<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>karavali &#8211; Peepal Media</title>
	<atom:link href="https://peepalmedia.com/tag/karavali/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 01 Nov 2022 14:23:02 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>karavali &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ದೈವಗಳ ವೈದಿಕೀಕರಣದ ಮಜಲುಗಳು</title>
		<link>https://peepalmedia.com/angles-of-brahminisization-in-daiva-tredition/</link>
		
		<dc:creator><![CDATA[Peepal Media]]></dc:creator>
		<pubDate>Tue, 01 Nov 2022 13:35:39 +0000</pubDate>
				<category><![CDATA[Featured]]></category>
		<category><![CDATA[coastal karnataka]]></category>
		<category><![CDATA[daiva nartaka]]></category>
		<category><![CDATA[daivaaradhane]]></category>
		<category><![CDATA[dakshina kannada]]></category>
		<category><![CDATA[kannada]]></category>
		<category><![CDATA[Kantara]]></category>
		<category><![CDATA[karavali]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=13640</guid>

					<description><![CDATA[ಜುಮಾದಿ, ಲೆಕ್ಕೆಸಿರಿಯಂತಹ ಅನೇಕ ದೈವಗಳು ಸಂಸ್ಕೃತೀಕರಣಗೊಂಡು ಧೂಮಾವತಿ, ರಕ್ತೇಶ್ವರಿಗಳಾಗಿ ಬದಲಾಗಿವೆ. ತುಳುವರ ಪಂಜುರ್ಲಿಯೂ ಕೂಡ ಸಂಸ್ಕೃತದ ವರಾಹ ಮೂರ್ತಿಯಾಗಿದ್ದಾನೆ. ಲಾಭಕ್ಕೆ ತಕ್ಕಂತೆ ಅನ್ಯರ ಆಚರಣೆಗಳನ್ನು ತಮ್ಮದಾಗಿಸಿಕೊಳ್ಳುವುದು ವೈದಿಕರಿಗೆ ಹೊಸತೇನಲ್ಲ ಎನ್ನುವ ಲೇಖಕ ಶಂಕರ್‌ ಸೂರ್ನಳ್ಳಿ ಅವರ ಈ ಲೇಖನವು &#160;ವೈದಿಕ ಪ್ರಭಾವವು ದೈವಾರಾಧನೆಯ ಮೂಲ ನೆಲೆಗಟ್ಟನ್ನು ಅಲುಗಾಡಿಸಿದೆ ಎಂಬ ಸತ್ಯವನ್ನು ತೆರೆದಿಡುತ್ತದೆ. ರಿಷಭ್ ಶೆಟ್ಟಿಯವರ ಸೂಪರ್ ಹಿಟ್ ’ಕಾಂತಾರ’ ಸಿನಿಮಾ ಭರ್ಜರಿ ಯಶಸ್ಸಿನ ಜೊತೆಗೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಅವುಗಳಲ್ಲೊಂದು ಕರಾವಳಿಯ ದೈವಗಳ ವೈದಿಕೀಕರಣದ ಕುರಿತಾದದ್ದು. [&#8230;]]]></description>
										<content:encoded><![CDATA[
<h5 class="wp-block-heading"><strong>ಜುಮಾದಿ, ಲೆಕ್ಕೆಸಿರಿಯಂತಹ ಅನೇಕ ದೈವಗಳು ಸಂಸ್ಕೃತೀಕರಣಗೊಂಡು ಧೂಮಾವತಿ, ರಕ್ತೇಶ್ವರಿಗಳಾಗಿ ಬದಲಾಗಿವೆ. ತುಳುವರ ಪಂಜುರ್ಲಿಯೂ ಕೂಡ ಸಂಸ್ಕೃತದ ವರಾಹ ಮೂರ್ತಿಯಾಗಿದ್ದಾನೆ. ಲಾಭಕ್ಕೆ ತಕ್ಕಂತೆ ಅನ್ಯರ ಆಚರಣೆಗಳನ್ನು ತಮ್ಮದಾಗಿಸಿಕೊಳ್ಳುವುದು ವೈದಿಕರಿಗೆ ಹೊಸತೇನಲ್ಲ ಎನ್ನುವ ಲೇಖಕ ಶಂಕರ್‌ ಸೂರ್ನಳ್ಳಿ ಅವರ ಈ ಲೇಖನವು &nbsp;ವೈದಿಕ ಪ್ರಭಾವವು ದೈವಾರಾಧನೆಯ ಮೂಲ ನೆಲೆಗಟ್ಟನ್ನು ಅಲುಗಾಡಿಸಿದೆ ಎಂಬ ಸತ್ಯವನ್ನು ತೆರೆದಿಡುತ್ತದೆ.</strong></h5>



<p>ರಿಷಭ್ ಶೆಟ್ಟಿಯವರ ಸೂಪರ್ ಹಿಟ್ ’ಕಾಂತಾರ’ ಸಿನಿಮಾ ಭರ್ಜರಿ ಯಶಸ್ಸಿನ ಜೊತೆಗೆ ಅನೇಕ ಚರ್ಚೆಗಳನ್ನು ಹುಟ್ಟು ಹಾಕಿದೆ. ಅವುಗಳಲ್ಲೊಂದು ಕರಾವಳಿಯ ದೈವಗಳ ವೈದಿಕೀಕರಣದ ಕುರಿತಾದದ್ದು. ಕಾಂತಾರ ಸಿನಿಮಾ ಟೈಟಲ್ ನಲ್ಲಿ ಕಾಣಿಸುವ ಓಂ ಚಿಹ್ನೆ, ಸಿನಿಮಾದಲ್ಲಿ ಬರುವಂತಹ ವರಾಹ ಮೂರ್ತಿಯ ಸಂಸ್ಕೃತ ಹಾಡುಗಳಲ್ಲದೇ ಕನ್ನಡದ ನಟ ಚೇತನ್ ರವರು ಇದೇ ಹಿನ್ನೆಲೆಯಲ್ಲಿ ಕರಾವಳಿಯ ದೈವಗಳ ಕುರಿತಂತೆ ಹಿಂದೂ ಧರ್ಮವನ್ನುಲ್ಲೇಖಿಸಿ ಆಡಿದಂತಹ ಮಾತುಗಳು ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ.</p>



<p>ಹೌದು, ಕರಾವಳಿಯ ದೈವಗಳ ಕುರಿತಾಗಿ ಇದೇನು ಹೊಸದಾಗಿ ಹುಟ್ಟಿದಂತಹ ವಿಚಾರವೇನಲ್ಲ. ಹಿಂದಿನಿಂದಲೂ ದೈವಾರಾಧನೆಯ ಕುರಿತಂತೆ ಸಂಶೋಧನೆ ಕೈಗೊಂಡ ವಿದ್ವಾಂಸರುಗಳು ಈ ಕುರಿತಂತೆ ಸಾಕಷ್ಟು ಬರೆದಿದ್ದಾರೆ. ವೈದಿಕ ಸಂಪ್ರದಾಯಗಳಿಗೆ ಹೊರತಾದ ಕರಾವಳಿಯ ದೈವಾರಾಧನೆಯ ಪದ್ಧತಿಯ ವಿಭಿನ್ನತೆಯನ್ನು ಈಗಾಗಲೇ ದಾಖಲಿಸಲಾಗಿದೆ. ಹೀಗಿದ್ದೂ ಕೂಡ ತಳ ಸಮುದಾಯದವರ ಈ ದೈವಾರಾಧನೆ ಯಾವುದೋ ಒಂದು ಬಗೆಯಲ್ಲಿ ಮುಖ್ಯವಾಗಿ ಇತ್ತೀಚೆಗಿನ ದಿನಗಳಲ್ಲಿ ವೈದಿಕ ಸಂಪ್ರದಾಯದೊಂದಿಗೆ ಕಳೆದು ಹೋಗುತ್ತಿರುವುದಕ್ಕೆ ಕಾರಣವಾದರೂ ಏನಿರಬಹುದು?</p>



<h6 class="wp-block-heading"><strong>ದೈವ ಭೂತಗಳೆಲ್ಲ ಎಂದೋ ಪರಶಿವನ ಗಣ ಸೇರಿದುವು!</strong></h6>



<h6 class="wp-block-heading"><br>ಕಾಂತಾರ ಸಿನಿಮಾದಲ್ಲಿ ಪ್ರಮುಖವಾಗಿ ತೋರಿಸಲಾದ ದೈವಗಳೆಂದರೆ ತುಳುನಾಡಿನಲ್ಲಿ ಅದರದ್ದೇ ಆದ ಮಹತ್ವವನ್ನು ಹೊಂದಿರುವ ಗುಳಿಗ ಹಾಗು ಪಂಜುರ್ಲಿ ದೈವಗಳು. ತುಳುನಾಡಿನ ಪಂಜುರ್ಲಿ ದೈವದ ಕಥೆಯಲ್ಲಿ ಶಿವ ಪಾರ್ವತಿಯರು ಪ್ರಮುಖವಾಗಿ ಕಾಣಿಸಿಕೊಂಡರೆ ಗುಳಿಗನ ಕಥೆಯಲ್ಲೂ ಹಿಂದೂ ಪುರಾಣದ ತ್ರಿಮೂರ್ತಿಗಳು ಬರುತ್ತಾರೆ. ಇದೀಗ ಬಲು ಖ್ಯಾತನಾಗಿರುವ ಕೊರಗಜ್ಜನನ್ನು ಸ್ತುತಿಸುವ ಹಾಡುಗಳಲ್ಲೂ ಕೂಡ ಕೊರಗಜ್ಜನನ್ನು ಶಿವನ ಅಂಶ ಎಂದೇ ಸ್ತುತಿಸಲಾಗುತ್ತಿದೆ. ಕರಾವಳಿಯಲ್ಲಿ ಕಂಡುಬರುವ ದೈವ ಭೂತಗಳನ್ನೆಲ್ಲ ಸಾರಾಸಗಟಾಗಿ ಪರಶಿವನ ಗಣಗಳಿಗೆ ಸೇರಿಸಿ ಯಾವುದೋ ಕಾಲವಾಗಿದೆ. ಹಾಗೆಂದು ಹದಿನೆಂಟು ಪುರಾಣಗಳಲ್ಲಾಗಲೀ, ಮತ್ಯಾವುದೋ ಹಿಂದೂ ಗ್ರಂಥಗಳಲ್ಲಾಗಲೀ ಈ ಪಂಜುರ್ಲಿ, ಗುಳಿಗ, ಕೊರಗಜ್ಜನಂತವರ ಪಾತ್ರಗಳ ಯಾವ ಉಲ್ಲೇಖವೂ ಎಲ್ಲೂ ಕಾಣಸಿಗದು. ಅಂದರೆ ಇವುಗಳೆಲ್ಲ ಕಾಲಮಾನದ ಸ್ಥಳೀಯ ಮಾರ್ಪಾಟುಗಳೇ ವಿನಹ ವಿಶೇಷವಾದುದೇನೂ ಇಲ್ಲ.</h6>


<div class="wp-block-image">
<figure class="aligncenter size-full"><img fetchpriority="high" decoding="async" width="739" height="415" src="https://peepalmedia.com/wp-content/uploads/2022/11/daiva-3.webp" alt="" class="wp-image-13659" srcset="https://peepalmedia.com/wp-content/uploads/2022/11/daiva-3.webp 739w, https://peepalmedia.com/wp-content/uploads/2022/11/daiva-3-300x168.webp 300w, https://peepalmedia.com/wp-content/uploads/2022/11/daiva-3-150x84.webp 150w, https://peepalmedia.com/wp-content/uploads/2022/11/daiva-3-696x391.webp 696w" sizes="(max-width: 739px) 100vw, 739px" /></figure></div>


<h6 class="wp-block-heading">ಕರಾವಳಿ ಕರ್ನಾಟಕದ ಪರಿಸರ ಪ್ರಾಚೀನ ಕಾಲದಿಂದಲೂ ವಿದೇಶದೊಂದಿಗೆ ಸಂಪರ್ಕವಿಟ್ಟುಕೊಂಡಂತಹ ಭಾಗವಾಗಿತ್ತೆನ್ನುವುದಕ್ಕೆ ಅನೇಕ ಐತಿಹಾಸಿಕ ಪುರಾವೆಗಳಿವೆ. ಹಾಗಾಗಿ ಈ ಪರಿಸರಕ್ಕೆ ಹಿಂದಿನಿಂದಲೂ ಅದರದ್ದೇ ಆದ ಸಂಸ್ಕೃತಿ ಪರಂಪರೆಗಳೂ ಇದ್ದಿದ್ದವೇ ಹೊರತು ಹೊರಗಿನಿಂದ ಬಂದಂತವರಿಂದಾಗಿ ಇಲ್ಲಿನ ನಾಗರೀಕತೆ ಹೊಸತಾಗಿ ರೂಪುಗೊಂಡದ್ದೇನಲ್ಲ. ಕೆಲ ರಾಜಕೀಯ ಹಾಗು ಸಾಮಾಜಿಕ ಪಲ್ಲಟಗಳಿಂದಾಗಿ ವೈದಿಕರ ಆಗಮನದ ಬಳಿಕ ಇಲ್ಲಿನ ಸಂಸ್ಕೃತಿಯಲ್ಲಿ ಅವರ ಪ್ರಭಾವ ಹೆಚ್ಚ ತೊಡಗಿತಾದರೂ ಇಲ್ಲಿನ ಕೆಲ ಮೂಲನಂಬಿಕೆಗಳನ್ನು ಮರೆಯಾಗಿಸಲು ಪ್ರಭುತ್ವದ ಬಲವಿದ್ದ ಅವರಿಂದಲೂ ಕೂಡ ಸಾಧ್ಯವಾಗದೇ ಹೋಯಿತು. ಅಂತಾದ್ದರಲ್ಲಿ ಇಲ್ಲಿನ ಮೂಲನಿವಾಸಿಗಳು ತಮ್ಮ ಗತಿಸಿದ ಪ್ರಮುಖ ಹಿರಿಯರನ್ನು ನೆನಪಿಸಿ ಆಹ್ವಾಹಿಸಿಕೊಂಡು ಆರಾಧಿಸುವ ದೈವಾರಾಧನೆಯ ಆಚರಣೆಯೂ ಒಂದು.</h6>



<h6 class="wp-block-heading"><strong>ದೈವಗಳ ಚರಿತ್ರೆಗಳಲ್ಲಿ ಹೋರಾಟದ ಉಲ್ಲೇಖಗಳು</strong></h6>



<p>ಕರಾವಳಿಯ ದೈವಾರಾಧನೆಗೆ ಸಂಬಂಧಿಸಿದಂತೆ ಇಲ್ಲಿ ಸರಿ ಸುಮಾರು ಸಾವಿರದಷ್ಟು ದೈವಗಳನ್ನು ಗುರುತಿಸಲಾಗಿದೆ. ಪಂಜುರ್ಲಿ, ಕಲ್ಲುರ್ಟಿ, ಸಿರಿ, ಕೊರಗಜ್ಜ, ಬಬ್ಬುಸ್ವಾಮಿ, ಕೋಟಿ ಚೆನ್ನಯರಂತಹ ತುಳುನಾಡಿನ ಅನೇಕ ಪ್ರಮುಖ ದೈವಗಳ ಚರಿತ್ರೆಗಳಲ್ಲಿ ಹೋರಾಟದ, ದಬ್ಬಾಳಿಕೆಯನ್ನು ಎದುರಿಸಿ ನಿಂತಂತಹ ಅಥವ ನಿಂತು ಮರಣಿಸಿ (ಮಾಯವಾ)ದಂತಹ ನೇರ ಅಥವಾ ಸೂಚ್ಯ ಉಲ್ಲೇಖಗಳನ್ನು ಗುರುತಿಸಬಹುದು. ಪಂಜುರ್ಲಿಯ ಕಥೆ ಪ್ರಾಣಿ ಸಂಬಂಧಿ ಚರಿತ್ರೆಯಂತೆ ತೋರಿದರೂ ಇಲ್ಲಿ ಬರುವ ಪ್ರವೇಶ ನಿರಾಕರಣೆ, ಕುಟುಂಬ, ಮಕ್ಕಳು ಮೊದಲಾದ ಸಾಮಾಜಿಕ ಅಂಶಗಳನ್ನು ನೋಡಿದರೆ ಹಂದಿ ಕೇವಲ ರೂಪಕದಂತಷ್ಟೆ ತೋರುತ್ತದೆ. ತುಳುವಿನ ಪಂಜಿ (ಹಂದಿ) ಮೂಲದ ಪಂಜುರ್ಲಿಯ ಮತ್ತೊಂದು ಹೆಸರು ಅಣ್ಣಪ್ಪನೆಂದು ಪಂಜುರ್ಲಿ ಕುರಿತ ಪಾಡ್ದನ ಕತೆಗಳಲ್ಲೇ ಬರುತ್ತದೆ. ಮೇಲ್ವರ್ಗದವರು, ಜಮೀನುದಾರರು ತಮ್ಮ ಪಾಳೇಗಾರಿಕೆಯ ದರ್ಪವನ್ನು ತೋರಲು ತಳಸಮುದಾಯದ ಮಕ್ಕಳನ್ನು ಹಂದಿ, ನಾಯಿ, ಹೆಣ್ಣು ನಾಯಿಯಂತಹ ತುಚ್ಛ ಭಾವದ ಹೆಸರಿಟ್ಟು ಕರೆಯುವುದು ಹೊಸತೇನಲ್ಲ. (ನಾನೇ 92 -93ರ ಆಸುಪಾಸಿನಲ್ಲಿ ಓಟರ್ಸ್ ಕಾರ್ಡಿನ ಕೆಲಸ ಮಾಡುತ್ತಿರುವಾಗ ಅವಿಭಜಿತ ದ.ಕ ಜಿಲ್ಲೆಯ ಓಟರ್ಸ್ ಲಿಸ್ಟ್ ನಲ್ಲಿ ಇಂತಹ ಬೊಗ್ಗಿ, ಬೊಗ್ರ, ಪಂಜಿ, ಪಿಜಿನ, ಮರ್ಲೆ ದಂತಹ ಕೀಳುಭಾವದ ದಲಿತ ಹೆಸರುಗಳನ್ನ ಸಾಕಷ್ಟು ನೋಡಿದ್ದೇನೆ) ಪಂಜುರ್ಲಿ ಕಥೆಯಲ್ಲಿ ಬರುವ ಹೆಗ್ಗಡೆ, ವಾದಿರಾಜ ಸ್ವಾಮಿಯ ಉಲ್ಲೇಖಗಳು, ತುಳುನಾಡಿನ ವಿವಿಧ ಊರುಗಳಲ್ಲಿನ ಪಂಜುರ್ಲಿಯ ಕಾರ್ಯಸಾಧನೆಯ ಪಾಡ್ದನ ದಾಖಲೆಯನ್ನು ನೋಡಿದರೆ ಇದು ಪ್ರಾಣಿಗಿಂತ ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದ ಚರಿತ್ರೆಯಂತೆ ಕಂಡುಬರುತ್ತದೆ.</p>



