<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>isro &#8211; Peepal Media</title>
	<atom:link href="https://peepalmedia.com/tag/isro/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 22 Aug 2024 06:51:30 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>isro &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಚಂದ್ರಯಾನ-3: ಚಂದ್ರನ ಮೇಲೆ ಶಿಲಾಪಾಕದ ಸಾಗರ!</title>
		<link>https://peepalmedia.com/magma-ocean-on-moon-chandrayan-3/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 22 Aug 2024 06:51:30 +0000</pubDate>
				<category><![CDATA[ವಿಜ್ಞಾನ-ತಂತ್ರಜ್ಞಾನ]]></category>
		<category><![CDATA[Chandrayan 3]]></category>
		<category><![CDATA[isro]]></category>
		<category><![CDATA[magma ocean]]></category>
		<category><![CDATA[Moon]]></category>
		<guid isPermaLink="false">https://peepalmedia.com/?p=44260</guid>

					<description><![CDATA[ಬೆಂಗಳೂರು: ಚಂದ್ರನ ಮೇಲ್ಮೈ ತಂಪಾಗುವ ಮೊದಲು ಶಿಲಾಪಾಕ ಸಾಗರದಲ್ಲಿ (Ocean of Magma) ಆವರಿಸಿತ್ತು, ನಂತರ ನಿರಂತರವಾಗಿ ಉಲ್ಕಾಪಾತವಾಯಿತು. ಇದು ಕೆಳ ಪದರಗಳಲ್ಲಿ ಮುಳುಗಿದ್ದ ಭಾರವಾದ ಖನಿಜಗಳನ್ನು ಅಗೆಯಿತು ಎಂದು ಭಾರತೀಯ ಸಂಶೋಧಕರ ತಂಡವು ಆಗಸ್ಟ್ 21 ರಂದು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ತಿಳಿಸಿದೆ. ಶಿಲಾಪಾಕ ಸಾಗರವು ಚಂದ್ರನ ಇಡೀ ಮೇಲ್ಮೈಯನ್ನು ಆವರಿಸಿತ್ತೇ ಎಂಬ ಹಿಂದಿನ ಪ್ರಶ್ನೆಗೆ ಉತ್ತರವನ್ನು ನೀಡಿದೆ.. ಶಿಲಾಪಾಕ ಸಾಗರದ ಸಿದ್ಧಾಂತ &#8211; The theory of a magma ocean [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ಚಂದ್ರನ ಮೇಲ್ಮೈ ತಂಪಾಗುವ ಮೊದಲು ಶಿಲಾಪಾಕ ಸಾಗರದಲ್ಲಿ (Ocean of Magma) ಆವರಿಸಿತ್ತು, ನಂತರ ನಿರಂತರವಾಗಿ ಉಲ್ಕಾಪಾತವಾಯಿತು. ಇದು ಕೆಳ ಪದರಗಳಲ್ಲಿ ಮುಳುಗಿದ್ದ ಭಾರವಾದ ಖನಿಜಗಳನ್ನು ಅಗೆಯಿತು ಎಂದು ಭಾರತೀಯ ಸಂಶೋಧಕರ ತಂಡವು ಆಗಸ್ಟ್ 21 ರಂದು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಿದ ಅಧ್ಯಯನ ವರದಿಯಲ್ಲಿ ತಿಳಿಸಿದೆ.</p>



<p>ಶಿಲಾಪಾಕ ಸಾಗರವು ಚಂದ್ರನ ಇಡೀ ಮೇಲ್ಮೈಯನ್ನು ಆವರಿಸಿತ್ತೇ ಎಂಬ ಹಿಂದಿನ ಪ್ರಶ್ನೆಗೆ ಉತ್ತರವನ್ನು ನೀಡಿದೆ..</p>



<p>ಶಿಲಾಪಾಕ ಸಾಗರದ ಸಿದ್ಧಾಂತ &#8211; <strong>The theory of a magma ocean</strong></p>



<p>ಒಂದು ಸಿದ್ಧಾಂತದ ಪ್ರಕಾರ, ಚಂದ್ರನ ಮೇಲ್ಮೈಯ 1,000 ಕಿಲೋಮೀಟರ್‌ಗಳು ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ಹುಟ್ಟಿ ತಕ್ಷಣ ಕರಗಿದ ಶಿಲಾಪಾಕದಿಂದ ಮುಚ್ಚಲ್ಪಟ್ಟವು.</p>



<p>ಮುಂದಿನ ನೂರಾರು ಮಿಲಿಯನ್ ವರ್ಷಗಳಲ್ಲಿ, ಪೈರೋಕ್ಸೀನ್ ಮತ್ತು ಆಲಿವಿನ್ (ಇವುಗಳು ಭೂಮಿಯ ಮ್ಯಾಂಟಲ್‌ನ ಮೇಲೂ ಇರುವ ಕಲ್ಲುಗಳ್ನು ರೂಪಿಸುವ ಖನಿಜ ಗುಂಪುಗಳು) ನಂತಹ ಭಾರವಾದ ಖನಿಜಗಳು ಪ್ಲ್ಯಾಜಿಯೋಕ್ಲೇಸ್ (ಫೆಲ್ಡ್ಸ್ಪಾರ್ ಗ್ರೂಪ್ ಎಂದು ಕರೆಯಲ್ಪಡುವ ಖನಿಜ, ಇದರಲ್ಲಿ ಇದು ಅಲ್ಯೂಮಿನಾ ಮತ್ತು ಸಿಲಿಕಾ ಎರಡೂ ಇರುತ್ತವೆ) ನಂತಹ ಹಗುರವಾದ ಅಂಶಗಳ ಕೆಳಗೆ ಬಂದು ಸೇರಿಕೊಂಡವು. ಚಂದ್ರನು ತಣ್ಣಗಾಗುತ್ತಿದ್ದಂತೆ, ಈ ಅಂಶಗಳು ಪದರಗಳಾಗಿ ನೆಲೆಗೊಂಡವು.</p>



<p>ಸಮಭಾಜಕ ರೇಖೆಯ ಸಮೀಪದಿಂದ ಅಪೊಲೊ ಮತ್ತು ಲೂನಾ ಮಿಷನ್‌ಗಳ ರಾಕ್ ಮಾದರಿಗಳು ಮತ್ತು ಮಧ್ಯ ಅಕ್ಷಾಂಶದಿಂದ ಚೀನಾ ನಡೆಸಿದ ಕಾರ್ಯಾಚರಣೆಗಳು ಈ ಸಿದ್ಧಾಂತವನ್ನು ಎತ್ತಿಹಿಡಿದಿವೆ. ಧ್ರುವಗಳ ಸಮೀಪದಿಂದ ಚಂದ್ರಯಾನ-3 ನೀಡಿದ ಡೇಟಾವನ್ನು ಬಳಸಿಕೊಂಡು ಪ್ರಸ್ತುತ ಅಧ್ಯಯನವು ಸಿದ್ದಾಂತಕ್ಕೆ ಹೆಚ್ಚಿನ ಪುರಾವೆಗಳನ್ನು ಒದಗಿಸುತ್ತದೆ.</p>



<p>ಭಾರತೀಯ ಸಂಶೋಧಕರ ತಂಡವು ಚಂದ್ರನ ಸುಮಾರು 70 ಡಿಗ್ರಿ ಅಕ್ಷಾಂಶದಲ್ಲಿ ಚಂದ್ರನ ಮಣ್ಣಿನಲ್ಲಿರುವ ಅಂಶಗಳನ್ನು ಅಧ್ಯಯನ ಮಾಡಿದೆ. ಇವರು ಕಳೆದ ಆಗಸ್ಟ್‌ನಲ್ಲಿ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್‌ನಿಂದ ಕಳುಹಿಸಲಾದ ಪ್ರಗ್ಯಾನ್ ರೋವರ್‌ನಲ್ಲಿ ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ (ಎಪಿಎಕ್ಸ್‌ಎಸ್) ಬಳಸಿ 23 ಪರಿವೀಕ್ಷಣೆಗಳನ್ನು ಮಾಡಿದ್ದಾರೆ.</p>



<p>ಇದು ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ (ಪಿಆರ್‌ಎಲ್) ಮತ್ತು ಅಹಮದಾಬಾದ್‌ನ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ, ಉತ್ತರಾಖಂಡದ ಶ್ರೀನಗರದ ಹೇಮಾವತಿ ನಂದನ್ ಬಹುಗುಣ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವನ್ನು ಒಳಗೊಂಡ ತಂಡವಾಗಿದೆ.</p>



<p>ಕೆಳಗಿನ ಮತ್ತು ಮಧ್ಯ-ಅಕ್ಷಾಂಶಗಳಿಂದ ಬಂಡೆಗಳನ್ನು ಅಧ್ಯಯನ ಮಾಡಿದ ಹಿಂದಿನ ಕಾರ್ಯಾಚರಣೆಗಳಂತೆ, ಅಧ್ಯಯನವು ಪ್ಲ್ಯಾಜಿಯೋಕ್ಲೇಸ್‌ನಲ್ಲಿ ಸಮೃದ್ಧವಾಗಿರುವ ಫೆರೋನ್ ಅನೋರ್ಥೋಸೈಟ್‌ನ ಬಂಡೆಗಳನ್ನು ಕಂಡುಹಿಡಿದಿದೆ.</p>



<p>&#8220;ಈ ಬಂಡೆಗಳು ಚಂದ್ರನ ದಕ್ಷಿಣ ಪ್ರದೇಶವು ಈ ಬಂಡೆಗಳು ಹೆಚ್ಚಾಗಿರುವುದು ಚಂದ್ರನಾದ್ಯಂತ ಇವು ಹರಡಿಕೊಂಡಿವೆ ಎಂಬುದಕ್ಕೆ ಬಲವಾದ ಪುರಾವೆಗಳನ್ನು ನೀಡುತ್ತದೆ, ಇದು ಶಿಲಾಪಾಕ ಸಾಗರದಿಂದ ಮಾತ್ರ ಸಂಭವಿಸುತ್ತದೆ&#8221; ಎಂದು ಅಧ್ಯಯನದ ಲೇಖಕರಲ್ಲಿ ಒಬ್ಬರಾದ <a href="https://www.prl.res.in/~notices/websitedocs/2024/08/21/APXS_Science-Press-Release_ISRO-on-21-August-2030hrs_PRL-21-08-2024-18-57-02.pdf">ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಯ</a> ಸಂತೋಷ್ ವಿ. ವಡವಾಲೆ ಹೇಳಿದರು.</p>



<p>ಆದರೂ ಈ ಅಕ್ಷಾಂಶಗಳಲ್ಲಿ ಈ ರೀತಿಯ ಬಂಡೆಗಳು ಒಂದೇ ರೀತಿಯದ್ದಾಗಿಲ್ಲ ಎಂದು ಅಧ್ಯಯನವು ಕಂಡುಹಿಡಿದಿದೆ: ಸುಮಾರು ನಾಲ್ಕನೇ ಒಂದು ಭಾಗದಷ್ಟು ಬಂಡೆಗಳು ಹಗುರವಾದ ಮೆಗ್ನೀಸಿಯಮ್ ಖನಿಜಗಳು, ಪೈರೋಕ್ಸೀನ್ ಮತ್ತು ಆಲಿವೈನ್ ಅನ್ನು ಒಳಗೊಂಡಿವೆ.</p>



<p>ಈ ಹಗುರವಾದ ಖನಿಜಾಂಶಗಳನ್ನು ನಂತರ ಬಿದ್ದ ಉಲ್ಕೆಗಳಿಂದ ಶತಕೋಟಿ ವರ್ಷಗಳವರೆಗೆ ಅಗೆಯಲ್ಪಟ್ಟವು, ಇದು ಬೇಸಿನ್‌ಗಳೆಂದು ಕರೆಯಲ್ಪಡುವ ದೊಡ್ಡ ಕುಳಿಗಳ ಒಳಗೆ ವಿವಿಧ ಗಾತ್ರದ ಕುಳಿಗಳನ್ನು ರೂಪಿಸಿತು. ಪ್ರತಿಯೊಂದು ಉಲ್ಕಾಶಿಲೆಯು ಈ ಹಗುರವಾದ ಬಂಡೆಗಳ ಬಿಟ್‌ಗಳು ಮತ್ತು ತುಂಡುಗಳನ್ನು ಮೇಲಿನ ಪದರಗಳಿಗೆ ಕೊಂಡೊಯ್ದಿವೆ, ಈ ಅಕ್ಷಾಂಶಗಳಲ್ಲಿ ಬೇರೆ ಬೇರೆ ಪ್ರಕಾರಗಳ ಕಲ್ಲಿನ &nbsp;ಮಿಶ್ರಣವನ್ನು ಉಂಟುಮಾಡಿವೆ. ಎಲ್ಲಾ ತುಣುಕುಗಳೂ ಒಟ್ಟಾಗಿ ಬರುತ್ತಿವೆ ಎಂದು ವಡವಾಲೆ ಹೇಳಿದ್ದಾರೆ.</p>
]]></content:encoded>
					
		
		
			</item>
		<item>
		<title>ಶಿವನ್‌ ಬಗ್ಗೆ ಆಪಾದಿತ ಹೇಳಿಕೆ ವಿವಾದ: ಆತ್ಮಚರಿತ್ರೆಯ ಪ್ರಕಟಣೆಯನ್ನು ಹಿಂಪಡೆದ ಇಸ್ರೋ ಅಧ್ಯಕ್ಷ ಸೋಮನಾಥ್</title>
		<link>https://peepalmedia.com/isro-chief-withdraws-autobiography/</link>
		
