<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>kunal kamra &#8211; Peepal Media</title>
	<atom:link href="https://peepalmedia.com/tag/kunal-kamra/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 30 Jun 2025 07:33:53 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>kunal kamra &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ತುರ್ತು ಪರಿಸ್ಥಿತಿಗೆ ಐವತ್ತು ವರ್ಷ: &#8216;ಸ್ವಂತ ರಿಸ್ಕ್‌ʼನಲ್ಲಿ ದೆಹಲಿಯಲ್ಲಿ ಪ್ರದರ್ಶನ ನೀಡಬಹುದು ಎಂದು ಕುನಾಲ್ ಕಮ್ರಾಗೆ ಹೇಳಿದ ದೆಹಲಿ ಮುಖ್ಯಮಂತ್ರಿ</title>
		<link>https://peepalmedia.com/fifty-years-of-emergency-delhi-cm-tells-kunal-kamra-he-can-perform-in-delhi-at-his-own-risk/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 30 Jun 2025 07:33:51 +0000</pubDate>
				<category><![CDATA[ಅಂಕಣ]]></category>
		<category><![CDATA[delhi CM]]></category>
		<category><![CDATA[Emergency]]></category>
		<category><![CDATA[freedom of expression]]></category>
		<category><![CDATA[kunal kamra]]></category>
		<category><![CDATA[Rekha Gupta]]></category>
		<guid isPermaLink="false">https://peepalmedia.com/?p=61793</guid>

					<description><![CDATA[ಜೂನ್ 25, 1975 ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ ತುರ್ತು ಪರಿಸ್ಥಿತಿಗೆ ಐವತ್ತು ವರ್ಷಗಳಾಗಿವೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಅನ್ನು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪಕ್ಷವೆಂದು ಬಿಂಬಿಸಲು ಪ್ರತೀ ವರ್ಷ ಇದನ್ನು ಬಳಸಿಕೊಳ್ಳುತ್ತಿದೆ. ಬಿಜೆಪಿಯ ಅಧಿಕೃತ ಖಾತೆಯಲ್ಲಿ ʼಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಹೇರುತ್ತದೆಯೇʼ ಎಂಬ ಪ್ರಶ್ನೆಯನ್ನು ಕೇಳಿ ಟ್ವಿಟರ್ ಸಮೀಕ್ಷೆಯೊಂದನ್ನು ನಡೆಸಿದ್ದು, ಇದು ಬೂಮರಾಂಗ್ ಆದ ನಂತರ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದವರಲ್ಲಿ ಮೂರನೇ ಎರಡರಷ್ಟು ಜನರು ಬಿಜೆಪಿಯ ಈ ಪ್ರಶ್ನೆಗೆ [&#8230;]]]></description>
										<content:encoded><![CDATA[
<p>ಜೂನ್ 25, 1975 ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಘೋಷಿಸಿದ ತುರ್ತು ಪರಿಸ್ಥಿತಿಗೆ ಐವತ್ತು ವರ್ಷಗಳಾಗಿವೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಅನ್ನು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪಕ್ಷವೆಂದು ಬಿಂಬಿಸಲು ಪ್ರತೀ ವರ್ಷ ಇದನ್ನು ಬಳಸಿಕೊಳ್ಳುತ್ತಿದೆ.</p>



<p>ಬಿಜೆಪಿಯ ಅಧಿಕೃತ ಖಾತೆಯಲ್ಲಿ ʼಭವಿಷ್ಯದಲ್ಲಿ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಹೇರುತ್ತದೆಯೇʼ ಎಂಬ ಪ್ರಶ್ನೆಯನ್ನು ಕೇಳಿ <a href="https://x.com/BJP4India/status/1937864240473497673">ಟ್ವಿಟರ್ ಸಮೀಕ್ಷೆಯೊಂದ</a>ನ್ನು ನಡೆಸಿದ್ದು, ಇದು ಬೂಮರಾಂಗ್ ಆದ ನಂತರ ಮತ್ತು ಅಭಿಪ್ರಾಯ ವ್ಯಕ್ತಪಡಿಸಿದವರಲ್ಲಿ ಮೂರನೇ ಎರಡರಷ್ಟು ಜನರು ಬಿಜೆಪಿಯ ಈ ಪ್ರಶ್ನೆಗೆ ನಕಾರಾತ್ಮಕ ಉತ್ತರ ನೀಡಿ ವಿರೋಧಿಸಿದ್ದಾರೆ. ಹೀಗಾಗಿ, ದೆಹಲಿಯ ಮುಖ್ಯಮಂತ್ರಿ, ಬಿಜೆಪಿ ನಾಯಕಿ ರೇಖಾ ಗುಪ್ತಾ ಅವರ ಹೇಳಿಕೆಗಳು ಪಕ್ಷಕ್ಕೆ ಮುಜುಗರವನ್ನುಂಟುಮಾಡಿವೆ.</p>



<p><em>ದಿ ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್‌ನ ಹಿಂದಿ ದಿನಪತ್ರಿಕೆ ಜನಸತ್ತ</em> ಆಯೋಜಿಸಿದ್ದ <a href="https://www.youtube.com/watch?v=tuJHgn9toPc">ಮಾಧ್ಯಮ ಕಾರ್ಯಕ್ರಮದಲ್ಲಿ ಮಾತನಾಡಿದ</a> ರೇಖಾ ಗುಪ್ತಾ, ಐಟಿ ನಿಯಮಗಳ ವಿರುದ್ಧದ ವಿಷಯದಲ್ಲಿ ಅರ್ಜಿದಾರ ಮತ್ತು ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ದೆಹಲಿಗೆ ಬಂದು ಪ್ರದರ್ಶನ ನೀಡಬಹುದು, ಆದರೆ &#8220;ತನ್ನ ಸ್ವಂತ ರಿಸ್ಕ್‌ನಲ್ಲಿ&#8221; ಬರಬಹುದು ಎಂದು ಹೇಳಿದರು. ಆಗ ಮಾಧ್ಯಮ ಸಂಸ್ಥೆಯ ಪ್ರತಿನಿಧಿಯೊಬ್ಬರು ಮುಖ್ಯಮಂತ್ರಿಯೊಬ್ಬರು &#8216;ತನ್ನ ಸ್ವಂತ ರಿಸ್ಕ್‌ನಲ್ಲಿ ಬರಬಹುದು&#8217; ಎಂದು  ಹೇಗೆ ಹೇಳಬಹುದು ಎಂದು ಕೇಳಿದಾಗ ರೇಖಾ ಗುಪ್ತಾ ಉತ್ತರಿಸಲು ನಿರಾಕರಿಸಿದರು.</p>



<p>ಆಡಳಿತಾರೂಢ ಶಿವಸೇನೆ (ಏಕನಾಥ್ ಶಿಂಧೆ) ಜೊತೆ ಸಂಪರ್ಕ ಹೊಂದಿರುವ ದುಷ್ಕರ್ಮಿಗಳು ಮುಂಬೈನಲ್ಲಿ ಕುನಾಲ್‌ ಕಾಮ್ರಾ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿ, ಯೂಟ್ಯೂಬ್‌ನಲ್ಲಿ ರಾಜಕೀಯ ವಿಡಂಬನೆಯನ್ನು ಪೋಸ್ಟ್ ಮಾಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ನಂತರ, ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ತೀವ್ರ ವಿವಾದಕ್ಕೆ ಗುರಿಯಾಗಿದ್ದರು.</p>



<p><a href="https://thewire.in/rights/fir-against-comedian-kunal-kamra-venue-of-his-new-show-shut-down-after-vandalism-by-shiv-sainiks">ಕಾಮ್ರಾ ಮತ್ತು ಸದ್ಯ ಬಂದ್‌ ಮಾಡಲಾಗಿರುವ</a> ಹಾಸ್ಯ ಕಾರ್ಯಕ್ರಮದ ಸ್ಥಳದ ಮೇಲಿನ ದಾಳಿಗಳು, ಮುಕ್ತ ಅಭಿವ್ಯಕ್ತಿ ಅಥವಾ ವಿಡಂಬನೆಗೆ ಸುರಕ್ಷಿತ ವೇದಿಕೆಯನ್ನು ಒದಗಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಆಗಿರುವ ಅಸಮರ್ಥತೆಗಯನ್ನು ಈಗಾಗಲೇ ಬೆಳಕಿಗೆ ತಂದಿವೆ. ಹಿಂದಿ ಚಲನಚಿತ್ರೋದ್ಯಮವನ್ನು ಹೊಂದಿರುವ ಮತ್ತು ಮೊದಲಿನಂತೆ ಪ್ರತಿಭಟನಾ-ಸಾಹಿತ್ಯ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಮತ್ತು ನಗರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಅಪಾಯದಲ್ಲಿದೆ ಎಂಬ ವಿಚಾರವನ್ನು ಮುಖ್ಯಮಂತ್ರಿ ಮತ್ತು ಬಿಜೆಪಿ ಹಾಗೂ ಶಿವಸೇನೆಯ ಉನ್ನತ ನಾಯಕರು ಮುಚ್ಚಿಹಾಕಲು ಸಾಧ್ಯವಿಲ್ಲ.</p>



<p>ಈ ಮಧ್ಯೆ, ಗುಪ್ತಾ ಅವರ ಮಾತಿಗೆ ಪ್ರತಿಕ್ರಿಯಿಸಿದ <a href="https://x.com/kunalkamra88/status/1938492288549982551">ಕಾಮ್ರಾ</a> , &#8220;ಒಬ್ಬ ಘನವೆತ್ತ ಮುಖ್ಯಮಂತ್ರಿಯಾಗಿ ಮಾತನಾಡಬೇಕಾದವರು ಶುದ್ಧ ಎಬಿವಿಪಿ ಕಾರ್ಯಕರ್ತರಂತೆ ಮಾತನಾಡಿದರು&#8221; ಎಂದು ಹೇಳಿದರು.</p>



<p>ಗುಪ್ತಾ ಅವರ ಹೇಳಿಕೆಗಳು &#8220;ದೆಹಲಿ ಪ್ರವಾಸೋದ್ಯಮದ ಜಾಹೀರಾತಿಗೆ ಒಂದು ಟ್ಯಾಗ್‌ಲೈನ್&#8221; ಆಗಿರಬಹುದು ಎಂದು ಅವರು ಹೇಳಿದರು.</p>



