<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>jail &#8211; Peepal Media</title>
	<atom:link href="https://peepalmedia.com/tag/jail/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 26 Aug 2024 03:01:02 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>jail &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಜೈಲಿನಲ್ಲೂ ಕ್ಯಾಂಟಿನ್‌ ಇರುತ್ತೆ, ಸ್ವಲ್ಪ ದುಬಾರಿ ಅಷ್ಟೇ</title>
		<link>https://peepalmedia.com/there-is-a-canteen-in-jail-a-little-more-expensive/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 26 Aug 2024 03:00:59 +0000</pubDate>
				<category><![CDATA[ಅಂಕಣ]]></category>
		<category><![CDATA[ಬೆಂಗಳೂರು]]></category>
		<category><![CDATA[darsha̧n]]></category>
		<category><![CDATA[jail]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=44455</guid>

					<description><![CDATA[ವಿ.ಆರ್‌.ಕಾರ್ಪೆಂಟರ್‌ ಈ ಕಾಂಗ್ರೆಸ್ ಸರ್ಕಾರಕ್ಕಿರುವ ದಲಿತರ ಮೇಲಿನ ನಿರ್ಲಕ್ಷ್ಯವೋ, ತಾತ್ಸಾರವೋ, ಕೋಪವೋ ಏನೋ… ಒಟ್ಟಿನಲ್ಲಿ ದಾನಮ್ಮ ಹತ್ಯಾಚಾರವನ್ನು ಪ್ರಶ್ನಿಸಿ, ಪ್ರತಿಭಟಿಸಿದ ನಮ್ಮ (ಭಾಸ್ಕರ್ ಪ್ರಸಾದ್ ಮತ್ತು ನಾನು) ಮೇಲೆ ಕೇಸ್ ಜಡಿದು, ಒಂದು ದಿನ ಬಿಜಾಪುರದ ಜೈಲಿಗೆ ಕಳಿಸಿದರು.ನಾವು ಒಳಗೆ ಹೋದ ಅರ್ಧ ಗಂಟೆಯಲ್ಲಿ ಯಾವ ಕಾರಣಕ್ಕೆ ಜೈಲಿಗೆ ಹೋದೆವು ಎಂದು ಅಲ್ಲಿನ ವಿಚಾರಣಾಧೀನ ಕೈದಿಗಳಿಗೆ ಮತ್ತು ಸಜಾ ಆದ ಕೈದಿಗಳಿಗೆ ಅಲ್ಲಿನ ಟಿವಿ ಸುದ್ದಿಗಳ ಮೂಲಕ ತಿಳಿಯಿತು. ತುಂಬಾ ಜನ ನಮ್ಮನ್ನು ನೋಡಲು ಬಂದರು‌. ಕೈ [&#8230;]]]></description>
										<content:encoded><![CDATA[
<p><strong>ವಿ.ಆರ್‌.ಕಾರ್ಪೆಂಟರ್‌ </strong></p>