<h6 class="wp-block-heading"><strong>ದೈವಾರಾಧನೆಯು ಕೇವಲ ತುಳುನಾಡಿಗಷ್ಟೇ ಸೀಮಿತವೇ?</strong></h6>



<p>ವಿಶೇಷವಾಗಿ ಈ ದೈವಾರಾಧನೆ ಎನ್ನುವುದು ಕೇವಲ ತುಳುನಾಡಿಗಷ್ಟೇ ಸೀಮಿತವಾದುದೇನಲ್ಲ. ಜಪಾನ್, ಚೀನಾ, ಅಮೆರಿಕಾ, ಫಿನ್ಲೆಂಡ್ ಸೇರಿದಂತೆ ವಿಶ್ವದಾದ್ಯಂತ ಅನೇಕ ಮೂಲನಿವಾಸಿಗಳ ಆಚರಣೆಗಳಲ್ಲಿ ಮರಣಿಸಿದ ಹಿರಿಯರ ಅಥವ ನಂಬಿದ ಅಗೋಚರ ಶಕ್ತಿಗಳ ಹೆಸರಲ್ಲಿ ಆಯಾಯ ಸಂಸ್ಕೃತಿಗಳಿಗೆ ತಕ್ಕಂತಹ ದೈವಾರಾಧನೆಯ ಸಂಪ್ರದಾಯವನ್ನು ಅಲ್ಲಲ್ಲಿ ಕಾಣಬಹುದು. ಅದೇ ರೀತಿ ಈಗಿನ ಉತ್ತರ ಕೇರಳದಿಂದ ಹಿಡಿದು ಕುಂದಾಪುರದವರೆಗಿನ ಇಲ್ಲಿನ ಮೂಲನಿವಾಸಿಗಳು ಆಚರಿಸಿಕೊಂಡು ಬರುತ್ತಿದ್ದ ಈ ದೈವಾರಾಧನೆ ಮತ್ತು ನಾಗಾರಾಧನೆಯ ಆಚರಣೆಗಳು ಗಟ್ಟಿನೆಲೆಯಲ್ಲಿ ನಿಂತಿದ್ದ ಕಾರಣ (ಅಥವ ರೂಢಿ ಮಾತಿನಲ್ಲಿ ಹೇಳುವುದಾದರೆ ದೈವಗಳ ಕಾರಣಿಕದ ಕಾರಣಕ್ಕಾಗಿ) ಯಾವುದೇ ಹೊರಗಿನ ಸಾಂಸ್ಕೃತಿಕ ದಾಳಿಗಳಿಗೂ ಅದನ್ನು ಅಳಿಸಿ ಹಾಕಲು ಸಾಧ್ಯವಾಗಲಿಲ್ಲ. ಈ ಪ್ರದೇಶದಲ್ಲಿ ಇಂದಿಗೂ ಕೂಡ ದೇವರಿಗೂ ಭಯಪಡದ ಮಂದಿ ದೈವಗಳಿಗೆ ಹೆದರುತ್ತಾರೆ. “ದೈವಕ್ಕೆ ಹೇಳಿಕೊಳ್ಳುತ್ತೇನೆ&#8230;” ಅಂದ್ರೆ ಆಯಿತು. ಅಲ್ಲಿ ನ್ಯಾಯಾಲಯದಲ್ಲಿ ವಕೀಲರು ನಡೆಸುವಂತ ಜಾಣತನದ ತಂತ್ರ ಹಾಗು ಮಾತುಗಾರಿಕೆ ಅಂತವಕ್ಕೆಲ್ಲ ಇಲ್ಲಿ ಬೆಲೆಯೇ ಇಲ್ಲ. ತಪ್ಪಿತಸ್ಥ ದೈವದೆದುರು ಹೋಗೋ ಮೊದಲೇ ಅರ್ಧ ಸೋತು ಶರಣಾಗಿರುತ್ತಾನೆ. ದೈವಗಳಿಗೆ ತೊಂದರೆ ಮಾಡಿದವ, ನುಡಿ ತಪ್ಪಿದರೂ ಪರಿಣಾಮವನ್ನೆದುರಿಸಿದಂತ ಅನೇಕ ಉದಾಹರಣೆಗಳು ಇವೆ. ಕೆಲ ವರ್ಷಗಳ ಹಿಂದೆ ಗೊತ್ತಿಲ್ಲದೇ ದೈವ ಸನ್ನಿಧಿಗೆ ಸೇರಿದ ಜಾಗದಲ್ಲಿ ಮರಕಡಿಯಲು ಹೋದ ಮುಸಲ್ಮಾನನ ಮೇಲೆಯೇ ದೈವ ಆವೇಶಗೊಂಡು ಎಚ್ಚರಿಸಿದ ಸಂಗತಿ ಪ್ರತಿಕೆಗಳಲ್ಲಿ ವರದಿಯಾಗಿತ್ತು.</p>


<div class="wp-block-image">
<figure class="aligncenter size-full"><img decoding="async" width="452" height="678" src="https://peepalmedia.com/wp-content/uploads/2022/11/daiva-2.webp" alt="" class="wp-image-13660" srcset="https://peepalmedia.com/wp-content/uploads/2022/11/daiva-2.webp 452w, https://peepalmedia.com/wp-content/uploads/2022/11/daiva-2-200x300.webp 200w, https://peepalmedia.com/wp-content/uploads/2022/11/daiva-2-150x225.webp 150w, https://peepalmedia.com/wp-content/uploads/2022/11/daiva-2-300x450.webp 300w" sizes="(max-width: 452px) 100vw, 452px" /></figure></div>


<h6 class="wp-block-heading"><strong>ದೈವಗಳು ಸ್ಥಳೀಯವಾಗಿ ಹೊಂದಿರುವ ಪ್ರಭಾವ&#8230;</strong></h6>



<p>ದಲಿತ ಸಮುದಾಯಕ್ಕೆ ಸೇರಿದ ಅನೇಕ ದೈವಸ್ಥಾನಗಳಲ್ಲಿ ನಡೆಯುವ ಕೋಲ ನೇಮಗಳಿಗೆ ಯಥೇಚ್ಛವಾಗಿ ಭಕ್ತಿಯಿಂದ ಧನಸಹಾಯ ಮಡುವವರು ಬಂಟ ಸಮುದಾಯದಂತಹ ಮೇಲ್ವರ್ಗದವರು. ಮುಂಬಯಿ ಮೊದಲಾದೆಡೆ ದುಡಿಯುವ ಇವರುಗಳು ಈ ದೈವಗಳನ್ನು ತಮ್ಮ ರಕ್ಷಕರೆಂದೇ ಭಾವಿಸಿ ನಂಬುತ್ತಾರೆ. ಕೋಲದ ಸಮಯದಲ್ಲಿ ಪರವ, ಪಂಬದ, ನಲಿಕೆಯವರಂತಹ ದಲಿತ ಸಮುದಾಯದ ಪಾತ್ರಿಗಳಿಂದ ನುಡಿ ಅಭಯ ಪಡೆದುಕೊಳ್ಳಲು ಈ ದಲಿತೇತರ ಮೇಲ್ಜಾತಿಗಳಿಗೆ ಯಾವ ಸಾಮಾಜಿಕ ಅಂತಸ್ತಿನ ಭಾವವೂ ಅಡ್ಡಿಬಾರದು. ಇದು ಆ ದೈವಗಳು ಸ್ಥಳೀಯವಾಗಿ ಹೊಂದಿರುವ ಪ್ರಭಾವವನ್ನು ತೋರುತ್ತದೆ. ಇಲ್ಲಿನ ದೈವಗಳ ಮಹತ್ವವನ್ನು ಮನಗಂಡೇ ತುಳುನಾಡನ್ನು ಆಳುತ್ತಿದ್ದ ಇಲ್ಲಿನ ಜೈನ ಅರಸರುಗಳೂ ಕೂಡ ಇದನ್ನು ಕಡೆಗಣಿಸಹೋಗದೇ ರಕ್ಷಕ ದೈವಗಳೆಂದು ಪರಿಗಣಿಸಿ ಪ್ರೋತ್ಸಾಹಿಸಿದ್ದರಲ್ಲದೇ ಇದೇ ಬಗೆಯಲ್ಲಿ ತಮ್ಮದೇ ಆದ ದೈವಗಳನ್ನು (ರಾಜನ್ ದೈವಗಳು) ಪ್ರತಿಷ್ಠಾಪಿಸಿ ನಂಬಿಕೆಯಿಂದ ನಡೆದು ಕೊಂಡಿದ್ದರು.</p>



<h6 class="wp-block-heading"><strong>ವೈದಿಕ ದೇವತಾರಾಧನೆಯ ಬೆಳವಣಿಗೆ</strong></h6>



<p>ಕದಂಬರ ಲೋಕಾದಿತ್ಯ ಕರೆತಂದ ಉತ್ತರದ ಬ್ರಾಹ್ಮಣ ಕುಟುಂಬಗಳಿಗೆ ಪಶ್ಚಿಮ ಷೋಡಶ (16) (ಕಾರೆವೂರು, ವೊರ್ಕಾಡಿ, ಮರಣಿ, ಕೊಳನಾಡು, ಪಾಡಿ, ಕೂಡಲು, ಮೊಗೆಬೈಲು, ಮಿತ್ತನಾಡು, ನಿರ್ಮಾರ್ಗ, ಸಿಮಂತೂರು, ತೆನೆಕಳ, ಬ್ರಹ್ಮಾವರ, ನೀಲಾವರ, ಕೋಟ, ಕಂದಾವರ ಮತ್ತು ಶಿವಳ್ಳಿ) ಮತ್ತು ಪೂರ್ವ ಷೋಡಶ (16) (ಶ್ರಿಪಾಡಿ, ಓಡಿಲ, ನಾಳ, ಕಾರಂದೂರು, ಉಜಿರೆ, ಕುನ್ಯಮಾರ್ಗ, ಕೊಕ್ಕಡ, ರಾಮಿಂಜ, ಪುದೆ, ಬಳ್ಪ, ಐವರ್ನಾಡು, ಇಡ್ಕಿದು, ಕೆಮ್ಮಿಂಜ, ಪಾಡಿಂಜ, ಸಿರಿಯಾಡಿ ಮತ್ತು ಕೊಡಿಪಾಡಿ) ವೆಂಬ ದ್ವಾತ್ರಿಂಶತ್ (32) ಗ್ರಾಮಗಳನ್ನು ಉಂಬಳಿ ಕೊಟ್ಟು ಕರಾವಳಿ ಜಿಲ್ಲೆಗಳಲ್ಲಿ ನೆಲೆ ನಿಲ್ಲಿಸಿದ ಮೇಲೆ ಪ್ರಭುತ್ವದ ಪ್ರಭಾವಳಿಯಡಿಯಲ್ಲಿ ಇವರ ವೈದಿಕ ಸಾಂಸ್ಕೃತಿಕತೆಯ ವ್ಯಾಪಿಸುವಿಕೆ ಇಲ್ಲಿ ಹೆಚ್ಚತೊಡಗಿತು. ಹೊಸ ಹೊಸ ದೇಗುಲಗಳು ಇಲ್ಲಿ ಹುಟ್ಟಿಕೊಂಡವು. ಕೆಲ ಭೂತಸ್ಥಾನ, ಬಸದಿಗಳು ದೇವಾಲಯಗಳಾಗಿ ಮಾರ್ಪಟ್ಟವು. (ಉಡುಪಿಯ ಅನಂತೇಶ್ವರ ಚಂದ್ರಮೌಳೀಶ್ವರ ದೇಗುಲಗಳು ಇಂತವಕ್ಕೊಂದು ಉದಾಹರಣೆ. ಅದೇ ರೀತಿ ಅನೇಕ ಉಳ್ಳಾಲ್ತಿ ದೈವಸ್ಥಾನಗಳು ದುರ್ಗಾ ಪರಮೇಶ್ವರಿ ದೇವಾಲಯಗಳಾಗಿ ಬದಲಾಗುತ್ತಿರುವುದನ್ನು ಇಂದಿಗೂ ಕಾಣುತ್ತಿದ್ದೇವೆ). ದೈವಾರಾಧನೆಯನ್ನು ಅಳಿಸಿ ಹಾಕಲಾಗದಿದ್ದರೂ ವೈದಿಕ ದೇವತಾರಾಧನೆ ಪ್ರತ್ಯೇಕವಾಗಿ ಇಲ್ಲಿ ಬೆಳೆಯುತ್ತಾ ಹೋಯಿತು.</p>



<p>ಇನ್ನು, ಅವೈದಿಕತೆಯ ಪಂಜುರ್ಲಿ, ಗುಳಿಗ, ಕೊರಗಜ್ಜನಂತವರ ಕಥೆ ಪಾಡ್ದನಗಳಲ್ಲಿ ವೈದಿಕ ದೇವ ದೇವತೆಯ ಪಾತ್ರಗಳು ಬರುವುದಾದರೂ ಹೇಗೆ ಎನ್ನುವುದನ್ನು ಗಮನಿಸಿದರೆ, ಇದರಲ್ಲಿ ವಿಶೇಷವೇನೂ ಇಲ್ಲ. ಇದೊಂದು ಸಾಮಾಜಿಕ ಸಾಂಸ್ಕೃತಿಕ ಅನಿವಾರ್ಯತೆ ಅಷ್ಟೆ. ಪ್ರಸಕ್ತ ಕಾಲಮಾನಕ್ಕೆ ತಕ್ಕಂತೆ ಸರ್ವೈವಲ್ ಆಗಲು ಇರುವ ಅವಕಾಶ ಬಳಕೆಯ ಒಂದು ಸಹಜ ಪ್ರಕ್ರಿಯೆ ಇದೆನ್ನಬಹುದು. ಸಂಪೂರ್ಣವಾಗಿ ಕಳೆದು ಹೋಗುವ ಬದಲು ಕೆಲ ಹೊಂದಾಣಿಕೆಗಳ ಮೂಲಕ ಅಸ್ತಿತ್ವವನ್ನು ಉಳಿಸಿಕೊಳ್ಳುವ ವಿಧಾನ ಇದು. ಸಾಮಾಜಿಕವಾಗಿ ಕಡೆಗಣಿಸಲ್ಪಟ್ಟು ಯಾವುದೇ ಸಾಮಾಜಿಕ ಪ್ರಭಾವವನ್ನಿಟ್ಟುಕೊಳ್ಳದ ವರ್ಗವೊಂದು ಆಗಿನ ಪ್ರಭಾವೀ ವರ್ಗವೊಂದರ ಜೊತೆಗೆ ಯಾವುದೋ ಒಂದು ಬಗೆಯಲ್ಲಿ ಗುರುತಿಸಿಕೊಳ್ಳುವುದರ ಮೂಲಕ ಸಾಂದರ್ಭಿಕವಾಗಿ ತನ್ನತನವನ್ನು ತಕ್ಕಮಟ್ಟಿಗೆ ಕಾಪಿಟ್ಟು ಕೊಂಡಂತಹ ಪ್ರಕ್ರಿಯೆ ಇದು.</p>



