<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>LGBTQIA &#8211; Peepal Media</title>
	<atom:link href="https://peepalmedia.com/tag/lgbtqia/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 02 Nov 2023 08:37:20 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>LGBTQIA &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಸುಪ್ರೀಂ ಕೋರ್ಟ್‌ ತೀರ್ಪು ಸಮಲಿಂಗಿಗಳನ್ನು ಅಪ್ರಾಮಾಣಿಕವಾಗಿ ಬದುಕುವಂತೆ ಮಾಡುತ್ತದೆ: ಮರುಪರಿಶೀಲನಾ ಅರ್ಜಿ</title>
		<link>https://peepalmedia.com/same-sex-marriage-verdict-review-petition/</link>
		
		<dc:creator><![CDATA[Charan Aivarnad]]></dc:creator>
		<pubDate>Thu, 02 Nov 2023 08:33:38 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[gay]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[LGBTQ]]></category>
		<category><![CDATA[LGBTQIA]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[state politics]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[trending news]]></category>
		<category><![CDATA[viral news]]></category>
		<guid isPermaLink="false">https://peepalmedia.com/?p=31018</guid>

					<description><![CDATA[ಬೆಂಗಳೂರು,ಅಕ್ಟೋಬರ್.‌02: ಸಮಲೈಂಗಿಕ ವಿವಾಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಬಹುಮತದ ತೀರ್ಪು ಕ್ವೀಯರ್ ಸಮುದಾಯದ ಮೂಲಭೂತ ಹಕ್ಕುಗಳ &#8220;ಉದೇಶಪೂರ್ವಕ ಹತ್ತಿಕ್ಕುವಿಕೆ&#8221;ಯನ್ನು ತೋರಿಸುತ್ತದೆ ಎಂದು ಸುಪ್ರೀಂ ಕೋರ್ಟಿಇನ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಬುಧವಾರ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ. &#8220;ಬಹುಮತದ ತೀರ್ಪು ಪರಿಣಾಮಕಾರಿಯಾಗಿ ಕ್ವೀಯರ್ ಸಮುದಾಯದ ಯುವ ಭಾರತೀಯರನ್ನು ಒಂಟಿಗಳಾಗಿ (closet) ಉಳಿಯಲು ಮತ್ತು ಅವರು ನಿಜವಾದ ಕೌಟುಂಬಿಕ ಸಂತೋಷವನ್ನು ಬಯಸಿದರೂ, ಅಪ್ರಾಮಾಣಿಕ ಜೀವನವನ್ನು ನಡೆಸುವಂತೆ ಮಾಡುತ್ತದೆ&#8221; ಎಂದು ಪರಿಶೀಲನಾ ಅರ್ಜಿಯಲ್ಲಿ ತಿಳಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್.‌02:</strong> ಸಮಲೈಂಗಿಕ ವಿವಾಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಬಹುಮತದ ತೀರ್ಪು ಕ್ವೀಯರ್ ಸಮುದಾಯದ ಮೂಲಭೂತ ಹಕ್ಕುಗಳ &#8220;ಉದೇಶಪೂರ್ವಕ ಹತ್ತಿಕ್ಕುವಿಕೆ&#8221;ಯನ್ನು ತೋರಿಸುತ್ತದೆ ಎಂದು ಸುಪ್ರೀಂ ಕೋರ್ಟಿಇನ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಬುಧವಾರ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ.</p>



<p>&#8220;ಬಹುಮತದ ತೀರ್ಪು ಪರಿಣಾಮಕಾರಿಯಾಗಿ ಕ್ವೀಯರ್ ಸಮುದಾಯದ ಯುವ ಭಾರತೀಯರನ್ನು ಒಂಟಿಗಳಾಗಿ (closet) ಉಳಿಯಲು ಮತ್ತು ಅವರು ನಿಜವಾದ ಕೌಟುಂಬಿಕ ಸಂತೋಷವನ್ನು ಬಯಸಿದರೂ, ಅಪ್ರಾಮಾಣಿಕ ಜೀವನವನ್ನು ನಡೆಸುವಂತೆ ಮಾಡುತ್ತದೆ&#8221; ಎಂದು ಪರಿಶೀಲನಾ ಅರ್ಜಿಯಲ್ಲಿ ತಿಳಿಸಲಾಗಿದೆ.</p>



<p>ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ ಅವರ ನೇತೃತ್ವದ ಎಸ್.ಕೆ. ಕೌಲ್, ಎಸ್.ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿ.ಎಸ್. ನರಸಿಂಹ ಒಳಗೊಂಡ ಐವರು ನ್ಯಾಯಮೂರ್ತಿಗಳ ಪೀಠ &nbsp;ಅಕ್ಟೋಬರ್ 17ರಂದು ನೀಡಿದ ತೀರ್ಪಿನಲ್ಲಿ ಮದುವೆಯಾಗುವ ಹಕ್ಕು ಮೂಲಭೂತ ಹಕ್ಕಲ್ಲ ಮತ್ತು ಸಮಲೈಂಗಿಕ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವುದು ವಿಶೇಷ ವಿವಾಹ ಕಾಯಿದೆಯ (Special Marriage Act &#8211; SMA) &nbsp;ಅಧಿಕಾರ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿತ್ತು. ಸಮಲೈಂಗಿಕ ವಿವಾಹವನ್ನು ಅಂಗೀಕರಿಸುವ ವಿಶೇಷ ಹಕ್ಕು ಇರುವುದು ಸಂಸತ್ತಿಗೆ ಎಂದು ತಿಳಿಸಿತ್ತು.</p>



<p>3:2 ಅಭಿಪ್ರಾಯದ ಈ ತೀರ್ಪಿನಲ್ಲಿ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಕ್ವೀರ್ ಸಮುದಾಯದ ಹಕ್ಕನ್ನು ಕೂಡ ಪೀಠವು ನಿರಾಕರಿಸಿತ್ತು. ನ್ಯಾಯಮೂರ್ತಿಗಳಾದ ಭಟ್, ಕೊಹ್ಲಿ ಮತ್ತು ನರಸಿಂಹ ಅವರು ಈ ಅಭಿಪ್ರಾಯಕ್ಕೆ ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.</p>



