<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Jagruta Karnataka &#8211; Peepal Media</title>
	<atom:link href="https://peepalmedia.com/tag/jagruta-karnataka/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 04 Apr 2025 07:59:54 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Jagruta Karnataka &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಂದೂಡುವುದಲ್ಲ; ರದ್ದಾಗಬೇಕು: ಡಾ.ವಾಸು</title>
		<link>https://peepalmedia.com/the-constituency-redistribution-process-should-not-be-postponed-it-should-be-cancelled-dr-vasu/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 04 Apr 2025 07:59:53 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[bjp]]></category>
		<category><![CDATA[constituency]]></category>
		<category><![CDATA[Constituency redistribution]]></category>
		<category><![CDATA[india]]></category>
		<category><![CDATA[Jagruta Karnataka]]></category>
		<category><![CDATA[South Zone]]></category>
		<guid isPermaLink="false">https://peepalmedia.com/?p=56586</guid>

					<description><![CDATA[ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಂದೂಡುವುದಲ್ಲ; ರದ್ದಾಗಬೇಕು: ಡಾ.ವಾಸು &#8216;ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ; ಸಂವಿಧಾನ ಬದಲಾಯಿಸುವ ಬಗ್ಗೆ ಹುನ್ನಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಹಿಂದಿ ಭಾಷಿಕ ರಾಜ್ಯಗಳಲ್ಲಿ ತನ್ನ ಸ್ಥಾನ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಆದ್ದರಿಂದ, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನೇ ಶಾಶ್ವತವಾಗಿ ಮುಂದೂಡಬೇಕು&#8217; ಎಂದು ಹಲವು ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು. ಬೆಂಗಳೂರಿನ ಗಾಂಧಿ ಭವನದಲ್ಲಿ 2025 ಮಾರ್ಚ್ 3ರಂದು &#8216;ಜಾಗೃತ ಕರ್ನಾಟಕ&#8217; ಸಂಘಟನೆ ಏರ್ಪಡಿಸಿದ್ದ ದುಂಡು ಮೇಜಿನ ಸಭೆಯಲ್ಲಿ ರಾಜ್ಯದ ಹಲವು [&#8230;]]]></description>
										<content:encoded><![CDATA[
<p><strong>ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಂದೂಡುವುದಲ್ಲ; ರದ್ದಾಗಬೇಕು: ಡಾ.ವಾಸು</strong></p>



<p>&#8216;ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲಿದೆ; ಸಂವಿಧಾನ ಬದಲಾಯಿಸುವ ಬಗ್ಗೆ ಹುನ್ನಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಹಿಂದಿ ಭಾಷಿಕ ರಾಜ್ಯಗಳಲ್ಲಿ ತನ್ನ ಸ್ಥಾನ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಆದ್ದರಿಂದ, ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯನ್ನೇ ಶಾಶ್ವತವಾಗಿ ಮುಂದೂಡಬೇಕು&#8217; ಎಂದು ಹಲವು ಸಂಘಟನೆಗಳ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.</p>



<p>ಬೆಂಗಳೂರಿನ ಗಾಂಧಿ ಭವನದಲ್ಲಿ 2025 ಮಾರ್ಚ್ 3ರಂದು &#8216;ಜಾಗೃತ ಕರ್ನಾಟಕ&#8217; ಸಂಘಟನೆ ಏರ್ಪಡಿಸಿದ್ದ ದುಂಡು ಮೇಜಿನ ಸಭೆಯಲ್ಲಿ ರಾಜ್ಯದ ಹಲವು ಸಂಘಟನೆಗಳ ಮುಖಂಡರು, ಚಿಂತಕರು, ವಕೀಲರು ಹಾಗೂ ಕಾನೂನು ತಜ್ಞರು ಪಾಲ್ಗೊಂಡು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.</p>



<p>ಜಾಗೃತ ಕರ್ನಾಟಕ ಸಂಘಟನೆಯ ಬಿ.ಸಿ. ಬಸವರಾಜು ಮಾತನಾಡಿ, &#8220;ಈಗಿರುವ 543 ಲೋಕಸಭಾ ಸೀಟುಗಳಲ್ಲಿ ದಕ್ಷಿಣ ಭಾರತದ ಪಾಲು ಶೇ.24ರಷ್ಟಿದೆ. ಕ್ಷೇತ್ರ ಮರುವಿಂಗಡಣೆಯಾದರೆ ಲೋಕಸಭೆಯಲ್ಲಿ ದಕ್ಷಿಣ ರಾಜ್ಯಗಳ ಪಾಲು ಶೇ.19 ಕ್ಕೆ ಇಳಿಕೆ ಆಗುತ್ತವೆ. &#8216;ಡಿಲಿಮಿಟೇಷನ್‌ನಿಂದ ದಕ್ಷಿಣ ರಾಜ್ಯಗಳಿಗೆ ಒಂದೇಒಂದು ಸೀಟು ಕಡಿಮೆಯಾಗುವುದಿಲ್ಲ&#8217; ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳುತ್ತಿದ್ದಾರೆ. ಆದರೆ, ಉತ್ತರ ಭಾರತದ ರಾಜ್ಯಗಳ ಲೋಕಸಭಾ ಸ್ಥಾನಗಳು ಹೆಚ್ಚಾಗುವ ಬಗ್ಗೆ ಅವರು ಮಾತನಾಡುತ್ತಿಲ್ಲ&#8221; ಎಂದರು.</p>



<p>&#8220;ಶೇ.24 ರಷ್ಟು ಸಂಸದರಿದ್ದರೂ ದಕ್ಷಿಣದ ರಾಜ್ಯಗಳಿಗೆ ನ್ಯಾಯಯುತ ತೆರಿಗೆ ಪಾಲು ಸಿಗುತ್ತಿಲ್ಲ; ಬರ ಪರಿಹಾರ ಪಡೆಯಲು ಸುಪ್ರೀಂ ಕೋರ್ಟಿಗೆ ಹೋಗಬೇಕಾಯಿತು. ಈಗಲೇ ಪರಿಸ್ಥಿತಿ ಹೀಗಿದೆ; ಇನ್ನು ಕ್ಷೇತ್ರ ಮರುವಿಂಗಡಣೆಯಿಂದ ನಮ್ಮ ಪ್ರಾತಿನಿಧ್ಯ ಕಡಿಮೆಯಾದರೆದ ನಮ್ಮ ಮುಂದಿನ ಪರಿಸ್ಥಿತಿ ಏನಾಗಬಹುದು ಊಹಿಸಿ. ನಮ್ಮ ತೆರಿಗೆ ಪಾಲು ಬಿಡಿ, 15 ನೇ ಹಣಕಾಸು ಆಯೋಗದ ನಿರ್ಧಾರದಂತೆ ನಮ್ಮ ರಾಜ್ಯಕ್ಕೆ ಕೊಡಬೇಕಾದ ಅನುದಾನವನ್ನೂ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಈ ಎಲ್ಲ ಅಪಾಯಗಳನ್ನು ನಾವು ಆರ್ಥ ಮಾಡಿಕೊಳ್ಳಬೇಕು; ಈವರೆಗಿನ ಎಲ್ಲ ಅಪಾಯಗಳ ತಾಯಿಯೇ ಈ ಕ್ಷೇತ್ರ ಮರುವಿಂಗಡಣೆ&#8221; ಎಂದು ವಿವರಿಸಿದರು.</p>



