<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>Koppa &#8211; Peepal Media</title>
	<atom:link href="https://peepalmedia.com/tag/koppa/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Wed, 27 Mar 2024 07:50:51 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>Koppa &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕೊಪ್ಪ ಬ್ಲಾಕ್ ಕಾಂಗ್ರೆಸ್ ನಲ್ಲಿ ಅಸಮಾಧಾನ ; ಜಿಲ್ಲಾಧ್ಯಕ್ಷರ ಏಕಪಕ್ಷೀಯ ನಿರ್ಧಾರಕ್ಕೆ ಆಕ್ರೋಶ</title>
		<link>https://peepalmedia.com/discontent-in-koppa-block-congress-outrage-over-the-unilateral-decision-of-the-district-president/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 27 Mar 2024 07:50:48 +0000</pubDate>
				<category><![CDATA[ಚಿಕ್ಕಮಗಳೂರು]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[ರಾಜಕೀಯ]]></category>
		<category><![CDATA[chikkamagalooru]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[Koppa]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Sudeer Kumar]]></category>
		<category><![CDATA[writing]]></category>
		<guid isPermaLink="false">https://peepalmedia.com/?p=37565</guid>

					<description><![CDATA[ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಧ್ಯಕ್ಷರ ನೇಮಕಾತಿಯನ್ನು ಕೂಡಲೇ ತಡೆಹಿಡಿಯುವಂತೆ ಕಾಂಗ್ರೆಸ್‍ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಕೆಪಿಸಿಸಿಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಕೊಪ್ಪದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‍ ಪಕ್ಷದ ಪ್ರಮುಖರು ಸಭೆ ಸೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ&#160; ನೇಮಕಗೊಂಡಿರುವ ಬಾಳೆಮನೆ ನಟರಾಜ್ ರವರಿಗೆ ಮಾಡಿರುವ ಆದೇಶವನ್ನು ತಕ್ಷಣವೇ ರದ್ದುಪಡಿಸಿ ಪಕ್ಷನಿಷ್ಠರಿಗೆ ಹುದ್ದೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದೇ ವೇಳೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಅಂಶುಮಂತ್ [&#8230;]]]></description>
										<content:encoded><![CDATA[
<p>ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಧ್ಯಕ್ಷರ ನೇಮಕಾತಿಯನ್ನು ಕೂಡಲೇ ತಡೆಹಿಡಿಯುವಂತೆ ಕಾಂಗ್ರೆಸ್‍ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಕೆಪಿಸಿಸಿಗೆ ಮನವಿ ಮಾಡಿದ್ದಾರೆ.</p>



<p>ಈ ಸಂಬಂಧ ಕೊಪ್ಪದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‍ ಪಕ್ಷದ ಪ್ರಮುಖರು ಸಭೆ ಸೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ&nbsp; ನೇಮಕಗೊಂಡಿರುವ ಬಾಳೆಮನೆ ನಟರಾಜ್ ರವರಿಗೆ ಮಾಡಿರುವ ಆದೇಶವನ್ನು ತಕ್ಷಣವೇ ರದ್ದುಪಡಿಸಿ ಪಕ್ಷನಿಷ್ಠರಿಗೆ ಹುದ್ದೆ ನೀಡಬೇಕೆಂದು ಮನವಿ ಮಾಡಿದ್ದಾರೆ.</p>



<p>ಇದೇ ವೇಳೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಅಂಶುಮಂತ್ ಗೌಡ ಅವರ ಏಕಪಕ್ಷೀಯ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷರಾದ <a href="http://ಡಿ.ಕೆ.ಶಿವಕುಮಾರ್">ಡಿ.ಕೆ.ಶಿವಕುಮಾರ್</a> ಅವರು ಕಡಿವಾಣ ಹಾಕಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸೂಚನೆ ನೀಡಬೇಕೆಂಬ ಒಮ್ಮತದ ತೀರ್ಮಾನವನ್ನು ಸಭೆಯಲ್ಲಿ&nbsp; ಕೈಗೊಳ್ಳಲಾಗಿದೆ.</p>



