<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>kallu balli &#8211; Peepal Media</title>
	<atom:link href="https://peepalmedia.com/tag/kallu-balli/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 26 Feb 2024 07:00:58 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>kallu balli &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕಳ್ಳುಬಳ್ಳಿ &#8211; 5: ಸೌಂದರ್ಯ ಪ್ರಜ್ಞೆಯ ಕೊಲೆಗಳು</title>
		<link>https://peepalmedia.com/kalluballi-aesthetic-murders/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 26 Feb 2024 06:52:20 +0000</pubDate>
				<category><![CDATA[ಅಂಕಣ]]></category>
		<category><![CDATA[kallu balli]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[nllina chikkamagaluru]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=36436</guid>

					<description><![CDATA[ಇತ್ತೀಚೆಗೆ ನವವಿವಾಹಿತನೋರ್ವ ಹೆಂಡತಿಗಾಗಿ ಸುಂದರವಾಗಿ ನಗುವಂತೆ ಕಾಣಲು ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಮರಣಶಯ್ಯೆಗೆ ಹೊರಟುಹೋದ ಘಟನೆ ನಮ್ಮ ಕರ್ನಾಟಕದಲ್ಲೇ ನಡೆದಿದೆ. ಮೆಚ್ಚಿದ ಪತ್ನಿ ಗಾಗಿ ಸರ್ಜರಿ ಮಾಡಿಸಿಕೊಳ್ಳದೆ ಹಾಗೆ ಸುಮ್ಮನಿದ್ದರೂ ಸಹ ಒಂದೊಳ್ಳೆ ಸಂಸಾರದ ಸೌಂದರ್ಯ ಕೆಡುತ್ತಿರಲಿಲ್ಲ. ನಮ್ಮ ಭಾರತೀಯ ಸಮಾಜದಲ್ಲಿ ಸೌಂದರ್ಯಕ್ಕೆ ತುಸು ಹೆಚ್ಚು ಮಾನ್ಯತೆ ಕೊಡುವುದಿದೆ. ಹಲ್ಲು ಉಬ್ಬಿದ್ದರೆ ಮದುವೆಗೆ ಮುಂಚೆ ಹೋಗಿ ಹಲ್ಲಿಗರ ಕ್ಲಾಂಪ್ ಹಾಕಿಸಿಕೊಳ್ಳುವುದಿದೆ. ಇಷ್ಟು ಸಮಯ ಇದ್ದದ್ದು ಸುಂದರವಾಗಿರಲಿಲ್ಲ ಅನ್ಬುವ ಮಿಥ್ಯೆ ಇವರುಗಳ ಮನಸ್ಸಿನಲ್ಲಿ ನಾಟಿಕೊಂಡಿರುವುದು. ಅದಕ್ಕೆ ಕಾರಣ ನಮ್ಮ [&#8230;]]]></description>
										<content:encoded><![CDATA[
<p></p>



<p>ಇತ್ತೀಚೆಗೆ ನವವಿವಾಹಿತನೋರ್ವ ಹೆಂಡತಿಗಾಗಿ ಸುಂದರವಾಗಿ ನಗುವಂತೆ ಕಾಣಲು ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಮರಣಶಯ್ಯೆಗೆ ಹೊರಟುಹೋದ ಘಟನೆ ನಮ್ಮ ಕರ್ನಾಟಕದಲ್ಲೇ ನಡೆದಿದೆ. ಮೆಚ್ಚಿದ ಪತ್ನಿ ಗಾಗಿ ಸರ್ಜರಿ ಮಾಡಿಸಿಕೊಳ್ಳದೆ ಹಾಗೆ ಸುಮ್ಮನಿದ್ದರೂ ಸಹ ಒಂದೊಳ್ಳೆ ಸಂಸಾರದ ಸೌಂದರ್ಯ ಕೆಡುತ್ತಿರಲಿಲ್ಲ.</p>



<p>ನಮ್ಮ ಭಾರತೀಯ ಸಮಾಜದಲ್ಲಿ ಸೌಂದರ್ಯಕ್ಕೆ ತುಸು ಹೆಚ್ಚು ಮಾನ್ಯತೆ ಕೊಡುವುದಿದೆ. ಹಲ್ಲು ಉಬ್ಬಿದ್ದರೆ ಮದುವೆಗೆ ಮುಂಚೆ ಹೋಗಿ ಹಲ್ಲಿಗರ ಕ್ಲಾಂಪ್ ಹಾಕಿಸಿಕೊಳ್ಳುವುದಿದೆ. ಇಷ್ಟು ಸಮಯ ಇದ್ದದ್ದು ಸುಂದರವಾಗಿರಲಿಲ್ಲ ಅನ್ಬುವ ಮಿಥ್ಯೆ ಇವರುಗಳ ಮನಸ್ಸಿನಲ್ಲಿ ನಾಟಿಕೊಂಡಿರುವುದು. ಅದಕ್ಕೆ ಕಾರಣ ನಮ್ಮ ಸಮಾಜ, ನೆರೆಹೊರೆ, ಕುಟುಂಬದ ಸದಸ್ಯರು ಎಲ್ಲರೂ.</p>



