<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Kimmane Rathnakar &#8211; Peepal Media</title>
	<atom:link href="https://peepalmedia.com/tag/kimmane-rathnakar/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 03 Aug 2023 19:27:09 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Kimmane Rathnakar &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ವರ್ಣಭೇದದ ಹೇಳಿಕೆ : ಬಾಯ್ತಪ್ಪಿನ ಮಾತು ಎಂಬುದನ್ನು ನಂಬಲಾಗದು‌, ಇದೇ ಬಿಜೆಪಿ ಸಿದ್ದಾಂತ : ಕಿಮ್ಮನೆ ರತ್ನಾಕರ್ ವಾಗ್ದಾಳಿ</title>
		<link>https://peepalmedia.com/it-is-unbelievable-that-it-is-a-false-statement-this-is-the-bjp-ideology/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 03 Aug 2023 10:22:24 +0000</pubDate>
				<category><![CDATA[ರಾಜಕೀಯ]]></category>
		<category><![CDATA[araga jnanendhra]]></category>
		<category><![CDATA[bjp]]></category>
		<category><![CDATA[congress]]></category>
		<category><![CDATA[karnataka]]></category>
		<category><![CDATA[Kimmane Rathnakar]]></category>
		<category><![CDATA[malleshwaram]]></category>
		<category><![CDATA[Mallikarjun Kharge]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<guid isPermaLink="false">https://peepalmedia.com/?p=24854</guid>

					<description><![CDATA[ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಈಶ್ವರ್ ಖಂಡ್ರೆ ಅವರ ಮೈಬಣ್ಣದ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಆಗಿರುವ ಮಾತನ್ನು ಬಿಜೆಪಿಯ ಯಾವೊಬ್ಬ ನಾಯಕ ಕೂಡಾ ಖಂಡಿಸಿಲ್ಲ. ಇದನ್ನು ನೋಡಿದರೆ ಬಿಜೆಪಿ ಪಕ್ಷದ ನಾಯಕರ ಮೌನವೇ ಆರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಸಮರ್ಥಿಸುವಂತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಬಿಜೆಪಿ ಮತ್ತು ಆರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರರಾದ ಕಿಮ್ಮನೆ ರತ್ನಾಕರ್ ಅವರು, &#8220;ಬಿಜೆಪಿಯ ಬಹುತೇಕ [&#8230;]]]></description>
										<content:encoded><![CDATA[
<p>ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಈಶ್ವರ್ ಖಂಡ್ರೆ ಅವರ ಮೈಬಣ್ಣದ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಆಗಿರುವ ಮಾತನ್ನು ಬಿಜೆಪಿಯ ಯಾವೊಬ್ಬ ನಾಯಕ ಕೂಡಾ ಖಂಡಿಸಿಲ್ಲ. ಇದನ್ನು ನೋಡಿದರೆ ಬಿಜೆಪಿ ಪಕ್ಷದ ನಾಯಕರ ಮೌನವೇ ಆರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ಸಮರ್ಥಿಸುವಂತಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಬಿಜೆಪಿ ಮತ್ತು ಆರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿದ್ದಾರೆ.</p>



<p>ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರರಾದ ಕಿಮ್ಮನೆ ರತ್ನಾಕರ್ ಅವರು, &#8220;ಬಿಜೆಪಿಯ ಬಹುತೇಕ ನಾಯಕರು ಈ ದೇಶದ ಕಾನೂನಿನ ವಿರುದ್ಧವಾಗಿ, ಸಂವಿಧಾನದ ವಿರುದ್ಧವಾಗಿ, ಅಂಬೇಡ್ಕರ್ ವಿರುದ್ಧವಾಗಿ, ಮಹಾತ್ಮಾ ಗಾಂಧೀಜಿ ವಿರುದ್ಧವಾಗಿ ಮಾತನಾಡಿದಾಗಲೂ ಬಿಜೆಪಿ ಇದೇ ಮೌನವನ್ನು ವಹಿಸಿತ್ತು. ಈ ಮೌನ ಬಿಜೆಪಿ ನಾಯಕರ ನಡೆ ಮತ್ತು ನುಡಿಯನ್ನು ಸಮರ್ಥಿಸುವ ಮೌನವಾಗಿದೆ..&#8221; ಎಂದು ಕಿಮ್ಮನೆ ರತ್ನಾಕರ್ ಅವರು ಆರಗ ಜ್ಞಾನೇಂದ್ರ ಹೇಳಿಕೆಯನ್ನು ಖಂಡಿಸದ ಬಿಜೆಪಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>



