<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>love &#8211; Peepal Media</title>
	<atom:link href="https://peepalmedia.com/tag/love/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Thu, 14 Nov 2024 06:54:06 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>love &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ನಿಮ್ಮ Gayಳೆಯನ ಕಥೆ!-1 ಗ್ರಿಂಡರ್‌ ದೋಖಾ…!</title>
		<link>https://peepalmedia.com/grindr-dokha-nimma-gay-leyana-kathe/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 14 Nov 2024 06:47:33 +0000</pubDate>
				<category><![CDATA[LGBTQ+]]></category>
		<category><![CDATA[care]]></category>
		<category><![CDATA[dating stories]]></category>
		<category><![CDATA[gay]]></category>
		<category><![CDATA[Grindr]]></category>
		<category><![CDATA[love]]></category>
		<category><![CDATA[mental health]]></category>
		<category><![CDATA[sexual minorities]]></category>
		<guid isPermaLink="false">https://peepalmedia.com/?p=48963</guid>

					<description><![CDATA[ಲೇಖನ: ಸೂರಜ್‌ ಹೊನಗಂಗಪ್ಪ 2020 ರ ಮಾರ್ಚ್‌ ತಿಂಗಳು, ಜನರೆಲ್ಲಾ ಕೊರೋನ ಸಾಂಕ್ರಮಿಕ ರೋಗಕ್ಕೆ ಹೆದರಿ ಬೆಂಗಳೂರು ಬಿಡುತ್ತಿದ್ದರೆ, ನಾನು ಬೆಂಗಳೂರಿಗೆ ಬಂದು ಅತ್ತಿಗುಪ್ಪೆಯಲ್ಲೊಂದು ಬಾಡಿಗೆ ಮನೆಯಲ್ಲಿ ಕೂತಿದ್ದೆ. ಒಂದು ವರ್ಷಗಳ ಕಾಲ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡಿ, ಕೊನೆಗೆ ಬೆಂಗಳೂರಿಗೆ ಬಂದು ಮುಂದಿನ ಬದುಕನ್ನು ಕಟ್ಟಿಕೊಳ್ಳುವುದೆಂದರೆ ಸಾಗರದಲ್ಲಿ ಈಜಲು ಇಳಿದಂತೆ. ಬೆಂಗಳೂರಿಗೆ ಬರಲು ಉದ್ಯೋಗವೊಂದೇ ಕಾರಣವಾಗಿರಲಿಲ್ಲ. ಬೆಳೆದ ಊರಿನಲ್ಲಿ ʼನನ್ನಂತದ್ದೇʼ ಸ್ನೇಹಿತರನ್ನು ಹುಡುಕಲು ಆಗದಿದ್ದಾಗ ಬೆಂಗಳೂರು ನನ್ನಲ್ಲಿ ಕನಸುಗಳನ್ನು ಬಿತ್ತಿತ್ತು. ಅಲ್ಲಿಗೆ ಹೋದರೆ ʼನನ್ನಂತದ್ದೇʼ [&#8230;]]]></description>
										<content:encoded><![CDATA[
<pre class="wp-block-code"><code>LGBTQ+ ಸಮುದಾಯಗಳ ಕತೆಗಳನ್ನು ಪೀಪಲ್‌ ನಿಮ್ಮ ಮುಂದೆ ಇಡುತ್ತಿದೆ. ಡೇಟಿಂಗ್‌, ನಿರುದ್ಯೋಗ, ಮನೆಯಿಂದ ತಿರಸ್ಕಾರ, ಪ್ರೇಮ-ಕಾಮ, ಮಾನಸಿಕ ಸಮಸ್ಯೆಗಳು.. ಹೇಗೆ ಸಾಲು ಸಾಲು ಸಮಸ್ಯೆಗಳಿಂದ ನಲುಗಿ ಹೋಗುತ್ತಿರುವ ಗೇ ಸಮುದಾಯ ಅತ್ಯಂತ ಹೆಚ್ಚು ಸೃಜನಶೀಲ ಜನರನ್ನು ಹೊಂದಿದೆ. ಹೆಟರೋಸೆಕ್ಸುವಲ್‌ ಸಮುದಾಯಗಳು ಕಂಡಿರದ ಕಥೆಗಳನ್ನು 'ನಿಮ್ಮ Gayಳೆಯನ ಕಥೆ!' ಎಂಬ ಅಂಕಣದ ಮೂಲಕ ನಿಮ್ಮ ಮುಂದಿಡುತ್ತೇವೆ.</code></pre>



<p><strong>ಲೇಖನ: ಸೂರಜ್‌ ಹೊನಗಂಗಪ್ಪ</strong></p>



<p>2020 ರ ಮಾರ್ಚ್‌ ತಿಂಗಳು,</p>



<p>ಜನರೆಲ್ಲಾ ಕೊರೋನ ಸಾಂಕ್ರಮಿಕ ರೋಗಕ್ಕೆ ಹೆದರಿ ಬೆಂಗಳೂರು ಬಿಡುತ್ತಿದ್ದರೆ, ನಾನು ಬೆಂಗಳೂರಿಗೆ ಬಂದು ಅತ್ತಿಗುಪ್ಪೆಯಲ್ಲೊಂದು ಬಾಡಿಗೆ ಮನೆಯಲ್ಲಿ ಕೂತಿದ್ದೆ.</p>



<p>ಒಂದು ವರ್ಷಗಳ ಕಾಲ ಬೇರೆ ಬೇರೆ ನಗರಗಳಲ್ಲಿ ಕೆಲಸ ಮಾಡಿ, ಕೊನೆಗೆ ಬೆಂಗಳೂರಿಗೆ ಬಂದು ಮುಂದಿನ ಬದುಕನ್ನು ಕಟ್ಟಿಕೊಳ್ಳುವುದೆಂದರೆ ಸಾಗರದಲ್ಲಿ ಈಜಲು ಇಳಿದಂತೆ. ಬೆಂಗಳೂರಿಗೆ ಬರಲು ಉದ್ಯೋಗವೊಂದೇ ಕಾರಣವಾಗಿರಲಿಲ್ಲ. ಬೆಳೆದ ಊರಿನಲ್ಲಿ ʼನನ್ನಂತದ್ದೇʼ ಸ್ನೇಹಿತರನ್ನು ಹುಡುಕಲು ಆಗದಿದ್ದಾಗ ಬೆಂಗಳೂರು ನನ್ನಲ್ಲಿ ಕನಸುಗಳನ್ನು ಬಿತ್ತಿತ್ತು. ಅಲ್ಲಿಗೆ ಹೋದರೆ ʼನನ್ನಂತದ್ದೇʼ ಸ್ನೇಹಿತರನ್ನು ಮಾಡಿಕೊಳ್ಳಬಹುದು, ಸುತ್ತಾಡಬಹುದು, ಸಿನೇಮಾ ನೋಡಬಹುದು, ಓದಬಹುದು ಎಂಬೆಲ್ಲಾ ಯೋಚನೆಗಳು.</p>



<p>ಅದೊಂದು ಭ್ರಮೆಯಷ್ಟೇ!</p>



<p>ಬೆಳೆದ ಊರಿನಲ್ಲಿ &#8216;ಗೇ&#8217; ಎಂದು ತಮ್ಮನ್ನು ಗುರುತಿಸಿಕೊಂಡವರನ್ನು ಹುಡುಕಿ ಸ್ನೇಹಿತರ ಬಳಗ ಕಟ್ಟಿಕೊಳ್ಳಲು ಸಾಧ್ಯವಿರಲಿಲ್ಲ. ನನ್ನಂತ ಸಾವಿರಾರು ಮಂದಿ ಬೆಂಗಳೂರಿನಲ್ಲಿದ್ದಾರೆ, ಅವರ ಪರಿಚಯವಾಗುವುದು ತುಂಬಾ ಸುಲಭ ಎಂದೆನ್ನಿಸಿತ್ತು.</p>



<p>ಆಗ ಗ್ರಿಂಡರ್‌ ಎಂಬ ಡೇಟಿಂಗ್‌ ಆಪ್‌ ತುಂಬಾ ಬಳಕೆಯಲ್ಲಿತ್ತು. ಸ್ನೇಹಿತರಾಗಲೋ, ಸೆಕ್ಸ್‌ ಮಾಡಲೋ, ಕೊನೆಗೆ ದುಡಿಮೆ ಇಲ್ಲದೆ ನಾಲ್ಕು ಕಾಸು ಮಾಡಲು ಗೇಗಳ ದಂಡೇ ಅಲ್ಲಿರುತ್ತಿತ್ತು.</p>