<h6 class="wp-block-heading"><strong>ದೈವ ಪಾಡ್ದನಗಳು</strong></h6>



<p>ತಳ ಸಮುದಾಯದವರ ಈ ದೈವಾರಾಧನೆಯನ್ನು ಅಭ್ಯಸಿಸುವವರಿಗೆ ಈ ಕುರಿತ ಒಂದು ಪ್ರಮುಖವಾದ ಆಕರವೆಂದರೆ ಅದು ದೈವಕ್ಕೆ ಸಂಬಂಧಿಸಿದ ಪಾಡ್ದನಗಳು. ಈ ಪಾಡ್ದನದಲ್ಲಿ ನಿರ್ದಿಷ್ಟ ದೈವಗಳಿಗೆ ಸಂಬಂಧಿಸಿದ ಕಥೆಯ ವಿವರಣೆ ದೊರೆಯುತ್ತದೆ. ದೈವ ನರ್ತಕರ ಪರಂಪರೆಯಲ್ಲಿ ಸಾಗಿಬರುವ ಈ ಪಾಡ್ದನ ಕೇವಲ ಒಂದು ಮೌಖಿಕ ದಾಖಲಾತಿ. ಕೆಲ ದಶಕಗಳಿಂದ ಪ್ರೊ. ಲಾರಿ ಹೊಂಕೊ, ಮಾರ್ಥ ಅಶ್ಚನ್ ರಂತಹ ವಿದೇಶಿಗರಿಂದ ಹಿಡಿದು ಅಮೃತ ಸೋಮೇಶ್ವರ, ಡಾ. ವಿವೇಕ ರೈ, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಚಿನ್ನಪ್ಪ ಗೌಡ, ರಘುನಾಥ ವರ್ಕಾಡಿ, ನಾವಡ ದಂಪತಿ, ಮೊದಲಾದ ಅನೇಕ ಮಹನೀಯರು ಈ ಬಗ್ಗೆ ಅನೇಕ ವಿಚಾರಗಳನ್ನು ಅಭ್ಯಸಿಸಿ ದಾಖಲಿಸಿದ್ದಾರೆ. ಈ ಹಿಂದೆ ಕೇವಲ ಮೌಖಿಕವಾಗಿಯಷ್ಟೆ ಚಾಲ್ತಿಯಲ್ಲಿದ್ದ ಈ ದೈವ ಪಾಡ್ದನಗಳಲ್ಲಿ ಶ್ರೇಷ್ಠತೆಯ ಹೆಸರಲ್ಲಿ ಗುರುತಿಸಿಕೊಂಡಿದ್ದ ವೈದಿಕ ದೇವರುಗಳ ಸೇರಿಸುವಿಕೆಗೆ ಯಾವ ವಿಶೇಷ ರಬ್ಬರು ಪೆನ್ನುಗಳ ಅವಶ್ಯಕತೆಯೇನೂ ಬೇಕಿದ್ದಿರಲಿಲ್ಲ. ಆದರೆ ಯಾವ ಕಾಲ ಘಟ್ಟದಲ್ಲಿ ಈ ಈಶ್ವರ ಪಾರ್ವತಿ ಬ್ರಹ್ಮ ವಿಷ್ಣು ತುಳುನಾಡಿನ ದೈವ ಸಾಹಿತ್ಯದೊಳಗೆ ಸೇರಿಕೊಂಡರೆನ್ನುವುದನ್ನ ನಿಖರವಾಗಿ ಹೆಳಲಾಗದಿದ್ದರೂ ವೈದಿಕತೆಯ ಉಚ್ಛ್ರಾಯ ಕಾಲದಲ್ಲಂತೂ ಹೌದು ಎಂದು ನಂಬಲಡ್ಡಿಯಿಲ್ಲ.</p>



<h6 class="wp-block-heading"><strong>ತುಳುನಾಡಲ್ಲಿ ಎಲ್ಲವೂ ಬ್ರಹ್ಮಮಯಂ!</strong></h6>



<p>ತಮಿಳುನಾಡಿನಲ್ಲಿನ ಯಾವುದೋ ಒಂದು ಸೇತುವೆಗೆ ಬ್ರಿಟಿಷ್ ಅಧಿಕಾರಿಯ ನೆನಪಲ್ಲಿ ಹ್ಯಾಮಿಲ್ಟನ್ ಬ್ರಿಡ್ಜ್ ಎಂದು ಹೆಸರಿಡಲಾಗಿತ್ತಂತೆ. ಅಲ್ಲಿನ ತಮಿಳಿಗರು ನಾಲಗೆಗೆ ತ್ರಾಸ ಕೊಡುವ ಈ ಹ್ಯಾಮಿಲ್ಟನ್ ಹೆಸರನ್ನು ತಮ್ಮದೇ ತಮಿಳು ಶೈಲಿಯಲ್ಲಿ ’ಅಂಬಟನ್ ಬ್ರಿಜ್’ ಮಾಡಿಕೊಂಡಿದ್ದರು. ಜನ ಬಳಕೆಯಲ್ಲಿ ಈ ಹೆಸರೇ ರೂಢಿಗೆ ಬಂದು ಎಷ್ಟೊ ವರ್ಷದ ಬಳಿಕ ಈ ಹ್ಯಾಮಿಲ್ಟನ್ ನ ವಿಚಾರ ತಿಳಿಯದ ವ್ಯಕ್ತಿ ಈ ಬ್ರಿಡ್ಜನ್ನು ಇಂಗ್ಲಿಷ್ ನಲ್ಲಿ ಬಾರ್ಬರ್ ಬ್ರಿಡ್ಜ್ ಎಂದು ಪುನ: ಬದಲಿಸಿದನಂತೆ. ಅಂದರೆ, ತಮಿಳಿನಲ್ಲಿ ’ಅಂಬಟನ್’ ಎಂದರೆ ಕ್ಷೌರಿಕ ಎಂದರ್ಥ. ಇದು ಹ್ಯಾಮಿಲ್ಟನ್ ಬಾರ್ಬರ್ ಆದಂತಹ ಕತೆ. ತುಳುನಾಡಿನ ದೈವಗಳ ವಿಚಾರದಲ್ಲೂ ಕೆಲವೆಡೆ ಇಂತದ್ದೇ ನಡೆದಿದೆ. ಪೆರ್ಮೆರ್ ಎನ್ನುವುದು ’ಹಿರೀಕರು’ ಎನ್ನುವ ಅರ್ಥದ ಪದ. ಇದು ಕ್ರಮೇಣ ಬೆರ್ಮೆರ್ ಆಗಿ ಸಂಸ್ಕೃತೀಕರಣದ ಪ್ರಭಾವದಿಂದ ಇದೀಗ ಬ್ರಹ್ಮ ಎಂದಾಗಿ ಹೆಚ್ಚು ಬಳಕೆಯಲ್ಲಿದೆ. ಹಳೆಗನ್ನಡ ಮತ್ತು ತುಳುಗಳಲ್ಲಿ ಪ ಮತ್ತು ಬ ಪದಗಳು ಒಂದಕ್ಕೊಂದು ಪರ್ಯಾಯ ಶಬ್ದಗಳಾಗಿ ಬಳಕೆಯಾಗುವುದು ಸಾಮಾನ್ಯ. ತುಳುವರನ್ನು ಬೇರೆ ಕಡೆಯ ಕನ್ನಡಿಗರು ಅಪ್ಪನಿಗೆ ಅಮ್ಮ, ಅಮ್ಮನಿಗೆ ಅಪ್ಪ ಅನ್ನುವವರು.. ಅಂತ ತಮಾಷೆ ಮಾಡುವುದುಂಟು. ಆದರೆ ಹಳೆಗನ್ನಡದಲ್ಲಿ ಬಳಕೆಯಲ್ಲಿರುವ ಅಬ್ಬೆಯೇ ಇಲ್ಲಿ ಅಪ್ಪೆಯಾಗಿದೆಯಷ್ಟೆ. ಕುಂದಾಪುರ ಭಾಷೆಯಲ್ಲಿ ಕೆಲ ದಶಕಗಳ ಹಿಂದೆ ಅಮ್ಮನಿಗೆ ಅಬ್ಬಿ ಅಥವಾ ಅಬಾ ಎಂದು ಕರೆಯುವುದು ತುಂಬಾ ಸಾಮಾನ್ಯವಿತ್ತು. ಆದ್ರೆ ಈಗ ಅಲ್ಲಿ ಈ ’ಅಬ್ಬಿ’ ಬಹುತೇಕ ಮಾಯವಾಗಿದೆ. ಬ್ರಹ್ಮಸ್ಥಾನ, ಬ್ರಹ್ಮಲಿಂಗೇಶ್ವರ, ನಾಗಬ್ರಹ್ಮೆರ್, ಬ್ರಹ್ಮಬೈದೆರ್ ಮೊದಲಾದ ದೈವ ಸಂಬಂಧಿ ಹೆಸರುಗಳು. ಬ್ರಹ್ಮಾವರ, ಬ್ರಹ್ಮರ ಕೂಟ್ಲು, ಬ್ರಹ್ಮನಗರದಂತಹ ಊರ ಹೆಸರುಗಳನ್ನೂ ಕೂಡ ಕರಾವಳಿಯಲ್ಲಿ ಕಾಣಬಹುದು. ವೈದಿಕ ಪುರಾಣಗಳ ಪ್ರಕಾರ ಶಾಪಗ್ರಸ್ತ ಬ್ರಹ್ಮನಿಗೆ ಪೂಜೆಯಿಲ್ಲ ದೇಗುಲವೂ ಕೂಡ ಇಲ್ಲ. (ರಾಜಸ್ಥಾನದ ಪುಷ್ಕರ ಬಿಟ್ಟರೆ ಮತ್ತೆ ಕೆಲ ನಾಲ್ಕೈದಷ್ಟೇ ಬ್ರಹ್ಮ ದೇಗುಲ ದೇಶದಲ್ಲಿದೆಯಂತೆ) ಆದರೆ <a>ತುಳುನಾಡಲ್ಲಿ ಮಾತ್ರ ಎಲ್ಲವೂ ಬ್ರಹ್ಮಮಯಂ.</a> ಕಾರಣ ಮಾತ್ರ ಬೇರೆ. ಕರಾವಳಿಯ ದೈವಾರಾಧನೆ ಜಾತಿ ಧರ್ಮವನ್ನೂ ಮೀರಿದ್ದು. ಬಬ್ಬರ್ಯ, ಅಲಿಭೂತಗಳಂತಹ ಮುಸ್ಲಿಮ್ ದೈವಗಳಷ್ಟು ಪ್ರಸಿದ್ಧವಲ್ಲದಿದ್ದರೂ ಕಾಲಘಟ್ಟದಲ್ಲಿ ಸೇರ್ಪಡೆಗೊಂಡ ಕೆಲ ಬ್ರಾಹ್ಮಣ ದೈವಗಳೂ ಇವೆ. (ಅಷ್ಟೇ ಯಾಕೆ, ಇಂತಹ ಹೊಸ ಸೇರ್ಪಡೆಗೆ ಹೊಂದುವಂತೆ ಕಾಪು ಬಳಿ ಪೊಲೀಸ್ ಭೂತ ಎನ್ನುವ ದೈವವೂ ಇದೆಯಂತೆ) ಸಾರ್ವತ್ರಿಕವಲ್ಲದಿದ್ದರೂ ಎಲ್ಲೋ ಕೆಲವೆಡೆ ಶೂದ್ರ ಪರಂಪರೆಯ ಈ ದೈವಗಳನ್ನು ಬ್ರಾಹ್ಮಣರು ನಂಬಿ ಆರಾಧಿಸಿರುವುದೂ ಇದೆ. ಆದರೆ ಈ ವಿಚಾರದ ಆಧಾರದಲ್ಲಿ ತುಳುನಾಡಿನ ತಳ ಸಮುದಾಯದವರು ಆರಾಧಿಸಿಕೊಂಡು ಬರುತ್ತಿದ್ದ ದೈವಾರಾಧನೆಯನ್ನು ಸಾರಾಸಗಟಾಗಿ ವೈದಿಕತೆಯೊಂದಿಗೆ ತಳಕು ಹಾಕಲಾಗದು. ಮೂಲ್ಕಿ ಸಮೀಪದ ಕವತ್ತಾರು ಎಂಬಲ್ಲಿ ಕೇರಳ ಮೂಲದ ಮುಸಲ್ಮಾನರೊಬ್ಬರು ಎರಡು ದಶಕಗಳಿಂದ ಕೊರಗಜ್ಜ, ಕೊರತಿ, ಗುಳಿಗನ ದೈವಸ್ಥಾನ ಕಟ್ಟಿಕೊಂಡು ಕೋಲ ದೈವಾರಾಧನೆಯನ್ನು ನಡೆಸುತ್ತಿರುವ ಉದಾಹರಣೆಯೂ ತುಳುನಾಡಿನಲ್ಲಿದೆ. ಊರಿನವರೂ ಕೂಡ ಈ ಖಾಸಿಮ್ ಸಾಹೇಬರ ದೈವಸ್ಥಾನಕ್ಕೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ. ಅವರಿಗೇನೋ ದೈವದಿಂದ ಒಳಿತಾಗಿರಬಹುದು ಅಥವ ಪ್ರೇರಣೆಯಾಗಿದ್ದಿರಲೂ ಬಹುದು ಅಷ್ಟೆ.</p>



<h6 class="wp-block-heading"><strong>ಶೂದ್ರ ದೈವಗಳೆಂದರೆ ವೈದಿಕರಿಗೆ ಒಲವಿಲ್ಲ!</strong></h6>



<p>ಆವತ್ತಿನ ಕಾಲದಲ್ಲಷ್ಟೆ ಅಲ್ಲ ಇವತ್ತಿಗೂ ಕೂಡ ಶೂದ್ರ ದೈವಗಳೆಂದರೆ ವೈದಿಕರಿಗೆ ಅಂಥಾ ಒಲವೇನಿಲ್ಲ. ಮನೆಯಲ್ಲಿರುವ ದನಗಳಿಗೋ ಮಕ್ಕಳಿಗೋ ಹುಷಾರಿಲ್ಲದಿದ್ದರೆ ಅಲ್ಲೆಲ್ಲೋ ಬಯಲಲ್ಲಿರುವ ಕಲ್ಲಿಗೆ ಕೈಮುಗಿದು ಬರುವ ಸಂಪ್ರದಾಯವಿತ್ತು. ಆ ಕಲ್ಲಿಗೆ ’ಕೀಳುಕಲ್ಲು’ ಎಂದು ಕರೆಯುವುದು ವಾಡಿಕೆ. ತಾವು ನಂಬುವ ನಮ್ಮನ್ನು ಕಾಯುವ ಯಾವುದೋ ಅತೀತ ಶಕ್ತಿಯನ್ನು ನಾವೇ ಕೀಳು (ಕನಿಷ್ಠ) ಎಂದು ಕರೆಯುವ ಸಂಪ್ರದಾಯವಿಲ್ಲ. ನಂಬಿಕೆಗೆ ಸಂಬಂಧಿಸಿ ಈ ’ಕೀಳು’ ಎನ್ನುವ ಪದವನ್ನು ಬಳಕೆಗೆ ತಂದವರು ಯಾರು? ಕೋಲ ನೇಮಗಳಲ್ಲಿ ಊರಿನ ಹಿರಿತನದ ಮರ್ಯಾದೆಗಿರುವ ಆಹ್ವಾನದಂತೆ ವೈದಿಕ ಮನೆತನದವರು ಬಂದರೂ ದೈವಕ್ಕೆ ವೈದಿಕೇತರರು ಕೊಡುವಂತಹ ಮರ್ಯಾದೆಯನ್ನು ಇವರು ಕೊಡುವುದು ತೀರಾ ಕಡಿಮೆ. ವಿದ್ಯೆ, ಉದ್ಯೋಗ ಇತ್ಯಾದಿಗಳ ಕಾರಣಕ್ಕೆ ತಳ ಸಮುದಾಯದವರಲ್ಲೂ ಇದೀಗ ಹಣಕಾಸಿಗೇನು ಕೊರತೆಯಿಲ್ಲ. ಕೋಲ, ನೇಮ ನಡೆಸುವ ಬ್ರಾಹ್ಮಣೇತರರ ಆಹ್ವಾನಕ್ಕೆ ದೈವದ ಮೇಲಿನ ನಂಬಿಕೆಗಿಂತ ಶೂದ್ರವರ್ಗದ ಬದಲಾದ ಆರ್ಥಿಕ ಅನುಕೂಲತೆಯ ಆಕರ್ಷಣೆಗೊಳಗಾಗಿ ಭೂಸುರ ಮಂದಿ ನಾಗ ಹಾಗು ಭೂತಾರಾಧನೆಯಲ್ಲಿ ಇದೀಗ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಇದರಲ್ಲಿ ಅವರದ್ದೇನೂ ದೋಷ ಖಂಡಿತಾ ಇಲ್ಲ. ರತ್ನಗಂಬಳಿ ಹಾಸಿ ನಾವೇ ದುಡ್ಡು ಕೊಟ್ಟು ಇನ್ನಿಲ್ಲದ ಮರ್ಯಾದೆಯಿಂದ ಕರೆಯುವಾಗ ಈ ಶೂದ್ರಾಚರಣೆಯಲ್ಲೂ ವೈದಿಕರ ಉಪಸ್ಥಿತಿ ಮತ್ತು ಹಿಡಿತವೆಲ್ಲ ಸ್ವಾಭಾವಿಕ ತಾನೇ (ಅವರ ಭೂತಾರಾಧನೆ ಪೂರ್ವ ಸ್ಥಳಶುದ್ಧಿ, ಕಲಶ ಪೂಜೆಯೇ ಮೊದಲಾದ ಪೂಜಾ ಸಮಯದಲ್ಲಿ ಕರೆಸಿದವರೂ ಕೂಡ ಸಮೀಪ ಹೋಗುವಂತಿಲ್ಲ; ಸಾಮಗ್ರಿಗಳನ್ನು ಮುಟ್ಟುವಂತಿಲ್ಲ; ಅವರ ಮಡಿಮೈಲಿಗೆಯ ಕಾರಣಕ್ಕೆ).</p>



<figure class="wp-block-image size-large"><img decoding="async" width="768" height="1024" src="https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM-768x1024.jpeg" alt="" class="wp-image-13661" srcset="https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM-768x1024.jpeg 768w, https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM-225x300.jpeg 225w, https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM-150x200.jpeg 150w, https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM-300x400.jpeg 300w, https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM-696x928.jpeg 696w, https://peepalmedia.com/wp-content/uploads/2022/11/WhatsApp-Image-2022-11-01-at-5.19.28-PM.jpeg 960w" sizes="(max-width: 768px) 100vw, 768px" /></figure>