<p>ದೈಹಿಕ ನ್ಯೂನ್ಯತೆಗಳನ್ನೇ ಎತ್ತಿ ಎತ್ತಿ ತೋರುವ ಜನಗಳು ನಮ್ಮವರು. ಬಣ್ಣದಲ್ಲಿ ಸ್ವಲ್ಪ ಕಪ್ಪಿದ್ದರೆ ಅದನ್ನೇ ಹೆಚ್ಚುಗಾರಿಕೆ ಮಾಡುವವರಿರುತ್ತಾರೆ. ಮದುವೆಯ ಸಂಧರ್ಭದಲ್ಲಿ ಇಂತಹ ಸಣ್ಣ ಪುಟ್ಟ ವಿಷಯಗಳು ಎದೆಯ ಮಂಟ ಬೆಳೆದು ಕುತ್ತಿಗೆಗೆ ಬಂದಿರುತ್ತವೆ. ವಧು, ವರ ಇವರುಗಳ ಬಗ್ಗೆ ಪರಿಚಯ ಮಾಡಿಕೊಡುವ ಸಂದರ್ಭದಲ್ಲಿ ಸಹ ಸ್ವಲ್ಪ ಕಪ್ಪು, ಹಲ್ಲುಬ್ಬು, ಕಾಲು ಸ್ವಲ್ಪ ಹದು, ಮಾತು ತೊದ್ಲು, ರೊಡ್ಡ ಅಥವಾ ರೊಡ್ಡಿ ಹೀಗೆ ವಧು, ವರರ ಕೆಲವು ದೈಹಿಕ ಗುಣಲಕ್ಷಣಗಳನ್ನು ನ್ಯೂನ್ಯತೆ ಎನ್ನುವಷ್ಟರ ಮಟ್ಟಿಗೆ ಜಗಜ್ಜಾಹೀರು ಮಾಡಿಬಿಡುತ್ತಾರೆ. ಹೀಗೆ ಹೇಳುವ ಮೂಲಕ ಆತ್ಮ ಸೌಂದರ್ಯಕ್ಕೆ ಎಡೆಯಿಲ್ಲದಂತೆ ಮಾಡುವವರೂ ಇದ್ದಾರೆ.</p>



<p>ವಧು-ವರರ ಮುಖಾಮುಖಿ ಆಗುವ ಮೊದಲೇ ಈ ತರದ್ದೊಂದು ಪರಿಚಯ ತಿಳಿಸಿ ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಗೂಬೆ ಕೂರಿಸುವ ಕ್ರಮ ಸಲೀಸಾಗಿ ನಡೆದಿರುತ್ತದೆ.</p>



<p>ಈ ಕ್ರಮ ಇಂದು ನಿನ್ನೆಯದಲ್ಲ. ಶೂರ್ಪನಖಿಯನ್ನು ಆ ಹೆಸರಿನಿಂದ ಕರೆಯುವುದು ಇನ್ನೇತಕ್ಕಾಗಿ ಹೇಳಿ? ಮಂಥರೆಯನ್ನು ಕುರೂಪಿ ಎಂದೇ ಬಿಂಬಿಸಿಲ್ಲವೇ? ಕುಂಭಕರ್ಣ ನಿದ್ದೆ ಮಾಡುವುದು ವರ್ಷಾನುಗಟ್ಟಲೆ, ಆದರೂ ಅವನು ತಿನ್ನುವುದನ್ನು ವರ್ಣಿಸುವುದು ಗಮನಿಸಿದವರಿಗೆ ಅವನೋರ್ವ ಬಕಾಸುರನ ಅಣ್ಣ ಎನಿಸಿವುದು. ಭೀಮ, ಬಕಾಸುರರೂ ತಿನ್ನುವ ಅಭ್ಯಾಸದಿಂದಲೇ ಖ್ಯಾತರು. ಭಾರತೀಯ ಪುರಾಣ ಪರಂಪರೆಯಲ್ಲಿ ಸಹ ಇಂತಹ ಆತ್ಮಸೌಂದರ್ಯದ ಅವಗಣನೆ ನಡೆದೇ ಇದೆ.</p>



<p>ಮನುಷ್ಯನ ಒಳಗಿನ ಗುಣಗಳ ಬಗ್ಗೆ ಮಾತನಾಡದೆ ಹೊರಗಿನ ದೇಹದ ಗುಣಾವಗುಣಗಳ ಭಜನೆ ಮಾಡುವುದು ಅದೆಷ್ಟು ಸರಿ? ಇಂತಹ ಮನೋಧೋರಣೆಗಳೇ ಯುವಜನರ ಮನಸ್ಸಿನಲ್ಲಿ ತಮ್ಮಗಳ ದೇಹದ ಬಗ್ಗೆ ಕೀಳರಿಮೆ ಮಾಡಿಸಿಕೊಳ್ಳಲು ಕಾರಣಗಳಾಗಿವೆ.</p>



<p>ಕಡ್ಡಿ ಗುಡ್ಡ ಮಾಡಿದಂತೆ ಇವೆಲ್ಲಾ. ಕೆಲವರ ಚರ್ಮದ ಮೇಲೆ ತೊನ್ನಿದ್ದರೆ ಅದನ್ನು ನೋಡುತ್ತಿದ್ದ ರೀತಿಯೇ ಬೇರೆ.</p>



<p>ಸಾಮೂಹಿಕ ಸನ್ನಿಯಂತೆ ದೈಹಿಕ ನ್ಯೂನ್ಯತೆಗಳನ್ನು ಬೊಟ್ಟು ಮಾಡಿ ತೋರಿಸುವ ಜನರಿಂದಲೇ ಸೌಂದರ್ಯ ಹೆಚ್ಚಿಸುವ ಸರ್ಜರಿಗಳೂ ಅದನ್ನು ನಡೆಸುವ ವೈದ್ಯಕೀಯ ಸಮಾಜಕ್ಕೂ ಅಧಿಕ ಡಿಮ್ಯಾಂಡ್ ಸೃಷ್ಟಿ ಆಗಿದೆ.</p>



<p>ಸಿನೆಮಾ ಪ್ರಪಂಚಕ್ಕೆ ಈ ಸೌಂದರ್ಯ ಹೆಚ್ಚಿಸುವ ಸರ್ಜರಿಗಳು ಮಾಮೂಲಿ. ಬಾರ್ಬಿ ತರಹ ಕಾಣಲು, ಶುಗರ್ ಬೇಬಿ ಎನಿಸಿಕೊಳ್ಳುವ ಉದ್ದೇಶದಿಂದ ಕೆಲವು ಜನರು ಇಂಥಾ ಸರ್ಜರಿಗಳಿಗೆ ಒಳಗಾಗಿ ದೇಹ ಕೆಡಿಸಿಕೊಂಡದ್ದೂ ಇದೆ.</p>