<p>&#8220;ಕ್ಷೇತ್ರ ಮರುವಿಗಂಡಣೆ ಮಾಡಿದ ಬಳಿಕ ತೆರಿಗೆ ಹಾಗೂ ಸೆಸ್‌ನಲ್ಲಿ ಸಮಾನ ಪಾಲು ಹಂಚಿಕೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಬಹುದು. ಒಕ್ಕೂಟ ಸರ್ಕಾರದಲ್ಲಿ ರಾಜ್ಯಕ್ಕೆ ಹೆಚ್ಚಿನ ಅಧಿಕಾರ ನೀಡಿದ ಬಳಿಕವೂ, ನೇರವಾಗಿ ದುಷ್ಪರಿಣಾಮ ಬೀರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿಯೇ ತೀರುತ್ತದೆ. ಲೋಕಸಭಾ ಸಂಸದರು ಹೆಚ್ಚಿಗೆ ಇಲ್ಲ ಎಂಬ ಕಾರಣಕ್ಕೆ ಕರ್ನಾಟಕಕ್ಕೆ ಬರಬೇಕಿರುವ ಒಳ್ಳೆಯ ಕೈಗಾರಿಕೆಯೊಂದನ್ನು ಹಿಂದಿ ರಾಜ್ಯಕ್ಕೆ ನೀಡಬಹುದು. ಈ ಎಲ್ಲ ಸಂಭವನೀಯ ಅಪಾಯ ಗೊತ್ತಿದ್ದೂ ಸುಮ್ಮನಿದ್ದರೆ, ಮುಂದಿನ ಅಪಾಯಕ್ಕೆ ನಾವೆಲ್ಲರೂ ಹೊಣೆಯಾಗುತ್ತೇವೆ&#8221; ಎಂದು ಹೇಳಿದರು.</p>



<p>ಹಿರಿಯ ರಾಜಕಾರಣಿ ಹಾಗೂ ಸಾಮಾಜಿಕ ಹೋರಾಟಗಾರರಾದ ರಮೇಶ್ ಬೆಲ್ಲಂಕೊಂಡ ಮಾತನಾಡಿ, &#8220;ಕ್ಷೇತ್ರ ಮರುವಿಂಗಡಣೆ ಬಳಿಕ ಕೇಂದ್ರ ಸರ್ಕಾರ ತಾನು ನೀಡಿದ ಭರವಸೆಗಳನ್ನು ಈಡೇರಿಸದೇ ಇರಬಹುದು; ದಕ್ಷಿಣ ಭಾರತದ ಪಾಲಿಗೆ ಇದು ಬಹಳ ಆತಂಕಕಾರಿ ನಿರ್ಧಾರ. ಒಕ್ಕೂಟ ಸರ್ಕಾರದ ಆಡಳಿತ ಸಂಪೂರ್ಣ ವಿಕೇಂದ್ರೀಕರಣ ಆಗಬೇಕು. ಎಲ್ಲ ಪಕ್ಷಗಳಲ್ಲಿ ಹೈಕಮಾಂಡ್ ಸಂಸ್ಕೃತಿ ಹೋಗಬೇಕು; ಹಿಂದಿ ಕೇಂದ್ರಿತ ರಾಜಕೀಯವನ್ನು ಕೊನೆಗಾಣಿಸಬೇಕು&#8221; ಎಂದು ಹೇಳಿದರು.</p>



<p>ರಾಜ್ಯಗಳ ಸ್ವಾತಂತ್ರ್ಯದ ಬಗ್ಗೆ ಗಟ್ಟಿಧ್ವನಿಯಲ್ಲಿ ಮಾತನಾಡಬೇಕು</p>



<p>ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾತಂತ್ರ್ಯದ ಬಗ್ಗೆ ನಾವು ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು ಎಂದು ಹೋರಾಟಗಾರ ನಾಗೇಶ್ ಅರಳಕುಪ್ಪೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.</p>



<p>&#8220;ನಾವು ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸಬೇಕು. ಜೊತೆಗೆ, ರಾಜ್ಯಗಳ ಸ್ವಾತಂತ್ರ್ಯದ ಬಗ್ಗೆ ಮಾತನಾಡಬೇಕು. ಈ ಬಗ್ಗೆ ತಮಿಳುನಾಡು ಸಂಸದರು ಹಾಗೂ ಸರ್ಕಾರ ಮಾತನಾಡುತ್ತಿದೆ; ನಾವು ಅವರಿಗೆ ಬೆಂಬಲ ನೀಡಬೇಕು&#8221; ಎಂದರು.</p>



<p>&#8220;ಬಿಜೆಪಿಯ ಕೋಮುವಾದ ಹಾಗೂ ಬಂಡವಾಳಶಾಹಿ ಕಡೆಗೆ ದೇಶ ಸಾಗುತ್ತಿದ್ದು, ಈ ಬಗ್ಗೆಯೂ ನಾವು ಎಚ್ಚರದಿಂದ ಇರಬೇಕು. ತನಿಳುನಾಡು ನೀಟ್ ವಿರೋಧಿಸಿದೆ, ಕರ್ನಾಟಕವೂ ಈ ಬಗ್ಗೆ ಮಾತನಾಡಬೇಕು. ತ್ರಿಭಾಷಾ ವಿವಾದದ ಬಗ್ಗೆ ನಾವು ನಮ್ಮ ಹೋರಾಟದಲ್ಲಿ ಒತ್ತು ನೀಡಬೇಕು; ಇದು ಬಹಳ ಮುಖ್ಯವಾಗುತ್ತದೆ&#8221; ಎಂದರು.</p>



<p><strong>ಜನಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಮರುವಿಂಗಡಣೆ ಮಾಡಬೇಕಾಗಿಲ್ಲ</strong></p>



