<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Jammu &amp; Kashmir &#8211; Peepal Media</title>
	<atom:link href="https://peepalmedia.com/tag/jammu-kashmir/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 10 May 2025 09:19:03 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Jammu &amp; Kashmir &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ರಾತ್ರೋರಾತ್ರಿ ನಡೆಸಿದ ಫಿರಂಗಿ ದಾಳಿಯಿಂದ ಹಲವರು ಸಾವನ್ನಪ್ಪಿರುವ ಶಂಕೆ</title>
		<link>https://peepalmedia.com/case-and-death-to-overnight-artillery-shelling-by-pakistan-in-kashmir/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 10 May 2025 09:17:57 +0000</pubDate>
				<category><![CDATA[ದೇಶ]]></category>
		<category><![CDATA[indo-pakistan war]]></category>
		<category><![CDATA[Jammu & Kashmir]]></category>
		<category><![CDATA[pak]]></category>
		<category><![CDATA[Pakistan]]></category>
		<guid isPermaLink="false">https://peepalmedia.com/?p=58682</guid>

					<description><![CDATA[ಮೇ 9 ಮತ್ತು 10 ರ ನಡುವಿನ ರಾತ್ರಿ ಪಾಕಿಸ್ತಾನವು ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರರಾಷ್ಟ್ರೀಯ ಗಡಿ (ಐಬಿ)ಗಳ ಉದ್ದಕ್ಕೂ ಭಾರೀ ಫಿರಂಗಿ ದಾಳಿ ನಡೆಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಸಾವು-ನೋವುಗಳು ಸಂಭವಿಸುವ ಭೀತಿಯ ವಾತಾವರಣವಿದೆ. ಜಮ್ಮುವಿನ ʼಎಲ್‌ಒಸಿʼ ಉದ್ದಕ್ಕೂ ರಾಜೌರಿ ಜಿಲ್ಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಭಾರೀ ಫಿರಂಗಿ ಗುಂಡಿನ ದಾಳಿ ನಡೆಸಿತ್ತು. ಈ ಸಂಧರ್ಭದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ರಾಜೌರಿ ಜಿಲ್ಲೆಯಲ್ಲಿ ರಾತ್ರಿಯಿಡೀ ನಡೆದ ಶೆಲ್ ದಾಳಿಯಲ್ಲಿ ಬಿಹಾರದ ಒಬ್ಬಳು ಅಪ್ರಾಪ್ತ [&#8230;]]]></description>
										<content:encoded><![CDATA[
<pre class="wp-block-code"><code><strong>ವರದಿಗಳ ಪ್ರಕಾರ, ಶಂಕಿತ ಪಾಕಿಸ್ತಾನಿ ಡ್ರೋನ್‌ಗಳು ಸತತ ಎರಡನೇ ದಿನವೂ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕೆಲವು ವಾಯು ನೆಲೆಗಳ ಒಳ ನುಸುಳಿವೆ. ಒಂದು ಪ್ರಮುಖ ದೇವಾಲಯ ಮತ್ತು ಕೆಲವು ನಾಗರಿಕ ಪ್ರದೇಶಗಳು ರಾತ್ರೋರಾತ್ರಿ ಶೆಲ್‌ ದಾಳಿಗೊಳಗಾದವು. ದಾಳಿಯಲ್ಲಿ ನಾಗರೀಕರ ಮನೆಗಳು ಹಾನಿಗೊಳಗಾಗಿವೆ</strong></code></pre>



<p>ಮೇ 9 ಮತ್ತು 10 ರ ನಡುವಿನ ರಾತ್ರಿ ಪಾಕಿಸ್ತಾನವು ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರರಾಷ್ಟ್ರೀಯ ಗಡಿ (ಐಬಿ)ಗಳ ಉದ್ದಕ್ಕೂ ಭಾರೀ ಫಿರಂಗಿ ದಾಳಿ ನಡೆಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಸಾವು-ನೋವುಗಳು ಸಂಭವಿಸುವ ಭೀತಿಯ ವಾತಾವರಣವಿದೆ.<br><br>ಜಮ್ಮುವಿನ ʼಎಲ್‌ಒಸಿʼ ಉದ್ದಕ್ಕೂ ರಾಜೌರಿ ಜಿಲ್ಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಭಾರೀ ಫಿರಂಗಿ ಗುಂಡಿನ ದಾಳಿ ನಡೆಸಿತ್ತು. ಈ ಸಂಧರ್ಭದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ರಾಜೌರಿ ಜಿಲ್ಲೆಯಲ್ಲಿ ರಾತ್ರಿಯಿಡೀ ನಡೆದ ಶೆಲ್ ದಾಳಿಯಲ್ಲಿ ಬಿಹಾರದ ಒಬ್ಬಳು ಅಪ್ರಾಪ್ತ ಬಾಲಕಿ ಮತ್ತು ಓರ್ವ 35 ವರ್ಷದ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.<br><br>ಪಾಕಿಸ್ತಾನವು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಭಾರೀ ಫಿರಂಗಿ ದಾಳಿಯಲ್ಲಿ, ಪೂಂಚ್‌ನ ಮೆಂಧರ್ ಪ್ರಾಂತ್ಯದ ʼರಶೀದಾ ಬಾನೋʼ ಮತ್ತು ಜಮ್ಮುವಿನ ಆರ್‌ಎಸ್ ಪುರ ನಿವಾಸಿಯಾದ ʼಅಶೋಕ್ ಕುಮಾರ್ʼ ಎಂದು ಗುರುತಿಸಲಾದ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.<br><br>ಜಮ್ಮು ಮತ್ತು ಶ್ರೀನಗರದ ನಾಗರಿಕ ವಿಮಾನ ನಿಲ್ದಾಣಗಳು, ಉಧಮ್‌ಪುರ ವಾಯುನೆಲೆ, ಅವಂತಿಪೋರಾ ವಾಯುನೆಲೆ ಮತ್ತು ಕೆಲವು ವಸತಿ ಪ್ರದೇಶಗಳು ಸೇರಿದಂತೆ ʼಎಲ್‌ಒಸಿʼ ಹಾಗೂ ʼಐಬಿʼಯ ಉದ್ದಕ್ಕೂ ರಾತ್ರಿಯಿಡೀ ಮತ್ತು ಶನಿವಾರ ಬೆಳಿಗ್ಗೆ ಅಲ್ಲಿನ ನಿವಾಸಿಗಳು ಹಲವಾರು ಬಾಂಬ್‌ ಸ್ಫೋಟದ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ.</p>



<p><strong>ದಾಳಿಯಿಂದ ಹಾನಿಗೊಳಗಾದ ಜಮ್ಮುವಿನ ಕೆಲವು ಭಾಗಗಳು</strong><br>ಜಮ್ಮು ಮತ್ತು ಕಾಶ್ಮೀರದ ವಾಯು ನೆಲೆಗಳಿಗೆ ಸತತ ಎರಡನೇ ದಿನವೂ ಪಾಕಿಸ್ತಾನದ್ದೆಂದು ಶಂಕಿಸಲಾದ ಡ್ರೋನ್‌ಗಳು ನುಸುಳಿವೆ ಎಂದು ವರದಿಗಳು ತಿಳಿಸಿವೆ. ಚಳಿಗಾಲದ ರಾಜಧಾನಿಯಾದ ಜಮ್ಮುವಿನಲ್ಲಿ ಪ್ರಮುಖ ದೇವಾಲಯ ಮತ್ತು ಕೆಲವು ನಾಗರಿಕ ಪ್ರದೇಶಗಳು ರಾತ್ರೋರಾತ್ರಿ ಶೆಲ್ ದಾಳಿಗೆ ಒಳಗಾದವು. ಇದು ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದೆ. ಹಲವಾರು ಮನೆಗಳು ಹಾನಿಗೊಳಗಾಗಿವೆ.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="1024" height="683" src="https://peepalmedia.com/wp-content/uploads/2025/05/image-2.png" alt="" class="wp-image-58683" style="width:556px;height:auto" srcset="https://peepalmedia.com/wp-content/uploads/2025/05/image-2.png 1024w, https://peepalmedia.com/wp-content/uploads/2025/05/image-2-300x200.png 300w, https://peepalmedia.com/wp-content/uploads/2025/05/image-2-768x512.png 768w, https://peepalmedia.com/wp-content/uploads/2025/05/image-2-150x100.png 150w, https://peepalmedia.com/wp-content/uploads/2025/05/image-2-696x464.png 696w" sizes="(max-width: 1024px) 100vw, 1024px" /><figcaption class="wp-element-caption"><strong>ಜಮ್ಮು: ಮೇ 10, 2025 ರ ಶನಿವಾರ ಜಮ್ಮುವಿನ ವಸತಿ ಪ್ರದೇಶದಲ್ಲಿ ಪಾಕಿಸ್ತಾನದ ದಾಳಿಯಿಂದ ಹಾನಿಗೊಳಗಾದ ವಾಹನಗಳ ಬಳಿ, ನಾಗರಿಕ ರಕ್ಷಣಾ ಸಿಬ್ಬಂದಿ ಮತ್ತು ನಾಗರಿಕರು ಜಮಾಯಿಸಿರುವುದು. ಚಿತ್ರ: ಪಿಟಿಐ</strong></figcaption></figure></div>


<p>ಜಮ್ಮು ಮತ್ತು ಕಾಶ್ಮೀರದ ಹಲವು ಸ್ಥಳಗಳಿಂದ ಶನಿವಾರ ಸ್ಪೋಟಕಗಳು ಮತ್ತು ಡ್ರೋನ್‌ಗಳ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ಧಿ ಮೂಲವೊಂದರ ಮೂಲಕ ತಿಳಿದು ಬಂದಿದೆ. ಆದರೆ ಅವಶೇಷಗಳು ಕಂಡುಬಂದ ಸ್ಥಳಗಳ ವಿವರಗಳನ್ನು ಅವರು ಸ್ಪಷ್ಟಪಡಿಸಿಲ್ಲ.<br><br>ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳ ಮೇಲೆ ಮೇ 7 ರಂದು ಭಾರತ ಸರ್ಕಾರ ನಿಖರವಾದ ಕ್ಷಿಪಣಿ ದಾಳಿ ನಡೆಸಿದ ನಂತರ ಇದೇ ಮೊದಲ ಬಾರಿಗೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಶ್ರೀನಗರದ ಏಕೈಕ ನಾಗರಿಕ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಭಯಭೀತ ನಿವಾಸಿಗಳು ಹಲವಾರು ಸ್ಫೋಟಗಳ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ.<br>“ಬೆಳಗಾದ ಸ್ವಲ್ಪ ಹೊತ್ತಿನಲ್ಲೇ, ವಿಮಾನ ನಿಲ್ದಾಣದ ಕಡೆಯಿಂದ ಕನಿಷ್ಠ ಐದರಿಂದ ಆರು ದೊಡ್ಡ ಸ್ಫೋಟಗಳು ಸಂಭವಿಸಿದವು. ಮನೆ ನಡುಗಿತು ಮತ್ತು ಮಕ್ಕಳು ನಿದ್ರೆಯಿಂದ ಎದ್ದು ಬೆಚ್ಚಿಬಿದ್ದರು&#8221; ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ, ಶ್ರೀನಗರದ ಹುಮ್ಹಾಮಾ ಪ್ರದೇಶದ ನಿವಾಸಿಯೊಬ್ಬರು ಹೇಳಿದರು.<br><br>ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಬಳಿಯ ರಕ್ಷಣಾ ವಾಯುನೆಲೆಯ ಸುತ್ತಮುತ್ತಲಿನ ನಿವಾಸಿಗಳು ಶುಕ್ರವಾರ ರಾತ್ರಿ ಸ್ಫೋಟಗಳ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ. ಸ್ಫೋಟಗಳಲ್ಲಿ ಯಾವುದೇ ಗಾಯಗಳು ಅಥವಾ ಸಾವುನೋವುಗಳು ಆದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ ವರದಿಗಳು ಬಂದಿಲ್ಲ.<br><br>ಜಮ್ಮುವಿನ ಮೇಲೆ ಹಾರುತ್ತಿರುವ ಜೆಟ್‌ಗಳು ಜಮ್ಮು ವಿಮಾನ ನಿಲ್ದಾಣದ ಬಳಿ, ರಕ್ಷಣಾ ವಾಯುನೆಲೆಯ ಬಳಿ ಮತ್ತು ಉಧಂಪುರ್‌ನ ಗ್ಯಾರಿಸನ್ ಪಟ್ಟಣದ ವಾಯುನೆಲೆಯ ಬಳಿ ವಾಯುದಾಳಿಯ ಸೈರನ್‌ಗಳ ನಡುವೆ ಹಲವಾರು ಸ್ಫೋಟಗಳ ಭೀಕರ ಶಬ್ಧಗಳ ನಡುವೆ ಚಳಿಗಾಲದ ರಾಜಧಾನಿ ಜಮ್ಮುವಿನ ನಿವಾಸಿಗಳು ಎಚ್ಚರಗೊಂಡರು.<br>&#8220;ಜೆಟ್‌ಗಳು ಆಕಾಶದಲ್ಲಿ ಹಾರಾಡುತ್ತಿವೆ ಮತ್ತು ಆವಾಗಾವಾಗ ಬಾಂಬಿನ ಶಬ್ದಗಳು ಕೇಳಿಬರುತ್ತಿವೆ.ನನ್ನ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ಸಂಬಂಧಿಕರು ಮತ್ತು ಸ್ನೇಹಿತರಿಂದ ನನಗೆ ಉದ್ರಿಕ್ತ ಕರೆಗಳು ಬರುತ್ತಿವೆ&#8221; ಎಂದು ಶನಿವಾರ ಬೆಳಿಗ್ಗೆ ಹೆಸರು ಹೇಳಲು ಇಚ್ಛಿಸದ ಜಮ್ಮು ನಿವಾಸಿಯೊಬ್ಬರು ತಿಳಿಸಿದರು.<br><br>ಶುಕ್ರವಾರ ರಾತ್ರಿ 9 ಗಂಟೆಯಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಪ್ರತಿದಾಳಿ ನಡೆಸಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.<br><br>&#8220;ಬಿಎಸ್‌ಎಫ್ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು, ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನದ ರೇಂಜರ್‌ಗಳ ಪೋಸ್ಟ್‌ಗಳು ಮತ್ತು ಆಸ್ತಿಗಳಿಗೆ ವ್ಯಾಪಕ ಹಾನಿಯಾಗಿದೆ. ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ನಾವು ಕಂಕಣಬದ್ಧರಾಗಿದ್ದೇವೆ&#8221; ಎಂದು ಜಮ್ಮುವಿನ ಬಿಎಸ್‌ಎಫ್ ವಕ್ತಾರರು ʼಎಕ್ಸ್‌ʼನಲ್ಲಿ ತಿಳಿಸಿದ್ದಾರೆ.<br>ಜಮ್ಮು ಕಾಶ್ಮೀರದಲ್ಲಿ ಕಂಡುಬರುವ ದೃಶ್ಯಗಳಲ್ಲಿ ಕೆಲವು ವಸತಿ ಪ್ರದೇಶಗಳ ಮೇಲೆ ಗಡಿಯಾಚೆಯಿಂದ ಸಿಡಿಸಲಾದ ಸ್ಪೋಟಕಗಳು ಬಿದ್ದಿರುವುದನ್ನು ತೋರಿಸಿವೆ. ದೃಶ್ಯವೊಂದರಲ್ಲಿ, ಹಿಂದೂಗಳ ಪ್ರಮುಖ ಧಾರ್ಮಿಕ ತಾಣವಾದ ʼಆಪ್ ಶಂಬುʼ ದೇವಾಲಯದಿಂದ ಸುಮಾರು 80 ಮೀಟರ್ ದೂರದಲ್ಲಿ ಸ್ಫೋಟಗೊಂಡ ಸ್ಪೋಟಕದ ಅವಶೇಷಗಳನ್ನು ಪೊಲೀಸ್ ತಂಡ ಪರಿಶೀಲಿಸುತ್ತಿರುವುದು ಕಂಡುಬಂದಿದೆ.<br><br>ವರದಿಗಳ ಪ್ರಕಾರ ರೆಹರಿ, ರೂಪ್ ನಗರ, ಜಾನಿಪುರ, ನಾಗಬಾನಿ ಮತ್ತು ಮುಥಿ ಸೇರಿದಂತೆ ಜಮ್ಮುವಿನ ಕೆಲವು ಭಾಗಗಳಲ್ಲಿ ಶೆಲ್ ದಾಳಿ ಮತ್ತು ಮೇಲಿನಿಂದ ಬೀಳುವ ಸ್ಪೋಟಕಗಳ ಅವಶೇಷಗಳಿಂದಾಗಿ ವಸತಿ ನಿವಾಸಗಳು ಹಾನಿಗೊಳಗಾಗಿವೆ. ಆದಾಗ್ಯೂ, ನಾಗರಿಕರಿಗೆ ಗಾಯಗಳಾದ ಬಗ್ಗೆ ಯಾವುದೇ ವರದಿಗಳಾಗಿಲ್ಲ. ಸಾಂಬಾ ಮತ್ತು ಕಥುವಾ ಜಿಲ್ಲೆಗಳ ಅಂತರರಾಷ್ಟ್ರೀಯ ಗಡಿಯಲ್ಲಿಯೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ.</p>


<div class="wp-block-image">
<figure class="aligncenter size-full is-resized"><img decoding="async" width="1024" height="683" src="https://peepalmedia.com/wp-content/uploads/2025/05/image-3.png" alt="" class="wp-image-58684" style="width:570px;height:auto" srcset="https://peepalmedia.com/wp-content/uploads/2025/05/image-3.png 1024w, https://peepalmedia.com/wp-content/uploads/2025/05/image-3-300x200.png 300w, https://peepalmedia.com/wp-content/uploads/2025/05/image-3-768x512.png 768w, https://peepalmedia.com/wp-content/uploads/2025/05/image-3-150x100.png 150w, https://peepalmedia.com/wp-content/uploads/2025/05/image-3-696x464.png 696w" sizes="(max-width: 1024px) 100vw, 1024px" /><figcaption class="wp-element-caption"><strong><em>ಜಮ್ಮು: ಪಾಕಿಸ್ತಾನದ ದಾಳಿಯಿಂದ ಹಾನಿಗೊಳಗಾದ ವಾಹನಗಳ ಬಳಿ ಜಮಾಯಿಸಿರುವ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು, ಶನಿವಾರ, ಮೇ 10, 2025. ಚಿತ್ರ: ಪಿಟಿಐ.</em></strong></figcaption></figure></div>


