<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>journalists &#8211; Peepal Media</title>
	<atom:link href="https://peepalmedia.com/tag/journalists/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 13 Mar 2025 07:47:28 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>journalists &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ತೆಲಂಗಾಣ: ಸಿಎಂ ರೇವಂತ್ ರೆಡ್ಡಿ ಬಗ್ಗೆ ಅವಹೇಳನಕಾರಿ ವಿಡಿಯೋ ಮಾಡಿದ್ದಕ್ಕಾಗಿ ಇಬ್ಬರು ಪತ್ರಕರ್ತರ ಬಂಧನ</title>
		<link>https://peepalmedia.com/telangana-two-journalists-arrested-for-making-derogatory-video-about-cm-revanth-reddy/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 13 Mar 2025 06:55:03 +0000</pubDate>
				<category><![CDATA[ದೇಶ]]></category>
		<category><![CDATA[journalists]]></category>
		<category><![CDATA[journalisಮ]]></category>
		<category><![CDATA[media]]></category>
		<category><![CDATA[revanth reddy]]></category>
		<category><![CDATA[telangana]]></category>
		<guid isPermaLink="false">https://peepalmedia.com/?p=55218</guid>

					<description><![CDATA[ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಟೀಕಿಸುವ ಯೂಟ್ಯೂಬ್ ವಿಡಿಯೋ ಮಾಡಿದ್ದಕ್ಕಾಗಿ ಹೈದರಾಬಾದ್ ಪೊಲೀಸರು ಬುಧವಾರ ಇಬ್ಬರು ಪತ್ರಕರ್ತರನ್ನು ಬಂಧಿಸಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ವಿರೋಧ ಪಕ್ಷ ಭಾರತ ರಾಷ್ಟ್ರ ಸಮಿತಿಯ ಪ್ರಧಾನ ಕಚೇರಿಯಲ್ಲಿ ಅವಹೇಳನಕಾರಿ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಯೂಟ್ಯೂಬ್ ಚಾನೆಲ್ ಪಲ್ಸ್ ಡಿಜಿಟಲ್ ನ್ಯೂಸ್ ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕಿ ರೇವತಿ ಪೊಗಡದಂಡ (44) ಮತ್ತು ಉದ್ಯೋಗಿ ತನ್ವಿ ಯಾದವ್ (25) ಅಲಿಯಾಸ್ ಬಂಡಿ ಸಂಧ್ಯಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು 14 [&#8230;]]]></description>
										<content:encoded><![CDATA[
<p>ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಟೀಕಿಸುವ ಯೂಟ್ಯೂಬ್ ವಿಡಿಯೋ ಮಾಡಿದ್ದಕ್ಕಾಗಿ ಹೈದರಾಬಾದ್ ಪೊಲೀಸರು ಬುಧವಾರ <a href="https://indianexpress.com/article/cities/hyderabad/two-youtube-journalists-arrested-in-telangana-over-derogatory-video-about-cm-revanth-reddy-9883093/" target="_blank" rel="noreferrer noopener">ಇಬ್ಬರು ಪತ್ರಕರ್ತರನ್ನು ಬಂಧಿಸಿದ್ದಾರೆ</a><em> ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ ಮಾಡಿದೆ.</p>



<p>ವಿರೋಧ ಪಕ್ಷ ಭಾರತ ರಾಷ್ಟ್ರ ಸಮಿತಿಯ ಪ್ರಧಾನ ಕಚೇರಿಯಲ್ಲಿ ಅವಹೇಳನಕಾರಿ ವಿಡಿಯೋ ಚಿತ್ರೀಕರಿಸಿದ ಆರೋಪದ ಮೇಲೆ ಯೂಟ್ಯೂಬ್ ಚಾನೆಲ್ ಪಲ್ಸ್ ಡಿಜಿಟಲ್ ನ್ಯೂಸ್ ನೆಟ್‌ವರ್ಕ್‌ನ ವ್ಯವಸ್ಥಾಪಕ ನಿರ್ದೇಶಕಿ ರೇವತಿ ಪೊಗಡದಂಡ (44) ಮತ್ತು ಉದ್ಯೋಗಿ ತನ್ವಿ ಯಾದವ್ (25) ಅಲಿಯಾಸ್ ಬಂಡಿ ಸಂಧ್ಯಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. </p>



<p>ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಸಲ್ಲಿಸಿದ ದೂರಿನ ಆಧಾರದ ಮೇಲೆ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ.</p>



<p>ಪೊಗಡದಂಡ ಮತ್ತು ಯಾದವ್ &#8220;ಸಾಮಾಜಿಕ ಮಾಧ್ಯಮ ಟ್ರೋಲಿಂಗ್&#8221; ನಲ್ಲಿ ಭಾಗಿಯಾಗಿದ್ದಾರೆ ಮತ್ತು ಇತರ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.</p>



<p>ಸಾರ್ವಜನಿಕರಿಗೆ ತೊಂದರೆ ಕೊಡುವ ಹೇಳಿಕೆಗಳು, ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ, ಸಂಘಟಿತ ಅಪರಾಧ ಮತ್ತು ಕ್ರಿಮಿನಲ್ ಪಿತೂರಿ ಮತ್ತು ಅಶ್ಲೀಲ ವಸ್ತುಗಳನ್ನು ರವಾನಿಸುವ ಬಗ್ಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತಾ ವಿಭಾಗಗಳ <a href="https://indianexpress.com/article/cities/hyderabad/two-youtube-journalists-arrested-in-telangana-over-derogatory-video-about-cm-revanth-reddy-9883093/" target="_blank" rel="noreferrer noopener">ಅಡಿಯಲ್ಲಿ</a> ಎಫ್‌ಐಆರ್ ದಾಖಲಿಸಲಾಗಿದೆ.</p>



<p>ಪಲ್ಸ್ ನ್ಯೂಸ್ ಕಚೇರಿಯಿಂದ ಪೊಲೀಸರು ಎರಡು ಲ್ಯಾಪ್‌ಟಾಪ್‌ಗಳು, ಹಾರ್ಡ್ ಡಿಸ್ಕ್‌ಗಳು ಮತ್ತು ಇತರ ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.</p>



<p>ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ, ಯೂಟ್ಯೂಬ್ ಚಾನೆಲ್ ಒಬ್ಬ ವ್ಯಕ್ತಿಯನ್ನು ಸಂದರ್ಶಿಸಿದೆ ಎಂದು ದೂರುದಾರರು ಆರೋಪಿಸಿದ್ದಾರೆ, ಇದರಲ್ಲಿ ಮುಖ್ಯಮಂತ್ರಿಯ ಬಗ್ಗೆ ಅವಹೇಳನಕಾರಿ ಮತ್ತು ನಿಂದನೀಯ ಹೇಳಿಕೆಗಳನ್ನು ನೀಡಲಾಗಿದೆ ಎಂದು <em>ದಿ ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ ಮಾಡಿದೆ.</p>



<p>ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹಂಚಿಕೊಂಡಿದ್ದಕ್ಕಾಗಿ ಮೂರನೇ ವ್ಯಕ್ತಿಯನ್ನು <a href="https://www.hindustantimes.com/india-news/two-journalists-arrested-for-posting-derogatory-video-against-telangana-cm-101741806264880.html" target="_blank" rel="noreferrer noopener">ಸಹ ಬಂಧಿಸಲಾಗಿದೆ ಎಂದು ಹೆಸರು ತಿಳಿಸದ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ತಿಳಿಸಿದೆ.</a></p>



<p>ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ ಮತ್ತು ಎಸ್‌ಐಟಿ) ಪಿ. ವಿಶ್ವಪ್ರಸಾದ್, ಈ ವಿಡಿಯೋವನ್ನು ಫೆಬ್ರವರಿಯಲ್ಲಿ ಚಿತ್ರೀಕರಿಸಲಾಗಿದ್ದು, ವಿಧಾನಸಭೆಯ ಬಜೆಟ್ ಅಧಿವೇಶನಕ್ಕೂ ಮುನ್ನ ಸೋಮವಾರ ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿಯನ್ನು ಅವಮಾನಿಸುವ, ಮಾನಹಾನಿ ಮಾಡುವ ಮತ್ತು ನಿಂದಿಸುವ ಉದ್ದೇಶದಿಂದ ನಡೆದಿದೆ ಎಂದು ಹೇಳಿದರು.</p>



<p>&#8220;ಈ ವಿಡಿಯೋದ ವಿಚಾರವು ಅಸಭ್ಯ, ಅವಹೇಳನಕಾರಿ, ಅವಮಾನಕರ ಮತ್ತು ನಿಂದನೀಯವಾಗಿದ್ದು, ಎಲ್ಲಾ ಸಭ್ಯತೆಯ ಹಂತಗಳನ್ನು ಮೀರಿದೆ. ಆರೋಪಿಗಳು ಇದನ್ನು ಪದೇ ಪದೇ ಮಾಡುತ್ತಿದ್ದಾರೆ ಮತ್ತು ಖ್ಯಾತಿ ಮತ್ತು ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ,&#8221; ಎಂದು ವಿಶ್ವಪ್ರಸಾದ್ ಹೇಳಿರುವುದಾಗಿ <em>ಇಂಡಿಯನ್ ಎಕ್ಸ್‌ಪ್ರೆಸ್</em> ವರದಿ ಮಾಡಿದೆ. </p>



<p>ಸಂದರ್ಶನ ಮಾಡಿದ ಮತ್ತು ರೆಡ್ಡಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ವ್ಯಕ್ತಿಯನ್ನು ಸಹ ಗುರುತಿಸಿ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.</p>



<p>&#8220;ಈ ಯೂಟ್ಯೂಬ್ ಚಾನೆಲ್ ಕಳೆದ ಎರಡು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ಯೋಜನೆಯ ಭಾಗವಾಗಿ, ವರದಿಗಾರ ಮುಖ್ಯಮಂತ್ರಿಯ ಮೇಲೆ ನಿಂದನೆ ಮಾಡುವಂತೆ ಜನರನ್ನು ಪ್ರಚೋದಿಸುತ್ತಿದ್ದಾರೆ,&#8221; ಎಂದು ಅವರು ಆರೋಪಿಸಿದರು.</p>