<p>&#8220;ಜನಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಕ್ಷೇತ್ರ ಮರುವಿಂಗಡಣೆ ಮಾಡಬೇಕಾಗಿಲ್ಲ; ಈ ಬಗ್ಗೆ ಕೇಂದ್ರ ಸರ್ಕಾರ ನೀಡುತ್ತಿರುವ ಕಾರಣ ಸೂಕ್ತವಾಗಿಲ್ಲ&#8221; ಎಂದು ಕೇಂದ್ರ ಸರ್ಕಾರದ ನಿವೃತ್ತ ಅಧಿಕಾರಿ ಡಾ.ಸುನಿಲ್ ಪ್ರತಿಪಾದಿಸಿದರು.</p>



<p>ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, &#8220;ಯಾವುದೇ ಕಾರಣಕ್ಕೂ ಕ್ಷೇತ್ರ ಮರುವಿಂಗಡಣೆ ಮಾಡಬೇಕಾಗಿಲ್ಲ. ಮುಂದಿನ 25 ವರ್ಷ ಮರುವಿಂಗಡಣೆ ಮಾಡಬಾರದ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಶಾಶ್ವತವಾಗಿ ಇದನ್ನು ಇಷ್ಟಕ್ಕೇ ನಿಲ್ಲಿಸಬೇಕು&#8221; ಎಂದರು.</p>



<p>&#8220;ಕ್ಷೇತ್ರ ಮರುವಿಂಗಡಣೆಗೆ ಜನಸಂಖ್ಯೆ ಹೆಚ್ಚಳ ಮಾತ್ರ ಮಾನದಂಡವಲ್ಲ; ತೆರಿಗೆ ಸಂಗ್ರಹ ಹಾಗೂ ಒಟ್ಟಾರೆ ರಾಜ್ಯಗಳ ಅಭಿವೃದ್ಧಿಯೂ ಮಾನದಂಡವಾಗಬೇಕು. ಜನಸಂಖ್ಯೆ ಜಾಸ್ತಿ ಆಗಿರುವುದಕ್ಕಾಗಿ ಮರುವಿಂಗಡಣೆ ಮಾಡುತ್ತೇವೆ ಎನ್ನುವುದು ಸರಿಯಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ ಕಾರಣ ಸೂಕ್ತವಾಗಿಲ್ಲ&#8221; ಎಂದರು.</p>



<p>&#8220;848 ಸೀಟು ಹೆಚ್ಚಳ ಮಾಡುವುದಕ್ಕೆ ದೇಶದಲ್ಲಿ ಇನ್ನೂ ಜನಗಣತಿ ಆಗಿಲ್ಲ. ಆದರೆ, ಕೇಂದ್ರ ಸರ್ಕಾರ ಅದಕ್ಕಾಗಿ ಒಂದು ಸಮೀಕ್ಷೆ ಮಾಡಿದೆ. ಅದರ ಆಧಾರದಲ್ಲಿ ಸೀಟು ಹೆಚ್ಚಳ ಮಾಡಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಚುರುಕಾಗಿ ಕೆಲಸ ಮಾಡುತ್ತಿದೆ; ಲೋಕಸಭಾ ಸೀಟುಗಳ ಹೆಚ್ಚಳಕ್ಕೆ ಅವರು ಈಗಾಗಲೇ ಸೂಕ್ತ ತಯಾರಿ ಮಾಡಿಕೊಂಡಿದ್ದು, ಅದಕ್ಕಾಗಿಯೇ ದೊಡ್ಡ ಪಾರ್ಲಿಮೆಂಟ್ ಭವನ ಕಟ್ಟಿದ್ದಾರೆ. ಇದರಿಂದ ದಕ್ಷಿಣ ಭಾರತಕ್ಕೆ ಅನ್ಯಾಯ ಆಗೇ ಆಗುತ್ತದೆ. ಒಕ್ಕೂಟ ಸರ್ಕಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳನ್ನು ನಾವು ಎರಡನೇ ದರ್ಜೆ ಪ್ರಜೆಗಳು ಎಂದುಕೊಂಡಿದ್ದೇವೆ. ಆದರೆ, ನಾವೀಗಾಗಲೇ ಮೂರನೇ ದರ್ಜೆ ಪ್ರಜೆಗಳಾಗಿದ್ದು, 4ನೇ ದರ್ಜೆಗೆ ಹೋಗುತ್ತೇವೆ&#8221; ಎಂದು ಆತಂಕ ವ್ಯಕ್ತಪಡಿಸಿದರು.</p>



<p>&#8220;ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳಿಗೆ ಮಾತ್ರವಲ್ಲ, ಹಲವು ಸಣ್ಣಸಣ್ಣ ಜಾತಿಗಳಿಗೆ ನೇರ ಅನ್ಯಾಯ ಆಗುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿಗೆ ಅನುಕೂಲ ಆಗುವಂತೆ ಕ್ಷೇತ್ರ ಮರುವಿಂಗಡಣೆ ಮಾಡುತ್ತಾರೆ. ನಂತರ, ಸಂವಿಧಾನ ತಿದ್ದುಪಡಿ ಮಾಡುತ್ತಾರೆ. ಆದ್ದರಿಂದ, ಈ ಪ್ರಕ್ರಿಯೆಯನ್ನು ಶಾಶ್ವತವಾಗಿ ಮುಂದೂಡಬೇಕು&#8221; ಎಂದು ಆಗ್ರಹಿಸಿದರು.</p>



<p><strong>300 ಜನ ಸಂಸದರನ್ನು ಹೆಚ್ಚಿಸಿ ಸಾಧಿಸುವುದೇನೂ ಇಲ್ಲ: ನಗರಗೆರೆ ರಮೇಶ್</strong></p>



<p>&#8220;ಈಗಿನ ಲೆಕ್ಕಾಚಾರದ ಪ್ರಾಕಾರ, ಕ್ಷೇತ್ರ ಮರುವಿಂಗಡಣೆಯಾದರೆ 300 ಕ್ಕೂ ಹೆಚ್ಚು ನೂತನ ಸದಸ್ಯರು ಸಂಸತ್ ಪ್ರವೇಶ ಮಾಡುತ್ತಾರೆ. ಯಾವ ಜನಪ್ರತಿನಿಧಿ ಜನರ ಜೊತೆ ನಿಕಟ ಸಂಪರ್ಕದಲ್ಲಿ ಇರುತ್ತಾರೆ ಎಂಬುದು ಮುಖ್ಯ. ಶಾಸಕರು, ಜಿಲ್ಲಾ-ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಜನರ ಜೊತೆಗೆ ನೇರ ಸಂಪರ್ಕದಲ್ಲಿ ಇರುತ್ತಾರೆ. ಲೋಕಸಭಾ ಸದಸ್ಯರು ಕೇಂದ್ರದಲ್ಲಿ ಶಾಸನಗಳನ್ನು ರಚಿಸುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಆದ್ದರಿಂದ, 300 ಜನ ಸಂಸದರರನ್ನು ಹೆಚ್ಚಿಸಿ ಸಾಧಿಸುವುದು ಏನು ಇಲ್ಲ&#8221; ಎಂದು ಪ್ರಗತಿಪರ ಚಿಂತಕ ನಗರಗೆರೆ ರಮೇಶ್ ಹೇಳಿದರು.</p>



