<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>jai sri ram &#8211; Peepal Media</title>
	<atom:link href="https://peepalmedia.com/tag/jai-sri-ram/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 26 Jan 2024 08:11:49 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>jai sri ram &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಮೋದಿಯವರ ಹೊಸ ಕಾಲಚಕ್ರದಲ್ಲಿ ಉದ್ಯೋಗ ಸಿಗಲಿದೆಯೇ?</title>
		<link>https://peepalmedia.com/unemotional-in-modis-naya-kalachakra/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 26 Jan 2024 08:05:38 +0000</pubDate>
				<category><![CDATA[ಅಂಕಣ]]></category>
		<category><![CDATA[ayodhya]]></category>
		<category><![CDATA[banagalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[congress]]></category>
		<category><![CDATA[crisis]]></category>
		<category><![CDATA[gaza]]></category>
		<category><![CDATA[GDP]]></category>
		<category><![CDATA[india]]></category>
		<category><![CDATA[isreal]]></category>
		<category><![CDATA[jai sri ram]]></category>
		<category><![CDATA[job]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[narendra]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[news update]]></category>
		<category><![CDATA[palestinian]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[ram]]></category>
		<category><![CDATA[ram mandir]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[Unemployment]]></category>
		<category><![CDATA[viral]]></category>
		<category><![CDATA[viral news]]></category>
		<category><![CDATA[work]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35387</guid>

					<description><![CDATA[ಅಯೋಧ್ಯೆಯಲ್ಲಿ ಪ್ರಧಾನಿಗಳು ಬಾಲರಾಮನ ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ಸ್ವತಃ ತಾವು ಗರ್ಭಗುಡಿಯ ಒಳಗೆ ರಾಮನಿಗೆ ಪೂಜೆ ಮಾಡಿದ್ದಾರೆ. ಇದಾದ ನಂತರ ಮಾಡಿದ ತಮ್ಮ ಭಾಷಣದಲ್ಲಿ ಜನವರಿ 22ನ್ನು ದೇಶದಲ್ಲಿ ಹೊಸ ಕಾಲ ಚಕ್ರದ ಆರಂಭ ಎಂದು ಘೋಷಿಸಿದ್ದಾರೆ. ಆದರೆ ಮುಂದೆ ಈ ಚಕ್ರ ಹೇಗೆ ತಿರುಗಲಿದೆ ಎಂಬುದು ನೋಡಬೇಕಿದೆ. 2014 ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗ ಅವರು ನೀಡಿದ್ದ ಪ್ರಮುಖ ಭರವಸೆಗಳ ಚಕ್ರ ಉಲ್ಟಾ ಸುತ್ತುತ್ತಿದೆಯೇ?2014 ರಲ್ಲಿ, ಭಾರತದ ಆರ್ಥಿಕತೆಯು ಸುಮಾರು ಎರಡು ದಶಕಗಳ ಕ್ಷಿಪ್ರ ಬೆಳವಣಿಗೆಯ ನಂತರ [&#8230;]]]></description>
										<content:encoded><![CDATA[
<pre class="wp-block-code" style="font-size:16px"><code><strong><em>ಕಳೆದ ಎರಡು ವರ್ಷಗಳಿಂದ ಪ್ರಧಾನಿ ಮೋದಿಯವರು ಮಾಡುವುತ್ತಿರುವುದೆಲ್ಲಾ ಹೇಗಾದರೂ ಮಾಡಿ 2024ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಆಸೆಯಿಂದ. ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠಾಪನೆ ಇದಕ್ಕೆ ಒಂದು ಉದಾಹರಣೆಯಷ್ಟೇ. ಇದರ ಮುಂದೆ ದೇಶ ಅನುಭವಿಸುತ್ತಿರುವ ಸಂಕಷ್ಟಗಳು ಮಣ್ಣುಪಾಲಾಗಿವೆ. ಕಂಠ ಹರಿದುಕೊಂಡು ಕೂಗುವ ಘೋಷಣೆಗಳ ಮಧ್ಯೆ ದೇಶದ ನೋವಿನ ದನಿ ಕೇಳದಾಗಿದೆ</em></strong>

<strong>ಲೇಖನ: ಚರಣ್ ಐವರ್ನಾಡು</strong></code></pre>



<p>ಅಯೋಧ್ಯೆಯಲ್ಲಿ ಪ್ರಧಾನಿಗಳು ಬಾಲರಾಮನ ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ಸ್ವತಃ ತಾವು ಗರ್ಭಗುಡಿಯ ಒಳಗೆ ರಾಮನಿಗೆ ಪೂಜೆ ಮಾಡಿದ್ದಾರೆ. ಇದಾದ ನಂತರ ಮಾಡಿದ ತಮ್ಮ ಭಾಷಣದಲ್ಲಿ ಜನವರಿ 22ನ್ನು ದೇಶದಲ್ಲಿ ಹೊಸ ಕಾಲ ಚಕ್ರದ ಆರಂಭ ಎಂದು ಘೋಷಿಸಿದ್ದಾರೆ. ಆದರೆ ಮುಂದೆ ಈ ಚಕ್ರ ಹೇಗೆ ತಿರುಗಲಿದೆ ಎಂಬುದು ನೋಡಬೇಕಿದೆ.</p>



<p>2014 ರಲ್ಲಿ ಮೋದಿಯವರು ಅಧಿಕಾರಕ್ಕೆ ಬಂದಾಗ ಅವರು ನೀಡಿದ್ದ ಪ್ರಮುಖ ಭರವಸೆಗಳ ಚಕ್ರ ಉಲ್ಟಾ ಸುತ್ತುತ್ತಿದೆಯೇ?<br>2014 ರಲ್ಲಿ, ಭಾರತದ ಆರ್ಥಿಕತೆಯು ಸುಮಾರು ಎರಡು ದಶಕಗಳ ಕ್ಷಿಪ್ರ ಬೆಳವಣಿಗೆಯ ನಂತರ ಮೂರು ವರ್ಷಗಳ ಕಾಲ ತೀವ್ರ ಕುಸಿತವನ್ನು ಕಂಡಿತು. 2003-04 ರಿಂದ ವರ್ಷಕ್ಕೆ ಸರಾಸರಿ 70 ಲಕ್ಷಕ್ಕಿಂತಲೂ ಹೆಚ್ಚಿನ ಕೃಷಿಯೇತರ ಉದ್ಯೋಗದ ಬೆಳವಣಿಗೆಯು ತೀವ್ರವಾಗಿ ಕುಸಿದಿದೆ.</p>



<p>ಈ ಸಂದರ್ಭದಲ್ಲಿ ಪಿಎಂ ಮೋದಿಯವರು ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದರು. ಈ ಬಣ್ಣ ಬಣ್ಣದ ಬರವಸೆಯನ್ನು ನಂಬಿದ ಯುವಕರು ಅವರನ್ನು ನಂಬಿ ಅಧಿಕಾರಕ್ಕೆ ತರಲು ಮತ ಹಾಕಿದರು. ಆದರೆ ಅವರ ಸರ್ಕಾರಕ್ಕೆ ಈ ಉದ್ಯೋಗ ಸೃಷ್ಟಿಯಲ್ಲಿ ಆಗಿರುವ ಕುಸಿತವನ್ನು ತಡೆಯಲು ಸಾಧ್ಯವಾಗಲಿಲ್ಲ. ಮಾರ್ಚ್ 2020 ರ ಹೊತ್ತಿಗೆ, ಕೋವಿಡ್‌ ತಾಪತ್ರಯ ಶುರುವಾಗುವ ಮೊದಲು ಭಾರತದ ಆರ್ಥಿಕತೆಯ ಪರಿಸ್ಥಿತಿ ಶೋಚನೀಯವಾಗಿತ್ತು. ಇದರಿಂದ ಅತೀ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಯುವಕರು.</p>



<p style="font-size:20px"><strong>ಭಾರತೀಯರು ಒಪ್ಪತ್ತಿನ ಊಟಕ್ಕೆ ಇಸ್ರೇಲ್‌ಗೆ ಹೋಗಬೇಕೇ? </strong></p>