<p>ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನಟರಾಜ್ ನೇಮಕ&nbsp; ಮಾಡಿರುವ ಜಿಲ್ಲಾಧ್ಯಕ್ಷರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಆಕಾಂಕ್ಷಿಗಳಾಗಿದ್ದ ರವೀಂದ್ರ ಕುಕ್ಕೋಡಿಗೆ, ಮಂಜುನಾಥ್&nbsp; ನುಗ್ಗಿಘಿ, ನವೀನ್ ಮಾವಿನಕಟ್ಟೆಘಿ, ರಾಜೇಂದ್ರ ಧರೇಕೊಪ್ಪಘಿ, ನವೀನ್ ಕರುವಾನೆ, ಶ್ರೀಹರ್ಷ ಹರಿಹರಪುರ, ಮಿತ್ರ ಕೋಡ್ತಾಳ್, ಅಶೋಕ್ ನಾರ್ವೆ, ರತ್ನಾಕರ್ ಒಣತೋಟ ಈ ಮುಖಂಡರ ನೇತೃತ್ವದಲ್ಲಿ&nbsp;&nbsp; ಸುಮಾರು 500 ಕ್ಕೂ ಹೆಚ್ಚು&nbsp; ಕಾರ್ಯಕರ್ತರ ಸಭೆ&nbsp;&nbsp; ಸೇರಿಸಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡರು.</p>



<p>ಜಿಲ್ಲಾಧ್ಯಕ್ಷರಾದ ಅಂಶುಮಂತ್ ಗೌಡ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮಾಡುವ ಮುನ್ನ ಸೌಜನ್ಯಕ್ಕಾದರೂ ನಮ್ಮ ಅಭಿಪ್ರಾಯವನ್ನು ಕೇಳಲಿಲ್ಲ. 30 ವರ್ಷಗಳ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ&nbsp; ಹಾಗೂ ಪ್ರಸ್ತುತ ಕೆಪಿಸಿಸಿ ಸದಸ್ಯರೂ ಆಗಿರುವ ಬಾಳೆಮನೆ ನಟರಾಜ್ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.</p>



<p>ಸಭೆಯ ನಿರ್ಣಯಗಳು:<br>1. ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಬೇಕು.<br>2. ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿಯಾದ ಜಯಪ್ರಕಾಶ್&nbsp; ಹೆಗಡೆ ತಾಲ್ಲೂಕಿಗೆ ಆಗಮಿಸುತ್ತಿದ್ದುಘಿ, ಅವರಿಗೆ ಅಭೂತಪೂರ್ವ ಸ್ವಾಗತಕ್ಕೆ ತಯಾರಿ ನಡೆಸುವುದು.<br>3. ತಾಲ್ಲೂಕು ಅಧ್ಯಕ್ಷರ ನೇಮಕಾತಿಯನ್ನು ರದ್ದುಪಡಿಸಿ&nbsp; ಈಗಿರುವ&nbsp; ಆಕಾಂಕ್ಷಿಗಳಲ್ಲಿ&nbsp; ಯಾರನ್ನಾದರೂ ಒಬ್ಬರನ್ನು ನೇಮಕ&nbsp; ಮಾಡುವಂತೆ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸುವುದು.<br>4. ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿರುವ ಜಿಲ್ಲಾಧ್ಯಕ್ಷರ ವಿರುದ್ಧ ರಾಜ್ಯಾಧ್ಯಕ್ಷರಿಗೆ ದೂರು ನೀಡುವುದು.<br>5. ನಿಕಟಪೂರ್ವ ಬ್ಲಾಕ್ ಅಧ್ಯಕ್ಷರಾದ ಸುಧೀರ್ ಕುಮಾರ್ ಮುರೊಳ್ಳಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷರಾದ <a href="http://ಕೆ.ಎಸ್">ಕೆ.ಎಸ್</a>. ರವೀಂದ್ರ, ಮಾಜಿ ಬ್ಲಾಕ್ ಅಧ್ಯಕ್ಷರುಗಳು, ಸಮನ್ವಯ ಸಮಿತಿಯ ಹಿರಿಯರುಗಳ ಕನಿಷ್ಟ ಗಮನಕ್ಕೂ ತರದೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಏಕಪಕ್ಷೀಯ ನಿಲುವನ್ನು ಖಂಡಿಸಲಾಯಿತು.<br>6. ಶಾಸಕರ ಅಭಿಪ್ರಾಯ ಪಡೆಯದೇ ಏಕಪಕ್ಷೀಯವಾಗಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಪದಾಧಿಕಾರಿಗಳನ್ನು ನೇಮಕ ಮಾಡಿ ಗುಂಪುಗಾರಿಕೆಗೆ ಅವಕಾಶ ಮಾಡಿಕೊಡುತ್ತಿರುವ ಅಂಶುಮಂತ್ ಅವರ ನಡೆಯನ್ನು ಖಂಡಿಸಲು ತೀರ್ಮಾನಿಸಲಾಯಿತು.<br>7. ಈ ತಕ್ಷಣದಿಂದಲೇ ಅವರ ನೇಮಕಾತಿಯನ್ನು ತಡೆಹಿಡಿಯುವುದಲ್ಲದೇ ಹಾಲಿ ಇರುವ ಉಸ್ತುವಾರಿ ಸಮಿತಿಯ ನೇತೃತ್ವದಲ್ಲೇ ಲೋಕಸಭಾ ಚುನಾವಣೆಯನ್ನು ನಡೆಸುವಂತೆ ಒತ್ತಾಯಿಸುವುದು.<br></p>
]]></content:encoded>
					
