<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>language &#8211; Peepal Media</title>
	<atom:link href="https://peepalmedia.com/tag/language/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Tue, 03 Sep 2024 11:33:47 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>language &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ದೇವ ಬಾಶೆ, ಸ್ವರ್ಗದ ಬಾಶೆ ಎಲ್ಲ ಲೊಳಲೊಟ್ಟೆ (ಡಾ.ರಂಗನಾತ ಕಂಟನಕುಂಟೆ ಬರಹ)</title>
		<link>https://peepalmedia.com/deva-bashe-swargada-bashe-ella-lolalotte-written-by-dr-ranganatha-kantanakunte/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 03 Sep 2024 11:24:45 +0000</pubDate>
				<category><![CDATA[ಅಂಕಣ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[Kannada Language]]></category>
		<category><![CDATA[karnataka]]></category>
		<category><![CDATA[language]]></category>
		<category><![CDATA[news]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[samskritha]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=44859</guid>

					<description><![CDATA[‘ಸಂಸ್ಕ್ರುತ ಬಾಶೆ&#8217; ಗೊತ್ತಿಲ್ಲದಿದ್ದರೆ ಸ್ವರ್ಗಕ್ಕೆ ಹೋಗಲು ಸಾದ್ಯವಿಲ್ಲ’ ಎಂದು ಸ್ವಾಮೀಜಿಗಳೊಬ್ಬರು ನೀಡಿರುವ ಹೇಳಿಕೆ ಚರ್ಚೆ ಹುಟ್ಟಿ ಹಾಕಿದೆ. ಅವರ ಹೇಳಿಕೆ ಅಜ್ಞಾನದಿಂದ ಕೂಡಿದೆ ಎಂಬುದು ನಿಜವಾದರೂ ಅದರ ಪರಿಣಾಮ ದೊಡ್ಡದಾಗಿರುತ್ತದೆ. ಯಾಕೆಂದರೆ ಅವರು ಸಾಮಾನ್ಯ ವ್ಯಕ್ತಿಯಲ್ಲ. ಪ್ರಬಾವಿ ಮಟದ ‘ಸ್ವಾಮೀಜಿ’. ಅವರನ್ನು ಹಿಂಬಾಲಿಸುವ ದೊಡ್ಡ ಹಿಂಡೇ ಇರುವುದು ತಿಳಿದ ವಿಚಾರ. ಅಂತಹ ಹಿಂಬಾಲಕರಿಗೆ ಅವರ ಮಾತು ಪವಿತ್ರ ಆದೇಶವೇ ಆಗಿರುತ್ತದೆ. ಅದನ್ನು ಅವರು ನಂಬುತ್ತಾರೆ. ಅಂತಹ ಸುದ್ದಿಗಳನ್ನು ಎಲ್ಲೆಡೆ ಹರಡುತ್ತಾರೆ. ಹಾಗೆ ಹರಡಿಕೊಂಡ ಸುದ್ದಿಯನ್ನು ದಿಟವೇ? ಸಟೆಯೇ? [&#8230;]]]></description>
										<content:encoded><![CDATA[
<p>‘ಸಂಸ್ಕ್ರುತ ಬಾಶೆ&#8217; ಗೊತ್ತಿಲ್ಲದಿದ್ದರೆ ಸ್ವರ್ಗಕ್ಕೆ ಹೋಗಲು ಸಾದ್ಯವಿಲ್ಲ’ ಎಂದು ಸ್ವಾಮೀಜಿಗಳೊಬ್ಬರು ನೀಡಿರುವ ಹೇಳಿಕೆ ಚರ್ಚೆ ಹುಟ್ಟಿ ಹಾಕಿದೆ. ಅವರ ಹೇಳಿಕೆ ಅಜ್ಞಾನದಿಂದ ಕೂಡಿದೆ ಎಂಬುದು ನಿಜವಾದರೂ ಅದರ ಪರಿಣಾಮ ದೊಡ್ಡದಾಗಿರುತ್ತದೆ. ಯಾಕೆಂದರೆ ಅವರು ಸಾಮಾನ್ಯ ವ್ಯಕ್ತಿಯಲ್ಲ. ಪ್ರಬಾವಿ ಮಟದ ‘ಸ್ವಾಮೀಜಿ’. ಅವರನ್ನು ಹಿಂಬಾಲಿಸುವ ದೊಡ್ಡ ಹಿಂಡೇ ಇರುವುದು ತಿಳಿದ ವಿಚಾರ. ಅಂತಹ ಹಿಂಬಾಲಕರಿಗೆ ಅವರ ಮಾತು ಪವಿತ್ರ ಆದೇಶವೇ ಆಗಿರುತ್ತದೆ. ಅದನ್ನು ಅವರು ನಂಬುತ್ತಾರೆ. ಅಂತಹ ಸುದ್ದಿಗಳನ್ನು ಎಲ್ಲೆಡೆ ಹರಡುತ್ತಾರೆ. ಹಾಗೆ ಹರಡಿಕೊಂಡ ಸುದ್ದಿಯನ್ನು ದಿಟವೇ? ಸಟೆಯೇ? ಎಂದು ಮರುಯೋಚಿಸದೆ ನಂಬುವ ಮುಗ್ದ ಜನ ಸಮಾಜದಲ್ಲಿದ್ದಾರೆ. ಅವರು ತಮ್ಮ ಮಕ್ಕಳಿಗೆ ಪರಂಪರೆಯ ಭಾಶೆ ಹೆಸರಿನಲ್ಲಿ ಸಂಸ್ಕೃತ ಕಲಿಸುವ ಆಸಕ್ತಿ ತೋರುತ್ತಾರೆ. ಜಾಗತೀಕರಣ ಕಾಲದಲ್ಲಿ ಹುಟ್ಟಿಕೊಂಡಿರುವ ನವಬ್ರಾಹ್ಮಣಶಾಹಿ ಮಧ್ಯಮ ವರ್ಗ ಇದರ ದೊಡ್ಡ ಬಲಿಪಶು. ಇದು ಲಾಬಕ್ಕಾಗಿ ಇಂಗ್ಲಿಶ್ ಅನ್ನು ತಮ್ಮ ದರ್ಮ ಪರಂಪರೆಗಳ ಹೆಸರಲ್ಲಿ ಸಂಸ್ಕೃತವನ್ನು ಕಲಿಯುವ ಸ್ವಾರ್ತದಲ್ಲಿದೆ. ನಿಡುಗಾಲದಲ್ಲಿ ಜನರ ಮೇಲೆ ಮನೋದಾಳಿ ನಡೆಯುವುದರಿಂದ ಇಂತಹ ಸಮಸ್ಯೆಗಳು ಎದುರಾಗುತ್ತವೆ. ಅಂದರೆ ಸಂಸ್ಕ್ರುತವಾದಿಗಳ ಸವಾರಿ ಜನರನ್ನು ತುಳಿಯುತ್ತಲೇ ಇರುತ್ತದೆ.</p>



<p>ಹೀಗೆ ಸಂಸ್ಕ್ರುತದ ಬಗ್ಗೆ ಹಬ್ಬಿಸಿದ ಸುಳ್ಳುಗಳ ಪರಿಣಾಮವಾಗಿಯೇ ಅದು ‘ದೇವಬಾಶೆ’ ಎಂಬ ಪದವಿಯನ್ನು ಹೊಂದಿದೆ. ಅದರ ಕನವರಿಕೆಯ ಮುಂದುವರಿಕೆಯಾಗಿಯೇ ಸಂಸ್ಕ್ರುತ ಸ್ವರ್ಗದ ಬಾಶೆ ಎಂಬ ಆದೇಶವನ್ನು ನೀಡಲಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಅದು ಅವರ ಖಾಸಗಿ ಹೇಳಿಕೆ ಅಲ್ಲ. ಅವರ ಹಿಂದಿರುವ ಬ್ರಾಹ್ಮಣ್ಯವಾದಿಗಳು, ಸನಾತನವಾದಿಗಳು ಮತೀಯವಾದಿಗಳು ಸ್ವಾಮೀಜಿಗಳ ಮೂಲಕ ಮಾತನಾಡಿದ್ದಾರೆ. ದೇವಾಲಯಗಳು ಮಟಗಳನ್ನು ಸಂಸ್ಕ್ರುತವನ್ನು ಬೆಳೆಸಲು ಬಳಸಿಕೊಂಡೇ ಬರಲಾಗುತ್ತಿದೆ. ಅದು ಈಗ ಮತ್ತೂ ಮುಂದುವರಿದಿದೆ. ಜನಬಳಕೆಯಲ್ಲಿದ್ದ ಇಲ್ಲವೇ ‘ಮೃತಭಾಶೆ’ಗೆ, ಸಂಸ್ಕ್ರತಕ್ಕೆ ಮರುಜೀವ ನೀಡುವ ಕೆಲಸವನ್ನು ಶತಮಾನಗಳಿಂದಲೂ ಮಾಡುತ್ತಲೇ ಬರಲಾಗುತ್ತಿದೆ. ಆಳುವ ವರ್ಗಗಳ ಶಕ್ತಿಗಳನ್ನು ಬೌದ್ದಿಕವಾಗಿ ಕೈವಶಮಾಡಿಕೊಂಡಿರುವ ಈ ಶಕ್ತಿಗಳು ಸಂಸ್ಕ್ರುತವನ್ನು ಬೆಳೆಸುವ ಕೆಲಸ ಮಾಡುತ್ತಿವೆ. ಅಂತಹ ಕೆಲಸಗಳಿಗೆ ಮಾನ್ಯತೆ ತಂದುಕೊಡುವ ಅಜೆಂಡಾದ ಬಾಗವಾಗಿ ಇಂತಹ ಹೇಳಿಕೆಗಳು ಹುಟ್ಟುತ್ತಿರುತ್ತವೆ. ಅದಕ್ಕೆ ಉತ್ತರ ನೀಡುವ ಕೆಲಸವನ್ನು ಕನ್ನಡಿಗರು ಮಾಡುತ್ತಿರುತ್ತಾರೆ. ಅಶ್ಟೇ.</p>



<p>ಸ್ವಾಮೀಜಿಗಳ ಮಾತನ್ನು ಅವಲೋಕಿಸಿದರೆ ಹಲವು ಸಂಗತಿಗಳು ಬಹಿರಂಗಗೊಳ್ಳುತ್ತಿವೆ. ಬ್ರಾಹ್ಮಣಶಾಹಿಗಳು ಮೊದಲಿಂದಲೂ ದೇವರು ಮತ್ತು ಸ್ವರ್ಗಗಳನ್ನು ತೋರಿಸುತ್ತಲೇ ಜನರನ್ನು ವಂಚಿಸುತ್ತ ಬರಲಾಗಿದೆ. ಜನರನ್ನು ಮೌಡ್ಯದ ಕೂಪದಲ್ಲಿ ಕೆಡವಿ ಆರ್ತಿಕವಾಗಿ ಲಾಬಮಾಡಿಕೊಳ್ಳಲಾಗಿದೆ. ಈಗ ಸಂಸ್ಕ್ರುತದ ವ್ಯಾಪ್ತಿಯನ್ನು ಹಿಗ್ಗಿಸುವ ಉದ್ದೇಶದಿಂದ ತಮ್ಮ ಹಳೆಯ ಅಜೆಂಡಾವನ್ನು ಮರುಕಳಿಸಿದೆ. ಮತ್ತೊಮ್ಮೆ ಸ್ವರ್ಗದ ಆಸೆ ತೋರಿಸಿ ಸಂಸ್ಕ್ರುತವನ್ನು ತುರುಕಿ ಕನ್ನಡ ಮತ್ತು ಇತರೆ ಜನಬಾಶೆಗಳ ಬೇರುಗಳನ್ನು ಸಡಿಲಗೊಳಿಸಲಾಗುತ್ತಿದೆ. ಇದಕ್ಕೆ ಹಿಂದಿಯನ್ನು ಊರುಗೋಲಾಗಿ ಬಳಸುವ ಕೆಲಸವನ್ನು ಶತಮಾನದಿಂದಲೂ ಮಾಡಲಾಗುತ್ತಿದೆ. ಕನ್ನಡವನ್ನು ಅದಕ್ಕೆ ಬಳಸಿಕೊಳ್ಳಲಾಗುತ್ತಿದೆ.</p>



<p>ಇಲ್ಲಿ ಒಂದು ಕುತರ್ಕದ ಪ್ರಶ್ನೆ. ಹೀಗೆ ಹೇಳಿಕೆ ನೀಡಿರುವ ಸ್ವಾಮೀಜಿಗಳು ಸ್ವರ್ಗಕ್ಕೆ ಯಾವಾಗ ಹೋಗಿ ಬಂದರು. ಅಲ್ಲಿ ಸಂಸ್ಕೃತ ಬಳಕೆಯಲ್ಲಿರುವುದನ್ನು ಕಂಡು ಕೇಳಿ ಯಾರೊಂದಿಗೆ ಸಂವಾದಿಸಿ ಬಂದರು. ಸ್ವರ್ಗ ಇರುವುದಾದರೂ ಎಲ್ಲಿ? ತಮ್ಮ ವಿಚಾರವನ್ನು ಪ್ರಚಾರ ಮಾಡಲು ಹೋಗಿ ಸಮಾಜದ ಮುಂದೆ ಅಜ್ಞಾನದ ಪ್ರದರ್ಶನ ಮಾಡುತ್ತಿದ್ದೇವೆ ಎಂಬ ಮುಜುಗರವೂ ಇಲ್ಲ.</p>



<p>ನಿಜವೆಂದರೆ, ಸ್ವಾಮೀಜಿಗಳ ಅರಿವಿನ ಸ್ಟಾಂಡರ್ಡ್ ಏನು? ಎಂಬುದನ್ನೂ ಪ್ರೂವ್ ಮಾಡಿಕೊಂಡಿದ್ದಾರೆ. ಅವರ ಇಂತಹ ಅಪ್ರಬುದ್ದ ಹೇಳಿಕೆಗಳನ್ನು ಕೇಳಿ ಅವರ ಬಕ್ತರಿಗೆ ಅಸಹ್ಯ ಹುಟ್ಟದಿರುವುದು ಸೋಜಿಗದ ಸಂಗತಿ. ಅತವಾ ಒಮ್ಮೆ ಬೌದ್ದಿಕ ದಾಸ್ಯಕ್ಕೆ ಬಿದ್ದವರಿಗೆ ಮತ್ತೆಂದೂ ನೈಜ ವಿಚಾರಗಳನ್ನು ಅರಿತುಕೊಳ್ಳುವ ಶಕ್ತಿಯೇ ಮರಳಿ ಬರುವುದಿಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ.</p>



<p>ಇದನ್ನು ಕಂಡೇ ವಚನಕಾರ ನಗೆಯ ಮಾರಿತಂದೆ ‘ಸಂಸ್ಕೃತವನ್ನು ಮಾತಿನ ಪಸರ’ ಎಂದಿದ್ದಾನೆ. ಅದು ಜನರನ್ನು ಬೇಟೆಯಾಡುವ ಕಲ್ಲಿಯ ಹಾಗೆ ಎಂದದ್ದು ಸುಮ್ಮನೆ ಅಲ್ಲ. ಅಂದರೆ ಶತಮಾನಗಳಿಂದಲೂ ಸಂಸ್ಕøತದ ದಾಳಿ ನಡೆದಿದೆ. ಅದನ್ನು ಕನ್ನಡಿಗರು ಎದುರಿಸುತ್ತಲೇ ಬಂದಿದ್ದಾರೆ. ಈಗಲೂ ಅದನ್ನು ವೈಚಾರಿಕವಾಗಿ ಎದುರಿಸಲೇಬೇಕಿದೆ. ಬ್ರಾಹ್ಮಣಶಾಹಿ ನಮ್ಮ ಬದುಕಿನ ವಿವಿದ ಮಗ್ಗುಲುಗಳ ಮೇಲೆ ಹೇಗೆ ದಾಳಿ ಮಾಡುತ್ತದೆ ಎಂಬುದಕ್ಕೆ ಇದು ಎತ್ತುಗೆ. ದೇವಾಲಯ, ದೇವರು, ಸ್ವರ್ಗ, ಆಹಾರ, ಭಾಶೆ ಎಲ್ಲವೂ ಅದಕ್ಕೆ ಕಪಟ ನಾಟಕದ ಆಟದ ವಸ್ತುಗಳೇ ಆಗಿರುತ್ತವೆ. ಅಂದರೆ ಪೊಳ್ಳು ಸಂಗತಿಗಳನ್ನೇ ಮುಂದುಮಾಡಿ ಜನರನ್ನು ದಿಕ್ಕುಗೆಡಿಸುವ ಕೆಲಸ ಮಾಡುತ್ತದೆ. ಇಂತಹ ನಕಲಿ ಹೇಳಿಕೆಗಳಿಂದ ಸಂಸ್ಕೃತದ ಚರ್ಚೆಯನ್ನು ಜೀವಂತವಾಗಿಡುತ್ತದೆ. ಸ್ವಾಮೀಜಿಗಳು ಇಂತಹ ಹೇಳಿಕೆ ನೀಡುವ ಕಾಲದಲ್ಲಿಯೇ ಸರ್ಕಾರಗಳು ಸಂಸ್ಕೃತದ ಸಂಗೋಪನೆಗೆ ಕೋಟ್ಯಂತರ ರೂಪಾಯಿ ತೆರಿಗೆ ಹಣ ಖರ್ಚುಮಾಡುತ್ತದೆ. ಇವುಗಳನ್ನು ಜೋಡಿಸಿಕೊಂಡೇ ಅರ್ತಮಾಡಿಕೊಳ್ಳಬೇಕಿದೆ.</p>



<p>ಇಲ್ಲಿ ಗಮನಿಸಬೇಕಾದ ಅತ್ಯಂತ ಮುಖ್ಯಸಂಗತಿಯೆಂದರೆ ಲಜ್ಜೆಯೇ ಇಲ್ಲದೇ ಬಹಿರಂಗವಾಗಿ ಸುಳ್ಳುಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವುದು. ಇವು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂತ್ತವೆ ಎಂಬ ನಂಬಿಕೆ ಅವರಿಗಿದೆ. ಇಂತಹ ಹೇಳಿಕೆಗಳಿಂದ ಜನರ ಮಧ್ಯೆ ಅಪಹಾಸ್ಯಕ್ಕೆ ಗುರಿಯಾಗುತ್ತೇವೆ ಎಂಬ ಬಯವಿಲ್ಲ. ಇಂತಹ ಹೇಳಿಕೆಗಳನ್ನು ಪ್ರಾಸಂಗಿಕವಾಗಿ ನೀಡುವುದಿಲ್ಲ. ಬದಲಿಗೆ ಉದ್ದೇಶಪೂರ್ವಕವಾಗಿಯೇ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸಂಸ್ಕøತದ ಬೇರುಗಳನ್ನು ಗಟ್ಟಿಗೊಳಿಸಲು ಯತ್ನಿಸಲಾಗುತ್ತದೆ. ಬ್ರಾಹ್ಮಣಶಾಹಿ ಇಂತಹ ಹೇಳಿಕೆಗಳನ್ನು ನೀಡುತ್ತ ನೀಡಿಸುತ್ತಲೇ ಸಂಸ್ಕøತವನ್ನು ಮಾನ್ಯ ಮಾಡುತ್ತಲೇ ಇರುತ್ತದೆ. ಇಂತಹ ಹೇಳಿಕೆಗಳಿಂದ ಪ್ರಭಾವಗೊಳ್ಳುತ್ತಿರುವ ಜನರೂ ನಮ್ಮ ಸಮಾಜದಲ್ಲಿದ್ದಾರೆ</p>



<p>ದುರಂತವೆಂದರೆ ಈ ನಾಡಿನ ಜನರು ಇಂತಹ ಅಜ್ಞಾನದ ವಿರುದ್ಧ ನಿರಂತರ ಸಂಘರ್ಶ ನಡೆಸುತ್ತಲೇ ಇರಬೇಕು. ಯಾಕೆಂದರೆ ಸನಾತನವಾದಿಗಳು ಇಂತಹ ಅಜ್ಞಾನದ ವಿಶಬೀಜಗಳನ್ನು ಬಿತ್ತುವ ಮೂಲಕವೇ ಜನರನ್ನು ಬೌದ್ದಿಕವಾಗಿ ನಿಯಂತ್ರಿಸುತ್ತದೆ. ಇದು ಬ್ರಾಹ್ಮಣ್ಯ ಇರುವವರೆಗೂ ನಡೆದೇ ಇರುತ್ತದೆ. ಹಾಗಾಗಿ ಬ್ರಾಹ್ಮಣ್ಯ ಇರುವವರೆಗೂ ಸಂಘರ್ಶ ನಡೆದೇ ಇರುತ್ತದೆ. ಬ್ರಾಹ್ಮಣಶಾಹಿ ಲೋಕದೃಶ್ಟಿಯನ್ನು ಕೊನೆಗಾಣಿಸದೇ ಇಂತಹ ಅಜ್ಞಾನ, ಅವೈಚಾರಿಕತೆ ಶ್ರೇಶ್ಟತೆಯ ವ್ಯಸನಗಳನ್ನು ಕೊನೆಗಾಣಿಸಲಾಗದು. ಆದ್ದರಿಂದ ಇದನ್ನು ವಿರೋದಿಸುವವರು ವೈಚಾರಿಕವಾಗಿ ಬಲಿಶ್ಟಗೊಳ್ಳುತ್ತ ಬೌದ್ದಿಕವಾಗಿ ಬ್ರಾಹ್ಮಣ್ಯವಾದಿಗಳ ವಿರುದ್ದ ಗುದ್ದಾಟ ಮಾಡಬೇಕಿರುತ್ತದೆ. ಎಲ್ಲಿಯವರೆಗೂ ಹೋರಾಟವಿರುತ್ತದೆಯೋ ಅಲ್ಲಿಯವರೆಗೂ ಅದು ದುರ್ಬಲವಾಗಿರುತ್ತದೆ. ಇಲ್ಲವಾದರೆ ಅದು ಮೇಲೇದ್ದು ಎಲ್ಲವನ್ನು ಆಪೋಶನ ತೆಗೆದುಕೊಳ್ಳುತ್ತದೆ. ಎತ್ತುಗೆಗೆ ವಚನ ಇಲ್ಲವೇ ಶರಣ ಚಳವಳಿಯ ವಾರಸುದಾರರು ವೈಚಾರಿಕವಾಗಿ ಗಟ್ಟಿಯಾಗಿದ್ದ ಕಾಲದಲ್ಲಿ ವಚನಗಳನ್ನು ತಿರುಚುವ ಕೆಲಸಕ್ಕೆ ಕೈಹಾಕಲಿಲ್ಲ. ಈಗ ಬಸವಣ್ಣನ ಅನುಯಾಯಿಗಳು ಮತೀಯವಾದಿಗಳ ಜೊತೆಗೆ ಹೆಜ್ಜೆ ಹಾಕತೊಡಗಿರುವ ಕಾಲದಲ್ಲಿ ವಚನಗಳ ತಿರುಳನ್ನು ತಿರುಚುವ ಅಪವ್ಯಾಖ್ಯಾನಕ್ಕೆ ಗುರಿಪಡಿಸುವ ಕೆಲಸ ಮಾಡಲಾಗುತ್ತಿದೆ.</p>