<p><br><br>ಕೇಂದ್ರಾಡಳಿತ ಪ್ರದೇಶದಲ್ಲಿ ಸತತ ಮೂರನೇ ದಿನವೂ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು ಆದ ಕಾರಣ, ಜಮ್ಮು ವಿಶ್ವವಿದ್ಯಾಲಯ ಮತ್ತು ಅಲ್ಲಿನ ಕೆಲವು ಕಾಲೇಜುಗಳಲ್ಲಿ ಓದುತ್ತಿರುವ ರಾಜೌರಿಯ ಡಜನ್‌ಗಟ್ಟಲೆ ವಿದ್ಯಾರ್ಥಿಗಳು ಶನಿವಾರ ಬೆಳಿಗ್ಗೆ ಜಮ್ಮು ಬಸ್ ನಿಲ್ದಾಣದಲ್ಲಿ ಅಧಿಕಾರಿಗಳ ಸಹಾಯಕ್ಕಾಗಿ ಕಾಯುತ್ತಿದ್ದರು.<br><br>ಸಾರ್ವಜನಿಕ ಸಾರಿಗೆ ವಾಹನಗಳು ನಮ್ಮನ್ನು ನಮ್ಮ ಊರಿಗೆ ಹಿಂತಿರುಗಲು ನಿರಾಕರಿಸುತ್ತಿವೆ ಎಂದು ಜಮ್ಮು ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಫಾರೂಕ್ &#8216;ದಿ ವೈರ್&#8217;ಗೆ ತಿಳಿಸಿದ್ದಾರೆ. ಅಲ್ಲಿ ನಿನ್ನೆ ರಾತ್ರಿ ಪಾಕಿಸ್ತಾನದಿಂದ ಭಾರೀ ಫಿರಂಗಿ ದಾಳಿ ನಡೆದು, ಜಮ್ಮು-ಕಾಶ್ಮೀರದ ಒಬ್ಬ ಹಿರಿಯ ಅಧಿಕಾರಿ ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು.&#8221;ನಾವು ಕೆಲವು ಖಾಸಗಿ ಪ್ರಯಾಣಿಕರ ಕ್ಯಾಬ್‌ಗಳ ಪ್ರಯಾಣಿಕರ ಸಂಖ್ಯೆಯನ್ನು ದ್ವಿಗುಣಗೊಳಿಸಲು ಕೇಳಿಕೊಂಡೆವು, ಆದರೆ ಅವರು ಸಹ ನಮಗೆ ಮನೆಗೆ ಹಿಂತಿರುಗಲು ಸಹಾಯ ಮಾಡಲು ನಿರಾಕರಿಸುತ್ತಿದ್ದಾರೆ&#8221; ಎಂದು ಅವರು ಹೇಳಿದರು.<br><br><strong>ಹಾನಿಗೊಳಗಾದ ಜೀವಗಳು</strong><br>ಬಾರಾಮುಲ್ಲಾ, ಕುಪ್ವಾರಾ, ಬಂಡಿಪೋರಾ, ರಾಜೌರಿ ಮತ್ತು ಪೂಂಚ್‌ಗಳಲ್ಲಿನ ʼಎಲ್‌ಒಸಿʼ ಉದ್ದಕ್ಕೂ ಪಾಕಿಸ್ತಾನ ರಾತ್ರೋರಾತ್ರಿ ಭಾರೀ ಫಿರಂಗಿ ದಾಳಿ ನಡೆಸಿದ್ದು, ಇದರಲ್ಲಿ ಕನಿಷ್ಠ ನಾಲ್ಕು ನಾಗರಿಕರು ಮತ್ತು ರಾಜೌರಿಯ ಹೆಚ್ಚುವರಿ ಉಪ ಆಯುಕ್ತ ʼರಾಜ್‌ಕುಮಾರ್ ಥಪ್ಪಾʼ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.<br><br>&#8220;ರಾಜೌರಿಯಿಂದ ಆಘಾತಕಾರಿ ಸುದ್ದಿ ಬಂದಿದೆ. ಜಮ್ಮು-ಕಾಶ್ಮೀರದ ರಕ್ಷಣೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಆಡಳಿತ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದೇವೆ. ನಿನ್ನೆಯಷ್ಟೇ ಅವರು ಜಿಲ್ಲೆಯಾದ್ಯಂತ ಉಪ ಮುಖ್ಯಮಂತ್ರಿಯೊಂದಿಗೆ ಇದ್ದರು ಮತ್ತು ನಾನು ಅಧ್ಯಕ್ಷತೆ ವಹಿಸಿದ್ದ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿದ್ದರು&#8221; ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ʼಎಕ್ಸ್‌ʼನಲ್ಲಿ ಪೋಸ್ಟ್ ಮಾಡಿದ್ದಾರೆ. &#8220;ಈ ಭಯಾನಕ ಸಾವಿನಿಂದ ನನಗೆ ಉಂಟಾದ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ&#8221; ಎಂದು ಪೋಸ್ಟ್‌ನಲ್ಲಿ ಸೇರಿಸಲಾಗಿದೆ.<br><br>ʼಎಲ್‌ಒಸಿʼಯಾದ್ಯಂತ ಸಿಡಿಸಿದ ಮಾರ್ಟರ್ ಶೆಲ್, ರಾಜೌರಿಯಲ್ಲಿರುವ ʼಥಾಪಾʼ ಅವರ ನಿವಾಸಕ್ಕೆ ಬಡಿದು ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಅವರ ಇಬ್ಬರು ಸಿಬ್ಬಂದಿಗಳು ಸ್ಫೋಟದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.<br><br>ಭಾರೀ ಫಿರಂಗಿ ಶೆಲ್ ದಾಳಿಯ ಕಾರಣದಿಂದಾಗಿ ʼಎಲ್‌ಒಸಿʼ ಗಡಿಯ ಉದ್ದಕ್ಕೂ ಇರುವ ಅನೇಕ ಗ್ರಾಮಗಳನ್ನು ಸ್ಥಳಾಂತರಿಸಬೇಕಾಯಿತು, ಇದೇ ಸಮಯದಲ್ಲಿ, ಈ ಪ್ರದೇಶಗಳಲ್ಲಿ ವಾಸಿಸುವ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಸಾರಿಗೆ ವ್ಯವಸ್ಥೆ ಕೂಡಾ ಮಾಡಲಾಗುತ್ತಿದೆ.<br><br><strong>ವರದಿ:</strong> ಜಹಾಂಗೀರ್ ಅಲಿ, ದಿ ವೈರ್<br><strong>ಅನುವಾದ: </strong>ಗುರು ಸುಳ್ಯ</p>
]]></content:encoded>
					
		
		
			</item>
		<item>
		<title>‘ಅಮಾಯಕ ನಾಗರಿಕರ ಮೃತ ದೇಹಗಳ ಮೇಲೆ ರಾಜ್ಯದ ಸ್ಥಾನಮಾನ ನೀಡಿ ಎಂದು ಒತ್ತಾಯಿಸುವುದಿಲ್ಲ’: ಒಮರ್ ಅಬ್ದುಲ್ಲಾ</title>
		<link>https://peepalmedia.com/will-not-demand-statehood-over-dead-bodies-of-innocent-citizens-omar-abdullah/</link>
		
		<dc:creator><![CDATA[ಮಂಜುಳ ಹುಲಿಕುಂಟೆ]]></dc:creator>
		<pubDate>Mon, 28 Apr 2025 10:36:56 +0000</pubDate>
				<category><![CDATA[ದೇಶ]]></category>
		<category><![CDATA[Central Government]]></category>
		<category><![CDATA[Condolences]]></category>
		<category><![CDATA[Jammu & Kashmir]]></category>
		<category><![CDATA[Legislative Assembly]]></category>
		<category><![CDATA[omar abdullah]]></category>
		<category><![CDATA[Pahalgam terror attack]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[State governments]]></category>
		<guid isPermaLink="false">https://peepalmedia.com/?p=58011</guid>

					<description><![CDATA[ಜಮ್ಮು-ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಈ ಸಮಯದಲ್ಲಿ ರಾಜ್ಯದ ಸ್ಥಾನಮಾನದ ಬಗ್ಗೆ ಮಾತನಾಡುವುದಿಲ್ಲ ಎಂದರು.&#160; ವಿಧಾನಸಭೆಯಲ್ಲಿ ಮಾತನಾಡಿದ ಅವರು “ರಾಜ್ಯ ಸ್ಥಾನಮಾನ ಸ್ಥಾಪನೆ ನಮ್ಮ ಪ್ರಮುಖ ಉದ್ದೇಶವಾದರೂ ಸದ್ಯಕ್ಕೆ ಆ ಬಗ್ಗೆ ಪ್ರಸ್ತಾಪಿಸುವುದಿಲ್ಲ, ಮತ್ತೊಂದು ಬಾರಿಗೆ ಈ ಬೇಡಿಕೆಯನ್ನು ವ್ಯಕ್ತಪಡಿಸುತ್ತೇನೆ. ಶವಗಳ ಮೇಲೆ ರಾಜ್ಯದ ಸ್ಥಾನಮಾನ ನೀಡಿ ಎಂದು ಕೇಳುವುದಿಲ್ಲ. ಹಾಗೆಯೇ ಕೇಂದ್ರದಿಂದ ರಾಜ್ಯದ ಸ್ಥಾನಮಾನವನ್ನು ಒತ್ತಾಯಿಸಲು ನಾನು ಇಂದಿನ ಪರಿಸ್ಥಿತಿಯನ್ನು ಬಳಸಿಕೊಳ್ಳುವುದಿಲ್ಲ&#8221; [&#8230;]]]></description>
										<content:encoded><![CDATA[
<p>ಜಮ್ಮು-ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಈ ಸಮಯದಲ್ಲಿ ರಾಜ್ಯದ ಸ್ಥಾನಮಾನದ ಬಗ್ಗೆ ಮಾತನಾಡುವುದಿಲ್ಲ ಎಂದರು.&nbsp;</p>



<p>ವಿಧಾನಸಭೆಯಲ್ಲಿ ಮಾತನಾಡಿದ ಅವರು “ರಾಜ್ಯ ಸ್ಥಾನಮಾನ ಸ್ಥಾಪನೆ ನಮ್ಮ ಪ್ರಮುಖ ಉದ್ದೇಶವಾದರೂ ಸದ್ಯಕ್ಕೆ ಆ ಬಗ್ಗೆ ಪ್ರಸ್ತಾಪಿಸುವುದಿಲ್ಲ, ಮತ್ತೊಂದು ಬಾರಿಗೆ ಈ ಬೇಡಿಕೆಯನ್ನು ವ್ಯಕ್ತಪಡಿಸುತ್ತೇನೆ. ಶವಗಳ ಮೇಲೆ ರಾಜ್ಯದ ಸ್ಥಾನಮಾನ ನೀಡಿ ಎಂದು ಕೇಳುವುದಿಲ್ಲ. ಹಾಗೆಯೇ ಕೇಂದ್ರದಿಂದ ರಾಜ್ಯದ ಸ್ಥಾನಮಾನವನ್ನು ಒತ್ತಾಯಿಸಲು ನಾನು ಇಂದಿನ ಪರಿಸ್ಥಿತಿಯನ್ನು ಬಳಸಿಕೊಳ್ಳುವುದಿಲ್ಲ&#8221; ಎಂದು ಹೇಳಿದರು. </p>



<p>ಈ ಮೂಲಕ 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ರಾಜಕೀಯಗೊಳಿಸುವುದನ್ನು ಅವರು ತಳ್ಳಿಹಾಕಿದರು.</p>



<p>“ಜನರು ಸರ್ಕಾರವನ್ನು ಬೆಂಬಲಿಸಿದಾಗ ಉಗ್ರವಾದ ಮತ್ತು ಭಯೋತ್ಪಾದನೆ ಕೊನೆಗೊಳ್ಳುತ್ತದೆ. ನಾವು ಬಂದೂಕುಗಳನ್ನು ಬಳಸಿ ಉಗ್ರವಾದವನ್ನು ನಿಯಂತ್ರಿಸಬಹುದು, ಆದರೆ ಜನರು ನಮ್ಮನ್ನು ಬೆಂಬಲಿಸಿದಾಗ ಮಾತ್ರ ಅದು ಕೊನೆಗೊಳ್ಳುತ್ತದೆ. ಈಗ ಜನರು ಆ ಹಂತವನ್ನು ತಲುಪುತ್ತಿದ್ದಾರೆಂದು ತೋರುತ್ತದೆ” ಎಂದು ಒಮರ್ ಅಬ್ದುಲ್ಲಾ ಹೇಳಿದರು.</p>



<p>“ನಾನು ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿ ಹೊಂದಿಲ್ಲದಿದ್ದರೂ, ಕಾಶ್ಮೀರಕ್ಕೆ ಭೇಟಿ ನೀಡಲು ಪ್ರವಾಸಿಗರನ್ನು ಆಹ್ವಾನಿಸಿದೆ. ಅವರ ಆತಿಥೇಯನಾಗಿ, ಅವರನ್ನು ನೋಡಿಕೊಳ್ಳುವುದು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನನ್ನ ಕರ್ತವ್ಯವಾಗಿತ್ತು. ಆದರೆ ಈಗ ಪ್ರವಾಸಿಗರಿಗೆ ವಿಷಾದಿಸಲು ನನಗೆ ಪದಗಳಿಲ್ಲ” ಎಂದು ಹೇಳಿದರು.</p>



<p>ಸಂತ್ರಸ್ತರ ನೋವಿಗೆ ದುಃಖ ವ್ಯಕ್ತಪಡಿಸಿದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ, “ಕೆಲವೇ ದಿನಗಳ ಹಿಂದೆ ವಿವಾಹವಾದ ನೌಕಾಪಡೆಯ ಅಧಿಕಾರಿಯ ಪತ್ನಿಗೆ ನಾನು ಏನು ಹೇಳಬೇಕು? ಅವರಿಗೆ ಸಾಂತ್ವನ ಹೇಳಲು ನನ್ನಲ್ಲಿ ಪದಗಳಿಲ್ಲ. ಮೃತಪಟ್ಟ ಅನೇಕ ಕುಟುಂಬ ಸದಸ್ಯರು ಮಾಡಿದ ಅಪರಾಧವೇನು ಎಂದು ನನ್ನನ್ನು ಆನೇಕರು ಕೇಳಿದರು? ಆದರೆ ನನ್ನಲ್ಲಿ ಉತ್ತರವಿರಲಿಲ್ಲ” ಎಂದು ಹೇಳಿದರು.</p>



<p>ಕಾಶ್ಮೀರಿ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತ್ವರಿತ ಕ್ರಮ ಕೈಗೊಂಡಿದ್ದಕ್ಕಾಗಿ ಒಮರ್ ಅಬ್ದುಲ್ಲಾ ಅವರು ದೇಶಾದ್ಯಂತವಿರುವ ಎಲ್ಲ ರಾಜ್ಯ ಸರ್ಕಾರಗಳಿಗೆ ಧನ್ಯವಾದ ಅರ್ಪಿಸಿದರು.</p>



<p>ತಕ್ಷಣದ ಕ್ರಮಗಳನ್ನು ಕೈಗೊಂಡು ಅಹಿತಕರ ಘಟನೆಗಳನ್ನು ತಡೆಗಟ್ಟಿದ ಎಲ್ಲ ರಾಜ್ಯ ಸರ್ಕಾರಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ತಿಳಿಸಿದರು.</p>
]]></content:encoded>
					
		
		
			</item>
		<item>
		<title>ಕಾಶ್ಮೀರ ನಮ್ಮದು, ಭಾರತೀಯರು ಕಾಶ್ಮೀರಕ್ಕೆ ಭೇಟಿ ನೀಡುವ ಮೂಲಕ ಅವರ ಜೊತೆ ನಿಲ್ಲಬೇಕು: ಅತುಲ್ ಕುಲಕರ್ಣಿ</title>
		<link>https://peepalmedia.com/kashmir-is-ours-indians-should-stand-with-kashmir-by-visiting-them-atul-kulkarni/</link>
		
		<dc:creator><![CDATA[ಮಂಜುಳ ಹುಲಿಕುಂಟೆ]]></dc:creator>
		<pubDate>Mon, 28 Apr 2025 07:56:17 +0000</pubDate>
				<category><![CDATA[ದೇಶ]]></category>
		<category><![CDATA[Actor]]></category>
		<category><![CDATA[atul kulkarni]]></category>
		<category><![CDATA[india]]></category>
		<category><![CDATA[Jammu & Kashmir]]></category>
		<category><![CDATA[Pahalgam]]></category>
		<category><![CDATA[Pahalgam terror attack]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=57994</guid>

					<description><![CDATA[ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ಪಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಆ ಪ್ರದೇಶದೊಂದಿಗೆ ಒಗ್ಗಟ್ಟಿನಿಂದ ನಿಲ್ಲಲು ಹಿರಿಯ ನಟ ಅತುಲ್ ಕುಲಕರ್ಣಿ ಕರೆ ನೀಡಿದ್ದಾರೆ.&#160; ಭಯೋತ್ಪಾದಕ ದಾಳಿ ನಡೆದ ಪಹಲ್ಗಾಮ್ ಗೆ ಏಪ್ರಿಲ್ 27ರ, ಭಾನುವಾರ ಭೇಟಿ ನೀಡಿರುವ ಅವರು&#160;ಇದು ನಮ್ಮ ಕಾಶ್ಮೀರ, ಇದು ನಮ್ಮ ದೇಶ, ನಾವು ಬರುತ್ತೇವೆ” ಎಂದು ದೇಶದ ಜನತೆಗೆ ಸಂದೇಶ ನೀಡಿದ್ದಾರೆ. ಜಗತ್ತಿಗೆ ಈ ಸಂದೇಶ ನೀಡಲು ನಾನು ಸಹ ಪಹಲ್ಗಾಮ್ ಗೆ ಬಂದಿದ್ದೇನೆ. “ಕಾಶ್ಮೀರ ಭಾರತದ ಆಸ್ತಿ. ಧೈರ್ಯ [&#8230;]]]></description>
										<content:encoded><![CDATA[
<p>ಪಹಲ್ಗಾಮ್‌ನಲ್ಲಿ 26 ಜನರನ್ನು ಬಲಿ ಪಡೆದ ಭೀಕರ ಭಯೋತ್ಪಾದಕ ದಾಳಿಯ ನಂತರ ಆ ಪ್ರದೇಶದೊಂದಿಗೆ ಒಗ್ಗಟ್ಟಿನಿಂದ ನಿಲ್ಲಲು ಹಿರಿಯ ನಟ ಅತುಲ್ ಕುಲಕರ್ಣಿ ಕರೆ ನೀಡಿದ್ದಾರೆ.&nbsp;</p>



<p>ಭಯೋತ್ಪಾದಕ ದಾಳಿ ನಡೆದ ಪಹಲ್ಗಾಮ್ ಗೆ ಏಪ್ರಿಲ್ 27ರ, ಭಾನುವಾರ ಭೇಟಿ ನೀಡಿರುವ ಅವರು&nbsp;ಇದು ನಮ್ಮ ಕಾಶ್ಮೀರ, ಇದು ನಮ್ಮ ದೇಶ, ನಾವು ಬರುತ್ತೇವೆ” ಎಂದು ದೇಶದ ಜನತೆಗೆ ಸಂದೇಶ ನೀಡಿದ್ದಾರೆ.</p>



<p>ಜಗತ್ತಿಗೆ ಈ ಸಂದೇಶ ನೀಡಲು ನಾನು ಸಹ ಪಹಲ್ಗಾಮ್ ಗೆ ಬಂದಿದ್ದೇನೆ. “ಕಾಶ್ಮೀರ ಭಾರತದ ಆಸ್ತಿ. ಧೈರ್ಯ ಭಯಕ್ಕಿಂತಲೂ ಹೆಚ್ಚು ತೂಕ ಹೊಂದಿರುತ್ತದೆ. ದ್ವೇಷವು ಪ್ರೀತಿಗೆ ಸೋತಿದೆ. ಕಾಶ್ಮೀರಕ್ಕೆ ಹೋಗೋಣ. ಸಿಂಧ್, ಝೀಲಂ ತೀರಕ್ಕೆ ಹೋಗೋಣ. ನಾನು ಬಂದಿದ್ದೇನೆ, ನೀವು ಕೂಡ ಬನ್ನಿ ಎಂದು&nbsp; ಪ್ರವಾಸಿಗರನ್ನು ಆಹ್ವಾನಿಸಿದ್ದಾರೆ.</p>



<p>ಪಹಲ್ಗಾಮ್ ದಾಳಿಯಿಂದಾಗಿ ಪ್ರವಾಸೋಧ್ಯಮವನ್ನೇ ನಂಬಿ ಬದುಕುತ್ತಿದ್ದ ಕಾಶ್ಮೀರಿಗಳು ಆತಂಕದಲ್ಲಿದ್ದಾರೆ. ಈ ಕಾರಣಕ್ಕೆ ಅತುಲ್ ಕುಲಕರ್ಣಿ ಈ ನಿರ್ಣ/ವನ್ನು ತೆಗೆದುಕೊಂಡಿದ್ದು, ಸಹ ಭಾರತೀಯರಿಗೆ ಕಾಶ್ಮೀರಕ್ಕೆ ಭೇಟಿ ನೀಡಿ ತಮ್ಮ ಬೆಂಬಲವನ್ನು ತೋರಿಸುವಂತೆ ಒತ್ತಾಯಿಸಿದ್ದಾರೆ.</p>



<p>ಮುಂಬೈನಿಂದ ಶ್ರೀನಗರಕ್ಕೆ ಪ್ರಯಾಣ ಬೆಳೆಸಿದ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಖಾಲಿ ವಿಮಾನದ ಸೀಟುಗಳು, ಅವರ ಬೋರ್ಡಿಂಗ್ ಪಾಸ್ ಮತ್ತು ವಿಮಾನ ಸಿಬ್ಬಂದಿಯ ಟಿಪ್ಪಣಿಗಳೊಂದಿಗೆ ಖಾಲಿ ವಿಮಾನವನ್ನು ನಾವು ಭರ್ತಿ ಮಾಡಬೇಕಾಗಿದೆ ಚಲಿಯೇ ಜಿ, ಕಾಶ್ಮೀರ್ ಚಲೀನ್&#8221; ಎಂದು ಶೀರ್ಷಿಕೆ ನೀಡಿದ್ದಾರೆ.&nbsp;</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="hi" dir="ltr">Mumbai to Srinagar, Kashmir. <a href="https://twitter.com/hashtag/ChaloKashmir?src=hash&amp;ref_src=twsrc%5Etfw">#ChaloKashmir</a> <a href="https://twitter.com/hashtag/Feet_in_Kashmir?src=hash&amp;ref_src=twsrc%5Etfw">#Feet_in_Kashmir</a> <a href="https://twitter.com/hashtag/Kashmiriyat?src=hash&amp;ref_src=twsrc%5Etfw">#Kashmiriyat</a> <a href="https://twitter.com/hashtag/love_compassion?src=hash&amp;ref_src=twsrc%5Etfw">#love_compassion</a> <a href="https://twitter.com/hashtag/DefeatTerror?src=hash&amp;ref_src=twsrc%5Etfw">#DefeatTerror</a> <a href="https://t.co/kncqpA9Xpd">pic.twitter.com/kncqpA9Xpd</a></p>&mdash; atul kulkarni (@atul_kulkarni) <a href="https://twitter.com/atul_kulkarni/status/1916376569339383889?ref_src=twsrc%5Etfw">April 27, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಏಪ್ರಿಲ್ 27 ರಂದು, ಅತುಲ್ ಕುಲಕರ್ಣಿ ಅವರು ಪಹಲ್ಗಮ್‌ಗೆ ಭೇಟಿ ನೀಡುತ್ತಿರುವುದನ್ನು ಮತ್ತು ಅಂಗಡಿಯಲ್ಲಿ ಸ್ಥಳೀಯ ಖಾದ್ಯಗಳನ್ನು ಖರೀದಿಸುತ್ತಿರುವ ಒಂದೆರಡು ಭಾವಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಒಂದು ಭಾವಚಿತ್ರದಲ್ಲಿ, ಅವರು “ಐ ಲವ್ ಪಹಲ್ಗಾಮ್” ಎಂದು ಬರೆದುಕೊಂಡಿದ್ದಾರೆ.</p>