<p>ಪ್ಯಾಲಿಸ್ತೇನ್‌ ಹಅಗೂ ಗಾಜಾದ ಮೇಲೆ ಇಸ್ರೇಲ್‌ ಆಕ್ರಮಣ ಆರಂಭವಾಗಿ ಸುಮಾರು ನೂರು ದಿನಗಳಿಗೂ ಹೆಚ್ಚಾಗುತ್ತಿದೆ. ಗಾಜಾ ನಿರ್ಣಾಮವಾಗಿ ಹೋಗಿದೆ. ಇಸ್ರೇಲ್‌ ಯುದ್ಧದ ಉನ್ಮಾದದಲ್ಲಿಯೇ ಇದೆ. </p>



<p>ಪ್ಯಾಲಿಸ್ತೇನಿಯರ ಉದ್ಯೋಗ ಪರವಾನಗಿಯನ್ನು ಇಸ್ರೇಲ್‌ ಅಮಾನತು ಮಾಡಿರುವುದರಿಂದ ಅಲ್ಲಿ ಕಾರ್ಮಿಕರ ಅಭಾವ ಎದುರಾಗಿದೆ. ಹಾಗಾಗಿ ಅಲ್ಲಿ ಉದ್ಯೋಗಗಳು ಖಾಲಿ ಬಿದ್ದಿವೆ. ಅಕ್ಟೋಬರ್‌ನಲ್ಲಿ, ಟೆಲ್ ಅವಿವ್‌ನಲ್ಲಿ ಇಸ್ರೇಲಿ ಕಟ್ಟಡ ನಿರ್ಮಾಣ ಕಂಪನಿಗಳು   ಪ್ಯಾಲೆಸ್ತೇನಿಯರ ಬದಲಿಗೆ 100,000 ಭಾರತೀಯ ಕಾರ್ಮಿಕರನ್ನು ಕಳುಹಿಸಿ ಕೊಡುವಂತೆ ಭಾರತ ಸರ್ಕಾರವನ್ನು ಕೋರಿದೆ.</p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : </strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6">ಪೀಪಲ್‌ ಮೀಡಿಯಾ</a></p>



<p>ಹರ್ಯಾಣ ಸರ್ಕಾರವು ಡಿಸೆಂಬರ್‌ನಲ್ಲಿ ಇಸ್ರೇಲ್‌ನಲ್ಲಿ ಕಟ್ಟಡ ನಿರ್ಮಾಣ ಕೆಲಸಕ್ಕೆ ಕಾರ್ಮಿಕರನ್ನು ತಮ್ಮ ರಾಜ್ಯದಿಂದ ಕಳುಹಿಸಲು 10,000 ಹುದ್ದೆಗಳಿಗೆ ಅರ್ಜಿ ಕರೆದಿತ್ತು. ಇದರಲ್ಲಿ ಬಡಗಿಗಳು ಮತ್ತು ಕಬ್ಬಿಣದ ಮಾಡುವ 3,000 ಹುದ್ದೆಗಳಿದ್ದವು. ನೆಲಕ್ಕೆ ಟೈಲ್ ಹಾಕುವವರಿಗಾಗಿ 2,000 ಉದ್ಯೋಗಗಳು ಮತ್ತು ಗಾರೆ ಕೆಲಸಕ್ಕೆ 2,000 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಇದಕ್ಕೆ ಸಂಬಳ ತಿಂಗಳಿಗೆ 6,100 ಶೆಕೆಲ್‌ಗಳು ಅಥವಾ ಸುಮಾರು 1,625 ಡಾಲರ್ (1 ಲಕ್ಷದ 30 ಸಾವಿರ ರುಪಾಯಿ). ಹರ್ಯಾಣದ ತಲಾ ತಿಂಗಳ ಆದಾಯ (per capita income) <a href="https://www.pib.gov.in/PressReleasePage.aspx?PRID=1942055" data-type="link" data-id="https://www.pib.gov.in/PressReleasePage.aspx?PRID=1942055">ಸುಮಾರು 24723.75 ರುಪಾಯಿ (2022-23)</a>.</p>



<p>ಅದೇ ತಿಂಗಳು, ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶವು 10,000 ಕಾರ್ಮಿಕರಿಗಾಗಿ ಇದೇ ರೀತಿಯ ಇಸ್ರೇಲಿ ಉದ್ಯೋಗ ನೀಡುವ ಭರವಸೆಯ ಜಾಹೀರಾತನ್ನು ಬಿಡುಗಡೆ ಮಾಡಿತು. ಕಳೆದ ಮಂಗಳವಾರದಂದು ಲಕ್ನೋದಲ್ಲಿ ನೇಮಕಾತಿ ಚಾಲನೆ ಆರಂಭಗೊಂಡಿದ್ದು, ನೂರಾರು ಅರ್ಜಿದಾರರನ್ನು ಸರತಿ ಸಾಲಿನಲ್ಲಿ ನಿಂತಿದ್ದಾರೆ.</p>



<p>ಭಾರತ ಸರ್ಕಾರ ತನ್ನ ಪ್ರಜಾಪ್ರಭುಗಳಿಗೆ ವಿದೇಶಿ ಉದ್ಯೋಗ ನೀಡುವಷ್ಟು ಮುಂದೆ ಹೋಗಿದೆ ಎಂದು ನೀವು ಭಾವಿಸಿದರೆ, ಅದು ಮೂರ್ಖತನ. ಯುದ್ಧದಲ್ಲಿ ಮುಳುಗಿರುವ ಒಂದು ದೇಶ ಉದ್ಯೋಗ ನೀಡಲು ಶಕ್ತವಾದರೆ, ಭಾರತಕಕ್ಕೆ ಉದ್ಯೋಗ ಸೃಷ್ಟಿಸಲು ಯಾಕೆ ಸಾಧ್ಯವಾಗುತ್ತಿಲ್ಲ? </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">This is the queue for recruitment drive to send labourers to work in Israel. The registration cum screening began at ITI Lucknow on January 23 is witnessing huge influx of job seekers from UP, Bihar and West Bengal. <a href="https://t.co/jLsVogk7QC">pic.twitter.com/jLsVogk7QC</a></p>&mdash; Piyush Rai (@Benarasiyaa) <a href="https://twitter.com/Benarasiyaa/status/1750030998006571009?ref_src=twsrc%5Etfw">January 24, 2024</a></blockquote><script async src="https://platform.twitter.com/widgets.js" charset="utf-8"></script>
</div></figure>



<p style="font-size:20px"><strong>ನಿರುದ್ಯೋಗದಿಂದ ಭಾರತ ತತ್ತರಿಸಿ ಹೋಗಲಿದೆ?</strong></p>



<p>ಸದ್ಯ ಯುವಕರ ಅವರ ಭವಿಷ್ಯ ಎಷ್ಟು ಕರಾಳವಾಗಿತ್ತು ಎಂಬುದನ್ನು ತೋರಿಸಲು ಮೂರು ಉದಾಹರಣೆಗಳು ಸಾಕು. 2018 ರಲ್ಲಿ, ಭಾರತೀಯ ರೈಲ್ವೇ ವಿವಿಧ ಕೆಳಮಟ್ಟದ ಉದ್ಯೋಗಗಳಲ್ಲಿ 63,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಿತು. 1.91 ಕೋಟಿ ಪದವಿ ಮತ್ತು ಡಿಪ್ಲೋಮಾ ಓದಿರುವ ಯುವಕರು ಈ ಹುದ್ದೆಗಳಿಗೆ ಅಪ್ಲೈ ಮಾಡಿದ್ದರು.</p>



<p>ಒಂದು ವರ್ಷದ ನಂತರ, Personnel and Training Department 12,000 ಖಾಲಿ ಹುದ್ದೆಗಳನ್ನು ಅರ್ಜಿ ಕರೆದಾಗ, 1.2 ಕೋಟಿಗೂ ಹೆಚ್ಚು ಯುವಕರು ಮತ್ತೆ ಅರ್ಜಿ ಸಲ್ಲಿಸಿದರು.</p>



