<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>KCR &#8211; Peepal Media</title>
	<atom:link href="https://peepalmedia.com/tag/kcr/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sun, 03 Dec 2023 14:12:12 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>KCR &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ತೆಲಂಗಾಣ ಸಿಎಂ ಆಗುತ್ತಾರೆಯೇ ರೇವಂತ್‌ ರೆಡ್ಡಿ!</title>
		<link>https://peepalmedia.com/reventh-become-telangana-cm/</link>
		
		<dc:creator><![CDATA[Charan Aivarnad]]></dc:creator>
		<pubDate>Sun, 03 Dec 2023 14:02:13 +0000</pubDate>
				<category><![CDATA[ರಾಜಕೀಯ]]></category>
		<category><![CDATA[bjp]]></category>
		<category><![CDATA[breaking news]]></category>
		<category><![CDATA[brs]]></category>
		<category><![CDATA[five state election]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[KCR]]></category>
		<category><![CDATA[narendra mdi]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[revanth reddy]]></category>
		<category><![CDATA[state politics]]></category>
		<category><![CDATA[tdp]]></category>
		<category><![CDATA[telangana]]></category>
		<category><![CDATA[telangana c m]]></category>
		<category><![CDATA[telangana election]]></category>
		<category><![CDATA[tpcc]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=33371</guid>

					<description><![CDATA[ಬೆಂಗಳೂರು: ಕೆ ಚಂದ್ರಶೇಖರ್ ರಾವ್  (ಕೆಸಿಆರ್‌) ಮತ್ತು ಅವರ ಭಾರತ ರಾಷ್ಟ್ರ ಸಮಿತಿ  -ಬಿಆರ್‌ಎಸ್‌ಗೆ (ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ) ತೆಲಂಗಾಣ ಚುನಾವಣೆಯಲ್ಲಿ ಭಾರೀ ಹಿನ್ನಡೆಯಲ್ಲಿದ್ದು, ಕಾಂಗ್ರೆಸ್ ಸ್ಪಷ್ಟ ಗೆಲುವಿನತ್ತ ಸಾಗುತ್ತಿದೆ. ಇಲ್ಲಿ ನೋಡಿ: ತೆಲಂಗಾಣ ಚುನಾವಣಾ &#8211; 2023 ಫಲಿತಾಂಶ ಸದ್ಯ ಕಾಂಗ್ರೇಸ್‌ ಗೆಲುವಿನ ರೂವಾರಿಯಾಗಿರುವ, ತೆಲಂಗಾಣದಲ್ಲಿ ಕಾಂಗ್ರೇಸ್‌ ಮತ್ತೆ ಮೈಕೊಡವಿ ಎದ್ದು ನಿಲ್ಲಲು ಕಾರಣಕರ್ತನಾದ ಫೈರ್‌ ಬ್ರಾಂಡ್‌ ನಾಯಕ ರೇವಂತ್‌ ರೆಡ್ಡಿ ಆರು ವರ್ಷದ ಹಿಂದೆ ಕಾಂಗ್ರೇಸ್‌ನಲ್ಲಿಯೇ ಇರಲಿಲ್ಲ! ಕೊಡಂಗಲ್ ಕ್ಷೇತ್ರವನ್ನು ಗೆದ್ದಿರುವ, ಕಾಮರೆಡ್ಡಿಯಲ್ಲೂ [&#8230;]]]></description>
										<content:encoded><![CDATA[
<p><strong>ಬೆಂಗಳೂರು:</strong> ಕೆ ಚಂದ್ರಶೇಖರ್ ರಾವ್  (ಕೆಸಿಆರ್‌) ಮತ್ತು ಅವರ ಭಾರತ ರಾಷ್ಟ್ರ ಸಮಿತಿ  -ಬಿಆರ್‌ಎಸ್‌ಗೆ (ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ) ತೆಲಂಗಾಣ ಚುನಾವಣೆಯಲ್ಲಿ ಭಾರೀ ಹಿನ್ನಡೆಯಲ್ಲಿದ್ದು, ಕಾಂಗ್ರೆಸ್ ಸ್ಪಷ್ಟ ಗೆಲುವಿನತ್ತ ಸಾಗುತ್ತಿದೆ.</p>



<p>ಇಲ್ಲಿ ನೋಡಿ: <a href="https://results.eci.gov.in/AcResultGenDecNew2023/partywiseresult-S29.htm" data-type="link" data-id="https://results.eci.gov.in/AcResultGenDecNew2023/partywiseresult-S29.htm">ತೆಲಂಗಾಣ ಚುನಾವಣಾ &#8211; 2023 ಫಲಿತಾಂಶ</a></p>



<p>ಸದ್ಯ ಕಾಂಗ್ರೇಸ್‌ ಗೆಲುವಿನ ರೂವಾರಿಯಾಗಿರುವ, ತೆಲಂಗಾಣದಲ್ಲಿ ಕಾಂಗ್ರೇಸ್‌ ಮತ್ತೆ ಮೈಕೊಡವಿ ಎದ್ದು ನಿಲ್ಲಲು ಕಾರಣಕರ್ತನಾದ ಫೈರ್‌ ಬ್ರಾಂಡ್‌ ನಾಯಕ ರೇವಂತ್‌ ರೆಡ್ಡಿ ಆರು ವರ್ಷದ ಹಿಂದೆ ಕಾಂಗ್ರೇಸ್‌ನಲ್ಲಿಯೇ ಇರಲಿಲ್ಲ!</p>



