಟೀಕರಣ: ಇವೆಲ್ಲವೂ ಕಾಂಗ್ರೇಸ್‌ ಒಂದು ವೇಳೆ ಸರ್ವಾಧಿಕಾರಿಯನ್ನು ಸೃಷ್ಟಿಸಿದರೆ ಮಾಡಬಹುದು ಎಂಬ ವಿಡಂಬನಾತ್ಮಕ ಊಹೆ. ಈ ಊಹೆಯೇ ಸದ್ಯ ಬಿಜೆಪಿ ಸರ್ಕಾರದ ಅಡಿಯಲ್ಲಿ ನೈಜವಾಗಿ ನಡೆಯುತ್ತಿದೆ)</p>



<p>50 ವರ್ಷಗಳ ಹಿಂದೆ ಹೇರಿದ್ದ ತುರ್ತು ಪರಿಸ್ಥಿತಿಗಿಂತ ಈ ಹೊಸ ರೂಪವು ಹೆಚ್ಚು ಭಯಾನಕ ಮತ್ತು ನೋವಿನಿಂದ ಕೂಡಿದೆ. 1975 ರ ಕಾನೂನು ತುರ್ತು ಪರಿಸ್ಥಿತಿಯು ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ಸರ್ಕಾರಿ ಉಪಕರಣವನ್ನು ಬಳಸಿತು.ಆದರೆ ಹೊಸ ಪ್ರಧಾನಿಯ ತುರ್ತು ಪರಿಸ್ಥಿತಿಯು ಸರ್ಕಾರೇತರ ವ್ಯಕ್ತಿಗಳಿಗೆ ಕಾನೂನಿನ ನಿಯಮವನ್ನು ದುರ್ಬಲಗೊಳಿಸಲು ಅಧಿಕಾರ ನೀಡಬಹುದು. ಉದ್ರಿಕ್ತ ಗುಂಪುಗಳು ಬೀದಿಗಳಲ್ಲಿ ಜನರನ್ನು ಹಿಂಸಿಸಿ ಹತ್ಯೆ ಮಾಡಬಹುದು, ಕೋಮುವಾದಿ ಗುಂಪುಗಳು  ನರಮೇಧದ ಕರೆಗಳನ್ನು ನೀಡಬಹುದು ಮತ್ತು ಆಡಳಿತ ಪಕ್ಷದ ಸದಸ್ಯರ ಕಾನೂನುಬಾಹಿರ ದೂರುಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬಹುದು. ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿಯನ್ನು ಶ್ಲಾಘಿಸಲು ನಿರಾಕರಿಸುವವರ ಮೇಲೆ ಸಂಘಟಿತ ಟ್ರೋಲ್‌ ದಾಳಿ ನಡೆಸಬಹುದು, ಅವರ ಬಗ್ಗೆ ಅಪಪ್ರಚಾರ ಮಾಡಬಹುದು. ಸುಳ್ಳು ಪ್ರಚಾರ ಮತ್ತು ಸುಳ್ಳು ಭರವಸೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಬಲ್ಯ ಸಾಧಿಸುತ್ತವೆ ಮತ್ತು ವಿರೋಧ ಪಕ್ಷದ ಧ್ವನಿಗಳು ಸಾರ್ವಜನಿಕ ಚರ್ಚೆಯಿಂದ ಮರೆಮಾಚಲ್ಪಡಬಹುದು.</p>



<p>ಸಾಮಾನ್ಯ ನಾಗರಿಕರು ಮಾತ್ರವಲ್ಲದೆ, ಸಂಸತ್ ಸದಸ್ಯರೂ ಸಹ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗುವುದಿಲ್ಲ.</p>



<p>ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸುವುದನ್ನು ಮರೆತುಬಿಡಬಹುದು, <a href="https://m.thewire.in/article/rights/delhi-pro-palestine-protest-met-with-force-detainees-allege-police-brutality-harassment">ಗಾಜಾದಲ್ಲಿನ ನರಮೇಧದಂತಹ ದೂರದೇಶದ ವಿಚಾರಗಳ ಕುರಿತು ಶಾಂತಿಯುತ ಮೆರವಣಿಗೆ</a> ಮಾಡಲು ಸಹ ಅನುಮತಿಸಲಾಗುವುದಿಲ್ಲ. ವಿಶ್ವವಿದ್ಯಾಲಯಗಳು ಅಸಮರ್ಥ ಸೈದ್ಧಾಂತಿಕ ಧರ್ಮಾಂಧರಿಂದ ತುಂಬಿರುತ್ತವೆ. ಮಾಹಿತಿ ಹಕ್ಕು ಮುಂತಾದ ಜನಪರ ಸಾಧನಗಳು ದುರ್ಬಲಗೊಳ್ಳಬಹುದು. ಇಷ್ಟು ಸಾಕಾಗುವುದಿಲ್ಲವೇ? ಈ ಪಕ್ಷದ ಭ್ರಷ್ಟ ನಾಯಕರು ರಾಷ್ಟ್ರೀಯ ಆಸ್ತಿಗಳನ್ನು ಒಬ್ಬ ಆಪ್ತ ಬಂಡವಾಳಶಾಹಿಗೆ ಹಸ್ತಾಂತರಿಸುತ್ತಾರೆ; ಕಾನೂನುಗಳನ್ನು ಉಲ್ಲಂಘಿಸಲು ಮತ್ತು ಪ್ರಪಂಚದಾದ್ಯಂತ ಒಪ್ಪಂದಗಳನ್ನು ಪಡೆದುಕೊಳ್ಳಲು ಸರ್ಕಾರಿ ಪ್ರಭಾವವನ್ನು ಬಳಸಲು ಅವನಿಗೆ ಅವಕಾಶ ಮಾಡಿಕೊಡುತ್ತಾರೆ. ಭ್ರಷ್ಟ ಒಪ್ಪಂದಗಳ ತನಿಖೆಯನ್ನು ತಡೆಯಲು <a href="https://www.thehindu.com/news/national/pm-modi-maintains-silence-in-country-says-personal-matter-abroad-rahul-gandhi-on-adani/article69218688.ece">ಅವರು ಯಾವುದೇ ಹಂತಕ್ಕೆ ಕೂಡ ಹೋಗಬಹುದು</a> ; ಮುಚ್ಚಿದ ಲಕೋಟೆಗಳಲ್ಲಿ ರಹಸ್ಯ ಪತ್ರಗಳ ಮೂಲಕ ನ್ಯಾಯಾಂಗವನ್ನು ದಾರಿ ತಪ್ಪಿಸುವವರೆಗೆ.</p>



<p>(ಸದ್ಯ ಬಿಜೆಪಿ ಮಾಡುತ್ತಿರುವ ಈ ರೀತಿಯ ಸರ್ವಾಧಿಕಾರವನ್ನು) ಕಾಂಗ್ರೆಸ್ ಮಾಡಿದರೆ ಆ ಬಗ್ಗೆ ಎಚ್ಚರದಿಂದಿರಿ! ಇದು non-state actors ನಾಗರಿಕರ ಮೇಲೆ ನಿಗಾ ಇಡಲು ಮತ್ತು ಸಾರ್ವಜನಿಕ ಜೀವನವನ್ನು ಕಲುಷಿತಗೊಳಿಸಲು ಅವಕಾಶ ನೀಡುವುದಲ್ಲದೆ, non-state actors ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಸಂವಿಧಾನದಲ್ಲಿ ವಿರೂಪಗಳನ್ನು ಸೂಚಿಸಲು ಪ್ರೋತ್ಸಾಹಿಸಬಹುದು. ಸಾಂವಿಧಾನಿಕ ಸಂಸ್ಕೃತಿಯ ಅವಶೇಷಗಳ ಮೇಲೆ ನೃತ್ಯ ಮಾಡಲು ಡೋಂಗಿ ಬಾಬಾಗಳು ಹುಟ್ಟಿಕೊಳ್ಳುತ್ತಾರೆ. ಗೂಂಡಾಗಳು ಕಾನೂನಿನ ಪಾಲನೆ ಮಾಡುವ ಅಧಿಕಾರಿಗಳಿಗೆ ಆದೇಶ ನೀಡಬಹುದು, ಸಾರ್ವಜನಿಕ ನಡವಳಿಕೆಯನ್ನು ನಿಯಂತ್ರಿಸುತ್ತಾರೆ; ನಾಗರಿಕರಿಗೆ ಏನು ಹೇಳಬೇಕು, ಏನು ತಿನ್ನಬೇಕು, ಏನು ಧರಿಸಬೇಕು, ಯಾರನ್ನು ಪ್ರೀತಿಸಬೇಕು ಮತ್ತು ಮದುವೆಯಾಗಬೇಕು ಎಂದು ಹೇಳಬಹುದು. ಐತಿಹಾಸಿಕ ಸಂಗತಿಗಳನ್ನು ಅಳಿಸಿಹಾಕಲಾಗುತ್ತದೆ ಮತ್ತು ಹೊಸ ಇತಿಹಾಸವನ್ನು ಬರೆಯಲಾಗುತ್ತದೆ. ಸಮಾಜದಲ್ಲಿ ವಿಭಜನೆಗಳನ್ನು ಸೃಷ್ಟಿಸಲು ಚಲನಚಿತ್ರಗಳನ್ನು ನಿರ್ಮಿಸಲಾಗುತ್ತದೆ, ಸೃಜನಶೀಲ ಸ್ವಾತಂತ್ರ್ಯಗಳನ್ನು ನಿಗ್ರಹಿಸಲಾಗುತ್ತದೆ ಮತ್ತು ಸ್ವಾಯತ್ತ ಸಂಸ್ಥೆಗಳಿಂದ ಬೇಷರತ್ತಾದ ನಿಷ್ಠೆಯನ್ನು ಡಿಮ್ಯಾಂಡ್‌ ಮಾಡಬಹುದು. ಸಂಸತ್ತನ್ನು ಸಹ ಸಣ್ಣ ಸರ್ಕಾರಿ ಇಲಾಖೆಗಳಂತೆ ನಿಯಂತ್ರಿಸಲಾಗುತ್ತದೆ; ಬೆಲೆಗಳು ಮತ್ತು ನಿರುದ್ಯೋಗದಂತಹ ಮೂಲಭೂತ ವಿಷಯಗಳನ್ನು ಚರ್ಚಿಸಲು, ಬಾಹ್ಯ ಆಕ್ರಮಣಗಳು ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯ ಬಗ್ಗೆ ಏನು ಮಾತನಾಡಬೇಕು ಎಂಬುದನ್ನು ಚರ್ಚಿಸಲು ವಿರೋಧ ಪಕ್ಷಗಳು ಹೆಣಗಾಡುತ್ತವೆ. ಕೆಲವು ನಾಯಕರು ಮತ್ತು ಅವರ ಕಾರ್ಪೊರೇಟ್ ಸ್ನೇಹಿತರ ಬಗ್ಗೆ ಯಾವುದೇ ಪ್ರತಿಕೂಲ ಹೇಳಿಕೆಗಳು ಬಂದರೂ ಅದನ್ನು ವಿಧೇಯ ರಾಷ್ಟ್ರಪತಿ ತೆಗೆದುಹಾಕುತ್ತಾರೆ.</p>



<p>ಇಲ್ಲ, ಈ ಪರಿಸ್ಥಿತಿ ಇಷ್ಟು ಭಯಾನಕವಾಗಿದೆ. ನಾವು ಮತ್ತೆ ಇಂದಿರಾ ಗಾಂಧಿಯಂತೆ ತುರ್ತು ಪರಿಸ್ಥಿತಿ ಹೇರಲು ಅಗತ್ಯವಿಲ್ಲ. ನಾವು ಇಂದು ಹೆಚ್ಚು ಸಂತೋಷವಾಗಿದ್ದೇವೆ. ಮತ್ತೊಂದು ತುರ್ತು ಪರಿಸ್ಥಿತಿಯ ದುಃಸ್ವಪ್ನಕ್ಕಾಗಿ ನಾವು ಈ ಅಮೃತ ಕಾಲವನ್ನು ಏಕೆ ಬಲಿಕೊಡಬೇಕು? ಮೋದಿ ಭಜನೆಯನ್ನು ಗಟ್ಟಿಯಾಗಿ ಮಾಡೋಣ. </p>



<p><strong>ಲೇಖನ: </strong><em><strong>ಸಂಜಯ್ ಕೆ. ಝಾ,</strong> ರಾಜಕೀಯ ವಿಶ್ಲೇಷಕರು.</em></p>



<p></p>
]]></content:encoded>
					
		
		
			</item>
		<item>
		<title>ಇಂದಿರಾಗಾಂಧಿ ರಾಜಕೀಯಕ್ಕೆ ಬರದಿದ್ದರೆ ಏನಾಗುತ್ತಿತ್ತು?</title>
		<link>https://peepalmedia.com/indira-gandhi-political-journey-iron-lady/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 19 Nov 2022 14:39:34 +0000</pubDate>
				<category><![CDATA[ವಿಶೇಷ]]></category>
		<category><![CDATA[Birthday Special]]></category>
		<category><![CDATA[india]]></category>
		<category><![CDATA[indira gandhi]]></category>
		<category><![CDATA[Iron Lady]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[prime minister]]></category>
		<guid isPermaLink="false">https://peepalmedia.com/?p=15968</guid>

					<description><![CDATA[&#8216;ಏನಾಗುತ್ತಿದ್ದರು, ಫಾರಿನ್ನಿನಲ್ಲಿ ಕೂತು ಜುಂ ಅಂತ ಮೆರೆಯುತ್ತಿದ್ದರು, ಐಷಾರಾಮಿ ಜೀವನ ನಡೆಸುತ್ತಿದ್ದರು, ಸಿರಿವಂತಿಕೆ ಕಾಲ ಬುಡದಲಿರುವಾಗ ಇನ್ನೇನು ಮಾಡುತ್ತಿದ್ದರು?&#8217; ವರ್ಣಾಶ್ರಮದ ಭಕ್ತರು ಹೀಗೇ ಊಹಿಸಿಯಾರು, ಉತ್ತರಿಸಿಯಾರು. ಯಾಕೆಂದರೆ, ಅವರು ಸ್ವಲ್ಪ ಹಾಗೆಯೇ. ಅತಿರೇಕಿತನವೆಂಬುದು ಅವರ ರಕ್ತದ ಗುಂಪಿನ ಹೆಸರು. ಅದು ಪ್ರವಹಿಸುವುದಿಲ್ಲ. ದಹಿಸುತ್ತದೆ… ಆದರೆ ಅವರು ದೂಷಿಸುವ &#8216;ಸಿರಿವಂತಿಕೆಯ ರಾಣಿ&#8217; ಇದಕ್ಕೆ ಏನಂತ ಉತ್ತರಿಸಿದ್ದರು ಗೊತ್ತೆ? &#8216;ಏನಿಲ್ಲ, ಸನ್ಯಾಸಿನಿಯಾಗಿರುತ್ತಿದ್ದೆ. ನನಗಿದ್ದ ಆಸಕ್ತಿ ಅಭಿರುಚಿ ಅದಷ್ಟೇ ಆಗಿತ್ತು..&#8217;! ಹೀಗಂದಿದ್ದರು ಇಂದಿರಾಗಾಂಧಿ. ದೇಶದ ಮೊದಲ ಪ್ರಧಾನಿಯ ಮಗಳು ಸನ್ಯಾಸಿನಿಯಾಗುವ ಬಗ್ಗೆ [&#8230;]]]></description>
										<content:encoded><![CDATA[
<p style="font-size:20px">&#8216;ಏನಾಗುತ್ತಿದ್ದರು, ಫಾರಿನ್ನಿನಲ್ಲಿ ಕೂತು ಜುಂ ಅಂತ ಮೆರೆಯುತ್ತಿದ್ದರು, ಐಷಾರಾಮಿ ಜೀವನ ನಡೆಸುತ್ತಿದ್ದರು, ಸಿರಿವಂತಿಕೆ ಕಾಲ ಬುಡದಲಿರುವಾಗ ಇನ್ನೇನು ಮಾಡುತ್ತಿದ್ದರು?&#8217;</p>



<p style="font-size:20px">ವರ್ಣಾಶ್ರಮದ ಭಕ್ತರು ಹೀಗೇ ಊಹಿಸಿಯಾರು, ಉತ್ತರಿಸಿಯಾರು. ಯಾಕೆಂದರೆ, ಅವರು ಸ್ವಲ್ಪ ಹಾಗೆಯೇ. ಅತಿರೇಕಿತನವೆಂಬುದು ಅವರ ರಕ್ತದ ಗುಂಪಿನ ಹೆಸರು. ಅದು ಪ್ರವಹಿಸುವುದಿಲ್ಲ. ದಹಿಸುತ್ತದೆ… ಆದರೆ ಅವರು ದೂಷಿಸುವ &#8216;ಸಿರಿವಂತಿಕೆಯ ರಾಣಿ&#8217; ಇದಕ್ಕೆ ಏನಂತ ಉತ್ತರಿಸಿದ್ದರು ಗೊತ್ತೆ?</p>



