<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>kuvempu &#8211; Peepal Media</title>
	<atom:link href="https://peepalmedia.com/tag/kuvempu/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Fri, 06 Jan 2023 10:01:46 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>kuvempu &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕುವೆಂಪು ವರ್ಣಾಶ್ರಮ ಪರ ವಹಿಸದಿದ್ದರೆ ಹೇಗೆ!</title>
		<link>https://peepalmedia.com/how-can-kuvempu-not-support-varnashram/</link>
		
		<dc:creator><![CDATA[Peepal Media Desk]]></dc:creator>
		<pubDate>Fri, 06 Jan 2023 10:01:46 +0000</pubDate>
				<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kuvempu]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[varnashrama]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18920</guid>

					<description><![CDATA[ಧಾರ್ಮಿಕ ವಿಚಾರದಲ್ಲಿ ಬರೀ ಪುರೋಹಿತಶಾಹಿಗಳೇ ಹೋರಾಟಕ್ಕೆ ನಿಂತರೆ ಅದಕ್ಕೇನೂ ಬಲವಿರದು. ಹೀಗಾಗಿ ಶೂದ್ರ ಶಕ್ತಿಯ ಒಳಗೊಳ್ಳುವಿಕೆಯ ಅನಿವಾರ್ಯತೆ ಅವರದ್ದು. ಒಂದು ವೇಳೆ ವೈದಿಕರು ಬಹುಸಂಖ್ಯಾತರಾಗಿದ್ದಿದ್ದರೆ ಅವರಿಗೆ ಯಾವ ಶೂದ್ರ ಶಕ್ತಿಯ ಹಂಗೂ ಇರುತ್ತಿರಲಿಲ್ಲ&#8230;..ಓದಿ ಲೇಖಕ ಶಂಕರ್‌ ಸೂರ್ನಳ್ಳಿ ಲೇಖನ.&#160;&#160; ಒಂದು ಸಮಯವಿತ್ತು ಯಾವುದಾದರು ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಮಹಾನುಭಾವರ ಬಗ್ಗೆ ಸುಳ್ಳು ಮಾತನಾಡುವುದಕ್ಕೆ ಜನ ಹೆದರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಸೋಲನ್ನೇ ಗೆಲುವು, ವೈಫಲ್ಯವನ್ನೇ ಸಾಧನೆ ಎಂದು ಬಿಂಬಿಸುವಂತಹ ನೆಟ್ ವರ್ಕ್ ಯುಗದಲ್ಲಿ ನಾವಿದ್ದೇವೆ ಅಥವ [&#8230;]]]></description>
										<content:encoded><![CDATA[
<p><strong>ಧಾರ್ಮಿಕ ವಿಚಾರದಲ್ಲಿ ಬರೀ ಪುರೋಹಿತಶಾಹಿಗಳೇ ಹೋರಾಟಕ್ಕೆ ನಿಂತರೆ ಅದಕ್ಕೇನೂ ಬಲವಿರದು. ಹೀಗಾಗಿ ಶೂದ್ರ ಶಕ್ತಿಯ ಒಳಗೊಳ್ಳುವಿಕೆಯ ಅನಿವಾರ್ಯತೆ ಅವರದ್ದು. ಒಂದು ವೇಳೆ ವೈದಿಕರು ಬಹುಸಂಖ್ಯಾತರಾಗಿದ್ದಿದ್ದರೆ ಅವರಿಗೆ ಯಾವ ಶೂದ್ರ ಶಕ್ತಿಯ ಹಂಗೂ ಇರುತ್ತಿರಲಿಲ್ಲ&#8230;..ಓದಿ ಲೇಖಕ ಶಂಕರ್‌ ಸೂರ್ನಳ್ಳಿ ಲೇಖನ.&nbsp;&nbsp;</strong></p>



<p>ಒಂದು ಸಮಯವಿತ್ತು ಯಾವುದಾದರು ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಮಹಾನುಭಾವರ ಬಗ್ಗೆ ಸುಳ್ಳು ಮಾತನಾಡುವುದಕ್ಕೆ ಜನ ಹೆದರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಸೋಲನ್ನೇ ಗೆಲುವು, ವೈಫಲ್ಯವನ್ನೇ ಸಾಧನೆ ಎಂದು ಬಿಂಬಿಸುವಂತಹ ನೆಟ್ ವರ್ಕ್ ಯುಗದಲ್ಲಿ ನಾವಿದ್ದೇವೆ ಅಥವ ಬಿದ್ದಿದ್ದೇವೆ. ಇಲ್ಲಿ ವಿಷಯ ವಿಚಾರಗಳ ಗಟ್ಟಿತನಕ್ಕಿಂತ ನಿಮ್ಮ ನೆಟ್ ವರ್ಕ್ ಜಾಲ ಅಥವಾ ಬೀಸಲ್ಪಟ್ಟ ಈ ಬಲೆಯ ತಾಕತ್ತು ಮತ್ತು ವ್ಯಾಪ್ತಿಯ ಮೇಲೆ ಸಿದ್ಧಾಂತಗಳು ಚಲಾವಣೆಗೊಳ್ಳುತ್ತವೆ. ಆದರೂ ಸಮಾಧಾನದ ಸಂಗತಿಯೆಂದರೆ, ಭಾರತ ಹಿಂದಿನಿಂದಲೂ ಕೂಡ ವಿಚಾರವಂತರ ನಾಡು. ಈ ವಿಚಾರವಂತರ ಸಂಖ್ಯೆ ಸಣ್ಣದಿದ್ದಿರಬಹುದು ಅಥವಾ ಅವರಿಗೆ ಯಾವುದೇ ದೊಡ್ಡ ಬೆಂಬಲಗಳಾಗಲೀ ಹಿನ್ನೆಲೆಗಳಾಗಲೀ ಇಲ್ಲದೇ ಇದ್ದಿರಬಹುದು ಆದರೆ “ಭಾರತೀಯತೆ’ಯನ್ನು ಅನಾದಿ ಕಾಲದಿಂದಲೂ ಜೀವಂತ ಕಾಪಿಟ್ಟುಕೊಂಡು ಬಂದಿರುವುದೇ ಈ ಸಣ್ಣಗುಂಪು.</p>



