<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>kannada &#8211; Peepal Media</title>
	<atom:link href="https://peepalmedia.com/tag/kannada/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 30 Aug 2025 02:40:07 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>kannada &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ನಟಿ ವಿಜಯಲಕ್ಷ್ಮಿ ದರ್ಶನ್‌ಗೆ ಅಶ್ಲೀಲ ಸಂದೇಶ: ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್‌ ದಾಖಲು</title>
		<link>https://peepalmedia.com/actress-vijayalakshmi-darshan-sent-obscene-messages-fir-registered-against-miscreants/</link>
		
		<dc:creator><![CDATA[Peepal Media]]></dc:creator>
		<pubDate>Sat, 30 Aug 2025 02:40:07 +0000</pubDate>
				<category><![CDATA[ರಾಜ್ಯ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=64996</guid>

					<description><![CDATA[ಬೆಂಗಳೂರು: ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ 4-5 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಶ್ಲೀಲ ಕಮೆಂಟ್‌ಗಳನ್ನು ಹಾಕಿದವರ ವಿರುದ್ಧ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಮಾನಿಟರಿಂಗ್ ಸೆಲ್‌ನಿಂದ ಸ್ವಯಂಪ್ರೇರಿತವಾಗಿ ಈ ದೂರು ದಾಖಲಿಸಲಾಗಿದೆ. ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಅಶ್ಲೀಲ ಸಂದೇಶಗಳ ಪ್ರಕರಣದ ಬೆನ್ನಲ್ಲೇ ಈ [&#8230;]]]></description>
										<content:encoded><![CDATA[
<p>ಬೆಂಗಳೂರು: ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ 4-5 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಶ್ಲೀಲ ಕಮೆಂಟ್‌ಗಳನ್ನು ಹಾಕಿದವರ ವಿರುದ್ಧ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಲೋಕೇಶ್ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣ ಮಾನಿಟರಿಂಗ್ ಸೆಲ್‌ನಿಂದ ಸ್ವಯಂಪ್ರೇರಿತವಾಗಿ ಈ ದೂರು ದಾಖಲಿಸಲಾಗಿದೆ.</p>



<p>ಮಾಜಿ ಸಂಸದೆ ರಮ್ಯಾ ಅವರ ವಿರುದ್ಧ ಅಶ್ಲೀಲ ಸಂದೇಶಗಳ ಪ್ರಕರಣದ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ. ವಿಜಯಲಕ್ಷ್ಮಿ ದರ್ಶನ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಕಮೆಂಟ್‌ಗಳನ್ನು ಮಾಡಲಾಗಿದ್ದು, ಈ ಕುರಿತು ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.</p>



<p>ಮಹಿಳಾ ಆಯೋಗದಿಂದ ಪೊಲೀಸ್ ಆಯುಕ್ತರಿಗೆ ಪತ್ರ</p>



<p>ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಅವರು ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ರಮ್ಯಾ ಅವರಿಗೆ ಕಳುಹಿಸಿದ ಅಶ್ಲೀಲ ಸಂದೇಶಗಳಂತೆಯೇ ವಿಜಯಲಕ್ಷ್ಮಿ ಅವರಿಗೂ ಅಸಭ್ಯವಾಗಿ ಮತ್ತು ಕೆಟ್ಟದಾಗಿ ಕಮೆಂಟ್‌ಗಳನ್ನು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಆ ಪತ್ರದಲ್ಲಿ ತಿಳಿಸಲಾಗಿದೆ.</p>



<p>ಇಂತಹ ಕೃತ್ಯಗಳ ಬಗ್ಗೆ ಎಚ್ಚರಿಕೆ ನೀಡಿದ ಅವರು, ರಮ್ಯಾ ಅಥವಾ ವಿಜಯಲಕ್ಷ್ಮಿ ಮಾತ್ರವಲ್ಲದೆ ಯಾವುದೇ ಮಹಿಳೆಯರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಕಮೆಂಟ್ ಮಾಡುವುದು ಅಥವಾ ಅವಹೇಳನ ಮಾಡುವುದು ಗಂಭೀರ ಅಪರಾಧ. ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಮತ್ತು ಅವರಿಗೆ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ತನ್ನ ಅಧಿಕಾರವನ್ನು ಪ್ರಜೆಗಳಿಗೆ ಬಿಟ್ಟುಕೊಟ್ಟ ಅರಸ</title>
		<link>https://peepalmedia.com/king-who-gave-up-his-power-to-his-subjects/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 26 Aug 2025 06:57:42 +0000</pubDate>
				<category><![CDATA[ಅಂಕಣ]]></category>
		<category><![CDATA[Aundh]]></category>
		<category><![CDATA[bengaluru]]></category>
		<category><![CDATA[Bhawanrao Shriniwasrao Pant Pratinidhi]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[mahathma gandhi]]></category>
		<guid isPermaLink="false">https://peepalmedia.com/?p=64800</guid>

					<description><![CDATA[ಅಗಸ್ಟ್ 11, 1940 ರಂದು ಮಹಾತ್ಮಾ ಗಾಂಧಿಯವರು ತಮ್ಮ ವಾರಪತ್ರಿಕೆ ಹರಿಜನ್‌ನಲ್ಲಿ ಒಂದು ಸಣ್ಣ ಲೇಖನವನ್ನು ಬರೆದರು. ಒಂದು ಪ್ರಾಂತ್ಯವನ್ನೂ, ಅದರ ಅರಸನನ್ನೂ ಹೊಗಳುತ್ತಾ ಲೇಖನವನ್ನು ಆರಂಭಿಸುತ್ತಾರೆ&#8230;. &#8220;ಚಿಕ್ಕ ಔಂಧ್ ಯಾರಿಗೂ ಗೊತ್ತಿಲ್ಲವೇ? ಅದರ ಗಾತ್ರ ಮತ್ತು ಸಂಪತ್ತು ಸಣ್ಣದಿರಬಹುದು, ಆದರೆ ಅದರ ಮುಖ್ಯಸ್ಥನು ತನ್ನ ಜನರಿಗೆ ಪೂರ್ಣ ಸ್ವರಾಜ್ಯದ ವರವನ್ನು ನೀಡುವ ಮೂಲಕ ಅದು ತನ್ನನ್ನು ತಾನು ಶ್ರೇಷ್ಠ ಮತ್ತು ಪ್ರಸಿದ್ಧನನ್ನಾಗಿ ಮಾಡಿಕೊಂಡಿದ್ದಾನೆ.&#8221; ಗಾಂಧಿಯವರು ಔಂಧ್ ರಾಜಪ್ರಭುತ್ವದ ಅರಸನ ಪ್ರಮುಖ ನಿರ್ಧಾರವನ್ನು ಉಲ್ಲೇಖಿಸುತ್ತಾರೆ. ನವೆಂಬರ್ 1938 ರಲ್ಲಿ, ಬಾಳಾಸಾಹೇಬ್ ಪಂತ್ [&#8230;]]]></description>
										<content:encoded><![CDATA[
<pre class="wp-block-code"><code>1930 ರ ದಶಕದಲ್ಲಿ, ಔಂಧ್‌ನ ಅರಸ ಬಾಳಾಸಾಹೇಬ್ ಪಂತ್ ಪ್ರತಿನಿಧಿಯವರು, ಮಹಾತ್ಮ ಗಾಂಧಿಯವರ ಜೊತೆಗೂಡಿ ರಚಿಸಿದ ಸಂವಿಧಾನದ ಅಡಿಯಲ್ಲಿ 'ತನ್ನ ಪ್ರಜೆಗಳಿಗೆ ಸಂಪೂರ್ಣ ಸ್ವಯಂ ಆಡಳಿತ'ವನ್ನು ನೀಡಿದರು - <strong>ಅನು ಕುಮಾರ್</strong></code></pre>



<p>ಅಗಸ್ಟ್ 11, 1940 ರಂದು ಮಹಾತ್ಮಾ ಗಾಂಧಿಯವರು ತಮ್ಮ ವಾರಪತ್ರಿಕೆ <em>ಹರಿಜನ್‌ನಲ್ಲಿ </em><a href="https://archive.org/details/dli.ernet.6357/page/n19/mode/2up" target="_blank" rel="noreferrer noopener">ಒಂದು ಸಣ್ಣ ಲೇಖನವನ್ನು ಬರೆದರು</a>. ಒಂದು ಪ್ರಾಂತ್ಯವನ್ನೂ, ಅದರ ಅರಸನನ್ನೂ ಹೊಗಳುತ್ತಾ ಲೇಖನವನ್ನು ಆರಂಭಿಸುತ್ತಾರೆ&#8230;. &#8220;ಚಿಕ್ಕ ಔಂಧ್ ಯಾರಿಗೂ ಗೊತ್ತಿಲ್ಲವೇ? ಅದರ ಗಾತ್ರ ಮತ್ತು ಸಂಪತ್ತು ಸಣ್ಣದಿರಬಹುದು, ಆದರೆ ಅದರ ಮುಖ್ಯಸ್ಥನು ತನ್ನ ಜನರಿಗೆ ಪೂರ್ಣ ಸ್ವರಾಜ್ಯದ ವರವನ್ನು ನೀಡುವ ಮೂಲಕ ಅದು ತನ್ನನ್ನು ತಾನು ಶ್ರೇಷ್ಠ ಮತ್ತು ಪ್ರಸಿದ್ಧನನ್ನಾಗಿ ಮಾಡಿಕೊಂಡಿದ್ದಾನೆ.&#8221;</p>



<p>ಗಾಂಧಿಯವರು ಔಂಧ್ ರಾಜಪ್ರಭುತ್ವದ ಅರಸನ ಪ್ರಮುಖ ನಿರ್ಧಾರವನ್ನು ಉಲ್ಲೇಖಿಸುತ್ತಾರೆ. ನವೆಂಬರ್ 1938 ರಲ್ಲಿ, ಬಾಳಾಸಾಹೇಬ್ ಪಂತ್ ಪ್ರತಿನಿಧಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಭವನರಾವ್ ಶ್ರೀನಿವಾಸರಾವ್ ಪಂತ್ ಪ್ರತಿನಿಧಿಯು &#8220;ತನ್ನ ಪ್ರಜೆಗಳಿಗೆ ಪೂರ್ಣ ಸ್ವಯಂ ಆಡಳಿತ&#8221;ವನ್ನು ನೀಡಿದ್ದರು.</p>



<p>ಈ ಬದಲಾವಣೆಯನ್ನು ಜಾರಿಗೆ ತರಲು,&nbsp;ಗಾಂಧಿ, ಬಾಳಾಸಾಹೇಬರ ಮಗ ಅಪ್ಪಾಸಾಹೇಬ್ ಪಂತ್ ಮತ್ತು ಪಾಲಿಷ್-ಯಹೂದಿ ಮೂಲದ ಮಿಸ್ಟಿಕ್-ಎಂಜಿನಿಯರ್ ಮೌರಿಸ್ ಫ್ರೈಡ್‌ಮನ್ ಅವರು&nbsp;<a href="https://www.constitutionofindia.net/historical-constitution/aundh-state-constitution-act-1939/" target="_blank" rel="noreferrer noopener">ಔಂಧ್‌ಗಾಗಿ ಒಂದು ರಾಜ್ಯ ಸಂವಿಧಾನವನ್ನು ರಚಿಸಿದರು. ಇದನ್ನು ಜನವರಿ 14, 1939 ರಂದು ಜಾರಿಗೆ ತರಲಾಯಿತು.</a></p>



<p>ಸುಮಾರು ನಾಲ್ಕು ಪುಟಗಳ ಈ ಸಂವಿಧಾನವು ಆಳವಾದ ಪ್ರಗತಿಪರ ಚಿಂತನೆಯನ್ನು ಒಳಗೊಂಡಿದ್ದ ದಾಖಲೆಯಾಗಿತ್ತು. ಇದು ಔಂಧ್ ಜನರಿಗೆ ತಾರತಮ್ಯ ರಹಿತ ಮತ್ತು ಸಾರ್ವತ್ರಿಕ ಮತ್ತು ಉಚಿತ ಪ್ರಾಥಮಿಕ ಶಿಕ್ಷಣವನ್ನು ಭರವಸೆ ನೀಡುವುದರ ಜೊತೆಗೆ ವಾಕ್, ಪತ್ರಿಕಾ, ಸಭೆ ಮತ್ತು ಪೂಜಾ ಸ್ವಾತಂತ್ರ್ಯಗಳನ್ನು ಖಾತರಿಪಡಿಸಿತು. ಎಲ್ಲಕ್ಕಿಂತ ಮುಖ್ಯವಾಗಿ, ಇದು ಅಧಿಕಾರವನ್ನು ವಿಕೇಂದ್ರೀಕರಿಸಿತು.</p>



<p>ರಾಜ್ಯ ಸಂವಿಧಾನವು ಶ್ರೇಣೀಕೃತ ಆಡಳಿತ ವ್ಯವಸ್ಥೆಯೊಂದಿಗೆ ಗಾಂಧಿಯವರ ಹೃದಯಕ್ಕೆ ಪ್ರಿಯವಾದ ಗ್ರಾಮ ಪ್ರಜಾಪ್ರಭುತ್ವವನ್ನು ಸ್ಥಾಪಿಸಿತು. ಇದರಲ್ಲಿ ಐದು ಸದಸ್ಯರ ಗ್ರಾಮ ಪಂಚಾಯತ್‌ಗಳು, ತಾಲೂಕು ಪಂಚಾಯತ್‌ಗಳು ಮತ್ತು ಪಂಚಾಯತ್ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು ಮತ್ತು ಆಡಳಿತಗಾರರಿಂದ ನಾಮನಿರ್ದೇಶಿತರಾದ ಐದು ಜನರನ್ನು ಒಳಗೊಂಡ ಸಭೆ ಇತ್ತು.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="1024" height="894" src="https://peepalmedia.com/wp-content/uploads/2025/08/image-4.png" alt="" class="wp-image-64805" style="width:559px;height:auto" srcset="https://peepalmedia.com/wp-content/uploads/2025/08/image-4.png 1024w, https://peepalmedia.com/wp-content/uploads/2025/08/image-4-300x262.png 300w, https://peepalmedia.com/wp-content/uploads/2025/08/image-4-768x671.png 768w, https://peepalmedia.com/wp-content/uploads/2025/08/image-4-150x131.png 150w, https://peepalmedia.com/wp-content/uploads/2025/08/image-4-696x608.png 696w" sizes="(max-width: 1024px) 100vw, 1024px" /><figcaption class="wp-element-caption">1919-&#8217;20ರ ಔಂಧ್‌ನ ನಕ್ಷೆ. ಕೃಪೆ: ವಿಕಿಮೀಡಿಯ ಕಾಮನ್ಸ್/ಪಿಕ್ರಿಲ್ [ಸಾರ್ವಜನಿಕ ಡೊಮೇನ್].</figcaption></figure></div>