<p style="font-size:20px">&#8216;ಏನಿಲ್ಲ, ಸನ್ಯಾಸಿನಿಯಾಗಿರುತ್ತಿದ್ದೆ. ನನಗಿದ್ದ ಆಸಕ್ತಿ ಅಭಿರುಚಿ ಅದಷ್ಟೇ ಆಗಿತ್ತು..&#8217;!</p>



<p style="font-size:20px">ಹೀಗಂದಿದ್ದರು ಇಂದಿರಾಗಾಂಧಿ. ದೇಶದ ಮೊದಲ ಪ್ರಧಾನಿಯ ಮಗಳು ಸನ್ಯಾಸಿನಿಯಾಗುವ ಬಗ್ಗೆ ಆಲೋಚಿಸಿದ್ದರಂತೆ!</p>



<p style="font-size:20px">ನಂಬಲು ಅಸಾಧ್ಯವೆನಿಸಿದರೂ ಇದು ಕಟುಸತ್ಯ. ನಂಬಲೇಬೇಕು. ಯಾಕೆಂದರೆ ಇಂದಿರಮ್ಮ ಇದ್ದದ್ದೇ ಹಾಗೆ, ದಂಗುಬಡಿಸುವ ಹಾಗೆ.</p>



<p style="font-size:20px">ಚಿಕ್ಕ ವಯಸ್ಸಿನಿಂದಲೂ ಇಂದಿರಾಗಾಂಧಿಯ ಮನಸ್ಸು ಅಧ್ಯಾತ್ಮದೆಡೆಗೆ ತುಡಿಯುತ್ತಿತ್ತು, ಮನೆಯೊಳಗಿದ್ದ ಆಡಂಬರವನ್ನು ಆಕೆ ಮನಸ್ಸಿನೊಳಕ್ಕೆ ಬಿಟ್ಟುಕೊಂಡೇ ಇರಲಿಲ್ಲ. ಆಕೆಯ ಹುಡುಕಾಟವೇ ಬೇರೆ ಇತ್ತು ಎಂಬುದು ಆಕೆಯನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತಿತ್ತು. ಹಾಗೆ ಬೆಳೆದ ಹುಡುಗಿ ಇಂದಿರಾ ಗಾಂಧಿ</p>



<p style="font-size:20px">ಅಲಹಾಬಾದಿನ ಶ್ರೀಮಂತ ಪಂಡಿತರ ಮನೆಯ ಹುಡುಗಿಯ ಬಾಲ್ಯ ನಾವು ನೀವು ಎಣಿಸಿದಷ್ಟು ಸರಳವಾಗಿರಲಿಲ್ಲ. ರೋಚಕವೂ ಆಗಿರಲಿಲ್ಲ. ಬಾಲ ಇಂದಿರೆ ಜನ್ಮದಾರಭ್ಯ ತನ್ನದೇ ಆದ ಆದರ್ಶಗಳೊಂದಿಗೆ ಬೆಳೆದವಳು. ಕುಟುಂಬದ ವರ್ಚಸ್ಸು, ಪ್ರಭಾವ, ಶ್ರೀಮಂತಿಕೆ ಇದ್ಯಾವುದೂ ಇಂದಿರಾಗಾಂಧಿಯ ವ್ಯಕ್ತಿತ್ವ ರೂಪಿಸಲಿಲ್ಲ. ತನ್ನ ವ್ಯಕ್ತಿತ್ವವನ್ನು ತಾನೇ ಹುಡುಕಿಕೊಂಡವರು ಇಂದಿರಾ. ಹೊಳೆದ ಕಾಂತಿಯೆಲ್ಲ ಇಂದಿರೆಯೆಂಬ ವಜ್ರ ತನ್ನನ್ನೇ ತಾನೇ ಉಜ್ಜಿಕೊಂಡದ್ದರ ಪ್ರತಿಫಲ.</p>



<figure class="wp-block-image size-full"><img fetchpriority="high" decoding="async" width="640" height="480" src="https://peepalmedia.com/wp-content/uploads/2022/11/IMG-20221119-WA0026.jpg" alt="" class="wp-image-15970" srcset="https://peepalmedia.com/wp-content/uploads/2022/11/IMG-20221119-WA0026.jpg 640w, https://peepalmedia.com/wp-content/uploads/2022/11/IMG-20221119-WA0026-300x225.jpg 300w, https://peepalmedia.com/wp-content/uploads/2022/11/IMG-20221119-WA0026-150x113.jpg 150w" sizes="(max-width: 640px) 100vw, 640px" /></figure>



<p style="font-size:20px">ಮನೆ ದೊಡ್ಡದಾಗಿತ್ತು. ಮನೆ ತುಂಬಾ ಆಳುಕಾಳುಗಳಿದ್ದರು. ಆದರೆ ಇಂದಿರೆ ಎಂಬ ಪುಟ್ಟಕ್ಕ ಏಕಾಂಗಿಯಾಗಿಯೇ ಉಳಿದುಹೋದಳು. ಕಾರಣ ಸ್ಪಷ್ಟವಿತ್ತು. ತಂದೆ ಜವಾಹರ್ ಲಾಲ್ ನೆಹರು ಸ್ವಾತಂತ್ರ್ಯದ ಕಾವು ಹೆಚ್ಚಿಸಿಕೊಂಡು ಹೋರಾಟಕ್ಕೆ ಧುಮುಕಿದ್ದರು. ಚಳವಳಿ, ಸಭೆ, ಜೈಲುವಾಸ, ಹೋರಾಟ ಎನ್ನುತ್ತಾ ಅವರು ಮಗಳಿಗೆ ಸಿಕ್ಕುತ್ತಿದ್ದದ್ದೇ ಅಪರೂಪ. ತಾಯಿಯೊಬ್ಬಳೇ ಬಾಲ ಇಂದಿರೆಗೆ ಸಾಥಿ-ಗೆಳತಿ ಒಡನಾಡಿ. ಆದರೆ ವಿಧಿ ಎಷ್ಟು ಕ್ರೂರವೆಂದರೆ, ಕಮಲಾ ನೆಹರೂರ ಆರೋಗ್ಯವೂ ಕೈಕೊಡುತ್ತಾಹೋಯ್ತು. ಲಾಲನೆ ಮಾಡಬೇಕಿದ್ದ ತಾಯಿಗೆ ಮಗಳೇ ಪಾಲನೆ ಮಾಡಬೇಕಾದಂಥ ತುರ್ತು ಒದಗುತ್ತಿತ್ತು. ಅಮ್ಮ ಮಲಗಿದರೆ ಇತ್ತ ಇಂದಿರೆ ಮತ್ತೆ ಒಬ್ಬಂಟಿ!</p>



<p style="font-size:20px">ಹೊರಗಿನಿಂದ ನೋಡುವವರಿಗೆ ನೆಹರು ಬಂಗಲೆ ಅದ್ಭುತವಾಗಿ ಕಾಣಿಸುತ್ತಿತ್ತು. &#8216;ಏನ್ ಪುಣ್ಯ ಮಾಡಿ ಹುಟ್ಟಿದ್ರೋ ಏನೋ! ಏನು ಸುಖ, ಎಂಥಾ ವೈಭೋಗ!!&#8217; ಎಂದು ಕರುಬುವಂತಿತ್ತು ಆ ಮನೆ. ಆದರೆ ಒಳಗಿದ್ದ ಇಂದಿರೆಯ ಮನಸ್ಥಿತಿ- ಪರಿಸ್ಥಿತಿಯೇ ಬೇರೆಯೇ ಇತ್ತು. ಕಿಟಕಿಯ ಸರಳುಗಳನ್ನು ಹಿಡಿದು ಹೊರಗಡೆ ನೋಡುತ್ತಾ ನಿಲ್ಲುತ್ತಿದ್ದ ಹುಡುಗಿಗೆ ಬೆನ್ನು ಹಿಂದಿದ್ದ ವೈಭವವಲ್ಲ; ಕಣ್ಣ ಮುಂದಿದ್ದ ವಾಸ್ತವ ಕಾಣುತ್ತಿತ್ತು.</p>



<figure class="wp-block-image size-full"><img decoding="async" width="668" height="459" src="https://peepalmedia.com/wp-content/uploads/2022/11/IMG-20221119-WA0029.jpg" alt="" class="wp-image-15971" srcset="https://peepalmedia.com/wp-content/uploads/2022/11/IMG-20221119-WA0029.jpg 668w, https://peepalmedia.com/wp-content/uploads/2022/11/IMG-20221119-WA0029-300x206.jpg 300w, https://peepalmedia.com/wp-content/uploads/2022/11/IMG-20221119-WA0029-150x103.jpg 150w, https://peepalmedia.com/wp-content/uploads/2022/11/IMG-20221119-WA0029-218x150.jpg 218w" sizes="(max-width: 668px) 100vw, 668px" /></figure>



<p style="font-size:20px">ಗೇಟಿನಾಚೆಗೆ ನಿರ್ಗತಿಕರು, ಕೂಲಿಕಾರರು ಮಧ್ಯಮವರ್ಗದವರು ಕಾಣಸಿಗುತ್ತಿದ್ದರು. ಅವರ ಬದುಕು ಬವಣೆಗಳು, ರೋಗರುಜಿನಗಳು ಕಾಣಿಸುತ್ತಿದ್ದವು. ಎತ್ತರದಲ್ಲಿ ನಿಂತು ನೋಡುವವರಿಗಷ್ಟೇ ಕೆಳಗಿನ ಬಾಗು ಬಳುಕು, ಓರೆಕೋರೆಗಳು ಕಾಣಿಸುವುದು ಪ್ರಕೃತಿ ಸಹಜ. ಇಂದಿರೆಯ ವಿಷಯದಲ್ಲೂ ಅದೇ ಆಗಿತ್ತು. ಬಡಜನರ ಒದ್ದಾಟ- ಸಂಕಟ- ಅವರ ದೈನಂದಿನ ಹೋರಾಟ ಎಲ್ಲವೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇಂಥ ಹಂತದಲ್ಲೇ ಇಂದಿರೆ ವೈರಾಗ್ಯದ ಕಡೆ ಆಲೋಚಿಸಿರಲಿಕ್ಕೆ ಸಾಕು..</p>



<p style="font-size:20px">ಬಾಲೆಯಾಗಿದ್ದರೂ ಇಂದಿರಾರ ಮಿದುಳಿನ ಬೆಳವಣಿಗೆ ಉಚ್ಛ ಮಟ್ಟದಲ್ಲಿತ್ತು. ಯಾಕೆಂದರೆ ಮನೆಯೊಳಗಿನ ವಾತಾವರಣ, ದಕ್ಕಿದ ಶಿಕ್ಷಣ ಉನ್ನತ ಮಟ್ಟದ್ದಾಗಿತ್ತು. ಹಾಗಾಗಿಯೇ ಇಂದಿರೆಗೆ ಬದುಕಿನ ಸೋಗಲಾಡಿತನ ಬೇಗನೆ ಅರ್ಥವಾಯ್ತು. ಉಳ್ಳವರ ದರ್ಪ, ಇಲ್ಲದವರ ಹತಾಶೆ, ಅದರಿಂದ ಸಮಾಜದ ಮೇಲಾಗಬಹುದಾದ ಪರಿಣಾಮಗಳು ಎಲ್ಲವೂ ಬಾಲ ಇಂದಿರೆಗೆ ಮನದಟ್ಟಾಯ್ತು. ಸಿದ್ಧಾರ್ಥನೆಂಬ ರಾಜಕುವರ ಹೀಗೇ ತಾನೆ ಹೊರಟುಹೋದದ್ದು, ಬುದ್ಧನಾದದ್ದು.</p>



<p style="font-size:20px">ಬಾಲ ಇಂದಿರೆಯ ಮನಸ್ಸಲ್ಲಿಯೂ ಇಂಥವೇ ಕನವರಿಕೆಗಳು ಶುರುವಾದವು. ಆಗ ಆಕೆ ಮೊರೆ ಹೋದದ್ದೇ ಜಪಮಾಲೆ, ಮಂತ್ರಪಠಣ, ಶಿವನಾಮ ಸ್ಮರಣೆಗೆ. ಅರಳುವಿಕೆಗೆ ಹಾತೊರೆಯುತ್ತಿದ್ದ ಆಕೆಯ ಮನಸ್ಸಿಗೆ, ಸುಖಜೀವನದ ಲೋಲುಪತೆಯಿಂದ ಬಿಡಿಸಿಕೊಳ್ಳುವ ದಾರಿ ಬೇಕಿತ್ತು. ಅಂಥ ಹಂತದಲ್ಲೇ ಇಂದಿರೆ ಎಲ್ಲಾ ಮತಪಂಥಗಳ ಅಧ್ಯಾತ್ಮವನ್ನೂ ಓದಿಕೊಂಡದ್ದು, ಅದನ್ನೇ ದಾರಿದೀಪವಾಗಿಸಿಕೊಂಡದ್ದು. ಮನೆಯ ದೇವರಕೋಣೆಯೇ ಬಾಲ ಇಂದಿರೆಗೆ ಬೋಧಿವೃಕ್ಷವಾದದ್ದು ಸೋಜಿಗ.</p>



<p style="font-size:20px">ಹೊರಗಡೆ ಸ್ವಾತಂತ್ರ್ಯದ ಹೋರಾಟದ ಕೂಗು ಕೇಳಿಸುತ್ತಿತ್ತು. ದೇಶಕ್ಕೆ ಮಾರ್ಗದರ್ಶಿಯಾಗಿದ್ದ ಗಾಂಧೀಜಿ ಸುಲಭಕ್ಕೆ ಸಿಗುತ್ತಿದ್ದರಾದರೂ, ಅವರ ಬಳಿಯೂ ತನ್ನ ತುಮುಲಗಳನ್ನು ಹೇಳಿಕೊಳ್ಳುವಂತಿಲ್ಲ. ಯಾಕೆಂದರೆ ಅವರ ಕಣ್ಣಿಗೆ ಈಕೆ ಇನ್ನೂ ಚಿಕ್ಕ ಹುಡುಗಿ. ಮಹಾತ್ಮರು ಬಾಲಕಿಯ ಮೈದಡವಿ ನಡೆದುಹೋಗುತ್ತಿದ್ದರು. ಜೈಲಿಂದ ಅಪ್ಪ ಬರೆಯುತ್ತಿದ್ದ ಪತ್ರಗಳಲ್ಲೇನೋ ಘನಂದಾರಿ ವಿಷಯಗಳಿರುತ್ತಿದ್ದವು. ಆದರೆ ಓದಿಕೊಂಡ ಮೇಲೆ ಉದ್ಭವಿಸುತ್ತಿದ್ದ ಪ್ರಶ್ನೆಗಳಿಗೆ ತಕ್ಷಣಕ್ಕೆ ಉತ್ತರ ಕೊಡುವವರಿರಲಿಲ್ಲ. ಹಾಗಾಗಿ ತನ್ನೊಳಗೆ ತಾನೇ ಪ್ರಶ್ನೆಯು, ಉತ್ತರವೂ ಆಗಿ ಬೆಳೆದವರು ಇಂದಿರ. ತನ್ನೊಳಗೇ ತಾನು ಮಂಥನ ಮಾಡಿಕೊಂಡು, ವ್ಯಕ್ತಿತ್ವವನ್ನು ಪ್ರತಿಷ್ಠಾಪನೆ ಮಾಡಿಕೊಂಡ ಗಟ್ಟಿಗಿತ್ತಿಯಾಕೆ.</p>



<figure class="wp-block-image size-full"><img decoding="async" width="644" height="476" src="https://peepalmedia.com/wp-content/uploads/2022/11/images-2022-11-19T200441.209.jpeg" alt="" class="wp-image-15972" srcset="https://peepalmedia.com/wp-content/uploads/2022/11/images-2022-11-19T200441.209.jpeg 644w, https://peepalmedia.com/wp-content/uploads/2022/11/images-2022-11-19T200441.209-300x222.jpeg 300w, https://peepalmedia.com/wp-content/uploads/2022/11/images-2022-11-19T200441.209-150x111.jpeg 150w" sizes="(max-width: 644px) 100vw, 644px" /></figure>