<p>ಆ ಇಬ್ಬರು ಮಹಿಳೆಯರು ಭಾರತ ರಾಷ್ಟ್ರ ಸಮಿತಿಯಿಂದ &#8220;ಹಣಕಾಸಿನ ಪ್ರೋತ್ಸಾಹ&#8221; ಪಡೆದಿದ್ದಾರೆ ಎಂಬುದಕ್ಕೆ ಪುರಾವೆಗಳಿವೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.</p>



<p>ಪತ್ರಕರ್ತರ ಪರ ವಕೀಲರಾದ ಜಕ್ಕುಲಾ ಲಕ್ಷ್ಮಣ್,&nbsp;ತಮ್ಮ ಕಕ್ಷಿದಾರರನ್ನು ತಮ್ಮ ಕೆಲಸ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ ಎಂದು&nbsp;<em>ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.</em></p>



<p>&#8220;ಅವರು ಸರ್ಕಾರದ ವಿರುದ್ಧ ಕೋಪಗೊಂಡಿದ್ದ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಸಂದರ್ಶಿಸಿ ಅದನ್ನು ತಮ್ಮ ಚಾನೆಲ್‌ನಲ್ಲಿ ಹಾಕಿದರು&#8221; ಎಂದು ಲಕ್ಷ್ಮಣ್ ಹೇಳಿದರು. </p>



<p>ಪೊಲೀಸರು ಇಬ್ಬರು ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವಕೀಲರು ಆರೋಪಿಸಿದರು, ನ್ಯಾಯಾಧೀಶರು &#8220;ಪೊಲೀಸರ ದೌರ್ಜನ್ಯವನ್ನು ಗಮನಿಸಿದ್ದಾರೆ&#8221; ಎಂದು ಹೇಳಿದರು.</p>



<p><strong>ಬಂಧನಗಳಿಗ ವಿರೋಧ ಪಕ್ಷಗಳು, ಸುದ್ದಿ ಸಂಘಗಳ ಆಕ್ರೋಶ</strong></p>



<p>ಇಬ್ಬರು ಪತ್ರಕರ್ತರನ್ನು ಬಂಧಿಸಿದ್ದಕ್ಕಾಗಿ ಪ್ರತಿಪಕ್ಷಗಳು ಮತ್ತು ಭಾರತೀಯ ಸಂಪಾದಕರ ಸಂಘವು ತೆಲಂಗಾಣ ಸರ್ಕಾರವನ್ನು ಪ್ರಶ್ನಿಸಿವೆ.</p>



<p><a href="https://x.com/KTRBRS/status/1899664043943809178" target="_blank" rel="noreferrer noopener">&#8220;ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ರೈತನೊಬ್ಬ ಎದುರಿಸುತ್ತಿರುವ ಕಷ್ಟಗಳನ್ನು ವ್ಯಕ್ತಪಡಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ ಪತ್ರಕರ್ತರ ಬಂಧನವು ಈ ಸರ್ಕಾರದ</a> ನಿರ್ಬಂಧಿತ ನಿಯಮದ ಪರಾಕಾಷ್ಠೆಯಾಗಿದೆ,&#8221; ಎಂದು ಭಾರತ ರಾಷ್ಟ್ರ ಸಮಿತಿಯ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಹೇಳಿದ್ದಾರೆ.</p>



<p>&#8220;ಸಾರ್ವಜನಿಕ ಆಳ್ವಿಕೆಯಲ್ಲಿ ಮಾಧ್ಯಮ ಸ್ವಾತಂತ್ರ್ಯವಿಲ್ಲ! ರಾಹುಲ್ ಗಾಂಧಿ ಮಾತನಾಡುತ್ತಿರುವ ಸಾಂವಿಧಾನಿಕ ನಿಯಮ ಇದೇನಾ?&#8221; ಎಂದು ರಾವ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದರು. </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="te" dir="ltr">సీనియర్ మహిళా జర్నలిస్టు రేవతి అరెస్టును ఖండిస్తున్నాను.    <br><br>ఉదయం 5 గంటలకు ఇంటి మీద దాడి చేసి జర్నలిస్టు రేవతిని అక్రమంగా అరెస్ట్ చేయడం రాష్ట్రంలో కొనసాగుతున్న ఎమర్జెన్సీ తరహా పాలనకు నిదర్శనం. <a href="https://twitter.com/revathitweets?ref_src=twsrc%5Etfw">@revathitweets</a>  పాటు యువ జర్నలిస్టు తన్వి యాదవ్‌ను అరెస్టు చేయడం దారుణం. <br><br>ఒక రైతు… <a href="https://t.co/4mXy8LufOo">pic.twitter.com/4mXy8LufOo</a></p>&mdash; KTR (@KTRBRS) <a href="https://twitter.com/KTRBRS/status/1899664043943809178?ref_src=twsrc%5Etfw">March 12, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p><a href="https://x.com/IndEditorsGuild/status/1899787915443790040" target="_blank" rel="noreferrer noopener">ಪತ್ರಕರ್ತರ ವಿರುದ್ಧ ತೆಗೆದುಕೊಳ್ಳಲಾದ ಯಾವುದೇ ಕ್ರಮವು ಸೂಕ್ತ ಪ್ರಕ್ರಿಯೆಯನ್ನು ಅನುಸರಿಸುತ್ತದೆ ಮತ್ತು</a> ಮುಕ್ತ ಅಭಿವ್ಯಕ್ತಿ ಹಾಗೂ ನ್ಯಾಯದ ತತ್ವಗಳನ್ನು ಎತ್ತಿಹಿಡಿಯುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕೆಂದು ಸಂಪಾದಕರ ಸಂಘವು ತೆಲಂಗಾಣ ಸರ್ಕಾರವನ್ನು ಒತ್ತಾಯಿಸಿದೆ .</p>



<p>&#8220;ವಿಶೇಷವಾಗಿ ಬೆಳಗಿನ ಜಾವದ ಕಾರ್ಯಾಚರಣೆಯಲ್ಲಿ ಪತ್ರಕರ್ತರೊಬ್ಬರ ಬಂಧನವು, ಅಂತಹ ವಿಷಯಗಳಲ್ಲಿ ಪೊಲೀಸ್ ಬಲವನ್ನು ಬಳಸುವ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ,&#8221; ಎಂದು ಗಿಲ್ಡ್ ಹೇಳಿದೆ.</p>



<p>ಪೊಲೀಸರ ಕ್ರಮವನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದ್ದು, ಅಧಿಕಾರಿಗಳು &#8220;ಇಬ್ಬರು ಯೂಟ್ಯೂಬರ್‌ಗಳ ವಿರುದ್ಧ ಸಾಕಷ್ಟು ಪುರಾವೆಗಳನ್ನು,&#8221; ಸಂಗ್ರಹಿಸಿದ್ದಾರೆ ಎಂದು ಹೇಳಿಕೊಂಡಿದೆ.</p>



<p>&#8220;ರೇವತಿ ಮತ್ತು ಅವರ ತಂಡವು ಬಿಆರ್‌ಎಸ್‌ ಜೊತೆ ಸಂಪರ್ಕ ಹೊಂದಿದ್ದು, ಕಳೆದ ಎರಡು ತಿಂಗಳಿನಿಂದ ಬಿಆರ್‌ಎಸ್ ಪಕ್ಷದ ಸಾಮಾಜಿಕ ಮಾಧ್ಯಮ ವಿಚಾರವನ್ನು ಪ್ರಚಾರ ಮಾಡುತ್ತಿದ್ದಾರೆ,&#8221; ಎಂದು ರಾಜ್ಯ ಕಾಂಗ್ರೆಸ್ ನಾಯಕಿ ಮಾನವತ ರೈ <em>ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ</em> ತಿಳಿಸಿದ್ದಾರೆ .</p>



<p>&#8220;ಈ ಸಾಮಾಜಿಕ ಮಾಧ್ಯಮ ವಿಷಯದಲ್ಲಿ, ಸಾಮಾನ್ಯ ಜನರನ್ನು ಮೋಸಗೊಳಿಸಲು ಅವಹೇಳನಕಾರಿ ಕಾಮೆಂಟ್‌ಗಳು ಮತ್ತು ಸುಳ್ಳುಗಳನ್ನು ಹರಡಲಾಗುತ್ತಿದೆ ಎಂಬುದಕ್ಕೆ ಪೊಲೀಸರು ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಅವರು ಮಾನಹಾನಿಕರ ವಿಷಯವನ್ನು ಸಹ ಹರಡುತ್ತಿದ್ದಾರೆ. ಐಟಿ ಕಾಯ್ದೆ ಮತ್ತು ಬಿಎನ್‌ಎಸ್‌ನ ಹಲವಾರು ಸೆಕ್ಷನ್‌ಗಳನ್ನು ಉಲ್ಲಂಘಿಸಿದ್ದಕ್ಕಾಗಿ ಇಬ್ಬರನ್ನು ಬಂಧಿಸಲಾಗಿದೆ&#8221; ಎಂದು ರೈ ತಿಳಿಸಿದ್ದಾರೆ.</p>



<p></p>
]]></content:encoded>
					
		
		
			</item>
		<item>
		<title>ಭಾರತದಲ್ಲಿ ಪತ್ರಕರ್ತರು ಎಷ್ಟು ಸೇಫ್?</title>
		<link>https://peepalmedia.com/press-freedom-in-india-2023/</link>
		
		<dc:creator><![CDATA[Charan Aivarnad]]></dc:creator>
		<pubDate>Fri, 17 Nov 2023 10:59:01 +0000</pubDate>
				<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[freed of speech]]></category>
		<category><![CDATA[india]]></category>
		<category><![CDATA[Journalism]]></category>
		<category><![CDATA[Journalist]]></category>
		<category><![CDATA[journalists]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[media]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[press freedom]]></category>
		<category><![CDATA[state politics]]></category>
		<category><![CDATA[trending news]]></category>
		<category><![CDATA[viral news]]></category>
		<guid isPermaLink="false">https://peepalmedia.com/?p=32414</guid>