<p>ಎಲ್ಲೆಲ್ಲಿ ಸಾದ್ಯವೋ ಅಲ್ಲೆಲ್ಲ ಕೈಯಾಡಿಸಿ ಕಬಳಿಸಿಕೊಳ್ಳುವ ಮತ್ತು ಅದನ್ನು ನಾಶಪಡಿಸುವ ಕೆಲಸ ಮಾಡುತ್ತದೆ. ಆದ್ದರಿಂದಲೇ ಲೋಕ ಬದಲಾಗಿ ಎಶ್ಟೆಲ್ಲ ವಿಚಾರಗಳು ಹೊಸತನ ಪಡೆದುಕೊಂಡರೂ ಅಂತಹ ವಿಚಾರಗಳನ್ನು ಸನಾತನವಾದಿಗಳು ತಮ್ಮ ಮನದೊಳಕ್ಕೆ ಬಿಟ್ಟುಕೊಳ್ಳುವುದೇ ಇಲ್ಲ. ಬಾಶೆಯಲ್ಲಿ ದೇವಬಾಶೆ, ಸ್ವರ್ಗದ ಬಾಶೆ, ಶ್ರೇಶ್ಟಬಾಶೆ ಕನಿಶ್ಟ ಬಾಶೆ ಎಂಬುದೆಲ್ಲ ಇಲ್ಲ. ಎಲ್ಲ ಬಾಶೆಗಳೂ ಸಮಾನ. ಎಲ್ಲ ಬಾಶೆಗಳಿಗೂ ಎಲ್ಲ ಶಕ್ತಿಯಿದೆ. ಎಂದು ಸಾಬೀತುಪಡಿಸಿದರೂ ತಮ್ಮ ಅಜ್ಞಾನದ ಗುಡಾಣದೊಳಕ್ಕೆ ಆ ವಿಚಾರಗಳನ್ನು ಬಿಟ್ಟುಕೊಳ್ಳುವುದೇ ಇಲ್ಲ. ಅದೇ ತಮ್ಮ ಗಬ್ಬುನಾರುವ ವಿಚಾರಗಳನ್ನೇ ಪುನಾವರ್ತಿಸುತ್ತಿರುತ್ತದೆ. ಇದನ್ನೇ ಮತೀಯವಾದಿ ಇಲ್ಲವೇ ದಾರ್ಮಿಕ ಮೂಲಬೂತವಾದಿತನ ಎನ್ನುವುದು. ಇದು ಬದಲಾವಣೆಗೆ ಒಪ್ಪುವುದೇ ಇಲ್ಲ. ಬದಲಾದ ಕಾಲಕ್ಕೆ ದರ್ಮವನ್ನು ಬದಲಿಸಿಕೊಳ್ಳುವ ಪ್ರಯತ್ನವನ್ನೂ ಮಾಡುವುದಿಲ್ಲ. ಇದನ್ನು ಗಮನಿಸಿದಾಗ ಹೊಸವಿಚಾರಗಳನ್ನು ಅರಿತುಕೊಳ್ಳದಶ್ಟು ದಡ್ಡತನವೇನು ಇರುವುದಿಲ್ಲ. ಬದಲಿಗೆ ಉದ್ದೇಶಪೂರ್ವಕವಾಗಿ ಇಂತಹ ವಿಚಾರಗಳ ಮೂಲಕವೇ ತಮ್ಮ ಯಜಮಾನಿಕೆಯನ್ನು ಅದಿಪತ್ಯವನ್ನು ಶ್ರೇಶ್ಟತೆಯನ್ನು ಉಳಿಸಿಕೊಳ್ಳುವ ದುರುದ್ದೇಶ ಅಡಗಿರುತ್ತದೆ.</p>



<p>ಇಂತಹ ದುರುದ್ದೇಶಗಳ ವಿರುದ್ದ ಹೋರಾಡುವುದರಲ್ಲಿಯೇ ಕನ್ನಡದ ಸೃಜನಶೀಲ ಸಾಮರ್ಥ್ಯ ಅಡಗಿದೆ. ಕನ್ನಡ ನುಡಿಯ ಬವಿಶ್ಯವಿದೆ.</p>



<p>(ಈ ಲೇಖನವನ್ನು ಎಲ್ಲರ ಕನ್ನಡದಲ್ಲಿ ಬರೆಯಲಾಗಿದೆ)</p>



<p><strong>-ರಂಗನಾತ ಕಂಟನಕುಂಟೆ</strong></p>
]]></content:encoded>
					
		
		
			</item>
		<item>
		<title>ಎಲ್ಲಾ ಭಾಷೆಗಳ ತಾಯಿ ಸಂಸ್ಕೃತ ಎಂಬ ಸುಳ್ಳು!</title>
		<link>https://peepalmedia.com/is-sanskrit-mother-to-all-the-languages/</link>
		
		<dc:creator><![CDATA[Charan Aivarnad]]></dc:creator>
		<pubDate>Mon, 02 Sep 2024 10:24:55 +0000</pubDate>
				<category><![CDATA[ಅಂಕಣ]]></category>
		<category><![CDATA[ಧರ್ಮ- ಸಂಸ್ಕೃತಿ]]></category>
		<category><![CDATA[charan Aivarnad]]></category>
		<category><![CDATA[history]]></category>
		<category><![CDATA[language]]></category>
		<category><![CDATA[languages]]></category>
		<category><![CDATA[lingustics]]></category>
		<category><![CDATA[sanskrit]]></category>
		<category><![CDATA[udpi]]></category>
		<category><![CDATA[udupi]]></category>
		<guid isPermaLink="false">https://peepalmedia.com/?p=44798</guid>

					<description><![CDATA[ಉಡುಪಿ ಪುತ್ತಿಗೆ ಮಠದ ಸ್ವಾಮಿಗಳಾದ ಸುಗುಣೇಂದ್ರ ತೀರ್ಥರು ಸಂಸ್ಕೃತ ಮಾತನಾಡಲು ಬಾರದವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ, ಸಂಸ್ಕೃತ ವಿಶ್ವ ಭಾಷೆ, ಎಲ್ಲಾ ಭಾಷೆಗಳ ತಾಯಿ, ತಮಿಳು, ತುಳು, ಕನ್ನಡದಂತಹ ದೇಶದ ಭಾಷೆಗಳಿಗೆ ಮಾತ್ರವಲ್ಲ, ಇಂಗ್ಲೀಷಿನ ಮೂಲವೂ ಸಂಸ್ಕೃತ ಎಂದು ಹೇಳಿದ್ದಾರೆ. ಪುತ್ತಿಗೆ ಮಠದ ಈ ಸ್ವಾಮಿ ಅಷ್ಟ ಮಠಗಳ ಸ್ವಾಮಿಗಳಲ್ಲಿ ವಿಭಿನ್ನವಾಗಿ ನಿಂತವರು. ಸಮುದ್ರ ದಾಟಿ ಬೇರೆ ದೇಶಗಳಿಗೆ ಹೋಗಿ ಬಂದ ಮೇಲೆ ಮಾತ್ರವಲ್ಲ, ತಮ್ಮ ಅನೇಕ ನಡೆಗಳಿಂದಾಗಿ ಉಳಿದ ಸ್ವಾಮಿಗಳಿಂದ ಟೀಕೆಗೆ ಒಳಗಾದವರು. ಈಗ ಸಂಸ್ಕೃತವೇ ಎಲ್ಲಾ [&#8230;]]]></description>
										<content:encoded><![CDATA[
<p>ಉಡುಪಿ ಪುತ್ತಿಗೆ ಮಠದ ಸ್ವಾಮಿಗಳಾದ ಸುಗುಣೇಂದ್ರ ತೀರ್ಥರು ಸಂಸ್ಕೃತ ಮಾತನಾಡಲು ಬಾರದವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ, ಸಂಸ್ಕೃತ ವಿಶ್ವ ಭಾಷೆ, ಎಲ್ಲಾ ಭಾಷೆಗಳ ತಾಯಿ, ತಮಿಳು, ತುಳು, ಕನ್ನಡದಂತಹ ದೇಶದ ಭಾಷೆಗಳಿಗೆ ಮಾತ್ರವಲ್ಲ, ಇಂಗ್ಲೀಷಿನ ಮೂಲವೂ ಸಂಸ್ಕೃತ ಎಂದು ಹೇಳಿದ್ದಾರೆ.</p>



<p>ಪುತ್ತಿಗೆ ಮಠದ ಈ ಸ್ವಾಮಿ ಅಷ್ಟ ಮಠಗಳ ಸ್ವಾಮಿಗಳಲ್ಲಿ ವಿಭಿನ್ನವಾಗಿ ನಿಂತವರು. ಸಮುದ್ರ ದಾಟಿ ಬೇರೆ ದೇಶಗಳಿಗೆ ಹೋಗಿ ಬಂದ ಮೇಲೆ ಮಾತ್ರವಲ್ಲ, ತಮ್ಮ ಅನೇಕ ನಡೆಗಳಿಂದಾಗಿ ಉಳಿದ ಸ್ವಾಮಿಗಳಿಂದ ಟೀಕೆಗೆ ಒಳಗಾದವರು. ಈಗ ಸಂಸ್ಕೃತವೇ ಎಲ್ಲಾ ಭಾಷೆಗಳ ತಾಯಿ ಎಂದಿದ್ದಾರೆ. ಈ ಸುಳ್ಳನ್ನು ಈ ದೇಶದಲ್ಲಿ ಮತ್ತೆ ಮತ್ತೆ ಹರಡಲಾಗುತ್ತಿದೆ. ಈಗ ಸಂಸ್ಕೃತ ಗೊತ್ತಿಲ್ಲದೇ ಇದ್ದರೆ ಸ್ವರ್ಗಕ್ಕೆ ಹೋಗುವುದೂ ಕಷ್ಟವಾಗಿದೆ.&nbsp;</p>



<p>ಸಂಸ್ಕೃತ ಒಂದು ಅಗಾದ ಜ್ಞಾನ ಪರಂಪರೆ ಇರುವ ಭಾಷೆ. ಇದರಲ್ಲಿ ಕೇವಲ ವೈದಿಕರು ಮಾತ್ರವಲ್ಲ, ಅವೈದಿಕ ಪರಂಪರೆಗಳೂ ತಮ್ಮ ಕೃತಿಗಳನ್ನು ಬರೆದಿವೆ. ಮಾಳವಿಕಾಗ್ನಿಮಿತ್ರಂ, ಅಭಿಜ್ಞಾನ ಶಾಕುಂತಲಂ, ವಿಕ್ರಮೋರ್ವಶೀಯಂ ಬರೆದ ಕಾಳಿದಾಸ, ಕಿರತಾರ್ಜುನೀಯ ಬರೆದ ಭಾರವಿ, ಉತ್ತರರಾಮಚರಿತ ಬರೆದ ಎಂಟನೇ ಶತಮಾನದ ಕವಿ &#8211; ನಾಟಕಕಾರ ಭವಭೂತಿ, ಕ್ರಿ.ಪೂ 7 ರಿಂದ 4 ನೇ ಶತಮಾನದ ವರೆಗೆ ಜೀವಿಸಿದ್ದ ಅಷ್ಟಾಧ್ಯಾಯಿ ಬರೆದ ಮಹಾವೈಯಾಕರಣಿ ಪಾಣಿನಿ…ಇವರೆಲ್ಲರೂ ಸಂಸ್ಕೃತದಲ್ಲಿ ಬರೆದರು. ಇವರೆಲ್ಲರ ಬಗ್ಗೆ ಅಪಾರ ಗೌರವವಿದೆ.&nbsp;</p>



<p>ಬೌದ್ಧರು ಜನಸಾಮಾನ್ಯನನ್ನು ತಲುಪಲು, ವರ್ಣಾಶ್ರಮವನ್ನು ಪ್ರತಿಪಾದಿಸಲು ಬಳಸಲ್ಪಟ್ಟ ಸಂಸ್ಕೃತವನ್ನು ಬಿಟ್ಟು ಪ್ರಾಕೃತವನ್ನು ಬಳಸಿದರು. ದೇವನಾಂಪಿಯ ಪಿಯದಸಿ ಅಸೋಕ ಸೇರಿದಂತೆ ಮೌರ್ಯರೂ, ಶಾತವಾಹನರು ಪ್ರಾಕೃತದಲ್ಲಿಯೇ ಶಾಸನಗಳನ್ನು ಬರೆದರು. ಆ ನಂತರ ಬಂದ ಕದಂಬರು ಬ್ರಾಹ್ಮಣರಿಗೆ ಹೇರಳವಾಗಿ ಊರುಗಳನ್ನು, ಭೂಮಿಯನ್ನು ದಾನ ಕೊಡುತ್ತಾ, ದಕ್ಷಿಣ ಭಾರತದಲ್ಲಿ ಅವರನ್ನು ನೆಲೆಯೂರಿಸುವಾಗ ತಮ್ಮ ಆರಂಭಿಕ ಶಾಸನಗಳನ್ನು ಸಂಸ್ಕೃತದಲ್ಲಿ ಹಾಕಿಸಿದರು.&nbsp;</p>



<figure class="wp-block-embed is-type-video is-provider-youtube wp-block-embed-youtube wp-embed-aspect-16-9 wp-has-aspect-ratio"><div class="wp-block-embed__wrapper">
<iframe title="ಸಂಸ್ಕೃತ ಎಲ್ಲಾ ಭಾಷೆಗಳ ತಾಯಿಯೇ? | SANSKRIT | CHARAN AIVARNAD" width="696" height="392" src="https://www.youtube.com/embed/1faJR9AUS40?feature=oembed" frameborder="0" allow="accelerometer; autoplay; clipboard-write; encrypted-media; gyroscope; picture-in-picture; web-share" referrerpolicy="strict-origin-when-cross-origin" allowfullscreen></iframe>
</div></figure>



<p>ಸಂಸ್ಕೃತದ ಬಗ್ಗೆ ವೈಯಕ್ತಿಕವಾಗಿ ಕನ್ನಡ, ತುಳು, ತಮಿಳು, ಮಲಯಾಳಂ, ಹಿಂದಿ, ಇಂಗ್ಲೀಷ್‌ ಭಾಷೆಗಳನ್ನು ಮಾತನಾಡಲು ಬರುವ ನಂಗೆ ಆ ಭಾಷೆಗಳಿಗೆ ಕೊಡುವಷ್ಟೇ ಗೌರವವವನ್ನು, ಎಲ್ಲಾ ಭಾಷೆಗಳಿಗೆ ಕೊಡುವ ಗೌರವವನ್ನು ಸಂಸ್ಕೃತಕ್ಕೂ ಕೊಡುತ್ತೇನೆ. ನನಗೆ ಇಲ್ಲಿ ಯಾವ ಭಾಷೆಯೂ ಮೇಲಲ್ಲ, ಕೀಳಲ್ಲ. ಯಾವದೇ ಭಾಷೆಯನ್ನು ಮಾತನಾಡಿದರೂ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆಯೂ ಇಲ್ಲ. ಬದಲಾಗಿ, ಯಾವುದೇ ಭಾಷೆಯನ್ನು ಮಾತನಾಡಲು ಕಲಿತರೆ ಅದರಲ್ಲಿ ಇರುವ ಜ್ಞಾನ ಸಂಪತ್ತನ್ನು ದಕ್ಕಿಸಿಕೊಳ್ಳುವುದೇ ಒಂದು ಸ್ವರ್ಗ. ಕನ್ನಡದಲ್ಲಿ ಪಂಪನ ಆದಿಪುರಾಣ, ರನ್ನನ ಗದಾಯುದ್ಧ ಮೊದಲಾದ ಕಾವ್ಯಗಳೂ, ಮಂಟೇಸ್ವಾಮಿ ಕಾವ್ಯ ಮೊದಲಾದ ಹೇರಳವಾದ ಜಾನಪದ ಪರಂಪರೆಯಿದೆ. ತುಳುನಾಡಿನಲ್ಲಿ ತುಳು ಪಾಡ್ದನ ಹಾಡುವ ಕನಿಷ್ಟ ಒಬ್ಬ ಕವಿಯಾದರೂ ಸಿಗುತ್ತಾನೆ. ತಮಿಳಿನಲ್ಲಿ ತಮಿಳಕಂನ ಇತಿಹಾಸವನ್ನು ಬಿಚ್ಚಿಡುವ ಅಗನಾನೂರು, ಪುರನಾನೂರು, ಕುರುತ್ತೊಕೈ, ಮಣಿಮೇಖಲೈ ಮೊದಲಾದ ಸಂಗಂ ಸಾಹಿತ್ಯವಿದೆ, ತೋಳ್ಕಾಪ್ಪಿಯಂನಂತಹ ವ್ಯಾಕರಣವಿದೆ. ಎಲ್ಲದರ ಮೇಲೂ ಗೌರವ, ಆಸಕ್ತಿ ನನಗಿದೆ.</p>



<p>ಆದರೆ ಸಂಸ್ಕೃತ ಮಾತನಾಡಿದರೆ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ನಾನು ಸ್ವರ್ಗದ ಮೇಲೆ ನಂಬಿಕೆಯಿಲ್ಲದ ಸಮುದಾಯದಿಂದ ಬಂದವನು. ನಮ್ಮ ಮನೆಯಲ್ಲಿ ಯಾರಾದರು ಸತ್ತರೆ ಅವರು ಹಿಂದೆ ಸಂದಿಹೋಗಿರುವ ಹದಿನಾರು ಮಂದಿ ಹಿರಿಯರ ಜೊತೆಗೆ ಸೇರುತ್ತಾನೆ ಎಂದು ನಂಬಿದ್ದೇವೆಯೇ ಹೊರತು, ಸ್ವರ್ಗಕ್ಕೆ ಹೋಗುತ್ತಾನೆ ಎಂಬ ನಂಬಿಕೆ ನಮ್ಮಲ್ಲಿ ಇಲ್ಲ. ಬಹುತೇಕ ಭಾರತೀಯ ಸಮುದಾಯಗಳಲ್ಲಿ ಸ್ವರ್ಗದ ಪರಿಕಲ್ಪನೆಯೇ ಇಲ್ಲ.</p>



<p>ಇರುವುದು ಒಂದೇ ಸ್ವರ್ಗ, ಅದು ಕಾಸರಗೋಡಿನಿಂದ ಸುಮಾರು ಮೂಮತ್ತಮೂರು ಕಿಲೋಮೀಟರ್‌ ದೂರದಲ್ಲಿ ಇರುವ ಸ್ವರ್ಗವೆಂಬ ಊರು. ಅದೂ ಎಂಡೋಸಲ್ಫಾನ್‌ ಬಾಧೆಗೆ ತುತ್ತಾಗಿ ನರಕವಾಗಿದೆ! ಅಲ್ಲಿಗೆ ಹೋಗುವವರಿಗೆ ಸಂಸ್ಕೃತ ಬರಬೇಕಾಗಿಲ್ಲ, ಕನ್ನಡ, ತುಳು, ಮಲಯಾಳಂ ಮಾತನಾಡಲು ಬಂದರೆ ಸಾಕು.&nbsp;</p>



<p class="has-regular-font-size"><strong>ಸಂಸ್ಕೃತ ಎಲ್ಲಾ ಭಾಷೆಗಳ ತಾಯಿಯೇ?</strong></p>



<p>ಸಂಸ್ಕೃತ ಇಂಡೀ-ಯುರೋಪಿಯನ್‌ ಭಾಷಾವರ್ಗಕ್ಕೆ ಸೇರಿದ ಭಾಷೆ. ಭಾರತದಲ್ಲಿ ಸಂಸ್ಕೃತ ಹೇಗೋ, ಯುರೋಪಿನಲ್ಲಿ ಗ್ರೀಕ್‌, ಲ್ಯಾಟಿನ್‌ ಭಾಷೆಗಳೂ ಅದೇ ಸ್ಥಾನವನ್ನು ಹೊಂದಿವೆ. ಋಗ್ವೇದದಲ್ಲಿ ಇರುವ ಸಂಸ್ಕೃತವೇ ಬೇರೆ, ಈಗ ಬಳಕೆಯಲ್ಲಿ ಇರುವ ಸಂಸ್ಕೃತವೇ ಬೇರೆ ಎಂಬಂತೆ ಬದಲಾವಣೆಗಳಾಗಿವೆ. ಋಗ್ವೇದದ ಭಾಷೆಯನ್ನು “ಋಗ್ವೇದಿಕ್‌ ಸಂಸ್ಕೃತ” ಅಥವಾ “ಹಳೆಯ ಇಂಡಿಕ್‌ ಭಾಷೆ” ಎಂದು ಕರೆಯುತ್ತೇವೆ. ಈ&nbsp; ಋಗ್ವೇದಿಕ್‌ ಸಂಸ್ಕೃತದ ಮೊದಲ ಶಾಸನ ಪತ್ತೆಯಾಗಿದ್ದು ಭಾರತದಲ್ಲಿ ಅಲ್ಲ, ಉತ್ತರ ಸಿರಿಯಾದಲ್ಲಿ.&nbsp;</p>



<p>ಪ್ರಾಚೀನ ಕಾಲದಲ್ಲಿ ಧಾರ್ಮಿಕ ಜಿಜ್ಞಾಸೆಗಳಿಗೆ ಬಳಸಲಾಗುತ್ತಿದ್ದ ಸಂಸ್ಕೃತಕ್ಕೂ ಆಗ ಮಾತನಾಡಲು ಬಳಸುತ್ತಿದ್ದ ಬೇರೆ ಬೇರೆ ಸಂಸ್ಕೃತಗಳಿಗೂ ವ್ಯತ್ಯಾಸವಿತ್ತು. ನಮಗೆ ಸದ್ಯ ಲಭ್ಯವಿರುವ ಸಂಸ್ಕೃತದ ಅತ್ಯಂತ ಹಳೆಯ ವ್ಯಾಕರಣವೆಂದರೆ ಕ್ರಿ.ಪೂ ಐದನೇ ಶತಮಾನದಲ್ಲಿ ಪಾಣಿನಿ ಬರೆದ ಅಷ್ಟಾಧ್ಯಾಯಿ. ವೇದಗಳ ಕಾಲದ ನಂತರ ಸಂಸ್ಕೃತವನ್ನು ಧಾರ್ಮಿಕ ಗ್ರಂಥಗಳನ್ನು ಬರೆಯಲು ಮಾತ್ರವಲ್ಲದೆ, ಸ್ವತಂತ್ರ ಸಾಹಿತ್ಯ ರಚನೆಗೂ ಬಳಸಲಾಯಿತು, ನಾಟಕ, ಕಾವ್ಯಗಳು ಬಂದವು.&nbsp;</p>



<p>ಶಾತವಾಹನರ ಕಾಲದಲ್ಲಿ ಸಂಸ್ಕೃತ ಮೆಲ್ಲನೆ ದಕ್ಷಿಣ ಭಾರತವನ್ನು ಹರಡಲು ಆರಂಭಿಸಿತು. ಕರ್ನಾಟಕದಲ್ಲಿ ಲಭ್ಯವಿರುವ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನವೆಂದರೆ ಕದಂಬ ದೊರೆ ಕಾಕುಸ್ಥವರ್ಮನ ಐದನೇ ಶತಮಾನದ ತಾಳೆಗುಂದ ಸ್ಥಂಭ ಶಾಸನ. ಕದಂಬರು ಬ್ರಾಹ್ಮಣರಿಗೆ ಊರು, ಹಳ್ಳಿಗಳನ್ನು ದತ್ತಿಕೊಡುತ್ತಿದ್ದರು. ಕೇರಳ, ತುಳುನಾಡಿಗೆ ಇವರು ಬ್ರಾಹ್ಮಣರನ್ನು ಕರೆತಂದರು. ಐದನೇ ಶತಮಾನದಲ್ಲಿ ಕದಂಬ ದೊರೆ ರವಿವರ್ಮ ಬ್ರಾಹ್ಮಣರಿಗೆ ಊರನ್ನು ದತ್ತಿಕೊಟ್ಟ ಉಲ್ಲೇಖ ಕೇರಳದ ನಿಲಂಬೂರು ತಾಮ್ರಶಾಸನದಲ್ಲಿ ಬರುತ್ತದೆ. ತುಳುನಾಡಿನ ಮತ್ತು ಕೇರಳದ ಬ್ರಾಹ್ಮಣರು ತಮ್ಮನ್ನು ಅಹಿಚ್ಛತ್ರಕ್ಷೇತ್ರದಿಂದ ಕದಂಬ ದೊರೆ ಮಯೂರವರ್ಮ ಕರೆತಂದ ಎಂದು ಈಗಲೂ ಹೇಳಿಕೊಳ್ಳುತ್ತಾರೆ. ಇದೇ ಕಥೆಯನ್ನು ಕೇರಳೋತ್ಪತ್ತಿ, ಗ್ರಾಮಪದ್ಧತಿ, ಸ್ಕಂದಪುರಾಣದ ಸಹ್ಯಾದ್ರಿಖಂಡ ಕೂಡ ಹೇಳುತ್ತದೆ. ಹೀಗೆ ಸಂಸ್ಕೃತ ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟಿತು.&nbsp;</p>