<p style="font-size:20px">ಓರ್ವ ಸಾಮಾನ್ಯ ಬಾಲಕಿ, ಮುಂದೆ ಇಡೀ ದೇಶವೇ ದುರ್ಗಾ ಮಾತೆಯ ಅಪರಾವತಾರ ಎಂಬಂತೆ ಮೆಚ್ಚಿ ಕೊಂಡಾಡುವಷ್ಟರ ಮಟ್ಟಿಗೆ ಬೆಳೆದು ನಿಂತರಲ್ಲ.. ಅದರ ಹಿಂದಿನ ಹೋರಾಟ ಹೀಗಿತ್ತು. ಇಂಥ ಹಿನ್ನೆಲೆಯ ಹೆಣ್ಣುಮಗಳನ್ನು &#8216;ವಂಶಪಾರಂಪರ್ಯ ರಾಜಕಾರಣ ಹೆತ್ತ ಶಿಶು&#8217; ಎಂದು ಆಡಿಕೊಳ್ಳುವವರಿದ್ದಾರಲ್ಲ..<br>ಎಲುಬಿಲ್ಲದ ನಾಲಿಗೆಗೆ ಎಷ್ಟೊಂದು ಠೇಂಕಾರವಲ್ಲವೇ? ನೀಚತನ ಎಂಬುದು ತುಂಬಾ ಸಲೀಸು ಅನ್ನಿಸುವುದೇ ಇಂಥ ಹೊತ್ತಿನಲ್ಲಿ.</p>



<p style="font-size:20px">ನೆಹರೂ ಕಾಲದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಸಂವಿಧಾನ ಪರ ಮತ್ತು ವಿರೋಧಿಗಳ ಹೋರಾಟ ಶಾಸ್ತ್ರಿಯವರ ಕಾಲಕ್ಕೆ ಎಲ್ಲೆ ಮೀರಿ ಇಂದಿರಾ ಗಾಂಧಿ ಬರುವ ವೇಳೆಗೆ ದೇಶದ ವಾತಾವರಣವನ್ನೆ ಹದಗೆಡಿಸಿತ್ತು. ಸಂವಿಧಾನದ ಆಶಯಗಳನ್ನು ಒಪ್ಪಲು ತಯಾರಿಲ್ಲದ ಗುಂಪು ಪದೇ ಪದೇ ಹಗೆ ಸಾಧಿಸಿ ಅಧಿಕಾರ ಹಿಡಿಯಲು ಪ್ರಯತ್ನ ನಡೆಸುತ್ತಲೇ ಇತ್ತು. ಇಂಥಹದೇ ಕಾಲ ಘಟ್ಟದಲ್ಲಿ ಅಧಿಕಾರಕ್ಕೆ ಬಂದ ಇಂದಿರಾ ಗಾಂಧಿಯವರಿಗೆ ಏಕಾಂಗಿಯಾಗಿ ಹೋರಾಡುವ ಪರಿಸ್ಥಿತಿ ಎದುರಾಗಿತ್ತು. ದೇಶ ಕಟ್ಟುವ ಮಹಾನ್ ಕಾರ್ಯಕ್ಕೆ ಹೆಗಲಿಗೆ ಹೆಗಲು ಕೊಡಬಹುದಾಗಿದ್ದ , ಮಾರ್ಗ ತೋರಿಸಬಹುದಾಗಿದ್ದ ಸ್ವಾತಂತ್ರ್ಯದ ಹೋರಾಟದ ಮಹನೀಯರೆಲ್ಲರು ಕಾಲನ ಕರೆಗೆ ಸರಿದು ಹೋಗಿದ್ದರು, ಪುರೋಹಿತಶಾಹಿ, ಸಂವಿಧಾನ ವಿರೋಧಿ ಅಶಯಗಳು ಬಲಗೊಳ್ಳುತ್ತಿದ್ದುದರಿಂದ ಮತ್ತೆ ತನ್ನ ಅತ್ಮವಿಶ್ವಾಸವೊಂದೆ ಅವರನ್ನು ಕೈಹಿಡಿದ ಅಸ್ತಿ.</p>



<p style="font-size:20px">ಇಂದಿರಾ ಗಾಂಧಿಯವರಿಗೆ ಏಕಾಂಗಿತನ ಮತ್ತು ಹೋರಾಟ ಜನ್ಮಗಥ ಆಸ್ತಿ. ತಾಯಿಯ ದೇಖಾರೇಖಿ ಮಾಡುತ್ತಿದ್ದ ಸುರಸುಂದರ ಪಾರ್ಸಿ ಯುವಕ ಫಿರೋಜ್ ಗಾಂಧಿಗೆ ಮನಸು ಕೊಟ್ಟು ಮದುವೆಯಾದರಾದರು ಅದು ಬಹು ದಿನಗಳು ಉಳಿಯಲೇ ಇಲ್ಲಾ , ರಾಜೀವ್ , ಸಂಜಯರ ಬಾಲ್ಯದ ದಿನಗಳ ಜವಾಬ್ಧಾರಿಯೂ ದೇಶದ ಜವಾಬ್ಧಾರಿಯೊಂದಿಗೆ ಹೆಗಲೇರಿದಾಗ ಸಮರ್ಥವಾಗಿ ಮತ್ತು ಏಕಾಂಗಿಯಾಗಿ ನಿರ್ವಹಿಸದವರು ಇಂದಿರಾ ಗಾಂಧಿ.</p>



<p style="font-size:20px">ಅಸಹಕಾರ ಚಳುವಳಿಯನ್ನು ಗಾಂಧೀಜಿ ಚೌರೀಚೌರಾ ಘಟನೆಯ ನಂತರ ಕೈಬಿಟ್ಟರು ಆದ್ರೆ ಕೇವಲ ಹದಿಮೂರರ ವಯಸ್ಸಿನ ಇಂದಿರಾ ಗಾಂಧಿ ಅದೆಷ್ಟು ಅಸಹಕಾರ ಚಳುವಳಿಯಿಂದ ಪ್ರೇರಣೆಗೊಂಡಿದ್ದರೆಂದರೆ ಜೀವನ ಪೂರ್ತಿ ಎಂದಿಗೂ ಸ್ವದೇಶಿ ವಸ್ತುಗಳಿಗೆ ಪರಮ ‌ಪ್ರಾಧಾನ್ಯತೆ ನೀಡಿದವರು. ಪ್ಯಾರೀಸ್ ನಿಂದ ತನ್ನ ಚಿಕ್ಕಮ್ಮ ತಂದಿದ್ದ ಚಂದದ ಗೊಂಬೆಯನ್ನು ಬೆಂಕಿಗಿಟ್ಟು ಆರಂಬಿಸಿದ ಅಸಹಕಾರ ಚಳುವಳಿಯನ್ನು ಜೀವನದ ಉಸಿರು ನಿಲ್ಲುವವರೆಗೂ ಕಾಪಾಡಿಕೊಂಡು ಬಂದರು , ಅದಕ್ಕಾಗಿ ತನ್ನ ಬದುಕನ್ನು ಸರಳಾತೀ ಸರಳ ಗೊಳಿಸಿಕೊಂಡವರು ಇಂದಿರಾ ಗಾಂಧಿ.</p>



<p style="font-size:20px">ಇಂದಿರಾ ಗಾಂಧಿ ಪ್ರದಾನಿಯಾಗಿ ದೇಶಕ್ಕೆ ಹೊಸ ಶಕ್ತಿಯಾಗಿ ಉದಯಿಸಿ ಏಳು ಬೀಳುಗಳ ಸರಮಾಲೆಯನ್ನೆ ಕಂಡರು ಎಲ್ಲವನ್ನು ಏಕಾಂಗಿಯಾಗಿಯೇ ಎದುರಿಸಿ ಗೆದ್ದವರು. ಬಾಂಗ್ಲಾ ವಿಮೋಚನೆಯ ಯುದ್ದದಲ್ಲಿ ಇಡೀ ವಿಶ್ವವೇ ಪಾಕಿಸ್ತಾನದ ಕ್ರೌರ್ಯಕ್ಕೆ‌ ಕಣ್ಣು ಮುಚ್ಚಿ ಕೂತು ಬೆಂಬಲಿಸುತ್ತಿದ್ದರು, ಏಕಾಂಗಿಯಾಗಿಯೇ ಅದರ ವಿರುದ್ದ ಗುಡುಗಿದವರು. ಹತ್ತು ಲಕ್ಷ ಬಾಂಗ್ಲಾ ನಿರ್ವಸಿತರನ್ನು ತನ್ನ ದೇಶದೊಳಗೆ ಬಿಟ್ಟುಕೊಂಡು , ಅಮೇರಿಕಾ ದೇಶದ ಅಧ್ಯಕ್ಷ ನಿಕ್ಸನ್ ರನ್ನು ತನ್ನ ದೇಶಕ್ಕೆ ಕರೆಸಿ ಪಾಕಿಸ್ತಾನದ ಕ್ರೌರ್ಯವನ್ನು ಇಂಚಿಂಚು ತೆರೆದಿಟ್ಟವರು, ಪಾಕಿಸ್ತಾನದ ಬಲವನ್ನು ಮುರಿದು ಹೊಸದೇಶ ಕಟ್ಟಿ , ಹತ್ತು ಲಕ್ಷ ಬಾಂಗ್ಲಾ ನಿರ್ವಸಿತರನ್ನು ವಾಪಾಸು ಕಳುಹಿಸಿ ಮನುಕುಲದ ಅತ್ಯಂತ ದೊಡ್ಡ ಮಿಲಿಟರಿ‌ ಕಾರ್ಯಾಚರಣೆಯಲ್ಲಿ ಯಶಸ್ಸು ಗಳಿಸಿದವರು. ಇಡೀ ಎದುರಾಳಿ ಪಕ್ಷಗಳೆಲ್ಲಾ ಎದ್ದು ನಿಂತು ನೀವು ಮಾ ದುರ್ಗೆಯ ಅವತಾರ ತಾಯಿ ಎಂದು ತಲೆಬಾಗಿದಾಗ ತಣ್ಣಗೆ ತನ್ನ‌ ಜಪಮಣಿಯ ಜೊತೆ ಶಿವ, ಜಿನ, ಬೌದ್ಧ ದೇವರ ಆಲಯವಾಗಿದ್ದ ತನ್ನ ದೇವರ ಕೋಣೆಗೆ ಸರಿದು ಹೋದವರು.</p>



<p style="font-size:20px">ಇಂದಿಗೂ ಸಫ್ದರ್ ಜಂಗ್ ನ ಇಂದಿರಾ ಗಾಂಧಿಯವರು ರಾಜಕೀಯ ಜೀವನದ ಪ್ರಮುಖ‌ ಇಪ್ಪತ್ತು ವರ್ಷ ಕಳೆದ ಮನೆ , ತನ್ನದೇ ರಕ್ಷಣಾಪಡೆಯ ಸಿಬ್ಬಂಧಿಯಿಂದ ಹತ್ಯೆ ಯಾದ ಸ್ಥಳ ಎಲ್ಲವು ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿದೆ. ಉಡುತ್ತಿದ್ದ ಸರಳ ಸಾಧಾರಣ ಕಾಟನ್ ಸೀರೆಗಳು, ದೇವರ ಕೊಣೆ, ಕೋಣೆಯ ಟೇಬಲ್‌ ಮೇಲಿರುವ ಶಿವ, ಜಿನ ತೀರ್ಥಂಕರ, ವೇದ ಮಂತ್ರ ಪಠಣದ ಪುಸ್ತಕ, ಮಹನೀಯರು ಬಂದರೆ ಕೂರುತ್ತಿದ್ದ ವಿಶಾಲವಾದ ಹಾಲ್, ಪುಸ್ತಕಗಳಿಂದಲೇ ತುಂಬಿ ಹೋಗಿರುವ ಕೋಣೆಯಲ್ಲಿ‌ಎದ್ದು‌ ಕಾಣುವ ಕಾರ್ಲ್ ಮಾರ್ಕ್ಸ್ ನ ಪುಸ್ತಕ, ಐನಸ್ಟೀನ್ ಜೀವನ ಚರೀತ್ರೆ, ಸಾಧಾರಣ ಬೆಡ್ ರೂಮ್‌, ತೆಳುವಾದ ಜಮಖಾನ್ ಹಾಸಿರುವ ಕಾಟ್, ಎರಡು ಸಣ್ಣ ಸೋಫಾ , ಮಕ್ಕಳು ಮೊಮ್ಮಕ್ಕಳೊಂದಿಗೆ ಊಟ ಮಾಡುತ್ತಿದ್ದ ಡೈನಿಂಗ್ ಹಾಲ್ ಎಲ್ಲವು ಸರಳವೇ. ದೇಶವನ್ನು ವಿಶ್ವದ ಭೂಪಟದಲ್ಲಿ ಶಕ್ತಿಯುತ ದೇಶವಾಗಿಸಿದ ಮಹಿಳಾ ಪ್ರದಾನಿಯ ಮನೆ ಎಂದರೇ ಯಾರು ನಂಬಲಾರರು ಎನಿಸುವಷ್ಟು ಸರಳಾತೀ ಸರಳ.</p>



<p style="font-size:20px">ಮನೆಯಿಂದ ನೂರಡಿ ಕಾಲು ದಾರಿಯಾಚೆ ಇಂದಿರಾ ಗಾಂಧಿಯವರು ಹತ್ಯೆಯಾದ ಸ್ಥಳವೀಗ ಜನರ ಕಣ್ಣಂಚಲ್ಲಿ ನೀರು ತುಂಬಿಸಿಕೊಂಡು ನಿಲ್ಲುವ ತ್ಯಾಗದ ಪುಣ್ಯನೆಲ. ಅದನ್ನೀಗ ಕ್ರಿಸ್ಟಲ್ ಗ್ಲಾಸ್ ಗಳಿಂದ ಮುಚ್ಚಿ ಗೌರವಸೂಚಿಸಲಾಗಿದೆ. ದೇಶದ ಬಡವರಿಗೆ ,ಮಧ್ಯಮವರ್ಗದವರಿಗೆ, ರೈತರಿಗೆ, ದೇಶದ ಅರಣ್ಯ ಸಂಪತ್ತಿಗೆ ಗೋವುಗಳಿಗೆ, ಸೈನಿಕರಿಗೆ ಗಟ್ಟಿ ದ್ವನಿಯ ಹಕ್ಕುಗಳನ್ನು ಕೊಟ್ಟ ಮಹಾನ್ ತಾಯಿ ದೇಶಕ್ಕಾಗಿಯೇ ಉಳ್ಳವರ ಷಡ್ಯಂತ್ರದ ಭಾಗವಾಗಿ ಅಂತ್ಯವಾಗಿದ್ದು ಘೋರ ದುರಂತ.</p>



<p style="font-size:20px">ಜೀವಿತಾವಧಿಯಲ್ಲಿ ಏಕಾಂಗಿ ದುರ್ಗೆಯಾಗಿ ಬದುಕಿದ ಜೀವವೊಂದು ಈಗ ವಿರಮಿಸಿರುವ ಸಮಾಧಿ ಅಕ್ಕಪಕ್ಕದಲ್ಲಿ ಮಹಾತ್ಮ ಗಾಂಧೀಜಿ, ಪ್ರೀತಿಯ ಅಪ್ಪ ಜವಾಹರ್ ಲಾಲ್ ನೆಹರು, ಮಗ ರಾಜೀವ್ ಗಾಂಧಿ, ಅಧಿಕಾರವಧಿಯುದ್ದಕ್ಕೂ ಬೆಂಬಲ ನೀಡಿದ ಬೆಂಬಲಿಗ ಚರಣ್ ಸಿಂಗ್ ಅಕ್ಕಪಕ್ಕದಲ್ಲೆ ಸಮಾಧಿಯಾಗಿ ವಿರಮಿಸಿರುವುದು ಆತ್ಮಕ್ಕೆ ಶಾಂತಿ ನೀಡಿರಬಹುದು.</p>



<p style="font-size:20px">ದೇಶದ ಬಡವನಿಗೆ ಅನ್ನದ ಹಕ್ಕು, ರೈತನಿಗ ಭೂಮಿಯ ಹಕ್ಕು, ಸೈನಿಕನಿಗೆ ಆರ್ಥಿಕ ಹಕ್ಕು, ಮಧ್ಯಮವರ್ಗಕ್ಕೆ ಕೆಲಸದ ಹಕ್ಕು, ಗೋವಿಗೆ ಬದುಕುವ ಹಕ್ಕು , ಅರಣ್ಯಕ್ಕೆ ಸಂರಕ್ಷಣೆಯ ಹಕ್ಕು ನೀಡಿದ ಮೇಲು ದೇಶಕ್ಕಾಗೇ ಷಡ್ಯಂತ್ರಗಳಿಗೆ ಬಲಿಯಾದ ತಾಯಿ‌ ಇಂದಿರಾ ಗಾಂಧಿ ಅಮರ.</p>



<p style="font-size:20px">~ ಆದರ್ಶ್ ಹುಂಚದಕಟ್ಟೆ, ಚಿಂತಕರು</p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/11/IMG_20221119_200855.jpg" alt="" class="wp-image-15973" width="213" height="199"/></figure>
]]></content:encoded>
					
		
		
			</item>
		<item>
		<title>ಇಂದಿರಾ ಪ್ರಿಯದರ್ಶಿನಿ ಎಂಬ ಧಾಡಸಿ ಹೆಣ್ಣು ಮಗಳು</title>
		<link>https://peepalmedia.com/indira-priyadarshini-usha-kattemane-article/</link>
		
