<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>jagdeep dhankhar &#8211; Peepal Media</title>
	<atom:link href="https://peepalmedia.com/tag/jagdeep-dhankhar/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 25 Nov 2024 08:37:52 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>jagdeep dhankhar &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಪ್ರತಿಪಕ್ಷಗಳು ಅದಾನಿ ಭ್ರಷ್ಟಾಚಾರದ ಚರ್ಚೆಗೆ ಎದ್ದಂತೆ ಕಲಾಪವನ್ನು ಮುಂದೂಡಿದ ರಾಜ್ಯಸಭಾ ಅಧ್ಯಕ್ಷರು</title>
		<link>https://peepalmedia.com/parliament-adjourned-as-opp-demands-discussion-on-adani-bribery/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 25 Nov 2024 08:37:10 +0000</pubDate>
				<category><![CDATA[ರಾಜಕೀಯ]]></category>
		<category><![CDATA[adani]]></category>
		<category><![CDATA[bjp]]></category>
		<category><![CDATA[Gautam Adani]]></category>
		<category><![CDATA[jagdeep dhankhar]]></category>
		<guid isPermaLink="false">https://peepalmedia.com/?p=49553</guid>

					<description><![CDATA[ಹೊಸದಿಲ್ಲಿ: ಗೌತಮ್‌ ಅದಾನಿ ವಿರುದ್ಧ ಅಮೆರಿಕದ ದೋಷಾರೋಪ ಪಟ್ಟಿ ಕುರಿತು ಚರ್ಚೆಗೆ ಆಗ್ರಹಿಸಿ ಸೋಮವಾರ (ನವೆಂಬರ್‌ 25) ಉಭಯ ಸದನಗಳು ಆರಂಭವಾದ ಬೆನ್ನಲ್ಲೇ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದ ಕಲಾಪ ತ್ವರಿತಗತಿಯಲ್ಲಿ ಮುಕ್ತಾಯಗೊಂಡಿತು. ರಾಜ್ಯಸಭೆಯ ಅಧ್ಯಕ್ಷರಾದ ಜಗದೀಪ್ ಧನಕರ್ ಅವರು ಅದಾನಿ ಗ್ರೂಪ್‌ನ ಭ್ರಷ್ಟಾಚಾರ, ಲಂಚ ಮತ್ತು ಹಣಕಾಸಿನ ಅಕ್ರಮಗಳ ಬಗ್ಗೆ ಪ್ರಸ್ತಾಪಿಸಲು ವಿರೋಧ ಪಕ್ಷದ ಸಂಸದರಿಂದ 13 ನೋಟಿಸ್‌ಗಳನ್ನು ಸ್ವೀಕರಿಸಿದರು. ಸಂಭಾಲ್, ಮಣಿಪುರ ಮತ್ತು ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ನಡೆದ ಹಿಂಸಾಚಾರದ ಬಗ್ಗೆ [&#8230;]]]></description>
										<content:encoded><![CDATA[
<p><strong>ಹೊಸದಿಲ್ಲಿ:</strong> ಗೌತಮ್‌ ಅದಾನಿ ವಿರುದ್ಧ ಅಮೆರಿಕದ ದೋಷಾರೋಪ ಪಟ್ಟಿ ಕುರಿತು ಚರ್ಚೆಗೆ ಆಗ್ರಹಿಸಿ ಸೋಮವಾರ (ನವೆಂಬರ್‌ 25) ಉಭಯ ಸದನಗಳು ಆರಂಭವಾದ ಬೆನ್ನಲ್ಲೇ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನದ ಕಲಾಪ ತ್ವರಿತಗತಿಯಲ್ಲಿ ಮುಕ್ತಾಯಗೊಂಡಿತು.</p>



<p>ರಾಜ್ಯಸಭೆಯ ಅಧ್ಯಕ್ಷರಾದ ಜಗದೀಪ್ ಧನಕರ್ ಅವರು ಅದಾನಿ ಗ್ರೂಪ್‌ನ ಭ್ರಷ್ಟಾಚಾರ, ಲಂಚ ಮತ್ತು ಹಣಕಾಸಿನ ಅಕ್ರಮಗಳ ಬಗ್ಗೆ ಪ್ರಸ್ತಾಪಿಸಲು ವಿರೋಧ ಪಕ್ಷದ ಸಂಸದರಿಂದ 13 ನೋಟಿಸ್‌ಗಳನ್ನು ಸ್ವೀಕರಿಸಿದರು. ಸಂಭಾಲ್, ಮಣಿಪುರ ಮತ್ತು ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ನಡೆದ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸುವಂತೆ ಕೆಲವು ಸದಸ್ಯರು ನೋಟಿಸ್‌ಗಳನ್ನು ಸಲ್ಲಿಸಿದರು.</p>