<p>ದೆಹಲಿ ಸರ್ಕಾರ ಬಿಜೆಪಿಯ ಕೈಯಲ್ಲಿದ್ದು,  ರಾಜಧಾನಿಯಲ್ಲಿ &#8216;ತ್ರಿಪಲ್ ಎಂಜಿನ್&#8217; ಸರ್ಕಾರವಿದೆ ಎಂದು ಹೆಮ್ಮೆಪಡುತ್ತಿರುವಾಗ, ರಾಜಕೀಯ ವಿಡಂಬನೆ ಮತ್ತು ಹಾಸ್ಯದ ಅಭಿವ್ಯಕ್ತಿಗೆ ಸುರಕ್ಷಿತ ಸ್ಥಳವನ್ನು ನೀಡಲು ದೆಹಲಿ ಮುಖ್ಯಮಂತ್ರಿಗಿರುವ ಅಸಮರ್ಥತೆಯು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. </p>



<p><a href="https://www.youtube.com/watch?v=2PnbFqm1vUY&amp;ab_channel=KunalKamra">ಮಾರ್ಚ್‌ನಲ್ಲಿ, ಕಮ್ರಾ ತಮ್ಮ ಹೊಸ ಕಾರ್ಯಕ್ರಮ &#8216;ನಯ ಭಾರತ್&#8217;</a> ನ ವೀಡಿಯೊವನ್ನು ಬಿಡುಗಡೆ ಮಾಡಿದರು. ದೇಶದ ಪರಿಸ್ಥಿತಿ ಮತ್ತು ಸರ್ಕಾರದ ಬಗ್ಗೆ ತೀಕ್ಷ್ಣವಾದ ನಿಲುವಿಗೆ ಹೆಸರುವಾಸಿಯಾದ ಕಮ್ರಾ ಅವರು ಆ ಕಾರ್ಯಕ್ರಮದಲ್ಲಿ ಹಲವಾರು ವಿಡಂಬನಾತ್ಮಕ ಹಾಡುಗಳನ್ನು ಹಾಡಿದರು.</p>



<p>ಮುಂಬೈನಲ್ಲಿ ವಿಡಿಯೋ ರೆಕಾರ್ಡ್ ಮಾಡಲಾದ ಕಾಮಿಡಿ ಕ್ಲಬ್ ಅನ್ನು ಶಿವಸೇನಾ ಸದಸ್ಯರು ಧ್ವಂಸಗೊಳಿಸಿದರು, ಕಾಮ್ರಾ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಾ, ಕಾಮ್ರಾ &#8220;ತನ್ಶಾ‌&#8221; ಅಥವಾ ಸರ್ವಾಧಿಕಾರಿ ಎಂಬ ಹಾಡನ್ನು ಹಾಡಿದರು. ಇನ್ನೊಂದರಲ್ಲಿ, ದಿಲ್ ತೋ ಪಾಗಲ್ ಹೈ ಹಾಡಿನಲ್ಲಿ, ಅವರು ಶಿವಸೇನಾ ನಾಯಕ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯನ್ನು ಗುರಿಯಾಗಿಸಿ ವಿಡಂಬನೆ ಮಾಡಿದರು.</p>



<p></p>
]]></content:encoded>
					
		
		
			</item>
		<item>
		<title>ಭಾರತದಲ್ಲಿ ವೈಜ್ಞಾನಿಕತೆ ಜೀವಂತವಿದೆಯೇ?</title>
		<link>https://peepalmedia.com/is-science-alive-in-india/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 17 Apr 2025 08:29:47 +0000</pubDate>
				<category><![CDATA[ಅಂಕಣ]]></category>
		<category><![CDATA[atheism]]></category>
		<category><![CDATA[atheist]]></category>
		<category><![CDATA[Gauhar Raza]]></category>
		<category><![CDATA[hindu]]></category>
		<category><![CDATA[hinduism]]></category>
		<category><![CDATA[hindutva]]></category>
		<category><![CDATA[india]]></category>
		<category><![CDATA[islam]]></category>
		<category><![CDATA[islamic]]></category>
		<category><![CDATA[kunal kamra]]></category>
		<category><![CDATA[politics]]></category>
		<category><![CDATA[religion]]></category>
		<category><![CDATA[religious]]></category>
		<category><![CDATA[science]]></category>
		<category><![CDATA[scientific temper]]></category>
		<category><![CDATA[scientific temperament]]></category>
		<category><![CDATA[Unscientific]]></category>
		<guid isPermaLink="false">https://peepalmedia.com/?p=57411</guid>

					<description><![CDATA[ವೈಜ್ಞಾನಿಕ ಚಿಂತನೆ ಎಂದರೇನು?ವೈಜ್ಞಾನಿಕ ಚಿಂತನೆ ಎನ್ನುವುದು ಕೇವಲ ಪ್ರಯೋಗಾಲಯಗಳಲ್ಲಿ ನಡೆಯುವ ವಿಜ್ಞಾನಿಗಳ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಪ್ರಶ್ನೆ ಮಾಡುವ, ಪುರಾವೆಗಳ ಆಧಾರದ ಮೇಲೆ ನಂಬಿಕೆಗಳನ್ನು ಕಟ್ಟುವ, ಮತ್ತು ತಪ್ಪುಗಳನ್ನು ಗುರುತಿಸಿ ಸರಿ ಮಾಡುವ ಒಂದು ಸಾಮರ್ಥ್ಯ. ವೈಜ್ಞಾನಿಕ ಮನೋಭಾವವು ಮಕ್ಕಳಲ್ಲಿ ಹುಟ್ಟುವ, &#8220;ನಕ್ಷತ್ರಗಳು ಏಕೆ ಹೊಳೆಯುತ್ತವೆ?&#8221;, &#8220;ನಾವು ಎಲ್ಲಿಂದ ಬಂದೆವು?&#8221; ಮೊದಲಾದ ಪ್ರಶ್ನೆಗಳಿಂದ ಆರಂಭವಾಗುತ್ತದೆ. ವೈಜ್ಞಾನಿಕ ಚಿಂತನೆಯ ಪಥವಿಜ್ಞಾನ ಎಂದರೆ ಪ್ರಶ್ನೆಗಳೊಂದಿಗೆ ಆರಂಭವಾಗುವ ಪ್ರಯಾಣ. &#8220;ಹೇಗೇ?&#8221; ಎಂಬ ಪ್ರಶ್ನೆಯೇ ವೈಜ್ಞಾನಿಕ ಚಿಂತನೆಯ ಮೊದಲ ಹೆಜ್ಜೆ. [&#8230;]]]></description>
										<content:encoded><![CDATA[
<pre class="wp-block-code"><code><strong>ವೈಜ್ಞಾನಿಕ ಚಿಂತನೆ ಮತ್ತು ಅದನ್ನು ಪಾಲಿಸುವುದು ಒಂದು ಸಮಾಜದ ಬೌದ್ಧಿಕ ಪ್ರಗತಿಯನ್ನು ರೂಪಿಸುವ ಪ್ರಮುಖ ಅಂಶವಾಗಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ವೈಜ್ಞಾನಿಕ ಮನೋಭಾವ, ಧಾರ್ಮಿಕ ಮೌಲ್ಯಗಳು, ಸಂಸ್ಕೃತಿಯ ಪ್ರಭಾವ ಮತ್ತು ರಾಜಕೀಯ ಒತ್ತಡಗಳ ನಡುವೆ ತೊಳಲಾಡುತ್ತಿದೆ. "Are We Indians Scientific? Nope" ಎಂಬ ಕುನಾಲ್ ಕಮ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಖ್ಯಾತ ವಿಜ್ಞಾನಿ ಹಾಗೂ ಸಾಹಿತಿ <a href="https://en.wikipedia.org/wiki/Gauhar_Raza">ಗೌಹರ್ ರಾಝಾ </a>ಈ ಗಂಭೀರ ವಿಷಯದ ಬಗ್ಗೆ ಮಾತನಾಡಿದ್ದಾರೆ</strong>. ಇದರ ಸಾರಾಂಶವನ್ನು ಇಲ್ಲಿ ನೀಡಲಾಗಿದೆ</code></pre>



<p><strong>ವೈಜ್ಞಾನಿಕ ಚಿಂತನೆ ಎಂದರೇನು?</strong><br>ವೈಜ್ಞಾನಿಕ ಚಿಂತನೆ ಎನ್ನುವುದು ಕೇವಲ ಪ್ರಯೋಗಾಲಯಗಳಲ್ಲಿ ನಡೆಯುವ ವಿಜ್ಞಾನಿಗಳ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಪ್ರಶ್ನೆ ಮಾಡುವ, ಪುರಾವೆಗಳ ಆಧಾರದ ಮೇಲೆ ನಂಬಿಕೆಗಳನ್ನು ಕಟ್ಟುವ, ಮತ್ತು ತಪ್ಪುಗಳನ್ನು ಗುರುತಿಸಿ ಸರಿ ಮಾಡುವ ಒಂದು ಸಾಮರ್ಥ್ಯ. ವೈಜ್ಞಾನಿಕ ಮನೋಭಾವವು ಮಕ್ಕಳಲ್ಲಿ ಹುಟ್ಟುವ, &#8220;ನಕ್ಷತ್ರಗಳು ಏಕೆ ಹೊಳೆಯುತ್ತವೆ?&#8221;, &#8220;ನಾವು ಎಲ್ಲಿಂದ ಬಂದೆವು?&#8221; ಮೊದಲಾದ ಪ್ರಶ್ನೆಗಳಿಂದ ಆರಂಭವಾಗುತ್ತದೆ.</p>