<p>&#8220;ಈ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್, ಅನಂತಕುಮಾರ್ ಹೆಗ್ಡೆ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹರಡಿದಾಗ, ಸಂವಿಧಾನದ ವಿರುದ್ಧ ಮಾತನಾಡಿದಾಗಲೂ ಬಿಜೆಪಿಯ ಯಾವ ನಾಯಕನೂ ಅದನ್ನು ಖಂಡಿಸಿರಲಿಲ್ಲ. ಯಾಕೆಂದರೆ ಬಿಜೆಪಿ ಪಕ್ಷ ತಾನು ಪಾಲಿಸಿಕೊಂಡು ಬಂದ ಸಂಸ್ಕೃತಿಯನ್ನೇ ಅವರುಗಳು ಮಾತನಾಡಿದ್ದು. ಅದನ್ನು ಈಗ ಆರಗ ಜ್ಞಾನೇಂದ್ರ ಮುಂದುವರೆಸಿಕೊಂಡು ಬಂದಿದ್ದಾರೆ&#8221; ಎಂದು ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದ್ದಾರೆ.</p>



<p>&#8220;ನಿನ್ನೆಯ ದಿನ ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ್ ಖಂಡ್ರೆ ಮೈಬಣ್ಣದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರಗ ಜ್ಞಾನೇಂದ್ರ ಮಾರನೇ ದಿನ ತಾನು ಬಾಯ್ತಪ್ಪಿನಿಂದ ಈ ಮಾತನ್ನು ಆಡಿದ್ದು ಎಂದು ಹೇಳಿದ್ದಾರೆ. ಆದರೆ ಜಾತಿ, ಧರ್ಮ ಹಾಗೂ ವರ್ಣದ ಆಧಾರದಲ್ಲಿ ಸದಾ ದ್ವೇಷವನ್ನೇ ಉಗುಳುವ ಬಿಜೆಪಿ ಸಿದ್ಧಾಂತದ ಆರಗ ಜ್ಞಾನೇಂದ್ರ ಬಾಯ್ತಪ್ಪಿನಿಂದ ಆಡಿದ ಮಾತು ಎಂಬುದನ್ನು ನಂಬಲಾಗದು. ಇದೇ ಬಿಜೆಪಿ ಸಿದ್ಧಾಂತವಾಗಿದೆ. ಇದನ್ನೇ ಆರಗ ಜ್ಞಾನೇಂದ್ರ ಪ್ರತಿಪಾದಿಸಿದ್ದಾರೆ&#8221; ಎಂದು ಕಿಮ್ಮನೆ ರತ್ನಾಕರ್ ಕಿಡಿಕಾರಿದ್ದಾರೆ.</p>