<p>ಈ ಕಾಂಗ್ರೆಸ್ ಸರ್ಕಾರಕ್ಕಿರುವ ದಲಿತರ ಮೇಲಿನ ನಿರ್ಲಕ್ಷ್ಯವೋ, ತಾತ್ಸಾರವೋ, ಕೋಪವೋ ಏನೋ… ಒಟ್ಟಿನಲ್ಲಿ ದಾನಮ್ಮ ಹತ್ಯಾಚಾರವನ್ನು ಪ್ರಶ್ನಿಸಿ, ಪ್ರತಿಭಟಿಸಿದ ನಮ್ಮ (ಭಾಸ್ಕರ್ ಪ್ರಸಾದ್ ಮತ್ತು ನಾನು) ಮೇಲೆ ಕೇಸ್ ಜಡಿದು, ಒಂದು ದಿನ ಬಿಜಾಪುರದ ಜೈಲಿಗೆ ಕಳಿಸಿದರು.<br>ನಾವು ಒಳಗೆ ಹೋದ ಅರ್ಧ ಗಂಟೆಯಲ್ಲಿ ಯಾವ ಕಾರಣಕ್ಕೆ ಜೈಲಿಗೆ ಹೋದೆವು ಎಂದು ಅಲ್ಲಿನ ವಿಚಾರಣಾಧೀನ ಕೈದಿಗಳಿಗೆ ಮತ್ತು ಸಜಾ ಆದ ಕೈದಿಗಳಿಗೆ ಅಲ್ಲಿನ ಟಿವಿ ಸುದ್ದಿಗಳ ಮೂಲಕ ತಿಳಿಯಿತು. ತುಂಬಾ ಜನ ನಮ್ಮನ್ನು ನೋಡಲು ಬಂದರು‌. ಕೈ ಕುಲುಕಿದರು, ಅಪ್ಪಿಕೊಂಡರು, ಶಹಬಾಶ್‌ಗಿರಿ ಕೊಟ್ಟರು. ಅದೇ ಮೊದಲಬಾರಿಗೆ ಜೈಲು ನೋಡಿದ್ದ ನನಗೆ ಅಲ್ಲಿನ ಮನುಷ್ಯರ ಪ್ರೀತಿ ಕಂಡು ಭಾವುಕನಾದೆ.<br>ಒಂದೇ ಒಂದು ಪೈಸೆ ನಮ್ಮಲ್ಲಿ ಇರಲಿಲ್ಲ. ಆದರೂ ನಮಗೆ ಒಳ್ಳೆಯ ಸತ್ಕಾರ ಕೊಟ್ಟರು. ಅಲ್ಲಿ ಕ್ಯಾಂಟೀನ್‌ನಲ್ಲಿ ಒಬ್ಬ ಸಜಾ ಕೈದಿ ಇಡ್ಲಿ ಕೊಡಿದರು, ಮತ್ತೊಬ್ಬರು ಸಿಗರೇಟ್ ಕೊಡಿಸಿದರು.<br>ಪೊಲೀಸರು ನಮ್ಮನ್ನು ಅರೆಸ್ಟ್ ಮಾಡಿದ್ದು ಮಧ್ಯರಾತ್ರಿ ಹನ್ನೆರಡು ಗಂಟೆಗೆ. ಎಫ್‌ಐಆರ್ ಮಾಡಿ, ಹೆಲ್ತ್ ಚೆಕಪ್ ಅಂತ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಬೆಳಗಿನ ಜಾವ ಎರಡು ಗಂಟೆ, ಅಲ್ಲಿಂದ ತಹಶಿಲ್ದಾರರ ಆಫೀಸಿಗೆ ಹೋಗಿ ಕಾದೆವು. ಅವರು ಬಂದಿದ್ದು ಬೆಳಗಿನ ಜಾವ ಐದಕ್ಕೆ. ಅಲ್ಲಿಂದ ಜೈಲಿಗೆ ಬಿಟ್ಟದ್ದು 6ಕ್ಕೆ,</p>



<h5 class="wp-block-heading">ಸೋ ನಿದ್ದೆ ಇರದಿದ್ದ ನಮ್ಮನ್ನು, 11 ಗಂಟೆಗೆ ಪ್ರತ್ಯೇಕ ಸೆಲ್‌ಗೆ ಹಾಕಿದರು. ಇಬ್ಬರೂ ಇನ್ನೇನು ಮಲಗಬೇಕು ಅನ್ನುವಷ್ಟರಲ್ಲಿ, ದೇವನಹಳ್ಳಿಯಿಂದ ಬಿಜಾಪುರಕ್ಕೆ ಟ್ರಾನ್ಫಫರ್ ಆಗಿ ಬಂದಿದ್ದ ಮೂರ್ನಾಲ್ಕು ಜನ ಸಜಾ ಕೈದಿಗಳು ಒಂದು ಬಕೆಟ್‌ನಲ್ಲಿ ಅನ್ನ, ಸಾರು, ಮೊಟ್ಟೆ ತಂದು ಕೊಟ್ಟು, ಊಟ ಮಾಡಲು ಪ್ರೀತಿಯಿಂದ ಒತ್ತಾಯಿಸಿದರು. ಜತೆಗೆ ಅರ್ಧ ಪಾಕೆಟ್ ಸಿಗರೇಟು ಕೊಟ್ಟು, ಭಾಸ್ಕರ್ ಅವರಿಗೆ &#8216;ಅಣ್ಣಾ, ಇವತ್ತೇ ನಿಮ್ ರೂಮಿಗೆ ಟಿವಿ ಹಾಕಿಸುತ್ತೇವೆ, ಚಿಕನ್ ಮಟನ್ ಏನು ಬೇಕು ಹೇಳಿ, ರೆಡಿ ಮಾಡಿಸುತ್ತೇವೆ.&#8221; ಎಂದು ಹೇಳಿ ಹೋದರು.</h5>