<p>ಮತ್ತೊಂದು ಭಾವಚಿತ್ರದಲ್ಲಿ ಅವರು ಕಾಶ್ಮೀರಿ ಅಂಗಡಿಯಿಂದ ಕ್ರಿಕೆಟ್ ಬ್ಯಾಟ್ ಖರೀದಿಸುತ್ತಿರುವುದನ್ನು ತೋರಿಸಲಾಗಿದೆ. ಅಂಗಡಿಯ ಮಾಲೀಕರು ನಟನಿಗೆ ಕಷ್ಟದ ಸಮಯದಲ್ಲಿ ಆ ಸ್ಥಳಕ್ಕೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ.</p>



<p>ಅವರ ಒಂದು ಪೋಸ್ಟ್‌ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದು, ‘ಅತುಲ್ ಸರ್, ನೀವು ನಮ್ಮೂರಿನಲ್ಲಿ ಆತಿಥ್ಯ ವಹಿಸಿದ್ದು ತುಂಬಾ ಸಂತೋಷವಾಯಿತು. ಈ ಕಷ್ಟದ ಸಮಯದಲ್ಲಿ ಆಗಮಿಸಿ ಶತ್ರುಗಳಿಗೆ ನಾವು ಹೆದರುವುದಿಲ್ಲ ಎಂದು ತೋರಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು. ನಾವು ಒಟ್ಟಾಗಿ ಇದನ್ನು ಜಯಿಸುತ್ತೇವೆ” ಎಂದು ಹೇಳಿದ್ದಾರೆ.</p>



<p></p>
]]></content:encoded>
					
		
		
			</item>
		<item>
		<title>ಭಯೋತ್ಪಾದಕ ದಾಳಿಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವುದು ಬಿಜೆಪಿಗೆ ಹೊಸದೇನಲ್ಲ!</title>
		<link>https://peepalmedia.com/using-terrorist-attacks-for-election-campaigning-is-nothing-new-for-the-bjp/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 24 Apr 2025 12:19:23 +0000</pubDate>
				<category><![CDATA[ಅಂಕಣ]]></category>
		<category><![CDATA[bihar]]></category>
		<category><![CDATA[bjp]]></category>
		<category><![CDATA[Jammu & Kashmir]]></category>
		<category><![CDATA[jammu and kashmir]]></category>
		<category><![CDATA[Journalism]]></category>
		<category><![CDATA[kanpur]]></category>
		<category><![CDATA[Kathua]]></category>
		<category><![CDATA[media]]></category>
		<category><![CDATA[National conference]]></category>
		<category><![CDATA[Pahalgam]]></category>
		<category><![CDATA[Pahalgam terror attack]]></category>
		<category><![CDATA[Pakistan]]></category>
		<guid isPermaLink="false">https://peepalmedia.com/?p=57827</guid>

					<description><![CDATA[ದೇಶವನ್ನು ಬೆಚ್ಚಿಬೀಳಿಸಿದ, ಅತ್ಯಂತ ಹೇಯವಾದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನಿ ಉಗ್ರರು ಪಹಲ್ಗಾಮ್ ನಲ್ಲಿ ಏಪ್ರಿಲ್ 24 ರಂದು ನಡೆಸಿದ ನಂತರ, ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, 2025 ರ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ. ʼಬಿಹಾರದ ಮಣ್ಣಿನಲ್ಲಿʼ ನಿಂತು ಭಯೋತ್ಪಾದಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೋದಿಯವರು ಭಾಷಣದಲ್ಲಿ ಹೇಳಿದ್ದಾರೆ. &#8220;ಕಾನ್ಪುರದ ಧೈರ್ಯಶಾಲಿ ಪುಟ್ಟ ಮಗು ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ [&#8230;]]]></description>
										<content:encoded><![CDATA[
<pre class="wp-block-code"><code><strong>ಮುಂಬೈ ದಾಳಿಯಾದ ಮೊದಲ ದಿನದಂದು ಬಿಜೆಪಿ ಈ ಸಂದರ್ಭದಲ್ಲಿ ಯುಪಿಎ ಜೊತೆಗೆ ನಿಲ್ಲುವುದಾಗಿ ಘೋಷಿಸಿತು. ಆದರೆ 24 ಗಂಟೆಗಳ ಒಳಗೆ ತನ್ನ ಮಾತನ್ನು ಹಿಂತೆಗೆದುಕೊಂಡಿತು. ಈ ದಾಳಿಯನ್ನು ಸಂಪೂರ್ಣವಾಗಿ ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳಲು ತಂತ್ರ ಹೂಡಿತು. ಇದರ ನೇತೃತ್ವ ವಹಿಸಿದ್ದು ನಮ್ಮ ಈಗಿನ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು</strong></code></pre>



<p>ದೇಶವನ್ನು ಬೆಚ್ಚಿಬೀಳಿಸಿದ, ಅತ್ಯಂತ ಹೇಯವಾದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನಿ ಉಗ್ರರು ಪಹಲ್ಗಾಮ್ ನಲ್ಲಿ ಏಪ್ರಿಲ್ 24 ರಂದು ನಡೆಸಿದ ನಂತರ, ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, 2025 ರ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ.</p>



<p>ʼಬಿಹಾರದ ಮಣ್ಣಿನಲ್ಲಿʼ ನಿಂತು ಭಯೋತ್ಪಾದಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮೋದಿಯವರು ಭಾಷಣದಲ್ಲಿ ಹೇಳಿದ್ದಾರೆ. &#8220;ಕಾನ್ಪುರದ ಧೈರ್ಯಶಾಲಿ ಪುಟ್ಟ ಮಗು ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮತ್ತು ಜನರ ದುಃಖಿತ ಮನಸ್ಥಿತಿ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ&#8221; ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ಆಲ್&nbsp;ಇಂಡಿಯಾ ರೇಡಿಯೋ&nbsp;<a href="https://www.newsonair.gov.in/pm-modi-cancels-kanpur-visit-in-respect-of-one-of-the-phalagam-victims-from-kanpur/">ವರದಿ ಮಾಡಿತ್ತು.</a></p>



<p>ಒಂದು ಕಡೆ ಇಂತಹ ನೋವಿನ ಸಂದರ್ಭದಲ್ಲಿ ಕಾನ್ಪುರಕ್ಕೆ ಹೋಗುವುದು ಸರಿಯಲ್ಲ ಎಂದು ನಿರ್ಧರಿಸಿದ ಮೋದಿಯವರು ಬಿಹಾರದ ಮಧುಬನಿಗೆ ಹೋಗಿದ್ದಾರೆ. ಅಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಹಿನ್ನಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಿದ್ದಾರೆ. 13,480 ಕೋಟಿ ರುಪಾಯಿಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ, ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.<br><br>ಇವತ್ತು ಸರ್ವಪಕ್ಷಗಳ ಸಭೆ ಕೂಡ ನಡೆಯಲಿದೆ. ಸಂಸತ್ತಿನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸಲು ಸರ್ಕಾರ ಯೋಜಿಸಿದೆ. ಎಲ್ಲಾ ಪಕ್ಷಗಳ ಒಬ್ಬೊಬ್ಬ ಸದಸ್ಯನನ್ನು ಕರೆದು ಅಭಿಪ್ರಾಯ ಕೇಳಬೇಕು ಎಂದು ವಿಪಕ್ಷಗಳು ಒತ್ತಾಯಿಸುತ್ತಿವೆ. ಈ ಸಭೆಯಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸುವ ಸಾಧ್ಯತೆ ಇಲ್ಲ, ಅವರು ಬಿಹಾರದಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.  ನರೇಂದ್ರ ಮೋದಿ ಸರ್ವಪಕ್ಷಗಳ ಸಭೆಯಲ್ಲಿ ಭಾಗವಹಿಸಬೇಕು ಅಂತ ಕಾಂಗ್ರೆಸ್ ಒತ್ತಾಯ ಮಾಡಿದರೂ ಬಿಹಾರ ಹೋಗಿದ್ದಾರೆ. <br><br>ನೇರ ಸೌದಿಯಿಂದ ಬಂದು, ತಮ್ಮ ಸಂತಾಪದ ಭಾಗವಾಗಿ ಕಾನ್ಪುರದ ಬೇಟಿಯನ್ನು ಮೊಟುಕುಗೊಳಿಸಿ, ಸರ್ವಪಕ್ಷಗಳ ಸಭೆಯನ್ನೂ ನಿರ್ಲಕ್ಷಿಸಿ, ಬಿಹಾರಕ್ಕೆ ಹೋದ ಮೋದಿಯವರು ಸೌದಿಯಿಂದ ಬಂದಿದ್ದಾದರು ಯಾಕೆ?</p>



<p>ಬಿಜೆಪಿ ಮತ್ತು ಪ್ರಧಾನಿ ಪಹಲ್ಗಾಮ್ ದಾಳಿಯನ್ನು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರಾ? ಈ ಪ್ರಶ್ನೆಯನ್ನು ಅನೇಕ ಜನರು ಕೇಳುತ್ತಿದ್ದಾರೆ. ಆದರೆ, ಜನರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ವಾತಾವರಣವನ್ನು ಸೃಷ್ಟಿ ಮಾಡಿ, ಹೊಣೆಗಾರ ಸರಕಾರ ತನ್ನ ಹಾಸಿಗೆಯ ಮೇಲೆ ಭದ್ರವಾಗಿ ಕೂರುತ್ತದೆ. ಈ ಹಿನ್ನಲೆಯಲ್ಲಿ 2008 ರ ಮುಂಬೈ ದಾಳಿಯ ಸಂದರ್ಭದಲ್ಲಿ, ಇಡೀ ದಾಳಿಯನ್ನು ಬಿಜೆಪಿ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡ ರೀತಿಯನ್ನು ನಾವು ನೆನಪಿಸಿಕೊಳ್ಳಬೇಕು.</p>


<div class="wp-block-image">
<figure class="aligncenter size-full"><img decoding="async" width="489" height="768" src="https://peepalmedia.com/wp-content/uploads/2025/04/unnamed-1.webp" alt="" class="wp-image-57829" srcset="https://peepalmedia.com/wp-content/uploads/2025/04/unnamed-1.webp 489w, https://peepalmedia.com/wp-content/uploads/2025/04/unnamed-1-191x300.webp 191w, https://peepalmedia.com/wp-content/uploads/2025/04/unnamed-1-150x236.webp 150w, https://peepalmedia.com/wp-content/uploads/2025/04/unnamed-1-300x471.webp 300w" sizes="(max-width: 489px) 100vw, 489px" /><figcaption class="wp-element-caption"><strong><em>ಇದು ನವೆಂಬರ್ 28, 2008 ರಂದು ಮುಂಬೈಯಲ್ಲಿ ನಡೆದ ಭೀಕರ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಪತ್ರಿಕೆಗಳಲ್ಲಿ ನೀಡಿದ ಜಾಹೀರಾತು. </em></strong></figcaption></figure></div>


<p>ಮುಂಬೈ ದಾಳಿಯಾದ ಮೊದಲ ದಿನದಂದು ಬಿಜೆಪಿ ಈ ಸಂದರ್ಭದಲ್ಲಿ ಯುಪಿಎ ಜೊತೆಗೆ ನಿಲ್ಲುವುದಾಗಿ ಘೋಷಿಸಿತು. ಆದರೆ 24 ಗಂಟೆಗಳ ಒಳಗೆ ತನ್ನ ಮಾತನ್ನು ಹಿಂತೆಗೆದುಕೊಂಡಿತು. ಈ ದಾಳಿಯನ್ನು ಸಂಪೂರ್ಣವಾಗಿ <a href="https://www.hindustantimes.com/delhi/as-forces-fight-terrorists-bjp-is-busy-seeking-votes/story-SAtEaWSWdin2C8ii8uhwPK.html">ಚುನಾವಣಾ ರಾಜಕಾರಣಕ್ಕೆ ಬಳಸಿಕೊಳ್ಳಲು ತಂತ್ರ ಹೂಡಿತು</a>. ಇದು ನವೆಂಬರ್ 28, 2008 ರಂದು ಮುಂಬೈಯಲ್ಲಿ ನಡೆದ ಭೀಕರ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಪತ್ರಿಕೆಗಳಲ್ಲಿ ನೀಡಿದ ಜಾಹೀರಾತು.<strong><em> </em></strong>ಇದರ ನೇತೃತ್ವ ವಹಿಸಿದ್ದು ನಮ್ಮ ಈಗಿನ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರು.</p>



<p>ನವೆಂಬರ್ 28 ರಂದು, ಮುಂಬೈ ದಾಳಿಯ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿತ್ತು. ದೇಶವೇ ಯುಪಿಎ ಸರ್ಕಾರದ ವಿರುದ್ಧ ಕೋಪವನ್ನು ತೋರಿಸುತ್ತಿತ್ತು. ಜನರು ಭದ್ರತಾ ವೈಫಲ್ಯವನ್ನು ಪ್ರಶ್ನೆ ಮಾಡುತ್ತಿದ್ದರು. ಆದರೆ ಬಿಜೆಪಿ ತನ್ನ ಜವಬ್ದಾರಿಯಾದ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಬದಲು ʼನಮಗೆ ಓಟ್‌ ಹಾಕಿʼ ಎಂದು ಅಮಾಯಕರ ರಕ್ತದ ಮಡುವಿನಲ್ಲಿಯೇ ಚುನಾವಣಾ ಪ್ರಚಾರವನ್ನು ಆರಂಭಿಸಿತು. &nbsp;</p>



<p>ಆ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿ, ದಾಳಿಯ ಸ್ಥಳಗಳಲ್ಲಿ ಒಂದಾದ ಒಬೆರಾಯ್ ಟ್ರೈಡೆಂಟ್ ಹೋಟೆಲ್‌ನ ಹೊರಗಿನಿಂದ&nbsp;<a href="https://www.youtube.com/watch?v=92LD42AKgV0">ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲು</a>&nbsp;ಮುಂಬೈಗೆ ಬಂದರು. ಎಂತಾ ದುರ್ದೈವ ನೋಡಿ, ತನ್ನ ಆಡಳಿತದಲ್ಲಿ ಪಹಲ್ಗಾಮ್&nbsp;ನಂತಹ ಒಂದು ಭೀಕರ ದಾಳಿಯಾದಾಗಲೂ ಒಂದೇ ಒಂದು ಅಧಿಕೃತ ಪತ್ರಿಕಾಗೋಷ್ಟಿ ನಡೆಸಲಿಲ್ಲ!</p>



<p>ಮುಂಬೈ ದಾಳಿ ನಡೆದು ಮೂರೇ ದಿನದಲ್ಲಿ, ಅಂದರೆ ನವೆಂಬರ್ 29 ಮತ್ತು ಡಿಸೆಂಬರ್ 4 ರಂದು ಕ್ರಮವಾಗಿ ಚುನಾವಣೆಗೆ ಸಜ್ಜಾಗುತ್ತಿದ್ದ ದೆಹಲಿ ಮತ್ತು ರಾಜಸ್ಥಾನಕ್ಕೆ ಭಾಷಣ ಮಾಡಲು ಹೋದರು. ಅದೇ ದಿನ ಬಿಜೆಪಿ &nbsp;ರಾಷ್ಟ್ರ ಮಟ್ಟದ ಪತ್ರಿಕೆಗಳಲ್ಲಿ ಮುಂಬೈ ದಾಳಿಯನ್ನು ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುವ ಜಾಹೀರಾತುಗಳನ್ನು ಬಿಡುಗಡೆ ಮಾಡಿತು.</p>



<p>ಕಪ್ಪು ಹಿನ್ನಲೆಯ ಮೇಲೆ, ಮುಂಬೈ ರಕ್ತಪಾತವನ್ನು ಸೂಚಿಸುವ ರಕ್ತದ ಕೆಂಬಣ್ಣವನ್ನು ಹರಡಿಸಿ, ಅದರ ಮೇಲೆ “Brutal Terror Strikes at Will, Weak Government, Unwilling and Incapable, ಭಯೋತ್ಪಾದನೆಯ ವಿರುದ್ಧ ಹೋರಾಡಿ. ಬಿಜೆಪಿಗೆ ಮತ ಹಾಕಿ” ಎಂದು ಆ ಜಾಹೀರಾತು ನೀಡಿತು.</p>



<p>ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಈ ಪತ್ರಿಕಾ ಜಾಹೀರಾತು ನೀಡಿದಕ್ಕಾಗಿ ಚುನಾವಣಾ <a href="https://www.indiatoday.in/latest-headlines/story/election-commission-pulls-up-bjp-for-campaign-ads-34796-2008-12-08">ಆಯೋಗ ಛೀಮಾರಿ ಹಾಕಿತು</a>, ಇವು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿವೆ ಎಂದು ಹೇಳಿತು. ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ, ಪಕ್ಷದ ಪ್ರಚಾರ ಜಾಹೀರಾತುಗಳಲ್ಲಿನ ಕೆಲವು ಹೇಳಿಕೆಗಳು ಮಾದರಿ ಚುನಾವಣಾ ನೀತಿ ಸಂಹಿತೆಯ ಅಕ್ಷರ ಮತ್ತು ಆಶಯವನ್ನು ಉಲ್ಲಂಘಿಸುತ್ತವೆ ಎಂದು ಆಯೋಗ ತಿಳಿಸಿತ್ತು.</p>



<p>ಪುಲ್ವಾಮ ಮತ್ತು ಈಗ ನಡೆದಿರುವ ಪಹಲ್ಗಾಮ್&nbsp; ಉಗ್ರರ ದಾಳಿಯ ಬಗ್ಗೆ ಸರ್ಕಾರವನ್ನು ಪ್ರಶ್ನೆ ಮಾಡುವವರನ್ನು ಗೋದಿ ಮೀಡಿಯಾಗಳು ಸೇರಿದಂತೆ, ಈ ಸಂದರ್ಭದಲ್ಲೂ ದೇಶದ ರಕ್ಷಣೆಯ ಬದಲಾಗಿ ಬಿಜೆಪಿಯ ಗುರಾಣಿಯಂತೆ ಕೆಲಸ ಮಾಡುವ ಅವರ ಬೆಂಬಲಿಗರು ಒಂದು ಘಟನೆಯನ್ನು ನೆನಪಿಡಬೇಕು<strong>.</strong></p>



<p>ಮುಂಬೈ ದಾಳಿಯ ಮಾರನೇ ದಿನ, ಅಂದರೆ<strong> </strong>2008 ರ ನವೆಂಬರ್ 27 ರಂದು ಇದೇ ಮೋದಿ ಭಯೋತ್ಪಾದಕ ದಾಲಿಯ ವಿಚಾರವಾಗಿ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರವೊಂದನ್ನು ಬರೆದಿದ್ದರು. ಆಂತರಿಕ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಸಿಂಗ್ ಎಲ್ಲಾ ಮುಖ್ಯಮಂತ್ರಿಗಳ, ವಿಶೇಷವಾಗಿ ಕರಾವಳಿ ಮತ್ತು ಗಡಿ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆಯಬೇಕೆಂದು ಅವರು ಸೂಚಿಸಿದರು. ಭಾರತದ ದುರ್ಬಲ ಸಮುದ್ರ ಭದ್ರತೆಯ ಬಗ್ಗೆಯೂ ಅವರು ಮಾತನಾಡಿದರು.</p>



<p>ಈ ಪತ್ರ ಒಂದು ದಿನದಲ್ಲಿ ಬಹಿರಂಗವಾಯಿತು. ಈ ಪತ್ರ ಬರೆಯುತ್ತಿದ್ದ ಸಂದರ್ಭದಲ್ಲಿ ಮೋದಿಜಿ ಯುಪಿಎ ಸರ್ಕಾರಕ್ಕೆ ಸಲಹೆಗಳನ್ನು ನೀಡುತ್ತಾ, ಆ ಸಂದರ್ಭದಲ್ಲಿ ಸರ್ಕಾರದ ಜೊತೆಗೆ ನಿಲ್ಲುವ ಯೋಚನೆಯಲ್ಲಿದ್ದರು. ಆ ದಿನ, ಆಗ ವಿರೋಧ ಪಕ್ಷದ ನಾಯಕ ಮತ್ತು 2009 ರ ಲೋಕಸಭಾ ಚುನಾವಣೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿದ್ದ ಎಲ್.ಕೆ. ಅಡ್ವಾಣಿ&nbsp;<a href="https://www.hindustantimes.com/delhi-news/bjp-backs-govt-in-hour-of-crisis/story-GgCJGVvaQwvP4dOX5O9gcK.html">ಮಾಧ್ಯಮಗಳ ಮುಂದೆ</a> ಬಂದು&nbsp;, &#8220;ಶಾಂತಿ, ನೆಮ್ಮದಿ, ಕೋಮು ಸಾಮರಸ್ಯ ಮತ್ತು ದೇಶಭಕ್ತಿಯ ಏಕತೆಯನ್ನು ಕಾಪಾಡಿಕೊಳ್ಳುವುದು ನಮ್ಮ ಅತ್ಯುನ್ನತ ಆದ್ಯತೆಯಾಗಿರಬೇಕು&#8221; ಎಂದು ಹೇಳಿದರು.<strong></strong></p>