<p>ಈ ಸುಧಾರಣೆಯನ್ನು ಮೆಚ್ಚಿದ ಗಾಂಧಿ ತಮ್ಮ&nbsp;<a href="https://archive.org/details/dli.ernet.6357/page/n19/mode/2up" target="_blank" rel="noreferrer noopener"><em>ಹರಿಜನ್</em>&nbsp;ನಿಯತಕಾಲಿಕೆಯಲ್ಲಿ&nbsp;</a><a href="https://archive.org/details/dli.ernet.6357/page/n19/mode/2up" target="_blank" rel="noreferrer noopener">ಹೀಗೆ ಬರೆಯುತ್ತಾರೆ:</a> &#8220;ಈ ಸಣ್ಣ ರಾಜ್ಯವು ಪ್ರಗತಿಪರವಾಗಿದೆ. ಔಂಧ್‌ನ ಆಡಳಿತಗಾರನು ತನ್ನ ಜನರ ಅಗತ್ಯಗಳನ್ನು ನಿರೀಕ್ಷಿಸಿದ್ದಾನೆ ಮತ್ತು ಸಾಮಾಜಿಕ ವಿಚಾರಗಳಲ್ಲಿಯೂ ಅವರಿಗಿಂತ ಆತ ಮುಂದಿದ್ದಾನೆ. ಸಂಪೂರ್ಣ ಜವಾಬ್ದಾರಿಯ ಘೋಷಣೆಯು ಆಡಳಿತಗಾರನ ಹಿಂದಿನ ಕಾರ್ಯಗಳ ಸ್ವಾಭಾವಿಕ ಪರಿಣಾಮವಾಗಿದೆ.&#8221;</p>



<p>1910 ರಲ್ಲಿ ಬಾಳಾಸಾಹೇಬರ ಪ್ರವೇಶ ಅನಿರೀಕ್ಷಿತವಾಗಿತ್ತು. ಮರಾಠಾ ಸಾಮ್ರಾಜ್ಯದ ಅವಶೇಷಗಳಿಂದ ರೂಪುಗೊಂಡ ಸಣ್ಣ ರಾಜ್ಯವಾದ ಔಂಧ್, 1849 ರಲ್ಲಿ ಪೇಶ್ವೆಯ ಸೋಲಿನ ನಂತರ ಬ್ರಿಟಿಷ್ ನಿಯಂತ್ರಣಕ್ಕೆ ಬಂದಿತು. 20 ನೇ ಶತಮಾನದ ಆರಂಭದ ವೇಳೆಗೆ ಇದು ಛಿದ್ರವಾಗಿ, ಸತಾರಾ ಮತ್ತು ಬಿಜಾಪುರದ ಹಳ್ಳಿಗಳು ಬ್ರಿಟಿಷ್ ಆಡಳಿತದ ಭೂಮಿಯಲ್ಲಿ ಹರಡಿಕೊಂಡವು.</p>



<p>1907 ರಲ್ಲಿ, ಬಾಳಾಸಾಹೇಬರ ಚಿಕ್ಕಪ್ಪ ಮತ್ತು ಆಗಿನ ಆಡಳಿತಗಾರ ಗೋಪಾಲಕೃಷ್ಣರಾವ್ ಪರಶುರಾಮ್ (ನಾನಾಸಾಹೇಬ) ಅವರನ್ನು ಬ್ರಿಟಿಷರು ನೇಮಿಸಿದ ಖರ್ಬರಿ (ಪ್ರಧಾನಿ) ಜಾಕೋಬ್ ಬಾಪೂಜಿಯವರ&nbsp;<a href="https://www.newspapers.com/image/820659030/?match=1&amp;clipping_id=177493575" target="_blank" rel="noreferrer noopener">ಹತ್ಯೆಯ ಪಿತೂರಿಯಲ್ಲಿ</a>&nbsp;ಭಾಗಿಯಾಗಿದ್ದರು. ಆಡಳಿತಗಾರನ ಇಬ್ಬರು ಸಹಚರರು ಮತ್ತು ಜೈಲು ವಾರ್ಡನ್ ಕೂಡ ಆರೋಪಿಗಳಾಗಿದ್ದರು. ತನಿಖಾ ಅಧಿಕಾರಿ ಆರ್ಸೆನಿಕ್ ವಿಷದಿಂದ (ಸಂಕಪಾಷಾಣ) ಸಾವನ್ನಪ್ಪಿದ್ದು ಪ್ರಕರಣದ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿತು. ನಾನಾಸಾಹೇಬನನ್ನು ಬಲವಂತವಾಗಿ ಸಿಂಹಾಸನ ಕಿತ್ತೆಸಯಲಾಯಿತು. ಎರಡು ವರ್ಷಗಳ ಮಧ್ಯಂತರ ಆಡಳಿತದ ನಂತರ, ಆಗ 43 ವರ್ಷದ ಬಾಳಾಸಾಹೇಬ ಪ್ರತಿನಿಧಿ ಅಥವಾ ಆಡಳಿತಗಾರನಾದರು.</p>



<p>ಪೂನಾದ ಡೆಕ್ಕನ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಬಾಳಾಸಾಹೇಬ್ ಪದವಿ ಪಡೆದ ಕೆಲವೇ ಕೆಲವು ಭಾರತೀಯ ರಾಜಕುಮಾರರಲ್ಲಿ ಒಬ್ಬರಾಗಿದ್ದರು. ಅವರ ಗುರುಗಳಾದ ಇತಿಹಾಸಕಾರ ಮತ್ತು ಸುಧಾರಕ ರಾಮಕೃಷ್ಣ ಗೋಪಾಲ್ ಭಂಡಾರ್ಕರ್ ಅವರ ಮೇಲೆ ಶಾಶ್ವತವಾದ ಪ್ರಭಾವ ಬೀರಿದರು. ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಮೊದಲ ಸಭೆಗಳಲ್ಲಿ ಒಂದರಲ್ಲಿ, ಬಾಳಾಸಾಹೇಬ್ ಜನಪ್ರಿಯ ಸಚಿತ್ರ&nbsp;<em>ಮಹಾಭಾರತವನ್ನು</em>&nbsp;ನಿರ್ಮಿಸಲು 1 ಲಕ್ಷ ರುಪಾಯಿಗಳನ್ನು ದೇಣಿಗೆಯಾಗಿ ನೀಡಿದರು. </p>


<div class="wp-block-image">
<figure class="aligncenter size-full is-resized"><img decoding="async" width="521" height="640" src="https://peepalmedia.com/wp-content/uploads/2025/08/image-3.png" alt="" class="wp-image-64804" style="width:521px;height:auto" srcset="https://peepalmedia.com/wp-content/uploads/2025/08/image-3.png 521w, https://peepalmedia.com/wp-content/uploads/2025/08/image-3-244x300.png 244w, https://peepalmedia.com/wp-content/uploads/2025/08/image-3-150x184.png 150w, https://peepalmedia.com/wp-content/uploads/2025/08/image-3-300x369.png 300w" sizes="(max-width: 521px) 100vw, 521px" /><figcaption class="wp-element-caption">ರಾಮಚಂದ್ರ ಮಧ್ವ ಮಹಿಷಿಯವರ &#8216;ಚಿತ್ರ ರಾಮಾಯಣ&#8217;ದ ಒಂದು ಚಿತ್ರ, ಇದನ್ನು ಬಾಳಾಸಾಹೇಬ್ ಪಂತ್ ಪ್ರತಿನಿಧಿ ಚಿತ್ರಿಸಿದ್ದಾರೆ: ಕೃಪೆ: ವಿಕಿಮೀಡಿಯಾ ಕಾಮನ್ಸ್ [ಪಬ್ಲಿಕ್ ಡೊಮೈನ್].</figcaption></figure></div>


<p>ಇದು 1916 ರಲ್ಲಿ ಪ್ರಕಟವಾದ&nbsp;<a href="https://commons.wikimedia.org/wiki/Category:Chitra_Ramayana" target="_blank" rel="noreferrer noopener"><em>ಚಿತ್ರ ರಾಮಾಯಣ</em></a><em>&nbsp;</em>(&nbsp;<em>ಇಲ್ಲಸ್ಟ್ರೇಟೆಡ್ ರಾಮಾಯಣ</em>&nbsp;)  ವಿಶೇಷವಾಗಿ ಬಾಳಾಸಾಹೇಬರ ವರ್ಣ ಚಿತ್ರಗಳಿಗಾಗಿ ವ್ಯಾಪಕವಾಗಿ ಖ್ಯಾತಿಯನ್ನು ಪಡೆಯಿತು.&nbsp;<em>ಇಲ್ಲಸ್ಟ್ರೇಟೆಡ್&nbsp;</em><em>ಲಂಡನ್ ನ್ಯೂಸ್</em>&nbsp;ಇದನ್ನು ಬ್ರಿಟಿಷ್ ಓದುಗರಿಗೆ ಮಾಡಿದ ಮಹಾಕಾವ್ಯದ &#8220;<a href="https://www.newspapers.com/image/870459911/?match=1&amp;terms=Ramayana%20" target="_blank" rel="noreferrer noopener">ಆದರ್ಶ ಪರಿಚಯ</a>&#8221; ಎಂದು ಕರೆದಿದೆ: &#8220;ಇದು ಅತ್ಯಂತ ಸರಳತೆವಾಗಿದೆ, ಮತ್ತು ಚಿತ್ರಗಳು ಹಾಗೂ ನಿರೂಪಣೆ ಎರಡರಲ್ಲೂ ನಿಜವಾದ ಭಾರತೀಯತೆಯನ್ನು ಹೊಂದಿದೆ.&#8221; ಬ್ರಿಟಿಷ್ ಆಡಳಿತಗಾರ ಮತ್ತು ಬಾಳಾಸಾಹೇಬರ ಮಿತ್ರ ಚಾರ್ಲ್ಸ್ ಕಿನ್‌ಕೈಡ್ ಇದಕ್ಕೆ ಬರೆದ ಮುನ್ನುಡಿಯಲ್ಲಿ ಬರೆದಿದ್ದಾರೆ:</p>



<pre class="wp-block-code"><code>"ರಾಮಾಯಣವು ಈಗ ಹೊಸ ರೂಪದಲ್ಲಿ ನಮ್ಮ ಮುಂದೆ ಬರುತ್ತಿದೆ, ನಾವು ತಿಳಿದಿರುವ ಮತ್ತು ಪ್ರೀತಿಸುವ ಭಾರತದ ಮೇಲೆ ಮಂದ ಭೂತಕಾಲದ ಪ್ರಭಾವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ತನ್ನ ಜನರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಎಲ್ಲರಿಗೂ ಅಗತ್ಯವಿರುವ ಜ್ಞಾನ ಇದು. ತಿಳುವಳಿಕೆ ಇಲ್ಲದೆ ನಿಜವಾದ ಸಹಾನುಭೂತಿ ಬರುವುದಿಲ್ಲ."</code></pre>



<h4 class="wp-block-heading"><strong>ಆಮೂಲಾಗ್ರ ಪರಿವರ್ತನೆ</strong></h4>



<p>ಔಂಧ್‌ನಲ್ಲಿ ಪ್ರತಿನಿಧಿ ಸರ್ಕಾರದ ಬೇರುಗಳು 1920 ರ ದಶಕದಷ್ಟು ಹಿಂದಿನವು. ಅಪ್ಪಾಸಾಹೇಬ್ ಪಂತ್ ಅವರು ಇಂದಿರಾ ರೋಥರ್‌ಮಂಡ್ ಅವರ&nbsp;<a href="https://www.google.com/books/edition/The_Aundh_Experiment/cVkmAAAAMAAJ?hl=en" target="_blank" rel="noreferrer noopener"><em>ದಿ ಔಂಧ್ ಎಕ್ಸ್‌ಪರಿಮೆಂಟ್</em></a>&nbsp;(1983) ಗೆ ಬರೆದ ಮುನ್ನುಡಿಯಲ್ಲಿ, ರಾಜನಿಗೆ ಸಲಹೆ ನೀಡಲು 1923 ರಲ್ಲಿ ರಚಿಸಲಾದ ಶಾಸಕಾಂಗ ಮಂಡಳಿಯಾದ ರಾಯತ್ ಸಭೆಯು ಕ್ರಮೇಣ ಹೇಗೆ ಸಬಲೀಕರಣಗೊಂಡಿತು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.</p>



<p>1935 ರ ಹೊತ್ತಿಗೆ, ಸಭೆಯ ಸದಸ್ಯರೊಬ್ಬರನ್ನು ಪ್ರಾಥಮಿಕ ಶಿಕ್ಷಣ, ಆರೋಗ್ಯ ಮತ್ತು ಕೃಷಿ ಸುಧಾರಣೆಗಳ ಸಚಿವರನ್ನಾಗಿ ನೇಮಿಸಲಾಯಿತು. ಇದರ ಜೊತೆಗೆ, ಅವರನ್ನು ರಾಜ ಮತ್ತು ದಿವಾನರೊಂದಿಗೆ ಮೂvರು ಸದಸ್ಯರ ಆಡಳಿತ ತಂಡದ ಭಾಗವಾಗಿ ಮಾಡಲಾಯಿತು.</p>



<p>1927 ರಲ್ಲಿ, ಬಾಳಾಸಾಹೇಬ್ ಒಂದು ಆಮೂಲಾಗ್ರ ಪ್ರಸ್ತಾಪವನ್ನು ಮುಂದಿಟ್ಟರು: ಅವರು ಸರ್ಕಾರ ಮತ್ತು ಅವರ ವೈಯಕ್ತಿಕ ಬಜೆಟ್ ಎರಡನ್ನೂ ಪರಿಷತ್ತಿನ ನಿಯಂತ್ರಣದಲ್ಲಿ ಇರಿಸಿದರು.&nbsp;&#8220;ಭಾರತೀಯ ರಾಜಕುಮಾರರಲ್ಲಿ ಅನೇಕರ ಕೈಯಲ್ಲಿದ್ದ ಬೃಹತ್ ಖಾಸಗಿ ಆದಾಯ ಮತ್ತು ಅವರ ವೈಯಕ್ತಿಕ ದುಂದುವೆಚ್ಚಗಳ&#8221; ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದ ಸಮಯದಲ್ಲಿ ಇಂತಹ ಕ್ರಮವು ಬಲವಾದ ಸಾರ್ವಜನಿಕ ಪ್ರಭಾವ ಬೀರಿತು ಎಂದು ಚಿಕಾಗೋ ಪತ್ರಿಕೆಯ ಡೈಲಿ ಹೆರಾಲ್ಡ್ ವರದಿ ಮಾಡಿದೆ<em>.</em></p>