<p>ಮಹಾಭಾರತ ಯುದ್ಧ ಮುಗಿದು ಧರ್ಮರಾಯನ ಪಟ್ಟಾಭಿಷೇಕದ ಸಂಭ್ರಮದ ಗಳಿಗೆಯಲ್ಲಿ ಚಾರ್ವಾಕನೊಬ್ಬ ಬಂದು ನಿನ್ನ ಯುದ್ಧ ದಾಹಕ್ಕಾಗಿ ಲಕ್ಷಾಂತರ ಜನರನ್ನು ಬಲಿ ಪಡೆದೆಯಲ್ಲ ಎಂದು ಧರ್ಮರಾಯನನ್ನೇ ತುಂಬಿದ ಸಭೆಯಲ್ಲಿ ಪ್ರಶ್ನಿಸುತ್ತಾನೆ. ಆ ಲಕ್ಷಾಂತರ ಮಂದಿಯ ಜೊತೆಗೆ ನೀನೂ ಒಬ್ಬ ಎಂದು ಸಭೆಯಲ್ಲಿದ್ದವರೇ ಸೇರಿಕೊಂಡು ಆತನನ್ನು ಕೊಲ್ಲುತ್ತಾರಾದರೂ ಆತ ಎತ್ತಿದ ಪ್ರಶ್ನೆಯನ್ನು ಮಾತ್ರ ಸಾಯಿಸಲಾಗಲಿಲ್ಲ. ಇಂದಿಗೂ ಕೂಡ ಬೇರೆ ಬೇರೆ ದಾರಿ-ಒಳದಾರಿಗಳ ಮೂಲಕ ಪ್ರಶ್ನಿಸುವವರನ್ನು ಬಗ್ಗು ಬಡಿಯಲಾಗುತ್ತಿದೆಯಾದರೂ ಅಥವಾ ಬಾಯಿ ಮುಚ್ಚಿಸಲಾಗುತ್ತಿದೆಯಾದರೂ ವೈಚಾರಿಕತೆಯನ್ನು ನಾಮಾವಶೇಷ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ಒಂದುವೇಳೆ ಇದು ಸಾಧ್ಯವೇ ಆಗಿದ್ದಿದ್ದರೆ ಇವತ್ತಿಗೆ ಗಾಂಧೀಜಿಯ ಗುರುತುಗಳು ಯಾವತ್ತೋ ಕಣ್ಮರೆಯಾಗಿ ಮೂಲೆ ಸೇರಿ ಕೊಳ್ಳುತ್ತಿದ್ದವು. ಅಂತಹ ಪ್ರಯತ್ನಗಳು ನಡೆದವಾದರೂ ಅದು ಸುಲಭದ್ದಲ್ಲ ಎನ್ನುವ ಸತ್ಯದ ಅರಿವಾದ ಕಾರಣ ಸದ್ಯಕ್ಕದನ್ನು ಹಾಗೆಯೇ ಬಿಡಲಾಗಿದೆ.</p>



<p>ಕುವೆಂಪುರವರು ವರ್ಣಾಶ್ರಮ ತತ್ವದ ಬೆಂಬಲಿಗರಾಗಿದ್ದರು ಎಂದು ಯಾರೋ ಹೇಳಿದ್ದು ಇತ್ತೀಚಿಗಿನ ಸುದ್ದಿ. ರಾಷ್ಟ್ರಕವಿ ಕುವೆಂಪುರವರು ಆಧ್ಯಾತ್ಮಿಕತೆಯ ಬಗ್ಗೆ ಒಲವುಳ್ಳವರಾಗಿದ್ದರು. ಆದರೆ ಸನಾತನವಾದಿಯಾಗಿರಲಿಲ್ಲ. ಆಧ್ಯಾತ್ಮಿಕತೆಗೆ ಧರ್ಮ ಸಿದ್ಧಾಂತಗಳ ಹಂಗಿಲ್ಲ. ಸನ್ಯಾಸವೆಂದರೆ ಅದೊಂದು ಮನೋಸ್ಥಿತಿ ಎನ್ನುತ್ತಾರೆ ಓಶೋ ರಜನೀಶ್. ಇದೇ ರೀತಿ ಆಧ್ಯಾತ್ಮಿಕತೆಯೂ ಕೂಡ ಮನಸ್ಸಿನ ಸ್ಥಿತಿಯೇ ಆಗಿದೆ. ಸೋಗಲಾಡಿತನದ ಧಾರ್ಮಿಕ ನಂಬಿಕೆಗಳನ್ನು ಆಚಾರಗಳನ್ನು ಕುವೆಂಪು ತೀವ್ರವಾಗಿ ವಿರೋಧಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ರಸಋಷಿಯೋ ಇನ್ಯಾವುದೋ ಹೆಸರಿನ ಧಾರಾವಾಹಿ ಕಂತುಗಳ ಟಿವಿ ಕಾರ್ಯಕ್ರಮ ಬರುತ್ತಿತ್ತು. ಅದರ ಒಂದು ಕಂತಿನಲ್ಲಿ ಕುವೆಂಪುರವರ ಮಗ ತೇಜಸ್ವಿಯವರನ್ನು ಕಾಯ್ಕಿಣಿಯವರು ಸಂದರ್ಶಿಸುತ್ತಾ, ಅವರ ತಂದೆಯ ಕುರಿತಂತೆ, ಕುವೆಂಪುರವರು ವ್ಯಗ್ರವಾಗಿರುವುದು ಯಾವ ಸಂದರ್ಭದಲ್ಲಿ ಎಂದು ಪ್ರಶ್ನಿಸಿದ್ದರು. ಅದಕ್ಕುತ್ತರವಾಗಿ ತೇಜಸ್ವಿಯವರು ಒಂದು ಸಂದರ್ಭವನ್ನು ಜ್ಞಾಪಿಸಿಕೊಂಡಿದ್ದರು. ಅವರು ಒಂದು ದಿನ ಬೆಳಿಗ್ಗೆ ಪೇಪರ್ ತಂದ ಹುಡುಗನಿಗೆ ಬೈತಿದ್ದರಂತೆ “ಆ ಸ್ವಾಮಿ ಅದಕ್ಕೆ ಕರೆ ಕೊಟ್ಟ&#8230; ಮತ್ತೊಬ್ಬನ ಆ ಪೂಜೆ.. ಅದೂ ಇದೂ ಅಂತ ಬರೀ ಇವುಗಳದ್ದೇ ಆಯ್ತಲ್ಲ.. ನಾಳೆಯಿಂದ ಬೇರೆ ಪೇಪರ್ ಹಾಕು” (ಬೇರೆ ಪೇಪರ್ ಕತೆಯೂ ಅದೇ) ಅಂತ ಪೇಪರ್ ಸಂಪಾದಕನ ಮೇಲಿನ ಸಿಟ್ಟನ್ನ ಬಡಪಾಯಿ ಪೇಪರ್ ಹುಡುಗನ ಮೇಲೆ ಆವತ್ತು ತೋರಿಸಿದ್ರಂತೆ.</p>