		<dc:creator><![CDATA[Charan Aivarnad]]></dc:creator>
		<pubDate>Mon, 06 Nov 2023 06:19:09 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[chandrayana 2]]></category>
		<category><![CDATA[chandrayana 3]]></category>
		<category><![CDATA[india]]></category>
		<category><![CDATA[isro]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[S Somanath]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=31239</guid>

					<description><![CDATA[ಬೆಂಗಳೂರು: ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಪುಸ್ತಕದಲ್ಲಿ ಹಿಂದಿನ ಅಧ್ಯಕ್ಷ ಕೆ ಶಿವನ್ ಅವರ ಬಗ್ಗೆ ಕೆಲವು ಆಪಾದಿತ ಹೇಳಿಕೆಗಳನ್ನು ನೀಡಿದ್ದು, ವಿವಾದದ ನಂತರ ಶನಿವಾರ ತಮ್ಮ ಆತ್ಮಚರಿತ್ರೆಯ ಪ್ರಕಟಣೆಯನ್ನು ಹಿಂಪಡೆದಿರುವುದಾಗಿ ಹೇಳಿದ್ದಾರೆ. ಮಲಯಾಳ ಮನೋರಮಾ ವರದಿಯನ್ನು ಅನುಸರಿಸಿ, ʼನಿಲವು ಕುಡಿಚ ಸಿಂಹಂಗಲ್ (ಬೆಳದಿಂಗಳನ್ನು ಹೀರಿದ ಸಿಂಹಗಳು ʼ ಎಂಬ ಪುಸ್ತಕದಲ್ಲಿ ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಸೋಮನಾಥ್ ಅವರಿಗೆ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಸ್ಥಾನ ಸಿಗದಂತೆ ತಡೆಯಲು ಶಿವನ್ ಯತ್ನಿಸಿದ್ದಾರೆ ಎಂದು ಮಲಯಾಳ ಮನೋರಮಾ [&#8230;]]]></description>
										<content:encoded><![CDATA[
<p><strong>ಬೆಂಗಳೂರು: </strong>ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಪುಸ್ತಕದಲ್ಲಿ ಹಿಂದಿನ ಅಧ್ಯಕ್ಷ ಕೆ ಶಿವನ್ ಅವರ ಬಗ್ಗೆ ಕೆಲವು ಆಪಾದಿತ ಹೇಳಿಕೆಗಳನ್ನು ನೀಡಿದ್ದು, ವಿವಾದದ ನಂತರ ಶನಿವಾರ ತಮ್ಮ ಆತ್ಮಚರಿತ್ರೆಯ ಪ್ರಕಟಣೆಯನ್ನು ಹಿಂಪಡೆದಿರುವುದಾಗಿ ಹೇಳಿದ್ದಾರೆ.</p>



<p>ಮಲಯಾಳ ಮನೋರಮಾ ವರದಿಯನ್ನು ಅನುಸರಿಸಿ, ʼನಿಲವು ಕುಡಿಚ ಸಿಂಹಂಗಲ್ (ಬೆಳದಿಂಗಳನ್ನು ಹೀರಿದ ಸಿಂಹಗಳು ʼ ಎಂಬ ಪುಸ್ತಕದಲ್ಲಿ ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.</p>



<p>ಸೋಮನಾಥ್ ಅವರಿಗೆ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ಸ್ಥಾನ ಸಿಗದಂತೆ ತಡೆಯಲು ಶಿವನ್ ಯತ್ನಿಸಿದ್ದಾರೆ ಎಂದು <a href="https://www.manoramaonline.com/news/kerala/2023/11/03/k-sivan-tried-to-prevent-me-from-becoming-chairman-isro-chairman-s-somanath-against-ex-chairman.html" data-type="link" data-id="https://www.manoramaonline.com/news/kerala/2023/11/03/k-sivan-tried-to-prevent-me-from-becoming-chairman-isro-chairman-s-somanath-against-ex-chairman.html">ಮಲಯಾಳ ಮನೋರಮಾ ವರದಿ</a> ಮಾಡಿತ್ತು.</p>


<div class="wp-block-image">
<figure class="aligncenter size-full"><img fetchpriority="high" decoding="async" width="293" height="465" src="https://peepalmedia.com/wp-content/uploads/2023/11/Nilavu-Kudicha-Simhangal-1.jpg" alt="" class="wp-image-31242" srcset="https://peepalmedia.com/wp-content/uploads/2023/11/Nilavu-Kudicha-Simhangal-1.jpg 293w, https://peepalmedia.com/wp-content/uploads/2023/11/Nilavu-Kudicha-Simhangal-1-189x300.jpg 189w, https://peepalmedia.com/wp-content/uploads/2023/11/Nilavu-Kudicha-Simhangal-1-150x238.jpg 150w" sizes="(max-width: 293px) 100vw, 293px" /><figcaption class="wp-element-caption">ಇಸ್ರೋ ಅಧ್ಯಕ್ಷ ಸೋಮನಾಥ್ ಆತ್ಮಕಥೆ: ನಿಲವು ಕುಡಿಚ ಸಿಂಹಂಗಲ್</figcaption></figure></div>


<p>2018 ರಲ್ಲಿ ಇಸ್ರೋ ಅಧ್ಯಕ್ಷರಾಗಿ ಕಿರಣ್ ಕುಮಾರ್ ಅವರ ಅಧಿಕಾರಾವಧಿ ಕೊನೆಗೊಂಡಾಗ, ಅವರ ಸ್ಥಾನಕ್ಕೆ ಸೋಮನಾಥ್ ಅವರ ಹೆಸರು ಶಿವನ್ ಜೊತೆಗೆ ಕಾಣಿಸಿಕೊಂಡಿತ್ತು. ಆದರೂ, ಶಿವನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಶಿವನ್ ಅವರು ತಮ್ಮ ನಿವೃತ್ತಿಯ ಮೊದಲು ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸಲು ಪ್ರಯತ್ನಿಸಿದ್ದರು ಎಂದು ವರದಿಯಾಗಿತ್ತು.</p>



<p>ಕೆಲವರು ತಮ್ಮ ಪುಸ್ತಕವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸೋಮನಾಥ್ ಶನಿವಾರ ದಿ ಹಿಂದೂಗೆ ತಿಳಿಸಿದ್ದು, &#8220;ಡಾ ಶಿವನ್ ನನ್ನನ್ನು ಅಧ್ಯಕ್ಷರಾಗದಂತೆ ತಡೆಯಲು ಪ್ರಯತ್ನಿಸಿದರು ಎಂದು ನಾನು ಎಲ್ಲಿಯೂ ಹೇಳಿಲ್ಲ&#8221; ಎಂದು ಅವರು ತಿಳಿಸಿದ್ದಾರೆ. &#8220;ಬಾಹ್ಯಾಕಾಶ ಆಯೋಗದ ಸದಸ್ಯರಾಗುವುದ ಸಾಮಾನ್ಯವಾಗಿ [ಇಸ್ರೋ ಅಧ್ಯಕ್ಷ ಸ್ಥಾನಕ್ಕೆ] ಮೊದಲ ಮೆಟ್ಟಿಲು ಎಂದು ಭಾವಿಸಲಾಗುತ್ತದೆ ಎಂದು ನಾನು ಹೇಳಿದ್ದೇನೆ. ಆದರೂ, ಇನ್ನೊಂದು ISRO ಕೇಂದ್ರದ ನಿರ್ದೇಶಕರ ಆ ಸ್ಥಾನಕ್ಕೆ ನೇಮಿಸಲಾಯಿತು, ಆದ್ದರಿಂದ ಸ್ವಾಭಾವಿಕವಾಗಿ ಅದು ನನ್ನ ಅಧ್ಯಕ್ಷ ಸ್ಥಾನದ ಅವಕಾಶಗಳನ್ನು ಕಸಿದುಕೊಂಡಿತು,” ಎಂದು ಸೋಮನಾಥ್‌ ತಿಳಿಸಿದ್ದಾರೆ.</p>


<div class="wp-block-image">
<figure class="aligncenter size-full"><img decoding="async" width="379" height="518" src="https://peepalmedia.com/wp-content/uploads/2023/11/cover-page-2.jpg" alt="" class="wp-image-31243" srcset="https://peepalmedia.com/wp-content/uploads/2023/11/cover-page-2.jpg 379w, https://peepalmedia.com/wp-content/uploads/2023/11/cover-page-2-219x300.jpg 219w, https://peepalmedia.com/wp-content/uploads/2023/11/cover-page-2-150x205.jpg 150w, https://peepalmedia.com/wp-content/uploads/2023/11/cover-page-2-300x410.jpg 300w" sizes="(max-width: 379px) 100vw, 379px" /><figcaption class="wp-element-caption">ಇಸ್ರೋ ಅಧ್ಯಕ್ಷ ಸೋಮನಾಥ್ ಆತ್ಮಕಥೆ: ನಿಲವು ಕುಡಿಚ ಸಿಂಹಂಗಲ್</figcaption></figure></div>


<p>ಪುಸ್ತಕವನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ ಎಂದಿರುವ ಅವರು, &#8220;ನನ್ನ ಪ್ರಕಾಶಕರು ಕೆಲವು ಪ್ರತಿಗಳನ್ನು ಬಿಡುಗಡೆ ಮಾಡಿರಬಹುದು &#8230; ಆದರೆ ಈ ಎಲ್ಲಾ ವಿವಾದದ ನಂತರ, ನಾನು ಪ್ರಕಟಣೆಯನ್ನು ತಡೆಹಿಡಿಯಲು ನಿರ್ಧರಿಸಿದ್ದೇನೆ&#8221; ಎಂದು ಇಸ್ರೋ ಅಧ್ಯಕ್ಷರು ಹೇಳಿದ್ದಾರೆ.</p>



<p>ಚಂದ್ರಯಾನ-2 ಮಿಷನ್‌ನ ವೈಫಲ್ಯದ ಘೋಷಣೆಯಲ್ಲಿ ಅಸ್ಪಷ್ಟತೆ ಇತ್ತು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದನ್ನು ಸೋಮನಾಥ್ ಒಪ್ಪಿಕೊಂಡಿದ್ದಾರೆ.</p>



<p>ಚಂದ್ರನ ಮೇಲಿನ ಕಾರ್ಯಾಚರಣೆಯನ್ನು ಜುಲೈ 15, 2019 ಕ್ಕೆ ನಿಗದಿಪಡಿಸಲಾಗಿತ್ತು, ಆದರೆ ಉಡಾವಣೆಗೆ ಒಂದು ಗಂಟೆ ಮೊದಲು ಅದನ್ನು ರದ್ದುಗೊಳಿಸಲಾಗಿತ್ತು. ಅಂತಿಮವಾಗಿ ಜುಲೈ 22 ರಂದು ಟೇಕ್ ಆಫ್ ಮಾಡಿದಾಗ, ಸರಾಗವಾಗಿ ಚಂದ್ರನ ಮೇಲೆ ಇಳಿದು ನಂತರ ಪ್ರಗ್ಯಾನ್ ರೋವರ್ ಅನ್ನು ಬಿಡುಗಡೆ ಮಾಡಬೇಕಿದ್ದ ವಿಕ್ರಮ್ ಲ್ಯಾಂಡರ್ ವಿಫಲವಾಯಿತು. ಲ್ಯಾಂಡರ್ ಹೆಚ್ಚಿನ ವೇಗದಿಂದಾಗಿ ಚಂದ್ರನ ಮೇಲ್ಮೈ ಮೇಲೆ ಅಪ್ಪಳಿಸಿತು.</p>



<p>&#8220;ಸಾಫ್ಟ್‌ವೇರ್ ಗ್ಲಿಚ್ ತಪ್ಪಾಗಿದೆ ಎಂಬುದು ನಂತರವೇ ತಿಳಿದದ್ದು&#8221; ಎಂದು ಸೋಮನಾಥ್ ತಿಳಿಸಿದ್ದಾರೆ. ಲ್ಯಾಂಡರ್ ಪತನಗೊಂಡಿರುವುದು ಆ ದಿನವೇ , ಸೆಪ್ಟೆಂಬರ್ 6, 2019ಕ್ಕೆ ತಿಳಿದದ್ದು. ಇದನ್ನು ಸಂವಹನ ವೈಫಲ್ಯ ಎಂದು ಕರೆಯುವುದರಲ್ಲಿ ಯಾವುದೇ ಅರ್ಥವಿಲ್ಲ. ಆದರೆ ಲ್ಯಾಂಡರ್‌ನೊಂದಿಗೆ ಸಂಪರ್ಕ ಕಡಿತವಾಗಿದೆ ಎಂದು ಶಿವನ್ ಆ ಸಂದರ್ಭದಲ್ಲಿ ಹೇಳಿದ್ದರು.</p>