<p><strong>ವೈಜ್ಞಾನಿಕ ಚಿಂತನೆಯ ಪಥ</strong><br>ವಿಜ್ಞಾನ ಎಂದರೆ ಪ್ರಶ್ನೆಗಳೊಂದಿಗೆ ಆರಂಭವಾಗುವ ಪ್ರಯಾಣ. &#8220;ಹೇಗೇ?&#8221; ಎಂಬ ಪ್ರಶ್ನೆಯೇ ವೈಜ್ಞಾನಿಕ ಚಿಂತನೆಯ ಮೊದಲ ಹೆಜ್ಜೆ. ಇದು &#8220;ಏಕೆ?&#8221; ಎಂಬ ಧಾರ್ಮಿಕ ಅಥವಾ ತತ್ತ್ವಶಾಸ್ತ್ರೀಯ ಪ್ರಶ್ನೆಗಿಂತ ಭಿನ್ನವಾಗಿದೆ. &#8220;ಏಕೆ?&#8221; ಎಂಬ ಮತೀಯವಾದದ ಪ್ರಶ್ನೆ ದೇವರೇ ಕಾರಣ ಎಂಬಲ್ಲಿಗೆ ಅವಸಾನವಾಗುತ್ತದೆ. ಆದರೆ &#8220;ಹೇಗೇ?&#8221; ಎಂಬ ವಿಜ್ಞಾನ ಪ್ರಶ್ನೆ ಪ್ರತೀ ಬಾರಿ ಉತ್ತರಗಳನ್ನು ಕಂಡುಕೊಳ್ಳುತ್ತಾ, ಹಳೆಯ ಉತ್ತರ ತಿರಸ್ಕಾರವಾಗಿ ಹೊಸ ಉತ್ತರದೊಂದಿಗೆ ನವೀನವಾಗುತ್ತಾ ಹೋಗುತ್ತದೆ.<br><br>ಧರ್ಮ ತನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಾವಿರಾರು ವರ್ಷಗಳ ಹಿಂದೆ ಬರೆದ ಓಟ್‌ಡೇಟೆಡ್‌ ಪುಸ್ತಕದ ಮೊರೆ ಹೋದರೆ, ವಿಜ್ಞಾನಕ್ಕೆ ನಿನ್ನೆಯ ದಿನ ಬಂದ ವೈಜ್ಞಾನಿಕ ಸಂಶೋಧನೆಯೇ ಮುಖ್ಯವಾಗುತ್ತದೆ.<br><br>ಹಾಗಾಗಿ, ಹಳೆಯ ನಂಬಿಕೆಗಳನ್ನು ಪ್ರಶ್ನಿಸುವವರ ಕೊಲೆಯಾಗಬಹುದು, ಮನೆಗಳಿಗೆ ಬೆಂಕಿ ಬೀಳಬಹುದು. ಸಂಪ್ರದಾಯವಾದಿಗಳಿಂದ ಈ ಜಗತ್ತಿನಲ್ಲಿ ರಕ್ತ ಹರಿದಿದೆಯೇ ಹೊರತು, ವಿಜ್ಞಾನಿಗಳಿಂದಲ್ಲ.<br><br>ತಮ್ಮ ನಂಬಿಕೆ ಶ್ರೇಷ್ಟ ಎಂದು ಸಾಬೀತು ಮಾಡಲು ಅವರು ಇನ್ನೊಂದು ಧರ್ಮವನ್ನು ನಿಸ್ಕೃಷ್ಟ ಎಂದು ತೋರಿಸಬೇಕು. ಹಾಗಾಗಿ, ಇನ್ನೊಂದು ಧರ್ಮ ಇಲ್ಲದೇ ಒಂದು ಧರ್ಮಕ್ಕೆ ಮೇಲು-ಕೀಳು ಅಸ್ತಿತ್ವವೇ ಇರುವುದಿಲ್ಲ. ಹಾಗಾಗಿ, ಪರಸ್ಪರ ಧರ್ಮಗಳು ಕಾದಾಡಿ ಜನರ ರಕ್ತ ಹರಿಸುತ್ತವೆ.<br><br>ಧರ್ಮದಲ್ಲಿ ಹಳೆಯ ನಂಬಿಕೆ ಸುಳ್ಳು ಎಂದು ಸಾಬೀತು ಆದರೆ ಅಲ್ಲಿ ಒಂದು ಕೊಲೆಯಾಗುತ್ತದೆ, ಜನ ದೊಂಬಿ ಏಳುತ್ತಾರೆ. ಆದರೆ ವಿಜ್ಞಾನದಲ್ಲಿ ಹಳೆಯ ಥಿಯೆರಿಗಳು ಸರಿ ಇಲ್ಲ ಎಂದು ಸಾಬೀತಾಗಿ, ಹೊಸ ಥಿಯೆರಿ ಬಂದಾಗ ವಿಜ್ಞಾನಿಗಳು ಸಂಭ್ರಮಿಸುತ್ತಾರೆ, ಆ ಹೊಸ ಅನ್ವೇಷಣೆಗಾಗಿ ನೋಬೆಲ್‌ನಂತಹ ಪ್ರಶಸ್ತಿಗಳು ಸಿಗುತ್ತವೆ.<br><br>ಉದಾಹರಣೆಗೆ, ನ್ಯೂಟನ್‌ನ ಗುರುತ್ವಾಕರ್ಷಣ ಸಿದ್ಧಾಂತವನ್ನು ಐನ್‌ಸ್ಟೈನ್ ಪ್ರಶ್ನಿಸಿದರು. ಥಿಯೆರಿ ಆಫ್‌ ರಿಲೇಟಿವಿಟಿಯನ್ನು ತಂದರು. ನ್ಯೂಟನ್‌ನ ಚಲನೆಯ ನಿಯಮಗಳ ಬಗ್ಗೆ ಐನ್‌ಸ್ಟೈನ್ ಎತ್ತಿದ ಈ ಪ್ರಶ್ನೆಯೇ ವಿಜ್ಞಾನವನ್ನು ಮುಂದಕ್ಕೆ ಕೊಂಡೊಯ್ತು.<br><br>ಆದರೆ, <em>“ಓ… ಐನ್‌ಸ್ಟೈನ್ ನಮ್ಮ ನ್ಯೂಟನ್ನರ ವಾದವನ್ನು ಸರಿ ಇಲ್ಲ ಎಂದರು!” </em>ಎಂದು ನ್ಯೂಟನ್‌ನನ್ನು ಒಪ್ಪುವ ಜನರ ಗ್ಯಾಂಗ್‌ ಐನ್‌ಸ್ಟೈನ್ ಮನೆಗೆ ಹೋಗಿ ಕಲ್ಲುಹೊಡೆಯಲಿಲ್ಲ. ಆದರೆ ಧರ್ಮದಲ್ಲಿ ಹಳೆಯ ನಂಬಿಕೆಯನ್ನು ಪ್ರಶ್ನಿಸುವುದೇ ಅಪರಾಧ!<br><br><strong>ವೈಜ್ಞಾನಿಕತೆ ಮತ್ತು ಧರ್ಮದ ನಡುವಿನ ಸಂಘರ್ಷ</strong><br>ಭಾರತೀಯ ಸಮಾಜದಲ್ಲೂ ಪ್ರಶ್ನೆಗಳನ್ನು ಎತ್ತುವ ಸಂಸ್ಕೃತಿ ಇತ್ತು. ಗೌಹರ್ ರಾಝಾ ಅವರು ಭಾರತದ ತತ್ತ್ವಶಾಸ್ತ್ರದ ವಿಚಾರವಾಗಿ ಚಾರ್ವಾಕ ಮತ್ತು ಬುದ್ಧನ ಉಲ್ಲೇಖ ಮಾಡುತ್ತಾರೆ. ಚಾರ್ವಾಕನು &#8220;ಇಂದ್ರಿಯಗಳಿಗೆ ಗೋಚರವಾಗದ್ದನ್ನು ನಂಬಬೇಡಿ&#8221; ಎಂದು ಹೇಳಿದ. ಬುದ್ಧನು &#8220;ಯಾರಾದರೂ ಹೇಳಿದ್ದು ನಿಜವೆಂದು ನಂಬಬೇಡಿ, ಮೊದಲು ಆಲೋಚಿಸಿ, ಪರೀಕ್ಷಿಸಿ, ಆಮೇಲೆ ನಂಬಿ, ಅದನ್ನು ಜನರ ಒಳಿತಿಗಾಗಿ ಬಳಸಿ,&#8221; ಎಂದು ಬೋಧಿಸಿದ. ಈ ಎರಡು ದೃಷ್ಠಿಕೋನಗಳೂ ವೈಜ್ಞಾನಿಕ ಚಿಂತನೆಗೆ ಗಟ್ಟಿತನವನ್ನು ನೀಡುತ್ತವೆ.<br><br>ಗೌಹರ್ ರಾಝಾ ಅವರು ಋಗ್ವೇದದ ಹತ್ತನೆಯ ಮಂಡಲದಲ್ಲಿ ಉಕ್ತವಾಗಿರುವ 179 ನೇ ಸೂಕ್ತವಾದ ನಾಸದೀಯ ಸೂಕ್ತವನ್ನು ಈ ವಿವೇಚನಾ ಸಂಸ್ಕೃತಿಯ ಬಗ್ಗೆ ಮಾತನಾಡಲು ಬಳಸುತ್ತಾರೆ.<br><br><em>&#8220;ಜಗತ್ತಿನ ಸೃಷ್ಟಿಯ ರಹಸ್ಯವನ್ನು ಯಾರು ತಿಳಿದವರು ಎಂಬ ಪ್ರಶ್ನೆಯನ್ನು ಇದರಲ್ಲಿ ಎತ್ತಿಕೊಳ್ಳುತ್ತಾರೆ. &nbsp;ಆ ರಹಸ್ಯವನ್ನು ನಿಜವಾಗಿ ಬಲ್ಲವರು ಯಾರೆಂಬ ಸಂಶಯ ಬಂದಾಗ, ದೇವತೆಗಳು ಇರಬಹುದೇ ಎಂಬ ಸಂಶಯ ಬರುತ್ತದೆ. ಆದರೆ, ದೇವತೆಗಳು ಸೃಷ್ಟಿಯ ನಂತರ ಬಂದವರಾದ್ದರಿಂದ ಅವರಿಗೂ ಇದು ತಿಳಿದಿಲ್ಲ.&#8221;</em><br><br>ನಾಸದೀಯ ಸೂಕ್ತದ ಈ ಪ್ರಶ್ನೋತ್ತರವು ಮನುಷ್ಯನ ವಿವೇಚನಾ ಶಕ್ತಿಯೇ ಆಗಿದೆ. ಆದರೆ ಕಾಲ ಕಳೆದಂತೆ ಪ್ರಶ್ನಿಸುವುದನ್ನು ಧರ್ಮಗಳು ಘನಘೋರ ಅಪರಾಧವಾಗಿ ಕಂಡವು, ಈಗಲೂ ಕಾಣುತ್ತಿದ್ದಾವೆ.</p>