		
		
			</item>
		<item>
		<title>ಆಸ್ಪತ್ರೆಗೆ ಜಾಗ ಮಂಜೂರಾಗದಿದ್ದರೆ ಪ್ರತಿಭಟನೆಯ ಘೇರಾವ್ ; ಕೊಪ್ಪದಲ್ಲಿ ಬೊಮ್ಮಾಯಿಗೆ ಪ್ರತಿಭಟನೆ ಕಾವು</title>
		<link>https://peepalmedia.com/protest-if-space-is-not-allotted-for-the-hospital-protests-erupted-for-bommai-in-koppa/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 25 Nov 2022 10:00:24 +0000</pubDate>
				<category><![CDATA[ಚಿಕ್ಕಮಗಳೂರು]]></category>
		<category><![CDATA[hospital]]></category>
		<category><![CDATA[karnataka]]></category>
		<category><![CDATA[Koppa]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[protest]]></category>
		<category><![CDATA[Sringeri]]></category>
		<guid isPermaLink="false">https://peepalmedia.com/?p=16510</guid>

					<description><![CDATA[ಶೃಂಗೇರಿ-ಕೊಪ್ಪ : ಶೃಂಗೇರಿ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಅತ್ಯಂತ ವಿಶಾಲವಾದ ಭೂ ವಿಸ್ತೀರ್ಣ ಹೊಂದಿರುವ, 3 ತಾಲ್ಲೂಕು ವ್ಯಾಪ್ತಿಗೆ ವಿಸ್ತರಿಸಿಕೊಂಡಿರುವ ಕ್ಷೇತ್ರ. ಇಂತಹ ಒಂದು ಕ್ಷೇತ್ರದಲ್ಲಿ ಕೇವಲ 100 ಹಾಸಿಗೆಗಳ ಒಂದು ಸುಸಜ್ಜಿತ ಆಸ್ಪತ್ರೆಯ ವ್ಯವಸ್ಥೆ ಇಲ್ಲವೆಂದರೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಂತಹದ್ದೊಂದು ಮಹತ್ವದ ಬೇಡಿಕೆಯನ್ನು ಇಟ್ಟು ಆಸ್ಪತ್ರೆ ಹೋರಾಟ ಸಮಿತಿ &#8216;ಕೊಪ್ಪ ಚಲೋ&#8217; ಸತ್ಯಾಗ್ರಹಕ್ಕೆ ಕರೆ ಕೊಟ್ಟಿದೆ. ಕಳೆದ 15 ವರ್ಷಗಳಿಂದ ಈ ಕ್ಷೇತ್ರಕ್ಕೆ ಸುಸಜ್ಜಿತ ಆಸ್ಪತ್ರೆಗೆ ಇಲ್ಲಿನ ಜನತೆ, ವಿವಿಧ ಜನಪರ, ಪ್ರಗತಿಪರ ಸಂಘಟನೆಗಳು [&#8230;]]]></description>
										<content:encoded><![CDATA[
<p style="font-size:20px"><strong>ಶೃಂಗೇರಿ-ಕೊಪ್ಪ :</strong> ಶೃಂಗೇರಿ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಅತ್ಯಂತ ವಿಶಾಲವಾದ ಭೂ ವಿಸ್ತೀರ್ಣ ಹೊಂದಿರುವ, 3 ತಾಲ್ಲೂಕು ವ್ಯಾಪ್ತಿಗೆ ವಿಸ್ತರಿಸಿಕೊಂಡಿರುವ ಕ್ಷೇತ್ರ. ಇಂತಹ ಒಂದು ಕ್ಷೇತ್ರದಲ್ಲಿ ಕೇವಲ 100 ಹಾಸಿಗೆಗಳ ಒಂದು ಸುಸಜ್ಜಿತ ಆಸ್ಪತ್ರೆಯ ವ್ಯವಸ್ಥೆ ಇಲ್ಲವೆಂದರೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇಂತಹದ್ದೊಂದು ಮಹತ್ವದ ಬೇಡಿಕೆಯನ್ನು ಇಟ್ಟು ಆಸ್ಪತ್ರೆ ಹೋರಾಟ ಸಮಿತಿ <strong>&#8216;ಕೊಪ್ಪ ಚಲೋ&#8217;</strong> ಸತ್ಯಾಗ್ರಹಕ್ಕೆ ಕರೆ ಕೊಟ್ಟಿದೆ.</p>