<p>&#8220;ಯಾವುದೇ ಯಶಸ್ಸು ಅಥವಾ ವೈಫಲ್ಯ ಸಂಭವಿಸಿದರೂ ಅದನ್ನು ಪಾರದರ್ಶಕವಾಗಿ ತಿಳಿಸಬೇಕು&#8221; ಎಂದು ಸೋಮನಾಥ್ ಹೇಳಿದ್ದು, ಅವರ ಈ ಹೇಳಿಕೆಗಳು ಶಿವನ್ ಅವರನ್ನು ಗುರಿಯಾಗಿಸುವ ಉದ್ದೇಶದಿಂದ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಚಂದ್ರಯಾನ-3 ಕ್ರೆಡಿಟ್‌ ಮೋದಿಯವರಿಗೆ; NCERTಯಿಂದ ಮಕ್ಕಳಿಗೆ ಅವೈಜ್ಞಾನಿಕ ಪಠ್ಯ</title>
		<link>https://peepalmedia.com/chandrayan-3-credit-to-modi-and-unscientific-text-by-ncert/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 18 Oct 2023 10:09:53 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[Chandrayan 3]]></category>
		<category><![CDATA[india]]></category>
		<category><![CDATA[isro]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra modi]]></category>
		<category><![CDATA[ncert]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[science]]></category>
		<category><![CDATA[state politics]]></category>
		<category><![CDATA[text book]]></category>
		<category><![CDATA[unscientic]]></category>
		<category><![CDATA[writing]]></category>
		<guid isPermaLink="false">https://peepalmedia.com/?p=30072</guid>

					<description><![CDATA[ಬೆಂಗಳೂರು, ಅಕ್ಟೋಬರ್.‌18: ಎನ್‌ಸಿಇಆರ್‌ಟಿ ಹೊರತಂದಿರುವ ಚಂದ್ರಯಾನ ಮಿಷನ್‌ನ ವಿಶೇಷ ಪೂರಕ ಪಠ್ಯದಲ್ಲಿ ಚಂದ್ರಯಾನದ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನ್ನಣೆ ನೀಡಿದ್ದು, ಬಾಹ್ಯಾಕಾಶ ವಿಜ್ಞಾನವನ್ನು ಪುರಾಣಗಳೊಂದಿಗೆ ಬೆರೆಸಿ ತಯಾರಿಸಲಾಗಿದೆ. &#8220;ನಿಮಗೆ ಗೊತ್ತಾ, ಚಂದ್ರಯಾನ-2 ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸದ ಕಾರಣ ಎಲ್ಲಾ ವಿಜ್ಞಾನಿಗಳ ನೈತಿಕ ಸ್ಥೈರ್ಯವು ಕುಗ್ಗಿ ಹೋಗಿತ್ತು. ಅವರು ತುಂಬಾ ದುಃಖ ಪಟ್ಟಿದ್ದರು. ನಮ್ಮ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನಮ್ಮ ವಿಜ್ಞಾನಿಗಳಿಗೆ ಧೈರ್ಯವನ್ನು ತುಂಬಿ, ಮರುಪ್ರಯತ್ನ ಮಾಡಲು ಹೇಳಿದರು. ಎಲ್ಲಾ [&#8230;]]]></description>
										<content:encoded><![CDATA[
<p><strong>ಬೆಂಗಳೂರು, ಅಕ್ಟೋಬರ್.‌18:</strong> ಎನ್‌ಸಿಇಆರ್‌ಟಿ ಹೊರತಂದಿರುವ ಚಂದ್ರಯಾನ ಮಿಷನ್‌ನ ವಿಶೇಷ ಪೂರಕ ಪಠ್ಯದಲ್ಲಿ ಚಂದ್ರಯಾನದ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನ್ನಣೆ ನೀಡಿದ್ದು, ಬಾಹ್ಯಾಕಾಶ ವಿಜ್ಞಾನವನ್ನು ಪುರಾಣಗಳೊಂದಿಗೆ ಬೆರೆಸಿ ತಯಾರಿಸಲಾಗಿದೆ.</p>



<p>&#8220;ನಿಮಗೆ ಗೊತ್ತಾ, ಚಂದ್ರಯಾನ-2 ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸದ ಕಾರಣ ಎಲ್ಲಾ ವಿಜ್ಞಾನಿಗಳ ನೈತಿಕ ಸ್ಥೈರ್ಯವು ಕುಗ್ಗಿ ಹೋಗಿತ್ತು. ಅವರು ತುಂಬಾ ದುಃಖ ಪಟ್ಟಿದ್ದರು. ನಮ್ಮ ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನಮ್ಮ ವಿಜ್ಞಾನಿಗಳಿಗೆ ಧೈರ್ಯವನ್ನು ತುಂಬಿ, ಮರುಪ್ರಯತ್ನ ಮಾಡಲು ಹೇಳಿದರು. ಎಲ್ಲಾ ವಿಜ್ಞಾನಿಗಳು ಒಟ್ಟಾಗಿ ಹಿಂದಿನ ಅನುಭವದಿಂದ ಕಲಿಯುವ ಮುಖಾಂತರ ಪ್ರಯತ್ನಿಸಿದರು ಮತ್ತು ಸುಧಾರಿಸಿದರು. ಇದರಿಂದಾಗಿ ಲ್ಯಾಂಡರ್ &nbsp;ಚಂದ್ರನ ಮೇಲೆ ಲಾಂಚರ್‌ನಿಂದ ಯಶಸ್ವಿಯಾಗಿ ಇಳಿಯಬಹುದು,&#8221; ಎಂದಿರುವ ನರ್ಸರಿ, ಒಂದನೇ ಮತ್ತು ಎರಡನೇ ತರಗತಿಯ ಮಕ್ಕಳಿಗೆ ಮಾಡ್ಯೂಲನ್ನು ತಯಾರಿಸಲಾಗಿದೆ ಎಂದು <a href="https://www.theguardian.com/world/2014/oct/28/indian-prime-minister-genetic-science-existed-ancient-times">ದಿ ಟೆಲಿಗ್ರಾಫ್</a> ವರದಿ ಮಾಡಿದೆ.</p>



<p>ಇದರನಲ್ಲಿ ಉಡಾವಣೆಯ ಲೈವ್ ಟೆಲಿಕಾಸ್ಟ್‌ನ ಚಿತ್ರಗಳು ಮತ್ತು ಚಂದ್ರಯಾನ-3 ಜೊತೆಗೆ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಧಾನ ಕಚೇರಿಯಲ್ಲಿ ವಿಜ್ಞಾನಿಗಳೊಂದಿಗೆ ಮೋದಿಯವರ ಸಂವಾದದ ಚಿತ್ರಗಳನ್ನು ಹಾಕಲಾಗಿದೆ.</p>



<p>ಅಕ್ಟೋಬರ್ 17 ಸೋಮವಾರ ರಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಎಸ್.ಪಿ.ಸೋಮನಾಥ್ ಅವರ ಸಮ್ಮುಖದಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು <a href="https://dsel.education.gov.in/sites/default/files/update/PIB1968545.pdf">ಚಂದ್ರಯಾನ ಮಿಷನ್‌ನ ವಿಶೇಷ ಓದುವ ಸಾಮಗ್ರಿಗಳನ್ನು ಬಿಡುಗಡೆ</a> ಮಾಡಿದ್ದರು.</p>


<div class="wp-block-image">
<figure class="aligncenter size-full is-resized"><img decoding="async" width="631" height="368" src="https://peepalmedia.com/wp-content/uploads/2023/10/sdsfdggfg.jpg" alt="" class="wp-image-30074" style="aspect-ratio:1.7146739130434783;width:507px;height:auto" srcset="https://peepalmedia.com/wp-content/uploads/2023/10/sdsfdggfg.jpg 631w, https://peepalmedia.com/wp-content/uploads/2023/10/sdsfdggfg-300x175.jpg 300w, https://peepalmedia.com/wp-content/uploads/2023/10/sdsfdggfg-150x87.jpg 150w" sizes="(max-width: 631px) 100vw, 631px" /></figure></div>


<p>&#8220;ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವವು ಚಂದ್ರಯಾನ-3 ರ ವಿಜಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಮತ್ತು ನಮ್ಮ ದೇಶದ ಹೆಸರನ್ನು ಚಂದ್ರನ ಮೇಲ್ಮೈಯಲ್ಲಿ ಇಳಿಸಿದೆ&#8221; ಎಂದು ಮಾಡ್ಯೂಲ್‌ಗಳಲ್ಲಿ ಒಂದು ಮೋದಿಯವರನ್ನು ಹೊಗಳಿದೆ.</p>



<p>ಟೆಲಿಗ್ರಾಫ್‌ ವರದಿ ಮಾಡಿರುವಂತೆ ಹಲವಾರು ಬಾಹ್ಯಾಕಾಶ ತಜ್ಞರು ಈ ಇದು ಸಮಸ್ಯಾತ್ಮಕ ಮಾತುಗಳು ಎಂದು ವಿವರಿಸಿದ್ದಾರೆ, ಏಕೆಂದರೆ ಅವರ ಪ್ರಕಾರ ಈ ಪಠ್ಯ ಚಂದ್ರಯಾನ -3 ಮಿಷನ್ ಮೋದಿಯವರಿಂದಲೇ ಸಾಧ್ಯವಾಯಿತು ಎಂಬ ಅಭಿಪ್ರಾಯವನ್ನು ನೀಡುತ್ತದೆ. ಇದು ತನ್ನ ವೈಫಲ್ಯಗಳಿಂದ ಮತ್ತೆ ಪುಟಿದೇಳುವ ಇಸ್ರೋದ ದಾಖಲೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.</p>



<p>ಇಸ್ರೋದ ಇತಿಹಾಸದಲ್ಲಿ ಇಂತಹ ಸೋಲು-ಗೆಲುವಿನ ಪಾಠಗಳು ಅನೇಕ ಬಾರಿ ನಡೆದಿದ್ದು, ಇವೇ ಇಸ್ರೋದ ಸಾಧನೆಗಳಿಗೆ ಕಾರಣವಾಗಿವೆ. &nbsp;1979 ರಲ್ಲಿ &nbsp;ಉಡಾವಣೆ ಮಾಡಿದ ಉಪಗ್ರಹ ಉಡಾವಣಾ ವಾಹನವು ವಿಫಲವಾಯಿತು. ಆದರೆ ಮುಂದಿನ ವರ್ಷ ಮತ್ತೆ &nbsp;ಪ್ರಯತ್ನಿಸಿ ಯಶಸ್ವಿಯಾಯಿತು ಎಂದು ಬಾಹ್ಯಾಕಾಶ ತಜ್ಞರು ನೆನಪಿಸಿಕೊಂಡಿದ್ದಾರೆ. 1987 ರಲ್ಲಿ ವಿಫಲವಾದಾಗ ಮತ್ತೆ ತನ್ನ ಯೋಜನೆಯನ್ನು 1988 ರಲ್ಲಿ ಯಶಸ್ವಿಗೊಳಿಸಿತು. 1993 ರಲ್ಲಿ ವಿಫಲವಾದ ಇಸ್ರೋದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ 1994 ರಲ್ಲಿ ಯಶಸ್ಸನ್ನು ಕಂಡಿತು.</p>



<p>ಶಾಲಾ ಮಕ್ಕಳಿಗಾಗಿ ಸಿದ್ದಪಡಿಸಿರುವ ಮತ್ತೊಂದು ಮಾಡ್ಯೂಲ್‌ನಲ್ಲಿ ಬಾಹ್ಯಾಕಾಶ ವಿಜ್ಞಾನದೊಂದಿಗೆ ಪುರಾಣವನ್ನು ಬೆರೆಸಲಾಗಿದೆ. &#8220;ವೈಜ್ಞಾನಿಕ ಸಾಧನೆಯು ಈಗ ಮಾತ್ರ ಸಂಭವಿಸಿದೆಯೇ? ಎಂಬ ಪಠ್ಯದಲ್ಲಿ ಅದನ್ನು ವೈಮಾನಿಕ ಶಾಸ್ತ್ರ ಎಂಬ ಪುರಾವೆ ರಹಿತ ಕಲ್ಪನೆಯನ್ನು ಮಕ್ಕಳಿಗೆ ಹಂಚಲಾಗಿದೆ. ಎಂದು ಹೇಳುತ್ತದೆ. “ಇದು ನಮ್ಮ ದೇಶವು ಈ ದಿನಗಳಲ್ಲಿ ಹಾರುವ ವಾಹನಗಳ ಜ್ಞಾನವನ್ನು ಹೊಂದಿತ್ತು ಎಂದು ತಿಳಿಸುತ್ತದೆ,&#8221; ಮಾಡ್ಯೂಲ್ ಹೇಳುತ್ತದೆ.</p>



<p>&#8220;ಭಾರತೀಯ ಗ್ರಂಥಗಳಲ್ಲಿ ಅತ್ಯಂತ ಹಳೆಯದಾದ ವೇದಗಳು, ಪ್ರಾಣಿಗಳು, ಸಾಮಾನ್ಯವಾಗಿ ಕುದುರೆಗಳು ಎಳೆಯುವ ಚಕ್ರದ ರಥಗಳ ಮೇಲೆ ಸಾಗಿಸಲ್ಪಡುವ ವಿವಿಧ ದೇವರುಗಳ ಉಲ್ಲೇಖವನ್ನು ಮಾಡುತ್ತವೆ, ಆದರೆ ಈ ರಥಗಳು ಹಾರಬಲ್ಲವು ಕೂಡ&#8221; ಎಂದು ಅದು ಹೇಳುತ್ತದೆ.</p>