<p><br><strong>ವೈದಿಕ ಆಚರಣೆಗಳಿಗೆ ಇನ್ನಿಲ್ಲದ ಮಹತ್ತ್ವ..</strong></p>



<p>ಈ ಬಗೆಯಲ್ಲಿ ಇಂದು ಶೂದ್ರ ವರ್ಗದ ಭೂತಸ್ಥಾನಗಳಲ್ಲಿ ವೈದಿಕತೆಯ ಆಚರಣೆಗಳಿಗೆ ಇನ್ನಿಲ್ಲದ ಮಹತ್ತ್ವ ನೀಡಲಾಗುತ್ತಿದ್ದು, ದೊಡ್ಡ ದೊಡ್ಡ ಕೋಲ ನೇಮಗಳಷ್ಟೆ ಅಲ್ಲದೇ ಮನೆಯಲ್ಲಿ ನಡೆಸುವಂತಹ ಕುಟುಂಬದ ದೈವ ಕಾರ್ಯಗಳಿಗೂ ಕೂಡ ಸಂಬಂಧವೇ ಇರದ ಹೇಳಲು ಬಾರದಂತಹ ರಾಕ್ಷೋಘ್ನ ಹೋಮ, ಸ್ಥಳ ಶುದ್ಧಿ, ಗಣಪತಿ ಹವನ ಇನ್ನೇನೋ ಎಂದು ಇಲ್ಲಸಲ್ಲದ ಸಂಪ್ರದಾಯಗಳೆಲ್ಲ ಜತೆಯಾಗುತ್ತಿವೆ. ಇನ್ನೂ ಮುಂದುವರೆದು ಪ್ರತಿ ಮನೆಯಲ್ಲೂ ತಂತ್ರಿಗಳನ್ನು ಕರೆಸಿ ಅಷ್ಟಮಂಗಲ ಪ್ರಶ್ನೆ ಮಾಡಿಸುವ ಹೊಸತರದ ’ಪ್ರತಿಷ್ಠೆ’ ಬೇರೆ ಶೂದ್ರವರ್ಗಗಳಲ್ಲಿ ಇದೀಗ ಸುರುವಾಗಿದೆ. ಇನ್ನು ಏನೇನೆಲ್ಲ ಈ ದೈವಾರಾಧನೆಯಲ್ಲಿ ನೋಡಬೇಕೋ.. ಮೂಲ ದೈವಗಳು ಮಾತ್ರ ಗೊತ್ತೇ ಇರದ ಈ ಹೋಮ ಹವನಗಳ ಹೊಗೆಯಿಂದ ಚಡಪಡಿಸಿ ಕಣ್ ಕಣ್ ಬಿಡುತ್ತಿರಬೇಕು ಅಷ್ಟೆ.</p>



<h6 class="wp-block-heading"><strong>ದೈವಗಳು ಸಂಸ್ಕೃತೀಕರಣಗೊಂಡಿವೆ!</strong></h6>



<p>ಮಾಮೂಲಿ ದೇವರುಗಳಿಗಿಂತ ಅವೈದಿಕತೆಯ ಈ ಭೂತಾರಾಧನೆಯಂತವುಗಳಿಗೆ ಜನರು ಮುಗಿಬೀಳುತ್ತಿರುವುದು ಮತ್ತು ದುಡ್ಡು ಸುರಿದು ಮೆರೆಸುತ್ತಿರುವುದನ್ನ ನೋಡಿ ಒಳಗೊಳಗೇ ಸಾಕಷ್ಟು ಕುರುಬುತ್ತಿರುವ ಕೆಲ ಭೂಸುರ ಮಂದಿ (ಈ ಬಗ್ಗೆ ಸಾಕಷ್ಟು ನೋಡಿದ್ದೇನೆ) ಸ್ಥಳೀಯ ಜನರಿಂದ ಪ್ರತ್ಯೇಕಿಸಲಾಗದ ಈ ದೈವಾಚರಣೆಯನ್ನು ವೈದಿಕತೆಯ ವ್ಯಾಪ್ತಿಯೊಳಗೆ ತರುವಂತ ಹುಮ್ಮಸ್ಸಿನಲ್ಲಿ ಇದ್ದಾರೆ. (ಬಹುತೇಕ ಯಶಸ್ವಿಯೂ ಆಗಿದ್ದಾರೆ) ಈ ಕಾರಣಕ್ಕೇ ಜುಮಾದಿ, ಲೆಕ್ಕೆಸಿರಿಯಂತಹ ಅನೇಕ ದೈವಗಳು ಸಂಸ್ಕೃತೀಕರಣಗೊಂಡು ಧೂಮಾವತಿ, ರಕ್ತೇಶ್ವರಿಗಳಾಗಿ ಬದಲಾಗಿವೆ. ತುಳುವರ ಪಂಜುರ್ಲಿಯೂ ಕೂಡ ಸಂಸ್ಕೃತದ ವರಾಹ ಮೂರ್ತಿಯಾಗಿದ್ದಾನೆ. ಲಾಭಕ್ಕೆ ತಕ್ಕಂತೆ ಅನ್ಯರ ಆಚರಣೆಗಳನ್ನು ತಮ್ಮದಾಗಿಸಿಕೊಳ್ಳುವುದು ವೈದಿಕರಿಗೆ ಹೊಸತೇನಲ್ಲ, ಬೌದ್ಧರ ಗೌತಮ ಬುದ್ಧ, ಜೈನರ ಯಕ್ಷಿಗಳನ್ನು ಮಾತ್ರವಲ್ಲದೇ ಅವರ ಪೌರಾಣಿಕ ಕತೆಗಳನ್ನೂ ಕೂಡ ತಮ್ಮ ಗ್ರಂಥಗಳಲ್ಲಿ ಸೇರಿಸಿ ಕೊಂಡಂತವರಿಗೆ ಈ ಭೂತಗಳೇನು ಮಹಾ..</p>



<p></p>



<p><strong>ಶಂಕರ್ ಸೂರ್ನಳ್ಳಿ</strong></p>



<p><strong>ಲೇಖಕರು.</strong></p>
]]></content:encoded>
					
		
		
			</item>
		<item>
		<title>ಬಿಳಿಮಲೆ ಕಂಡ ಕಾಂತಾರ: ಎಂಚಿನಲಾ ಆವಡ್‌, ಸಿನೇಮಾ ಎಡ್ಡೆ ಉಂಡುಯೇ, ಒರೊ ತೂವೊಲಿ</title>
		<link>https://peepalmedia.com/bilimale-kandante-kantara-enchinal-adav-cinema-edde-unduye-oru-tavoli/</link>
		
		<dc:creator><![CDATA[Purushothama Bilimale]]></dc:creator>
		<pubDate>Mon, 24 Oct 2022 03:31:29 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[Daivaradhane]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[kannada cinema]]></category>
		<category><![CDATA[kannada movie]]></category>
		<category><![CDATA[kannada news]]></category>
		<category><![CDATA[Kantara]]></category>
		<category><![CDATA[karavali]]></category>
		<category><![CDATA[movie]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[purushottama bilimale]]></category>
		<category><![CDATA[Rishab Shetty]]></category>
		<category><![CDATA[sandalwood]]></category>
		<category><![CDATA[writing]]></category>
		<guid isPermaLink="false">https://peepalmedia.com/?p=12741</guid>

					<description><![CDATA[ಕಾಂತಾರ ಚಿತ್ರದ ಕುರಿತ ವಿಮರ್ಶೆಗಳ ಸುರಿಮಳೆ ನಿಲ್ಲುತ್ತಿಲ್ಲ. ಕರಾವಳಿಯ ಬೂತಾರಾಧನೆಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲ, ಸಾಹಿತಿ-ಸಂಶೋಧಕ ಡಾ.ಪುರುಷೋತ್ತಮ ಬಿಳಿಮಲೆ ಕಾಂತಾರ ನೋಡಿದ ನಂತರ ಬರೆದಿರುವ ಬರೆಹ ಇಲ್ಲಿದೆ. ಕೊನೆಗೂ ಕಾಂತಾರ ಸಿನೇಮಾವನ್ನು ಕನ್ನಡದಲ್ಲಿಯೇ ನೋಡಿದೆ. ನನಗೆ ಖುಷಿಯಾಯಿತು. ಕರಾವಳಿಯ ಬದುಕಿನ ಎರಡು ಕಣ್ಣುಗಳಂತಿರುವ ಭೂತಾರಾಧನೆ ಮತ್ತು ಯಕ್ಷಗಾನಗಳನ್ನು ಅತ್ಯಂತ ಸೃಜನಶೀಲವಾಗಿ ಮರು ಸೃಷ್ಟಿಸಿದವರು ಕಡಿಮೆ ಎಂದೇ ಹೇಳಬೇಕು. ಎಷ್ಟೋ ಬಾರಿ ಈ ಪ್ರಕಾರಗಳು ಎಷ್ಟು ಸಶಕ್ತವಾಗಿರುತ್ತವೆ ಎಂದರೆ ಸೃಜನಶೀಲತೆಯ ಅನೇಕ ಸಾಧ್ಯತೆಗಳನ್ನು ಅವುಗಳೇ ಸೂರೆಗೊಂಡಿರುತ್ತವೆ. ಈ ನಿಟ್ಟಿನಲ್ಲಿ [&#8230;]]]></description>
										<content:encoded><![CDATA[
<p>ಕಾಂತಾರ ಚಿತ್ರದ ಕುರಿತ ವಿಮರ್ಶೆಗಳ ಸುರಿಮಳೆ ನಿಲ್ಲುತ್ತಿಲ್ಲ. ಕರಾವಳಿಯ ಬೂತಾರಾಧನೆಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲ, ಸಾಹಿತಿ-ಸಂಶೋಧಕ ಡಾ.ಪುರುಷೋತ್ತಮ ಬಿಳಿಮಲೆ ಕಾಂತಾರ ನೋಡಿದ ನಂತರ ಬರೆದಿರುವ ಬರೆಹ ಇಲ್ಲಿದೆ.</p>



<p>ಕೊನೆಗೂ ಕಾಂತಾರ ಸಿನೇಮಾವನ್ನು ಕನ್ನಡದಲ್ಲಿಯೇ ನೋಡಿದೆ. ನನಗೆ ಖುಷಿಯಾಯಿತು. ಕರಾವಳಿಯ ಬದುಕಿನ ಎರಡು ಕಣ್ಣುಗಳಂತಿರುವ ಭೂತಾರಾಧನೆ ಮತ್ತು ಯಕ್ಷಗಾನಗಳನ್ನು ಅತ್ಯಂತ ಸೃಜನಶೀಲವಾಗಿ ಮರು ಸೃಷ್ಟಿಸಿದವರು ಕಡಿಮೆ ಎಂದೇ ಹೇಳಬೇಕು. ಎಷ್ಟೋ ಬಾರಿ ಈ ಪ್ರಕಾರಗಳು ಎಷ್ಟು ಸಶಕ್ತವಾಗಿರುತ್ತವೆ ಎಂದರೆ ಸೃಜನಶೀಲತೆಯ ಅನೇಕ ಸಾಧ್ಯತೆಗಳನ್ನು ಅವುಗಳೇ ಸೂರೆಗೊಂಡಿರುತ್ತವೆ. ಈ ನಿಟ್ಟಿನಲ್ಲಿ ಕಾಂತಾರವು ಕರಾವಳಿಯ ಬದುಕಿನ ಕೆಲವು ಆಯಾಮಗಳನ್ನು ಮೊದಲಬಾರಿಗೆ ತೆರೆಯಮೇಲೆ ತಂದಿದೆ.</p>



<p>ಪಂಜುರ್ಲಿ ದೈವ, ಅದರ ಗಗ್ಗರದ ನಿಗೂಢ ದನಿ, ಸೂಟೆ ( ದೊಂದಿ), ಹಸಿರು ಕಾಡು, ಕಂಬಳ, ಹೊಡೆದಾಟ, ಬೀಡಿ, ಶರಾಬು, ಕೋಳಿಕಟ್ಟ, ಯಕ್ಷಗಾನ, ಮೀನು, ವಿಭಿನ್ನ ಕನ್ನಡ ಇತ್ಯಾದಿಗಳನ್ನು ನಿರ್ದೇಶಕ_ರಿಷಭ್ ಶೆಟ್ಟಿಯವರು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಕರಾವಳಿಯ ಕಡಲಿನ ಅಬ್ಬರ, ದೈವ ನರ್ತಕರೇ ಸೃಷ್ಟಿಸುವ ಸಂಗೀತ, ಕಾಡೇ ಹುಟ್ಟಿಸುವ ನಿಗೂಢ ಧ್ವನಿ ಇತ್ಯಾದಿಗಳನ್ನು ಇಲ್ಲಿ ಹೆಚ್ಚಾಗಿ ಬಳಸಿಕೊಂಡಿಲ್ಲ. ಪಾಡ್ದನದ, ಕಬಿತಗಳ ಲಯಗಾರಿಕೆಯ ಮಾಧುರ್ಯವನ್ನು ಇಲ್ಲಿ ಕೇಳಲಾರೆವು. ಮೂಲತ: ಈ ಲಯಗಳು ದೈವವೊಂದರ ದುರಂತಕ್ಕೆ ಪರಿಣಾಮಕಾರಿಯಾದ ಹಿನ್ನೆಲೆಯನ್ನು ಒದಗಿಸಿಕೊಡುತ್ತವೆ. ಬಹುಶ: ಕಮರ್ಶಿಯಲ್‌ ಸಿನೇಮಾವೊಂದು ಇವನ್ನೆಲ್ಲ ಬಳಸಿಕೊಳ್ಳುವುದೂ ಕಷ್ಟ.</p>



<p>ಈ ಚಿತ್ರವು 1870, 1970 ಮತ್ತು 1990 ರ ಮೂರು ಅವಧಿಗಳಲ್ಲಿ ಕರಾವಳಿ ಕಂಡ ಸ್ತಿತ್ಯಂತರಗಳನ್ನು ಒಂದು ಚೌಕಟ್ಟಾಗಿ ಇರಿಸಿಕೊಂಡಿದೆ. ವಸಾಹತು ಕಾಲಘಟ್ಟದಲ್ಲಿ ಥಾಮಸ್‌ ಮುನ್ರೋ ಮೊದಲ ಬಾರಿಗೆ ಕಾಡಿನ ಮೇಲೆ ಪ್ರಭುತ್ವ ಸಾಧಿಸುವಂತ ಕಾನೂನುಗಳನ್ನು ತಂದ. ಈಸ್ಟ್‌ ಇಂಡಿಯಾ ಕಂಪೆನಿಯ ಹಡಗುಗಳು ಮರಗಳನ್ನು ಹೊತ್ತು ಸಾಗಿಸಲು ಸದಾ ಸಿದ್ಧವಾಗಿರುವಾಗ ಅದಕ್ಕೆ ಬೇಕಾದ ಕಾನೂನನ್ನು ಅವರೇ ತಂದುಕೊಂಡಿರುವುದು ಆಶ್ಚರ್ಯದ ವಿಷಯವೇನೂ ಅಲ್ಲ. ಕಾಡಿನ ಒತ್ತುವರಿ, ಕಾಡಿನ ಮಕ್ಕಳು ತಮ್ಮದೇ ಕಾಡಿನಲ್ಲಿ ಅನಾಥರಾಗುವುದು ಈ ಸಿನೇಮಾದಲ್ಲಿಯೂ ಬಂದಿದೆ.</p>



<p>೧೯೭೦ರ ದಶಕದಲ್ಲಿ ಭೂಮಸೂದೆ ಜ್ಯಾರಿಗೆ ಬಂದಾಗ ಭೂ ಸಂಬಂಧಗಳಲ್ಲಿ ಅಮೂಲಾಗ್ರ ಬದಲಾವಣೆಯಾಯಿತು. ದೈವ ನರ್ತಕರೂ ಅದರಿಂದ ಕೆಲವು ತೊಂದರೆಗಳಿಗೆ ಒಳಗಾದರು. ಸಿನೇಮಾದಲ್ಲಿ ಗುರುವನ ಕೊಲೆ ಅಂಥದ್ದರ ಒಂದು ಸಂಕೇತ. ಆ ಕಾಲದಲ್ಲಿ ಸ್ವಲ್ಪ ಬಿಕ್ಕಟ್ಟನ್ನೆದುರಿಸಿದ ಭೂತಾರಾಧನೆಯು, ೧೯೯೦ರ ಆನಂತರ ಮತ್ತೆ ವೈಭವದ ದಿನಗಳನ್ನು ಕಂಡಿತು. ತುಳುನಾಡಿನ ಹೊರಗಡೆಗೆ, ಮುಖ್ಯವಾಗಿ ಮುಂಬೈಗೆ ವಲಸೆ ಹೋದ ತುಳುವರು ಕಷ್ಟ ಪಟ್ಟು ದುಡಿದು ಶ್ರೀಮಂತರಾಗಿ ಮತ್ತೆ ಹುಟ್ಟಿದೂರಿನ ಭೂತಾರಾಧನೆ ಮತ್ತು ನಾಗಾರಾಧನೆಗೆ ಹಣದ ತೊಂದರೆಯಾಗದಂತೆ ನೋಡಿಕೊಂಡರು. ಇದರಿಂದ ಅವರಿಗೆಲ್ಲ ಊರಿನಲ್ಲೊಂದು ಗುರುತು ಕೂಡಾ ಪ್ರಾಪ್ತಿಸಿತು. ಈ ಹಿನ್ನಲೆಯಲ್ಲಿ ಕಾಂತಾರವು ಆಯ್ದುಕೊಂಡ ಕಾಲದ ಚೌಕಟ್ಟು ಅರ್ಥಪೂರ್ಣವಾಗಿದೆ.</p>



<p></p>


<div class="wp-block-image">
<figure class="aligncenter size-full is-resized"><img loading="lazy" decoding="async" src="https://peepalmedia.com/wp-content/uploads/2022/10/kantara.jpg" alt="" class="wp-image-8425" width="604" height="794"/></figure></div>