<p><br>ಅಂಬೇಡ್ಕರ್ ಆರೆಸ್ಸೆಸ್ ಪರವಿದ್ದರು ಅದನ್ನು ಹೊಗಳಿದ್ದರು ಎಂಬುದರಿಂದ ಹಿಡಿದು ಸ್ವತ: ಅಂಬೇಡ್ಕರ್ ಯಾವತ್ತೂ ಕನಸಲ್ಲೂ ಭ್ರಮಿಸದಿದ್ದ, ಅವರು ಹಿಂದುತ್ವದ ಗುರುತು ಕೇಸರಿ ಹೊದ್ದಂತಹ ಮೂರ್ತಿಯನ್ನೂ ಅನಿವಾರ್ಯತೆಯಿಂದಾಗಿ (ಬಹು ಸಂಖ್ಯಾತ ದಲಿತರನ್ನು ಸೆಳೆಯಲೇ ವಿನ: ಪ್ರೀತಿಯಿಂದಲ್ಲ) ಕೂಡ ಪ್ರತಿಷ್ಠಾಪಿಸಲಾಗಿದೆ. ಹಳದಿ ಅಥವಾ ಶುಭ್ರ ಬಿಳಿ ಬಟ್ಟೆಯ ನಾರಾಯಣ ಗುರುಗಳಿಗೆ ಕೇಸರಿ ಹೊದಿಸಿ ಯಾವುದೋ ಕಾಲವಾಗಿದೆ, ವಿವೇಕಾನಂದರ ಜೀವಿತಾವಧಿಯಲ್ಲಿ ಇನ್ನಿಲ್ಲದ ಕಾಟ ಕೊಟ್ಟಿದ್ದರೂ, ಜೊತೆಗೆ ಅವರ ವೈಚಾರಿಕ ಜನಪರ ಸಿದ್ಧಾಂತಗಳು ಹಿಂದುತ್ವವಾದಿಗಳಿಗೆ ತೀರಾ ಅಪಥ್ಯವೆನಿಸಿದ್ದರೂ ಕೂಡ ಅದನ್ನೆಲ್ಲ ಮರೆ ಮಾಚಿ ವಿವೇಕಾನಂದರೇ ನಮ್ಮ ಆದರ್ಶವೆಂದು ಮೆರೆಸಲಾಗುತ್ತಿದೆ! ಇಂಥಾದ್ದರಲ್ಲಿ ವಿಶ್ವ ಮಾನವ, ವಿಶ್ವ ಭ್ರಾತೃತ್ವದ ಸಂದೇಶ ಸಾರಿದ ಕುವೆಂಪುರವರನ್ನು ಪುರೋಹಿತಶಾಹಿಗಳ ಮುದ್ದಿನ ಕೂಸನ್ನಾಗಿಸುವ ಹುನ್ನಾರಕ್ಕೆ ಅಚ್ಚರಿ ಪಡುವಂಥದ್ದೇನಿಲ್ಲ.</p>



<p><br>ಮಧ್ಯ ಏಶ್ಯಾದಿಂದ ವಲಸೆ ಬಂದ ಪುರೋಹಿತಶಾಹಿಗಳ ಪ್ರಮುಖ ದೌರ್ಬಲ್ಯವೆಂದರೆ ಅವರು ಇದೇ ಕಾರಣಕ್ಕಾಗಿಯೇ ಅಲ್ಪಸಂಖ್ಯಾತರೆನ್ನುವುದು. ಧಾರ್ಮಿಕ ವಿಚಾರದಲ್ಲಿ ಬರೀ ಅವರುಗಳೇ ಹೋರಾಟಕ್ಕೆ ನಿಂತರೆ ಅದಕ್ಕೇನೂ ಬಲವಿರದು. ಹೀಗಾಗಿ ಶೂದ್ರ ಶಕ್ತಿಯ ಒಳಗೊಳ್ಳುವಿಕೆಯ ಅನಿವಾರ್ಯತೆ ಅವರದ್ದು. ಕರಾವಳಿಯ ಶೂದ್ರ ಸಮುದಾಯವನ್ನು ಬ್ರಾಹ್ಮಣರನ್ನಾಗಿಸಿದ ಸಂಗತಿಯನ್ನು ಇತಿಹಾಸಕಾರ ಪಿ ಗುರುರಾಜ ಭಟ್ಟರು ತಮ್ಮ ’ತುಳುನಾಡು’ ಕೃತಿಯಲ್ಲೇ ಉಲ್ಲೇಖಿಸಿದ್ದಾರೆ. ಒಂದು ವೇಳೆ ವೈದಿಕರು ಬಹುಸಂಖ್ಯಾತರಾಗಿದ್ದಿದ್ದರೆ ಅವರಿಗೆ ಯಾವ ಶೂದ್ರ ಶಕ್ತಿಯ ಹಂಗೂ ಇರುತ್ತಿದ್ದಿರಲಿಲ್ಲ.</p>