<p>ಇದಕ್ಕೆಲ್ಲ ಕಾರಣ ಸೌಂದರ್ಯ ಪ್ರಜ್ಞೆಯು ಕೇವಲ ದೇಹದ ಸುತ್ತಾ ಸುತ್ತುವ ಖಯಾಲಿ ಆಗಿರುವುದು. ಆತ್ಮ ಸೌಂದರ್ಯ ಅಥವಾ ಮನುಷ್ಯನ ಗುಣಗಳನ್ನ ಅವಗಣನೆ ಮಾಡುವುದು.</p>



<p>ವಿಶೇಷ ಚೇತರು ಸ್ವಾವಲಂಬಿಗಳಾಗಿ ನಡೆದು ಸಾಧನೆ ಮಾಡುತ್ತಿರುವಾಗ ಅವರ ಛಲ ನಾವೂ ಕಲಿತು ಸಾಧನೆಯ ಹಾದಿಯನ್ನು ಕ್ರಮಿಸಬೇಕೆಂಬುದು ಸಹಜ ತಿಳುವಳಿಕೆ. ವಿಶೇಷ ಚೇತನರಿಂದ ನಾವು ಕಲಿಯಬೇಕಾದ್ದು ಬೇಕಾದಷ್ಟು ಇದೆ.</p>



<p>ದೇವರು ಕೊಟ್ಟ ಮಾನವ ಜನ್ಮ ದೊಡ್ಡದು, ಅದನ್ನು ಸೌಂದರ್ಯ ಸರ್ಜರಿ ಅಂತೆಲ್ಲಾ ಹಾಳಾಡಿಕೊಳ್ಳಬಾರದು ಹುಚ್ಚಪ್ಪಗಳಿರಾ..</p>



<p></p>



<p>&#8211; <strong>ನಳಿನಾ ಚಿಕ್ಕಮಗಳೂರು</strong></p>
]]></content:encoded>
					
		
		
			</item>
		<item>
		<title>ಕಳ್ಳುಬಳ್ಳಿ &#8211; ೩ : ಮದುವೆಯ ಈ ಬಂಧ</title>
		<link>https://peepalmedia.com/kalluballi-3-about-marriage/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 29 Jan 2024 10:56:02 +0000</pubDate>
				<category><![CDATA[ಅಂಕಣ]]></category>
		<category><![CDATA[kallu balli]]></category>
		<category><![CDATA[karnataka]]></category>
		<category><![CDATA[nalina chikkamagaluru]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35444</guid>

					<description><![CDATA[ಸುದ್ದಿ ವಾಹಿನಿಗಳು ಈ ಸ್ಟಾರ್ ನಟರ ಅನೈತಿಕ ಸಂಬಂಧ ಕೆದಕುವ, ಅದೇ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಬಿಟ್ಟು ಸಾಮಾಜಿಕ ಕಾಳಜಿಯ ಕೆಲಸ ಮಾಡಿದರೆ ಅದೆಷ್ಟೋ ಸಾರ್ಥಕ ಕಾರ್ಯವಾಗುವುದು ಗಂಡು ಹೆಣ್ಣು ದಂಪತಿಗಳಾಗಲು ಏಳೇಳು ಜನ್ಮದ ಋಣವಿರಬೇಕು ಎನ್ನುತ್ತಾರೆ.  ಸಮಾಜ ಗಂಡು ಹೆಣ್ಣಿನ ಮನೋಕಾಮನೆಗಳ ಪೂರೈಕೆಗಾಗಿಯೇ ವಿಧಿಸೂತ್ರವಾದ ಮದುವೆ ಎಂಬ ವ್ಯವಸ್ಥೆ ಹುಟ್ಟು ಹಾಕಿತು.  ಮದುವೆಯ ಅನುಬಂಧವೇ ಅಂಥದ್ದು.&#160; ಕ್ಷಮೆ ಮತ್ತು ಕ್ಷಮಿಸುವ ಔದಾರ್ಯ ದೊಡ್ಡದು.&#160; ಸುಖ ದುಃಖ ಏನೇ ಬರಲಿ ಎಲ್ಲದರಲ್ಲೂ ಈಸಬೇಕು ಇದ್ದು ಜೈಸಬೇಕು. ಒಂದು [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಸುದ್ದಿ ವಾಹಿನಿಗಳು ಈ ಸ್ಟಾರ್ ನಟರ ಅನೈತಿಕ ಸಂಬಂಧ ಕೆದಕುವ, ಅದೇ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಬಿಟ್ಟು ಸಾಮಾಜಿಕ ಕಾಳಜಿಯ ಕೆಲಸ ಮಾಡಿದರೆ ಅದೆಷ್ಟೋ ಸಾರ್ಥಕ ಕಾರ್ಯವಾಗುವುದು</p>
</blockquote>



<p>ಗಂಡು ಹೆಣ್ಣು ದಂಪತಿಗಳಾಗಲು ಏಳೇಳು ಜನ್ಮದ ಋಣವಿರಬೇಕು ಎನ್ನುತ್ತಾರೆ.  ಸಮಾಜ ಗಂಡು ಹೆಣ್ಣಿನ ಮನೋಕಾಮನೆಗಳ ಪೂರೈಕೆಗಾಗಿಯೇ ವಿಧಿಸೂತ್ರವಾದ ಮದುವೆ ಎಂಬ ವ್ಯವಸ್ಥೆ ಹುಟ್ಟು ಹಾಕಿತು. </p>



<p>ಮದುವೆಯ ಅನುಬಂಧವೇ ಅಂಥದ್ದು.&nbsp; ಕ್ಷಮೆ ಮತ್ತು ಕ್ಷಮಿಸುವ ಔದಾರ್ಯ ದೊಡ್ಡದು.&nbsp; ಸುಖ ದುಃಖ ಏನೇ ಬರಲಿ ಎಲ್ಲದರಲ್ಲೂ ಈಸಬೇಕು ಇದ್ದು ಜೈಸಬೇಕು.</p>