<p>ಆದರೆ, ನಾವು ಭಯಯಿಂದ, ನಂಬಿಕೆಗಳಿಂದ, ಮತ್ತು ಅಜ್ಞಾನದ ಮೂಲಕ ನಮ್ಮ ಮುಂದಿನ ತಲೆಮಾರಿಗೆ ಇಂತಹ ಪರಂಪರೆಯ ಬದಲು ಯಾವುದನ್ನು ಕೊಡಲು ಹೊರಟಿದ್ದೇವೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಾಗಿದೆ.</p>



<p>ಭಾರತೀಯ ಸಮಾಜದಲ್ಲಿ ಧಾರ್ಮಿಕ ನಂಬಿಕೆಗಳು ವೈಜ್ಞಾನಿಕ ಸತ್ಯಗಳೊಂದಿಗೆ ಡಿಕ್ಕಿ ಹೊಡೆಯುವ ಹಲವಾರು ಉದಾಹರಣೆಗಳು ನಮಗೆ ಕಾಣಸಿಗುತ್ತವೆ. ಕೆಲವೊಮ್ಮೆ ಪುರಾತನ ಶಾಸ್ತ್ರಗಳಲ್ಲಿ, ಧರ್ಮಗ್ರಂಥಗಳಲ್ಲಿ ಉಲ್ಲೇಖಿತವಾದ ವಿಚಾರಗಳನ್ನು ವೈಜ್ಞಾನಿಕ ಎಂದು ಘೋಷಿಸುವ ಪ್ರಯತ್ನಗಳು ನಡೆಯುತ್ತವೆ — ಉದಾಹರಣೆಗೆ, ಪ್ಲಾಸ್ಟಿಕ್ ಸರ್ಜರಿ ಪ್ರಾಚೀನ ಭಾರತದಲ್ಲೇ ಇದ್ದಿತೆಂಬ ಅರ್ಥಹೀನ ಹೇಳಿಕೆಗಳು. ಈ ರೀತಿಯ &#8216;ಸುಳ್ಳು ವಾದ&#8217;ಗಳು ಸಮಾಜದಲ್ಲಿ ವೈಜ್ಞಾನಿಕತೆಯ ನಿಜವಾದ ಅರ್ಥವನ್ನು ನಾಶ ಮಾಡುತ್ತಿವೆ. ಸ್ವತಃ ಪ್ರಧಾನಿ ಮೋದಿಯವರು ಗಣಪತಿಯನ್ನು ಪ್ಲಾಸ್ಟಿಕ್‌ ಸರ್ಜರಿಯಿಂದ ಹುಟ್ಟಿದವನು ಎಂದು ಹೇಳಿದರು. ಆದರೆ ಕುಲಶಾಸ್ತ್ರೀಯವಾಗಿ, ಧಾರ್ಮಿಕ ಪಠ್ಯಗಳಲ್ಲಿ ಈ ಆನೆ ತಲೆಗೆ ಬೇರೆಯೇ ಅರ್ಥಗಳು ಇವೆ. ಮೋದಿಯವರ ಹೇಳಿಕೆಯಿಂದ ವಿಜ್ಞಾನಕ್ಕೆ ಮಾತ್ರ ಅವಮಾನವಲ್ಲ, ಗಣಪತಿಗೂ ಅವಮಾನ ಆಯ್ತು.</p>



<p><strong>ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕ ಚಿಂತ</strong><strong>ನೆಯ ಕೊರತೆ</strong><strong></strong></p>



<p>ಭಾರತದ ಶೈಕ್ಷಣಿಕ ವ್ಯವಸ್ಥೆಯಲ್ಲಿ ವೈಜ್ಞಾನಿಕ ಮನೋಭಾವಕ್ಕೆ ಸಾಕಷ್ಟು ಪ್ರಾಧಾನ್ಯತೆ ನೀಡಲಾಗುತ್ತಿಲ್ಲ. &nbsp;ವಿದ್ಯಾರ್ಥಿಗಳು ಪರೀಕ್ಷೆ ಪಾಸ್ ಆಗುವುದು ಮುಖ್ಯ ಎಂಬ ಒತ್ತಡವನ್ನು ಸೃಷ್ಟಿಸಿಕೊಂಡಿರುವುದರಿಂದ, ಪ್ರಶ್ನೆಗಳನ್ನು ಕೇಳುವ ಸಂಸ್ಕೃತಿಕ ಕಮ್ಮಿಯಾಗುತ್ತಿದೆ. “<em>ನೀವು ಪ್ರಶ್ನೆ ಕೇಳದಿದ್ದರೆ, ನೀವು ಮತ್ತೆ ಮನುಷ್ಯನಿಂದ ಪ್ರಾಣಿಯೆ ಆಗುತ್ತೀರಿ,</em>” ಎಂದು ಗೌಹರ್ ರಾಝಾ ಈ ಬಗ್ಗೆ ತೀವ್ರವಾಗಿ ಚಿಂತೆ ವ್ಯಕ್ತಪಡಿಸುತ್ತಾರೆ.<br><br>ನಮ್ಮ ಪಠ್ಯಪುಸ್ತಕಗಳಿಂದ ಡಾರ್ವಿನ್‌ನ ವಿಕಾಸವಾದವನ್ನು ತೆಗೆದುಹಾಕಲಾಗಿದೆ. ಸರಿ, ಆ ವಾದದ ಬಗ್ಗೆ ಇನ್ನೂ ವಿವಾದಗಳಿಗೆ, ಒಪ್ಪೋಣ. ಆದರೆ ಆವರ್ತಕ ಕೋಷ್ಟಕ (ಪೀರಿಯಾಡಿಕ್‌ ಟೇಬಲ್‌) ವನ್ನೂ ತೆಗೆದುಹಾಕಿದ್ದಾರೆ. ಯಾಕೆ?<br><br>ಯಾಕೆಂದರೆ, ಇದನ್ನು ಓದಿದ ಮಕ್ಕಳು ಬಾಬಾ-ಸ್ವಾಮಿಗಳು ಸೃಷ್ಟಿಯ ಬಗ್ಗೆ ನೀಡುವ ಅವೈಜ್ಞಾನಿಕ, ಸುಳ್ಳು ಪ್ರವಚನಗಳನ್ನು ಪ್ರಶ್ನಿಸದೇ ಇರಲೆಂದು! ಅವರು ಈ ಭೂಮಿ ಪಂಚಭೂತಗಳಿಂದ ಆಗಿದೆ ಎಂದು ಇಂದಿಗೂ ನಂಬುತ್ತಾರೆ, ಆದರೆ ಮ್ಯಾಂಡಲೀವನ ಆವರ್ತಕ ಕೋಷ್ಟಕವು ಇಲ್ಲಿಯ ವರೆಗೆ ಪತ್ತೆಯಾಗಿರುವ 119 ಅಂಶಗಳಿವೆ, ಇವುಗಳಿಂದ ಸೃಷ್ಟಿ ಆಗಿದೆ ಎಂದು ಹೇಳುತ್ತದೆ.<br><br>ಬಾಬಾಗಳು-ಮುಲ್ಲಾಗಳು-ಸ್ವಾಮಿಗಳು ಅವರ ಅಂಗಡಿಯ ಬಾಗಿಲು ಪರ್ಮನೆಂಟಾಗಿ ಮುಚ್ಚುವುದನ್ನು ತಡೆಯಲು ಅವರ ಕೈಯಲ್ಲಿರುವ ಸರ್ಕಾರ ಈ ಪೀರಿಯಾಡಿಕ್‌ ಟೇಬಲ್‌ನಂತರ ಮಹತ್ವದ ಪಾಠಗಳನ್ನು ವಿಜ್ಞಾನದ ಪಾಠಪುಸ್ತಕಗಳಿಂದ ಕಿತ್ತುಹಾಕಿದೆ.</p>



<p><strong>ತಂತ್ರಜ್ಞಾನ ಮತ್ತು ವಿಜ್ಞಾನ — ಸ್ಪಷ್ಟ ಭಿನ್ನತೆ</strong><br>ತಂತ್ರಜ್ಞಾನವನ್ನು ಅಳವಡಿಸಿಕೊಂಡು, ವೈಜ್ಞಾನಿಕತೆಯನ್ನು ನಿರಾಕರಿಸುವ ಒಂದು ವಿಚಿತ್ರ ಪ್ರವೃತ್ತಿ ಭಾರತದಲ್ಲಿ ಕಾಣಸಿಗುತ್ತದೆ. ಮುಲ್ಲಾಗಳು ಅಥವಾ ಸ್ವಾಮಿಗಳ ಪ್ರವಚನಗಳಲ್ಲಿ ವೈಜ್ಞಾನಿಕ ಸಾಧನೆಗಳ ಕುರಿತಾಗಿ ತಾತ್ವಿಕ ವಿರೋಧ ಕಂಡುಬರುತ್ತದೆ.<br><br>ಸಂಪ್ರದಾಯವಾದಿಗಳಿಗೆ ತಂತ್ರಜ್ಞಾನ ಬೇಕು, ವಿಜ್ಞಾನ ಬೇಡ. ವಿಜ್ಞಾನ ಒಂದು ಅರಿವು, ತಂತ್ರಜ್ಞಾನ ಎಂಬುದು ಆ ಅರಿವನ್ನು ಬಳಸಿಕೊಂಡು ಮಾನವೇಂದ್ರಿಯಗಳ ಅನುಕೂಲಕ್ಕೆ ಸಾಧನಗಳನ್ನು ಉತ್ಪಾಸಿಸುವ ಕ್ಷೇತ್ರ ಅಷ್ಟೇ. ಹಾಗಾಗಿ, ಬಾಬಾ- ಮುಲ್ಲಾಗಳಿಗೆ ತಂತ್ರಜ್ಞಾನದಿಂದ ಹುಟ್ಟಿದ ಸಾಧನಗಳು ಬೇಕು, ಆದರೆ ವಿಜ್ಞಾನ ಬೇಡ. ವಿಜ್ಞಾನ ಅವರು ಕೊಡುವ ಧಾರ್ಮಿಕ ಪ್ರವಚನಕ್ಕೆ ಸವಾಲನ್ನು ಒಡ್ಡುತ್ತದೆ.<br><br>ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಜನರು, ಮುಖ್ಯವಾಗಿ ಸ್ತ್ರೀಯರು, ಫೋಟೋ ತೆಗೆಸಿಕೊಳ್ಳುವುದನ್ನು, ಟಿವಿ ನೋಡುವುದನ್ನು, ವಿಡಿಯೋ ಮಾಡುವುದನ್ನು ನಿಷೇಧಿಸಿದರು. ಆದರೆ ಅದೇ ತಾಲಿಬಾನಿ ನಾಯಕರು ಕ್ಯಾಮರಾದ ಮುಂದೆ ಬಂದು ಪತ್ರಿಕಾಗೋಷ್ಟಿ ನಡೆಸುತ್ತಾರೆ. ಇದು ತಂತ್ರಜ್ಞಾನ ಎಂಬ ವಿಜ್ಞಾನದ ಕೂಸು ಮತೀಯವಾದಿಗಳ ಕೈಗೆ ಬಂದರೆ ಏನಾಗುತ್ತದೆ ಎಂಬುದನ್ನು ತೋರಿಸುತ್ತದೆ.<br><br>ಈ ನಿಖರ ವ್ಯತ್ಯಾಸವನ್ನು ತಿಳಿಯದಿದ್ದರೆ, ನಾವು ವೈಜ್ಞಾನಿಕ ಮನೋಭಾವವನ್ನು ಶ್ರದ್ದೆ ಅಥವಾ ಭಕ್ತಿಯನ್ನು ಇಟ್ಟು ಗೊಂದಲಕ್ಕೊಳಗಾಗುತ್ತೇವೆ.</p>