<figure class="wp-block-image size-large"><img fetchpriority="high" decoding="async" width="1024" height="614" src="https://peepalmedia.com/wp-content/uploads/2022/11/IMG-20221125-WA0024-1024x614.jpg" alt="" class="wp-image-16516" srcset="https://peepalmedia.com/wp-content/uploads/2022/11/IMG-20221125-WA0024-1024x614.jpg 1024w, https://peepalmedia.com/wp-content/uploads/2022/11/IMG-20221125-WA0024-300x180.jpg 300w, https://peepalmedia.com/wp-content/uploads/2022/11/IMG-20221125-WA0024-768x460.jpg 768w, https://peepalmedia.com/wp-content/uploads/2022/11/IMG-20221125-WA0024-1536x921.jpg 1536w, https://peepalmedia.com/wp-content/uploads/2022/11/IMG-20221125-WA0024-150x90.jpg 150w, https://peepalmedia.com/wp-content/uploads/2022/11/IMG-20221125-WA0024-696x417.jpg 696w, https://peepalmedia.com/wp-content/uploads/2022/11/IMG-20221125-WA0024-1068x640.jpg 1068w, https://peepalmedia.com/wp-content/uploads/2022/11/IMG-20221125-WA0024.jpg 1600w" sizes="(max-width: 1024px) 100vw, 1024px" /></figure>



<p style="font-size:20px">ಕಳೆದ 15 ವರ್ಷಗಳಿಂದ ಈ ಕ್ಷೇತ್ರಕ್ಕೆ ಸುಸಜ್ಜಿತ ಆಸ್ಪತ್ರೆಗೆ ಇಲ್ಲಿನ ಜನತೆ, ವಿವಿಧ ಜನಪರ, ಪ್ರಗತಿಪರ ಸಂಘಟನೆಗಳು ನಿರಂತರವಾಗಿ ಬೇಡಿಕೆ ಇಡುತ್ತಲೇ ಬಂದಿವೆ. ಆಸ್ಪತ್ರೆ ನಿರ್ಮಾಣಕ್ಕೆ 2007 ರಲ್ಲೇ ಹಣ ಬಿಡುಗಡೆ ಆಗಿದ್ದರೂ ಇಡೀ ಶೃಂಗೇರಿ ವ್ಯಾಪ್ತಿಯಲ್ಲಿ ಅದಕ್ಕೆ ಬೇಕಾದಂತಹ ಸೂಕ್ತ ಜಾಗದ ವ್ಯವಸ್ಥೆ ಮಾಡಲು ಇಲ್ಲಿನ ರಾಜಕಾರಣಿಗಳು ಸೋತಿರುವುದು ದುರಂತ.</p>



<p style="font-size:20px">ಶೃಂಗೇರಿ ಒಂದು ತಾಲ್ಲೂಕು ಕೇಂದ್ರವಾದರೂ ಇಲ್ಲಿ ಇರುವುದು ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದಂತಹ ಸಣ್ಣ ಆಸ್ಪತ್ರೆ. ಇಲ್ಲಿನ ನಾಗರೀಕರು ಜ್ವರ, ಶೀತ ತಲೆನೋವಿನಂತಹ ಸಣ್ಣಪುಟ್ಟ ಖಾಯಿಲೆಗೂ ಸಹ ದೂರದ ಕೊಪ್ಪ, ಶಿವಮೊಗ್ಗ, ತೀರ್ಥಹಳ್ಳಿ ಬಾಳೆಹೊನ್ನೂರು ಊರಿಗೇ ಹೋಗುವ ಅನಿವಾರ್ಯತೆ ಇದೆ. ಎಷ್ಟೋ ಸಂದರ್ಭದಲ್ಲಿ ಸಣ್ಣಪುಟ್ಟ ಶೃಶ್ರೂಷೆಯಿಂದ ಉಳಿಸಿಕೊಳ್ಳಬಹುದಾದ ಎಷ್ಟೋ ಜೀವಗಳು ಸೂಕ್ತ ಚಿಕಿತ್ಸೆ ದೊರಕದೇ ದಾರಿ ಮಧ್ಯೆಯೇ ಜೀವ ಹೋದ ಉದಾಹರಣೆ ಹಲವಷ್ಟಿದೆ. ಹೀಗೆ ಜೀವ ಹೋದ ಪ್ರತೀ ಸಂದರ್ಭದಲ್ಲಿಯೂ ಆಸ್ಪತ್ರೆ ಬೇಡಿಕೆಯ ಕೂಗು ಹೊರಡುತ್ತದೆ, ಕೆಲವು ದಿನಗಳ ನಂತರ ತಣ್ಣಗಾಗುತ್ತದೆ.</p>