<p>ಒಂದು ಗಂಡಿನ ಪುಸಲಾಯಿಸುವಿಕೆ ಇಲ್ಲದೆ ಹೆಣ್ಣೊಬ್ಬಳು ಹದ್ದು ಮೀರುವುದಿಲ್ಲ ಎನ್ನುವ ಮಾತಿದೆ.&nbsp; ಗಂಡು ಹೆಣ್ಣಿನ ಆಕರ್ಷಣೆಗೆ ಬೀಳುವ ವಯಸ್ಸು ಹದಿನಾರರದ್ದು.&nbsp; ಆದರೂ ಸಹ ಕಾಲದಿಂದ ಕಾಲಕ್ಕೆ ಈ ಆಕರ್ಷಣೆಯ ಬೆಂಕಿಯನ್ನು ತಾಳ್ಮೆ, ಸಂಯಮಗಳಿಂದ ನಂದಿಸುತ್ತಿರಬೇಕು.</p>



<p>ಗಂಡಿರಲಿ ಅಥವಾ ಹೆಣ್ಣಿರಲಿ, ಹೊಸ್ತಿಲು ದಾಟಿದವರು ಕೊಲೆಯಾಗಲೇಬೇಕೆ? ಎಡಕಲ್ಲು ಗುಡ್ಡದ ಮೇಲೆ ಎಂಬ‌ ಸಿನೆಮಾ ದಲ್ಲಿ ಯುವಕನ ಪ್ರಲೋಬನೆಗೆ ಗುರಿಯಾದ ವಿವಾಹಿತ ಸ್ತ್ರೀ ಆತನೊಂದಿಗೆ ಕೈ ಜೋಡಿಸಲಾರದೆ ಸಾವಿನ ದಾರಿ ಹಿಡಿಯುತ್ತಾಳೆ.&nbsp; ಗಂಡನ ಕ್ಷಮಿಸುವ ಔದಾರ್ಯ ಆಕೆಗೆ ತೃಪ್ತಿ ನೀಡಲಿಲ್ಲ.&nbsp;</p>



<p>ಗಂಡಾಗಲಿ ಹೆಣ್ಣಾಗಲಿ ಆಸೆಗೆ ಅಂಕುಶ&nbsp; ಮಾಡಿಟ್ಟುಕೊಳ್ಳಬೇಕು.&nbsp; ಸಮಾಜದ ಇತಿಮಿತಿಗಳನ್ನು ಅರಿತುಕೊಂಡು ಒಳ್ಳೆಯ ರೀತಿಯಲ್ಲಿ ಬದುಕುವ ಪ್ರಯತ್ನ ಮಾಡಬೇಕು.</p>



<p>ಬಂದದ್ದೆಲ್ಲಾ ಬರಲಿ, ಭಗವಂತನ ದಯವೊಂದಿರಲಿ ಎನ್ನುವ ಮನೋಭಾವ ಸ್ವಲ್ಪ ಮಟ್ಟಿಗೆ ಮಾನಸಿಕ ಸ್ಥಿತ್ಯಂತರವನ್ನು ಹಗುರ ಇರಿಸುವುದು.&nbsp; ದೇವರು, ನಂಬಿಕೆ ಅವರವರ ವೈಯಕ್ತಿಕ ಜೀವನದ ವಿಚಾರ.&nbsp;&nbsp; ಆಗುವುದು ಆಗೇ ತೀರುತ್ತದೆ.</p>



<p>ಒಮ್ಮೆ ಆದದ್ದು ಜೀವನಪೂರ್ತಿ ಆಗಲೇಬೇಕು ಎಂಬುದಿಲ್ಲ.&nbsp; ಪ್ರತಿಯೊಬ್ಬರಿಗೂ ಅವರವರ ವೈಯಕ್ತಿಕ ಜೀವನದ ದೋಣಿಯನ್ನು ನ್ಯಾಯಯುತವಾಗಿ ನಡೆಸಿಕೊಂಡು ಹೋಗುವ ಅಧಿಕಾರವಿದ್ದೇ ಇದೆ.&nbsp; ಅದರ ಜೊತೆಗೆ ಲೀವ್ ಅಂಡ್ ಲೆಟ್ ಲೀವ್ ಎನ್ನುವ ಬಹುದೊಡ್ಡ ಮಾತನ್ನು ಸಹ ಅನುಸರಿಸಬೇಕಾದ ಅಗತ್ಯವಿದ್ದೇ ಇದೆ.&nbsp; ಕೆವಲ ದೇಹ ಸುಖ ಪಡೆಯಲು ಕೊಲೆ ಮುಂತಾದವು ನಡೆಸುವುದು ಹೇಯ.</p>



<p>ತಮ್ಮ ಚಿತ್ತ ಚಾಂಚಲ್ಯ, ದೇಹದ ಚಪಲಕ್ಕಾಗಿ ಮತ್ತೊಬ್ಬರ ಕುಟುಂಬದ ಸದಸ್ಯರನ್ನ ಕೊಲೆ ಮಾಡುವ, ಕೊಲೆ ಮಾಡುವ ಮಟ್ಟಕ್ಕೆ ಹೋಗುವುದು ಬಹಳ ಹೀನ ಕೃತ್ಯ.</p>



<p>ಮನಸ್ಸನ್ನು ಹರಿಯ ಬಿಟ್ಟಷ್ಟು ಹರಿಯುತ್ತದೆ.&nbsp; ಹಳ್ಳ ಕೊಳ್ಳ, ದಿಣ್ಣೆ, ತಗ್ಗು ಎಲ್ಲೆಡೆ ಹರಿದಾಗ ಮನಸ್ಸಿಗೆ ಅಣೆಕಟ್ಟಿನ&nbsp;&nbsp; ಶಕ್ತಿ ಇರುವುದಿಲ್ಲ.</p>