<p><br>ಚಾರಿತ್ರಿಕ ಕಾರಣಗಳಿಗಾಗಿ ಕರಾವಳಿಯಲ್ಲಿ ಕೊರಗ ಸಮುದಾಯವನ್ನು ದ್ವೇಷಿಸುವ ಕರಾವಳಿಯ ವೈದಿಕರು (ಅವರ ’ಗ್ರಾಮ ಪದ್ಧತಿ” ಗ್ರಂಥದಲ್ಲಿ ಇಲ್ಲಿನ ಹೊಲೆಯರ ರಾಜ ಹುಬಾಷಿಕನಿಂದ ತೊಂದರೆಗೊಳಗಾದ ವಿಚಾರವಿದೆ) ಇದೇ ಕೊರಗ ಸಮುದಾಯದ ಹಿನ್ನೆಲೆಯ ಕೊರಗಜ್ಜ ದೈವದ (ಈ ಕೊರಗ ತನಿಯ ವೈದಿಕ ದೇಗುಲದ ಬಳಿ ಹಣ್ಣು ಕೀಳುವ ದುಸ್ಸಾಹಸಕ್ಕಿಳಿದ ಕಾರಣಕ್ಕೆ ಆತ “ಮಾಯ”ವಾಗುತ್ತಾನೆ. ಇಲ್ಲಿ ಮಾಯ ಎನ್ನುವ ಪದಕ್ಕೆ ಈ ಪರಿಸರದಲ್ಲಿ ಮತ್ತೂ ಒಂದು ಅರ್ಥವಿದೆ. ಉಡುಪಿಯ ಅನಂತೇಶ್ವರ ದೇಗುಲದ ದಕ್ಷಿಣ ಭಾಗದಲ್ಲಿ ಮಧ್ವಾಚಾರ್ಯರು ಮಾಯವಾದ ಜಾಗವೆಂದು ಸ್ಥಳವನ್ನು ಗುರುತಿಸಲಾಗಿದೆ. ತಾಂತ್ರಿಕ ವಿದ್ಯೆಯ ಮೂಲಕ ಅಲ್ಲಿನ ಸಂಪತ್ತು ಹೊರತೆಗೆಯಲು ಹೊರಟಾಗ ನಡೆದಂತಹ ಅನಾಹುತ ಅದೆಂದು ಕೆಲವರು ಅದನ್ನು ಹೇಳುವುದುಂಟು) ಅವೈದಿಕ ಆಚರಣೆ ಹಿಂದೂ ಧರ್ಮದ ತೆಕ್ಕೆಯಲ್ಲಿ ಬರುತ್ತಿರುವುದನ್ನು ನೋಡಿಯೂ ಸುಮ್ಮನಿರಲು ಕಾರಣ ಕೊರಗಜ್ಜನ ಜನಪ್ರಿಯತೆ.<br><br>ಅಂಬೇಡ್ಕರರಾದರೇನು, ಕುವೆಂಪು ಆದರೇನು ಅಥವಾ ಕೊರಗಜ್ಜನೇ ಆದರೇನು ಫಾಯಿದೆ ಇರೋದಾದ್ರೆ ಯಾವ ವಿಚಾರವೂ ನಮ್ಗೆ ಓಕೆ! ವೇದಗಳನ್ನು ಧಿಕ್ಕರಿಸಿ ವೈದಿಕ ಧರ್ಮ ದೇಶದಲ್ಲಿ ಇನ್ನೇನು ನಾಮಾವೇಷವಾಗುತ್ತದೆ ಎನ್ನುವಂತಹ ಸ್ಥಿತಿಯನ್ನು ತಂದಿಟ್ಟಂತಹ ಬುದ್ಧನನ್ನೇ ಲಾಭಕ್ಕಾಗಿ ಕಬ್ಜಾ ಮಾಡಿಕೊಳ್ಳಲಿಲ್ಲವೇ ಅಂತಾದ್ದರಲ್ಲಿ ಈ ಕುವೆಂಪು ಏನ್ ಮಹಾ!</p>



<p><br><br><strong>ಶಂಕರ್ ಸೂರ್ನಳ್ಳಿ.</strong></p>



<p><strong>ಲೇಖಕರು</strong></p>
]]></content:encoded>
					
		
		
			</item>
		<item>
		<title>ನಾಡಗೀತೆ ಹಾಡಲಿಕ್ಕೆ 2 ನಿಮಿಷ 30 ಸೆಕೆಂಡ್‌ ಕಾಲಮಿತಿ ನಿಗದಿ: ಸಿಎಂ ಬೊಮ್ಮಾಯಿ</title>
		<link>https://peepalmedia.com/naadageethe-hadalikke-2-min-30-sec-kaalamithi-nigadi-cm-bhommai/</link>
		
		<dc:creator><![CDATA[Peepal Media]]></dc:creator>
		<pubDate>Fri, 23 Sep 2022 11:25:29 +0000</pubDate>
				<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[jaya bharatha jananiya thanujathe]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kuvempu]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[state politics]]></category>
		<guid isPermaLink="false">https://peepalmedia.com/?p=6792</guid>

					<description><![CDATA[ಬೆಂಗಳೂರು : ನಮ್ಮ ನಾಡಗೀತೆಯಾದ “ಜಯಭಾರತ ಜನನಿಯ ತನುಜಾತೆ” ಗೆ ದಾಟಿ ಹಾಗೂ ಇಂತಿಷ್ಟೇ ನಿಮಿಷದಲ್ಲಿ ಹಾಡಬೇಕೆಂದು ಕಾಲಮಿತಿಯನ್ನು ನಿಗದಿಯಾಗಿದೆ ಎಂದು &#160;ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ. ಇಷ್ಟು ದಿನ ರಾಷ್ಟ್ರಗೀತೆಯಾದ &#160;“ಜನ ಗಣ ಮನ” ಗೀತೆಗೆ ಮಾತ್ರ ಕಾಲಮಿತಿ ನಿಗದಿಯಾಗಿತ್ತು ಆದರೆ ಇನ್ನುಮುಂದೆ ನಮ್ಮ ಕನ್ನಡ ನಾಡಿನ ಹೆಮ್ಮೆಯಾದ ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆ ಹಾಡಲಿಕ್ಕೂ ಇಂತಿಷ್ಟೇ ಸಮಯದಲ್ಲಿ ಹಾಡಬೇಕು ಎಂದು ಕಾಲಮಿತಿಯನ್ನು ನೀಡಿದೆ. 2 ನಿಮಿಷ 30 ಸೆಕೆಂಡ್‌ ರಷ್ಟು ಸಮಯದಲ್ಲಿ ನಾಡಗೀತೆಯನ್ನು [&#8230;]]]></description>
										<content:encoded><![CDATA[
<p class="has-medium-font-size"><strong>ಬೆಂಗಳೂರು</strong> : ನಮ್ಮ ನಾಡಗೀತೆಯಾದ “ಜಯಭಾರತ ಜನನಿಯ ತನುಜಾತೆ” ಗೆ ದಾಟಿ ಹಾಗೂ ಇಂತಿಷ್ಟೇ ನಿಮಿಷದಲ್ಲಿ ಹಾಡಬೇಕೆಂದು ಕಾಲಮಿತಿಯನ್ನು ನಿಗದಿಯಾಗಿದೆ ಎಂದು &nbsp;ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ.</p>