<p>ಸುಪ್ರೀಂ ಕೋರ್ಟ್ ನಿಯಮಗಳ ಪ್ರಕಾರ, ಮೂಲ ತೀರ್ಪನ್ನು ನೀಡಿದ ಅದೇ ಪೀಠ ಚೇಂಬರ್‌ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಕೂಡ ಆಲಿಸಲಿದೆ. ನ್ಯಾಯಮೂರ್ತಿ ಭಟ್ ಅವರು ನಿವೃತ್ತರಾಗಿರುವ ಕಾರಣ ಸಿಜೆಐ ಪೀಠಕ್ಕೆ ಹೊಸ ಸದಸ್ಯರೊಬ್ಬರನ್ನು ನೇಮಿಸಬೇಕಾಗುತ್ತದೆ. ಒಂದು ವೇಳೆ ಹೊಸ ಸದಸ್ಯರು ಮರುಪರಿಶೀಲನಾ ಅರ್ಜಿಯನ್ನು ಆಲಿಸಲು ಒಪ್ಪಿಕೊಂಡರೆ, ಮುಂದೆ ಮುಕ್ತ ನ್ಯಾಯಾಲಯದಲ್ಲಿ ಈ ಅರ್ಜಿಯನ್ನು ತೆಗೆದುಕೊಳ್ಳಲಾಗುವುದು.</p>



<p>ಸಿಜೆಐ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಕೌಲ್ ಅವರು ಶಾಸನಬದ್ಧ ಕಾನೂನಾಗಿರುವ ಎಸ್‌ಎಂಎ ಅಡಿಯಲ್ಲಿ ಸಮಲೈಂಗಿಕ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನ್ಯಾಯಾಲಯಕ್ಕೆ ಏಕೆ ಅಧಿಕಾರ ನೀಡಿಲ್ಲ ಎಂಬುದರ ಕುರಿತು ವಿವರವಾದ ಅಭಿಪ್ರಾಯಗಳನ್ನು ಬರೆದಿದ್ದರೂ ಸಹ, ಮರುಪರಿಶೀಲನಾ ಅರ್ಜಿಯು ನ್ಯಾಯಮೂರ್ತಿ ಭಟ್ ಅವರ ಅಭಿಪ್ರಾಯವನ್ನು ವ್ಯಾಪಕವಾಗಿ ಉಲ್ಲೇಖಿಸುತ್ತದೆ.</p>



<p style="font-size:20px"><strong>ಹಕ್ಕುಗಳನ್ನು ಎತ್ತಿಹಿಡಿಯುವ ಕೆಲಸ ನ್ಯಾಯಾಲಯದ್ದು, ಸರ್ಕಾರದ್ದಲ್ಲ!</strong></p>



<p>ಕ್ವೀಯರ್ ಸಮುದಾಯದ ನಾಲ್ವರು ಸಲ್ಲಿಸಿರುವ ಈ ಅರ್ಜಿಯ ಪ್ರಕಾರ, ಬಹುಮತದ ತೀರ್ಪು ತಪ್ಪಾಗಿದೆ ಏಕೆಂದರೆ ತಾರತಮ್ಯ ಮಾಡುವ ಮೂಲಕ ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಒಪ್ಪಿಕೊಂಡರೂ, ತಾರತಮ್ಯವನ್ನು ನಿಲ್ಲಿಸುವಲ್ಲಿ ವಿಫಲವಾಗಿದೆ.</p>



<p>ಬಹುಮತದ ಅಭಿಪ್ರಾಯವು ಸಮಾನತೆ ಮತ್ತು ತಾರತಮ್ಯದ ವಿರುದ್ಧದ ಹಕ್ಕುಗಳನ್ನು ಮೂಲಭೂತ ಹಕ್ಕುಗಳೆಂದು ಹೇಳಿದ್ದರೂ ಸಹ, ತಾರತಮ್ಯವನ್ನು ತಡೆಯುವ ತಾರ್ಕಿಕ ಹೆಜ್ಜೆಯನ್ನು ತೆಗೆದುಕೊಳ್ಳಲು ವಿಫಲವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇದರ ಬದಲಾಗಿ ತಾರತಮ್ಯದ ಪರಿಶೀಲನೆ ನಡೆಸಿ, ಶಿಫಾರಸ್ಸುಗಳನ್ನು ಮಾಡಲು “ಪ್ರತಿವಾದಿಯನ್ನು (ಸರ್ಕಾರ)&#8221;ಗೆ ಹೇಳಲಾಗಿದೆ.</p>



<p>“ಇದು ಸ್ಪಷ್ಟವಾದ ದೋಷವಾಗಿದ್ದು, ಗೌರವಾನ್ವಿತ ನ್ಯಾಯಾಲಯ ಸಂವಿಧಾನ ತನಗೆ ವಹಿಸಿದ ಕರ್ತವ್ಯಗಳಿಂದ ಹಿಂದೆ ಸರಿದಿದೆ. ನಾಗರಿಕರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವ ಮೊದಲ ಕೆಲಸ ನ್ಯಾಯಾಲಯದ್ದೇ ಹೊರತು, ಸರ್ಕಾರವನ್ನಲ್ಲ,” ಎಂದು ಈ ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿದೆ.</p>



<p><strong>ಇದನ್ನೂ ಓದಿ: </strong><a href="https://peepalmedia.com/petition-in-supreme-court-abou-same-sex-marriage/" data-type="link" data-id="https://peepalmedia.com/petition-in-supreme-court-abou-same-sex-marriage/">ಸಲಿಂಗ ವಿವಾಹ | ಅಕ್ಟೋಬರ್ 17ರ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ</a></p>



<p>ಮರುಪರಿಶೀಲನಾ ಅರ್ಜಿಯಲ್ಲಿ ತೀರ್ಪಿನಲ್ಲಿ ʼಮದುವೆʼಯನ್ನು ಅರ್ಥೈಸುವಲ್ಲಿ ಆಗಿರುವ &#8220;ಸ್ವಯಂ-ವಿರೋಧಾಭಾಸʼವನ್ನೂ ಉಲ್ಲೇಖಿಸಲಾಗಿದೆ. ವಿಶೇಷ ವಿವಾಹ ಕಾಯ್ದೆ ಮದುವೆಗೆ ಕಾನೂನಾತ್ಮಕ ಸ್ಥಾನಮಾನವನ್ನು ನೀಡುತ್ತದೆ ಎಂದು ತೀರ್ಪು ಒಪ್ಪಿಕೊಂಡರೂ, ಅದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ನೀಡುತ್ತದೆ ಎಂದು ಅದು ಹೇಳಿದೆ.</p>



<p>ಅರ್ಜಿಯ ಪ್ರಕಾರ, ಮದುವೆಯ ನಿಯಮಗಳನ್ನು ನಿರ್ದೇಶಿಸುವುದು ಸ್ಟೇಟಿನದ್ದಾದರೂ, ಮದುವೆಯ ಸ್ಥಿತಿಯ ಬಗ್ಗೆ ಇನ್ನೂ ರಾಜ್ಯಗಳು ಏನನ್ನೂ ನೀಡಿಲ್ಲ ಎಂಬುದನ್ನು ತೀರ್ಪು ಒಪ್ಪಿಕೊಂಡಿದೆ.</p>