<p>ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, &#8220;ಹೊಸ ಸಂಸದರಿಗೆ ಹೆಚ್ಚಿನ ವೇತನ ಹಾಗೂ ಸೌಲಭ್ಯ ನೀಡುವುದರಿಂದ ದೇಶಕ್ಕೆ ಆರ್ಥಿಕ ಹೊರೆಯಾಗುತ್ತದೆ. ಇದರಿಂದ ಜನರ ತೆರಿಗೆ ಹಣ ಪೋಲಾಗುತ್ತದೆ. ಕ್ಷೇತ್ರ ಮರು ವಿಂಗಡಣೆಯಿಂದ ಜನರಿಗೆ ಯಾವುದೇ ಪ್ರಯೋಜನ ಇಲ್ಲ. ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡುವುದು ಸರಿಯಲ್ಲ&#8221; ಎಂದರು.</p>



<p>ಮಾಜಿ ಪೊಲೀಸ್ ಅಧಿಕಾರಿ ಸುಹೇಲ್ ಅಹಮದ್ ಮಾತನಾಡಿ, &#8220;ದೇಶದ ಈಗಿನ ಜನಸಂಖ್ಯೆ ಅಂದಾಜು 140 ಕೋಟಿ, ಈ ಜನಸಂಖ್ಯೆ 280 ಕೋಟಿ ಆದರೂ ಅವರಿಗೆಲ್ಲಾ ಒಬ್ಬರೇ ಪ್ರಧಾನಿ ಇರುತ್ತಾರೆ. ಉತ್ತರ ಪ್ರದೇಶದ 20 ಕೋಟಿ ಜನಸಂಖ್ಯೆಗೆ ಒಬ್ಬರೇ ಸಿಎಂ ಇದ್ದಾರೆ. ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆ ಇರುವ ಗೋವಾ ಜನರಿಗೆ ಕೂಡಾ ಒಬ್ಬರೇ ಮುಖ್ಯಮಂತ್ರಿ ಇದ್ದಾರೆ. 20 ಕೋಟಿ ಜನಸಂಖ್ಯೆಯನ್ನು ನಿಭಾಯಿಸುವ ಶಕ್ತಿ ಯುಪಿ ಸಿಎಂಗೆ ಇದೆ. ಆದ್ದರಿಂದ, ಯಾವುದೇ ಕಾರಣಕ್ಕೂ ಲೋಸಕಭಾ ಕ್ಷೇತ್ರಗಳ ಮರುವಿಂಗಡಣೆ ಬೇಡ&#8221; ಎಂದರು.</p>



<p>&#8220;ಒಕ್ಕೂಟ ವ್ಯವಸ್ಥೆಯನ್ನು ನಾವು ಜೀವಂತ ಇಡಬೇಕೆಂದರೆ, ಯಾವುದೇ ಕಾರಣಕ್ಕೂ ಕ್ಷೇತ್ರ ಮರುವಿಂಗಡಣೆ ಮಾಡಬಾರದು. ಲೋಕಸಭಾ ಸದಸ್ಯರ ಸಂಖ್ಯೆ ಹೆಚ್ಚಾದರೆ ದಕ್ಷಿಣ ರಾಜ್ಯಗಳ ಪರಿಸ್ಥಿತಿ ಭೀಕರವಾಗಲಿದೆ. ಸ್ಥಳೀಯಸಂಸ್ಥೆ ಜನಪ್ರತಿನಿಧಿಗಳು ಜನರ ಸಮಸ್ಯೆ ಆಲಿಸುತ್ತಾರೆ. ಪಾರ್ಲಿಮೆಂಟ್ ಸದಸ್ಯರು ಸಂವಿಧಾನ ಕಾಪಾಡುವ ಕೆಲಸ ಮಾಡಲಿ&#8221; ಎಂದು ಅವರು ಸಲಹೆ ನೀಡಿದರು.</p>



<p><strong>ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಂದೂಡುವುದಲ್ಲ; ರದ್ದಾಗಬೇಕು: ಡಾ.ವಾಸು</strong></p>



<p>&#8216;ಲೋಕಸಭೆ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಮುಂದೂಡಬೇಕು ಎಂಬುದು ನಮ್ಮ ಅಂತಿಮ ವಾದವಲ್ಲ. ಇಡೀ ಪ್ರಕ್ರಿಯೆ ರದ್ದಾಗಬೇಕು. ಏಕೆಂದರೆ, 25 ವರ್ಷ ಕಳೆದ ಬಳಿಕವೂ ಈ ದೇಶ ಒಕ್ಕೂಟ ವ್ಯವಸ್ಥೆಯೇ ಆಗಿರುತ್ತದೆ&#8217; ಎಂದು &#8216;ಜಾಗೃತ ಕರ್ನಾಟಕ&#8217; ಡಾ.ವಾಸು ಹೇಳಿದರು.</p>



<p>ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, &#8220;ಕ್ಷೇತ್ರ ಮರುವಿಂಗಡಣೆ ಸಮರ್ಥನೆಗೆ &#8216;ಒಂದು ಮತ-ಒಂದು ಮೌಲ್ಯ&#8217;ವನ್ನ ಅರ್ಥ ಮಾಡಿಕೊಳ್ಳುತ್ತಿರುವ ರೀತಿಯೇ ತಪ್ಪಿದೆ. ಒಂದು ಮತ-ಒಂದು ಮೌಲ್ಯ ವಿಚಾರ ಬಂದಿರೋದು ಯಾಕೆ ಎಂದರೆ, ಶ್ರೀಮಂತರಿಗೆ ಜಾಸ್ತಿ, ಬಡವರಿಗೆ ಕಡಿಮೆ ಮೌಲ್ಯವಲ್ಲ. ಪ್ರಜಾಪ್ರಭುತ್ವದಲ್ಲಿ ಬಡವರು, ಶ್ರೀಮಂತರ ಮತಕ್ಕೆ ಒಂದೇ ಮೌಲ್ಯ ಇರಬೇಕು ಎನ್ನುವ ಕಾರಣಕ್ಕೆ. ಒಕ್ಕೂಟ ವ್ಯವಸ್ಥೆ ಒಳಗಡೆ ಒಂದೊಂದು ರಾಜ್ಯ ತನಗೆ ಬೇಕಾದ ರೀತಿಯಲ್ಲಿ ವಿಧಾನಸಭಾ ಕ್ಷೇತ್ರಗಳನ್ನು ಪುನರ್ ವಿಂಗಡನೆ ಮಾಡಿಕೊಳ್ಳುವುದಕ್ಕೆ ಈ ಒಂದು ಮತ-ಒಂದು ಮೌಲ್ಯವನ್ನ ಪರಿಗಣಿಸಬೇಕು. ನಾವು ಭಾರತವನ್ನು ಒಕ್ಕೂಟ ಎಂದು ಕರೆದುಕೊಂಡಾಗ, ಅದರ ಮೂಲ ಉದ್ದೇಶವನ್ನು ಬದಲಾಯಿಸುವ ರೀತಿಯಲ್ಲಿ ಇರಬಾರದು&#8221; ಎಂದರು.</p>