<p>ಮಾಡ್ಯೂಲ್‌ನಲ್ಲಿ ರಾಮಾಯಣದ ಹಾರುವ ರಥ ಪುಷ್ಪಕ ವಿಮಾನದ ಉಲ್ಲೇಖವನ್ನು ಸಹ ಮಾಡಲಾಗಿದೆ. &#8220;ಇದನ್ನು ಬ್ರಹ್ಮನಿಗಾಗಿ ದೇವತೆಗಳ ಮುಖ್ಯ ವಾಸ್ತುಶಿಲ್ಪಿ ವಿಶ್ವಕರ್ಮ ಸೂರ್ಯನ ಧೂಳಿನಿಂದ ಸೃಷ್ಟಿಸಿದ. &nbsp;ಬ್ರಹ್ಮ ಇದನ್ನು ಕುಬೇರನಿಗೆ ಕೊಟ್ಟನು. ರಾವಣನು ಕುಬೇರನಿಂದ ಲಂಕೆಯನ್ನು ವಶಪಡಿಸಿಕೊಂಡಾಗ, ಅದನ್ನು ತನ್ನ ವೈಯಕ್ತಿಕ ವಾಹನವಾಗಿ ಬಳಸಿಕೊಂಡನು,” ಎಂದು ಬಾಹ್ಯಾಕಾಶ ವಿಜ್ಞಾನವನ್ನು ಸಮಸ್ಯಾತ್ಮಕವಾಗಿ ಪುರಾಣಗಳ ಜೊತೆಗೆ ಜೋಡಿಸಲಾಗಿದೆ.</p>



<p>ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಆನೆ ತಲೆ ಇರುವ ದೇವತೆ ʼಗಣಪತಿʼಯನ್ನು ಪ್ಲಾಸ್ಟಿಕ್‌ ಸರ್ಜರಿ ಹಾಗೂ ಕರ್ಣನನ್ನು ಜೆನೆಟಿಕ್‌ ಟೆಕ್ನಾಲಜಿಯಿಂದ ಹುಟ್ಟಿದ್ದು ಎಂಬ <a href="https://indianexpress.com/article/india/india-others/pm-takes-leaf-from-batra-book-mahabharat-genetics-lord-ganesha-surgery/" data-type="link" data-id="https://indianexpress.com/article/india/india-others/pm-takes-leaf-from-batra-book-mahabharat-genetics-lord-ganesha-surgery/">ಅವೈಜ್ಞಾನಿಕ ಹೇಳಿಕೆಯನ್ನು</a> ಮುಂಬೈಯ ಕಾರ್ಯಕ್ರಮವೊಂದರಲ್ಲಿ ನೀಡಿದ್ದರು.</p>



<p></p>
]]></content:encoded>
					
		
		
			</item>
		<item>
		<title>ಆಡಳಿತ, ಅನುದಾನಗಳಿಗಿಂತ ಇಸ್ರೋ ವಿಜ್ಞಾನಿಗಳ ಪ್ರತಿಭೆ, ಪರಿಶ್ರಮವೇ ಯಶಸ್ಸಿನ ಮೂಲ : ಸಾಹಿತಿ ಕವಿರಾಜ್</title>
		<link>https://peepalmedia.com/talent-and-perseverance-of-scientists-is-the-source-of-success/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 28 Aug 2023 02:08:05 +0000</pubDate>
				<category><![CDATA[ವಿಶೇಷ]]></category>
		<category><![CDATA[india]]></category>
		<category><![CDATA[isro]]></category>
		<category><![CDATA[Kaviraj]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[scientist]]></category>
		<category><![CDATA[writing]]></category>
		<guid isPermaLink="false">https://peepalmedia.com/?p=26543</guid>

					<description><![CDATA[ಚಂದ್ರಯಾನ 3 ರ ಯಶಸ್ಸಿನ ನಂತರ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿರುವ ಕ್ರೆಡಿಟ್ ವಾರ್ ಬಹಳ‌ ಅನುಚಿತವಾದದ್ದು . ಮುಖ್ಯವಾಗಿ ಅವರ ಅವಧಿಯಲ್ಲಿ ಇಷ್ಟು ಉಪಗ್ರಹಗಳನ್ನು ಹಾರಿಸಲಾಯಿತು . ಇವರ ಇವಧಿಯಲ್ಲಿ ಇಷ್ಟು ಉಪಗ್ರಹಗಳನ್ನು ಹಾರಿಸಲಾಯಿತು ಎಂಬ ಮಾಹಿತಿಯೊಂದರ ಫೋಟೋಗಳು ಓಡಾಡುತ್ತಿವೆ. ಆ ಸಂಖ್ಯೆಗಳು ನಿಜವೇ ? ಆ ಸಂಖ್ಯೆಗಳ ಮೂಲಕ ಕ್ಲೈಮ್ ಮಾಡಲಾಗುತ್ತಿರುವ ವಿಚಾರ ನಿಜವೇ ? ಎಂದು ನೋಡಲು ಹೊರಟರೇ , ಸಿಗುವುದು ಯಾರ ಆಡಳಿತ ಉತ್ತಮ ಎಂಬ ರಾಜಕೀಯ ಮೇಲಾಟದ ಫಲಿತಾಂಶವಲ್ಲ. ಬದಲಿಗೆ ಅದು [&#8230;]]]></description>
										<content:encoded><![CDATA[
<p>ಚಂದ್ರಯಾನ 3 ರ ಯಶಸ್ಸಿನ ನಂತರ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿರುವ ಕ್ರೆಡಿಟ್ ವಾರ್ ಬಹಳ‌ ಅನುಚಿತವಾದದ್ದು . ಮುಖ್ಯವಾಗಿ ಅವರ ಅವಧಿಯಲ್ಲಿ ಇಷ್ಟು ಉಪಗ್ರಹಗಳನ್ನು ಹಾರಿಸಲಾಯಿತು . ಇವರ ಇವಧಿಯಲ್ಲಿ ಇಷ್ಟು ಉಪಗ್ರಹಗಳನ್ನು ಹಾರಿಸಲಾಯಿತು ಎಂಬ ಮಾಹಿತಿಯೊಂದರ ಫೋಟೋಗಳು ಓಡಾಡುತ್ತಿವೆ. ಆ ಸಂಖ್ಯೆಗಳು ನಿಜವೇ ?</p>



<p>ಆ ಸಂಖ್ಯೆಗಳ ಮೂಲಕ ಕ್ಲೈಮ್ ಮಾಡಲಾಗುತ್ತಿರುವ ವಿಚಾರ ನಿಜವೇ ? ಎಂದು ನೋಡಲು ಹೊರಟರೇ , ಸಿಗುವುದು ಯಾರ ಆಡಳಿತ ಉತ್ತಮ ಎಂಬ ರಾಜಕೀಯ ಮೇಲಾಟದ ಫಲಿತಾಂಶವಲ್ಲ. ಬದಲಿಗೆ ಅದು &#8216;ಇಸ್ರೋ&#8217; ಎಂಬ ದೇಶದ ಮಹೋನ್ನತ ಸಂಸ್ಥೆ ಹತ್ತಾರು ಸವಾಲುಗಳನ್ನು ಎದುರಿಸಿ ವಿಕ್ರಮಗಳನ್ನು ದಾಖಲಿಸಿದ ಯಶೋಗಾಥೆಯ ಪರಿಚಯ ಮಾಡಿಕೊಡುತ್ತದೆ.</p>



<p><strong><code>ISRO ಇತಿಹಾಸ</code></strong></p>



<p>ಇಸ್ರೋ ಸ್ಥಾಪನೆಯಾಗಿದ್ದು 1962 ರಲ್ಲಿ INCOSPAR (Indian National Committee for Space Research)ಎಂಬ ಹೆಸರಿನೊಂದಿಗೆ. 1969 ರಲ್ಲಿ ಅದು ISRO ಎಂದು ಬದಲಾಯಿತು. ಆಗ ISRO ಬಳಿ ಉಪಗ್ರಹಗಳನ್ನು ಗಗನಕ್ಕೆ ಉಡಾವಣೆ ಮಾಡುವ ಸವಲತ್ತು , ಅಂದರೆ ಲಾಂಚಿಂಗ್ ಮಾಡುವ ತಂತ್ರಜ್ಞಾನ ಲಭ್ಯವಿರಲಿಲ್ಲ. ಅದು ತನ್ನ ಉಪಗ್ರಹಗಳನ್ನು ಲಾಂಚ್ ಮಾಡಲು ಬೇರೆ ದೇಶಗಳನ್ನು ಅವಲಂಭಿಸಿತ್ತು. 1975 ರಲ್ಲಿ ನಮ್ಮ ಮೊದಲ ಉಪಗ್ರಹ &#8216;ಆರ್ಯಭಟ&#8217;ವನ್ನು ಗಗನಕ್ಕೆ ಚಿಮ್ಮಿಸಿದ್ದು ಸೋವಿಯೆತ್ ರಷ್ಯಾದ &#8216;ಕಪುತಿನ್ ಯಾರ್&#8217; ಎಂಬ ನಗರದಲ್ಲಿ , ಸೋವಿಯೆತ್ ಕಾಸ್ಮೋಸ್ M3 ರಾಕೆಟ್ ಎಂಬ ಲಾಂಚಿಂಗ್ ವೆಹಿಕಲ್ ಮೂಲಕ.</p>



<p>ಉಡಾವಣೆಗೆ ಬೇರೆ ದೇಶವನ್ನು ಆಶ್ರಯಿಸುವುದು ದುಬಾರಿಯಾಗಿತ್ತು. ಹಾಗಾಗಿ 1980 ರಲ್ಲಿ ಇಸ್ರೋ ತನ್ನ ಸ್ವಂತ ಲಾಂಚಿಂಗ್ ವೆಹಿಕಲ್ SLV ( sattellite launching vehicle) ಯನ್ನು ಅಭಿವೃಧ್ಧಿ ಪಡಿಸಿತು . ಇದರ ಮೂಲಕ ತನ್ನ ಉಪಗ್ರಹವಾದ &#8216;ರೋಹಿಣಿ&#8217; ಯನ್ನು ತಾನೇ ಸ್ವತಃ, ಗಗನಕ್ಕೆ ಚಿಮ್ಮಿಸಿ ಉಡಾವಣೆ ವಿಚಾರದಲ್ಲಿ ಸ್ವಾವಲಂಬಿ ಆಯಿತು.</p>



<p>ಆಗ ಲಾಂಚಿಂಗ್ ತಂತ್ರಜ್ಞಾನ ಇದ್ದರು ಕೂಡಾ ಅದಕ್ಕಾಗಿ ಉಪಯೋಗಿಸುತ್ತಿದ್ದ ಘನ ಇಂಧನ ದುಬಾರಿಯು ಮತ್ತು ಹೆಚ್ಚು ಭಾರ ಉಳ್ಳದಾಗಿತ್ತು. ಇಂಧನಕ್ಕಾಗಿ ದೊಡ್ಡ ಟ್ಯಾಂಕ್ ಗಳನ್ನು ಹೊಂದಬೇಕಾಗಿತ್ತು , ಮತ್ತು ಅದರಿಂದ ರಾಕೆಟ್ ಕ್ರಮಿಸುವ ದೂರವು ಕೂಡಾ ಕಡಿಮೆಯೇ ಆಗಿರುತ್ತಿತ್ತು.</p>



<p>ಆ ಹೊತ್ತಲ್ಲಿ ಹೈಡ್ರೋಜನ್ ಮತ್ತು ಆಕ್ಸಿಜನ್ಗಳ ದ್ರವರೂಪದ ಮಿಶ್ರಣವಾದ ಕ್ರಯೋಜೆನಿಕ್ ತಂತ್ರಜ್ಞಾನ ಹಗುರ , ಉಪಯುಕ್ತ ಮತ್ತು ಕಡಿಮೆ ವೆಚ್ಚದ್ದಾಗಿ ಅನುಕೂಲಕರವಾಗಿತ್ತು. ಆದರೆ ಆ ತಂತ್ರಜ್ಞಾನ ಇಸ್ರೋ ಬಳಿ ಲಭ್ಯವಿರಲಿಲ್ಲ.<br>ಆ ತಂತ್ರಜ್ಞಾನವನ್ನು ಕೊಡುವುದಾಗಿ ರಷ್ಯಾ ಒಪ್ಪಿಕೊಂಡಿತ್ತು. ಆದರೆ ತಮ್ಮ &#8216;ನಾಸಾ&#8217;ಗೆ ಇಸ್ರೋ ಪ್ರಬಲ ಪ್ರತಿಸ್ಪರ್ಧಿ ಆಗಬಹುದು ಎಂದು ಹೆದರಿದ ಅಮೇರಿಕಾದ ಕುಮ್ಮಕ್ಕಿನಿಂದ, ಕೊನೆ ಕ್ಷಣದಲ್ಲಿ ರಷ್ಯಾ ತಂತ್ರಜ್ಞಾನ ಒದಗಿಸುವ ಒಪ್ಪಂದದಿಂದ ಹಿಂದೆ ಸರಿಯಿತು.</p>



<p>ಆಗ ಇಸ್ರೋ ಇದನ್ನೇ ಸವಾಲಾಗಿ ಸ್ವೀಕರಿಸಿ , ಸುಮಾರು ಎರಡು ದಶಕಗಳ ನಿರಂತರ ಪ್ರಯತ್ನದ ಮೂಲಕ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಸ್ವದೇಶಿಯಾಗಿ ಅಭಿವೃದ್ಧಿ ಪಡಿಸಿದ್ದು ಭಾರತದ ಬಾಹ್ಯಾಕಾಶ ಕ್ಷೇತ್ರದ ಅಭ್ಯುದಯಕ್ಕೆ ಬಹುಮುಖ್ಯ ಕಾರಣವಾಯಿತು.</p>