<p>ಕೊಡಂಗಲ್ ಕ್ಷೇತ್ರವನ್ನು ಗೆದ್ದಿರುವ, ಕಾಮರೆಡ್ಡಿಯಲ್ಲೂ ಕೆಸಿಆರ್ ವಿರುದ್ಧ ಸ್ಪರ್ಧಿಸಿದ ಎ ರೇವಂತ್ ರೆಡ್ಡಿ 2017 ರಲ್ಲಿ ತೆಲುಗು ದೇಶಂ ಪಕ್ಷದಿಂದ (ಟಿಡಿಪಿ) ಕಾಂಗ್ರೆಸ್ ಸೇರಿದವರು.</p>



<p>ಕಾಂಗ್ರೇಸ್‌ ಸೇರಿ ನಾಲ್ಕೇ ವರ್ಷಗಳಲ್ಲಿ ಆಗಿನ ರಾಜ್ಯ ಕಾಂಗ್ರೇಸ್‌ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ ಸೇರಿದಂತೆ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಅಸಮಾಧಾನದ ಹೊರತಾಗಿಯೂ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ (ಟಿಪಿಸಿಸಿ) ಅಧ್ಯಕ್ಷರಾಗಿ &nbsp;ಅಧಿಕಾರ ವಹಿಸಿಕೊಂಡರು.</p>



<p>ಸದ್ಯ ತೆಲಂಗಾಣದಲ್ಲಿ ಕಾಂಗ್ರೇಸ್‌ ನೋಡುತ್ತಿರುವ ಈ ಬೃಹತ್ ಗೆಲುವನ್ನು ಸ್ವತಃ ಕಾಂಗ್ರೆಸ್‌ಗೆ ನಂಬಲಾಗದಂತಿದೆ. ಮುಖ್ಯವಾಗಿ ರೇವಂತ್ ಕಳೆದ ವರ್ಷವಷ್ಟೇ ಪಕ್ಷದ ಒಳಗೆ ಎದ್ದಿದ್ದ ಪೂರ್ಣ ಪ್ರಮಾಣದ ಬಂಡಾಯವನ್ನು ಹತ್ತಿಕ್ಕಲು ಹೋರಾಡುತ್ತಿದ್ದರೆ, ದಾಸೋಜು ಶ್ರವಣ್ ಮತ್ತು ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿಯಂತಹ ಹಿರಿಯ ನಾಯಕರು ಕ್ರಮವಾಗಿ ಬಿಆರ್‌ಎಸ್ ಮತ್ತು ಬಿಜೆಪಿಗೆ ಸೇರಿದ್ದರು. ರಾಜ್ ಗೋಪಾಲ್ ರೆಡ್ಡಿ ಇತ್ತೀಚೆಗೆ ಮತ್ತೆ ಕಾಂಗ್ರೆಸ್‌ಗೆ ಮರಳಿದ್ದು, ಈ ಚುನಾವಣೆಯಲ್ಲಿ ಮುನುಗೋಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.</p>



<p>ರೇವಂತ್ ಸದ್ಯ ಕಾಂಗ್ರೆಸ್ ಪಕ್ಷದ ಸಂಭಾವ್ಯ ಸಿಎಂ ಮುಖವೂ ಆಗಿದ್ದಾರೆ. ಆದರೆ ಹೈಕಮಾಂಡ್ ಅವರನ್ನು ಹಿರಿಯ ನಾಯಕರಾದ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ಉತ್ತರಕುಮಾರ್ ರೆಡ್ಡಿಯವರನ್ನು ಬಿಟ್ಟು ಸಿಎಂ ಹುದ್ದೆಗೆ ಆಯ್ಕೆ ಮಾಡುತ್ತದೆಯೇ ಎಂಬ ಪ್ರಶ್ನೆಯೊಂದಿದೆ.</p>



<p>ಆದರೆ, ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ನಡೆಸಿದ ಸರ್ವೇಯಲ್ಲಿ ಶೇ.21ರಷ್ಟು ಮತದಾರರು ರೇವಂತ್ ಸಿಎಂ ಆಗಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.</p>



<p style="font-size:20px"><strong>ಎಬಿವಿಪಿಯಿಂದ ಟಿಡಿಪಿಗೆ &#8211; ಟಿಡಿಪಿಯಿಂದ ಕಾಂಗ್ರೆಸ್‌ಗೆ!</strong></p>



<p>ಐವತ್ನಾಲ್ಕು ವರ್ಷ ಪ್ರಾಯದ ರೇವಂತ್ ರೆಡ್ಡಿ 2006 ರಲ್ಲಿ ಜೆಡ್‌ಪಿಟಿಸಿ – ಜಿಲ್ಲಾ ಪಂಚಾಯತ್‌ ಟೆರಿಟೋರಿಯಲ್‌ ಕಮಿಟಿಯ ಪ್ರತಿನಿಧಿಯಾಗಿ, 2008 ರಲ್ಲಿ ಸ್ವತಂತ್ರ ಎಂಎಲ್‌ಸಿಯಾಗಿ, 2009 ರಲ್ಲಿ ಸಂಯುಕ್ತ ಆಂಧ್ರಪ್ರದೇಶದ ಕೊಡಂಗಲ್ ಕ್ಷೇತ್ರದಿಂದ ತಮ್ಮ ಮೊದಲ ಅಸೆಂಬ್ಲಿ ಚುನಾವಣೆಯನ್ನು ಗೆದ್ದರು. ಆಗ ಅವರು ಓರ್ವ ಸುಶಿಕ್ಷಿತ ಟಿಡಿಪಿ ನಾಯಕರಾಗಿ, ಆಂಧ್ರಪ್ರದೇಶದಲ್ಲಿ ಪಕ್ಷದ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡುರವರ ಜೊತೆಗೆ ನಿಕಟ ಸಂಬಂಧವನ್ನು ಹೊಂದಿದ್ದವರು.</p>