<p style="font-size:20px">ಇಂತಹ ಹಲವಷ್ಟು ಕಾರಣಗಳಿಂದ ಆಸ್ಪತ್ರೆ ಬೇಡಿಕೆ ಬಿಡದೇ ಕೇಳಿ ಬರುತ್ತಿದೆ. ಸುಮಾರು 25 ವರ್ಷಗಳಿಂದಲೂ ಇಲ್ಲಿನ ನಾಗರೀಕರು ಶೃಂಗೇರಿ ಕ್ಷೇತ್ರದಲ್ಲೊಂದು ವ್ಯವಸ್ಥಿತವಾದ ಆಸ್ಪತ್ರೆಗೆ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಹಣ ಬಿಡುಗಡೆ ಆಗಿದ್ದರೂ ಕಾಣದ ಕೈಗಳ ಕೈವಾಡದಿಂದ ಆಸ್ಪತ್ರೆಗೆ ಜಾಗ ಮಂಜೂರು ಮಾಡಲು ರಾಜ್ಯದಲ್ಲಿ ಆಡಳಿತ ನಡೆಸಿದ ಮೂರೂ ಪಕ್ಷಗಳ ನೇತೃತ್ವದ ಎಲ್ಲಾ ಸರ್ಕಾರಗಳು ಸೋತಿವೆ.</p>



<p style="font-size:20px">ಇನ್ನು ಈ ಬೇಡಿಕೆ ತೀವ್ರಗೊಳಿಸಿ ಕಳೆದ 2 ವರ್ಷಗಳಿಂದ ಮೇಲಿಂದ ಮೇಲೆ ಒತ್ತಾಯ ಮಾಡಲಾಗುತ್ತಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಇದೇ ಕಾರಣಕ್ಕೆ ಇಲ್ಲಿನ ಆಸ್ಪತ್ರೆ ಹೋರಾಟ ಸಮಿತಿಯ ಜೊತೆಗೆ ಪ್ರಮುಖ ಸಂಘಟನೆಗಳು ಇಡೀ ಶೃಂಗೇರಿಯನ್ನು ಬಂದ್ ಮಾಡಿಸಿದ್ದವು. ಅಂದು ನಡೆದ ಹೋರಾಟಕ್ಕೆ ಸರ್ಕಾರ ಶೀಘ್ರದಲ್ಲೇ ಭೂ ಮಂಜೂರು ಮಾಡಿಸುವ ಬಗ್ಗೆಯೂ ಭರವಸೆ ನೀಡಿತ್ತು ಆದರೆ ಈ ಬಗ್ಗೆ ಇಂದಿನ ವರೆಗೂ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂಬುದು ನಿಗೂಢ.</p>



<p style="font-size:20px">ಸಧ್ಯ ಶೃಂಗೇರಿ ಆಸ್ಪತ್ರೆ ಹೋರಾಟ ಸಮಿತಿ ನವೆಂಬರ್ 25 ಮತ್ತು 26 ರ ಎರಡೂ ದಿನ ಅಹೋರಾತ್ರಿ ಹೋರಾಟಕ್ಕೆ ಕರೆ ಕೊಟ್ಟು ಸತ್ಯಾಗ್ರಹ ಪ್ರಾರಂಭಿಸಿದೆ. ಶೃಂಗೇರಿ ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ಅಹೋರಾತ್ರಿ ಸತ್ಯಾಗ್ರಹ ನಡೆಸುತ್ತಿದ್ದು, ಬೇಡಿಕೆ ಈಡೇರದೇ ಇದ್ದಲ್ಲಿ, 27 ರ ಕೊಪ್ಪ ತಾಲ್ಲೂಕಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರುವ ದಿನ <strong>ಕೊಪ್ಪ ಚಲೋ</strong> ಹೋರಾಟಕ್ಕೆ ಮುಂದಾಗುವ ಎಚ್ಚರಿಕೆ ನೀಡಿದೆ.</p>