					<description><![CDATA[ಬೆಂಗಳೂರು: ಎನ್‌ಡಿ ಟಿವಿ ಎಂದೇ ಖ್ಯಾತವಾಗಿರುವ ನ್ಯೂ ಡೆಲ್ಲಿ ಟೆಲಿವಿಷನ್‌ 1989 ರಲ್ಲಿ ತನ್ನ ಮೊದಲ ವಾರದ ಬುಲ್ಲಟಿನ್‌ ಆರಂಭಿಸಿ, ದೇಶ ವಿದೇಶಗಳ ಸುದ್ದಿಗಳನ್ನು ಮನೆಮನಗಳಿಗೆ ತಲುಪಿಸಲು ಶುರುಮಾಡಿತು. ಸುಧೀರ್ಘ ಸುದ್ದಿ ಪಯಣದ ನಂತರ ಎನ್‌ಡಿ ಟಿವಿ 2022ರಲ್ಲಿ ತನ್ನ ಎಲ್ಲಾ ಸ್ವಂತಿಕೆಯನ್ನು ಕಳೆದುಕೊಂಡು ದೇಶದ ಅತ್ಯಂತ ಶ್ರೀಮಂತನೋರ್ವನ ಸೊತ್ತಾಗಿ ಬದಲಾಯಿತು. ಪ್ರಣೋಯ್ ಮತ್ತು ರಾಧಿಕಾ ರಾಯ್ ಆರಂಭಿಸಿದ NDTV ಹಲವು ಬಾರಿ ಬೇರೆ ಬೇರೆ ಮಾಲೀಕರನ್ನು ಕಂಡಿದೆ. ಕೊನೆಗೆ &#160;130 ಶತಕೋಟಿ ಡಾಲರ್ ಆಸ್ತಿಯ ಏಷ್ಯಾದ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಎನ್‌ಡಿ ಟಿವಿ ಎಂದೇ ಖ್ಯಾತವಾಗಿರುವ ನ್ಯೂ ಡೆಲ್ಲಿ ಟೆಲಿವಿಷನ್‌ 1989 ರಲ್ಲಿ ತನ್ನ ಮೊದಲ ವಾರದ ಬುಲ್ಲಟಿನ್‌ ಆರಂಭಿಸಿ, ದೇಶ ವಿದೇಶಗಳ ಸುದ್ದಿಗಳನ್ನು ಮನೆಮನಗಳಿಗೆ ತಲುಪಿಸಲು ಶುರುಮಾಡಿತು. ಸುಧೀರ್ಘ ಸುದ್ದಿ ಪಯಣದ ನಂತರ ಎನ್‌ಡಿ ಟಿವಿ 2022ರಲ್ಲಿ ತನ್ನ ಎಲ್ಲಾ ಸ್ವಂತಿಕೆಯನ್ನು ಕಳೆದುಕೊಂಡು ದೇಶದ ಅತ್ಯಂತ ಶ್ರೀಮಂತನೋರ್ವನ ಸೊತ್ತಾಗಿ ಬದಲಾಯಿತು.</p>



<p>ಪ್ರಣೋಯ್ ಮತ್ತು ರಾಧಿಕಾ ರಾಯ್ ಆರಂಭಿಸಿದ NDTV ಹಲವು ಬಾರಿ ಬೇರೆ ಬೇರೆ ಮಾಲೀಕರನ್ನು ಕಂಡಿದೆ. ಕೊನೆಗೆ &nbsp;130 ಶತಕೋಟಿ ಡಾಲರ್ ಆಸ್ತಿಯ ಏಷ್ಯಾದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿಯ ಪಾಲಾಯಿತು. 2022ರ ಆಗಸ್ಟ್‌ನಲ್ಲಿ ಅದಾನಿಯವರ ಹೊಸ ಮಾಧ್ಯಮ ಉದ್ಯಮ AMG ಮೀಡಿಯಾ ನೆಟ್‌ವರ್ಕ್ಸ್ ಎನ್‌ಡಿ ಟಿವಿಯ ಕಂಪನಿಯಲ್ಲಿದ್ದ ತನ್ನ 29% ಶೇರನ್ನು ಪರೋಕ್ಷವಾಗಿ ಸ್ವಾಧೀನಪಡಿಸಿಕೊಂಡಿತು ಮತ್ತು 26% ಗೆ ಆಫರ್‌ ನೀಡಿತು. ಇದರಿಂದ ಬೇಸರಗೊಂಡ ಪ್ರಣೋಯ್‌ ರಾಯ್‌ ರಾಜೀನಾಮೆ ನೀಡಿದರು.&nbsp;</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="956" height="526" src="https://peepalmedia.com/wp-content/uploads/2023/11/image-50.png" alt="" class="wp-image-32420" style="width:444px;height:auto" srcset="https://peepalmedia.com/wp-content/uploads/2023/11/image-50.png 956w, https://peepalmedia.com/wp-content/uploads/2023/11/image-50-300x165.png 300w, https://peepalmedia.com/wp-content/uploads/2023/11/image-50-768x423.png 768w, https://peepalmedia.com/wp-content/uploads/2023/11/image-50-150x83.png 150w, https://peepalmedia.com/wp-content/uploads/2023/11/image-50-696x383.png 696w" sizes="(max-width: 956px) 100vw, 956px" /></figure></div>


<p>2014ರಲ್ಲಿ ಗೌತಮ್‌ ಅದಾನಿಯವರ ಸಹೋದರ ಮುಕೇಶ್‌ ಅಂಬಾನಿ ಭಾರತದ ದೊಡ್ಡ ಮೀಡಿಯಾ ಕಂಪನಿಯಾದ ನೆಟ್‌ವರ್ಕ್‌18 ಅನ್ನು ಖರೀದಿ ಮಾಡಿದ್ದರು.</p>



<p>‌<a href="https://reutersinstitute.politics.ox.ac.uk/digital-news-report/2022/india" data-type="link" data-id="https://reutersinstitute.politics.ox.ac.uk/digital-news-report/2022/india">Reuters Institute for the Study of Journalismನ</a> ಅಧ್ಯಯನದ ಪ್ರಕಾರ ಟಿವಿ ಹಾಗೂ ಆನ್‌ಲೈನ್‌ಗಳಲ್ಲಿ ಸುಮಾರು 35 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿರುವ ಎನ್‌ಡಿ ಟಿವಿಯನ್ನು 75% ಬಿಜೆಪಿ ಹಿಂಬಾಲಕರು ಮತ್ತು 81%&nbsp; ಇತರ ಪಕ್ಷಗಳ ಹಿಂಬಾಲಕರು ಸುದ್ದಿ ಹಾಗೂ ಮಾಹಿತಿಗಳಿಗಾಗಿ ಅವಲಂಬಿಸಿದ್ದರು.</p>



<p>ದಶಕದಿಂದ <a href="https://www.ndtv.com/communication/ndtv-result-tv-profit-at-all-time-high-groups-best-in-over-a-decade-2986456" data-type="link" data-id="https://www.ndtv.com/communication/ndtv-result-tv-profit-at-all-time-high-groups-best-in-over-a-decade-2986456">ಹೆಚ್ಚಿನ ಲಾಭವನ್ನು ಕಂಡಿದ್ದ</a> ಹಾಗೂ ಸ್ವತಂತ್ರ ಮಾಧ್ಯಮವಾಗಿ ಗುರುತಿಸಿಕೊಂಡಿದ್ದ ಎನ್‌ಡಿ ಟಿವಿ ಗೌತಮ್‌ ಅದಾನಿ ವಶವಾಯಿತು. ಪ್ರಣೋಯ್ ರಾಯ್, ರಾಧಿಕಾ ರಾಯ್, ಸುಪರ್ಣಾ ಸಿಂಗ್, ಕನ್ವಾಲ್ಜಿತ್ ಸಿಂಗ್ ಬೇಡಿ, ರವೀಶ್ ಕುಮಾರ್, ಸಾರಾ ಜಾಕೋಬ್, ನಿಧಿ ರಜ್ದಾನ್, ಶ್ರೀನಿವಾಸನ್ ಜೈನ್ ಸೇರಿದಂತೆ ಹದಿನಾರು ಮಂದಿ ಎನ್‌ಡಿ ಟಿವಿಯ ಬೆನ್ನೆಲುಬಿನಂತಿದ್ದ ಪತ್ರಕರ್ತರು ಸಾಲು ಸಾಲಾಗಿ ಸಂಸ್ಥೆಯನ್ನು ತೊರೆದರು.</p>



<p>ಹೀಗೆ, ಸುಮಾರು ಮೂರು ದಶಕಗಳಿಂದ ಮಾಧ್ಯಮ ಜಗತ್ತಿನಲ್ಲಿ ಸ್ವತಂತ್ರ ವರದಿಗಾರಿಕೆಯ ಛಾಪನ್ನು ಮೂಡಿಸಿದ ಎನ್‌ಡಿ ಟಿವಿಯ ವೈಭವ ಅಂತ್ಯವಾಯಿತು.</p>



<p class="has-text-align-center">**********************</p>



<p>2020ರ ಅಕ್ಟೋಬರ್‌ 7ರಂದು 19 ವರ್ಷ ಪ್ರಾಯದ ದಲಿತ ಹೆಣ್ಣುಮಗಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವರದಿ ಮಾಡಲು ಉತ್ತರ ಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದ ಕೇರಳ ಮೂಲದ ಸುದ್ದಿ ಪೋರ್ಟಲ್‌ ಅಳಿಮುಖಂನ ಪತ್ರಕರ್ತ ಸಿದ್ಧಿಕ್‌ ಕಪ್ಪನ್‌ರನ್ನು ಬಂಧಿಸಲಾಗಿತ್ತು.</p>



<p>ಕಾನೂನು ಸುವ್ಯವಸ್ಥೆ ಕದಡಲು ಹಾಗೂ ಎಸ್‌ಎಫ್‌ಐ ಜೊತಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ ಪೊಲೀಸರು ಸಿದ್ಧಿಕ್‌ ಅವರನ್ನು ಬಂಧಿಸಿದ್ದರು.</p>