<p></p>



<p>ಸಿನೇಮಾವನ್ನು ಈಗಾಗಲೇ ಬಹುತೇಕ ಎಲ್ಲರೂ ನೋಡಿರುವುದರಿಂದ ಮತ್ತೆ ನಾನು ಕತೆ ಹೇಳುವುದಿಲ್ಲ.<br>ಚಿತ್ರದ ಕೊನೆಯಲ್ಲಿ ರಿಷಭ್ ಶೆಟ್ಟಿಯವರು ಮಾಡಿದ ಅಭಿನಯ ಅಮೋಘ. ದೈವಾರಾಧನೆಯಲ್ಲೂ ನಾಯಕರು ಅರ್ಧವಯಸ್ಸಿನಲ್ಲಿ ಸತ್ತು, ಆಮೇಲೆ ಮಾಯಕಗಳಾಗಿ ಕೊಂದವರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ. ಉದಾಹರಣಗೆ ಕಲ್ಕುಡ -ಕಲ್ಲುರ್ಟಿಯವರು, ʼಜೀವ ಇರುವಾಗ ನೋಡಲಿಕ್ಕೆ ಆಗಲಿಲ್ಲ, ಸತ್ತು ನೋಡಿಕೊಳ್ಳುತ್ತೇವೆ; ಎಂದು ಹೇಳಿ ಮಾಯಕದಲ್ಲಿ ಅರಸನ ಮನೆಗೆ ಬೆಂಕಿ ಇಡುತ್ತಾರೆ, ಅರಸಿಯರಿಗೆ ಹುಚ್ಚು ಹಿಡಿಸುತ್ತಾರೆ. ಪಾಡ್ದನಗಳಲ್ಲಿ ಈ ಭಾಗ ಉಗ್ರವೇ ಆಗಿರುತ್ತದೆ. ಈ ವಿಷಯದಲ್ಲಿ ಅದು ಹಿಂದೂ ದೇವರುಗಳಿಗಿಂತ ಭಿನ್ನವೇ ಹೌದು. ನನಗೆ ಗೊತ್ತಿರುವ ಯಾವ ಹಿಂದೂ ದೇವರು ಕೂಡಾ ಅರ್ಧ ವಯಸ್ಸಿನಲ್ಲಿ ಸತ್ತು ಆನಂತರ ಮಾಯಕದಲ್ಲಿ ಸೇಡು ತೀರಿಸಿಕೊಳ್ಳುವುದನ್ನು ನಾನು ಓದಿಲ್ಲ. ದೈವವೊಂದರ ಮಾಯಕದ ಸೇಡಿನ ಭಾಗ , ಅದನ್ನು ಶೆಟ್ಟಿ ಅಭಿನಯಿಸಿದ ರೀತಿ ಕಾಂತಾರದ ಉತ್ಕೃಷ್ಟ ಭಾಗ ಎಂದು ನನ್ನ ಭಾವನೆ.</p>



<p>ಸಿನೇಮಾ ನೋಡಿ ಬಂದ ಮೇಲೆ ಈ ಸಿನೇಮಾ ಯಾಕಿಷ್ಟು ಚರ್ಚೆಗೆ ಒಳಗಾಯಿತು ಎಂಬುದು ನನಗೆ ಸ್ಪಷ್ಟವಾಗಲಿಲ್ಲ. ಪಂಜುರ್ಲಿಯನ್ನು ಕೊನೆಗೆ ವರಾಹ ರೂಪಿ ಎಂದು ಸಂಸ್ಕೃತದಲ್ಲಿ ನುತಿಸಿದ್ದು ಮತ್ತು ಅದಕ್ಕೆ ಪೂರಕವಾಗಿ ಪಾಡ್ದನಗಳಲ್ಲಿ ಇಲ್ಲದೇ ಇರುವ ಶಾಸ್ತ್ರೀಯಕ್ಕೆ ಹತ್ತಿರವಿರುವ ಸಂಗೀತ ಬಳಸಿದ್ದು ವಾಸ್ತವವಾಗಿ ಸಿನೇಮಾದ ಅತ್ಯಂತ ದುರ್ಬಲ ಭಾಗ. ಅದು ಆ ಕತೆಯ ಅಲ್ಲಿವರೆಗಣ ಬೆಳವಣಿಗೆಗೆ ಹೊಂದುವುದೇ ಇಲ್ಲ‌. ಆದರೆ ಈ ನಿಟ್ಟಿನಲ್ಲಿ ಸೃಜನಶೀಲ ಕಲಾವಿದನಿಗೆ ಇರಬೇಕಾದ ಸ್ವಾತಂತ್ರ್ಯವನ್ನು ನಾನಂತೂ ಪ್ರಶ್ನಿಸಲಾರೆ.</p>



<p>ಹೊಡೆದಾಟ, ಬಡಿದಾಟ, ಕೊಲೆ ಇತ್ಯಾದಿಗಳೆಲ್ಲ ಕರಾವಳಿಯಲ್ಲಿ ಸ್ವಲ್ಪ ಹೆಚ್ಚೇ ಇರುವುದರಿಂದಾಗಿ ರಿಷಭ ಶೆಟ್ಟಿಯವರು ಅದನ್ನು ಸ್ವಲ್ಪ ಜಾಸ್ತೀಯೇ ತೋರಿಸಿದಂತಿದೆ.<br>ಎಂಚಿನಲಾ ಆವಡ್‌, ಸಿನೇಮಾ ಎಡ್ಡೆ ಉಂಡುಯೇ, ಒರೊ ತೂವೊಲಿ</p>
]]></content:encoded>
					
		
		
			</item>
		<item>
		<title>ಭೂತಕ್ಕಿದೆಯೇ ಭವಿಷ್ಯ?</title>
		<link>https://peepalmedia.com/bootha-future-srinivas-karkala-article/</link>
		
		<dc:creator><![CDATA[Shrinivas Karkala]]></dc:creator>
		<pubDate>Mon, 17 Oct 2022 11:37:06 +0000</pubDate>
				<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[boothradane]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[Kantara]]></category>
		<category><![CDATA[karavali]]></category>
		<category><![CDATA[karnataka]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[tulu nadu]]></category>
		<category><![CDATA[writing]]></category>
		<guid isPermaLink="false">https://peepalmedia.com/?p=11464</guid>

					<description><![CDATA[ದೈವಾರಾಧನೆಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎನ್ನುವುದಾದರೆ ಭೂತ ಕಟ್ಟುವವನ ಮಗನೂ ಭೂತ ಕಟ್ಟಿಕೊಂಡೇ ಇರಬೇಕೇ? ಆತನಿಗೂ ಸಾಮಾಜಿಕವಾಗಿ ಮೇಲ್ಮುಖ ಚಲನೆ ಬೇಡವೇ? ಎಂಬ ಬಹು ಮುಖ್ಯ ಪ್ರಶ್ನೆಯನ್ನು ನಿಮ್ಮ ಮುಂದಿಟ್ಟಿದ್ದಾರೆ ಚಿಂತಕ ಶ್ರೀನಿವಾಸ ಕಾರ್ಕಳ. “ಹ್ವಾಯ್, ಮುಂದಿನ್ ವಾರ ಕಲ್ಕುಟ್ಕ ಮಕ್ಕಿಯಲ್ ಕೋಲ ಅಂಬ್ರಲ್ಲೆ…”&#160; ಎಂಬ ಮಾತು ಎಲ್ಲೋ&#160; ಯಾರೋ ಆಡುತ್ತಿರುವುದು ಕಿವಿಗೆ ಬಿದ್ದರೂ ಸಾಕು, ಒಂದು ಕ್ಷಣ ನಮ್ಮ ಕಿವಿ ನೆಟ್ಟಗಾಗಿ ಬಿಡುತ್ತಿತ್ತು. ಇದಕ್ಕೆ ಕಾರಣಗಳು ಅನೇಕ. ಇಂದಿನಂತಹ ಮನರಂಜನಾ ಕಾರ್ಯಕ್ರಮಗಳು ವ್ಯಾಪಕವಾಗಿ ಇರದ ಅದು ಕಳೆದ [&#8230;]]]></description>
										<content:encoded><![CDATA[
<p><strong>ದೈವಾರಾಧನೆಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎನ್ನುವುದಾದರೆ ಭೂತ ಕಟ್ಟುವವನ ಮಗನೂ ಭೂತ ಕಟ್ಟಿಕೊಂಡೇ ಇರಬೇಕೇ? ಆತನಿಗೂ ಸಾಮಾಜಿಕವಾಗಿ ಮೇಲ್ಮುಖ ಚಲನೆ ಬೇಡವೇ? ಎಂಬ ಬಹು ಮುಖ್ಯ</strong> <strong>ಪ್ರಶ್ನೆಯನ್ನು ನಿಮ್ಮ ಮುಂದಿಟ್ಟಿದ್ದಾರೆ ಚಿಂತಕ ಶ್ರೀನಿವಾಸ ಕಾರ್ಕಳ</strong>.</p>



<p>“ಹ್ವಾಯ್, ಮುಂದಿನ್ ವಾರ ಕಲ್ಕುಟ್ಕ ಮಕ್ಕಿಯಲ್ ಕೋಲ ಅಂಬ್ರಲ್ಲೆ…”&nbsp; ಎಂಬ ಮಾತು ಎಲ್ಲೋ&nbsp; ಯಾರೋ ಆಡುತ್ತಿರುವುದು ಕಿವಿಗೆ ಬಿದ್ದರೂ ಸಾಕು, ಒಂದು ಕ್ಷಣ ನಮ್ಮ ಕಿವಿ ನೆಟ್ಟಗಾಗಿ ಬಿಡುತ್ತಿತ್ತು. ಇದಕ್ಕೆ ಕಾರಣಗಳು ಅನೇಕ. ಇಂದಿನಂತಹ ಮನರಂಜನಾ ಕಾರ್ಯಕ್ರಮಗಳು ವ್ಯಾಪಕವಾಗಿ ಇರದ ಅದು ಕಳೆದ ಶತಮಾನದ ಎಪ್ಪತ್ತರ ದಶಕ. ಊರಿನವರನ್ನೆಲ್ಲ ಆಕರ್ಷಿಸಿ ಒಂದೆಡೆ ಸೇರಿಸುತ್ತಿದ್ದ ಸಾರ್ವಜನಿಕ ಕಾರ್ಯಕ್ರಮಗಳೆಂದರೆ, ಊರಿನ ದೇವಸ್ಥಾನದ ತೇರಿನ ಜಾತ್ರೆ, ಅಪರೂಪಕ್ಕೊಮ್ಮೆ ಬರುತ್ತಿದ್ದ ಟೆಂಟ್ ಮೇಳದ ಯಕ್ಷಗಾನ ಬಯಲಾಟ, ಶಾಲೆಯ ವಾರ್ಷಿಕೋತ್ಸವ, ಅದು ಬಿಟ್ಟರೆ ಊರ ದೈವಗುಡಿಯ ಕೋಲ.</p>



<p>ಶಂಕ್ರಾಣದ (ಊರ ಹೆಸರು ಶಂಕರನಾರಾಯಣವಾದರೂ ಅಷ್ಟುದ್ದದ ಹೆಸರು ಗ್ರಾಮೀಣ ಅನಕ್ಷರಸ್ಥರು ಮತ್ತು ಅರೆ ಅಕ್ಷರಸ್ಥರ ಬಾಯಿಯಲ್ಲಿ ಹೇಗೆ ಉಳಿದೀತು? ಅದನ್ನು ಅವರು ಸಂಕ್ಷಿಪ್ತವಾಗಿ ಕರೆಯುತ್ತಿದ್ದುದು ಶಂಕ್ರಾಣ ಎಂದೇ. ಈ ಶಂಕ್ರಾಣವು ಕುಂದಾಪುರದಿಂದ ಹಾಲಾಡಿ ಮಾರ್ಗವಾಗಿ ಸಿದ್ದಾಪುರ ಕಡೆಗೆ ಹೋಗುವಾಗ ಹಾಲಾಡಿಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಸಿಗುತ್ತದೆ) ವೀರ ಕಲ್ಲು ಕುಟಿಕ/ ಕಲ್ಕುಡ ದೈವದ ಕೋಲ ತುಂಬಾ ಪ್ರಸಿದ್ಧ. ಎರಡೋ ಮೂರೋ ದಿನ ನಡೆಯುತ್ತಿದ್ದ ಆ ಕೋಲಕ್ಕೆ ಆ ದೈವಸಾನಕ್ಕೆ ನಡೆದುಕೊಳ್ಳುವ ಸುತ್ತಲ ಹಳ್ಳಿಗರು ಮಾತ್ರವಲ್ಲ, ಘಟ್ಟದ ಮೇಲಿನವರೂ ಬರುತ್ತಿದ್ದರು.</p>



<p>ಕೋಲ ಸಂಜೆ ಶುರುವಾಗುವುದಿದ್ದರೆ, ನಾವು ಕುತೂಹಲದಿಂದ ಹಗಲಲ್ಲೇ ಆಗೊಮ್ಮೆ ಈಗೊಮ್ಮೆ ಅಲ್ಲಿ ಠಳಾಯಿಸುತ್ತಿದ್ದೆವು. ಭೂತ ಕಟ್ಟುವಾತ ತನ್ನ ಹೆಂಡತಿ ಮಕ್ಕಳೊಂದಿಗೆ ಅಲ್ಲಿ ಒಂದು ಮೂಲೆಯಲ್ಲಿ ಹಾಜರಿದ್ದು, ತೆಂಗಿನ ಎಳೆ ಗರಿಯಿಂದ ಭೂತದ ವೇಷದ ತಿರಿ ಮತ್ತು ಅಣಿಗೆ ಅಗತ್ಯವಾದ ಸಾಮಗ್ರಿಗಳನ್ನು ತಯಾರಿಸುವ ಕೆಲಸದಲ್ಲಿ ತೊಡಗಿರುತ್ತಿದ್ದ. ತೆಂಗಿನ ಎಳೆಗರಿಯಿಂದ ಅವರು ತಯಾರಿಸುತ್ತಿದ್ದ ಅಲಂಕಾರಿಕ ಸಾಮಗ್ರಿಗಳು ತುಂಬಾ ಆಕರ್ಷಕವಾಗಿರುತ್ತಿದ್ದವು.</p>



<p>ರಾತ್ರಿ ಕೋಲಕ್ಕೆ ಸಭೆ ಪೂರ್ತಿ ಸೇರುವ ಮೊದಲೇ ನಾವು ಹುಡುಗರು ಮತ್ತೆ ಹಾಜರ್. ಭೂತ ವೇಷ ಕಟ್ಟುವುದನ್ನು ಕುತೂಹಲದ ಕಣ್ಣುಗಳಿಂದ ನೋಡುತ್ತಿದ್ದೆವು. ನಾಗಸ್ವರ, ತಾಸೆ, ಡೋಲು, ಬೇಂಡು ವಾಲಗದ ಅಬ್ಬರದಲ್ಲಿ ದೈವಕ್ಕೆ ಆವೇಶ ಬರುವಾಗ ನಮಗೆಲ್ಲ ಒಂದು ರೀತಿ ಭಯ. ನಮಗೆ ಅದು ಏನಾದರೂ ಮಾಡಿದರೆ?! ಒಂದು ಬಾರಿ ಆವೇಶ ಇಳಿದ ಮೇಲೆ ಅಲ್ಲಿ ಸೇರಿದವರನ್ನು ರಂಜಿಸಲು ಅದು ಸಿನಿಮಾ ಸಂಗೀತಕ್ಕೆ ಹೆಜ್ಜೆ ಹಾಕುವುದೂ ಇತ್ತು. ನಡು ನಡುವೆ ಮತ್ತೆ ಆವೇಶ. ಮತ್ತದೇ ಪುನರಾವರ್ತನೆ. ಇದು ಬಹುತೇಕ ರಾತ್ರಿಯಿಡೀ ನಡೆಯುತ್ತಿತ್ತು.</p>



<p></p>



<figure class="wp-block-gallery has-nested-images columns-default is-cropped wp-block-gallery-1 is-layout-flex wp-block-gallery-is-layout-flex">
<div><a href="https://peepalmedia.com/wp-content/uploads/2022/10/WhatsApp-Image-2022-10-17-at-4.38.31-PM.jpeg" class="td-modal-image"><figure class="wp-block-image size-large"><img loading="lazy" decoding="async" width="1080" height="593" data-id="11503" src="https://peepalmedia.com/wp-content/uploads/2022/10/WhatsApp-Image-2022-10-17-at-4.38.31-PM.jpeg" alt="" class="wp-image-11503" srcset="https://peepalmedia.com/wp-content/uploads/2022/10/WhatsApp-Image-2022-10-17-at-4.38.31-PM.jpeg 1080w, https://peepalmedia.com/wp-content/uploads/2022/10/WhatsApp-Image-2022-10-17-at-4.38.31-PM-300x165.jpeg 300w, https://peepalmedia.com/wp-content/uploads/2022/10/WhatsApp-Image-2022-10-17-at-4.38.31-PM-1024x562.jpeg 1024w, https://peepalmedia.com/wp-content/uploads/2022/10/WhatsApp-Image-2022-10-17-at-4.38.31-PM-768x422.jpeg 768w, https://peepalmedia.com/wp-content/uploads/2022/10/WhatsApp-Image-2022-10-17-at-4.38.31-PM-150x82.jpeg 150w, https://peepalmedia.com/wp-content/uploads/2022/10/WhatsApp-Image-2022-10-17-at-4.38.31-PM-696x382.jpeg 696w, https://peepalmedia.com/wp-content/uploads/2022/10/WhatsApp-Image-2022-10-17-at-4.38.31-PM-1068x586.jpeg 1068w" sizes="auto, (max-width: 1080px) 100vw, 1080px" /><figcaption>ಫೋಟೋ ಕೃಪೆ: ಉಷಾ ಕಟ್ಟೆಮನೆ</figcaption></figure></a></div>
</figure>