<p><strong>ವೈಜ್ಞಾನಿಕತೆಯ ರಾಜಕೀಯಕರಣ</strong><br>ವೈಜ್ಞಾನಿಕ ವಿಚಾರಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುವ ಅಥವಾ ನಿರಾಕರಿಸುವ ಉದಾಹರಣೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ, ವಿಜ್ಞಾನಿಗಳ ಧ್ವನಿಯನ್ನು ಹತ್ತಿಕ್ಕುವ ಅಪಾಯವಿದೆ. ಗೌಹರ್ ರಾಝಾ ಈ ಬಗ್ಗೆ, “<em>ಇದು ರಾಜಕೀಯಕ್ಕಾಗಿ ವೈಜ್ಞಾನಿಕ ಸತ್ಯವನ್ನು ಬಳಕೆ ಮಾಡುವುದು</em>” ಎಂದು ಎಚ್ಚರಿಕೆ ನೀಡುತ್ತಾರೆ.</p>



<p><strong>ವೈಜ್ಞಾನಿಕ ಶಕ್ತಿ ಮತ್ತು ಪ್ರಗತಿಯ ಪರಿಪೂರ್ಣ ಸಂಬಂಧ</strong><br>ವೈಜ್ಞಾನಿಕ ಮನೋಭಾವವು ಒಂದು ರಾಷ್ಟ್ರದ ಪ್ರಗತಿಯ ಮೂಲ ಆಧಾರವಾಗಿದೆ. ತಂತ್ರಜ್ಞಾನ ಅಭಿವೃದ್ಧಿಯ ಹಿಂದೆ ಇರುವ ವಿಜ್ಞಾನಕ್ಕೆ ಮಾನ್ಯತೆ ನೀಡದೆ ಕೇವಲ ಅದರಿಂದ ಉತ್ಪಾದಿಸಲ್ಪಟ್ಟ ಸಾಧನೆಗಳನ್ನು &nbsp;ಸಂಭ್ರಮಿಸುವ ನಕಲಿ ರಾಷ್ಟ್ರೀಯತೆಯು ಯಾವುದೇ ಹೊಸ ಸಂಶೋಧನೆಗೆ ದಾರಿ ಮಾಡಿಕೊಡದು.</p>



<p>ಈ ಪಾಡ್‌ಕಾಸ್ಟ್‌ನಲ್ಲಿ ಕುನಾಲ್‌ ಕಾಮ್ರಾ ಅವರು ಗೌಹರ್ ರಾಝಾ ಅವರೊಂದಿಗೆ ಸುದೀರ್ಘ ಮತ್ತು ಆಳವಾದ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ವೈಜ್ಞಾನಿಕತೆ ಹೇಗೆ ಧರ್ಮ, ರಾಜಕೀಯ ಮತ್ತು ಶಿಕ್ಷಣದೊಂದಿಗೆ ಸಂಘರ್ಷ ಮಾಡಿದೆ ಎಂಬುದರ ಮೇಲೆ ಅವರು ಬೆಳಕು ಚೆಲ್ಲುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ — &#8220;ಪ್ರ<em>ಶ್ನೆಗಳು ತಪ್ಪಾಗುವುದಿಲ್ಲ, ಉತ್ತರಗಳು ತಪ್ಪಾಗಬಹುದು</em>.&#8221;<br><br><strong>ಕುನಾಲ್‌ ಕಾಮ್ರಾ ಮತ್ತು ಗೌಹರ್‌ ರಾಝಾ ಅವರ ಸಂವಾದವನ್ನು ವೀಕ್ಷಿಸಲು</strong>: <a href="https://youtu.be/OPLFh1A-HCE?si=HRoi_cnb6Mha5oaV">Are We 🇮🇳 Indians Scientific? | Nope ft. Gauhar Raza | Episode 001</a></p>



<p><br></p>



<p></p>
]]></content:encoded>
					
		
		
			</item>
		<item>
		<title>ಕುನಾಲ್ ಕಾಮ್ರಾ ಪ್ರದರ್ಶನದ ವೇದಿಕೆಯನ್ನು ಧ್ವಂಸ ಮಾಡಿದ ಆರೋಪದ ಮೇಲೆ 12 ಶಿಂಧೆ ಸೇನಾ ಕಾರ್ಯಕರ್ತರ ಬಂಧನ</title>
		<link>https://peepalmedia.com/12-shinde-sena-activists-arrested-for-vandalizing-stage-of-kumal-kamras-performance/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 24 Mar 2025 11:16:06 +0000</pubDate>
				<category><![CDATA[ಕೋಮುವಾದ]]></category>
		<category><![CDATA[Ekanath Shinde]]></category>
		<category><![CDATA[kunal kamra]]></category>
		<category><![CDATA[maharashtra]]></category>
		<category><![CDATA[Shiv Sena‌]]></category>
		<guid isPermaLink="false">https://peepalmedia.com/?p=55652</guid>

					<description><![CDATA[ಮುಂಬೈ ಪೊಲೀಸರು ಸೋಮವಾರ&#160;ನಗರದ ಖಾರ್ ಪ್ರದೇಶದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳವನ್ನು ಧ್ವಂಸ ಮಾಡಿದ್ದಕ್ಕಾಗಿ ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದ ಬಣದ&#160;12 ಸದಸ್ಯರನ್ನು ಬಂಧಿಸಿದ್ದಾರೆ. ಕಾಮಿಡಿಯನ್ ಕುನಾಲ್ ಕಾಮ್ರಾ ಉಪಮುಖ್ಯಮಂತ್ರಿಯನ್ನು ಟೀಕಿಸುವ ಹಾಸ್ಯ ಪ್ರದರ್ಶನ ನೀಡಿದ್ದರು. ಕಾಮ್ರಾ&#160;ತನ್ನ ಪ್ರದರ್ಶನದಲ್ಲಿ ಶಿಂಧೆಯನ್ನು &#8220;ದೇಶದ್ರೋಹಿ&#160;&#8221; ಎಂದು ಉಲ್ಲೇಖಿಸಿರುವ ವೀಡಿಯೊಗಳು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹರಡಿದ ನಂತರ&#160;ಕಾರ್ಯಕರ್ತರು&#160;ಭಾನುವಾರ&#160;ದಿ ಹ್ಯಾಬಿಟ್ಯಾಟ್ ಸ್ಟುಡಿಯೋವನ್ನು ಧ್ವಂಸಗೊಳಿಸಿದರು . ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ 2022 ರಲ್ಲಿ ಶಿಂಧೆ ನಡೆಸಿದ ದಂಗೆ ಮತ್ತು ನಂತರದ ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯನ್ನು [&#8230;]]]></description>
										<content:encoded><![CDATA[
<p>ಮುಂಬೈ ಪೊಲೀಸರು ಸೋಮವಾರ&nbsp;ನಗರದ ಖಾರ್ ಪ್ರದೇಶದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳವನ್ನು ಧ್ವಂಸ ಮಾಡಿದ್ದಕ್ಕಾಗಿ ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದ ಬಣದ&nbsp;<a href="https://indianexpress.com/article/cities/mumbai/kunal-kamra-row-mumbai-police-arrest-shiv-sena-vandalising-khar-studio-9903066/" target="_blank" rel="noreferrer noopener">12 ಸದಸ್ಯರನ್ನು ಬಂಧಿಸಿದ್ದಾರೆ</a>. ಕಾಮಿಡಿಯನ್ ಕುನಾಲ್ ಕಾಮ್ರಾ ಉಪಮುಖ್ಯಮಂತ್ರಿಯನ್ನು ಟೀಕಿಸುವ ಹಾಸ್ಯ ಪ್ರದರ್ಶನ ನೀಡಿದ್ದರು.</p>



<p><a href="https://x.com/kunalkamra88/status/1903819664909864974" target="_blank" rel="noreferrer noopener">ಕಾಮ್ರಾ</a>&nbsp;ತನ್ನ ಪ್ರದರ್ಶನದಲ್ಲಿ ಶಿಂಧೆಯನ್ನು &#8220;<a href="https://x.com/rautsanjay61/status/1903825389279228272" target="_blank" rel="noreferrer noopener">ದೇಶದ್ರೋಹಿ</a>&nbsp;&#8221; ಎಂದು ಉಲ್ಲೇಖಿಸಿರುವ ವೀಡಿಯೊಗಳು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹರಡಿದ ನಂತರ&nbsp;ಕಾರ್ಯಕರ್ತರು&nbsp;ಭಾನುವಾರ&nbsp;<a href="https://scroll.in/latest/1080569/shiv-sena-workers-vandalise-venue-where-comedian-kunal-kamra-joked-about-eknath-shinde">ದಿ ಹ್ಯಾಬಿಟ್ಯಾಟ್ ಸ್ಟುಡಿಯೋವನ್ನು ಧ್ವಂಸಗೊಳಿಸಿದರು .</a></p>