<p>&#8220;ಉತ್ತರ ಪ್ರದೇಶದವರು ಜನಸಂಖ್ಯೆ ನಿಯಂತ್ರಣ ಮಾಡಲಿಲ್ಲ, ಹಾಗಾಗಿ ಅವರು ಅನುಭವಿಸಲಿ ಎಂದು ಹೇಳುವುದು ಸರಿಯಲ್ಲ. ವಿರೋಧಿಸುವುದಕ್ಕೂ ಕೂಡಾ ಈ ವಾದ ಮಾಡುವುದು ತಪ್ಪು. ಏಕೆಂದರೆ, ನಮ್ಮಲ್ಲಿ ಮುಸ್ಲಿಂ ಮತ್ತು ದಲಿತ ಸಮುದಾಯ 1951ರಿಂದ 2011ವರೆಗೆ ಇರುವ ಸೆನ್ಸಸ್ ನೋಡಿದರೆ. ಈ ಎರಡು ಸಮುದಾಯಗಳ ಜನಸಂಖ್ಯೆ ಜಾಸ್ತಿ ಆಗಿದೆ. ಅಂದ್ರೆ, ಬೇರೆ ಕಮ್ಯುನಿಟಿಗಿಂತ ಅವರ ಜನಸಂಖ್ಯೆ ಜಾಸ್ತಿ ಇದೆ. ಏಕೆಂದರೆ, ಬಡವರಿಗೆ ಮಕ್ಕಳು ಜಾಸ್ತಿ, ಇದೇ ವಾಸ್ತವ. ಸ್ಥಿತಿವಂತಿಕೆ ಮತ್ತು ಸಾಕ್ಷರತೆ ಜಾಸ್ತಿ ಆದಾಗ ಮಕ್ಕಳನ್ನು ಪಡೆಯುವ ಸಂಖ್ಯೆ ಕಡಿಮೆ ಆಗುತ್ತೆ. ನಾವು ಉತ್ತರ ಪ್ರದೇಶದ ವಿರುದ್ಧ ಯಾವ ವಾದ ಬಳಸುತ್ತಿದ್ದೇವೋ ಆ ವಾದ ತಪ್ಪು. ನೀವು ಜಾಸ್ತಿ ಮಕ್ಕಳನ್ನ ಮಾಡಿಕೊಂಡಿದ್ದೀರ ಎಂದು ದೂರಿದರೆ, ನಾವು ಕೂಡಾ ಬಡವರ ವಿರುದ್ಧ ಮಾತನಾಡಿದ ಹಾಗೆ ಆಗುತ್ತೆ. ಇದು ದಲಿತ ಸಮುದಾಯದ ವಿರುದ್ಧ, ಮುಸ್ಲಿಂ ಸಮುದಾಯದ ವಿರುದ್ಧ ಆಗುತ್ತೆ; ಈ ವಾದ ಮಾಡಬಾರದು. ಬದಲಿಗೆ ಒಕ್ಕೂಟದ ತತ್ವ ಏನಿದೆ, ನೀವು ಲಡಾಕ್ ಗೆ ಅಥವಾ ಪಾಂಡಿಚೆರಿಗೆ, ಅಥವಾ ಅಂಡೋಮಾನ್ ನಿಕೋಬಾರಿನ ಐವತ್ತು ಸಾವಿರ ಜನಕ್ಕೂ ಒಂದು ಲೋಕಸಭಾ ಕ್ಷೇತ್ರ ಕೊಡುತ್ತೀವಿ ಅನ್ನೋದರ ಹಿಂದೆ ಒಂದು ಒಕ್ಕೂಟದ ತತ್ವ ಇದೆ. ಏಕೆಂದರೆ, ಅದು ಪ್ರಾತಿನಿಧ್ಯಕ್ಕಾಗಿ ಬೇಕು. ನಾವೀಗ 1951ಗೆ ವಾಪಸ್ ಹೋಗುವುದು ಬೇಡ, 1971ಗೆ ಫ್ರೀಜ್ ಆಗಬೇಕು. ಎಲ್ಲ ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ಈಗ ಫ್ರೀಜ್ ಆಗ್ಬೇಕು&#8221; ಎಂದರು.</p>