<p>&#8220;ರಾಹುಲ್ ಗಾಂಧಿಯವರು ಮೋದಿ ಉಪನಾಮ ಬಳಸಿದ ಮಾತ್ರಕ್ಕೆ ಅವರನ್ನು ಅಪರಾಧಿ ಎಂದು ಬಿಂಬಿಸಿ, ಸಂಸತ್ ಸದಸ್ಯತ್ವ ರದ್ದು ಮಾಡಿದ ಬಿಜೆಪಿ, ಅದೇ ಆಧಾರದಲ್ಲಿ ಖರ್ಗೆ ಅವರ ಮೈಬಣ್ಣದ ಬಗ್ಗೆ ಆಡಿರುವ ಮಾತುಗಳು ಅಪರಾಧ ಅಲ್ಲವೇ? ಈ ಬಗ್ಗೆ ವಿಧಾನಸಭೆಯ ಸ್ಪೀಕರ್ ಅವರಿಗೂ ದೂರು ಕೊಡಲಾಗುವುದು. ನ್ಯಾಯಾಲಯದಲ್ಲೂ ಕೇಸು ದಾಖಲಿಸಲಾಗುವುದು ಎಂದ ಕಿಮ್ಮನೆ ರತ್ನಾಕರ್, ಆರಗ ಜ್ಞಾನೇಂದ್ರ ವಿರುದ್ಧ ತೀರ್ಥಹಳ್ಳಿಲ್ಲೂ ಬೃಹತ್ ಪ್ರತಿಭಟನೆ ನಡೆಸಲಾಗುವುದು&#8221; ಎಂದು ತಿಳಿಸಿದರು.</p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="IQzEQjgEw2"><a href="https://peepalmedia.com/gyanendra-made-fun-of-kharges-complexion-while-talking/">ಮಾತಾಡುವ ಭರದಲ್ಲಿ ಮಲ್ಲಿಕಾರ್ಜುನ ಖರ್ಗೆ ಮೈಬಣ್ಣದ ಬಗ್ಗೆ ವ್ಯಂಗ್ಯ ಮಾಡಿದ ಆರಗ ಜ್ಞಾನೇಂದ್ರ</a></blockquote><iframe class="wp-embedded-content" sandbox="allow-scripts" security="restricted"  title="&#8220;ಮಾತಾಡುವ ಭರದಲ್ಲಿ ಮಲ್ಲಿಕಾರ್ಜುನ ಖರ್ಗೆ ಮೈಬಣ್ಣದ ಬಗ್ಗೆ ವ್ಯಂಗ್ಯ ಮಾಡಿದ ಆರಗ ಜ್ಞಾನೇಂದ್ರ&#8221; &#8212; Peepal Media" src="https://peepalmedia.com/gyanendra-made-fun-of-kharges-complexion-while-talking/embed/#?secret=q8F515sJTa#?secret=IQzEQjgEw2" data-secret="IQzEQjgEw2" width="600" height="338" frameborder="0" marginwidth="0" marginheight="0" scrolling="no"></iframe>
</div></figure>



<p>ಇನ್ನು ಕಸ್ತೂರಿ ರಂಗನ್ ವರದಿ ವಿರೋಧಿಸಿ ನಡೆದ ಪ್ರತಿಭಟನೆ ಬಗ್ಗೆ ಮಾತನಾಡಿದ ಕಿಮ್ಮನೆ ರತ್ನಾಕರ್, &#8220;ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನಕ್ಕೆ ತರಲು ಪಟ್ಟು ಹಿಡಿದಿರೋದು ಕೇಂದ್ರ ಬಿಜೆಪಿ ಸರ್ಕಾರ. ಕಾಂಗ್ರೆಸ್ ಹಿಂದಿನಿಂದಲೂ ಆ ವರದಿಯನ್ನು ವಿರೋಧಿಸಿಕೊಂಡೇ ಬಂದಿದೆ. ಆರಗ ಜ್ಞಾನೇಂದ್ರ ಜನರ ದಾರಿ ತಪ್ಪಿಸಲು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ನಿಜವಾಗಿಯೂ ಇವರು ಪ್ರತಿಭಟನೆ ಮಾಡೋದೇ ಆದರೆ ಅದು ನರೇಂದ್ರ ಮೋದಿ ವಿರುದ್ಧ ಮಾಡಬೇಕು. ಬಿಜೆಪಿ ಎಲ್ಲರನ್ನೂ ಒಟ್ಟಾಗಿ ತಗೆದುಕೊಂಡು ಹೋಗುವ ಮನಸ್ಥಿತಿ ಇರದ ಕಾರಣ ಇಷ್ಟೆಲ್ಲಾ ಗೊಂದಲ ಏರ್ಪಟ್ಟಿದೆ&#8221; ಎಂದು ವಾಗ್ದಾಳಿ ನಡೆಸಿದ್ದಾರೆ</p>