<p>ಬಾಳಾಸಾಹೇಬ್ ಕೇವಲ ಕಲೆಗಳ ಪ್ರಗತಿಪರ ಪೋಷಕನಾಗಿರಲಿಲ್ಲ: ಅವರು ದೂರದೃಷ್ಟಿಯುಳ್ಳವರಾಗಿದ್ದರು, ಸ್ವದೇಶಿ ಮತ್ತು ಸ್ವಾವಲಂಬನೆಯ ಬಗ್ಗೆ ಅವರಿಗಿದ್ದ ಬದ್ಧತೆಯ ಕಾರಣದಿಂದಾಗಿ ಸ್ಥಳೀಯ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು. ಮೂಢನಂಬಿಕೆಯ ಪರಿಣಾಮವಾಗಿ ರೈತರು ಆರಂಭದಲ್ಲಿ ತೋರಿದ ಪ್ರತಿರೋಧದ ಹೊರತಾಗಿಯೂ ಬಾಳಾಸಾಹೇಬ್‌ ಅವರು ಕಬ್ಬಿಣದ ನೇಗಿಲುಗಳ ಕಾರ್ಖಾನೆಯನ್ನು ಸ್ಥಾಪಿಸಲು ಲಕ್ಷ್ಮಣರಾವ್ ಕಿರ್ಲೋಸ್ಕರ್ ಅವರಿಗೆ ಬೆಂಬಲವನ್ನು ನೀಡಿದರು. ನಂತರ ಕಿರ್ಲೋಸ್ಕರ್ ಶ್ರೀಪಾದ ಪ್ರಭಾಕರ್ ಒಗಲೆ ಮತ್ತು ಅವರ ಸಹೋದರರು ಕಿರ್ಲೋಸ್ಕರ್ವಾಡಿಯಲ್ಲಿ ಗಾಜಿನ ಕೆಲಸ ಕಾರ್ಖಾನೆಯನ್ನು ಸ್ಥಾಪಿಸಲು ಸಹಾಯ ಮಾಡಿದರು.</p>


<div class="wp-block-image">
<figure class="aligncenter size-full is-resized"><img decoding="async" width="781" height="800" src="https://peepalmedia.com/wp-content/uploads/2025/08/image-5.png" alt="" class="wp-image-64806" style="width:514px;height:auto" srcset="https://peepalmedia.com/wp-content/uploads/2025/08/image-5.png 781w, https://peepalmedia.com/wp-content/uploads/2025/08/image-5-293x300.png 293w, https://peepalmedia.com/wp-content/uploads/2025/08/image-5-768x787.png 768w, https://peepalmedia.com/wp-content/uploads/2025/08/image-5-150x154.png 150w, https://peepalmedia.com/wp-content/uploads/2025/08/image-5-300x307.png 300w, https://peepalmedia.com/wp-content/uploads/2025/08/image-5-696x713.png 696w" sizes="(max-width: 781px) 100vw, 781px" /><figcaption class="wp-element-caption">1937 ರ &#8216;ಸ್ಟಾರ್ ವೀಕ್ಲಿ&#8217; ಯಲ್ಲಿ ಬಾಳಾಸಾಹೇಬ್ ಪಂತ್ ಪ್ರತಿನಿಧಿಯವರ ರೇಖಾಚಿತ್ರ.</figcaption></figure></div>


<p>ಬಾಳಾಸಾಹೇಬರ ಮತ್ತೊಬ್ಬ ಸ್ನೇಹಿತ&nbsp;<a href="https://dn790004.ca.archive.org/0/items/in.ernet.dli.2015.127421/2015.127421.Surya-Namaskars.pdf" target="_blank" rel="noreferrer noopener">ವಾಜಿರಾವ್ ರಾಮರಾವ್ ಗುತ್ತಿಕರ್</a>, ಮಹಿಳೆಯರಿಗೆ ಕೆಲಸ ಸುಲಭವಾಗಲಿ ಎಂದು ಮಲ್ಟಿ-ಡಿಶ್ ಕುಕ್ಕರ್ ಅನ್ನು ಕಂಡುಹಿಡಿದರು &#8211; ಇದು ಇನ್ಸ್ಟಾಂಟ್ ಪಾಟ್ ನ ಆರಂಭದ ರೂಪವಾಗಿತ್ತು &#8211; ಆದರೆ ಅದು ಜನಪ್ರಿಯವಾಗಲಿಲ್ಲ.</p>



<p>1932 ರಲ್ಲಿ,&nbsp;<a href="https://www.newspapers.com/image/355160548/?match=1&amp;clipping_id=new" target="_blank" rel="noreferrer noopener"><em>ಚಿಕಾಗೋ ಟ್ರಿಬ್ಯೂನ್</em> ಮಾಡಿದ&nbsp;ವರದಿ ಪ್ರಕಾರ</a>, ಔಂಧ್‌ನಲ್ಲಿ ಭಾರತದ ಮೊದಲ ಗ್ಲೈಡರ್ಸ್ ಅಸೋಸಿಯೇಷನ್  ಪ್ರಾರಂಭವಾಯಿತು. ಇದಕ್ಕೆ ಬಾಳಾಸಾಹೇಬ್ ಮೊದಲ ಎಂಟು ಮೋಟಾರ್ ರಹಿತ ಏರ್‌ಕ್ರಾಫ್ಟ್‌ಗಳನ್ನು ದಾನ ಮಾಡಿದರು. ಸ್ವದೇಶಿ ಪ್ರತಿಪಾದಕರಾಗಿದ್ದರೂ, ಅವರು ಮತ್ತು ಅವರ ಸಹಚರರು ಆಧುನಿಕ ಸಂಶೋಧನೆಗಳ ಬಗ್ಗೆ ಅತೀವ ಉತ್ಸಾಹವನ್ನು ಹೊಂದಿದ್ದರು. ಅಕ್ಟೋಬರ್ 1927 ರಲ್ಲಿ&nbsp;<a href="https://d.docs.live.net/83379A960AA5E158/Desktop/Anu/ideas-IV/scroll/New%20Scroll%20pieces/Maurice%20Frydman/The_Atlanta_Constitution_1927_10_12_6.pdf" target="_blank" rel="noreferrer noopener"><em>ಕಿರ್ಲೋಸ್ಕರ್ ಖಬರ್</em></a>, ಚಾರ್ಲ್ಸ್ ಲಿಂಡ್‌ಬರ್ಗ್ ಅವರ ಐತಿಹಾಸಿಕ ಟ್ರಾನ್ಸ್ ಅಟ್ಲಾಂಟಿಕ್ ಹಾರಾಟದ ನಂತರ &#8220;ಮಿಸ್ ಇಂಡಿಯಾ&#8221; ಅವರನ್ನು &#8220;ಅಂಕಲ್ ಸ್ಯಾಮ್&#8221; ಅಭಿನಂದಿಸುವ ವ್ಯಂಗ್ಯಚಿತ್ರವನ್ನು ಪ್ರಕಟಿಸಿತ್ತು.</p>



<h4 class="wp-block-heading"><strong>ಬಾಳಾಸಾಹೇಬ್‌ ಅವರ ದೈಹಿಕ ಸದೃಢತೆ</strong></h4>



<p>1938 ರಲ್ಲಿ, ಬಾಳಾಸಾಹೇಬ್ ಅವರು ಭಾರತೀಯ ಮತ್ತು ಯುರೋಪಿಯನ್ ಕೃತಿಗಳನ್ನು ಪ್ರದರ್ಶಿಸುವ ಕಲಾ ವಸ್ತುಸಂಗ್ರಹಾಲಯವಾದ ಶ್ರೀ ಭವಾನಿ ಸಂಗ್ರಹಾಲಯವನ್ನು ತೆರೆದರು. ಆ ವರ್ಷ ಲಂಡನ್‌ನಲ್ಲಿ ಜೆ.ಎಂ. ಡೆಂಟ್ ಪ್ರಕಟಿಸಿದ ಹತ್ತು ಹಂತದ ಯೋಗ ಪದ್ಧತಿಯಾದ&nbsp;<a href="https://archive.org/details/dli.scoerat.3650thetenpointwaytohealth/page/6/mode/2up" target="_blank" rel="noreferrer noopener">ಸೂರ್ಯ ನಮಸ್ಕಾರದ ಕುರಿತಾದ ಅವರ ಪುಸ್ತಕದ</a>&nbsp;ನಾಲ್ಕನೇ ಆವೃತ್ತಿಯನ್ನು ಸಹ ಬಿಡುಗಡೆಯಾಯಿತು. ಅದಕ್ಕೆ ಮುನ್ನುಡಿಯನ್ನು ಬರೆದವರು ಪತ್ರಕರ್ತೆ ಲೂಯಿಸ್ ಮಾರ್ಗನ್ ಸಿಲ್‌. </p>



<p>ಬಾಳಾಸಾಹೇಬರನ್ನು ಭೇಟಿಯಾದಾಗ ತಾನು ಕಂಡ ಅಚ್ಚರಿಯನ್ನು ಮಾರ್ಗನ್ ನೆನಪಿಸಿಕೊಳ್ಳುತ್ತಾಳೆ. ಆಕೆ ಈ ಬಾಳಾಸಾಹೇಬರನ್ನು 70 ವರ್ಷದ ನರಪೇತಲ ಮನುಷ್ಯ ಇರಬಹುದು ಎಂದುಕೊಂಡಿದ್ದಳು, ಆದರೆ ಆಕೆ ಕಂಡಿದ್ದು ಒಬ್ಬ &#8220;ಯೌವನದ ಚುರುಕಾದ, ಮೃದು ನಡಿಗೆಯ, ಯುವಕನಂತೆ ಹೊಳೆಯುವ ಕಣ್ಣುಗಳು, ಬಲವಾದ, ಅದ್ಭುತವಾದ ಬಿಳಿ ಹಲ್ಲುಗಳು, ಸದೃಢವಾದ ಸ್ನಾಯುಗಳು, ಕಾಂತಿಯುತ ನಗು ಮತ್ತು ಬೇಸಿಗೆಯ ಮಿಂಚಿನಂತೆ ಕೆಲಸ ಮಾಡುವ ಮನಸ್ಸು ಹೊಂದಿರುವ ವ್ಯಕ್ತಿಯನ್ನು..&#8221;</p>



<p>ಗಾಂಧಿವಾದಿ ಯೋಗ ವಿದ್ವಾಂಸರಾದ ಶ್ರೀಪಾದ ದಾಮೋದರ್ ಸತ್ವಲೇಕರ್ ಅವರ ಮಾರ್ಗದರ್ಶನದಲ್ಲಿ ಬಾಳಾಸಾಹೇಬ್ ಶಾಲೆಗಳಲ್ಲಿ ಮತ್ತು ನಾಗರಿಕರಲ್ಲಿ ಸೂರ್ಯ ನಮಸ್ಕಾರವನ್ನು ಪ್ರಚಾರ ಮಾಡಿದರು. ಇದು ಬಾಳಾಸಾಹೇಬ್ ಅವರ ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಾವಲಂಬಿ ಜನತೆಯನ್ನು ಬೆಳೆಸುವ ವಿಶಾಲ ದೃಷ್ಟಿಕೋನವನ್ನು ತೋರಿಸುತ್ತದೆ.</p>



<p>ಔಂಧ್‌ನ ಜನರು ದೈಹಿಕವಾಗಿ ಸದೃಢರಾಗಬೇಕೆಂದು ಅವರು ಬಯಸಿದಂತೆಯೇ, ಅವರಲ್ಲಿ ಸೌಂದರ್ಯದ ಅರಿವು ಕೂಡ ಇರಬೇಕೆಂದು ಬಾಳಾಸಾಹೇಬ್ ಬಯಸಿದ್ದರು.&nbsp;<br><a href="https://www.degruyterbrill.com/document/doi/10.1515/9783110341362-011/html?lang=en&amp;srsltid=AfmBOopCA9n56Knh9dWUusLn4vtdMZT14ZkfKOrCxwRAlm2GXJELBcg0" target="_blank" rel="noreferrer noopener">ಇತಿಹಾಸಕಾರ ದೀಪ್ತಿ ಮುಲ್ಗುಂದ್</a>&nbsp;ಅವರ ಪ್ರಕಾರ, ಅವರ ಶ್ರೀ ಭವಾನಿ ಸಂಗ್ರಹಾಲಯವು ಮಧ್ಯಕಾಲೀನ ಚಿಕಣಿ ಚಿತ್ರಗಳು, ಬಂಗಾಳ ಶಾಲೆಯ ವರ್ಣಚಿತ್ರಗಳು ಮತ್ತು ಪಾಶ್ಚಿಮಾತ್ಯ ಕಲಾಕೃತಿಗಳು ಮತ್ತು ಪಾತ್ರವರ್ಗಗಳನ್ನು ಒಳಗೊಂಡಂತೆ ಭಾರತೀಯ ಹಾಗೂ ಪಾಶ್ಚಿಮಾತ್ಯ ಕಲೆಗಳ ಮಿಶ್ರಣದ ಮೂಲಕ ಸೌಂದರ್ಯದ ಅರಿವನ್ನು ಬೆಳೆಸಿತು.  ಹೆನ್ರಿ ಮೂರ್‌ ಕೆತ್ತಿದ ತಾಯಿ ಮತ್ತು ಮಗುವಿನ ಮೂರ್ತಿಯನ್ನು ಅಪ್ಪಾಸಾಹೇಬ್ ಪಂತ್ ಅವರು ಆ ಕಲಾವಿದ ಇನ್ನೂ ಜನಪ್ರಿಯನಾಗಿರದ ಕಾಲದಲ್ಲಿಯೇ ಖರೀದಿಸಿದ್ದರು.</p>


<div class="wp-block-image">
<figure class="aligncenter size-large is-resized"><img loading="lazy" decoding="async" width="1024" height="687" src="https://peepalmedia.com/wp-content/uploads/2025/08/image-6-1024x687.png" alt="" class="wp-image-64811" style="width:574px;height:auto" srcset="https://peepalmedia.com/wp-content/uploads/2025/08/image-6-1024x687.png 1024w, https://peepalmedia.com/wp-content/uploads/2025/08/image-6-300x201.png 300w, https://peepalmedia.com/wp-content/uploads/2025/08/image-6-768x515.png 768w, https://peepalmedia.com/wp-content/uploads/2025/08/image-6-150x101.png 150w, https://peepalmedia.com/wp-content/uploads/2025/08/image-6-696x467.png 696w, https://peepalmedia.com/wp-content/uploads/2025/08/image-6.png 1054w" sizes="auto, (max-width: 1024px) 100vw, 1024px" /><figcaption class="wp-element-caption">ಮಾರ್ಚ್ 27, 1932 ರ &#8216;ಚಿಕಾಗೋ ಟ್ರಿಬ್ಯೂನ್&#8217; ನಲ್ಲಿ ಪ್ರಕಟವಾದ ಫೋಟೋಗಳು.</figcaption></figure></div>