<p></p>



<p>ಎರಡೋ ಮೂರೋ ದಿನ ನಡೆಯುತ್ತಿದ್ದ ಕೋಲದಲ್ಲಿ ಕೊನೆಯ ದಿನದ ಚಿತ್ರಗಳು ತುಂಬಾ ನೆನಪಿನಲ್ಲಿವೆ. ಅದಕ್ಕೆ ಕಾರಣ ಅಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿ. ಊರಿನ ಬಹುತೇಕ ಶೂದ್ರ ಸಮುದಾಯವರು ಅಲ್ಲಿಗೆ  ಕೋಳಿ ಕೊಡುತ್ತಿದ್ದರು. ಕೋಳಿಯ ಕಾಲಿಗೆ ಅದರ ಮಾಲೀಕನ  ಗುರುತಿನ ಚೀಟಿ ಕಟ್ಟಲಾಗುತ್ತಿತ್ತು. ಇಬ್ಬರು ಕೋಳಿಯನ್ನು ಹಿಡಿದುಕೊಳ್ಳುತ್ತಿದ್ದರು. ಒಬ್ಬರು ಅತ್ತಲಿಂದ ಇನ್ನೊಬ್ಬರು ಇತ್ತಲಿಂದ. ಕೋಳಿಯ ಕತ್ತನ್ನು ಕತ್ತರಿಸಿ ಗದ್ದೆಗೆ ಎಸೆಯುತ್ತಿದ್ದರು. ರುಂಡ ರಹಿತ ಕೋಳಿ ಸ್ವಲ್ಪ ಹೊತ್ತು ಜಿಗಿದಾಡಿ ಕೊನೆಗೆ ಸ್ತಬ್ಧವಾಗುತ್ತಿತ್ತು. ಮುಸ್ಸಂಜೆಯ ಹೊತ್ತು, ಅನೇಕರ ಕೋಳಿಗಳು ಗದ್ದೆಯ ತುಂಬಾ ಚದುರಿರುತ್ತಿದ್ದುದರಿಂದ ನಮ್ಮ ಕೋಳಿ ಹುಡುಕಲು ಬಹಳ ಸಮಯ ಹಿಡಿಯುತ್ತಿತ್ತು. ಕೋಳಿಯ ರುಂಡ ಅದನ್ನು ಕತ್ತರಿಸಿದವರಿಗೆ. ನಮಗೆ ಮುಂಡ ಮಾತ್ರ.</p>



<p>ಇನ್ನೂ ಹೆಚ್ಚು ಭಯ ಹುಟ್ಟಿಸುತ್ತಿದ್ದುದು ಆ ರಾತ್ರಿಯ ಪ್ರಾಣಿ ಬಲಿಯ ದೃಶ್ಯ. ‘ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು! ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತು! ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು. ಕೊಂದವರುಳಿದರೆ ಕೂಡಲಸಂಗಮದೇವ ?’ ಎಂದು ಬಸವಣ್ಣ ಹೇಳಿದ್ದರಲ್ಲ, ಈ ವಚನಗಳ ಮೊದಲ ಸಾಲುಗಳನ್ನು ಅಲ್ಲಿ ಕಣ್ಣಾರೆ ನೋಡುತ್ತಿದ್ದೆವು. ಬಲಿ ಕೊಡಲಿರುವ ಆಡು, ಕುರಿಗಳ ಕೊರಳಿಗೆ ಹಾರ ಹಾಕಿ ಅವನ್ನು ದೈವಸಾನದ ಸುತ್ತ ಪ್ರದಕ್ಷಿಣೆ ಒಯ್ಯಲಾಗುತ್ತಿತ್ತು. ಮುಂದೇನಾಗಲಿದೆ ಎಂಬ ಅರಿವೇ ಇರದ ಅವು ಕೊರಳಿಗೆ ಹಾಕಿದ ಹೂವಿನ ಹಾರವನ್ನೇ ಕಿತ್ತು ತಿನ್ನುತ್ತಾ ಸುತ್ತುಬರುತ್ತಿದ್ದವು.</p>



<p>ಇನ್ನಷ್ಟು ರಾತ್ರಿಯಾಗಿ ಬಲಿಯ ಸಮಯ ಹತ್ತಿರವಾಗುತ್ತಿದ್ದಂತೆ ಪ್ರಾಣಿಯ ತಲೆ ಕಡಿಯುವ ವ್ಯಕ್ತಿಗೆ ಹರಿತವಾದ ಕತ್ತಿಯನ್ನು ಕೊಡುತ್ತಿದ್ದರು. ಕತ್ತಿ ತೆಗೆದುಕೊಳ್ಳುವ ವರೆಗೂ ಎಲ್ಲರಂತೆ ಶಾಂತವಾಗಿರುವ ವ್ಯಕ್ತಿ, ಕೈಗೆ ಕತ್ತಿ ಬರುತ್ತಲೇ ಮೈಮೇಲೆ ಆವೇಶ ಬಂದು ಮೈ ಅದುರಿಸುತ್ತಾ ಜಿಗಿಯುತ್ತಿದ್ದ. ನಮಗೋ ಭಯ. ಆ ಕತ್ತಿಯಿಂದ ನಮ್ಮ ತಲೆ ಕತ್ತರಿಸಿದರೆ?! ದೂರ ಓಡಿ ಹೋಗಿ ನಿಂತು ಮುಂದಿನ ಘಟನೆ ನೋಡುತ್ತಿದ್ದೆವು. ದೈವಸಾನದ ಅಂಗಳದಲ್ಲಿ ಒಬ್ಬರು ಬಲಿಪ್ರಾಣಿಯ ಹಿಂಗಾಲನ್ನು ಹಿಡಿದುಕೊಳ್ಳುತ್ತಿದ್ದರು. ಇನ್ನೊಬ್ಬರು ಅದರ ಕೊರಳಿಗೆ ಹಗ್ಗ ಹಾಕಿ ಅದನ್ನು ಎಳೆದು ಹಿಡಿಯುತ್ತಿದ್ದರು. ಮೈ ಮೇಲೆ ಆವೇಶ ಬಂದ ವ್ಯಕ್ತಿ ವಿಚಿತ್ರ ದನಿಯೊಂದಿಗೆ ಆರ್ಭಟಿಸುತ್ತಾ ಕತ್ತಿಯಿಂದ ಪ್ರಾಣಿಯ ಕತ್ತಿಗೆ ಬೀಸುತ್ತಿದ್ದ. ಬಹುತೇಕ ಒಂದೇ ಏಟಿಗೆ ರುಂಡ ಮತ್ತು ಮುಂಡ ಬೇರೆಯಾಗುತ್ತಿತ್ತು.</p>



<p>ಇದೇ ರೀತಿ ಉಳಿದ ಪ್ರಾಣಿಗಳನ್ನೂ ತಂದು ಬಲಿಕೊಡುತ್ತಿದ್ದರು. ಕತ್ತು ಕತ್ತರಿಸಿದ ಬಳಿಕ ಚಿಮ್ಮುತ್ತಿದ್ದ ರಕ್ತವನ್ನು ದೈವಕ್ಕೆಂದು ಇರಿಸಿದ ಅನ್ನದ ರಾಶಿಗೆ ಚಿಮುಕಿಸುತ್ತಿದ್ದರು. ಆನಂತರ ಆ ಪ್ರಾಣಿಗಳ ದೇಹವನ್ನು ಕತ್ತರಿಸಿ, ಮಾಂಸ ಮಾಡಿ ಪ್ರಸಾದ ರೂಪದಲ್ಲಿ ಎಲ್ಲರಿಗೂ ಹಂಚುತ್ತಿದ್ದರು. ನನ್ನಪ್ಪ ಸರಕಾರಿ ಉದ್ಯೋಗಿಯಾಗಿದ್ದುದರಿಂದ ನಮಗೂ ಮಟನ್ ನಲ್ಲಿ ಒಂದು ಪಾಲು ಬರುತ್ತಿತ್ತು. ಇದು ನಾನು ಸುಮಾರು ನಲವತ್ತೈದು ವರ್ಷದ ಹಿಂದೆ ನೋಡಿದ ಮತ್ತು ಇನ್ನೂ ಮನಸಿನಲ್ಲಿ ಹಸಿರಾಗಿಯೇ ಇರುವ ದೈವ ಕೋಲವೊಂದರ ಚಿತ್ರ.</p>



<p></p>



<figure class="wp-block-gallery has-nested-images columns-default is-cropped wp-block-gallery-2 is-layout-flex wp-block-gallery-is-layout-flex">
<div><a href="https://peepalmedia.com/wp-content/uploads/2022/10/WhatsApp-Image-2022-10-17-at-4.39.56-PM-1024x551.jpeg" class="td-modal-image"><figure class="wp-block-image size-large"><img loading="lazy" decoding="async" width="1024" height="551" data-id="11508" src="https://peepalmedia.com/wp-content/uploads/2022/10/WhatsApp-Image-2022-10-17-at-4.39.56-PM-1024x551.jpeg" alt="" class="wp-image-11508" srcset="https://peepalmedia.com/wp-content/uploads/2022/10/WhatsApp-Image-2022-10-17-at-4.39.56-PM-1024x551.jpeg 1024w, https://peepalmedia.com/wp-content/uploads/2022/10/WhatsApp-Image-2022-10-17-at-4.39.56-PM-300x161.jpeg 300w, https://peepalmedia.com/wp-content/uploads/2022/10/WhatsApp-Image-2022-10-17-at-4.39.56-PM-768x413.jpeg 768w, https://peepalmedia.com/wp-content/uploads/2022/10/WhatsApp-Image-2022-10-17-at-4.39.56-PM-150x81.jpeg 150w, https://peepalmedia.com/wp-content/uploads/2022/10/WhatsApp-Image-2022-10-17-at-4.39.56-PM-696x374.jpeg 696w, https://peepalmedia.com/wp-content/uploads/2022/10/WhatsApp-Image-2022-10-17-at-4.39.56-PM-1068x575.jpeg 1068w, https://peepalmedia.com/wp-content/uploads/2022/10/WhatsApp-Image-2022-10-17-at-4.39.56-PM.jpeg 1080w" sizes="auto, (max-width: 1024px) 100vw, 1024px" /><figcaption><em>ಫೋಟೋ ಕೃಪೆ: ಉಷಾ ಕಟ್ಟೆಮನೆ</em></figcaption></figure></a></div>
</figure>



<p></p>



<p>ಯಕ್ಷಗಾನ, ಕೋಲ, ಕಂಬಳ, ಕೋಳಿ ಕಟ್ಟಗಳನ್ನು ಹೊರತುಪಡಿಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಕಲ್ಪಿಸಿಕೊಳ್ಳುವುದು ಬಹಳ ಕಷ್ಟ. ಇವು ಕರಾವಳಿಯ ಸಾಂಸ್ಕೃತಿಕ ಚಹರೆಯಲ್ಲಿ ವಹಿಸಿದ ಪಾತ್ರ ದೊಡ್ಡದು. ಮಳೆಗಾಲ ಕಳೆದ ನಂತರ ರಾತ್ರಿಯ ನೀರವ ಸಮಯ ಮಂಗಳೂರಿನಂತಹ ಮಹಾನಗರದೊಳಗೆ ಕೂಡಾ ನೀವು ಕಿವಿಗೊಟ್ಟು ಆಲಿಸಿದರೆ ಈಗಲೂ ಎಲ್ಲೋ ಯಕ್ಷಗಾನದ ಚೆಂಡೆ ಪೆಟ್ಟು,ಇನ್ನೆಲ್ಲೋ ಕೋಲದ ತಾಸೆ ಪೆಟ್ಟಿನ ಸದ್ದು, ದೈವದ ಆರ್ಭಟ ನಿಮಗೆ ಕೇಳಿಸದಿರದು.</p>



<p>ಪರಂಪರೆಯಿಂದ ಬಂದ ಈ ಜನಪದ ಕಲೆ, ಕ್ರೀಡೆ, ಸಂಪ್ರದಾಯಗಳೆಲ್ಲ ಹಿಂದಿನಂತೆಯೇ ಈಗಲೂ ಇವೆಯೇ? ಮುಂದೆಯೂ ಇರಬಹುದೇ? ಎಂದು ಕೇಳಿದರೆ ಉತ್ತರಿಸುವುದು ಬಹಳ ಕಷ್ಟವೇನಲ್ಲ. ಯಾಕೆಂದರೆ, ಇಲ್ಲಿ ಎಲ್ಲವೂ ಬದಲಾಗುತ್ತಿವೆ. ತೀವ್ರ ಗತಿಯಲ್ಲಿ ವಾಣಿಜ್ಯೀಕರಣಗೊಳ್ಳುತ್ತಿವೆ. ಯಕ್ಷಗಾನ ಇರಬಹುದು, ಕಂಬಳ, ದೈವಾರಾಧನೆ ಇರಬಹುದು ಇವೆಲ್ಲ ಮೂಲತಃ ಕೃಷಿ ಸಂಸ್ಕೃತಿಯೊಂದಿಗೆ ಸಂಬಂಧ ಇಟ್ಟುಕೊಂಡವು. ಕೃಷಿ ಕೆಲಸದ ಆನಂತರ ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ನಮ್ಮ ಜನಪದರು ಯಕ್ಷಗಾನವನ್ನು ಆರಂಭಿಸಿದರು ಎಂಬ ಒಂದು ವಾದವೂ ಇದೆ. ಟೆಂಟಿನ ಮೇಳಗಳು ಊರೂರು ತಿರುಗುವಾಗ ಹೆಚ್ಚಾಗಿ ಯಕ್ಷಗಾನ ಬಯಲಾಟ ನಡೆಸುತ್ತಿದ್ದುದು ಬೇಸಗೆಯ ಭತ್ತದ ಗದ್ದೆಗಳಲ್ಲಿ. ಕಂಬಳವಂತೂ&nbsp; ನೇರವಾಗಿ ಭತ್ತದ ಗದ್ದೆಗಳೊಂದಿಗೆ ಸಂಬಂಧ ಇದ್ದಂತಹ ಒಂದು ಜನಪದ ಕ್ರೀಡೆ. ಬಿತ್ತನೆಗೆ ಸಿದ್ಧವಾದ ಗದ್ದೆಯಲ್ಲಿಯೇ ಕಂಬಳ ನಡೆಯುತ್ತಿದ್ದುದು. ದೈವಾರಾಧನೆಯೂ ಕೃಷಿ ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಇರಿಸಿಕೊಂಡ ಒಂದು ಆರಾಧನಾ ಸಂಪ್ರದಾಯ. ಅಲ್ಲಿ ಬಳಕೆಯಾಗುವುದೆಲ್ಲ ಪ್ರಾಕೃತಿಕವಾಗಿ ಸಿಗುವ ಪರಿಕರಗಳು.</p>



<p>ಊಳಿಗಮಾನ್ಯ ವ್ಯವಸ್ಥೆಯ ಜತೆ ಜತೆಗೆ ಹೆಜ್ಜೆ ಹಾಕುತ್ತ ಬೆಳೆದುಬಂದ ಸಂಪ್ರದಾಯ ದೈವಾರಾಧನೆ. ಇಡೀ ಕರಾವಳಿಯು ಕೃಷಿಯಲ್ಲಿ ತೊಡಗಿಕೊಂಡಿದ್ದ ಕಾಲದಲ್ಲಿ ಗುತ್ತಿನ ಮನೆಗಳು ವ್ಯಾಪಕವಾಗಿದ್ದವು. ದೈವಗಳು ಗುತ್ತಿನ ಯಜಮಾನನನ್ನು ಉದ್ದೇಶಿಸಿ ‘ಗುತ್ತಿನಾರೇ’ (ಗುತ್ತಿನ ಯಜಮಾನರೇ) ಎಂದು ಸಂಬೋಧಿಸುತ್ತಿದ್ದವು. ಭೂಸುಧಾರಣೆಯಲ್ಲಿ ಅನೇಕ ಗುತ್ತಿನ ಯಜಮಾನರು ಜಮೀನು ಕಳೆದುಕೊಂಡು, ಭೂಮಿಯೆಲ್ಲ ವಿಭಾಗವಾಗಿ ಕೊನೆಗೆ ಹೆಸರಿಗಷ್ಟೇ ಗುತ್ತಿನ ಯಜಮಾನರಾಗಿ ಉಳಿದರು. ಈಗಲೂ ದೈವ ಅವರನ್ನು ಸಂಬೋಧಿಸುವುದು ‘ಗುತ್ತಿನಾರೇ’ ಎಂದೇ!</p>



<p>ಕ್ರಮೇಣ ತುಳುನಾಡಿನ ಕೃಷಿ ವಲಯದಲ್ಲಿ ತೀವ್ರ ಗತಿಯ ಸ್ಥಿತ್ಯಂತರ ಸಂಭವಿಸಿತು. ಭತ್ತ ಕೃಷಿ ಬಹುತೇಕ ಮಾಯವಾಗಿ ತೋಟಗಳು ಕಾಣಿಸಿಕೊಂಡವು. ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡು ಜನ ವಾಣಿಜ್ಯ ಚಟುವಟಿಕೆಗಳಲ್ಲಿ ಹೆಚ್ಚು ಆಸಕ್ತರಾದರು. ಕೃಷಿಯನ್ನೇ ಅವಲಂಬಿಸಿದ್ದ ಅನೇಕರು ಹೆಚ್ಚು ಸಂಪಾದನೆಯ ಉದ್ಯೋಗ ಅರಸುತ್ತಾ ಬೊಂಬಾಯಿ, ಬೆಂಗಳೂರು, ಕೊಲ್ಲಿ ರಾಷ್ಟ್ರ ಎಂದೆಲ್ಲ ಹೊರನಡೆಯುತ್ತಿದ್ದಂತೆ ಅಪಾರ ಪ್ರಮಾಣದ ಭತ್ತದ ಗದ್ದೆಗಳು ಹಡಿಲು ಬಿದ್ದವು. ಕೃಷಿ ಭೂಮಿಯ ಮೇಲೆ ವಾಣಿಜ್ಯ ಕಟ್ಟಡಗಳು ತಲೆ ಎತ್ತಿದವು. ಹೀಗೆ ಕೃಷಿಯೇ ಇಲ್ಲವಾದ ಮೇಲೆ ಕೃಷಿ ಸಂಸ್ಕೃತಿಯನ್ನೇ ಅವಲಂಬಿಸಿದ ಜನಪದ ಕ್ರೀಡೆಗಳು, ಅರಾಧನಾ ಸಂಪ್ರದಾಯಗಳ ಪರಿಸ್ಥಿತಿ ಏನಾಗಬಹುದು?</p>