<p>&#8220;ಆರಗ ಜ್ಞಾನೇಂದ್ರ 21 ವರ್ಷಗಳ ಕಾಲ ಶಾಸಕರಾಗಿ ಕೆಲಸ ಮಾಡಿದವರು. ವಿಧಾನಸಭಾ ಸಮಿತಿಗಳ ಸ್ಥಾನಮಾನದಲ್ಲಿ ಇದ್ದವರು, ಸಚಿವರಾಗಿಯೂ ಕೆಲಸ ಮಾಡಿದವರು. ಇವರಿಗೆ ಸಂವಿಧಾನಾತ್ಮಕವಾಗಿ, ಕಾನೂನಿನ ಚೌಕಟ್ಟಿನಲ್ಲಿ, ಜನಪ್ರತಿನಿಧಿ ಎಂಬ ಜವಾಬ್ದಾರಿ ಅರಿತು ಮಾತನಾಡಬೇಕು ಎಂಬುದರ ಅರಿವು ಇಲ್ಲ. ಇವರದ್ದೇನಿದ್ದರೂ RSS ಸಿದ್ಧಾಂತದ ಚಿಂತನಗಂಗಾ ಓದಿಕೊಂಡು ಬಂದವರಾದ್ದರಿಂದ ಎಲ್ಲಿ, ಹೇಗೆ ಮಾತನಾಡಬೇಕು ಎಂಬ ಕನಿಷ್ಟ ಅರಿವು ಇಲ್ಲ. ಹಾಗಾಗಿ ಆರಗ ಜ್ಞಾನೇಂದ್ರ ಅವರ ವರ್ಣಭೇದ ನೀತಿಯ ಮಾತನ್ನು, ಅವರ ಸಂವಿಧಾನ ಉಲ್ಲಂಘನೆಯನ್ನು ಪರಿಗಣಿಸಿ ಅವರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಕಿಮ್ಮನೆ ರತ್ನಾಕರ್ ಆಗ್ರಹಿಸಿದ್ದಾರೆ.</p>
]]></content:encoded>
					
		
		
			</item>
		<item>
		<title>ಸುವರ್ಣ ನ್ಯೂಸ್ ಮೇಲೆ ಮಾನನಷ್ಟ ಮೊಕದ್ದಮೆ : ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸ್ಪಷ್ಟನೆ</title>
		<link>https://peepalmedia.com/defamation-case-against-suvarna-news/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 29 Jul 2023 07:54:49 +0000</pubDate>
				<category><![CDATA[ಮೀಡಿಯಾ]]></category>
		<category><![CDATA[Ajith Hanumakkanavar]]></category>
		<category><![CDATA[Cooker bomb blast]]></category>
		<category><![CDATA[Kimmane Rathnakar]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[sharik]]></category>
		<guid isPermaLink="false">https://peepalmedia.com/?p=24585</guid>