<p>1936 ರಲ್ಲಿ ಬ್ರಿಟನ್‌ಗೆ ಭೇಟಿ ನೀಡಿದಾಗ, ಬಾಳಾಸಾಹೇಬ್ ಸೂರ್ಯ ನಮಸ್ಕಾರ ಮತ್ತು ಕಲೆ ಎರಡನ್ನೂ ಪ್ರಚಾರ ಮಾಡಿದರು. ಕಲೆಯ ಕುರಿತು ಉಪನ್ಯಾಸಗಳನ್ನು ನೀಡಿದರು, ಕೃಷಿ ಮತ್ತು ಡೈರಿ ಉಪಕರಣಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಭೇಟಿ ನೀಡಿದರು. ತಮ್ಮ ಕುಟುಂಬ ಮತ್ತು ಸ್ನೇಹಿತರು ಸೂರ್ಯ ನಮಸ್ಕಾರವನ್ನು ಪ್ರದರ್ಶಿಸುವ ಚಲನಚಿತ್ರವನ್ನು ಪ್ರದರ್ಶಿಸಿದರು. ಆ ಚಲನಚಿತ್ರವನ್ನು <a href="https://youtu.be/aYcwS2ePkMw?si=Hc30gn_4oRx1eXug">YouTube</a> ನಲ್ಲಿ ನೋಡಬಹುದು.</p>



<p>ಜುಲೈ 12, 1936 ರಂದು ಬಾಲಾಸಾಹೇಬ್ ಬಗ್ಗೆ ಸಂಡೇ&nbsp;<a href="https://d.docs.live.net/83379A960AA5E158/Desktop/Anu/ideas-IV/scroll/New%20Scroll%20pieces/Maurice%20Frydman/The_Sunday_People_1936_07_12_17.pdf" target="_blank" rel="noreferrer noopener"><em>ಪೀಪಲ್</em></a>&nbsp;ಹೀಗೆ ಹೇಳಿದೆ: “ಔಂಧ್‌ನ ಬಿಳಿ ಕೂದಲಿನ ರಾಜನು ಎಲ್ಲಾ ರಹಸ್ಯಗಳಲ್ಲಿ ಶ್ರೇಷ್ಠವಾದ ಶಾಶ್ವತ ಯೌವನವನ್ನು ಕಂಡುಹಿಡಿದಿದ್ದೇನೆ ಎಂದು ಹೇಳಿಕೊಳ್ಳುತ್ತಾನೆ.” ಕೆಲವು ತಮಾಷೆಯ ಮಾತುಗಳೆಂದರೆ &#8220;ಈ ರಾಜನು ದೋಣಿಗಳು, ರೈಲುಗಳು ಮತ್ತು ಕಾರುಗಳಲ್ಲಿಯೂ ಸಹ ತನ್ನ ಅನುಯಾಯಿಗಳಿಗೆ ಆಳವಾದ ಉಸಿರಾಟದ ಅಭ್ಯಾಸವನ್ನು (ಪ್ರಣಾಯಾಮ) ಬಿಡದೆ ಮಾಡಿಸುತ್ತಿದ್ದನು.&#8221; </p>



<p>ಸುಮಾರು ಒಂದು ದಶಕದ ಕಾಲ, 1947 ರಲ್ಲಿ ಭಾರತೀಯ ಒಕ್ಕೂಟಕ್ಕೆ ಸೇರುವವರೆಗೆ, ಔಂಧ್ ತಾನೇ ರಚಿಸಿದ ಸಂವಿಧಾನದ ಪ್ರಕಾರ ತನ್ನನ್ನು ತಾನು ಆಳಿಕೊಂಡಿತು. ಬಾಳಾಸಾಹೇಬ್ 1951 ರಲ್ಲಿ 84 ನೇ ವಯಸ್ಸಿನಲ್ಲಿ ನಿಧನರಾದರು.</p>



<p>ಅವರ ಮಗ ಅಪ್ಪಾಸಾಹೇಬ್ ಪಂತ್ ಒಬ್ಬ ಪ್ರಖ್ಯಾತ ಭಾರತೀಯ ರಾಜತಾಂತ್ರಿಕ.  ಔಂಧ್‌ನ ಪ್ರಯೋಗದ <a href="https://books.google.co.in/books/about/The_Aundh_Experiment.html?id=6AjBvgEACAAJ&amp;redir_esc=y">ನಿರಂತರ ಪರಂಪರೆಯ ಬಗ್ಗೆ ಅವರು ಹೀಗೆ ಬರೆಯುತ್ತಾರೆ</a>:</p>



<pre class="wp-block-code"><code>"ತನ್ನ ಅಧಿಕಾರ ಮತ್ತು ಸಂಪತ್ತನ್ನು ತ್ಯಜಿಸುವ ಮೂಲಕ, ರಾಜನು 'ಸಾಂವಿಧಾನಿಕವಾಗಿ' ಔಂಧ್ ಜನರ 'ಮೊದಲ ಸೇವಕ'ನಾಗಿ ಮತ್ತು ಅವರ ಆತ್ಮಸಾಕ್ಷಿಯ ರಕ್ಷಕನಾಗಿ ಬದಲಾಗಿದ್ದನು. ಈ ಘೋಷಣೆಯೊಂದಿಗೆ ವ್ಯಕ್ತಿಯೊಂದಿಗಿನ ಅಧಿಕಾರದ ಸಂಬಂಧ, ಅಧಿಕಾರದ ಶ್ರೇಣಿಯು ಬದಲಾಯಿತು; ಇದು ಔಂಧ್‌ನ ಗ್ರಾಮಗಳಲ್ಲಿ ಪ್ರಜಾಪ್ರಭುತ್ವದ ಯಶಸ್ವಿ ಕಾರ್ಯನಿರ್ವಹಣೆಗೆ ಬೀಗ ತೆರೆದ ಕೀಲಿಯಾಗಿತ್ತು. ಅಧಿಕಾರ ಸೃಷ್ಟಿಸುವ ಭಯವಿರುವವರೆಗೆ ಅಥವಾ ಅದರ ಬಗ್ಗೆ ಒಲವು ಇರುವ, ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸಲಾರದು: ಇದು ಔಂಧ್ ಪ್ರಯೋಗದ ಸಂದೇಶವಾಗಿದೆ."</code></pre>



<p>(ಇದು ಸ್ಕ್ರಾಲ್‌.ಇನ್‌ನಲ್ಲಿ ಪ್ರಕಟವಾದ ಅನು ಕುಮಾರ್‌ ಅವರ <a href="https://scroll.in/magazine/1085341/the-indian-raja-who-gave-away-his-powers-to-the-praja">The Indian raja who gave away his powers to the praja</a> ಲೇಖನದ ಕನ್ನಡಾನುವಾದ)</p>
]]></content:encoded>
					
		
		
			</item>
		<item>
		<title>ಅಪರಾಧ ಸಾಬೀತು ಆಗದಿದ್ದರೂ, 30 ದಿನ ಜೈಲಿನಲ್ಲಿದ್ದರೆ ರಾಜ್ಯಪಾಲರು ಮುಖ್ಯಮಂತ್ರಿ ಮತ್ತು ಸಚಿವರನ್ನು ವಜಾಗೊಳಿಸಲು ಅಮಿತ್ ಶಾ ಮಸೂದೆ</title>
		<link>https://peepalmedia.com/amit-shahs-bill-allows-governor-to-dismiss-chief-minister-and-ministers-if-they-spend-30-days-in-jail-even-if-they-are-not-found-guilty/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 20 Aug 2025 06:23:25 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[amit shah]]></category>
		<category><![CDATA[bengaluru]]></category>
		<category><![CDATA[bills]]></category>
		<category><![CDATA[kannada]]></category>
		<category><![CDATA[law]]></category>
		<guid isPermaLink="false">https://peepalmedia.com/?p=64447</guid>

					<description><![CDATA[ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಸಂಜೆ (ಆಗಸ್ಟ್ 19) ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು, ಆಗಸ್ಟ್ 20 ರ ಬುಧವಾರ ನಡೆಯಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸಂವಿಧಾನ (130 ನೇ ತಿದ್ದುಪಡಿ) ಮಸೂದೆ, 2025, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ, 2025 ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ರಚನೆ (ತಿದ್ದುಪಡಿ) ಮಸೂದೆ, 2025 ಅನ್ನು ಮಂಡಿಸಲು ಉದ್ದೇಶಿಸಿದ್ದಾರೆ. ಈ ತಿದ್ದುಪಡಿಯು ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಜನರಲ್‌ಗಳು ಮುಖ್ಯಮಂತ್ರಿ [&#8230;]]]></description>
										<content:encoded><![CDATA[
<pre class="wp-block-code"><code><em><strong>ಈ ತಿದ್ದುಪಡಿ ಮಸೂದೆ ಅಂಗೀಕಾರವಾದರೆ, ಮುಖ್ಯಮಂತ್ರಿ ಅಥವಾ ಅವರ ಸಂಪುಟದಲ್ಲಿರುವ ಯಾರನ್ನಾದರೂ ತೆಗೆದುಹಾಕಲು ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಅಧಿಕಾರ ಸಿಗುತ್ತದೆ</strong></em></code></pre>



<p>ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಸಂಜೆ (ಆಗಸ್ಟ್ 19) ಲೋಕಸಭೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು, ಆಗಸ್ಟ್ 20 ರ ಬುಧವಾರ ನಡೆಯಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಸಂವಿಧಾನ (130 ನೇ ತಿದ್ದುಪಡಿ) ಮಸೂದೆ, 2025, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರ (ತಿದ್ದುಪಡಿ) ಮಸೂದೆ, 2025 ಮತ್ತು ಜಮ್ಮು ಮತ್ತು ಕಾಶ್ಮೀರ ಪುನರ್ರಚನೆ (ತಿದ್ದುಪಡಿ) ಮಸೂದೆ, 2025 ಅನ್ನು ಮಂಡಿಸಲು ಉದ್ದೇಶಿಸಿದ್ದಾರೆ.</p>



<p>ಈ ತಿದ್ದುಪಡಿಯು ರಾಜ್ಯಗಳ ರಾಜ್ಯಪಾಲರು ಮತ್ತು ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಜನರಲ್‌ಗಳು ಮುಖ್ಯಮಂತ್ರಿ ಅಥವಾ ಯಾವುದೇ ರಾಜ್ಯ ಸಚಿವರನ್ನು 30 ದಿನಗಳ ಕಾಲ ಜೈಲಿನಲ್ಲಿ ಇರಿಸಿದರೆ, ಅಪರಾಧಿಯಲ್ಲದಿದ್ದರೂ ಸಹ ಅವರನ್ನು ಪದವಿಯಿಂದ ವಜಾಗೊಳಿಸಲು ಅನುಮತಿಸುತ್ತದೆ. ಈ ತಿದ್ದುಪಡಿಯು ಪ್ರಧಾನ ಮಂತ್ರಿಗೂ ಅನ್ವಯಿಸುತ್ತದೆ, ಅವರನ್ನು ವಜಾಗೊಳಿಸುವ ಅಧಿಕಾರವನ್ನು ಭಾರತದ ರಾಷ್ಟ್ರಪತಿಗಳಿಗೆ ನೀಡುತ್ತದೆ &#8211; ಆದರೂ ಕೇಂದ್ರ ಸರ್ಕಾರದ ಕಾನೂನು ಜಾರಿ ಸಂಸ್ಥೆಯು ಅವರನ್ನು ನಿಯಂತ್ರಿಸುವ ವ್ಯಕ್ತಿಯನ್ನು ಬಂಧಿಸಿ 30 ದಿನಗಳ ಕಾಲ ಜೈಲಿನಲ್ಲಿ ಇಡುವ ಸಾಧ್ಯತೆ ಇಲ್ಲ.</p>



<p>ಹೊಸ ನಿಯಮವನ್ನು ಜಾರಿಗೆ ತರಲು, ಅಮಿತ್‌ ಶಾ ಅವರು ಸಂವಿಧಾನದ 75 ನೇ ವಿಧಿಯನ್ನು (&#8216;ಮಂತ್ರಿಗಳಿಗೆ ಸಂಬಂಧಿಸಿದ ಇತರ ನಿಬಂಧನೆಗಳು&#8217;) ತಿದ್ದುಪಡಿ ಮಾಡಲು ಪ್ರಯತ್ನಿಸುವ ಸಂವಿಧಾನ (130 ನೇ ತಿದ್ದುಪಡಿ) ಮಸೂದೆಯನ್ನು ಈ ಕೆಳಗಿನ ವಿಭಾಗವನ್ನು ಸೇರಿಸುವ ಮೂಲಕ ಮಂಡಿಸಲಿದ್ದಾರೆ:</p>



<ul class="wp-block-list">
<li>&#8220;ಒಬ್ಬ ಸಚಿವನನ್ನು ಸತತ ಮೂವತ್ತು ದಿನಗಳ ಕಾಲ ಬಂಧಿಸಿ ಬಂಧನದಲ್ಲಿ ಇರಿಸಿದರೆ, ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧವನ್ನು ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಕಾನೂನಿನಡಿಯಲ್ಲಿ ಮಾಡಿದ ಆರೋಪದ ಮೇಲೆ, ಪ್ರಧಾನ ಮಂತ್ರಿಯ ಸಲಹೆಯ ಮೇರೆಗೆ ರಾಷ್ಟ್ರಪತಿ ಅವರನ್ನು ತಮ್ಮ ಹುದ್ದೆಯಿಂದ ತೆಗೆದುಹಾಕಬೇಕು, ಅವರನ್ನು ಅಂತಹ ಕಸ್ಟಡಿಗೆ ತೆಗೆದುಕೊಂಡ ನಂತರ ಮೂವತ್ತೊಂದನೇ ದಿನದೊಳಗೆ ಸಲ್ಲಿಸಬೇಕು:</li>



<li>&#8220;ಮೂವತ್ತೊಂದನೇ ದಿನದೊಳಗೆ ಅಂತಹ ಸಚಿವರನ್ನು ಪದಚ್ಯುತಗೊಳಿಸಲು ಪ್ರಧಾನ ಮಂತ್ರಿಗಳು ರಾಷ್ಟ್ರಪತಿಗಳಿಗೆ ಸಲಹೆ ನೀಡದಿದ್ದರೆ, ಆ ನಂತರದ ದಿನದಿಂದ ಜಾರಿಗೆ ಬರುವಂತೆ ಅವರು ಸಚಿವರಾಗಿರುವುದನ್ನು ತಡೆದು ನಿಲ್ಲಿಸುತ್ತಾರೆ:</li>