<p>ಆದರೆ ಮರುದಿನವೇ ಕತೆ ಉಲ್ಟಾ ಹೊಡೆದಿತ್ತು. ಬಿಜೆಪಿ ಲಜ್ಜೆಗೆಟ್ಟು ಇಂತಹ ಒಂದು ಜಾಹೀರಾತುಗಳನ್ನು ಬಿಡುಗಡೆ ಮಾಡಿತು. ಪಕ್ಷವು ತನ್ನ ಹಿಂದಿ ಜಾಹೀರಾತಿನಲ್ಲಿ, &#8220;ಹುತಾತ್ಮರ ತ್ಯಾಗಗಳನ್ನು ನೆನಪಿಸಿಕೊಳ್ಳಿ&#8221; ಎಂದೂ, ಮತ್ತೊಂದು ಜಾಹೀರಾತಿನಲ್ಲಿ ಮಾಜಿ ಪ್ರಧಾನಿ ಮತ್ತು ಬಿಜೆಪಿಯ ದಿಗ್ಗಜ ಅಟಲ್ ಬಿಹಾರಿ ವಾಜಪೇಯಿ ಅವರ ಮುಕ್ತ ಪತ್ರವನ್ನೂ ಪ್ರಕಟಿಸಿತ್ತು. ಅದರಲ್ಲಿ &#8220;ಭಯೋತ್ಪಾದನೆ ಎಸೆದ ಸವಾಲನ್ನು ಒಟ್ಟಾಗಿ ಎದುರಿಸಬೇಕು. &#8220;ಸಾಂಪ್ರದಾಯಿಕ ಸಹೋದರತ್ವ ಮತ್ತು ಶಾಂತಿಯನ್ನು ಕಾಪಾಡಿಕೊಳ್ಳುತ್ತಾ, ಭಯೋತ್ಪಾದನೆಯ ವಿರುದ್ಧ ಹೋರಾಡಬಲ್ಲ ಸರ್ಕಾರವನ್ನು ನಾವು ಆಯ್ಕೆ ಮಾಡಬೇಕು,&#8221; ಎಂದು ವಾಜಪೇಯಿ ಬರೆದಿದ್ದರು.<br><br>ಆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಇದ್ದಂತ ಜನಾಕ್ರೋಶವನ್ನು ಕಂಡು, ಸರ್ಕಾರದ ವೈಫಲ್ಯಗಳ ವಿರುದ್ಧ ಅಭಿಯಾನ ನಡೆಸಲು ಬಿಜೆಪಿಗೆ ಒಂದು ಮುಖ ಬೇಕಾಗಿತ್ತು. ಅದುವೇ ನರೇಂದ್ರ ಮೋದಿ. ಹೀಗಾಗಿ, ಸರ್ಕಾರಕ್ಕೆ ಪತ್ರ ಬರೆದು ಸಲಹೆ ನೀಡಿದ್ದ ಮೋದಿ ನವೆಂಬರ್ 28 ರಂದು ಗುಜರಾತ್‌ನಿಂದ ಮುಂಬೈಗೆ ಬಂದು ಒಬೆರಾಯ್ ಟ್ರೈಡೆಂಟ್‌ನಲ್ಲಿ ಮಾಡಿದ ಭಾಷಣ ಮಾಡಿದರು. ಸಿಂಗ್‌ ಅವರು ದಾಳಿಯ ನಂತರ ಉದ್ದೇಶಿಸಿ ಮಾಡಿದ ಭಾಷಣ &nbsp;&#8220;ನಿರಾಶಾದಾಯಕ&#8221; ಎಂದು ಪತ್ರಕರ್ತರಿಗೆ ಮೋದಿ ತಿಳಿಸಿದರು. ಸಿಂಗ್‌ಗೆ ಬರೆದ ಪತ್ರದ ಬಗ್ಗೆಯೂ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು ಮತ್ತು ಭಾರತದ ಸಮುದ್ರ ಭದ್ರತೆಗೆ ಸಂಬಂಧಿಸಿದ ಪತ್ರದಲ್ಲಿದ್ದ ಮಾಹಿತಿಗಳನ್ನು ಮತ್ತೆ ಹೇಳಿದರು. &nbsp;</p>



<p>ಪಾಕಿಸ್ತಾನದ ದುಷ್ಟ ತಂತ್ರಗಳ ಎಚ್ಚರಿಕೆಯನ್ನು ಯುಪಿಎ ಸರ್ಕಾರ ನಿರ್ಲಕ್ಷಿಸಿದೆ ಎಂದು ಮೋದಿ ಆರೋಪಿಸಿದರು, ಪಾಕಿಸ್ತಾನಿ ನೌಕಾಪಡೆಗಳು ಗುಜರಾತಿ ಮೀನುಗಾರರನ್ನು ಬಂಧಿಸಿ, ಅವರನ್ನು ಬಿಡುಗಡೆ ಮಾಡಿದ ಮೇಲೂ ಅವರ ದೋಣಿಗಳನ್ನು ವಶಪಡಿಸಿಕೊಳ್ಳುತ್ತಿವೆ ಎಂಬ ಬಗ್ಗೆ ಮೋದಿ ಮಾತನಾಡಿದರು. &#8220;ದೋಣಿಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ನಾನು ಸರ್ಕಾರಕ್ಕೆ ಸೂಚಿಸಿದ್ದೆ&#8221; ಎಂದು ಮೋದಿ ಹೇಳಿದರು.</p>



<p>ಇಡೀ ಮುಂಬೈ ದಾಳಿಯಲ್ಲಿ ಸರ್ಕಾರವನ್ನು ಪ್ರಶ್ನಿಸಿದ ಬಿಜೆಪಿಯೇ ಈಗಿನ ದಾಳಿಯಲ್ಲಿ ತನ್ನನ್ನು ಯಾರೇ ಪ್ರಶ್ನಿಸಿದರೂ ದೇಶದ್ರೋಹಿಗಳು ಎಂದು ನಕಲಿ ದೇಶಪ್ರೇಮದ ಆಟವನ್ನು ಆಡುತ್ತಿದೆ.</p>



<p>ಮುಂಬೈ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿಯ ಸಂಬಂಧಿಕರಿಗೆ ವಿತರಿಸಲು ಗುಜರಾತ್ ಸರ್ಕಾರವು ಮಹಾರಾಷ್ಟ್ರ ಸರ್ಕಾರಕ್ಕೆ 1 ಕೋಟಿ ರುಪಾಯಿಗಳನ್ನು ದೇಣಿಗೆ ನೀಡಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಘೋಷಿಸಿದರು. ಹುತಾತ್ಮರಲ್ಲಿ ಮಹಾರಾಷ್ಟ್ರ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ ಕೂಡ ಒಬ್ಬರಾಗಿದ್ದರು.</p>



<p>ಕರ್ಕರೆಯವರ ಕುಟುಂಬ ಯಾರನ್ನೂ ಬೇಟಿ ಮಾಡಲು ಒಪ್ಪದಿದ್ದರೂ, ಮೋದಿ ಮಾತ್ರ ಅವರ ಮನೆಗೆ ಹೋಗಿ ಸಂತ್ವಾನ ಹೇಳಿ ಬಂದರು. &nbsp;ಆದರೆ ಕರ್ಕರೆ ಪತ್ನಿ ಕವಿತಾ ಕರ್ಕರೆಯವರು <a href="https://www.indiatoday.in/latest-headlines/story/hemant-karkares-wife-turns-down-modis-offer-34231-2008-11-29">ಮೋದಿಯವರ ಒಂದು ಕೋಟಿ</a> ರುಪಾಯಿಗಳ ಆಫರನ್ನು ನಿರಾಕರಿಸಿದರು.</p>



<p>ಇದಕ್ಕೆ ಕಾರಣವೆಂದರೆ, ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಕರ್ಕರೆ ಅವರು ಸೆಪ್ಟೆಂಬರ್ 2008 ರಲ್ಲಿ ಮಹಾರಾಷ್ಟ್ರದ ಮಾಲೇಗಾಂವ್‌ನಲ್ಲಿ ನಡೆದ ಬಾಂಬ್ ಸ್ಫೋಟಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರ ಪಾತ್ರವಿದೆ ಎಂದು ಬಹಿರಂಗವಾಗಿ ಹೇಳಿದ್ದರು. ಆಗ ಬಿಜೆಪಿ ನಾಯಕರು ಯುಪಿಎ ಸರ್ಕಾರದ ಒತ್ತಡದಿಂದಾಗಿ ಆರ್‌ಎಸ್‌ಎಸ್‌ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ಕೊಟ್ಟರು. &nbsp;</p>



<p>ನವೆಂಬರ್ 28 ರಂದು,&nbsp;<a href="https://economictimes.indiatimes.com/news/politics-and-nation/advani-blames-intelligence-agencies-for-mumbai-terror-attacks/articleshow/3770137.cms">ಅಡ್ವಾಣಿ</a>&nbsp;ಪತ್ರಿಕೆಗಳಿಗೆ ನೀಡಿದ ಹೇಳಿಕೆಯಲ್ಲಿ, &#8220;ಒಬ್ಬ ಭಯೋತ್ಪಾದಕನ ಮೊಬೈಲ್ ಫೋನ್ ಪಾಕಿಸ್ತಾನಿ ಮೂಲದದ್ದಾಗಿ ಈಗ ಕಂಡುಬರುತ್ತಿದೆ. ʼಹಿಂದೂ ಭಯೋತ್ಪಾದನೆʼಯ ಬಗ್ಗೆ ಗುಪ್ತಚರ ಸಂಸ್ಥೆಗಳು ಕಾಳಜಿ ವಹಿಸಿದ್ದರಿಂದ ಭಯೋತ್ಪಾದಕರ ಸಂಚು ಪತ್ತೆಯಾಗದೆ ಹೋಗಿದೆ ಎಂದು ದಾಳಿಗೆ ಗುಪ್ತಚರ ಸಂಸ್ಥೆಗಳನ್ನು ದೂಷಿಸಿದರು.</p>



<p>ಹಿಂದಿನ ದಿನ, ಸಿಂಗ್ ಅವರು ಅಡ್ವಾಣಿಯವರಿಗೆ ಆಹ್ವಾನ ನೀಡಿ, ಇಬ್ಬರೂ ಜಂಟಿಯಾಗಿ ಮುಂಬೈಗೆ ಭೇಟಿ ನೀಡಿ ಭಾರತೀಯ ರಾಜಕೀಯ ವರ್ಗದ ನಡುವಿನ ಐಕ್ಯತೆಯನ್ನು ಪ್ರದರ್ಶಿಸಲು ಆ ದಿನ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಂತೆ ಸೂಚಿಸಿದ್ದರು. ಆದರೆ ಆ ಜಂಟಿ ಭೇಟಿ ಎಂದಿಗೂ ನಡೆಯಲಿಲ್ಲ.&nbsp;<a href="https://www.indiatoday.in/latest-headlines/story/modi-plays-politics-as-bodycount-increases-34205-2008-11-29">ಅಡ್ವಾಣಿ</a>&nbsp;ತಮ್ಮ ಹೇಳಿಕೆಯಲ್ಲಿ ವಿವರಿಸಿದರು, “ಪ್ರಧಾನಿಯವರು ನಾವು ಒಟ್ಟಿಗೆ ಮುಂಬೈಗೆ ಹೋಗಬೇಕೆಂದು ಸೂಚಿಸಿದ್ದರು. ನನ್ನ ಪ್ರಯಾಣ ಯೋಜನೆಗಳನ್ನು ಮುಂದೂಡುತ್ತಾ ನಾನು ತಕ್ಷಣ ಒಪ್ಪಿಕೊಂಡಿದ್ದೆ. ಆದರೆ ಮಧ್ಯಾಹ್ನ, ಕಮಾಂಡೋ ಕಾರ್ಯಾಚರಣೆಗಳು ಇನ್ನೂ ಮುಗಿದಿಲ್ಲದ ಕಾರಣ ಶುಕ್ರವಾರ [ನವೆಂಬರ್ 28] ಹೋಗುವುದು ಉತ್ತಮ ಎಂದು ನನಗೆ ತಿಳಿಸಲಾಯಿತು,” ಎಂದು ಹೇಳಿ ವಿಫಲವಾದ ಭೇಟಿಯ ಹೊಣೆಯನ್ನು ಸಿಂಗ್ ಮೇಲೆ ಹೊರಿಸಿದರು.</p>



<p>ಆದರೆ, ಇಡೀ ದಾಳಿಯನ್ನು ತಮ್ಮ ಚುನಾವಣಾ ಪ್ರಚಾರವಾಗಿ ಬಿಜೆಪಿ ಬಳಸಿಕೊಂಡು, ಪತ್ರಿಕೆಗಳಿಗೆ ಜಾಹೀರಾತುಗಳನ್ನು ನೀಡಿರುವಾಗ ಮನಮೋಹನ್‌ ಸಿಂಗ್‌ ಅಡ್ವಾಣಿಯನ್ನು ತಮ್ಮೊಂದಿಗೆ ಕರೆದುಕೊಂಡು ಹೇಗೆ ಹೋಗಲು ಸಾಧ್ಯ?</p>



<p>ಮುಂಬೈ ದಾಳಿಯಾಗಿ ಹತ್ತು ವರ್ಷಗಳಾದ <a href="https://www.livemint.com/Politics/pGPABBw5DnDwPhuimtqmTL/Mumbai-terror-attacks-2611-anniversary-2008-mumbai-attacks.html">ಮೇಲೆ ಮಿಂಟ್‌ &#8211; ಮಾಧ್ಯಮ</a> ಒಂದು ವರದಿಯನ್ನು ಮಾಡಿತ್ತು. ಆಗ, ದಾಳಿಯ ಸಂದರ್ಭದಲ್ಲಿ ಬಿಜೆಪಿ ಯೂಟರ್ನ್‌ ಹೊಡೆದ ಬಗ್ಗೆ ಕೇಳಿದಾಗ ಬಿಜೆಪಿ ನಾಯಕರೊಬ್ಬರು &#8220;ಅಡ್ವಾಣಿಜೀ ಸೇರಿದಂತೆ ನಮ್ಮ ಯಾವುದೇ ಹಿರಿಯ ನಾಯಕರು ಇಷ್ಟು ಬೇಗ ಮುಂಬೈಗೆ ಬಂದು ಇಲ್ಲಿಯೇ ಸ್ಥಾನಮಾನ ಪಡೆಯಲು ಬಯಸಲಿಲ್ಲ. ಅವರು ಅದನ್ನು ದೆಹಲಿಯಲ್ಲಿ ಮಾಡಿದರು, ಆದರೆ ಮುಂಬೈನಲ್ಲಿ ಯಾರನ್ನಾದರೂ ನೋಡಬೇಕಾಗಿತ್ತು. ಹಾಗಾಗಿ ಗೋಪಿನಾಥ್ ಮುಂಡೆಯವರು ಮೋದಿಜಿಯನ್ನು ಸಂಪರ್ಕಿಸಿದರು, ಅವರು ಬರಲು ಒಪ್ಪಿದರು,” ಎಂದು ಹೇಳಿರುವುದು ವರದಿಯಾಗಿದೆ. 2008 ರ ದಾಳಿಯನ್ನು ಮೋದಿಜಿ ತಮ್ಮ ಪ್ರಧಾನಿಯಾಗುವ ಕನಸಿಗೆ ಒಂದು ಕ್ಯಟಲಿಸ್ಟ್‌ ಆಗಿ ಬಳಸಿಕೊಂಡರು. &nbsp;&nbsp;</p>



<p>ರಾಜಸ್ಥಾನದಲ್ಲಿ, ಬಿಜೆಪಿ ಮುಂಬೈ ದಾಳಿಯನ್ನು ಬಳಸಿಕೊಂಡು ಮತಗಳನ್ನು ಗಳಿಸಲು ಪ್ರಯತ್ನಿಸಿತು. ನವೆಂಬರ್ 29, 2008 ರಂದು ಪ್ರಕಟವಾದ&nbsp;<em><a href="https://www.indiatoday.in/latest-headlines/story/modi-plays-politics-as-bodycount-increases-34205-2008-11-29">ಇಂಡಿಯಾ ಟುಡೇಯಲ್ಲಿ ವರದಿಯಾದಂತೆ,</a></em>&nbsp;ಕೇಂದ್ರ ಸರ್ಕಾರದ ಭಯೋತ್ಪಾದಕ ದಾಳಿಗಳನ್ನು ತಡೆಯುವಲ್ಲಿ ಅಸಮರ್ಥತೆಯನ್ನು ಪ್ರತಿಭಟಿಸಲು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ &#8220;ಭಯೋತ್ಪಾದನೆಯ ಪ್ರತಿಕೃತಿಗಳನ್ನು&#8221; ಸುಡುವ ಪಕ್ಷದ ಯೋಜನೆಗಳನ್ನು ಬಿಜೆಪಿ ಹಾಕಿಕೊಂಡಿತು. ಭಯೋತ್ಪಾದಕ ದಾಳಿಗಳನ್ನು ಕಾಂಗ್ರೆಸ್‌ನ ಅಲ್ಪಸಂಖ್ಯಾತ ಪರವಾದ ನಿಲುವಿಗೆ ಜೋಡಿಸಲು ಸಂಘಟಿತ ಪ್ರಯತ್ನವೂ ನಡೆಯಿತು. ಉದಾಹರಣೆಗೆ, ನವೆಂಬರ್ 29 ರ&nbsp;<em>ಇಂಡಿಯಾ ಟುಡೇ</em>&nbsp;ವರದಿಯು ರಾಜ್ಯದ ಹಿರಿಯ ಬಿಜೆಪಿ ನಾಯಕ ರಾಮದಾಸ್ ಅಗರ್ವಾಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, &#8220;ಕಾಂಗ್ರೆಸ್‌ಗೆ ಓಲೈಸುವ ಇತಿಹಾಸವಿದೆ. ಅವರು ಭಯೋತ್ಪಾದನೆಯ ಮೇಲೆ ಮೃದುವಾಗಿ ವರ್ತಿಸುವ ಮೂಲಕ ದೇಶವನ್ನು ಹಾಳುಮಾಡುತ್ತಾರೆ,&#8221; ಎಂದು ವರದಿ ಮಾಡಿತ್ತು.</p>



<p>ಮುಂಬೈ ದಾಳಿಯ ದುರಂತವನ್ನು ಮತಗಳಾಗಿ ಪರಿವರ್ತಿಸಲು ಮೋದಿ, ಅಡ್ವಾಣಿ ಮತ್ತು ಬಿಜೆಪಿ ಪ್ರಯತ್ನಿಸಿದ ರೀತಿಗೆ ಹೋಲಿಸಿದರೆ, ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ವಿರೋಧ ಪಕ್ಷಗಳು ಸರ್ಕಾರದೊಂದಿಗೆ ಹೆಚ್ಚಿನ ಮಟ್ಟದ ಒಗ್ಗಟ್ಟನ್ನು ಪ್ರದರ್ಶಿಸಿದ್ದವು.</p>



<p>ಆದರೆ, ಪಹಲ್ಗಾಮ್ ಉಗ್ರರ ದಾಳಿಯ ಸಂದರ್ಭದಲ್ಲಿ ಕಾನ್ಪುರ ಬೇಟಿಯನ್ನು ರದ್ದು ಮಾಡಿದ ನರೇಂದ್ರ ಮೋದಿಯವರು ಬಿಹಾರಕ್ಕೆ ಹೋಗಿ ಭಾಷಣ ಮಾಡಿದ್ದು, ಸಾರ್ವಜನಿಕ ರ್ಯಾಲಿ ಮಾಡಿದ್ದು ವಿಚಿತ್ರವಾಗಿದೆ. ಅದೂ ಕೂಡ ದಾಳಿಯ ಬಗ್ಗೆ ಯಾವುದೇ ಅಧಿಕೃತ ಪತ್ರಿಕಾಗೋಷ್ಟಿಯನ್ನು ನಡೆಸದೆ!</p>
]]></content:encoded>
					
		
		
			</item>
		<item>
		<title>ಪಹಲ್ಗಾಮ್ ಉಗ್ರರ ದಾಳಿ: ಸಂತಾಪದ ಮಧ್ಯೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರಕ್ಕೆ ಮೋದಿ ಬೇಟಿ</title>
		<link>https://peepalmedia.com/pahalgam-terror-attack-modi-visits-bihar-which-is-gearing-up-for-elections-amid-mourning/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 24 Apr 2025 10:03:29 +0000</pubDate>
				<category><![CDATA[ದೇಶ]]></category>
		<category><![CDATA[bihar]]></category>
		<category><![CDATA[bjp]]></category>
		<category><![CDATA[Jammu & Kashmir]]></category>
		<category><![CDATA[jammu and kashmir]]></category>
		<category><![CDATA[Journalism]]></category>
		<category><![CDATA[kanpur]]></category>
		<category><![CDATA[Kathua]]></category>
		<category><![CDATA[media]]></category>
		<category><![CDATA[National conference]]></category>
		<category><![CDATA[Pahalgam]]></category>
		<category><![CDATA[Pahalgam terror attack]]></category>
		<category><![CDATA[Pakistan]]></category>
		<category><![CDATA[sindhu river]]></category>
		<guid isPermaLink="false">https://peepalmedia.com/?p=57809</guid>