<p style="font-size:20px">ಇದಕ್ಕೆ ನಾಡಿನ ವಿವಿಧ ಜನಪರ ಪ್ರಗತಿಪರ ಸಂಘಟನೆಗಳ ಬೆಂಬಲ ಸಿಕ್ಕಿದ್ದು ನವೆಂಬರ್ 27 ರಂದು ನಿರ್ಣಾಯಕ ಹೋರಾಟದ ಮೂಲಕ ಮುಖ್ಯಮಂತ್ರಿಗಳಿಗೂ ಎಚ್ಚರಿಕೆ ಸಂದೇಶ ನೀಡಲು ಸಜ್ಜಾಗಿವೆ.</p>
]]></content:encoded>
					
		
		
			</item>
		<item>
		<title>ಬಿಜೆಪಿ ಬಾಡಿಗೆ ಭಾಷಣಕಾರರಿಗೆ ಸಿಎಂ ಕಛೇರಿಯಿಂದ ಸಂಬಳ : ಸುಧೀರ್ ಮುರೊಳ್ಳಿ ದಾಖಲೆ ಬಿಡುಗಡೆ</title>
		<link>https://peepalmedia.com/salary-to-bjp-hired-speakers-from-cm-office-sudhir-muroli-document-released/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 24 Nov 2022 10:22:45 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[DN Jeevaraj]]></category>
		<category><![CDATA[kannada]]></category>
		<category><![CDATA[Koppa]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<category><![CDATA[Sudeer Kumar]]></category>
		<guid isPermaLink="false">https://peepalmedia.com/?p=16384</guid>

					<description><![CDATA[ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರು ತಮ್ಮ ಸರ್ಕಾರಿ ಕಛೇರಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರಿಗೆಲ್ಲಾ ಮುಖ್ಯಮಂತ್ರಿಗಳ ಕಛೇರಿಯಿಂದ ಸಂಬಳ ಕೊಡಲಾಗುತ್ತಿದೆ ಎಂದು ಡಿ.ಎನ್.ಜೀವರಾಜ್ ಮೇಲೆ ಕಾಂಗ್ರೆಸ್ ವಕ್ತಾರರಾದ ಸುಧೀರ್ ಕುಮಾರ್ ಮುರೊಳ್ಳಿಯವರು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ಶೃಂಗೇರಿ ಶಾಸಕರಾದ ಟಿ.ಡಿ.ರಾಜೇಗೌಡರ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿದ ವಿಜಯಾನಂದ ವ್ಯಕ್ತಿ ಡಿ.ಎನ್. ಜೀವರಾಜ್ ಅವರ ಕಛೇರಿ ಸಿಬ್ಬಂದಿ, ಸರ್ಕಾರಿ ಸಂಬಳ ತಗೆದುಕೊಂಡಿದ್ದರು. ಮೇಲಾಗಿ ಈ ವ್ಯಕ್ತಿ ಕೊಪ್ಪ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲೂ [&#8230;]]]></description>
										<content:encoded><![CDATA[
<p style="font-size:20px"><font style="vertical-align: inherit;"><font style="vertical-align: inherit;">ಮುಖ್ಯಮಂತ್ರಿಗಳ </font></font>ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಅವರು ತಮ್ಮ ಸರ್ಕಾರಿ ಕಛೇರಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರಿಗೆಲ್ಲಾ ಮುಖ್ಯಮಂತ್ರಿಗಳ ಕಛೇರಿಯಿಂದ ಸಂಬಳ ಕೊಡಲಾಗುತ್ತಿದೆ ಎಂದು ಡಿ.ಎನ್.ಜೀವರಾಜ್ ಮೇಲೆ ಕಾಂಗ್ರೆಸ್ ವಕ್ತಾರರಾದ ಸುಧೀರ್ ಕುಮಾರ್ ಮುರೊಳ್ಳಿಯವರು ಗಂಭೀರ ಆರೋಪ ಮಾಡಿದ್ದಾರೆ.</p>