<p>ಮೌರ್ಯರ ಕಾಲದಿಂದ ಶಾತವಾಹನರ ಕಾಲದ ವರೆಗೆ ಪ್ರಚಾರದಲ್ಲಿದ್ದ ಬೌದ್ಧರು ನಿಧಾನವಾಗಿ ಕಣ್ಮರೆಯಾಗುತ್ತಾ ಬಂದರು. ಕದ್ರಿ ಮೊದಲಾದ ಬೌದ್ಧ ವಿಹಾರಗಳು (ಹತ್ತನೇ ಶತಮಾನದ ಆಲೂಪ ದೊರೆ ಕುಂದವರ್ಮ ಸ್ಥಾಪಿಸಿದ ಕದರಿಯ ಅವಲೋಕಿತೇಶ್ವರ ಪ್ರತಿಮೆಯಲ್ಲಿರುವ ಗ್ರಂಥ ಲಿಪಿಯ ಶಾಸನದಲ್ಲಿ ಇದು ಕದರಿಕಾ ವಿಹಾರ) ದೇವಾಲಯಗಳಾಗಿ ಬದಲಾದವು. ಜನರನ್ನು ಬೆಸೆಯಲು ಪ್ರಯತ್ನಿಸಿದ ಪ್ರಾಕೃತ ಕೂಡ ವಿಫಲವಾಗಿ ದಕ್ಷಿಣ ಭಾರತದಿಂದ ಇಲ್ಲವಾಯಿತು.</p>



<p>ಸಾಮಾನ್ಯವಾಗಿ ಎಲ್ಲಾ ಭಾಷೆಗಳೂ ಸಂಸ್ಕೃತದಿಂದ ಹುಟ್ಟಿದವು ಎಂಬ ವಾದವನ್ನು ಮಾಡುವವರು ಕನ್ನಡ, ತುಳು ಮೊದಲಾದ ಭಾಷೆಗಳಲ್ಲಿ ಇರುವ ಪದಗಳ ಎಟಿಮೊಲಾಜಿಕಲ್‌ ಮೂಲವನ್ನು ಸಂಸ್ಕೃತಕ್ಕೆ ಜೋಡಿಸಿ ಹೇಳುತ್ತಾರೆ.</p>



<p>ಉದಾಹರಣೆಗೆ: ಕನ್ನಡ-ತುಳುವಿನ ಸಕ್ಕರೆ ಸಂಸ್ಕೃತದ ಶರ್ಕರದಿಂದ ಬಂದಿದೆ ಎಂದು. ಇದು ಸಂಸ್ಕೃತದಿಂದಲೇ ಬಂದಿದ್ದು ಎಂದು ಹೇಗೆ ಹೇಳುವುದು? ಇದು ಪ್ರಾಕೃತ ಭಾಷೆಯ ಸಕ್ಕರ ಅಥವಾ ಸುಕ್ಕರ ಎಂಬ ಪದದಿಂದಲೂ ಬಂದಿರಬಹುದು. ತುಳುವರು ಸತ್ತವರನ್ನು ಹೂಳುವ ಅಥವಾ ಸುಟ್ಟ ನಂತರ ಆ ಜಾಗದಲ್ಲಿ ಕಟ್ಟುವ ಸಮಾಧಿಗೆ “ದೂಪೆ” ಎಂದು ಕರೆಯುತ್ತಾರೆ, ಇದು ಬೌದ್ಧರು ಬುದ್ಧನ ಅವಶೇಷಗಳನ್ನು ಇಟ್ಟಿರುವ “ಸ್ತೂಪ” ಎಂಬ ಪದದಿಂದ ಬಂದಿದೆ. ತುಳುವರು ಹೆಣ ಸುಡುವ ಕಟ್ಟಿಗೆಯ ರಾಶಿಗೆ “ಕಾಟ” ಎಂದು ಕರೆಯುತ್ತಾರೆ. ಪ್ರಾಕೃತದಲ್ಲಿಯೂ ಕಾಟ ಎಂದೇ ಕರೆಯುತ್ತಾರೆ.</p>



<p>ಕನ್ನಡ, ತುಳು, ಮಲಯಾಳಂ, ತಮಿಳು, ತೆಲುಗು ಮೊದಲಾದ ದಕ್ಷಿಣ ಭಾರತದ ಭಾಷೆಗಳೂ, ಪಾಕಿಸ್ತಾನದಲ್ಲಿ ಮಾತನಾಡುವ ಬ್ರಾಹುಯಿ, ಉತ್ತರ ಭಾರತದದಲ್ಲಿ ಮಾತನಾಡುವ ಮಾಲ್ಟೋ, ಕುರುಕ್‌, ಮಧ್ಯಭಾರತದಲ್ಲಿ ಮಾತನಾಡುವ ಕೊಲಮಿ, ನೈಕಿ, ಪರ್ಜಿ, ಒಲ್ಲಾರಿ, ಗಡಬ, ಗೊಂಡ, ಮಂಡ, ಕುಯ್‌, ಪೆಂಗೋ ಮೊದಲಾದ ಭಾಷೆಗಳು ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆಗಳು.&nbsp;</p>



<p>ಹಿಂದಿ, ಸಂಸ್ಕೃತ, ಅವಧಿ, ಭೋಜ್‌ಪುರಿ, ಪ್ರಾಕೃತ, ಲ್ಯಾಟಿನ್‌, ಗ್ರೀಕ್‌, ಇಂಗ್ಲೀಷ್ ಮೊದಲಾದವು‌ ಯುರೋಪಿಯನ್‌ ಭಾಷೆಗಳು ಇಂಡೋ ಆರ್ಯನ್‌ ಭಾಷಾವರ್ಗಕ್ಕೆ ಸೇರಿದವರು.&nbsp;</p>



<p>ಆಗಲೇ ಹೇಳಿದಂತೆ, ಇಂದು ಬಳಕೆಯಲ್ಲಿ ಇಲ್ಲದ ಋಗ್ವೇದದ ಸಂಸ್ಕೃತದ ಮೊದಲ ಶಾಸನ ಸಿಕ್ಕಿದ್ದು ಉತ್ತರ ಸಿರಿಯಾದಲ್ಲಿ . ಇದು 1500 ಮತ್ತು 1350 BC ನಡುವೆ, ಅಪ್ಪರ್‌ ಯೂಫ್ರಟಿಸ್-ಟೈಗ್ರಿಸ್ ಜಲಾನಯನ ಪ್ರದೇಶವನ್ನು ಆಳಿದ ಮಿಟಾನಿ ಎಂಬ ರಾಜವಂಶದ ಶಾಸನ. ಇವರ ಸಾಮ್ರಾಜ್ಯ ಈಗಿನ ಸಿರಿಯಾ, ಇರಾಕ್ ಮತ್ತು ಟರ್ಕಿ ದೇಶಗಳಿಗೆ ಹರಡಿಕೊಂಡಿತ್ತು. ಮಿಟಾನಿಗಳು ಸಂಸ್ಕೃತಕ್ಕೆ ಸಂವಾದಿಯಾದ ಹುರಿಯನ್ ಎಂಬ ಭಾಷೆಯನ್ನು ಮಾತನಾಡುತ್ತಿದ್ದರು. ಮಿಟಾನಿ ರಾಜರು ತಮಗೆ <a href="https://global.oup.com/academic/product/the-quest-for-the-origins-of-vedic-culture-9780195169478">ಸಂಸ್ಕೃತದ ಹೆಸರನ್ನು </a>ಇಟ್ಟುಕೊಂಡಿದ್ದರು. ಉದಾಹರಣೆಗೆ ಪುರುಷ, ತುಸ್ರತ್ತಾ, ಸುವರ್ದತ, ಸುಬಂಧು, ಇಂದ್ರೊತ ಇತ್ಯಾದಿ. ಸಂಖ್ಯೆಗಳು ಕೂಡ&nbsp; ಐಕ ಅಂದ್ರೆ ಏಕ, ತೇರಾ ಅಂದ್ರೆ ಮೂರು, ಸತ್ತಾ ಎಂದರೆ ಸಪ್ತ.&nbsp; ಸಂಸ್ಕೃತಗಳನ್ನು ಮಾತನಾಡುವ ಆರ್ಯನ್‌ ಬುಡಕಟ್ಟಿನಂತೆ ಇವರಲ್ಲೂ ಕುದುರೆಗಳಿಗೆ ಅಸುವಾ ಎಂದು ಕರೆಯುತ್ತಾರೆ.&nbsp;</p>



<p>ಕ್ರಿ.ಪೂ 1380 ರಲ್ಲಿ ಪ್ರತಿಸ್ಪರ್ಧಿ ರಾಜನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವಾಗ ಮಿಟಾನಿ ರಾಜನೊಬ್ಬ <a href="https://www.azargoshnasp.net/history/Aryan/mitanniaryanpantheons.pdf">ಇಂದ್ರ, ವರುಣ, ಮಿತ್ರ </a>ಮತ್ತು ನಾಸತ್ಯರನ್ನು (ಅಶ್ವಿನಿ ದೇವತೆಗಳು) ದೈವಸಾಕ್ಷಿಗಳಾಗಿ <a href="https://www.heritageinstitute.com/zoroastrianism/ranghaya/suppiluliuma_shattiwaza_treaty.htm">ಶಾಸನದಲ್ಲಿ </a>ಹೆಸರಿಸುತ್ತಾನೆ .ಇವರೆಲ್ಲಾ ಋಗ್ವೇದದ ಪ್ರಮುಖ ದೇವರುಗಳು.</p>


<div class="wp-block-image">
<figure class="aligncenter size-full is-resized"><img fetchpriority="high" decoding="async" width="728" height="414" src="https://peepalmedia.com/wp-content/uploads/2024/09/Captureಜ.jpg" alt="" class="wp-image-44799" style="width:468px;height:auto" srcset="https://peepalmedia.com/wp-content/uploads/2024/09/Captureಜ.jpg 728w, https://peepalmedia.com/wp-content/uploads/2024/09/Captureಜ-300x171.jpg 300w, https://peepalmedia.com/wp-content/uploads/2024/09/Captureಜ-150x85.jpg 150w, https://peepalmedia.com/wp-content/uploads/2024/09/Captureಜ-696x396.jpg 696w" sizes="(max-width: 728px) 100vw, 728px" /></figure></div>


<p>ಈ ಲ್ಯಾಟಿನ್‌, ಸಂಸ್ಕತ, ಗ್ರೀಕ್‌ ಮೊದಲಾದ ಭಾಷೆಗಳ ಮೂಲ ಭಾಷೆಯನ್ನು ಪ್ರೋಟೋ ಇಂಡೋ ಯುರೋಪಿಯನ್ ಭಾಷೆ ಎಂದು ಕರೆಯಲಾಗುತ್ತದೆ. ತಮಿಳು, ಕನ್ನಡ, ತುಳು, ತೆಲುಗು, ಕೊರಗ ಮೊದಲಾದ ಭಾಷೆಗಳ ಮೂಲ ಭಾಷೆಯನ್ನು ಪ್ರೋಟೋ ದ್ರಾವಿಡಿಯನ್‌ ಭಾಷೆ ಎಂದು ಕರೆಯಲಾಗುತ್ತದೆ. ಇವೆರಡೂ ಬೇರೆ ಬೇರೆ ಭಾಷಾ ಕುಟುಂಬಗಳು.&nbsp;</p>



<p>ಈ “ಪ್ರೋಟೋ ಇಂಡೋ ಯುರೋಪಿಯನ್ ಭಾಷೆಯ” ಮಗಳನ್ನು ಅಂದರೆ, ಒಂದು ಕವಲನ್ನು ಭಾಷಾಶಾಸ್ತ್ರದಲ್ಲಿ “ಪ್ರೋಟೋ-ಇಂಡೋ-ಇರಾನಿಯನ್‌” ಎಂದು ಕರೆಯಲಾಗುತ್ತದೆ. ಇದರಿಂದಲೇ ಸಂಸ್ಕೃತ, ಹಿಂದಿ ಮೊದಲಾದ ಉತ್ತರ ಭಾರತದ ಭಾಷೆಗಳೂ, ಇರಾನಿನ ಭಾಷೆಗಳೂ ಹುಟ್ಟಿದ್ದು.&nbsp;</p>



<p>ಜೆಪಿ ಮಲ್ಲೋರಿ ಮತ್ತು ಡಿಕ್ಯೂ ಆಡಮ್ಸ್‌ ಸಂಪಾದನೆ ಮಾಡಿರುವ “<a href="https://www.jstor.org/stable/417487?seq=1#page_scan_tab_contents" data-type="link" data-id="https://www.jstor.org/stable/417487?seq=1#page_scan_tab_contents">ಎನ್‌ಸೈಕ್ಲೋಪಿಡಿಯಾ ಆಫ್‌ ಇಂಡೋ-ಯುರೋಪಿಯನ್‌ ಕಲ್ಚರ್‌</a>ನಲ್ಲಿ” ಈ ಪ್ರೋಟೋ-ಇಂಡೋ-ಇರಾನಿಯನ್‌ ಭಾಷಿಕರು ಮೊದಲು ಉರಾಲ್ ಶ್ರೇಣಿಗಳ ದಕ್ಷಿಣದಲ್ಲಿ ಮತ್ತು ಕಝಕಿಸ್ತಾನ್‌ನಲ್ಲಿ ಕಾಣಿಸಿಕೊಂಡರು ಎಂದು ಹೇಳಲಾಗಿದೆ. ಕ್ರಿ.ಪೂ 2000 ರ ಮೊದಲು ಜೀವಿಸಿದ್ದ ಈ ಸ್ಟೆಪ್ಪಿ ಜನರು <a href="https://en.wikipedia.org/wiki/Andronovo_culture">ಆಂಡ್ರೋನೊವೊ</a> ಸಂಸ್ಕೃತಿಯವರು.</p>



<p>ಇವರಿಂದ ಬೇರೆಯಾದ ಒಂದು ಗುಂಪು&nbsp; ಪ್ರೋಟೋ-ಇಂಡೋ-ಇರಾನಿಯನ್‌ ಭಾಷೆಯನ್ನು ಬಿಟ್ಟು, ತಮ್ಮ ತಾಯ್ನೆಲವಾದ ಮಧ್ಯ ಏಷ್ಯಾವನ್ನು ತೊರೆದು ಸಂಸ್ಕೃತದ ಮೂಲ ಭಾಷೆಯನ್ನು ಮಾತನಾಡಲು ಶುರು ಮಾಡಿದರು. ಇವರ ಒಂದು ಗುಂಪು ಪಶ್ಚಿಮಕ್ಕೆ ನಡೆದು ಸಿರಿಯಾ ಸೇರಿದರೆ, ಇನ್ನೊಂದು ಗುಂಪು ಪೂರ್ವಕ್ಕೆ ನಡೆದು ಭಾರತದ ಪಂಜಾಬ್‌ ಪ್ರದೇಶಕ್ಕೆ ಬಂತು.</p>



<p>The Horse, the Wheel, and Language: How Bronze-Age Riders from the Eurasian Steppes Shaped the Modern World ಯಲ್ಲಿ <a href="https://press.princeton.edu/books/paperback/9780691148182/the-horse-the-wheel-and-language">ಡೇವಿಡ್ ಆಂಥೋನಿ </a>ಹೇಳುವಂತೆ ಪಶ್ಚಿಮದ ಕಡೆಗೆ ಹೋದ ಜನರ ಗುಂಪು ಬಹುಶಃ ಸಿರಿಯಾದ ಹುರಿಯನ್ ರಾಜರಿಂದ ಸಾರಥಿಗಳಾಗಿ ನೇಮಕಗೊಂಡರು. ಈ ಸಾರಥಿಗಳು ಅವರದೇ ಭಾಷೆಯಲ್ಲಿ ಮಾತನಾಡುತ್ತಿದ್ದರು. ಪೂರ್ವಕ್ಕೆ ಬಂದ ಅವರದೇ ಜನರಿಂದ ಋಗ್ವೇದ ರಚನೆಯಾಯಿತು. ಈ ಎರಡೂ ಪಂಗಡಗಳೂ ಋಗ್ವೇದಿಕ್‌ ಸಂಸ್ಕೃತ ಮಾತನಾಡುತ್ತಿದ್ದರು.</p>



<p>ಈ ಋಗ್ವೇದ ಸಂಸ್ಕೃತ ಭಾಷೆಯನ್ನು ಮಾತನಾಡುವ ಜನರು ಸಿರಿಯಾಗೆ ಹೋಗಿ ಅಲ್ಲಿನ ಮೂಲ ರಾಜರನ್ನು ಪತನ ಮಾಡಿ ಅವರ ಸಿಂಹಾಸನದಲ್ಲಿ ಮಿಟಾನಿ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಕ್ರಮೇಣ ತಮ್ಮ ಮೂಲ ಸಂಸ್ಕೃತಿಯನ್ನು ಕಳೆದುಕೊಂಡರು. ಸ್ಥಳೀಯ ಹುರಿಯನ್ ಭಾಷೆ ಮತ್ತು ಧರ್ಮವನ್ನು ಅಳವಡಿಸಿಕೊಂಡರು. ಆದರೂ ರಾಜಮನೆತನದ ಹೆಸರುಗಳು, ರಥಕ್ಕೆ ಸಂಬಂಧಿಸಿದ ಕೆಲವು ತಾಂತ್ರಿಕ ಪದಗಳು ಮತ್ತು ಸಹಜವಾಗಿಯೇ ಅವರ ಮೂಲದೇವತೆಗಳಾದ ಇಂದ್ರ, ವರುಣ, ಮಿತ್ರ ಮತ್ತು ನಾಸತ್ಯರ ಹೆಸರುಗಳನ್ನು ಹಾಗೆಯೇ ಉಳಿಸಿಕೊಂಡರು.&nbsp;</p>



<p>ಪೂರ್ವದ ಕಡೆಗೆ ನಡೆದ ಗುಂಪು ಋಗ್ವೇದವನ್ನು ರಚಿಸಿತು. ಅವರು ತಮ್ಮ ಸಂಸ್ಕೃತಿಯನ್ನು ರಕ್ಷಿಸಲು ಮತ್ತು ತಮ್ಮ ಭಾಷೆಯನ್ನು ಹರಡಲು ಸಶಕ್ತರಾದರು. ಅವರ ಭಾಷೆ ಮತ್ತು ಸಂಸ್ಕೃತಿ ಭಾರತದಲ್ಲಿ ಬೇರೂರಿತು.&nbsp;</p>



<p>ಸುಮಾರು 1500 ವರ್ಷಗಳ ಹಿಂದೆ ದಕ್ಷಿಣ ಭಾರತವನ್ನು ಸಂಸ್ಕೃತ ಪ್ರವೇಶಿಸಿತು. ಇಲ್ಲಿನ ಬ್ರಾಹ್ಮಣರು ತಮ್ಮ ಸಾಹಿತ್ಯಗಳಲ್ಲಿಯೇ ತಮ್ಮನ್ನು ವಲಸೆ ಬಂದವರು ಎಂದು ಕರೆಸಿಕೊಂಡಿದ್ದಾರೆ. ತುಳುವ ಬ್ರಾಹ್ಮಣರೂ ತಮ್ಮನ್ನು ಅಹಿಚ್ಛತ್ರ ಕ್ಷೇತ್ರದಿಂದ ಕದಂಬರ ಅರಸ&nbsp; ಮಯೂರವರ್ಮನೇ ಕರೆತಂದು ಘಟ್ಟದ ಕೆಳಗಿನ ದೇಶವನ್ನು ಅರವತ್ನಾಲ್ಕು ಭಾಗಗಳಾಗಿ ಹಂಚಿಕೊಟ್ಟಿದ್ದಾಗಿ ನಂಬುತ್ತಾರೆ.</p>



<p>ಕೇರಳ ನಂಬೂದಿರಿ ಬ್ರಾಹ್ಮಣರೂ ಕೇರಳೋತ್ಪತಿ ಮತ್ತು ಕೇರಳಮಾಹಾತ್ಮ್ಯ ವೃತ್ತಾಂತಗಳನ್ನು ಆಧರಿಸಿ ತಮ್ಮದೇ ಆದ ಕಥನವನ್ನು ಹೊಂದಿದ್ದಾರೆ. ಕೇರಳೋತ್ಪತಿಯ ಪ್ರಕಾರ ಪೌರಾಣಿಕ ವೀರನಾದ ಪರಶುರಾಮನು ಪಶ್ಚಿಮ ಕರಾವಳಿಯಲ್ಲಿ ಬ್ರಾಹ್ಮಣರಿಗಾಗಿ ಗ್ರಾಮಗಳನ್ನು ಸ್ಥಾಪಿಸಿದನು, ಅದರಲ್ಲಿ 32 ತುಳು ದೇಶದಲ್ಲಿಯೂ ಮತ್ತು ಉಳಿದವು ಕೇರಳದಲ್ಲಿಯೂ ಇದ್ದವು. ಅಯ್ಯಪುರಂ ಅಥವಾ ಅಹಿಚ್ಛತ್ರವು ಅವರ ಪೂರ್ವಜರ ಮನೆಯಾಗಿತ್ತು ಎಂದು ಅವರು ನಂಬುತ್ತಾರೆ.&nbsp;</p>



<p>ನಂಬೂದಿರಿ ಬ್ರಾಹ್ಮಣರು ಪರಶುರಾಮನ ನಂತರ ಮಯೂರವರ್ಮನ್&nbsp; ತಮಗೆ ಆಶ್ರಯ ನೀಡಿದವನು ಎಂದು ಹೇಳುತ್ತಾರೆ. ಕೇರಳದಲ್ಲಿ ಕದಂಬರು ಬ್ರಾಹ್ಮಣರನ್ನು ನೆಲೆಗೊಳಿಸಿದ್ದಕ್ಕೆ ಪೂರಕವಾದ ಮಾಹಿತಿಯನ್ನು ಐದನೇ ಶತಮಾನದ ಕದಂಬ ದೊರೆ ರವಿಮರ್ಮನ ನಿಲಂಬೂರಿನ ತಾಮ್ರಶಾಸನ ನೀಡುತ್ತದೆ.</p>


<div class="wp-block-image">
<figure class="aligncenter size-full is-resized"><img decoding="async" width="715" height="494" src="https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM.jpeg" alt="" class="wp-image-44802" style="width:599px;height:auto" srcset="https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM.jpeg 715w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-300x207.jpeg 300w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-150x104.jpeg 150w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-218x150.jpeg 218w, https://peepalmedia.com/wp-content/uploads/2024/09/WhatsApp-Image-2024-09-02-at-3.16.21-PM-696x481.jpeg 696w" sizes="(max-width: 715px) 100vw, 715px" /></figure></div>