<p>ಆಯ್ದ ಯುವಕರಿಗೆ ನಾಲ್ಕು ವರ್ಷಗಳ ಮಿಲಿಟರಿ ತರಬೇತಿ ನೀಡಲು ಸರ್ಕಾರವು ಅಗ್ನಿವೀರ್ ಯೋಜನೆಯನ್ನು ಘೋಷಿಸಿದಾಗ, ಇದಕ್ಕೆ ಆಯ್ಕೆಯಾಗದೆ ವಿಫಲರಾಗಿ ಯುವಕರು ಹತಾಶೆಗೆ ಒಳಗಾದರು. ಹತಾಶ ಯುವಕರು ಆತ್ಮಹತ್ಯೆ ಮಾಡಿಕೊಂಡರು. <a href="https://timesofindia.indiatimes.com/city/patna/agnipath-protests-rail-coaches-set-on-fire-at-different-places-in-bihar/articleshow/92279487.cms" data-type="link" data-id="https://timesofindia.indiatimes.com/city/patna/agnipath-protests-rail-coaches-set-on-fire-at-different-places-in-bihar/articleshow/92279487.cms">ಬಿಹಾರದ ದಾನಪುರ ನಿಲ್ದಾಣದಲ್ಲಿ ರೈಲಿಗೆ ಬೆಂಕಿ</a> ಕೂಡ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದರು.</p>



<p>ಪ್ರಧಾನಿ ಮೋದಿಯವರು ತಮ್ಮ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾದರು., 2019 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗಲೂ ನಿರುದ್ಯೋಗದ ಸಮಸ್ಯೆಗೆ ಪರಿಹಾರ ಹುಡುಕಲಿಲ್ಲ. 2019-20 ರ ಹೊತ್ತಿಗೆ, GDP ಬೆಳವಣಿಗೆಯು 4.2 ಶೇಕಡಾಕ್ಕೆ ಕುಸಿದಿದೆ. ಇದು ಹಿಂದೆಂದೂ ಕಾಣದ ಕುಸಿತವಾಗಿದೆ.</p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ : </strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6">ಪೀಪಲ್‌ ಮೀಡಿಯಾ</a></p>



<p>ಆಗಸ್ಟ್ 2020 ರಲ್ಲಿ ಪ್ರಕಟವಾದ ಮೆಕಿನ್ಸೆ ವರದಿ ದೇಶ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡುತ್ತದೆ: ಮುಂದಿನ ದಶಕದಲ್ಲಿ ಭಾರತದ ಜಿಡಿಪಿ ವಾರ್ಷಿಕವಾಗಿ ಶೇಕಡಾ 8 ರಿಂದ 8.5 ರಷ್ಟು ಬೆಳೆಯಬೇಕು. ಹಾಗಾದಾಗ ಮಾತ್ರ 2019-20 ರ ಹಣಕಾಸು ವರ್ಷದಲ್ಲಿ ದಾಖಲಾದ ಶೇಕಡಾ 4.2 ರ ಬೆಳವಣಿಗೆಯ ಡಬಲ್‌ ಆಗುತ್ತದೆ. ಆಗ 2023 ಮತ್ತು 2030 ರ ನಡುವೆ 9 ಕೋಟಿ ಹೊಸ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಯಾಗುತ್ತದೆ. ಇವುಗಳಲ್ಲಿ 6 ಕೋಟಿ ಹೊಸ ಉದ್ಯೋಗಿಗಳು ವರ್ಕ್‌ ಫೋರ್ಸ್‌ ಪ್ರವೇಶಿಸಲಿದ್ದಾರೆ.</p>



<p>ಆದರೆ ಇವರಿಗೆ ಮಾಡಲು ಕೆಲಸ ಇದ್ಯಾ? ಇದೊಂದು ಪ್ರಶ್ನೆ… ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಬ್ಲಾವಟ್ನಿಕ್ ಸ್ಕೂಲ್ ಆಫ್ ಗವರ್ನೆನ್ಸ್ ಈ ಬಗ್ಗೆ ಮಾತನಾಡುತ್ತದೆ. COVID ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿದರು.</p>



<p>COVID ಆಟ ಮುಗಿದಾಗ ಅವರು ಮತ್ತೆ ಬಂದು ಮಾಡಲು ಏನೂ ಉದ್ಯೋಗ ಇರಲಿಲ್ಲ. ಇದರ ಪರಿಣಾಮವಾಗಿ, ಏಪ್ರಿಲ್ 2020 ಮತ್ತು ಜೂನ್ 2023 ರ ನಡುವೆ 6 ಕೋಟಿ ಕಾರ್ಮಿಕರು ಕೃಷಿ ಕೆಲಸದ ಚಟುವಟಿಕೆಗೆ ಬಂದರು ಎಂದು ಈ ಅಧ್ಯಯನ ಹೇಳುತ್ತದೆ.<br>2011 ಮತ್ತು 2021 ರ ನಡುವೆ, 16 ರಿಂದ 60 ವರ್ಷ ವಯಸ್ಸಿನ 7 ಕೋಟಿ ಜನರು ಕೆಲಸ ಹುಡುಕುವುದನ್ನೇ ಬಿಟ್ಟಿದ್ದಾರೆ. ಇವರು ದೇಶದ ಕಾರ್ಮಿಕ ಬಲದಿಂದ ಹೊರಗುಳಿದಿದ್ದಾರೆ. ಇದನ್ನು ಹೇಳಿದ್ದು ಸ್ವತಃ ಸರ್ಕಾರದ್ದೇ ಆದ Periodic Labour Force Studies.</p>



<p>ಸದ್ಯ ಮೋದಿಯವರು ಹೇಳಿದ ಚಕ್ರ ಮುಂದಕ್ಕೆ ಚಲಿಸುತ್ತೀಲ್ಲ. ಮುಂದಕ್ಕೆ ಹೋಗದೇ ಇದ್ದರೂ ಪರವಾಗಿಲ್ಲ, ನಿಂತಲ್ಲೇ ನಿಂತಿದ್ದರೂ ಫೈನ್… ಆದರೆ ಚಕ್ರ ಈಗ ಹಿಂದಕ್ಕೆ ಓಡುತ್ತಿದೆ. ಯುವಕ ಯುವತಿಯರು ಉದ್ಯೋಗದ ಭದ್ರತೆಯಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ, ಇದು ಒಂದು ಕಡೆ ಇದ್ದರೆ, ಉನ್ನತ ಶಿಕ್ಷಣದ ಗುಣಮಟ್ಟದಲ್ಲಿ ಏಕಾಏಕಿ ದುರಂತಮಯವಾದ ಕುಸಿತವಾಗಿದೆ.</p>



<p>ಕಳೆದ ಎರಡು ದಶಕಗಳಲ್ಲಿ, ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳೊಂದಿಗೆ ಸಂಯೋಜಿತವಾಗಿರುವ ಖಾಸಗಿ ಕಾಲೇಜುಗಳ ಸಂಖ್ಯೆ ಅಣಬೆಯಂತೆ ಹೆಚ್ಚಾಗುತ್ತಿದೆ. ಎರಡು ದಶಕಗಳ ಹಿಂದೆ ಸುಮಾರು 10,000 ಇದ್ದ ಖಾಸಗಿ ಕಾಲೇಜುಗಳ ಸಂಖ್ಯೆ ಈಗ 42,000ಕ್ಕೂ ಹೆಚ್ಚಾಗಿದೆ. ಇವೆಲ್ಲವೂ ಸುಳ್ಳು ಭರವಸೆಗಳನ್ನು ನೀಡುತ್ತಾ, ಫೀಸು ಹೆಚ್ಚಿಸುವುದನ್ನು ಮೂಮದುವರಿಸಿವೆ. ಉನ್ನತ ಶಿಕ್ಷಣ ದುಬಾರಿಯಾಗುತ್ತಿದೆ.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="SHIVAJI&#039;S BANGALORE PALACE | ಬೆಂಗಳೂರಿನಲ್ಲಿ ಶಿವಾಜಿ ಅರಮನೆ |" width="696" height="392" src="https://www.youtube.com/embed/xygNejGWbRY?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe>
</div></figure>