<p>ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ 2022 ರಲ್ಲಿ ಶಿಂಧೆ ನಡೆಸಿದ ದಂಗೆ ಮತ್ತು ನಂತರದ ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯನ್ನು ಕಾಮ್ರಾ ಉಲ್ಲೇಖಿಸುತ್ತಿದ್ದರು. ಆದರೆ ಅವರು ಶಿಂಧೆ ಹೆಸರನ್ನು ಉಲ್ಲೇಖಿಸಲಿಲ್ಲ.</p>



<p>‌ಹೆಸರು ತಿಳಿಸಲು ಇಚ್ಚಿಸದ ಮುಂಬೈ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ,&nbsp;<em>ದಿ ಇಂಡಿಯನ್ ಎಕ್ಸ್‌ಪ್ರೆಸ್</em>&nbsp;ವರದಿ ಮಾಡಿದ್ದು, ಶಿಂಧೆ ಸೇನಾ ಯುವ ವಿಭಾಗದ ಪ್ರಧಾನ ಕಾರ್ಯದರ್ಶಿ ರಾಹುಲ್ ಕನಾಲ್ ಸೇರಿದಂತೆ 12 ಜನರನ್ನು ಬಂಧಿಸಲಾಗಿದೆ.</p>



<figure class="wp-block-embed is-type-wp-embed is-provider-peepal-media wp-block-embed-peepal-media"><div class="wp-block-embed__wrapper">
<blockquote class="wp-embedded-content" data-secret="0CZhQIYUdb"><a href="https://peepalmedia.com/comedian-kunal-kamras-place-vandalized-by-shiv-sena-workers-for-making-a-joke-about-eknath-shinde/">ಏಕನಾಥ್ ಶಿಂಧೆ ಬಗ್ಗೆ ತಮಾಷೆ ಮಾಡಿದ ಕಾಮಿಡಿಯನ್ ಕುನಾಲ್ ಕಾಮ್ರಾ: ಶಿವಸೇನಾ ಕಾರ್ಯಕರ್ತರಿಂದ ಸ್ಥಳ ಧ್ವಂಸ</a></blockquote><iframe class="wp-embedded-content" sandbox="allow-scripts" security="restricted"  title="&#8220;ಏಕನಾಥ್ ಶಿಂಧೆ ಬಗ್ಗೆ ತಮಾಷೆ ಮಾಡಿದ ಕಾಮಿಡಿಯನ್ ಕುನಾಲ್ ಕಾಮ್ರಾ: ಶಿವಸೇನಾ ಕಾರ್ಯಕರ್ತರಿಂದ ಸ್ಥಳ ಧ್ವಂಸ&#8221; &#8212; Peepal Media" src="https://peepalmedia.com/comedian-kunal-kamras-place-vandalized-by-shiv-sena-workers-for-making-a-joke-about-eknath-shinde/embed/#?secret=0hBoo8TWNB#?secret=0CZhQIYUdb" data-secret="0CZhQIYUdb" width="600" height="338" frameborder="0" marginwidth="0" marginheight="0" scrolling="no"></iframe>
</div></figure>



<p>ವಿಧ್ವಂಸಕ ಕೃತ್ಯಕ್ಕೆ ಸಂಬಂಧಿಸಿದಂತೆ ಕನಾಲ್, ಕುನಾಲ್ ಸರ್ಮಾಲ್ಕರ್, ಅಕ್ಷಯ್ ಪನ್ವೇಲ್ಕರ್, ಗೋವಿಂದ್ ಪಾಡಿ, ರಾಹುಲ್ ತುರ್ಬಡ್ಕರ್, ವಿಲಾಸ್ ಚವರಿ, ಅಮೀನ್ ಶೇಖ್, ಸಮೀರ್ ಮಹಾಪಾಡಿ, ಹಿಮಾಂಶು, ಶಶಾಂಕ್ ಕೊಡೆ, ಸಂದೀಪ್ ಮಲಾಪ್, ಗಣೇಶ್ ಹುಲ್ಪೆ, ಶೋಭಾ ಪಾಲ್ವೆ, ಕೃಷ್ಣಾ ಟಾಕುರ್‌, ಪವನ್‌ ಜ್ಯೋತಿ ಸೇಥಿ, ಖುರೇಷಿ ಹುನೆಫ್‌ ಮತ್ತು ಚಾಂದ್ ಶೇಖ್ ಅವರನ್ನು ಬಂಧಿಸಲಾಗಿದೆ.</p>



<p> ಪೊಲೀಸರು ಸುಮಾರು 20 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ&nbsp;.</p>



<p>ಸಾರ್ವಜನಿಕ ಸೇವಕರು ತಮ್ಮ ಕರ್ತವ್ಯವನ್ನು ನಿರ್ವಹಿಸದಂತೆ ತಡೆಯಲು ಕ್ರಿಮಿನಲ್ ಬಲಪ್ರಯೋಗ (ಸೆಕ್ಷನ್ 132), ಕಾನೂನುಬಾಹಿರ ಸಭೆ ಮತ್ತು ಅದರ ಶಿಕ್ಷೆ (ಸೆಕ್ಷನ್ 189(2), 189(3) ಮತ್ತು 190), ಗಲಭೆಗೆ ಶಿಕ್ಷೆ (ಸೆಕ್ಷನ್ 191(2)), ನಷ್ಟ ಅಥವಾ ಹಾನಿಗೆ ಶಿಕ್ಷೆ (ಸೆಕ್ಷನ್ 324(5) ಮತ್ತು 324(6)), ಸಾರ್ವಜನಿಕ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಶಿಕ್ಷೆ (ಸೆಕ್ಷನ್ 223), ಕ್ರಿಮಿನಲ್ ಬೆದರಿಕೆ (ಸೆಕ್ಷನ್ 351(2)), ಶಾಂತಿ ಉಲ್ಲಂಘನೆಯನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ (ಸೆಕ್ಷನ್ 352), ಗಾಯವನ್ನುಂಟುಮಾಡುವ ಸಿದ್ಧತೆಗಳೊಂದಿಗೆ ಮನೆ ಅತಿಕ್ರಮಣ (ಸೆಕ್ಷನ್ 333), ಖಾಸಗಿ ರಕ್ಷಣೆಯ ಹಕ್ಕಿಲ್ಲದ ಕೃತ್ಯಗಳು (ಸೆಕ್ಷನ್ 37(1)), ಮತ್ತು ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ (ಸೆಕ್ಷನ್ 135) ಅಡಿಯಲ್ಲಿ ಅವರ ಮೇಲೆ ಆರೋಪ ಹೊರಿಸಲಾಗಿದೆ.</p>



<p><a href="https://x.com/ANI/status/1904013185793061045" target="_blank" rel="noreferrer noopener">ಶಿಂಧೆ ಸೇನಾ ಶಾಸಕ ಮುರ್ಜಿ ಪಟೇಲ್ ಅವರ ದೂರಿನ ಆಧಾರದ ಮೇಲೆ ಕಾಮ್ರಾ ವಿರುದ್ಧ</a>&nbsp;ಎಫ್‌ಐಆರ್ ದಾಖಲಿಸಲಾಗಿದೆ&nbsp;. ಪಕ್ಷದ ನಾಯಕರು&nbsp;ಕಾಮಿಡಿಯನ್ ವಿರುದ್ಧ &#8221;&nbsp;<a href="https://x.com/ANI/status/1903971096099176574" target="_blank" rel="noreferrer noopener">ತ್ವರಿತ ಕ್ರಮ &#8221; ಕೈಗೊಳ್ಳಬೇಕೆಂದು ಒತ್ತಾಯಿಸಿದರು.</a></p>



<p><strong>ದಿ ಹ್ಯಾಬಿಟೇಟ್ ಸ್ಟುಡಿಯೋಗೆ ಬಿಎಂಸಿ ಕಾರ್ಯಕರ್ತರ ಮುತ್ತಿಗೆ</strong></p>



<p>ಬೃಹತ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಸೋಮವಾರ ದಿ ಹ್ಯಾಬಿಟಾಟ್ ಸ್ಟುಡಿಯೋ ಇರುವ ಖಾರ್‌ನಲ್ಲಿರುವ ಯುನಿಕಾಂಟಿನೆಂಟಲ್ ಹೋಟೆಲ್‌ಗೆ ಸುತ್ತಿಗೆಗಳೊಂದಿಗೆ ಬಂದರ ಎಂದು ಪಿಟಿಐ ವರದಿ ಮಾಡಿದೆ. ಮಾಧ್ಯಮ ವರದಿಗಳ ಪ್ರಕಾರ, ಅಧಿಕಾರಿಗಳು ಹೋಟೆಲ್‌ನಲ್ಲಿರುವ &#8220;ಅನಧಿಕೃತ ಕಟ್ಟಡಗಳನ್ನು&#8221; ಕೆಡವಲು ಯೋಜಿಸಿದ್ದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">VIDEO | Kunal Kamra show controversy: BMC officials arrive at The Habitat Studio in Mumbai.<br><br>(Full video available on PTI Videos- <a href="https://t.co/dv5TRAShcC">https://t.co/dv5TRAShcC</a>) <a href="https://t.co/ItN7D1U22b">pic.twitter.com/ItN7D1U22b</a></p>&mdash; Press Trust of India (@PTI_News) <a href="https://twitter.com/PTI_News/status/1904081417371537698?ref_src=twsrc%5Etfw">March 24, 2025</a></blockquote><script async src="https://platform.twitter.com/widgets.js" charset="utf-8"></script>
</div></figure>
]]></content:encoded>
					
		
		
			</item>
		<item>
		<title>ಏಕನಾಥ್ ಶಿಂಧೆ ಬಗ್ಗೆ ತಮಾಷೆ ಮಾಡಿದ ಕಾಮಿಡಿಯನ್ ಕುನಾಲ್ ಕಾಮ್ರಾ: ಶಿವಸೇನಾ ಕಾರ್ಯಕರ್ತರಿಂದ ಸ್ಥಳ ಧ್ವಂಸ</title>
		<link>https://peepalmedia.com/comedian-kunal-kamras-place-vandalized-by-shiv-sena-workers-for-making-a-joke-about-eknath-shinde/</link>
		