<li>&#8220;ಇದಲ್ಲದೆ, ಪ್ರಧಾನ ಮಂತ್ರಿಯು ತನ್ನ ಹುದ್ದೆಯಲ್ಲಿ ಸತತ ಮೂವತ್ತು ದಿನಗಳ ಕಾಲ ಬಂಧನಕ್ಕೊಳಗಾಗಿ ಬಂಧನದಲ್ಲಿದ್ದರೆ, ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾಗಬಹುದಾದ, ಸದ್ಯಕ್ಕೆ ಜಾರಿಯಲ್ಲಿರುವ ಯಾವುದೇ ಕಾನೂನಿನಡಿಯಲ್ಲಿ ಅಪರಾಧ ಎಸಗಿದ ಆರೋಪದ ಮೇಲೆ, ಅಂತಹ ಬಂಧನ ಮತ್ತು ಬಂಧನದ ನಂತರ ಮೂವತ್ತೊಂದನೇ ದಿನದೊಳಗೆ ರಾಜೀನಾಮೆ ನೀಡಬೇಕು ಮತ್ತು ಅವರು ರಾಜೀನಾಮೆ ನೀಡದಿದ್ದರೆ, ಆ ದಿನದಿಂದ ಜಾರಿಗೆ ಬರುವಂತೆ ಅವರು ಪ್ರಧಾನ ಮಂತ್ರಿಯಾಗುವುದನ್ನು ತಡೆದು ನಿಲ್ಲಿಸುತ್ತಾರೆ&#8230;&#8221;</li>
</ul>



<p>ಹೊಸ ನಿಯಮದ ಪ್ರಕಾರ, ಚುನಾಯಿತ ಮುಖ್ಯಮಂತ್ರಿಯೊಬ್ಬರು 30 ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಬಂಧನದಲ್ಲಿದ್ದರೆ ಅಥವಾ ಬಂಧಿಸಲ್ಪಟ್ಟರೆ, ಅವರ ಅಪರಾಧ ಸಾಬೀತಾಗಿಲ್ಲದಿದ್ದರೂ ಸಹ, ಅವರನ್ನು ತೆಗೆದುಹಾಕಬಹುದು ಎಂದು ಮಸೂದೆ ಹೇಳುತ್ತದೆ.</p>



<p>ಹೊಸ ನಿಯಮವನ್ನು 1963 ರ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರದ ಕಾಯ್ದೆಯ ಸೆಕ್ಷನ್ 45, ಉಪ-ವಿಭಾಗ (5) ಕ್ಕೆ ತಿದ್ದುಪಡಿಯಾಗಿ ಸೇರಿಸಲಾಗಿದೆ. ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವ ಸಾಧ್ಯತೆಯ ಬಗ್ಗೆ ಊಹಾಪೋಹಗಳಿಗೆ ವಿರುದ್ಧವಾಗಿ, ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆಯು ಇದೇ ರೀತಿಯ ಷರತ್ತನ್ನು ಪರಿಚಯಿಸುತ್ತದೆ, ಅಂದರೆ ಜಮ್ಮು ಮತ್ತು ಕಾಶ್ಮೀರದ ಸಚಿವರನ್ನು ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆ ವಿಧಿಸಬಹುದಾದ ಯಾವುದೇ ಅಪರಾಧಕ್ಕಾಗಿ ಸತತ 30 ದಿನಗಳವರೆಗೆ ಬಂಧಿಸಿದರೆ ಅಥವಾ ಬಂಧನದಲ್ಲಿಟ್ಟರೆ, ಅವರನ್ನು ಈಗ ಲೆಫ್ಟಿನೆಂಟ್ ಜನರಲ್ ಅಥವಾ ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಪದವಿಯಿಂದ ತೆಗೆದುಹಾಕಬಹುದು:</p>



<ul class="wp-block-list">
<li>&#8220;ಒಬ್ಬ ಸಚಿವರನ್ನು ಮೂವತ್ತು ದಿನಗಳ ಕಾಲ ಸತತವಾಗಿ ಅಧಿಕಾರದಲ್ಲಿದ್ದಾಗ ಬಂಧಿಸಿ ಬಂಧನದಲ್ಲಿಡಲಾಗುತ್ತದೆ. ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧವನ್ನು ಎಸಗುವ ಆರೋಪದ ಮೇಲೆ ಅವರನ್ನು ಬಂಧಿಸಲಾಗುತ್ತದೆ. ಮುಖ್ಯಮಂತ್ರಿಯ ಸಲಹೆಯ ಮೇರೆಗೆ ಲೆಫ್ಟಿನೆಂಟ್ ಗವರ್ನರ್ ಅವರನ್ನು ಮೂವತ್ತೊಂದನೇ ದಿನದೊಳಗೆ ಅಧಿಕಾರದಲ್ಲಿ ಇರಿಸಲು ಆದೇಶಿಸುತ್ತಾರೆ&#8221; ಎಂದು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ ಹೇಳುತ್ತದೆ.</li>
</ul>



<p>ಈ ತಿದ್ದುಪಡಿ ಮಸೂದೆ ಅಂಗೀಕಾರವಾದರೆ, ಮುಖ್ಯಮಂತ್ರಿ ಅಥವಾ ಅವರ ಸಂಪುಟದಲ್ಲಿರುವ ಯಾರನ್ನಾದರೂ ತೆಗೆದುಹಾಕಲು ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಅಧಿಕಾರ ದೊರೆಯುತ್ತದೆ. ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ಹೇಳಿದ್ದಕ್ಕಿಂತ ಭಿನ್ನವಾಗಿ &#8211; ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವುದಾಗಿ &#8211; ಹೊಸ ತಿದ್ದುಪಡಿ ಮಸೂದೆಯು ಮೊದಲಿಗಿಂತ ಹೆಚ್ಚಿನ ಆಡಳಿತಾತ್ಮಕ ಅಧಿಕಾರಗಳೊಂದಿಗೆ ತನ್ನನ್ನು ತಾನು ಸಬಲೀಕರಣಗೊಳಿಸಲು ಮತ್ತು ಚುನಾಯಿತ ಕೇಂದ್ರಾಡಳಿ ಪ್ರದೇಶಗಳ ಸರ್ಕಾರದ ವಿರುದ್ಧ ಜಮ್ಮು ಮತ್ತು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ಆಡಳಿತವನ್ನು ಇನ್ನಷ್ಟು ಬಲಪಡಿಸಲು ವಿರುದ್ಧ ದಿಕ್ಕನ್ನು ತೆಗೆದುಕೊಂಡಿದೆ.</p>



<p>ಈ ಕ್ರಮಕ್ಕೆ ಆರಂಭಿಕ ಪ್ರತಿಕ್ರಿಯೆಯಾಗಿ, ಹಿರಿಯ ಕಾಂಗ್ರೆಸ್ ನಾಯಕರು ಅಮಿತ್ ಶಾ ಅವರ ಪ್ರಸ್ತಾಪಗಳನ್ನು ವಿರೋಧ ಪಕ್ಷದ ಆಡಳಿತ ಇರುವ ರಾಜ್ಯಗಳನ್ನು ದುರ್ಬಲಗೊಳಿಸುವ ಒಂದು ಮಾರ್ಗವೆಂದು ಖಂಡಿಸಿದ್ದಾರೆ.</p>



<p>&#8221;&nbsp;ಎಂತಹ ಕೆಟ್ಟ ಪ್ರವೃತ್ತಿ! ಬಂಧನಕ್ಕೆ ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸಲಾಗಿಲ್ಲ! ವಿರೋಧ ಪಕ್ಷದ ನಾಯಕರ ಬಂಧನಗಳು ಅಸಮಾನವಾಗಿವೆ. ಹೊಸ ಪ್ರಸ್ತಾವಿತ ಕಾನೂನು&nbsp;ಬಂಧನದ ತಕ್ಷಣ&nbsp;#CM ಇತ್ಯಾದಿ ಹುದ್ದೆಗಳಲ್ಲಿ ಇರುವವರನ್ನು ತೆಗೆದುಹಾಕುತ್ತದೆ&#8221; ಎಂದು&nbsp;<a href="https://x.com/dramsinghvi/status/1957859322765209687?s=48" target="_blank" rel="noreferrer noopener">ಅಭಿಷೇಕ್ ಮನು ಸಿಂಘ್ವಿ ಟ್ವೀಟ್ ಮಾಡಿದ್ದಾರೆ</a>&nbsp;, &#8220;ವಿರೋಧ ಪಕ್ಷವನ್ನು ಅಸ್ಥಿರಗೊಳಿಸಲು ಉತ್ತಮ ಮಾರ್ಗವೆಂದರೆ ವಿರೋಧ ಪಕ್ಷದ ಮುಖ್ಯಮಂತ್ರಿಗಳನ್ನು ಬಂಧಿಸಲು ಪಕ್ಷಪಾತಿ ಧೋರಣೆಯ ಕೇಂದ್ರ ಸಂಸ್ಥೆಗಳನ್ನು ಛೂ ಬಿಡುವುದು ಮತ್ತು ಅವರನ್ನು ಚುನಾವಣಾ ಮಾರ್ಗದ ಮೂಲಕ ಸೋಲಿಸಲು ಸಾಧ್ಯವಾಗದಿದ್ದರೂ, ಅನಿಯಂತ್ರಿತ ಬಂಧನಗಳ ಮೂಲಕ ಅವರನ್ನು ತೆಗೆದುಹಾಕುವುದು!! ಮತ್ತು  ತಮ್ಮದೇ ಪಕ್ಷದ ಆಡಳಿತ ಇರುವ ರಾಜ್ಯಗಳ ಯಾವುದೇಮುಖ್ಯಮಂತ್ರಿಯನ್ನು ಎಂದಿಗೂ ಮುಟ್ಟಲಿಲ್ಲ!!&#8221;<a href="https://x.com/dramsinghvi/status/1957859322765209687?s=48" target="_blank" rel="noreferrer noopener"></a></p>



<p>ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಕಾನೂನು ಮತ್ತು ನ್ಯಾಯ ಸಚಿವಾಲಯದ ಶಾಸಕಾಂಗ ಇಲಾಖೆ, ಲೋಕಸಭಾ ಸಚಿವಾಲಯ ಮತ್ತು ಲೋಕಸಭೆಯ ಶಾಸಕಾಂಗ ಕಚೇರಿಗೆ ಬರೆದ ಪತ್ರವನ್ನು ಶಾ ಮಾರ್ಕ್‌ ಮಾಡಿದ್ದಾರೆ.</p>



<p>ಪ್ರಸಕ್ತ ಅಧಿವೇಶನದಲ್ಲಿ ಎರಡೂ ತಿದ್ದುಪಡಿ ಮಸೂದೆಗಳನ್ನು ಮಂಡಿಸಲು ಸದನದ ನಿಯಮಗಳಲ್ಲಿ ಸ್ವಲ್ಪ ಮೃದುತ್ವ ತೋರಿಸುವಂತೆ ಪ್ರಧಾನ ಕಾರ್ಯದರ್ಶಿಯನ್ನು ಒತ್ತಾಯಿಸಿ ಶಾ ಪ್ರತ್ಯೇಕ ಪತ್ರದಲ್ಲಿ ವಿನಂತಿಸಿದ್ದಾರೆ. ಆಗಸ್ಟ್ 21, 2025 ರಂದು ಕೊನೆಗೊಳ್ಳಲಿರುವ ಪ್ರಸಕ್ತ ಅಧಿವೇಶನದಲ್ಲಿ ಪ್ರಸ್ತಾವನೆಯನ್ನು ಸುಗಮಗೊಳಿಸಲು ನಿಯಮ 19 (ಎ) ಮತ್ತು 19 (ಬಿ) ನಲ್ಲಿ ಉಲ್ಲೇಖಿಸಲಾದ ಲೋಕಸಭೆಯ ಕಾರ್ಯವಿಧಾನಗಳು ಮತ್ತು ನಿಯಮಗಳನ್ನು ಸರಳೀಕರಿಸಲು ಪ್ರಧಾನ ಕಾರ್ಯದರ್ಶಿಯನ್ನು ಒತ್ತಾಯಿಸಲು ಶಾ &#8220;ಸಮಯದ ಕೊರತೆ&#8221;ಯನ್ನು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗಿದೆ.</p>



<p>ನಿಯಮ 19 (ಎ) ರ ಪ್ರಕಾರ, ಸರ್ಕಾರಿ ಸಚಿವರು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಲು ಪೂರ್ವ ಸೂಚನೆ ನೀಡಬೇಕು, ಆದರೆ ನಿಯಮ 19 (ಬಿ) ಪ್ರಕಾರ, ಸಂಬಂಧಿತ ಮಸೂದೆಯ ಪರಿಶೀಲನೆ ಮತ್ತು ಸಿದ್ಧತೆಗೆ ಅನುಕೂಲವಾಗುವಂತೆ ಸರ್ಕಾರಿ ಮಸೂದೆಗಳನ್ನು ಔಪಚಾರಿಕವಾಗಿ ಮಂಡಿಸುವ ಮೊದಲು ಲೋಕಸಭೆಯ ಎಲ್ಲಾ ಸದಸ್ಯರಿಗೆ ವಿತರಿಸಬೇಕು.</p>



<p><em>ಮಂಗಳವಾರ ಸಂಜೆ ತಡವಾಗಿ, ಸಂಸದೀಯ ವ್ಯವಹಾರಗಳ ಸಚಿವಾಲಯವು ಪರಿಷ್ಕೃತ ಸರ್ಕಾರಿ ವ್ಯವಹಾರ ಪಟ್ಟಿಯನ್ನು ಲೋಕಸಭೆಯ ಸಚಿವಾಲಯಕ್ಕೆ ಕಳುಹಿಸಿ ಕಾರ್ಯಸೂಚಿಯನ್ನು ಸೇರಿಸಲು ವಿನಂತಿಸಿ</em>ತ್ತು. ಚರ್ಚೆಗಳು ಆ ದಿನಕ್ಕೆ ಮುಂದುವರಿದರೆ, ಆಗಸ್ಟ್ 21, 2025 ರಂದು ಸದನದಲ್ಲಿ ಈ ಮಸೂದೆಗಳನ್ನು ಚರ್ಚಿಸಬಹುದು ಎಂದು ಅದು ಹೇಳಿದೆ.</p>