<p>ಮೊದಲ ಲಾಕ್‌ ಡೌನ್‌ ನಂತರ ಇಡೀ ಬೆಂಗಳೂರು ಖಾಲಿ ಖಾಲಿಯಾಗಿತ್ತು. ರಸ್ತೆಗಳಲ್ಲಿ ನಡೆದು ಹೋಗುವವರನ್ನೂ ಬಿಡದೆ, ಸುಮ್ಮನೆ ಸುತ್ತಾಡುವವರ ಕುಂಡೆಗೆ ಪೊಲೀಸರು ನಿರ್ದಯವಾಗಿ ಭಾರಿಸುತ್ತಿದ್ದರು. ನಾನು ವಾಸವಿದ್ದ ಅಪಾರ್ಟ್‌ಮೆಂಟಿನ ಕೆಳಗೆ ಬೈಕುಗಳಲ್ಲಿ ಬರುವವರನ್ನು ಪೊಲೀಸರು ಬೆಂಡೆತ್ತುತ್ತಿದ್ದರು.</p>



<p>ಒಂದು ಕಡೆ ಸೋಂಕು ಬರಬಹುದು ಎಂಬ ಭಯವಾದರೆ, ಇನ್ನೊಂದು ಕಡೆ ಸ್ಟ್ರಿಕ್ಟ್‌ ನಿಯಮಕ್ಕೆ ಹೆದರಿ ಮನೆಯಿಂದ ಹೊರಬರುತ್ತಿರಲಿಲ್ಲ.</p>



<p>ಹೀಗೆ ಹತ್ತಿರತ್ತಿರ ಒಂದು ತಿಂಗಳೇ ಕಳೆಯಿತು. ಒಂಟಿಯಾಗಿ ಮನೆಯಲ್ಲಿ ದಿನಗಳನ್ನು ದೂಡುತ್ತಿದ್ದೆ. ಮಾತನಾಡಲು ಯಾರೂ ಇಲ್ಲ. ಇಡೀ ಅಪಾರ್ಟ್‌ಮೆಂಟಿನಲ್ಲಿ ಇದ್ದಿದ್ದು ನನ್ನನ್ನು ಬಿಟ್ಟರೆ, ಕೆಳಗಿರುವ ನಂದಿನಿ ಹಾಲಿನಂಗಡಿಯವನು.</p>



<p>ಒಂಟಿತನ ನೆಮ್ಮದಿಯನ್ನು ಕಿತ್ತು ತಿನ್ನುತ್ತಿತ್ತು. ಫೋನಿನಲ್ಲಿ ಮಾತನಾಡಲೂ ಯಾರೂ ಇಲ್ಲ. ಕೊರೋನ ಬಹುತೇಕರ ಮಾನಸಿಕ ಅರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಿತ್ತು. ಗ್ರಿಂಡರ್‌ ಓಪನ್‌ ಮಾಡಿದರೆ ನೂರಾರು ಜನ. ಕೆಲವರು ಬೆತ್ತಲೆ ಫೋಟೋ ಕಳಿಸುವವರು, ತುಂಬಾ ಜನಕ್ಕೆ ಮುಖವೇ ಇರಲಿಲ್ಲ. ಯಾವುದೋ ಪಾರ್ನ್‌ ಸ್ಟಾರ್‌, ಸಿನೇಮಾ ನಟರ ಫೋಟೋಗಳನ್ನು ಡಿಪಿ ಹಾಕಿಕೊಂಡಿದ್ದಾರೆ.</p>



<p>ಲಾಕ್‌ಡೌನ್‌ ಕೊಂಚ ಸಡಿಲ ಮಾಡಿದ್ದರು.</p>



<p>ನಾನು ಗ್ರಿಂಡರ್‌ನಲ್ಲಿ ಒಬ್ಬನೊಂದಿಗೆ ಚಾಟ್‌ ಮಾಡುತ್ತಿದ್ದೆ. ಆತ ತನ್ನ ಫೋಟೋವನ್ನು ಕಳುಹಿಸಿದ್ದ, ನಾನೂ ನನ್ನ ಮುಖವನ್ನು ತೋರಿಸಿದ್ದೆ. ಆತನ ಮನೆ ಅಲ್ಲೇ ಹತ್ತಿರದಲ್ಲೇ ಎಲ್ಲೋ.</p>



<p>ಅದೂ ಇದೂ ಅಂತ ಸೆಕ್ಸ್‌ಗೆ ಹೊರತಾದ ಚಾಟ್‌. ಒಂದು ದಿನ ಸಂಜೆ ಕಾಫಿ ಕುಡಿಯಲು ಮನೆಗೆ ಕರೆದೆ. ಯಾರೋ ಒಬ್ಬರ ಜೊತೆಗೆ ಮಾತನಾಡುವುದೆಂದರೆ ಆ ಸ್ಥಿತಿಯಲ್ಲಿ ಅದೇನೋ ಸಂಭ್ರಮ.</p>



<p>“ಸಂಜೆ ಬಾ, ಕಾಫಿ ಕುಡಿಯುತ್ತಾ ಮಾತನಾಡುವ!” ಅಂತ ಮನೆಗೆ ಕರೆದೆ.</p>



<p>ನಾನು ಕಳುಹಿಸಿದ ಲೊಕೇಷನ್‌ ಬಳಸಿ ಅಪಾರ್ಟ್‌ಮೆಂಟಿನ ಕೆಳಗೆ ಬಂದವನನ್ನು ಮೇಲಕ್ಕೆ ಕರೆದೆ. ಕಾಫಿ ಕುಡಿಯುತ್ತಾ ಕಾಲೇಜು, ಕೊರೋನ, ಮನೆ ಹೀಗೆಲ್ಲಾ ಎನೇನೋ ಹದಿನೈದು ನಿಮಿಷ ಮಾತನಾಡಿದೆವು. ನಾನು ಕಾಫಿ ಕಪ್ ತೊಳೆಯಲು ಅಡುಗೆ ಕೋಣೆಗೆ ಹೋಗಿ, ಮತ್ತೆ ಆತನ ಪಕ್ಕ ಬಂದು ಕುಳಿತುಕೊಂಡೆ.</p>



<p>ಆತ ನಿಧಾನವಾಗಿ ನನ್ನ ಭುಜಗಳಿಗೆ ಕೈ ಹಾಕಿ ಸವರ ತೊಡಗಿದೆ. ನನ್ನ ಅಂಗಿಗಳನ್ನು ಕಳಚಿ ನನ್ನ ತೊಡೆಯ ಮೇಲೆ ಕುಳಿತುಕೊಂಡ.</p>



<p>ಇದ್ದಕ್ಕಿದ್ದಂತೆ ಮನೆಯ ಬಾಗಿಲನ್ನು ತೆರೆದು ಇಬ್ಬರು ಹುಡುಗರು ಒಳಬಂದರು. ನನ್ನ ಅಂಗಿಯನ್ನು ಕಸಿದುಕೊಂಡು ವೀಡಿಯೋ ಮಾಡತೊಡಗಿದರು. ಒಬ್ಬ ನನ್ನ ಕೆನ್ನೆಗೆ ಪಟಾರನೆ ಭಾರಿಸಿದ.</p>



<p>ಭಯದಿಂದ ಹೊಟ್ಟೆ ಕಿವುಚಿದಂತಾದರೂ ಧೈರ್ಯ ತಪ್ಪುವಂತಿಲ್ಲ.</p>



<p>“ಕೆಲಸ ಆಯ್ತಲ್ಲಾ, ಕಾಸು ಕೊಡು..ಐದು ಸಾವಿರ!” ಎಂದು ಒಬ್ಬ ಕೇಳಿದ.</p>



<p>“ಅಯ್ಯೋ, ನಾನು ಕಾಸು ಕೊಡುತ್ತೇನೆ ಎಂದು ಇವನನ್ನು ಕರೆದಿಲ್ಲ,” ಎಂದು ಹೇಳಿದರೂ ಕೇಳದೆ, “ಹಣ ಕೊಡದಿದ್ದರೆ ನಾವು ನಿನ್ನ ಈ ವಿಡಿಯೋವನ್ನು ಟ್ರಾನ್ಸ್‌ಜೆಂಡರ್‌ಗಳ ಗ್ರೂಪುಗಳಲ್ಲಿ ಹಾಕುತ್ತೇವೆ!” ಎಂದು ಧಮ್ಕಿ ಹಾಕಿದ. ಇನ್ನೊಬ್ಬ ಟ್ರಾನ್ಸ್‌ಜೆಂಡರ್‌ಗಳಂತೆಯೇ ಚಟಚಟ ಎಂದು ಚಪ್ಪಾಳೆ ಹೊಡೆದ.</p>



<p>ನಾನು ಸಮಧಾನದಿಂದ, “ಕುಳಿತುಕೊಳ್ಳಿ, ,ಮಾತನಾಡುವ. ಹಣ ಕೊಡುತ್ತೇನೆ,” ಎಂದೆ.</p>



<p>ಅದರಲ್ಲೊಬ್ಬ ಮನೆಗೆ ಬಂದಿದ್ದ ಹುಡುಗ ಹುಡುಗಿಯಂತೆ ಬಟ್ಟೆ ಧರಿಸಿರುವ ಫೋಟೋವನ್ನು ತೋರಿಸಿ ಅವರೆಲ್ಲರೂ ಪಕ್ಕಾ ಟ್ರಾನ್ಸ್‌ಜೆಂಡರ್ ಸಮುದಾಯದವರು ಎಂದು ನಂಬಿಸಲು ಪ್ರಯತ್ನಿಸುತ್ತಿದ್ದ.</p>