<p>ರೇವಂತ್‌ ಐದು ಬಾರಿ ಶಾಸಕರಾಗಿದ್ದ ಕಾಂಗ್ರೆಸ್‌ನ ಗುರುನಾಥರೆಡ್ಡಿ ಅವರನ್ನು ಸೋಲಿಸಿದ್ದು ಸಣ್ಣ ವಿಷಯವೇನಲ್ಲ. ಔಟ್‌ಲುಕ್‌ಗೆ ನೀಡಿದ ಸಂದರ್ಶನದಲ್ಲಿ ರೇವಂತ್ &#8220;‌ನನ್ನ ಕ್ಷೇತ್ರ ಎಲ್ಲಿದೆ ಎಂಬುದೇ ನನಗೆ ತಿಳಿದಿರಲಿಲ್ಲ&#8221; ಎಂದು ಹೇಳಿದ್ದರು.</p>



<pre class="wp-block-code has-text-color has-link-color wp-elements-96407bf7802c4aaef0111e1498d204ad" style="color:#cd0e0e"><code><strong>ನಾನು ಆ ವಿಧಾನಸಭಾ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದೆ. ನನಗೆ ಪ್ರಚಾರಕ್ಕೆ ಇದ್ದದ್ದು ಕೇವಲ 14 ದಿನಗಳು. </strong><strong>ಆದರೆ ನಾನು 7,500 ಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದೆ. ಆಗ ನನ್ನ ವಿರುದ್ಧ ಇದ್ದದ್ದು ಕಾಂಗ್ರೆಸ್. ಕೊಡಂಗಲ್ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು, ಅಲ್ಲಿ ಐದು ಬಾರಿ ಗೆದ್ದಿತ್ತು - ರೇವಂತ್‌ ರೆಡ್ಡಿ</strong></code></pre>



<p>ರೇವಂತ್‌ ಎರಡನೇ ಬಾರಿಗೆ 2014 ರಲ್ಲಿ ಟಿಡಿಪಿಯಿಂದ ಕೊಡಂಗಲ್ ಗೆದ್ದರು. ಆದರೂ, ಮೇ 2015 ರಲ್ಲಿ, ಎಂಎಲ್‌ಸಿ ಚುನಾವಣೆಯಲ್ಲಿ ಟಿಡಿಪಿ ಅಭ್ಯರ್ಥಿಗೆ ಮತ ಹಾಕಲು ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೀಫನ್‌ಸನ್‌ಗೆ ಲಂಚ ನೀಡಲು ಯತ್ನಿಸಿದ ಆರೋಪದ ಮೇಲೆ ರೇವಂತ್‌ ಅವರನ್ನು ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳ ಬಂಧಿಸಿತು.</p>



<p style="font-size:20px"><strong>2017 ರಲ್ಲಿ ಕಾಂಗ್ರೇಸ್‌ಗೆ!</strong></p>



<p>ಕಾಂಗ್ರೆಸ್‌ ಸೇರಿ ತಮಗೆ ಸಿಕ್ಕಿದ ಟಿಕೆಟ್‌ನಲ್ಲಿ ಕೊಡಂಗಲ್‌ನಿಂದ ಸ್ಪರ್ಧಿಸಿದ ರೇವಂತ್, ಬಿಆರ್‌ಎಸ್‌ನ (ಹಿಂದೆ ತೆಲಂಗಾಣ ರಾಷ್ಟ್ರ ಸಮಿತಿ) ಪಟ್ನಂ ಮಹೇಂದರ್ ರೆಡ್ಡಿ ವಿರುದ್ಧ ಸೋತರು. 2018 ರ ಚುನಾವಣೆಯ ಸಮಯದಲ್ಲಿ, ಕೆಸಿಆರ್ ಅವರ ರ್ಯಾಲಿಯನ್ನು ತಡೆದು ನಿಲ್ಲಿಸುತ್ತೇನೆ ಎಂದ ರೇವಂತ್ ಅವರನ್ನು ಅವರ ಮನೆಯಿಂದಲೇ ಬಂಧಿಸಲಾಯಿತು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="te" dir="ltr">కొడంగల్ నియోజకవర్గ కాంగ్రెస్ పార్టీ ఎమ్మెల్యేగా విజయం సాధించిన శ్రీ ఎనుముల రేవంత్ రెడ్డి గారికి అభినందనలు.<a href="https://twitter.com/hashtag/CongressWinningTelangana2023?src=hash&amp;ref_src=twsrc%5Etfw">#CongressWinningTelangana2023</a> <a href="https://t.co/Ga0gzFnw4n">pic.twitter.com/Ga0gzFnw4n</a></p>&mdash; Telangana Congress (@INCTelangana) <a href="https://twitter.com/INCTelangana/status/1731223758638403860?ref_src=twsrc%5Etfw">December 3, 2023</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಅಸೆಂಬ್ಲಿ ಚುನಾವಣೆಯಲ್ಲಿ ಸೋತ ರೇವಂತ್, ಕೆಲವು ತಿಂಗಳ ನಂತರ ಮಲ್ಕಾಜ್‌ಗಿರಿಯಿಂದ 2019 ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾದರು.</p>



<p>ರೇವಂತ್ ವಿದ್ಯಾರ್ಥಿಯಾಗಿದ್ದಾಗ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಎಬಿವಿಪಿ ಸದಸ್ಯರಾಗಿದ್ದರು. ಈ ಚುನಾವಣಾ ಪ್ರಚಾರದ ಉದ್ದಕ್ಕೂ, ಎಐಎಂಐಎಂ ಅಧ್ಯಕ್ಷ ಮತ್ತು ಬಿಆರ್‌ಎಸ್‌ &nbsp;ಅನೌಪಚಾರಿಕ ದೋಸ್ತಿ ಅಸಾದುದ್ದೀನ್ ಓವೈಸಿ ರೇವಂತ್‌ರನ್ನು &#8216;ಆರ್‌ಎಸ್‌ಎಸ್‌ ಅಣ್ಣಾ&#8217; ಎಂದೇ ಕರೆದಿದ್ದರು.</p>