<p>ಮಳೆಗಾಲದ ಅಧಿವೇಶನಕ್ಕೆ ಕೇವಲ ಎರಡು ಕೆಲಸದ ದಿನಗಳು ಉಳಿದಿರುವಾಗ ಮಸೂದೆಗಳನ್ನು ಮಂಡಿಸುವ ಪ್ರಸ್ತಾವನೆಯ ಕುರಿತು ಅಮಿತ್‌ ಶಾ ಇದ್ದಕ್ಕಿದ್ದಂತೆ ಪ್ರಧಾನ ಕಾರ್ಯದರ್ಶಿಗೆ ವಿನಂತಿಯನ್ನು ಕಳುಹಿಸಿದಾಗ, ಅದು ನಿಯಮ 19A ಮತ್ತು 19B ಯ ಉಲ್ಲಂಘನೆಯಾಗಬಹುದು ಎಂದು ಲೋಕಸಭಾ ಸಚಿವಾಲಯವು ಗಮನಸೆಳೆದಿದೆ.<em> ಶಾ ಅವರ ತುರ್ತು ವಿನಂತಿಯನ್ನು ಪೂರೈಸಲು ಪರಿಹಾರವನ್ನು ಕಂಡುಕೊಳ್ಳುವಂತೆ ಸ್ಪೀಕರ್ ಓಂ ಬಿರ್ಲಾ ಅವರು ಸಚಿವಾಲಯವನ್ನು ಕೇಳಿದ್ದಾರೆ ಎಂದು ಹೇಳಲಾಗಿದೆ.</em></p>



<p>ಆಗ ಶಾ ಅವರಿಗೆ 19A ಮತ್ತು 19B ನಿಯಮಗಳನ್ನು ಸಡಿಲಿಸುವಂತೆ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಅವರನ್ನು ಒತ್ತಾಯಿಸಿ ಮತ್ತೊಂದು ಪತ್ರ ಬರೆಯಲು ಹೇಳಲಾಯಿತು. ಶಾ ಈ ಶಾಸನಗಳನ್ನು ಮಂಡಿಸಿದ ನಂತರ, ವಿರೋಧ ಪಕ್ಷದ ನಾಯಕರಿಗೆ ಅವುಗಳನ್ನು ಪರಿಶೀಲಿಸಲು ಸಾಕಷ್ಟು ಸಮಯ ನೀಡದೆ ಈ ಪ್ರಮುಖ ಮಸೂದೆಗಳನ್ನು ತಂದಿದ್ದರಿಂದ, ಅವರು ಅವುಗಳನ್ನು ಆಯ್ಕೆ ಸಮಿತಿಗೆ ಉಲ್ಲೇಖಿಸಲು ಕೋರುವ ಸಾಧ್ಯತೆಯಿದೆ.</p>
]]></content:encoded>
					
		
		
			</item>
		<item>
		<title>ದಕ್ಷಿಣ ಕನ್ನಡ &#124; ಲಂಚ ಪಡೆಯುತ್ತಿದ್ದ ಆರೋಪ: ಉಪ ತಹಶೀಲ್ದಾರ್ ಸೇರಿ ಮೂವರ ಬಂಧನ</title>
		<link>https://peepalmedia.com/three-people-including-a-deputy-tehsildar-arrested-on-charges-of-accepting-bribes/</link>
		
		<dc:creator><![CDATA[Peepal Media]]></dc:creator>
		<pubDate>Thu, 14 Aug 2025 01:44:22 +0000</pubDate>
				<category><![CDATA[ದಕ್ಷಿಣ ಕನ್ನಡ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=64173</guid>

					<description><![CDATA[ಮಂಗಳೂರು: ಲಂಚ ಸ್ವೀಕರಿಸಿದ ಆರೋಪದ ಮೇಲೆ ಬಂಟ್ವಾಳದ ಉಪ ತಹಶೀಲ್ದಾರ್ ರಾಜೇಶ್ ನಾಯಕ್, ಕೇಸ್ ವರ್ಕರ್ ಸಂತೋಷ್ ಮತ್ತು ಮಧ್ಯವರ್ತಿ ಗಣೇಶ್ ವಾಮದಪದವು ಅವರನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮಧ್ಯವರ್ತಿಯ ಮೂಲಕ 20,000 ರೂಪಾಯಿ ಲಂಚ ಸ್ವೀಕರಿಸುವಾಗ ಉಪ ತಹಶೀಲ್ದಾರ್ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಸಂತ್ರಸ್ತರ ದೂರಿನ ಪ್ರಕಾರ, 2021ರಲ್ಲಿ ದೂರುದಾರರು ತಮ್ಮ ತಾಯಿಯ ಪೌತಿ ಖಾತೆಗಾಗಿ ಬಂಟ್ವಾಳ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಕಾನೂನು ವಿವಾದದ ನಂತರ, ಉಪ ಆಯುಕ್ತರ ನ್ಯಾಯಾಲಯವು ಭೂ [&#8230;]]]></description>
										<content:encoded><![CDATA[
<p>ಮಂಗಳೂರು: ಲಂಚ ಸ್ವೀಕರಿಸಿದ ಆರೋಪದ ಮೇಲೆ ಬಂಟ್ವಾಳದ ಉಪ ತಹಶೀಲ್ದಾರ್ ರಾಜೇಶ್ ನಾಯಕ್, ಕೇಸ್ ವರ್ಕರ್ ಸಂತೋಷ್ ಮತ್ತು ಮಧ್ಯವರ್ತಿ ಗಣೇಶ್ ವಾಮದಪದವು ಅವರನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮಧ್ಯವರ್ತಿಯ ಮೂಲಕ 20,000 ರೂಪಾಯಿ ಲಂಚ ಸ್ವೀಕರಿಸುವಾಗ ಉಪ ತಹಶೀಲ್ದಾರ್ ರೆಡ್ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.</p>



<p>ಸಂತ್ರಸ್ತರ ದೂರಿನ ಪ್ರಕಾರ, 2021ರಲ್ಲಿ ದೂರುದಾರರು ತಮ್ಮ ತಾಯಿಯ ಪೌತಿ ಖಾತೆಗಾಗಿ ಬಂಟ್ವಾಳ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಕಾನೂನು ವಿವಾದದ ನಂತರ, ಉಪ ಆಯುಕ್ತರ ನ್ಯಾಯಾಲಯವು ಭೂ ಮಂಜೂರಾತಿ ಆದೇಶವನ್ನು ಎತ್ತಿಹಿಡಿದು, ಸಜೀಪ ಮುನ್ನೂರು ಗ್ರಾಮದ ಸರ್ವೆ ನಂ 102/1ರಲ್ಲಿ ಪೌತಿ ಖಾತಾ ಮಾಡಿಕೊಡುವಂತೆ ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ಸೂಚಿಸಿತು. ಸಹಾಯಕ ಆಯುಕ್ತರು ಬಂಟ್ವಾಳ ತಹಶೀಲ್ದಾರ್‌ಗೆ ಈ ಆದೇಶವನ್ನು ಜಾರಿಗೆ ತರುವಂತೆ ನಿರ್ದೇಶಿಸಿದರು.</p>



<p>ಆದರೆ, ಕಡತವು ಏಪ್ರಿಲ್ 2025ರಿಂದ ಬಂಟ್ವಾಳ ತಹಶೀಲ್ದಾರ್ ಕಚೇರಿಯಲ್ಲಿ ಬಾಕಿ ಉಳಿದಿತ್ತು. ದೂರುದಾರರು ಕೇಸ್ ವರ್ಕರ್ ಸಂತೋಷ್ ಅವರನ್ನು ಸಂಪರ್ಕಿಸಿದಾಗ, ದಾಖಲೆಗಳನ್ನು ಪ್ರಕ್ರಿಯೆಗೊಳಿಸಲು 1,500 ರೂಪಾಯಿ ಲಂಚ ಕೇಳಿದ್ದಾರೆ. ಉಪ ತಹಶೀಲ್ದಾರ್ ರಾಜೇಶ್ ನಾಯಕ್ ಪೌತಿ ಖಾತಾ ಪ್ರವೇಶಕ್ಕೆ ಅನುಮೋದನೆ ನೀಡಲು 20,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.</p>



<p>ದೂರುದಾರರು ಮಂಗಳೂರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಬುಧವಾರದಂದು ಲೋಕಾಯುಕ್ತ ತಂಡವು ಕಾರ್ಯಾಚರಣೆ ನಡೆಸಿ, ಮಧ್ಯವರ್ತಿ ಗಣೇಶ್ ಮೂಲಕ 20,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ರಾಜೇಶ್ ನಾಯಕ್ ಅವರನ್ನು ಬಂಧಿಸಿದೆ.</p>



<p>ಬಂಧಿತರಾದ ಮೂವರನ್ನು ವಿಚಾರಣೆ ನಡೆಸಲಾಗುತ್ತಿದೆ, ಮತ್ತು ಈ ಪ್ರಕರಣದಲ್ಲಿ ಬಂಟ್ವಾಳ ತಹಶೀಲ್ದಾರ್ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ.</p>



<p>ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ (ಪ್ರಭಾರ) ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಡಿವೈಎಸ್‌ಪಿ ಡಾ. ಗಣ ಪ ಕುಮಾರ್, ಡಿವೈಎಸ್‌ಪಿ ಸುರೇಶ್ ಕುಮಾರ್ ಪಿ, ಇನ್ಸ್‌ಪೆಕ್ಟರ್‌ಗಳಾದ ಭಾರತಿ ಜಿ ಮತ್ತು ಚಂದ್ರಶೇಖರ್ ಕೆ ಎನ್, ಹಾಗೂ ಇತರ ಲೋಕಾಯುಕ್ತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಉಪ ತಹಶೀಲ್ದಾರ್ ಸೇರಿ ಮೂವರನ್ನು ಲೋಕಾಯುಕ್ತರು ಬಂಧಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್</title>
		<link>https://peepalmedia.com/supreme-court-cancels-wrestler-sushil-kumars-bail/</link>
		
		<dc:creator><![CDATA[Peepal Media]]></dc:creator>
		<pubDate>Wed, 13 Aug 2025 09:31:52 +0000</pubDate>
				<category><![CDATA[ದೆಹಲಿ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=64131</guid>

					<description><![CDATA[ದೆಹಲಿ: ಒಲಿಂಪಿಕ್ ಪದಕ ವಿಜೇತ, ರೆಸ್ಲರ್ ಸುಶೀಲ್ ಕುಮಾರ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಜೈಲುಶಿಕ್ಷೆ ಎದುರಿಸುತ್ತಿದ್ದಾರೆ. ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನ್ಕರ್ ಹತ್ಯೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ವಿರುದ್ಧ ಆರೋಪಗಳಿವೆ. ಮಾರ್ಚ್ 4 ರಂದು ದೆಹಲಿ ಹೈಕೋರ್ಟ್ ಸುಶೀಲ್‌ಗೆ ಜಾಮೀನು ನೀಡಿತ್ತು. ಆದರೆ, ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಸುಪ್ರೀಂ ಕೋರ್ಟ್ ಪೀಠ [&#8230;]]]></description>
										<content:encoded><![CDATA[
<p></p>



<p>ದೆಹಲಿ: ಒಲಿಂಪಿಕ್ ಪದಕ ವಿಜೇತ, ರೆಸ್ಲರ್ ಸುಶೀಲ್ ಕುಮಾರ್ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ದೆಹಲಿಯ ಛತ್ರಸಾಲ್ ಕ್ರೀಡಾಂಗಣದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಜೈಲುಶಿಕ್ಷೆ ಎದುರಿಸುತ್ತಿದ್ದಾರೆ.</p>



<p>ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನ್ಕರ್ ಹತ್ಯೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ವಿರುದ್ಧ ಆರೋಪಗಳಿವೆ. ಮಾರ್ಚ್ 4 ರಂದು ದೆಹಲಿ ಹೈಕೋರ್ಟ್ ಸುಶೀಲ್‌ಗೆ ಜಾಮೀನು ನೀಡಿತ್ತು. ಆದರೆ, ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಸುಪ್ರೀಂ ಕೋರ್ಟ್ ಪೀಠ ಆ ಜಾಮೀನನ್ನು ರದ್ದುಪಡಿಸಿದೆ.</p>



<p>ಒಂದು ವಾರದೊಳಗೆ ಸುಶೀಲ್ ಶರಣಾಗಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಆಸ್ತಿಯೊಂದರ ವಿಚಾರವಾಗಿ ರೆಸ್ಲರ್‌ಗಳ ನಡುವೆ ವಿವಾದ ಉಂಟಾಗಿತ್ತು. ಮೇ 2021 ರಲ್ಲಿ ಸುಶೀಲ್ ಕುಮಾರ್ ಮತ್ತು ಇತರರು ಧನ್ಕರ್ ಮೇಲೆ ಹಲ್ಲೆ ಮಾಡಿದ್ದರು. ಆ ಘಟನೆಯಲ್ಲಿ ಧನ್ಕರ್ ಅವರ ಇಬ್ಬರು ಸ್ನೇಹಿತರೂ ಗಾಯಗೊಂಡಿದ್ದರು. ಮರಣೋತ್ತರ ವರದಿಯ ಪ್ರಕಾರ, ಧನ್ಕರ್ ಅವರ ತಲೆಗೆ ತೀವ್ರ ಗಾಯಗಳಾಗಿದ್ದವು.</p>
]]></content:encoded>
					
		
		
			</item>
		<item>
		<title>ಮಾನನಷ್ಟ ಮೊಕದ್ದಮೆ: ಮೇಧಾ ಪಾಟ್ಕರ್‌ಗೆ ಸುಪ್ರೀಂನಲ್ಲಿ ಹಿನ್ನಡೆ</title>
		<link>https://peepalmedia.com/defamation-case-medha-patkar-suffers-setback-in-supreme-court/</link>
		
		<dc:creator><![CDATA[Peepal Media]]></dc:creator>
		<pubDate>Tue, 12 Aug 2025 03:16:29 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=64034</guid>

					<description><![CDATA[ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ (70) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನೆಡೆಯಾಗಿದೆ. ಮಾನನಷ್ಟ ಮೊಕದ್ದಮೆಯಲ್ಲಿ ಜುಲೈ 29ರಂದು ದೆಹಲಿ ಹೈಕೋರ್ಟ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ನೀಡಿದ ತೀರ್ಪಿನಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ಅವರಿಗೆ ವಿಧಿಸಲಾದ ₹1 ಲಕ್ಷ ದಂಡವನ್ನು ರದ್ದುಗೊಳಿಸಿದೆ. ಪ್ರಸ್ತುತ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು 2001ರಲ್ಲಿ ಮೇಧಾ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕಳೆದ ವರ್ಷ ಮೇ ತಿಂಗಳಲ್ಲಿ ಮೇಧಾ ಅವರನ್ನು [&#8230;]]]></description>
										<content:encoded><![CDATA[
<p>ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್ (70) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನೆಡೆಯಾಗಿದೆ. ಮಾನನಷ್ಟ ಮೊಕದ್ದಮೆಯಲ್ಲಿ ಜುಲೈ 29ರಂದು ದೆಹಲಿ ಹೈಕೋರ್ಟ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿ ನೀಡಿದ ತೀರ್ಪಿನಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಆದರೆ ಅವರಿಗೆ ವಿಧಿಸಲಾದ ₹1 ಲಕ್ಷ ದಂಡವನ್ನು ರದ್ದುಗೊಳಿಸಿದೆ.</p>