<p>ಎಸ್, ಅವರ್ಯಾರೂ ಟ್ರಾನ್ಸ್‌ಜೆಂಡರ್‌ಗಳಲ್ಲ. ಮನೆಗೆ ಬಂದ ಹುಡುಗ ನನ್ನಂತೆ ಗೇ ಇದ್ದಿರಲೂ ಬಹುದು. ಮೂವರೂ ಗ್ರಿಂಡರ್‌ ಬಳಸಿಕೊಂಡು ಅಸಹಾಯಕರನ್ನು ದರೋಡೆ ಮಾಡುವವರು.</p>



<p>“ನನ್ನಲ್ಲಿ ಹಣ ಇಲ್ಲ, ನಾನು ನನ್ನ ಫ್ರೆಂಡನ್ನು ಕೇಳಿ ಕೊಡ್ತೇನೆ. ಪ್ಲೀಸ್‌ ವಿಡಿಯೋ ಡಿಲಿಟ್ ಮಾಡಿ!” ಎಂದು ಕೇಳಿಕೊಂಡೆ.</p>



<p>“ಮೊದಲು ಕಾಸು ಕೊಡು, ಆಮೇಲೆ ಡಿಲಿಟ್‌ ಮಾಡ್ತೇನೆ.”</p>



<p>ಹೇಗೋ ಏನೋ ಐದು ಸಾವಿರವನ್ನು ಮೂರು ಸಾವಿರಕ್ಕೆ ಇಳಿಸಿದೆ. ಅಪಾರ್ಟ್‌ಮೆಂಟಿನ ಕೆಳಗೆ ಬಂದು ಹಿರಿಯ ಸ್ನೇಹಿತರೊಬ್ಬರಿಗೆ ಫೋನ್‌ ಮಾಡಿ ಮೂರು ಸಾವಿರ ತೆಗೆದುಕೊಂಡು, ಅದನ್ನು ಮೂವರಲ್ಲೊಬ್ಬನ ಗೂಗಲ್‌ಪೇಗೆ ಹಾಕಿದೆ.</p>



<p>ಮೂವರೂ ಒಂದೇ ಸ್ಕೂಟರ್‌ ಹತ್ತಿದರು. ಮನೆಗೆ ಕಾಫಿ ಕುಡಿಯಲು ಬಂದ ಹುಡುಗ ಇಳಿದು ಬಂದು, ಪೆಚ್ಚು ಮೋರೆ ಹಾಕಿ “ಸ್ಸಾರಿ…!” ಎಂದ.</p>



<p>ಆತನ ಬೆನ್ನನ್ನು ಮೆದುವಾಗಿ ತಟ್ಟಿ, “ಇಟ್ಸ್‌ ಓಕೆ!” ಎಂದೆ.</p>
]]></content:encoded>
					
		
		
			</item>
		<item>
		<title>ದಿನನಿತ್ಯ ಪುಶ್‌-ಅಪ್‌ ಮಾಡಿದರೆ ಏನಾಗುತ್ತದೆ?</title>
		<link>https://peepalmedia.com/what-happens-if-you-do-push-ups-daily/</link>
		
		<dc:creator><![CDATA[Peepal Media Desk]]></dc:creator>
		<pubDate>Sat, 27 Jul 2024 06:43:24 +0000</pubDate>
				<category><![CDATA[ಆರೋಗ್ಯ]]></category>
		<category><![CDATA[bodybuilding]]></category>
		<category><![CDATA[cardio]]></category>
		<category><![CDATA[crossfit]]></category>
		<category><![CDATA[diet]]></category>
		<category><![CDATA[Exercise]]></category>
		<category><![CDATA[fit]]></category>
		<category><![CDATA[fitfam]]></category>
		<category><![CDATA[fitness]]></category>
		<category><![CDATA[fitnessjourney]]></category>
		<category><![CDATA[fitnessmotivation]]></category>
		<category><![CDATA[gym]]></category>
		<category><![CDATA[gymlife]]></category>
		<category><![CDATA[gymmotivation]]></category>
		<category><![CDATA[health]]></category>
		<category><![CDATA[healthy]]></category>
		<category><![CDATA[healthylifestyle]]></category>
		<category><![CDATA[instagood]]></category>
		<category><![CDATA[lifestyle]]></category>
		<category><![CDATA[love]]></category>
		<category><![CDATA[motivation]]></category>
		<category><![CDATA[muscle]]></category>
		<category><![CDATA[nutrition]]></category>
		<category><![CDATA[personaltrainer]]></category>
		<category><![CDATA[pushups]]></category>
		<category><![CDATA[sport]]></category>
		<category><![CDATA[strength]]></category>
		<category><![CDATA[strong]]></category>
		<category><![CDATA[training]]></category>
		<category><![CDATA[weightloss]]></category>
		<category><![CDATA[wellness]]></category>
		<category><![CDATA[workout]]></category>
		<guid isPermaLink="false">https://peepalmedia.com/?p=42800</guid>

					<description><![CDATA[ಪ್ರತಿದಿನ ಪುಷ್-ಅಪ್‌ ಮಾಡಿದರೆ ಸ್ನಾಯುವಿನ ತೂಕದಿಂದ ಹಿಡಿದು ಭಂಗಿಯ ವರೆಗೆ ನಿಮ್ಮ ದೇಹದಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತವೆ. ಪುಷ್‌-ಅಪ್ಸ್‌ ಮಾಡುವುದನ್ನು ನೀವು ದಿನನಿತ್ಯ ರೂಡಿಸಿಕೊಂಡರೆ ನಿಮಗೆ ಹಲವಾರು ಪ್ರಯೋಜನವಾಗಲಿದೆ. &#160;ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯಿರಿ. ಸ್ನಾಯುವಿನಲ್ಲಿ ಶಕ್ತಿ ಹೆಚ್ಚಾಗುತ್ತದೆ ಪುಷ್-ಅಪ್‌ಗಳನ್ನು ಮಾಡುವುದರಿಂದ ಮೊದಲು ಎದೆ, ಭುಜಗಳು, ಟ್ರೈಸ್ಪ್‌ಗಳು ಮತ್ತು ಬೆನ್ನು ಮತ್ತು ಕಿಬ್ಬೊಟ್ಟೆಯ ಸ್ನಾಯುಗಳಲ್ಲಿ ಬದಲಾವಣೆಗಳಾಗುತ್ತದೆ. ಇದು ದೇಹದ ಮೇಲ್ಭಾಗದ ಶಕ್ತಿ ಹೆಚ್ಚಲು ಇರುವ ಅತ್ಯುತ್ತಮ ವ್ಯಾಯಾಮ. ದಿನನಿತ್ಯ ಈ ವ್ಯಾಯಾಮ ಮಾಡಿದರೆ ದೇಹದ ಈ ಮೇಲ್ಭಾಗದ ಸ್ನಾಯುವಿನ [&#8230;]]]></description>
										<content:encoded><![CDATA[
<p>ಪ್ರತಿದಿನ ಪುಷ್-ಅಪ್‌ ಮಾಡಿದರೆ ಸ್ನಾಯುವಿನ ತೂಕದಿಂದ ಹಿಡಿದು ಭಂಗಿಯ ವರೆಗೆ ನಿಮ್ಮ ದೇಹದಲ್ಲಿ ಗಮನಾರ್ಹ ಬದಲಾವಣೆಗಳಾಗುತ್ತವೆ. ಪುಷ್‌-ಅಪ್ಸ್‌ ಮಾಡುವುದನ್ನು ನೀವು ದಿನನಿತ್ಯ ರೂಡಿಸಿಕೊಂಡರೆ ನಿಮಗೆ ಹಲವಾರು ಪ್ರಯೋಜನವಾಗಲಿದೆ. &nbsp;ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯಿರಿ.</p>



<p><strong>ಸ್ನಾಯುವಿನಲ್ಲಿ ಶಕ್ತಿ ಹೆಚ್ಚಾಗುತ್ತದೆ</strong></p>



<p>ಪುಷ್-ಅಪ್‌ಗಳನ್ನು ಮಾಡುವುದರಿಂದ ಮೊದಲು ಎದೆ, ಭುಜಗಳು, ಟ್ರೈಸ್ಪ್‌ಗಳು ಮತ್ತು ಬೆನ್ನು ಮತ್ತು ಕಿಬ್ಬೊಟ್ಟೆಯ ಸ್ನಾಯುಗಳಲ್ಲಿ ಬದಲಾವಣೆಗಳಾಗುತ್ತದೆ. ಇದು ದೇಹದ ಮೇಲ್ಭಾಗದ ಶಕ್ತಿ ಹೆಚ್ಚಲು ಇರುವ ಅತ್ಯುತ್ತಮ ವ್ಯಾಯಾಮ. ದಿನನಿತ್ಯ ಈ ವ್ಯಾಯಾಮ ಮಾಡಿದರೆ ದೇಹದ ಈ ಮೇಲ್ಭಾಗದ ಸ್ನಾಯುವಿನ ತೂಕ ಮತ್ತು ಟೋನ್‌ (ರಚನೆ)ಯಲ್ಲಿ ಆಗುವ ಬದಲಾವಣೆಗಳನ್ನು ನೀವು ಗಮನಿಸಬಹುದು. &nbsp;&nbsp;</p>