		<dc:creator><![CDATA[Peepal Media]]></dc:creator>
		<pubDate>Sat, 19 Nov 2022 13:35:46 +0000</pubDate>
				<category><![CDATA[ವಿಶೇಷ]]></category>
		<category><![CDATA[indira gandhi]]></category>
		<category><![CDATA[indira priyadarshini]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[usha kattemane]]></category>
		<guid isPermaLink="false">https://peepalmedia.com/?p=15949</guid>

					<description><![CDATA[ಪ್ರಧಾನಿಯಾಗಿ ಹೊಸತನದ ಭಾರತಕ್ಕೆ ಅಡಿಗಲ್ಲು ಹಾಕಿ ದೇಶವನ್ನು ನಿರ್ಭಿಡೆಯಿಂದ ಮುನ್ನಡೆಸಿದ ವರ್ಚಸ್ವೀ ರಾಜಕಾರಣಿ ಇಂದಿರಾ ಗಾಂಧಿಯವರಿಗೆ ಇಂದು ೧೦೫ ನೆಯ ಜನ್ಮ ದಿನ. ಅವರ ನೆನಪಲ್ಲಿ, ಪೀಪಲ್‌ ಮೀಡಿಯಾ ಕನ್ನಡ ಜಾಲತಾಣಕ್ಕೆ ಅವರ ವ್ಯಕ್ತಿತ್ತ್ವವನ್ನು ಹೃದಯದಿಂದ ಕಟ್ಟಿಕೊಟ್ಟಿದ್ದಾರೆ ಹಿರಿಯ ಲೇಖಕಿ ಉಷಾ ಕಟ್ಟೆಮನೆ  ನಮ್ಮ ಹಿಂದೂ ಧರ್ಮದಲ್ಲಿ ಸ್ತ್ರೀಯರಿಗಿರುವ ಸ್ಥಾನಮಾನ ಏನು? ಎಂದು ಯಾರನ್ನಾದರೂ ಕೇಳಿ ನೋಡಿ. ತಕ್ಷಣ ‘ಆಕೆ ದೇವತೆ’ ಎಂಬ ಉತ್ತರ ರಪ್ಪನೆ ನಿಮ್ಮ ಮುಖಕ್ಕೆ ಅಪ್ಪಳಿಸುತ್ತದೆ. ಆದರೆ ವಾಸ್ತವ ಬೇರೆಯೇ ಇದೆ. ಹಿಂದೂಧರ್ಮವನ್ನು [&#8230;]]]></description>
										<content:encoded><![CDATA[
<h5 class="has-text-align-center has-very-light-gray-to-cyan-bluish-gray-gradient-background has-background wp-block-heading"><strong>ಪ್ರಧಾನಿಯಾಗಿ ಹೊಸತನದ ಭಾರತಕ್ಕೆ ಅಡಿಗಲ್ಲು ಹಾಕಿ ದೇಶವನ್ನು ನಿರ್ಭಿಡೆಯಿಂದ ಮುನ್ನಡೆಸಿದ ವರ್ಚಸ್ವೀ ರಾಜಕಾರಣಿ ಇಂದಿರಾ ಗಾಂಧಿಯವರಿಗೆ ಇಂದು ೧೦೫ ನೆಯ ಜನ್ಮ ದಿನ. ಅವರ ನೆನಪಲ್ಲಿ, ಪೀಪಲ್‌ ಮೀಡಿಯಾ ಕನ್ನಡ ಜಾಲತಾಣಕ್ಕೆ ಅವರ ವ್ಯಕ್ತಿತ್ತ್ವವನ್ನು ಹೃದಯದಿಂದ ಕಟ್ಟಿಕೊಟ್ಟಿದ್ದಾರೆ ಹಿರಿಯ ಲೇಖಕಿ ಉಷಾ ಕಟ್ಟೆಮನೆ</strong></h5>



<p> <br>ನಮ್ಮ ಹಿಂದೂ ಧರ್ಮದಲ್ಲಿ ಸ್ತ್ರೀಯರಿಗಿರುವ ಸ್ಥಾನಮಾನ ಏನು? ಎಂದು ಯಾರನ್ನಾದರೂ ಕೇಳಿ ನೋಡಿ. ತಕ್ಷಣ ‘ಆಕೆ ದೇವತೆ’ ಎಂಬ ಉತ್ತರ ರಪ್ಪನೆ ನಿಮ್ಮ ಮುಖಕ್ಕೆ ಅಪ್ಪಳಿಸುತ್ತದೆ. ಆದರೆ ವಾಸ್ತವ ಬೇರೆಯೇ ಇದೆ.</p>



<p><br>ಹಿಂದೂಧರ್ಮವನ್ನು ಒಳಗೊಂಡಂತೆ ಭಾರತೀಯ ಸಮಾಜದಲ್ಲಿ ಸ್ತ್ರೀಯರ ಬಗೆಗಿನ ಧೋರಣೆ ಎರಡು ನೆಲೆಗಳಲ್ಲಿ ವ್ಯಕ್ತವಾಗುತ್ತದೆ. ಒಂದು ದೇವತೆ, ಇನ್ನೊಂದು ದಾಸಿ. ದೇವತೆ ಎಂಬುದು ಆದರ್ಶ. ಅದು ವಾಸ್ತವದಲ್ಲಿ ನಿಜವಲ್ಲ. ದಾಸಿ ಎಂಬುದು ವಾಸ್ತವ. ಆಕೆ ಗಂಡನ ದಾಸಿ. ಅಥವಾ ಕುಟುಂಬದ ಸೊತ್ತು. ಆಕೆಗೆ ಪ್ರತ್ಯೇಕ ಅಸ್ತಿತ್ವವಿಲ್ಲ. ಅವಳು ಯಾರದೋ ಖಾಸಗಿ ಆಸ್ತಿ. ಧರ್ಮದ ಮುದ್ರೆಯೊತ್ತಿರುವ ಈ ರೂಢಿಗತ ಪರಂಪರಾಗತ ನಂಬಿಕೆಯನ್ನು ಮೀರಲೆತ್ನಿಸುವ ಯಾರೇ ಆಗಿದ್ದರೂ ಅವಳು ಗಂಡುಬೀರಿ. <br>ಅಂತಹ ಒಬ್ಬ ಗಂಡುಬೀರಿಯೇ ಇಂದಿರಾಗಾಂಧಿ. ಆಕೆ ದುರ್ಗೆ.</p>



<p><br>ಇತಿಹಾಸದತ್ತ ಹೊರಳಿ ನಾನಿದನ್ನು ಬರೆಯುತ್ತಿಲ್ಲ. ನನ್ನ ವರ್ತಮಾನದಲ್ಲಿ ನಿಂತು ಅರುವತ್ತರ ದಶಕದ ಸಾಮಾಜಿಕ ಸ್ಥಿತಿಗತಿ ಹೇಗಿದ್ದಿರಬಹುದು ಎಂದು ಯೋಚಿಸಿ ಬರೆಯುತ್ತಿದ್ದೇನೆ. ಖಂಡಿತವಾಗಿಯೂ ಅದು ಇಂದಿನಷ್ಟು ಮಹಿಳಾ ವಿರೋಧಿಯಾಗಿರಲಿಲ್ಲ. ಆ ಕಾಲದ ಸಮಾಜ ಆಧುನಿಕ, ವಿದ್ಯಾವಂತ ಮಹಿಳೆಯನ್ನು ಅಚ್ಚರಿ, ಮೆಚ್ಚುಗೆ ಮತ್ತು ಒಂದು ರೀತಿಯ ಮತ್ಸರದ ಕಣ್ಣಿನಿಂದ ನೋಡುತ್ತಿತ್ತು. ಹಾಗಾಗಿಯೇ ಅಂದು ಇಂದಿರಾ ಗಾಂಧಿಯವರ ಚಾರಿತ್ರ್ಯ ವಧೆ ಮಾಡುವ ಕೃತ್ಯಕ್ಕೆ ಅಂದಿನ ಸಮಾಜ ಅಷ್ಟಾಗಿ ಮುಂದಾಗಲಿಲ್ಲ. ಪರಿಣಾಮವಾಗಿ ಬಲಿಷ್ಠ ಭಾರತವನ್ನು ಕಟ್ಟಲೆತ್ನಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಮರ್ಥ ನಾಯಕಿಯೊಬ್ಬಳು ದೊರೆತಳು.&nbsp;<br><br>ಒಬ್ಬ ವ್ಯಕ್ತಿ ‌ಏನು ಅನ್ನುವುದು ಹೊರ ಜಗತ್ತಿಗೆ ಗೊತ್ತಾಗುವುದು ನಿರ್ಣಾಯಕ ಸಂದರ್ಭಗಳಲ್ಲಿ ಅವರು ‌ತೆಗೆದುಕೊಳ್ಳುವ ತೀರ್ಮಾನಗಳಿಂದ. ಹಾಗೆ ತೀರ್ಮಾನ ತೆಗೆದುಕೊಳ್ಳಲು ಕಾರಣವಾಗುವುದು ಅವರು ಬೆಳೆದು ಬಂದ ವಾತಾವರಣದಿಂದ. ಇಂದಿರಾ ಗಾಂಧಿಯವರ ಸದೃಢ ವ್ಯಕ್ತಿತ್ವ ರೂಪುಗೊಂಡಿದ್ದೇ ಅವರ ಬಾಲ್ಯದಿಂದ.</p>



<p><br>ಆಗರ್ಭ ಶ್ರೀಮಂತ ಮನೆತನದಲ್ಲಿ ಜವಾಹರ್ ಲಾಲ್ ಮತ್ತು ಕಮಲಾ ದಂಪತಿಗಳ ಏಕೈಕ ಕುಡಿಯಾಗಿ ಹುಟ್ಟಿದ ಇಂದಿರಾ ಸಮಾಜದ ಉನ್ನತ ಸ್ತರದ ಜನರ ಒಡನಾಟವನ್ನು ಸಹಜವಾಗಿಯೇ ಪಡೆದುಕೊಂಡಿದ್ದರು.‌ ಸ್ವಾತಂತ್ರ್ಯ ಹೋರಾಟದ ರೂಪುರೇಷೆಗಳು ಅವರ ಮನೆಯಲ್ಲೇ ಸಿದ್ಧಗೊಳ್ಳುತ್ತಿದ್ದವು. ತಾಯ್ನಾಡು ದಾಸ್ಯದಲ್ಲಿದ್ದಾಗ ಶ್ರೀಮಂತಿಕೆಯ ಲೋಲುಪ್ತತೆಯಲ್ಲಿ ಮೈಮರೆಯದೆ ತನ್ನ ಸಮಸ್ತ ಆಸ್ತಿಯನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಧಾರೆಯೆರೆದುದನ್ನು ಆಕೆ ಕಣ್ಣಾರೆ ಕಂಡಿದ್ದಳು. ತಂದೆ ತಾಯಿ ಇಬ್ಬರೂ ‌ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುತ್ತಾ ಜೈಲುಗಂಬಿಗಳ ಹಿಂದೆ ಬಂಧಿಯಾಗಿದ್ದಾಗ ಈ ಬಾಲೆ ಒಂಟಿಯಾಗಿ ತನ್ನೊಳಗೊಂದು ಲೋಕವನ್ನು ಸೃಷ್ಟಿಸಿಕೊಂಡು ಒಳಗಿಂದೊಳಗೆ ಸಮಾಜಮುಖಿ ವ್ಯಕ್ತಿತ್ವವೊಂದನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಬರುತ್ತಿದ್ದಳು.</p>



<p><br>ಹೌದು. ಇಂದಿರಾ ಒಬ್ಬ ಪರಿಪೂರ್ಣ ಮಹಿಳೆ. ತಂದೆ ತಾಯಿಯರ ಮುದ್ದಿನ ಮಗಳು.‌ ರಾಜಕಾರಣಿಯಾಗಿ ದೇಶಕಂಡ ಅತ್ಯುತ್ತಮ ಪ್ರಧಾನಿ, ಮುತ್ಸದ್ದಿ.</p>



<div class="wp-block-columns is-layout-flex wp-container-core-columns-is-layout-9d6595d7 wp-block-columns-is-layout-flex">
<div class="wp-block-column is-layout-flow wp-block-column-is-layout-flow">
<figure class="wp-block-image size-full"><img loading="lazy" decoding="async" width="600" height="450" src="https://peepalmedia.com/wp-content/uploads/2022/11/image-9.png" alt="" class="wp-image-15953" srcset="https://peepalmedia.com/wp-content/uploads/2022/11/image-9.png 600w, https://peepalmedia.com/wp-content/uploads/2022/11/image-9-300x225.png 300w, https://peepalmedia.com/wp-content/uploads/2022/11/image-9-150x113.png 150w" sizes="auto, (max-width: 600px) 100vw, 600px" /></figure>
</div>
</div>



<p>ಆಕೆಯ‌ ದಾಂಪತ್ಯ ಬದುಕಿನ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಆದರೆ ಕಾಶ್ಮೀರಿ ಪಂಡಿತೆಯಾದ ಈಕೆ ಫಿರೋಜ್ ಗಾಂಧಿ ಎಂಬ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಇನ್ನೊಬ್ಬರಿಗಾಗಿ ಮಿಡಿಯುವ, ಸಂಭಾಳಿಸುವ, ಕರಗುವ, ಬಾಗುವ ಹೃದಯವುಳ್ಳವರು ಮಾತ್ರ ಪ್ರೀತಿ ಮಾಡಬಲ್ಲರು. ಇನ್ನೊಬ್ಬರಿಗಾಗಿ, ಇನ್ನೊಂದಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳಬಲ್ಲರು. ಹಾಗೆಯೇ ಸಮಾನ ದೂರದಲ್ಲಿ ನಿಂತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರು.</p>



<p><br>ರಾಜಕೀಯ ಖೈದಿಯಾಗಿ ಜೈಲಿನೊಳಗೆ ಇದ್ದಾಗ ತನ್ನಪ್ಪ ತನಗೆ ಬರೆಯುತ್ತಿದ್ದ ಪತ್ರಗಳಿಂದಲೇ ಭಾರತದ ಭೌಗೋಳಿಕ ಪರಿಚಯವನ್ನು ಪಡೆದಿದ್ದ ಇಂದಿರಾ 1967ರ ಲೋಕಸಭಾ ಚುನಾವಣೆಯ ಪ್ರಚಾರ ಸಮಯದಲ್ಲಿ ಅದನ್ನು ಪ್ರತ್ಯಕ್ಷ ಕಾಣುವ ಅವಕಾಶವನ್ನು ನಿರ್ಮಿಸಿಕೊಂಡರು. ಇಡೀ ಭಾರತವನ್ನು ತೆರೆದ ಜೀಪಿನಲ್ಲಿ ಸುತ್ತಿದರು. ನೂರಾರು ಕಡೆ ಜನರನ್ನುದ್ದೇಶಿಸಿ ಭಾಷಣ ಮಾಡಿದರು. ಪ್ರಧಾನ ಮಂತ್ರಿಗೆ ಇರುತ್ತಿದ್ದ ರಕ್ಷಣಾ ಕವಚವನ್ನು ಭೇದಿಸಿ ಜನಸಾಮಾನ್ಯರ ಜೊತೆ ಬೆರೆತರು. ಅವರ ಕೈ ಹಿಡಿದು ನೃತ್ಯ ಮಾಡಿದರು. ಸ್ಥಳೀಯ ಜನರ ಉಡುಗೆ ತೊಡುಗೆ ತೊಟ್ಟು ಜನ ಸಾಮಾನ್ಯರ ಜೊತೆ ನಲಿದಾಡಿದರು. ಗ್ರಾಮೀಣ ಭಾರತದ ಪರಿಚಯ ಮಾಡಿಕೊಂಡರು. ಜನರ ದನಿಗೆ ಕಿವಿಯಾದರು. ಅವರ ಅಂತರಂಗವನ್ನು ಗೆದ್ದರು. ಕಾಂಗ್ರೆಸ್ ಪಕ್ಷದ ಗೆಲುವಿನ ರೂವಾರಿಯಾಗಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು</p>



<p><br>ಹುಟ್ಟಿನಿಂದಲೇ ಬಂದ ಶ್ರೀಮಂತಿಕೆಯ ಗತ್ತು ಗೈರತ್ತುಗಳಿದ್ದವು. ಆಕ್ಸ್ಫರ್ಡ್ ನಲ್ಲಿ ಓದಿದ ಹಿನ್ನಲೆಯಿತ್ತು. ಹೆಸರಿನ ಮುಂದೆ ರವೀಂದ್ರನಾಥ ಠಾಗೋರ್ ಸೇರಿಸಿದ ಪ್ರಿಯದರ್ಶಿನಿ ಎಂಬ ವಿಶೇಷಣವಿತ್ತು. ಎಲ್ಲಕ್ಕಿಂತ ಮಿಗಿಲಾಗಿ ಜನಸಾಮಾನ್ಯರ ಎದೆಯಲ್ಲಿ ಇಂದಿರಮ್ಮ ಎಂಬ ದೇವತೆ ಪ್ರತಿಷ್ಠಾಪನೆಗೊಂಡಿದ್ದಳು.</p>