<p>ಇದನ್ನೆಲ್ಲಾ ಯಾಕೆ ಹೇಳಿದೆನೆಂದರೆ, ಜೈಲಲ್ಲಿ ಸಿಗರೇಟು, ಮೊಟ್ಟೆ ಮಾಂಸ ಕಾಮನ್. ಈ ಟಿವಿಗಳು ಭಜನೆ ಮಾಡಿದಂತೆ ಅದೆಲ್ಲಾ ಅಲ್ಲಿ ಐಷಾರಾಮಿ ಜೀವನ ಅಲ್ಲ, ಅದು ಜೈಲಿನ ಮ್ಯಾನುಅಲ್‌ನಲ್ಲೇ ಇದನ್ನೆಲ್ಲಾ ಕೊಡಬಹುದು ಅಂತ ಇದೆ. ಹೊರಗಡೆ ಇದ್ದಂತೆ ಅಲ್ಲೂ ಕ್ಯಾಂಟೀನ್ ಇರುತ್ತದೆ. ಕ್ಯಾಂಟೀನಲ್ಲಿ ಆಲ್ಕೋಹಾಲ್, ಗಾಂಜಾ ಮುಂತಾದವುಗಳು ಬಿಟ್ಟು, ಮಿಕ್ಕೆಲ್ಲಾ ಅಗತ್ಯ ವಸ್ತುಗಳು ಸಿಗುತ್ತವೆ. ಸ್ವಲ್ಪ ದುಬಾರಿ ಅಷ್ಟೇ. ಸೋ ದರ್ಶನ್ ಇಲ್ಲಿ ಸಿಗರೇಟು ಸೇದುತ್ತಿರುವುದು ಅಪರಾಧವೇ ಅಲ್ಲ. ಟಿವಿಗಳ ಸುಳ್ಳುಗಳನ್ನು ನಂಬಬೇಡಿ.</p>
]]></content:encoded>
					
		
		
			</item>
		<item>
		<title>ಜೈಲುಗಳಲ್ಲೂ ದಲಿತರ ಮೇಲೆ ಜಾತಿ ತಾರತಮ್ಯ: ಸುಪ್ರೀಂ ಕಳವಳ</title>
		<link>https://peepalmedia.com/caste-discrimination-against-dalits-in-jails-too-supreme-concern/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 11 Jul 2024 11:49:27 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[bengalure]]></category>
		<category><![CDATA[castism]]></category>
		<category><![CDATA[court]]></category>
		<category><![CDATA[india]]></category>
		<category><![CDATA[jail]]></category>
		<category><![CDATA[kannada]]></category>
		<category><![CDATA[news]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[suprim]]></category>
		<guid isPermaLink="false">https://peepalmedia.com/?p=42091</guid>