<p><strong>ಹೃದಯದ ರಕ್ತನಾಳದ ಆರೋಗ್ಯ ಹೆಚ್ಚಾಗುತ್ತದೆ</strong></p>



<p>ಪುಷ್-ಅಪ್‌ಗಳನ್ನು ಪ್ರಾಥಮಿಕವಾಗಿ ಶಕ್ತಿ ಕೊಡುವ ವ್ಯಾಯಾಮ ಎಂದು ಕರೆಯಲಾಗುತ್ತದೆಯಾದರೂ, ಇದನ್ನು ಮೆಲ್ಲಗೆ ಆರಂಭಿಸಿ ವೇಗವಾಗಿ ಮಾಡುವುದರಿಂದ ಹೃದಯದ ರಕ್ತನಾಳಕ್ಕೂ ಪ್ರಯೋಜನವಾಗಲಿದೆ. ಸ್ನಾಯುಗಳಿಗೆ ಆಮ್ಲಜನಕವನ್ನು ತಲುಪಿಸಲು ಹೃದಯವು ಹೆಚ್ಚು ರಕ್ತವನ್ನು ಪಂಪ್ ಮಾಡುವ ಅಗತ್ಯವಿರುವುದರಿಂದ ರಕ್ತನಾಳಗಳಿಗೂ ವ್ಯಾಯಾಮವಾದಂತಾಗುತ್ತದೆ. ಕಾಲಾನಂತರದಲ್ಲಿ, ಇದು ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಹೃದಯದ ರಕ್ತನಾಳದ ಕಾಯಿಲೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.</p>



<p><strong>ದೇಹದ ಭಂಗಿಯಲ್ಲಿ ಬದಲಾವಣೆ</strong></p>



<p>ಪುಷ್-ಅಪ್‌ಗಳು ಕೋರ್ ಸ್ನಾಯುಗಳನ್ನು (ಕಿಬ್ಬೊಟ್ಟೆ ಮತ್ತು ಬೆನ್ನು) ಬಲಪಡಿಸುತ್ತವೆ, ಇದು ದೇಹಕ್ಕೆ ಸರಿಯಾದ ಭಂಗಿಯನ್ನು ನೀಡಲು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ನಿಮ್ಮ ಬೆನ್ನನ್ನು ನೇರವಾಗಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಬಾಗಿದ ಬೆನ್ನನ್ನು ತಡೆಯುತ್ತದೆ. ನಿಯಮಿತವಾಗಿ ಪುಷ್-ಅಪ್‌ ಬೆನ್ನು ನೋವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಬೆನ್ನುಮೂಳೆಯ ಆರೋಗ್ಯವನ್ನು ಸುಧಾರಿಸಲು ನೆರವಾಗುತ್ತದೆ.</p>



<p><strong>ಜಾಯಿಂಟ್‌ ಸಪೋರ್ಟ್‌ ಮತ್ತು ಸ್ಟೆಬಿಲಿಟಿ ಹೆಚ್ಚುತ್ತದೆ</strong></p>



<p>ಪುಶ್-ಅಪ್‌ಗಳನ್ನು ಮಾಡುವಾಗ ನಿಮ್ಮ ಭುಜಗಳು, ಮೊಣಕೈಗಳು ಮತ್ತು ಮಣಿಕಟ್ಟುಗಳ ಸುತ್ತಲಿನ ಸ್ನಾಯುಗಳು ಹಾಗೂ ಸ್ನಾಯುರಜ್ಜುಗಳಿಗೆ ವ್ಯಾಯಾಮವಾಗುತ್ತದೆ. ಆ ಸಮಯದಲ್ಲಿ ಜಾಯಿಂಟ್‌ ಸಪೋರ್ಟ್‌, ಸ್ಥಿರತೆ ಮತ್ತು ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಗಾಯಗಳಾಗುವುದನ್ನು ತಡೆಯುತ್ತದೆ ಮತ್ತು ಇತರ ದೈಹಿಕ ಚಟುವಟಿಕೆಗಳಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಕರಿಸುತ್ತದೆ.</p>



<p><strong>ಚಯಾಪಚಯ ಹೆಚ್ಚಾಗುತ್ತದೆ</strong></p>



<p>ಪುಷ್-ಅಪ್‌ಗಳಂತಹ ವ್ಯಾಯಾಮಗಳು ಸ್ನಾಯುವಿನ ತೂಕವನ್ನು ಹೆಚ್ಚಿಸುತ್ತವೆ. ಇದರಿಂದ ನಿಮ್ಮ ಚಯಾಪಚಯ ಪ್ರಮಾಣ ಹೆಚ್ಚಾಗುತ್ತದೆ. ಹೆಚ್ಚಿನ ಚಯಾಪಚಯವನ್ನು ಹೊಂದಿರುವ ನಿಮ್ಮ ದೇಹವು ವಿಶ್ರಾಂತಿ ಸಮಯದಲ್ಲಿ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್‌ ಮಾಡುತ್ತದೆ, ಸರಿಯಾದ ತೂಕವನ್ನು ಕಾಯ್ದುಕೊಂಡು ದೇಹದ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ದಿನಚರಿಯಲ್ಲಿ ಪುಷ್-ಅಪ್‌ಗಳನ್ನು ಅಳವಡಿಸಿಕೊಳ್ಳುವುದು ಹೆಚ್ಚು ಪರಿಣಾಮಕಾರಿ ಮತ್ತು &nbsp;ಚಯಾಪಚಯಕ್ಕೆ ಉಪಯೋಗವಾಗಲಿದೆ.</p>



<p><strong>ಮಾನಸಿಕ ಆರೋಗ್ಯ ಹೆಚ್ಚಾಗುತ್ತದೆ</strong></p>



<p>ಪುಷ್-ಅಪ್‌ಗಳನ್ನು ಒಳಗೊಂಡಂತೆ ವ್ಯಾಯಾಮಗಳನ್ನು ಮಾಡುವುದರಿಂದ ನ್ಯಾಚುರಲ್‌ ಮೂಡ್‌ ಎಲವೇಟರ್‌ಗಳಾದ ಎಂಡಾರ್ಫಿನ್‌ಗಳ ಉತ್ಪಾದನೆಯಾಗುತ್ತದೆ. ಇದು ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ಪುಷ್-ಅಪ್‌ಗಳನ್ನು ಮಾಡಲು ಅಗತ್ಯವಿರುವ ಶಿಸ್ತು ಮತ್ತು ಬದ್ಧತೆಯು ನಿಮ್ಮ ಸಾಮರ್ಥ್ಯದಲ್ಲಾಗುವ ಪ್ರಗತಿಯನ್ನು ನೋಡುವುದರಿಂದ ನಿಮ್ಮ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ.</p>



<p><strong>ಸುಧಾರಿತ ಸಮತೋಲನ ಮತ್ತು ಸಮನ್ವಯತೆ</strong></p>



<p>ಪುಷ್-ಅಪ್‌ಗಳಿಗೆ ವಿವಿಧ ಸ್ನಾಯು ಗುಂಪುಗಳ ಸಮನ್ವಯತೆ ಮತ್ತು ದೇಹದ ಸ್ಥಿರೀಕರಣದ ಅಗತ್ಯವಿರುತ್ತದೆ. ಅವುಗಳನ್ನು ನಿಯಮಿತವಾಗಿ ನಿರ್ವಹಿಸುವುದು ನಿಮ್ಮ ಸಮತೋಲನ ಮತ್ತು ಸಮನ್ವಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ದೈನಂದಿನ ಚಟುವಟಿಕೆಗಳಿಗೆ ಮತ್ತು ಇತರ ರೀತಿಯ ವ್ಯಾಯಾಮಗಳಿಗೆ ಪ್ರಯೋಜನಕಾರಿಯಾಗಿದೆ.</p>