<p>ಬಹುಪಾಲು ತೀರ್ಪು ಮದುವೆಯನ್ನು ಜಾರಿಗೊಳಿಸಬಹುದಾದ ಸಾಮಾಜಿಕ ಒಪ್ಪಂದವಾಗಿದೆ ಎಂದು ಕಡೆಗಣಿಸುತ್ತದೆ. ಅವನು/ಅವಳು/ಅವರ ನಂಬಿಕೆ ಏನೇ ಆಗಿದ್ದರೂ ಅಂತಹ ಒಪ್ಪಂದದ ಹಕ್ಕನ್ನು ಹೊಂದುವ ಸಾಮರ್ಥ್ಯ ವಯಸ್ಕರಿಗಿದೆ.</p>



<p>&#8220;ಮದುವೆ ಎಂದರೆ ಏನೆಂದು ಯಾವುದೇ ಗುಂಪಿನ ಜನರು ಇನ್ನೊಂದು ಗುಂಪಿಗೆ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಯಾವುದೇ ಒಪ್ಪಂದ, ಅಥವಾ ಜೈಲು ಶಿಕ್ಷೆಯಂತಹ ಬಲವಂತದ ಕ್ರಮದಿಂದ ಮದುವೆಯಾಗಲು ಬಯಸುವ ವಯಸ್ಕರ ಮೂಲಭೂತ ಹಕ್ಕನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ, ”ಎಂದು ಪರಿಶೀಲನಾ ಅರ್ಜಿಯಲ್ಲಿ ವಾದಿಸಲಾಗಿದೆ.</p>



<p>ಅರ್ಜಿಯಲ್ಲಿ ಇರುವ ಇನ್ನೊಂದು ಅಂಶವೆಂದರೆ, 1948 ರಲ್ಲಿ ಭಾರತದ ಅಭಿಪ್ರಾಯಗಳನ್ನೂ ಒಳಗೊಂಡು ರಚನೆಯಾದ &nbsp;ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (Universal Declaration of Human Rights) ನಿರ್ಲಕ್ಷ್ಯ.</p>



<p>ವಿಶ್ವಸಂಸ್ಥೆಯು ಅಂಗೀಕರಿಸಿದ ಈ ಘೋಷಣೆ ಪ್ರಕಾರ ಪೂರ್ಣ ವಯಸ್ಸಿನ ಪುರುಷರು ಮತ್ತು ಮಹಿಳೆಯರು, ಜನಾಂಗ, ರಾಷ್ಟ್ರೀಯತೆ ಅಥವಾ ಧರ್ಮದ ಯಾವುದೇ ಮಿತಿಯಿಲ್ಲದೆ, ಮದುವೆಯಾಗಲು ಮತ್ತು ಕುಟುಂಬವನ್ನು ಹೊಂದುವ ಹಕ್ಕನ್ನು ಹೊಂದಿದ್ದಾರೆ. ಈ ಘೋಷಣೆಯು ಭಾರತೀಯ ಸಂವಿಧಾನದ ಭಾಗ III ರಲ್ಲಿ ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸುತ್ತದೆ.</p>



<p>ಮರುಪರಿಶೀಲನಾ ಅರ್ಜಿಯ ಪ್ರಕಾರ, &#8221; ಸುಪ್ರೀಂ ಕೋರ್ಟ್ ಭಾರತದ ಸಂವಿಧಾನವು ಮದುವೆಯಾಗಲು, ಕುಟುಂಬವನ್ನು ಕಂಡುಕೊಳ್ಳಲು ಯಾವುದೇ ಮೂಲಭೂತ ಹಕ್ಕನ್ನು ಖಾತರಿಪಡಿಸುವುದಿಲ್ಲ ಎಂಬ ತಣ್ಣನೆಯ ಘೋಷಣೆಯನ್ನು ಮಾಡುವಾಗ&#8221; ಮಾಡಲು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ನಿರ್ಲಕ್ಷಿಸಿದೆ.</p>



<p>ಇದಲ್ಲದೆ, ಬಹುಮತದ ತೀರ್ಪಿನಲ್ಲಿ ಅರ್ಜಿದಾರರ ಬೇಡಿಕೆಯನ್ನು ಓಡಾಡುವ ಹಕ್ಕನ್ನು ಜಾರಿಗೊಳಿಸಲು &#8220;ರಸ್ತೆ ನಿರ್ಮಾಣ (construction of road )&#8221; ಮಾಡುವ ಮನವಿಗೆ ಮತ್ತು ಕವಿಗೆ ತನ್ನ ಕವಿತೆಗಳನ್ನು ಪ್ರಕಟಿಸಲು ಪ್ಲಾಟ್‌ಫಾರ್ಮ್‌ (platform) ರಚಿಸುವ &#8220;ತಪ್ಪಾದ ಹೋಲಿಕೆಯನ್ನು ಮಾಡಲಾಗಿದೆ&#8221; ಎಂದು ಮನವಿ ಸೇರಿಸಲಾಗಿದೆ. ಈ ಎರಡೂ ಪದಗಳನ್ನು ಶಾಸಕಾಂಗದ ಫ್ರೇಮ್‌ವರ್ಕ್‌ ಇಲ್ಲದೆ ಸಮಲೈಂಗಿಕ ವಿವಾಹವನ್ನು ಹಕ್ಕನ್ನಾಗಿ ಮಾಡಲು ನ್ಯಾಯಾಲಯಕ್ಕೆ ಸಾಧ್ಯವಿಲ್ಲ ಎಂದು ಹೇಳುವಾಗ ಈ ಎರಡು ಪದಗಳನ್ನು ನ್ಯಾಯಮೂರ್ತಿ ಭಟ್‌ ಉಲ್ಲೇಖಿಸಿದ್ದರು.</p>
]]></content:encoded>
					
		
		
			</item>
		<item>
		<title>ಸಮಲಿಂಗಿ ವಿವಾಹಕ್ಕೆ ಕಾನೂನು ಮಾನ್ಯತೆ ಇಲ್ಲ!- ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಏನಿದೆ?</title>
		<link>https://peepalmedia.com/supreme-court-refuses-to-same-sex-marriages/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Oct 2023 08:35:22 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[ಬ್ರೇಕಿಂಗ್ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[gay]]></category>
		<category><![CDATA[gay love]]></category>
		<category><![CDATA[gay marriage]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[LGBTQ+]]></category>
		<category><![CDATA[LGBTQIA]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[state politics]]></category>
		<category><![CDATA[supreme court́]]></category>
		<category><![CDATA[Supreme Court]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[trending news]]></category>
		<category><![CDATA[verdict]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29979</guid>