<p>ಕ್ಷೇತ್ರ ಮರುವಿಂಗಡಣೆ ಮುಂದೂಡುವುದಲ್ಲ, ಆ ಇಡೀ ಪ್ರಕ್ರಿಯೆಯನ್ನೇ ರದ್ದು ಮಾಡಬೇಕು. ಏಕೆಂದರೆ, 25 ವರ್ಷ ಕಳೆದ ಮೇಲೂ ಈ ದೇಶ ಒಕ್ಕೂಟ ವ್ಯವಸ್ಥೆಯೇ ಆಗಿರುತ್ತದೆ. ಕೇಂದ್ರದ ಪಟ್ಟಿಗೆ 545 ಜನ ಯಾಕೆ ಬೇಕು? ಅವರೆಲ್ಲಾ ಮುನ್ಸಿಪಾಲಿಟಿ ಪ್ರತಿನಿಧಿಗಳಲ್ಲ. ಅವರೆಲ್ಲಾ ದಿನಾ ದಿನ ಹೋಗಿ ರಸ್ತೆ ಹೇಗಿದೆ, ಚರಂಡಿ ಸ್ಥಿತಿ ಏನು ಎಂದು ನೋಡಬೇಕಿರುವುದಿಲ್ಲ. ಸಂಸದರೆಲ್ಲಾ ಕೇಂದ್ರ ಪಟ್ಟಿಯಲ್ಲಿರುವ ವಿಚಾರಗಳ ಬಗ್ಗೆ ಶಾಸನ ಮಾಡೋದಕ್ಕೆ ಮಾತ್ರ ಸೀಮಿತ. ಕೇಂದ್ರ ಪಟ್ಟಿಯಲ್ಲಿರುವ ಸಂಗತಿಗಳನ್ನ ಕಡಿಮೆ ಮಾಡಬೇಕು; ಅಷ್ಟೊಂದು ಯಾಕಿವೆ ಅದರೊಳಗಡೆ. ಶಿಕ್ಷಣಕ್ಕೆ ಕೇಂದ್ರ ಸರ್ಕಾರ ದುಡ್ಡನ್ನು ಯಾಕೆ ಕೊಡಬೇಕು? ಕೇಂದ್ರ ಅದನ್ನೆಲ್ಲಾ ಬಿಟ್ಟುಬಿಟ್ಟರೆ ರಾಜ್ಯ ಸರ್ಕಾರಗಳು ನಿರ್ವಹಿಸುತ್ತವೆ. ನಮ್ಮ ಸಂವಿಧಾನದಲ್ಲಿ ಒಂದಷ್ಟು ಕೇಂದ್ರೀಕರಣ ಇದೆ. ಏಕೆಂದರೆ, ಕೇಂದ್ರದ ಬಳಿ ಅಧಿಕಾರ ಇಲ್ಲವಾದರೆ ದೇಶ ಛಿದ್ರ ಆಗಿಬಿಡುತ್ತೆ. ಹಾಗಾಗಿ, ಒಂದಷ್ಟು ಕೇಂದ್ರೀಕರಣವಾಗಿರಬೇಕು ಎಂಬ ಕಾರಣಕ್ಕೆ. ಆದರೆ, ಇವತ್ತು ಆ ಸ್ಥಿತಿ ಇಲ್ಲ, ಸ್ವಾತಂತ್ರ್ಯ ದೇಶ ಒಂದಾಗಿದೆ. ಇನ್ನಷ್ಟು ವಿಚಾರಗಳನ್ನ ರಾಜ್ಯ ಪಟ್ಟಿಯಲ್ಲಿ ತರಬೇಕು ಎಂದು ನಾವೆಲ್ಲರೂ ಒತ್ತಾಯ ಮಾಡಬೇಕು&#8221; ಎಂದು ಹೇಳಿದರು.</p>
]]></content:encoded>
					
		
		
			</item>
		<item>
		<title>ಸೋಲಿನ ಭಯ : ಬಿಜೆಪಿ ದ್ವೇಷ ರಾಜಕಾರಣಕ್ಕೆ ಮೊರೆ : ಸಮಾಜ ಒಡೆಯುವ ಸಂಚಿನ ಬಗ್ಗೆ ಜಾಗೃತರಾಗೋಣ</title>
		<link>https://peepalmedia.com/fear-of-defeat-bjp-turns-to-hate-politics/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 23 Apr 2024 12:44:32 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಮೀಡಿಯಾ]]></category>
		<category><![CDATA[ರಾಜಕೀಯ]]></category>
		<category><![CDATA[ಲೋಕಸಭೆ ಚುನಾವಣೆ -2024]]></category>
		<category><![CDATA[bjp dirty politics]]></category>
		<category><![CDATA[Jagruta Karnataka]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=38635</guid>

					<description><![CDATA[ಬಿಜೆಪಿ ಪಕ್ಷದ ದ್ವೇಷ ರಾಜಕಾರಣದ ಬಗ್ಗೆ ಎಚ್ಚೆತ್ತುಕೊಂಡು, ಸಮಾಜ ಒಡೆಯುವ ಅವರ ತಂತ್ರದ ಬಗ್ಗೆ ರಾಜ್ಯದ ಜನತೆ ಸದಾ ಜಾಗೃತರಾಗಿ ಇರಬೇಕು ಎಂದು ಜನಪರ ಸಂಘಟನೆ ಜಾಗೃತ ಕರ್ನಾಟಕ ರಾಜ್ಯದ ಜನರಲ್ಲಿ ಮನವಿ ಮಾಡಿದೆ. ಈ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘಟನೆ ಬಿಜೆಪಿ ಸೋಲಿನ ಮುನ್ಸೂಚನೆ ಅರಿತು ಇಂತಹ ಕೆಲಸಕ್ಕೆ ಮುಂದಾಗಿದೆ. ಇದರ ಬಗ್ಗೆ ಎಲ್ಲರಿಗೂ ಅರಿವಿರಲಿ ಎಂದು ಮನವಿ ಮಾಡಿದೆ. &#8220;ನಾವೆಲ್ಲರೂ ಕೂಡಿ ನಾಲ್ಕು ವರ್ಷ ರಾಜ್ಯಕ್ಕೆ ಅತಿ ಕೆಟ್ಟ ದುರಾಡಳಿತ ನೀಡಿದ ಬಿಜೆಪಿಯನ್ನು [&#8230;]]]></description>
										<content:encoded><![CDATA[
<p></p>



<p>ಬಿಜೆಪಿ ಪಕ್ಷದ ದ್ವೇಷ ರಾಜಕಾರಣದ ಬಗ್ಗೆ ಎಚ್ಚೆತ್ತುಕೊಂಡು, ಸಮಾಜ ಒಡೆಯುವ ಅವರ ತಂತ್ರದ ಬಗ್ಗೆ ರಾಜ್ಯದ ಜನತೆ ಸದಾ ಜಾಗೃತರಾಗಿ ಇರಬೇಕು ಎಂದು ಜನಪರ ಸಂಘಟನೆ ಜಾಗೃತ ಕರ್ನಾಟಕ ರಾಜ್ಯದ ಜನರಲ್ಲಿ ಮನವಿ ಮಾಡಿದೆ. ಈ ಮೂಲಕ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘಟನೆ ಬಿಜೆಪಿ ಸೋಲಿನ ಮುನ್ಸೂಚನೆ ಅರಿತು ಇಂತಹ ಕೆಲಸಕ್ಕೆ ಮುಂದಾಗಿದೆ. ಇದರ ಬಗ್ಗೆ ಎಲ್ಲರಿಗೂ ಅರಿವಿರಲಿ ಎಂದು ಮನವಿ ಮಾಡಿದೆ.</p>