					<description><![CDATA[26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಏಪ್ರಿಲ್ 24 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ , 2025 ರ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ. &#8220;ಕಾನ್ಪುರದ ಧೈರ್ಯಶಾಲಿ ಪುಟ್ಟ ಮಗು ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮತ್ತು ಜನರ ದುಃಖಿತ ಮನಸ್ಥಿತಿ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ&#8221; ಎಂದು ಪ್ರಧಾನಿ ಕಚೇರಿ [&#8230;]]]></description>
										<content:encoded><![CDATA[
<p>26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಏಪ್ರಿಲ್ 24 ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪ್ರಧಾನಿ ನರೇಂದ್ರ ಮೋದಿ , 2025 ರ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ. </p>



<p>&#8220;ಕಾನ್ಪುರದ ಧೈರ್ಯಶಾಲಿ ಪುಟ್ಟ ಮಗು ಶುಭಂ ಸೇರಿದಂತೆ ಹಲವಾರು ಜೀವಗಳನ್ನು ಬಲಿತೆಗೆದುಕೊಂಡ ಇತ್ತೀಚಿನ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮತ್ತು ಜನರ ದುಃಖಿತ ಮನಸ್ಥಿತಿ ಮತ್ತು ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ&#8221; ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ ಎಂದು ಆಲ್ ಇಂಡಿಯಾ ರೇಡಿಯೋ <a href="https://www.newsonair.gov.in/pm-modi-cancels-kanpur-visit-in-respect-of-one-of-the-phalagam-victims-from-kanpur/">ವರದಿ ಮಾಡಿತ್ತು .</a></p>



<p>ಆಕಾಶವಾಣಿಯ ಪ್ರಕಾರ ಕಾನ್ಪುರದಲ್ಲಿ ಅವುಗಳ ಮೌಲ್ಯ 20,000 ಕೋಟಿ ರುಪಾಯಿಯ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಬೇಕಿತ್ತು. </p>



<p>&#8220;ಗೌರವದ ಸಂಕೇತವಾಗಿ, ಈ ದುಃಖದ ಸಮಯದಲ್ಲಿ ಕಾನ್ಪುರದಲ್ಲಿ ಯಾವುದೇ ಆಚರಣೆ ಅಥವಾ ಔಪಚಾರಿಕ ಸಾರ್ವಜನಿಕ ಕಾರ್ಯಕ್ರಮವನ್ನು ಮುಂದೂಡುವುದು ಸೂಕ್ತವೆಂದು ಪರಿಗಣಿಸಲಾಗಿದೆ&#8221; ಎಂದು ಪಿಎಂಒ ಉಲ್ಲೇಖಿಸಿ ವರದಿ ತಿಳಿಸಿದೆ.<br><br>ಆದರೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಹಾರಕ್ಕೆ ಭೇಟಿ ನೀಡಿದ್ದಾರೆ. ಅವರು ಮಧುಬನಿಗೆ ಪ್ರಯಾಣಿಸಲಿದ್ದು, ಬೆಳಿಗ್ಗೆ 11:45 ರ ಸುಮಾರಿಗೆ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನು ಗುರುತಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪಿಐಬಿಯ ಪೋರ್ಟಲ್‌ನಲ್ಲಿ ಪಿಎಂಒ ಬಿಡುಗಡೆ ಮಾಡಿತು.</p>



<p>ಅವರು 13,480 ಕೋಟಿ ರುಪಾಯಿಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿ,  ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ.<br><br>ಬಿಹಾರದ ಮಧುಬನಿಯಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಮೋದಿ, &#8220;ನ್ಯಾಯ ದೊರಕುವಂತೆ ನೋಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು, ಇಡೀ ರಾಷ್ಟ್ರವು ದೃಢನಿಶ್ಚಯದಿಂದ ದೃಢವಾಗಿದೆ&#8221; ಎಂದು ಹೇಳಿದರು.</p>



<p>ಜಮ್ಮು ಮತ್ತು ಕಾಶ್ಮೀರ ದಾಳಿಯ ಬಗ್ಗೆ ಹಿಂದಿಯಲ್ಲಿ ಮಾತನಾಡಿದ ಪ್ರಧಾನಿ, ಇದ್ದಕ್ಕಿದ್ದಂತೆ ಇಂಗ್ಲಿಷ್‌ಗೆ ಬದಲಾಯಿಸಿದರು ಮತ್ತು &#8220;ಇಂದು, ಬಿಹಾರದ ಮಣ್ಣಿನಿಂದ, ನಾನು ಇಡೀ ಜಗತ್ತಿಗೆ ಇದನ್ನು ಹೇಳುತ್ತೇನೆ, ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನು ಗುರುತಿಸುತ್ತದೆ, ಪತ್ತೆಹಚ್ಚುತ್ತದೆ ಮತ್ತು ಶಿಕ್ಷಿಸುತ್ತದೆ. ನಾವು ಅವರನ್ನು ಭೂಮಿಯ ಎಲ್ಲೇ ಹೋದರೂ ಬೆನ್ನಟ್ಟುತ್ತೇವೆ&#8221; ಎಂದು ಹೇಳಿದರು.</p>



<p>&#8220;ಭಾರತದ ಚೈತನ್ಯವು ಭಯೋತ್ಪಾದನೆಯಿಂದ ಎಂದಿಗೂ ಮುರಿಯುವುದಿಲ್ಲ… ಭಯೋತ್ಪಾದನೆಗೆ ಶಿಕ್ಷೆಯಾಗದೆ ಉಳಿಯುವುದಿಲ್ಲ. ನ್ಯಾಯ ದೊರಕಿಸಿಕೊಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು&#8221; ಎಂದು ಪ್ರಧಾನಿ ಮೋದಿ ಜಗತ್ತಿಗೆ ತಿಳಿಸಿದರು &#8220;ಇಡೀ ರಾಷ್ಟ್ರವು ಈ ಸಂಕಲ್ಪದಲ್ಲಿ ದೃಢವಾಗಿದೆ&#8221; ಎಂದು ಅವರು ಹಿಂದಿ ಹೃದಯಭಾಗದಲ್ಲಿ ಹೇಳಿದರು.</p>



<p>ಜಗತ್ತಿಗೆ ಸ್ಪಷ್ಟ ಸಂದೇಶವನ್ನು ನೀಡಿದ ಪ್ರಧಾನಿ ಮೋದಿ, &#8220;ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬರೂ ನಮ್ಮೊಂದಿಗಿದ್ದಾರೆ&#8221; ಎಂದು ಹೇಳಿದರು. ಇಂಗ್ಲಿಷ್‌ನಲ್ಲಿ ನಡೆದ ಅಪರೂಪದ ಭಾಷಣವು ಭಾರತೀಯರಿಗೆ ಅಲ್ಲ, ಜಗತ್ತಿಗೆ ಸ್ಪಷ್ಟವಾಗಿ ಸಂದೇಶವಾಗಿತ್ತು. &#8216;ನಮ್ಮೊಂದಿಗೆ ನಿಂತ ಜನರಿಗೆ, ದೇಶಗಳ ನಾಯಕರಿಗೆ ನಾನು ಧನ್ಯವಾದ ಹೇಳುತ್ತೇನೆ&#8221; ಎಂದು ಪ್ರಧಾನಿ ಮಧುಬನಿಯಲ್ಲಿ ಹೇಳಿದರು.</p>



<p>ಇಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಮೋದಿ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.</p>



<p>ದಾಳಿಯ ಸುದ್ದಿ ತಿಳಿದ ನಂತರ ಮೋದಿ ಅವರು ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ನಿನ್ನೆ ಬೆಳಿಗ್ಗೆ ಭಾರತಕ್ಕೆ ಮರಳಿದರು. ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಸಭೆ ನಡೆಸಿದ್ದಾರೆಂದು ವರದಿಯಾಗಿದೆ.</p>
]]></content:encoded>
					
		
		
			</item>
		<item>
		<title>ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸಿದರೆ ಏನಾಗುತ್ತದೆ?</title>
		<link>https://peepalmedia.com/what-will-happen-if-india-stop-the-indus-river-water-treaty/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 24 Apr 2025 09:47:53 +0000</pubDate>
				<category><![CDATA[ದೇಶ]]></category>
		<category><![CDATA[bjp]]></category>
		<category><![CDATA[Jammu & Kashmir]]></category>
		<category><![CDATA[jammu and kashmir]]></category>
		<category><![CDATA[Journalism]]></category>
		<category><![CDATA[Kathua]]></category>
		<category><![CDATA[media]]></category>
		<category><![CDATA[National conference]]></category>
		<category><![CDATA[Pahalgam]]></category>
		<category><![CDATA[Pahalgam terror attack]]></category>
		<category><![CDATA[Pakistan]]></category>
		<category><![CDATA[sindhu river]]></category>
		<category><![CDATA[Udhampur]]></category>
		<guid isPermaLink="false">https://peepalmedia.com/?p=57803</guid>

					<description><![CDATA[26 ಮಂದಿ ಅಮಾಯಕರ ಸಾವಿಗೆ ಕಾರಣವಾ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು 1960 ರ ಸಿಂಧೂ ನದಿ ನೀರು ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸುವುದಾಗಿ ಘೋಷಿಸಿತು. ಭಾರತವು IWT ಹೇಗೆ ಸ್ಥಗಿತಗೊಳಿಸಲಿದೆ? ಭಾರತದ ಬಳಿ ಎರಡು ಮಾರ್ಗಗಳಿವೆ. ಕ ಮೊದಲನೆಯದು ಪಶ್ಚಿಮ ನದಿಗಳಲ್ಲಿ (ಸಿಂಧೂ, ಝೀಲಂ ಮತ್ತು ಚೆನಾಬ್) ನಿಯಂತ್ರಿತ ನೀರಿನ ಹರಿವನ್ನು ನಿಲ್ಲಿಸುವುದು &#8211; ಈ ನದಿಗಳ ಮೇಲಿನ ಅಣೆಕಟ್ಟುಗಳು ಮತ್ತು ಜಲವಿದ್ಯುತ್ ಯೋಜನೆಗಳಿಂದ ನೀರನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸುವುದು. ಈ ನದಿಗಳ ಮೂಲಕ ನೈಸರ್ಗಿಕ [&#8230;]]]></description>
										<content:encoded><![CDATA[
<p>26 ಮಂದಿ ಅಮಾಯಕರ ಸಾವಿಗೆ ಕಾರಣವಾ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು 1960 ರ ಸಿಂಧೂ ನದಿ ನೀರು ಒಪ್ಪಂದವನ್ನು (ಐಡಬ್ಲ್ಯೂಟಿ) ಸ್ಥಗಿತಗೊಳಿಸುವುದಾಗಿ ಘೋಷಿಸಿತು.</p>



<p><strong>ಭಾರತವು IWT ಹೇಗೆ ಸ್ಥಗಿತಗೊಳಿಸಲಿದೆ?</strong></p>



<p>ಭಾರತದ ಬಳಿ ಎರಡು ಮಾರ್ಗಗಳಿವೆ. ಕ</p>



<p>ಮೊದಲನೆಯದು ಪಶ್ಚಿಮ ನದಿಗಳಲ್ಲಿ (ಸಿಂಧೂ, ಝೀಲಂ ಮತ್ತು ಚೆನಾಬ್) ನಿಯಂತ್ರಿತ ನೀರಿನ ಹರಿವನ್ನು ನಿಲ್ಲಿಸುವುದು &#8211; ಈ ನದಿಗಳ ಮೇಲಿನ ಅಣೆಕಟ್ಟುಗಳು ಮತ್ತು ಜಲವಿದ್ಯುತ್ ಯೋಜನೆಗಳಿಂದ ನೀರನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸುವುದು. ಈ ನದಿಗಳ ಮೂಲಕ ನೈಸರ್ಗಿಕ ಹರಿವು ಮುಂದುವರಿಯುತ್ತದೆ, ಆದರೆ ಪಾಕಿಸ್ತಾನದ ನೀರಾವರಿ ಮತ್ತು ಕುಡಿಯುವ ನೀರಿಗೆ ನಿರ್ಣಾಯಕವಾದ ನಿಯಂತ್ರಿತ ಬಿಡುಗಡೆಗಳು ನಿಲ್ಲಬಹುದು. ಉದಾಹರಣೆಗೆ, ಚೆನಾಬ್‌ನಲ್ಲಿರುವ ಬಾಗ್ಲಿಹಾರ್ ಅಣೆಕಟ್ಟು ನೀರನ್ನು ಉಳಿಸಿಕೊಳ್ಳಬಹುದು, ಇದು ಪಾಕಿಸ್ತಾನಕ್ಕೆ ಕೆಳಮುಖ ಹರಿವನ್ನು ಕಡಿಮೆ ಮಾಡುತ್ತದೆ.</p>



<p>ಎರಡನೆಯದು, ಭಾರತವು ಪಶ್ಚಿಮ ನದಿಗಳಲ್ಲಿ ಪಾಕಲ್ ದುಲ್ (1,000 ಮೆಗಾವ್ಯಾಟ್) ಮತ್ತು ಚೆನಾಬ್ ನದಿಯ ಸಾವಲ್ಕೋಟ್ (1,856 ಮೆಗಾವ್ಯಾಟ್) ಅಣೆಕಟ್ಟುಗಳಂತಹ ಸಂಗ್ರಹಣಾ ಯೋಜನೆಗಳನ್ನು ತ್ವರಿತವಾಗಿ ಪ್ರಾರಂಭಿಸುವ ಮೂಲಕ ಮೂಲಸೌಕರ್ಯ ಅಭಿವೃದ್ಧಿಯನ್ನು ವೇಗಗೊಳಿಸಬಹುದು. ಇದು ಭವಿಷ್ಯದಲ್ಲಿ ಚೆನಾಬ್‌ನಲ್ಲಿ ನೀರಿನ ಹರಿವಿನ ಮೇಲಿನ ನಿಯಂತ್ರಣವನ್ನು ಹೆಚ್ಚಿಸಲು ಭಾರತಕ್ಕೆ ಅನುವು ಮಾಡಿಕೊಡುತ್ತದೆ.</p>



<p>ಇದರ ಜೊತೆಗೆ, IWT ಅಡಿಯಲ್ಲಿ ತಾಂತ್ರಿಕ ಸಭೆಗಳು, ದತ್ತಾಂಶ ಹಂಚಿಕೆ ಮತ್ತು ವಿವಾದ-ಪರಿಹಾರ ಕಾರ್ಯವಿಧಾನಗಳನ್ನು ಸ್ಥಗಿತಗೊಳಿಸಬಹುದು. ನೀರಿನ ಹರಿವಿನ ಬದಲಾವಣೆಗಳು ಅಥವಾ ಯೋಜನಾ ವಿನ್ಯಾಸಗಳ ಬಗ್ಗೆ ಭಾರತವು ಇನ್ನು ಮುಂದೆ ಪಾಕಿಸ್ತಾನಕ್ಕೆ ತಿಳಿಸಬೇಕಾಗಿಲ್ಲ.</p>



<p><strong>ನಿಯಂತ್ರಿತ ಮತ್ತು ನೈಸರ್ಗಿಕ ಹರಿವಿನ ನಡುವಿನ ವ್ಯತ್ಯಾಸವೇನು?</strong></p>



<p>IWT ಸಂದರ್ಭದಲ್ಲಿ ನೈಸರ್ಗಿಕ ಹರಿವು ಮತ್ತು ನಿಯಂತ್ರಿತ ಹರಿವಿನ ನಡುವಿನ ವ್ಯತ್ಯಾಸವೆಂದರೆ ನೀರಿನ ಚಲನೆಯು ಮಾನವ ಹಸ್ತಕ್ಷೇಪದಿಂದ ರೂಪುಗೊಳ್ಳುತ್ತದೆಯೇ ಅಥವಾ ಪ್ರಕೃತಿಯಿಂದ ನಿರ್ಧರಿಸಲ್ಪಟ್ಟಂತೆ ಅದರ ಮಾರ್ಗವನ್ನು ಅನುಸರಿಸಲು ಬಿಡಲಾಗುತ್ತದೆಯೇ ಎಂಬುದರಲ್ಲಿದೆ. ನದಿಗಳ ಮೇಲಿನ ಭಾರತದ ನಿಯಂತ್ರಣವು ಪಾಕಿಸ್ತಾನಕ್ಕೆ ನೈಸರ್ಗಿಕ ಹರಿವಿನ ಹಕ್ಕಿನ ಪಾಲನ್ನು ಕಸಿದುಕೊಳ್ಳುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು IWT ಅನ್ನು ಮಾಡಲಾಗಿದೆ.</p>



<p>ನೈಸರ್ಗಿಕ ಹರಿವು ಎಂದರೆ, ನದಿಯ ಮೇಲೆ ಮಾನವ ನಿರ್ಮಿತ ತಿರುವುಗಳು, ತಡೆಗಳು ಅಥವಾ ನಿಯಂತ್ರಣಗಳು ಇಲ್ಲದಿದ್ದರೆ, ಒಂದು ನಿರ್ದಿಷ್ಟ ಅವಧಿಯಲ್ಲಿ ನದಿಯ ಮೂಲಕ ಹಾದುಹೋಗುವ ನೀರಿನ ಪ್ರಮಾಣ. ಇದು ಮಳೆ, ಹಿಮನದಿ ಕರಗುವಿಕೆ ಮತ್ತು ಅಂತರ್ಜಲ ಸೋರಿಕೆಯಿಂದ ಉಂಟಾಗುವ ನೇರ ಹರಿವನ್ನು ಒಳಗೊಂಡಿರುತ್ತದೆ, ಇದರ ಮೇಲೆ ಮಾನವ ನಿರ್ಮಿತ ಮೂಲಸೌಕರ್ಯ ಯೋಜನೆಗಳು ಇರುವುದಿಲ್ಲ. ಭಾರತವು ಅಣೆಕಟ್ಟುಗಳು, ಜಲಾಶಯಗಳನ್ನು ನಿರ್ಮಿಸದಿದ್ದರೆ ಅಥವಾ ನದಿಯ ಪಥ ಅಥವಾ ಪರಿಮಾಣವನ್ನು ಬದಲಾಯಿಸಲು ಯಾವುದೇ ಚಟುವಟಿಕೆಯನ್ನು ಕೈಗೊಳ್ಳದಿದ್ದರೆ ಪಶ್ಚಿಮ ನದಿಗಳಿಂದ ಪಾಕಿಸ್ತಾನವನ್ನು ತಲುಪುವ ನೀರು ಇದು.</p>



<p>ನಿಯಂತ್ರಿತ ಹರಿವು ಎಂದರೆ ಅಣೆಕಟ್ಟುಗಳು, ಜಲಾಶಯಗಳು, ಅಣೆಕಟ್ಟುಗಳು ಮತ್ತು ದ್ವಾರಗಳಂತಹ ಮಾನವ ನಿರ್ಮಿತ ರಚನೆಗಳ ಮೂಲಕ ನಿಯಂತ್ರಿಸಲ್ಪಡುವ ಅಥವಾ ನಿರ್ವಹಿಸಲ್ಪಡುವ ನೀರಿನ ಚಲನೆ. ಇದು ಕವಾಟಗಳನ್ನು ತೆರೆಯುವುದು ಅಥವಾ ಮುಚ್ಚುವುದು, ಸ್ಪಿಲ್‌ವೇಗಳನ್ನು ಹೊಂದಿಸುವುದು ಅಥವಾ ನೀರಿನ ಕೆಳಭಾಗದ ಸಮಯ ಮತ್ತು ಪ್ರಮಾಣವನ್ನು ನಿಯಂತ್ರಿಸಲು ಸಂಗ್ರಹದಿಂದ ನೀರನ್ನು ಬಿಡುಗಡೆ ಮಾಡುವುದನ್ನು ಒಳಗೊಂಡಿರುತ್ತದೆ. IWT ಅಡಿಯಲ್ಲಿ, ಪಶ್ಚಿಮ ನದಿಗಳಲ್ಲಿ ಕೆಲವು ಜಲವಿದ್ಯುತ್ ಮತ್ತು ನೀರಾವರಿ ಯೋಜನೆಗಳನ್ನು ನಿರ್ಮಿಸಲು ಭಾರತಕ್ಕೆ ಅವಕಾಶವಿದೆ, ಆದರೆ ಇವು &#8220;ನದಿ ಹರಿಯುವ&#8221; ಯೋಜನೆಗಳಾಗಿರಬೇಕು. ಇದರರ್ಥ ಅವರು ತಾತ್ಕಾಲಿಕವಾಗಿ ವಿದ್ಯುತ್ ಉತ್ಪಾದನೆಗಾಗಿ ನೀರನ್ನು ಹಿಡಿದಿಟ್ಟುಕೊಳ್ಳಬಹುದು ಅಥವಾ ತಿರುಗಿಸಬಹುದು ಆದರೆ ಪಾಕಿಸ್ತಾನವನ್ನು ತಲುಪುತ್ತಿರುವ ಒಟ್ಟು ಹರಿವನ್ನು ಗಮನಾರ್ಹವಾಗಿ ಬದಲಾಯಿಸಬಾರದು ಅಥವಾ ಕಡಿಮೆ ಮಾಡಬಾರದು.</p>