					<description><![CDATA[ಬೆಂಗಳೂರು,ಅಕ್ಟೋಬರ್‌.17: ಇಂದು ಸುಪ್ರೀಂ ಕೋರ್ಟ್ ಭಾರತದಲ್ಲಿ ಕ್ವೀರ್ (ಸಮಲಿಂಗಿ) ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದೆ. ಆದಾಗ್ಯೂ, ಪೀಠದ ಎಲ್ಲಾ ನ್ಯಾಯಾಧೀಶರು ಕ್ವೀರ್ &#160;ಜೋಡಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಈ ಸಂಬಂಧವನ್ನು &#8220;ಮದುವೆ&#8221; ಎಂದು ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್‌.17:</strong> ಇಂದು ಸುಪ್ರೀಂ ಕೋರ್ಟ್ ಭಾರತದಲ್ಲಿ ಕ್ವೀರ್ (ಸಮಲಿಂಗಿ) ವಿವಾಹಗಳಿಗೆ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದೆ. ಆದಾಗ್ಯೂ, ಪೀಠದ ಎಲ್ಲಾ ನ್ಯಾಯಾಧೀಶರು ಕ್ವೀರ್ &nbsp;ಜೋಡಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ ಈ ಸಂಬಂಧವನ್ನು &#8220;ಮದುವೆ&#8221; ಎಂದು ಕಾನೂನು ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ</p>



<p>ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠವು ಏಪ್ರಿಲ್ 18, 2023 ರಂದು ಅರ್ಜಿಗಳ ವಿಚಾರಣೆಯನ್ನು ಪ್ರಾರಂಭಿಸಿತ್ತು. ಚರ್ಚೆಯ ನಂತರ, ಪೀಠವು ಮೇ 11, 2023 ರಂದು ತೀರ್ಪನ್ನು&nbsp; ಕಾದಿರಿಸಿತ್ತು.</p>



<p>ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ನಾಲ್ಕು ತೀರ್ಪುಗಳನ್ನು ಪ್ರಕಟಿಸಿತು- ಕ್ರಮವಾಗಿ ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಎಸ್‌ಕೆ ಕೌಲ್, ನ್ಯಾಯಮೂರ್ತಿ ರವೀಂದ್ರ ಭಟ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ತೀರ್ಪನ್ನು ಬರೆದಿದ್ದಾರೆ.</p>



<p>ಕೆಲವು ಅಂಶಗಳಲ್ಲಿ ಈ ನ್ಯಾಯಾಧೀಶರ ನಡುವೆ ಭಿನ್ನಾಭಿಪ್ರಾಯಗಳಿವೆ. </p>



<p>ಕೇಸ್‌ ಮಾಹಿತಿ: Supriyo v. Union of India | Writ Petition (Civil) No. 1011 of 2022 + connected matters</p>



<p><strong>ನ್ಯಾಯಾದೀಶರ ಆಭಿಪ್ರಾಯಗಳೇನು?</strong></p>



<p>ಸಿಜೆಐ ಡಿವೈ ಚಂದ್ರಚೂಡ್ ಅವರು ತಮ್ಮ ತೀರ್ಪಿನಲ್ಲಿ, &#8220;ಸಾಂಸ್ಥಿಕ ಮಿತಿಗಳ&#8221; ಕಾರಣದಿಂದಾಗಿ ವಿಶೇಷ ವಿವಾಹ ಕಾಯ್ದೆಯ ನಿಬಂಧನೆಗಳನ್ನು ನ್ಯಾಯಾಲಯವು ರದ್ದುಗೊಳಿಸಲು ಅಥವಾ ರೀಡ್‌ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಅದು ಸಂಸತ್ತು ಮತ್ತು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ. ಆದಾಗ್ಯೂ, ಕ್ವಿಯರ್ &nbsp;ಜೋಡಿಗಳ ಹಕ್ಕುಗಳು ಮತ್ತು ಅರ್ಹತೆಗಳನ್ನು ನಿರ್ಧರಿಸಲು ಕೇಂದ್ರ ಸರ್ಕಾರವು ಸಮಿತಿಯನ್ನು ರಚಿಸಬೇಕು ಎಂದು ಒಕ್ಕೂಟದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ಹೇಳಿಕೆಯನ್ನು ಮುಖ್ಯ ನ್ಯಾಯಮೂರ್ತಿ ದಾಖಲಿಸಿದ್ದಾರೆ. ತಮ್ಮ ತೀರ್ಪಿನಲ್ಲಿ, ಸಿಜೆಐ ಭಿನ್ನಲಿಂಗೀಯ ಸಂಬಂಧದಲ್ಲಿರುವ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು (ಉದಾ.ಟ್ರಾನ್ಸ್‌ಜೆಂಡರ್‌ ಹೆಣ್ಣು- ಪುರುಷ) ವೈಯಕ್ತಿಕ ಕಾನೂನುಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಇದಲ್ಲದೆ, ಕ್ವೀರ್ ದಂಪತಿಗಳು ಸೇರಿದಂತೆ ಅವಿವಾಹಿತ ದಂಪತಿಗಳು ಜಂಟಿಯಾಗಿ ಮಗುವನ್ನು ದತ್ತು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ, ಸಿಜೆಐ ಸಿಎಆರ್‌ಎ ನಿಯಮಾವಳಿಗಳ 5(3) ನಿಬಂಧನೆಯು (Regulation 5(3) of the CARA Regulations), ಅವಿವಾಹಿತರು ಮತ್ತು LGBTQ+ ಜೋಡಿಗಳು ದತ್ತು ತೆಗೆದುಕೊಳ್ಳುವುದನ್ನು ನಿಷೇಧಿಸುವುದು, ಸಂವಿಧಾನದ 15 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟರು. ನ್ಯಾಯಮೂರ್ತಿ ಎಸ್‌ಕೆ ಕೌಲ್ ಅವರು ಸಿಜೆಐ ಅವರ ತೀರ್ಪಿಗೆ ಸಮ್ಮತಿಸಿ, ಕ್ವೀರ್ ಸಂಬಂಧಗಳನ್ನು &#8220;ಸಂಗಾತಿಗಾಗಿ ಮತ್ತು ಪ್ರೀತಿಗಾಗಿ ಒಂದಾಗಿರುವುದು &#8211; Are to be recognised as a union to give partnership and love&#8221; ಎಂದು ಪರಿಗಣಿಸುತ್ತಾ, ವಿಶೇಷ ವಿವಾಹ ಕಾಯಿದೆಯು (Special marriage act) ಸಂವಿಧಾನದ ಆರ್ಟಿಕಲ್ 14 ಅನ್ನು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಈ ಸಂಬಂಧವನ್ನು ವಿಶೇಷ ವಿವಾಹ ಕಾಯಿದೆಯ ಅಡಿಯಲ್ಲಿ ತರಲು ನ್ಯಾಯಾಲಕ್ಕೆ ಮಿತಿಗಳಿವೆ ಎಂದು ನ್ಯಾಯಮೂರ್ತಿ ಕೌಲ್ ಕೂಡ ಅಭಿಪ್ರಾಯ ತಿಳಿಸಿದ್ದಾರೆ. ಸಂಸತ್ತಿನ ಅಭಿಪ್ರಾಯವೂ ಇದೇ ಆಗಿದೆ.</p>