<p><strong>ಪುಶ್‌-ಅಪ್‌ಗಳಿಂದ ಆಗುವ ಅಪಾಯಗಳು ಮತ್ತು ಎಚ್ಚರಿಕೆ</strong></p>



<p>ಪ್ರತಿದಿನ ಪುಷ್-ಅಪ್‌ಗಳನ್ನು ಮಾಡುವುದರಿಂದ ಹಲವು ಪ್ರಯೋಜನಗಳಿದ್ದರೂ, ಕೆಲವು ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಸಾಕಷ್ಟು ವಿಶ್ರಾಂತಿ ಇಲ್ಲದೆ ಈ ವ್ಯಾಯಾಮ ಮಾಡಿದರೆ ಸ್ನಾಯು ಗುಂಪುಗಳು ಅತಿಯಾಗಿ ಕೆಲಸ ಮಾಡುವುದರಿಂದ ಟೆಂಡೈನಿಟಿಸ್ ಅಥವಾ ಸ್ನಾಯುವಿನ ಗಾಯಕ್ಕೆ ಕಾರಣವಾಗಬಹುದು. ನಿಮ್ಮ ಸ್ನಾಯುಗಳು ಚೇತರಿಸಿಕೊಳ್ಳಲು ಮತ್ತು ಬಲಗೊಳ್ಳಲು ಸಮಯ ನೀಡಬೇಕು. ಅದಕ್ಕಾಗಿ ವಿಶ್ರಾಂತಿಯ ಅಗತ್ಯವಿದೆ. ಪರ್ಯಾಯ ದಿನಗಳಲ್ಲಿ ವ್ಯಾಯಾಮಗಳನ್ನು ಮಾಡಬೇಕಾಗುತ್ತದೆ.</p>
]]></content:encoded>
					
		
		
			</item>
		<item>
		<title>ಗೇ ಸೇರಿದಂತೆ ಪ್ರತಿಯೊಬ್ಬರಿಗೂ ನೈತಿಕವಾಗಿ ಬದುಕುವ ಹಕ್ಕಿದೆ &#8211; ಸುಪ್ರೀಂ ಕೋರ್ಟ್</title>
		<link>https://peepalmedia.com/same-sex-marriage-verdict-sc/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Oct 2023 07:50:29 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[gay]]></category>
		<category><![CDATA[gay love]]></category>
		<category><![CDATA[gay marriage]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[love]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[Trending]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29975</guid>

					<description><![CDATA[ಬೆಂಗಳೂರು,ಅಕ್ಟೋಬರ್.‌17: ಇಂದು ಬೆಳಗ್ಗೆ 10.30ರಿಂದ ಸುಪ್ರೀಂ ಕೋರ್ಟ್ ಸಮಲೈಂಗಿಕ ಜೋಡಿಗಳ ವಿವಾಹದ ಬಗ್ಗೆ ತೀರ್ಪು ಪ್ರಕಟಿಸಲು ಆರಂಭಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಗೇ ಮತ್ತು ಕ್ವೀರ್ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಇಪ್ಪತ್ತು ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲಿದೆ. ಪೀಠವು ಪ್ರಕರಣವನ್ನು ವಿಶೇಷ ವಿವಾಹ ಕಾಯ್ದೆ 1954 ಕ್ಕೆ ಸೀಮಿತಗೊಳಿಸಿದೆ. [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್.‌17: </strong>ಇಂದು ಬೆಳಗ್ಗೆ 10.30ರಿಂದ ಸುಪ್ರೀಂ ಕೋರ್ಟ್ ಸಮಲೈಂಗಿಕ ಜೋಡಿಗಳ ವಿವಾಹದ ಬಗ್ಗೆ ತೀರ್ಪು ಪ್ರಕಟಿಸಲು ಆರಂಭಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಗೇ ಮತ್ತು ಕ್ವೀರ್ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಇಪ್ಪತ್ತು ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲಿದೆ. ಪೀಠವು ಪ್ರಕರಣವನ್ನು ವಿಶೇಷ ವಿವಾಹ ಕಾಯ್ದೆ 1954 ಕ್ಕೆ ಸೀಮಿತಗೊಳಿಸಿದೆ. ಇದು ಹಿಂದೂ ವಿವಾಹ ಕಾಯ್ದೆ ಅಥವಾ ವೈಯಕ್ತಿಕ ಕಾನೂನುಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.</p>



<p style="font-size:18px"><strong>ಕ್ವೀರ್‌ (ಗೇ-ಲೆಸ್ಬಿಯನ್….)‌ ಎಂಬುದು ನಗರ ಕೇಂದ್ರಿತ ಇಲೀಟ್‌ನೆಸ್‌ ಅಲ್ಲ. ಸಲಿಂಗಕಾಮ ಅಥವಾ ಕ್ವೆರ್ನೆಸ್ ನಗರ ಪರಿಕಲ್ಪನೆಯಲ್ಲ ಅಥವಾ ಸಮಾಜದ ಉನ್ನತ ವರ್ಗಗಳಿಗೆ ಸೀಮಿತವಾಗಿಲ್ಲ</strong> – ಸುಪ್ರೀಂ ಕೋರ್ಟ್‌</p>



<p style="font-size:18px">ಗೇ – ಕ್ವೀರ್‌ ವ್ಯಕ್ತಿ ಸೇರಿದಂತೆ ಪ್ರತಿಯೊಬ್ಬನಿಗೂ ತನ್ನ ಜೀವನದ ನೈತಿಕ ಗುಣಮಟ್ಟವನ್ನು ಪ್ರಶ್ನಿಸುವ ಹಕ್ಕಿದೆ &#8211; ಸಿಜೆಐ ಡಿವೈ ಚಂದ್ರಚೂಡ್</p>



<p style="font-size:18px">ಜೀವನ ಸಂಗಾತಿಯನ್ನು ಆಯ್ಕೆ ಮಾಡುವುದು ಒಬ್ಬರ ಜೀವನ ಕ್ರಮದ ಅವಿಭಾಜ್ಯ ಅಂಗವಾಗಿದೆ. ಕೆಲವರು ಇದನ್ನು ತಮ್ಮ ಜೀವನದ ಪ್ರಮುಖ ನಿರ್ಧಾರವೆಂದು ಪರಿಗಣಿಸಬಹುದು. ಈ ಹಕ್ಕು ಆರ್ಟಿಕಲ್ 21 ರ ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ ಅಡಿಯಲ್ಲಿ ಬರುತ್ತದೆ &#8211; ಸರ್ವೋಚ್ಚ ನ್ಯಾಯಾಲಯ</p>
]]></content:encoded>
					
		
		
			</item>
		<item>
		<title>ಸಮಲಿಂಗೀ ವಿವಾಹದ ಬಗ್ಗೆ ಸುಪ್ರೀಂ ಕೋರ್ಟ್‌ ತೀರ್ಪು ಏನು?</title>
		<link>https://peepalmedia.com/supreme-court-verdict-on-same-sex-marriage/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Oct 2023 07:44:16 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[breaking news]]></category>
		<category><![CDATA[gay]]></category>
		<category><![CDATA[gay love]]></category>
		<category><![CDATA[gay marriage]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[LGBTQ+]]></category>
		<category><![CDATA[love]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[sex]]></category>
		<category><![CDATA[state politics]]></category>
		<category><![CDATA[Supreme Court]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[Supreme Court of India]]></category>
		<category><![CDATA[trending news]]></category>
		<category><![CDATA[viral news]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29972</guid>

					<description><![CDATA[ಬೆಂಗಳೂರು,ಅಕ್ಟೋಬರ್‌.17: ಸಮಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ಇಂದು ತನ್ನ ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸುತ್ತಿದೆ. ಕ್ವೀರ್ ಸಮುದಾಯದ ವಿರುದ್ಧದ ತಾರತಮ್ಯ ತಡೆಯುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ಸೌಲಭ್ಯ ಮತ್ತು ಸೇವೆಗಳನ್ನು ಕ್ವೀರ್ ಸಮುದಾಯವು ಯಾವುದೇ ತಾರತಮ್ಯವನ್ನು ಎದುರಿಸಿದರೆ ಪಡೆಯುವುದನ್ನು ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. [&#8230;]]]></description>
										<content:encoded><![CDATA[
<p><strong>ಬೆಂಗಳೂರು,ಅಕ್ಟೋಬರ್‌.17: </strong>ಸಮಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಮೇಲೆ ಸುಪ್ರೀಂ ಕೋರ್ಟ್ ಇಂದು ತನ್ನ ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸುತ್ತಿದೆ.</p>



<p>ಕ್ವೀರ್ ಸಮುದಾಯದ ವಿರುದ್ಧದ ತಾರತಮ್ಯ ತಡೆಯುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ನಿರ್ದೇಶನ ನೀಡಿದೆ.</p>



<p>ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು, ಸೌಲಭ್ಯ ಮತ್ತು ಸೇವೆಗಳನ್ನು ಕ್ವೀರ್ ಸಮುದಾಯವು ಯಾವುದೇ ತಾರತಮ್ಯವನ್ನು ಎದುರಿಸಿದರೆ ಪಡೆಯುವುದನ್ನು ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.</p>



<p>&#8220;ಈ ಹಕ್ಕುಗಳ ಬಗ್ಗೆ ಸಾರ್ವಜನಿಕರನ್ನು ಜಾಗೃತಗೊಳಿಸಿ&#8221; ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದ್ದು, “ಕ್ವೀರ್ ಸಮುದಾಯಕ್ಕಾಗಿ ಹಾಟ್‌ಲೈನ್ ರಚಿಸಿ. ದಂಪತಿಗಳಿಗೆ ಸುರಕ್ಷಿತೆಯನ್ನು ನೀಡಿ” ಎಂದು ನಿರ್ದೇಶನ ನೀಡಿದೆ.</p>