<p><strong>ಐಡಬ್ಲ್ಯೂಟಿ ಅಡಿಯಲ್ಲಿ ಪಾಕಿಸ್ತಾನಕ್ಕೆ ನೀರಿನ ಹಂಚಿಕೆ ಎಷ್ಟು?</strong></p>



<p>ಸಿಂಧೂ, ಝೀಲಂ ಮತ್ತು ಚೆನಾಬ್ ನದಿಗಳಲ್ಲಿ, ವರ್ಷಕ್ಕೆ 135 ಸರಾಸರಿ ವಾರ್ಷಿಕ ಹರಿವು ಅಥವಾ MAF ಅನ್ನು ಪಾಕಿಸ್ತಾನಕ್ಕೆ ಹಂಚಿಕೆ ಮಾಡಲಾಗಿದೆ, ಆದರೆ ಭಾರತವು ಅವುಗಳನ್ನು ಬಗ್ಲಿಹಾರ್ ಅಣೆಕಟ್ಟಿನಂತಹ ಅನಿಯಮಿತ ರನ್-ಆಫ್-ದಿ-ನದಿ ಜಲವಿದ್ಯುತ್ ಯೋಜನೆಗಳಿಗೆ, 701,000 ಎಕರೆಗಳವರೆಗೆ ನೀರಾವರಿಗಾಗಿ ಮತ್ತು 3.6 MAF ಗೆ ಸೀಮಿತವಾದ ಸಂಗ್ರಹಣೆಗಾಗಿ ಬಳಸಬಹುದು. ಒಪ್ಪಂದವು ನೀರಿನ ಹರಿವಿನ ದತ್ತಾಂಶ ವಿನಿಮಯವನ್ನು ಕಡ್ಡಾಯಗೊಳಿಸುತ್ತದೆ, ಆದರೆ ಬಿತ್ತನೆ ಪೂರ್ವ ಋತುವಿನಂತಹ ನಿರ್ಣಾಯಕ ಅವಧಿಗಳಲ್ಲಿ ಭಾರತ ನೀರನ್ನು ತಡೆಹಿಡಿಯುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದಾಗ ವಿವಾದಗಳು ಹುಟ್ಟಿಕೊಳ್ಳುತ್ತವೆ.</p>



<p>ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಲ್ಲಿ 13.4 ಲಕ್ಷ ಎಕರೆ ನೀರಾವರಿ ಅಭಿವೃದ್ಧಿಗಾಗಿ ಐಡಬ್ಲ್ಯೂಟಿ ಭಾರತಕ್ಕೆ ಅವಕಾಶ ನೀಡುತ್ತದೆ. ಆದಾಗ್ಯೂ, ಪ್ರಸ್ತುತ, ಈ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೇವಲ 6.42 ಲಕ್ಷ ಎಕರೆಗಳಿಗೆ ಮಾತ್ರ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದಲ್ಲದೆ, ಭಾರತವು ಪೂರ್ವ ನದಿಗಳಿಂದ ಹಂಚಿಕೆಯಾದ 33 ಎಂಎಎಫ್‌ನಲ್ಲಿ 90% ಅನ್ನು ಮಾತ್ರ ಬಳಸುತ್ತದೆ. ಭಾರತದ ಕಡೆಯ ಅಪೂರ್ಣ ಮೂಲಸೌಕರ್ಯದಿಂದಾಗಿ ರಾವಿ ನದಿಯಿಂದ 2 ಎಂಎಎಫ್ ಮತ್ತು ಸಟ್ಲೆಜ್/ಬಿಯಾಸ್ ವ್ಯವಸ್ಥೆಗಳಿಂದ 5.5 ಎಂಎಎಫ್ ಬಳಕೆಯಾಗದ ಹರಿವು ಐತಿಹಾಸಿಕವಾಗಿ ಪಾಕಿಸ್ತಾನಕ್ಕೆ ಹರಿಯುತ್ತಿದೆ. </p>



<p><strong>IWT ರದ್ದು ಮಾಡಿದರೆ ಏನಾಗುತ್ತದೆ? </strong></p>



<p>ವಾರ್ಷಿಕ ಸರಾಸರಿ 135 MAF ನೀರಿನ ಹರಿವು ಹಿಮನದಿ ಕರಗುವಿಕೆ ಮತ್ತು ಮಾನ್ಸೂನ್ ಮಳೆಯಿಂದ ಹುಟ್ಟುತ್ತದೆ ಮತ್ತು ಒಪ್ಪಂದದ ಅಮಾನತು ಪರಿಣಾಮ ಬೀರುವುದಿಲ್ಲ. ಭಾರತದ ಅಣೆಕಟ್ಟುಗಳು ಮತ್ತು ಸುಮಾರು 3.6 MAF ನೀರಿನ ಸಂಗ್ರಹ ಸಾಮರ್ಥ್ಯದ ಬ್ಯಾರೇಜ್‌ಗಳಿಂದ ನಿಯಂತ್ರಿತ ಬಿಡುಗಡೆಗಳು ಶುಷ್ಕ ಋತುಗಳಲ್ಲಿ ನೈಸರ್ಗಿಕ ಹರಿವನ್ನು ಪೂರೈಸುತ್ತವೆ. ಒಪ್ಪಂದವನ್ನು ಸ್ಥಗಿತಗೊಳಿಸುವುದರಿಂದ ಭಾರತವು ಈ ನೀರಿನ ಬಿಡುಗಡೆಯನ್ನು ನಿಲ್ಲಿಸಲು ಅನುವು ಮಾಡಿಕೊಡುತ್ತದೆ, ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಅಂತಹ ನೀರಿನ ಸಂಗ್ರಹ ಮೂಲಸೌಕರ್ಯವು ಅಸ್ತಿತ್ವದಲ್ಲಿಲ್ಲ ಅಥವಾ ಭಾರತವು ಆ ನಿಯಂತ್ರಣವನ್ನು ಚಲಾಯಿಸಲು ಸಾಧ್ಯವಿಲ್ಲ.  ಬಾಗ್ಲಿಹಾರ್ ಅಣೆಕಟ್ಟಿನಲ್ಲಿ ಈ ಸಾಮರ್ಥ್ಯದ 1.5 MAF ಮಾತ್ರ ಅಸ್ತಿತ್ವದಲ್ಲಿರಬಹುದು. ಭಾರತವು ಪಶ್ಚಿಮ ನದಿಗಳಿಂದ ತನ್ನ ಅಭಿವೃದ್ಧಿ ಹೊಂದಿದ ಸಂಗ್ರಹ ಸಾಮರ್ಥ್ಯದವರೆಗೆ ಮಾತ್ರ ನೀರನ್ನು ತಡೆಹಿಡಿಯಬಹುದು. ಈ ನೀರನ್ನು ಕಡಿಮೆ ಋತುಗಳಲ್ಲಿ ತಾತ್ಕಾಲಿಕವಾಗಿ ತಡೆಹಿಡಿಯಬಹುದು ಆದರೆ ಅಂತಿಮವಾಗಿ ಕೆಳಮುಖವಾಗಿ ಬಿಡುಗಡೆ ಮಾಡಬೇಕು. ಹೆಚ್ಚುವರಿ ಸಂಗ್ರಹ ಮೂಲಸೌಕರ್ಯವಿಲ್ಲದೆ, ಭಾರತವು ಹೆಚ್ಚಿನ ನೀರನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಭಾರತವು ತನ್ನ ಪೂರ್ಣ ಅನುಮತಿಸಲಾದ ಸಂಗ್ರಹವನ್ನು (3.6 MAF) ನಿರ್ಮಿಸಿದರೂ ಸಹ, ಅದು ಪಾಕಿಸ್ತಾನಕ್ಕೆ ಹರಿವನ್ನು ತಾತ್ಕಾಲಿಕವಾಗಿ ನಿಯಂತ್ರಿಸಬಹುದು ಮತ್ತು ವಿಳಂಬಗೊಳಿಸಬಹುದು, ವಿಶೇಷವಾಗಿ ನಿರ್ಣಾಯಕ ಕೃಷಿ ಅವಧಿಗಳಲ್ಲಿ, ಆದರೆ ಈ ನೀರನ್ನು ಶಾಶ್ವತವಾಗಿ ಬೇರೆಡೆಗೆ ತಿರುಗಿಸಲು ಅಥವಾ ಸೇವಿಸಲು ಸಾಧ್ಯವಿಲ್ಲ.</p>



<p>ಪಾಕಿಸ್ತಾನಕ್ಕೆ ಇರುವ ಸವಾಲು ಸೀಮಿತ ನೀರಿನ ಸಂಗ್ರಹ ಸಾಮರ್ಥ್ಯ. ಮಂಗ್ಲಾ ಮತ್ತು ತರ್ಬೆಲಾದಂತಹ ಪ್ರಮುಖ ಅಣೆಕಟ್ಟುಗಳು ಒಟ್ಟು 14.4 MAF ನಷ್ಟು ನೇರ ಸಂಗ್ರಹವನ್ನು ಹೊಂದಿವೆ, ಇದು IWT ಅಡಿಯಲ್ಲಿ ದೇಶದ ವಾರ್ಷಿಕ ಹಕ್ಕಿನ ಕೇವಲ 10% ರಷ್ಟಿದೆ. ಕಡಿಮೆಯಾದ ನೀರಿನ ಹರಿವು ಅಥವಾ ಕಾಲೋಚಿತ ವ್ಯತ್ಯಾಸದ ಸಮಯದಲ್ಲಿ, ಸಂಗ್ರಹಣೆಯಲ್ಲಿನ ಈ ಕೊರತೆಯು ಪಾಕಿಸ್ತಾನವನ್ನು ತೀವ್ರವಾಗಿ ದುರ್ಬಲಗೊಳಿಸುತ್ತದೆ.</p>



<p><strong>ಇದರಿಂದ ನಿಜವಾಗಿಯೂ ಪಾಕಿಸ್ತಾನಕ್ಕೆ ಹಾನಿ ಆಗಬಹುದೇ?</strong></p>



<p>ಪಶ್ಚಿಮ ನದಿಗಳು ತಮ್ಮ ಹರಿವಿನ 60-70% ರಷ್ಟು ಹಿಮನದಿ ಕರಗುವಿಕೆಯಿಂದ ಮತ್ತು 30-40% ರಷ್ಟು ಮಾನ್ಸೂನ್ ಮಳೆಯಿಂದ ಪಡೆಯುತ್ತವೆ, ಇದನ್ನು ಭಾರತ ನಿಯಂತ್ರಿಸಲು ಸಾಧ್ಯವಿಲ್ಲ. ಸಹಕಾರ ಸ್ಥಗಿತಗೊಂಡಿದ್ದರೂ ಸಹ, ವಾರ್ಷಿಕವಾಗಿ 131.4 MAF ನೈಸರ್ಗಿಕ ಹರಿವು ಪಾಕಿಸ್ತಾನವನ್ನು ತಲುಪುತ್ತಲೇ ಇರುತ್ತದೆ. ಮಾನ್ಸೂನ್ ಋತುವಿನಲ್ಲಿ (ಜುಲೈ-ಸೆಪ್ಟೆಂಬರ್), ಮೂರು ನದಿಗಳಲ್ಲಿನ ಹರಿವು 5,800 m³/s (ಪ್ರತಿ ಸೆಕೆಂಡಿಗೆ ಘನ ಮೀಟರ್) ಮೀರುತ್ತದೆ. ಹೀಗಾಗಿ ಒಪ್ಪಂದವನ್ನು ರದ್ದು ಮಾಡಿದರೆ ಹೇಳುವಂತ ಪರಿಣಾಮ ಏನೂ ಆಗದು. ಆದ್ದರಿಂದ ತಕ್ಷಣದ ಪರಿಣಾಮವನ್ನು ಹೇಳುವುದು ಕಷ್ಟ, ಆದರೆ  2025 ರ ಬೇಸಿಗೆಯು ಬೆಳೆ ಬೆಳೆಯುವ ಋತುಗಳಲ್ಲಿ ಕಡಿಮೆ ಹರಿವನ್ನು ನಿರ್ವಹಿಸುವ ಪಾಕಿಸ್ತಾನದ ಸಾಮರ್ಥ್ಯವನ್ನು ಪರೀಕ್ಷಿಸಬಹುದು.</p>



<p>ಭಾರತವು ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸಿದರೆ ದೀರ್ಘಾವಧಿಯಲ್ಲಿ ಪರಿಣಾಮಗಳು ಗೋಚರಿಸುತ್ತವೆ. ಸಂಗ್ರಹಣಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಮೂಲಕ, ಭಾರತವು ಪಶ್ಚಿಮ ನದಿಗಳ ಮೇಲೆ ಶಾಶ್ವತ ನಿಯಂತ್ರಣವನ್ನು ಪಡೆಯಬಹುದು, ಇದು ಪಾಕಿಸ್ತಾನದ ನೀರಿನ ಒತ್ತಡವನ್ನು ಹೆಚ್ಚಿಸುತ್ತದೆ.</p>



<p><strong>ಕೊನೆಯದಾಗಿ, ಇದೆಲ್ಲದರ ಅರ್ಥವೇನು?</strong></p>



<p>ಪಾಕಿಸ್ತಾನಕ್ಕೆ ನೀರನ್ನು ನಿರ್ಬಂಧಿಸುವ ಭಾರತದ ಸಾಮರ್ಥ್ಯವು ನೈಸರ್ಗಿಕ ಜಲವಿಜ್ಞಾನದ ಚಕ್ರಗಳು, ಮೂಲಸೌಕರ್ಯ ಅಂತರಗಳು ಮತ್ತು ಒಪ್ಪಂದ ವಿನ್ಯಾಸ ನಿಯಮಗಳಿಂದ ಸೀಮಿತವಾಗಿದೆ. ನೈಸರ್ಗಿಕ ಭೌಗೋಳಿಕತೆ ಮತ್ತು ಒಪ್ಪಂದದ ಮಿತಿಗಳಿಂದಾಗಿ ಸಿಂಧೂ ವ್ಯವಸ್ಥೆಯ ಬಹುಪಾಲು ನೀರು ಕಾಲೋಚಿತ ವ್ಯತ್ಯಾಸಗಳೊಂದಿಗೆ ಪಾಕಿಸ್ತಾನಕ್ಕೆ ಹರಿಯುತ್ತಲೇ ಇರುತ್ತದೆ.</p>



<p>ಪಶ್ಚಿಮ ನದಿಗಳಿಂದ, ನಿಯಂತ್ರಿತ ಹರಿವನ್ನು (3.6 MAF) ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು, ಆದರೆ ಪಾಕಿಸ್ತಾನಕ್ಕೆ ತಲುಪುವ ಹೆಚ್ಚಿನ ನೀರು (131.4 MAF) ಸ್ವಾಭಾವಿಕವಾಗಿ ಹರಿಯುತ್ತದೆ ಮತ್ತು ಭಾರತದ ನಿಯಂತ್ರಣವನ್ನು ಮೀರಿರುತ್ತದೆ. ಸಿಂಧುವಿನ ನೀರು ಪಾಕಿಸ್ತಾನಕ್ಕೆ ಹೋಗುವುದನ್ನು ಸಂಪೂರ್ಣವಾಗಿ ತಡೆಯಲು ಭಾರತ ಬೃಹತ್ ಮೂಲಸೌಕರ್ಯ ಹೂಡಿಕೆಯನ್ನು ಮಾಡಬೇಕಾದ ಅಗತ್ಯವಿರುತ್ತದೆ.</p>
]]></content:encoded>
					
		
		
			</item>
		<item>
		<title>ಜಮ್ಮು ಕಾಶ್ಮೀರ: ಉಗ್ರರೊಂದಿಗೆ ನಡೆದ ಗುಂಡಿನ ಘರ್ಷಣೆಯಲ್ಲಿ ಯೋಧ ಝಂಟು ಅಲಿ ಶೇಖ್ ಹುತಾತ್ಮ</title>
		<link>https://peepalmedia.com/jammu-and-kashmir-soldier-zantu-ali-sheikh-martyred-in-gunfight-with-terrorists/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 24 Apr 2025 09:28:09 +0000</pubDate>
				<category><![CDATA[ದೇಶ]]></category>
		<category><![CDATA[bjp]]></category>
		<category><![CDATA[Jammu & Kashmir]]></category>
		<category><![CDATA[jammu and kashmir]]></category>
		<category><![CDATA[Journalism]]></category>
		<category><![CDATA[Kathua]]></category>
		<category><![CDATA[media]]></category>
		<category><![CDATA[National conference]]></category>
		<category><![CDATA[Pahalgam]]></category>
		<category><![CDATA[Pahalgam terror attack]]></category>
		<category><![CDATA[Udhampur]]></category>
		<guid isPermaLink="false">https://peepalmedia.com/?p=57793</guid>

					<description><![CDATA[ಶ್ರೀನಗರ:&#160;ಜಮ್ಮು ವಿಭಾಗದ ಉಧಂಪುರ ಜಿಲ್ಲೆಯಲ್ಲಿ ಗುರುವಾರ, ಏಪ್ರಿಲ್ 24 ರಂದು ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಹುತಾತ್ಮರನ್ನು 6 ಪ್ಯಾರಾಚೂಟ್ ರೆಜಿಮೆಂಟ್ (ವಿಶೇಷ ಪಡೆ) ನ ಸೈನಿಕ ಝಂಟು ಅಲಿ ಶೇಖ್ ಎಂದು ಗುರುತಿಸಲಾಗಿದೆ. ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಆರೋಗ್ಯ ರೆಸಾರ್ಟ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ನಾಲ್ಕರಿಂದ ಐದು ಜನರ ಗುಂಪಿನಿಂದ ಕನಿಷ್ಠ 25 ಪ್ರವಾಸಿಗರು ಮತ್ತು ಸ್ಥಳೀಯ ಕಾಶ್ಮೀರಿ ಕುದುರೆ ಸೇವಕನನ್ನು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ ಈ ಎನ್‌ಕೌಂಟರ್ ನಡೆದಿದೆ. ಉಧಂಪುರದ [&#8230;]]]></description>
										<content:encoded><![CDATA[
<p><strong>ಶ್ರೀನಗರ:</strong>&nbsp;ಜಮ್ಮು ವಿಭಾಗದ ಉಧಂಪುರ ಜಿಲ್ಲೆಯಲ್ಲಿ ಗುರುವಾರ, ಏಪ್ರಿಲ್ 24 ರಂದು ಉಗ್ರರೊಂದಿಗಿನ ಗುಂಡಿನ ಚಕಮಕಿಯಲ್ಲಿ ಸೇನಾ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಹುತಾತ್ಮರನ್ನು 6 ಪ್ಯಾರಾಚೂಟ್ ರೆಜಿಮೆಂಟ್ (ವಿಶೇಷ ಪಡೆ) ನ ಸೈನಿಕ ಝಂಟು ಅಲಿ ಶೇಖ್ ಎಂದು ಗುರುತಿಸಲಾಗಿದೆ.</p>



<p>ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಆರೋಗ್ಯ ರೆಸಾರ್ಟ್‌ನ ಬೈಸರನ್ ಹುಲ್ಲುಗಾವಲಿನಲ್ಲಿ ನಾಲ್ಕರಿಂದ ಐದು ಜನರ ಗುಂಪಿನಿಂದ ಕನಿಷ್ಠ 25 ಪ್ರವಾಸಿಗರು ಮತ್ತು ಸ್ಥಳೀಯ ಕಾಶ್ಮೀರಿ ಕುದುರೆ ಸೇವಕನನ್ನು ಗುಂಡಿಕ್ಕಿ ಕೊಂದ ಎರಡು ದಿನಗಳ ನಂತರ ಈ ಎನ್‌ಕೌಂಟರ್ ನಡೆದಿದೆ.</p>



<p>ಉಧಂಪುರದ ದುಡು-ಬಸಂತ್‌ಗಢ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಉಗ್ರರು ಇರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು ಎಂದು ಸೇನೆಯ ಜಮ್ಮು ಮೂಲದ ವೈಟ್ ನೈಟ್ ಕಾರ್ಪ್ಸ್ ವಕ್ತಾರರು ತಿಳಿಸಿದ್ದಾರೆ.</p>



<p>&#8220;ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆಯನ್ನು ಇಂದು ಉಧಂಪುರದ ಬಸಂತ್‌ಗಢದಲ್ಲಿ ಪ್ರಾರಂಭಿಸಲಾಯಿತು. ಸಂಪರ್ಕವನ್ನು ಸ್ಥಾಪಿಸಲಾಯಿತು ಮತ್ತು ಭೀಕರ ಗುಂಡಿನ ಚಕಮಕಿ ನಡೆಯಿತು. ನಮ್ಮ ಧೈರ್ಯಶಾಲಿಗಳಲ್ಲಿ ಒಬ್ಬರು ಆರಂಭಿಕ ಚಕಮಕಿಯಲ್ಲಿ ಗಂಭೀರ ಗಾಯಕ್ಕೊಳಗಾದರು.  ನಂತರ ಅತ್ಯುತ್ತಮ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಸಾವನ್ನಪ್ಪಿದರು&#8221; ಎಂದು ವೈಟ್ ನೈಟ್ ಕಾರ್ಪ್ಸ್ ಹೇಳಿದೆ.</p>