<p>ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರು ಸಿಜೆಐ ತೀರ್ಪನ್ನು ವಿರೋಧಿಸಿ, ವಿವಾಹದ ಕಾನೂನಾತ್ಮಕ ಅರ್ಹತೆಯು ಜಾರಿಯಲ್ಲಿ ಇರುವ ಕಾನೂನಿನ ಮೂಲಕ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ. ಸಾಲಿಸಿಟರ್ ಜನರಲ್ ಅವರು</p>



<p>ನ್ಯಾಯಾಲಯಕ್ಕೆ ನೀಡಿದ ಹೇಳಿಕೆಗೆ ಅನುಗುಣವಾಗಿ, ಜಸ್ಟೀಸ್ ಭಟ್ ಕೂಡ ಒಕ್ಕೂಟವು LGBTQ+ ದಂಪತಿಗಳಿಗೆ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಪರಿಶೀಲಿಸಲು ಉನ್ನತ ಅಧಿಕಾರದ ಸಮಿತಿಯನ್ನು ಸ್ಥಾಪಿಸಬೇಕು ಎಂದು ತೀರ್ಮಾನಿಸಿದ್ದಾರೆ. ಪ್ರಸ್ತುತ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಕಾನೂನು &nbsp;ರಚಿಸುವ ಅಗತ್ಯವಿರುವುದಿಲ್ಲ ಎಂದು ಅವರು ಹೇಳಿದ್ದಾರೆ. ಕ್ವೀರ್ ಹಕ್ಕುಗಳಿಗೆ ಸಂಬಂಧಿಸಿದ ಹಿಂದಿನ ಪ್ರಕರಣಗಳಿಂದ ಪ್ರಸ್ತುತ ಪ್ರಕರಣವನ್ನು ಪ್ರತ್ಯೇಕಿಸಿದ ಅವರು, ನಾಗರಿಕರ ಹಕ್ಕನ್ನು ರಕ್ಷಿಸುವ ಸರ್ಕಾರದ ಕರ್ತವ್ಯದ ಆಧಾರದ ಮೇಲೆ ನ್ಯಾಯಾಲಯವು ಕ್ವಿಯರ್ ವ್ಯಕ್ತಿಗಳನ್ನು ಹಿಂಸಾಚಾರ ಅಥವಾ ಅಪರಾಧಿಗಳನ್ನಾಗಿ ಮಾಡುವುದರಿಂದ ರಕ್ಷಿಸಿದ ನಿದರ್ಶನಗಳಲ್ಲಿ ನ್ಯಾಯಾಲಯ ಮಧ್ಯಸ್ಥಿಕೆ ವಹಿಸಿತ್ತು ಎಂದು ಹೇಳಿದ್ದಾರೆ. ಆದರೂ, ಈ ಪ್ರಕರಣ ಆ ರೀತಿ ಇಲ್ಲ. ವಿವಾಹವು &#8220;ಸಾಮಾಜಿಕ ಸಂಸ್ಥೆ&#8221;ಯಾಗಿದೆ ಎಂದು ಅವರು ಪ್ರತಿಪಾದಿಸಿ &#8220;ಮದುವೆ ಒಂದು ಸಾಮಾಜಿಕ ಸಂಸ್ಥೆ (Social institute) ಎಂದು ಒಪ್ಪಿಕೊಂಡರೆ, ಅಂತಹ ಸಂಸ್ಥೆಯನ್ನು ರಚಿಸಲು ಬಯಸುವ ಸಮಾಜದ ಯಾವುದೇ ವರ್ಗವು ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಪರಿಹಾರವನ್ನು ಪಡೆಯಬಹುದೇ?&#8221; ಎಂದು ಅವರು ಹೇಳಿದ್ದಾರೆ.</p>



<p>ಜಸ್ಟಿಸ್ ಎಸ್ ರವೀಂದ್ರ ಭಟ್ ಅವರು ಕ್ವಿರ್ ದಂಪತಿಗಳಿಗೆ ನ್ಯಾಯಾಲಯವು ಕಾನೂನನ್ನು ರಚಿಸಲು ಸಾಧ್ಯವಿಲ್ಲ ಮತ್ತು ನೀತಿಗೆ ಸಂಬಂಧಿಸಿದಂತೆ ಹಲವಾರು ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿರುವುದರಿಂದ ಅದನ್ನು ಶಾಸಕಾಂಗ ಮಾಡಬೇಕೆಂದು ಹೇಳಿದ್ದಾರೆ. ಆದರೂ, ಗೇ-ಲೆಸ್ಬಿಯನ್ ದಂಪತಿಗಳು ಸಂಬಂಧಗಳ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ಪುನರುಚ್ಚರಿಸಿದರು. ನ್ಯಾಯಮೂರ್ತಿ ಭಟ್ ತಮ್ಮ ತೀರ್ಪಿನಲ್ಲಿ, &#8220;ಪ್ರತಿಯೊಬ್ಬ ಕ್ವೀಯರ್ ವ್ಯಕ್ತಿಗೂ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿದೆ. ಆದರೆ ಅಂತಹ ಸಂಬಂಧವನ್ನು ಕಡಿದುಕೊಳ್ಳುವ ಹಕ್ಕುಗಳನ್ನು ಗುರುತಿಸುವುದಲ್ಲಿ ಸರ್ಕಾರದ ಪಾತ್ರವಿರುವುದಿಲ್ಲ. ಈ ಅಂಶದಲ್ಲಿ ನಾವು ಸಿಜೆಐ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದೇವೆ,&#8221; ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದಲ್ಲದೆ, ವಿಶೇಷ ವಿವಾಹ ಕಾಯಿದೆಯ ಜೆಂಡರ್‌ ನ್ಯೂಟ್ರಲ್ ವ್ಯಾಖ್ಯಾನವು ಎಲ್ಲರಿಗೂ ಸಮಾನವಾಗಿರುವುದಿಲ್ಲ, ಮಹಿಳೆಯರು ಉದ್ದೇಶಪೂರ್ವಕವಲ್ಲದೆಯೂ &nbsp;ದುರ್ಬಲತೆಗೆ ಒಡ್ಡಿಕೊಳ್ಳಬಹುದಾದ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ. ಕ್ವೀಯರ್ ಜೋಡಿಗೆ ಪಿಎಫ್, ಇಎಸ್‌ಐ, ಪಿಂಚಣಿ ಮುಂತಾದ ಪ್ರಯೋಜನಗಳ ನಿರಾಕರಣೆ ತಾರತಮ್ಯವಾಗಿದೆ ಎಂದು ಗುರುತಿಸಿದ ನ್ಯಾಯಮೂರ್ತಿ ಭಟ್, ಈ ಸಮಸ್ಯೆಗಳನ್ನು ಪರಿಹರಿಸುವುದು ಹಲವಾರು ಕಾನೂನುಗಳನ್ನು ಜಾರಿಗೊಳಿಸಬೇಕು ಮತ್ತು ಉನ್ನತ ಸಮಿತಿಯನ್ನು ರಚಿಸಬೇಕೆಂದು ಹೇಳಿದ್ದಾರೆ. &nbsp;</p>