		<dc:creator><![CDATA[Peepal Media Desk]]></dc:creator>
		<pubDate>Mon, 24 Mar 2025 06:22:02 +0000</pubDate>
				<category><![CDATA[ದೇಶ]]></category>
		<category><![CDATA[Ekanath Shinde]]></category>
		<category><![CDATA[kunal kamra]]></category>
		<category><![CDATA[maharashtra]]></category>
		<category><![CDATA[Shiv Sena]]></category>
		<guid isPermaLink="false">https://peepalmedia.com/?p=55613</guid>

					<description><![CDATA[ಮುಂಬೈನ ಖಾರ್‌ನಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಬಗ್ಗೆ ಕಾಮಿಡಿಯನ್ ಕುನಾಲ್ ಕಾಮ್ರಾ ಹಾಸ್ಯ ಮಾಡಿದ್ದ ಕಾರ್ಯಕ್ರಮ ಸ್ಥಳವನ್ನು ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದ ಬಣದ ಕಾರ್ಯಕರ್ತರು ಭಾನುವಾರ ಧ್ವಂಸ ಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಭಾನುವಾರ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ ಜೋಕ್‌ನ ವೀಡಿಯೊಗಳಲ್ಲಿ, ಹಿಂದಿ ಚಲನಚಿತ್ರ ಹಾಡಿನ ಮಾರ್ಪಡಿಸಿದ ಆವೃತ್ತಿಯನ್ನು ಹಾಡುವಾಗ ಕಾಮ್ರಾ ಶಿಂಧೆ ಅವರನ್ನು &#8221; ದೇಶದ್ರೋಹಿ &#8221; ಎಂದು ಉಲ್ಲೇಖಿಸಿದ್ದಾರೆ ಎಂಬುದು ಆರೋಪವಾಗಿದೆ. 2022 ರಲ್ಲಿ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ನಡೆಸಿದ ದಂಗೆ ಮತ್ತು ಮಹಾರಾಷ್ಟ್ರದ ಸಾಮಾನ್ಯ [&#8230;]]]></description>
										<content:encoded><![CDATA[
<p>ಮುಂಬೈನ ಖಾರ್‌ನಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಬಗ್ಗೆ ಕಾಮಿಡಿಯನ್ ಕುನಾಲ್ ಕಾಮ್ರಾ ಹಾಸ್ಯ ಮಾಡಿದ್ದ <a href="https://theprint.in/india/after-kunal-kamra-takes-jibe-at-shinde-sena-leaders-say-there-will-be-consequences/2561808/" target="_blank" rel="noreferrer noopener">ಕಾರ್ಯಕ್ರಮ ಸ್ಥಳವನ್ನು</a> ಶಿವಸೇನೆಯ ಏಕನಾಥ್ ಶಿಂಧೆ ನೇತೃತ್ವದ ಬಣದ ಕಾರ್ಯಕರ್ತರು ಭಾನುವಾರ ಧ್ವಂಸ ಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.</p>



<p>ಭಾನುವಾರ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾದ ಜೋಕ್‌ನ ವೀಡಿಯೊಗಳಲ್ಲಿ, ಹಿಂದಿ ಚಲನಚಿತ್ರ ಹಾಡಿನ ಮಾರ್ಪಡಿಸಿದ ಆವೃತ್ತಿಯನ್ನು ಹಾಡುವಾಗ <a href="https://x.com/kunalkamra88/status/1903819664909864974" target="_blank" rel="noreferrer noopener">ಕಾಮ್ರಾ ಶಿಂಧೆ ಅವರನ್ನು &#8221; </a><a href="https://x.com/rautsanjay61/status/1903825389279228272" target="_blank" rel="noreferrer noopener"><u>ದೇಶದ್ರೋಹಿ</u></a> &#8221; ಎಂದು ಉಲ್ಲೇಖಿಸಿದ್ದಾರೆ ಎಂಬುದು ಆರೋಪವಾಗಿದೆ. 2022 ರಲ್ಲಿ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ನಡೆಸಿದ ದಂಗೆ ಮತ್ತು ಮಹಾರಾಷ್ಟ್ರದ ಸಾಮಾನ್ಯ ರಾಜಕೀಯ ಪರಿಸ್ಥಿತಿಯನ್ನು ಕಾಮ್ರಾ ಉಲ್ಲೇಖಿಸುತ್ತಿದ್ದರು.</p>



<p>ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಪ್ರದರ್ಶನದ ಸಮಯದಲ್ಲಿ ಕಾಮ್ರಾ ಶಿಂಧೆಯವರ ಹೆಸರನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ.</p>



<p>ಶಿಂಧೆ ಸೇನಾ ಶಾಸಕ ಮುರ್ಜಿ ಪಟೇಲ್ ನೀಡಿದ ದೂರಿನ ಆಧಾರದ ಮೇಲೆ <a href="https://x.com/ANI/status/1904013185793061045" target="_blank" rel="noreferrer noopener">ಕಾಮ್ರಾ ವಿರುದ್ಧ</a> ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಕಾಮಿಡಿಯನ್ ವಿರುದ್ಧ &#8220;ತ್ವರಿತ ಕ್ರಮ&#8221; ಕೈಗೊಳ್ಳಬೇಕೆಂದು ಪಕ್ಷದ <a href="https://x.com/ANI/status/1903971096099176574" target="_blank" rel="noreferrer noopener">ಮುಖಂಡರು ಒತ್ತಾಯಿಸಿದ್ದಾರೆ.</a></p>



<p>&#8220;ಎರಡು ದಿನಗಳಲ್ಲಿ ಏಕನಾಥ್ ಶಿಂಧೆ ಅವರ ಬಳಿ ಬಂದು ಕ್ಷಮೆಯಾಚಿಸಬೇಕೆಂದು ನಾನು ಅವರಿಗೆ ಹೇಳಲು ಬಯಸುತ್ತೇನೆ, ಇಲ್ಲದಿದ್ದರೆ ಶಿವಸೈನಿಕರು ಅವರನ್ನು ಮುಂಬೈನಲ್ಲಿ ಮುಕ್ತವಾಗಿ ತಿರುಗಾಡಲು ಬಿಡುವುದಿಲ್ಲ. ಅವರು ಸಾರ್ವಜನಿಕವಾಗಿ ಎಲ್ಲಿಯಾದರೂ ಕಾಣಿಸಿಕೊಂಡರೆ, ನಾವು ಅವರ ಮುಖಕ್ಕೆ ಕಪ್ಪು ಬಣ್ಣ ಬಳಿಯುತ್ತೇವೆ&#8230; ನಾವು ಈ ವಿಷಯವನ್ನು ವಿಧಾನಸಭೆಯಲ್ಲಿ ಎತ್ತುತ್ತೇವೆ ಮತ್ತು ಸಾಧ್ಯವಾದಷ್ಟು ಬೇಗ ಅವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ರಾಜ್ಯದ ಗೃಹ ಸಚಿವರನ್ನು ವಿನಂತಿಸುತ್ತೇವೆ&#8230;&#8221; ಎಂದು ಪಟೇಲ್ ANI ಗೆ ತಿಳಿಸಿದರು.</p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="da" dir="ltr"><a href="https://twitter.com/hashtag/WATCH?src=hash&amp;ref_src=twsrc%5Etfw">#WATCH</a> | Mumbai: Shiv Sena (Eknath Shinde faction) workers vandalised Habitat Comedy Club in Khar after comedian Kunal Kamra&#39;s remarks on Maharashtra DCM Eknath Shinde here sparked backlash. (23.03)<br><br>Source: Shiv Sena (Eknath Shinde faction) <a href="https://t.co/L8pkt0TLM6">pic.twitter.com/L8pkt0TLM6</a></p>&mdash; ANI (@ANI) <a href="https://twitter.com/ANI/status/1903962459905659018?ref_src=twsrc%5Etfw">March 24, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಶಿಂಧೆ ಸೇನಾದ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮತ್ತು ಇತರ 19 ಜನರ ವಿರುದ್ಧವೂ ವಿಧ್ವಂಸಕ ಕೃತ್ಯಕ್ಕಾಗಿ ಎಫ್‌ಐಆರ್ <a href="https://x.com/ANI/status/1903995160352141594" target="_blank" rel="noreferrer noopener"><u>ದಾಖಲಿಸಲಾಗಿದೆ ಎಂದು</u> ಎಎನ್‌ಐ ವರದಿ ಮಾಡಿದೆ.</a></p>



<p>ಭಾನುವಾರ ಧ್ವಂಸಗೊಂಡ ದಿ ಹ್ಯಾಬಿಟ್ಯಾಟ್ ಸ್ಥಳದ ನಿರ್ವಾಹಕರು, ದಾಳಿಯಿಂದ &#8220;ತೀವ್ರವಾಗಿ ಧ್ವಂಸವಾಗಿದೆ, ಕಲಾವಿದರು ತಮ್ಮ ಅಭಿಪ್ರಾಯಗಳು ಮತ್ತು ಸೃಜನಶೀಲ ಆಯ್ಕೆಗಳಿಗೆ <a href="https://www.instagram.com/p/DHj8F39zFw-/?hl=en&amp;img_index=1" target="_blank" rel="noreferrer noopener">ಮಾತ್ರ ಜವಾಬ್ದಾರರು</a>&#8221; ಎಂದು ಸೋಮವಾರ ತಿಳಿಸಿದ್ದಾರೆ.</p>