<p>ಹೀಗಿರುವಾಗ ಪುತ್ತಿಗೆ ಸ್ವಾಮಿಗಳು ಮಾತ್ರವಲ್ಲ, ಹಿಂದುತ್ವ ಕಟ್ಟುವ ಸುಳ್ಳು ಚರಿತ್ರೆಗಳು ಯಾವ ಸಂಸ್ಕೃತವನ್ನು ಎಲ್ಲಾ ಭಾಷೆಗಳ ತಾಯಿ ಎಂದು ಹೇಳುತ್ತಿವೆ? ತುಳುವಿನ ಮದಿಮೆ, ಹೆಣ್ಣು, ಗಂಡು, ಅಣ್ಣ, ಅಕ್ಕ ಮೊದಲಾದ ಪದಗಳ ಸಂಸ್ಕೃತ ಮೂಲ ಏನು? ಎಲ್ಲಾ ಭಾಷೆಗಳೂ ಬೇರೆ ಭಾಷೆಗಳಿಂದ ಪದಗಳನ್ನು ಎರವಲು ಪಡೆದು ಬೆಳೆಯುತ್ತವೆ. ಇಡೀ ಜಗತ್ತೇ ಬಳಸುವ ರಿಕ್ಷಾ ಎಂಬ ಪದ ಜಪಾನಿ ಭಾಷೆಯ ಜಿನ್‌ರಿಕಿಶಾ (Jinrikisha) ಎಂಬ ಪದದಿಂದ ಬಂದಿದೆ. ಜಿನ್‌ ಅಂದ್ರೆ ಮನುಷ್ಯ, ರಿಕಿ ಅಂದ್ರೆ ಶಕ್ತಿ, ಶಾ ಅಂದ್ರೆ ಗಾಡಿ.</p>



<p>ಮಲಯಾಳಂ, ತುಳು, ಕನ್ನಡ ಭಾಷೆಗಳ ಅಡಕೆ, ಅರಕ್ಕವನ್ನು ಇಂಗ್ಲೀಷ್‌ ಅರೇಕಾ ಮಾಡಿಕೊಂಡಿದೆ. ತಮಿಳು, ಮಲಯಾಳಂನ ವೆತ್ತಲೈ, ವೆತ್ತಲೆ ಎಂಬ ವೀಳ್ಯದೆಲೆಯನ್ನು ಇಂಗ್ಲೀಷರು ಮತ್ತು ಪೋರ್ಜುಗೀಸರು ಬೀಟೆಲ್‌ ಎಂದು ಬಳಸಿದರು. ತಮಿಳಿನಿ ಅರ್ಸಿ, ತುಳುವಿನ ಅರಿ ಇಂಗ್ಲೀಷಿನ ರೈಸ್‌ ಆಗಿದೆ. ನಾವು ಬಳಸುವ ತಾಂಬೂಲ ಎಂಬ ಪದವೇ ಫರ್ಷಿಯನ್‌ ಪದ. ಈ ರೀತಿ ಸಂಸ್ಕೃತವನ್ನು ಎಲ್ಲಾ ಭಾಷೆಗಳ ತಾಯಿ. ಎಲ್ಲಾ ಭಾಷೆಗಳೂ ಅದರಿಂದಲೇ ಹುಟ್ಟಿದ್ದು ಎನ್ನುವುದು ಅಪ್ಪಟ ಸುಳ್ಳು. ಅದು ಸಂಸ್ಕೃತಕ್ಕೆ ಮಾಡಿದ ಅವಮಾನ.</p>



<p></p>



<p><strong>ಚರಣ್‌ ಐವರ್ನಾಡು,</strong> ಬೆಂಗಳೂರು</p>
]]></content:encoded>
					
		
		
			</item>
		<item>
		<title>ಕನ್ನಡ ಭಾಷಾ ವಿಧೇಯಕ: ರಾಜ್ಯದ ಭಾಷಾಬಹುತ್ವಕ್ಕೆ ತೊಡಕು (ಅಂಕಣ ಬರಹ)</title>
		<link>https://peepalmedia.com/kannada-language-bill-a-challenge-to-the-states-linguistic-pluralism/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 31 Jul 2024 11:14:59 +0000</pubDate>
				<category><![CDATA[Featured]]></category>
		<category><![CDATA[ಅಂಕಣ]]></category>
		<category><![CDATA[ನಾಡು-ನುಡಿ]]></category>
		<category><![CDATA[bengalure]]></category>
		<category><![CDATA[bhasha]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[language]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=43076</guid>

					<description><![CDATA[&#8211;ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ ಕರ್ನಾಟಕದಲ್ಲಿ ಕನ್ನಡವೇ ಪ್ರಧಾನವಾದ ಭಾಷೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಕಾರಣಕ್ಕೇನೆ, ಕರ್ನಾಟಕ ರಾಜಭಾಷಾ ಅಧಿನಿಯಮ, ೧೯೬೩ರ ಅಡಿಯಲ್ಲಿ ಕನ್ನಡವನ್ನು ರಾಜ್ಯದ ಅಧಿಕೃತ ಭಾಷೆ ಎಂದು ಘೋಷಿಸಲಾಯಿತು. ಆಗ ಸರಕಾರದ ಕೆಲಸ ಇದ್ದದ್ದು ಒಂದು ಕಡೆ ಕನ್ನಡ ಭಾಷೆಯನ್ನು ಆಡಳಿತ, ನ್ಯಾಯಾಂಗ, ಶಿಕ್ಷಣ, ವಾಣಿಜ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಬಳಕೆಗೆ ಸಮರ್ಥವಾಗುವಂತೆ ಅಭಿವೃದ್ಧಿ ಪಡಿಸುವುದು; ಇನ್ನೊಂದು ಕಡೆ ಇದರಲ್ಲಿ ಒಳಗೊಳ್ಳುವ ಜನ ಸಂಪನ್ಮೂಲವನ್ನು ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡವನ್ನು ಬಳಸುವಂತೆ ಸಬಲಗೊಳಿಸುವುದು, ಮತ್ತೊಂದು ಕಡೆ, ಮೂಲಭೂತ [&#8230;]]]></description>
										<content:encoded><![CDATA[
<p>&#8211;<strong>ಪ್ರೊ.ಎಂ.ಅಬ್ದುಲ್ ರೆಹಮಾನ್ ಪಾಷ</strong></p>



<p>ಕರ್ನಾಟಕದಲ್ಲಿ ಕನ್ನಡವೇ ಪ್ರಧಾನವಾದ ಭಾಷೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆ ಕಾರಣಕ್ಕೇನೆ, ಕರ್ನಾಟಕ ರಾಜಭಾಷಾ ಅಧಿನಿಯಮ, ೧೯೬೩ರ ಅಡಿಯಲ್ಲಿ ಕನ್ನಡವನ್ನು ರಾಜ್ಯದ ಅಧಿಕೃತ ಭಾಷೆ ಎಂದು ಘೋಷಿಸಲಾಯಿತು. ಆಗ ಸರಕಾರದ ಕೆಲಸ ಇದ್ದದ್ದು ಒಂದು ಕಡೆ ಕನ್ನಡ ಭಾಷೆಯನ್ನು ಆಡಳಿತ, ನ್ಯಾಯಾಂಗ, ಶಿಕ್ಷಣ, ವಾಣಿಜ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಬಳಕೆಗೆ ಸಮರ್ಥವಾಗುವಂತೆ ಅಭಿವೃದ್ಧಿ ಪಡಿಸುವುದು; ಇನ್ನೊಂದು ಕಡೆ ಇದರಲ್ಲಿ ಒಳಗೊಳ್ಳುವ ಜನ ಸಂಪನ್ಮೂಲವನ್ನು ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡವನ್ನು ಬಳಸುವಂತೆ ಸಬಲಗೊಳಿಸುವುದು, ಮತ್ತೊಂದು ಕಡೆ, ಮೂಲಭೂತ ಶಿಕ್ಷಣ ವ್ಯವಸ್ಥೆಯಲ್ಲಿಯೇ ಬಹೋಪಯೋಗಿ ಕನ್ನಡ ಭಾಷಾ ಕೌಶಲಗಳಲ್ಲಿ ಭಾವೀ ನಾಗರಿಕರನ್ನು ಸಜ್ಜುಗೊಳಿಸುವುದು. ನಮ್ಮ ಸರಕಾರ ಈ ಮೂರೂ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆ ಅಷ್ಟಕ್ಕಷ್ಟೇ. ಇದಕ್ಕೆ ಕಾರಣ, ಇದರ ಹೊಣೆಯನ್ನು ಹೊತ್ತಿರುವ ಇಲಾಖೆ, ಅಧಿಕಾರಿಗಳು ಮತ್ತು ರಾಜಕಾರಣಿಗಳಲ್ಲಿ ಈ ಕುರಿತು ಇರುವ ವೈಜ್ಞಾನಿಕವಾದ ಅರಿವಿನ, ದೃಷ್ಟಿಕೋನದ ತೀವ್ರವಾದ ಕೊರತೆ.೧೯೬೩ರಲ್ಲಿ ಜಾರಿಗೆ ಬಂದ ಕರ್ನಾಟಕ ರಾಜಭಾಷಾ ಅಧಿನಿಯಮ, ಕನ್ನಡವನ್ನು ರಾಜ್ಯದ ಅಧಿಕೃತ ಭಾಷೆ ಎಂದು ಸ್ಪಷ್ಟವಾಗಿ ಘೋಷಿಸುತ್ತದೆ, ಮತ್ತು ಅದರ ಅನುಷ್ಠಾನಕ್ಕಾಗಿ ಪ್ರಾಯೋಗಿಕವಾದ ಹಂತಗಳನ್ನು ಸೂಚಿಸುತ್ತದೆ. ಇದಕ್ಕೆ ಪೂರಕವಾಗಿ ಸರಕಾರವು ೧೯೭೩ರಲ್ಲಿ ಮುಖ್ಯ ಭಾಷಾಂತರಕಾರರ ಕಛೆರಿಯನ್ನು ಪುನಾರಚಿಸಿ, “ಭಾಷಾ ನಿರ್ದೇಶನಾಲಯ’ವನ್ನಾಗಿ ರೂಪಿಸಿತು, ಇದನ್ನು ೧೯೭೭ರಲ್ಲಿ ಪುನಃ ಸಂಘಟಿಸಿತು, “ಭಾಷಾಂತರ ನಿರ್ದೇಶನಾಲಯ”ವನ್ನು ರಚಿಸಿತು. ಕನ್ನಡವನ್ನು ಸರಕಾರದ ಎಲ್ಲಾ ಹಂತಗಳಲ್ಲಿಯೂ ಆಡಳಿತ ಭಾಷೆಯಾಗಿ ಜಾರಿಗೆ ತರುವ ರಾಜ್ಯ ಸರಕಾರದ ನೀತಿಯ ಅನ್ವಯ ಇವು ಕೇಂದ್ರ ಮತ್ತು ರಾಜ್ಯ ಅಧಿನಿಯಮಗಳು ಮತ್ತು ನಿಯಮಾವಳಿಗಳನ್ನು ಕನ್ನಡಕ್ಕೆ ಭಾಷಂತರಿಸುವುದು ಹಾಗೂ ಅವರುಗಳನ್ನು ಪುಸ್ತಕ ರೂಪದಲ್ಲಿ ಅಧಿಕೃತ ಕನ್ನಡ ಪಾಠವನ್ನು ಪ್ರಕಟಿಸುವ ಕೆಲಸವನ್ನು ನಿರ್ವಹಿಸುತ್ತಾ ಬಂದಿವೆ.</p>



<p>ಈ ಬೆಳವಣಿಗೆಗಳ ಜೊತೆಯಲ್ಲಿಯೇ ಕನ್ನಡ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಉತ್ತೇಜಿಸಲು ಈ ಕೆಳಗಿನ ಕಾನೂನುಗಳನ್ನು ಜಾರಿಗೆ ತಂದಿದೆ. ಕರ್ನಾಟಕ ರಾಜಭಾಷಾ ಅಧಿನಿಯಮ, ೧೯೬೩; ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಅಧಿಕೃತ ಭಾಷಾ) ಅಧಿನಿಯಮ, ೧೯೮೧, ಮತ್ತು ಕನ್ನಡ ಕಲಿಕಾ ಅಧಿನಿಯಮ, ೨೦೧೫. ೧೯೭೭ರಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ೧೯೯೨ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಹಲವಾರು ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಕಾವಲು, ಜಾಗೃತ, ಅನುಷ್ಠಾನ ಸಮಿತಿಗಳು ಆದವು. ಈಗ ಸರಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ, ೨೦೨೨ನ್ನು ಅಧಿನಿಯಮ ಮಾಡಲು ಹೊರಟಿದೆ. ಏಕೆಂದರೆ, ಇದೇ ಮಸೂದೆಯಲ್ಲಿ ಹೇಳಿರುವಂತೆ, ಈ ಹಿಂದಿನ ಅಧಿನಿಯಮಗಳು, ಅಧಿಸೂಚನೆಗಳು, ಸುತ್ತೋಲೆ ಇತ್ಯಾದಿಗಳಿಂದ, ಸರಕಾರವು ‘ಕನ್ನಡ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿಸುವ ಆಶಯ ನೆರವೇರಿಸುವಲ್ಲಿ ಯಶಸ್ವಿಯಾಗಿಲ್ಲ.’</p>



<p><strong>ಇಷ್ಟೇಕೆ ಒದ್ದಾಡುತ್ತೀರಿ</strong></p>



<p>೧೯೭೮ರಲ್ಲಿ ಮೈಸೂರಿನ ಭಾರತೀಯ ಭಾಷಾ ಸಂಸ್ಥೆಯಲ್ಲಿ ದಕ್ಷಿಣ ಆಪ್ರಿಕಾದ ಆ ವರ್ಷಗಳಲ್ಲಿ ಸ್ವಾತಂತ್ರ್ಯವನ್ನು ಗಳಿಸಿದ ದೇಶಗಳಿಗಾಗಿ ಒಂದು ಸಮಾವೇಶ ನಡೆದಿತ್ತು. ಭಾರತದ ಹಾಗೆಯೇ ಅವೂಬಹುಭಾಷೀಯಾದ ದೇಶಗಳು. ತಮಲ್ಲಿ ಪ್ರಚಲಿತವಿರುವ ಹಲವು ಭಾಷೆಗಳಲ್ಲಿ ಯಾವುದನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು, ಅದನ್ನು ಸಮರ್ಥವಾದ ಆಡಳಿತ/ನ್ಯಾಯಾಂಗದ ಭಾಷೆಯನ್ನಾಗಿ ಅಭಿವೃದ್ಧಿಪಡಿಸುವುದು ಹೇಗೆ ಎಂಬ ವಿಚಾರಗಳ ಕುರಿತು ಅವರು ಭಾರತೀಯ ಭಾಷಾ ಸಂಸ್ಥೆಯ ನೆರವನ್ನು ಕೋರಿದ್ದರು. ಅದರಲ್ಲಿ, ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ವಿಜಯ ಸಾಸನೂರರು, ಒಂದು ಮಾದರಿಯಾಗಿ, ಕರ್ನಾಟಕದಲ್ಲಿ ಕನ್ನಡವನ್ನು ಅಧಿಕೃತವಾದ ಭಾಷೆಯನ್ನಾಗಿ ಮಾಡುವುದಕ್ಕಾಗಿ ಇಲಾಖೆಯು ಏನೆಲ್ಲಾ ಪರಿಶ್ರಮ ಪಡುತ್ತಿದೆ, ಏನೆಲ್ಲಾ ಯೋಜನೆಗಳನ್ನು ಜಾರಿಗೊಳಿಸಿ ಹೆಣಗಾಡುತ್ತಿದೆ-ಎಂದೆಲ್ಲಾ ಭಾಷಣ ಮಾಡಿದರು. ಅದನ್ನು ಬಹಳ ಆಸಕ್ತಿಯಿಂದ ಆಲಿಸಿದ ಒಬ್ಬ ಆಫ್ರಿಕನ್ ಪ್ರತಿನಿಧಿ ಅವರಿಗೆ ಒಂದು ಪ್ರಶ್ನೆಯನ್ನು ಕೇಳಿದ, ‘ನಿಮ್ಮ ರಾಜ್ಯದಲ್ಲಿ ಬಹುಸಂಖ್ಯಾತರ ಭಾಷೆ ಯಾವುದು ಎಂದಿರಿ?’ ‘ಕನ್ನಡ’ ಎಂದು ಸಾಸನೂರರು. ‘ಕನ್ನಡ! ನೀವು ನಿಮ್ಮ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಹೊರಟಿರುವ ಭಾಷೆಯಾವುದು?’ ‘ಕನ್ನಡ!’ ಎಂದರು ನಮ್ಮ ನಿರ್ದೇಶಕರು. ಆಗ ಆತ ತುಂಬಾ ಅಚ್ಚರಿಯಿಂದ ಪ್ರತಿಕ್ರಿಯಿಸಿದ್ದು ಹೀಗೆ: ‘ಅದೂ ಕನ್ನಡ, ಇದೂ ಕನ್ನಡ. ರಾಜ್ಯದ ಇಡೀ ಜನತೆ ತಮ್ಮ ಭಾಷೆಯನ್ನೇ ಅಧಿಕೃತ ಭಾಷೆಯನ್ನಾಗಿ ಮಾಡಿ ಎಂದು ಗೋಗರೆಯುತ್ತಿರುವಾಗ, ಅದನ್ನು ಅನುಷ್ಠಾನ ಮಾಡುವುದಕ್ಕೆ ನೀವ್ಯಾಕೆ ಇಷ್ಟೊಂದು ಒದ್ದಾಡುತ್ತಿದ್ದೀರಿ?’ ಇದಕ್ಕೆ ಸಾಸನೂರರು ನಿರುತ್ತರರಾದರು.</p>



<p>ಆ ವಿದೇಶಿ ವ್ಯಕ್ತಿ, ನಮಗೆ ಈ ಸವಾಲನ್ನು ಹಾಕಿ ಈಗ್ಗೆ ೪೪ ವರ್ಷಗಳಾಗಿವೆ. ಆದರೂ ನಾವು ಮೇಲೆ ಹೇಳಿದ ಎಲ್ಲಾ ಯೋಜನೆ, ಇಲಾಖೆ, ಆಯೋಗ, ಅಧಿನಿಯಮಗಳ ಹೊರತಾಗಿಯೂ, ಬಹುಸಂಖ್ಯಾತ ಜನರ ‘ಕನ್ನಡ ಭಾಷೆಯನ್ನು ರಾಜ್ಯ ಅಧಿಕೃತ ಭಾಷೆಯನ್ನಾಗಿಸುವ ಆಶಯ ನೆರವೇರಿಸುವಲ್ಲಿ ಯಶಸ್ವಿಯಾಗಿಲ್ಲ.’ಎಂದು ಒಪ್ಪಿಕೊಂಡು ಅದಕ್ಕಾಗಿ ಇನ್ನೊಂದು ಅಧಿನಿಯಮ, ಈ ಬಾರಿ, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ೨೦೨೨ ಜಾರಿಗೊಳಿಸಲು ಹೊರಟಿದ್ದೇವೆ.‌ ಪ್ರತಿ ವರ್ಷ ಕೋಟಿಗಟ್ಟಲೆ ರೂಪಾಯಿ ವ್ಯಯ ಮಾಡುತ್ತಿದ್ದೇವೆ ಆದರೂ ಕನ್ನಡದ ಬಳಕೆಗಾಗಿ ಗೋಗರೆಯುವ, ಇಲ್ಲವೇ ದರ್ಪದಿಂದ ದಂಡ ಹಾಕುವ ಸ್ಥಿತಿ ಮುಂದುವರೆದಿದೆ. ಇದೊಂದು ಶತಮಾನದ ವಿಪರ್ಯಾಸ. ಇದಕ್ಕೆ ಕಾರಣ ಇಚ್ಛಾಶಕ್ತಿಯ ಕೊರತೆ ಎಂದೋ, ಕನ್ನಡದ ಬಗ್ಗೆ ಅಭಿಮಾನವಿಲ್ಲ ಎಂದೋ ಹೇಳಿ ಮತ್ತೆ ಅದೇ ರಾಗದಲ್ಲಿ ಅದೇ ಹಾಡು ರೀಪ್ಲೇ ಆಗುತ್ತಿರುತ್ತದೆ.</p>



<p>ಹೊಸ ಅಧಿನಿಯಮ ತರಲು ನೋಡುವಾಗ ಹಿಂದಿನವು ಕಳೆದ ೬೦ ವರ್ಷಗಳಲ್ಲಿ ಫಲಕಾರಿಯಾಗದೇ ಇರುವುದಕ್ಕೆ ಕಾರಣವೇನು ಎಂದು ವಿಶ್ಲೇಷಿಸಲಾಗಿದೆಯೇ? ಮೂಲಭೂತ ಸಮಸ್ಯೆಗಳನ್ನು ಗುರುತಿಸಲಾಗಿದೆಯೇ? ಅದಕ್ಕೆ ಪರಿಹಾರಗಳನ್ನು ಯೋಜಿಸಲಾಗಿದೆಯೇ ಎಂದರೆ ಇಲ್ಲ ಎಂಬ ಉತ್ತರ ಸ್ಪಷ್ಟವಾಗಿದೆ.</p>



<p><strong>ಚಕ್ರದ ಮರುಶೋಧನೆ</strong></p>



<p>ನಾನು ೧೯೭೫-೭೮ ಅವಧಿಯಲ್ಲಿ ಭಾರತೀಯ ಭಾಷಾ ಸಂಸ್ಥೆಯಲ್ಲಿ ಕನ್ನಡೇತರರಿಗೆ ಕನ್ನಡ ಕಲಿಸುವ ಕ್ಷೇತ್ರದಲ್ಲಿ ದುಡಿದೆ. ೧೯೭೮-೮೦ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ, ಆಡಳಿತ/ನ್ಯಾಯಾಂಗ ಕನ್ನಡದ ಅಭಿವೃದ್ಧಿ/ಜಾರಿಗಾಗಿಯೇ ಎಂದು ವಿಶೇಷವಾಗಿ ನೇಮಿಸಲ್ಪಟ್ಟಿದ್ದ ರಾಜ್ಯ ಮಟ್ಟದ ಸಹಾಯಕ ನಿರ್ದೇಶಕನಾಗಿದ್ದೆ. ೨೦೨೦-೨೩ ಅವಧಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನೂ ಆಗಿದ್ದೆ. ನಾನೊಬ್ಬ ಭಾಷಾವಿಜ್ಞಾನದ ವಿದ್ಯಾರ್ಥಿ. ಈ ಹಿನ್ನೆಲೆಯಲ್ಲಿ ನಮ್ಮ ಸರಕಾರವು ಕನ್ನಡದÀ ಅನುಷ್ಠಾನದಲ್ಲಿ ಏಕೆ ಸೋತಿದೆ ಎಂಬುದನ್ನು ಸ್ವಂತ ಅನುಭವದ ಬೆಳಕಿನಲ್ಲಿಯೂ ಇಲ್ಲಿ ಚರ್ಚಿಸಲು ಪ್ರಯತ್ನಿಸುತ್ತಿದ್ದೇನೆ. ನಾನು ಹೇಳುತ್ತಿರುವು ಅಂತಿಮ ಪರಿಹಾರ ಎಂದು ನಾನು ಹೇಳುತ್ತಿಲ್ಲ. ಸಮಸ್ಯೆ ಅಷ್ಟು ಸುಲಭವೂ ಅಲ್ಲ. ಆದರೆ, ನಮ್ಮ ಸರಕಾರಗಳು, ಕನ್ನಡ ಅಭಿವೃದ್ಧಿ ಪ್ರಾಧಿಕಾರವೂ ಸೇರಿದ ಹಾಗೆ ವಿವಿಧ ಅಧಿಕೃತ ಜಾರಿ ಸಂಸ್ಥೆಗಳು ಎಲ್ಲಿ ಎಡವಿರಬಹುದು ಎಂಬುದನ್ನು ಗುರುತಿಸುವ ಪ್ರಯತ್ನ ಮಾಡುತ್ತಿದ್ದೇನೆ.</p>