<p>ಕಳೆದ ಎರಡು ವರ್ಷಗಳಿಂದ ಪಿಎಂ ಮೋದಿಯವರು ಮಾಡುವುತ್ತಿರುವುದೆಲ್ಲಾ ಹೇಗಾದರೂ ಮಾಡಿ 2024ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು. ಅಯೋಧ್ಯೆಯಲ್ಲಿ ಮಾಡಿರುವ ರಾಮನ ಪ್ರತಿಷ್ಠಾಪನೆ ಇದಕ್ಕೆ ಉದಾಹರಣೆ. ಇದರ ಮುಂದೆ ದೇಶ ಅನುಭವಿಸುತ್ತಿರುವ ಸಂಕಷ್ಟಗಳು ಮಣ್ಣುಪಾಲಾಗಿವೆ. ಕಂಠ ಹರಿದುಕೊಂಡು ಕೂಗುವ ಘೋಷಣೆಗಳ ಮಧ್ಯೆ ದೇಶದ ನೋವಿನ ದನಿ ಕೇಳದಾಗಿದೆ.</p>



<p>ಜನತೆಯನ್ನು ಎಲ್ಲಿ ಹೇಗೆ ನಿಯಂತ್ರಿಸಬೇಕು ಎಂಬುದನ್ನು ಸ್ಪಷ್ಟವಾಗಿ ಮೋದಿಯವರು ಮಾಡಿದ್ದಾರೆ. ಭ್ರಮೆಯಿಂದ ತೇಲಾಡುತ್ತಿದ್ದೇವೆ ನಾವು. ಸಮಸ್ಯೆಗಳನ್ನು ಮರೆತಿದ್ದೇವೆ. ಆದರೆ, ಸಮಸ್ಯೆಗಳು ನಮ್ಮನ್ನು ಮರೆಯಲ್ಲ. ಹುಚ್ಚುನಾಯಿಯಂತೆ ನಮ್ಮನ್ನು ಬೆನ್ನಟ್ಟಿ ಕಚ್ಚಲಿವೆ. ಒಂದು ದಿನ ದೀಡೀರನೇ ಮೋದಿಯವರು ಚುನಾವಣೆಯನ್ನು ಮುಂದೂಡುತ್ತಿದ್ದೇವೆ ಎಂದರೂ ಅಚ್ಚರಿಯಿಲ್ಲ.</p>



<p>ಹೀಗೇ ಆದರೆ ಮೋದಿಯವರು ಹೇಳಿದ ಭರತವರ್ಷದ ಹೊಸ ಕಾಲ ಚಕ್ರ ತುಂಬಾ ಸ್ಪೀಡಾಗಿ ಓಡಲಿದೆ. ಆದರೆ ಮುಂದಕ್ಕಲ್ಲ, ಹಿಂದಕ್ಕೆ…..</p>
]]></content:encoded>
					
		
		
			</item>
		<item>
		<title>ಅಯೋಧ್ಯೆಯ ಸೌಹಾರ್ದತೆ ಉಳಿಸಲು ಗುಂಡಿಗೆ ಎದೆಕೊಟ್ಟ ಬಾಬಾ ಲಾಲ್ ದಾಸ್</title>
		<link>https://peepalmedia.com/baba-lal-das-sacrifice-himself-to-save-the-harmony-of-ayodhya/</link>
		
		<dc:creator><![CDATA[Charan Aivarnad]]></dc:creator>
		<pubDate>Wed, 24 Jan 2024 08:50:30 +0000</pubDate>
				<category><![CDATA[ಅಂಕಣ]]></category>
		<category><![CDATA[ayodhya]]></category>
		<category><![CDATA[baba lal das]]></category>
		<category><![CDATA[bajaranga dala]]></category>
		<category><![CDATA[Bangalore]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[hindutva]]></category>
		<category><![CDATA[india]]></category>
		<category><![CDATA[jai sri ram]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[modi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[ram janma bhumi]]></category>
		<category><![CDATA[ram mandir]]></category>
		<category><![CDATA[ram temple]]></category>
		<category><![CDATA[RSS]]></category>
		<category><![CDATA[special story]]></category>
		<category><![CDATA[sri ram]]></category>
		<category><![CDATA[sriram sene]]></category>
		<category><![CDATA[state politics]]></category>
		<category><![CDATA[temple]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[vhp]]></category>
		<category><![CDATA[viral news]]></category>
		<guid isPermaLink="false">https://peepalmedia.com/?p=35351</guid>

					<description><![CDATA[ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿದೆ. ದೇಶದಾದ್ಯಂತ ಜನರು ಕುತೂಹಲದಿಂದ ಕಾಯುತ್ತಿದ್ದ ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಪೂರ್ಣಗೊಂಡು, ಆ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಹಾಗೆಂದು ಭಾವಿಸಿಕೊಂಡರೂ, ಇದು ಭಾರತವೆಂಬ ಪ್ರಪಂಚದ ಬೃಹತ್‌ ಪ್ರಜಾತಂತ್ರದ ಮತೀಯ ರಾಜಕಾರಣಕ್ಕೆ ಹೊಸ ತಿರುವೊಂದು ಸಿಕ್ಕಿದೆ. ಇದರ ಪ್ರಭಾವವನ್ನು ನಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿಯೇ ನೋಡಬೇಕು. ಅದು ಭಾರತ ನಡೆಯುತ್ತಿರುವ ದಿಕ್ಕನ್ನು ತೋರಿಸಲಿದೆ.&#160; ಈ ಹಿನ್ನಲೆಯಲ್ಲಿ ನಾವು ನೆನಪಿಸಿಕೊಳ್ಳಬೇಕಾದ ಓರ್ವ ವ್ಯಕ್ತಿಯೆಂದರೆ ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದ ಮಹಂತ್ (ಮುಖ್ಯ ಅರ್ಚಕ) ಆಗಿದ್ದ ಬಾಬಾ [&#8230;]]]></description>
										<content:encoded><![CDATA[
<p>ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿದೆ. ದೇಶದಾದ್ಯಂತ ಜನರು ಕುತೂಹಲದಿಂದ ಕಾಯುತ್ತಿದ್ದ ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಪೂರ್ಣಗೊಂಡು, ಆ ವಿವಾದಕ್ಕೆ ತಾರ್ಕಿಕ ಅಂತ್ಯ ಸಿಕ್ಕಿದೆ. ಹಾಗೆಂದು ಭಾವಿಸಿಕೊಂಡರೂ, ಇದು ಭಾರತವೆಂಬ ಪ್ರಪಂಚದ ಬೃಹತ್‌ ಪ್ರಜಾತಂತ್ರದ ಮತೀಯ ರಾಜಕಾರಣಕ್ಕೆ ಹೊಸ ತಿರುವೊಂದು ಸಿಕ್ಕಿದೆ. ಇದರ ಪ್ರಭಾವವನ್ನು ನಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿಯೇ ನೋಡಬೇಕು. ಅದು ಭಾರತ ನಡೆಯುತ್ತಿರುವ ದಿಕ್ಕನ್ನು ತೋರಿಸಲಿದೆ.&nbsp;</p>



<p>ಈ ಹಿನ್ನಲೆಯಲ್ಲಿ ನಾವು ನೆನಪಿಸಿಕೊಳ್ಳಬೇಕಾದ ಓರ್ವ ವ್ಯಕ್ತಿಯೆಂದರೆ ಅಯೋಧ್ಯೆಯ ರಾಮಜನ್ಮಭೂಮಿ ದೇವಸ್ಥಾನದ ಮಹಂತ್ (ಮುಖ್ಯ ಅರ್ಚಕ) ಆಗಿದ್ದ ಬಾಬಾ ಲಾಲ್ ದಾಸ್ ಅವರನ್ನು. ಇವರನ್ನು ನವೆಂಬರ್ 26, 1993ರಂದು ಗುಂಡಿಕ್ಕಿ ಕೊಲ್ಲಲಾಯಿತು.&nbsp;</p>