<p>ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠ, ಇಂಟರ್‌ ಸೆಕ್ಸ್ ಮಕ್ಕಳನ್ನು ಬಲವಂತವಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸುವಂತಿಲ್ಲ ಎಂದು ಆದೇಶಿಸಿದೆ.</p>



<p>&#8220;ಯಾವುದೇ ವ್ಯಕ್ತಿಯನ್ನು ಯಾವುದೇ ಹಾರ್ಮೋನ್ ಥೆರಪಿಗೆ ಒಳಗಾಗುವಂತೆ ಒತ್ತಾಯಿಸಬಾರದು&#8221; ಎಂದು ಆದೇಶವನ್ನು ನೀಡಿದೆ.</p>



<p>ಕ್ವೀರ್ ಸಮುದಾಯವನ್ನು ಕೇವಲ ಅವರ ಲೈಂಗಿಕ ಗುರುತಿನ ಬಗ್ಗೆ ವಿಚಾರಿಸಲು ಪೊಲೀಸ್ ಠಾಣೆಗಳಿಗೆ ಕರೆಸಿಕೊಳ್ಳುವ ಮೂಲಕ ಕಿರುಕುಳ ನೀಡದಂತೆ ಪೊಲೀಸರಿಗೆ ಸುಪ್ರೀಂ ನಿರ್ದೇಶನ ನೀಡಿದೆ.</p>



<p>&#8220;ಪೊಲೀಸರು LGBTQ+ ವ್ಯಕ್ತಿಗಳನ್ನು ಅವರ ಜನ್ಮಸ್ಥಳಕ್ಕೆ ಮರಳಲು ಒತ್ತಾಯಿಸಬಾರದು. ಅವರ ಸಂಬಂಧದ ಬಗ್ಗೆ ಅವರ ವಿರುದ್ಧ ಎಫ್ಐಆರ್ ದಾಖಲಿಸುವ ಮೊದಲು ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಬೇಕು,&#8221; ಎಂದು ಪೀಠ ಹೇಳಿದೆ.</p>



<p>ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಇಂದು ತನ್ನ ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸುತ್ತಿದೆ.</p>



<p>ಇಂದು ಮುಂಜಾನೆ, ಕ್ವೀರ್ ಮತ್ತು ಅವಿವಾಹಿತ ದಂಪತಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ನಿರ್ಬಂಧಿಸುವ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರದ (CARA) ಅಧಿಕಾರವನ್ನು ನ್ಯಾಯಾಲಯವು ರದ್ದುಗೊಳಿಸಿತು. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು &#8220;ವಿಭಿನ್ನಲಿಂಗಿ ದಂಪತಿಗಳು ಮಾತ್ರ ಉತ್ತಮ ಪೋಷಕರಾಗಬಹುದು ಎನ್ನಲು ಸಾಧ್ಯವಿಲ್ಲ&#8221; ಎಂದು ಹೇಳಿದ್ದಾರೆ.</p>



<p>ಮೇ 11 ರಂದು, ಐದು ನ್ಯಾಯಾಧೀಶರ ಪೀಠವು 10 ದಿನಗಳ ಮ್ಯಾರಥಾನ್ ವಿಚಾರಣೆಯ ನಂತರ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿತ್ತು. ಮುಕುಲ್ ರೋಹಟಗಿ, ಅಭಿಷೇಕ್ ಮನು ಸಿಂಘ್ವಿ, ರಾಜು ರಾಮಚಂದ್ರನ್, ಆನಂದ್ ಗ್ರೋವರ್, ಗೀತಾ ಲೂತ್ರಾ, ಕೆವಿ ವಿಶ್ವನಾಥನ್, ಸೌರಭ್ ಕಿರ್ಪಾಲ್ ಮತ್ತು ಮೇನಕಾ ಗುರುಸ್ವಾಮಿ ಸೇರಿದಂತೆ ಹಿರಿಯ ವಕೀಲರ ಮೂಲಕ ಅರ್ಜಿದಾರರು LGBTQIA + ಸಮುದಾಯದ ಸಮಾನತೆಯ ಹಕ್ಕುಗಳಿಗೆ ಒತ್ತು ನೀಡಿದರು. LGBTQIA ಭಿನ್ನಲಿಂಗೀಯರಂತೆ &#8220;ಗೌರವಯುತ&#8221; ಜೀವನವನ್ನು ನಡೆಸುತ್ತಾರೆ.</p>



<p>ಮೇ 3 ರಂದು, ತಮ್ಮ ವಿವಾಹವನ್ನು ಕಾನೂನುಬದ್ಧಗೊಳಿಸುವ ವಿಷಯಕ್ಕೆ ಹೋಗದೆ ಸಲಿಂಗ ದಂಪತಿಗಳ &#8220;ನಿಜವಾದ ಕಾಳಜಿ&#8221; ಯನ್ನು ಪರಿಹರಿಸಲು ತೆಗೆದುಕೊಳ್ಳಬಹುದಾದ ಆಡಳಿತಾತ್ಮಕ ಕ್ರಮಗಳನ್ನು ಪರಿಶೀಲಿಸಲು ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸುವುದಾಗಿ ಕೇಂದ್ರವು ಉಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.</p>
]]></content:encoded>
					
		
		
			</item>
		<item>
		<title>ಇತರ ದಂಪತಿಗಳಿಗೆ ಸಿಗುವ ಸೌಲಭ್ಯಗಳು ಗೇ &#8211; ಸಮಲಿಂಗೀ ಜೋಡಿಗಳಿಗೂ ಸಿಗಬೇಕು: ಸುಪ್ರೀಂ ಕೋರ್ಟ್</title>
		<link>https://peepalmedia.com/supreme-court-verdict-on-gay-marriage/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 17 Oct 2023 07:04:57 +0000</pubDate>
				<category><![CDATA[ಕೋರ್ಟು - ಕಾನೂನು]]></category>
		<category><![CDATA[ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ]]></category>
		<category><![CDATA[bengalure]]></category>
		<category><![CDATA[gay]]></category>
		<category><![CDATA[india]]></category>
		<category><![CDATA[judgement]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[lesbian]]></category>
		<category><![CDATA[LGBTQ+]]></category>
		<category><![CDATA[love]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[same sex love]]></category>
		<category><![CDATA[same sex marriage]]></category>
		<category><![CDATA[sex]]></category>
		<category><![CDATA[state politics]]></category>
		<category><![CDATA[supreme court́]]></category>
		<category><![CDATA[supreme court judgement]]></category>
		<category><![CDATA[verdict]]></category>
		<category><![CDATA[writing]]></category>
		<guid isPermaLink="false">https://peepalmedia.com/?p=29961</guid>

					<description><![CDATA[ಬೆಂಗಳೂರು,ಅಕ್ಟೋಬರ್.‌17: ಇಂದು ಬೆಳಗ್ಗೆ 10.30ರಿಂದ ಸುಪ್ರೀಂ ಕೋರ್ಟ್ ಸಮಲೈಂಗಿಕ ಜೋಡಿಗಳ ವಿವಾಹದ ಬಗ್ಗೆ ತೀರ್ಪು ಪ್ರಕಟಿಸಲು ಆರಂಭಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಗೇ ಮತ್ತು ಕ್ವೀರ್ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಇಪ್ಪತ್ತು ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲಿದೆ. ಪೀಠವು ಪ್ರಕರಣವನ್ನು ವಿಶೇಷ ವಿವಾಹ ಕಾಯ್ದೆ 1954 ಕ್ಕೆ ಸೀಮಿತಗೊಳಿಸಿದೆ. [&#8230;]]]></description>
										<content:encoded><![CDATA[
<p>ಬೆಂಗಳೂರು,ಅಕ್ಟೋಬರ್.‌17: ಇಂದು ಬೆಳಗ್ಗೆ 10.30ರಿಂದ ಸುಪ್ರೀಂ ಕೋರ್ಟ್ ಸಮಲೈಂಗಿಕ ಜೋಡಿಗಳ ವಿವಾಹದ ಬಗ್ಗೆ ತೀರ್ಪು ಪ್ರಕಟಿಸಲು ಆರಂಭಿಸಿದೆ.ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ 5 ನ್ಯಾಯಾಧೀಶರ ಸಂವಿಧಾನ ಪೀಠವು ಗೇ ಮತ್ತು ಕ್ವೀರ್ ವಿವಾಹಗಳ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾಗಿದ್ದ ಇಪ್ಪತ್ತು ಅರ್ಜಿಗಳ ಬ್ಯಾಚ್‌ನಲ್ಲಿ ತೀರ್ಪು ನೀಡಲಿದೆ. ಪೀಠವು ಪ್ರಕರಣವನ್ನು ವಿಶೇಷ ವಿವಾಹ ಕಾಯ್ದೆ 1954 ಕ್ಕೆ ಸೀಮಿತಗೊಳಿಸಿದೆ. ಇದು ಹಿಂದೂ ವಿವಾಹ ಕಾಯ್ದೆ ಅಥವಾ ವೈಯಕ್ತಿಕ ಕಾನೂನುಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ.‌</p>