<p>ಇಂದು ಇದ್ದು ನಾಳೆ ಇಲ್ಲವಾಗುವ ಯಕಶ್ಚಿತ್ ಬದುಕಿನಲ್ಲಿ ದೇಹ ಸುಖಗಳಿಗಾಗಿ ಹಿಂದೆಬೀಳುವುದು, ಅದನ್ನೇ ಮುಂದುವರೆಸಲು ನೋಡುವುದು ಇವೆಲ್ಲಾ ಒಂದು ಹಂತದ ಮನಸ್ಥಿತಿ.&nbsp; ಸ್ವಲ್ಪ ಬೆಳೆದು ಆ ಮನಸ್ಥಿತಿ ಬಿಟ್ಟು ಹೊರಬಂದು ನೋಡಿದಾಗಲೇ ತಾವೆಲ್ಲಿ ಇದ್ದೆವು ಎಂಬುದು ಅರಿವಾಗೋದು.</p>



<p>ಕೇವಲ ದೇಹ ಪ್ರೀತಿಗೆ ಬಿದ್ದು ಉಳಿದ ಸಂಬಂಧ ಹಾಳು ಮಾಡಿಕೊಳ್ಳಲು ಯತ್ನಿಸುವುದು ಮೂರ್ಖತನದ ಪರಮಾವಧಿ.&nbsp; ಇಂಥದ್ದರಲ್ಲೇ ಖುಷಿ ಪಡೆಯುವವರು ವಿವಾಹಕ್ಕೆ ಒಗ್ಗಿಕೊಳ್ಳುವುದು ದುಸ್ತರ.&nbsp; ಆದರೆ ಅವರಿಗೆ ಸಿಗುವ ಆತ್ಮತೃಪ್ತಿ ಎಂತದ್ದೋ, ಅದನ್ನು ಅವರೇ ಅರ್ಥಮಾಡಿಕೊಳ್ಳಲು ಯತ್ನಿಸಬೇಕು.</p>



<p>ತೀರಾ ಪರಸಂಗಕ್ಕೆ ಎಳಸುವುದು ವಿಕೃತಿಯೇ ಸರಿ.&nbsp; ಪರಸಂಗದ ಗೆಂಡೆತಿಮ್ಮ ಸಿನೆಮಾದಲ್ಲಿ ಮುಗ್ದ ವ್ಯಕ್ತಿ ಪತ್ನಿಯ ವ್ಯಭಿಚಾರ ಸಹಿಸಲಾರದೆ ಸತ್ತೆ ಹೋದ.&nbsp; ಹೀಗೆ ಸತ್ತವರ ಸಂಖ್ಯೆ ದೊಡ್ಡದಿದೆ.&nbsp; ತಾವು ಧರ್ಮ ಅರ್ಥ ಕಾಮ‌ ಮೋಕ್ಷಕ್ಕಾಗಿ ನಂಬಿದ್ದ ಸಂಗಾತಿಯ ದೋಖಾ ಸಹಿಸದ ಮುಗ್ದ ಮನಸ್ಸುಗಳಿಗೆ ತಕ್ಕ ಸಂಗಾತಿಯಾಗಿ ನಡೆದುಕೊಳ್ಳುವ ಅವಶ್ಯಕತೆ ಬಹಳ ಇದೆ.&nbsp;</p>



<p>ವರ್ತಮಾನದ ತಲ್ಲಣವೆಂದರೆ ಅಪಮೌಲ್ಯಗಳನ್ನೇ ವಿಜೃಂಭಿಸುವುದು.&nbsp; ಹೀಗೇ ಒಬ್ಬರು ವಿವಾಹದ ನಂತರವೂ ಮತ್ತೊಂದು ಸಂಬಂಧ ಇರಿಸಿಕೊಂಡು ಎರೆಡನೇ ಮದುವೆಯಾದರು.&nbsp; ಎರಡನೇ ಪತ್ನಿಯ ವಿವಾಹ ಗುಟ್ಟಾಗಿತ್ತು.&nbsp; ಆಕೆ ಬೇಕೆಂತಲೇ ಫೇಸ್‌ಬುಕ್‌ ಮೊದಲಾದವುಗಳಲ್ಲಿ ತಮ್ಮ ಪತಿಯೊಂದಿಗೆ ಇದ್ದ ಫೋಟೋಗಳನ್ನು ಹಂಚಿಕೊಂಡು ಮೊದಲ ಪತ್ನಿಯ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದ್ದರು.&nbsp;</p>



<p>ಭಾರತೀಯ ಸಮಾಜದಲ್ಲಿ ಬಹುಪತ್ನಿತ್ವ ಮತ್ತು ಬಹುಪತಿತ್ವ ಎಂದೋ ನಿಷೇಧಗೊಂಡಿದೆ.&nbsp; ಕಾನೂನು ಬೆಂಬಲವೂ ಇದ್ದಕ್ಕಿದೆ.&nbsp; ಹೀಗಿರುವಾಗ ಕಾನೂನಿನ ಚೌಕಟ್ಟು ಮೀರಿ ಬೇಷರತ್ತು ಸಂಬಂಧ ಇರಿಸಿಕೊಂಡು ಅದನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳುವುದು ಅದೆಷ್ಟು ಸರಿ?</p>



<p>ಕಾನೂನು ಲೀವ್ ಇನ್‌ಸಂಬಂಧದಿಂದ ಹುಟ್ಟಿದ ಮಕ್ಕಳಿಗೂ ಪಾಲಕರ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ನೀಡಿದೆ.&nbsp; ಮಕ್ಕಳು ಹೇಳಿ ಕೇಳಿ ಹುಟ್ಟುವುದಿಲ್ಲ.‌‌&nbsp; ಹುಟ್ಡಿದ ಮೇಲೆ ಎಲ್ಲರೂ ಮಕ್ಕಳೇ.,&nbsp;</p>