<p>ಪ್ರಸ್ತುತ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು 2001ರಲ್ಲಿ ಮೇಧಾ ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕಳೆದ ವರ್ಷ ಮೇ ತಿಂಗಳಲ್ಲಿ ಮೇಧಾ ಅವರನ್ನು ತಪ್ಪಿತಸ್ಥರೆಂದು ನಿರ್ಧರಿಸಿ ಮೂರು ತಿಂಗಳ ಜೈಲು ಮತ್ತು ₹1 ಲಕ್ಷ ದಂಡ ವಿಧಿಸಿದ್ದರು. <br><br>ಈ ವರ್ಷದ ಏಪ್ರಿಲ್‌ನಲ್ಲಿ ಸೆಷನ್ಸ್ ಕೋರ್ಟ್ ಮೇಧಾ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದರೂ, ಜೈಲು ಶಿಕ್ಷೆಯನ್ನು ರದ್ದುಪಡಿಸಿ ಪ್ರೊಬೇಷನ್ ಮೇಲೆ ಬಿಡುಗಡೆ ಮಾಡಲು ಆದೇಶಿಸಿತ್ತು. ದೆಹಲಿ ಹೈಕೋರ್ಟ್ ಈ ತೀರ್ಪನ್ನು ಎತ್ತಿಹಿಡಿದಿತ್ತು.</p>
]]></content:encoded>
					
		
		
			</item>
		<item>
		<title>ಮುಂದಿನ ವರ್ಷದಿಂದ ಮೊಟ್ಟೆ ವಿತರಣೆಗೆ ಪೋಷಕರ ಒಪ್ಪಿಗೆ ಪಡೆಯುತ್ತೇವೆ: ಸಚಿವ ಮಧು ಬಂಗಾರಪ್ಪ</title>
		<link>https://peepalmedia.com/government-decides-to-seek-parental-consent-for-distribution-of-eggs-minister/</link>
		
		<dc:creator><![CDATA[Peepal Media]]></dc:creator>
		<pubDate>Tue, 12 Aug 2025 02:41:43 +0000</pubDate>
				<category><![CDATA[ಬೆಂಗಳೂರು]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=64029</guid>

					<description><![CDATA[ಬೆಂಗಳೂರು: ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ಮೊಟ್ಟೆಗಳನ್ನು ವಿತರಿಸುವ ಕುರಿತು ಅಜೀಂ ಪ್ರೇಮ್‌ಜಿ ಫೌಂಡೇಶನ್ ನಡೆಸಿದ ಅಚ್ಚರಿಯ ಪರಿಶೀಲನೆಯಲ್ಲಿ, ಕೆಲವು ಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರ ಸೂಚನೆಯ ಮೇರೆಗೆ ಮೊಟ್ಟೆ ವಿತರಣೆ ಆಗುತ್ತಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಈ ವರ್ಷದಿಂದ ಮಕ್ಕಳ ದಾಖಲಾತಿ ಸಮಯದಲ್ಲಿ ಅಥವಾ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಲು ನಿರ್ಧರಿಸಿದೆ. ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಪೌಷ್ಟಿಕಾಂಶದ ಹೆಚ್ಚುವರಿಯಾಗಿ ಮೊಟ್ಟೆಗಳನ್ನು ವಿತರಿಸಲು [&#8230;]]]></description>
										<content:encoded><![CDATA[
<p>ಬೆಂಗಳೂರು: ಶಾಲಾ ಮಕ್ಕಳಿಗೆ ಬಿಸಿಯೂಟದಲ್ಲಿ ಮೊಟ್ಟೆಗಳನ್ನು ವಿತರಿಸುವ ಕುರಿತು ಅಜೀಂ ಪ್ರೇಮ್‌ಜಿ ಫೌಂಡೇಶನ್ ನಡೆಸಿದ ಅಚ್ಚರಿಯ ಪರಿಶೀಲನೆಯಲ್ಲಿ, ಕೆಲವು ಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಸದಸ್ಯರ ಸೂಚನೆಯ ಮೇರೆಗೆ ಮೊಟ್ಟೆ ವಿತರಣೆ ಆಗುತ್ತಿಲ್ಲ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಈ ವರ್ಷದಿಂದ ಮಕ್ಕಳ ದಾಖಲಾತಿ ಸಮಯದಲ್ಲಿ ಅಥವಾ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಪೋಷಕರಿಂದ ಒಪ್ಪಿಗೆ ಪತ್ರ ಪಡೆಯಲು ನಿರ್ಧರಿಸಿದೆ.</p>



<p>ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಪೌಷ್ಟಿಕಾಂಶದ ಹೆಚ್ಚುವರಿಯಾಗಿ ಮೊಟ್ಟೆಗಳನ್ನು ವಿತರಿಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್ 1,500 ಕೋಟಿ ರೂ. ನೀಡುವುದಾಗಿ ಪ್ರತಿಜ್ಞೆ ಮಾಡಿದೆ. ಸೋಮವಾರ, ಬಿಜೆಪಿ ಎಂಎಲ್‌ಸಿ ಎನ್. ರವಿ ಕುಮಾರ್ ಅವರು ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆಗಳನ್ನು ನೀಡುತ್ತಿಲ್ಲ ಎಂದು ಪ್ರಶ್ನಿಸಿದಾಗ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಕೆಲವು ಪೋಷಕರು ತಮ್ಮ ಮಕ್ಕಳಿಗೆ ವಾರದ ಕೆಲವು ದಿನಗಳಲ್ಲಿ ಮೊಟ್ಟೆ ತಿನ್ನಿಸುವುದು ಬೇಡ ಎಂದು ತಿಳಿಸಿದ್ದಾರೆ ಎಂದು ಒಪ್ಪಿಕೊಂಡರು.</p>



<p>&#8220;ಆದ್ದರಿಂದ, ನಾವು ಮಕ್ಕಳ ದಾಖಲಾತಿ ಸಮಯದಲ್ಲಿಯೇ ಪೋಷಕರಿಂದ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದೇವೆ. ಅವರಿಗೆ ಮೊಟ್ಟೆ ಬೇಕೇ ಅಥವಾ ಬಾಳೆಹಣ್ಣು ಬೇಕೇ ಎಂಬುದನ್ನು ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ. ಇಂತಹ ವಿಷಯಗಳಲ್ಲಿ ಪೋಷಕರ ಅನುಮತಿ ಪಡೆಯುವುದು ಒಳ್ಳೆಯದು,&#8221; ಎಂದು ಸಚಿವರು ಹೇಳಿದರು.</p>



<p>ಆದರೆ, ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಿಸಲು ಮೀಸಲಿಟ್ಟ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳನ್ನು ಮಧು ಬಂಗಾರಪ್ಪ ಅವರು ತಳ್ಳಿಹಾಕಿದರು. &#8220;ಹಣದ ದುರುಪಯೋಗವಾಗಿಲ್ಲ. ಮೊಟ್ಟೆಗಳ ಬೆಲೆ ಏರಿಳಿತವಾಗುತ್ತದೆ, ಮತ್ತು ಉಳಿದ ಹಣವನ್ನು ಆಯಾ SDMCಗಳು ಇಟ್ಟುಕೊಳ್ಳುತ್ತವೆ.&#8221;</p>



<p>ಅಜೀಂ ಪ್ರೇಮ್‌ಜಿ ಫೌಂಡೇಶನ್ ಪರಿಶೀಲಿಸಿದ 762 ಶಾಲೆಗಳಲ್ಲಿ 568 ಶಾಲೆಗಳಲ್ಲಿ ಮೊಟ್ಟೆ ವಿತರಣೆಯಾಗಿಲ್ಲ ಎಂದು ಕಂಡುಬಂದಿದೆ. ಫೌಂಡೇಶನ್ ತನ್ನ ವರದಿಯನ್ನು ಸಲ್ಲಿಸಿದ ನಂತರ, ಇಲಾಖೆಯು SDMCಗಳಿಗೆ ನೋಟಿಸ್ ಜಾರಿ ಮಾಡಿದೆ.</p>
]]></content:encoded>
					
		
		
			</item>
		<item>
		<title>ಗಾಜಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ: ಐವರು ಅಲ್ ಜಜೀರಾ ಸಂಸ್ಥೆಯ ಪತ್ರಕರ್ತರ ಸಾವು</title>
		<link>https://peepalmedia.com/israeli-airstrike-in-gaza-five-al-jazeera-journalists-killed/</link>
		
		<dc:creator><![CDATA[Peepal Media]]></dc:creator>
		<pubDate>Mon, 11 Aug 2025 03:46:18 +0000</pubDate>
				<category><![CDATA[ವಿದೇಶ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=63979</guid>

					<description><![CDATA[ಗಾಜಾ ಸಿಟಿ: ಗಾಜಾ ಪಟ್ಟಿಯಲ್ಲಿರುವ ಅಲ್-ಶಿಫಾ ವೈದ್ಯಕೀಯ ಸಂಕೀರ್ಣದ ಸಮೀಪದ ಮಾಧ್ಯಮಗಳ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್ ಜಜೀರಾ ಸುದ್ದಿವಾಹಿನಿಯ ಐವರು ಪತ್ರಕರ್ತರು ಮೃತಪಟ್ಟಿದ್ದಾರೆ. ಇವರಲ್ಲಿ ಪ್ರಮುಖ ವರದಿಗಾರ ಅನಾಸ್ ಅಲ್-ಶರೀಫ್ ಸೇರಿದ್ದಾರೆ. ಆಗಸ್ಟ್ 10 ರಂದು ನಡೆದ ಈ ದಾಳಿಯಲ್ಲಿ ಅನಾಸ್ ಅಲ್-ಶರೀಫ್ ಅವರೊಂದಿಗೆ ವರದಿಗಾರ ಮೊಹಮ್ಮದ್ ಖ್ರೈಖ್ ಮತ್ತು ಕ್ಯಾಮರಾಮನ್ಗಳಾದ ಇಬ್ರಾಹಿಂ ಜಾಹೇರ್, ಮೊಹಮ್ಮದ್ ನೌಫಲ್ ಮತ್ತು ಮೋಮೆನ್ ಅಲಿವಾ ಮೃತಪಟ್ಟಿದ್ದಾರೆ ಎಂದು ಅಲ್ ಜಜೀರಾ ಸುದ್ದಿವಾಹಿನಿ ದೃಢಪಡಿಸಿದೆ. ಈ [&#8230;]]]></description>
										<content:encoded><![CDATA[
<p></p>



<p>ಗಾಜಾ ಸಿಟಿ: ಗಾಜಾ ಪಟ್ಟಿಯಲ್ಲಿರುವ ಅಲ್-ಶಿಫಾ ವೈದ್ಯಕೀಯ ಸಂಕೀರ್ಣದ ಸಮೀಪದ ಮಾಧ್ಯಮಗಳ ಟೆಂಟ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್ ಜಜೀರಾ ಸುದ್ದಿವಾಹಿನಿಯ ಐವರು ಪತ್ರಕರ್ತರು ಮೃತಪಟ್ಟಿದ್ದಾರೆ. ಇವರಲ್ಲಿ ಪ್ರಮುಖ ವರದಿಗಾರ ಅನಾಸ್ ಅಲ್-ಶರೀಫ್ ಸೇರಿದ್ದಾರೆ.</p>



<p></p>



<p>ಆಗಸ್ಟ್ 10 ರಂದು ನಡೆದ ಈ ದಾಳಿಯಲ್ಲಿ ಅನಾಸ್ ಅಲ್-ಶರೀಫ್ ಅವರೊಂದಿಗೆ ವರದಿಗಾರ ಮೊಹಮ್ಮದ್ ಖ್ರೈಖ್ ಮತ್ತು ಕ್ಯಾಮರಾಮನ್ಗಳಾದ ಇಬ್ರಾಹಿಂ ಜಾಹೇರ್, ಮೊಹಮ್ಮದ್ ನೌಫಲ್ ಮತ್ತು ಮೋಮೆನ್ ಅಲಿವಾ ಮೃತಪಟ್ಟಿದ್ದಾರೆ ಎಂದು ಅಲ್ ಜಜೀರಾ ಸುದ್ದಿವಾಹಿನಿ ದೃಢಪಡಿಸಿದೆ. ಈ ದಾಳಿಯು ಪತ್ರಿಕಾ ಸ್ವಾತಂತ್ರ್ಯದ ಮೇಲಿನ &#8220;ಸ್ಪಷ್ಟ ಮತ್ತು ಪೂರ್ವಯೋಜಿತ ದಾಳಿ&#8221; ಎಂದು ಅಲ್ ಜಜೀರಾ ಖಂಡಿಸಿದೆ.</p>



<p></p>



<p>ಈ ದಾಳಿಯ ನಂತರ, ಇಸ್ರೇಲ್ ರಕ್ಷಣಾ ಪಡೆ (IDF) ಅನಾಸ್ ಅಲ್-ಶರೀಫ್ ಅವರನ್ನು ಹಮಾಸ್ ಉಗ್ರಗಾಮಿ ಎಂದು ಕರೆದಿದೆ ಮತ್ತು ಅವರು ಪತ್ರಕರ್ತನ ವೇಷದಲ್ಲಿ ಹಮಾಸ್ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಆರೋಪಿಸಿದೆ. ಅವರು ಹಮಾಸ್ ತಂಡವೊಂದನ್ನು ಮುನ್ನಡೆಸುತ್ತಿದ್ದರು ಮತ್ತು ಇಸ್ರೇಲ್ ಮೇಲೆ ರಾಕೆಟ್ ದಾಳಿಗಳನ್ನು ಸಂಘಟಿಸುವಲ್ಲಿ ತೊಡಗಿದ್ದರು ಎಂದು ಐಡಿಎಫ್ ಹೇಳಿದೆ. ಈ ಆರೋಪಗಳನ್ನು ಅಲ್ ಜಜೀರಾ ಮತ್ತು ಪತ್ರಕರ್ತರ ಹಕ್ಕುಗಳ ಸಂಸ್ಥೆಗಳು ತಳ್ಳಿಹಾಕಿವೆ. ಇಸ್ರೇಲ್‌ನ ಈ ಹೇಳಿಕೆಗಳು ತಮ್ಮ ಪತ್ರಕರ್ತರ ಮೇಲೆ ದಾಳಿಯನ್ನು ಸಮರ್ಥಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಮಾಡುತ್ತಿರುವುದು ಎಂದು ಅಲ್ ಜಜೀರಾ ಹೇಳಿದೆ.</p>