<p style="font-size:20px"><strong>ಹೆಟರೋ (ಗಂಡು-ಹೆಣ್ಣು) ದಂಪತಿಗಳಿಗೆ ಸಿಗುವ ಯಾವುದೇ ಸೌಲಭ್ಯ &#8211; ಸೇವೆಗಳನ್ನು ಗೇ/ಲೆಸ್ಬಿಯನ್‌ ಹಾಗೂ ಇತರ ಭಿನ್ನ ಲಿಂಗೀಯ ದಂಪತಿಗಳಿಗೆ ನಿರಾಕರಿಸುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆ</strong> &#8211; ಸುಪ್ರೀಂ ಕೋರ್ಟ್ </p>
]]></content:encoded>
					
		
		
			</item>
		<item>
		<title>ಪ್ರೀತಿಯೆಂಬ ಮಾಯೆ</title>
		<link>https://peepalmedia.com/the-magic-of-love/</link>
		
		<dc:creator><![CDATA[Peepal Media Desk]]></dc:creator>
		<pubDate>Tue, 03 Jan 2023 11:08:36 +0000</pubDate>
				<category><![CDATA[ಕ್ಯಾಂಪಸ್ ಕನ್ನಡಿ]]></category>
		<category><![CDATA[bengalure]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[love]]></category>
		<category><![CDATA[meaning of love]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=18832</guid>

					<description><![CDATA[ಪ್ರೀತಿ ಪ್ರೇಮದ ಕುರಿತು ಪುಟಗಟ್ಟಲೆ ಭಾವನೆಗಳ ಹರಿಬಿಡುವ ವಯಸು ಹದಿ ವಯಸು. ಹರೆಯದ ಬಾಗಿಲು ತೆರೆದಿರುವ ಹೊತ್ತಿಗೆ ಪ್ರೀತಿಯೆಂಬ ಮಾಯೆ ಆವರಿಸುವಾಗ ಅದನ್ನು ಜಾಗರೂಕತೆಯಿಂದ ನಿರ್ವಹಿಸುವ ತಿಳುವಳಿಕೆ ಪ್ರತಿಯೊಬ್ಬರಿಗೂ ಇರಬೇಕು. ಇತ್ತೀಚೆಗಷ್ಟೇ ಪತ್ರಿಕೋದ್ಯಮ ಪದವಿ ಮುಗಿಸಿರುವ ಉಡುಪಿಯ ಮಹಾಲಕ್ಷ್ಮಿ ದೇವಾಡಿಗ ಮಧುರವಾದ ಪ್ರೀತಿಯ ಬಗ್ಗೆ ಕ್ಯಾಂಪಸ್‌ ಅಂಕಣದಲ್ಲಿ ಬರೆದಿದ್ದಾರೆ. ಈ ಲೋಕದಲ್ಲಿ ಅದೆಷ್ಟೋ ತರಹದ ಭಾವನೆಗಳು ತನ್ನದೇ ಆದ ಹಾವ, ಭಾವ, ಸ್ವರೂಪವನ್ನು ಹೊಂದಿವೆ. ಪ್ರತಿಯೊಂದು ಭಾವನೆಯನ್ನು ವ್ಯಕ್ತ ಪಡಿಸೋ ವಿಧಾನ ಬೇರೆ. ಅಂತಹದರಲ್ಲಿ ಮನುಷ್ಯನ ಅತಿ [&#8230;]]]></description>
										<content:encoded><![CDATA[
<p><strong>ಪ್ರೀತಿ ಪ್ರೇಮದ ಕುರಿತು ಪುಟಗಟ್ಟಲೆ ಭಾವನೆಗಳ ಹರಿಬಿಡುವ ವಯಸು ಹದಿ ವಯಸು. ಹರೆಯದ ಬಾಗಿಲು ತೆರೆದಿರುವ ಹೊತ್ತಿಗೆ ಪ್ರೀತಿಯೆಂಬ ಮಾಯೆ ಆವರಿಸುವಾಗ ಅದನ್ನು ಜಾಗರೂಕತೆಯಿಂದ ನಿರ್ವಹಿಸುವ ತಿಳುವಳಿಕೆ ಪ್ರತಿಯೊಬ್ಬರಿಗೂ ಇರಬೇಕು. ಇತ್ತೀಚೆಗಷ್ಟೇ ಪತ್ರಿಕೋದ್ಯಮ ಪದವಿ ಮುಗಿಸಿರುವ ಉಡುಪಿಯ ಮಹಾಲಕ್ಷ್ಮಿ ದೇವಾಡಿಗ ಮಧುರವಾದ ಪ್ರೀತಿಯ ಬಗ್ಗೆ ಕ್ಯಾಂಪಸ್‌ ಅಂಕಣದಲ್ಲಿ ಬರೆದಿದ್ದಾರೆ.</strong></p>



<p>ಈ ಲೋಕದಲ್ಲಿ ಅದೆಷ್ಟೋ ತರಹದ ಭಾವನೆಗಳು ತನ್ನದೇ ಆದ ಹಾವ, ಭಾವ, ಸ್ವರೂಪವನ್ನು ಹೊಂದಿವೆ. ಪ್ರತಿಯೊಂದು ಭಾವನೆಯನ್ನು ವ್ಯಕ್ತ ಪಡಿಸೋ ವಿಧಾನ ಬೇರೆ. ಅಂತಹದರಲ್ಲಿ ಮನುಷ್ಯನ ಅತಿ ಮುಖ್ಯ ಹಾಗೂ ನಮ್ಮ ಬದುಕಿಗೆ ಒಂದು ಹೊಸ ತಿರುವು ಕೊಡೋ ಅಸಾಮಾನ್ಯ ಶಕ್ತಿ ಇರೋದು ಈ ಪ್ರೀತಿಗೆ. ಹಾಗಾದ್ರೆ ಈ ಪ್ರೀತಿ ಅಂದ್ರೆ ಏನು? ನಿಜ ಹೇಳ್ಬೇಕಂದ್ರೆ ಪ್ರೀತಿಗೆ ಯಾವುದೇ ತರಹದ ವಿವರಣೆ ಇಲ್ಲ, ಆದ್ರೆ ಪರಸ್ಪರ ಮನಸಿನ ಇಚ್ಛೆಯಿಂದ ಹುಟ್ಟುವುದೇ ಪ್ರೀತಿ ಅನ್ನಬಹುದು.&nbsp;</p>



<p>ಪ್ರೀತಿಯನ್ನು ಹೇಳಲು ತನ್ನದೇ ಆದ ಭಾಷೆಯಿದೆ, ಪ್ರೀತಿಯ ಭಾವನೆಯನ್ನು ವ್ಯಕ್ತ ಪಡಿಸಲು ತನ್ನದೇ ಆದ ವಿಧಾನವಿದೆ. ಪ್ರಪಂಚದ ಅತಿ ಸುಂದರ ಹಾಗೂ ಮೊದಲ ಪ್ರೇಮಕಥೆ ರಾಧಾಕೃಷ್ಣರ ಪ್ರೇಮಕಥೆ. ಪವಿತ್ರ ಹಾಗೂ ನಿಷ್ಕಲ್ಮಶ ಪ್ರೇಮ ತಮ್ಮ ಕೊನೆಗಾಲದವರೆಗೂ ಜೊತೆಯಾಗಿ ಬಾಳಿಲ್ಲ ಅಂದ್ರೂ, ಜಗತ್ತು ಅಂತ್ಯ ಕಾಣೋವರೆಗೂ ಕೂಡ ನಿರಂತರವಾಗಿ ನೆನಪಲ್ಲಿ ಜೀವಂತವಾಗಿ ಪ್ರೀತಿಯ ನಿಜ ರೂಪವನ್ನು ಅರ್ಥ ಮಾಡಿಸೋ ಪ್ರೇಮ ಕಥೆ ಅದೇ ರಾಧಾಕೃಷ್ಣರ ಪ್ರೇಮಕಥೆ. ತದನಂತರದಲ್ಲಿ ನಾವು ಹಲವು ಪ್ರೇಮಕಥೆಗಳನ್ನು ಕೇಳಿದ್ದೇವೆ. ಅದರ ಸಾಕ್ಷಿ ಹಾಗೂ ಸಂಕೇತಗಳನ್ನು ನೋಡಿದ್ದೇವೆ.&nbsp;</p>