					<description><![CDATA[ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರ ಕುರಿತು ಸುವರ್ಣ ನ್ಯೂಸ್ ನಲ್ಲಿ ಜನವರಿ 11, 2023 ರಂದು ಪ್ರಸಾರವಾದ ಸುದ್ದಿ ಈಗ ಮತ್ತೆ ಮಹತ್ವ ಪಡೆದುಕೊಂಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೂ 4 ತಿಂಗಳ ಮುಂಚೆ ಕಿಮ್ಮನೆ ರತ್ನಾಕರ್ ಅವರ ಮನೆ ಮೇಲೆ ಇ.ಡಿ.ದಾಳಿ ಎಂಬ ಸುದ್ದಿಯನ್ನು ಸುವರ್ಣ ನ್ಯೂಸ್ ಮೇಲಿಂದ ಮೇಲೆ ಪ್ರಸಾರ ಮಾಡಿತ್ತು. ಜೊತೆ ದಕ್ಷಿಣ ಕನ್ನಡದ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಆರೋಪಿ ಶಾರಿಕ್ ಜೊತೆಗೆ ನಂಟು ಇರುವುದಾಗಿಯೂ ವರದಿ ಪ್ರಸಾರ ಮಾಡಿತ್ತು. ಈ ಬಗ್ಗೆ [&#8230;]]]></description>
										<content:encoded><![CDATA[
<p>ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರ ಕುರಿತು ಸುವರ್ಣ ನ್ಯೂಸ್ ನಲ್ಲಿ ಜನವರಿ 11, 2023 ರಂದು ಪ್ರಸಾರವಾದ ಸುದ್ದಿ ಈಗ ಮತ್ತೆ ಮಹತ್ವ ಪಡೆದುಕೊಂಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೂ 4 ತಿಂಗಳ ಮುಂಚೆ ಕಿಮ್ಮನೆ ರತ್ನಾಕರ್ ಅವರ ಮನೆ ಮೇಲೆ ಇ.ಡಿ.ದಾಳಿ ಎಂಬ ಸುದ್ದಿಯನ್ನು ಸುವರ್ಣ ನ್ಯೂಸ್ ಮೇಲಿಂದ ಮೇಲೆ ಪ್ರಸಾರ ಮಾಡಿತ್ತು. ಜೊತೆ ದಕ್ಷಿಣ ಕನ್ನಡದ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಆರೋಪಿ ಶಾರಿಕ್ ಜೊತೆಗೆ ನಂಟು ಇರುವುದಾಗಿಯೂ ವರದಿ ಪ್ರಸಾರ ಮಾಡಿತ್ತು. ಈ ಬಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಚಾನಲ್ ಮತ್ತು ಅದರ ಪ್ರಧಾನ ಸಂಪಾದಕ ಅಜಿತ್ ಹನಮಕ್ಕನವರ್ ಮೇಲೆ ಪ್ರಕರಣ ದಾಖಲು ಮಾಡಲು ಚಿಂತನೆ ನಡೆಸಿದ್ದಾರೆ.</p>



<p>ಈ ಬಗ್ಗೆ <strong>ಪೀಪಲ್ ಮೀಡಿಯಾ </strong>ಗೆ ಸ್ಪಷ್ಟನೆ ನೀಡಿದ ಕಿಮ್ಮನೆ ರತ್ನಾಕರ್, &#8216;ಸುದ್ದಿ ಮಾಧ್ಯಮದ ಮೇಲೆ ಪ್ರಕರಣ ದಾಖಲಿಸುವುದು ಸ್ಪಷ್ಟ. ಪೂರ್ವಾಪರ ಅರಿಯದೇ ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡಲೆಂದೇ ಈ ಸುದ್ದಿ ಪ್ರಸಾರ ಮಾಡಿದ್ದಾರೆ. ಈ ಬಗ್ಗೆ ಒಂದು ಕರೆ ಮಾಡಿ ಸ್ಪಷ್ಟನೆ ಕೇಳಬಹುದಿತ್ತು. ಆದರೆ ಅದ್ಯಾವುದರ ಗೊಡವೆಗೂ ಹೋಗದೇ ನೇರವಾಗಿ ನನ್ನ ಮೇಲೆ ದೇಶದ್ರೋಹದಂತಾ ಆರೋಪ ಮಾಡಿರುವುದು ಅಕ್ಷಮ್ಯ ಅಪರಾಧ. ಹಾಗಾಗಿ ಚಾನಲ್ ಮೇಲೆ ಮತ್ತು ಅದರ ಮುಖ್ಯಸ್ಥರ ಮೇಲೆ ಪ್ರಕರಣ ದಾಖಲು ಮಾಡೇ ಮಾಡುತ್ತೇನೆ&#8217; ಎಂದು ಸ್ಪಷ್ಟನೆ ನೀಡಿದ್ದಾರೆ.</p>