<p>ಇದಲ್ಲದೇ, ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರ ಮದುವೆಯಾಗಲು ತೃತೀಯಲಿಂಗಿಗಳಿಗೆ ಇರುವ ಹಕ್ಕುಗಳ ಬಗ್ಗೆ &nbsp;ನ್ಯಾಯಮೂರ್ತಿ ಭಟ್ ಅವರು ಸಿಜೆಐ ಜೊತೆ ಒಪ್ಪಿಗೆ ಸೂಚಿಸಿದ್ದಾರೆ. ಅವರು ಕ್ವಿಯರ್ ದಂಪತಿಗಳ ದತ್ತು ಪಡೆಯುವ ಹಕ್ಕಿನ ಬಗ್ಗೆ ಸಿಜೆಐ ಜೊತೆಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. CARA ನಿಯಂತ್ರಣದ 5 (3) ನಿಯಮವನ್ನು ಅಸಂವಿಧಾನಿಕವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಜಸ್ಟಿಸ್ ಹಿಮಾ ಕೊಹ್ಲಿ ಅವರು ಜಸ್ಟೀಸ್ ಭಟ್ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರೆ.</p>



<p>ಜಸ್ಟಿಸ್ ಭಟ್ ಅವರ ಮಾತಿಗೆ ಸಮ್ಮತಿಸಿದ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರು ಮದುವೆಯಾಗಲು ಯಾವುದೇ ಅನರ್ಹ ಹಕ್ಕು ಇಲ್ಲ ಮತ್ತು ವಿವಾಹದ ಹಕ್ಕು ಶಾಸನಬದ್ಧ ಹಕ್ಕು, ಇಲ್ಲವೇ ಅದೊಂದು ಸಂಪ್ರದಾಯಿಕವಾಗಿ ಬಂದ ರಿವಾಜು ಎಂದು ಹೇಳಿದ್ದಾರೆ. CARA ನಿಯಮಗಳು ಮತ್ತು ಕ್ವಿರ್ ದಂಪತಿಗಳ ದತ್ತು ಪಡೆಯುವ ಹಕ್ಕಿನ ವಿಚಾರದಲ್ಲಿ ನ್ಯಾಯಮೂರ್ತಿ ಭಟ್ ಅವರ ಅಭಿಪ್ರಾಯವನ್ನು ಅವರು ಒಪ್ಪಿಕೊಂಡಿದ್ದಾರೆ. CARA ನಿಯಮಾವಳಿಗಳನ್ನು ಅಸಾಂವಿಧಾನಿಕವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಪಿಂಚಣಿ, ಪಿಎಫ್, ಗ್ರಾಚ್ಯುಟಿ, ವಿಮೆ ಇತ್ಯಾದಿಗಳಿಂದ ಕ್ವೀಯರ್ ದಂಪತಿಗಳನ್ನು ಹೊರಗಿಡುವ ಶಾಸಕಾಂಗದ ಯೋಜನೆಗಳ ಪರಿಶೀಲನೆಯನ್ನು ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ನರಸಿಂಹ ಹೇಳಿದ್ದಾರೆ.</p>



<p>ಈ&nbsp; ತೀರ್ಪಿನ ವಿಚಾರಣೆಯ ಬ್ಯಾಚ್ ಸಲಿಂಗ ದಂಪತಿಗಳು, ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಮತ್ತು LGBTQIA+ ಕಾರ್ಯಕರ್ತರು ಸಲ್ಲಿಸಿದ ಇಪ್ಪತ್ತು ಅರ್ಜಿಗಳಿದ್ದವು. ಈ ಅರ್ಜಿಗಳು ಸಾಮೂಹಿಕವಾಗಿ ವಿಶೇಷ ವಿವಾಹ ಕಾಯಿದೆ 1954, ಹಿಂದೂ ವಿವಾಹ ಕಾಯಿದೆ 1955, ಮತ್ತು ವಿದೇಶಿ ವಿವಾಹ ಕಾಯಿದೆ 1969 ಗಳು ಮಾಡುವ ನಿಯಂತ್ರಣಗಳನ್ನು ಪ್ರಶ್ನಿಸಿವೆ. ನಿರ್ದಿಷ್ಟವಾಗಿ, ಈ ಶಾಸನಗಳು ಸದ್ಯ ಭಿನ್ನಲಿಂಗೀಯವಲ್ಲದ ವಿವಾಹಗಳನ್ನು ಪರಿಗಣಿಸುವುದಿಲ್ಲ. ಹೀಗಾಗಿ LGBTQIA+ ಸಮುದಾಯದ ವಿರುದ್ದದ ತಾರತಮ್ಯ ಎಂದೆಂದಿಗೂ ಇರುತ್ತದೆ ಎಂದು ಅವರು ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ, ಪೀಠವು ಸವಾಲನ್ನು ವಿಶೇಷ ವಿವಾಹ ಕಾಯ್ದೆಗೆ ಮಾತ್ರ ಸೀಮಿತಗೊಳಿಸುತ್ತದೆ ಮತ್ತು ವೈಯಕ್ತಿಕ ಕಾನೂನುಗಳಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ. &nbsp;ಹೀಗಾಗಿ, ಹಿಂದೂ ವಿವಾಹ ಕಾಯ್ದೆಗೆ ಸಂಬಂಧಿಸಿದ ಸವಾಲನ್ನು ಸ್ವೀಕರಿಸಲಿಲ್ಲ.</p>



<p>ವಿಚಾರಣೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಈ ಸಂಬಂಧವನ್ನು &#8220;ಮದುವೆ&#8221; ಎಂದು ಕಾನೂನಾತ್ಮಕವಾಗಿ ಮಾನ್ಯ ಮಾಡದೆ ಸಮಲಿಂಗ ಮತ್ತು ಕ್ವಿಯರ್ ದಂಪತಿಗಳಿಗೆ ಕೆಲವು ಕಾನೂನು ಹಕ್ಕುಗಳನ್ನು ನೀಡಬಹುದೇ ಎಂಬುದನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವ ಇಚ್ಛೆಯನ್ನು ವ್ಯಕ್ತಪಡಿಸಿದೆ. ಸಲಿಂಗ ಮತ್ತು ಕ್ವೀಯರ್ ದಂಪತಿಗಳು ಸರ್ಕಾರದ ಯೋಜನೆಗಳನ್ನು ಮತ್ತು ಸಾಮಾಜಿಕ ಭದ್ರತೆಯನ್ನು‌, ಜಂಟಿ ಬ್ಯಾಂಕ್ ಖಾತೆ, ಜೀವ ವಿಮಾ ಪಾಲಿಸಿಗಳು, ಪಿಎಫ್, ಪಿಂಚಣಿ ಇತ್ಯಾದಿಗಳಲ್ಲಿ ನಾಮಿನಿ ಹೊಂದಲು ಸಾಧ್ಯವಾಗುವಂತೆ ಕ್ರಮಗಳನ್ನು ತರಲು ಸೂಚನೆ ನೀಡಲಾಗಿದೆ.</p>