<div class="wp-block-image">
<figure class="aligncenter size-full is-resized"><img decoding="async" width="650" height="400" src="https://peepalmedia.com/wp-content/uploads/2023/11/image-51.png" alt="" class="wp-image-32422" style="width:417px;height:auto" srcset="https://peepalmedia.com/wp-content/uploads/2023/11/image-51.png 650w, https://peepalmedia.com/wp-content/uploads/2023/11/image-51-300x185.png 300w, https://peepalmedia.com/wp-content/uploads/2023/11/image-51-150x92.png 150w" sizes="(max-width: 650px) 100vw, 650px" /><figcaption class="wp-element-caption">ಸಿದ್ಧಿಕ್‌ ಕಪ್ಪನ್‌</figcaption></figure></div>


<p>ಕಪ್ಪನ್ ವಿರುದ್ಧ ಅಕ್ಟೋಬರ್ 7, 2020 ರಂದು ಮಥುರಾದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124A (ದೇಶದ್ರೋಹ), 153A (ಧರ್ಮದ ಆಧಾರದ ಮೇಲೆ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295A (ಉದ್ದೇಶಪೂರ್ವಕ ಕೃತ್ಯಗಳು, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA), ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ (Infirmation Technilogy Act) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಯಿತು. ಇಡಿ (ಜಾರಿ ನಿರ್ದೇಶನಾಲಯ &#8211; ED) ಕೂಡಾ ಮನಿ ಲಾಂಡರಿಂಗ್‌ ಕೇಸು ದಾಖಲಿಸಿತು.&nbsp; ಸದ್ಯ ಸುಪ್ರೀಂ ಕೋರ್ಟಿನಲ್ಲಿ ಜಾಮೀನು ಪಡೆದು ಎರಡು ವರ್ಷಗಳ ಕಾರಾಗೃಹ ವಾಸದ ನಂತರ ಹೊರಬಂದಿದ್ದಾರೆ.</p>



<p class="has-text-align-center">**********************</p>



<p>2021ರ <a href="https://cpj.org/reports/2021/12/number-of-journalists-behind-bars-reaches-global-high/" data-type="link" data-id="https://cpj.org/reports/2021/12/number-of-journalists-behind-bars-reaches-global-high/">Committee to Protect Journalists (CPJ) ವರದಿ</a>ಯ ಪ್ರಕಾರ 2021 ನವೆಂಬರ್‌ನಲ್ಲಿ ಅವಿನಾಶ್ ಝಾ (BNN News), ಆಗಸ್ಟ್‌ನಲ್ಲಿ ಚೆನ್ನಕೇಶವಲು ( EV 5) ಮತ್ತು ಮನೀಷ್ ಸಿಂಗ್ (ಸುದರ್ಶನ್ ಟಿವಿ) ಮತ್ತು ಜೂನ್‌ನಲ್ಲಿ ಸುಲಭ್ ಶ್ರೀವಾಸ್ತವ (ABP News) ತಮ್ಮ &nbsp;ವೃತ್ತಿಯ ಕಾರಣಕ್ಕಾಗಿ ಕೊಲ್ಲಲ್ಪಟ್ಟಿದ್ದಾರೆ.&nbsp; ಸಾಧನ ಟಿವಿ ಪ್ಲಸ್‌ನ ರಮಣ್ ಕಶ್ಯಪ್ ಎಂಬ ಪತ್ರಕರ್ತ ಅಕ್ಟೋಬರ್‌ನಲ್ಲಿ ನಡೆದ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಹತರಾಗಿದ್ದರು.</p>



<p>ಕಾಶ್ಮೀರದ ಪತ್ರಕರ್ತ ಆಸಿಫ್ ಸುಲ್ತಾನ್ ಎಂಬವರನ್ನು ಬೇಲ್‌ ಸಿಕ್ಕಿದರೂ ಪಬ್ಲಿಕ್‌ ಸೇಫ್ಟಿ ಕಾಯ್ದೆಯ ಅಡಿಯಲ್ಲಿ ಬಂಧಿಸಿ 2018ರಿಂದ ಜೈಲಿನಲ್ಲಿಯೇ ಇದ್ದಾರೆ.</p>


<div class="wp-block-image">
<figure class="aligncenter size-full is-resized"><img decoding="async" width="858" height="486" src="https://peepalmedia.com/wp-content/uploads/2023/11/image-52.png" alt="" class="wp-image-32425" style="width:377px;height:auto" srcset="https://peepalmedia.com/wp-content/uploads/2023/11/image-52.png 858w, https://peepalmedia.com/wp-content/uploads/2023/11/image-52-300x170.png 300w, https://peepalmedia.com/wp-content/uploads/2023/11/image-52-768x435.png 768w, https://peepalmedia.com/wp-content/uploads/2023/11/image-52-150x85.png 150w, https://peepalmedia.com/wp-content/uploads/2023/11/image-52-696x394.png 696w" sizes="(max-width: 858px) 100vw, 858px" /><figcaption class="wp-element-caption">ಕಾಶ್ಮೀರದ ಪತ್ರಕರ್ತ ಆಸಿಫ್ ಸುಲ್ತಾನ್</figcaption></figure></div>


<p>ಅಕ್ಟೋಬರ್‌&nbsp; 22, 2021ರಿಂದ ಯುಎಪಿಎ ಅಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದ ಫೋಟೋ ಜರ್ನಲಿಸ್ಟ್ ಮನನ್ ದಾರ್‌ಗೆ &nbsp;438 ದಿನಗಳ ನಂತರ ಸಾಕ್ಷ್ಯಗಳಿಲ್ಲದೇ ಇದ್ದರಿಂದ ಬೇಲ್‌ ಸಿಕ್ಕಿತು!&nbsp;</p>



<p>ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ್ ತೇಲ್ತುಂಬ್ಡೆ ಮತ್ತು ಗೌತಮ್ ನವ್ಲಾಖಾ ಏಪ್ರಿಲ್ 2020 ರಿಂದ ಜೈಲಿನಲ್ಲಿದ್ದಾರೆ. ಶಂಕಿತ ಬೇಹುಗಾರಿಕೆಯ ಆರೋಪದಡಿ ಸಪ್ಟೆಂಬರ್‌ 2020ರಂದು ದೆಹಲಿ ಪೊಲೀಸರಿಂದ ಬಂಧಿತರಾಗಿದ್ದ ಸ್ವತಂತ್ರ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು, ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಜುಲೈ 1, 2021 ರಂದು ಇಡಿ (ಜಾರಿ ನಿರ್ದೇಶನಾಲಯ) ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮತ್ತೆ ಬಂಧಿಸಿತು.</p>



<p>ಮಧ್ಯಪ್ರದೇಶದ ಪತ್ರಕರ್ತ, ಸಹರಾ ಸಮಯ್‌, ಎಎನ್‌ಐ, ಎನ್‌ಡಿ ಟಿವಿಗೆ ವರದಿ ಮಾಡುತ್ತಿದ್ದ ತನ್ವೀರ್ ವಾರ್ಸಿಯವರನ್ನು ಭೋಪಾಲ್‌ನಲ್ಲಿ ಅಕ್ರಮವಾಗಿ ಪೇಪರ್ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಿ ನಾಲ್ಕು ತಿಂಗಳು ಜೈಲಿನಲ್ಲಿ ಇಡಲಾಯಿತು. ಮಧ್ಯಪ್ರದೇಶ ಸರ್ಕಾರ ಕೋವಿಡ್‌-19 ನಿರ್ವಹಣೆಯಲ್ಲಿ ವಿಫಲವಾಗಿರುವ ಬಗ್ಗೆ ವರದಿ ಮಾಡಿದ್ದರು. ಇದೇ ಮಧ್ಯಪ್ರದೇಶ ಸರ್ಕಾರ ಎರಡೇ ಎರಡು ತಿಂಗಳಲ್ಲಿ ಕೋವಿಡ್‌ ಹಾಗೂ ದಲಿತರ ಮೇಲಿನ ದೌರ್ಜನ್ಯದ ವರದಿ ಮಾಡಿದ್ದಕ್ಕಾಗಿ ಆರು ಮಂದಿ ಪತ್ರಕರ್ತರನ್ನು ಬಂಧಿಸಿತ್ತು.</p>



<p class="has-text-align-center">**********************</p>



<p>3 ಅಕ್ಟೋಬರ್ 2023,</p>



<p>ನ್ಯೂಸ್‌ಕ್ಲಿಕ್‌ ನ್ಯೂಸ್‌ಪೋರ್ಟಲ್‌ಗೆ ಸಂಬಂಧಿಸಿದ ಹಲವಾರು ಪತ್ರಕರ್ತರ ಮನೆಗಳು ಸೇರಿದಂತೆ, ಮೂವತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದೆಹಲಿ ಪೊಲೀಸರು ದಾಳಿ ನಡೆಸಿದ್ದರು. ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರ್ಕಾಯಸ್ಥ, ವೀಡಿಯೋ ಪತ್ರಕರ್ತ ಅಭಿಸಾರ್ ಶರ್ಮಾ, ರಾಜಕೀಯ ನಿರೂಪಕ &#8211; ಹಿರಿಯ ಪತ್ರಕರ್ತ ಔನಿಂದ್ಯೋ ಚಕ್ರವರ್ತಿ, ಹಿರಿಯ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ, ಭಾಷಾ ಸಿಂಗ್, ಬಪ್ಪಾ ಸಿನ್ಹಾ ಮತ್ತು ಊರ್ಮಿಳೇಶ್ ಮೊಲದಲಾದವರ ಮನೆಗಳ ಮೇಲೆ ಪೊಲೀಸ್‌ ರೈಡ್ ನಡೆಸಿ ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌, ಹಾರ್ಡ್‌ಡಿಸ್ಕ್‌ ಮತ್ತಿತರ ಇಲೆಕ್ಟ್ರಾನಿಕ್‌ ಉಪಕರಣಗಳನ್ನು ವಶಪಡಿಸಿಕೊಂಡರು. ಪ್ರಬೀರ್ ಪುರ್ಕಾಯಸ್ಥ ಸೇರಿದಂತೆ ಕೆಲವರ ಬಂಧನವಾಯ್ತು.</p>