<p>6 ಪ್ಯಾರಾಚೂಟ್ ರೆಜಿಮೆಂಟ್ (ವಿಶೇಷ ಪಡೆ) ನ ಸೈನಿಕ ಝಂಟು ಅಲಿ ಶೇಖ್ ಹತರಾಗಿರುವ ಯೋಧ. ಈ ಪ್ರದೇಶಕ್ಕೆ ಹೆಚ್ಚಿನ ಪಡೆಗಳನ್ನು ರವಾನಿಸಲಾಗಿದ್ದು, ಬಂಡಾಯ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p>



<p>ಜಮ್ಮು ವಿಭಾಗದ ಕಥುವಾ-ಉಧಮ್‌ಪುರ ಬೆಲ್ಟ್‌ನಲ್ಲಿ ವಿದೇಶಿ ಉಗ್ರರ ಗುಂಪೊಂದು ಸಕ್ರಿಯವಾಗಿದೆ ಎಂದು ನಂಬಲಾಗಿದೆ. ಈ ತಿಂಗಳ ಆರಂಭದಲ್ಲಿ ಉಧಮ್‌ಪುರ ಜಿಲ್ಲೆಯ ಮಜಲ್ಟಾ ಬ್ಲಾಕ್‌ನ ಚೋರ್ ಪಂಜ್ವಾ ಪ್ರದೇಶದಲ್ಲಿರುವ ತಮ್ಮ ವಸತಿ ಮನೆಯಲ್ಲಿ ಒಂದು ಕುಟುಂಬವನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಅವರು, ನಂತರ ಕೆಲವು ಆಹಾರ ಪದಾರ್ಥಗಳು ಮತ್ತು ಸ್ಮಾರ್ಟ್‌ಫೋನ್‌ನೊಂದಿಗೆ ಪರಾರಿಯಾಗಿದ್ದರು.</p>



<p>ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಹೊಣೆಯನ್ನು ಲಷ್ಕರ್-ಎ-ತಯ್ಯಬಾದ &#8216;ದಿ ರೆಸಿಸ್ಟೆನ್ಸ್ ಫ್ರಂಟ್&#8217; ಹೊತ್ತುಕೊಂಡ ನಂತರ, ದುಷ್ಕರ್ಮಿಗಳನ್ನು ಬೇಟೆಯಾಡಲು ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ, ಅವರಲ್ಲಿ ಕೆಲವರು ಪ್ರವಾಸಿಗರ ಗುಂಪಿನಿಂದ ಮುಸ್ಲಿಮೇತರರನ್ನು ಪ್ರತ್ಯೇಕಿಸಿ ಕೊಂದರು.</p>



<p>2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಸಂಘರ್ಷ-ಸಂಬಂಧಿತ ಹಿಂಸಾಚಾರದ ಕೇಂದ್ರಬಿಂದು ಜಮ್ಮು ವಿಭಾಗಕ್ಕೆ ಸ್ಥಳಾಂತರಗೊಂಡಿದೆ, ಇದು ನಾಗರಿಕರು ಮತ್ತು ಭದ್ರತಾ ಪಡೆಗಳ ಹತ್ಯೆಗಳಲ್ಲಿ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಮಾರ್ಚ್ 27 ರಂದು, ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಕಥುವಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಪೊಲೀಸರು ಸಾವನ್ನಪ್ಪಿದ್ದರು.</p>



<p>ಕಳೆದ ವರ್ಷ ಸೆಪ್ಟೆಂಬರ್ 11 ರಂದು, ಉಧಂಪುರ ಜಿಲ್ಲೆಯಲ್ಲಿ ಇಬ್ಬರು ಶಂಕಿತ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರನ್ನು ಗುಂಡಿಕ್ಕಿ ಕೊಲ್ಲಲಾಯಿತು, ಇದು 2024 ರಲ್ಲಿ ಒಟ್ಟು ಎಂಟು ದಂಗೆ ನಿಗ್ರಹ ಕಾರ್ಯಾಚರಣೆಗಳಿಗೆ ಸಾಕ್ಷಿಯಾಯಿತು.</p>



<p>ಅಧಿಕೃತ ಅಂಕಿಅಂಶಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಾದ್ಯಂತ ನಡೆದ ಬಂಡಾಯ ನಿಗ್ರಹ ಕಾರ್ಯಾಚರಣೆಗಳಲ್ಲಿ ಸೇನಾ ಸೈನಿಕರು ಮತ್ತು 31 ನಾಗರಿಕರು ಸೇರಿದಂತೆ ಕನಿಷ್ಠ 26 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 69 ಉಗ್ರರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.</p>



<p></p>
]]></content:encoded>
					
		
		
			</item>
		<item>
		<title>ಪಹಲ್ಗಾಮ್ ಉಗ್ರರ ದಾಳಿ: ಸರ್ವಪಕ್ಷ ಸಭೆಗೆ 5 ಅಥವಾ ಹೆಚ್ಚಿನ ಸಂಸದರನ್ನು ಹೊಂದಿರುವ ಪಕ್ಷಗಳಿಗೆ ಮಾತ್ರ ಆಹ್ವಾನ!</title>
		<link>https://peepalmedia.com/pahalgam-terror-attack-only-parties-with-5-or-more-mps-invited-to-all-party-meeting/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 24 Apr 2025 09:15:49 +0000</pubDate>
				<category><![CDATA[ದೇಶ]]></category>
		<category><![CDATA[bjp]]></category>
		<category><![CDATA[Jammu & Kashmir]]></category>
		<category><![CDATA[jammu and kashmir]]></category>
		<category><![CDATA[Journalism]]></category>
		<category><![CDATA[Kathua]]></category>
		<category><![CDATA[media]]></category>
		<category><![CDATA[National conference]]></category>
		<category><![CDATA[Pahalgam]]></category>
		<category><![CDATA[Pahalgam terror attack]]></category>
		<guid isPermaLink="false">https://peepalmedia.com/?p=57789</guid>

					<description><![CDATA[ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಗುರುವಾರ (ಏಪ್ರಿಲ್ 24) ನಿಗದಿಯಾಗಿರುವ ಸರ್ವಪಕ್ಷ ಸಭೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಸಂವಹನ ಬಂದಿಲ್ಲ. ಸಂಸತ್ತಿನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸಲು ಸರ್ಕಾರ ಯೋಜಿಸಿದೆ ಎಂದು ಮೂಲಗಳು ದಿ ವೈರ್‌ಗೆ ತಿಳಿಸಿವೆ. ಈ ಕ್ರಮವನ್ನು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ವತಃ ಸಂಸತ್ತಿನಲ್ಲಿ ಬಹುಮತ ಹೊಂದಿಲ್ಲ [&#8230;]]]></description>
										<content:encoded><![CDATA[
<p>ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಗುರುವಾರ (ಏಪ್ರಿಲ್ 24) ನಿಗದಿಯಾಗಿರುವ ಸರ್ವಪಕ್ಷ ಸಭೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಧಿಕಾರದಲ್ಲಿರುವ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಸಂವಹನ ಬಂದಿಲ್ಲ.</p>



<p>ಸಂಸತ್ತಿನಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸಲು ಸರ್ಕಾರ ಯೋಜಿಸಿದೆ ಎಂದು ಮೂಲಗಳು ದಿ ವೈರ್‌ಗೆ ತಿಳಿಸಿವೆ. ಈ ಕ್ರಮವನ್ನು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ವತಃ ಸಂಸತ್ತಿನಲ್ಲಿ ಬಹುಮತ ಹೊಂದಿಲ್ಲ ಮತ್ತು ಇದನ್ನು &#8220;ನಿಜವಾದ ಸರ್ವಪಕ್ಷ&#8221; ಸಭೆಯನ್ನಾಗಿ ಮಾಡಲು ಎಲ್ಲಾ ಪಕ್ಷಗಳನ್ನು ಆಹ್ವಾನಿಸಬೇಕು ಎಂದು ಹೇಳಿದ್ದಾರೆ.</p>



<p>ಲೋಕಸಭೆಯಲ್ಲಿ ಎನ್‌ಸಿ ಕೇವಲ ಇಬ್ಬರು ಸಂಸದರನ್ನು ಹೊಂದಿದ್ದರೂ, ಈ ವರದಿಯನ್ನು ಬರೆಯುವ ಸಮಯದಲ್ಲಿ ದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯ ಕುರಿತು ಅದರ ಪ್ರತಿನಿಧಿಗಳಿಗೆ ಯಾವುದೇ ಮಾಹಿತಿ ಸಿಗದ ಕಾರಣ ಐದು ಅಥವಾ ಅದಕ್ಕಿಂತ ಹೆಚ್ಚು ಸಂಸದರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸಲಾಗಿದೆಯೇ ಎಂಬುದು ತಿಳಿದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.</p>



<p>&#8220;ಸರ್ವಪಕ್ಷ ಸಭೆಯ ಕುರಿತು ನಮಗೆ ಯಾವುದೇ ಸಂವಹನ ಬಂದಿಲ್ಲ. ಗೃಹ ಸಚಿವ ಅಮಿತ್ ಶಾ ಅವರು ಶ್ರೀನಗರದಲ್ಲಿ ಕರೆದಿದ್ದ ಭದ್ರತಾ ಸಭೆಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಆಹ್ವಾನಿಸಲಾಗಿಲ್ಲ. ಇಂದು ಮಧ್ಯಾಹ್ನ ಶ್ರೀನಗರದಲ್ಲಿ ನಡೆಯುವ ಸರ್ವಪಕ್ಷ ಸಭೆಯಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಬಹುದು&#8221; ಎಂದು ನ್ಯಾಷನಲ್ ಕಾನ್ಫರೆನ್ಸ್‌ನ ಮೂಲವೊಂದು ದಿ ವೈರ್‌ಗೆ ತಿಳಿಸಿರುವುದು ವರದಿಯಾಗಿದೆ.</p>



<p>ಸರ್ವಪಕ್ಷ ಸಭೆಯಲ್ಲಿ ಪಕ್ಷಗಳಿಗೆ ಕಳುಹಿಸಲಾದ ಸಂವಹನದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಸಂಸದರನ್ನು ಹೊಂದಿರುವ ಪಕ್ಷಗಳಿಂದ ಒಬ್ಬ ಪ್ರತಿನಿಧಿಯನ್ನು ಮಾತ್ರ ಸಭೆಗೆ ಕರೆಯಲಾಗುವುದು ಎಂದು ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರದ ಕಡೆಯಿಂದ ಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ ಎಂಬುದನ್ನು ಸಂವಹನದಲ್ಲಿ ತಿಳಿಸಲಾಗಿಲ್ಲ.</p>



<p>&#8220;ಐದು ಅಥವಾ ಅದಕ್ಕಿಂತ ಹೆಚ್ಚು ಸಂಸದರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಉಳಿಸಿಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ಹೊಂದಿರುವ ಪಕ್ಷವಾದ ಎನ್‌ಸಿಯನ್ನು ಹೊರಗಿಡಲಾಗಿದೆ&#8221; ಎಂದು ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್<em> ತಿಳಿಸಿದ್ದಾರೆ.</em></p>



<p>ಏಪ್ರಿಲ್ 24 ರ ರಾತ್ರಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರೊಂದಿಗೆ ಮಾತನಾಡಿದ್ದೇನೆ ಎಂದು ಓವೈಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಐದು ಅಥವಾ 10 ಸಂಸದರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸುವ ಬಗ್ಗೆ ಸರ್ಕಾರ ಯೋಚಿಸುತ್ತಿದೆ ಎಂದು ರಿಜಿಜು ಓವೈಸಿಗೆ ಹೇಳಿದ್ದರು ಮತ್ತು ಹೈದರಾಬಾದ್ ಸಂಸದರು ಸಣ್ಣ ಪಕ್ಷಗಳನ್ನು ಆಹ್ವಾನಿಸದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದಾಗ ಅವರು ತಮಾಷೆ ಮಾಡಲು ಮುಂದಾದರು.</p>



<p>&#8220;ಪಹಲ್ಗಾಮ್ ಸರ್ವಪಕ್ಷ ಸಭೆಗೆ ಸಂಬಂಧಿಸಿದಂತೆ, ನಾನು ನಿನ್ನೆ ರಾತ್ರಿ ಕಿರಣ್ ರಿಜಿಜು ಅವರೊಂದಿಗೆ ಮಾತನಾಡಿದೆ. ಅವರು &#8216;5 ಅಥವಾ 10 ಸಂಸದರನ್ನು&#8217; ಹೊಂದಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದರು. ಕಡಿಮೆ ಸಂಸದರನ್ನು ಹೊಂದಿರುವ ಪಕ್ಷಗಳನ್ನು ಏಕೆ ಆಹ್ವಾನಿಸಬಾರದು ಎಂದು ನಾನು ಕೇಳಿದಾಗ, ಸಭೆ &#8216;ತುಂಬಾ ದೀರ್ಘ&#8217;ವಾಗುತ್ತದೆ ಎಂದು ಅವರು ಹೇಳಿದರು. &#8216;ನಮ್ಮಂತ ಸಣ್ಣ ಪಕ್ಷಗಳ ಕತೆ ಏನು?&#8217; ಎಂದು ನಾನು ಕೇಳಿದಾಗ, ನನ್ನ ಧ್ವನಿ ತುಂಬಾ ಜೋರಾಗಿದೆ ಎಂದು ಅವರು ತಮಾಷೆ ಮಾಡಿದರು,&#8221; ಎಂದು ಓವೈಸಿ ಎಕ್ಸ್‌ನಲ್ಲಿ ಬರೆದಿದ್ದಾರೆ.</p>



<p>&#8220;ಇದು ಬಿಜೆಪಿ ಅಥವಾ ಇನ್ನೊಂದು ಪಕ್ಷದ ಆಂತರಿಕ ಸಭೆಯಲ್ಲ, ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಗಳ ವಿರುದ್ಧ ಬಲವಾದ ಮತ್ತು ಒಗ್ಗಟ್ಟಿನ ಸಂದೇಶವನ್ನು ಕಳುಹಿಸಲು ಇದು ಸರ್ವಪಕ್ಷ ಸಭೆಯಾಗಿದೆ. ಎಲ್ಲಾ ಪಕ್ಷಗಳ ಕಳವಳಗಳನ್ನು ಕೇಳಲು ನರೇಂದ್ರ ಮೋದಿ ಹೆಚ್ಚುವರಿ ಒಂದು ಗಂಟೆ ಕಳೆಯಲು ಸಾಧ್ಯವಿಲ್ಲವೇ?&#8221; ಸಂಸತ್ತಿನಲ್ಲಿ ಬಿಜೆಪಿಗೆ ಬಹುಮತವಿಲ್ಲ, ಮತ್ತು ಎಲ್ಲಾ ಪಕ್ಷಗಳ ಮಾತನ್ನೂ ಅವರು ಕೇಳಬೇಕು ಎಂದು ಓವೈಸಿ ಹೇಳಿದರು.</p>



<p>&#8220;ನಿಮ್ಮ ಸ್ವಂತ ಪಕ್ಷಕ್ಕೆ ಬಹುಮತವಿಲ್ಲ. ಅದು 1 ಸಂಸದರನ್ನು ಹೊಂದಿರುವ ಪಕ್ಷವಾಗಿರಲಿ ಅಥವಾ 100 ಸಂಸದರನ್ನು ಹೊಂದಿರುವ ಪಕ್ಷವಾಗಿರಲಿ, ಅವರಿಬ್ಬರೂ ಭಾರತೀಯರಿಂದ ಆಯ್ಕೆಯಾಗಿದ್ದಾರೆ ಮತ್ತು ಅಂತಹ ಮಹತ್ವದ ವಿಷಯದಲ್ಲಿ ಅವರ ಮಾತು ಕೇಳಬೇಕು. ಇದು ರಾಜಕೀಯ ವಿಷಯವಲ್ಲ, ಇದು ರಾಷ್ಟ್ರೀಯ ವಿಷಯ. ಎಲ್ಲರ ಮಾತನ್ನೂ ಕೇಳಬೇಕು. ಇದನ್ನು ನಿಜವಾದ ಸರ್ವಪಕ್ಷ ಸಭೆಯನ್ನಾಗಿ ಮಾಡಲು ನಾನು ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತೇನೆ, ಸಂಸತ್ತಿನಲ್ಲಿ ಒಬ್ಬ ಸಂಸದರನ್ನು ಹೊಂದಿರುವ ಪ್ರತಿಯೊಂದು ಪಕ್ಷವನ್ನೂ ಆಹ್ವಾನಿಸಬೇಕು,” ಎಂದು ಅವರು ಹೇಳಿದರು.</p>



<p>ಪ್ರಧಾನಿ ಮೋದಿ ಸ್ವತಃ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಪಹಲ್ಗಾಮ್ ದಾಳಿಯ ನಂತರ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಗದಿಯಾಗಿದ್ದ ಅಧಿಕೃತ ಸರ್ಕಾರಿ ಕಾರ್ಯಕ್ರಮವನ್ನು ಮೋದಿ ರದ್ದುಗೊಳಿಸಿದ್ದರೂ , ಇಂದು ಚುನಾವಣೆ ನಡೆಯಲಿರುವ ಬಿಹಾರಕ್ಕೆ ತಮ್ಮ ನಿಗದಿತ ಭೇಟಿಯನ್ನು ಮುಂದುವರೆಸಿದ್ದಾರೆ. ಆದಾಗ್ಯೂ, ಜೆಡಿಯು ಪಕ್ಷವು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲಿದ್ದು, ಸರ್ಕಾರ ತೆಗೆದುಕೊಳ್ಳುವ ಯಾವುದೇ ಬಲವಾದ ಕ್ರಮದಲ್ಲಿ ಅದನ್ನು ಬೆಂಬಲಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.</p>
]]></content:encoded>
					
		
		
			</item>
		<item>
		<title>ಉಗ್ರರ ದಾಳಿಯಲ್ಲಿ ಕೇಂದ್ರದ ಹೊಣೆಗಾರಿಕೆಯನ್ನು ಪ್ರಶ್ನಿಸಿದ ಪತ್ರಕರ್ತರ ಮೇಲೆ ಬಿಜೆಪಿ ಶಾಸಕ ಮತ್ತು ಕಾರ್ಯಕರ್ತರ ಗೂಂಡಾಗಿರಿ</title>
		<link>https://peepalmedia.com/bjp-mla-and-workers-harass-journalists-who-questioned-the-centres-responsibility-in-the-terror-attack/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 24 Apr 2025 08:23:27 +0000</pubDate>
				<category><![CDATA[ದೇಶ]]></category>
		<category><![CDATA[Jammu & Kashmir]]></category>
		<category><![CDATA[jammu and kashmir]]></category>
		<category><![CDATA[Journalism]]></category>
		<category><![CDATA[Kathua]]></category>
		<category><![CDATA[media]]></category>
		<category><![CDATA[Pahalgam]]></category>
		<category><![CDATA[Pahalgam terror attack]]></category>
		<guid isPermaLink="false">https://peepalmedia.com/?p=57779</guid>

					<description><![CDATA[ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನಡೆದ ಪಹಲ್ಗಾಮ್ ದಾಳಿಯ ವಿರುದ್ಧದ ಭಾರತೀಯ ಜನತಾ ಪಕ್ಷದ ಪ್ರತಿಭಟನೆಯನ್ನು ವರದಿ ಮಾಡುವಾಗ ಹಿರಿಯ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಉಗ್ರರ ದಾಳಿಗೆ ಕಾರಣವಾಗಬಹುದಾದ ಭದ್ರತಾ ಲೋಪಗಳ ಬಗ್ಗೆ ಪ್ರಶ್ನೆ ಕೇಳಿದಾಗ ಕೋಪಗೊಂಡ ಬಿಜೆಪಿ ಶಾಸಕ ಸೇರಿದಂತೆ ಬಿಜೆಪಿ ಪ್ರತಿಭಟನಾಕಾರರ ದೈನಿಕ್ ಜಾಗರಣ್ ವರದಿಗಾರ ರಾಕೇಶ್ ಶರ್ಮಾ ಮತ್ತು ಇತರ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯು ಬಿಜೆಪಿ ನೇತೃತ್ವದ ಕೇಂದ್ರ [&#8230;]]]></description>
										<content:encoded><![CDATA[
<p>ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನಡೆದ ಪಹಲ್ಗಾಮ್ ದಾಳಿಯ ವಿರುದ್ಧದ ಭಾರತೀಯ ಜನತಾ ಪಕ್ಷದ ಪ್ರತಿಭಟನೆಯನ್ನು ವರದಿ ಮಾಡುವಾಗ ಹಿರಿಯ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.</p>



<p>ಉಗ್ರರ ದಾಳಿಗೆ ಕಾರಣವಾಗಬಹುದಾದ ಭದ್ರತಾ ಲೋಪಗಳ ಬಗ್ಗೆ ಪ್ರಶ್ನೆ ಕೇಳಿದಾಗ ಕೋಪಗೊಂಡ ಬಿಜೆಪಿ ಶಾಸಕ ಸೇರಿದಂತೆ ಬಿಜೆಪಿ ಪ್ರತಿಭಟನಾಕಾರರ <em>ದೈನಿಕ್ ಜಾಗರಣ್</em> ವರದಿಗಾರ ರಾಕೇಶ್ ಶರ್ಮಾ ಮತ್ತು ಇತರ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.</p>