<p>ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಡಾ.ಅಭಿಷೇಕ್ ಮನು ಸಿಂಘ್ವಿ, ರಾಜು ರಾಮಚಂದ್ರನ್ ಕೆ.ವಿ.ವಿಶ್ವನಾಥನ್, ಡಾ.ಮೇನಕಾ ಗುರುಸ್ವಾಮಿ, ಜಯನಾ ಕೊಠಾರಿ, ಸೌರಭ್ ಕಿರ್ಪಾಲ್, ಆನಂದ್ ಗ್ರೋವರ್, ಗೀತಾ ಲೂತ್ರಾ, ವಕೀಲರಾದ ಅರುಂಧತಿ ಕಟ್ಜು, ವೃಂದಾ ಗ್ರೋವರ್, ಕರುಣಾ ನಂದಿ ಮುಂತಾದವರು ಅರ್ಜಿ ಸಲ್ಲಿಸಿದ್ದರು. . ಕೇಂದ್ರ ಸರ್ಕಾರದ ಪರವಾಗಿಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಅರ್ಜಿಗಳನ್ನು ವಿರೋಧಿಸಿ ಮಧ್ಯಪ್ರದೇಶ ರಾಜ್ಯದ ಪರ ಹಿರಿಯ ವಕೀಲ ರಾಕೇಶ್ ದ್ವಿವೇದಿ ವಾದ ಮಂಡಿಸಿದರು. ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅರವಿಂದ್ ದಾತಾರ್ ಕೂಡ ಅರ್ಜಿಗಳನ್ನು ವಿರೋಧಿಸಿ ವಾದ ಮಂಡಿಸಿದರು.</p>
]]></content:encoded>
					
		
		
			</item>
		<item>
		<title>ಹಿಂದೂ ದಂಪತಿಗಳ ಸಲಿಂಗ ಮದುವೆಗೆ ಮಾನ್ಯತೆ ನೀಡಲು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ</title>
		<link>https://peepalmedia.com/petition-to-supreme-court-seeking-recognition-of-same-sex-marriage-of-hindu-couple/</link>
		
		<dc:creator><![CDATA[Peepal Media Desk]]></dc:creator>
		<pubDate>Wed, 14 Dec 2022 10:05:07 +0000</pubDate>
				<category><![CDATA[ದೇಶ]]></category>
		<category><![CDATA[bengalure]]></category>
		<category><![CDATA[constitution]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[LGBTQIA]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18500</guid>

					<description><![CDATA[ಹೊಸದಿಲ್ಲಿ: ಅಮೆರಿಕದಲ್ಲಿ ಮದುವೆಯಾಗಿ ಅಲ್ಲಿನ ಕಾನೂನಿನ ಪ್ರಕಾರ ಮದುವೆಯನ್ನು ನೋಂದಾಯಿಸಿರುವ ಸಲಿಂಗ ದಂಪತಿಗಳು ತಮ್ಮ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಅರ್ಜಿದಾರರು LGBTQIA + ಸಮುದಾಯಕ್ಕೆ ಸೇರಿದ ವ್ಯಕ್ತಿಗಳಾಗಿದ್ದು, ತಮ್ಮ ವಿವಾಹದ ಹಕ್ಕನ್ನು ಮಾನ್ಯ ಮಾಡಬೇಕು ಎಂದು ವಿನಂತಿಸಿದ್ದಾರೆ. ಸಲಿಂಗ ಮದುವೆಯ ಮಾನ್ಯತೆ ನಿರಾಕರಿಸುವುದು ಭಾರತದ ಸಂವಿಧಾನದ 14 (ಸಮಾನತೆ), 19 (ಸ್ವಾತಂತ್ರ್ಯ) ಮತ್ತು 21 (ಜೀವನ ಮತ್ತು ಸ್ವಾತಂತ್ರ್ಯ) ಅಡಿಯಲ್ಲಿ ಖಾತರಿಪಡಿಸಿದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅರ್ಜಿದಾರರಲ್ಲಿ [&#8230;]]]></description>
										<content:encoded><![CDATA[
<p><strong>ಹೊಸದಿಲ್ಲಿ:</strong> ಅಮೆರಿಕದಲ್ಲಿ ಮದುವೆಯಾಗಿ ಅಲ್ಲಿನ ಕಾನೂನಿನ ಪ್ರಕಾರ ಮದುವೆಯನ್ನು ನೋಂದಾಯಿಸಿರುವ ಸಲಿಂಗ ದಂಪತಿಗಳು ತಮ್ಮ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.</p>



<p>ಅರ್ಜಿದಾರರು LGBTQIA + ಸಮುದಾಯಕ್ಕೆ ಸೇರಿದ ವ್ಯಕ್ತಿಗಳಾಗಿದ್ದು, ತಮ್ಮ ವಿವಾಹದ ಹಕ್ಕನ್ನು ಮಾನ್ಯ ಮಾಡಬೇಕು ಎಂದು ವಿನಂತಿಸಿದ್ದಾರೆ.</p>



<p>ಸಲಿಂಗ ಮದುವೆಯ ಮಾನ್ಯತೆ ನಿರಾಕರಿಸುವುದು ಭಾರತದ ಸಂವಿಧಾನದ 14 (ಸಮಾನತೆ), 19 (ಸ್ವಾತಂತ್ರ್ಯ) ಮತ್ತು 21 (ಜೀವನ ಮತ್ತು ಸ್ವಾತಂತ್ರ್ಯ) ಅಡಿಯಲ್ಲಿ ಖಾತರಿಪಡಿಸಿದ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.</p>



<p>ಅರ್ಜಿದಾರರಲ್ಲಿ ಒಬ್ಬರು ಭಾರತೀಯರಾಗಿದ್ದು, ಅವರು 2010 ರಲ್ಲಿ ಅಮೇರಿಕನ್ ಪ್ರಜೆಯನ್ನು ವಿವಾಹವಾಗಿ ಅಮೇರಿಕಾದಲ್ಲಿ ತಮ್ಮ ವಿವಾಹವನ್ನು ನೋಂದಾಯಿಸಿದ್ದಾರೆ.</p>