<p><br>ಎಲ್ಲವೂ ಇತ್ತು. ಆ ಕಾರಣದಿಂದಲೇ ಒಬ್ಬಂಟಿಯಾಗಿ ಮುನ್ನುಗ್ಗುವ ಛಾತಿಯಿತ್ತು. ಎಲ್ಲರನ್ನೂ ಎದುರು ಹಾಕಿಕೊಳ್ಳುವ ಧಾಡಸೀತನವಿತ್ತು. ಆಕೆಯ ಮನಸ್ಸಿನಲ್ಲಿ ಇದ್ದದ್ದು ʼಗರೀಬಿ ಹಟಾವೋʼ ಎಂಬ ಮಂತ್ರ ಮಾತ್ರ. ಹಾಗಾಗಿಯೇ ವಿತ್ತ ಮಂತ್ರಿಯೊಡನೆ ಸಮಾಲೋಚಿಸದೇ ಏಕಕಾಲದಲ್ಲಿ 14 ಬ್ಯಾಂಕ್ ಗಳನ್ನು ರಾಷ್ಟ್ರೀಕರಣಗೊಳಿಸಿದರು. ಬೊಕ್ಕಸಕ್ಕೆ ಹೊರೆಯಾಗಿದ್ದ ರಾಜಧನವನ್ನು ರದ್ದು ಗೊಳಿಸಿದರು.&nbsp;ಭಾರತಕ್ಕೆ ಮಗ್ಗುಲು ಮುಳ್ಳಾಗಿದ್ದ ಪಾಕಿಸ್ತಾನದ ಸೊಕ್ಕು ಮುರಿಯಲು ಬಾಂಗ್ಲಾ ಹೋರಾಟಗಾರರಿಗೆ ಸೇನಾ ಸಹಾಯ ನೀಡಿ ಪಾಕಿಸ್ತಾನವನ್ನು ಇಬ್ಭಾಗ ಮಾಡಿದರು. ಬಾಂಗ್ಲಾ ದೇಶದ ಹುಟ್ಟಿಗೆ ಕಾರಣ ಕರ್ತರಾದರು.<br><br>ಮೇಲಿನ ಎಲ್ಲಾ ನಿರ್ಧಾರಗಳಲ್ಲಿ ಸರ್ವಾಧಿಕಾರಿಯ ಛಾಯೆಯಿದೆ. ಆದರೆ ಅದು ಬಡವರ ಪರವಾಗಿದ್ದವು. ನಮ್ಮ ಈಗಿನ ಪ್ರಧಾನಿಯವರಲ್ಲಿಯೂ ಸರ್ವಾಧಿಕಾರಿಯ ಗುಣಲಕ್ಷಣಗಳಿವೆ. ಆದರೆ ಇವರು ತೆಗೆದುಕೊಳ್ಳುವ ಏಕಪಕ್ಷೀಯ ನಿರ್ಧಾರಗಳು ಬಂಡವಾಳಶಾಹಿಗಳ ಪರವಾಗಿವೆ. ಮತ್ತು ಕೆಲವೇ ಜನರ ಕೈಯಲ್ಲಿ ಸಂಪತ್ತು ಕ್ರೋಢೀಕರಣಗೊಳ್ಳುತ್ತಿದೆ.<br><br>ತುರ್ತು ಪರಿಸ್ಥಿತಿ ಒಂದನ್ನು ಹೊರತುಪಡಿಸಿ ಇಂದಿರಾ ತೆಗೆದುಕೊಂಡ ಬಹುತೇಕ ಎಲ್ಲಾ ನಿರ್ಧಾರ ಮತ್ತು ಬದಲಾವಣೆಗಳು ದೂರದರ್ಶಿತ್ವ ಹೊಂದಿದ್ದವು.</p>



<p><br>ಇದೆಲ್ಲದರ ನಡುವೆಯೂ ಆಕೆ ತಾನೊಬ್ಬ ತಾಯಿ ಎಂಬುದನ್ನು ಮರೆಯಲಿಲ್ಲ. ಅಪ್ಪಟ ಗೃಹಿಣಿಯಾಗಿ ಸಂಜಯ್ ಮತ್ತು ರಾಜೀವ್ ಅವರನ್ನು ಕೈ ಹಿಡಿದು ಮುನ್ನಡೆಸಿದರು. ಅವರು ಆಯ್ದುಕೊಂಡ ದಾರಿಗೆ ತಾಯ್ತನ ಅಡ್ಡಿಯಾಗದ ಹಾಗೆ ಜಾಣ್ಮೆಯಿಂದ ನಿಭಾಯಿಸಿ ಕೊಂಡರು. ಕೊನೆ ಕೊನೆಗೆ ಸಂಜಯ್ ನಲ್ಲಿ ತಮ್ಮ ರಾಜಕೀಯ ಉತ್ತರಾಧಿಕಾರಿಯನ್ನು ಕಂಡರಾದರೂ ಸಂಜಯ್ ನ ದುರಂತ ಮರಣದಲ್ಲಿ ಅದೂ ಅಂತ್ಯವಾಯ್ತು. ಇನ್ನೊಬ್ಬ ಮಗ ರಾಜೀವ್ ಇಟಲಿ ಸಂಜಾತೆ ಸೋನಿಯಾಳನ್ನು ಮೆಚ್ಚಿ ಮದುವೆಯಾಗಲು ಮುಂದಾದಾಗ ತೆರೆದ ತೋಳುಗಳಿಂದ ಆಕೆಯನ್ನು ಕುಟುಂಬದೊಳಗೆ ಬರಮಾಡಿಕೊಂಡರು. ಒಳ್ಳೆಯ ಅತ್ತೆಯಾದರು.</p>



<p><br>ಇಂದಿರಾ ಪ್ರೀತಿಯ ಅಜ್ಜಿ ಕೂಡಾ ಹೌದು. ತನ್ನ ಮೊಮ್ಮಕ್ಕಳಾದ ಪ್ರಿಯಾಂಕಾ ಮತ್ತು ರಾಹುಲ್ ಜೊತೆಗೆ ಅವರು ಆಟವಾಡುತ್ತಿರುವ, ಅವರನ್ನು ಬೆನ್ನಮೇಲೆ ಹೊತ್ತುಕೊಂಡು ಕೂಸುಮರಿ ಮಾಡುವ ಅಸಂಖ್ಯ ಚಿತ್ರಗಳನ್ನು ನಾವು ಅಂತರ್ಜಾಲದಲ್ಲಿ ಕಾಣಬಹುದು. ಅದು ನಮಗೂ ತಂಗಾಳಿಯಂತೆ ಹಿತಾನುಭವವನ್ನು ನೀಡುತ್ತದೆ.</p>


<div class="wp-block-image">
<figure class="aligncenter size-full"><img loading="lazy" decoding="async" width="600" height="337" src="https://peepalmedia.com/wp-content/uploads/2022/11/image-11.png" alt="" class="wp-image-15955" srcset="https://peepalmedia.com/wp-content/uploads/2022/11/image-11.png 600w, https://peepalmedia.com/wp-content/uploads/2022/11/image-11-300x169.png 300w, https://peepalmedia.com/wp-content/uploads/2022/11/image-11-150x84.png 150w" sizes="auto, (max-width: 600px) 100vw, 600px" /></figure></div>


<p>ಕುಟುಂಬದ ಮುಖ್ಯಸ್ಥಳಾಗಿ ನೋಡುವುದಾದರೆ ಇಂದಿರಾ ತುಂಬಾ ಕಟ್ಟುನಿಟ್ಟಿನ ವ್ಯಕ್ತಿ. ಈ ಬಗ್ಗೆ ಸೋನಿಯಾ ವಿವರವಾಗಿ ತಮ್ಮ ʼರಾಜೀವ್ʼ ಪುಸ್ತಕದಲ್ಲಿ ಬರೆದಿದ್ದಾರೆ.‌ ಊಟದ ಹೊತ್ತಿಗೆ ಕುಟುಂಬದ ಎಲ್ಲಾ ಸದಸ್ಯರು ಊಟದ ಟೇಬಲ್ ಮುಂದೆ ಹಾಜರಿರ ಬೇಕಾಗಿತ್ತಂತೆ. ಮತ್ತು ಅಲ್ಲಿ ಕಡ್ಡಾಯವಾಗಿ ಹಿಂದಿ ಮಾತಾಡಲೇ ಬೇಕಾಗಿತ್ತಂತೆ. ತಾನು ಊಟದ ಟೇಬಲ್ ಮೇಲೆಯೇ ಹಿಂದಿ ಕಲಿತದ್ದು ಎಂದು ‌ಅವರು ಬರೆದುಕೊಂಡಿದ್ದಾರೆ.</p>



<p><br>ಇಂತಹ ನಿರ್ಭೀತ ವ್ಯಕ್ತಿತ್ವ ಹೊಂದಿರುವ ಕಾರಣದಿಂದಲೇ ಅಮೃತಸರದ ಸ್ವರ್ಣಮಂದಿರಕ್ಕೆ ಸೇನೆಯನ್ನು ನುಗ್ಗಿಸುವ ಧಾರ್ಷ್ಟ್ಯ ತೋರಿಸಿದ್ದು.‌ ಇದೇ ಕಾರಣದಿಂದಾಗಿಯೇ ಅವರು ಹಂತಕರ ಗುಂಡಿಗೆ ಎದೆಯೊಡ್ಡ ಬೇಕಾಯ್ತು. <strong>ಹೆಣ್ಣೊಬ್ಬಳು ತ್ಯಾಗಿಯಾಗುವುದು ಕುಟುಂಬದ ದೃಷ್ಟಿಯಿಂದ ಬಹುದೊಡ್ಡ ಮೌಲ್ಯ.‌ ಆದರೆ ಹುತಾತ್ಮಳಾಗಿ</strong><strong> </strong><strong>ಚರಿತ್ರೆಯ ಪುಟಗಳಲ್ಲಿ ಚಿರಸ್ಥಾಯಿಯಾಗುವುದು ಮುಂದಿನ ಜನಾಂಗಕ್ಕೆ ಒದಗುವ ದಾರಿದೀಪ.</strong></p>



<p></p>



<p><br><strong>ಉಷಾ ಕಟ್ಟೆಮನೆ</strong></p>



<p>ಹಿರಿಯ ಲೇಖಕಿಯಾಗಿರುವ ಇವರು ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. &nbsp;</p>
]]></content:encoded>
					
		
		
			</item>
		<item>
		<title>ʼಮೇಡಂ, ಅಮೆರಿಕದ ನೌಕಾಪಡೆಯ ಯುದ್ಧನೌಕೆಗಳು ಬಂಗಾಳ ತೀರವನ್ನು ಪ್ರವೇಶಿಸಿವೆ’</title>
		<link>https://peepalmedia.com/indira-gandhi-bith-anniversery-special-by-dinesh-kumar-sc/</link>
		
		<dc:creator><![CDATA[Peepal Media]]></dc:creator>
		<pubDate>Sat, 19 Nov 2022 13:04:14 +0000</pubDate>
				<category><![CDATA[ವಿಶೇಷ]]></category>
		<category><![CDATA[Dinesh Kumar S C]]></category>
		<category><![CDATA[indira gandhi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=15910</guid>

					<description><![CDATA[ಇಂದು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನ. ಭಾರತದ ಪ್ರಧಾನಿಗಳ ಪಟ್ಟಿಯಲ್ಲಿ ಹಲವು ಕಾರಣಗಳಿಗಾಗಿ ಎದ್ದು ಕಾಣುವ ಹೆಸರು ಇಂದಿರಾ ಗಾಂಧಿಯವರದು. ಈ ಹಿನ್ನೆಲೆಯಲ್ಲಿ ನಮ್ಮ ಪೀಪಲ್‌ ಮೀಡಿಯಾ ಸಂಸ್ಥೆಯ ಪ್ರಧಾನ ಸಂಪಾದಕರಾದ ದಿನೇಶ್‌ ಕುಮಾರ್‌ ಎಸ್‌ ಸಿ ಅವರು ಬರೆದಿರುವ ಒಂದು ವಿಶೇಷ ಲೇಖನ ನಿಮ್ಮ ಓದಿಗಾಗಿ ಯಾವುದೇ ದೇಶದ ಪ್ರಧಾನಿಯ ಎದೆ ನಡುಗಿಸುವ ಸುದ್ದಿ ಅದು. ಆದರೆ ಇಂದಿರಾ ಗಾಂಧಿ ಕೇಳಿಯೂ ಕೇಳದಂತೆ ಸುಮ್ಮನಿದ್ದರು. ಈ ಸುದ್ದಿಯನ್ನು ಹೇಳುತ್ತಿರುವವರು ಬೇರೆ ಯಾರೂ ಅಲ್ಲ, [&#8230;]]]></description>
										<content:encoded><![CDATA[
<h5 class="has-text-align-center has-very-light-gray-to-cyan-bluish-gray-gradient-background has-background wp-block-heading" style="font-style:normal;font-weight:700;text-transform:uppercase"><strong>ಇಂದು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನ. ಭಾರತದ ಪ್ರಧಾನಿಗಳ ಪಟ್ಟಿಯಲ್ಲಿ ಹಲವು ಕಾರಣಗಳಿಗಾಗಿ ಎದ್ದು ಕಾಣುವ ಹೆಸರು ಇಂದಿರಾ ಗಾಂಧಿಯವರದು. ಈ ಹಿನ್ನೆಲೆಯಲ್ಲಿ ನಮ್ಮ ಪೀಪಲ್‌ ಮೀಡಿಯಾ ಸಂಸ್ಥೆಯ ಪ್ರಧಾನ ಸಂಪಾದಕರಾದ ದಿನೇಶ್‌ ಕುಮಾರ್‌ ಎಸ್‌ ಸಿ ಅವರು ಬರೆದಿರುವ ಒಂದು ವಿಶೇಷ ಲೇಖನ ನಿಮ್ಮ ಓದಿಗಾಗಿ</strong></h5>



<p>ಯಾವುದೇ ದೇಶದ ಪ್ರಧಾನಿಯ ಎದೆ ನಡುಗಿಸುವ ಸುದ್ದಿ ಅದು. ಆದರೆ ಇಂದಿರಾ ಗಾಂಧಿ ಕೇಳಿಯೂ ಕೇಳದಂತೆ ಸುಮ್ಮನಿದ್ದರು. ಈ ಸುದ್ದಿಯನ್ನು ಹೇಳುತ್ತಿರುವವರು ಬೇರೆ ಯಾರೂ ಅಲ್ಲ, ಭಾರತ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಎಸ್.ಎಂ.ನಂದ. ಇನ್ನೇನು ಬಾಂಗ್ಲಾದೇಶ ವಿಮೋಚನೆಗಾಗಿ ಭಾರತ ಪಾಕಿಸ್ತಾನದ ಜತೆ ನಿರ್ಣಾಯಕ ಕದನಕ್ಕೆ ಸಜ್ಜಾದಾಗ ಪ್ರಧಾನಿ ಇಂದಿರಾಗಾಂಧಿ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸುತ್ತಿದ್ದರು.</p>



<p>ಇಂದಿರಾಗಾಂಧಿ ಏನೂ ಪ್ರತಿಕ್ರಿಯೆ ನೀಡದೇ ಇದ್ದರಿಂದಾಗಿ ಚರ್ಚೆ ಮುಂದುವರೆಯಿತು. ತಾನು ಹೇಳಿದ್ದನ್ನು ಇಂದಿರಾ ಕೇಳಿಸಿಕೊಂಡರೋ ಇಲ್ಲವೋ ಎಂಬ ಧಾವಂತ ಅಡ್ಮಿರಲ್ ನಂದ ಅವರಿಗೆ. ಹೀಗಾಗಿ ಮತ್ತೆ ಮಧ್ಯೆ ಪ್ರವೇಶಿಸಿ, ‘ಮೇಡಂ, ಅಮೆರಿಕದ ಯುದ್ಧನೌಕೆಗಳು ಬಂಗಾಳ ತೀರ ಪ್ರವೇಶಿಸಿವೆ. ಇದನ್ನು ನಾನು ತಮ್ಮ ಗಮನಕ್ಕೆ ತರಲೇಬೇಕಿದೆ’ ಎಂದರು. ಇಂದಿರಾ ಥಟ್ಟನೇ ಹೇಳಿದರು: ‘ಅಡ್ಮಿರಲ್, ನೀವು ಮೊದಲ ಬಾರಿ ಹೇಳಿದಾಗಲೇ ನಾನು ಅದನ್ನು ಕೇಳಿಸಿಕೊಂಡೆ. ಆ ಕುರಿತು ಚಿಂತೆ ಬೇಡ. ಚರ್ಚೆ ಮುಂದುವರೆಯಲಿ’</p>