<p class="has-medium-font-size">ಇಷ್ಟು ದಿನ ರಾಷ್ಟ್ರಗೀತೆಯಾದ &nbsp;“ಜನ ಗಣ ಮನ” ಗೀತೆಗೆ ಮಾತ್ರ ಕಾಲಮಿತಿ ನಿಗದಿಯಾಗಿತ್ತು ಆದರೆ ಇನ್ನುಮುಂದೆ ನಮ್ಮ ಕನ್ನಡ ನಾಡಿನ ಹೆಮ್ಮೆಯಾದ ರಾಷ್ಟ್ರಕವಿ ಕುವೆಂಪು ಅವರು ರಚಿಸಿರುವ ನಾಡಗೀತೆ ಹಾಡಲಿಕ್ಕೂ ಇಂತಿಷ್ಟೇ ಸಮಯದಲ್ಲಿ ಹಾಡಬೇಕು ಎಂದು ಕಾಲಮಿತಿಯನ್ನು ನೀಡಿದೆ. 2 ನಿಮಿಷ 30 ಸೆಕೆಂಡ್‌ ರಷ್ಟು ಸಮಯದಲ್ಲಿ ನಾಡಗೀತೆಯನ್ನು ಹಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.</p>



<p class="has-medium-font-size">ಈ ಕುರಿತು ಟ್ಟೀಟ್‌ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ “ರಾಷ್ಟ್ರಕವಿ ಕುವೆಂಪು ವಿರಚಿತ ನಾಡಿನ ಹೆಮ್ಮೆಯ ನಾಡಗೀತೆ &#8220;ಜಯಭಾರತ ಜನನಿಯ ತನುಜಾತೆ&#8221;ಗೆ ದಾಟಿ ಹಾಗೂ ಕಾಲಮಿತಿಯನ್ನು ನಿಗದಿ ಮಾಡಿದ್ದೇವೆ. ಸಂಗೀತ ವಿದೂಷಿ ಎಸ್ ಆರ್. ಲೀಲಾವತಿ ಅಧ್ಯಕ್ಷತೆ ಸಮಿತಿ ಶಿಫಾರಸು ಮಾಡಿದ ಪ್ರಕಾರ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯಲ್ಲಿ, ಇನ್ನು ಮುಂದೆ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್ ನಲ್ಲಿ ಹಾಡಲಾಗುತ್ತದೆ.” ಎಂದು ಹೇಳಿದ್ದಾರೆ.</p>



<p><a href="https://video.twimg.com/ext_tw_video/1573235733384597506/pu/pl/1280x720/-Jdtlfsdn6VZ9-oP.m3u8?container=fmp4" target="_blank" rel="noreferrer noopener">https://video.twimg.com/ext_tw_video/1573235733384597506/pu/pl/1280&#215;720/-Jdtlfsdn6VZ9-oP.m3u8?container=fmp4</a></p>
]]></content:encoded>
					
		
		
			</item>
		<item>
		<title>ತೇಜಸ್ವಿಯ ಹಾದಿಯಲ್ಲಿ ಅಂಬೆಗಾಲಿಡುತ್ತಾ..</title>
		<link>https://peepalmedia.com/tejasvi-hadiyalli-ambegalidutta/</link>
		
		<dc:creator><![CDATA[Narendra Rai Derla]]></dc:creator>
		<pubDate>Thu, 08 Sep 2022 05:47:28 +0000</pubDate>
				<category><![CDATA[ವಿಶೇಷ]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[kuvempu]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[poorna chandra tejasvi]]></category>
		<category><![CDATA[special]]></category>
		<category><![CDATA[special story]]></category>
		<category><![CDATA[tejasvi]]></category>
		<category><![CDATA[writing]]></category>
		<guid isPermaLink="false">https://peepalmedia.com/?p=4251</guid>

					<description><![CDATA[ಒಂದು ತಲೆಮಾರನ್ನು ಎಚ್ಚರಿಸಿ ಅವರನ್ನು ಇನ್ನಿಲ್ಲದಂತೆ ಪ್ರಭಾವಿಸಿದ, ಪರಿಸರ ಪ್ರೀತಿಯಿಂದ ಈ ನೆಲದ ಕೌತುಕಗಳನ್ನು ಸರಳವಾಗಿ ಬರೆದು ಬರೆದಂತೆ ಬದುಕಿದವರು ತೇಜಸ್ವಿಯವರು. ಪರಿಸರ ಹಾಗೂ ಮಾನವ ಸಂಬಂಧಗಳ ನಡುವಿನ ಎಳೆಗಳನ್ನು ನಮಗೆ ಮನದಟ್ಟು ಮಾಡಿಸಿದ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಪೂರ್ಣಚಂದ್ರ ತೇಜಸ್ವಿಯವರು ಇಂದು ನಮ್ಮೊಡನಿದ್ದಿದ್ದರೆ ಅವರ 84 ರ ವಸಂತವನ್ನು ನಾವು ಸಂಭ್ರಮಿಸುತ್ತಿದ್ದೆವು. ನಿಜ. ಇಂದು ಸೆ. 8. ಪೂರ್ಣಚಂದ್ರ ತೇಜಸ್ವಿಯವರ ಜನ್ಮ ದಿನ. ಈ ಸಂಧರ್ಭದಲ್ಲಿ ಪೀಪಲ್‌ ಮೀಡಿಯಾ ತೇಜಸ್ವಿಯವರನ್ನು ಪ್ರೀತಿ [&#8230;]]]></description>
										<content:encoded><![CDATA[
<blockquote class="wp-block-quote has-medium-font-size is-layout-flow wp-block-quote-is-layout-flow"><p><strong>ಒಂದು ತಲೆಮಾರನ್ನು ಎಚ್ಚರಿಸಿ ಅವರನ್ನು ಇನ್ನಿಲ್ಲದಂತೆ ಪ್ರಭಾವಿಸಿದ, ಪರಿಸರ ಪ್ರೀತಿಯಿಂದ ಈ ನೆಲದ ಕೌತುಕಗಳನ್ನು ಸರಳವಾಗಿ ಬರೆದು ಬರೆದಂತೆ ಬದುಕಿದವರು ತೇಜಸ್ವಿಯವರು. ಪರಿಸರ ಹಾಗೂ ಮಾನವ ಸಂಬಂಧಗಳ ನಡುವಿನ ಎಳೆಗಳನ್ನು ನಮಗೆ ಮನದಟ್ಟು ಮಾಡಿಸಿದ, ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ ಪೂರ್ಣಚಂದ್ರ ತೇಜಸ್ವಿಯವರು ಇಂದು ನಮ್ಮೊಡನಿದ್ದಿದ್ದರೆ ಅವರ 84 ರ ವಸಂತವನ್ನು ನಾವು ಸಂಭ್ರಮಿಸುತ್ತಿದ್ದೆವು. ನಿಜ. ಇಂದು ಸೆ. 8. ಪೂರ್ಣಚಂದ್ರ ತೇಜಸ್ವಿಯವರ ಜನ್ಮ ದಿನ. ಈ ಸಂಧರ್ಭದಲ್ಲಿ ಪೀಪಲ್‌ ಮೀಡಿಯಾ ತೇಜಸ್ವಿಯವರನ್ನು ಪ್ರೀತಿ ಮತ್ತು ಗೌರವದಿಂದ ನೆನಪಿಸಿಕೊಳ್ಳುತ್ತಿದೆ. ಈ ಪ್ರಯುಕ್ತ ಮಹಾ ಸಾಹಿತಿಯ ಸಹಜವಾದ ಒಳನೋಟವೊಂದನ್ನು ʼಪೀಪಲ್‌ ಮೀಡಿಯಾʼಕ್ಕೆ ಮೊಗೆದು ಕೊಟ್ಟಿದ್ದಾರೆ ಅವರ ಪರಿಸರದ ಹಾದಿಯಲ್ಲಿ ಅಂಬೆಗಾಲಿಡುತ್ತಿರುವ ಕೃಷಿಕ ಲೇಖಕ, ನರೆಂದ್ರ ರೈ ದೇರ್ಲ.</strong></p></blockquote>