<pre class="wp-block-code has-text-color has-link-color wp-elements-424986e060ea794763c975ab6424f2a4" style="color:#bc1414"><code><strong>ಈಗಿನ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿಯವರಿಗೆ ಆರ್‌ಎಸ್‌ಎಸ್ ಹಿನ್ನೆಲೆ ಇದೆ ಎಂಬುದನ್ನು ದಯವಿಟ್ಟು ನೆನಪಿನಲ್ಲಿಡಿ. ಅವರು ಎಬಿವಿಪಿಯಲ್ಲಿ ಕೆಲಸ ಮಾಡಿದವರು, ಅವರು ಬಿಜೆಪಿ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ಶ್ರೀ ಕಿಶನ್ ರೆಡ್ಡಿ 1999 ರಲ್ಲಿ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಆಗ ಶಾಸಕರಾಗಿದ್ದ ಶ್ರೀ ಸೈಯದ್ ಸಜ್ಜದ್ ವಿರುದ್ಧ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ರೇವಂತ್ ಬಿಜೆಪಿಯಲ್ಲಿ ಕೆಲಸ ಮಾಡುವುದನ್ನು ನಾನು ನೋಡಿದ್ದೆ - ಅಸಾದುದ್ದೀನ್ ಓವೈಸಿ</strong></code></pre>



<p>ರೇವಂತ್ ತಮ್ಮ ರಾಜಕೀಯ ಏರಿಳಿತದ ಸಮಯದಲ್ಲಿಯೂ ಕೆಸಿಆರ್‌ ವಿರುದ್ಧ ತೀವ್ರ ಟೀಕೆಗಳನ್ನು ಮಾಡಿ ಫೈರ್‌ಬ್ರಾಂಡ್‌ ನಾಯಕರಾದವರು. ಹಾಗೆಂದು, ಅವರು ಎಲ್ಲಾ ಕಾಂಗ್ರೆಸ್ ನಾಯಕರೊಂದಿಗೆ ಆತ್ಮೀಯತೆಯನ್ನು ಇಟ್ಟುಕೊಂಡಿದ್ದಾರೆ ಎಂದರ್ಥವಲ್ಲ.</p>



<p style="font-size:20px"><strong>ರೇವಂತ್ ವಿರುದ್ಧ ಕಾಂಗ್ರೇಸ್‌ನಲ್ಲೇ ಬಂಡಾಯ!</strong></p>



<p>ತೆಲಂಗಾಣದಲ್ಲಿ ಕಾಂಗ್ರೆಸ್ ಸೋಲಿನ ನಂತರ ರೇವಂತ್ ರೆಡ್ಡಿ ಟಿಪಿಸಿಸಿ ಮುಖ್ಯಸ್ಥರಾದರು. ಸುಮಾರು ಎರಡು ವರ್ಷಗಳ ಹಿಂದಿನವರೆಗೂ ತೆಲಂಗಾಣದಲ್ಲಿ ಕಾಂಗ್ರೆಸ್‌ನ ಸ್ಥಿತಿ ಹೀನಾಯವಾಗಿತ್ತು. 2018 ರಲ್ಲಿ ಕೇವಲ ಶೇ.28 ಮತ ಹಂಚಿಕೆ ಮತ್ತು 119 ಸದಸ್ಯರ ವಿಧಾನಸಭೆಯಲ್ಲಿ 19 ಸ್ಥಾನಗಳನ್ನು ಪಡೆದು ಹೀನಾಯ ಸೋಲನ್ನು ಕಂಡಿತ್ತು. ನಂತರ 2019 ರ ಲೋಕಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನವನ್ನು ಗಳಿಸಿತ್ತು. ಕಾಂಗ್ರೇಸ್‌ಗೆ ಜೀವ ಉಳಿಸಿಕೊಳ್ಳಲು ಗುಟುಕು ನೀರಿನ ಅಗತ್ಯ ಇತ್ತು.</p>



<p>ಆದರೆ, ನಂತರದ ಉಪಚುನಾವಣೆಗಳಲ್ಲೂ ಅದು ಆಗಲೇ ಇಲ್ಲ. ಹುಜೂರ್‌ನಗರ ಮತ್ತು ನಾಗಾರ್ಜುನ ಸಾಗರ ಸೇರಿದಂತೆ ಕಾಂಗ್ರೆಸ್ ಪ್ರಬಲವಾಗಿದ್ದಲ್ಲೂ ಇದು ಸಾದ್ಯವಾಗಲಿಲ್ಲ. ಜಿಎಚ್‌ಎಂಸಿ ಚುನಾವಣೆಯಲ್ಲಿ ಬಿಜೆಪಿಯ ಏಳಿಗೆಯೊಂದಿಗೆ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು.</p>



<p>ತೆಲಂಗಾಣ ಕಾಂಗ್ರೇಸ್‌ ನಾಯಕತ್ವದ ಬದಲಾವಣೆಯನ್ನು ಬಯಸಿತ್ತು, ಆದರೆ 2017 ರಲ್ಲಿ ಪಕ್ಷಕ್ಕೆ ಸೇರಿದ್ದ ರೇವಂತ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದಾಗ, ಹಿರಿಯ ನಾಯಕರಿಗೆ ತೀವ್ರ ಮುಖಭಂಗವಾಯಿತು.2022 ರಲ್ಲಿ ತೆಲಂಗಾಣ ಕಾಂಗ್ರೇಸ್‌ನ ಆಂತರಿಕ ಒಳಜಗಳ ಇನ್ನಷ್ಟು ಹೆಚ್ಚಾಯಿತು. ಹಿರಿಯ ಕಾಂಗ್ರೆಸ್ ನಾಯಕ ದಾಸೋಜು ಶ್ರವಣ್ ರಾಜ್ಯಾಧ್ಯಕ್ಷರನ್ನು&nbsp;ದೂರುತ್ತಲೇ ಪಕ್ಷವನ್ನು ತೊರೆದರು.</p>