<p>ಆನಂತರ ಇಸ್ರೋ ತನ್ನ ಉಪಗ್ರಹಗಳಷ್ಟೇ ಅಲ್ಲದೇ , ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡಿಕೊಡಲು ಆರಂಭಿಸಿತು. 1999 ರಲ್ಲಿ ಮೊದಲ ಬಾರಿಗೆ ತನ್ನ PSLV ( polar sattelite launching vehicle) ಮೂಲಕ ಜರ್ಮನಿ ಮತ್ತು ದಕ್ಷಿಣ ಕೊರಿಯಾದ ಎರಡು ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿಕೊಡುವ ಮೂಲಕ ಈ ಶಕೆ ಆರಂಭವಾಯಿತು.</p>



<p>ಅಂದಿನಿಂದ ಆರಂಭವಾದ ಈ ಯಶೋಗಾಥೆ ಅತ್ಯಂತ ಕಡಿಮೆ ವೆಚ್ಚದಲ್ಲಿ ತಮ್ಮ ಉಪಗ್ರಹಗಳನ್ನು ಉಡಾಯಿಸಲು ವಿಶ್ವವೇ ಭಾರತವನ್ನು ಆಶ್ರಯಿಸುವ ಮಟ್ಟಕ್ಕೆ ಬೆಳೆಯಿತು. ಮುಂದೆ ಇಸ್ರೋ GSLV ( Geosynchronous sattelite launching vehicle ) ಉಡಾವಣಾ ರಾಕೆಟ್ ಅನ್ನು ಕೂಡಾ ಅಭಿವೃದ್ಧಿ ಪಡಿಸಿತು. ಹಂತಹಂತವಾಗಿ ಈ ದಿಸೆಯಲ್ಲಿ ಇಸ್ರೋ ಮುಂದಡಿ ಇಡುತ್ತಾ ಬಂದು, ಈವರೆಗೂ ಸುಮಾರು 385 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಿಕೊಟ್ಟ ಸಾಧನೆಗೈದಿದೆ. ಈ ಮೂಲಕ ಉತ್ತಮ ಆದಾಯವನ್ನು ಗಳಿಸುತ್ತಿದೆ.</p>



<p>ಅದರಲ್ಲೂ 2017 ರಲ್ಲಿ PSLV ಮೂಲಕ ವಿದೇಶಗಳ 104 ಉಪಗ್ರಹಗಳನ್ನು , ಒಮ್ಮೆಗೆ, ಒಂದೇ ಲಾಂಚ್ ಮೂಲಕ ಗಗನಕ್ಕೆ ಚಿಮ್ಮಿಸಿದ್ದು ಇಸ್ರೋ ಪರಾಕ್ರಮದ ವಿರಾಟ್ ದರ್ಶನವೇ ಸರಿ. ಅದರಲ್ಲಿ ತನ್ನ ಎರಡು ಉಪಗ್ರಹಗಳ ಜೊತೆ, 96 ಉಪಗ್ರಹಗಳು USA ಗೆ ಸೇರಿದ್ದು , ಇನ್ನುಳಿದವು ಜರ್ಮನಿ, ಬೆಲ್ಜಿಯಂ , ನೆದರ್ಲ್ಯಾಂಡ್ , ಯುಎಈ , ಇಸ್ರೇಲ್ ಮತ್ತು ಕಜಕಸ್ತಾನ್ ದೇಶಗಳಿಗೆ ಸೇರಿದ್ದವು. ಈವರೆಗೆ ಇಸ್ರೋ ಉಡಾಯಿಸಿದ ಉಪಗ್ರಹಗಳೆಲ್ಲವೂ ನಮ್ಮ ದೇಶದವೇ ಅಲ್ಲ . ಅವುಗಳಲ್ಲಿ ಹೆಚ್ಚಿನವು ಬೇರೆ ದೇಶಗಳದ್ದು. ಎಲ್ಲಾ ಮುಂದುವರಿದ ದೇಶಗಳು ಸೇರಿದಂತೆ , ಬೇರೆ ಬೇರೆ ದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುವುದರಲ್ಲಿ ಇಸ್ರೋ ಈಗ ಜಗತ್ತಿನ ಅತ್ಯಂತ ಬೇಡಿಕೆಯ ಸಂಸ್ಥೆ.</p>



<p><strong>ಆಡಳಿತ ಅನುದಾನಗಳಿಗಿಂತ ವಿಜ್ಞಾನಿಗಳ ಪ್ರತಿಭೆ, ಪರಿಶ್ರಮವೇ ಯಶಸ್ಸಿನ ಮೂಲ</strong></p>



<p>ಈ ಸಾಧನೆ ಕೇವಲ ಐದಾರು ವರ್ಷಗಳಲ್ಲಿ ಆದದ್ದಲ್ಲ. ಇಸ್ರೋ ತನ್ನ ಮೊದಲ ಉಪಗ್ರಹವನ್ನು ಹಾರಿಸಿ ಸುಮಾರು ಐವತ್ತು ವರ್ಷಗಳಾಗಿ ಹೋಗಿದೆ. ಚಂದ್ರಯಾನದ ಸರಣಿ ಆರಂಭವಾಗಿಯೂ 15 ವರ್ಷವಾಗಿದೆ.<br>ಆಡಳಿತ , ಅನುದಾನಗಳಿಗಿಂತ ಹೆಚ್ಚು ವಿಜ್ಞಾನಿಗಳ ಪ್ರತಿಭೆ , ಪರಿಶ್ರಮ ಇಸ್ರೋ ಯಶಸ್ಸಿನ ಮೂಲದ್ರವ್ಯ.</p>



<p>1969 ರಿಂದ ಹಂತಹಂತವಾಗೀ ಎಂತೆಂತದ್ದೋ ಕಠಿಣ ಸವಾಲುಗಳನ್ನು ಎದುರಿಸಿ ಇಸ್ರೋ ಇಂದು ಜಗವೇ ಮೆಚ್ಚುವಂತ ಸಾಧನೆಗಳನ್ನು ಮಾಡುವ ಮಟ್ಟಕ್ಕೆ ಬೆಳೆದಿದೆ. ಇಸ್ರೋ ಇಡೀ ದೇಶದ ಪರಂಪರೆಯ ಹೆಮ್ಮೆ. ಅದರ ಹುಟ್ಟಿನಿಂದ ಇಲ್ಲಿಯವರೆಗೂ ಅದರ ಎಲ್ಲ ಸಾಧನೆಗಳು ಇಡೀ ದೇಶಕ್ಕೆ ಸೇರಿದ್ದು‌.</p>



<p>ಇಸ್ರೋದ ಇಂದಿನ ಸಾಧನೆಯ ಕ್ರೆಡಿಟ್ ತೆಗೆದುಕೊಳ್ಳುವ ಹಪಾಹಪಿಯಲ್ಲಿ ಇಂತಹಾ ಅಮೋಘ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರನ್ನು ಅವಮಾನಿಸುವುದು ಅತ್ಯಂತ ದೊಡ್ಡ ದೇಶದ್ರೋಹವಾಗಿದೆ.</p>



<p>ಯಾವುದೇ ಗಿಡವೂ ನೆಟ್ಟ ಕೂಡಲೇ ಫಲ ನೀಡುವುದಿಲ್ಲ. ಪಕ್ಷ , ಪಂಥಗಳ ಅಮಲಿನಲ್ಲಿ , ವರುಷಗಳ ನಂತರ ಫಲವನ್ನು ಸವಿಯುವ ವೇಳೆ ಉತ್ತಿ ಬಿತ್ತಿ , ನೀರುಣಿಸಿ ಬೆಳೆಸಿದವರನ್ನು ಅವಮಾನಿಸುವಷ್ಟು ಕೃತಘ್ನರಾಗದಿರೋಣ.</p>
]]></content:encoded>
					
		
		
			</item>
		<item>
		<title>ಬೆಂಗಳೂರಿನಲ್ಲಿ ಮೋದಿ ರೋಡ್ ಶೋ : ಬಿಜೆಪಿಯಿಂದ ISRO ಸಂಸ್ಥೆಯ ಸಾಧನೆಯ ಹೈಜಾಕ್!</title>
		<link>https://peepalmedia.com/modi-road-show-hijacking-isros-achievement-by-bjp/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 24 Aug 2023 11:59:17 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[bjp]]></category>
		<category><![CDATA[isro]]></category>
		<category><![CDATA[Narendra modhi road show]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=26324</guid>

					<description><![CDATA[ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದು, ಇಸ್ರೋ (ISRO) ಸಂಸ್ಥೆಯ ವಿಜ್ಞಾನಿಗಳ ಜೊತೆಗೆ ಯಶಸ್ಸಿನ ಅಭಿನಂದನೆ ಸಲ್ಲಿಸಲು ಬರುವ ಮಾಹಿತಿ ಹೊರಬಿದ್ದಿದೆ. ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಆರ್. ಅಶೋಕ್, ಶನಿವಾರ ಬೆಳಗ್ಗೆ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಎಚ್‌ಎಎಲ್ ನಲ್ಲಿ ಪ್ರಧಾನಿಯವರನ್ನು ನಾವು ಸ್ವಾಗತಿಸುತ್ತಿದ್ದೇವೆ. ಮೋದಿಯವರನ್ನು ಸ್ವಾಗತಿಸಲು ಸುಮಾರು 5-6 ಸಾವಿರ ಜನ ಸೇರಲಿದ್ದಾರೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಬೆಂಗಳೂರು ಭೇಟಿಯ ಹಿಂದೆ ಬಿಜೆಪಿ ಮತ್ತದೇ [&#8230;]]]></description>
										<content:encoded><![CDATA[
<p>ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದು, ಇಸ್ರೋ (ISRO) ಸಂಸ್ಥೆಯ ವಿಜ್ಞಾನಿಗಳ ಜೊತೆಗೆ ಯಶಸ್ಸಿನ ಅಭಿನಂದನೆ ಸಲ್ಲಿಸಲು ಬರುವ ಮಾಹಿತಿ ಹೊರಬಿದ್ದಿದೆ.</p>



<p>ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಆರ್. ಅಶೋಕ್, ಶನಿವಾರ ಬೆಳಗ್ಗೆ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಎಚ್‌ಎಎಲ್ ನಲ್ಲಿ ಪ್ರಧಾನಿಯವರನ್ನು ನಾವು ಸ್ವಾಗತಿಸುತ್ತಿದ್ದೇವೆ. ಮೋದಿಯವರನ್ನು ಸ್ವಾಗತಿಸಲು ಸುಮಾರು 5-6 ಸಾವಿರ ಜನ ಸೇರಲಿದ್ದಾರೆ ಎಂದು ಹೇಳಿದ್ದಾರೆ.</p>



<p>ನರೇಂದ್ರ ಮೋದಿ ಬೆಂಗಳೂರು ಭೇಟಿಯ ಹಿಂದೆ ಬಿಜೆಪಿ ಮತ್ತದೇ ರಾಜಕೀಯ ಲಾಭಕ್ಕೆ ಮುಂದಾಗಲಿದೆ ಎಂಬ ಸಣ್ಣ ಅನುಮಾನ ಕೂಡಾ ವ್ಯಕ್ತವಾಗಿದೆ. ಈ ಬಗ್ಗೆ ಸುಳಿವು ನೀಡಿದ ಬಿಜೆಪಿ ನಾಯಕ ಆರ್.ಅಶೋಕ್ &#8216;ನರೇಂದ್ರ ಮೋದಿಯವರಿಗೆ ಅದ್ದೂರಿಯಾಗಿ ಸ್ವಾಗತ ಕೋರಲು ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಇಸ್ರೋ ಸಂಸ್ಥೆ ಇರುವ ಪ್ರದೇಶದ ವರೆಗೂ ನಾವು ರೋಡ್ ಶೋ ನಡೆಸುತ್ತೇವೆ&#8217; ಎಂಬ ರೀತಿಯಲ್ಲಿ ಮಾತನಾಡಿದ್ದಾರೆ.</p>



<p>ರೋಡ್ ಶೋ ನಡೆಸಲು ಕೇಂದ್ರ ಬಿಜೆಪಿಯಿಂದ ಸೂಚನೆ ಬಂದಿದೆ, ದಾಸರಹಳ್ಳಿ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆ ಇದೆ. ಅಲ್ಲಿ ಒಂದು ಕಿ.ಮೀವರೆಗೆ ರೋಡ್ ಶೋ‌ ಮಾಡಲಾಗುತ್ತದೆ. ರೋಡ್ ಶೋ ಬಗ್ಗೆ ದಾಸರಹಳ್ಳಿ ಶಾಸಕ ಮುನಿರಾಜು ಜತೆ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಇಂದು ಸಂಜೆ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಾಗುವುದು. ಮೋದಿಯವರ ಭೇಟಿ ದಿನದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.</p>



<p>ಇದನ್ನು ರಾಜಕೀಯವಾಗಿ ನೋಡಿದರೆ ನರೇಂದ್ರ ಮೋದಿ ಬೆಂಗಳೂರು ಭೇಟಿ, ಇಸ್ರೋ ಸಂಸ್ಥೆಯ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವುದು ಸಹಜ ಎಂದರೂ, ರೋಡ್ ಶೋ ವಿಚಾರದಲ್ಲಿ ಬಿಜೆಪಿ ಸಂಪೂರ್ಣವಾಗಿ ತನ್ನ ಹಳೆಯ ಹಳಸಲು ಪ್ರಚಾರದ ಸೋಗಿಗೆ ಬೀಳಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ ಚಂದ್ರಯಾನ &#8211; 3 ಸಂಪೂರ್ಣ ಯಶಸ್ಸು ಸಿಗಬೇಕಿರುವುದು ಇಸ್ರೋ ಸಂಸ್ಥೆಗೆ, ವಿಜ್ಞಾನಿಗಳು ಹಾಗೂ ತಂತ್ರಜ್ಞರಿಗೆ. ಆದರೆ ನರೇಂದ್ರ ಮೋದಿಯವರ ರೋಡ್ ಶೋ ಅರ್ಥವೇ ಇಲ್ಲದಂತಿದೆ.</p>