<p>ಅಡ್ಮಿರಲ್ ನಂದ ಅವರೊಂದಿಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಮಾತುಕತೆ<br>ಸಭೆಯಲ್ಲಿದ್ದ ಎಲ್ಲ ಅಧಿಕಾರಿಗಳು ಒಮ್ಮೆ ಬೆಚ್ಚಿಬಿದ್ದರು. ಪ್ರಧಾನಿಯ ಆ ಧೈರ್ಯದ ಮನೋಭಾವ ಎಲ್ಲರ ನೈತಿಕ ಶಕ್ತಿಯನ್ನು ಹೆಚ್ಚಿಸಿಬಿಟ್ಟಿತ್ತು. ಜಗತ್ತಿನ ಅತಿದೊಡ್ಡ ನೌಕಾಪಡೆಯನ್ನು ಹೊಂದಿದ್ದ ಅಮೆರಿಕದ ನೌಕೆಗಳು ಬಂದಿವೆ ಎಂದರೂ ಬೆದರದ ಇಂದಿರಾ, ಅಮೆರಿಕದ ಹಸ್ತಕ್ಷೇಪದ ಬಗ್ಗೆ ತೋರಿದ ತಿರಸ್ಕಾರ ಭಾರತ ಸಶಸ್ತ್ರ ಪಡೆಗಳ ಮನೋಬಲವನ್ನು ಹೆಚ್ಚಿಸಿತ್ತು.</p>



<p>ಇಂದಿರಾಗಾಂಧಿ ಹೀಗೆ ಅಮೆರಿಕದ ಬೆದರಿಕೆಯನ್ನು ತಿರಸ್ಕಾರದಿಂದ ನೋಡುವುದಕ್ಕೆ ಕಾರಣವೂ ಇತ್ತು. ಆಕೆಗೆ ಒಂದು ಯುದ್ಧವನ್ನು ಹೇಗೆ ಎಲ್ಲ ಬಗೆಯ ಪೂರ್ವತಯಾರಿಗಳೊಂದಿಗೆ ನಡೆಸಬೇಕು ಎಂಬುದು ಖಚಿತವಾಗಿ ಗೊತ್ತಿತ್ತು. ಯುದ್ಧವ್ಯೂಹವನ್ನು ರಚಿಸಲು ಅವರು ಭದ್ರತಾಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಅವರನ್ನು ಕೆಲಸಕ್ಕೆ ಹಚ್ಚಿ ರಾಜತಾಂತ್ರಿಕ ತಂತ್ರಗಳನ್ನು ಹೆಣೆಯುತ್ತ ಬಂದರು. ಪಾಕಿಸ್ತಾನದಲ್ಲಿ ದಂಗೆ ಶುರುವಾದ ಹೊತ್ತಿನಲ್ಲೇ ಇಂದಿರಾ ಯುದ್ಧವನ್ನು ಊಹಿಸಿದ್ದರು ಮತ್ತು ಲೋಕಸಭೆಯಲ್ಲಿ ಈ ಸಂಬಂಧ ಕೇಳಲಾದ ಪ್ರಶ್ನೆಗಳಿಗೆ ಮಾ.27ರಂದು ಅತ್ಯಂತ ಜವಾಬ್ದಾರಿಯುತ ಪ್ರತಿಕ್ರಿಯೆ ನೀಡಿದ್ದರು. ‘ಇಂಥ ಗಂಭೀರ ಸಂದರ್ಭದಲ್ಲಿ ಒಂದು ಸರ್ಕಾರವಾಗಿ ಅತಿ ಕಡಿಮೆ ಮಾತನಾಡುವುದು ಒಳ್ಳೆಯದು’. ಅದೇ ದಿನ ರಾಜ್ಯಸಭೆಯಲ್ಲಿ ಮಾತನಾಡುತ್ತ ಇಂದಿರಾಗಾಂಧಿ ಎಚ್ಚರಿಸಿದರು: ‘ಒಂದು ತಪ್ಪು ಹೆಜ್ಜೆ, ಒಂದು ತಪ್ಪು ಶಬ್ದ ನಾವು ಏನನ್ನು ಮಾಡಲು ಹೊರಟಿದ್ದೇವೋ ಅದನ್ನು ಸಂಪೂರ್ಣ ಹಾಳುಗೆಡವಬಹುದು’</p>



<p>ಅಲ್ಲಿಂದಾಚೆಗೆ ಆರು ತಿಂಗಳ ಕಾಲ, ಇಂದಿರಾ ಒಂದು ತಪ್ಪು ಶಬ್ದ ಮಾತನಾಡಲಿಲ್ಲ, ಒಂದು ತಪ್ಪು ಹೆಜ್ಜೆ ಇಡಲಿಲ್ಲ. ನಿರಂತರವಾಗಿ ಜಾಗತಿಕ ನಾಯಕರುಗಳಿಗೆ ಪತ್ರಗಳನ್ನು ಬರೆದರು. ಭಾರತ ಗಡಿಯಲ್ಲಿ ಉದ್ಭವಿಸಿರುವ ಸನ್ನಿವೇಶವನ್ನು ಬಿಡಿಸಿ ಹೇಳಿದರು. ಬ್ರಿಟನ್, ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಮತ್ತು ಅಮೆರಿಕಕ್ಕೆ ತಾವೇ ಖುದ್ದಾಗಿ ಭೇಟಿ ನೀಡಿ ಪಾಕ್ ಅಂತರ್ಯುದ್ಧದ ಸನ್ನಿವೇಶವನ್ನು ವಿವರಿಸಿದರು. ಪಶ್ಚಿಮ ಪಾಕಿಸ್ತಾನವು ಪೂರ್ವ ಪಾಕಿಸ್ತಾನದ ನಾಗರಿಕರ ಮೇಲೆ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ, ಭೀಕರ ನರಮೇಧಗಳು, ಲಕ್ಷಾಂತರ ಬೆಂಗಾಲಿ ಮಹಿಳೆಯರ ಮೇಲಿನ ಅತ್ಯಾಚಾರಗಳ ಕುರಿತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಕೊಟ್ಟರು. ಭಾರತದ ಪರಮಾಪ್ತ ರಾಷ್ಟ್ರ ಸೋವಿಯತ್ ಯೂನಿಯನ್ ಜತೆ ಐತಿಹಾಸಿಕ ಮೈತ್ರಿ ಮತ್ತು ಪರಸ್ಪರ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದರು.</p>



<p>ಪೂರ್ವ ಪಾಕಿಸ್ತಾನದಲ್ಲಿ ಎದ್ದ ದಂಗೆಯ ನಂತರ ಪಾಕಿಸ್ತಾನದ ವಿರುದ್ಧ ಯುದ್ಧ ಹೂಡುವುದು ಅನಿವಾರ್ಯ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಅದಕ್ಕೆ ಅವರು ಆತುರ ತೋರಲಿಲ್ಲ. ಅವರು ಮಾಡಿದ ಮೊದಲ ಕೆಲಸವೇ ಸೇನಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು. ‘ಭಾರತ ಈ ಸಂದರ್ಭದಲ್ಲಿ ಯುದ್ಧ ಮಾಡಲು ಸಾಧ್ಯವೇ?’ ಎಂದು ಅವರು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರನ್ನು ಕೇಳಿದ್ದರು. ಮಾಣಿಕ್ ಷಾ ಅತ್ಯಂತ ನೇರವಾಗಿ ‘ಆಗುವುದಿಲ್ಲ, ಅದಕ್ಕೆ ಸಮಯ ಬೇಕಾಗುತ್ತದೆ’ ಎಂದಿದ್ದರು. ಇಂದಿರಾ ಮರುಮಾತನಾಡದೇ ಅವರು ಕೇಳಿದಷ್ಟು ಸಮಯ ನೀಡಿದರು, ತಯಾರಿಗಳನ್ನು ಮಾಡಿಕೊಳ್ಳಲು ಆದೇಶಿಸಿದ್ದರು. ಬಾಂಗ್ಲಾ ವಿಮೋಚನೆಯ ಯುದ್ಧ ಘೋಷಣೆಯಾದ ನಂತರ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಈ ಯುದ್ಧವನ್ನು ಮುಗಿಸಿಬಿಡಲು ಇಂದಿರಾಗಾಂಧಿ ಬಯಸಿದ್ದರು. ಅಂತಾರಾಷ್ಟ್ರೀಯ ಸಮುದಾಯಗಳು ಪರಿಸ್ಥಿತಿಯ ಲಾಭ ಪಡೆಯಲು, ಮಧ್ಯ ಪ್ರವೇಶಿಸಲು ಅವಕಾಶವಿಲ್ಲದಂತೆ ಯುದ್ಧ ಪೂರ್ಣಗೊಳ್ಳಬೇಕು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಅವರು ಅಂದುಕೊಂಡ ಹಾಗೆಯೇ ಆಯಿತು. 1971 ಡಿಸೆಂಬರ್ 3ರಂದು ತಡರಾತ್ರಿ ಆರಂಭಗೊಂಡ ಯುದ್ಧ ಡಿಸೆಂಬರ್ 16ರಂದು ಮುಗಿದೇ ಹೋಗಿತ್ತು. ಪಾಕಿಸ್ತಾನದ 91,000 ಸೈನಿಕರು (ಈ ಪೈಕಿ ಕೆಲ ನಾಗರಿಕರು, ಸೈನಿಕ ಕುಟುಂಬದವರು, ರಜಾಕರೂ ಇದ್ದರು) ಭಾರತ ಸೈನ್ಯದೆದುರು ಮಂಡಿಯೂರಿ ಶರಣಾಗತರಾಗುವುದರೊಂದಿಗೆ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ಉದ್ಭವಿಸಿತು. ಎರಡನೇ ವಿಶ್ವಸಮರದ ನಂತರ ನಡೆದ ಬಹುದೊಡ್ಡ ಯುದ್ಧ ಇದಾಗಿತ್ತು. ಎರಡನೇ ಮಹಾಯುದ್ಧದ ನಂತರ ಇಷ್ಟು ದೊಡ್ಡ ಸಂಖ್ಯೆಯ ಯುದ್ಧಕೈದಿಗಳು ಉದ್ಭವಿಸಿದ ಯುದ್ಧವೂ ಇದಾಗಿತ್ತು. ಪಾಕಿಸ್ತಾನ ಎಂಥ ಹೀನಾಯವಾದ ಸೋಲನ್ನಪ್ಪಿತು ಎಂದರೆ ತನ್ನ ಅರ್ಧದಷ್ಟು ನೌಕಾಪಡೆಯನ್ನು ಅದು ಕಳೆದುಕೊಳ್ಳಬೇಕಾಯಿತು, ಮಾತ್ರವಲ್ಲ ಕಾಲುಭಾಗದಷ್ಟು ವಾಯುಪಡೆಯನ್ನು ಮೂರನೇ ಒಂದು ಭಾಗದಷ್ಟು ಭೂಸೇನೆಯನ್ನು ಕಳೆದುಕೊಂಡಿತು. ಪಾಕಿಸ್ತಾನ ಎರಡು ಭಾಗವಾಗಿ ಹೋಯಿತು. ತನ್ನ ಶೇ.60 ರಷ್ಟು ಭೂಭಾಗವನ್ನು, ಜನಸಂಖ್ಯೆಯನ್ನು ಶಾಶ್ವತವಾಗಿ ಕಳೆದುಕೊಂಡಿತು.</p>



<p></p>



<p>ದಿನೇಶ್‌ ಕುಮಾರ್‌ ಎಸ್‌ ಸಿ</p>
]]></content:encoded>
					
		
		
			</item>
		<item>
		<title>ಸಂದರ್ಶನ &#124; ಅತ್ತೆ ಇಂದಿರಾ ಗಾಂಧಿ ಕುರಿತು ಸೊಸೆ ಸೋನಿಯಾ ಗಾಂಧಿ ಅವರ ಮನದಾಳದ ಮಾತುಗಳು</title>
		<link>https://peepalmedia.com/citizens-congress-former-president-sonia-gandhi-interview/</link>
		
		<dc:creator><![CDATA[Peepal Media]]></dc:creator>
		<pubDate>Mon, 31 Oct 2022 14:06:42 +0000</pubDate>
				<category><![CDATA[ವಿಶೇಷ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[indira gandhi]]></category>
		<category><![CDATA[Inteeview]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[Sonia Gandhi]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=13485</guid>

					<description><![CDATA[ಸೋನಿಯಾ ಗಾಂಧಿಯವರು ೧೯೬೮ ರಲ್ಲಿ ರಾಜೀವ ಗಾಂಧಿಯವರನ್ನು ಮದುವೆಯಾಗಿ ತನ್ನ ತವರು ಇಟೆಲಿಯಿಂದ ಭಾರತಕ್ಕೆ ಬಂದು ತನ್ನ ಅತ್ತೆ ಇಂದಿರಾ ಗಾಂಧಿಯವರೊಂದಿಗೆ ವಾಸಿಸಲು ಆರಂಭಿಸಿದರು. ಪ್ರಧಾನ ಮಂತ್ರಿಯಾಗಿಯೂ ಅಪ್ಪಟ ಅತ್ತೆಯಾಗಿಯೂ ಇಂದಿರಾರವರನ್ನು ಕಂಡ ಸೋನಿಯಾ ಅತ್ತೆಯ ಜತೆಗಿನ ತಮ್ಮ ಬದುಕಿನ ಪ್ರೀತಿಯ ಪಯಣದ ಬಗ್ಗೆ ಸಂದರ್ಶನವೊಂದರಲ್ಲಿ ಹೃದಯದಿಂದ ಮಾತಾಡಿದ್ದಾರೆ. ಈ ಸಂದರ್ಶನದ ಕೆಲ ತುಣುಕುಗಳನ್ನು ಇಂದಿರಾಗಾಂಧಿ ಅವರ ಪುಣ್ಯ ತಿಥಿಯ ನೆನಪಲ್ಲಿ ನಿಮಗಾಗಿ ಪೀಪಲ್ ಮೀಡಿಯಾ ನೀಡಿದೆ… ಪ್ರಶ್ನೆ: ನೀವು ಮೊದಲು ಭಾರತಕ್ಕೆ ಬಂದದ್ದು ಯಾವಾಗ?ಸೋನಿಯಾ: ಅದು [&#8230;]]]></description>
										<content:encoded><![CDATA[
<p></p>



<p>ಸೋನಿಯಾ ಗಾಂಧಿಯವರು ೧೯೬೮ ರಲ್ಲಿ ರಾಜೀವ ಗಾಂಧಿಯವರನ್ನು ಮದುವೆಯಾಗಿ ತನ್ನ ತವರು ಇಟೆಲಿಯಿಂದ ಭಾರತಕ್ಕೆ ಬಂದು ತನ್ನ ಅತ್ತೆ ಇಂದಿರಾ ಗಾಂಧಿಯವರೊಂದಿಗೆ ವಾಸಿಸಲು ಆರಂಭಿಸಿದರು. ಪ್ರಧಾನ ಮಂತ್ರಿಯಾಗಿಯೂ ಅಪ್ಪಟ ಅತ್ತೆಯಾಗಿಯೂ ಇಂದಿರಾರವರನ್ನು ಕಂಡ ಸೋನಿಯಾ ಅತ್ತೆಯ ಜತೆಗಿನ ತಮ್ಮ ಬದುಕಿನ ಪ್ರೀತಿಯ ಪಯಣದ ಬಗ್ಗೆ ಸಂದರ್ಶನವೊಂದರಲ್ಲಿ ಹೃದಯದಿಂದ ಮಾತಾಡಿದ್ದಾರೆ. ಈ ಸಂದರ್ಶನದ ಕೆಲ ತುಣುಕುಗಳನ್ನು ಇಂದಿರಾಗಾಂಧಿ ಅವರ ಪುಣ್ಯ ತಿಥಿಯ ನೆನಪಲ್ಲಿ ನಿಮಗಾಗಿ ಪೀಪಲ್ ಮೀಡಿಯಾ ನೀಡಿದೆ…</p>



<p><strong>ಪ್ರಶ್ನೆ:</strong> ನೀವು ಮೊದಲು ಭಾರತಕ್ಕೆ ಬಂದದ್ದು ಯಾವಾಗ?<br><strong>ಸೋನಿಯಾ</strong>: ಅದು 1965ರಲ್ಲಿ. ಅವರು ಪ್ರಧಾನಿಯಾಗುವ ಸ್ವಲ್ಪ ಸಮಯದ ಮೊದಲು.</p>