<pre class="wp-block-code has-text-color" style="color:#d11e1e"><code><strong>ರೇವಂತ್ ಅವರು ಪಕ್ಷವನ್ನು ಹೆಚ್ಚು ಆಕ್ರಮಣಕಾರಿಯಾಗಿ ಸಮರ್ಥಿಸುತ್ತಿದ್ದಾರೆ. ಅವರು ಎಐಸಿಸಿಯ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಫ್ರಾಂಚೈಸಿಯಾಗಿ ಟಿಪಿಸಿಸಿಯನ್ನು(ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ) ನಡೆಸುತ್ತಿದ್ದಾರೆ...ಅವರು ಪಕ್ಷವನ್ನು ತನ್ನ ಖಾಸಗಿ ಆಸ್ತಿ ಎಂದು ಭಾವಿಸಿಕೊಂಡಿದ್ದಾರೆ - ದಾಸೋಜು ಶ್ರವಣ್</strong></code></pre>



<p>ಮಾತ್ರವಲ್ಲ, ರೇವಂತ್ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.</p>



<p>ಇದಾದ ಬೆನ್ನಲ್ಲೇ, ರೇವಂತ್ ಅವರನ್ನು ಮತ್ತೊಬ್ಬ ಕಾಂಗ್ರೇಸ್‌ ನಾಯಕ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ (ಮುನುಗೋಡು ಶಾಸಕರಾಗಿದ್ದವರು) ಟೀಕಿಸುತ್ತಾ ಪಕ್ಷವನ್ನು ತೊರೆದರು. ಇವರು “ ರೇವಂತ್ ಅವರ ಆಡಳಿತ ಶೈಲಿ ಕಬ್ಬಿಣದ ಕಡಲೆ ಮತ್ತು ಎಲ್ಲಾ ನಾಯಕರನ್ನು ಹೊಂದಿಸಿಕೊಂಡು ಹೋಗುವ ಕಾಂಗ್ರೆಸ್‌ನ ಸ್ವಭಾವ ಇವರಿಗೆ ಸರಿಹೊಂದುವುದಿಲ್ಲ,” ಎಂದು ಟೀಕಿಸಿದ್ದರು.</p>



<p>&nbsp;ಕರ್ನಾಟಕ ಚುನಾವಣೆಯ ನಂತರ ಬಿಜೆಪಿ ವಿರುದ್ಧ ಕಾಂಗ್ರೆಸ್ ಭಾರಿ ಗೆಲುವು ದಾಖಲಿಸಿದಾಗ ತೆಲಂಗಾಣ ಕಾಂಗ್ರೇಸ್‌ನಲ್ಲಿ ಒಂದು ರೀತಿಯ ಆತ್ಮವಿಶ್ವಾಸ ಬೆಳೆಯಿತು. ಈಗ ತೆಲಂಗಾಣವೂ ಕಾಂಗ್ರೇಸ್‌ ಗೆಲುವನ್ನು ನೋಡಲು ಸಿದ್ದವಾಗಿದೆ. ರೇವಂತ್‌ ರೆಡ್ಡಿ ಮುತಾಲಿಕೆಯಲ್ಲಿ ತೆಲಂಗಾಣದಲ್ಲಿ ಕಾಂಗ್ರೇಸ್‌ ಗೆಲುವಿನ ಹಾದಿಯಲ್ಲಿ ಸಾಗಿರುವುದರ ಹೆಗ್ಗಳಿಕೆ ರೇವಂತ್‌ ಪಾಲಾಗುತ್ತದೆಯೇ? ಒಂದು ವೇಳೆ ಹಾಗೇನಾದರೂ ಆದರೆ, ಈಗಾಗಲೇ ನಲ್ಗೊಂಡ ವಲಯದ ಮೇಲೆ ಹಿಡಿತ ಹೊಂದಿರುವ ಕೋಮಟಿರೆಡ್ಡಿ ಸಹೋದರರಂತಹ ಕಾಂಗ್ರೇಸ್‌ ನಾಯಕರು ರೇವಂತ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಇವರು ಸುಮ್ಮನೆ ಇರುತ್ತಾರೆಯೇ? ಹೈಕಮಾಂಡ್‌ ಕೃಪಾಶೀರ್ವಾದ ಇರುವ ರೇವಂತ್ ಸಿಎಂ ಸ್ಥಾನ ಅಲಂಕರಿಸುತ್ತಾರೆಯೇ…. ಎಂದು ಕಾದು ನೋಡಬೇಕು.</p>
]]></content:encoded>
					
		
		
			</item>
		<item>
		<title>&#8220;ಆಪರೇಷನ್ ಕಮಲ&#8221;ದಲ್ಲಿ ಬಿ.ಎಲ್.ಸಂತೋಷ್ ಹೆಸರು ; KCR ಬಿಡುಗಡೆ ಮಾಡಿದ ಸಾಕ್ಷ್ಯದಲ್ಲಿ ಏನೇನಿದೆ?</title>
		<link>https://peepalmedia.com/bl-santosh-name-in-operation-kamala-what-is-in-the-evidence-released-by-kcr/</link>
		
		<dc:creator><![CDATA[Pragath K R]]></dc:creator>
		<pubDate>Fri, 04 Nov 2022 09:00:15 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[amith shah]]></category>
		<category><![CDATA[bjp]]></category>
		<category><![CDATA[KCR]]></category>
		<category><![CDATA[operation kamala]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=14125</guid>