<p>ಒಬ್ಬ ಪ್ರಧಾನಿಯಾಗಿ ಅವರು ಇಸ್ರೋ ಸಂಸ್ಥೆಗೆ ಭೇಟಿ ನೀಡುವುದು ಅವರ ಒಂದು ಜವಾಬ್ದಾರಿಯನ್ನು ಸೂಚಿಸಿದರೆ, ರೋಡ್ ಶೋ ಮಾತ್ರ ಬಿಜೆಪಿ ಪಕ್ಷ ಸಂಪೂರ್ಣವಾಗಿ ಪ್ರಚಾರದ ಹುಚ್ಚಿಗೆ ಬಿದ್ದದ್ದನ್ನು ಎತ್ತಿ ಹಿಡಿಯುತ್ತಿದೆ. ಆ ಮೂಲಕ ಇಸ್ರೋ ಸಂಸ್ಥೆಯ ಸಾಧನೆಯನ್ನು ನೇರವಾಗಿ ತನ್ನದೇ ಸಾಧನೆ ಎಂಬಂತೆ ಬಿಜೆಪಿ ಪಕ್ಷ ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.</p>



<p>ಇನ್ನು ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಸಂದರ್ಭದಲ್ಲಿ ಇಸ್ರೋ ಯೂಟ್ಯೂಬ್ ಚಾನಲ್ ನಲ್ಲಿ ಲೈವ್ ನಲ್ಲೂ ಉಪಗ್ರಹ ಲ್ಯಾಂಡ್ ಆಗುವುದನ್ನು ಸಂಪೂರ್ಣವಾಗಿ ತೋರಿಸದೇ, ನರೇಂದ್ರ ಮೋದಿ ಭಾಷಣಕ್ಕೆ ಆರಂಭಿಸಿದ ಬಗ್ಗೆಯೂ ಸಹ ಹಲವಷ್ಟು ಟೀಕೆ ವ್ಯಕ್ತವಾಗಿದೆ. ದೇಶ ಏನೇ ಸಾಧನೆ ಮಾಡಲಿ, ಆ ಸಾಧನೆಗೆ ಯಾರೇ ಕಾರಣರಾಗಲಿ ಯಶಸ್ಸಿನ ಕ್ರೆಡಿಟ್ ತನಗೇ ಸಿಗಬೇಕು ಎಂಬ ಧೋರಣೆ ಬಗ್ಗೆ ಟೀಕೆಗಳು ಶುರುವಾಗಿವೆ. ಸಧ್ಯ ಶನಿವಾರ ನಡೆಯಬಹುದಾದ ನರೇಂದ್ರ ಮೋದಿಯವರ ರೋಡ್ ಶೋ ಕೂಡಾ ಇಂತದ್ದೇ ಇಂದು ಗಿಮಿಕ್ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.</p>



<p>ಇನ್ನು ಶನಿವಾರ ಬೆಳಗ್ಗೆ ನೇರವಾಗಿ ದಕ್ಷಿಣ ಆಫ್ರಿಕಾದಿಂದ 5.55ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಒಂದೂವರೆ ಕಿಲೋಮೀಟರ್ ರೋಡ್‌ಶೋಗೆ ಬಿಜೆಪಿ ತೀರ್ಮಾನಿಸಿದೆ. 7 ಗಂಟೆಗೆ ಪೀಣ್ಯದಲ್ಲಿರುವ ಇಸ್ಟ್ರಾಕ್‌ಗೆ ಮೋದಿ ಭೇಟಿ ನೀಡಲಿದ್ದಾರೆ. ಅಲ್ಲಿ, ಇಸ್ರೋ ಮುಖ್ಯಸ್ಥರು, ವಿಜ್ಞಾನಿಗಳಿಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಲಿದ್ದಾರೆ. ಬೆಳಗ್ಗೆ 8 ಗಂಟೆವರೆಗೆ ವಿಜ್ಞಾನಿಗಳ ಜತೆಗೆ ಸಭೆ ನಡೆಸಲಿದ್ದಾರೆ. ಬೆಳಗ್ಗೆ 8.35ಕ್ಕೆ ಎಚ್‌ಎಎಲ್‌ನಿಂದ ಹೊರಟು 11.35ಕ್ಕೆ ನವದೆಹಲಿಗೆ ವಾಪಸ್ ಹೋಗಲಿದ್ದಾರೆ.</p>
]]></content:encoded>
					
		
		
			</item>
		<item>
		<title>ಯಶಸ್ವಿ ಚಂದ್ರಯಾನ : ಇಸ್ರೋ ಕಚೇರಿಗೆ ಭೇಟಿ ನೀಡಿ, ವಿಜ್ಞಾನಿಗಳನ್ನು ಅಭಿನಂದಿಸಿದ ಸಿಎಂ ಸಿದ್ದರಾಮಯ್ಯ</title>
		<link>https://peepalmedia.com/cm-siddaramaiah-visited-the-isro-office-and-congratulated-the-scientists/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 24 Aug 2023 10:22:47 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[Chandrayan 3]]></category>
		<category><![CDATA[isro]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Siddaramaiah]]></category>
		<guid isPermaLink="false">https://peepalmedia.com/?p=26295</guid>

					<description><![CDATA[ಚಂದ್ರಯಾನ – 3 ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಪಾದಗಳನ್ನಿಟ್ಟು ಭಾರತ ಖ್ಯಾತಿಯನ್ನು ಜಗತ್ತಿನಾದ್ಯಂತ ಪಸರಿಸಿದೆ. ಇದು ದೇಶ ಮಾತ್ರವಲ್ಲ, ನಮ್ಮ ಕರುನಾಡಿನ ಉತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಚಂದ್ರಾಯಾನ-3 ರ ರೂವಾರಿ ಇಸ್ರೋ ಸಂಸ್ಥೆ ನಮ್ಮ ಬೆಂಗಳೂರಿನಲ್ಲಿ ಇರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಈ ಮಹತ್‌ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ರಾಜ್ಯದ ಸಿ ಎಂ ಸಿದ್ದರಾಮಯ್ಯ ಸೇರಿದಂತೆ ಇಡೀ ದೇಶವೇ ನಮ್ಮ ಇಸ್ರೋ ವಿಜ್ಞಾನಿಗಳನ್ನು ಕೊಂಡಾಡುತ್ತಿದೆ. [&#8230;]]]></description>
										<content:encoded><![CDATA[
<p>ಚಂದ್ರಯಾನ – 3 ಯಶಸ್ವಿಯಾಗಿ ಚಂದ್ರನ ನೆಲದ ಮೇಲೆ ಪಾದಗಳನ್ನಿಟ್ಟು ಭಾರತ ಖ್ಯಾತಿಯನ್ನು ಜಗತ್ತಿನಾದ್ಯಂತ ಪಸರಿಸಿದೆ. ಇದು ದೇಶ ಮಾತ್ರವಲ್ಲ, ನಮ್ಮ ಕರುನಾಡಿನ ಉತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ. ಚಂದ್ರಾಯಾನ-3 ರ ರೂವಾರಿ ಇಸ್ರೋ ಸಂಸ್ಥೆ ನಮ್ಮ ಬೆಂಗಳೂರಿನಲ್ಲಿ ಇರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.</p>



<p>ಈ ಮಹತ್‌ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ರಾಜ್ಯದ ಸಿ ಎಂ ಸಿದ್ದರಾಮಯ್ಯ ಸೇರಿದಂತೆ ಇಡೀ ದೇಶವೇ ನಮ್ಮ ಇಸ್ರೋ ವಿಜ್ಞಾನಿಗಳನ್ನು ಕೊಂಡಾಡುತ್ತಿದೆ.</p>



<p>ಬುಧವಾರ ಸಂಜೆ 6:04ಕ್ಕೆ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ತನ್ನ ಪಾದಗಳನ್ನೂರುವುದನ್ನು ಕಣ್ತುಂಬಿಕೊಂಡಿದ್ದ ಸಿ ಎಂ ಸಿದ್ದರಾಮಯ್ಯ ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕಚೇರಿಗೇ ಬೇಟಿ ನೀಡಿ ಹೋಗಿ ಚಂದ್ರಯಾನ್‌ -3 ಕ್ಕಾಗಿ ಅವಿರತ ಶ್ರಮಿಸಿರುವ ವಿಜ್ಞಾನಿಗಳನ್ನು ಬೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.<br>ನೆನ್ನೆ ಚಂದ್ರಯಾನ್‌ ಯಶಸ್ಸಿಗೆ ತಮ್ಮ ಹರ್ಷ ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಟ್ವೀಟ್‌ ಮಾಡಿ… ಎಂದು ತಿಳಿಸಿದ್ದರು.</p>



<p>ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ಹಾಗೂ ಇತರ ವಿಜ್ಞಾನಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವಿಸಿದರು. ತಮ್ಮ ಕೈಯಾರೆ ಸಿಹಿ ಹಂಚಿ ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಎನ್‌. ಬೋಸರಾಜು ಅವರ ಜೊತೆಗಿದ್ದರು.</p>



<p>ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಇಸ್ರೋ ಅಧ್ಯಕ್ಷರಾದ ಎಸ್‌. ಸೋಮನಾಥ್‌ ಮತ್ತು ಇತರ ವಿಜ್ಞಾನಿಗಳನ್ನು ಸರ್ಕಾರದ ವತಿಯಿಂದ ಗೌರವಿಸಲು ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಸರ್ಕಾರದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.</p>



<p>ಚಂದ್ರಯಾನ ನಮಗೆಲ್ಲ ಹೆಮ್ಮೆ ತರುವಂತಹ ವಿಚಾರ. ನಾನು ಕೂಡ ಬುಧವಾರ ವಿಕ್ರಂ ಲ್ಯಾಂಡರ್‌ ಲ್ಯಾಂಡಿಂಗ್ ವೀಕ್ಷಣೆ ಮಾಡಿದ್ದೇನೆ. ಖುಷಿ ಆಯ್ತು, ಬಹಳ ಹೆಮ್ಮೆ ಎನಿಸಿದೆ. ಇದೊಂದು ದೊಡ್ಡ ಸಾಧನೆ. ಹಲವು ವರ್ಷಗಳಿಂದ ವಿಜ್ಞಾನಿಗಳು ಶ್ರಮಪಡುತ್ತಿದ್ದಾರೆ. ಅಂದಾಜು 500 ವಿಜ್ಞಾನಿಗಳ ಪರಿಶ್ರಮದ ಫಲ ಇದು. ಇಸ್ರೋ ತಂಡವನ್ನು ಸನ್ಮಾನಿಸಲು ನಾವು ವಿಶೇಷ ಸಮಾರಂಭ ಮಾಡ್ತೇವೆ. ಇಸ್ರೋ ಸಾಧನೆಯಿಂದ ಇಡೀ ಜಗತ್ತು ಭಾರತದ ಕಡೆಗೆ ನೋಡುವಂಥ ಕೆಲಸವಾಗಿದೆ. </p>



<p>ಜಗತ್ತಿನಲ್ಲಿಯೇ ರಷ್ಯಾ, ಅಮೆರಿಕ, ಚೈನಾ ದೇಶಗಳನ್ನು ಬಿಟ್ಟರೆ ಚಂದ್ರನ ದಕ್ಷಿಣ ಭಾಗದಲ್ಲಿ ಕಾಲಿರಿಸಿರುವ ನಾಲ್ಕನೇ ದೇಶ ಭಾರತ. ನಾವೆಲ್ಲರೂ ಇಸ್ರೋ ಸಾಧನೆಯನ್ನು ಮೆಚ್ಚಿ ಅಭಿನಂದಿಸಬೇಕು ಎಂದು ಹೇಳಿದರು.</p>



<p>ತಮ್ಮ ಬೇಟಿಯ ನಂತರ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿಗಳು “ಇವರು ಚಂದ್ರಯಾನ-3 ಯೋಜನೆಯ ಯಶಸ್ಸಿನ ಹಿಂದಿರುವ ಶಕ್ತಿಗಳು. ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರದ ಮೇಲೆ ಇಳಿದ ಕ್ಷಣದಿಂದ ಇಡೀ ವಿಶ್ವವೇ ಇವರ ಸಾಧನೆಯನ್ನು ಕೊಂಡಾಡುತ್ತಿದೆ. ಇಡೀ ವಿಶ್ವವೇ ಗುರುತಿಸಿ ಕೊಂಡಾಡುತ್ತಿರುವ ಇಸ್ರೋ ಸಂಸ್ಥೆ ನಮ್ಮ ಕರ್ನಾಟಕದ ನೆಲದಲ್ಲಿರುವುದು ಕನ್ನಡಿಗರ ಪಾಲಿಗೆ ಹೆಮ್ಮೆಯ ಸಂಗತಿ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿರುವ ಇಸ್ರೋ ಮುಂದಿನ ದಿನಗಳಲ್ಲಿ ಮಾನವ ಸಹಿತ ಚಂದ್ರಯಾನ ಹಾಗೂ ಸೌರಗ್ರಹ ಯಾನಗಳನ್ನೂ ಸಾಧಿಸಿ ಭಾರತೀಯರ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಹಾರೈಸುತ್ತೇನೆ.” ಎಂದು ಹೇಳಿದ್ದಾರೆ.</p>