<div class="wp-block-image">
<figure class="aligncenter size-full is-resized"><img loading="lazy" decoding="async" width="549" height="309" src="https://peepalmedia.com/wp-content/uploads/2023/11/image-54.png" alt="" class="wp-image-32427" style="width:366px;height:auto" srcset="https://peepalmedia.com/wp-content/uploads/2023/11/image-54.png 549w, https://peepalmedia.com/wp-content/uploads/2023/11/image-54-300x169.png 300w, https://peepalmedia.com/wp-content/uploads/2023/11/image-54-150x84.png 150w" sizes="auto, (max-width: 549px) 100vw, 549px" /><figcaption class="wp-element-caption">ಪ್ರಬೀರ್ ಪುರ್ಕಾಯಸ್ಥ</figcaption></figure></div>


<p>ದೆಹಲಿ ಪೊಲೀಸರು ನ್ಯೂಸ್‌ಕ್ಲಿಕ್ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದರು. ಆಗಸ್ಟ್ 2023 ರಲ್ಲಿ, ಜಾರಿ ನಿರ್ದೇಶನಾಲಯ ನ್ಯೂಸ್‌ಕ್ಲಿಕ್ ವಿರುದ್ಧ ಚೀನಾ ಪರ ಪ್ರಚಾರ, ಹಾಗೂ ಮನಿ ಲಾಂಡರಿಂಗ್‌ನಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿತ್ತು.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="569" src="https://peepalmedia.com/wp-content/uploads/2023/11/image-53-1024x569.png" alt="" class="wp-image-32426" style="width:435px;height:auto" srcset="https://peepalmedia.com/wp-content/uploads/2023/11/image-53-1024x569.png 1024w, https://peepalmedia.com/wp-content/uploads/2023/11/image-53-300x167.png 300w, https://peepalmedia.com/wp-content/uploads/2023/11/image-53-768x427.png 768w, https://peepalmedia.com/wp-content/uploads/2023/11/image-53-150x83.png 150w, https://peepalmedia.com/wp-content/uploads/2023/11/image-53-696x387.png 696w, https://peepalmedia.com/wp-content/uploads/2023/11/image-53-1068x594.png 1068w, https://peepalmedia.com/wp-content/uploads/2023/11/image-53.png 1200w" sizes="auto, (max-width: 1024px) 100vw, 1024px" /></figure></div>


<p class="has-text-align-center">**********************</p>



<p style="font-size:20px"><strong>ಜಗತ್ತಿನಲ್ಲಿ ನಾವು ಎಲ್ಲಿದ್ದೇವೆ?</strong></p>



<p>2023 ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ (<a href="https://www.thehindu.com/news/national/india-slips-in-world-press-freedom-index-ranks-161-out-of-180-countries/article66806608.ece" data-type="link" data-id="https://www.thehindu.com/news/national/india-slips-in-world-press-freedom-index-ranks-161-out-of-180-countries/article66806608.ece">World Press Freedom Index</a>) ಭಾರತದ 180 ದೇಶಗಳಲ್ಲಿ 161ರ ಸ್ಥಾನಕ್ಕೆ ಕುಸಿದಿದೆ ಎಂದು ಜಾಗತಿಕ ಮಾಧ್ಯಮ ವಾಚ್‌ಡಾಗ್,<a href="https://rsf.org/en" data-type="link" data-id="https://rsf.org/en"> ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್</a> (RSF) ವರದಿಯೊಂದನ್ನು ಬಿಡುಗಡೆ ಮಾಡಿದೆ. 2022ರಲ್ಲಿ ಭಾರತ 150ನೇ ಸ್ಥಾನದಲ್ಲಿತ್ತು. ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ಕಳೆದ ವರ್ಷ (2022)ರಲ್ಲಿ 157ನೇ ಸ್ಥಾನದಲ್ಲಿದ್ದ ಪಾಕಿಸ್ತಾನ 2023ರಲ್ಲಿ 150 ನೇ ಸ್ಥಾನಕ್ಕೆ ಸುಧಾರಣೆಯನ್ನು ಕಂಡಿದೆ.   &nbsp;</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="734" src="https://peepalmedia.com/wp-content/uploads/2023/11/image-55-1024x734.png" alt="" class="wp-image-32430" style="width:426px;height:auto" srcset="https://peepalmedia.com/wp-content/uploads/2023/11/image-55-1024x734.png 1024w, https://peepalmedia.com/wp-content/uploads/2023/11/image-55-300x215.png 300w, https://peepalmedia.com/wp-content/uploads/2023/11/image-55-768x550.png 768w, https://peepalmedia.com/wp-content/uploads/2023/11/image-55-150x108.png 150w, https://peepalmedia.com/wp-content/uploads/2023/11/image-55-696x499.png 696w, https://peepalmedia.com/wp-content/uploads/2023/11/image-55-1068x765.png 1068w, https://peepalmedia.com/wp-content/uploads/2023/11/image-55.png 1440w" sizes="auto, (max-width: 1024px) 100vw, 1024px" /></figure></div>


<p>ಪತ್ರಕರ್ತರ ಮೇಲೆ ಹಿಂಸಾಚಾರ, ರಾಜಕೀಯ ಪಕ್ಷಪಾತದ ಮಾಧ್ಯಮಗಳು ಮತ್ತು ಮಾಧ್ಯಮಗಳಲ್ಲಿ ಮಾಲೀಕತ್ವದ ಕೇಂದ್ರೀಕರಣದಿಂದಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರಾದ, ಹಿಂದುತ್ವವಾದಿ ಪ್ರಧಾನಿ ನರೇಂದ್ರ ಮೋದಿಯವರು 2014 ರ ಆಢಳಿತವಿರುವ &#8220;ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ&#8221; ದಲ್ಲಿ ಪತ್ರಿಕಾ ಸ್ವಾತಂತ್ರ್ಯ ಬಿಕ್ಕಟ್ಟಿನಲ್ಲಿದೆ ಎಂಬುದನ್ನು ತೋರಿಸುತ್ತದೆ. ಹೀಗಂತ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಹೇಳದೆ.</p>



<p class="has-text-align-center">**********************</p>



<p style="font-size:20px"><strong>ಬ್ರಟೀಷರ ಕಾಲದಲ್ಲಿ ಏನಾಯ್ತು?</strong></p>



<p>1782ರ ಮಾರ್ಚ್ 23, ಭಾರತದ ಮೊದಲ ಪತ್ರಿಕೆಯ &#8216;ದಿ ಬೆಂಗಾಳ್‌ ಗಝೆಟ್‌&#8217;ನ ಮಾಲಕನನ್ನು ಬಂಧಿಸಲಾಯಿತು. ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್‌ ಬಗ್ಗೆ ಜೇಮ್ಸ್‌ ಅಗಸ್ಟಸ್‌ ಹಿಕ್ಕಿ ತನ್ನ ಪತ್ರಿಕೆಯಲ್ಲಿ&nbsp; &#8216;ಲಾರ್ಡ್ ಕೈವ್‌ನ ಚಿಂತಾಜನಕ ಉತ್ತರಾಧಿಕಾರಿ” ಎಂದು ಬರೆದಿದ್ದ. ಇದರ ಪರಿಣಾಮವಾಗಿ ಪತ್ರಿಕೆಯ ಮುದ್ರಣಾಲಯವನ್ನು ಕೆಡವಲಾಯಿತು. ಈತ ತನ್ನ ಪತ್ರಿಕೆಯಲ್ಲಿ ಶ್ರೀಮಂತರ ಬಗ್ಗೆ , ಅವರು ಮಾಡುತ್ತಿದ್ದ ಪಾರ್ಟಿಗಳ ಬಗ್ಗೆ, ಅಲ್ಲಿ ಅವರು ಏನೇನು ಕದಿಯುತ್ತಿದ್ದರು ಎಂದೆಲ್ಲಾ ವರದಿ ಮಾಡುತ್ತಿದ್ದ. ಒಮ್ಮೆ ನ್ಯಾಯಾದೀಶರನ್ನು ಕೂಡ ಗೇಲಿ ಮಾಡಿದ್ದ. ಈ ಎಲ್ಲಾ ಕಾರಣಗಳಿಂದಾಗಿ ಹಿಕ್ಕಿ ಆರಂಭಿಸಿದ ದಿ ಬೆಂಗಾಳ್‌ ಗಝೆಟ್‌ ಮೇಲೆ ನಿಷೇಧ ಹೇರಳಾಯಿತು. ಅವನ ಮುದ್ರಣಾಲಯದ ಮೇಲೆ ದಾಳಿ ಮಾಡಲಾಯಿತು. ಸಂಪಾದಕ ಜೆಎ ಹಿಕ್ಕಿಯನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು.  </p>


<div class="wp-block-image">
<figure class="aligncenter size-large is-resized"><img loading="lazy" decoding="async" width="629" height="1024" src="https://peepalmedia.com/wp-content/uploads/2023/11/image-56-629x1024.png" alt="" class="wp-image-32431" style="width:313px;height:auto" srcset="https://peepalmedia.com/wp-content/uploads/2023/11/image-56-629x1024.png 629w, https://peepalmedia.com/wp-content/uploads/2023/11/image-56-184x300.png 184w, https://peepalmedia.com/wp-content/uploads/2023/11/image-56-768x1250.png 768w, https://peepalmedia.com/wp-content/uploads/2023/11/image-56-150x244.png 150w, https://peepalmedia.com/wp-content/uploads/2023/11/image-56-300x488.png 300w, https://peepalmedia.com/wp-content/uploads/2023/11/image-56-696x1133.png 696w, https://peepalmedia.com/wp-content/uploads/2023/11/image-56.png 800w" sizes="auto, (max-width: 629px) 100vw, 629px" /></figure></div>


<p>1823 ರಲ್ಲಿ, ಗವರ್ನರ್-ಜನರಲ್ ಜಾನ್ ಆಡಮ್ಸ್ ಅವರು ಪರವಾನಗಿ ನಿಯಂತ್ರಣ ಸುಗ್ರೀವಾಜ್ಞೆಯನ್ನು (Licensing Regulation Ordinance) ಹೊರತಂದ. ಪರವಾನಗಿ ಇಲ್ಲದೆ &nbsp;ಮುದ್ರಣಾಲಯವನ್ನು ನಡೆಸುವುದು ಶಿಕ್ಷಾರ್ಹ ಅಪರಾಧವಾವಾಯಿತು. ಮುಖ್ಯವಾಗಿ ಇದು ಭಾರತೀಯರು ನಡೆಸುತ್ತಿದ್ದ ಪತ್ರಿಕೆಗಳನ್ನು ಗುರಿಯಾಗಿಸಿ ಜಾರಿಗೊಳಿಸಲಾಗಿತ್ತು. ಇದರಿಂದಾಗಿ ರಾಜಾ ರಾಮ್ ಮೋಹನ್ ರಾಯ್ 1822 ರಲ್ಲಿ ಆರಂಭಿಸಿದ ಪರ್ಷಿಯನ್ ಜರ್ನಲ್ &#8216;ಮಿರಾತ್-ಉಲ್-ಅಖ್ಬರ್&#8217; ತನ್ನ ಪ್ರಕಟಣೆಯನ್ನು ನಿಲ್ಲಿಸಬೇಕಾಯ್ತು.</p>