					<description><![CDATA[ತೆಲಂಗಾಣದಲ್ಲಿ ಕಾನೂನು ಬಾಹಿರ &#8220;ಆಪರೇಷನ್ ಕಮಲ&#8221;ದ ವಿಫಲ ಯತ್ನ ಪ್ರಕರಣದ ಬೆನ್ನಲ್ಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಷ್ಟೂ ಸನ್ನಿವೇಶದ ವಿಡಿಯೋ ಒಂದನ್ನು ಇಂದು ಬಿಡುಗಡೆ ಮಾಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ &#8220;ಆಪರೇಷನ್ ಕಮಲ&#8221; ಪ್ರಕರಣದ ಮುಖ್ಯ ರೂವಾರಿಗಳು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಅಮಿತ್ ಷಾ ಮತ್ತು ಜೆ.ಪಿ.ನಡ್ಡಾ ಎಂಬುದು ಬಿಡುಗಡೆಯಾದ ಆಡಿಯೋದಲ್ಲಿ ಬಹಿರಂಗವಾಗಿದೆ. ತೆಲಂಗಾಣದಲ್ಲಿ ಸಿನಿಮೀಯ ರೀತಿಯಲ್ಲಿ ಸಿಕ್ಕಿಬಿದ್ದ &#8220;ಆಪರೇಷನ್ ಕಮಲ&#8221;ದ ರೂವಾರಿಗಳು ತಾವು ಬಿಜೆಪಿ ಪಕ್ಷದ ಕಡೆಯಿಂದಲೇ ಬಂದದ್ದು, &#8216;ಶಾಸಕರ ಖರೀದಿಯ ಅಷ್ಟೂ ವ್ಯವಸ್ಥೆಯನ್ನು [&#8230;]]]></description>
										<content:encoded><![CDATA[
<p style="font-size:20px">ತೆಲಂಗಾಣದಲ್ಲಿ ಕಾನೂನು ಬಾಹಿರ &#8220;ಆಪರೇಷನ್ ಕಮಲ&#8221;ದ ವಿಫಲ ಯತ್ನ ಪ್ರಕರಣದ ಬೆನ್ನಲ್ಲೇ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಷ್ಟೂ ಸನ್ನಿವೇಶದ ವಿಡಿಯೋ ಒಂದನ್ನು ಇಂದು ಬಿಡುಗಡೆ ಮಾಡಿದ್ದಾರೆ. ಗಮನಾರ್ಹ ಸಂಗತಿಯೆಂದರೆ &#8220;ಆಪರೇಷನ್ ಕಮಲ&#8221; ಪ್ರಕರಣದ ಮುಖ್ಯ ರೂವಾರಿಗಳು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಅಮಿತ್ ಷಾ ಮತ್ತು ಜೆ.ಪಿ.ನಡ್ಡಾ ಎಂಬುದು ಬಿಡುಗಡೆಯಾದ ಆಡಿಯೋದಲ್ಲಿ ಬಹಿರಂಗವಾಗಿದೆ.</p>



<figure class="wp-block-image size-full is-resized"><img fetchpriority="high" decoding="async" src="https://peepalmedia.com/wp-content/uploads/2022/11/images-2022-11-04T142652.798.jpeg" alt="" class="wp-image-14142" width="379" height="238"/></figure>



<p style="font-size:20px">ತೆಲಂಗಾಣದಲ್ಲಿ ಸಿನಿಮೀಯ ರೀತಿಯಲ್ಲಿ ಸಿಕ್ಕಿಬಿದ್ದ &#8220;ಆಪರೇಷನ್ ಕಮಲ&#8221;ದ ರೂವಾರಿಗಳು ತಾವು ಬಿಜೆಪಿ ಪಕ್ಷದ ಕಡೆಯಿಂದಲೇ ಬಂದದ್ದು, &#8216;ಶಾಸಕರ ಖರೀದಿಯ ಅಷ್ಟೂ ವ್ಯವಸ್ಥೆಯನ್ನು ನಮ್ಮ ಪಕ್ಷದ ರಾಷ್ಟ್ರ ಮಟ್ಟದ ತಂಡ ನಿರ್ವಹಿಸುತ್ತಿದ್ದು, ಇದರಲ್ಲಿ ಪಕ್ಷದ ರಾಜ್ಯ ಮುಖಂಡರ ಯಾವ ಪಾತ್ರವೂ ಇಲ್ಲ&#8217; ಎಂದು ಆಡಿಯೋದಲ್ಲಿ ಹೇಳಿದ್ದಾರೆ. ಇದರ ಜೊತೆಗೆ &#8216;ಮೂರು ಪ್ರಮುಖ ವ್ಯಕ್ತಿಗಳು ಈ ವ್ಯವಸ್ಥೆಯಲ್ಲಿ ಇದ್ದು ಯಾವುದೇ ಸಮಸ್ಯೆ ಬಾರದಂತೆ ಕೆಲಸ ನಡೆಯಲಿದೆ. ಶಾಸಕರ ಯೋಗ್ಯತೆ ನೋಡಿ ಅವರ ಬೆಲೆ ನಿಗದಿ ಮಾಡಲಾಗುತ್ತದೆ. ಒಬ್ಬೊಬ್ಬ ಶಾಸಕನಿಗೆ ಕನಿಷ್ಟ 50 ಕೋಟಿಯಿಂದ 100 ಕೋಟಿ ವರೆಗೂ ನಿಗದಿ ಮಾಡಲಾಗಿದೆ. ಆ ಮೂರು ಪ್ರಮುಖ ವ್ಯಕ್ತಿಗಳೆಂದರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ&#8217; ಎಂದು ಹೇಳಿದ ಸ್ಪೋಟಕ ಮಾಹಿತಿ ಹೊರಬಿದ್ದಿದೆ.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">‘We are ready to spend ₹50 Crores on each MLA. <a href="https://twitter.com/blsanthosh?ref_src=twsrc%5Etfw">@blsanthosh</a> will confirm &amp; arrange a meeting with <a href="https://twitter.com/AmitShah?ref_src=twsrc%5Etfw">@AmitShah</a>’ 👇 <a href="https://twitter.com/hashtag/LotusLeaks?src=hash&amp;ref_src=twsrc%5Etfw">#LotusLeaks</a> <a href="https://t.co/2hoKBP1Fr7">pic.twitter.com/2hoKBP1Fr7</a></p>&mdash; YSR (@ysathishreddy) <a href="https://twitter.com/ysathishreddy/status/1588364357301592070?ref_src=twsrc%5Etfw">November 4, 2022</a></blockquote><script async src="https://platform.twitter.com/widgets.js" charset="utf-8"></script>
</div></figure>