<p>ಈ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿಗಳ ಸರಳತೆಗೆ ಬೆರಗಾದ ಸಿದ್ದರಾಮಯ್ಯ ಅವರೊಂದಿಗೆ ಎಲ್ಲಾ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಸಂಭ್ರಮದಿಂದ ಫೋಟೋ ತೆಗೆಸಿಕೊಂಡರು. ರಾಜ್ಯದ ಮುಖ್ಯಮಂತ್ರಿ ತಮ್ಮ ಬಳಿ ಬಂದು ಮೆಚ್ಚುಗೆ ಸೂಚಿಸಿದ್ದಕ್ಕೆ ಅವರಿಗಾದ ಸಂತಸವನ್ನು ಅವರ ನಗುಮುಖಗಳೇ ಹೇಳುತ್ತಿದ್ದವು.</p>
]]></content:encoded>
					
		
		
			</item>
		<item>
		<title>ಐತಿಹಾಸಿಕ ಹೆಜ್ಜೆಯತ್ತ ಇಸ್ರೋ : ವಿಕ್ರಂ ಲ್ಯಾಂಡರ್ ಮೊದಲ ಹಂತದ ಕಾರ್ಯ ಪೂರ್ಣ</title>
		<link>https://peepalmedia.com/first-stage-of-vikram-lander-is-completed/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 18 Aug 2023 11:53:19 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[Chandrayan 3]]></category>
		<category><![CDATA[isro]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[Vikram Lander]]></category>
		<guid isPermaLink="false">https://peepalmedia.com/?p=25832</guid>

					<description><![CDATA[ಚಂದ್ರಯಾನ 3 ಮಿಷನ್ ನಲ್ಲಿ ಮಹತ್ವದ ಸುದ್ದಿ ಹೊರಬಿದ್ದಿದ್ದು, ವಿಕ್ರಮ್ ಲ್ಯಾಂಡರಿನ ಡೀಬೂಸ್ಟ್ ಮಾಡುವ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮುಂದಿನ ಹಂತದ ಡೀಬೂಸ್ಟಿಂಗ್ ಆಗಸ್ಟ್ 20 ರಂದು ನಡೆಯಲಿದೆ ಎಂದು ಇಸ್ರೋ ಅಧಿಕೃತವಾಗಿ ತಿಳಿಸಿದೆ. ಈ ಕುರಿತು ಇಸ್ರೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದೆ. ಆ ಮೂಲಕ ಚಂದ್ರಯಾನ 3 ಯಲ್ಲಿ ಮೊದಲ ಹಂತವನ್ನು ಇಸ್ರೋ ಯಶಸ್ವಿಯಾಗಿ ಪೂರೈಸಿದ್ದೆವೆ ಎಂದು ಹೇಳಿಕೊಂಡಿದೆ. ಅಧಿಕೃತವಾಗಿ ಸಿಕ್ಕ ಮಾಹಿತಿಯ ಪ್ರಕಾರ, ಲ್ಯಾಂಡರ್ ಮಾಡ್ಯೂಲ್ (LM) [&#8230;]]]></description>
										<content:encoded><![CDATA[
<p>ಚಂದ್ರಯಾನ 3 ಮಿಷನ್ ನಲ್ಲಿ ಮಹತ್ವದ ಸುದ್ದಿ ಹೊರಬಿದ್ದಿದ್ದು, ವಿಕ್ರಮ್ ಲ್ಯಾಂಡರಿನ ಡೀಬೂಸ್ಟ್ ಮಾಡುವ ಮೊದಲ ಹಂತ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮುಂದಿನ ಹಂತದ ಡೀಬೂಸ್ಟಿಂಗ್ ಆಗಸ್ಟ್ 20 ರಂದು ನಡೆಯಲಿದೆ ಎಂದು ಇಸ್ರೋ ಅಧಿಕೃತವಾಗಿ ತಿಳಿಸಿದೆ.</p>



<p>ಈ ಕುರಿತು ಇಸ್ರೋ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದೆ. ಆ ಮೂಲಕ ಚಂದ್ರಯಾನ 3 ಯಲ್ಲಿ ಮೊದಲ ಹಂತವನ್ನು ಇಸ್ರೋ ಯಶಸ್ವಿಯಾಗಿ ಪೂರೈಸಿದ್ದೆವೆ ಎಂದು ಹೇಳಿಕೊಂಡಿದೆ.</p>



<p>ಅಧಿಕೃತವಾಗಿ ಸಿಕ್ಕ ಮಾಹಿತಿಯ ಪ್ರಕಾರ, ಲ್ಯಾಂಡರ್ ಮಾಡ್ಯೂಲ್ (LM) ತನ್ನ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿದೆ. ಲ್ಯಾಂಡರ್ ಮಾಡ್ಯೂಲ್ ಡಿಬೂಸ್ಟಿಂಗ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಅದು ತನ್ನ ಕಕ್ಷೆಯನ್ನ 113 ಕಿಮೀ x 157 ಕಿಮೀಗೆ ಇಳಿಸಿದೆ. ಎರಡನೇ ಡೀಬೂಸ್ಟಿಂಗ್ ಕಾರ್ಯಾಚರಣೆಯನ್ನ 20 ಆಗಸ್ಟ್ 2023 ರಂದು ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಲಾಗಿದೆ ಎಂದು ಇಸ್ರೋ ಟ್ವಿಟ್ಟರ್ ನಲ್ಲಿ ತಿಳಿಸಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Chandrayaan-3 Mission:<br>The Lander Module (LM) health is normal.<br><br>LM successfully underwent a deboosting operation that reduced its orbit to 113 km x 157 km.<br><br>The second deboosting operation is scheduled for August 20, 2023, around 0200 Hrs. IST <a href="https://twitter.com/hashtag/Chandrayaan_3?src=hash&amp;ref_src=twsrc%5Etfw">#Chandrayaan_3</a><a href="https://twitter.com/hashtag/Ch3?src=hash&amp;ref_src=twsrc%5Etfw">#Ch3</a> <a href="https://t.co/0PVxV8Gw5z">pic.twitter.com/0PVxV8Gw5z</a></p>&mdash; ISRO (@isro) <a href="https://twitter.com/isro/status/1692484515963588645?ref_src=twsrc%5Etfw">August 18, 2023</a></blockquote><script async src="https://platform.twitter.com/widgets.js" charset="utf-8"></script>
</div></figure>
]]></content:encoded>
					
		
		
			</item>
		<item>
		<title>ಚಂದ್ರಯಾನ-3 ಗೆ ಕ್ಷಣಗಣನೆ : ಹೇಗಿದೆ ತಯಾರಿ?</title>
		<link>https://peepalmedia.com/countdown-to-chandrayaan-3-how-is-the-preparation/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 13 Jul 2023 07:42:30 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[Chandrayan 3]]></category>
		<category><![CDATA[isro]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=23637</guid>

					<description><![CDATA[ಚಂದ್ರಯಾನ-3 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.&#160;ಚಂದ್ರಯಾನ-2 ತನ್ನ ಕೊನೆಯ ಹಂತದಲ್ಲಿ ವಿಫಲದ ನಂತರ ಮಹತ್ವದ ಉಪಗ್ರಹ ನೌಕೆಯ ಉಡಾವಣೆಗೆ ಹೆಚ್ಚು ಗಮನ ಸೆಳೆದಿದೆ. ಚಂದ್ರನತ್ತ ಭಾರತದ ಮೂರನೇ ಮಿಷನ್ ಶುಕ್ರವಾರ ಮಧ್ಯಾಹ್ನ 2:35 ಕ್ಕೆ ಟೇಕಾಫ್ ಆಗಲಿದೆ. ಚಂದ್ರಯಾನದ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮೂಲಕ ಭಾರತವನ್ನು ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾದ ನಂತರ ಈ ಸಾಧನೆಯನ್ನು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ. 2019 ರಲ್ಲಿ ಇಸ್ರೇಲ್ ಮತ್ತು ಭಾರತದ ಕಾರ್ಯಾಚರಣೆಗಳು ಕ್ರ್ಯಾಶ್-ಲ್ಯಾಂಡ್ ಆದ ನಂತರ ಮತ್ತು [&#8230;]]]></description>
										<content:encoded><![CDATA[
<p>ಚಂದ್ರಯಾನ-3 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.&nbsp;ಚಂದ್ರಯಾನ-2 ತನ್ನ ಕೊನೆಯ ಹಂತದಲ್ಲಿ ವಿಫಲದ ನಂತರ ಮಹತ್ವದ ಉಪಗ್ರಹ ನೌಕೆಯ ಉಡಾವಣೆಗೆ ಹೆಚ್ಚು ಗಮನ ಸೆಳೆದಿದೆ.</p>



<p>ಚಂದ್ರನತ್ತ ಭಾರತದ ಮೂರನೇ ಮಿಷನ್ ಶುಕ್ರವಾರ ಮಧ್ಯಾಹ್ನ 2:35 ಕ್ಕೆ ಟೇಕಾಫ್ ಆಗಲಿದೆ. ಚಂದ್ರಯಾನದ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಮೂಲಕ ಭಾರತವನ್ನು ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾದ ನಂತರ ಈ ಸಾಧನೆಯನ್ನು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ.</p>



<p>2019 ರಲ್ಲಿ ಇಸ್ರೇಲ್ ಮತ್ತು ಭಾರತದ ಕಾರ್ಯಾಚರಣೆಗಳು ಕ್ರ್ಯಾಶ್-ಲ್ಯಾಂಡ್ ಆದ ನಂತರ ಮತ್ತು ಜಪಾನ್‌ನಿಂದ ಲ್ಯಾಂಡರ್-ರೋವರ್ ಅನ್ನು ಹೊತ್ತೊಯ್ಯುವ ಬಾಹ್ಯಾಕಾಶ ನೌಕೆ ಮತ್ತು ಯುಎಇಯಿಂದ ರೋವರ್ 2022 ರಲ್ಲಿ ವಿಫಲವಾದ ನಂತರ ಈ ಸ್ಥಾನವು&nbsp;ಖಾಲಿಯಾಗಿತ್ತು. ಸಧ್ಯ ಈಗ ಭಾರತ ನಾಲ್ಕೇ ವರ್ಷಗಳಲ್ಲಿ ಚಂದ್ರಯಾನದ ಮತ್ತೊಂದು ಪ್ರಯೋಗಕ್ಕೆ ಇಸ್ರೋ ಗ್ರೀನ್ ಸಿಗ್ನಲ್ ನೀಡಿದೆ.</p>



<p>ಇಸ್ರೋ ವಿಜ್ಞಾನಿ ಸತೀಶ್ ಧವನ್ ಅವರು ಬಾಹ್ಯಾಕಾಶ ಕೇಂದ್ರದಲ್ಲಿ ಎಲ್ಲ ಸಿದ್ಧತೆಗಳನ್ನು ಗಮನಿಸಿ ಈ ಬಾರಿ ಯಾವುದೇ ವೈಫಲ್ಯಗಳು ಆಗದಂತೆ ಸಿದ್ಧತೆ ನಡೆಸುತ್ತಿದ್ದಾರೆ. ಭಾರತವು ಈ ಹಿಂದೆ ಚಂದ್ರಯಾನ-1 ಮತ್ತು ಚಂದ್ರಯಾನ-2 ಮಿಷನ್‌ಗಳಲ್ಲಿ ಚಂದ್ರನ ಮೇಲೆ ಉಪಗ್ರಹಗಳನ್ನು ಕಳುಹಿಸಿತ್ತು. ಚಂದ್ರಯಾನ-2 ಮಿಷನ್‌ನಲ್ಲಿ ಲ್ಯಾಂಡರ್ ಕೂಡ ಸೇರಿತ್ತು, ಆದರೆ ಅದು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಲಿಲ್ಲ. ಈ ಬಾರಿ ಚಂದ್ರಯಾನ-3 ಮಿಷನ್‌ನಲ್ಲಿ ಲ್ಯಾಂಡರ್ ವಿಕ್ರಮ್ ಮತ್ತು ಅದರೊಳಗಿನ ರೋವರ್ ಪ್ರಗ್ಯಾನ್ ಅನ್ನು ಚಂದ್ರನ ಮೇಲೆ ಇಳಿಸಲಾಗುತ್ತಿದೆ.</p>



<p>ಮೂರರಿಂದ ಆರು ತಿಂಗಳ ಕಾಲ ಚಂದ್ರನ ಸುತ್ತ ಕಕ್ಷೆಯಲ್ಲಿ ಉಳಿಯುವ ಪ್ರೊಪಲ್ಷನ್ ಮಾಡ್ಯೂಲ್‌ಗೆ ಹೊಸ ಪ್ರಯೋಗವನ್ನು ಮಾಡಲಾಗಿದೆ.&nbsp;ಸ್ಪೆಕ್ಟ್ರೋ-ಪೋಲಾರಿಮೆಟ್ರಿ ಆಫ್ ಹ್ಯಾಬಿಟಬಲ್ ಪ್ಲಾನೆಟ್ ಅರ್ಥ್ (SHAPE) ಎಂದು ಕರೆಯಲ್ಪಡುವ ಇದು ಪ್ರತಿಫಲಿತ ಬೆಳಕಿನಲ್ಲಿ ವಾಸಯೋಗ್ಯವಾಗಿರುವ ಸಣ್ಣ ಗ್ರಹಗಳನ್ನು (ಚಂದ್ರನ ಸುತ್ತ ಸುತ್ತುವ) ಹುಡುಕುತ್ತದೆ.</p>
]]></content:encoded>
					