<p></p>



<figure class="wp-block-gallery has-nested-images columns-default is-cropped wp-block-gallery-3 is-layout-flex wp-block-gallery-is-layout-flex">
<figure class="wp-block-image size-large"><img loading="lazy" decoding="async" width="800" height="700" data-id="11510" src="https://peepalmedia.com/wp-content/uploads/2022/10/WhatsApp-Image-2022-10-17-at-4.40.54-PM.jpeg" alt="" class="wp-image-11510" srcset="https://peepalmedia.com/wp-content/uploads/2022/10/WhatsApp-Image-2022-10-17-at-4.40.54-PM.jpeg 800w, https://peepalmedia.com/wp-content/uploads/2022/10/WhatsApp-Image-2022-10-17-at-4.40.54-PM-300x263.jpeg 300w, https://peepalmedia.com/wp-content/uploads/2022/10/WhatsApp-Image-2022-10-17-at-4.40.54-PM-768x672.jpeg 768w, https://peepalmedia.com/wp-content/uploads/2022/10/WhatsApp-Image-2022-10-17-at-4.40.54-PM-150x131.jpeg 150w, https://peepalmedia.com/wp-content/uploads/2022/10/WhatsApp-Image-2022-10-17-at-4.40.54-PM-696x609.jpeg 696w" sizes="auto, (max-width: 800px) 100vw, 800px" /><figcaption>ಪಂಜುರ್ಲಿ ಭೂತದ ಮೊಗ ( ಮುಖವಾಡ)</figcaption></figure>
</figure>



<p></p>



<p>ಏನಾಗಬಹುದೋ ಅದೇ ಅಗುತ್ತಿದೆ. ಸಿನಿಮಾ ಒಂದರ ಕಾರಣವಾಗಿ ಇಲ್ಲಿನ ದೈವಾರಾಧನೆಯ ಚರ್ಚೆಗಳು ಮುನ್ನೆಲೆಗೆ ಬಂದಿರಬಹುದು. ಹೊರಗಿನವರಲ್ಲಿ ಅದರ ಬಗ್ಗೆ ಸುಂದರ ಕಲ್ಪನೆ, ಭವ್ಯ ಭ್ರಮೆ ಸೃಷ್ಟಿಯಾಗಿರಬಹುದು. ಆದರೆ ವಾಸ್ತವ ಅಷ್ಟು ಖುಷಿ ತರುವಂತಿಲ್ಲ. ವೈದಿಕ ಸಂಸ್ಕೃತಿಯೊಂದಿಗೆ ಯಾವ ಸಂಬಂಧವೂ ಇರದ ದೈವ, ದೈವಸಾನಗಳನ್ನು ವೈದಿಕ ಶಕ್ತಿಗಳು ಹಿಡಿತಕ್ಕೆ ತೆಗೆದುಕೊಳ್ಳುತ್ತಿವೆ. ದೈವಗಳನ್ನು ಪುರಾಣ ಕತೆಗಳಿಗೆ ಜೋಡಿಸಿ, ದೈವಗಳ ಹೆಸರುಗಳನ್ನು ಸಂಸ್ಕೃತೀಕರಿಸಿ ಸ್ಥಳೀಯ ಸಂಸ್ಕೃತಿಯ ಅಸ್ಮಿತೆಗಳನ್ನು ಇಲ್ಲವಾಗಿಸುವ ಕೆಲಸ ಭರದಿಂದ ನಡೆದಿದೆ.</p>



<p>ವಾಣಿಜ್ಯೀಕರಣ ಇತರೆಲ್ಲ ಕ್ಷೇತ್ರಗಳನ್ನು ಪ್ರಭಾವಿಸಿದಂತೆ ದೈವಾರಾಧನೆಯನ್ನೂ ಬಿಟ್ಟಿಲ್ಲ. ಪರಂಪರೆಯ ಕಾರಣಕ್ಕೆ ಅನಿವಾರ್ಯವಾಗಿ ನಡೆಯುತ್ತಿವೆ ಎನ್ನುವುದನ್ನು ಹೊರತು ಪಡಿಸಿದರೆ ಅದೂ ಆಂತರ್ಯದಲ್ಲಿ ದೇವರಿಲ್ಲದ ಗುಡಿಯಾಗುತ್ತಿದೆ. ದೈವದ ಕೋಲಗಳು ಈಗ ದುಬಾರಿ ಬಾಬತ್ತಾಗಿವೆ. ‘ಇವತ್ತು ಎರಡು ದೈವಗಳ ದರ್ಶನ ಇದೆ, ಒಟ್ಟು ಬಜೆಟ್ ನಲವತ್ತೆಂಟು ಸಾವಿರ ರುಪಾಯಿ’ ಎಂದು ಈಗಷ್ಟೇ ಒಬ್ಬರು ಹೇಳಿದರು. <a>ಭೂತ </a>ಕಟ್ಟುವವರು ಆಯಾ ದಿನವೇ, ಸ್ಥಳದಲ್ಲಿಯೇ ಕೋಲಕ್ಕೆ ಅಗತ್ಯವಾದ ತಿರಿ, ಅಣಿಗಳನ್ನೆಲ್ಲ ಸಿದ್ಧಪಡಿಸುತ್ತಿದ್ದರು. ಈಗ ರೆಡಿಮೇಡ್ ವೇಷ ಭೂಷಣಗಳ ಕಾಲ. ಒಂದು ಭೂತ ಕಟ್ಟಿದ್ದಕ್ಕೆ ಐದರಿಂದ ಹತ್ತು ಸಾವಿರ ಕೊಡಬೇಕಾಗುತ್ತದೆ. ಹೊಸಬರು ಭೂತ ಕಟ್ಟಲು ಸಿದ್ಧರಿಲ್ಲ. ಹಾಗಾಗಿ ಹಳೆಯ ತಲೆಮಾರು ಮಾತ್ರ ಇದರಲ್ಲಿ ಮುಂದುವರಿಯುತ್ತಿದೆ.</p>



<p>ಈ ಎಲ್ಲದರ ನಡುವೆಯೂ, ಸಂಸ್ಕೃತಿಯನ್ನು ಉಳಿಸಬೇಕು ಎಂಬ ಮಾತು ಆಗಾಗ ಕೇಳಿಬರುತ್ತಿರುತ್ತದೆ. ಆದರೆ ಯಾವ ಸಂಸ್ಕೃತಿಯನ್ನು ಉಳಿಸಬೇಕು? ಸಂಸ್ಕೃತಿಯ ಪ್ರತಿಗಾಮಿ ಅಂಶಗಳನ್ನೂ ಉಳಿಸಿಕೊಳ್ಳಬೇಕೇ? ಆಚರಣೆಗಳೆಲ್ಲವೂ ಮೌಢ್ಯವಲ್ಲವಾದರೂ, ಮೌಢ್ಯಗಳೆಲ್ಲವೂ ಆಚರಿಸಲ್ಪಡುವ ಮತ್ತು ಮೂಢನಂಬಿಕೆಗಳೆಲ್ಲವೂ ಸಂಭ್ರಮಿಸಲ್ಪಡುವ ಸಮಾಜದಲ್ಲಿ ಯಾವುದನ್ನು ಎಷ್ಟು ಉಳಿಸಿಕೊಳ್ಳಬೇಕು? ದೈವಾರಾಧನೆಯ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎನ್ನುವುದಾದರೆ ಭೂತ ಕಟ್ಟುವವನ ಮಗನೂ ಭೂತ ಕಟ್ಟಿಕೊಂಡೇ ಇರಬೇಕೇ? ಆತನಿಗೂ ಸಾಮಾಜಿಕವಾಗಿ ಮೇಲ್ಮುಖ ಚಲನೆ ಬೇಡವೇ? ಎಂಬ ಅನೇಕ ಪ್ರಶ್ನೆಗಳಿವೆ. ಉತ್ತರ, ಪರಿಹಾರ ಸುಲಭವಲ್ಲ.</p>



<p>(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</p>



<p></p>



<div><a href="https://peepalmedia.com/wp-content/uploads/2022/10/WhatsApp-Image-2022-10-17-at-5.20.35-PM.jpeg" class="td-modal-image"><figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/10/WhatsApp-Image-2022-10-17-at-5.20.35-PM.jpeg" alt="" class="wp-image-11563" width="222" height="209"/><figcaption><strong>ಶ್ರೀನಿವಾಸ ಕಾರ್ಕಳ</strong><br><strong>ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.</strong></figcaption></figure></a></div>



<p></p>
]]></content:encoded>
					
		
		
			</item>
		<item>
		<title>&#8216;ಕಾಂತಾರ&#8217; ಗೆಲುವಿನ ಹಿಂದಿನ ಶೂದ್ರ ಸೊಗಡು, ಕೋಳಿ-ಹೆಂಡದ ಘಮಲು</title>
		<link>https://peepalmedia.com/kantara-geluvina-hindena-shrudra-sogadu-koli-hendada-ghamalu/</link>
		
		<dc:creator><![CDATA[K P Suresh]]></dc:creator>
		<pubDate>Thu, 06 Oct 2022 06:29:31 +0000</pubDate>
				<category><![CDATA[ವಿಶೇಷ]]></category>
		<category><![CDATA[ಸಿನಿಮಾ]]></category>
		<category><![CDATA[bengalure]]></category>
		<category><![CDATA[cinema]]></category>
		<category><![CDATA[cinema news]]></category>
		<category><![CDATA[culture]]></category>
		<category><![CDATA[flim]]></category>
		<category><![CDATA[india]]></category>
		<category><![CDATA[kaantara]]></category>
		<category><![CDATA[kannada]]></category>
		<category><![CDATA[kannada cinema]]></category>
		<category><![CDATA[kannada news]]></category>
		<category><![CDATA[karavali]]></category>
		<category><![CDATA[karnataka]]></category>
		<category><![CDATA[movie]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sandalwood]]></category>
		<category><![CDATA[special]]></category>
		<guid isPermaLink="false">https://peepalmedia.com/?p=9013</guid>

					<description><![CDATA[ಐದೂವರೆ ಅಡಿಯ ಹುಲು ಮಾನವನೊಬ್ಬ ದೈತ್ಯ ಸ್ಕ್ರೀನಿನಲ್ಲಿ ಕಪ್ಪೆ ನೋಡಿದರೂ ಅವಾಕ್ಕಾಗುತ್ತಾನೆ. ಈ Larger than life ಸಿನೆಮಾದ ಬಂಡವಾಳ. ಮಾಧ್ಯಮವಾಗಿ ಅದು ರಂಗಭೂಮಿಗಿಂತ ಭಿನ್ನವಾಗಿರುವುದು ಈ ಅಂಶಕ್ಕಷ್ಟೇ ಅಲ್ಲ, ಸುಲಭವಾಗಿ visuals ಮೂಲಕ ಪ್ರೇಕ್ಷಕರನ್ನು ಯಾಮಾರಿಸುವ ತಂತ್ರದ ಮೂಲಕ. ಪ್ರೇಕ್ಷಕನೊಬ್ಬ ಹಂಬಲಿಸುವ ಭಾವ ಮತ್ತು ಆಂಗಿಕ ಸಾಧ್ಯತೆಗಳನ್ನು ರಂಗಭೂಮಿ ತಕ್ಷಣದ ವರ್ತಮಾನದಲ್ಲಿ ಮುಂದಿಡುತ್ತಾ ಹೋದರೆ, ಸಿನೆಮಾಕ್ಕೆ ಟೇಕ್ ಗಳ ಮತ್ತು ಎಡಿಟಿಂಗ್ ನ ಲಾಭವಿದೆ ಎಂಬುದನ್ನು ನಾವು ಮರೆಯಬಾರದು. ಸಿಸಿಲ್ ಡಿಮೆಲೋನಿಂದ ಈ ಮಾಧ್ಯಮದ ಶಕ್ತಿ [&#8230;]]]></description>
										<content:encoded><![CDATA[
<p style="font-size:20px">ಐದೂವರೆ ಅಡಿಯ ಹುಲು ಮಾನವನೊಬ್ಬ ದೈತ್ಯ ಸ್ಕ್ರೀನಿನಲ್ಲಿ ಕಪ್ಪೆ ನೋಡಿದರೂ ಅವಾಕ್ಕಾಗುತ್ತಾನೆ. ಈ Larger than life ಸಿನೆಮಾದ ಬಂಡವಾಳ. ಮಾಧ್ಯಮವಾಗಿ ಅದು ರಂಗಭೂಮಿಗಿಂತ ಭಿನ್ನವಾಗಿರುವುದು ಈ ಅಂಶಕ್ಕಷ್ಟೇ ಅಲ್ಲ, ಸುಲಭವಾಗಿ visuals ಮೂಲಕ ಪ್ರೇಕ್ಷಕರನ್ನು ಯಾಮಾರಿಸುವ ತಂತ್ರದ ಮೂಲಕ.</p>



<p style="font-size:20px">ಪ್ರೇಕ್ಷಕನೊಬ್ಬ ಹಂಬಲಿಸುವ ಭಾವ ಮತ್ತು ಆಂಗಿಕ ಸಾಧ್ಯತೆಗಳನ್ನು ರಂಗಭೂಮಿ ತಕ್ಷಣದ ವರ್ತಮಾನದಲ್ಲಿ ಮುಂದಿಡುತ್ತಾ ಹೋದರೆ, ಸಿನೆಮಾಕ್ಕೆ ಟೇಕ್ ಗಳ ಮತ್ತು ಎಡಿಟಿಂಗ್ ನ ಲಾಭವಿದೆ ಎಂಬುದನ್ನು ನಾವು ಮರೆಯಬಾರದು. ಸಿಸಿಲ್ ಡಿಮೆಲೋನಿಂದ ಈ ಮಾಧ್ಯಮದ ಶಕ್ತಿ ನಮಗೆ ಅರಿವಿಗೆ ಬಂದಿದೆ. ಇರಲಿ.</p>



<p style="font-size:20px"><strong>ಈಗ ಈ ಕಾಂತಾರ ಸಿನೆಮಾದ ಬಗ್ಗೆ</strong></p>



<p style="font-size:20px">ಈ ಸಿನೆಮಾದಲ್ಲಿ ಗರುಡ ಗಮನ.. ಪುಷ್ಪಾ, ಪುಲಿ, ಮುರುಗನ್ ಸಿನೆಮಾಗಳ ಅಂಶಗಳೆಲ್ಲಾ ಬೆರೆತಿದೆ. ಅಷ್ಟೇ ಅಲ್ಲ, ನಮ್ಮ ಈ ಹಿಂದಿ ಸಿನೆಮಾಗಳ ಅಷ್ಟಿಷ್ಟು ಅಂಶಗಳೂ ಢಾಳಾಗಿವೆ. A-moral (ನೀತಿ ಅತೀತ) ನಾಯಕನೊಬ್ಬನನ್ನು ವಿಜೃಂಭಿಸುವ ಬಗೆ ಇದು.</p>



<p style="font-size:20px">ಊರಿನ ಅನಾಮಿಕ ನೈತಿಕ ಲಂಗರು ಇಲ್ಲದ ಒಬ್ಬನನ್ನು ಹೀರೋ ಮಾಡುವ ಸಿನೆಮಾಗಳು ನಮ್ಮಲ್ಲಿ ಯಥೇಚ್ಛವಾಗಿವೆ. ಮದರ್ ಇಂಡಿಯಾದ ಹೀರೋನಿಂದ ದಿಲೀಪ್ ಕುಮಾರ್ ಅಮಿತಾಬ್ ಬಚ್ಚನ್ ವರೆಗೆ ಇದು ಕಾಲಕಾಲಕ್ಕೆ ಪುನರ್ಜನ್ಮ ಎತ್ತಿದೆ. ಹೊಸತೇನೂ ಇಲ್ಲ, ಇರುವುದು ಟ್ರೀಟ್ ಮೆಂಟಲ್ಲಿ ಮಾತ್ರ.</p>



<p style="font-size:20px">ಅದಕ್ಕೇ ಮಾರ್ಕ್ ಟ್ವೈನ್ ಹೇಳಿದ್ದು. “ ಜಗತ್ತಿನಲ್ಲಿ ಒಟ್ಟು ನೂರಾ ಎಂಟು ಕತೆಗಳಷ್ಟೇ ಇರೋದು. “ ಅಂತ. ಅದನ್ನೇ ಮತ್ತೆ ಮತ್ತೆ ಬರೆಸಿ ಹೊಸೆಯೋದಷ್ಟೇ ಕತೆಗಾರರ ಪ್ರತಿಭೆ.</p>



<p style="font-size:20px">ಸಿನೆಮಾಗಳು ಸಾಮಾಜಿಕ ವಾಸ್ತವ ಕಟ್ಟಿಕೊಡುತ್ತದೆಂಬ ಭ್ರಮೆ ನಮಗಿದೆ. ಅಲ್ಲಿ ನಿಜಕ್ಕೂ ಇರುವುದು visual realism ವಿವರಗಳು.</p>