<p style="font-size:20px">ತೆಲಂಗಾಣ ಪೊಲೀಸರಿಗೆ ಸಿಕ್ಕಿಬಿದ್ದ ಮೂವರು ಪ್ರಮುಖ <a href="https://peepalmedia.com/operation-kamala-in-telangana-than-desperate-bjp-trapped-bjp-leaders/">ಆರೋಪಿಗಳಾದ</a> ಬಿಜೆಪಿ ಹಿನ್ನೆಲೆಯವರು ಎಂದು ಹೇಳಲಾದ ಹರಿಯಾಣದ ಫರಿದಾಬಾದ್ ಮೂಲದ ಪೂಜಾರಿಯಾಗಿರುವ ಸತೀಶ್ ಶರ್ಮಾ (33), ತಿರುಪತಿಯ ಶ್ರೀಮನಾಥ ರಾಜ ಪೀಠದ ಪೀಠಾಧಿಪತಿ D. ಸಿಂಹಯಾಜಿ(45), ಹಾಗೂ ಸರೂರನಗರದ ಉದ್ಯಮಿ ನಂದಕುಮಾರ್ (48) ಎನ್ನುವರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂವರು ಪ್ರಮುಖ ಆರೋಪಿಗಳು ತೆಲಂಗಾಣದ ಆಡಳಿತಾರೂಢ ಟಿಆರ್ಎಸ್ ಪಕ್ಷದ ಶಾಸಕ ರೋಹಿತ್ ರೆಡ್ಡಿ ಜೊತೆಗೆ ನಡೆಸಿದ ಸಂಭಾಷಣೆ ಇದಾಗಿದ್ದು, ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ನಡೆಸುತ್ತಿರುವ &#8220;ಆಪರೇಷನ್ ಕಮಲ&#8221;ದ ಮಾದರಿ ಹೇಗೆ ಇರಲಿದೆ ಎಂಬುದನ್ನು ಈ ವಿಡಿಯೋ ಸಾಕ್ಷಿ ಒದಗಿಸುತ್ತಿದೆ.</p>



<p style="font-size:20px"><strong>ಖದೀಮರನ್ನು ಖೆಡ್ಡಾಗೆ ಉರುಳಿಸಿದ ಬಗೆ ಹೇಗಿತ್ತು? ಇದು &#8220;ಆಪರೇಷನ್ ನಾರಿಯಲ್ ಪಾನಿ&#8221;!</strong><br>ಅಂದಹಾಗೆ ರಾಷ್ಟ್ರಾದ್ಯಂತ ಬಿಜೆಪಿ ಪಕ್ಷ ಆಪರೇಷನ್ ಕಮಲದ ಮೂಲಕ ಹಿಂಬಾಗಿಲ ರಾಜಕಾರಣ ಮಾಡುತ್ತಾ ಬಂದಿದ್ದು ಎಲ್ಲೂ ಸಹ ಅಧಿಕೃತವಾಗಿ ಸಿಕ್ಕಿ ಬಿದ್ದಿರಲಿಲ್ಲ. ಆದರೆ ತೆಲಂಗಾಣದಲ್ಲಿ ಆಪರೇಷನ್ ಕಮಲದ ಸೂಚನೆ ಸಿಕ್ಕ ತಕ್ಷಣವೇ ಟಿಆರ್ಎಸ್ ಪಕ್ಷದ ನಾಯಕರು ಜಾಗೃತಗೊಂಡಿದ್ದಾರೆ.</p>



<p style="font-size:20px">ತೆಲಂಗಾಣದ ಪೊಲೀಸರ ಸಹಕಾರ ಪಡೆದ ಟಿಆರ್ಎಸ್ ಪಕ್ಷದ ನಾಯಕರು ಮುಂಚಿತವಾಗಿಯೇ ವ್ಯವಸ್ಥೆಯಾಗಿದ್ದ ಶಾಸಕ ಪೈಲಟ್ ರೋಹಿತ್ ರೆಡ್ಡಿಯವರ ಫಾರಂ ಹೌಸ್ ನ ನಾಲ್ಕು ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಿದ್ದಾರೆ. ನಂತರ ರೋಹಿತ್ ರೆಡ್ಡಿ ಜೇಬಿನಲ್ಲಿ ಆಡಿಯೋ ರೆಕಾರ್ಡರ್ ಅಳವಡಿಸಿದ್ದಾರೆ. ನಂತರ ಅತಿಥಿಗಳಂತೆ ಬಂದಿದ್ದ ಬಿಜೆಪಿ ಹಿನ್ನೆಲೆಯ ವ್ಯಕ್ತಿಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಆಪರೇಷನ್ ಕಮಲದ ಅಷ್ಟೂ ಪ್ರಕ್ರಿಯೆಯನ್ನು ಬಾಯಿ ಬಿಡಿಸಿದ್ದಾರೆ. ಪ್ರಮುಖವಾಗಿ ಆಪರೇಷನ್ ಕಮಲ ಹೇಗೆ ನಡೆಯಲಿದೆ, ಇದರ ರೂವಾರಿಗಳು ಯಾರು, ಒಬ್ಬೊಬ್ಬ ಶಾಸಕರನ್ನು ಎಷ್ಟು ಹಣ ಕೊಟ್ಟು ಕೊಂಡುಕೊಳ್ಳಲಾಗುತ್ತದೆ, ರಾಜೀನಾಮೆ ನಂತರ ಚುನಾವಣೆಗೆ ಬಿ.ಫಾರಂ ನೀಡುವ ಬಗ್ಗೆ, ಚುನಾವಣೆ ಗೆಲ್ಲಲು ಬೇಕಾದ ವ್ಯವಸ್ಥೆ ಬಗ್ಗೆ, ಹೀಗೆ ಎಲ್ಲಾ ವಿಚಾರಗಳು ಚರ್ಚೆಯಾಗಿವೆ.</p>