<p class="has-text-align-justify has-medium-font-size">ಸರ್, ನಮಗೂ ನಿಮಗೂ ಇರುವ ಒಂದು ವ್ಯತ್ಯಾಸ ಅಂದರೆ ಸೇತುವೆ ದಾಟುವ ಪ್ರಸಂಗ ಬಂದಾಗ ನಾವು ನೇರವಾಗಿ ದಾಟಿ ಊರು ಸೇರುತ್ತೇವೆ. ನೀವು ಹಾಗಲ್ಲ, ಸೇತುವೆ ಮೇಲೆ ನಿಂತು ಕೆಳಗಿಳಿಯುತ್ತೀರಿ. ನೀರೊಳಗಿನ ಮೀನು ಏಡಿ ಕಪ್ಪೆಗಳನ್ನು ಗಮನಿಸುವಿರಿ. ಅವುಗಳ ಬದುಕಿನ ಬಗೆಯನ್ನು ಅವಲೋಕಿಸುವಿರಿ. ಈ ದೃಷ್ಟಿಯನ್ನು ನೀವು ಹೇಗೆ ರೂಢಿಸಿಕೊಂಡಿದ್ದೀರಿ ಎಂಬುದು ನನ್ನ ಪ್ರಶ್ನೆ ಅಲ್ಲ. ನಮ್ಮಲ್ಲಿ ನಮ್ಮ ಮುಂದಿನ ಮಕ್ಕಳಿಗೆ ಈ ಆಸಕ್ತಿ ಇಲ್ಲವಲ್ಲ ಎಂಬ ವ್ಯಥೆ ನನ್ನದು. ಇದರ ಪರಿಣಾಮ ಏನಾಗಬಹುದು?- ಇದು ತೇಜಸ್ವಿ ಅವರಿಗೆ ನಾನು ಅಂದು ಕೇಳಿದ್ದ ಒಂದು ಪ್ರಶ್ನೆ .ಅದಕ್ಕೆ ತೇಜಸ್ವಿ ಕೊಟ್ಟ ಉತ್ತರವೇ ಒಂದು ಲೇಖನವಾಗುವಷ್ಟು ಇದೆ. ಆ ಉತ್ತರದ ಭಾಗ ನಮ್ಮ ಇವತ್ತಿನ ಅನೇಕ ಮಕ್ಕಳಿಗೆ ಅವರ ಹೆತ್ತವರಿಗೆ ದಿಕ್ಸೂಚಿ ಆಗಬಹುದು.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" src="https://peepalmedia.com/wp-content/uploads/2022/09/tejasvi.jpg" alt="" class="wp-image-4271" width="828" height="731" srcset="https://peepalmedia.com/wp-content/uploads/2022/09/tejasvi.jpg 665w, https://peepalmedia.com/wp-content/uploads/2022/09/tejasvi-300x265.jpg 300w" sizes="(max-width: 828px) 100vw, 828px" /><figcaption><strong><strong> ಪೂರ್ಣಚಂದ್ರ ತೇಜಸ್ವಿ</strong></strong></figcaption></figure></div>