<p>ನಮ್ಮ ಕಲಿಯುಗದಲ್ಲಿ ಎಲ್ಲ ಸಂಬಂಧಗಳು ಹಿಂದೆ ಇದ್ದ ಹಾಗೆ ಈಗಿಲ್ಲ. ಅದೇ ತರ ಈ ಪವಿತ್ರವಾದ ಪ್ರೀತಿಯನ್ನ ತಮ್ಮ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡ ಹಾಗೂ ಬಳಸಿಕೊಳ್ತಾ ಇರೋ ಅದೆಷ್ಟೋ ಘಟನೆಗಳನ್ನು ಕೇಳ್ತಾನೆ, ನೋಡ್ತಾನೆ ಇದ್ದೇವೆ. ಒಂದು ಲೆಕ್ಕದಲ್ಲಿ ಪ್ರೀತಿ ಅಂದಾಗ ಹಿಂದೆ ಇದ್ದ ಕಲ್ಪನೆಗೂ ಈಗ ಮೂಡೋ ಪರಿಕಲ್ಪನೆಗೂ ಆಕಾಶ ಭೂಮಿ ಅಂತರ. ಯಾಕಂದ್ರೆ ಈಗಿನ ಕಾಲ ಹಾಗಿದೆ, ಇಲ್ಲಿ ನಿಜ ಯಾವುದು ಸುಳ್ಳು ಯಾವುದು ಅನೋದನ್ನ ಪತ್ತೆ ಮಾಡೋದರಲ್ಲೆ ನಮ್ಮ ಅರ್ಧ ಜೀವನ ಕಳೆದು ಬಿಡ್ತೇವೆ. ಇನ್ನು ಉಳಿದ ಅರ್ಧ ಜೀವನದಲ್ಲಿ ದುಡಿಮೆ, ಕಷ್ಟ, ಸುಖ, ಕುಟುಂಬ ಕೊನೆಗೆ ಸಾವು ಅನ್ನೋದರ ಪೂರ್ಣವಿರಾಮ ಬೀಳ್ತದೆ. ಹೀಗಿರುವಾಗ ಪ್ರೀತಿಯನ್ನೂ ಕೂಡ ವ್ಯಾಪಾರ ಅನ್ನೋ ಹಾಗೆ ಮಾಡಿಟ್ಟಿರೋ ಇಂತ ಕಾಲದಲ್ಲಿ ನಿಜವಾದ ಪ್ರೀತಿಯನ್ನ ಗುರುತಿಸೋದು ಮನಸಿಗೆ ಸುಲಭವಾದ್ರೂ ನೋಡೋ ಕಣ್ಣಿಗೆ, ಪರಿಸ್ಥಿತಿಗೆ ಸ್ಪಂದಿಸೋ ಬುದ್ಧಿಗೆ ತುಂಬಾ ಕಷ್ಟ.</p>



<p>ಪ್ರೀತಿನ ನಂಬಿಕೆ ಅನ್ನೋ ಬುನಾದಿ ಮೇಲೆ ಕಟ್ಟಿರೋ ನಮ್ಗೆ ಅಂತ ನಂಬಿಕೆ ಒಮ್ಮೆ ಬಿರುಕು ಬಿಟ್ಟರೆ ಮತ್ತೆ ಒಂದು ಮಾಡಲು ಅದೆಷ್ಟೋ ವರ್ಷ ತಕೊಳ್ತದೆ. ಕೆಲವೊಮ್ಮೆ ಆ ಬಿರುಕು ಶಾಶ್ವತವಾಗಿ ಬಿಡುತ್ತದೆ. ತಂದೆ ತಾಯಿಯ ಪ್ರೀತಿ, ಸಹೋದರ ಸಹೋದರಿಯರ ಪ್ರೀತಿ, ಕುಟುಂಬದ ಪ್ರೀತಿ, ಸ್ನೇಹಿತರ ಪ್ರೀತಿ ಎಲ್ಲವೂ ಕೂಡ ಅದರದೇ ಆದ ಸ್ವರೂಪ ಹೊಂದಿರುತ್ತದೆ. ಹಾಗೆ ಸಂಗಾತಿಯ ಪ್ರೀತಿ ಕೂಡ. ಪ್ರೀತಿ ಅಂದ್ರೆ ಪ್ರೀತಿ ಮಾತ್ರ. ಹಾಗಾಗಿ ಅದನ್ನ ಅದರದೇ ರೀತಿಯಲ್ಲಿ ನೋಡೋದು ಬಹಳ ಒಳ್ಳೆಯದು. ಪ್ರೀತಿನ ನಾವು ಯಾವ ರೀತಿಯಲ್ಲಿ&nbsp; ನೋಡ್ತೇವೋ ಅದು ಅಂತಹದೇ ರೂಪದಲ್ಲಿ&nbsp; ನಮಗೆ ಸುತ್ತಲೂ ಕಾಣ್ತದೆ. ಇನ್ನೊಂದು, ಪ್ರೀತಿ ಬಗ್ಗೆ ಮಾತಾಡೋರೆಲ್ಲ ಪ್ರೀತಿಸಿರ್ಲೇ ಬೇಕು. ನಿಜ. ಅದು ಯಾರಾದ್ರೂ ಆಗಿರ್ಬಹುದು. ಅಮ್ಮ, ಅಪ್ಪ, ಕುಟುಂಬ, ಸ್ನೇಹಿತರು ಯಾರಾದ್ರೂ ಆಗಿರಬಹುದು. ಎಲ್ಲವನ್ನ ಒಂದೇ ಮಾಪನದಲ್ಲಿ ಅಳೆದು ನೋಡೋದು ತಪ್ಪು.&nbsp;</p>



<p>ಆದ್ರೂ ಕೊನೆಯಲ್ಲಿ ಒಂದು ಮಾತು- ನಮ್ಮ ಹುಟ್ಟಿನ ಮೊದಲೇ ನಮ್ಮನ್ನು ಕಲ್ಪಿಸಿಕೊಂಡು ಪ್ರೀತಿಮಾಡೋ ಫ್ಯಾಮಿಲಿಗೆ ಮೋಸ ಮಾಡ್ಬೇಡಿ. ಹಾಗೇ ಯಾರದೋ ಕುರುಡು ಪ್ರೀತಿಗೆ ಬಲಿಯಾಗಿ ಮೋಸ ಹೋಗಲು ಬೇಡಿ. ಪ್ರೀತಿ ಯಾವಾಗ, ಯಾರಿಗೆ, ಎಲ್ಲಿ, ಹೇಗೆ ಆಗ್ತದೆ ಅಂತ ಹೇಳಲು ಆಗೋಲ್ಲ. ಹಾಗಾಗಿ ಎಲ್ಲವೂ ಶಾಶ್ವತ ಅನ್ನೋ ಭ್ರಮೆಯೂ ಬೇಡ. ಎಲ್ಲರಿಗೂ ಎಲ್ಲ ಮಾತನ್ನು ಹೇಳಲೂ ಆಗದು, ಕೇಳಿ ತಿಳಿಯಲೂ ಆಗದು. ನಾವಾಗೆ ಅರ್ಥ ಮಾಡಿಕೊಳ್ಳೋ ಬುದ್ಧಿವಂತಿಕೆ ಹೊಂದಿರಬೇಕು.&nbsp;</p>



<p>ಕೊನೆಯಲ್ಲಿ ಹೇಳೋದಿಷ್ಟೆ- ಪ್ರೀತಿನ ಟೈಂ ಪಾಸ್ ಅಂತಾನೋ ಅಥವಾ ಅದನ್ನ&nbsp; ವ್ಯಾಪಾರ ಅನ್ನೋ ರೀತಿಲಿ ಬಳಕೆ ಮಾಡೋ ಮುಂಚೆ ಒಂದಲ್ಲ ನೂರು ಸಲ ಯೋಚ್ನೆ ಮಾಡಿ ನೋಡೋದರಲ್ಲಿ ತಪ್ಪೇನಿಲ್ಲ. ನಮ್ಮ ಈಗಿನ ಯುಗದ&nbsp; ಅದೆಷ್ಟೋ ಬುದ್ಧಿವಂತ ಜೀವಿಗಳಲ್ಲಿ&nbsp; ವೇಗ ಹೆಚ್ಚಾಗಿದೆ ಆದ್ರೆ ಮಾನವೀಯತೆ, ಚಿಂತನಾ ಶಕ್ತಿ ಅನ್ನೋದು ಕಡಿಮೆಯಾಗಿದೆ. ಅಂತವರಿಗೆ ಇದೊಂದು ನನ್ನ ಪುಟ್ಟ ಕಿವಿಮಾತು..</p>



<figure class="wp-block-image size-full is-resized"><img decoding="async" src="https://peepalmedia.com/wp-content/uploads/2023/01/Screenshot-2023-01-03-163652.jpg" alt="" class="wp-image-18834" width="184" height="160"/></figure>



<p><strong>ಮಹಾಲಕ್ಷ್ಮಿ ದೇವಾಡಿಗ</strong></p>



<p><strong>ಪತ್ರಿಕೋದ್ಯಮ ಪದವೀಧರೆ, ಉಡುಪಿ</strong></p>
]]></content:encoded>
					
		
		
			</item>
	</channel>
</rss>