<p style="font-size:20px"><font style="vertical-align: inherit;"><font style="vertical-align: inherit;">ಇತ್ತೀಚೆಗೆ ಶೃಂಗೇರಿ ಶಾಸಕರಾದ ಟಿ.ಡಿ.ರಾಜೇಗೌಡರ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿದ ವಿಜಯಾನಂದ ವ್ಯಕ್ತಿ ಡಿ.ಎನ್. </font><font style="vertical-align: inherit;">ಜೀವರಾಜ್ ಅವರ ಕಛೇರಿ ಸಿಬ್ಬಂದಿ, ಸರ್ಕಾರಿ ಸಂಬಳ ತಗೆದುಕೊಂಡಿದ್ದರು. </font><font style="vertical-align: inherit;">ಮೇಲಾಗಿ ಈ ವ್ಯಕ್ತಿ ಕೊಪ್ಪ ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲೂ ಇದ್ದಾರೆ. </font><font style="vertical-align: inherit;">ಇಂತಹ ವ್ಯಕ್ತಿಯನ್ನು ಮುಖ್ಯಮಂತ್ರಿಗಳ </font></font>ರಾಜಕೀಯ<font style="vertical-align: inherit;"><font style="vertical-align: inherit;"> ಕಾರ್ಯದರ್ಶಿ ಡಿಎನ್ ಜೀವರಾಜ್ ಸರ್ಕಾರಿ ಹುದ್ದೆ ಕೊಟ್ಟು ಮುಖ್ಯಮಂತ್ರಿಗಳ ಕಛೇರಿಯಿಂದ ಸಂಬಳವನ್ನೂ ಕೊಡಿಸಿದ್ದು ದಾಖಲೆಗಳಲ್ಲಿದೆ. </font><font style="vertical-align: inherit;">ಆ ಮೂಲಕ ತಮ್ಮ ಕಛೇರಿ ಸಿಬ್ಬಂದಿಯನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಂಡ ಬಗ್ಗೆ ಜೀವರಾಜ್ ಮೇಲೆ ಆರೋಪ ಮಾಡಿದ್ದಾರೆ.</font></font></p>



<figure class="wp-block-image size-large"><img decoding="async" width="748" height="1024" src="https://peepalmedia.com/wp-content/uploads/2022/11/IMG_20221124_155006-748x1024.jpg" alt="" class="wp-image-16390" srcset="https://peepalmedia.com/wp-content/uploads/2022/11/IMG_20221124_155006-748x1024.jpg 748w, https://peepalmedia.com/wp-content/uploads/2022/11/IMG_20221124_155006-219x300.jpg 219w, https://peepalmedia.com/wp-content/uploads/2022/11/IMG_20221124_155006-768x1051.jpg 768w, https://peepalmedia.com/wp-content/uploads/2022/11/IMG_20221124_155006-150x205.jpg 150w, https://peepalmedia.com/wp-content/uploads/2022/11/IMG_20221124_155006-300x411.jpg 300w, https://peepalmedia.com/wp-content/uploads/2022/11/IMG_20221124_155006-696x953.jpg 696w, https://peepalmedia.com/wp-content/uploads/2022/11/IMG_20221124_155006.jpg 1020w" sizes="(max-width: 748px) 100vw, 748px" /></figure>



<p style="font-size:20px">ಕೇವಲ ವಿಜಯಾನಂದ ಮಾತ್ರವಲ್ಲದೆ ಗ್ರಾಮ ಪಂಚಾಯಿತಿ ಸದಸ್ಯರನ್ನೂ ಸಹ ತಮ್ಮ ಕಛೇರಿ ಸಿಬ್ಬಂದಿ ಎಂಬಂತೆ ತೋರಿಸಿ ಅವರಿಗೂ ಸಹ ಮುಖ್ಯಮಂತ್ರಿ ಕಛೇರಿಯಿಂದ ಸಂಬಳ ಸಿಗುವಂತೆ ಮಾಡಿದ್ದಾರೆ ಮಾನ್ಯ ಡಿಎನ್ ಜೀವರಾಜ್ ಅವರು. ಶಾಸಕಾಂಗ ಮತ್ತು ಕಾರ್ಯಾಂಗ ಮತ್ತು ಬಿಜೆಪಿ ಪಕ್ಷ ಈ ಮೂರನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗುವಂತೆ ಮಾಡಿದ ಅಪರೂಪದ ವ್ಯಕ್ತಿ ಜೀವರಾಜ್ ಎಂಬಂತೆ ಸುಧೀರ್ ಕುಮಾರ್ ವಾಗ್ದಾಳಿ ಮಾಡಿದ್ದಾರೆ.</p>