<p style="font-size:20px"><strong>ಈ ಕಾಂತಾರ ನೋಡಿ</strong></p>



<p style="font-size:20px">ನಮ್ಮ ಯಾವ ಹಳ್ಳಿಯಲ್ಲೂ ನಯವಂಚಕ ವಿಲನ್ ಒಬ್ಬ ಸರಕಾರಿ ಅಧಿಕಾರಿ ಇರುವಾಗ ಬೆಟಾಲಿಯನ್ ನ ಕಟ್ಟಿಕೊಂಡು ಹಿಂಸೆಗಿಳಿಯುವುದಿಲ್ಲ. ಅಷ್ಟೇಕೆ, ನಮ್ಮ ಮರಗಳ್ಳರು ಸರಕಾರಿ ಅಧಿಕಾರಿ ಎದುರು ಸವಾಲಿನ ಮಾತೇ ಆಡುವುದಿಲ್ಲ.</p>



<p style="font-size:20px"><strong>ಇನ್ನೂ ವಾಸ್ತವ ಬೇಕೇ,</strong></p>



<p style="font-size:20px">ಯಾವ ಮರಗಳ್ಳನೂ ಮರ ಇದ್ದಂತೆ ಅದಕ್ಕೆ ಕೊಡಲಿ ಗರಗಸ ಹಾಕುವುದಿಲ್ಲ. ಮೊದಲು ಅದರ ರೆಂಬೆ –ಕೊಂಬೆ ಕಡಿದು ಅದನ್ನು ನಗ್ನವಾಗಿಸಿ ಆಮೇಲೆ ಅದನ್ನು ಉರುಳಿಸುತ್ತಾರೆ. ನಮ್ಮೂರಿನ ಫಟಿಂಗರು ಹತ್ತಡಿ ಉದ್ದದ ಮೋಪು ಕತ್ತರಿಸಿ ಹಗ್ಗದಲ್ಲಿ ಅದನ್ನು ಬೀಳಿಸುತ್ತಿದ್ದರು!</p>



<p style="font-size:20px">ಅರ್ಥಾತ್ ಈ ಸಿನೆಮಾ ಮಾಮೂಲಿ ಸಿನೆಮಾಗಳ ವ್ಯಾಕರಣವನ್ನೇ ಢಾಳಾಗಿ ಉಪಯೋಗಿಸಿದೆ. ನಮ್ಮನ್ನು ಕೂರಿಸುವುದು script ನ ಸೂಕ್ಷ್ಮಗಳಲ್ಲ! Visual detailಗಳ ಸೂಕ್ಷ್ಮ. ಅದರಲ್ಲೂ ಸನ್ನಿವೇಶವನ್ನು ವ್ಯಂಗ್ಯದ ಮಾತಿನ ಕಮೆಂಟುಗಳ ಮೂಲಕ ನಿಭಾಯಿಸುವುದರಲ್ಲಿ.</p>



<p style="font-size:20px">ಚಿತ್ರಕಥೆಯಲ್ಲಿ ಈ ವಾಸ್ತವದ ಸೂಕ್ಷ್ಮತೆ ಇದ್ದಿದ್ದರೆ ನಿರ್ದೇಶಕನಿಗೆ ಇದನ್ನು ನಿಭಾಯಿಸುವುದೇ ಕಷ್ಟವಾಗುತ್ತಿತ್ತು. ಧಣಿಯ ತಲೆ ಹಾರಿಸುವುದೂ ಕಷ್ಟವಾಗುತ್ತಿತ್ತು.</p>



<p style="font-size:20px">ಅಂದರೆ, ಸಿನೆಮಾ ನಿಜ ವಾಸ್ತವವನ್ನು ನೆಚ್ಚಿಕೊಂಡು ಕೂತರೆ ಅದಕ್ಕೆ larger than life ಆಯಾಮ ಪ್ರಾಪ್ತವಾಗುವುದಿಲ್ಲ. ಸಿನೆಮಾ ಕೊನೆಗೂ ಮುಟ್ಟಿದರೆ ಸಿಗದ ಭ್ರಮಾ projection!!</p>



<p style="font-size:20px">ಆದ್ದರಿಂದಲೇ ಚಿತ್ರಕಥೆ ಕ್ರೂಡ್ ಆಗಿ ತನ್ನ ಗುರಿಯತ್ತ ಸಾಗುತ್ತದೆ. ಅದಕ್ಕೆ ಒಬ್ಬ ಅಸಡ್ಡಾಳ ಒರಟ ಹೀರೋ ಬೇಕು. ವಿಲನ್ ಎಂದು ಭ್ರಮೆ ಹುಟ್ಟಿಸುವ ಕೊನೆಗೆ ಸಜ್ಜನನೆಂದು ಅರಿವಾಗುವ ಒಂದು ಪಾತ್ರ ಬೇಕು. ಜಂಜೀರ್ ಸಿನೆಮಾದಲ್ಲಿ ಪ್ರಾಣ್ ಈ ಪಾತ್ರಕ್ಕೆ ಹೊಸ ಆಯಾಮ ನೀಡಿದ್ದು. ದ್ವಂದ್ವದಲ್ಲಿರುವ ನಾಯಕಿ ಇರಬೇಕು. ನಾಜೂಕಿನ ವಿಲನ್ ಒಬ್ಬ ಇರಬೇಕು. (ಅಶ್ವಥ್ ಇಂಥಾ ಒಂದೆರಡು ಪಾತ್ರ ಮಾಡಿದ್ದರು!)</p>



<p style="font-size:20px">ಇದೇ ಕಾಂತಾರದ ಶಕ್ತಿ ಮತ್ತು ಆಳ ವಿಶ್ಲೇಷಣೆಯಲ್ಲಿ ಅದರ ವೀಕ್ ನೆಸ್.</p>



<p style="font-size:20px"><strong>ಸಿನೆಮಾ ಎಂದರೆ ಇಷ್ಟೇ</strong></p>



<p style="font-size:20px">ನಮ್ಮ ಪ್ರೇಕ್ಷಕರ aesthetic ಅನುಭವದ ಪ್ರೌಢಿಮೆ ಹೇಗಿದೆಯೆಂದರೆ ಅವರು ಇದನ್ನು ಸಿನೆಮಾ ಎಂದಷ್ಟೇ ನೋಡಬಲ್ಲರು. ಪದ್ಮಾವತ್ ಸಿನೆಮಾ ಬಂದಾಗ , ಅಲ್ಲಾವುದ್ದೀನ್ ಪಾತ್ರಧಾರಿ ಮಾತಾಡಿದಾಗಲೆಲ್ಲಾ ಶಿಳ್ಳು, ಚಿಲ್ಲರೆ ನಾಣ್ಯಗಳ ಸುರಿಮಳೆ ಆಗಿದ್ದನ್ನು ನಾನು ಕಂಡಿದ್ದೇನೆ.</p>



<p style="font-size:20px">ನಿತ್ಯದಲ್ಲಿ ಅಲ್ಲಾವುದ್ದೀನ್ ಒಬ್ಬ ಕೇಡಿ.!! ಅದು ಜನರಿಗೂ ಗೊತ್ತು. ಆದರೆ ಸಿನೆಮಾದಲ್ಲಿ ಅದೇಕೆ ಈ ಅಲ್ಲಾವುದ್ದೀನನನ್ನು ಮೆಚ್ಚುತ್ತಾರೆ? ಈ ಅರಿವು ಸಿನೆಮಾದವರಿಗೆ ಇರುವ ಕಾರಣವೇ ರಾಜ್ ಕುಮಾರ್ ರಾವಣನ ಪಾತ್ರ ಮಾಡಬಲ್ಲರು. ದರ್ಶನ್ ದುರ್ಯೋಧನನ ಪಾತ್ರ ಮಾಡಬಲ್ಲರು.</p>



<p style="font-size:20px">ಈ ವಿಚಿತ್ರ , ವಿರೋಧಾಭಾಸವೇ ಅಲ್ಲ. ಇದು ನಾವು ಪಾತ್ರವೊಂದನ್ನು ನೋಡುವ ರೀತಿ. ಈ aesthetic reception ಪ್ರೇಕ್ಷಕನ ಪ್ರೌಢಿಮೆಯೂ ಹೌದು. ನಿರ್ದೇಶಕ ಮತ್ತು ಪ್ರೇಕ್ಷಕನ ನಡುವಿನ ಒಪ್ಪಂದವೂ ಹೌದು.</p>



<p style="font-size:20px">ಕಾಂತಾರದಲ್ಲಿ ಹೀರೋ ತನ್ನ ಬೇಜವಾಬ್ದಾರಿ ಬದುಕಿನಿಂದ ಬದಲಾಗುವ purposeful transformation ಕೂಡಾ ಹೊಸದೇನಲ್ಲ. ಅದಕ್ಕೊಂದು ಬಲವಾದ ಕಾರಣ ನೀಡುವುದೇ script ನ ಸವಾಲು. ಇಲ್ಲಿ ಹೀರೋನ ಸಜ್ಜನ ತಮ್ಮನೊಬ್ಬನಿದ್ದಾನೆ. ಅವನನ್ನು ವಂಚನೆಯಲ್ಲಿ ಸಾಯಿಸಿದರೆ ಕತೆ ಮುಂದೆ ಓಡುತ್ತದೆ.</p>



<p style="font-size:20px">ಈ ಕ್ರೂಡ್ script ಕಾರಣಕ್ಕೇ ಈ ಸಿನೆಮಾ ಪೇಲವವಾಗಿ ಮುಗಿಯುವುದು. ಇಲ್ಲೂ ಆಧುನಿಕ ಸಿನೆಮಾದ ಬಲಹೀನತೆ ಇದೆ. State̲ = ಸರಕಾರವನ್ನು ಆದರ್ಶೀಕರಿಸುವುದು ಸುಲಭ. ಭೂಮಾಲೀಕನೊಬ್ಬನನ್ನು ಕೇಡಿಯಾಗಿಸುವುದು ಇನ್ನೂ ಸುಲಭ. ಸರಕಾರವನ್ನು ಕೇಡಿಯಾಗಿ ಚಿತ್ರಿಸಿ ನಿರ್ಮಾಪಕ/ ನಿರ್ದೇಶಕ ರಗಳೆ ಮಾಡಿಕೊಳ್ಳುವುದು ಕಷ್ಟದ ಕೆಲಸ. ನಮ್ಮ ಮಹಾ ಮಹತ್ವಾಕಾಂಕ್ಷಿ ನಿರ್ದೇಶಕರೂ ಕೂಡಾ ಈ end game ನಲ್ಲಿ ಶರಣಾಗಿದ್ದಾರೆ.</p>



<p style="font-size:20px">ಆದ್ದರಿಂದಲೇ ಈ ಸಿನೆಮಾ ಇಡೀ ಸಿನೆಮಾ ಸಿನೆಮಾದ ಸಿದ್ಧ ಸೂತ್ರವಾದ larger than Life+visual social ವಿವರಗಳ ತಂತ್ರದ ಮೂಲಕ ಪ್ರೇಕ್ಷಕನನ್ನು ಯಾಮಾರಿಸಿ ಗೆದ್ದಿದೆ.</p>



<p style="font-size:20px">ಕಾಂತಾರ ಇಷ್ಟವಾಗುವುದು ಈ ಸ್ಥಳೀಯ( ನೇಟಿವಿಟಿ ಅಂತಾರಲ್ಲ?) ಕ್ಯಾನ್ವಾಸನ್ನು ಢಾಳಾಗಿ ಬಳಸಿದ್ದರಲ್ಲಿ. ಕೊನೆಯ ಐದಾರು ನಿಮಿಷಗಳ ಇಂಟೆನ್ಸ್‌ ಪ್ರಸ್ತುತಿಯೂ ಚೆನ್ನಾಗಿದೆ.</p>



<p style="font-size:20px">ಇನ್ನು ಆರು ತಿಂಗಳ ಬಳಿಕ ಇನ್ನೊಂದು ಸಿನೆಮಾ ಬಂದರೆ ಅದಕ್ಕೂ ರೋಮಾಂಚನಗೊಳ್ಳಲು ಪ್ರೇಕ್ಷಕ ಸಿದ್ಧನಿದ್ದಾನೆ. Treatment ನ ಹೊಸತನ ಅಷ್ಟೇ ಅದರ ಮಾನದಂಡ.</p>



<p style="font-size:20px">ಇಷ್ಟು ದಿನ ದ.ಕದ ಭಾಷೆ , ಸಂಸ್ಕೃತಿ ಕನ್ನಡ ಸಿನೆಮಾ ಜಗತ್ತಿನಲ್ಲಿ ಹಾಸ್ಯದ ಸರಕಾಗಿತ್ತು. ದ.ಕ.ದ ಬಹಳಷ್ಟು ಕಲಾವಿದರು ಕನ್ನಡ ಸಿನೆಮಾದಲ್ಲಿದ್ದರೂ ಅವರೂ ಈ ಗಾಂಧಿನಗರಕ್ಕೆ ನಜರೊಪ್ಪಿಸಿದವರು.</p>



<p style="font-size:20px">ಒಂದು ಮೊಟ್ಟೆಯ ಕತೆ, ಗರುಡ ಗಮನ.. ಗಳ ಬಳಿಕ ಈಗ ಕಾಂತಾರ ಸ್ಥಳೀಯ ಭಾಷೆ, ಸಂಸ್ಕೃತಿಯ ಸೊಗಡನ್ನು ಒಂದು ಜಗತ್ತಾಗಿ ಬಿಂಬಿಸಿದೆ. ಈ ಸೊಗಡು ಪೂರಾ ಶೂದ್ರ ಸೊಗಡು ಕೂಡಾ.! ಕೋಳಿ, ಹೆಂಡದ ಘಮಲು ಗಮನಿಸಬೇಕು.! ದ.ಕ.ದ ಜನಿವಾರದ ಭಟ್ಟರ ಪಾತ್ರಗಳನ್ನು ಅಳಿಸಿ ಶೂದ್ರ ನೇಟಿವಿಟಿ ಕೇಂದ್ರಕ್ಕೆ ಬಂದಿದೆ. ದೈವ ಗಗ್ಗರ ಕುಣಿಸುತ್ತಿದೆ.</p>



<p style="font-size:20px"><strong>ಕೆ.ಪಿ. ಸುರೇಶ</strong></p>



<p></p>



<p></p>



<p style="font-size:20px">🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ<br><a href="https://chat.whatsapp.com/G94DLKaJrsBH07M7DvkqRo">https://chat.whatsapp.com/G94DLKaJrsBH07M7DvkqRo</a></p>



<p></p>



<p style="font-size:20px"><strong><mark style="background-color:rgba(0, 0, 0, 0)" class="has-inline-color has-vivid-red-color">ಇದನ್ನೂ ಓದಿ:</mark></strong> <mark style="background-color:rgba(0, 0, 0, 0)" class="has-inline-color has-vivid-purple-color">ʼಪಪ್ಪುʼ ಎಂದು ಟ್ರೋಲ್ ಮಾಡಿದವರೂ ದಂಗಾಗಿದ್ದಾರೆ‌ ಈ ನಿಷ್ಕಲ್ಮಷ ನಗುವಿಗೆ!</mark></p>



<p style="font-size:20px"><mark style="background-color:rgba(0, 0, 0, 0)" class="has-inline-color has-vivid-purple-color">ಇದುವರೆಗೆ ಪಪ್ಪು ಎಂದು ಟ್ರೋಲ್ ಮಾಡಿದ ಜನರೂ ಒಳಗೊಳಗೇ ದಂಗಾಗಿ ಈ ಮನುಷ್ಯನ ಸಂಯಮ ನಿಷ್ಕಲ್ಮಷ ನಗು, ಮಗುವಿನ ಮುಗ್ಧತೆ, ಪ್ರೀತಿ,, ಗೌರವ ಘನತೆ ಎಂದೆಲ್ಲಾ ಮಾತಾಡುತ್ತಿದ್ದಾರೆಂದರೆ, ಇದು ಸ್ವತಃ ರಾಹುಲ್ ಗಾಂಧಿ ಗಳಿಸಿದ್ದು ಎನ್ನುತ್ತಾರೆ ಲೇಖಕಿ ಶಾಂತಾ ಕುಮಾರಿ</mark> </p>



<p style="font-size:20px"><a href="https://peepalmedia.com/pappu-endu-trol-madidavaru-dangagiddare-i-nishkalmasha-naguvige/">https://peepalmedia.com/pappu-endu-trol-madidavaru-dangagiddare-i-nishkalmasha-naguvige/</a></p>



<p></p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="yQfQd1SSVx"><a href="https://peepalmedia.com/pappu-endu-trol-madidavaru-dangagiddare-i-nishkalmasha-naguvige/">ʼಪಪ್ಪುʼ ಎಂದು ಟ್ರೋಲ್ ಮಾಡಿದವರೂ ದಂಗಾಗಿದ್ದಾರೆ‌ ಈ ನಿಷ್ಕಲ್ಮಷ ನಗುವಿಗೆ!</a></blockquote><iframe loading="lazy" class="wp-embedded-content" sandbox="allow-scripts" security="restricted"  title="&#8220;ʼಪಪ್ಪುʼ ಎಂದು ಟ್ರೋಲ್ ಮಾಡಿದವರೂ ದಂಗಾಗಿದ್ದಾರೆ‌ ಈ ನಿಷ್ಕಲ್ಮಷ ನಗುವಿಗೆ!&#8221; &#8212; Peepal Media" src="https://peepalmedia.com/pappu-endu-trol-madidavaru-dangagiddare-i-nishkalmasha-naguvige/embed/#?secret=2OdlqCJqDb#?secret=yQfQd1SSVx" data-secret="yQfQd1SSVx" width="600" height="338" frameborder="0" marginwidth="0" marginheight="0" scrolling="no"></iframe>
</div></figure>



<p style="font-size:20px">🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ<br><a href="https://chat.whatsapp.com/G94DLKaJrsBH07M7DvkqRo">https://chat.whatsapp.com/G94DLKaJrsBH07M7DvkqRo</a></p>
]]></content:encoded>
					
		
		
			</item>
	</channel>
</rss>