<p>ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ.</p>



<p>ಪಿಟಿಐ ವರದಿಗಳ ಪ್ರಕಾರ, ಈ ಪ್ರಶ್ನೆಗಳನ್ನು ಕೇಳಿದ ಪತ್ರಕರ್ತರು &#8220;ಪ್ರತ್ಯೇಕತಾವಾದಿ ಭಾಷೆ&#8221; ಮಾತನಾಡುತ್ತಿದ್ದಾರೆ ಎಂದು ಹಿಮಾಂಶು ಶರ್ಮಾ ಎಂಬ ಬಿಜೆಪಿ ಸದಸ್ಯ ಆರೋಪಿಸಿದ್ದಾರೆ. ಬಿಜೆಪಿ ಶಾಸಕರಾದ ದೇವಿಂದರ್ ಮಾನ್ಯಲ್, ರಾಜೀವ್ ಜಸ್ರೋಟಿಯಾ ಮತ್ತು ಭರತ್ ಭೂಷಣ್ ಕೂಡ ಉಪಸ್ಥಿತರಿದ್ದರು.</p>



<p>ಪಿಟಿಐ ವರದಿಯ ಪ್ರಕಾರ, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಕಥುವಾದಲ್ಲಿನ ಉಗ್ರಗಾಮಿಗಳ ಚಲನವಲನವು &#8220;ಗಡಿಯಾಚೆಯಿಂದ ಒಳನುಸುಳುವಿಕೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂಬುದನ್ನು ತೋರಿಸುವುದಿಲ್ಲವೇ&#8221; ಎಂದು ಶಾಸಕ ಮಾನ್ಯಲ್ ಅವರನ್ನು ಪತ್ರಕರ್ತರು ಕೇಳಿದರು.</p>



<p>ಹಿಮಾಂಶು ಶರ್ಮಾ ಎಂಬಾತ ಈ ಪತ್ರಿಕಾ ಹೇಳಿಕೆ ನೀಡುವಾಗ ಪದೇ ಪದೇ ಮಧ್ಯಪ್ರವೇಶಿಸುವುದನ್ನು ಪತ್ರಕರ್ತರು ಆಕ್ಷೇಪಿಸಿದರು. ಪಿಟಿಐ ಗುರುತಿಸಿದ ಬಿಜೆಪಿ ಕಾರ್ಯಕರ್ತರಾದ ರವೀಂದರ್ ಸಿಂಗ್, ಅಶ್ವನಿ ಶರ್ಮಾ, ಮಂಜಿತ್ ಸಿಂಗ್, ಟೋನಿ ಮತ್ತು ಪರ್ವೀನ್ ಚುನಾ ಅವರೊಂದಿಗೆ ಹಿಮಾಂಶು ಶರ್ಮಾ ಸೇರಿಕೊಂಡು ಪತ್ರಕರ್ತ ರಾಕೇಶ್ ಶರ್ಮಾ ಮೇಲೆ ಹಲ್ಲೆ ನಡೆಸಿ, ಪ್ರತಿಭಟನಾಕಾರರ ಮುಂದೆಯೇ ಅವರನ್ನು ಥಳಿಸಿದರು.</p>



<p>ಹಲ್ಲೆಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Daink Jagran Reporter Rakesh sharma  assaulted by BJP worker  asking if this is also a government and intelligence failure to a BJP leader. <br><br>Now he is in hospital . Shame on BJP people.<a href="https://twitter.com/hashtag/Pahalgam?src=hash&amp;ref_src=twsrc%5Etfw">#Pahalgam</a> <a href="https://t.co/Yr0u6jCsLP">pic.twitter.com/Yr0u6jCsLP</a></p>&mdash; Surbhi (@SurrbhiM) <a href="https://twitter.com/SurrbhiM/status/1915042854411592031?ref_src=twsrc%5Etfw">April 23, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಉಪ ಪೊಲೀಸ್ ವರಿಷ್ಠಾಧಿಕಾರಿ ರವೀಂದರ್ ಸಿಂಗ್ ಅವರು ಅವರನ್ನು ರಕ್ಷಿಸಿದರು, ನಂತರ ಅವರು ಅವರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು.</p>



<p>ಆರೋಪಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ ಕೇಳಲು ಪತ್ರಕರ್ತರು ಕಥುವಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಶೋಭಿತ್ ಸಕ್ಸೇನಾ ಅವರನ್ನು ಭೇಟಿ ಮಾಡಿದರು. ಕಥುವಾದ ಶಹೀದಿ ಚೌಕ್ ಮತ್ತು ಜಮ್ಮುವಿನ ಪ್ರೆಸ್ ಕ್ಲಬ್‌ನಲ್ಲಿ ಪ್ರತ್ಯೇಕ ಪತ್ರಕರ್ತರು ಪ್ರತಿಭಟನೆ ನಡೆಸಿದರು.</p>



<p>ಆರೋಪಿಗಳ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುವವರೆಗೆ ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ವರದಿಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">A journalist from Kathua worked with <a href="https://twitter.com/JagranNews?ref_src=twsrc%5Etfw">@JagranNews</a>  Rakesh Sharma said he was thrashed and slapped by BJP workers during a protest at Kalibari Chowk in <a href="https://twitter.com/hashtag/Kathua?src=hash&amp;ref_src=twsrc%5Etfw">#Kathua</a>, Now he was admitted at GMC Kathua for treatment  on The incident has sparked outrage and raised concerns about press… <a href="https://t.co/dLg9Wtx5nl">pic.twitter.com/dLg9Wtx5nl</a></p>&mdash; Harpreet Singh Sethi (@Harpreetsethi95) <a href="https://twitter.com/Harpreetsethi95/status/1914986247061119198?ref_src=twsrc%5Etfw">April 23, 2025</a></blockquote><script async src="https://platform.twitter.com/widgets.js" charset="utf-8"></script>
</div></figure>
]]></content:encoded>
					
		
		
			</item>
		<item>
		<title>ಸೌದಿ ಅರೇಬಿಯಾ: ಭಾರತೀಯ ಯಾತ್ರಿಕರಿಗೆ 52,000 ಹಜ್ ಸ್ಲಾಟ್‌ಗಳು ರದ್ದು- ವಿದೇಶಾಂಗ ಸಚಿವಾಲಯದ ಹಸ್ತಕ್ಷೇಪಕ್ಕೆ ಆಗ್ರಹ</title>
		<link>https://peepalmedia.com/saudi-arabia-52000-hajj-slots-for-indian-pilgrims-cancelled-external-affairs-ministrys-intervention-sought/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 15 Apr 2025 07:03:56 +0000</pubDate>
				<category><![CDATA[ದೇಶ]]></category>
		<category><![CDATA[Hajj]]></category>
		<category><![CDATA[Hajj pilgrims]]></category>
		<category><![CDATA[Hajj slots]]></category>
		<category><![CDATA[india]]></category>
		<category><![CDATA[J&K]]></category>
		<category><![CDATA[Jammu & Kashmir]]></category>
		<category><![CDATA[MEA]]></category>
		<category><![CDATA[mecca]]></category>
		<category><![CDATA[Saudi Arabia]]></category>
		<guid isPermaLink="false">https://peepalmedia.com/?p=57253</guid>

					<description><![CDATA[ಸೌದಿ ಅರೇಬಿಯಾ ಖಾಸಗಿ ಪ್ರವಾಸಗಳ ಮೂಲಕ ಹಜ್ ಯಾತ್ರೆ ಕೈಗೊಳ್ಳುವ ಭಾರತೀಯರಿಗೆ ವಲಯ ಹಂಚಿಕೆಗಳನ್ನು ರದ್ದುಗೊಳಿಸಿದೆ ಎಂದು ವರದಿ ಹೊರ ಬಂದ ನಂತರ ಜಮ್ಮು ಮತ್ತು ಕಾಶ್ಮೀರದ ಪಕ್ಷಾತೀತ ನಾಯಕರು ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಕೋರಿದ್ದಾರೆ. ಇದರಿಂದಾಗಿ 52,000 ಕ್ಕೂ ಹೆಚ್ಚು ಯಾತ್ರಿಕರು ಸಂಕಷ್ಟದಲ್ಲಿದ್ದಾರೆ. ಈ ಬೆಳವಣಿಗೆ ತೀವ್ರ ಕಳವಳಕಾರಿ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸೌದಿ ಅರೇಬಿಯಾ ಅಧಿಕಾರಿಗಳೊಂದಿಗೆ ಸಾಧ್ಯವಾದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಲು ಮಾತುಕತೆ ನಡೆಸುವಂತೆ [&#8230;]]]></description>
										<content:encoded><![CDATA[
<p>ಸೌದಿ ಅರೇಬಿಯಾ ಖಾಸಗಿ ಪ್ರವಾಸಗಳ ಮೂಲಕ ಹಜ್ ಯಾತ್ರೆ ಕೈಗೊಳ್ಳುವ ಭಾರತೀಯರಿಗೆ ವಲಯ ಹಂಚಿಕೆಗಳನ್ನು ರದ್ದುಗೊಳಿಸಿದೆ ಎಂದು ವರದಿ ಹೊರ ಬಂದ ನಂತರ ಜಮ್ಮು ಮತ್ತು ಕಾಶ್ಮೀರದ ಪಕ್ಷಾತೀತ ನಾಯಕರು ಕೇಂದ್ರ ಸರ್ಕಾರದ ಹಸ್ತಕ್ಷೇಪವನ್ನು ಕೋರಿದ್ದಾರೆ. ಇದರಿಂದಾಗಿ 52,000 ಕ್ಕೂ ಹೆಚ್ಚು ಯಾತ್ರಿಕರು ಸಂಕಷ್ಟದಲ್ಲಿದ್ದಾರೆ.</p>



<p><a href="https://www.instagram.com/p/DIZNX2FTzm8" target="_blank" rel="noreferrer noopener">ಈ ಬೆಳವಣಿಗೆ ತೀವ್ರ ಕಳವಳಕಾರಿ</a> ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಸೌದಿ ಅರೇಬಿಯಾ ಅಧಿಕಾರಿಗಳೊಂದಿಗೆ ಸಾಧ್ಯವಾದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಲು ಮಾತುಕತೆ ನಡೆಸುವಂತೆ ಒತ್ತಾಯಿಸಿದರು.</p>



<p>ಈ ವರ್ಷದ ಹಜ್ ಯಾತ್ರೆಗೆ ಹಲವಾರು ಭಾರತೀಯರು ಈಗಾಗಲೇ ಪಾವತಿಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಅಬ್ದುಲ್ಲಾ ಹೇಳಿದರು.</p>



<p>ಈ ವಿಷಯದ ಬಗ್ಗೆ ಸೌದಿ ಅರೇಬಿಯಾ ನಾಯಕತ್ವದೊಂದಿಗೆ ಮಾತುಕತೆ ನಡೆಸುವಂತೆ&nbsp;ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷ&nbsp;<a href="https://x.com/PTI_News/status/1911700614981247448" rel="noreferrer noopener" target="_blank">ಫಾರೂಕ್ ಅಬ್ದುಲ್ಲಾ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.</a></p>



<p>&#8220;ನಾನು ಪ್ರಧಾನಿಯವರನ್ನು ಒತ್ತಾಯಿಸಲು ಬಯಸುತ್ತೇನೆ&#8230; ಅವರು ಸೌದಿ ಅರೇಬಿಯಾಕ್ಕೆ ಆತ್ಮೀಯರಾಗಿರುವುದರಿಂದ, ಅವರು ಅವರನ್ನು ಒತ್ತಾಯಿಸಬೇಕು&#8230; ಈ ವಿಷಯವು ಸಾವಿರಾರು ಜನರಿಗೆ ಸಂಬಂಧಿಸಿದೆ. ಅಲ್ಲಿಗೆ ಹೋಗುವುದು ಪ್ರತಿಯೊಬ್ಬ ಮುಸ್ಲಿಮರ ಕನಸು,&#8221; ಎಂದು ಅವರು ಹೇಳಿದರು. </p>



<p>ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥೆ&nbsp;<a href="https://x.com/MehboobaMufti/status/1911387411529027823" rel="noreferrer noopener" target="_blank">ಮೆಹಬೂಬಾ ಮುಫ್ತಿ</a>&nbsp;ವಿದೇಶಾಂಗ ಸಚಿವಾಲಯದ ಹಸ್ತಕ್ಷೇಪವನ್ನು ಕೋರಿದರು ಮತ್ತು ಸೌದಿ ಅರೇಬಿಯಾದ &#8220;ಹಠಾತ್ ನಿರ್ಧಾರ&#8221; ದೇಶಾದ್ಯಂತ ಯಾತ್ರಿಕರು ಮತ್ತು ಪ್ರವಾಸ ನಿರ್ವಾಹಕರಿಗೆ ಅಪಾರ ತೊಂದರೆ ಉಂಟುಮಾಡಿದೆ ಎಂದು ಹೇಳಿದರು.</p>



<p>ಸೌದಿ ಅರೇಬಿಯಾದ <a href="https://timesofindia.indiatimes.com/city/mumbai/52k-haj-pilgrims-in-a-spot-as-tour-co-zones-in-mina-cancelled/articleshow/119315250.cms" target="_blank" rel="noreferrer noopener">ಹಜ್ ಮತ್ತು ಉಮ್ರಾ ಸಚಿವಾಲಯವು</a> ತೀರ್ಥಯಾತ್ರೆ ಭಾರತದಿಂದ ಭಕ್ತರನ್ನು ಕರೆತರುವ ಖಾಸಗಿ ಪ್ರವಾಸ ನಿರ್ವಾಹಕರಿಗೆ ನೀಡಲಾಗಿದ್ದ ಎರಡು ವಲಯಗಳನ್ನು ರದ್ದುಗೊಳಿಸಿದೆ ಮತ್ತು ಈಗ ಇನ್ನೂ ಮೂರು ವಲಯಗಳು &#8220;ಪಾವತಿ ಇಲ್ಲ&#8221; ಆಯ್ಕೆಯನ್ನು ತೋರಿಸುತ್ತವೆ ಎಂದು <em>ಟೈಮ್ಸ್ ಆಫ್ ಇಂಡಿಯಾ</em> ಮಾರ್ಚ್ 22 ರಂದು ವರದಿ ಮಾಡಿದೆ. </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">VIDEO | On Saudi Arabia slashing Indian private Hajj quota by 80 per cent, National Conference president Farooq Abdullah says, &quot;I would like to urge the prime minister&#8230; Since he is close to Saudi Arabia, he should urge them&#8230; This issue is related to thousands of people. It is… <a href="https://t.co/IKJYqzNtCk">pic.twitter.com/IKJYqzNtCk</a></p>&mdash; Press Trust of India (@PTI_News) <a href="https://twitter.com/PTI_News/status/1911700614981247448?ref_src=twsrc%5Etfw">April 14, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಈ ಕಾರಣದಿಂದಾಗಿ, ಖಾಸಗಿ ಪ್ರವಾಸ ನಿರ್ವಾಹಕರೊಂದಿಗೆ ಪ್ರಯಾಣ ಕೈಗೊಳ್ಳುವ ಭಾರತೀಯರ ಹಜ್ ಯಾತ್ರೆ ಈ ವರ್ಷ ರದ್ದಾಗಬಹುದು ಎಂದು ನಿರ್ವಾಹಕರು ಹೇಳಿರುವುದಾಗಿ ಪತ್ರಿಕೆ ಉಲ್ಲೇಖಿಸಿದೆ.</p>



<p>ಹಜ್ ಯಾತ್ರೆಯು ಇಸ್ಲಾಂ ಧರ್ಮದ ಐದು ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ, ಇದನ್ನು ಮುಸ್ಲಿಮರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಪೂರೈಸಬೇಕೆಂದು ಬಯಸುತ್ತಾರೆ. ಇಸ್ಲಾಮಿಕ್ ಚಂದ್ರ ಕ್ಯಾಲೆಂಡರ್ ಪ್ರಕಾರ ಹಜ್‌ನ ದಿನಾಂಕಗಳನ್ನು ಚಂದ್ರನ ಸ್ಥಾನದಿಂದ ನಿರ್ಧರಿಸಲಾಗುತ್ತದೆ. ಈ ಆಚರಣೆಯು ಹಲವಾರು ದಿನಗಳವರೆಗೆ ಇರುತ್ತದೆ ಮತ್ತು ಮೆಕ್ಕಾದಲ್ಲಿ ಕೊನೆಗೊಳ್ಳುತ್ತದೆ.</p>



<p>ಈ ವರ್ಷ, ಚಂದ್ರನ ಸ್ಥಾನವನ್ನು ಅವಲಂಬಿಸಿ,&nbsp;ತೀರ್ಥಯಾತ್ರೆ&nbsp;<a href="https://www.siasat.com/umrah-2025-saudi-arabia-announces-final-entry-and-exit-dates-3204438/" rel="noreferrer noopener" target="_blank">ಜೂನ್ 6 ರಂದು ಪ್ರಾರಂಭವಾಗಿ ಜೂನ್ 11 ರಂದು ಮುಕ್ತಾಯಗೊಳ್ಳಲಿದೆ.</a></p>



<p>ಸೌದಿ ಅರೇಬಿಯಾ ವಿವಿಧ ದೇಶಗಳ ಮುಸ್ಲಿಂ ಜನಸಂಖ್ಯೆಯನ್ನು ಆಧರಿಸಿ ಹಜ್ ಕೋಟಾಗಳನ್ನು ನಿಗದಿಪಡಿಸುತ್ತದೆ.</p>



<p>ಭಾರತೀಯ ಯಾತ್ರಿಕರು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಶಾಸನಬದ್ಧ ಸಂಸ್ಥೆಯಾದ ಭಾರತದ ಹಜ್ ಸಮಿತಿಯ <a href="https://www.livemint.com/news/india/disturbing-news-mehbooba-mufti-urges-mea-to-step-in-after-saudi-arabia-slashes-private-hajj-quota-by-80-per-cent-11744548390401.html" target="_blank" rel="noreferrer noopener">ಮೂಲಕ</a> ಅಥವಾ ಹಜ್ ಗ್ರೂಪ್ ಆರ್ಗನೈಸರ್ಸ್ ಎಂದು ಕರೆಯಲ್ಪಡುವ ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಹಜ್ ಯಾತ್ರೆಯನ್ನು ಕೈಗೊಳ್ಳುತ್ತಾರೆ .</p>



<p>ಈ ವರ್ಷ, ಭಾರತದ 1.75 ಲಕ್ಷ ಯಾತ್ರಿಕರ ಕೋಟಾದಲ್ಲಿ, 52,500 ಯಾತ್ರಿಕರು ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಮೆಕ್ಕಾಗೆ ಪ್ರಯಾಣಿಸಲಿದ್ದಾರೆ, ಉಳಿದವರು ಭಾರತೀಯ ಹಜ್ ಸಮಿತಿಯ ಮೂಲಕ ಹಾಗೆ ಮಾಡಲಿದ್ದಾರೆ.</p>



<p>ಸೌದಿ ಅರೇಬಿಯಾದ ಪ್ರವಾಸೋದ್ಯಮ ಸಚಿವಾಲಯವು ಈ ಹಿಂದೆ ಅಧಿಕೃತವಾದ ಹಜ್ ಪರವಾನಗಿ ಇಲ್ಲದೆ ಮೆಕ್ಕಾ ಪ್ರವೇಶಿಸಲು ಪ್ರಯತ್ನಿಸುವ ನಾಗರಿಕ, ನಿವಾಸಿ ಅಥವಾ ಸಂದರ್ಶಕ ಯಾರಿಗಾದರೂ <a href="https://gulfnews.com/world/gulf/saudi/saudi-arabia-suspends-short-term-visas-for-14-countries-ahead-of-hajj-season-1.500085267" target="_blank" rel="noreferrer noopener">10,000 ಸೌದಿ ರಿಯಾಲ್</a> ಅಥವಾ 2.27 ಲಕ್ಷ ರೂ.ಗಿಂತ ಹೆಚ್ಚಿನ ದಂಡ ವಿಧಿಸಲಾಗುವುದು ಎಂದು ಘೋಷಿಸಿತ್ತು.</p>



<p>ಧಾರ್ಮಿಕ ಯಾತ್ರೆಗೆ ಸರಿಯಾದ ವೀಸಾವನ್ನು ಪಡೆಯಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ ಮತ್ತು ಪಾಲಿಸದಿದ್ದಕ್ಕಾಗಿ ಕಾನೂನು ದಂಡಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.</p>



<p>ಬಿಸಿಲಿನಂತಹ ಸಮಸ್ಯೆಗಳಿಂದ 2024 ರ ಹಜ್ ಯಾತ್ರೆಯಲ್ಲಿ ಕನಿಷ್ಠ 900 ಯಾತ್ರಿಕರು ಸಾವನ್ನಪ್ಪಿದರು.</p>



<p></p>
]]></content:encoded>
					
		
		
			</item>
	</channel>
</rss>