<p><strong>ಪ್ರಶ್ನೆ</strong>: ನಿಮ್ಮ ಮೊದಲ ಮಾತುಕತೆ ಯಾವ ಭಾಷೆಯಲ್ಲಿ ನಡೆಯಿತು?<br><strong>ಸೋನಿಯಾ</strong>: ಫ್ರೆಂಚ್ ಭಾಷೆಯಲ್ಲಿ</p>



<p><strong>ಪ್ರಶ್ನೆ</strong>: ನೀವು ನೇರವಾಗಿ ಅತ್ತೆ ಮನೆಗೆ ಬಂದು ಅಲ್ಲಿ ಉಳಿದುಕೊಂಡು ಮತ್ತೆ ಮದುವೆಯಾದಿರಾ?<br><strong>ಸೋನಿಯಾ</strong>: ಇಲ್ಲ. ಇಲ್ಲಿಗೆ ಬಂದ ಮೊದಲಿಗೆ ನಾನು ಶ್ರೀಮತಿ ಬಾಟ್ಸನ್ ಜೊತೆ ಇದ್ದೆ. ನನ್ನ ನಿಶ‍್ಚಿತಾರ್ಥದವರೆಗೂ. ನಂತರ ಸಫ್ದರ್ಜಂಗ್ ರಸ್ತೆಯ ಮನೆಯಲ್ಲಿ ನನ್ನ ಅತ್ತೆಯೊಂದಿಗೆ ವಾಸ್ತವ್ಯ ಆರಂಭಿಸಿದೆ.</p>



<p><strong>ಪ್ರಶ್ನೆ</strong>: ನೀವು ಸಂಪೂರ್ಣವಾಗಿ ಭಿನ್ನವಾದ ಸಂಸ್ಕೃತಿಯ ನಾಡಿನಿಂದ ಬಂದವರು. ನಿಮ್ಮೊಂದಿಗೆ ಆತ್ಮೀಯತೆ ಬೆಳೆಸಿಕೊಳ್ಳುವುದು ಅವರಿಗೆ ಸಾಧ್ಯವಾಯಿತೇ?<br><strong>ಸೋನಿಯಾ</strong>: ಹೌದು. ಬಹಳ ಬೇಗ ಅವರಿಗದು ಸಾಧ್ಯವಾಯಿತು.</p>



<figure class="wp-block-image size-full"><img decoding="async" src="https://peepalmedia.com/wp-content/uploads/2022/10/1598683801_indira-sonia-1.jpg" alt="" class="wp-image-13486"/></figure>



<p><strong>ಪ್ರಶ್ನೆ</strong>: ಪ್ರಧಾನಿಯಾಗಿದ್ದ ಅತ್ತೆಯವರ ಬಗ್ಗೆ ನಿಮಗೆ ಭಯವಿತ್ತೇ?<br><strong>ಸೋನಿಯಾ</strong>: ಭಯವಿದ್ದಿದ್ದು ನಿಜವೇ. ಆ ರೀತಿ ಅಗಿಯೇ ಆಗುತ್ತದೆ. ಭಾರತದಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲಾ ಕಡೆ ಇರುವುದೇ ಹಾಗೆ. ನಾನಾಗ ಚಿಕ್ಕವಳಾಗಿದ್ದೆ.</p>



<p><strong>ಪ್ರಶ್ನೆ</strong>: ಅವರು ನಿಮ್ಮನ್ನು ಹೊರಗಿನವರ ರೀತಿ ನೋಡಲಿಲ್ಲವೇ? ನೀವು ಭಾರತದ ಸಂಸ್ಕೃತಿಗೆ ಹೊಂದಿಕೊಳ್ಳಬೇಕೆಂದು ಒತ್ತಾಯ ಹೇರಲಿಲ್ಲವೇ?<br><strong>ಸೋನಿಯಾ</strong>: ಅವರು ಅತ್ಯಂತ ಬುದ್ಧಿವಂತ ಮಹಿಳೆಯಾಗಿದ್ದರು. ಯಾವಾಗಲಾದರೂ ಅದು ಮಾಡು, ಇದು ಮಾಡು ಎಂದು ಹೇಳುತ್ತಿದ್ದರಾದರೂ ಅದನ್ನು ಹೇರುತ್ತಿರಲಿಲ್ಲ. ಬದಲಿಗೆ ನಾನಾಗಿಯೇ ಅದನ್ನು ಮಾಡುವಂತೆ ಮಾಡುತ್ತಿದ್ದರು.</p>



<p><strong>ಪ್ರಶ್ನೆ</strong>: ಅವರು ಅಡುಗೆ-ಊಟದ ವಿಷಯದಲ್ಲಿ ಬಹಳ ಒಳ್ಳೆಯ ಅಭಿರುಚಿ ಹೊಂದಿದ್ದರಂತೆ. ನಿಜವೇ?<br><strong>ಸೋನಿಯಾ</strong>: ಖಂಡಿತಾ ಹೌದು..ನೀವು ಹೇಳಿದಂತೆ ಇಂದಿರಾ ಗಾಂಧಿಯವರು ರಾಜಕಾರಣದ ಹೊರಗಿನ ಜಗತ್ತಿನಲ್ಲಿ ಒಬ್ಬ ಒಳ್ಳೆಯ ಗೃಹಿಣಿ..</p>



<p><strong>ಪ್ರಶ್ನೆ</strong>: ನಿಮಗೆ ಮನೆವಾರ್ತೆಯನ್ನೆಲ್ಲಾ ಜೊತೆಯಲ್ಲಿ ಕಲಿಸಿದರಾ?<br>ಸೋನಿಯಾ: ಹೌದು.. ಹೌದು… ಹಾಗೇ ಮಾಡಿದರು.</p>



<p><strong>ಪ್ರಶ್ನೆ</strong>: ರಾಜೀವ್ ತನ್ನ ರಾಜಕೀಯ ಉತ್ತರಾಧಿಕಾರಿ ಆಗಬೇಕೆಂದು ಇಂದಿರಾಗಾಂಧಿಯವರು ಬಯಸಿದಾಗ ನೀವು ಅದರ ವಿರುದ್ಧವಾಗಿದ್ದೀರಿ ಎಂದು ಬಹಿರಂಗವಾಗಿಯೇ ಹೇಳಿದ್ರಿ. ಇದು ಅತ್ತೆ ಸೊಸೆ ನಡುವಿನ ಸಂಬಂಧವನ್ನು ಬದಲಿಸಿತ್ತಾ?<br>ಸೋನಿಯಾ: ಇಲ್ಲ. ಹಾಗಾಗಲಿಲ್ಲ. ನಾನಾಗಲೇ ನಿಮಗೆ ಹೇಳಿದಂತೆ ಅವರು ತುಂಬಾ ಬುದ್ಧಿವಂತ ಮಹಿಳೆಯಾಗಿದ್ದರು ಅನ್ನುವುದನ್ನು ಮರೆಯಬೇಡಿ. ಅವರು ಈ ವಿಷಯವನ್ನು ನಮ್ಮಿಬ್ಬರಿಗೇ ಬಿಟ್ಟು ನೀವೇ ತೀರ್ಮಾನಿಸಿಕೊಳ್ಳಿ ಎಂದು ಬಿಟ್ಟುಬಿಟ್ಟರು. ಅವರು ನನಗೆ ಈ ಬಗ್ಗೆ ಎಂದೂ ಏನೂ ಹೇಳಲಿಲ್ಲ.</p>



<p><strong>ಪ್ರಶ್ನೆ</strong>: ನಿಮ್ಮ ಖಾಸಗಿ ತನಕ್ಕೆ ಸಾಕಷ್ಟು ಅವಕಾಶವಿತ್ತು ಹಾಗಾದರೆ?<br><strong>ಸೋನಿಯಾ</strong>: ಹೌದು. ನಿಜವಾಗಿಯೂ. ಪ್ರಧಾನ ಮಂತ್ರಿಯೊಬ್ಬರ ಸೊಸೆ ಮತ್ತು ಮಗ ಆಗಿರುವುದೆಂದರೆ ಅಷ್ಟು ಸುಲಭವಲ್ಲ ಅಲ್ಲವೇ? ನಿಮ್ಮ ಖಾಸಗಿ ಹಾಗೂ ಸಾರ್ವಜನಿಕ ಬದುಕು ಸಂಪೂರ್ಣವಾಗಿ ಅಲ್ಲಿ ಬೆರೆತು ಹೋಗಿರುತ್ತದೆ. ಆ ಸಂದರ್ಭದಲ್ಲಿ ಅದೇನೂ ಕಷ್ಟವಿರಲಿಲ್ಲ. ಆಗ ನಮ್ಮ ಕುಟುಂಬದಲ್ಲಿ ಸಹ ನಮ್ಮಿಬ್ಬರ ಮೇಲೆ ಅಷ್ಟೊಂದು ಫೋಕಸ್ ಇರಲಿಲ್ಲ. ನಮಗೆ ನಮ್ಮಷ್ಟಕ್ಕೆ ಇರಲು ಸಾಕಷ್ಟು ಅವಕಾಶವಿತ್ತು.</p>



<p><strong>ಪ್ರಶ್ನೆ</strong>: ಹೊರಗೆ ಹೋದರೆ ಎಲ್ಲಿಗೆ, ಯಾರ ಜೊತೆ ಎಂದು ಯಾರೂ ಕೇಳುತ್ತಿರಲಿಲ್ಲವೇ?<br><strong>ಸೋನಿಯಾ</strong>: ಇಲ್ಲ.. ಇಲ್ಲ. ಯಾವತ್ತೂ ಇಲ್ಲ. ನಮ್ಮ ಸ್ನೇಹಿತರಿದ್ದರೆ ಅವರಿಗೆ ಪರಿಚಯ ಮಾಡಿಕೊಡುತ್ತಿದ್ದೆವು. ಅವರಲ್ಲಿ ಕೆಲವರ ಬಗ್ಗೆ ಅವರಿಗೆ ತಿಳಿದೇ ಇರುತ್ತಿತ್ತು.</p>



<figure class="wp-block-image size-full"><img loading="lazy" decoding="async" width="540" height="403" src="https://peepalmedia.com/wp-content/uploads/2022/10/19-50243208.jpg" alt="" class="wp-image-13487" srcset="https://peepalmedia.com/wp-content/uploads/2022/10/19-50243208.jpg 540w, https://peepalmedia.com/wp-content/uploads/2022/10/19-50243208-300x224.jpg 300w, https://peepalmedia.com/wp-content/uploads/2022/10/19-50243208-150x112.jpg 150w" sizes="auto, (max-width: 540px) 100vw, 540px" /></figure>



<p><strong>ಪ್ರಶ್ನೆ</strong>: ನೀವು ಶ್ರೀಮತಿ ಗಾಂಧಿಯವರಿಂದ ಸ್ಪೂರ್ತಿ ಪಡೆದುಕೊಂಡಿದ್ದೀರಾ?<br><strong>ಸೋನಿಯಾ</strong>: ಅವರಿಂದ ನಾನು ಸಬ್ ಕಾನ್ಷಸ್ ಆಗಿ ಪಡೆದುಕೊಂಡಿರಬಹುದು.</p>



<p><strong>ಪ್ರಶ್ನೆ</strong>: ಪ್ರಿಯಾಂಕಾ ಅವರು ಇಂದಿರಾಗಾಂಧಿಯರನ್ನು ಹೆಚ್ಚಾಗಿ ಹೋಲುತ್ತಾರೆ ಎಂಬ ಅಭಿಪ್ರಾಯವಿದೆ. ನಿಮ್ಮ ಪ್ರಕಾರ ಇಂದು ನೆಹರೂ ಕುಟುಂಬದಲ್ಲಿ ಯಾರು ಹೆಚ್ಚು ಇಂದಿರಾ ಗಾಂಧಿಯವರನ್ನು ಹೋಲುತ್ತಾರೆ?<br><strong>ಸೋನಿಯಾ</strong>: ನಮ್ಮ ಕುಟುಂಬದಲ್ಲಿ ಪ್ರತಿಯೊಬ್ಬರೂ ಇಂದಿರಾ ಗಾಂಧಿಯವರಿಂದ ಒಂದಲ್ಲಾ ಒಂದು ರೀತಿಯಲ್ಲಿ ಪ್ರಭಾವಕ್ಕೆ ಒಳಗಾಗಿದ್ದೇವೆ. ನಾನು ನನ್ನದೇ ರೀತಿ, ಪ್ರಿಯಾಂಕ, ರಾಹುಲ್ ಅವರದೇ ರೀತಿಯಲ್ಲಿ.</p>



<p><strong>ಪ್ರಶ್ನೆ</strong>: ನೀವು ಶ್ರೀಮತಿ ಗಾಂಧಿಯವರನ್ನು ಮೊದಲ ಬಾರಿಗೆ ಲಂಡನ್‌ನಲ್ಲಿ ಸಂತೋಷದ ಗಳಿಗೆಗಳಲ್ಲಿ ನೋಡಿದ್ದಿರಿ. ಆದರೆ ಕೊನೆಯ ಬಾರಿಗೆ ಅವರನ್ನು ನೋಡುವಾಗ ದುಃಖದ ಸಂದರ್ಭ. ೧೯೮೪ರ ಅಕ್ಟೋಬರ್ ೩೧ರ ಆ ದಿನ ಅವರು ನಿಮ್ಮ ತೋಳುಗಳಲ್ಲಿಯೇ ಕೊನೆಯುಸಿರೆಳೆದರು. ಈ ಬಗ್ಗೆ ನಿಮ್ಮ ನೆನಪುಗಳನ್ನು ಹಂಚಿಕೊಳ್ಳಿ.<br><strong>ಸೋನಿಯಾ</strong>: ಹೌದು. ಅವು ಅತ್ಯಂತ ಭೀಕರ ದಿನಗಳು. ಅವರ ಕೊಠಡಿಯ ಪಕ್ಕದಲ್ಲೇ ಇದ್ದ ನನ್ನ ಕೊಠಡಿಯಲ್ಲಿ ಇದ್ದೆ. ಅವು ದೀಪಾವಳಿಯ ಆರಂಭದ ದಿನಗಳು. ಹೊರಗೆ ಏನೋ ಸದ್ದು ಕೇಳಿದಾಗ ಮೊದಲು ದೀಪಾವಳಿಯ ಪಟಾಕಿ ಸದ್ದೆಂದುಕೊಂಡೆ. ಆದರೆ ಆ ಸದ್ದು ಸ್ವಲ್ಪ ವಿಚಿತ್ರವೆನಿಸಿದ್ದರಿಂದ ನನ್ನ<br>ಸಹಾಯಕಿಯನ್ನು ಕಳಿಸಿದೆ. ಆಕೆ ಜೋರಾಗಿ ಅಳುತ್ತಾ ವಾಪಾಸು ಬಂದಳು. ಆದರೆ ಇಂತಹದು ಸಂಭವಿಸಬಹುದೆಂದು ನಮಗೆ ನಿರೀಕ್ಷೆಯಿತ್ತು. ನಮ್ಮ ಅತ್ತೆಯವರೇ ಈ ಬಗ್ಗೆ ಮಾತಾಡಿದ್ದರು. ಅದರಲ್ಲೂ ನಿರ್ದಿಷ್ಟವಾಗಿ ರಾಹುಲ್ ಜೊತೆ ಇದನ್ನು ಮಾತಾಡಿದ್ದರು. ನಾನು ಕೂಡಲೇ ದೌಡಾಯಿಸಿದೆ. ಅಲ್ಲಿ ಹೋಗಿ ನೋಡಿದರೆ ಅತ್ತೆಯವರು ಬುಲೆಟ್ ಗಾಯಗಳಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಗ ಅಂಬ್ಯುಲೆನ್ಸ್ ಇರಲಿಲ್ಲ. ಅಂಬಾಸೆಡರ್ ಕಾರಿನ ಹಿಂದಿನ ಸೀಟಿನಲ್ಲಿ ನನ್ನ ತೋಳಿನಲ್ಲಿ ಅವರನ್ನು ಬಿಗಿಹಿಡಿದು ಕೂರಿಸಿಕೊಂಡಿದ್ದೆ. ಅಲ್ಲಿ ಬಹಳ ಟ್ರಾಫಿಕ್ ಇತ್ತು. ನಿಧಾನವಾಗಿ ಆಸ್ಪತ್ರೆ ತಲುಪಿದ್ದೆವು.</p>



<p><strong>ಪ್ರಶ್ನೆ</strong>: ಆ ಆಘಾತದಿಂದ ಹೊರಬರಲು ನಿಮಗೆ ಬಹಳ ಸಮಯ ಹಿಡಿಯಿತಲ್ಲವೇ?<br><strong>ಸೋನಿಯಾ</strong>: ಹೌದು. ರಾಜೀವ್, ರಾಹುಲ್, ಪ್ರಿಯಾಂಕಾ, ನಮ್ಮೆಲ್ಲರಿಗೂ.</p>