<p class="has-text-align-justify has-medium-font-size">ತೇಜಸ್ವಿ ಕೊಟ್ಟ ಉತ್ತರವನ್ನು ಒಮ್ಮೆ ಗಮನಿಸಿ .&#8221;ನೀವು ಊರು ಸೇರುವ ಉದ್ದೇಶ ಇಟ್ಟುಕೊಂಡು ಹೊರಡುತ್ತೀರಿ. ನನಗೆ ಆ ಉದ್ದೇಶವೇ ಇರುವುದಿಲ್ಲ. ಈ ಅರ್ಥದಲ್ಲಿ ನಾನು ಒಂದು ರೀತಿ ಹರಾಮಿ ಮನುಷ್ಯ. ಈ ಮನುಷ್ಯ ಪ್ರಾಣಿ ಪ್ರಕೃತಿಯ ಉದ್ದೇಶ ಪೂರ್ವಕ ಸೃಷ್ಟಿ ಎಂಬುದೇ ಸುಳ್ಳು. ಉದ್ದೇಶಗಳೆಲ್ಲ ನಾವೇ ಆರೋಪಿಸಿಕೊಂಡಿರುವುದು. ಈ ಮಿಥ್ಯಾರೋಪವನ್ನು ನೀವು ಬಿಟ್ಟ ಮಾರನೆಯ ಕ್ಷಣವೇ ನಿಮಗೊಂದು ವಿಶ್ವರೂಪ ಗೋಚರವಾಗುತ್ತದೆ. ನನ್ನ ಹೇಳಿಕೆಯ ಸತ್ಯಾಂಶವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರಯೋಗ ಮಾಡಿ ಪರೀಕ್ಷಿಸ ಬಹುದು. ನಮ್ಮ ಮಕ್ಕಳಲ್ಲಿ ಈ ದೃಷ್ಟಿ ಇಲ್ಲವಲ್ಲ ಎಂದು ನೀವು ಹೇಳುವುದು ಸರ್ವಥಾ ತಪ್ಪು. ಈ ದೃಷ್ಟಿ ಯಾರಲ್ಲಾದರೂ ಇವತ್ತಿಗೂ ಇದ್ದರೆ ಅದು ನಮ್ಮ ಮಕ್ಕಳಲ್ಲಿ ಮಾತ್ರ. ಪ್ರತಿಯೊಬ್ಬ ಮಗುವನ್ನು ಹಿರಿಯರೇ, ಹಿರಿಯರು ಕಟ್ಟಿರುವ ನಾಗರಿಕತೆಯೇ ಹಾಳು ಮಾಡುತ್ತಿರುವುದು. ದೊಡ್ಡವರು ತಮ್ಮ ಹುಚ್ಚಿನ ಅಚ್ಚಿಗೆ ತಕ್ಕಂತೆ ಮಕ್ಕಳನ್ನು ಎರಕಹೊಯ್ಯಲು ಪ್ರಯತ್ನಿಸುತ್ತಿದ್ದಾರೆ .ಇಂಥ ಅಪ್ಪ ಅಮ್ಮಂದಿರನ್ನು ಪರಕಾಯ ಪ್ರವೇಶ ಮಾಡಲೆಸಗುವ ಬೆಂತರಗಳಿಗೆ ಹೋಲಿಸಬಹುದು .ತಮ್ಮ ಹಿಂಗದ ಆಸೆ ಅಭೀಕ್ಷೆಗಳಿಗೆ ಮಕ್ಕಳಲ್ಲಿ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ .ಹೀಗಾಗಿ ಮಕ್ಕಳು ತಮ್ಮ ಸ್ವಾಭಾವಿಕ ಬದುಕನ್ನು ಬದುಕದೆ ಅವರು ದೊಡ್ಡವರಾಗುವ ಹೊತ್ತಿಗೆ ಇನ್ನೊಂದು ಪರಾಕಾಯ ಪ್ರವೇಶ ಮಾಡಲೆಸಗುವ ಬೆಂತರಗಳಾಗಿಯೇ ರೂಪುಗೊಳ್ಳುತ್ತಾರೆ. ಎಷ್ಟೆಷ್ಟು ಮಕ್ಕಳಿಗೆ ಹಿಂಸೆ ಕೊಡುತ್ತಾರೆ, ಎಷ್ಟೆಷ್ಟು ಮಕ್ಕಳನ್ನು ಹೋಮ್‌ವರ್ಕಿನ ಹೆಣ ಭಾರದಲ್ಲಿ ಹುಗಿಯುತ್ತಾರೆ, ಎಷ್ಟೆಷ್ಟು ಟೈ ಕಟ್ಟಿಸಿ ಬೂಟ್ಸ್ ಹಾಕಿಸಿ ಗೋಳಾಡಿಸುತ್ತಾರೆ ಅಷ್ಟಷ್ಟು ಆ ಶಾಲೆಗಳನ್ನು ಅತ್ಯುತ್ತಮ ಶಾಲೆಗಳೆಂದು ಪರಿಗಣಿಸಲಾಗುತ್ತದೆ. ಅಂತಹ ಶಾಲೆಗೆ ಹೆಚ್ಚಿನ ಕ್ಯಾಪಿಟೇಶನ್ ಶುಲ್ಕವು ದೊರೆಯುತ್ತದೆ. ಇಂಥ ಪೀಳಿಗೆಯ ಪರಿಣಾಮ ಏನಾಗಬಹುದೆಂದು ನೀವೇ ಊಹಿಸಿ&#8221;- ಇದು ತೇಜಸ್ವಿ ನನಗೆ ಕೊಟ್ಟ ಸುದೀರ್ಘ ಉತ್ತರ.</p>



<figure class="wp-block-image size-large is-resized"><img decoding="async" src="https://peepalmedia.com/wp-content/uploads/2022/09/parisada-kate-1024x538.jpg" alt="" class="wp-image-4274" width="893" height="469" srcset="https://peepalmedia.com/wp-content/uploads/2022/09/parisada-kate-1024x538.jpg 1024w, https://peepalmedia.com/wp-content/uploads/2022/09/parisada-kate-300x158.jpg 300w, https://peepalmedia.com/wp-content/uploads/2022/09/parisada-kate-768x403.jpg 768w, https://peepalmedia.com/wp-content/uploads/2022/09/parisada-kate.jpg 1200w" sizes="(max-width: 893px) 100vw, 893px" /><figcaption><strong> </strong></figcaption></figure>