<p>ಗವರ್ನರ್-ಜನರಲ್ ಸರ್ ಚಾರ್ಲ್ಸ್ ಮೆಟ್‌ಕಾಲ್ಫ್ 1835 ರಲ್ಲಿ Press Act &nbsp;ಜಾರಿಗೆ ತಂದು, ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಮರುಸ್ಥಾಪಿಸಿ &#8220;liberator of the Indian press&#8221; ಎಂದು ಕರೆಸಿಕೊಂಡ. 1823 ರ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಿದ. ಈ ಹೊಸ ಪತ್ರಿಕಾ ಕಾಯಿದೆ- Press Act &nbsp;&nbsp;(1835)ಯನ್ನು Metcalfe Act ಎಂದು ಕರೆಯಲಾಗುತ್ತದೆ.</p>



<p>ಬ್ರಿಟಿಷ್ ಭಾರತದಲ್ಲಿ, ಭಾರತೀಯ ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಮತ್ತು ಬ್ರಿಟಿಷ್ ನೀತಿಗಳ ಬಗ್ಗೆ ಬರುತ್ತಿದ್ದ ಟೀಕೆಗಳನ್ನು ತಡೆಯಲು ವೆರ್ನಾಕ್ಯುಲರ್ ಪ್ರೆಸ್ ಆಕ್ಟ್ (1878) ಜಾರಿಗೆ ತರಲಾಗಿತ್ತು. ಸರ್ಕಾರದ ಬಗ್ಗೆ ಸ್ಥಳೀಯ ಜನರಲ್ಲಿ &nbsp;ಅಸಮಾಧಾನವನ್ನು ಉಂಟುಮಾಡುವ ವರದಿಗಳು ಮತ್ತು ದೇಶದ್ರೋಹದ ಬರವಣಿಗೆಯನ್ನು ಪ್ರಕಟಿಸುತ್ತಿದ್ದ ಸ್ಥಳೀಯ ಪತ್ರಿಕೆಗಳ ಮೇಲೆ ನಿಯಂತ್ರಣ ಹೇರಲು 1878ರ ವರ್ನಾಕ್ಯುಲರ್ ಪ್ರೆಸ್ ಆಕ್ಟ್ ಜಾರಿಗೊಳಿಸಲಾಯಿತು.</p>



<p>1910ರಲ್ಲಿ ಇಂಡಿಯನ್ ಪ್ರೆಸ್ ಆಕ್ಟ್ -1910 ಜಾರಿಗೆ ತಂದು ಸ್ವದೇಶಿ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಲಾಯಿತು. &nbsp;ವರ್ನಾಕ್ಯುಲರ್ ಪ್ರೆಸ್ ಆಕ್ಟ್ ಗಿಂತಲೂ ಕರಾಳವಾಗಿ ಮಾಧ್ಯಮ ಸ್ವಾತಂತ್ರವ್ಯವನ್ನು ಈ ಕಾಯ್ದೆ ಹತ್ತಿಕ್ಕಿತು. &nbsp;</p>



<p>ಬ್ರಿಟೀಷ್‌ ಸರ್ಕಾರ ನಿರಂತರವಾಗಿ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಮಾಡಿದೆ. ಅಗಸ್ಟಸ್‌ ಹಿಕ್ಕಿಯ ಗಝೆಟ್‌ ನಿಂತು ಒಂದು ದಶಕವಾದ ಮೇಲೆ ಬ್ರಿಟೀಷರು ತಂದ&nbsp;ಬ್ರಿಟಿಷ್ ರಾಜ್ಯದ್ರೋಹ/ದೇಶದ್ರೋಹ ಕಾನೂನಿನ ಸೆಕ್ಷನ್ 124ಎ, ಸರ್ಕಾರಕ್ಕೆ ತನ್ನ ವಿರುದ್ದ ಮಾತನಾಡುವವರನ್ನು ಹತ್ತಿಕ್ಕಲು ಎಲ್ಲಾ ರೀತಿಯ ಅಧಿಕಾರವನ್ನು ನೀಡಿತು. </p>



<p>ಎನ್‌ಡಿಟಿವಿಯ ನಿರೂಪಕಿ ನಿಧಿ ರಜ್ದಾನ್ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾರನ್ನು ಡಿಬೇಟ್‌ನಿಂದ ಹೊರಗೆ ಹೋಗುವಂತೆ ಹೇಳಿದ ಕೆಲವೇ ದಿನಗಳ ನಂತರ ಎನ್‌ಡಿ ಟಿವಿ ಮೇಲೆ ಸಿಬಿಐ ದಾಳಿ ನಡೆಯಿತು! ಈ ಮೇಲಿನ ಎಲ್ಲಾ ಸಾಲು ಸಾಲು ಘಟನೆಗಳು ಭಾರತದ ಪತ್ರಿಕಾ ಸ್ವಾತಂತ್ರ್ಯ ಯಾವ ದಿಕ್ಕಿನ ಕಡೆಗೆ ಹೋಗುತ್ತಿದೆ ಎಂಬುದನ್ನು ತೋರಿಸುತ್ತದೆ!</p>



<p style="font-size:18px"><strong>ಲೇಖನ: ಚರಣ್‌ ಐವರ್ನಾಡು</strong></p>
]]></content:encoded>
					
		
		
			</item>
		<item>
		<title>ಪೊಲೀಸ್ ಬಂಧನವನ್ನು ಪ್ರಶ್ನಿಸಿದ ನ್ಯೂಸ್‌ಕ್ಲಿಕ್ ಮುಖ್ಯಸ್ಥರ ಮನವಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್</title>
		<link>https://peepalmedia.com/delhi-hc-dismisses-plea-by-newsclick-challenging-police-remand/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 13 Oct 2023 11:24:44 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[Bangalore]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[india]]></category>
		<category><![CDATA[journalists]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[NewsClick]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29765</guid>

					<description><![CDATA[ಬೆಂಗಳೂರು,ಅಕ್ಟೋಬರ್.‌13: ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ (Unlawful Activities (Prevention) Act, Live Law- UAPA) ಬಂಧನದಲ್ಲಿರುವ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ಈ ಅರ್ಜಿಗೆ ಯಾವುದೇ ಅರ್ಹತೆಯಿಲ್ಲ ಎಂದು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಹೇಳಿದ್ದಾರೆ. ಸುದ್ದಿ ಪೋರ್ಟಲ್ ನ್ಯೂಸ್‌ಕ್ಲಿಕ್‌ಗೆ ಸಂಬಂಧಿಸಿದ ಹಲವಾರು [&#8230;]]]></description>
										<content:encoded><![CDATA[
<p>ಬೆಂಗಳೂರು,ಅಕ್ಟೋಬರ್.‌13: ಕಾನೂನು ಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ (Unlawful Activities (Prevention) Act, Live Law- UAPA) ಬಂಧನದಲ್ಲಿರುವ ನ್ಯೂಸ್‌ಕ್ಲಿಕ್ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು <a href="https://x.com/LiveLawIndia/status/1712738237343752620?s=20" data-type="link" data-id="https://x.com/LiveLawIndia/status/1712738237343752620?s=20">ದೆಹಲಿ ಹೈಕೋರ್ಟ್</a> ಶುಕ್ರವಾರ ವಜಾಗೊಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ. ಈ ಅರ್ಜಿಗೆ ಯಾವುದೇ ಅರ್ಹತೆಯಿಲ್ಲ ಎಂದು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಹೇಳಿದ್ದಾರೆ. </p>



<p>ಸುದ್ದಿ ಪೋರ್ಟಲ್ ನ್ಯೂಸ್‌ಕ್ಲಿಕ್‌ಗೆ ಸಂಬಂಧಿಸಿದ ಹಲವಾರು ಪತ್ರಕರ್ತರ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿ, ಅಕ್ಟೋಬರ್ 3 ರಂದು ಪುರ್ಕಾಯಸ್ಥ ಮತ್ತು ಚಕ್ರವರ್ತಿಯವರನ್ನು ಬಂಧಿಸಲಾಗಿತ್ತು. ಈ ಸುದ್ದಿ ಸಂಸ್ಥೆಯು ಚೀನಾದ ಬಗ್ಗೆ ಪ್ರಚಾರ ಮಾಡಲು ಹಣವನ್ನು ಪಡೆದಿದೆ ಎಂಬ ಆರೋಪಿಸಿ, ಇಬ್ಬರನ್ನೂ ನಗರ ನ್ಯಾಯಾಲಯವು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.</p>



<p>ಅಕ್ಟೋಬರ್ 6 ರಂದು, ಟ್ರಯಲ್‌ ಕೋರ್ಟ್‌ನ ರಿಮಾಂಡ್ ಆದೇಶದಲ್ಲಿ ಏನೋ ದೋಷವಿದೆ ಎಂದು ಗೆಡೆಲಾ ಹೇಳಿದ್ದರು. ಏಕೆಂದರೆ ಆರೋಪಿಗಳ ವಕೀಲರನ್ನು ಕೇಳದೆ ಅದನ್ನು ಅಂಗೀಕರಿಸಲಾಗಿತ್ತು. ರಿಮಾಂಡ್ ಆದೇಶವು ಆರೋಪಿಯು ಕೌನ್ಸಿಲ್‌ಗೆ ಅರ್ಹನೆಂದು ಹೇಳುವ ದೆಹಲಿ ಹೈಕೋರ್ಟ್ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಪುರ್ಕಾಯಸ್ಥ ಅವರ ವಕೀಲರು ನ್ಯಾಯಾಧೀಶರಿಗೆ ತಿಳಿಸಿದ್ದರು. ಆದರೆ, ಆಗಾಗಲೇ ಅವರಿಗೆ ಮಧ್ಯಂತರ ಬೇಲ್ ನೀಡಲು ಹೈಕೋರ್ಟ್ ನಿರಾಕರಿಸಿತ್ತು.</p>