		
		
			</item>
		<item>
		<title>ನಂಬಿ ನಾರಾಯಣನ್‌ ಬೇಹುಗಾರಿಗೆ ಪ್ರಕರಣ : ನಾಲ್ವರು ಆರೋಪಿಗಳಿಗೆ ಜಾಮೀನು ರದ್ದು</title>
		<link>https://peepalmedia.com/nambi-narayanan-spy-case-bail-canceled-for-four-accused/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 02 Dec 2022 06:12:42 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[isro]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[nambi narayanan]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=17255</guid>

					<description><![CDATA[ಕೇರಳ: ವಿಜ್ಞಾನಿ ನಂಬಿ ನಾರಾಯಣನ್‌ &#160;ಅವರನ್ನು ದೇಶದ್ರೋಹಿ ಎಂಬ ಆರೋಪದಡಿ ಸಿಲುಕಿಸಿದ್ದ ನಾಲ್ವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ ಬಂಧನ ಪೂರ್ವ ಜಾಮೀನು ರದ್ದು ಮಾಡಿದೆ. 1994 ರ ಇಸ್ರೋ ಬೇಹುಗಾರಿಗೆ ಪ್ರಕರಣದಲ್ಲಿ ವಿಜ್ಞಾನಿ ನಂಬಿ ನಾರಾಯಣನ್ ಅವರ ಕೈವಾಡವಿದೆ ಎಂಬ ಆರೋಪದ ಪ್ರಕರಣದಲ್ಲಿ ಅರೋಪಿಗಳಾಗಿದ್ದ ಮಾಜಿ ಪೊಲೀಸ್‌ ಮಹಾನಿರ್ದೇಶಕ(ಡಿಜಿಪಿ) ಸೇರಿದಂತೆ ನಾಲ್ವರು ಪೊಲೀಸ್‌ ಅಧಿಕಾರಿಗಳಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂ ಕೋರ್ಟ್‌ ಶುಕ್ರವಾರದಂದು ರದ್ದುಗೊಳಿಸಿದೆ. ಇಸ್ರೋದ ಕ್ರಯೋಜನಿಕ್‌ ಎಂಜಿನ್‌ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತಿದ್ದ ನಂಬಿ ನಾರಾಯಣ್‌ ಅವರು [&#8230;]]]></description>
										<content:encoded><![CDATA[
<p><strong>ಕೇರಳ:</strong> ವಿಜ್ಞಾನಿ ನಂಬಿ ನಾರಾಯಣನ್‌ &nbsp;ಅವರನ್ನು ದೇಶದ್ರೋಹಿ ಎಂಬ ಆರೋಪದಡಿ ಸಿಲುಕಿಸಿದ್ದ ನಾಲ್ವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ ಬಂಧನ ಪೂರ್ವ ಜಾಮೀನು ರದ್ದು ಮಾಡಿದೆ.</p>



<p>1994 ರ ಇಸ್ರೋ ಬೇಹುಗಾರಿಗೆ ಪ್ರಕರಣದಲ್ಲಿ ವಿಜ್ಞಾನಿ ನಂಬಿ ನಾರಾಯಣನ್ ಅವರ ಕೈವಾಡವಿದೆ ಎಂಬ ಆರೋಪದ ಪ್ರಕರಣದಲ್ಲಿ ಅರೋಪಿಗಳಾಗಿದ್ದ ಮಾಜಿ ಪೊಲೀಸ್‌ ಮಹಾನಿರ್ದೇಶಕ(ಡಿಜಿಪಿ) ಸೇರಿದಂತೆ ನಾಲ್ವರು ಪೊಲೀಸ್‌ ಅಧಿಕಾರಿಗಳಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂ ಕೋರ್ಟ್‌ ಶುಕ್ರವಾರದಂದು ರದ್ದುಗೊಳಿಸಿದೆ.</p>



<p>ಇಸ್ರೋದ ಕ್ರಯೋಜನಿಕ್‌ ಎಂಜಿನ್‌ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತಿದ್ದ ನಂಬಿ ನಾರಾಯಣ್‌ ಅವರು 1994ರಲ್ಲಿ ರಕ್ಷಣಾ ವಲಯದ ರಹಸ್ಯಗಳನ್ನು ಮಾಲ್ಡೀವ್ಸ್‌ನ ಮರಿಯಂ ರಶೀದಾ ಮತ್ತು ಫೌಜಿಯಾ ಹಸನ್‌ ಅವರಿಗೆ ಮಾರಟ ಮಾಡಿದ ಆರೋಪದಡಿ ಅವರನ್ನು ಬಂಧಿಸಲಾಗಿತ್ತು. ಕ್ರಯೋಜೆನಿಕ್‌ ಎಂಜಿನ್‌ ಯೋಜನೆಯ ಉಪನಿರ್ದೇಶಕರಾಗಿದ್ದ ಶಶಿಕುಮಾರ್‌ ಅವರ ಹೆಸರು ಮರಿಯಂ ಅವರ ಡೈರಿಯಲ್ಲಿ ಕಾಣಿಸಿಕೊಂಡಿತ್ತು ಎಂದು ತನಿಖೆಯ ವೇಳೆ ಪೊಲೀಸರು ಹೇಳಿದ್ದರು, ಆದರೆ ನಾರಾಯಣ್‌ ಅವರನ್ನು ಯಾವುದೇ ಆಧಾರವಿಲ್ಲದೆ ಆರೋಪಿಯಾಗಿ ಬಂಧಿಸಲಾಗಿದೆ ಎಂದು 1996ರಲ್ಲಿ ಸಿಬಿಐ ಪೊಲೀಸರು ಹೇಳಿದ್ದರು. ಕೊನೆಗೆ 1998 ರಲ್ಲಿ ಸುಪ್ರೀಂ ಕೋರ್ಟ್‌ ಈ ಪ್ರಕರಣವನ್ನೇ ವಜಾ ಮಾಡಿತ್ತು.</p>



<p>ನಂತರ ಧ್ವನಿ ಎತ್ತಿದ&nbsp; ನಂಬಿ ನಾರಾಯಣನ್ ತಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕಾಗಿ ತಮಗಾದ ಮಾನನಷ್ಟಕ್ಕೆ ಪರಿಹಾರ ಕೋರಿ ಕಾನೂನಿನ ಮೊರೆ ಹೋಗಿದ್ದಲ್ಲದೆ ಯಾವುದೇ ಆಧಾರವಿಲ್ಲದೆ ಸುಳ್ಳು ಆರೋಪ ವಹಿಸಿ ಬಂಧಿಸಿದ ನಾಲ್ವರು ಪೊಲೀಸರಿಗೆ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದರು.</p>



<p>ನಂತರ ಸುಪ್ರೀಂ ಕೋರ್ಟ್‌ ಆದೇಶದಂತೆ 2018 ರಲ್ಲಿ ನಾರಾಯಣನ್‌ ಅವರಿಗೆ 50 ಲಕ್ಷ.ರೂ ಮತ್ತು ರಾಷ್ಟೀಯ ಮಾನವ ಹಕ್ಕುಗಳ ಆಯೋಗದ ಶಿಫಾರಸ್ಸಿನಂತೆ ಅವರಿಗೆ 10 ಲಕ್ಷ.ರೂ ನೀಡಲಾಗಿತ್ತು.</p>



<p>ಇಸ್ರೊ ವಿಜ್ಞಾನಿ ನಂಬಿ ನಾರಾಯಣ್‌ ಅವರನ್ನು ಒಳಗೊಂಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ &nbsp;ಕೇರಳ ಹೈಕೋರ್ಟ್‌ ಆದೇಶಿಸಿದ್ದು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರಿಂ ಕೋರ್ಟ್‌ ಇಂದು ಪ್ರಕಟಿಸಿದ್ದು, ಆರೋಪಿಗಳಿಗೆ ಬಂಧನ ಪೂರ್ವ ಜಾಮೀನು ರದ್ದು ಮಾಡಿದೆ.</p>



<p>ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಲು ನ್ಯಾಯಾಲಯವು ಈ ಪ್ರಕರಣವನ್ನು ಕೇರಳ ಹೈಕೋರ್ಟ್‌ಗೆ ಹಿಂತಿರುಗಿಸಿದೆ.</p>



<p>ನ್ಯಾ.ಎಂ. ಆರ್‌ ಷಾ ಮತ್ತು ಸಿ.ಟಿ ರವಿಕುಮಾರ್‌ ಅವರಿದ್ದ ಪೀಠವು ಇಂದು ತೀರ್ಪು ನೀಡಿದ್ದು, ನಾಲ್ವರು ಆರೋಪಿಗಳನ್ನು ಐದು ವಾರಗಳವರೆಗೆ ಬಂಧಿಸದಂತೆ ಸಿಬಿಐಗೆ ಸೂಚಿಸಿದೆ.</p>
]]></content:encoded>
					
		
		
			</item>
		<item>
		<title>ಇಂದು ರಾತ್ರಿ 12 ಗಂಟೆಗೆ 36 ಉಪಗ್ರಹಗಳ‌ ಉಡಾವಣೆ : ಇಸ್ರೋ</title>
		<link>https://peepalmedia.com/indu-rathri-12-gantege-36-upa-grahagala-udavane-isro/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 22 Oct 2022 13:31:55 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[isro]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[satellite]]></category>
		<guid isPermaLink="false">https://peepalmedia.com/?p=12607</guid>

					<description><![CDATA[ಬೆಂಗಳೂರು : ಇಸ್ರೋ ಇಂದು ರಾತ್ರಿ 12 ಗಂಟೆ 7 ಸೆಕೆಂಡ್‌ಗೆ ವೆಬ್ ಜಾಗತಿಕ ಸಂವಹನ ಜಾಲದ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) , ಇಂದು ರಾತ್ರಿ 12 ಗಂಟೆ 7 ಸೆಕೆಂಡ್‌ಗೆ ಒನ್ ವೆಬ್ ಜಾಗತಿಕ ಸಂವಹನ ಜಾಲದ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇಸ್ರೋದ ಅತಿಭಾರದ ರಾಕೆಟ್ ಎಲ್‌ವಿಎಂ &#8211; 3 ಮೂಲಕ ಶ್ರೀಹರಿಕೋಟ ಉಪಗ್ರಹ ಉಡಾವಣಾ ಕೇಂದ್ರದಿಂದ ಈ ಕಾರ್ಯಾಚರಣೆ ನಡೆಯಲಿದೆ. ಭಾರತದ ಅತೀ&#160; ಭಾರದ [&#8230;]]]></description>
										<content:encoded><![CDATA[
<p style="font-size:20px"><strong>ಬೆಂಗಳೂರು</strong> : ಇಸ್ರೋ ಇಂದು ರಾತ್ರಿ 12 ಗಂಟೆ 7 ಸೆಕೆಂಡ್‌ಗೆ ವೆಬ್ ಜಾಗತಿಕ ಸಂವಹನ ಜಾಲದ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.</p>



<p style="font-size:20px">ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) , ಇಂದು ರಾತ್ರಿ 12 ಗಂಟೆ 7 ಸೆಕೆಂಡ್‌ಗೆ ಒನ್ ವೆಬ್ ಜಾಗತಿಕ ಸಂವಹನ ಜಾಲದ 36 ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇಸ್ರೋದ ಅತಿಭಾರದ ರಾಕೆಟ್ ಎಲ್‌ವಿಎಂ &#8211; 3 ಮೂಲಕ ಶ್ರೀಹರಿಕೋಟ ಉಪಗ್ರಹ ಉಡಾವಣಾ ಕೇಂದ್ರದಿಂದ ಈ ಕಾರ್ಯಾಚರಣೆ ನಡೆಯಲಿದೆ.</p>



<p style="font-size:20px">ಭಾರತದ ಅತೀ&nbsp; ಭಾರದ ವಾಣಿಜ್ಯಾತ್ಮಕ ಉಪಗ್ರಹ LVM3 ಶ್ರೀಹರಿಕೋಟ ಉಡಾವಣೆ ಕೇಂದ್ರದಿಂದ ಈ ಕಾರ್ಯಾಚರಣೆ ನಡೆಯಲಿದ್ದು, ಇದು ಭಾರತದ ಸಾರ್ವಜನಿಕ ವಲಯದ ಬಾಹ್ಯಾಕಾಶ ಸಂಸ್ಥೆ NSIL ನ ಉಪಗ್ರಹವಾಗಿದೆ.</p>



<p style="font-size:20px">NSIL ಇಂಗ್ಲೆಂಡ್‌ ಮೂಲದ ಜಾಗತಿಕ ಸಂವಹನ ಜಾಲ ಒನ್ ವೆಬ್‌ ನೊಂದಿಗೆ ಸಹಿ ಹಾಕಿದ್ದು, ಇದು ಒನ್‌ ವೆಬ್‌ ನ ಮೊದಲ ಉಡಾವಣೆಯಾಗಿದೆ.</p>
]]></content:encoded>
					
		
		
			</item>
	</channel>
</rss>