<p>ಸುದ್ದಿ ವಾಹಿನಿಗಳು ಈ ಸ್ಟಾರ್ ನಟರ ಅನೈತಿಕ ಸಂಬಂಧ ಕೆದಕುವ, ಅದೇ ಸುದ್ದಿಗಳನ್ನು ಬಿತ್ತರಿಸುವ ಕೆಲಸ ಬಿಟ್ಟು ಸಾಮಾಜಿಕ ಕಾಳಜಿಯ ಕೆಲಸ ಮಾಡಿದರೆ ಅದೆಷ್ಟೋ ಸಾರ್ಥಕ ಕಾರ್ಯವಾಗುವುದು.</p>



<p>ಒಂದು‌ ಗಂಡು ಮತ್ತೊಂದು ಹೆಣ್ಣು ವಿವಾಹದ ಪರಮಾರ್ಥಕ್ಕಾಗಿ ಸೇರುವುದು, ಬದುಕುವುದು ಅತ್ಯಂತ ಗೌರವಿಸಲ್ಪಡುವ ಮದುವೆ ಎಂಬ ವ್ಯವಸ್ಥೆಗೆ ತನ್ನದೇ ಆದ ಅಸ್ತಿತ್ವ ಇದೆ.  ಅದನ್ನು ಕಾನೂನು ಮಾನ್ಯ ಮಾಡಿದೆ.  ಉಳಿದದ್ದೆಲ್ಲಾ ಕಾನೂನಿನ ಮೂಲಕ ಶೂನ್ಯ ಅಥವಾ ಅನೂರ್ಜಿತ ಎನಿಸುವುದು. </p>



<p>ನಳಿನಾ ಚಿಕ್ಕಮಗಳೂರು</p>
]]></content:encoded>
					
		
		
			</item>
		<item>
		<title>ವಧು ವರರ ಹೆಚ್ ಐ ವಿ ಪರೀಕ್ಷೆಗೆ ಅಸಡ್ಡೆ ಸಲ್ಲ</title>
		<link>https://peepalmedia.com/hiv-test-of-couple-kallu-balli-column/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 22 Jan 2024 10:51:19 +0000</pubDate>
				<category><![CDATA[ಅಂಕಣ]]></category>
		<category><![CDATA[Bangalore]]></category>
		<category><![CDATA[Column]]></category>
		<category><![CDATA[HIV]]></category>
		<category><![CDATA[husband]]></category>
		<category><![CDATA[india]]></category>
		<category><![CDATA[kallu balli]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[marriage]]></category>
		<category><![CDATA[nalina chikkamagaluru]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[trend]]></category>
		<category><![CDATA[trending news]]></category>
		<category><![CDATA[viral]]></category>
		<category><![CDATA[wedding]]></category>
		<category><![CDATA[wife]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35288</guid>

					<description><![CDATA[ಏಡ್ಸ್ ಮಹಾಮಾರಿಯನ್ನು ತಡೆಯಲು ವಿವಾಹದ ಹೊಸ್ತಿಲಲ್ಲಿನ ವಧುವರರ ವಿವಾಹ ಪೂರ್ವ ಏಡ್ಸ್ ಪರೀಕ್ಷೆ ಅತೀ ಅಗತ್ಯ. ಇದಕ್ಕೆ ಸರ್ಕಾರ, ಸಮಾಜ ಮುಕ್ತ ಸಮ್ಮತಿ ನೀಡಬೇಕಾಗಿದೆ. ಮಾನವ ಸಂಘ ಜೀವಿ. ಹಾಗೆಯೇ ಮದುವೆ ಎಂಬ ಸಾಮಾಜಿಕ ಬಂಧನದ ಮೂಲಕವೇ ಮನುಷ್ಯ ತನ್ನ ಲೈಂಗಿಕ ಆಸಕ್ತಿಯನ್ನು ಪೂರೈಸಿಕೊಳ್ಳಲು ಸಮಾಜ ಅವಕಾಶ ನೀಡಿದೆ. ಕದ್ದು ತಿನ್ನುವ ಹಣ್ಣೇ ರುಚಿ ಎನ್ನುವಂತೆ ಕೆಲವರು ಲೈಂಗಿಕ ತೃಪ್ತಿಗಾಗಿ ವಿಭಿನ್ನ ಮಾರ್ಗಗಳನ್ನು ಬಳಸುತ್ತಾರೆ. ‌ ತೃತೀಯ ಲಿಂಗಿಗಳಲ್ಲಿ‌ ಕೆಲವರು ಸೇರಿದಂತೆ ವೇಶ್ಯಾವಾಟಿಕೆಗಳು ಈ ನಿಟ್ಟಿನಲ್ಲಿ ಲೈಂಗಿಕ [&#8230;]]]></description>
										<content:encoded><![CDATA[
<blockquote class="wp-block-quote is-layout-flow wp-block-quote-is-layout-flow">
<p>ಏಡ್ಸ್ ಮಹಾಮಾರಿಯನ್ನು ತಡೆಯಲು ವಿವಾಹದ ಹೊಸ್ತಿಲಲ್ಲಿನ ವಧುವರರ ವಿವಾಹ ಪೂರ್ವ ಏಡ್ಸ್ ಪರೀಕ್ಷೆ ಅತೀ ಅಗತ್ಯ. ಇದಕ್ಕೆ ಸರ್ಕಾರ, ಸಮಾಜ ಮುಕ್ತ ಸಮ್ಮತಿ ನೀಡಬೇಕಾಗಿದೆ.</p>
</blockquote>