<p>&#8220;ನಾವೆಲ್ಲರೂ ಕೂಡಿ ನಾಲ್ಕು ವರ್ಷ ರಾಜ್ಯಕ್ಕೆ ಅತಿ ಕೆಟ್ಟ ದುರಾಡಳಿತ ನೀಡಿದ ಬಿಜೆಪಿಯನ್ನು ಸೋಲಿಸಿ ಅಧಿಕಾರದಿಂದ ಕೆಳಗಿಳಿಸಿದ್ದೇವೆ. ಈಗ ಮತ್ತೊಮ್ಮೆ ನಾವೆಲ್ಲರೂ ಸೇರಿ ಹತ್ತು ವರ್ಷ ಮಹಾಮೋಸಗಳ ಆಳ್ವಿಕೆ ನೀಡಿದ ಮೋದಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಗಳಿಗೆ ಬಂದಿದೆ. ದೇಶವ್ಯಾಪಿಯಾಗಿ ಜನ, ವಿಶೇಷವಾಗಿ ದುಡಿಯುವ ಮತ್ತು ದಮನಿತ ಜನ ವರ್ಗಗಳು ಮೋದಿ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಸೋಲುವ ಭೀತಿ ಬಿಜೆಪಿಯನ್ನು ಕಾಡುತ್ತಿದೆ.</p>



<p>ಜನರ ಬಳಿ ಹೋಗಲು, ಓಟು ಕೇಳಲು ಬಿಜೆಪಿಯವರಿಗೆ ವಿಷಯ ಇಲ್ಲವಾಗಿದೆ. ಮಾಡಿದ ಸಾಧನೆ ಶೂನ್ಯ. ಕೊಟ್ಟ ಯಾವ ಮಾತನ್ನೂ ಈಡೇರಿಸಿಲ್ಲ. ಬೆಲೆ ಏರಿಕೆ, ನಿರುದ್ಯೋಗ, ರೈತರ ಸಂಕಷ್ಟ, ಮಹಿಳೆಯರ ಮೇಲೆ ಅತ್ಯಾಚಾರಗಳು, ದಲಿತ – ದಮನಿತರ ಮೇಲಿನ ದೌರ್ಜನ್ಯಗಳು…..ಎಲ್ಲಾ ಹೆಚ್ಚಾಗಿವೆ. ಜನರ ಆದಾಯ, ಅವಕಾಶಗಳು, ಮೀಸಲಾತಿ, ಹಕ್ಕು, ಭದ್ರತೆ, ನೆಮ್ಮದಿ, ಶಾಂತಿ …..ಎಲ್ಲವೂ ಗಣನೀಯವಾಗಿ ಕಡಿಮೆಯಾಗಿದೆ. ಸಂವಿಧಾನವನ್ನು ಬದಲಾಯಿಸಲು ಅವರು ನಡೆಸುತ್ತಿರುವ ಒಳಸಂಚು ಅವರ ಮುಖಂಡರುಗಳ ಬಾಯಿಂದಲೇ ಬಯಲಾಗಿದೆ. ಎಂತಹ ದುಸ್ಥಿತಿ ಎಂದರೆ ಕೊಡಲು ಹೊಸ ಭರವಸೆಗಳೂ ಬಿಜೆಪಿ ಬಳಿ ಇಲ್ಲವಾಗಿವೆ. ಕಾಂಗ್ರೆಸ್ ಪ್ರಣಾಳಿಕೆಯ ಮುಂದೆ ಬಿಜೆಪಿಯ ಪ್ರಣಾಳಿಕೆ ಮಂಕು ಬಡಿದಿದೆ. ಮೋದಿಯ ಫೋಟೋಗಳು ಬಿಟ್ಟರೆ ಜನತೆಯ ಪಾಲಿಗೆ ಅದರಲ್ಲಿ ಯಾವುದೇ ನಿರ್ಧಿಷ್ಟ ಆಶಾದಾಯಕ ಭರವಸೆಗಳಿಲ್ಲ, ಯೋಜನೆಗಳಿಲ್ಲ, ನೀತಿಗಳಿಲ್ಲ.</p>



<p>ಬಿಜೆಪಿಯೊಳಗೆ ಆಂತರಿಕ ಕಲಹ ಭುಗಿಲೆದ್ದಿದೆ. ಬಿಜೆಪಿಯ ದ್ವಿಜರೆಂದು ಕರೆಸಿಕೊಳ್ಳುವ ಎಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಸಂಘರ್ಷವನ್ನೂ ತಣಿಸುವ ಶಕ್ತಿ ಮೋದಿಗಿಲ್ಲ. ಮೋದಿಯ ಭಾಷಣಗಳಿಗೆ ಜನ ಸೇರುತ್ತಿಲ್ಲ, ರ್ಯಾಲಿಯಲ್ಲಿ ಉತ್ಸಾಹವಿಲ್ಲ. ಬಸ್ಸಿನಲ್ಲಿ ತುಂಬಿಸಿಕೊಂಡು ಬಂದ ಜನರೂ ಮೋದಿ ಭಾಷಣ ಮಾಡುವಾಗಲೇ, ಅವರ ಕಣ್ಣ ಮುಂದೆಯೇ ಎದ್ದು ಹೋಗುತ್ತಿದ್ದಾರೆ. ಏಪ್ರಿಲ್ 19ರಂದು ನಡೆದ ಮೊದಲ ಸುತ್ತಿನ ಚುನಾವಣೆಯಲ್ಲಿ ಬಿಜೆಪಿಯ ಭದ್ರ ಬೂತ್ ಗಳಿಂದಲೇ ಜನ ಮತ ಹಾಕಲು ಬಂದಿಲ್ಲ, ಅವರಿಗೆ ಉತ್ಸಾಹ ಉಳಿದಿಲ್ಲ. ಇದು ಮೋದಿ ಸಾಮ್ರಾಜ್ಯ ಕುಸಿಯುತ್ತಿರುವ ಸ್ಪಷ್ಟ ಸೂಚನೆಯಾಗಿದೆ.</p>