<p style="font-size:20px">ಈ ಬಗ್ಗೆ ಮಾಧ್ರಮಗಳ ಎದುರು ಅಧಿಕೃತ ದಾಖಲೆಗಳನ್ನೂ ಬಿಡುಗಡೆ ಮಾಡಿದ ಸುಧೀರ್ ಕುಮಾರ್ ಅವರು, ಪುಣ್ಯಪಾಲ್ ಎಂಜೆ ಎನ್ನುವ ಬಿಜೆಪಿ ಬಾಡಿಗೆ ಭಾಷಣಕಾರರಿಗೆ ಮಾಜಿ ಶಾಸಕ ಜೀವರಾಜ್ 31,500 ರೂಪಾಯಿಗಳ ಮಾಸಿಕ ಸಂಬಳ ನಿಗದಿ ಮಾಡಿದ ಬಗ್ಗೆಯೂ ದಾಖಲೆ ಮೂಲಕ ಬಿಡುಗಡೆ ಮಾಡಿದ್ದಾರೆ‌.</p>



<p style="font-size:20px">ಇದರ ಜೊತೆಗೆ ಕೊಪ್ಪ ಗ್ರಾಮಾಂತರ ವಿಭಾಗದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯೆ, ಬಿಜೆಪಿ ಯುವ ಮೋರ್ಚಾ ಸದಸ್ಯೆ ಶೃತಿ ರೋಹಿತ್ ಎಂಬುವವರಿಗೂ ಕೂಡ ತಮ್ಮ ಆಪ್ತ ಸಹಾಯಕಿ ಎಂದು 31,500 ರೂಪಾಯಿಗಳ ಮಾಸಿಕ ಸಂಬಳ ನೀಡಲು ಜೀವರಾಜ್ ಸಹಕರಿಸಿದ್ದಾರೆ.</p>



<figure class="wp-block-image size-large"><img decoding="async" width="1024" height="653" src="https://peepalmedia.com/wp-content/uploads/2022/11/IMG_20221124_154938-1024x653.jpg" alt="" class="wp-image-16391" srcset="https://peepalmedia.com/wp-content/uploads/2022/11/IMG_20221124_154938-1024x653.jpg 1024w, https://peepalmedia.com/wp-content/uploads/2022/11/IMG_20221124_154938-300x191.jpg 300w, https://peepalmedia.com/wp-content/uploads/2022/11/IMG_20221124_154938-768x490.jpg 768w, https://peepalmedia.com/wp-content/uploads/2022/11/IMG_20221124_154938-1536x979.jpg 1536w, https://peepalmedia.com/wp-content/uploads/2022/11/IMG_20221124_154938-150x96.jpg 150w, https://peepalmedia.com/wp-content/uploads/2022/11/IMG_20221124_154938-696x444.jpg 696w, https://peepalmedia.com/wp-content/uploads/2022/11/IMG_20221124_154938-1068x681.jpg 1068w, https://peepalmedia.com/wp-content/uploads/2022/11/IMG_20221124_154938.jpg 1694w" sizes="(max-width: 1024px) 100vw, 1024px" /></figure>



<p style="font-size:20px">ಹಾಗೂ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ತಾಲ್ಲೂಕು ಬಿಜೆಪಿ ಮಹಿಳಾ ಮೋರ್ಚಾ ಮುಖಂಡರಾದ ವಾಣಿ ಸತೀಶ್ ಎಂಬುವವರಿಗೂ ಮಾಜಿ ಶಾಸಕ ಜೀವರಾಜ್ 17,500 ರೂಪಾಯಿಗಳ ಮಾಸಿಕ ಸರ್ಕಾರಿ ಸಂಬಳ ನಿಗದಿ ಮಾಡಿದ್ದಾರೆ ಎಂದು ಸುಧೀರ್ ಕುಮಾರ್ ಮುರೊಳ್ಳಿ ಎಲ್ಲಾ ದಾಖಲೆಗಳ ಮೂಲಕ ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿದ್ದಾರೆ.</p>



<p style="font-size:20px">ಇಷ್ಟೆಲ್ಲಾ ದಾಖಲೆಗಳನ್ನು ಮಾಧ್ಯಮಗಳ ಮೂಲಕ ಬಿಡುಗಡೆ ಮಾಡುತ್ತಿದ್ದೇನೆ. ಮಾನ್ಯ ಮುಖ್ಯಮಂತ್ರಿಗಳಿಗೆ ತಾಕತ್ತು, ದಮ್ಮು ಇದ್ದರೆ ನಿಮ್ಮ ಆಪ್ತ ಕಾರ್ಯದರ್ಶಿ ಜೀವರಾಜ್ ಮೇಲೆ ಕ್ರಮ ತಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