<p class="has-text-align-justify has-medium-font-size">ಹೌದು, ನಾವಿವತ್ತು ನಮ್ಮ ಮಕ್ಕಳಿಗೆ ಮನೆಯಂಗಳದಲ್ಲಿರುವ ಒಂದು ಮಾವಿನ ಮರದ ತುದಿಗೆ ಬೀಳುವ ಮಳೆ ನೀರು ಎಲೆಯಿಂದ ಎಲೆಗೆ ಪಲ್ಟಿ ಹೊಡೆದು ರೆಂಬೆಯಿಂದ ರೆಂಬೆಗೆ ಜಾರಿ, ಕೊಂಬೆಯಿಂದ ಕೊಂಬೆಗೆ ಜಿನುಗಿ ಬುಡಕ್ಕೆ ತಲುಪಲು ಎಷ್ಟು ಹೊತ್ತು ಬೇಕು ಎಂದು ಹೇಳಿಕೊಡುವುದಿಲ್ಲ. ಅದು ತರಗೆಲೆಯ ಹಾಸಿಗೆಯ ಅಡಿಯಲ್ಲಿ ಇಂಗಿ ಅಂತರ್ಜಲವನ್ನು ಹೇಗೆ ವೃದ್ಧಿಸುತ್ತದೆ ಎಂಬುದನ್ನು ಕಲಿಸಿಕೊಡುವುದಿಲ್ಲ. ಕುದುರೆ ಕನ್ನಡಕ ಹಾಕಿ ಮೊಬೈಲ್ ಟಿವಿ ಮುಂತಾದವುಗಳಿಗೆ ಅಂಟಿಕೊಳ್ಳುವ ಚಟದಿಂದ ಖಂಡಿತವಾಗಿಯೂ ನಮ್ಮ ಮಕ್ಕಳು ಬೆಂತರಗಳಾಗುತ್ತಿವೆ ಹೊರತು ಮನುಷ್ಯರಾಗುವುದಿಲ್ಲ. ಶಿವರಾಮ ಕಾರಂತರ &#8216;ಬಾಲವನ&#8217; ತೇಜಸ್ವಿಯವರ &#8216;ನಿರುತ್ತರ&#8217; ತೆರೆದಿಟ್ಟ ಒಂದು ಪುಸ್ತಕದ ಹಾಗೆಯೇ. ಯಾವುದೋ ಮರಕ್ಕೆ ಅಂಟಿದ ಇನ್ಯಾವುದೋ ಜಾತಿಯ ಬಳ್ಳಿ ಮರತಬ್ಬಿ ತುದಿ ಏರಿದ ಪರಿಯನ್ನು ಗಮನಿಸುವ ಶಕ್ತಿ ನಾವು ಕಳಕೊಂಡಾಗ ನಾವು ಜೀವನದಲ್ಲಿ ಖಂಡಿತಾ ಪಳಗಲಾರೆವು. ತೇಜಸ್ವಿ ಆರಂಭದ ಹಂತದಲ್ಲಿ ಕಥೆ, ಕಾದಂಬರಿ, ಕವನಗಳನ್ನು ಹೆಚ್ಚು ಹೆಚ್ಚು ಬರೆದವರು .ಕೊನೆ ಕೊನೆಗೆ ಅವರು ಪೂರ್ಣ ತೊಡಗಿಕೊಂಡದ್ದು, ಹೆಚ್ಚು ಹೆಚ್ಚು ಬಗೆದು ಬರೆದು ಕೊಟ್ಟದ್ದು ಪ್ರಕೃತಿ ಪರಿಸರದ ಬಗ್ಗೆ. ಅವರು ಹೀಗೆ ಅಭಿವ್ಯಕ್ತಿ ಮಾಧ್ಯಮವನ್ನು ಬದಲಾಯಿಸಿಕೊಂಡ ಬಗ್ಗೆ ನಾನೊಮ್ಮೆ ಅವರನ್ನು ಪ್ರಶ್ನಿಸಿದ್ದೆ. ತೇಜಸ್ವಿ ಕೊಟ್ಟ ಉತ್ತರ ಇವತ್ತಿನ ಎಲ್ಲಾ ಅಸಂಗತಗಳಿಗೆ ಸಮರ್ಪಕವಾಗಿ ಉತ್ತರ ಕೊಡಬಲ್ಲದು. ಕಾವ್ಯ, ನಾಟಕ,, ಸಂಗೀತ, ಕಲೆ ಇವೆಲ್ಲವೂ ನಮ್ಮ ಮೆದುಳಿನ ಚಿಂತನಾ ವ್ಯವಸ್ಥೆಯ ಕೆನೆ ಪದರ. ತಲೆ- ಮೆದುಳು ಉಳಿಯಬೇಕಾದರೆ, ಅದು ಸುಲಲಿತವಾಗಿ ಕ್ರಿಯಾಶೀಲವಾಗಿ ಸೃಜನಶೀಲವಾಗಿ ಇರಬೇಕಾದರೆ ತಲೆಯ ಕೆಳಗಡೆ ಇರುವ ಜೀವ ಉಳಿಯಬೇಕು. ಈ ಜೀವ ಉಳಿಯಬೇಕಾದರೆ ಗಾಳಿ ನೀರು ಮಣ್ಣು ಸುಸ್ಥಿರವಾಗಿರಬೇಕು. ಈಗ ಅದಕ್ಕೆ ಕಂಟಕ ಬಂದಿದೆ. ಕೆನೆ ಪದರ, ಸೃಜನಶೀಲತೆ, ಸೃಷ್ಟಿಶೀಲತೆ ಅವೆಲ್ಲ ಅನಂತರದ್ದು. ಈಗ ನಾವು ಜೀವ ಉಳಿಸುವ ಪ್ರಕೃತಿಯ ಸುಸ್ಥಿರತೆಯ ಬಗ್ಗೆ ಜಾಗೃತಿ ಮೂಡಿಸಬೇಕು. ನಿಸರ್ಗ ಕೊಂಡಿಗಳನ್ನು ಅಧ್ಯಯನ ಮಾಡಬೇಕು ಎಂದು ಉತ್ತರಿಸಿದ್ದರು. ನಾನು ತೇಜಸ್ವಿಯ ದಾರಿಯಲ್ಲಿ ಅಂಬೆಗಾಲಿಡುವುದಕ್ಕೆ ತೇಜಸ್ವಿಯವರ ಈ ಉತ್ತರವೇ ಕಾರಣ.</p>



<p class="has-text-align-right has-medium-font-size"><strong>(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)</strong></p>



<figure class="wp-block-image size-large is-resized"><img decoding="async" src="https://peepalmedia.com/wp-content/uploads/2022/09/WhatsApp-Image-2022-09-07-at-9.03.46-PM-713x1024.jpeg" alt="" class="wp-image-4252" width="158" height="227" srcset="https://peepalmedia.com/wp-content/uploads/2022/09/WhatsApp-Image-2022-09-07-at-9.03.46-PM-713x1024.jpeg 713w, https://peepalmedia.com/wp-content/uploads/2022/09/WhatsApp-Image-2022-09-07-at-9.03.46-PM-209x300.jpeg 209w, https://peepalmedia.com/wp-content/uploads/2022/09/WhatsApp-Image-2022-09-07-at-9.03.46-PM-768x1104.jpeg 768w, https://peepalmedia.com/wp-content/uploads/2022/09/WhatsApp-Image-2022-09-07-at-9.03.46-PM-1069x1536.jpeg 1069w, https://peepalmedia.com/wp-content/uploads/2022/09/WhatsApp-Image-2022-09-07-at-9.03.46-PM.jpeg 1080w" sizes="(max-width: 158px) 100vw, 158px" /></figure>



<p class="has-medium-font-size"><strong>ನರೆಂದ್ರ ರೈ ದೇರ್ಲ</strong><br>ಕೃಷಿಕ ಲೇಖಕರು</p>
]]></content:encoded>
					
		
		
			</item>
	</channel>
</rss>