					<description><![CDATA[ನವದೆಹಲಿ: ಸರ್ಕಾರಿ ಜೈಲುಗಳಲ್ಲಿರುವ ಎಸ್‌ಸಿ, ಎಸ್ಟಿ ಸಮುದಾಯದವರ ಮೇಲೆ ದಿನನಿತ್ಯ ಕೆಲಸ ಮಾಡಿಸುವ ವಿಚಾರದಲ್ಲಿ ಜಾತಿ ತಾರತಮ್ಯ ಮಾಡಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಬಾರ್‌ ಅಂಡ್‌ ಬೆಂಚ್‌ ವರದಿ ಪ್ರಕಟಿಸಿದೆ. ಪತ್ರಕರ್ತರಾದ ಸುಕನ್ಯಾ ಶಾಂತಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಸರ್ಕಾರಿ ಕಾರಾಗೃಹ ಮಾರ್ಗಸೂಚಿಯಲ್ಲಿನ ಕೆಲ ನಿಬಂಧನೆಗಳು ಜಾತಿ ತಾರತಮ್ಯವನ್ನು ಉತ್ತೇಜಿಸುವ ರೀತಿಯಲ್ಲಿವೆ. ಅವುಗಳನ್ನು ಬದಲಾಯಿಸಬೇಕಿದೆ ಎಂದಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿ [&#8230;]]]></description>
										<content:encoded><![CDATA[
<p><strong>ನವದೆಹಲಿ: </strong>ಸರ್ಕಾರಿ ಜೈಲುಗಳಲ್ಲಿರುವ ಎಸ್‌ಸಿ, ಎಸ್ಟಿ ಸಮುದಾಯದವರ ಮೇಲೆ ದಿನನಿತ್ಯ ಕೆಲಸ ಮಾಡಿಸುವ ವಿಚಾರದಲ್ಲಿ ಜಾತಿ ತಾರತಮ್ಯ ಮಾಡಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. </p>



<p>ಇದಕ್ಕೆ ಸಂಬಂಧಿಸಿದಂತೆ ಬಾರ್‌ ಅಂಡ್‌ ಬೆಂಚ್‌ ವರದಿ  ಪ್ರಕಟಿಸಿದೆ.  ಪತ್ರಕರ್ತರಾದ ಸುಕನ್ಯಾ ಶಾಂತಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಸರ್ಕಾರಿ ಕಾರಾಗೃಹ ಮಾರ್ಗಸೂಚಿಯಲ್ಲಿನ ಕೆಲ ನಿಬಂಧನೆಗಳು ಜಾತಿ ತಾರತಮ್ಯವನ್ನು ಉತ್ತೇಜಿಸುವ ರೀತಿಯಲ್ಲಿವೆ. ಅವುಗಳನ್ನು ಬದಲಾಯಿಸಬೇಕಿದೆ ಎಂದಿದೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿ ತೀರ್ಪು ಕಾಯ್ದಿರಿಸಿದೆ. </p>



<p>ಭಾರತದ ಕಾರಾಗೃಹಗಳಲ್ಲಿ ಜಾತಿ ಆಧಾರದಲ್ಲಿ ಶ್ರಮ ವಿಭಜನಾ ಕೆಲಸಗಳನ್ನು ನೀಡಲಾಗುತ್ತಿದೆ. ಕೆಳಜಾತಿಯವರಿಗೆ ಜಾಸ್ತಿ ಶ್ರಮದಾಯಕ ಹಾಗೂ ಮೇಲ್ಜಾತಿಯವರಿಗೆ ಕಡಿಮೆ ಶ್ರಮದ ಕೆಲಸಗಳನ್ನು ನೀಡಲಾಗುವ ಮೂಲಕ ಜಾತಿ ತಾರತಮ್ಯ ಎಸಗಲಾಗುತ್ತಿದೆ ಎಂದು ಶಾಂತಾ  ತಮ್ಮ ಅರ್ಜಿಯಲ್ಲಿ ವಿವರಸಿದ್ದಾರೆ.</p>



<p> ಸರ್ಕಾರಿ ಕಾರಾಗೃಹ ಮಾರ್ಗಸೂಚಿಯಲ್ಲಿಯೇ ಈ ರೀತಿಯ ತಾರತಮ್ಯ ಮಾಡಲು ಅವಕಾಶ ನೀಡಲಾಗಿದೆ. ಅಧಿಸೂಚಿತ ಪಂಗಡಗಳಿಗೆ ಸೇರಿದವರಿಗೆ ಇಂಥಿಂಥ ಕೆಲಸ ಕೊಡಬಹುದು ಎಂದು ಮಾರ್ಗಸೂಚಿಯೇ ತಿಳಿಸುತ್ತದೆ.  ದಲಿತರನ್ನು ಅಪರಾಧಿಗಳು, ತಿರುಕರು, ವಲಸೆಯವರು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಶಾಂತಾ ತಿಳಿಸಿದ್ದಾರೆ.  ಗುರುವಾರ ಈ ಅರ್ಜಿಯ  ವಿಚಾರಣೆ ನಡೆಸಿದ ಕೋರ್ಟ್‌ ತೀರ್ಪನ್ನು ಕಾಯ್ದಿರಿಸಿದೆ. </p>
]]></content:encoded>
					