<p>&#8216;ಈಗಾಗಲೇ ಆ ವರದಿ ಪ್ರಸಾರವಾಗಿ 6 ತಿಂಗಳ ಮೇಲಾಗಿದೆ, ಅಂದೇ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು, ತಡ ಯಾಕೆ&#8217; ಎಂಬ ಪ್ರಶ್ನೆಗೆ, &#8216;ಚುನಾವಣೆ ಸಂದರ್ಭದಲ್ಲಿ ಬಿತ್ತರಿಸಿದ ಸುದ್ದಿ ಅದಾಗಿದ್ದರಿಂದ ನಾನೂ ಸ್ವಲ್ಪ ಒತ್ತಡದಲ್ಲಿದ್ದೆ. ಆದರೆ ಕಾನೂನು ಕ್ರಮದ ಬಗ್ಗೆ ಅಂದೇ ಚಿಂತನೆ ಮಾಡಿದ್ದೆ. ಮೇಲಾಗಿ ವರದಿ ಪ್ರಸಾರವಾದ ದಿನದಿಂದ 3 ವರ್ಷಗಳ ಒಳಗೆ ಯಾವಾಗ ಬೇಕಾದರೂ ಪ್ರಕರಣ ದಾಖಲಿಸಬಹುದು&#8217; ಎಂದು ಕಿಮ್ಮನೆ ರತ್ನಾಕರ್ ಸ್ಪಷ್ಟನೆ ನೀಡಿದ್ದಾರೆ.</p>



<p>&#8216;ವರದಿ ಪ್ರಸಾರವಾದ ನಂತರ, ತಪ್ಪು ಮಾಹಿತಿ ನೀಡಿದರ ಬಗ್ಗೆ ಕ್ಷಮೆ ಕೇಳಬಹುದಿತ್ತು. ಅಥವಾ ತಮಗೆ ಸಿಕ್ಕ ಮಾಹಿತಿ ತಪ್ಪಾಗಿದೆ ಎಂದೂ ಸ್ಪಷ್ಟನೆ ಕೊಡಬಹುದಿತ್ತು. ಆದರೆ ಇದ್ಯಾವುದೂ ಸುವರ್ಣ ನ್ಯೂಸ್ ಕಡೆಯಿಂದ ಆಗಿಲ್ಲ. ಇದೆಲ್ಲಾ ನೋಡಿದರೆ ಇದು ದುರುದ್ದೇಶಪೂರಿತ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರಿಗೆ ನನ್ನ ತೇಜೋವಧೆ ಮಾಡುವುದೇ ಮುಖ್ಯ ಉದ್ದೇಶವಾಗಿತ್ತು&#8217; ಎಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.</p>



<p>ಈ ವರದಿ ಪ್ರಸಾರದ ಹಿಂದೆ ಸ್ಥಳೀಯ ಶಾಸಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲರು ಕುಮ್ಮಕ್ಕು ಇದೆ ಎಂಬ ಬಲವಾದ ಅನುಮಾನವಿದೆ. ಸಧ್ಯದಲ್ಲೇ ಈ ಬಗ್ಗೆ ಕ್ರಿಮಿನಲ್ ಪ್ರಕರಣ ಹಾಗೂ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಪ್ರಕರಣ ದಾಖಲಿಸಿದ ನಂತರ ಇವೆಲ್ಲದರ ಸತ್ಯ ತಿಳಿಯಲಿದೆ ಎಂದೂ ಸಹ ಕಿಮ್ಮನೆ ರತ್ನಾಕರ್ <strong>ಪೀಪಲ್ ಮೀಡಿಯಾ </strong>ಗೆ ತಿಳಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