<p>ಹಾಗಿದ್ದೂ, ಧನಕರ್ ಅವರು ಈ ನೋಟಿಸ್‌ಗಳನ್ನು ತಿರಸ್ಕರಿಸಿ, “ಈ ಸೂಚನೆಗಳು ಈ ಪರವಾಗಿ ಅಧ್ಯಕ್ಷರು ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿಲ್ಲ. ಅದನ್ನು ಒಪ್ಪಿಕೊಳ್ಳುವಂತೆ ನನ್ನ ಮನವೊಲಿಸಲು ನನಗೆ ಸಾಧ್ಯವಾಗಲಿಲ್ಲ,” ಎಂದು ಹೇಳಿದರು.</p>



<p>ನಂತರ ಕಲಾಪವನ್ನು 15 ನಿಮಿಷಗಳ ಕಾಲ ಮತ್ತು ನಂತರ ದಿನದ ಉಳಿದ ಅವಧಿಗೆ ಮುಂದೂಡಲಾಯಿತು. ಬುಧವಾರ ಬೆಳಗ್ಗೆ 11 ಗಂಟೆಗೆ ಸದನ ಮತ್ತೆ ಸೇರಲಿದೆ.</p>



<p>ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂತಾಪ ಸೂಚನೆಗಳನ್ನು ಓದುವ ಮೂಲಕ ಕಲಾಪವನ್ನು ಆರಂಭಿಸಿದರು. ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸದನ ಒಂದು ನಿಮಿಷ ಮೌನಾಚರಣೆ ನಡೆಸಿತು.</p>



<p>ಬಿಲಿಯನೇರ್  ಗೌತಮ್ ಅದಾನಿ ಅವರ ಮೇಲಿರುವ ಯುಎಸ್ ದೋಷಾರೋಪಣೆಯ ಕುರಿತು ಚರ್ಚೆಗೆ ವಿರೋಧ ಪಕ್ಷದ ಸಂಸದರು ಪ್ರಶ್ನೆ ಕೇಳುತ್ತಿದ್ದಂತೆಯೇ, ಬಿರ್ಲಾ ಅವರು ಸದನವನ್ನು 12 ಗಂಟೆಗೆ ಮುಂದೂಡಲಾಗಿದೆ ಎಂದು ಘೋಷಿಸಿದರು. ಕಲಾಪ ಪುನರಾರಂಭಗೊಂಡಾಗ, ಪ್ರತಿಪಕ್ಷಗಳು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದವು, ಆ ಸಮಯದಲ್ಲಿ ಅಧ್ಯಕ್ಷರಾಗಿದ್ದ ಸಂಧ್ಯಾ ರೇ ಅದನ್ನು ತಿರಸ್ಕರಿಸಿದರು. ಲೋಕಸಭೆ ಬುಧವಾರ ಬೆಳಗ್ಗೆ 11 ಗಂಟೆಗೆ ಮತ್ತೆ ಸೇರಲಿದೆ.</p>



<p>ಕಳೆದ ವಾರ, US ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ (DoJ) ಮತ್ತು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ (SEC), ಭಾರತದಲ್ಲಿ 20 ವರ್ಷಗಳಲ್ಲಿ 2 ಬಿಲಿಯನ್‌ ಲಾಭ ತರುವ ಸೌರ ಶಕ್ತಿಯ ಒಪ್ಪಂದಗಳನ್ನು ಪಡೆಯಲು ಅದಾನಿ 2020 ರಿಂದ 2024 ರವರೆಗೆ 265 ಮಿಲಿಯನ್ ಡಾಲರ್ ಲಂಚ ನೀಡಿದ್ದಾರೆ ಎಂದು ಆರೋಪಿಸಿದ್ದವು.</p>



<p>&#8220;ಆಪಾದಿತರಂತೆ, ಪ್ರತಿವಾದಿಗಳು ಶತಕೋಟಿ ಡಾಲರ್ ಮೌಲ್ಯದ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಲು ವಿಸ್ತೃತ ಯೋಜನೆಯನ್ನು ಹಾಕಿದ್ದರು ಮತ್ತು ಗೌತಮ್ ಎಸ್. ಅದಾನಿ, ಸಾಗರ್ ಆರ್. ಅದಾನಿ ಮತ್ತು ವನೀತ್ ಎಸ್. ಜೈನ್ ಅವರು ಅಮೇರಿಕಾ ಮತ್ತು ಅಂತರಾಷ್ಟ್ರೀಯ ಹೂಡಿಕೆದಾರರಿಂದ ಬಂಡವಾಳವನ್ನು ಸಂಗ್ರಹಿಸಲು ಲಂಚದ ಬಗ್ಗೆ ಸುಳ್ಳು ಹೇಳಿದ್ದಾರೆ,&#8221; ಎಂದು ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್‌ನ ಯುನೈಟೆಡ್ ಸ್ಟೇಟ್ಸ್ ಅಟಾರ್ನಿ ಬ್ರೋನ್ ಪೀಸ್ ಹೇಳಿದ್ದರು</p>



<p></p>
]]></content:encoded>
					
		
		
			</item>
	</channel>
</rss>