<p><strong>ಕನ್ನಡದ ಅಭಿವೃದ್ಧಿ ಎಂದರೇನು?</strong></p>



<p>ನಾವೀಗ ಮತಾಡುತ್ತಿರುವುದು ಸಾಹಿತ್ಯಕ, ಸಾಂಸ್ಕೃತಿಕ ಕನ್ನಡ ಭಾಷೆಯ ಅಭಿವೃದ್ಧಿಯ ಬಗ್ಗೆ ಅಲ್ಲ. ನಾವೀಗ ಕನ್ನಡವನ್ನು ಅದಕ್ಕಿಂತ ಮೂಲಭೂತವಾಗಿ ಭಿನ್ನವಾದ, ವಿಶಿಷ್ಟವಾದ, ಆಡಳಿತ, ನ್ಯಾಯಾಂಗ, ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಇಂಥ ಕ್ಷೇತ್ರದಲ್ಲಿ ಸಮರ್ಥವಾಗಿ ಬಳಕೆಯಾಗುವ ರೀತಿಯಲ್ಲಿ ಮಾಡಬೇಕಾಗಿರುವ ಅಭಿವೃದ್ಧಿ. (ಈ ಲೇಖನದಲ್ಲಿ ಇಂಥ ಶೈಲಿಯನ್ನು ಒಟ್ಟಾರೆಯಾಗಿ ರಾಜ್ಯದ ಅಧಿಕೃತ ಭಾಷೆ ಎಂದು ಕರೆಯೋಣ.) ಸಾಹಿತ್ಯಕ ಶ್ರೀಮಂತಿಕೆಯಿAದ ಇದಕ್ಕೆ ಪ್ರಯೋಜನವಾಗುವುದು ಬಹಳ ಕಡಿಮೆ. ಬದಲಿಗೆ ಸಾಹಿತ್ಯಕ ವೈಭವ, ಅಭಿಮಾನವು ಕನ್ನಡದ ತಾಂತ್ರಿಕ ಶೈಲಿಯ ಅಭಿವೃದ್ಧಿಗೆ ಬಾಧೆಯಾಗುವ ಸಾಧ್ಯತೆ ಹೆಚ್ಚು. ಇದನ್ನು ಸಂಪೂರ್ಣ ಭಿನ್ನವಾದ ನೆಲೆಗಟ್ಟಿನಲ್ಲಿ ನೋಡಬೇಕಾಗುತ್ತದೆ.</p>