<p>ಇವರ ಜೊತೆಗೆ ಕಾಶಿ ವಿಶ್ವನಾಥ ದೇವಾಲಯದ ಮಾಜಿ ಮಹಾಂತ್ ರಾಜೇಂದ್ರ ಪ್ರಸಾದ್ ತಿವಾರಿ ಅವರನ್ನು. ಇಬ್ಬರಲ್ಲಿ ಇರುವ ವ್ಯತ್ಯಾಸವೆಂದರೆ ಓಬ್ಬರನ್ನು ಸಾಯಿಸಲಾಗಿದೆ, ಇನ್ನೊಬ್ಬರು ಬದುಕಿದ್ದಾರೆ. ಆದರೆ ಇಬ್ಬರ ದನಿಯೂ ಒಂದೇ ಆಗಿದೆ.</p>



<p>“ಅಯೋಧ್ಯೆಯ ಜನ ಮಾತ್ರವಲ್ಲ, ಭಾರತದಾದ್ಯಂತ ಜನರು ಇದನ್ನು ವಿರೋಧಿಸಬೇಕು. ನಾವು ಎಂದಿಗೂ ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸಬಾರದು ಮತ್ತು ಅವರ ಹೃದಯವನ್ನು ಒಡೆಯಬಾರದು. ನಮ್ಮ ಧರ್ಮ ಇದನ್ನು ಒಪ್ಪುವುದಿಲ್ಲ. ರಾಮನ ರಾಜಕೀಯ ಆದರ್ಶವು ಎಲ್ಲರಿಗೂ ಸಮೃದ್ಧಿಯನ್ನು ತರುತ್ತದೆ &#8230; ನಾವು ತಿಂದರೆ ನಮ್ಮ ದೇಹದ ಎಲ್ಲಾ ಭಾಗಗಳಿಗೆ ಆಹಾರ ಸಿಗುತ್ತದೆ, ಆದ್ದರಿಂದ ಎಲ್ಲರೂ ನಮ್ಮವರೇ, ಯಾರೂ ಇಲ್ಲಿ ದೊಡ್ಡವರಲ್ಲ ಅಥವಾ ಚಿಕ್ಕವರಲ್ಲ. ಈ ಆದರ್ಶಗಳನ್ನು ಕೊಲ್ಲಲಾಗಿದೆ….!”</p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ :</strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong> ಪೀಪಲ್‌ ಮೀಡಿಯಾ</strong></a></p>



<p>1990 ರ ದಶಕದಲ್ಲಿ ರಾಮ ಮಂದಿರದ ಗಲಭೆಯಲ್ಲಿ ದೇಶ ಹೊತ್ತಿ ಉರಿಯುತ್ತಿದ್ದಾಗ ಈ ಮಾತುಗಳನ್ನು ಹೇಳಿದ್ದು ಬೇರೆ ಯಾರೂ ಅಲ್ಲ, ವಿವಾದಿತ ರಾಮಜನ್ಮಭೂಮಿ ದೇವಸ್ಥಾನದ ಮಹಂತ್ (ಮುಖ್ಯ ಅರ್ಚಕ) ಆಗಿದ್ದ ಹಿಂದೂ ಅರ್ಚಕ ಬಾಬಾ ಲಾಲ್ ದಾಸ್ ಅವರು. ಇದು ರಾಮ್ ಕೆ ನಾಮ್ ಸಾಕ್ಷ್ಯಚಿತ್ರದ ಕೊನೆಯಲ್ಲಿ ನೀವು ಕೇಳಬೇಕಾದ ಮುಂದೆಂದೂ ಇತಿಹಾಸದಲ್ಲಿ ಅಚ್ಚಳಿಯದೆ ಉಳಿಯುವ ಮಾತುಗಳು.</p>



<p>ಭಾರತದ ಭಕ್ತಿ ಪರಂಪರೆಯ ಆತ್ಮದ ಭಾಷೆಗಳಾದ ಪ್ರೇಮ, ಶಾಂತಿ, ಒಳಗೊಳ್ಳುವಿಕೆ ನಶಿಸಿಹೋಗುತ್ತಾ, ದೇಶ ಆದ್ಯಾತ್ಮದಿಂದ ಕಳಚಿಕೊಂಡು ಕರ್ಮಠತನಕ್ಕೆ ದಾಂಗುಡಿ ಇಡುವಾಗ, ಮತೀಯತೆ ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ, ಒಪ್ಪಿಕೊಂಡ ದೇಶದಲ್ಲಿ ಮುನ್ನಲೆಗೆ ಬರುತ್ತಿರುವಾಗ, ದೇಶ ಸಾಂಸ್ಕೃತಿಕವಾಗಿ ಬಹುಮುಖಿಯಾಗಿ ಕಟ್ಟಿಕೊಳ್ಳುವ ತನ್ನ ಪರಂಪರೆಯನ್ನು ನಿಲ್ಲಿಸುತ್ತಿರುವ ಸಂದರ್ಭದಲ್ಲಿ ಬಾಬಾ ಲಾಲ್‌ ದಾಸ್‌ ಆವರ ಮಾತುಗಳು ನಮ್ಮ ಹೃದಯವನ್ನು ಆಳವಾಗಿ ನಾಟಿ ಸಂಕಟವನ್ನು ಉಂಟುಮಾಡುತ್ತವೆ.</p>



<p>1991ರಲ್ಲಿ ಖ್ಯಾತ ಸಾಕ್ಷ್ಯಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್ ಅವರ ರಾಮ್ ಕೆ ನಾಮ್ ಸಾಕ್ಷ್ಯಚಿತ್ರ ಪ್ರಚಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ನವೆಂಬರ್ 26, 1993 ರಂದು, ಬಾಬಾ ಲಾಲ್ ದಾಸ್ ಅವರನ್ನು ಅನುಮಾನಾಸ್ಪದವಾಗಿ ಗುಂಡಿಕ್ಕಿ ಕೊಲ್ಲಲಾಯಿತು.&nbsp;</p>



<p style="font-size:19px"><strong>ಯಾರು ಈ ಬಾಬಾ ಲಾಲ್‌ ದಾಸ್‌?</strong></p>



<p>ಬಾಬಾ ಲಾಲ್ ದಾಸ್ ಅವರನ್ನು 1983 ರಲ್ಲಿ ಲಕ್ನೋ ಹೈಕೋರ್ಟ್ ಅಯೋಧ್ಯೆಯ ಮುಖ್ಯ ಅರ್ಚಕರನ್ನಾಗಿ ನೇಮಿಸಿತು. ಬಾಬರಿ ಮಸೀದಿಯ ಸುತ್ತ ವಿಶ್ವ ಹಿಂದೂ ಪರಿಷತ್&nbsp; ನಡೆಸುತ್ತಿದ್ದ ಚಟುವಟಿಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಇವರು,. ಲಾಲ್ ಕೃಷ್ಣ ಅಡ್ವಾಣಿಯವರಿಗೆ ತಮ್ಮ ರಥಯಾತ್ರೆಯನ್ನು ನಿಲ್ಲಿಸುವಂತೆ ಆಗ್ರಹಿಸಿದ್ದರು. ರಾಮ ಮಂದಿರ ಚಳವಳಿಯನ್ನು ಕೇವಲ ಹಿಂದೂ ಮತಗಳನ್ನು ಸೆಳೆಯುವ ತಂತ್ರ ಎಂದು ಟೀಕಿಸಿದ್ದರು.</p>