		
		
			</item>
		<item>
		<title>ಮರಣದಂಡನೆ: ಮಾಜಿ ಭಾರತೀಯ ನೌಕಾಪಡೆ ಸಿಬ್ಬಂದಿಗಳ ಮೇಲ್ಮನವಿ ಸ್ವೀಕರಿಸಿದ ಕತಾರ್‌ ಕೋರ್ಟ್</title>
		<link>https://peepalmedia.com/qatar-court-accepts-ex-indian-navy-mens-appeal/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 23 Nov 2023 11:42:38 +0000</pubDate>
				<category><![CDATA[ವಿದೇಶ]]></category>
		<category><![CDATA[Bangalore]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[jail]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[navy officer]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[qatar]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33045</guid>

					<description><![CDATA[ದೆಹಲಿ: ಎಂಟು ಮಾಜಿ ನೌಕಾಪಡೆಯ ಸಿಬ್ಬಂದಿಗೆ ಮರಣದಂಡನೆ ವಿಧಿಸಿರುವ ಕುರಿತು ಭಾರತವು ಕತಾರ್‌ಗೆ ಮೇಲ್ಮನವಿ ಸಲ್ಲಿಸಿದ ನಂತರ, ಕತಾರ್ ನ್ಯಾಯಾಲಯವು ನವೆಂಬರ್ 23, ಗುರುವಾರ ಮೇಲ್ಮನವಿ ದಾಖಲೆಯನ್ನು ಅಂಗೀಕರಿಸಿದೆ ಮತ್ತು ಪ್ರಕರಣದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ಅದನ್ನು ಅಧ್ಯಯನ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಆಗಸ್ಟ್ 2022 ರಲ್ಲಿ ಬಂಧಿಸಲ್ಪಟ್ಟ ಒಂದು ವರ್ಷದ ನಂತರ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸೇವೆಗಳಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯರಿಗೆ ಅಕ್ಟೋಬರ್ 26 ರಂದು ಕತಾರ್‌ನ ಪ್ರಥಮ [&#8230;]]]></description>
										<content:encoded><![CDATA[
<p><strong>ದೆಹಲಿ:</strong> ಎಂಟು ಮಾಜಿ ನೌಕಾಪಡೆಯ ಸಿಬ್ಬಂದಿಗೆ ಮರಣದಂಡನೆ ವಿಧಿಸಿರುವ ಕುರಿತು ಭಾರತವು ಕತಾರ್‌ಗೆ ಮೇಲ್ಮನವಿ ಸಲ್ಲಿಸಿದ ನಂತರ, ಕತಾರ್ ನ್ಯಾಯಾಲಯವು ನವೆಂಬರ್ 23, ಗುರುವಾರ ಮೇಲ್ಮನವಿ ದಾಖಲೆಯನ್ನು ಅಂಗೀಕರಿಸಿದೆ ಮತ್ತು ಪ್ರಕರಣದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲು ಅದನ್ನು ಅಧ್ಯಯನ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.</p>



<p>ಆಗಸ್ಟ್ 2022 ರಲ್ಲಿ ಬಂಧಿಸಲ್ಪಟ್ಟ ಒಂದು ವರ್ಷದ ನಂತರ ದಹ್ರಾ ಗ್ಲೋಬಲ್ ಟೆಕ್ನಾಲಜೀಸ್ ಮತ್ತು ಕನ್ಸಲ್ಟೆನ್ಸಿ ಸೇವೆಗಳಲ್ಲಿ ಕೆಲಸ ಮಾಡುತ್ತಿದ್ದ ಎಂಟು ಭಾರತೀಯರಿಗೆ ಅಕ್ಟೋಬರ್ 26 ರಂದು ಕತಾರ್‌ನ ಪ್ರಥಮ ನಿದರ್ಶನದ ನ್ಯಾಯಾಲಯವು ಈ ತೀರ್ಪನ್ನು ನೀಡಿದೆ.</p>