<p>ಮಾನವ ಸಂಘ ಜೀವಿ. ಹಾಗೆಯೇ ಮದುವೆ ಎಂಬ ಸಾಮಾಜಿಕ ಬಂಧನದ ಮೂಲಕವೇ ಮನುಷ್ಯ ತನ್ನ ಲೈಂಗಿಕ ಆಸಕ್ತಿಯನ್ನು ಪೂರೈಸಿಕೊಳ್ಳಲು ಸಮಾಜ ಅವಕಾಶ ನೀಡಿದೆ. ಕದ್ದು ತಿನ್ನುವ ಹಣ್ಣೇ ರುಚಿ ಎನ್ನುವಂತೆ ಕೆಲವರು ಲೈಂಗಿಕ ತೃಪ್ತಿಗಾಗಿ ವಿಭಿನ್ನ ಮಾರ್ಗಗಳನ್ನು ಬಳಸುತ್ತಾರೆ. ‌</p>



<p>ತೃತೀಯ ಲಿಂಗಿಗಳಲ್ಲಿ‌ ಕೆಲವರು ಸೇರಿದಂತೆ ವೇಶ್ಯಾವಾಟಿಕೆಗಳು ಈ ನಿಟ್ಟಿನಲ್ಲಿ ಲೈಂಗಿಕ ಹಿತಾಸಕ್ತಿ ಪೂರೈಕೆ ಕಾರ್ಯವನ್ನು ನಡೆಸಿಕೊಂಡು ಬರುತ್ತಾರೆ. ಈ ಕಾರಣಗಳಿಗಾಗಿಯೇ ಲೈಂಗಿಕ ರೋಗಗಳು ಮನುಕುಲದ ಬೆನ್ನು ಬಿಡದಂತೆ ಕಾಡುತ್ತಲೇ ಬಂದಿವೆ. ಅವುಗಳಲ್ಲಿ ಏಡ್ಸ್ ಒಂದು ಮಹಾಮಾರಿ. ಮಹಾನಗರಗಳಲ್ಲಿ ವೇಶ್ಯಾವಾಟಿಕೆಗಳು ಇರುವ ಕೆಲವು ಏರಿಯಾಗಳೇ ಇವೆ. ಅವು ಇಂದಿಗೂ ಜೀವಂತ ಇವೆ. ರಾಜಮಹಾರಾಜರ ಕಾಲದಿಂದಲೂ ಸಹ ವೇಶ್ಯಾವಾಟಿಕೆಗಳು ಇದ್ದೇ ಇವೆ. ಹಾಗೆಯೇ ಲೈಂಗಿಕ ರೋಗಗಳು, ಗುಪ್ತ ರೋಗಗಳು ಸಹ ಇದ್ದೇ ಇವೆ.</p>



<p>ಚಿಕ್ಕ ವಯಸ್ಸಿನಲ್ಲಿಯೇ ಈ ಮಾರಕ ಲೈಂಗಿಕ ರೋಗಕ್ಕೆ ತುತ್ತಾದ ಯುವಜನತೆ ಬಹಳ ನೋವಿನ ಜೀವನ ನಡೆಸುತ್ತಿದೆ.</p>



<p>ಇನ್ನು ಕರ್ನಾಟಕದ ಅಂಕಿ ಸಂಖ್ಯೆ ಗಮನಿಸಿದರೆ ಬೆಳಗಾವಿಯಲ್ಲಿ ಮೂವತ್ತೆಂಟು ಸಾವಿರ ಮಂದಿಗೆ ಹೆಚ್ ಐವಿ ಪಾಸಿಟಿವ್ ಇದೆ. ಇವರು ನೊಂದಾಯಿತ ಏಡ್ಸ್ ರೋಗಿಗಳು. ಅಲ್ಲಿಯ ಒಟ್ಟು ಜನಸಂಖ್ಯೆ ಸುಮಾರು ೨೭ ಲಕ್ಷವಿದೆ. ಇವರಲ್ಲಿಯೇ ಇಪ್ಪತ್ತು ಸಾವಿರ ವಿಧವೆಯರಿದ್ದಾರೆ. ಇವರು ಗ್ರಾಮೀಣ, ನಗರ ಪ್ರದೇಶಗಳಲ್ಲಿ ಸಹ ಇದ್ದು ಇವರ ಪತಿ ವಿವಾಹದ ಒಂದೆರಡು ವರ್ಷಗಳಲ್ಲಿ ಏಡ್ಸ್ ರೋಗದಿಂದಾಗೇ ತೀರಿಹೋಗಿದ್ದಾರೆ.</p>



<p>ಹೀಗೆ ಏಡ್ಸ್ ಹಬ್ಬಲು ಕಾರಣ ಅಸುರಕ್ಷಿತ ಲೈಂಗಿಕ ಸಂಪರ್ಕ. ಕಾಂಡೂಂ ಇಲ್ಲದೆಯೇ ಸೆಕ್ಸ್ ಮಾಡಬೇಕೆಂದು ಒತ್ತಾಯಿಸುವ ಕ್ಲೈಂಟ್ ಗಳು ಹೆಚ್ಚಿನ ಹಣದ ಆಮಿಶ ತೋರಿದ್ದರು ಎಂಬುದು ಹಲವಾರು ಏಡ್ಸ್ ರೋಗಿಗಳ ಅಳಲು.</p>



<p>ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಇಂದು ವಿದ್ಯಾರ್ಥಿಗಳು ಏಡ್ಸ್ ಬಾಧಿತರಾಗುತ್ತಿದ್ದಾರೆ. ಪ್ರೀತಿ ಪ್ರೇಮ ಪ್ರಣಯ ಅಂತ ಏಡ್ಸ್ ರೋಗ ಪೀಡಿತರಾಗುತ್ತಿದೆ ಯುವಜನತೆ.</p>



<p>ಮದುವೆಗೆ ಮುಂಚೆ ವಧು ವರರ ಹೆಚ್ ಐ ವಿ ಪರೀಕ್ಷೆ ಕಡ್ಡಾಯವಾಗುವುದು ಯಾವಾಗಲೋ ಗೊತ್ತಿಲ್ಲ. ಆದರೆ ಹಿರಿಯರು ಮಾಡಿದ ಮದುವೆ ನಂಬಿ ನೂರಾರು ಯುವತಿಯರು ಏಡ್ಸ್ ಗೆ ಬಲಿಯಾಗಿದ್ದುಂಟು. ಇತ್ತ ಪತಿಯೂ ಇಲ್ಲ, ಜೊತೆಗೆ ಏಡ್ಸ್ ರೋಗವೂ ಹಬ್ಬಿ ದುರ್ಬಲರಾಗುವ ನವವಿವಾಹಿತೆಯರ ಸಂಖ್ಯೆ ಸಾವಿರಾರಿದೆ.</p>