<p><img loading="lazy" decoding="async" width="500" height="511" class="wp-image-43082" style="width: 500px;" src="https://peepalmedia.com/wp-content/uploads/2024/07/02-Kannada.png" alt="" srcset="https://peepalmedia.com/wp-content/uploads/2024/07/02-Kannada.png 471w, https://peepalmedia.com/wp-content/uploads/2024/07/02-Kannada-294x300.png 294w, https://peepalmedia.com/wp-content/uploads/2024/07/02-Kannada-150x153.png 150w, https://peepalmedia.com/wp-content/uploads/2024/07/02-Kannada-300x306.png 300w" sizes="auto, (max-width: 500px) 100vw, 500px" /><br>ಭಾಷೆಯನ್ನು ಬಂಗಾರದ ಕುಂಡದಲ್ಲಿ ಬೆಳೆಸಲು ಸಾಧ್ಯವಿಲ್ಲ. ಅದರಲ್ಲೂ ಅಧಿಕೃತ ಭಾಷೆಯನ್ನು ಅದನ್ನು ಬಳಸಬೇಕಾಗಿರುವ ಜನರಿಂದ ಪ್ರತ್ಯೇಕಿಸಿ ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ. ಮಾಡಿದರೂ ಅಂಥ ಪ್ರಯತ್ನಗಳು ನಿರರ್ಥಕವಾಗುತ್ತವೆ. ಬದಲಿಗೆ, ಅಧಿಕೃತ ಭಾಷೆಯನ್ನು ಬಳಸಬೇಕಾದ ವ್ಯಕ್ತಿಗಳನ್ನು ಅದರ ಬಳಕೆಯಲ್ಲಿ ಸಬಲೀಕರಿಸಬೇಕು. ಪದಕೋಶಗಳು, ಕೈಪಿಡಿಗಳು ಇತ್ಯಾದಿ ಅಗತ್ಯವಾದ ಪೂರಕ ಸಾಮಗ್ರಿಯನ್ನು ರೂಪಿಸಿ, ವ್ಯಾಪಕವಾಗಿ ಹಂಚಬೇಕು. ವಿಶಿಷ್ಟವಾದ ತರಬೇತಿ ವ್ಯವಸ್ಥೆಯನ್ನು ಕಟ್ಟಿ ನಿರಂತರವಾಗಿ ನಡೆಸಬೇಕು. ಈ ಜೀವಂತ ಸನ್ನಿವೇಶಗಳಲ್ಲಿ ಆಗುವ ಬಳಕೆಯಿಂದಾಗಿ, ಎದುರಿಸುವ ಸವಾಲುಗಳನ್ನು ಬಗೆಹರಿಸಿಕೊಳ್ಳುತ್ತಾ, ಇನ್ನಷ್ಟು ಸಮರ್ಥವಾಗುತ್ತಾ, ಹೆಚ್ಚಿನ ಸವಾಲುಗಳನ್ನು ಎದುರಿಸಲು ಸಜ್ಜಾಗುತ್ತಾ ಅಧಿಕೃತ ಭಾಷೆ ಬೆಳೆಯುತ್ತದೆ. ಆದರೆ, ಸರಕಾರದ ಅಧಿಕೃತ ಭಾಷಾ ಅಭಿವೃದ್ದಿಯ ಕಾರ್ಯನೀತಿ ಮತ್ತು ಕಾರ್ಯಯೋಜನೆಗಳಲ್ಲಿ ಅಧಿಕೃತ ಕನ್ನಡದ ಬಳಕೆದಾರರನ್ನುಸಂಪೂರ್ಣವಾಗಿ ಗೌಣವಾಗಿ ಕಾಣಲಾಗಿದೆ. ಇನ್ನೂ ಸರಿಯಾಗಿ ಹೇಳಬೇಕು ಎಂದರೆ, ಅವರನ್ನು ಅಭಿವೃದ್ಧಿಗೆ ಮಾರಕವಾಗಿರುವ ದ್ರೋಹಿಗಳು, ಅಪರಾಧಿಗಳು ಎಂಬಂತೆ ಕಾಣಲಾಗುತ್ತದೆ. ‘ಹುತ್ತವ ಬಡಿದರೆಹಾವು ಸಾವುದೇ’ ಎಂಬ ಒಂದು ವಚನ ಇದೆ, ಎಂದರೆ ಮೂಲ ಸಮಸ್ಯೆಯನ್ನು ಕಂಡುಕೊಳ್ಳುವುದನ್ನು ಬಿಟ್ಟು, ಅದರ ಸುತ್ತಲೂ ಬಡಿದಾಡಿದ ಹಾಗೆ. ಅಧಿಕೃತ ಕನ್ನಡದ ಅಭಿವೃದ್ಧಿಯ ಕಥೆಯೂ ಇದೇ ಆಗಿದೆ ಎನ್ನುವುದು ವಿಪರ್ಯಾಸ. ಅದಕ್ಕೇ, ನಾನು ಈ ಲೇಖನದ ಆರಂಭದಉಲ್ಲೇಖದಲ್ಲಿ ಆ ಆಫಿû್ರಕನ್ ವ್ಯಕ್ತಿ ಕೇಳಿದ ಪ್ರಶ್ನೆಯನ್ನು ಈಗಲೂ ಕೇಳುತ್ತಲೇ ಇರಬೇಕಾಗಿದೆ.<br><strong>ಬೇರಿನಲ್ಲಿಯೇ ದೋಷ</strong><br>ಹತ್ತನೇ ತರಗತಿಯ ವರೆಗೆ ಈಗಿರುವ ಕನ್ನಡ ವಿಷಯದ ಪಠ್ಯಪುಸ್ತಕಗಳನ್ನೊಮ್ಮೆ ತೆರೆದುನೋಡಿ. ಅಲ್ಲಿ ಕನ್ನಡ ಭಾಷೆಯನ್ನು ಬಿಟ್ಟು ಉಳಿದೆಲ್ಲವನ್ನೂ ಕಲಿಸಲಾಗುತ್ತದೆ. ಈ ಪಠ್ಯಕ್ರಮ, ಪುಸ್ತಕಗಳನ್ನು ರೂಪಿಸುವ ಪಂಡಿತರಿಗೆ ಕನ್ನಡ ಭಾಷಾ ಕೌಶಲಗಳಿಗೂ ಕನ್ನಡ ಸಾಹಿತ್ಯಕ್ಕೂ ವ್ಯತ್ಯಾಸವೇ ತಿಳಿದಿಲ್ಲ. ಹಳಗನ್ನಡ, ನಡುಗನ್ನಡ, ವ್ಯಾಕರಣ, ಚಂದಸ್ಸು, ವಚನಸಾಹಿತ್ಯದಿಂದ ಹಿಡಿದು ಮುಸ್ಲಿಮ್ ಸಾಹಿತ್ಯ, ದಲಿತ ಸಾಹಿತ್ಯ, ಮಹಿಳಾ ಸಾಹಿತ್ಯದವರೆಗೆ ಬರೀ ಸಾಹಿತ್ಯದ ಗದ್ಯ-ಪದ್ಯಗಳದ್ದೇ ದರ್ಬಾರು ಶಾಲಾ ಪಠ್ಯದಲ್ಲಿ. ಇದರಲ್ಲಿ ನೂರಕ್ಕೆ ನೂರು ಅಂಕ ಪಡೆದವರೂ ಮುಂದೆ ಸರಕಾರೀ ನೌಕರರಾದರೆ, ವಕೀಲರೋ, ನ್ಯಾಯಾಧೀಶರೋ ಆದರೆ ಆಡಳಿತ/ನ್ಯಾಯಾಂಗ ಕನ್ನಡ ಬಳಸುವ ಸಾಮರ್ಥ್ಯ ಎಲ್ಲಿಂದ ಬರಬೇಕು? ಎಂದರೆ, ಮುಂದೆ ಬದುಕಿನ ವಿವಿಧ ರಂಗಗಳಲ್ಲಿ ಕನ್ನಡವನ್ನು ಸಮರ್ಥವಾಗಿ ಬಳಸುವ ರೀತಿಯ ಭಾಷಾ ಕೌಶಲಗಳನ್ನು, ಸಾಮರ್ಥ್ಯಗಳನ್ನು ಮೂಲ ಶಿಕ್ಷಣ ನಮ್ಮ ಯುವಜನರಿಗೆ ನೀಡಬೇಕಾಗಿತ್ತು. ನಂತರ ಅವರನ್ನು ಅಧಿಕೃತ ಕನ್ನಡದ ಬಳಕೆಗೆ ಒಗ್ಗಿಸುವುದು ಚಿಟಿಕೆ ಹೊಡೆದಷ್ಟು ಸುಲಭದ ಕೆಲಸವಾಗುತ್ತಿತ್ತು. ಈ ರೀತಿಯ ಬದುಕಿನ ಸವಾಲುಗಳನ್ನು ಎದುರಿಸಲು ಬೇಕಾದ ಭಾಷಾ ಸಾಮರ್ಥ್ಯವನ್ನು ಶಾಲಾ ಶಿಕ್ಷಣದಲ್ಲಿ ನೀಡಲು ಸಾಧ್ಯವಾಗದಿರುವುದು ಮುಂದೆ ಅದನ್ನು ಅಧಿಕೃತ ಭಾಷೆಯನ್ನಾಗಿ ಜಾರಿಗೆ ತರುವಲ್ಲಿ ಇರುವ ಮೂಲಭೂತ ತೊಡಕು. ಇದನ್ನು ನಾನು ಡಿಎಸ್‌ಇಆರ್‌ಟಿ, ಕ.ಸಾ.ಪ. ಕ.ಅ.ಪ್ರಾಧಿಕಾರ ಇತ್ಯಾದಿ ಉನ್ನತ ವೇದಿಕೆಗಳ ಹತ್ತಾರು ಸಲ ಹೇಳಿದ್ದೇನೆ, ಹತ್ತಾರು ಲೇಖನಗಳನ್ನು ಬರೆದು, ಇವರ ಗಮನಕ್ಕೆ ತಂದಿದ್ದೇವೆ. ಆದರೆ ಇದ್ಯಾವುದೂ ಇವರಿಗೆ ಉಪಯುಕ್ತವಾಗಿ ತೋರಿಲ್ಲ, ಏಕೆಂದರೆ ಇದು ‘ಆಕರ್ಷಕ’ವಾಗಿಲ್ಲ.<br><img loading="lazy" decoding="async" width="600" height="450" class="wp-image-43083" style="width: 600px;" src="https://peepalmedia.com/wp-content/uploads/2024/07/03-Medium-scs.png" alt="" srcset="https://peepalmedia.com/wp-content/uploads/2024/07/03-Medium-scs.png 960w, https://peepalmedia.com/wp-content/uploads/2024/07/03-Medium-scs-300x225.png 300w, https://peepalmedia.com/wp-content/uploads/2024/07/03-Medium-scs-768x576.png 768w, https://peepalmedia.com/wp-content/uploads/2024/07/03-Medium-scs-150x113.png 150w, https://peepalmedia.com/wp-content/uploads/2024/07/03-Medium-scs-696x522.png 696w, https://peepalmedia.com/wp-content/uploads/2024/07/03-Medium-scs-265x198.png 265w" sizes="auto, (max-width: 600px) 100vw, 600px" /><br>ಇದಲ್ಲದೇ, ರಾಜ್ಯದ ಮಧ್ಯಮ, ಮೇಲ್ಮಧ್ಯಮ ಮತ್ತು ಮೇಲ್ವರ್ಗದ ಪೋಷಕರು ತಮ್ಮ ಮಕ್ಕಳನ್ನು ಕಳಿಸುವುದು ಇಂಗ್ಲಿಷ್ ಮಾಧ್ಯಮದ ಶಾಲೆಗೆ, ಕೆಲವು ಬಡ ಅಲ್ಪಸಂಖ್ಯಾತರು ತಮ್ಮ ಮಕ್ಕಳನ್ನೂ ಈಗಲೂ ಹತ್ತನೇ ತರಗತಿಯವರೆಗೆ ಉರ್ದು, ತಮಿಳು, ತೆಲುಗು, ಗುಜರಾತಿ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಾರೆ. ಇಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಕಲಿಸಲಾಗುತ್ತದೆ. ಇಲ್ಲಿ ಕಲಿಯುವ ಕನ್ನಡ ಮುಂದಿನ ಜೀವನದಲ್ಲಿ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ ಎಂದು ಖಾತ್ರಿಯಾದ್ದರಿಂದ ಪೋಷಕರು, ಮಕ್ಕಳು, ಕೊನೆಗೆ ಶಿಕ್ಷಕರೂ ಕನ್ನಡ ಕಲಿಸುವುದರಲ್ಲಿ ತೋರಬೇಕಾದಷ್ಟು ಕಾಳಜಿ ತೋರುವುದಿಲ್ಲ. ಇದೆಲ್ಲದರ ಫಲವಾಗಿ ಎಂಟನೇ ತರಗತಿಗೆ ಬಂದರೂ, ಕನ್ನಡ ಮಾಧ್ಯಮದ, ಕನ್ನಡ ಮಾತೃಭಾಷೀಯ ಮಕ್ಕಳಿಗೇ ಕನ್ನಡ ನೆಟ್ಟಗೇ ಓದಲು, ಬರೆಯಲು ಬರುವುದಿಲ್ಲ ಈಗಲೂ ಗುಣಿತಾಕ್ಷರ, ಒತ್ತಕ್ಷರ ಗೊತ್ತಿಲ್ಲ ಎಂದು ಶಿಕ್ಷಣ ಇಲಾಖೆಯೇ ಒಪ್ಪಿಕೊಂಡಿದೆ. ಹತ್ತನೇ ತರಗತಿಯ ವರೆಗೆ ಕನ್ನಡ ಭಾಷೆಯನ್ನು ಕಲಿಸಲು ಸುಮಾರು ೧೫೦೦ ಗಂಟೆಗಳಷ್ಟು ಕಾಲಾವಕಾಶ ಸಿಕ್ಕರೂ ನಮಗೆ ಕೆಲಸಕ್ಕೆ ಬರುವ ಕನ್ನಡ ಭಾಷಾ ಕೌಶಲಗಳನ್ನು ಕಲಿಸಲು ಆಗುವುದಿಲ್ಲ ಎನ್ನುವುದನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ.ಪರಿಸ್ಥಿತಿ ಹೀಗಿಟ್ಟುಕೊಂಡು ಸರಕಾರವು ಉನ್ನತ ಶಿಕ್ಷಣ, ತಾಂತ್ರಿಕ ಶಿಕ್ಷಣವನ್ನೂ ಕನ್ನಡದಲ್ಲಿ ನೀಡಬೇಕು ಎಂಬ ಅಂಧ ಶ್ರದ್ಧೆಯನ್ನು ತೋರುತ್ತಿದೆ. ಸಂಬAಧ ಪಟ್ಟ ಎಲ್ಲಾ ಇಲಾಖೆ, ಪ್ರಾಧಿಕಾರಗಳು ಕೋಟಿ ಕಂಠಗಳಲ್ಲಿ (ಸಿನಿಮಾ ಹಾಡೂ ಸೇರಿ)ಕನ್ನಡ ವೈಭವದ ಹಾಡುಗಳನ್ನು ಹಾಡಿ, ಕನ್ನಡ ಅಭಿವೃದ್ಧಿಯಾಯಿತು ಎಂದು ಜನರನ್ನು ನಂಬಿಸುತ್ತವೆ.<br>ಕನ್ನಡೇತರರನ್ನು ಪ್ರೀತಿಸಿ<br>ಈಗಿರುವ ಶಿಕ್ಷಣ ವ್ಯವಸ್ಥೆಯಿಂದ ಮುಂದೆ ಆಡಳಿತ/ನ್ಯಾಯಾಂಗ/ವಾಣಿಜ್ಯ/ ಮಾಧ್ಯಮ ಇತ್ಯಾದಿ ವ್ಯಾವಹಾರಿಕ ಕ್ಷೇತ್ರಗಳಲ್ಲಿ ಬಳಸುವಷ್ಟು ಕನ್ನಡ ಭಾಷಾ ಕೌಶಲಗಳನ್ನು ಕನ್ನಡ ಮಾತೃಭಾಷಿಯರಿಗೇ ಕಲಿಸುವಲ್ಲಿ ಸೋತಿದ್ದೇವೆ ಎಂಬುದು ಸ್ಪಷ್ಟವಾಗಿದೆ. ಇನ್ನು ನಾವು ಕನ್ನಡ ಬಾರದೇ ಇರುವ ಜನಸಮುದಾಯವನ್ನು ಗಮನಿಸೋಣ. ಬರೆಯುವ ಅನುಕೂಲಕ್ಕೆ ಇವರನ್ನು ‘ಕನ್ನಡೇತರರು’ ಎಂದು ಕರೆಯೋಣ. ಹೀಗೆಂದ ಕೂಡಲೇ ಇವರು ಯಾರೋ ಆಗಂತುಕರು, ಬೇಡವಾದವರು, ಕೆಲಸಕ್ಕೆ ಬಾರದವರು ಎಂದು ಭಾವಿಸಬಾರದು. ಏಕೆಂದರೆ, ಇವರೂ ನಮ್ಮವರೇ. ಬಡತನ ಒಂದು ಸಮಸ್ಯೆಯಾದರೆ ಬಡತನವನ್ನು ನಿವಾರಿಸಲು ನೋಡುತ್ತೇವೋ ಬಡವರನ್ನು ಹಳಿಯುತ್ತ ಕೂಡುತ್ತೇವೆ. ಕನ್ನಡೇತರರೂ ಈ ನಾಡಿನ ಮಾನವ ಸಂಪನ್ಮೂಲ. ಕನ್ನಡ ಬಾರದೇ ಇದ್ದುದಕ್ಕೆ ಮಾತ್ರ ಅವರು ಕನ್ನಡ ಬರುವವರಿಗಿಂತ ಅಯೋಗ್ಯರೇನೂ ಅಲ್ಲ. ಕನ್ನಡೇತರಿಗೂ ಕನ್ನಡವನ್ನು ಕಲಿಸುವ ವ್ಯವಸ್ಥೆ ಆಗಬೇಕು. ಇದರ ಹೊಣೆ ಯಾರು ಹೊತ್ತಿದ್ದಾರೆ?<br>ಮೊದಲನೆಯದಾಗಿ ಭಾಷಿಕ ಅಲ್ಪ ಸಂಖ್ಯಾತರ ಕುರಿತು ಸರಕಾರದ ಧೋರಣೆಯೇ ದೋಷಪೂರ್ಣವಾಗಿದೆ. ಅವರನ್ನು ಇವರು ಮಾಡುತ್ತಿರುವ ಮಹಾನ್ ಪ್ರಗತಿ ಮಾರಕವೆಂದು ಭಾವಿಸಲಾಗುತ್ತದೆ.<br><img loading="lazy" decoding="async" width="600" height="389" class="wp-image-43084" style="width: 600px;" src="https://peepalmedia.com/wp-content/uploads/2024/07/04-2011.png" alt="" srcset="https://peepalmedia.com/wp-content/uploads/2024/07/04-2011.png 960w, https://peepalmedia.com/wp-content/uploads/2024/07/04-2011-300x195.png 300w, https://peepalmedia.com/wp-content/uploads/2024/07/04-2011-768x498.png 768w, https://peepalmedia.com/wp-content/uploads/2024/07/04-2011-150x97.png 150w, https://peepalmedia.com/wp-content/uploads/2024/07/04-2011-696x452.png 696w" sizes="auto, (max-width: 600px) 100vw, 600px" /><br>೨೦೧೧ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ೧೫೬ ಮಾತೃಭಾಷೆಗಳಿವೆ. ಅವುಗಳಲ್ಲಿ, ಕನ್ನಡವನ್ನು ಮಾತೃಭಾಷೆ ಎಂದು ಗುರುತಿಸಿಕೊಳ್ಳುವವರು ಶೇ.೬೬ ಜನ ಮಾತ್ರ. ಉಳಿದ ಶೇ.೩೪ರಷ್ಟು ಜನರ ಮಾತೃಭಾಷೆ ಉರ್ದು, ತೆಲುಗು, ತಮಿಳು, ಮರಾಠಿ, ಕೊಂಕಣಿ, ತುಳು, ಕೊಡವ, ಬ್ಯಾರಿ, ಮಲೆಯಾಳ, ಮಾರವಾರಿ, ಬಂಗಾಲಿ, ಹಿಂದಿ ಇತ್ಯಾದಿ ಮಾತೃಭಾಷೆಗೆ ಸೇರಿದವರು. ಇವರೆಲ್ಲರೂ ತಲತಲಾಂತರಗಳಿAದ ಕರ್ನಾಟಕದಲ್ಲಿ ಇರುವವರು. ಇವರು ಇಲ್ಲಿನ ‘ನೆಲೆ, ಜಲ, ಗಾಳಿ’ ಬಳಸಿಕೊಂಡರೂ ಇಲ್ಲಿಯೇ ಇದ್ದು ದುಡಿಯುತ್ತಾ ನಾಡಿನ ಸಂಪತ್ತನ್ನು, ಸೇವೆಯನ್ನು ಸಮೃದ್ಧಿಗೊಳಿಸಿರುವವರು, ತೆರಿಗೆಗಳನ್ನೂ ಕಟ್ಟಿ ಒಟ್ಟಾರೆ ಅಭಿವೃದ್ಧಿಯಲ್ಲಿ ಭಾಗವಹಿಸಿರುವವರು. ಇವರಲ್ಲಿ ಹೆಚ್ಚಿನವರಿಗೆ ಕನ್ನಡವು ದ್ವಿತೀಯ ಭಾಷೆ, ಕೆಲವರಂತೂ ಉತ್ತಮ ಸಾಹಿತಿಗಳು, ಸಂಶೋಧಕರು, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿರುವವರೂ ಇದ್ದಾರೆ. ಆದರೂ ಅನೇಕ ಐತಿಹಾಸಿಕ ಕಾರಣಕ್ಕಾಗಿ ಜನಸಾಮಾನ್ಯ ಅನ್ಯಭಾಷೀಯರಿಗೆ ಈಗಲೂ ಕನ್ನಡ ಭಾಷೆ ಬಾರದೇ ಇರುವ ಪರಿಸ್ಥಿತಿ ರಾಜ್ಯದಲ್ಲಿದೆ.<br>ಆದರೆ, ಸರಕಾರವು ರಾಜ್ಯ ಈ ಭಾಷಾ ಬಹುತ್ವವನ್ನು ಕಡೆಗಾಣಿಸುತ್ತದೆ. ಇಡೀ ರಾಜ್ಯದಲ್ಲಿ ಇರುವುದು ಕನ್ನಡವೊಂದೇ ಎನ್ನುವಂತೆ ವರ್ತಿಸುತ್ತದೆ. ಸರಕಾರದ ಇಂಥ ಅಂಧ ಧೋರಣೆಯಿಂದಾಗಿ ಕನ್ನಡ ರಕ್ಷಣಾ ವೇದಿಕೆ, ಸೇನೆ, ಪಡೆ ಇತ್ಯಾದಿಗಳು ಹುಟ್ಟಿಕೊಳ್ಳುತ್ತವೆ ಬಹುಸಂಖ್ಯಾತ ಭಾಷೆಯಾಗಿರುವ ಕನ್ನಡ ಅವಸಾನದ ಅಪಾಯದಲ್ಲಿದೆ ಎಂದು ಬಿಂಬಿಸಲಾಗುತ್ತದೆ. ಅದರ ರಕ್ಷಣೆಗಾಗಿ ಜಾರಿಗೆ ಬರುವ ಕೆಲವು ಆಚರಣೆಗಳು ಭಾಷಾ ಅಲ್ಪಸಂಖ್ಯಾತರನ್ನು ಇನ್ನಷ್ಟು ಧೃತಿಗೆಡಿಸುತ್ತವೆ.<br>ನಾವು ನವೆಂಬರ್ ಒಂದನೆ ತಾರೀಖು ಆಚರಿಸಬೇಕಾದ ಕರ್ನಾಟಕ ರಾಜ್ಯೋತ್ಸವ ‘ಕನ್ನಡ ರಾಜ್ಯೋತ್ಸವ’ವಾಗುತ್ತದೆ. ರಾಜ್ಯಗಳ ಪುನರ್ವಿಂಗಡನೆ ಭಾಷಾಧಾರಿತವಾಗಿ ಆಗಿದ್ದರೂ ಭಾರತದ ಯಾವುದೇ ರಾಜ್ಯದಲ್ಲಿ ಆಯಾ ರಾಜ್ಯದ ಭಾಷೆಯ ಹೆಸರಿನಲ್ಲಿ ರಾಜ್ಯೋತ್ಸವನ್ನು ಆಚರಿಸುವ ಪದ್ಧತಿ ಕಾಣುವುದಿಲ್ಲ. ಇದು ನಮ್ಮ ರಾಜ್ಯದ ಆವಿಷಾರ. ಈ ಅಂಧಾಭಿಮಾನ ಇನ್ನು ಮುಂದುವರೆದು ಕನ್ನಡ ಭಾಷೆಯು ‘ಕನ್ನಡಾಂಬೆ’, ‘ಕನ್ನಡ ಭುವನೇಶ್ವರಿ’ ಆಗುತ್ತದೆ. ಸಾಲದು ಅಂತ ಕನ್ನಡ ಒಂದು ದೇವಿಯ ರೂಪವನ್ನೂ ಪಡೆದು ಅದರ ಫೋಟೋ ಅಥವಾ ವಿಗ್ರಹವು ಪೂಜೆಗೊಳ್ಳುತ್ತದೆ. ಮತ್ತು ಎಲ್ಲಾ ಕನ್ನಡ ನಾಡಿನವರು (?) ಇದಕ್ಕೆ ಬದ್ಧತೆ ತೋರಬೇಕು ಎಂದು ನಿರೀಕ್ಷಿಸಲಾಗುತ್ತದೆ.<br>ಕರುನಾಡಿಗರೇ ಆದರೆ ಕೆಲವು ಧಾರ್ಮಿಕ ಸಮುದಾಯದವರಿಗೆ ಜನರನ್ನು ಬೆಸೆಯುವ, ಒಂದಾಗಿಸುವ, ಪ್ರಗತಿಯ ವಾಹಕವಾಗಿರುವ ರೀತಿಯಲ್ಲಿ ಕನ್ನಡವನ್ನು ಒಪ್ಪಿಕೊಳ್ಳುವುದರಲ್ಲಿ, ಅಪ್ಪಿಕೊಳ್ಳುವುದರಲ್ಲಿ, ಕಲಿಯುವುದರಲ್ಲಿ, ಕಲಿಸುವುದರಲ್ಲಿ ಯಾವುದೇ ಅಭ್ಯಂತರ ಇರುವುದಿಲ್ಲ. ಆದರೆ, ಅದರ ಮೂರ್ತೀಕರಣ, ಪೂಜೆ ಒಂದೆರಡು ಧರ್ಮದವರಿಗೆ ಸ್ವಧರ್ಮ ದ್ರೋಹವಾಗಿ ತೋರುತ್ತದೆ, ವಿಚಾರವಂತರಿಗೆ ಮೂಢಾಚರಣೆಯಾಗಿ ತೋರುತ್ತದೆ. ಆದರೂ ಅದನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಉಳಿದಿಲ್ಲದ ಪರಿಸ್ಥಿತಿ ಏರ್ಪಡುತ್ತದೆ. ಬಹುಸಂಖ್ಯಾತ ಧರ್ಮವು (ತಾನೇ ಏಕೈಕ ಎನ್ನುವ ರೀತಿಯಲ್ಲಿ) ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ದಬ್ಬಾಳಿಕೆ ಮಾಡುವ ಸಾಧನವಾಗಿಬಿಡುತ್ತದೆ. ಸರಕಾರವೂ ಇಂಥ ಅಂಧಾಭಿಮಾನಕ್ಕೆ ಕುಮ್ಮಕ್ಕು ಕೊಡುತ್ತದೆ.<br>ಕನ್ನಡವನ್ನು ರಾಜ್ಯದ ಏಕೈಕ ‘ಸಾರ್ವಭೌಮ’ ಭಾಷೆ ಎಂಬಂತೆ ಮೆರೆಸಲಾಗುತ್ತದೆ. ‘ಕನ್ನಡ ಸಂಸ್ಕೃತಿಯೊಂದೇ ರಾಜ್ಯದಲ್ಲಿ ಮಾನ್ಯ ಎಂಬAತೆ ಬಿಂಬಿಸಲಾಗುತ್ತದೆ. ಕನ್ನಡವನ್ನು ಅಧಿಕೃತ, ಜೀವನೋಪಯೋಗಿ, ಪ್ರಗತಿಯ ವಾಹಕವಾದ ಮಾಧ್ಯಮವನ್ನಾಗಿ ಬೆಳೆಸಬೇಕಾದವರು ಭಾಷೆಯೊಂದಿಗೆ ಅಂಟಿಕೊಂಡಿರುವ ಧರ್ಮ, ಸಂಸ್ಕೃತಿ, ಹಬ್ಬಗಳು, ಆಚರಣೆಗಳ ಗೋಜಿಗೆ ಹೋಗಬಾರದು. ಏಕೆಂದರೆ, ಕೊಡವ, ತುಳು, ಬ್ಯಾರಿ, ಉರ್ದು, ಕೊಂಕಣಿ, ಬಂಜಾರ (ಮರೆಯಬೇಡಿ, ಇವೆಲ್ಲವೂ ಕರ್ನಾಟಕದ ಜನಜೀವನದ ಅವಿಭಾಜ್ಯ ಅಂಗವಾಗಿರುವ ಭಾಷೆಗಳು) ಈ ಎಲ್ಲಾ ಭಾಷೆಗಳಿಗೂ ತಮ್ಮದೇ ಆದ ಧರ್ಮ, ಸಂಸ್ಕೃತಿ ಆಚರಣೆಗಳಿವೆ. ಕನ್ನಡದ ಜೊತೆ ಕನ್ನಡ ಸಂಸ್ಕೃತಿಯನ್ನು ಜೋಡಿಸಿದ ಕೂಡಲೇ ಇತರ ಭಾಷಿಗರಲ್ಲಿಯೂ ಅವರವರ ಧರ್ಮ, ಸಂಸ್ಕೃತಿ, ವೈಶಿಷ್ಟ್ಯ ಹಿರಿಮೆ ಎಲ್ಲವೂ ಉದ್ದೀಪನಗೊಳ್ಳುತ್ತವೆ. ಇದು ಕನ್ನಡವನ್ನು ಒಂದು ವ್ಯಾವಹಾರಿಕ ಭಾಷೆಯನ್ನಾಗಿ ಒಪ್ಪಿಕೊಳ್ಳುವಲ್ಲಿಯೂ ನಿರುತ್ತೇಜವನ್ನು ಹುಟ್ಟುಹಾಕುತ್ತದೆ. ಇದರ ಲಾಭವನ್ನು ಆಯಾ ಧರ್ಮದ ಮೂಲಭೂತವಾದಿಗಳು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಎಲ್ಲಿಯವರಿಗೆ ಎಂದರೆ ಅವರು ಕನ್ನಡವನ್ನು ‘ನಮ್ಮದಲ್ಲ’ ಎಂಬ ಭಾವನೆಯನ್ನು ಜನಸಾಮಾನ್ಯರಲ್ಲಿ ಬಿತ್ತುವಷ್ಟು ಪರಿಸ್ಥಿತಿ ಹದಗೆಡುತ್ತದೆ. ಇದು ಕನ್ನಡದ ಅನುಷ್ಟಾನದಲ್ಲಿ ಗುಪ್ತಗಾಮಿನಿಯಾಗಿ ಅಡ್ಡಿಬರುತ್ತಲೇ ಇರುತ್ತದೆ.<br>ಕನ್ನಡ ಅನುಷ್ಠಾನದ ಕುರಿತು ಪ್ರಾಧಿಕಾರ, ಪರಿಷತ್ತು ಇತ್ಯಾದಿಗಳಲ್ಲಿ ವರ್ಷವರ್ಷ ಸಮಾಲೋಚನೆ ಗೋಷ್ಠಿಗಳನ್ನು ನಡೆಸುತ್ತಾರಲ್ಲಾ, ಅಲ್ಲಿ ಎಂದಾದರೂ, ಉರ್ದು, ಕೊಡವ, ಕೊಂಕಣಿ, ತುಳು ಇತ್ಯಾದಿ ಕನ್ನಡೇತರ ಭಾಷೀಯರ ಪ್ರತಿನಿಧಿಗಳನ್ನು, ಸಂಘಸಂಸ್ಥೆಗಳನ್ನು ಸೇರಿಸಿಕೊಂಡಿದ್ದಿದ್ದೆಯೇ? ನನ್ನಂಥವವರನ್ನು ಕರೆದಾಗಲೂ ನಾನೂ ಉರ್ದು ಭಾಷೀಯರ ಬಗ್ಗೆ ಮತಾಡದೇ ಇತರರ ಹಾಗೆ ‘ಕನ್ನಡಾಂಬೆಗೆ ಜಯವಾಗಲೀ’, ‘ಸಿರಿಗನ್ನಡಂ ಗೆಲ್ಗೆ’ ಎಂದಾಗಲೇ ನನಗಲ್ಲಿ ಮಾರ್ಯದೆ, ಮನ್ನಣೆ, ಪ್ರಶಂಸೆ.<br><img loading="lazy" decoding="async" width="600" height="403" class="wp-image-43085" style="width: 600px;" src="https://peepalmedia.com/wp-content/uploads/2024/07/05-Chart.png" alt="" srcset="https://peepalmedia.com/wp-content/uploads/2024/07/05-Chart.png 887w, https://peepalmedia.com/wp-content/uploads/2024/07/05-Chart-300x202.png 300w, https://peepalmedia.com/wp-content/uploads/2024/07/05-Chart-768x516.png 768w, https://peepalmedia.com/wp-content/uploads/2024/07/05-Chart-150x101.png 150w, https://peepalmedia.com/wp-content/uploads/2024/07/05-Chart-696x468.png 696w" sizes="auto, (max-width: 600px) 100vw, 600px" /><br>ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯನಾಗಿದ್ದಾಗ, ಅಧಿಕೃತ ಭಾಷೆಯಾಗಿ ಕನ್ನಡವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕರ್ನಾಟಕದ ಕನ್ನಡೇತರ ಭಾಷಿಕ ಸಮುದಾಯದ ಒಳತೋಟಿಗಳೇನು ಎಂಬುದನ್ನು ತಿಳಿಯುವ ಸಲುವಾಗಿ ಪ್ರಾಧಿಕಾರದ ವತಿಯಿಂದ ಮಂಗಳೂರಿನಲ್ಲಿ ಶಾಂತಿ ಪ್ರಕಾಶನ ಮತ್ತು ಕರ್ನಾಟಕ ಕ್ರಿಶ್ಚಿಯನ್ ಎಜುಕೇಷನ್ ಸೊಸೈಟಿ ಸಹಯೋಗದಲ್ಲಿ, ‘ಬಹುಭಾಷಾಮತಿ ಕರ್ನಾಟಕ’ ಎಂಬ ಸಮಾವೇಶದ ಯೋಜನೆ ಹಾಕಿಕೊಂಡಿದ್ದೆ. ಪ್ರಾಧಿಕಾರದ ಸಹಮತಿಯೂ ಸಿಕ್ಕಿತ್ತು. ಅದರೆ ಅದೇನು ಕಾರಣಕ್ಕೋ ಮುಂದೆ ಪ್ರಾಧಿಕಾರ ಆ ಕುರಿತು ಆಸಕ್ತಿಯನ್ನು ಕಳೆದುಕೊಂಡಿತು. ಚಂಪಾ, ಬರಗೂರು ರಾಮಚಂದ್ರ, ಎಸ್.ಜಿ.ಸಿದ್ದರಾಮಯ್ಯ ಇವರುಗಳ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅವಧಿಗಳಲ್ಲಿಯೂ ನಾನು ಅವರಿಗೆ ಇದೇ ಮನವಿಯನ್ನು ಮಾಡಿದ್ದೆ. ಆದರೂ ಪ್ರಾಧಿಕಾರ ಇದರಲ್ಲಿ ಆಸಕ್ತಿ ತೋರಲಿಲ್ಲ.<br>ಕನ್ನಡೇತರರು ಕನ್ನಡ ಕಲಿಯಬೇಕು, ತಮ್ಮ ನೌಕರಿಗಳನ್ನು ಪಡೆದುಕೊಳ್ಳಬೇಕು, ಉಳಿಸಿಕೊಳ್ಳಬೇಕು ಎಂದರೆ ಇಲಾಖಾ ಕನ್ನಡ ಪರೀಕ್ಷೆಗಳನ್ನು ಪಾಸು ಮಾಡಬೇಕು. ಸರಕಾರವು ನಡೆಸುವ ಈ ಕನ್ನಡ ಪರೀಕ್ಷೆಗಳೂ ಅಷ್ಟೇ ಅವೈಜ್ಞಾನಿಕ. ಅವುಗಳನ್ನು ಹೆಚ್ಚು ತಾರ್ಕಿಕ, ಆಡಳಿತ ಕನ್ನಡದ ಬಳಕೆಗೆ ಪೂರಕವಾಗುವಂತೆ ಮಾರ್ಪಡಿಸಬೇಕು ಎಂದು ನಾನು ಹಲವಾರು ಬಾರಿ ಸಲಹೆ ನೀಡಿದರೂ ಕನ್ನಡದ ಅಭಿವೃದ್ಧಿ ಹರಿಕಾರರಿಗೆ ಇಂಥ ಕ್ಷುಲ್ಲಕ ಕೆಲಸಗಳಲ್ಲಿ ಆಸಕ್ತಿಯಿಲ್ಲ. ಕನ್ನಡೇತರರಿಗೆ ಕನ್ನಡ ಕಲಿಸುವ ತರಗತಿಗಳಿಗೆ ಧನಸಹಾಯ ನೀಡುವ ಒಂದು ಯೋಜನೆ ಇದ್ದರೂ ಕ.ಅ.ಪ್ರಾಧಿಕಾರ ವರ್ಷಗಳಿಂದ ಇಂಥ ತರಗತಿಗಳನ್ನೇ ನಡೆಸಿಲ್ಲ. ನಾನು ಸದಸ್ಯನಾಗಿದ್ದ ಅವಧಿಯಲ್ಲಿ ಕೆಲವು ಮುಸ್ಲಿಮ್ ಸಂಘಟನೆಗಳ ಸಹಯೋಗದೊಂದಿಗೆ ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರಿಗಾಗಿ ರಾಜ್ಯ ಮಟ್ಟದ ಒಂದು ಕಾರ್ಯಶಿಬಿರವನ್ನು ನಡೆಸುವ ಯೋಜನೆ ಹಾಕಿದ್ದೆ. ಇಡೀ ವೆಚ್ಚವನ್ನು ಸಂಸ್ಥೆಗಳೇ ನೋಡಿಕೊಳ್ಳುವವರಿದ್ದರು. ಪ್ರಾಧಿಕಾರದ ಮನ್ನಣೆಗಾಗಿ ಮಾತ್ರ ಅವರು ಲಿಖಿತದಲ್ಲಿ ಮನವಿಮಾಡಿದ್ದರು. ಇದೂ ಕೈಗೂಡಲಿಲ್ಲ. ನಾನು ಮತ್ತು ಆ ಸಂಸ್ಥೆಗಳು ಸೇರಿ ನಾವೇ ಆ ಕಾರ್ಯಶಿಬಿರವನ್ನು ನಡೆಸಿಕೊಂಡೆವು. ಹೀಗಿದೆ ಕನ್ನಡ ಅಭಿವೃದ್ಧಿಯ ಧೋರಣೆ, ಪರಿಸ್ಥಿತಿ.<br>ಹೊಸ ವಿಧೇಯಕದ ಹಳೇ ಹಾಡು<br>ಈಗ ಬಹು ಚರ್ಚಿತವಾಗಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ, ೨೦೨೨, ಮೇಲೆ ಹೇಳಿರುವ ಯಾವುದೇ ವಾಸ್ತವಗಳಿಂದ ಪಾಠ ಕಲಿತಹಾಗೆ ಕಾಣುವುದಿಲ್ಲ. ಕೋಟಿಗಟ್ಟಲೆ ರೂಪಾಯಿಗಳನ್ನು ಈಗಾಗಲೇ ವ್ಯಯಮಾಡಿದ್ದರೂ ನಿರೀಕ್ಷಿತ ಫಲಕೊಡದಿರುವ ಹಳೆಯ ಅಧಿನಿಯಮ, ಆದೇಶಗಳನ್ನೇ ರಿಪೇರಿ ಮಾಡಲು ನೋಡುತ್ತಿದೆ. ಬುನಾದಿಯೇ ಸರಿಯಿಲ್ಲದಿರುವಾಗ ಮೇಲಿನ ಕಟ್ಟಡಕ್ಕೆ ತೇಪೆ ಹಚ್ಚಲು ನೋಡುತ್ತಿದೆ. ಇದೂ ದಯನೀಯವಾಗಿ ಸೋಲುವುದು ನಿಶ್ಚಿತ. ಏಕೆಂದರೆ, ಇದೂ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಹೊಳಹನ್ನು ಹೊಂದಿಲ್ಲ.<br>ಇಲ್ಲಿ ಎದ್ದು ಕಾಣುವ ಘೋರ ವಿಪರ್ಯಾಸವೆಂದರೆ, ಅಧಿಕೃತ ಭಾಷೆಯನ್ನು ಜಾರಿಗೆ ತರುವುದು, ಕನ್ನಡವನ್ನು ಉದ್ಧಾರ ಮಾಡುವುದು ಸಾಧ್ಯವಾಗದೇ ಇರುವುದಕ್ಕೆ ‘ಕನ್ನಡೇತರರು’ ಎಂಬ ತೀರ್ಮಾನಕ್ಕೆ ಬರುವ ಈ ಸರಕಾರ ಈ ೨೦೨೨ರ ವಿಧೇಯಕರ ರಚನೆಯಲ್ಲಿ ಅವರ ಪರಿಸ್ಥಿತಿಯ ವಾಸ್ತವತೆಯನ್ನು ಅಧ್ಯಯನ ಮಾಡಿದೆಯೇ? ೧೨ರಂದು ನಡೆದ ಮಹಾಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಕನ್ನಡ ಪರ ‘ಮನಸ್ಸು’ಗಳು ಮತ್ತು ಕನ್ನಡ ಪರ ಸಂಘಟನೆಗಳು. ನಿಜವೆಂದರೆ ಇದರಲ್ಲಿ ಪ್ರಮುಖವಾಗಿ ಭಾಗವಹಿಸಬೇಕಾಗಿದ್ದವರು ಸೋ ಕಾಲ್ಡ್ ‘ಕನ್ನಡೇತರರು’ ಮತ್ತು ಅಂಥ ಭಾಷಿಕ/ಸಾಂಸ್ಕೃತಿಕ ಸಂಸ್ಥೆಗಳು/ವ್ಯಕ್ತಿಗಳು. ಅಂಥವರು ಈ ಸಭೆಯಲ್ಲಿ ಒಬ್ಬರೂ ಇರಲಿಲ್ಲ. ಅವರ ಪರವಾಗಿ ಇವರು ಕುಳಿತು ಅಸಹನೆ, ಅಸಡ್ಡೆಯ ಮನೋಭಾವದಿಂದಲೇ ನಿರ್ಧಾರಗಳನ್ನು ಕೈಕೊಳ್ಳುತ್ತಿದ್ದಾರೆ. ಇದು ಅತ್ಯಂತ ಅಸಾಂವಿಧಾನಿಕ ಮತ್ತು ಜನಸತ್ತಾತ್ಮಕ ವಿಧಾನಕ್ಕೆ ವಿರುದ್ಧವಾದದ್ದು, ಹೀಗಾಗಿ ಇದೂ ಯಶಸ್ವಿಯಾವುವಲ್ಲಿ ಸೋಲುತ್ತದೆ, ಮತ್ತೊಂದಷ್ಟು ಶತಕೋಟಿ ಹಣ ಈ ತಳವಿಲ್ಲದ ಪಾತ್ರೆಯಲ್ಲಿ ಸೋರಿಹೋಗುವುದು ನಿಶ್ಚಿತ.<br>(ಕೃಪೆ: “ಹೊಸತು” ಮಾಸಿಕ)</p>
]]></content:encoded>
					