<p>ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ನವೆಂಬರ್ 16, ಗುರುವಾರದಂದು ಭಾರತ ಸರ್ಕಾರದೊಂದಿಗೆ ಕೆಲಸ ಮಾಡುತ್ತಿರುವ ಕುಟುಂಬಗಳು &#8220;ಔಪಚಾರಿಕವಾಗಿ ಮನವಿಯನ್ನು ಸಲ್ಲಿಸಿರುವ&#8221; ಬಗ್ಗೆ ಖಚಿತಪಡಿಸಿದ್ದರು.</p>



<p>ಕೆಲವು ದಿನಗಳ ನಂತರ ಮೇಲ್ಮನವಿಯನ್ನು ಅಂಗೀಕರಿಸಲಾಗಿದ್ದು, ನವೆಂಬರ್ 23 ರಂದು ಮೊದಲ ವಿಚಾರಣೆಯನ್ನು ನಡೆಸಲು ನ್ಯಾಯಾಲಯವು ನಿರ್ಧರಿಸಿತ್ತು.</p>



<p>ನವೆಂಬರ್ 23 ರ ಗುರುವಾರದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು &#8220;ಭಾರತ ಸರ್ಕಾರದಿಂದ ಬೆಂಬಲಿತವಾದ ಕುಟುಂಬಗಳನ್ನು ಪ್ರತಿನಿಧಿಸುವ ವಕೀಲರು ನೀಡಿರುವ ಮೇಲ್ಮನವಿ ದಾಖಲೆಯನ್ನು ಔಪಚಾರಿಕವಾಗಿ ಅಂಗೀಕರಿಸಿದೆ ಮತ್ತು ನಂತರ ಮುಂದಿನ ಮೇಲ್ಮನವಿ ವಿಚಾರಣೆಯ ದಿನಾಂಕವನ್ನು ದೃಢಪಡಿಸಲಿದೆ.&#8221;</p>



<p>ಆರೋಪಿಗಳನ್ನು ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಾಲ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ನಾವಿಕ ರಾಗೇಶ್ ಎಂದು ಗುರುತಿಸಲಾಗಿದೆ.</p>



<p>ಮರಣದಂಡನೆ ಘೋಷಣೆಯ ನಂತರ ಅವರ ಕುಟುಂಬಗಳು ಮತ್ತು ಮಾಜಿ ಸಹೋದ್ಯೋಗಿಗಳು, ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳು ಭಾರತದ ಪ್ರಧಾನ ಮಂತ್ರಿಗೆ ಮನವಿ ಮಾಡಿದ್ದರು.</p>
]]></content:encoded>
					
		
		
			</item>
		<item>
		<title>ಪ್ರೇಯಸಿಯನ್ನು ಕೊಂದ ಅಫ್ತಾಫ್‌ ಪೂನಾವಾಲಾ, ಸೆರೆಮನೆಗೆ</title>
		<link>https://peepalmedia.com/aftaf-poonawala-who-killed-his-mistress-goes-to-jail/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 26 Nov 2022 10:48:30 +0000</pubDate>
				<category><![CDATA[ದೇಶ]]></category>
		<category><![CDATA[afthaf punawala]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[jail]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[New Delhi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[shraddha]]></category>
		<guid isPermaLink="false">https://peepalmedia.com/?p=16640</guid>