<p>ರಾಮ್‌ ಕೆ ನಾಮ್‌ ಡಾಕ್ಯುಮೆಂಟರಿಯಲ್ಲಿ, &#8220;ಇದು (ಮಸೀದಿ ಧ್ವಂಸ) ವಿಎಚ್‌ಪಿಯ ರಾಜಕೀಯ ಆಟ. ಇದನ್ನು ಮಾಡುತ್ತಿರುವವರಿಗೆ ಹಿಂದೂ ಮತವನ್ನು ಸೆಳೆಯಲು ಭಾರತದಾದ್ಯಂತ ಉದ್ವಿಗ್ನತೆಯನ್ನು ಸೃಷ್ಟಿಸುವುದರಲ್ಲಿ ಹೆಚ್ಚು ಆಸಕ್ತಿ,&#8221; ಎನ್ನುತ್ತಾ ಎರಡು ಸಮುದಾಯಗಳ ನಡುವೆ ಇರುವ ಶಾಂತಿ ಮತ್ತು ಸಾಮರಸ್ಯದ ಬಗ್ಗೆ ವಿವರಿಸಿದ್ದರು. ಅಯೋಧ್ಯೆಯ ಹೆಚ್ಚಿನ ದೇವಾಲಯಗಳನ್ನು ಅವಧ್‌ನ ಮುಸ್ಲಿಂ ರಾಜರ ದೇಣಿಗೆಯಿಂದ ಹೇಗೆ ನಿರ್ಮಿಸಲಾಯಿತು ಮತ್ತು 1855 ರ ಘರ್ಷಣೆಯ ನಂತರ ಹಿಂದೂ ಪುರೋಹಿತರು ಮತ್ತು ಮುಸ್ಲಿಂ ಪೀರರು ಹೇಗೆ ಸೌಹಾರ್ದಯುತವಾಗಿ ಬದುಕಲು ನಿರ್ಧರಿಸಿದರು ಎಂದು ಈ ಡಾಕ್ಯುಮೆಂಟರಿಯಲ್ಲಿ ಅರ್ಚಕರು ಹೇಳಿದ್ದಾರೆ.</p>



<p>ಬಾಬಾ ಲಾಲ್‌ ದಾಸ್‌ ಅವರಲ್ಲಿ ಬಾಬ್ರಿ ಮಸೀದಿ ಧ್ವಂಸದ  ಬಗ್ಗೆ ಸಾಕ್ಷ್ಯಾಧಾರಗಳು ಇದ್ದವು,1993 ರಲ್ಲಿ ದೆಹಲಿಯ ಸಿಟಿಜನ್‌ ಟ್ರಿಬ್ಯೂನಲ್‌ಗೆ ಇದನ್ನು ಸಲ್ಲಿಸಿದ್ದರು.  ರಾಮಜನ್ಮಭೂಮಿ ನ್ಯಾಸ್ ಪರವಾಗಿ ಸಂಗ್ರಹಿಸಲಾದ ದೊಡ್ಡ ಮೊತ್ತದ ಹಣದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಆರೋಪ ಕೂಡ ಮಾಡಿದ್ದರು.</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<div class="youtube-embed" data-video_id="tEUbXET7gjY"><iframe title="ಅಯೋಧ್ಯೆಯ ಸೌಹಾರ್ದತೆಯ ದನಿ ಬಾಬಾ ಲಾಲ್ ದಾಸ್ |Peepal Media | ಪೀಪಲ್‌ ಮೀಡಿಯಾ" width="696" height="392" src="https://www.youtube.com/embed/tEUbXET7gjY?feature=oembed&#038;enablejsapi=1" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" allowfullscreen></iframe></div>
</div></figure>



<p>ಇದಾಗಿ, 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ಕೆಲ ತಿಂಗಳುಗಳ ಮೊದಲು, ಅಂದಿನ ಕಲ್ಯಾಣ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಬಾಬಾ ಲಾಲ್ ದಾಸ್ ಅವರನ್ನು ಅರ್ಚಕ ಸ್ಥಾನದಿಂದ ಅನಧಿಕೃತವಾಗಿ ತೆಗೆದುಹಾಕಿತು. ಕೋರ್ಟಿನಿಂದ ನೇಮಕವಾಗಿರುವ ಕಾರಣ ಕೋರ್ಟಿನ ಆದೇಶ ಇಲ್ಲದೆ ಈ ರೀತಿ ವಜಾಗೊಳಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದರು. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದ ಮುಂದೆ ಈ ಪ್ರಕರಣ ಬಾಕಿ ಉಳಿದಿದೆ. </p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ :</strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong> ಪೀಪಲ್‌ ಮೀಡಿಯಾ</strong></a></p>



<p>ಡಿಸೆಂಬರ್ 6, 1992 ರಂದು ಬಾಬರಿ ಮಸೀದಿ ಧ್ವಂಸವಾಯಿತು. ಇದಾದ ನಂತರ ತಮ್ಮ ಹತ್ಯೆಯಾಗಬಹುದು ಎಂಬ ಭಯ ಅರ್ಚಕರಿಗೆ ಇತ್ತು. ರಕ್ಷಣೆ ಕೊಡುವಂತೆ&nbsp; ಸರ್ಕಾರಕ್ಕೆ ವಿನಂತಿಸಿದರು. ಆದರೆ ಕಲ್ಯಾಣ್ ಸಿಂಗ್ ಅವರ ಸರ್ಕಾರವು ಅವರ ಅಂಗರಕ್ಷಕರನ್ನು ತೆಗೆದುಹಾಕಿತು. ನವೆಂಬರ್ 26, 1993 ರಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.&nbsp;</p>



<p>ದೇಶ ಕಂಡು ಕೇಳರಿಯದ ಅಮಾನವೀಯ ಘಟನೆಗಳು ಇದರ ಬೆನ್ನಿನಲ್ಲೇ ನಡೆದವು. ಇದರಿಂದ ದೇಶ ಚೇತರಿಸಿಕೊಂಡಿಲ್ಲ. ಆಗ ಉಂಟಾದ ಬೃಹತ್‌ ಕಂದಕವನ್ನು ಮುಚ್ಚಲು ಶತಮಾನಗಳಷ್ಟು ಪ್ರಯತ್ನಿಸಬೇಕು. ಈಗ ಬಾಬರಿ ಮಸೀದಿ ಇದ್ದಲ್ಲೇ ರಾಮನ ಪ್ರತಿಷ್ಠೆಯನ್ನು ಮಾನನೀಯ ಪ್ರಧಾನಿಗಳ ನೇತೃತ್ವದಲ್ಲಿ ಮಾಡಲಾಗಿದೆ. ದೇಶದ ರಾಜಕಾರಣ ಮಗ್ಗುಲು ಬದಲಿಸಿದ&nbsp; ಈ ಸಂದರ್ಭದಲ್ಲಿ ರಾಮಭಕ್ತ ಲಾಲ್ ದಾಸ್ ಅವರು ನೀಡಿದ ಕೋಮು ಐಕ್ಯತೆಯ ಸಂದೇಶ ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ.</p>



<p>ಮೊಘಲ್ ರಾಜಕುಮಾರ ದಾರಾ ಶಿಕೋಹ್ 17 ನೇ ಶತಮಾನದಲ್ಲಿ ವಾರಣಾಸಿಯ ವಿಶ್ವನಾಥ ದೇವಾಲಯದ ಮೇಲ್ವಿಚಾರಣೆಗಾಗಿ ಅಲ್ಲಿನ ಮಹಂತರಿಗೆ ಪಟ್ಟಾ (ಪತ್ರ) ನೀಡುತ್ತಾನೆ. 10 ತಲೆಮಾರುಗಳವರೆಗೆ ಇದು ಮುಂದುವರಿದುಕೊಂಡು ಬಂದಿದೆ. ಕಾಶಿ ವಿಶ್ವನಾಥ ದೇವಾಲಯದ ಆಡಳಿತದ ಅಧಿಕಾರ ಈ ಕುಟುಂಬದ ಕೈಯಲ್ಲೇ ಇತ್ತು. 1983 ರಲ್ಲಿ ಉತ್ತರ ಪ್ರದೇಶ ಸರ್ಕಾರ ಇವರನ್ನು ದೇವಾಲಯದ ಪಾರಂಪರಿಕ ಮೋಕ್ತೇಸರಿಕೆಯಿಂದ ತೆಗೆಯಿತು. ಈ ಮನೆತನದ ಈಗಿನ ತಲೆಮಾರು ಮಹಂತ್ ರಾಜೇಂದ್ರ ಪ್ರಸಾದ್ ತಿವಾರಿ ಸಧ್ಯದ ಕೋಮುವಾದ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಶಾಂತಿ ಸಹಬಾಳ್ವೆಯ ಬಹುಮುಖ್ಯ ದನಿಯಾಗಿ ಕಾಣಿಸಿಕೊಳ್ಳುತ್ತಾರೆ.</p>