<p>&#8220;ಯಾವುದೇ ಕಲಾವಿದರು ಪ್ರದರ್ಶಿಸಿದ ಕಾರ್ಯಕ್ರಮದಲ್ಲಿ ನಾವು ಎಂದಿಗೂ ಭಾಗಿಯಾಗಿಲ್ಲ, ಆದರೆ ಇತ್ತೀಚಿನ ಘಟನೆಗಳು ಪ್ರತಿ ಬಾರಿಯೂ ನಾವು ಪ್ರದರ್ಶಕರ ಪ್ರತಿನಿಧಿಯಂತೆ ಹೇಗೆ ದೂಷಿಸಲ್ಪಡುತ್ತೇವೆ ಮತ್ತು ಗುರಿಯಾಗಿಸಿಕೊಳ್ಳುತ್ತೇವೆ ಎಂಬುದರ ಕುರಿತು ಪುನರ್ವಿಮರ್ಶೆ ಮಾಡುವಂತೆ ಮಾಡಿದೆ&#8221; ಎಂದು ದಿ ಹ್ಯಾಬಿಟ್ಯಾಟ್ ಹೇಳಿಕೆಯಲ್ಲಿ ತಿಳಿಸಿದೆ.</p>



<p>&#8220;ನಮ್ಮನ್ನು ಮತ್ತು ನಮ್ಮ ಸೊತ್ತಿಗೆ ಯಾವುದೇ ಹಾನಿಯಾಗದಂತೆ  ಮುಕ್ತ ಅಭಿವ್ಯಕ್ತಿಗೆ ವೇದಿಕೆಯನ್ನು ಒದಗಿಸುವ ಅತ್ಯುತ್ತಮ ಮಾರ್ಗವನ್ನು ನಾವು ಕಂಡುಕೊಳ್ಳುವವರೆಗೆ ಅದು ಮುಚ್ಚಲ್ಪಡುತ್ತದೆ&#8221; ಎಂದು ಸ್ಥಳದ ನಿರ್ವಾಹಕರು ತಿಳಿಸಿದ್ದಾರೆ. </p>



<p>ಶಿವಸೇನಾ ನಾಯಕ <a href="https://x.com/ANI/status/1903963030758756452" target="_blank" rel="noreferrer noopener">ನರೇಶ್ ಮಸ್ಕೆ ಅವರು</a> ಕಾಮ್ರಾ ಒಬ್ಬ &#8220;ಬಾಡಿಗೆ ಹಾಸ್ಯನಟ&#8221; ಎಂದು ಹೇಳಿದ್ದಾರೆ. ಕಾಮ್ರಾ ಮುಂದೆ ದೇಶದಲ್ಲಿ ಮುಕ್ತವಾಗಿ ಓಡಾಡಲು ಸಾಧ್ಯವಾಗುವುದಿಲ್ಲ ಎಂದು ಥಾಣೆ ಸಂಸದ ಎಚ್ಚರಿಸಿದ್ದಾರೆ ಎಂದು ANI ವರದಿ ಮಾಡಿದೆ.</p>



<p>&#8220;ಅವರು [ಕಾಮ್ರಾ] ಹಣಕ್ಕಾಗಿ ನಮ್ಮ ನಾಯಕ [ಶಿಂಧೆ] ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಮಹಾರಾಷ್ಟ್ರವನ್ನು ಬಿಟ್ಟು, ಕುನಾಲ್ ಕಾಮ್ರಾ ಭಾರತದಲ್ಲಿ ಎಲ್ಲಿಯೂ ಮುಕ್ತವಾಗಿ ಹೋಗಲು ಸಾಧ್ಯವಿಲ್ಲ, ಶಿವಸೈನಿಕರು ಅವರಿಗೆ ಅವರ ಸ್ಥಾನ ಯಾವುದು ಎಂಬುದನ್ನು ತೋರಿಸುತ್ತಾರೆ,&#8221; ಎಂದು ಮ್ಹಾಸ್ಕೆ ಆರೋಪಿಸಿದರು. </p>



<figure class="wp-block-embed is-type-rich is-provider-twitter wp-block-embed-twitter"><div class="wp-block-embed__wrapper">
<blockquote class="twitter-tweet" data-width="550" data-dnt="true"><p lang="en" dir="ltr">Habitat Mumbai Ransacked by goons after <a href="https://twitter.com/kunalkamra88?ref_src=twsrc%5Etfw">@kunalkamra88</a>&#39;s latest youtube video. <a href="https://t.co/k0ZV242lDp">pic.twitter.com/k0ZV242lDp</a></p>&mdash; Mohammed Zubair (@zoo_bear) <a href="https://twitter.com/zoo_bear/status/1903873430057058525?ref_src=twsrc%5Etfw">March 23, 2025</a></blockquote><script async src="https://platform.twitter.com/widgets.js" charset="utf-8"></script>
</div></figure>



<p>ಶಿಂಧೆ ಅವರನ್ನು ಟೀಕಿಸಲು ಸಾಕಷ್ಟು ಪಕ್ಷದ ಕಾರ್ಯಕರ್ತರು ಇಲ್ಲದ ಕಾರಣ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣವು ಕಾಮ್ರಾ ಅವರನ್ನು ನೇಮಿಸಿಕೊಂಡಿದೆ ಎಂದು ಮ್ಹಾಸ್ಕೆ ಆರೋಪಿಸಿದ್ದಾರೆ.</p>



<p>&#8220;ನಾವು [ಶಿವಸೇನಾ ಸಂಸ್ಥಾಪಕ] ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತವನ್ನು ಅನುಸರಿಸುತ್ತೇವೆ ಮತ್ತು ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರದಲ್ಲಾಗಲಿ ಅಥವಾ ದೇಶದಲ್ಲಾಗಲಿ ಮುಕ್ತವಾಗಿ ಓಡಾಡದಂತೆ ನೋಡಿಕೊಳ್ಳುತ್ತೇವೆ. ಕುನಾಲ್ ಕಾಮ್ರಾಗೆ ಸೂಕ್ತ ಉತ್ತರ ಸಿಗುತ್ತದೆ, ಮತ್ತು ಅವರು ಬಂದು ತಮ್ಮ ತಪ್ಪಿಗೆ ಕ್ಷಮೆಯಾಚಿಸುತ್ತಾರೆ&#8221; ಎಂದು ಅವರು ಹೇಳಿದರು. </p>



<p>ಮತ್ತೊಂದೆಡೆ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಆದಿತ್ಯ ಠಾಕ್ರೆ, ಸ್ಥಳದ ಮೇಲಿನ ದಾಳಿ ಹೇಡಿತನ ಎಂದು ಹೇಳಿದರು.</p>



<p>&#8220;ಮಿಂಧೆಯವರ <a href="https://x.com/AUThackeray/status/1903870352150937790" target="_blank" rel="noreferrer noopener">ಹೇಡಿಗಳ ಗ್ಯಾಂಗ್ ಹಾಸ್ಯ ಪ್ರದರ್ಶನ ವೇದಿಕೆಯನ್ನು ಹಾನಿಮಾಡಿದೆ,</a> ಅಲ್ಲಿ ಹಾಸ್ಯನಟ @kunalkamra88 ಏಕನಾಥ್ ಮಿಂಧೆಯ ಹಾಡನ್ನು ಹಾಡಿದರು, ಅವರು ಹೇಳಿದ್ದು 100% ಸತ್ಯ. ಯಾರಾದರೂ ಹಾಡಿದರೆ ಅದಕ್ಕೆ ಅಸುರಕ್ಷಿತ ಭಾವ ಇರುವ ಹೇಡಿ ಮಾತ್ರ ಪ್ರತಿಕ್ರಿಯಿಸುತ್ತಾನೆ&#8221; ಎಂದು ಆದಿತ್ಯ ಠಾಕ್ರೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದರು. </p>



<p>&#8220;ಮಿಂಧೆ&#8221; ಎಂಬುದು ಆದಿತ್ಯ ಠಾಕ್ರೆ ಅವರು ಶಿಂಧೆ ಅವರನ್ನು ಉಲ್ಲೇಖಿಸಲು ಹೆಚ್ಚಾಗಿ ಬಳಸುವ ಪದವಾಗಿದೆ.</p>



<p>&#8220;ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ? ಸಿಎಂ ಮತ್ತು ಗೃಹ ಸಚಿವರನ್ನು ದುರ್ಬಲಗೊಳಿಸಲು ಏಕನಾಥ್ ಮಿಂಧೆ ಮತ್ತೊಂದು ಪ್ರಯತ್ನ ಮಾಡಿದ್ದಾರೆ&#8221; ಎಂದು ವರ್ಲಿ ಶಾಸಕರು ಹೇಳಿದರು.</p>



<p>2019 ರ ವಿಧಾನಸಭಾ ಚುನಾವಣಾ ಫಲಿತಾಂಶಗಳ ನಂತರ, ಉದ್ಧವ್ ಠಾಕ್ರೆ ನೇತೃತ್ವದ ಅವಿಭಜಿತ ಶಿವಸೇನೆ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸಲು ನಿರಾಕರಿಸಿತು, ಮುಖ್ಯಮಂತ್ರಿ ಹುದ್ದೆಯನ್ನು ತಲಾ ಎರಡೂವರೆ ವರ್ಷಗಳ ಕಾಲ ತಮ್ಮ ನಡುವೆ ಹಂಚಲು ಎರಡೂ ಪಕ್ಷಗಳು ಒಪ್ಪಿಕೊಂಡಿವೆ ಎಂದು ಹೇಳಿಕೊಂಡಿತು.</p>



<p>ಠಾಕ್ರೆ ಅವರು ಅವಿಭಜಿತ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಜೊತೆ ಕೈಜೋಡಿಸಿ ಮುಖ್ಯಮಂತ್ರಿಯಾದರು. ಈ ಮೈತ್ರಿಕೂಟವನ್ನು ಮಹಾ ವಿಕಾಸ್ ಅಘಾಡಿ ಎಂದು ಕರೆಯಲಾಗುತ್ತದೆ.</p>



<p>ಜೂನ್ 2022 ರಲ್ಲಿ, ಶಿಂಧೆ ಠಾಕ್ರೆ ವಿರುದ್ಧ ಬಂಡಾಯವೆದ್ದರು ಮತ್ತು ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಸೇರಿದರು. ಶಿಂಧೆ ಮುಖ್ಯಮಂತ್ರಿಯಾದರು ಮತ್ತು ನವೆಂಬರ್ 2024 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟ ಗೆದ್ದ ನಂತರ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ಬದಲಾಯಿಸುವವರೆಗೂ ಆ ಸ್ಥಾನದಲ್ಲಿಯೇ ಇದ್ದರು.</p>



<p></p>
]]></content:encoded>
					
		
		
			</item>
	</channel>
</rss>