					<description><![CDATA[ಹೊಸದಿಲ್ಲಿ : ಶ್ರದ್ಧಾ ಪೂನವಾಲಾಳನ್ನು ಅಮಾನವೀಯವಾಗಿ ಕೊಲೆ ಮಾಡಿದ ಅಫ್ತಾಫ್‌ ಪೂನಾವಾಲಾನನ್ನು ನ್ಯಾಯಾಂಗ ಬಂಧನದಲ್ಲಿ ಜೈಲಿಗೆ ಕಳುಹಿಸಲಾಗಿದೆ. (ಹೆಚ್ಚಿನ ಮಾಹಿತಿ ದೊರೆಯಲಿದೆ)]]></description>
										<content:encoded><![CDATA[
<p><strong>ಹೊಸದಿಲ್ಲಿ</strong> : ಶ್ರದ್ಧಾ ಪೂನವಾಲಾಳನ್ನು ಅಮಾನವೀಯವಾಗಿ ಕೊಲೆ ಮಾಡಿದ ಅಫ್ತಾಫ್‌ ಪೂನಾವಾಲಾನನ್ನು ನ್ಯಾಯಾಂಗ ಬಂಧನದಲ್ಲಿ ಜೈಲಿಗೆ ಕಳುಹಿಸಲಾಗಿದೆ.</p>



<p>(ಹೆಚ್ಚಿನ ಮಾಹಿತಿ ದೊರೆಯಲಿದೆ)</p>
]]></content:encoded>
					
		
		
			</item>
		<item>
		<title>ಪುಲ್ವಾಮಾ ದಾಳಿಯ ಭಯೋತ್ಪಾದಕರನ್ನು ಬೆಂಬಲಿಸಿ ಫೇಸ್‌ಬುಕ್ ಪೋಸ್ಟ್: ಬೆಂಗಳೂರು ವಿದ್ಯಾರ್ಥಿಗೆ 5 ವರ್ಷ ಜೈಲು</title>
		<link>https://peepalmedia.com/pulwama-daliya-bhayothpadakarannu-bembalisi-fb-post-bengaluru-vidyarthige-5-varsha-jail/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 02 Nov 2022 07:39:49 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[bengalure]]></category>
		<category><![CDATA[facebuk]]></category>
		<category><![CDATA[india]]></category>
		<category><![CDATA[jail]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[pulwama attack]]></category>
		<category><![CDATA[student]]></category>
		<category><![CDATA[writing]]></category>
		<guid isPermaLink="false">https://peepalmedia.com/?p=13690</guid>

					<description><![CDATA[ಬೆಂಗಳೂರು : ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಸೋಮವಾರದಂದು ವಿಶೇಷ ಎನ್‌ಐಎ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಬೆಂಗಳೂರಿನಲ್ಲಿ ಓದುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಫೈಜ್ ರಶೀದ್, ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಶ್ಲಾಘಿಸಿ ಭಾರತೀಯ ಸೇನೆಯನ್ನು ಟೀಕಿಸಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದನು. ಈ ಹಿನ್ನಲೆಯಲ್ಲಿ ಆರೋಪಿ ಫೈಜ್‌ ರಶೀದ್‌ಅನ್ನು ಬೆಂಗಳೂರು ಪೊಲೀಸರು ಫೆಬ್ರವರಿ 2019 ರಲ್ಲಿ ಬಂಧಿಸಿದ್ದರು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) [&#8230;]]]></description>
										<content:encoded><![CDATA[
<p style="font-size:20px"><strong>ಬೆಂಗಳೂರು </strong>: ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗೆ ಸೋಮವಾರದಂದು ವಿಶೇಷ ಎನ್‌ಐಎ ನ್ಯಾಯಾಲಯ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.</p>



<p style="font-size:20px">ಬೆಂಗಳೂರಿನಲ್ಲಿ ಓದುತ್ತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಫೈಜ್ ರಶೀದ್, ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಶ್ಲಾಘಿಸಿ ಭಾರತೀಯ ಸೇನೆಯನ್ನು ಟೀಕಿಸಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದನು. ಈ ಹಿನ್ನಲೆಯಲ್ಲಿ ಆರೋಪಿ ಫೈಜ್‌ ರಶೀದ್‌ಅನ್ನು ಬೆಂಗಳೂರು ಪೊಲೀಸರು ಫೆಬ್ರವರಿ 2019 ರಲ್ಲಿ ಬಂಧಿಸಿದ್ದರು.</p>