<p>ಪೊಲೀಸ್ ಬಂಧನದ ನಂತರ ಪುರಕಾಯಸ್ಥ ಮತ್ತು ಚಕ್ರವರ್ತಿಯವರನ್ನು 10 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು.</p>



<p>ಬಾರ್ ಆಂಡ್‌ ಬೆಂಚ್‌ ವರದಿಯ ಪ್ರಕಾರ, ತಮ್ಮ ವಿರುದ್ಧದ ಎಫ್‌ಐಆರ್‌ ಅನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಪುರಕಾಯಸ್ಥ ಮತ್ತು ಚಕ್ರವರ್ತಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಇನ್ನೂ ವಿಚಾರಣೆ ನಡೆಸಬೇಕಿದೆ.</p>



<p>ಆಗಸ್ಟ್ 17 ರಂದು ದಾಖಲಾದ ಎಫ್‌ಐಆರ್‌ನಲ್ಲಿ, ನ್ಯೂಸ್‌ಕ್ಲಿಕ್ ಭಾರತದ ಸಾರ್ವಭೌಮತೆಗೆ ಅಡ್ಡಿಪಡಿಸಲು &#8220;ಮತ್ತೆ ಮತ್ತೆ, ಕದ್ದುಮುಚ್ಚಿ- circuitous and camouflaged manner&#8221; ಚೀನಾದಿಂದ ಹಣವನ್ನು ತೆಗೆದುಕೊಂಡಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.</p>



<p>ದಿ ನ್ಯೂಯಾರ್ಕ್ ಟೈಮ್ಸ್ ಆಗಸ್ಟ್ 5 ರಂದು ಮಾಡಿದ ವರದಿಯಲ್ಲಿ ಭಾರತೀಯ ಸುದ್ದಿ ವೆಬ್‌ಸೈಟ್ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ಹಣವನ್ನು ಪಡೆದಿದೆ ಎಂದು ಉಲ್ಲೇಖಿಸಿದ ನಂತರ ಈ ಪ್ರಕರಣವನ್ನು ದಾಖಲಿಸಲಾಗಿದೆ. ಎಫ್‌ಐಆರ್ ಸಿಂಘಮ್ ಅವರನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಪ್ರಚಾರ ವಿಭಾಗದ ಸಕ್ರಿಯ ಸದಸ್ಯ ಎಂದು ಉಲ್ಲೇಖಿಸಲಾಗಿದೆ.</p>
]]></content:encoded>
					
		
		
			</item>
		<item>
		<title>ಪ್ರತಿಭಾ ನಂದಕುಮಾರ್ ಪೋಸ್ಟ್: ರೊಚ್ಚಿಗೆದ್ದ ಪತ್ರಕರ್ತರು, ಕಾನೂನು ಕ್ರಮದ ಎಚ್ಚರಿಕೆ</title>
		<link>https://peepalmedia.com/pratibha-nandakumar-post-angry-journalists-legal-action-warning/</link>
		
		<dc:creator><![CDATA[Peepal Media]]></dc:creator>
		<pubDate>Mon, 07 Nov 2022 10:33:19 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[journalists]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[prathiba nandakuamar]]></category>
		<guid isPermaLink="false">https://peepalmedia.com/?p=14593</guid>

					<description><![CDATA[ಬೆಂಗಳೂರು: ನಾಡಿನ ಹಲವು ಪತ್ರಕರ್ತರ ಕುರಿತಾಗಿ ಲೋಕಾಯುಕ್ತರಿಗೆ ಸಲ್ಲಿಸಲಾಗಿದೆ ಎಂದು ಹೇಳಲಾದ ದೂರೊಂದನ್ನು ಪತ್ರಕರ್ತೆ, ಲೇಖಕಿ ಪ್ರತಿಭಾ ನಂದಕುಮಾರ್ ಅವರು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದ್ದು, ಪೋಸ್ಟ್ ನಲ್ಲಿ ಉಲ್ಲೇಖಿಸಲಾದ ಹಲವು ಪತ್ರಕರ್ತರು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಪ್ರತಿಭಾ ನಂದಕುಮಾರ್‌ ಅವರು ದೀರ್ಘ ಪೋಸ್ಟ್‌ ಒಂದನ್ನು ವಾಟ್ಸಾಪ್ ನಲ್ಲಿ ಬಂದಿದ್ದು ಎಂದು ಉಲ್ಲೇಖಿಸಿ ಶೇರ್‌ ಮಾಡಿದ್ದರು. ಅದರಲ್ಲಿ ಕನ್ನಡದ ಹಲವು ಹಿರಿಯ ಪತ್ರಕರ್ತರು ಇದುವರೆಗೆ ಪಡೆದ ಭಕ್ಷೀಸು, ಭ್ರಷ್ಟಾಚಾರಗಳ ಕುರಿತು ಬರೆಯಲಾಗಿತ್ತು. [&#8230;]]]></description>
										<content:encoded><![CDATA[
<h5 class="has-text-align-center wp-block-heading"><strong>ಬೆಂಗಳೂರು: ನಾಡಿನ ಹಲವು ಪತ್ರಕರ್ತರ ಕುರಿತಾಗಿ ಲೋಕಾಯುಕ್ತರಿಗೆ ಸಲ್ಲಿಸಲಾಗಿದೆ ಎಂದು ಹೇಳಲಾದ ದೂರೊಂದನ್ನು ಪತ್ರಕರ್ತೆ, ಲೇಖಕಿ ಪ್ರತಿಭಾ ನಂದಕುಮಾರ್ ಅವರು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದ್ದು, ಪೋಸ್ಟ್ ನಲ್ಲಿ ಉಲ್ಲೇಖಿಸಲಾದ ಹಲವು ಪತ್ರಕರ್ತರು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.</strong></h5>



<p>ಪ್ರತಿಭಾ ನಂದಕುಮಾರ್‌ ಅವರು <a href="https://m.facebook.com/story.php?story_fbid=pfbid02HzfZ9W84RdYFevXM1WzawaG2qGoi7MNMoefbPg8chaPjZUUNPzLFQpiXAFjSnkzpl&amp;id=711452772&amp;sfnsn=wiwspwa">ದೀರ್ಘ ಪೋಸ್ಟ್‌ ಒಂದನ್ನು</a> ವಾಟ್ಸಾಪ್ ನಲ್ಲಿ ಬಂದಿದ್ದು ಎಂದು ಉಲ್ಲೇಖಿಸಿ ಶೇರ್‌ ಮಾಡಿದ್ದರು. ಅದರಲ್ಲಿ ಕನ್ನಡದ ಹಲವು ಹಿರಿಯ ಪತ್ರಕರ್ತರು ಇದುವರೆಗೆ ಪಡೆದ ಭಕ್ಷೀಸು, ಭ್ರಷ್ಟಾಚಾರಗಳ ಕುರಿತು ಬರೆಯಲಾಗಿತ್ತು. ಹಕ್ಕಿಗೂಡು ಎಂಬ ಪತ್ರಿಕೆಯ ಸಂಪಾದಕ ನರೇಂದ್ರ ತೂದಳ್ಳಿ ಎನ್ನುವವರು ಲೋಕಾಯುಕ್ತ ಸಂಸ್ಥೆಗೆ ಪತ್ರಕರ್ತರ ಭ್ರಷ್ಟಾಚಾರದ ಕುರಿತು ನೀಡಲಾಗಿರುವ ದೂರಿನ ಪ್ರತಿ ಇದು ಎಂದು ಉಲ್ಲೇಖಿಸಲಾಗಿತ್ತು.</p>



<p>ದೂರಿನಲ್ಲಿ ಹಲವಾರು ಹಿರಿಯ ಪತ್ರಕರ್ತರುಗಳ ಹೆಸರಿದ್ದವು ಮಾತ್ರವಲ್ಲ ಗಂಭೀರ ಸ್ವರೂಪದ ಆರೋಪಗಳನ್ನೂ ಎಸಗಲಾಗಿತ್ತು.</p>



<p>ದೂರಿನ ಕೊನೆಯಲ್ಲಿ 1) ನಾನು ಎಲ್ಲಾ ಪತ್ರಕರ್ತರ ವಿಳಾಸ ಮತ್ತು ದೂರವಾಣಿ ಸಂಖ್ಯೆಯ ವಿವರಗಳನ್ನು ಪ್ರತ್ಯೇಕ ಅನುಬಂಧದಲ್ಲಿ ಒದಗಿಸಿದ್ದೇನೆ. (ಅನುಬಂಧ -1), 2) ಅನುಬಂಧ 2 ರಲ್ಲಿ ನನ್ನ ಅಫಿಡವಿಟ್ 3) ಕೆಲವು ಪತ್ರಕರ್ತರ ಸಂಪತ್ತಿನ ವಿವರಗಳು. (ಅನುಬಂಧ-3),&#8221; ಎಂದು ಹೇಳಲಾಗಿದೆಯಾದರೂ ಅಂತಹ ಯಾವುದೇ ದಾಖಲೆಗಳನ್ನು ಅಲ್ಲಿ (ಫೇಸ್‌ಬುಕ್‌ ಪೋಸ್ಟಿನಲ್ಲಿ) ಒದಗಿಸಲಾಗಿರಲಿಲ್ಲ. ಪೋಸ್ಟಿನಲ್ಲಿ ಹೇಳಲಾಗಿರುವ ದೂರಿನ ಸತ್ಯಾಸತ್ಯತೆಯ ಕುರಿತು ಇನ್ನಷ್ಟೇ ತಿಳಿದು ಬರಬೇಕಿದೆ. ನಿಜವಾಗಿಯೂ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆಯೇ? ಅಥವಾ ಪತ್ರಕರ್ತರ ತೇಜೋವಧೆಗೆ ಇಂಥದ್ದೊಂದು ಬರೆಹ ಪೋಸ್ಟ್ ಮಾಡಲಾಗಿದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.</p>