<p>ಮೋದಿ, ಬಿಜೆಪಿ ಮತ್ತು ಸಂಘಪರಿವಾರ ಚಿಂತಾಕ್ರಾಂತರಾಗಿದ್ದಾರೆ. ಜನರನ್ನು ಜಾತಿ, ಧರ್ಮದ ಮೇಲೆ ಭಾವೋದ್ರೇಕಗೊಳಿಸಿ ಓಟು ಪಡೆಯುವ ಹಳೆಯ ತಂತ್ರಕ್ಕೆ ಮರಳಿದ್ದಾರೆ. ರಾಜಸ್ಥಾನದಲ್ಲಿ ಮೋದಿ ಮಾಡಿದ ಭಾಷಣ ಕೀಳುತನದ ಪರಮಾವಧಿಯಾಗಿದೆ. ತಳ ಸಮುದಾಯಗಳು ಅಭಿವೃದ್ದಿಯ ಮೊದಲ ಹಕ್ಕುದಾರರು ಎಂದು ಮನಮೋಹನ್ ಸಿಂಗ್ ಮಾಡಿದ ಭಾಷಣವನ್ನು ತಿರುಚಿ “ಮುಸ್ಲಿಮರು ಮೊದಲ ಹಕ್ಕುದಾರರು” ಎಂದು ಹೇಳಿರುವುದಾಗಿ ಹಸಿ ಸುಳ್ಳು ಹೇಳಿದ್ದಲ್ಲದೆ, ಒಂದು ಸಮುದಾಯವನ್ನು “ನುಸುಳುಕಾರರು” ಎಂದು ಕರೆದು, ಮಹಿಳೆಯರನ್ನು “ನಿಮ್ಮ ಮಂಗಳ ಸೂತ್ರ ಕಸಿದು ಅವರಿಗೆ ಕೊಡುತ್ತಾರೆ” ಎಂದು ಪ್ರಚೋದಿಸುವ ತುಚ್ಛ ಮಾತುಗಳನ್ನು ಆಡಿದ್ದಾರೆ. ಇತ್ತೀಚಿನ ಮೋದಿ ಭಾಷಣಗಳು ಸಂವಿಧಾನ ವಿರೋಧಿಯಾಗಿದ್ದರೂ ಅವರೇ ಆಯ್ಕೆ ಮಾಡಿ ಕೂರಿಸಿರುವ ಕೈಗೊಂಬೆ ಎಲೆಕ್ಷನ್ ಕಮಿಷನ್ ಏನೂ ಆಗಿಲ್ಲ ಎಂಬಂತೆ ಬಾಯಿಮುಚ್ಚಿ ಕೂತಿದೆ.</p>



<p>ಕರ್ನಾಟಕದಲ್ಲಿ ಕಾಂಗ್ರೆಸ್ ಕೊಟ್ಟ ‘ಚೊಂಬು’ ಜಾಹಿರಾತಿನಿಂದ ಕಕ್ಕಾಬಿಕ್ಕಿಯಾದ ಬಿಜೆಪಿ ಹಸಿಹಸಿ ಸುಳ್ಳುಗಳಿಂದ ಕೂಡಿದ ಕೋಮು ಪ್ರಚೋದಕ ಜಾಹಿರಾತನ್ನು ಎಲ್ಲಾ ಪತ್ರಿಕೆಗಳಲ್ಲೂ ನೀಡಿದೆ. ಅದರಲ್ಲಿ ‘ಪಾಕಿಸ್ತಾನ’, ‘ಕುಕ್ಕರ್ ಬಾಂಬ್’, ‘ಜೆಹಾದ್’, ‘ಕಸಾಯಿಖಾನೆ’ ಅಂತಹ ಪದಗಳಿಂದ ಜನರನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಗಂಡು ದರ್ಪಕ್ಕೆ ಗುರಿಯಾದ ನೇಹಾ ಕೊಲೆ ಎಲ್ಲರ ಹೃದಯ ಹಿಂಡಿದೆ. ನೇಹಾ, ರುಕ್ಸಾನಾ, ಚಂದ್ರಮ್ಮ, ಶರಣಮ್ಮ, ಮುಂತಾದ ಅನೇಕ ಹೆಣ್ಣು ಮಕ್ಕಳು ಗಂಡು ದರ್ಪಕ್ಕೆ ಸಿಲುಕಿ ಹೊಸಕಿಹೋಗುತ್ತಿದ್ದಾರೆ. ಇಡೀ ಸಮಾಜವಾಗಿ ನಾವು ತಲೆತಗ್ಗಿಸಬೇಕಾದ ವಿಚಾರ. ಜಾತಿ, ಧರ್ಮದ ಬೇಧವಿಲ್ಲದೆ ತೀವ್ರ ಕ್ರಮಕ್ಕಾಗಿ ಆಳುವವರ ಮೇಲೆ ಒತ್ತಾಯ ಹೇರಬೇಕಿದೆ. ಆದರೆ ನೇಹ ಸಾವು ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ನೋವು ತರುವ ಬದಲು ಸಂತಸ ತಂದಿದೆ. ಹೆಣ್ಣನ್ನು ಅತಿ ಕೀಳಾಗಿ ನಡೆಸಿಕೊಂಡ, ಮಹಿಳೆಯರ ಮೇಲಿನ ಯಾವೊಂದು ದೌರ್ಜನ್ಯದ ವಿರುದ್ಧವೂ ದನಿ ಎತ್ತದ ಇವರು, ಈಗ ಓಟಿಗಾಗಿ ಹೆಣವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದಾರೆ. ಬರುವ ದಿನಗಳಲ್ಲಿ ಕೋಮು ಪ್ರಚೋದನೆಯ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚು ಮಾಡಲಿದ್ದಾರೆ.</p>



<p><strong>ಬಂಧುಗಳೇ,</strong></p>



<p><strong>ಈ ಬಾರಿ ಬಿಜೆಪಿ ಸೋಲುವುದು ಶತಸಿದ್ಧ. ಅವರ ನಾಟಕಕ್ಕೆ ಮರುಳಾಗುವಷ್ಟು ಕರ್ನಾಟಕದ ಜನರು ಮೂರ್ಖರಲ್ಲ. ಅವರ ಹುನ್ನಾರಗಳಿಗೆ ಬಲಿಯಾಗುವುದು ಬೇಡ, ಪ್ರಚೋದನೆಗಳಿಗೆ ಗುರಿಯಾಗುವುದು ಬೇಡ. ಯಾವುದೇ ಕಾರಣಕ್ಕೂ ನಾವು ನಮ್ಮ ತಾಳ್ಮೆ ಕಳೆದುಕೊಳ್ಳುವುದು ಬೇಡ. ಭಾವೋದ್ರೇಕಕ್ಕೆ ಗುರಿಯಾಗದಂತೆ, ದುಡುಕಿನ ತಪ್ಪುಗಳು ನಡೆಯದಂತೆ ಎಚ್ಚರಿಕೆವಹಿಸೋಣ. ಬಿಜೆಪಿಯ ಮಹಾಮೋಸಗಳನ್ನು, ದುಷ್ಟ ಆಡಳಿತವನ್ನು, ನೀಚ ರಾಜಕಾರಣವನ್ನು, ಜನ ವಿರೋಧಿ ನೀತಿಗಳನ್ನು ಬಯಲುಗೊಳಿಸುವ ಕೆಲಸವನ್ನು ಸಂಯಮದ ಜೊತೆ, ಸಂಪೂರ್ಣ ತನ್ಮಯತೆ ಜೊತೆ ಮುಂದುವರಿಸೋಣ&#8221; </strong>ಎಂದು ಜಾಗೃತ ಕರ್ನಾಟಕ&nbsp; ಸಂಘಟನೆ ಮನವಿ ಮಾಡಿದೆ.</p>
]]></content:encoded>
					
		
		
			</item>
	</channel>
</rss>