<p> </p>



<p>ಪತ್ರಕರ್ತರ ರಕ್ಷಣೆಗಾಗಿರುವ ಸಮಿತಿ (CPJ) ಈ ಘಟನೆಯನ್ನು ಖಂಡಿಸಿದೆ. ಯಾವುದೇ ಸಾಕ್ಷ್ಯ ನೀಡದೆ ಪತ್ರಕರ್ತರನ್ನು ಉಗ್ರಗಾಮಿಗಳು ಎಂದು ಬಣ್ಣಿಸುವುದು ಪತ್ರಿಕಾ ಸ್ವಾತಂತ್ರ್ಯಕ್ಕೆ ವಿರುದ್ಧವಾದ ಕ್ರಮ ಎಂದು ಸಿಪಿಜೆ ಹೇಳಿದೆ. ಯುದ್ಧ ಪ್ರಾರಂಭವಾದಾಗಿನಿಂದ ಇದುವರೆಗೆ 200ಕ್ಕೂ ಹೆಚ್ಚು ಪತ್ರಕರ್ತರು ಗಾಜಾದಲ್ಲಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳ ಹಕ್ಕುಗಳ ಪರ ಕೆಲಸ ಮಾಡುವ ಸಂಸ್ಥೆಗಳು ವರದಿ ಮಾಡಿವೆ. ಈ ದಾಳಿಯ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಹಾಗೂ ಸಂಘರ್ಷ ವಲಯಗಳಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ರಕ್ಷಣೆ ನೀಡುವಂತೆ ಈ ಸಂಸ್ಥೆಗಳು ಕರೆ ನೀಡಿವೆ.</p>
]]></content:encoded>
					
		
		
			</item>
		<item>
		<title>ಒಬ್ಬ ಮಹಿಳೆಯಿಂದ ಎರಡು ಬಾರಿ ಮತದಾನ ಆರೋಪ: ರಾಹುಲ್‌ ಗಾಂಧಿಗೆ ಇಸಿ ನೋಟಿಸ್‌</title>
		<link>https://peepalmedia.com/ec-sends-notice-to-rahul-gandhi/</link>
		
		<dc:creator><![CDATA[Peepal Media]]></dc:creator>
		<pubDate>Mon, 11 Aug 2025 03:36:11 +0000</pubDate>
				<category><![CDATA[ದೇಶ]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=63974</guid>

					<description><![CDATA[ಒಬ್ಬ ಮಹಿಳಾ ಮತದಾರರು ಎರಡು ಬಾರಿ ಮತ ಹಾಕಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಆರೋಪಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಆರೋಪಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಸಂಬಂಧಿತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಮತ್ತೊಂದೆಡೆ, ಚುನಾವಣಾ ಆಯೋಗ (ಇಸಿ) ಕೂಡ ಮತಗಳ ಕಳ್ಳತನದ ಆರೋಪಗಳ ಬಗ್ಗೆ ಸ್ಪಷ್ಟೀಕರಣವನ್ನು ನೀಡುವಂತೆ, ಇಲ್ಲವೇ ಸುಳ್ಳು ಆರೋಪಗಳಿಗಾಗಿ ದೇಶದ ಕ್ಷಮೆಯಾಚಿಸುವಂತೆ ಮತ್ತೊಮ್ಮೆ ಕೇಳಿದೆ. [&#8230;]]]></description>
										<content:encoded><![CDATA[
<p></p>



<p>ಒಬ್ಬ ಮಹಿಳಾ ಮತದಾರರು ಎರಡು ಬಾರಿ ಮತ ಹಾಕಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಆರೋಪಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ್ದಾರೆ.</p>



<p>ಈ ಆರೋಪಗಳ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಸಂಬಂಧಿತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಮತ್ತೊಂದೆಡೆ, ಚುನಾವಣಾ ಆಯೋಗ (ಇಸಿ) ಕೂಡ ಮತಗಳ ಕಳ್ಳತನದ ಆರೋಪಗಳ ಬಗ್ಗೆ ಸ್ಪಷ್ಟೀಕರಣವನ್ನು ನೀಡುವಂತೆ, ಇಲ್ಲವೇ ಸುಳ್ಳು ಆರೋಪಗಳಿಗಾಗಿ ದೇಶದ ಕ್ಷಮೆಯಾಚಿಸುವಂತೆ ಮತ್ತೊಮ್ಮೆ ಕೇಳಿದೆ.</p>



<p><strong>ಕರ್ನಾಟಕ ಸಿಇಒ ನೋಟಿಸ್‌ನಲ್ಲಿ ಏನಿದೆ?</strong></p>



<p>&#8220;ಇತ್ತೀಚಿನ ಪ್ರಸ್ತುತಿಯಲ್ಲಿ ತೋರಿಸಿದ ದಾಖಲೆಗಳನ್ನು ಚುನಾವಣಾ ಆಯೋಗದ ದಾಖಲೆಗಳಿಂದ ಸಂಗ್ರಹಿಸಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಅದೇ ರೀತಿ, ಮತದಾನ ಅಧಿಕಾರಿ ನೀಡಿದ ದಾಖಲೆಗಳ ಪ್ರಕಾರ ಶಕುನ್ ರಾಣಿ ಎಂಬ ಮಹಿಳೆ ಎರಡು ಬಾರಿ ಮತ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ನಮ್ಮ ತನಿಖೆಯಲ್ಲಿ ಅವರು ಒಂದು ಬಾರಿ ಮಾತ್ರ ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ. <br><br>ಅವರು ಎರಡು ಬಾರಿ ಮತ ಹಾಕಿದ್ದಾರೆ ಎಂದು ಪ್ರಸ್ತುತಿಯಲ್ಲಿ ತೋರಿಸಿದ ಟಿಕ್ ಮಾರ್ಕ್ ದಾಖಲೆಗಳು ಮತದಾನ ಅಧಿಕಾರಿ ನೀಡಿದವುಗಳಲ್ಲ ಎಂದು ತಿಳಿದುಬಂದಿದೆ. ಆದ್ದರಿಂದ, ನಿಮ್ಮ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಿ, ಇದರಿಂದ ಈ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸಬಹುದು&#8221; ಎಂದು ಕರ್ನಾಟಕ ಸಿಇಒ ರಾಹುಲ್ ಗಾಂಧಿಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಿದ್ದಾರೆ.</p>



<p><strong>ರಾಹುಲ್ ಗಾಂಧಿ ಟ್ವೀಟ್</strong></p>



<p>ಮತಗಳ ಕಳ್ಳತನದ ವಿಷಯದ ಬಗ್ಗೆ ರಾಹುಲ್ ಗಾಂಧಿ ಭಾನುವಾರ ಮತ್ತೊಮ್ಮೆ ವಾಗ್ದಾಳಿ ನಡೆಸಿದರು. &#8216;ಒಬ್ಬ ವ್ಯಕ್ತಿ- ಒಂದು ಮತ&#8217; ಎಂಬ ಪ್ರಜಾಪ್ರಭುತ್ವದ ತತ್ವದ ಮೇಲೆ ಇದು ದಾಳಿ ಎಂದು ಅವರು ಹೇಳಿದ್ದಾರೆ. ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಗಳಿಗೆ ಸರಿಯಾದ ಮತದಾರರ ಪಟ್ಟಿ ಅತ್ಯಗತ್ಯ ಎಂದು ಟ್ವೀಟ್ ಮಾಡಿದರು. ಜನರು ಮತ್ತು ಪಕ್ಷಗಳು ಆ ಪಟ್ಟಿಗಳನ್ನು ಪರಿಶೀಲಿಸಲು ಅನುಕೂಲವಾಗುವಂತೆ ಡಿಜಿಟಲ್ ಮತದಾರರ ಪಟ್ಟಿಗಳನ್ನು ಬಿಡುಗಡೆ ಮಾಡುವಂತೆ ಅವರು ಚುನಾವಣಾ ಆಯೋಗವನ್ನು ಒತ್ತಾಯಿಸಿದರು. ಪ್ರಜಾಪ್ರಭುತ್ವವನ್ನು ರಕ್ಷಿಸಲು ಈ ಹೋರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.</p>



<p><strong>ಚುನಾವಣಾ ಆಯೋಗದ ಪ್ರತಿಕ್ರಿಯೆ</strong></p>



<p>ಆದರೆ, ರಾಹುಲ್ ಗಾಂಧಿಯವರ ಹೇಳಿಕೆಗಳನ್ನು ಚುನಾವಣಾ ಆಯೋಗ ತಳ್ಳಿಹಾಕಿದೆ. ಪ್ರತಿ ಚುನಾವಣೆಗೆ ಮೊದಲು ಮತದಾರರಿಗೆ ಸಂಬಂಧಿಸಿದ ಕರಡು ಮತ್ತು ಅಂತಿಮ ಪಟ್ಟಿಗಳ ಡಿಜಿಟಲ್ ಮತ್ತು ಭೌತಿಕ ಪ್ರತಿಗಳನ್ನು ರಾಜಕೀಯ ಪಕ್ಷಗಳಿಗೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದೆ. ಪಕ್ಷಗಳಿಗೆ ಮತದಾರರ ಪಟ್ಟಿಯ ಡಿಜಿಟಲ್ ಪ್ರತಿಗಳನ್ನು ನೀಡುವುದಿಲ್ಲ ಎಂಬ ವಾದವು ಸುಳ್ಳು ಮತ್ತು ದಾರಿ ತಪ್ಪಿಸುವಂತಹದ್ದು ಎಂದು ಇಸಿ ಹೇಳಿದೆ.</p>
]]></content:encoded>
					
		
		
			</item>
		<item>
		<title>ಮತದಾರರ ಪಟ್ಟಿಯಿಂದ ನೋಟಿಸ್ ನೀಡದೆ ಹೆಸರು ತೆಗೆದುಹಾಕುವುದಿಲ್ಲ: ಚುನಾವಣಾ ಆಯೋಗದಿಂದ ಸುಪ್ರೀಂ ಕೋರ್ಟ್‌ಗೆ ಮಾಹಿತಿ</title>
		<link>https://peepalmedia.com/names-will-not-be-removed-from-the-voter-list-without-notice-ec/</link>
		
		<dc:creator><![CDATA[Peepal Media]]></dc:creator>
		<pubDate>Mon, 11 Aug 2025 03:28:27 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=63972</guid>

					<description><![CDATA[ದೆಹಲಿ: ಬಿಹಾರಿನ ಕರಡು ಮತದಾರರ ಪಟ್ಟಿಯಿಂದ ಯಾವುದೇ ಮತದಾರರ ಹೆಸರನ್ನು ಪೂರ್ವಭಾವಿ ನೋಟಿಸ್ ನೀಡದೆ ತೆಗೆದುಹಾಕುವುದಿಲ್ಲ ಎಂದು ಚುನಾವಣಾ ಆಯೋಗ (ಇಸಿ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ಆಯೋಗ ಕೈಗೊಂಡಿದ್ದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮಕ್ಕೆ (Special Intensive Revision Programme &#8211; SIR) ವಿರುದ್ಧವಾಗಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಜಸ್ಟಿಸ್ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠವು ನಡೆಸುತ್ತಿದೆ. ಶನಿವಾರ ಸಲ್ಲಿಸಲಾದ ಹೆಚ್ಚುವರಿ ಅಫಿಡವಿಟ್‌ನಲ್ಲಿ, ಒಟ್ಟು 7.64 ಕೋಟಿ ಮತದಾರರು ನೋಂದಣಿಯಾಗಿದ್ದಾರೆ. [&#8230;]]]></description>
										<content:encoded><![CDATA[
<p><strong>ದೆಹಲಿ:</strong> ಬಿಹಾರಿನ ಕರಡು ಮತದಾರರ ಪಟ್ಟಿಯಿಂದ ಯಾವುದೇ ಮತದಾರರ ಹೆಸರನ್ನು ಪೂರ್ವಭಾವಿ ನೋಟಿಸ್ ನೀಡದೆ ತೆಗೆದುಹಾಕುವುದಿಲ್ಲ ಎಂದು ಚುನಾವಣಾ ಆಯೋಗ (ಇಸಿ) ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.</p>



<p>ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣಾ ಆಯೋಗ ಕೈಗೊಂಡಿದ್ದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮಕ್ಕೆ (Special Intensive Revision Programme &#8211; SIR) ವಿರುದ್ಧವಾಗಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಜಸ್ಟಿಸ್ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠವು ನಡೆಸುತ್ತಿದೆ. ಶನಿವಾರ ಸಲ್ಲಿಸಲಾದ ಹೆಚ್ಚುವರಿ ಅಫಿಡವಿಟ್‌ನಲ್ಲಿ, ಒಟ್ಟು 7.64 ಕೋಟಿ ಮತದಾರರು ನೋಂದಣಿಯಾಗಿದ್ದಾರೆ. ಇವರಲ್ಲಿ 65 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಆಯೋಗ ತಿಳಿಸಿದೆ. ಇವರಲ್ಲಿ ಹೆಚ್ಚಿನವರು ಸಾವನ್ನಪ್ಪಿದವರು ಅಥವಾ ವಲಸೆ ಹೋದವರು ಇರಬಹುದು ಎಂದು ಆಯೋಗ ಹೇಳಿದೆ.</p>



<p>ಅಲ್ಲದೆ, ಎಸ್‌ಐಆರ್‌ನ ಮೊದಲ ಹಂತ ಪೂರ್ಣಗೊಂಡಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ತಿಂಗಳ 1ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ವಿವರಿಸಿದೆ. ಮತದಾರರ ಪಟ್ಟಿಯಿಂದ ಅರ್ಹ ಮತದಾರರು ಯಾರೂ ಹೊರಗುಳಿಯದಂತೆ ನೋಡಿಕೊಳ್ಳಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಾಗಿ ಆಯೋಗ ಹೇಳಿದೆ. ಕರಡು ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದುಹಾಕುವುದು ಎಂದರೆ ಮತದಾರರ ಪಟ್ಟಿಯಿಂದ ವ್ಯಕ್ತಿಯನ್ನು ಶಾಶ್ವತವಾಗಿ ತೆಗೆದುಹಾಕಿದಂತೆ ಅಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಅವರನ್ನು ಸಂಪರ್ಕಿಸಲು ಸಹಾಯ ಕೇಳುವಂತೆ ಮುಖ್ಯ ಚುನಾವಣಾ ಅಧಿಕಾರಿ (CEO) ಮತ್ತು ಇತರರಿಗೆ ಆದೇಶಿಸಲಾಗಿದೆ ಎಂದು ಆಯೋಗ ತಿಳಿಸಿದೆ.</p>
]]></content:encoded>
					
		
		
			</item>
	</channel>
</rss>