<p>ಪತ್ರಕರ್ತರು ಆದಾಯದ ಪ್ರಮಾಣವನ್ನು ಮೀರಿ ದೊಡ್ಡ ದೊಡ್ಡ ಮನೆ ಕಟ್ಟಿಕೊಂಡಿದ್ದಾರೆನ್ನುವುದರಿಂದ ಹಿಡಿದು, ಸೈಟು, ಹಣ, ವಿದೇಶ ಪ್ರವಾಸ, ಮಧ್ಯವರ್ತಿತನ ಹೀಗೆ ಹಲವು ಆರೋಪಗಳನ್ನು ಹೊರಿಸಲಾಗಿದೆ.</p>



<p>ಈ ಕುರಿತು ಹಿರಿಯ ಪತ್ರಕರ್ತ ಬಿ.ಎ.ಹನೀಫ್ ತಮ್ಮ ಫೇಸ್ ಬುಕ್ ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದು, ಪತ್ರಕರ್ತನಾಗಿ 38 ವರ್ಷಗಳ ಕಾಲ ಮಾನವಂತನಾಗಿ ಕೆಲಸ ಮಾಡಿದ್ದೇನೆ, ಭ್ರಷ್ಟಾಚಾರದ ಆರೋಪ ಹೊತ್ತುಕೊಳ್ಳುತ್ತಿರುವುದು ಇದೇ ಮೊದಲು. ನಿಮ್ಮ ಮತಿಗೇಡಿತನಕ್ಕೆ ಸುಮ್ಮನೆ ಕುಳಿತುಕೊಳ್ಳಬಹುದಿತ್ತು, ಆದರೆ ಸ್ನೇಹಿತರ ವಲಯದಲ್ಲಿ ತಪ್ಪು ಸಂದೇಶ ಹೋಗುತ್ತಿರುವುದರಿಂದ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದು ತಮ್ಮ ವೃತ್ತಿ ಜೀವನದ ಸಂದರ್ಭದ ಎಲ್ಲ ಆರ್ಥಿಕ‌ ವಿಷಯಗಳ ವಿವರಗಳನ್ನು ನೀಡಿದ್ದಾರೆ.</p>



<p>ಈ ಕುರಿತು ಪ್ರತಿಕ್ರಿಯೆ ನೀಡಿರುವ ಇನ್ನೋರ್ವ ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ, ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಲು ರಚಿತವಾಗಿರುವ ಸಂಸ್ಥೆ ಲೋಕಾಯುಕ್ತ. ಇದಕ್ಕೆ ಯಾವುದೇ ಭಾರತೀಯ ಪ್ರಜೆ ದೂರು ನೀಡಬಹುದು. ಈ ದೂರನ್ನು ಆಧರಿಸಿ ಲೋಕಾಯುಕ್ತ ತನಿಖೆ ನಡೆಸುತ್ತದೆ. ಇಂತಹ ತನಿಖೆಗೆ ನಾನು ಸಿದ್ಧ. ಅದೇ ರೀತಿ ದೂರು ನೀಡಿದ ವ್ಯಕ್ತಿ ತಾನು ಮಾಡಿದ ಆರೋಪಗಳ ಬಗ್ಗೆ ಲೋಕಾಯುಕ್ತಕ್ಕೆ ಸಾಕ್ಷಿ ಒದಗಿಸಬೇಕಾಗುತ್ತದೆ. ಇದು ಲೋಕಾಯುಕ್ತ ಕಾಯಿದೆಯಲ್ಲಿ ಸ್ಪಷ್ಷವಾಗಿದೆ. ಪ್ರಚಾರ ಅಥವಾ ತೆವಲುಗಳುಗಾಗಿ ದೂರು ಸಲ್ಲಿಸಿ ಸುಮ್ಮನೆ ಕೂರುವಂತಿಲ್ಲ.ಲೋಕಾಯುಕ್ತದ ಮುಂದೆ ವಿವರ ನೀಡಬೇಕು ತಪ್ಪಿದಲ್ಲಿ ಸುಳ್ಳು, ಪ್ರಚಾರದ ಕಾರಣಕ್ಕೆ ದೂರು ನೀಡಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಬಹುದು. ಅಲ್ಲದೆ ಸುಳ್ಳು ದೂರು ನೀಡಿದ ವ್ಯಕ್ತಿ ಯನ್ನು ಶಿಕ್ಷೆಗೆ ಒಳಪಡಿಸಬಹುದು ಎಂಬುದು ಕಾನೂನಿನಲ್ಲಿ ಸ್ಪಷ್ಟವಾಗಿದೆ. ಈ ಕಾರ್ಯ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.</p>



<p>ಮತ್ತೋರ್ವ ಹಿರಿಯ ಪತ್ರಕರ್ತ ಲಕ್ಷ್ಮಿನಾರಾಯಣ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಾನು ತನಿಖೆಗೆ ಸಿದ್ದ. ವೈಯಕ್ತಿಕ ತೇಜೋವಧೆ ಯಾರಿಗೂ ಶೋಭೆಯಲ್ಲ. ದಾಖಲೆ ಒದಗಿಸಲಿ. ಸುಮ್ಮನೆ ಮತ್ತೊಬ್ಬರ ಜೀವನ , ವೃತ್ತಿ ವಿಚಾರದಲ್ಲಿ ಹುಡುಗಾಟ ಸಲ್ಲ. ಆರೋಪ ಮಾಡುವುದು ಸುಲಭ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕು ಎಂದು ನುಡಿದಿದ್ದಾರೆ.</p>



<p>ಸತ್ಯಾಸತ್ಯತೆ ನೋಡದೆ ವ್ಯಕ್ತಿಗತ ದ್ವೇಷದಿಂದ ಕೆಸರು ಎರಚುವ ದುರುದ್ದೇಶ ಇದರ ಹಿಂದೆ ಇದೆ. ತನಿಖೆ ನಡೆಯಲಿ. ಹಾಗೆಯೇ ಲೋಕಾಯುಕ್ತಕ್ಕೆ ದೂರು ಕೊಟ್ಟು, ದೂರಿನ ಪ್ರತಿಯನ್ನು ಗ್ರೂಪ್ ಗಳಿಗೆ ಶೇರ್ ಮಾಡುತ್ತಿರುವ ಕಾರಣ ತೇಜೋವಧೆ ಅಲ್ಲದೆ ಇನ್ನೇನು ಅಲ್ಲ ಎಂದು ಹಿರಿಯ ಪತ್ರಕರ್ತ ಸಮಿಯುಲ್ಲಾ ಬೆಳಗೂರು ಹೇಳಿದ್ದಾರೆ.</p>



<p>ಇದು ಅಪಪ್ರಚಾರ. ಗಾಳಿಯಲ್ಲಿ ಗುಂಡು ಹಾರಿಸುವ ಯತ್ನ. ಇದರಲ್ಲಿ ಹುರುಳಿಲ್ಲ. ತನಿಖೆಗೆ ನಾನೂ ಸಿದ್ಧ ಎಂದು ಹಿರಿಯ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಸವಾಲೊಡ್ಡಿದ್ದಾರೆ.</p>



<p>ಕೆಸರು ಎರಚುವುದು, ಮಸಿ ಬಳಿಯುವುದು ಮಾಮೂಲಿಯಾಗಿದೆ. ಒಮ್ಮೆ ಸಂಪೂರ್ಣವಾಗಿ ತನಿಖೆ ನಡೆಯಲಿ, ಮಾಧ್ಯಮ ಲೋಕದ ಕೊಳೆ ತೊಳೆಯಲಿ. ನಾನಂತೂ ತನಿಖೆಗೆ ಸದಾ ಸಿದ್ಧ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ.</p>



<p>ಕಳೆದ ವಾರ ಮುಖ್ಯಮಂತ್ರಿಗಳ ಕಚೇರಿಯಿಂದ ದೀಪಾವಳಿ ಉಡುಗೊರೆಯ ನೆಪದಲ್ಲಿ ಸಿಹಿತಿಂಡಿಯೊಂದಿಗೆ ಕೆಲವು ಆಯ್ದ ಪತ್ರಕರ್ತರಿಗೆ ಲಕ್ಷಗಟ್ಟಲೆ ಕ್ಯಾಶ್ ನೀಡಿದ ಪ್ರಕರಣದ ಕುರಿತು <a href="https://peepalmedia.com/cash-gift-journalists-from-sm-office/">ಪೀಪಲ್ ಮೀಡಿಯಾ ಪ್ರಕಟಿಸಿತ್ತು</a>. ಈ ಹಿನ್ನೆಲೆಯಲ್ಲಿ ಮಾಧ್ಯಮ ಭ್ರಷ್ಟಾಚಾರದ ಕುರಿತು ಗಂಭೀರವಾದ ಚರ್ಚೆ ನಡೆಯುತ್ತಿತ್ತು. ಈ ಮಧ್ಯೆ ಯಾವುದೇ ಸಾಕ್ಷ್ಯಾಧಾರಗಳನ್ನು, ದಾಖಲೆಗಳನ್ನು ಒದಗಿಸದೆ ಪತ್ರಕರ್ತರ ಮೇಲೆ ಹಲವಾರು ಆರೋಪ ಹೊರೆಸಿದ ದೂರೊಂದು ಲೇಖಕಿ ಪ್ರತಿಭಾ ನಂದಕುಮಾರ್ ಅವರ ಫೇಸ್ ಬುಕ್ ಗೋಡೆಯಲ್ಲಿ ಕಾಣಿಸಿಕೊಂಡಿದೆ. ಈ ರೀತಿ ಗಾಳಿಯಲ್ಲಿ ಗುಂಡುಹೊಡೆಯುವುದರಿಂದ ನಿಜವಾಗಿಯೂ ಆಗಬೇಕಿದ್ದ ಚರ್ಚೆ ಹಿನ್ನೆಲೆಗೆ ಸರಿಯುತ್ತದೆ ಎಂಬುದು ಹಿರಿಯ ಪತ್ರಕರ್ತರ ಅಭಿಪ್ರಾಯವಾಗಿದೆ.</p>
]]></content:encoded>
					
		
		
			</item>
	</channel>
</rss>