<p>ಆದಾಗ್ಯೂ, ದಂಪತಿಗಳು ತಮ್ಮ ವಿವಾಹವನ್ನು ಹಿಂದೂ ವಿವಾಹ ಕಾಯ್ದೆಯಡಿ ನೋಂದಾಯಿಸಲು ಪ್ರಯತ್ನಿಸಿದಾಗ, ಅದನ್ನು ರಿಜಿಸ್ಟ್ರಾರ್ ನಿರಾಕರಿಸಿದರು.</p>



<p>ತರುವಾಯ, ದಂಪತಿಗಳು ತಮ್ಮ ವಿವಾಹವನ್ನು ವಿದೇಶಿ ವಿವಾಹ ಕಾಯ್ದೆಯಡಿ ನೋಂದಾಯಿಸಲು ವಾಷಿಂಗ್ಟನ್ DC ಯಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರು. ತಿಂಗಳುಗಟ್ಟಲೆ ಕಾಯ್ದ ನಂತರ, ಮನವಿಯನ್ನು ತಿರಸ್ಕರಿಸಲಾಯಿತು ಮತ್ತು ಅಧಿಕಾರಿಗಳು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.</p>



<p>ಹಿಂದೂ ವಿವಾಹ ಕಾಯಿದೆ, 1955 ಮತ್ತು ವಿದೇಶಿ ವಿವಾಹ ಕಾಯಿದೆ, 1969 ಅನ್ನು LGBTQIA + ಸಮುದಾಯದ ಸದಸ್ಯರ ನಡುವಿನ ವಿವಾಹಗಳಿಗೆ ಅನ್ವಯಿಸಬೇಕು ಎಂದು ಅರ್ಜಿದಾರರು ವಿನಂತಿಸಿದ್ದಾರೆ.</p>



<p>&#8220;ಭಾರತೀಯ ದೂತಾವಾಸವು ಭಿನ್ನಲಿಂಗೀಯ ದಂಪತಿಗಳ ವಿವಾಹವನ್ನು ನೋಂದಾಯಿಸುತ್ತದೆ, ಆದರೆ ಅರ್ಜಿದಾರರಿಗೆ ಅದೇ ರೀತಿ ಮಾಡಲಿಲ್ಲ. ಹಾಗೆ ಮಾಡದೇ ಇರುವುದು ಸಂವಿಧಾನದ 14, 15, 19 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಅರ್ಜಿದಾರರ ಹಕ್ಕುಗಳ ಉಲ್ಲಂಘನೆಯಾಗಿದೆʼʼ ಎಂದು ಅರ್ಜಿಯಲ್ಲಿ ಹೇಳಲಾಗಿದ್ದು, ನವತೇಜ್ ಶಿಂಗ್ ಜೋಹರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ (ಸುಪ್ರಾ) ಪ್ರಕರಣದಲ್ಲಿ ನ್ಯಾಯಾಲಯವನ್ನು ಉಲ್ಲೇಖಿಸಿ, LGBTQIA + ಸಮುದಾಯದ ಹಕ್ಕುಗಳನ್ನು ಪ್ರತಿಪಾದಿಸಲಾಗಿದೆ.</p>



<p>&#8220;ಸಲಿಂಗ ವಿವಾಹವು ಸಾಂಪ್ರದಾಯಿಕ ಕುಟುಂಬಗಳಿಗೆ ಹಾನಿ ಉಂಟು ಮಾಡುವುದಿಲ್ಲ. ಸಲಿಂಗ ವಿವಾಹವನ್ನು ಅನುಮತಿಸುವುದು ವಿರುದ್ಧ ಲಿಂಗದ ವಿವಾಹದಲ್ಲಿ ಸಂತಾನೋತ್ಪತ್ತಿ ಅಥವಾ ಮಕ್ಕಳ ಪಾಲನೆಗೆ ಯಾವುದೇ ರೀತಿಯಲ್ಲಿ ಅಡ್ಡಿಯಾಗುವುದಿಲ್ಲ, ಆದರೆ ಇದಕ್ಕೆ ಕಾನೂನಿನ ಮಾನ್ಯತೆ ನಿರಾಕರಿಸಿದರೆ ಸಲಿಂಗ ದಂಪತಿಗಳು ಮತ್ತು ಅವರ ಮಕ್ಕಳಿಗೆ ಹಾನಿ ಮಾಡುತ್ತದೆ. ಭದ್ರತೆ, ಮತ್ತು ಮಕ್ಕಳ ಪಾಲನೆಯನ್ನು ಹೆಚ್ಚು ಕಷ್ಟಕರವಾಗಿಸುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.</p>



<p>ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಅರ್ಜಿದಾರರಿಗೆ ಮದುವೆಯಾಗುವ ಹಕ್ಕನ್ನು ನಿರಾಕರಿಸುವುದು ಕಾಯಿದೆಯ ಸೆಕ್ಷನ್ 5 ರ ಉಲ್ಲಂಘನೆಯಾಗಿದೆ. ಹಿಂದೂ ನಂಬಿಕೆಯ ಅನುಯಾಯಿಗಳಾಗಿರುವ ಅರ್ಜಿದಾರರಿಗೆ ಮದುವೆಯಾಗುವ ಹಕ್ಕನ್ನು ನಿರಾಕರಿಸಲಾಗುತ್ತಿದೆ, ಇದು HMA ಯ ಶಾಸನಬದ್ಧ ಆದೇಶವನ್ನು ಉಲ್ಲಂಘಿಸುತ್ತದೆ, ಕಾಯಿದೆಯ 5 ನೇ ವಿಧಿಯು ಯಾವುದೇ ಇಬ್ಬರು ಹಿಂದೂಗಳ ನಡುವೆ ವಿವಾಹವನ್ನು ನಡೆಸಬಹುದು ಎಂದು ಸ್ಪಷ್ಟವಾಗಿ ಹೇಳುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದ್ದು, ಹಿಂದೂ ವಿವಾಹ ಕಾಯಿದೆ, 1956 ರಲ್ಲಿ ಎಲ್ಲಿಯೂ ಮದುವೆಯೆಂಬುದು ಇಬ್ಬರು ಭಿನ್ನಲಿಂಗೀಯ ವ್ಯಕ್ತಿಗಳ ನಡುವೆ ನಡೆಯುತ್ತದೆ ಎಂದು ಹೇಳಲಾಗಿಲ್ಲ. ಸೆಕ್ಷನ್ 5 ರಲ್ಲಿ &#8220;ಯಾವುದೇ ಇಬ್ಬರು ಹಿಂದೂಗಳು&#8221; ಎಂದು ಬಳಸಲಾಗಿದೆ ಎಂದು ಅರ್ಜಿದಾರರು ವಿವರಿಸಿದ್ದಾರೆ.</p>
]]></content:encoded>
					
		
		
			</item>
	</channel>
</rss>