<p>ಸಂಯಮ ಯುವಜನತೆಯ ಹಾಡಾಗಬೇಕು. ಆಗಲೇ ಅವರು ಆದರ್ಶಯುತ ಜೀವನ ನಡೆಸಲು ಅವಕಾಶ ಒದಗುತ್ತದೆ.</p>



<p>ಸಂಯಮದ‌ ಬದುಕಿಗಾಗಿ ನಮಗೆ ಆದರ್ಶಪ್ರಾಯವಾದ ಸ್ವಾಮಿ ವಿವೇಕಾನಂದರು ಕಸಲ್ಲ</p>



<p>ದೇಶ ಮೀರಿ ನಿಲ್ಲುವ ಸಾಧಕ. ಯುವ ಜನತೆ ಇವರ ಬದುಕನ್ನು ಹತ್ತಿರದಿಂದ ನೋಡಿ, ಗ್ರಹಿಸಿ ಓದಬೇಕು. ಆಗಲೇ ವೈಯಕ್ತಿಕ ಜೀವನದಲ್ಲಿ ಸಹ ಬದಲಾವಣೆ ಸಾಧ್ಯವಿದೆ.</p>



<p>ಮದುವೆಗೆ ಮುನ್ನ ಅಸುರಕ್ಷಿತ ಲೈಂಗಿಕ ಸಂಪರ್ಕ ಮಾಡದೆ ಸಂಯಮದಿಂದ ವರ್ತಿಸಿ ತಮ್ಮ ಯೌವನ ಮತ್ತು ಬದುಕನ್ನು ಶಕ್ತಿಯುತವಾಗಿ ಕಟ್ಟಿಕೊಳ್ಳಬೇಕಾದ ಹೊಣೆಗಾರಿಕೆ ಯುವಜನತೆಯ ಮೇಲಿದೆ.</p>



<p>ಏಡ್ಸ್ ಮಹಾಮಾರಿಯನ್ನು ತಡೆಯಲು ವಿವಾಹದ ಹೊಸ್ತಿಲಲ್ಲಿನ ವಧುವರರ ವಿವಾಹ ಪೂರ್ವ ಏಡ್ಸ್ ಪರೀಕ್ಷೆ ಅತೀ ಅಗತ್ಯ. ಇದಕ್ಕೆ ಸರ್ಕಾರ, ಸಮಾಜ ಮುಕ್ತ ಸಮ್ಮತಿ ನೀಡಬೇಕಾಗಿದೆ.</p>



<p>ಏಡ್ಸ್ ಬಾಧಿತರಿಗೆ ಪ್ರೀತಿ‌ಪೂರ್ಣ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ಅವರಿಗೂ ಬದುಕುವ ಅವಕಾಶ ಕಲ್ಪಿಸಿ ಕೊಡಬೇಕು. ಸರಿಯಾದ ಚಿಕಿತ್ಸೆ ನೀಡುವ ಮೂಲಕ ಆತ್ಮವಿಶ್ವಾಸ ಮೂಡಿಸಿ ಬದುಕಿನೆಡೆಗೆ ಸೆಳೆಯಬೇಕು.</p>



<p>ಏಡ್ಸ್ ಬಾಧಿತ ಇಬ್ಬರು ದಂಪತಿಗಳು ಧೈರ್ಯದಿಂದ ಸಾವನ್ನು ಎದುರಿಸಿ ಮೂವತ್ತು ವರ್ಷದ ದಾಂಪತ್ಯ ಜೀವನ ಪೂರೈಸಿದ್ದಾರೆ.‌‌ ಇವರನ್ನು ಕಂಡಾಗ ಸಮಸ್ಯೆ ಇರದ ಅದೆಷ್ಟೋ ಗಂಡ ಹೆಂಡಿರು ಅನವಶ್ಯಕ ಜೀವನ ನರಕ‌ ಮಾಡಿಕೊಂಡಿರುವುದು ನೆನಪಾಗುತ್ತದೆ. ಪರಸ್ಪರ ಸಂಗಾತಿ ಪ್ರೀತಿ, ಸಮಯಕ್ಕೆ ಸರಿಯಾದ ಔಷಧಿ ಸೇವನೆ, ಆರೋಗ್ಯಕರ ಅಭ್ಯಾಸಗಳು ಈ‌ ದಂಪತಿಯನ್ನು ಸಾವಿನ ದವಡೆಯಿಂದ ಪಾರಾಗಿಸಿವೆ ಎನ್ನಬಹುದು.</p>



<p>ಏಡ್ಸ್ ಬಾರದಂತೆ ತಡೆಯಬೇಕಾದ್ದು ಮೊದಲ ಕಾರ್ಯ, ಹೀಗಾಗಿ ವಿವಾಹವಾಗುವವರ ಏಡ್ಸ್ ನೆಗೆಟಿವ್ ವರದಿ‌ ಪಡೆಯುವುದು ಅತೀ ಅವಶ್ಯಕ. ಮುಂದೆ ರೋಗ ಇದ್ದವರು ಸರಿಯಾದ ಚಿಕಿತ್ಸೆ ಪಡೆದು ಆತ್ಮವಿಶ್ವಾಸದಿಂದ ದಿಟ್ಟ ಜೀವನ ನಡೆಸಬೇಕು.</p>



<p style="font-size:20px"><strong>ಲೇಖಕರು:</strong> ನಳಿನಾ ಚಿಕ್ಕಮಗಳೂರು</p>
]]></content:encoded>
					
		
		
			</item>
	</channel>
</rss>