<p>ತಿವಾರಿ ಪ್ರಧಾನಿ ನರೇಂದ್ರ ಮೋದಿಯವರ ಬಹುಪ್ರಿಯ ಯೋಜನೆಯಾದ ವಿಶ್ವನಾಥ ಟೆಂಪಲ್ ಕಾರಿಡಾರ್‌ನ ಕಟು ಟೀಕಾಕಾರರಾಗಿದ್ದರು. ಈ ಯೋಜನೆಯ ಮೂಲಕ ಸುಮಾರು 286 ಶಿವಲಿಂಗಗಳನ್ನು ಹೊಂದಿರುವ ಹಲವಾರು ಪುರಾತನ ದೇವಾಲಯಗಳನ್ನು ಕೆಡವಿ ಹಾಕಲಾಗಿದೆ. ಇವುಗಳನ್ನು ಕಿತ್ತು ಬಿಸಾಡಲಾಯಿತು, ಕೆಲವನ್ನು ಮುರಿದು ಹಾಕಿದರು. ಕೇವಲ 146 ಶಿವಲಿಂಗಗಳನ್ನು ಮಾತ್ರ ಜೀರ್ಣೋದ್ಧಾರಗೊಳಿಸಿ ಬನಾರಸ್‌ನ ಲಂಕಾದ ಪೊಲೀಸ್ ಠಾಣೆಯಲ್ಲಿ ಸಂರಕ್ಷಿಸಿ ಇಡಲಾಗಿದೆ. ಸದ್ಯ ಅಲ್ಲಿ ಅವುಗಳಿಗೆ ನಿತ್ಯದ ಪೂಜೆಯನ್ನು ಸಲ್ಲಿಸಲಾಗುತ್ತಿದೆ.&nbsp;</p>



<p>ಅಯೋಧ್ಯೆಯಲ್ಲಿ ರಾಮನ ಪ್ರತಿಷ್ಠೆಯನ್ನು ತುರಾತುರಿಯಲ್ಲಿ ಮಾಡಿರುವುದನ್ನು ಎಲೆಕ್ಷನ್‌ ಗಿಮಿಕ್‌ ಎಂದೇ ಟೀಕಿಸಿರುವ ಕಾಶಿಯ ಮಾಜಿ ಮೊಕ್ತೇಸರ ತಿವಾರಿಯವರು, ಇದೊಂದು ʼಸ್ಪಾನ್ಸರ್ಡ್‌ ಬೈ ಪಿಲಂ ಸ್ಟಾರ್‌ʼ ಕಾರ್ಯಕ್ರಮ, ಇದು ಮೋದಿಯವರು ತಮ್ಮ ವ್ಯಾನಿಟಿಯನ್ನು ಹೆಚ್ಚಿಸಿಕೊಳ್ಳಲು ಮಾಡಿರುವ ತಂತ್ರ ಎಂದು ಆರೋಪಿಸಿದ್ದಾರೆ.&nbsp;</p>



<p>“ಮೋದಿಯವರು ಓಟಿಗಾಗಿ ರಾಮನನ್ನು ಬಳಸಿಕೊಳ್ಳುತ್ತಿದ್ದಾರೆ. ಅಧಿಕಾರವೇ ಮೋದಿಯವರ ರಾಮ, ಅವರ ನಂಬಿಕೆ, ಅವರ ವ್ಯಾಪಾರ,” ಎಂದು ತಿವಾರಿ ಹೇಳಿದ್ದಾರೆ.</p>



<p>ಭಾರತದ ಪವಿತ್ರ ಸ್ಥಳಗಳನ್ನು ಅಭಿವೃದ್ಧಿ ಮಾಡುವಲ್ಲಿ ತೋರಿರುವ ನಿರ್ಲಕ್ಷ್ಯ, ತಿರಸ್ಕಾರದ ಬಗ್ಗೆ ತಿವಾರಿಯವರಿಗೆ ಆಕ್ರೋಶ ಇದೆ, ಅವುಗಳನ್ನು ಮಾಲ್‌ಗಳ ರೀತಿಯಲ್ಲಿ ಕಟ್ಟಲಾಗುತ್ತಿದೆ, ಅಲ್ಲಿ ಜನರು ಶಾಪಿಂಗ್ ಮಾಡಲು ಮತ್ತು ಮೋಜು ಮಸ್ತಿಗಾಗಿ ಬರುತ್ತಾರೆ ಅಥವಾ ಅವುಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆ. ಪವಿತ್ರವಾದ ಕ್ಷೇತ್ರವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ಪ್ರಯತ್ನಗಳೇ ಹೊರತು ಭಕ್ತರಲ್ಲಿ ದೇವರ ಮೇಲಿನ ಭಕ್ತಿಯನ್ನು ಮೂಡಿಸುವ ಪ್ರಯತ್ನಗಳಲ್ಲ. “ಇದು ಮಾಲ್, ಅಯೋಧ್ಯೆಯ ರಾಮಮಂದಿರವಲ್ಲ. ಅಂತಹ ಮೊದಲ ಮಾಲ್ ಅನ್ನು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ನಿರ್ಮಿಸಲಾಯಿತು. ಮೂರನೆಯದು ಮಥುರಾದಲ್ಲಿ ಆಗಲಿದೆ” ಎಂದು ತಿವಾರಿ ಹೇಳುತ್ತಾರೆ.</p>



<p><strong>ನಿರಂತರ ಸುದ್ದಿಗಳನ್ನು ಪಡೆಯಲು ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ :</strong><a href="https://chat.whatsapp.com/Lec6jB78EHu04TNvY80Tu6" data-type="link" data-id="https://chat.whatsapp.com/Lec6jB78EHu04TNvY80Tu6"><strong> ಪೀಪಲ್‌ ಮೀಡಿಯಾ</strong></a></p>



<p>ಇವೆಲ್ಲವನ್ನೂ ಸನಾತನ ಧರ್ಮದ ಮೇಲಿನ ಆಕ್ರಮಣ ಎಂದು ತಿವಾರಿ ಕರೆದಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಸನಾತನ ಧರ್ಮ, ಅದರ ತತ್ವಗಳು, ಅದರ ನಿಯಮಗಳು ಮತ್ತು ಭವಿಷ್ಯದಲ್ಲಿ ಹಿಂದೂಗಳ ಧರ್ಮಗ್ರಂಥಗಳನ್ನು ರೂಪಿಸುವ ಅಧಿಕಾರವನ್ನು ಆಚಾರ್ಯರು ಮತ್ತು ಧಾರ್ಮಿಕ ಗುರುಗಳಿಂದ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. &#8220;ಸನಾತನ ಧರ್ಮದ ಮೇಲಿನ ಈ ಸವಾರಿಯೇ ಶಂಕರಾಚಾರ್ಯರನ್ನು ಜನವರಿ 22 ರ ಉದ್ಘಾಟನೆಯ ವಿರುದ್ಧ ಮಾತನಾಡುವಂತೆ ಮಾಡಿತು&#8221; ಎಂದು ತಿವಾರಿ ವಾದಿಸುತ್ತಾರೆ.</p>