		
		
			</item>
		<item>
		<title>ರಾಜ್ಯಗಳಿಂದಲೇ ದೇಶ</title>
		<link>https://peepalmedia.com/states-are-united-in-india-shrinivasa-karkala-artical/</link>
		
		<dc:creator><![CDATA[Shrinivas Karkala]]></dc:creator>
		<pubDate>Mon, 31 Oct 2022 11:49:34 +0000</pubDate>
				<category><![CDATA[ಅಂಕಣ]]></category>
		<category><![CDATA[ನಾಡು-ನುಡಿ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[Kannada Language]]></category>
		<category><![CDATA[Kannada Rajyotsava]]></category>
		<category><![CDATA[karnataka]]></category>
		<category><![CDATA[language]]></category>
		<category><![CDATA[news]]></category>
		<category><![CDATA[November]]></category>
		<category><![CDATA[november 1st]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[shrinivas-karkala]]></category>
		<category><![CDATA[state]]></category>
		<category><![CDATA[state politics]]></category>
		<category><![CDATA[writing]]></category>
		<guid isPermaLink="false">https://peepalmedia.com/?p=13470</guid>

					<description><![CDATA[ಭಾಷೆ ಎನ್ನುವುದು ಭಾವನಾತ್ಮಕವಾಗಿ ತುಂಬಾ ಸಂವೇದನಾಶೀಲ ಸಂಗತಿ. ಭಾಷಾ ಅಸ್ಮಿತೆಗಳ ಮೇಲಿನ ದಾಳಿಯು ಸಮುದಾಯಗಳ ಅಸ್ಮಿತೆಯ ಮೇಲಿನ ದಾಳಿಯಾಗಿ, ಅಂತಿಮವಾಗಿ ಪ್ರತ್ಯೇಕತೆಯ ಭಾವನೆಗೆ ಇಂಬು ಕೊಡುತ್ತದೆ. ಇದಾಗ ಬಾರದು ಎನ್ನುವ ಶ್ರೀನಿವಾಸ ಕಾರ್ಕಳ ಅವರ ಕನ್ನಡ ರಾಜ್ಯೋತ್ಸವ ವಿಶೇಷ ಲೇಖನ ಶ್ರೀನಿ ಕಾಲಂ ನಲ್ಲಿ. ಇಂದಿಗೆ ಸುಮಾರು ನೂರ ಎಂಟು ವರ್ಷಗಳ ಹಿಂದೆ, ಅಂದರೆ ಆಗಸ್ಟ್ 3, 1914 ರಂದು, ಪುಣೆಯ ಡೆಕ್ಕನ್ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಮ್ಮುಖದಲ್ಲಿ, ಧಾರವಾಡದಿಂದ ಬಂದ ಕನ್ನಡಿಗ ಆಲೂರು ಕೃಷ್ಣರಾಯರು ‘ಪಾಸ್ಟ್ [&#8230;]]]></description>
										<content:encoded><![CDATA[
<p></p>



<p><strong>ಭಾಷೆ ಎನ್ನುವುದು ಭಾವನಾತ್ಮಕವಾಗಿ ತುಂಬಾ ಸಂವೇದನಾಶೀಲ ಸಂಗತಿ. ಭಾಷಾ ಅಸ್ಮಿತೆಗಳ ಮೇಲಿನ ದಾಳಿಯು ಸಮುದಾಯಗಳ ಅಸ್ಮಿತೆಯ ಮೇಲಿನ ದಾಳಿಯಾಗಿ, ಅಂತಿಮವಾಗಿ ಪ್ರತ್ಯೇಕತೆಯ ಭಾವನೆಗೆ ಇಂಬು ಕೊಡುತ್ತದೆ. ಇದಾಗ ಬಾರದು ಎನ್ನುವ ಶ್ರೀನಿವಾಸ ಕಾರ್ಕಳ ಅವರ ಕನ್ನಡ ರಾಜ್ಯೋತ್ಸವ ವಿಶೇಷ ಲೇಖನ ಶ್ರೀನಿ ಕಾಲಂ ನಲ್ಲಿ.</strong></p>



<p>ಇಂದಿಗೆ ಸುಮಾರು ನೂರ ಎಂಟು ವರ್ಷಗಳ ಹಿಂದೆ, ಅಂದರೆ ಆಗಸ್ಟ್ 3, 1914 ರಂದು, ಪುಣೆಯ ಡೆಕ್ಕನ್ ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಮ್ಮುಖದಲ್ಲಿ, ಧಾರವಾಡದಿಂದ ಬಂದ ಕನ್ನಡಿಗ ಆಲೂರು ಕೃಷ್ಣರಾಯರು ‘ಪಾಸ್ಟ್ ಗ್ಲೋರಿ ಆಫ್ ಕರ್ನಾಟಕ’ (ಗತಕಾಲದ ಕರ್ನಾಟಕದ ವೈಭವ) ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ್ದರು. ಈ ಭಾಷಣ ಇಂಗ್ಲಿಷ್ ನಲ್ಲಿದ್ದುದರಿಂದ ಕೆಲ ಮಹಾರಾಷ್ಟ್ರೀಯರೂ ಉಪನ್ಯಾಸ ಆಲಿಸಲು ಅಲ್ಲಿ ಸೇರಿದ್ದರು.</p>



<p>ಚಾರಿತ್ರಿಕ ಸಂಗತಿಗಳನ್ನು ಪ್ರತ್ಯಕ್ಷ ಕಂಡವರಂತೆ, ಹೃದಯಸ್ಪರ್ಶಿಯಾಗಿ ಆಡಿದ ಆಲೂರರ ಮಾತುಗಳನ್ನು ಅಲ್ಲಿನ ಮರಾಠೀ ಪ್ರಾಧ್ಯಾಪಕರು ಮೆಚ್ಚಿ, ‘ಕರ್ನಾಟಕದ ಗತಕಾಲದ ವೈಭವ ರೋಮಾಂಚಕಾರಿಯಾಗಿದೆ. ಅದು ಭಾರತದ ಚರಿತ್ರಸಾಗರದ ಒಂದು ಮುಖ್ಯ ಅಂಗ, ಅದು ಮಹಾರಾಷ್ಟ್ರದ ಇತಿಹಾಸ ಕೂಡ ಆಗಿದೆ, ಆಲೂರ ಅವರ ಇಂದಿನ ವ್ಯಾಖ್ಯಾನ ನಮ್ಮಲ್ಲಿ ನವಸ್ಫೂರ್ತಿಯನ್ನು ಉಂಟು ಮಾಡಿದೆ’ ಎಂದು ಹೇಳಿದರು.</p>



<p><strong>‘ಕರ್ನಾಟಕವು ನಮ್ಮ ಹೃದಯದಲ್ಲಿ ಇದೆ’</strong></p>



<p>ಸಭೆ ಮುಗಿಯಿತು. ವೆಂಕಟರಾಯರು ಕನ್ನಡದಲ್ಲಿ ಕೆಲವು ಮಾತು ಆಡಬೇಕೆಂಬುದು ವಿದ್ಯಾರ್ಥಿಗಳ ಆಶಯವಾಗಿತ್ತು. ವೆಂಕಟರಾಯರು ಸಮ್ಮತಿಸಿ, ಹೀಗೆ ಮಾತನಾಡಿದರು- “ಕರ್ನಾಟಕವು ಎಲ್ಲಿದೆ, ಎಂದು ಕೇಳುವ ಜನ ನಮ್ಮಲ್ಲಿ ಸಾಕಷ್ಟಿದ್ದಾರೆ. ಇದಕ್ಕೆ ನನ್ನ ಉತ್ತರ: ನಿಮ್ಮ ಹೃದಯದಲ್ಲಿ. ಇಂದಿನ ಕರ್ನಾಟಕ ಭೌಗೋಲಿಕವಾಗಿ ಮುಂಬಯಿ ಪ್ರಾಂತದ ನಾಲ್ಕು ಜಿಲ್ಲೆಗಳಲ್ಲಿ ಮತ್ತು ಬೇರೆ ಬೇರೆ ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿರಬಹುದು. ಆದರೆ ಕೇವಲ ಭೂಪ್ರದೇಶ ಅಥವಾ ಜನಸಂಖ್ಯೆಯ ಮೊತ್ತದಿಂದ ಮಾತ್ರ ಕರ್ನಾಟಕವನ್ನು ನಾವು ಅರಿಯಲಾರೆವು. ಜನತೆಯ ಶಕ್ತಿ-ಸಾಹಸ, ಸಾಧನೆ-ಸಿದ್ಧಿಗಳಲ್ಲಿ ಒಂದು ದೇಶದ ಘನತೆ ಇದೆ, ಬೆಲೆ ಇದೆ. ಈ ದೃಷ್ಟಿಯಿಂದಲೇ ನಾನು ಹೇಳುವುದು ‘ಕರ್ನಾಟಕವು ನಮ್ಮ ಹೃದಯದಲ್ಲಿ ಇದೆ’ ಎಂದು; ನಾವು ಬೆಳೆದರೆ ಕರ್ನಾಟಕವು ಬೆಳೆಯುತ್ತದೆ ಎಂದು ಅರ್ಥ. ಇಂದು ಒಂದು ಘಟಕವಾಗಿ ನಮ್ಮ ಕಣ್ಣಿಗೆ ಕಾಣದಿದ್ದರೂ, ಕರ್ನಾಟಕವೂ ಒಂದು ಜೀವಂತ ರಾಷ್ಟ್ರ ಎಂಬ ನನ್ನ ಮಾತಿನಲ್ಲಿ ನೀವು ವಿಶ್ವಾಸವಿಡಿ.</p>



<p><strong>ಕರ್ನಾಟಕವೇ ಒಂದು ರಾಷ್ಟ್ರ..</strong></p>



<p>ಹೌದು- ಇದು ನನ್ನ ಉತ್ತರ. ರಾಷ್ಟ್ರೀಯತ್ವವು ಒಂದು ಕಲ್ಪನೆ. ಯಾವ ಕಲ್ಪನೆಯು ನಮ್ಮನ್ನು ಸಂಪೂರ್ಣವಾಗಿ ಆಕರ್ಷಿಸಿ, ದೇಶಸೇವೆಗೆ ಪ್ರೇರಕ ಶಕ್ತಿಯಾಗುತ್ತದೆಯೋ ಅದು ರಾಷ್ಟ್ರೀಯತ್ವ. ಈ ಕಲ್ಪನೆಯು ಇಂದು ಬಂಗಾಲ ಮತ್ತು ಮಹಾರಾಷ್ಟ್ರದಲ್ಲಿ ತೀವ್ರ ಸ್ವರೂಪದಲ್ಲಿದೆ. ಆ ಪ್ರಾಂತಗಳು ಎಚ್ಚೆತ್ತು ತಮ್ಮ ರಾಷ್ಟ್ರೀಯತೆಯ ಬಲವನ್ನು ಪ್ರಸ್ತಾಪಿಸಿವೆ. ಸ್ವಾತಂತ್ರ್ಯ ಸಮರದಲ್ಲಿ ಧೈರ್ಯದಿಂದ ಮುನ್ನಡಿ ಇಡುತ್ತಿವೆ. ಅದೇ ರೀತಿಯಲ್ಲಿ ಕರ್ನಾಟಕವು ಎಚ್ಚರಾಗಬೇಕು. ತಾನು ಶಕ್ತಿವಂತವಾಗಿ ಬೆಳೆದು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಕಾಣಿಕೆಯನ್ನು ಸಲ್ಲಿಸುವಂತಾದಾಗ ಮಾತ್ರ ಕರ್ನಾಟಕದ ರಾಷ್ಟ್ರೀಯತ್ವ ಆವಾಹನವಾಗುತ್ತದೆ.</p>



<p>ಚರಿತ್ರೆಯ ಅಭ್ಯಾಸ ನಮ್ಮಲ್ಲಿ ಅಭಿಮಾನ ಹುಟ್ಟಿಸುತ್ತದೆ. ಅಭಿಮಾನವೆಂದರೆ ಸಾತ್ವಿಕ ಅಹಂಕಾರ. ‘ನಾನು ನನ್ನದು’ ಎಂಬ ಭಾವ ಇಲ್ಲದ ಬದುಕು ಬದುಕಲ್ಲ. ವ್ಯಕ್ತಿ, ಸಂಸಾರ, ಸಮಾಜ – ಇವುಗಳ ಬಗ್ಗೆ ಈ ಭಾವನೆ ಬೆಳೆದು ವಿಶಾಲವಾಗುತ್ತ ಹೋಗುತ್ತದೆ. ಈ ವಿಕಾಸವು ವ್ಯಕ್ತಿಯ ಸಂಸ್ಕಾರವನ್ನವಲಂಬಿಸಿರುತ್ತದೆ. ‘ನಮ್ಮದೀ ನಮ್ಮದೀ ಕನ್ನಡನಾಡು’ ಎಂಬ ಭಾವ ಕರ್ನಾಟಕತ್ವವನ್ನು ಸೂಚಿಸಿದರೆ, ‘ನಮ್ಮದೀ ನಮ್ಮದೀ ಭರತ ಭೂಮಿ’ ಎಂಬ ಭಾವ ರಾಷ್ಟ್ರೀಯತ್ವವನ್ನು ವ್ಯಕ್ತಪಡಿಸುತ್ತದೆ. ಅವೆರಡರಲ್ಲಿ, ನನ್ನ ದೃಷ್ಟಿಯಲ್ಲಿ ಯಾವ ಅಂತರವೂ ಇಲ್ಲ.</p>



<p>ಕರ್ನಾಟಕತ್ವವನ್ನು ಪ್ರಾದೇಶಿಕ ರಾಷ್ಟ್ರೀಯತೆಯೆಂದು ಕರೆಯಬಹುದು. ಅದು ರಾಜಕೀಯವೂ ಅಲ್ಲ, ಶುದ್ಧ ಧಾರ್ಮಿಕವೂ ಅಲ್ಲ. ಅದು ಸಂಸ್ಕೃತಿ ನಿಷ್ಠವಾದುದು. ಭಾಷೆ ಅದರ ಆಧಾರ. ಭಾರತದ ಸಮಸ್ತ ಪ್ರಾದೇಶಿಕ ಸಂಸ್ಕೃತಿಗಳ ಒಟ್ಟಂದವೇ ಭಾರತದ ರಾಷ್ಟ್ರೀಯತೆ ಇದನ್ನು ಗ್ರಹಿಸಲು ನಮಗೆ ವಿಶೇಷ ಸಾಧನೆ ಬೇಕು.</p>



<p>ಕರ್ನಾಟಕತ್ವದ ಅಭಿಮಾನವಿಲ್ಲದೆ ನಾವು ರಾಷ್ಟ್ರಕಾರ್ಯ ಮಾಡಲಾರೆವೆ? – ಇನ್ನೊಂದು ಪ್ರಶ್ನೆ. ನನ್ನ ದೃಷ್ಟಿಯಲ್ಲಿ, ಅದು ಸಾಧ್ಯವಿಲ್ಲ. ಮಾತ್ರವಲ್ಲ, ಕರ್ನಾಟಕವನ್ನು ಅಲಕ್ಷಿಸುವವರು ಭಾರತದ ರಾಷ್ಟ್ರೀಯತೆಯನ್ನು ಅರ್ಥ ಮಾಡಿಕೊಳ್ಳಲಾರರು ಎಂಬುದು ನನ್ನ ಅಭಿಪ್ರಾಯ. ಅಭಿಮಾನದಿಂದ ಕಾರ್ಯಪ್ರೇರಣೆ. ಕರ್ನಾಟಕತ್ವದ ಅಭಿಮಾನ ಎಂದರೆ ಕರ್ನಾಟಕದ ಉನ್ನತಿಗಾಗಿ ಶ್ರಮಿಸುವ ಹಂಬಲ. ದೇಶಕಾರ್ಯವು ಸುತ್ತಲಿನ ಜನತೆಯೊಂದಿಗೆ ಹೆಣೆದುಕೊಂಡಿರುತ್ತದೆ &#8211; ಇವು ಆಲೂರು ಅವರ ಮಾತುಗಳು.</p>



<p></p>



<p></p>



<figure class="wp-block-image size-full"><img loading="lazy" decoding="async" width="705" height="628" src="https://peepalmedia.com/wp-content/uploads/2022/10/IMG-20221031-WA0015.jpg" alt="" class="wp-image-13471" srcset="https://peepalmedia.com/wp-content/uploads/2022/10/IMG-20221031-WA0015.jpg 705w, https://peepalmedia.com/wp-content/uploads/2022/10/IMG-20221031-WA0015-300x267.jpg 300w, https://peepalmedia.com/wp-content/uploads/2022/10/IMG-20221031-WA0015-150x134.jpg 150w, https://peepalmedia.com/wp-content/uploads/2022/10/IMG-20221031-WA0015-696x620.jpg 696w" sizes="auto, (max-width: 705px) 100vw, 705px" /></figure>



<p></p>



<p>ಕನ್ನಡ ಪ್ರದೇಶಗಳ ಏಕೀಕರಣಕ್ಕೆ ದುಡಿದ ಬಹಳ ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರಾದ ಮತ್ತು ಕನ್ನಡದ ಮೇಲಿನ ಪ್ರೀತಿ, ಬದ್ಧತೆ ಹಾಗೂ ಕನ್ನಡಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಕಾರಣಕ್ಕೆ ‘ಕನ್ನಡ ಕುಲ ಪುರೋಹಿತ’ ಎಂಬ ಹೆಸರು ಗಳಿಸಿದ ಆಲೂರು ವೆಂಕಟರಾಯರು ‘ಕರ್ನಾಟಕವೇ ಒಂದು ರಾಷ್ಟ್ರ, ಕರ್ನಾಟಕವೇ ಒಂದು ಪ್ರಾದೇಶಿಕ ರಾಷ್ಟ್ರೀಯತೆ, ಭಾರತದ ಸಮಸ್ತ ಪ್ರಾದೇಶಿಕ ಸಂಸ್ಕೃತಿಗಳ ಒಟ್ಟಂದವೇ ಭಾರತದ ರಾಷ್ಟ್ರೀಯತೆ’ ಎಂದು ಆಡಿದ ಮಾತುಗಳನ್ನು ಗಮನಿಸಿ. ಆಲೂರರು ನೂರ ಎಂಟು ವರ್ಷಗಳ ಹಿಂದೆ ಆಡಿದ ಮಾತುಗಳನ್ನು ಈಗ ನಾವು ಮತ್ತೆ ನೆನಪಿಸಿಕೊಳ್ಳುವಂತಹ ಮತ್ತು ನಮ್ಮನ್ನು ಆಳುವವರಿಗೆ ನೆನಪಿಸಿಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದೌರ್ಭಾಗ್ಯವೇ ಸರಿ.</p>



<p><strong>ಚೆಲುವ ಕನ್ನಡ ನಾಡು ಉದಯವಾಗಿದೆಯೇ?</strong></p>



<p>ಕನ್ನಡದ ಅನೇಕ ಕಟ್ಟಾಳುಗಳ ತ್ಯಾಗ ಬಲಿದಾನ, ಅವಿರತ ಹೋರಾಟದಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಹರಿದು ಹಂಚಾಗಿದ್ದ ಹೆಚ್ಚಿನ ಕನ್ನಡ ಪ್ರದೇಶಗಳು ಒಂದಾಗಿವೆ ನಿಜ. ಮಾತ್ರವಲ್ಲ, ಮೈಸೂರು ರಾಜ್ಯ ಎಂಬ ಹೆಸರು ಹೋಗಿ ಕರ್ನಾಟಕ ರಾಜ್ಯವಾಗಿದೆ, ಹುಯಿಲಗೋಳರ ‘ಉದಯವಾಗಲಿ ಚೆಲುವ ಕನ್ನಡ ನಾಡು’ ಎಂಬ ಹಾಡನ್ನು ‘ಉದಯವಾಯಿತು ಚೆಲುವ ನಾಡು’ ಎಂದು ಹಾಡಿದ್ದೂ ಇದೆ. ಆದರೆ ನಿಜವಾಗಿಯೂ ಚೆಲುವ ಕನ್ನಡ ನಾಡು ಉದಯವಾಗಿದೆಯೇ? ಕನ್ನಡ ನಾಡಿನ ಆತ್ಮ ಮತ್ತು ಅಸ್ಮಿತೆಯಾದ ಕನ್ನಡ ಸುರಕ್ಷಿತವಾಗಿದೆಯೇ?</p>



<p>ಒಂದು ಉಪಖಂಡದಂತಹ ದೇಶವಾದ ಭಾರತದ ಬುನಾದಿಯೇ ಬಹುತ್ವ. ವೈವಿಧ್ಯವೇ ಭಾರತದ ವೈಶಿಷ್ಟ್ಯ. ಇಲ್ಲಿರುವುದು ಅನೇಕತೆಯಲ್ಲಿ ಏಕತೆಯಲ್ಲ; ಅನೇಕತೆಯ ಮೂಲಕ ಏಕತೆ. ಇಲ್ಲಿ ಅನೇಕ ಮತಧರ್ಮ, ಸಂಸ್ಕೃತಿಗಳಿವೆ. ಇಲ್ಲಿರುವಷ್ಟು ಭಾಷೆಯಾದರೋ ಜಗತ್ತಿನ ಎಲ್ಲಿಯೂ ಕಾಣಸಿಗದು. ಭಾರತದಲ್ಲಿ 19,569 ಭಾಷೆಗಳಿವೆ. ಇದರಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನರು ಮಾತನಾಡುವ ಭಾಷೆಗಳ ಸಂಖ್ಯೆಯೇ 40. ಕರ್ನಾಟಕ ರಾಜ್ಯವೊಂದರಲ್ಲಿಯೇ 62 ಭಾಷೆಗಳಿವೆ!<br></p>



<figure class="wp-block-image size-full"><img loading="lazy" decoding="async" width="900" height="673" src="https://peepalmedia.com/wp-content/uploads/2022/10/happy-kannada-rajyotsava-day-2017-best-quotes-sms-whatsapp-messages-status-greetings-images.jpg" alt="" class="wp-image-13478" srcset="https://peepalmedia.com/wp-content/uploads/2022/10/happy-kannada-rajyotsava-day-2017-best-quotes-sms-whatsapp-messages-status-greetings-images.jpg 900w, https://peepalmedia.com/wp-content/uploads/2022/10/happy-kannada-rajyotsava-day-2017-best-quotes-sms-whatsapp-messages-status-greetings-images-300x224.jpg 300w, https://peepalmedia.com/wp-content/uploads/2022/10/happy-kannada-rajyotsava-day-2017-best-quotes-sms-whatsapp-messages-status-greetings-images-768x574.jpg 768w, https://peepalmedia.com/wp-content/uploads/2022/10/happy-kannada-rajyotsava-day-2017-best-quotes-sms-whatsapp-messages-status-greetings-images-150x112.jpg 150w, https://peepalmedia.com/wp-content/uploads/2022/10/happy-kannada-rajyotsava-day-2017-best-quotes-sms-whatsapp-messages-status-greetings-images-696x520.jpg 696w" sizes="auto, (max-width: 900px) 100vw, 900px" /></figure>