<p style="font-size:20px">ನಂತರ ಪೂರ್ವ ನಿಯೋಜನೆಯಂತೆ ಶಾಸಕ ರೋಹಿತ್ ರೆಡ್ಡಿ ಫಾರಂ ಹೌಸ್ ನ ಸಿಬ್ಬಂದಿಗೆ &#8220;ನಾರಿಯಲ್ ಪಾನಿ&#8221;(ಎಳನೀರು) ಕೊಡಲು ಹೇಳುತ್ತಾರೆ. ಆ &#8220;ನಾರಿಯಲ್ ಪಾನಿ&#8221;ಯೇ ಪೊಲೀಸರಿಗೆ ಸೂಚನೆ ಕೊಡುವ ಕೋಡ್ ವರ್ಡ್ ಆಗಿರುತ್ತದೆ. ನಂತರ ಪೊಲೀಸರು ಬಂದ ಖದೀಮರು ಮತ್ತು ಅವರ ಬಳಿಯಲ್ಲಿದ್ದ ಹಣವನ್ನು ವಶಪಡಿಸಿಕೊಳ್ಳುತ್ತಾರೆ. ಈ ಅಷ್ಟೂ ಪ್ರಕ್ರಿಯೆ ಸಿನಿಮೀಯ ರೀತಿಯಲ್ಲಿದ್ದು ಟಿಆರ್ಎಸ್ ಪಕ್ಷದ ಪ್ರಮುಖರು ಖದೀಮರನ್ನು ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>



<p style="font-size:20px">ಒಟ್ಟಾರೆ ಟಿಆರ್ಎಸ್ ಪಕ್ಷ ಆಪರೇಷನ್ ಕಮಲದ ರೂವಾರಿಗಳನ್ನು ಸಾಕ್ಷ್ಯ ಸಮೇತರಾಗಿ ಹಿಡಿದು ಹಾಕಿದ್ದು, ತನಿಖೆ ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿ ನಡೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.</p>
]]></content:encoded>
					
		
		
			</item>
		<item>
		<title>ಕುತೂಹಲ ಕೆರೆಳಿಸಿದ ಹೆಚ್.ಡಿ.ಕೆ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್ ಭೇಟಿ</title>
		<link>https://peepalmedia.com/kutuhala-keralisida-hdk-mattu-kcr-bheti/</link>
		
		<dc:creator><![CDATA[Peepal Media]]></dc:creator>
		<pubDate>Sun, 11 Sep 2022 06:52:28 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[CM]]></category>
		<category><![CDATA[HDK]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[KCR]]></category>
		<category><![CDATA[meeting]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[tamilnadu]]></category>
		<guid isPermaLink="false">https://peepalmedia.com/?p=4820</guid>

					<description><![CDATA[ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಮಧ್ಯಾಹ್ನ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್ ಅವರನ್ನು ಭೇಟಿಯಾಗಲಿದ್ದಾರೆ. ಹೈದರಾಬಾದ್ ನ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಭೋಜನದ ನಂತರ ಇಬ್ಬರ ನಡುವೆ ಮಹತ್ವದ ಚರ್ಚೆ ನಡೆಯಲಿದ್ದು, ಇಬ್ಬರು ನಾಯಕರ ಭೇಟಿ ಪ್ರಸಕ್ತ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ. ಇತ್ತೀಚಿಗಷ್ಟೇ ಕುಮಾರಸ್ವಾಮಿಯವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಹ ಭೇಟಿಯಾಗಿದ್ದು ಸ್ಮರಿಸಬಹುದಾಗಿದೆ.]]></description>
										<content:encoded><![CDATA[
<p class="has-medium-font-size">ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಮಧ್ಯಾಹ್ನ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್ ಅವರನ್ನು ಭೇಟಿಯಾಗಲಿದ್ದಾರೆ. ಹೈದರಾಬಾದ್ ನ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಭೋಜನದ ನಂತರ ಇಬ್ಬರ ನಡುವೆ ಮಹತ್ವದ ಚರ್ಚೆ ನಡೆಯಲಿದ್ದು, ಇಬ್ಬರು ನಾಯಕರ ಭೇಟಿ ಪ್ರಸಕ್ತ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ. </p>



<p class="has-medium-font-size">ಇತ್ತೀಚಿಗಷ್ಟೇ ಕುಮಾರಸ್ವಾಮಿಯವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಹ ಭೇಟಿಯಾಗಿದ್ದು ಸ್ಮರಿಸಬಹುದಾಗಿದೆ.</p>
]]></content:encoded>
					
		
		
			</item>
	</channel>
</rss>