<p>ಇದು ಮತೀಯತೆ ಮತ್ತು ಆಧ್ಯಾತ್ಮಿಕತೆಯ ನಡುವಿನ ಸಂಘರ್ಷ. ಸಂಘವು ತನ್ನ ರಾಜಕೀಯ ಬಲದ ಜೊತೆಗೆ ಧಾರ್ಮಿಕ ಶಕ್ತಿಯನ್ನು ಪಡೆಯಲು ಯತ್ನಿಸುತ್ತಿದೆ. &#8220;ಒಮ್ಮೆ ಇದು ನಡೆದರೆ, ನಮ್ಮ ಸಮಾಜದ ಮೇಲೆ ಸಂಘದ ನಿಯಂತ್ರಣವು ಪೂರ್ಣಗೊಳ್ಳುತ್ತದೆ&#8221; ಎಂದು ಅವರು ಭವಿಷ್ಯ ನುಡಿದ್ದಾರೆ.</p>



<p>&nbsp;&#8220;ಸತ್ಯಕ್ಕಿಂತ ಅಸತ್ಯವು ಯಾವಾಗಲೂ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ&#8221; ಎನ್ನುವ ಮಹಂತ್ ತಿವಾರಿ, ಸನಾತನ ಧರ್ಮದ 10 ಮೌಲ್ಯಗಳನ್ನು ಪಟ್ಟಿ ಮಾಡುತ್ತಾರೆ: ಸತ್ಯವನ್ನು ಹೇಳುವುದು, ಅಹಂಕಾರ ಮತ್ತು ಕೋಪವನ್ನು ತೊಡೆದುಹಾಕುವುದು, ಸಹನೆಯನ್ನು ಬೆಳೆಸುವುದು ಇತ್ಯಾದಿ. &#8220;ಈ ಎಲ್ಲಾ ಮೌಲ್ಯಗಳು ಕುಸಿಯುತ್ತಿವೆ, ಇವುಗಳಲ್ಲಿ ಯಾವುದನ್ನೂ ಸಾಕಾರಗೊಳಿಸಲಾಗಿಲ್ಲ, ಅವರು ನಮ್ಮನ್ನು ಮತಾಂಧರನ್ನಾಗಿ ಮಾಡುತ್ತಿದ್ದಾರೆ&#8221; ಎಂದು ಅವರು ತಿವಾರಿ ಹೇಳುತ್ತಾರೆ.</p>



<p>ಕಾಶಿ ವಿಶ್ವನಾಥ ದೇವಾಲಯದ ಪಾರಂಪರಿಕ ಅಧಿಕಾರವನ್ನು ಹೊಂದಿರುವ ಮನೆತನದ ಈಗಿನ ತಲೆಮಾರು, ಯಾವುದೇ ಫಲಾಪೇಕ್ಷೆ ಇಲ್ಲದೆ, ದೇಶದ ಬಹುದೊಡ್ಡ ರಾಜಕೀಯ ಶಕ್ತಿಯೊಂದರ ವಿರುದ್ಧ ತಮ್ಮ ಮಾತುಗಳನ್ನು ನಿರ್ಭಯವಾಗಿ ಹೇಳುತ್ತಿದ್ದಾರೆ. ಇವರ ಮಾತುಗಳು ನಮ್ಮನ್ನು ಮತ್ತೆ ಅಯೋಧ್ಯೆಯ ಮುಖ್ಯ ಅರ್ಚಕ, ಸತ್ಯಕ್ಕಾಗಿ ಗುಂಡಿಗೆ ಎದೆಕೊಟ್ಟ ಬಾಬಾ ಲಾಲ್‌ ದಾಸ್‌ ಅವರ ನೆನಪನ್ನು ತರುತ್ತದೆ.</p>



<p>ಯಾಕೆ ಅವರು ಈಗ ಪ್ರಶ್ನಿಸುತ್ತಿದ್ದಾರೆ? ಯಾಕೆ ಅದ್ವೈತ ಪೀಠಗಳು, ಅನೇಕ ಧಾರ್ಮಿಕ ನಾಯಕರು ಬಿಜೆಪಿಯ ನಡೆಯನ್ನು ವಿರೋಧಿಸುತ್ತಿದ್ದಾವೆ?</p>



<p>ಅವರ ಮಾತುಗಳು ಸ್ಪಷ್ಟವಾಗಿವೆ: ಬಿಜೆಪಿ &#8211; ಸಂಘ ಪರಿವಾರದ ಈ ಎಲ್ಲಾ ನಡೆಗಳೂ ಹಿಂದೂ ಧರ್ಮಕ್ಕೆ ಕಂಟಕಪ್ರಾಯವಾಗಿವೆ. ದೇಶ ಸಹಸ್ರಾರು ವರ್ಷಗಳಿಂದ ರೂಪಿಸಿಕೊಂಡು ಬಂದ ಆಧ್ಯಾತ್ಮಿಕತೆ ಮತ್ತು ಬಹುಮುಖಿ ಸಂಸ್ಕೃತಿಗಳಿಗೆ ಹಿಂದುತ್ವ ಮಾರಕವಾಗಿ ಪರಿಣಮಿಸಿದೆ. ಇದು ಚುನಾವಣೆ ಗೆಲ್ಲುವುದಕ್ಕೆ, ಅನ್ಯ ಮತೀಯರನ್ನು ದ್ವೇಷಿಸುವುದಕ್ಕೆ ತಮ್ಮದೇ ಸಂಪ್ರದಾಯವನ್ನು ಎಷ್ಟರಮಟ್ಟಿಗೆ ಬೇಕಾದರೂ ತಿರುಚಿ, ಕೆಡವಿ ಹಾಕಲು ಮುಂದಾಗುತ್ತಿದೆ.&nbsp;</p>



<p>ಹಿಂದುತ್ವ ಎಂಬುದು ಕೋಮವಾದ+ರಾಜಕಾರಣ. ಹಿಂದೂ ಧರ್ಮ ಎಂಬುದು ಭಾರತೀಯ ಧರ್ಮಗಳ ಒಟ್ಟುಗೂಡುವಿಕೆ ಎಂಬ ಸ್ಪಷ್ಟತೆ ಇವರಲ್ಲಿ ಬರುತ್ತಿದೆ. ಹಿಂದುತ್ವವೇ ಹಿಂದೂ ಧರ್ಮದ ಮುಖವಾಡ ಧರಿಸಿಕೊಂಡು ಬಂದಾಗ ಹಿಂದೂ ಧರ್ಮದ ಮೂಲ ಆಶಯಗಳಿಗೆ ಧಕ್ಕೆಯಾಗುತ್ತದೆ ಎಂಬ ಭಯ ಈ ಧಾರ್ಮಿಕ ನಾಯಕರಲ್ಲಿ ಇದೆ. ಹಿಂದುತ್ವ ಎಂಬುದು ಆದ್ಯಾತ್ಮಿಕವಲ್ಲದ್ದು, ಅದು ಆದ್ಯಾತ್ಮಿಕವಾಗಿದ್ದರೆ ಅನ್ಯರನ್ನು ದ್ವೇಷಿಸುವಂತೆ ಮಾಡಲು ಸಾಧ್ಯವಿಲ್ಲ, ಹಾಗಾಗಿ ತಿವಾರಿಯಂತ ಪ್ರಜ್ಞಾವಂತೆರು ಬಿಜೆಪಿಯ ನಡೆಯನ್ನು ವಿರೋಧಿಸಿದ್ದಾರೆ. &nbsp; ಬಾಬಾ ಲಾಲ್‌ ದಾಸ್‌ರಂತ ಅರ್ಚಕರು ತಮ್ಮ ಸಂಪ್ರದಾಯವನ್ನು ಉಳಿಸಲು ಪ್ರಾಣವನ್ನೇ ಕೊಡಬೇಕಾಯ್ತು.&nbsp;</p>



<p style="font-size:19px"><strong>ಲೇಖನ:</strong> ಚರಣ್‌ ಐವರ್ನಾಡು</p>
]]></content:encoded>
					
		
		
			</item>
	</channel>
</rss>