<p><strong>ಪ್ರಶ್ನೆ</strong>: ದೇಶಕ್ಕೆ ಇಂದಿರಾ ಗಾಂಧಿಯವರ ಕೊಡುಗೆಯನ್ನು ನೀವು ಹೇಗೆ ಗುರುತಿಸುತ್ತೀರಿ?<br><strong>ಸೋನಿಯಾ</strong>: ದೇಶಕ್ಕೆ ಅವರ ಮಹಾನ್ ಕೊಡುಗೆ ಏನೆಂದರೆ, ಭಾರತದ ಜನತೆಯ ಮೇಲೆ ಅವರಿಗಿದ್ದ ನಿಷ್ಠೆ ಹಾಗೂ ಭಕ್ತಿ. ಮಿಕ್ಕೆಲ್ಲವೂ ಇದರಿಂದಲೇ ಬಂದಂತವು.</p>



<p><strong>ಪ್ರಶ್ನೆ</strong>: ದೇಶದ ಜನತೆಯೊಂದಿಗೆ ಅವರಿಗಿದ್ದ ವಿಶೇಷ ಸಂಬಂಧವೇನು?<br><strong>ಸೋನಿಯಾ</strong>: ದೇಶದ ಜನತೆಯೊಂದಿಗೆ ಅವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಜನರ ಕಷ್ಟಗಳ ಬಗ್ಗೆ ಅವರು ತೀವ್ರ ಅನುಕಂಪ ಹೊಂದಿದ್ದರು. ಮತ್ತು ನೊಂದವರ ಬಗ್ಗೆ ಅವರಿಗೆ ಅತೀವ ಸಹಾನುಭೂತಿಯಿತ್ತು.</p>



<p><strong>ಪ್ರಶ್ನೆ</strong>: ೧೯೬೬ರಲ್ಲಿ ಭಾರತದ ಪ್ರಧಾನಿಯಾಗಿದ್ದವರು ಇಂದಿರಾ. ತಮ್ಮ ಸುತ್ತಲೂ ಪುರುಷ ರಾಜಕಾರಣಿಗಳನ್ನಿಟ್ಟುಕೊಂಡು ಗಡಸುತನದಲ್ಲಿ ರಾಜಕಾರಣ ನಡೆಸುತ್ತಿದ್ದರು. ಇದು ಅವರ ನಿರ್ಣಯಗಳ ಮೇಲೆ ಪರಿಣಾಮ ಬೀರಿತ್ತೇ?<br><strong>ಸೋನಿಯಾ</strong>: ನನಗೆ ಹಾಗೇನೂ ಅನ್ನಿಸುವುದಿಲ್ಲ. ನನಗೆ ನೆನಪಿರುವಂತೆ ಅವರೊಮ್ಮೆ ಒಂದು ಕಡೆ ಹೇಳಿದ್ದರು &#8211; ತಮಗೆ ತಾವು ಎಲ್ಲರೊಂದಿಗಿದ್ದಾಗ ಮಹಿಳೆ ಎಂದು ಅನ್ನಿಸುವುದೇ ಇಲ್ಲ ಎಂದು. ಅವರು ಪುರುಷರೊಂದಿಗೆ ಸಮಾನವಾಗಿಯೇ ಇರುತ್ತಿದ್ದರು.</p>



<p><strong>ಪ್ರಶ್ನೆ</strong>: ಅವರ ಮಹಾನ್ ವಿಜಯ ಎಂದರೆ ೧೯೭೧ರ ವಿಜಯ. ಅದು ಅವರನ್ನು ಯಾವುದಾದರೂ ರೀತಿಯಲ್ಲಿ ಬದಲಾಯಿಸಿತೇ?<br><strong>ಸೋನಿಯಾ</strong>: ಖಂಡಿತಾ ಇಲ್ಲ. ನಿಜ ಹೇಳಬೇಕೆಂದರೆ ಪೂರ್ವ ಬಾಂಗ್ಲಾದೇಶದ ಜನರ ಬಗ್ಗೆ ಅವರು ತೀವ್ರ ಅನುಕಂಪ ವ್ಯಕ್ತಪಡಿಸುತ್ತಿದ್ದರು. ಪೂರ್ವ ಬಾಂಗ್ಲಾದೇಶದ ಜನರ ಮೇಲೆ ನಡೆಸಿದ್ದ ಭೀಕರ ದೌರ್ಜನ್ಯಗಳ ಬಗ್ಗೆ ಕೇಳುತ್ತಾ, ತಿಳಿಯುತ್ತಾ ಇದ್ದಾಗ ಅವರು ನಿಜಕ್ಕೂ ಪ್ರಾಮಾಣಿಕವಾಗಿ ತಮಗಾಗುವ ಸಂಕಟವನ್ನು ವ್ಯಕ್ತಪಡಿಸುತ್ತಿದ್ದರು. ಅಲ್ಲಿ ಏನೇನೆಲ್ಲಾ ನಡೆಯುತ್ತಿದೆ ಎಂದು ನಮಗೆ ಹೇಳುತ್ತಿದ್ದರು.<br>ಪ್ರಶ್ನೆ: ೧೯೭೧ರ ನಂತರ ಜನರು ಅವರನ್ನು ದುರ್ಗಾಮಾತೆ ಎಂದು ಕರೆಯತೊಡಗಿದ್ದರು. ಅವರಿಗೂ ಅದೇ ಭಾವನೆ ಇತ್ತೇ?<br>ಸೋನಿಯಾ: ಖಂಡಿತಾ ಇರಲಿಲ್ಲ.</p>



<p><strong>ಪ್ರಶ್ನೆ</strong>: ಇಂದಿರಾ ಬಿಟ್ಟುಹೋದ ತ್ಯಾಗ ಮನೋಭಾವನೆಯು ಅವರಿಗೆ ತಮ್ಮ ತಂದೆಯಿಂದ ಮತ್ತು ತಾವೂ ಭಾಗವಹಿಸಿದ್ದ ಸ್ವಾತಂತ್ರ್ಯ ಹೋರಾಟದಿಂದ ಬಂದಿದ್ದ ಗುಣವೇ?<br><strong>ಸೋನಿಯಾ</strong>: ಆ ಸಂದರ್ಭದಲ್ಲಿಯೇ ಅವರು ಬೆಳೆದು ಬಂದದ್ದು. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸುತ್ತಿದ್ದ ಹಿರಿಯ ವ್ಯಕ್ತಿಗಳ ಸಖ್ಯದಲ್ಲೇ ಅವರು ಬೆಳೆದಿದ್ದರಲ್ಲದೇ ಆ ಹಿರಿಯರಿಗೆ ಅಗತ್ಯವಿದ್ದ ಎಲ್ಲ ಸಹಕಾರವನ್ನೂ ನೀಡುತ್ತಿದ್ದರು. ಹೀಗಾಗಿ ದೇಶಭಕ್ತಿ ಎಂಬುದು ಅವರಲ್ಲಿ ಬಲವಾಗಿಯೇ ಇದ್ದ ಗುಣವಾಗಿತ್ತು.</p>



<figure class="wp-block-image size-full"><img loading="lazy" decoding="async" width="600" height="338" src="https://peepalmedia.com/wp-content/uploads/2022/10/sonia-678-1607493707.jpg" alt="" class="wp-image-13488" srcset="https://peepalmedia.com/wp-content/uploads/2022/10/sonia-678-1607493707.jpg 600w, https://peepalmedia.com/wp-content/uploads/2022/10/sonia-678-1607493707-300x169.jpg 300w, https://peepalmedia.com/wp-content/uploads/2022/10/sonia-678-1607493707-150x85.jpg 150w" sizes="auto, (max-width: 600px) 100vw, 600px" /></figure>



<p><strong>ಪ್ರಶ್ನೆ</strong>: ಅವರಿಗೆ ಉತ್ತಮ ಹಾಸ್ಯಪ್ರಜ್ಞೆಯೂ ಇತ್ತಂತೆ…<br><strong>ಸೋನಿಯಾ</strong>: ಖಂಡಿತವಾಗಿಯೂ ಅವರಿಗೆ ಅದ್ಭುತ ಹಾಸ್ಯಪ್ರಜ್ಞೆ ಇತ್ತು. ಅವರೊಬ್ಬ ಅದ್ಭುತ ಪತ್ರ ಬರಹಗಾರರೂ ಆಗಿದ್ದರು. ತಮ್ಮ ಮಿತ್ರ ಬಳಗದವರಿಗೆ, ಸಂಬಂಧಿಕರಿಗೆ, ಸಹೋದ್ಯೋಗಿಗಳಿಗೆ ನನಗೂ ಬರೆಯುತ್ತಿದ್ದರು. ಇತರ ಕುಟುಂಬ ಸದಸ್ಯರಿಗೂ ಬರೆಯುತ್ತಿದ್ದರು. ಚಿಕ್ಕ ಚಿಕ್ಕ ನೋಟ್ಸ್ ಬರೆಯುತ್ತಿದ್ದರು. ಬಹಳ ಜನರಿಗೆ ತಿಳಿದಿರದ ಅವರ ವಿಶಿಷ್ಟ ಗುಣವೆಂದರೆ ಅವರು ಪ್ರತಿಯೊಂದರಲ್ಲಿ, ಪ್ರತಿಯೊಬ್ಬರಲ್ಲಿ ಆಸಕ್ತಿ ತೋರುತ್ತಿದ್ದವರಾಗಿದ್ದರು. ಅವರಿಗೆ ಭಾರತೀಯ, ಪಾಶ್ಚಿಮಾತ್ಯ, ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿಯಿತ್ತು, ಶಾಸ್ತ್ರೀಯ ಕಲೆಯಲ್ಲಿ, ಪರಂಪರೆಯಲ್ಲಿ, ಜಾನಪದ ಕಲೆ ಹಾಗೂ ಜಾನಪದ ಸಂಗೀತದಲ್ಲಿ ಆಸಕ್ತಿಯಿತ್ತು. ಪರಿಸರ &#8211; ಹೂವು, ಮರ, ಪರ್ವತ ಹೀಗೆ ಎಲ್ಲದರಲ್ಲೂ ಅವರಿಗೆ ವಿಶೇಷ ಆಸಕ್ತಿಯಿತ್ತು.</p>



<p><strong>ಪ್ರಶ್ನೆ</strong>: ಅವರ ಛಾಯಾಚಿತ್ರಗಳನ್ನು ನೋಡುತ್ತಾ ನಿಮ್ಮ ಮನಸ್ಸು ಅವರೊಂದಿಗಿದ್ದ ಕ್ಷಣಗಳಿಗೆ ಜಾರಿತ್ತೇ?<br><strong>ಸೋನಿಯಾ</strong>: ಖಂಡಿತವಾಗಿಯೂ. ಈಗಲೂ ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ.</p>



<p><br><strong>ಪ್ರಶ್ನೆ</strong>: ಇಂದು ಇಂದಿರಾಗಾಂಧಿಯವರ ಪುಣ್ಯತಿಥಿ ಆಚರಿಸುತ್ತಿರುವ ಸಂದರ್ಭದಲ್ಲಿ ಶ್ರೀಮತಿ ಗಾಂಧಿಯವರನ್ನು ನೋಡಿಯೇ ಇರದ ಹೊಸ ಪೀಳಿಗೆಯೊಂದು ಕಣ್ಣೆದುರಿಗಿದೆ. ಈ ಯುವ ಪೀಳಿಗೆ ಇಂದಿರಾಗಾಂಧಿಯವರನ್ನು ಹೇಗೆ ಸ್ಮರಿಸಬೇಕೆಂದು ಆಶಿಸುತ್ತೀರಿ?</p>



<p><strong>ಸೋನಿಯಾ</strong>: ತನ್ನ ಜನರಿಗಾಗಿ ತನ್ನನ್ನು ತಾನು ಸಂಪೂರ್ಣವಾಗಿ ಮುಡಿಪಾಗಿಟ್ಟುಕೊಂಡು ಕೊನೆಗೆ ತನ್ನ ದೇಶದ ಜನರಿಗಾಗಿ ತನ್ನ ಪ್ರಾಣವನ್ನೂ ಮುಡಿಪಾಗಿಟ್ಟ ಒಬ್ಬ ಮಹಿಳೆಯಾಗಿ.</p>
]]></content:encoded>
					
		
		
			</item>
		<item>
		<title>ʼನೆಹರೂ ಇಲ್ಲದೆ ಅಮೃತ ಮಹೋತ್ಸವ ಯಶಸ್ವಿಯಾಗುವುದಿಲ್ಲʼ: ಅಶೋಕ್‌ ಗೆಹ್ಲೋಟ್‌</title>
		<link>https://peepalmedia.com/neharu-illade-amrutha-mahothsava-yashasviyaguvudilla-ashok-gelhot/</link>
		
		<dc:creator><![CDATA[Peepal Media]]></dc:creator>
		<pubDate>Mon, 22 Aug 2022 11:01:55 +0000</pubDate>
				<category><![CDATA[ರಾಜಕೀಯ]]></category>
		<category><![CDATA[ರಾಜ್ಯ]]></category>
		<category><![CDATA[ashok gehlot]]></category>
		<category><![CDATA[india]]></category>
		<category><![CDATA[indira gandhi]]></category>
		<category><![CDATA[neharu]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Rajasthan]]></category>
		<guid isPermaLink="false">https://peepalmedia.com/?p=2580</guid>

					<description><![CDATA[ರಾಜಸ್ಥಾನ: ಪಂಡಿತ್‌ ಜವಾಹರಲಾಲ್‌ ನೆಹರೂ ಇಲ್ಲದೆ ಯಾವುದೇ ಅಮೃತ ಮಹೋತ್ಸವ ಯಶಸ್ವಿಯಾಗುವುದಿಲ್ಲ ಎಂದು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ. ಬಿಜೆಪಿಯ ಆಡಳಿತದಲ್ಲಿ ಇಂದಿರಾ ಗಾಂಧಿಯವರ ಬಗ್ಗೆ ಪ್ರಸ್ತಾಪವೇ ಇಲ್ಲ. ಅನೇಕ ಮಹಾನ್‌ ಸ್ವಾತಂತ್ರ್ಯ ಹೋರಾಟಗಾರರು ಇದ್ದರು ಅವರ ಬಗ್ಗೆ ಮಾತನಾಡುವುದಿಲ್ಲ ಮತ್ತು&#160; ಮೋದಿ ಸರ್ಕಾರಕ್ಕೆ ಇತಿಹಾಸದ ಬಗ್ಗೆ ಸತ್ಯ ಹೇಳಲು ಇಷ್ಟವಿಲ್ಲ ಎಂದು ಕಿಡಿಕಾರಿದರು.]]></description>
										<content:encoded><![CDATA[
<p class="has-medium-font-size"><strong>ರಾಜಸ್ಥಾನ:</strong> ಪಂಡಿತ್‌ ಜವಾಹರಲಾಲ್‌ ನೆಹರೂ ಇಲ್ಲದೆ ಯಾವುದೇ ಅಮೃತ ಮಹೋತ್ಸವ ಯಶಸ್ವಿಯಾಗುವುದಿಲ್ಲ ಎಂದು ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಹೇಳಿದ್ದಾರೆ.</p>



<p class="has-medium-font-size">ಬಿಜೆಪಿಯ ಆಡಳಿತದಲ್ಲಿ ಇಂದಿರಾ ಗಾಂಧಿಯವರ ಬಗ್ಗೆ ಪ್ರಸ್ತಾಪವೇ ಇಲ್ಲ. ಅನೇಕ ಮಹಾನ್‌ ಸ್ವಾತಂತ್ರ್ಯ ಹೋರಾಟಗಾರರು ಇದ್ದರು ಅವರ ಬಗ್ಗೆ ಮಾತನಾಡುವುದಿಲ್ಲ ಮತ್ತು&nbsp; ಮೋದಿ ಸರ್ಕಾರಕ್ಕೆ ಇತಿಹಾಸದ ಬಗ್ಗೆ ಸತ್ಯ ಹೇಳಲು ಇಷ್ಟವಿಲ್ಲ ಎಂದು ಕಿಡಿಕಾರಿದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">No &#39;Amrit Mahotsav&#39; can be successful without Pandit Jawaharlal Nehru. There is no mention of Indira Gandhi in their (BJP) regime. There were many great freedom fighters but they don&#39;t talk about them&#8230;Modi govt doesn&#39;t want to tell truth about history: Rajasthan CM Ashok Gehlot <a href="https://t.co/7TIc7FnYrH">pic.twitter.com/7TIc7FnYrH</a></p>&mdash; ANI MP/CG/Rajasthan (@ANI_MP_CG_RJ) <a href="https://twitter.com/ANI_MP_CG_RJ/status/1561662720755519488?ref_src=twsrc%5Etfw">August 22, 2022</a></blockquote><script async src="https://platform.twitter.com/widgets.js" charset="utf-8"></script>
</div></figure>
]]></content:encoded>
					
		
		
			</item>
	</channel>
</rss>