<p>ಒಂದು ರಾಷ್ಟ್ರವಾಗಿ ಭಾರತ ಹೇಗಿರಬೇಕು, ಅದರ ಸಂವಿಧಾನ ಹೇಗಿರಬೇಕು ಎಂಬುದನ್ನು ಪರಿಕಲ್ಪಿಸಿದ ನಮ್ಮ ಹಿರಿಯರಿಗೆ ಭಾರತದ ಬಹುತ್ವ ಸ್ವರೂಪ ಮತ್ತು ಅದರ ಧರ್ಮನಿರಪೇಕ್ಷತೆಯ ಅನಿವಾರ್ಯತೆಯ ಬಗ್ಗೆ ಸ್ಪಷ್ಟತೆ ಇತ್ತು. ಇದು ಎಲ್ಲರ ಭಾರತ ಎಂಬ ಅರಿವಿತ್ತು. ಹಾಗಾಗಿಯೇ ಭಾರತ ಸಂವಿಧಾನ ಗ್ರಂಥದಲ್ಲಿ ಅವರು ‘ವಿ ದ ಪೀಪಲ್ ಆಫ್ ಹಿಂದೂಸ್ ಅಥವಾ ಮುಸ್ಲಿಂಸ್’ ಎಂದೆಲ್ಲ ಹೇಳದೆ, ‘ವಿ ದ ಪೀಪಲ್ ಆಫ್ ಇಂಡಿಯಾ’ ಎಂದರು. ಭಾರತವನ್ನು ರಾಷ್ಟ್ರ ಎಂದು ಕರೆಯದೆ ‘ಯೂನಿಯನ್ ಆಫ್ ಸ್ಟೇಟ್ಸ್’, (ರಾಜ್ಯಗಳ ಒಕ್ಕೂಟ) ಎಂದು ಕರೆದರು. ಅದಕ್ಕೆ ಅನುಗುಣವಾಗಿ ರಾಜ್ಯಗಳಿಗೆ ಮಾನ್ಯತೆ ನೀಡಲಾಯಿತು; ಅನೇಕ ಅಧಿಕಾರಗಳೊಂದಿಗೆ ಒಂದು ರೀತಿಯ ಸ್ವಾಯತ್ತೆಯನ್ನು ನೀಡಲಾಯಿತು. ಅವರು ಯಾವ ಭಾಷೆಯನ್ನೂ ರಾಷ್ಟ್ರಭಾಷೆ ಎಂದು ಘೋಷಿಸಲಿಲ್ಲ. ದೇಶದ 22 ಮುಖ್ಯ ಭಾಷೆಗಳನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಿದರು.</p>



<p>ಆರಂಭದಲ್ಲಿ ದೇಶದ ಆಡಳಿತದ ಚುಕ್ಕಾಣಿ ಹಿಡಿದ ಪಂಡಿತ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಎಲ್ಲರೂ ದೇಶದ ಒಕ್ಕೂಟ ಸ್ವರೂಪಕ್ಕೆ ಮನ್ನಣೆ ನೀಡುತ್ತಾ, ಹೆಚ್ಚಿನ ಎಲ್ಲ ಭಾಷೆಗಳನ್ನು ಸಮಾನವಾಗಿ ಗೌರವಿಸುತ್ತ, ಸುಸೂತ್ರ ಆಡಳಿತ ನಡೆಸಿದರು. ದಕ್ಷಿಣದ ರಾಜ್ಯಗಳು, ಅದರಲ್ಲೂ ಮುಖ್ಯವಾಗಿ ತಮಿಳುನಾಡು ಹಿಂದಿ ಹೇರಿಕೆಯನ್ನು ಪ್ರಬಲವಾಗಿ ವಿರೋಧಿಸಿದಾಗ ಆ ವಿರೋಧವನ್ನು ಮಾನ್ಯ ಮಾಡಿ ಸಂಘರ್ಷ ರಹಿತವಾಗಿ ಆಡಳಿತ ನಡೆಸಿದರು.</p>



<p><strong>ಒಕ್ಕೂಟ ವ್ಯವಸ್ಥೆಯ ಮೇಲೆ ದಾಳಿ…</strong></p>



<p>2014ನೇ ಇಸವಿಯಿಂದ ದೇಶದ ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರದಲ್ಲಿರುವ ಸರಕಾರದಿಂದ ನಡೆಯುವ ದಾಳಿಯ ತೀವ್ರತೆ ಹೆಚ್ಚಾಗಿದೆ. ಇದು ಬಹುಮುಖ್ಯವಾಗಿ ಎರಡು ರೀತಿಯಲ್ಲಿ ನಡೆಯುತ್ತಿದೆ. ಸಂವಿಧಾನದ ಪ್ರಕಾರ ಇಲ್ಲಿನ ಕೆಲವು ಅಧಿಕಾರಗಳು ಕೇಂದ್ರದ ಬಳಿಯೂ, ಇನ್ನು ಕೆಲವು ಅಧಿಕಾರಗಳು ರಾಜ್ಯಗಳ ಪಟ್ಟಿಯಲ್ಲಿ ಬಂದರೆ, ಮತ್ತೆ ಕೆಲವು ಅಧಿಕಾರಗಳು ಜಂಟಿ ಪಟ್ಟಿಯಲ್ಲಿ ಬರುತ್ತದೆ. ಆದರೆ ಈಗೀಗ ಹಣಕಾಸು, ಕೃಷಿ, ಶಿಕ್ಷಣ, ಪೊಲೀಸ್ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಕೇಂದ್ರ ಕೈಯಾಡಿಸುತ್ತಾ ರಾಜ್ಯಗಳಿಗೆ ಬಹುತೇಕ ಯಾವ ಅಧಿಕಾರವೂ ಇಲ್ಲದಂತೆ ಮಾಡಲಾಗುತ್ತಿದೆ. ತೆರಿಗೆ ವಿಧಿಸುವ ಅಧಿಕಾರವೆಲ್ಲವೂ ಒಕ್ಕೂಟ ಸರಕಾರದ ಬಳಿ ಇರುವುದರಿಂದ ಹಣಕಾಸಿಗಾಗಿ ರಾಜ್ಯಗಳು ಅದರ ಮುಂದೆ ಕೈಚಾಚಿ ನಿಲ್ಲುವಂತಾಗಿದೆ.</p>



<p><strong>ಭಾಷೆಗಳ ಮೇಲೆ ದಾಳಿ..</strong></p>



<p>ಇನ್ನೊಂದೆಡೆ, ದೇಶದ ಬಹುತ್ವವನ್ನು ನಾಶಪಡಿಸುವ ಏಕರೂಪೀಕರಣ ಕಾರ್ಯತಂತ್ರದ ಭಾಗವಾಗಿ ಭಾಷೆಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಇಡೀ ದೇಶದ ಮೇಲೆ ಹಿಂದಿಯನ್ನು ಹೇರಲಾಗುತ್ತಿದೆ. ಬ್ಯಾಂಕ್, ಅಂಚೆ ಕಚೇರಿ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ರಕ್ಷಣಾ ಇಲಾಖೆ.. ಹೀಗೆ ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಎಲ್ಲ ಕಡೆಯೂ ಹಿಂದಿಯು ವ್ಯಾಪಕವಾಗಿ ಬೇರು ಬಿಟ್ಟಿದೆ. 2015 ರಿಂದ ಕೇಂದ್ರ ಸರಕಾರ ಜಾರಿಗೆ ತಂದ ಎಲ್ಲ ಯೋಜನೆಗಳ ಹೆಸರು ಹಿಂದಿಯಲ್ಲಿ ಇವೆ. ಸಂಸತ್ ಕಲಾಪ, ಮಂತ್ರಿಗಳ ಭಾಷಣ. ಅಧಿಕಾರಿಗಳ ಪತ್ರಿಕಾಗೋಷ್ಠಿ ಎಲ್ಲವೂ ಹಿಂದಿಯಲ್ಲಿ. ಹಿಂದಿ ಅನುಷ್ಠಾನಕ್ಕೆ ಕೋಟಿ ಕೋಟಿ ವ್ಯಯಿಸಲಾಗುತ್ತಿದೆ. ಹಿಂದಿ ವೈಭವೀಕರಣದ ನಡುವೆ ಇತರ ಭಾಷೆಗಳಿಗೆ ಪ್ರೋತ್ಸಾಹ ಇಲ್ಲವಾಗಿ ಈವತ್ತು ನಮ್ಮ ದೇಶದಲ್ಲಿ ಸುಮಾರು ಮೂರೂವರೆ ಕೋಟಿ ಜನಗಳ ತಾಯಿ ನುಡಿಗಳು ಪತನಮುಖಿಯಾಗಿವೆ.</p>



<p><strong>ಕನ್ನಡ ಭಾಷೆಯ ದುಸ್ಥಿತಿ…</strong></p>



<p>ಒಂದೆಡೆಯಲ್ಲಿ ಜಾಗತಿಕ ಭಾಷೆ ಇಂಗ್ಲಿಷ್, ಇನ್ನೊಂದೆಡೆಯಲ್ಲಿ ಹಿಂದಿ, ಇವುಗಳ ದಾಳಿಯಿಂದಾಗಿ ಕನ್ನಡದ ಪರಿಸ್ಥಿತಿ ಹೇಗಿದೆ? ಕರ್ನಾಟಕದ ಒಟ್ಟು ಜನಸಂಖ್ಯೆ 6,10,95,297 ಆಗಿದ್ದು, ಇದರಲ್ಲಿ 4,37,06,512 ಮಂದಿ ತಮ್ಮ ಮಾತೃಭಾಷೆಯನ್ನು ಕನ್ನಡವೆಂದು ಅಂಗೀಕರಿಸಿಕೊಂಡಿದ್ದಾರೆ. ಇದು ಒಟ್ಟು ಭಾರತೀಯ ಭಾಷೆಗಳ ಶೇಕಡಾ 3.61 ಆಗಿದ್ದು ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಉಳಿದಂತೆ, ಬಂಗಾಳಿ (ಶೇಕಡಾ 8.3), ಮರಾಠಿ (ಶೇಕಡಾ 6.86), ತೆಲುಗು (ಶೇಕಡಾ 6.70), ತಮಿಳು (ಶೇಕಡಾ 5.70), ಗುಜರಾತಿ (ಶೇಕಡಾ 4.58) ಮತ್ತು ಉರ್ದು (ಶೇಕಡಾ 4.19) ಭಾಷೆಗಳು ಸಂಖ್ಯೆಯ ದೃಷ್ಟಿಯಿಂದ ಕನ್ನಡಕ್ಕಿಂತ ಮೇಲೆ ಇವೆ. ಹಿಂದಿ ಭಾಷೆಯು ಶೇಕಡಾ 56 ರ ಬೆಳವಣಿಗೆ ತೋರಿಸುತ್ತಿರುವಾಗ ಈ ಭಾಷೆಗಳು ಕಡಿಮೆ ಬೆಳವಣಿಗೆ ತೋರಿಸುತ್ತಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ.</p>



<p>ಯೂನೆಸ್ಕೋವು ಸಿದ್ಧಪಡಿಸಿದ ‘ಭಾಷೆಗಳ ಜಾಗತಿಕ ಭೂಪಟ’ವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ ಭಾಷೆಗಳೆಂದೂ, ಅದರಲ್ಲಿ 101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ, 71 ಭಾಷೆಗಳನ್ನು ಎಲ್ಲ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದೂ ಗುರುತಿಸಿದೆ. ದೇಶದ ಭಾಷೆಗಳಿಗೆ ಸಂಬಂಧಿಸಿದಂತೆ ಒಕ್ಕೂಟ ಸರಕಾರದ ತಾರತಮ್ಯ ನೀತಿಯಿಂದ ಮತ್ತು ಭಾರತಕ್ಕೊಂದು ಸ್ಪಷ್ಟ ಭಾಷಾ ನೀತಿಯೇ ಇಲ್ಲದ ಕಾರಣ ದೇಶದ ಅಮೂಲ್ಯ ಸಂಪತ್ತಾದ ನೂರಾರು ಭಾಷೆಗಳು ಅಪಾಯದಲ್ಲಿವೆ.</p>



<figure class="wp-block-image size-full"><img loading="lazy" decoding="async" width="900" height="527" src="https://peepalmedia.com/wp-content/uploads/2022/10/happy-kannada-rajyotsava-day-2017-best-quotes-sms-whatsapp-messages-status-greetings-images-1.jpg" alt="" class="wp-image-13477" srcset="https://peepalmedia.com/wp-content/uploads/2022/10/happy-kannada-rajyotsava-day-2017-best-quotes-sms-whatsapp-messages-status-greetings-images-1.jpg 900w, https://peepalmedia.com/wp-content/uploads/2022/10/happy-kannada-rajyotsava-day-2017-best-quotes-sms-whatsapp-messages-status-greetings-images-1-300x176.jpg 300w, https://peepalmedia.com/wp-content/uploads/2022/10/happy-kannada-rajyotsava-day-2017-best-quotes-sms-whatsapp-messages-status-greetings-images-1-768x450.jpg 768w, https://peepalmedia.com/wp-content/uploads/2022/10/happy-kannada-rajyotsava-day-2017-best-quotes-sms-whatsapp-messages-status-greetings-images-1-150x88.jpg 150w, https://peepalmedia.com/wp-content/uploads/2022/10/happy-kannada-rajyotsava-day-2017-best-quotes-sms-whatsapp-messages-status-greetings-images-1-696x408.jpg 696w" sizes="auto, (max-width: 900px) 100vw, 900px" /></figure>



<p><strong>ಅಭಿಮಾನ ಹರಿಯ ಬೇಕಾದುದೇ ಹೀಗೆ.</strong>.</p>



<p>ದೇಶದಲ್ಲಿ 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳಿವೆ. ಇವು ದೇಶ ಎಂಬ ಸೌಧದ ಆಧಾರ ಕಂಬಗಳಿದ್ದಂತೆ. ಯಾವ ಒಂದು ಕಂಬ ದುರ್ಬಲಗೊಂಡರೂ ಸೌಧ ಕುಸಿದು ಬೀಳುತ್ತದೆ. ಹಾಗಾಗಿ ಆ ಎಲ್ಲ ಕಂಬಗಳು ಬಲಿಷ್ಠ ಇರುವಂತೆ ನೋಡಿಕೊಳ್ಳುವುದು ಬಹಳ ಅಗತ್ಯ. ಆಲೂರು ಕೃಷ್ಣರಾಯರು ಅಂದಂತೆ “ಅಭಿಮಾನವೆಂದರೆ ಸಾತ್ವಿಕ ಅಹಂಕಾರ. ‘ನಾನು ನನ್ನದು’ ಎಂಬ ಭಾವ ಇಲ್ಲದ ಬದುಕು, ಬದುಕಲ್ಲ. ವ್ಯಕ್ತಿ, ಸಂಸಾರ, ಸಮಾಜ – ಇವುಗಳ ಬಗ್ಗೆ ಈ ಭಾವನೆyou ಬೆಳೆದು ವಿಶಾಲವಾಗುತ್ತ ಹೋಗುತ್ತದೆ”. ನಮ್ಮನ್ನು ಪ್ರೀತಿಸದೆ ನಾವು ಬೇರೆಯವರನ್ನು ಪ್ರೀತಿಸಲಾರೆವು. ಸಹಜವಾಗಿಯೇ ನಮಗೆ ನಮ್ಮ ಮನೆ ಮೊದಲು, ಆಮೇಲೆ ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶ ಹೀಗೆ ನಮ್ಮ ಅಭಿಮಾನ ಹರಿಯುವುದೇ ಹೀಗೆ.</p>



<p><strong>ಪ್ರಜ್ಞಾವಂತ ಪ್ರಜೆಗಳ ಜವಾಬ್ದಾರಿ…</strong></p>



<p>ಕನ್ನಡಿಗರಿಗೆ ಕರ್ನಾಟಕವೇ ಒಂದು ರಾಷ್ಟ್ರವಿದ್ದಂತೆ. ಕನ್ನಡವೇ ರಾಷ್ಟ್ರಭಾಷೆ ಇದ್ದಂತೆ. ಇಂತಹ ಅಭಿಮಾನದ ಭಾವನೆಯಿಂದ ದೇಶದ ಏಕತೆಗೇನೂ ತೊಂದರೆ ಇಲ್ಲ. ತದ್ವಿರುದ್ಧವಾಗಿ ಒಂದು ದೇಶ, ಒಂದು ಧರ್ಮ, ಒಂದು ಸಂಸ್ಕೃತಿ, ಒಂದು ಭಾಷೆ ಎಂದು ದೇಶಭಕ್ತಿ ಮತ್ತು ರಾಷ್ಟ್ರವಾದದ ಹೆಸರಿನಲ್ಲಿ ಏಕರೂಪೀಕರಣಕ್ಕೆ ಹೊರಟರೆ, ಅದು ಭಾರತ ಎಂಬ ಪರಿಕಲ್ಪನೆಗೆ ಹಾನಿ ಮಾಡುವುದಲ್ಲದೆ, ಪ್ರಾದೇಶಿಕ ಅಸಮಾಧಾನಕ್ಕೆ ಕಾರಣವಾಗುತ್ತದೆ. ಭಾಷೆ ಎನ್ನುವುದು ಭಾವನಾತ್ಮಕವಾಗಿ ತುಂಬಾ ಸಂವೇದನಾಶೀಲ ಸಂಗತಿ. ಭಾಷಾ ಅಸ್ಮಿತೆಗಳ ಮೇಲಿನ ದಾಳಿಯು ಸಮುದಾಯಗಳ ಅಸ್ಮಿತೆಯ ಮೇಲಿನ ದಾಳಿಯಾಗಿ, ಅಂತಿಮವಾಗಿ ಪ್ರತ್ಯೇಕತೆಯ ಭಾವನೆಗೆ ಇಂಬು ಕೊಡುತ್ತದೆ. ಇದಾಗಬಾರದು; ಇದಾಗದಂತೆ ನೋಡಿಕೊಳ್ಳುವುದು ನಮ್ಮನ್ನು ಆಳುವವರ ಜವಾಬ್ದಾರಿ. ನಮ್ಮನ್ನು ಆಳುವವರು ಈ ಜವಾಬ್ದಾರಿಯಿಂದ ವಿಮುಖರಾಗದಂತೆ ನೋಡಿಕೊಳ್ಳುವುದು ಪ್ರಜ್ಞಾವಂತ ಪ್ರಜೆಗಳಾದ ನಮ್ಮ ಜವಾಬ್ದಾರಿ.</p>



<p></p>



<figure class="wp-block-image size-full is-resized"><img loading="lazy" decoding="async" src="https://peepalmedia.com/wp-content/uploads/2022/10/shrinivas-karkala.jpeg" alt="" class="wp-image-8754" width="156" height="145"/><figcaption>ಶ್ರೀನಿವಾಸ ಕಾರ್ಕಳ<br>ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.</figcaption></figure>



<p></p>
]]></content:encoded>
					
		
		
			</item>
		<item>
		<title>ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಕೋರಿ ಅರ್ಜಿ : ವಜಾಗೊಳಿಸಿದ ಸುಪ್ರೀಂ ಕೋರ್ಟ್‌  </title>
		<link>https://peepalmedia.com/supreme-court-rejects-pil-to-declare-sanskrit-as-national-language/</link>
		
		<dc:creator><![CDATA[Peepal Media]]></dc:creator>
		<pubDate>Fri, 02 Sep 2022 13:51:20 +0000</pubDate>
				<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[karnataka]]></category>
		<category><![CDATA[language]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[sanskrit]]></category>
		<category><![CDATA[supremecourt]]></category>
		<guid isPermaLink="false">https://peepalmedia.com/?p=3656</guid>

					<description><![CDATA[ನವದೆಹಲಿ: ಸಂಸ್ಕೃತವನ್ನು ರಾಷ್ಟ್ರ ಭಾಷೆಯಾಗಿ ಘೋಷಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ. ಪ್ರಕರಣದ ವಿಚಾರಣೆಯನ್ನು ಆಲಿಸಿದ ನ್ಯಾಯಾಧೀಶರಾದ&#160;ಎಂ ಅರ್‌ ಶಾ&#160;ಮತ್ತು&#160;ಕೃಷ್ಣ ಮುರಾರಿ&#160;ಅವರ ನೇತೃತ್ವದ ಪೀಠವು, ʼಈ ವಿಚಾರವನ್ನು ಪರಿಗಣಿಸಲು ಸಂಸತ್ತು ಸೂಕ್ತ ವೇದಿಕೆಯೇ ಹೊರತು ನ್ಯಾಯಾಲಯವಲ್ಲʼ ಎಂದು ಹೇಳಿತು. &#8220;ನಾವೇಕೆ ನೋಟಿಸ್‌ ನೀಡಬೇಕು ಅಥವಾ ಪ್ರಚಾರಕ್ಕಾಗಿ ಘೋಷಿಸಬೇಕು? ಇದನ್ನು ಚರ್ಚಿಸಲು ಸಂಸತ್ತು ಸೂಕ್ತವಾದ ವೇದಿಕೆ. ಇದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ಅವಶ್ಯಕತೆ ಇದೆ. ಇದು ನೀತಿನಿರೂಪಣೆಯ ವಿಷವಾಗಿದ್ದು ನಾವು ಅದನ್ನು [&#8230;]]]></description>
										<content:encoded><![CDATA[
<p class="has-medium-font-size"><strong>ನವದೆಹಲಿ:</strong> ಸಂಸ್ಕೃತವನ್ನು ರಾಷ್ಟ್ರ ಭಾಷೆಯಾಗಿ ಘೋಷಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.</p>



<p class="has-medium-font-size">ಪ್ರಕರಣದ ವಿಚಾರಣೆಯನ್ನು ಆಲಿಸಿದ ನ್ಯಾಯಾಧೀಶರಾದ&nbsp;<strong>ಎಂ ಅರ್‌ ಶಾ&nbsp;</strong>ಮತ್ತು&nbsp;<strong>ಕೃಷ್ಣ ಮುರಾರಿ&nbsp;</strong>ಅವರ ನೇತೃತ್ವದ ಪೀಠವು, ʼಈ ವಿಚಾರವನ್ನು ಪರಿಗಣಿಸಲು ಸಂಸತ್ತು ಸೂಕ್ತ ವೇದಿಕೆಯೇ ಹೊರತು ನ್ಯಾಯಾಲಯವಲ್ಲʼ ಎಂದು ಹೇಳಿತು.</p>



<p class="has-medium-font-size">&#8220;ನಾವೇಕೆ ನೋಟಿಸ್‌ ನೀಡಬೇಕು ಅಥವಾ ಪ್ರಚಾರಕ್ಕಾಗಿ ಘೋಷಿಸಬೇಕು? ಇದನ್ನು ಚರ್ಚಿಸಲು ಸಂಸತ್ತು ಸೂಕ್ತವಾದ ವೇದಿಕೆ. ಇದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ಅವಶ್ಯಕತೆ ಇದೆ. ಇದು ನೀತಿನಿರೂಪಣೆಯ ವಿಷವಾಗಿದ್ದು ನಾವು ಅದನ್ನು ಬದಲಿಸಲಾಗುವುದಿಲ್ಲ. ಹಾಗಾಗಿ ನಾವು ಈ ಮನವಿಯನ್ನು ತಿರಸ್ಕರಿಸಿತ್ತೇವೆ ಎಂದು ವಜಾಗೊಳಿಸಲಾಗಿದೆ. ಸೂಕ್ತ ಪ್ರಾಧಿಕಾರದ ಮುಂದೆ ಮನವಿ ನೀಡಲು ಅರ್ಜಿದಾರರು ಸ್ವತಂತ್ರರು” ಎಂದು ನ್ಯಾಯಾಲಯ ಹೇಳಿದೆ.</p>
]]></content:encoded>
					
		
		
			</item>
	</channel>
</rss>