<p style="font-size:20px">ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಎಂ.ಗಂಗಾಧರ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 10,000 ರೂ.ಗಳ ದಂಡವನ್ನು ವಿಧಿಸಿದರು.</p>



<p style="font-size:20px">ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ (ವಿವಿಧ ಸಮುದಾಯಗಳ ನಡುವೆ ಅಸಂಗತತೆ, ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಉತ್ತೇಜಿಸುವ ಅಪರಾಧ) 124 ಎ (ದೇಶದ್ರೋಹ) ಅಡಿಯಲ್ಲಿ ಮತ್ತು UAPA ಕಾಯಿದೆಯ ಸೆಕ್ಷನ್ 13 ರ ಅಡಿಯಲ್ಲಿ ಫೈಜ್‌ ರಶೀದ್‌ನ ವಿರುದ್ಧ ಬೆಂಗಳೂರಿನ ಬಾಣಸವಾಡಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಅವರನ್ನು ಬಂಧಿಸಲಾಯಿತು. ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಅವರಿಗೆ ಜಾಮೀನು ನೀಡಲಾಗಿಲ್ಲ.</p>



<p style="font-size:20px">ಫೈಜ್ ಅವರು ʼಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲಿನ ದಾಳಿಯನ್ನು ಸಂಭ್ರಮಿಸಿದ್ದರು ಮತ್ತು ಇದು ಗುಂಪು ಹತ್ಯೆ ಮತ್ತು ರಾಮಮಂದಿರ ಆಂದೋಲನಕ್ಕೆ &#8216;ಸೇಡು ತೀರಿಸಿಕೊಳ್ಳುವ ಟ್ರೈಲರ್&#8217; ಎಂದು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿವರಿಸಿದ್ದರುʼ ಎಂದು ಪ್ರಕರಣದ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಫೈಜ್ ಅವರ ಹೇಳಿಕೆಗಳು ಧರ್ಮಗಳ ನಡುವೆ ದ್ವೇಷವನ್ನು ಉಂಟುಮಾಡಬಹುದು ಎಂದು ಪೊಲೀಸರು ಹೇಳಿದ್ದು, ಫೈಜ್‌ ಕಮೆಂಟ್ ಹಾಕಲು ಬಳಸಿದ್ದ ಮೊಬೈಲ್‌ ಅನ್ನು ವಶಪಡಿಸಿಕೊಂಡಿದ್ದಾರೆ.</p>



<p style="font-size:20px">ಫೆಬ್ರವರಿ 14, 2019 ರಂದು ಭಾರತದ ಸಾರ್ವತ್ರಿಕ ಚುನಾವಣೆಗಳಿಗೆ ತಿಂಗಳ ಮೊದಲು ಸಂಭವಿಸಿದ ಪುಲ್ವಾಮ ದಾಳಿಯ ಬಗ್ಗೆ ಫೈಜ್‌ ಸಂಭ್ರಮಿಸಿದ್ದಾನೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತೀಯ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನಗಳ ಬೆಂಗಾವಲು ವಾಹನದ ಮೇಲೆ ಹಿಂದಿನ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥಾಪೋರಾದಲ್ಲಿ ಆತ್ಮಹತ್ಯಾ ಬಾಂಬರ್ ನಡೆಸಿದ ದಾಳಿಯನ್ನು ಉಲ್ಲೇಖಿಸಿದೆ. ದಾಳಿಯಲ್ಲಿ 40 ಭಾರತೀಯ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಿಬ್ಬಂದಿ ಮತ್ತು ಸ್ಥಳೀಯ ಕಾಶ್ಮೀರಿ ಯುವಕ ಆದಿಲ್ ಅಹ್ಮದ್ ದಾರ್ ಎಂಬ ಅಪರಾಧಿ ಮೃತಪಟ್ಟರು. ಪಾಕಿಸ್ತಾನ ಮೂಲದ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.</p>
]]></content:encoded>
					
		
		
			</item>
	</channel>
</rss>
