<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>low income &#8211; Peepal Media</title>
	<atom:link href="https://peepalmedia.com/tag/low-income/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Mon, 19 Feb 2024 09:32:54 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>low income &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕೇಂದ್ರದ ಕಳಪೆ ಆರ್ಥಿಕ ನೀತಿಯಿಂದಾಗಿ ನಿರುದ್ಯೋಗ ಮತ್ತು ಕಡಿಮೆ ಆದಾಯ &#8211; ಶಶಿ ತರೂರ್ ತರಾಟೆ</title>
		<link>https://peepalmedia.com/centres-economic-mismanagement-has-led-to-hardship-low-incomes-shashi-tharoor/</link>
		
		<dc:creator><![CDATA[Peepal Media Desk]]></dc:creator>
		<pubDate>Thu, 08 Feb 2024 10:54:08 +0000</pubDate>
				<category><![CDATA[ದೇಶ]]></category>
		<category><![CDATA[bjp]]></category>
		<category><![CDATA[Central Government]]></category>
		<category><![CDATA[income]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[low income]]></category>
		<category><![CDATA[modi]]></category>
		<category><![CDATA[narendra]]></category>
		<category><![CDATA[narendra modi]]></category>
		<category><![CDATA[news]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[politics]]></category>
		<category><![CDATA[rajyasabha]]></category>
		<category><![CDATA[shashi tharoor]]></category>
		<category><![CDATA[state politics]]></category>
		<category><![CDATA[Unemployment]]></category>
		<category><![CDATA[writing]]></category>
		<guid isPermaLink="false">https://peepalmedia.com/?p=35712</guid>

					<description><![CDATA[&#8220;ಕಳೆದ ಒಂದು ದಶಕದಲ್ಲಿ ಕೇಂದ್ರ ಸರ್ಕಾರ ಅಸಮರ್ಪಕ ಆರ್ಥಿಕ ನೀತಿಗಳನ್ನು ತಂದು ದೇಶದ ಜನರಿನ್ನು ದುಃಖಕ್ಕೆ ತಳ್ಳಿದೆ, ಆದಾಯ ಕಡಿಮೆಯಾಗಿ, ನಿರುದ್ಯೋಗ ಹೆಚ್ಚಾಗಿ ದೇಶವನ್ನು ಸಂಕಷ್ಟಕ್ಕೆ ತಳ್ಳಲಾಗಿದೆ,&#8221; ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಆತಂಕ ವ್ಯಕ್ತಪಡಿಸಿದ್ದಾರೆ. ಬುಧವಾರ ಲೋಕಸಭೆಯಲ್ಲಿ ನಡೆದ ಮಧ್ಯಂತರ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಭಾಷಣ ಮಾಡಿದ ಇವರು ಕೇಂದ್ರದ ಕಳಪೆ ಹಣಕಾಸು ನಿರ್ವಹಣೆಯ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ತರೂರ್ ತಮ್ಮ ಭಾಷಣದಲ್ಲಿ, 2016 ರ ನೋಟು ಅಮಾನ್ಯೀಕರಣದ ನಿರ್ಧಾರದಿಂದ ಪ್ರಾರಂಭಿಸಿ, [&#8230;]]]></description>
										<content:encoded><![CDATA[
<p>&#8220;ಕಳೆದ ಒಂದು ದಶಕದಲ್ಲಿ ಕೇಂದ್ರ ಸರ್ಕಾರ ಅಸಮರ್ಪಕ ಆರ್ಥಿಕ ನೀತಿಗಳನ್ನು ತಂದು ದೇಶದ ಜನರಿನ್ನು ದುಃಖಕ್ಕೆ ತಳ್ಳಿದೆ, ಆದಾಯ ಕಡಿಮೆಯಾಗಿ, ನಿರುದ್ಯೋಗ ಹೆಚ್ಚಾಗಿ ದೇಶವನ್ನು ಸಂಕಷ್ಟಕ್ಕೆ ತಳ್ಳಲಾಗಿದೆ,&#8221; ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಆತಂಕ ವ್ಯಕ್ತಪಡಿಸಿದ್ದಾರೆ.</p>



<p>ಬುಧವಾರ ಲೋಕಸಭೆಯಲ್ಲಿ ನಡೆದ ಮಧ್ಯಂತರ ಬಜೆಟ್ ಮೇಲಿನ ಸಾಮಾನ್ಯ ಚರ್ಚೆಯಲ್ಲಿ ಭಾಷಣ ಮಾಡಿದ ಇವರು ಕೇಂದ್ರದ ಕಳಪೆ ಹಣಕಾಸು ನಿರ್ವಹಣೆಯ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.</p>



<p>ತರೂರ್ ತಮ್ಮ ಭಾಷಣದಲ್ಲಿ, 2016 ರ ನೋಟು ಅಮಾನ್ಯೀಕರಣದ ನಿರ್ಧಾರದಿಂದ ಪ್ರಾರಂಭಿಸಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ದೇಶದಲ್ಲಿನ ಎಂಎಸ್‌ಎಂಇಗಳಿಗೆ ಹಾನಿ, ರೈತರ ಸಂಕಷ್ಟಗಳು, ಉದ್ಯೋಗ ಹೆಚ್ಚಳದಲ್ಲಿ ಕಳಪೆ ಸಾಧನೆ ಹಾಗೂ ವ್ಯಾಪಕ ಆರ್ಥಿಕ ಸಮಸ್ಯೆಗಳ ಬಗ್ಗೆ ಮಾತನಾಡಿದರು. </p>



<p>ನೋಟು ಅಮಾನ್ಯೀಕರಣದಂತಹ ಕೆಟ್ಟ ನೀತಿಯನ್ನು ಕೆಟ್ಟದಾಗಿ ಜಾರಿಗೆ ಬಂದರೆ, ಜಿಎಸ್‌ಟಿಯು ಒಳ್ಳೆಯ ಆಲೋಚನೆಯಾದರೂ, ಕೆಟ್ಟದಾಗಿ ವಿನ್ಯಾಸಗೊಳಿಸಿ ಕಳಪೆ ರೀತಿಯಲ್ಲಿ ಜಾರಿಗೊಳಿಸಲಾಗಿದೆ ಎಂದು ತರೂರ್ ಹೇಳಿದ್ದಾರೆ.</p>



<p>&#8220;ಸರಕು ಮತ್ತು ಸೇವಾ ತೆರಿಗೆಯನ್ನು ನಮ್ಮ ರಾಜ್ಯಗಳ ಆರ್ಥಿಕ ಸ್ವಾಯತ್ತತೆಯನ್ನು ತುಳಿಯಲು ಬಳಸಲಾಗಿದೆ ಮತ್ತು ನೋಟು ರದ್ದತಿ ಭಾರತದ ಉದ್ಯೋಗ-ಉತ್ಪಾದಿಸುವ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ನಾಶವಾಗಲು ಕಾರಣವಾಯಿತು. ಇದು 45 ವರ್ಷಗಳ ನಿರುದ್ಯೋಗವನ್ನು ಉಂಟುಮಾಡಿತು ಮತ್ತು 2013 ರಲ್ಲಿ ಪ್ರಾರಂಭವಾದ ಆರ್ಥಿಕ ಚೇತರಿಕೆಯನ್ನು ಕೊನೆಗೊಳಿಸಿತು, ಆದರೆ ಅದರ ಎಲ್ಲಾ ಉದ್ದೇಶಗಳೂ  ವಿಫಲವಾಗಿದೆ,&#8221; ಎಂದು ಅವರು ಹೇಳಿದ್ದಾರೆ.</p>



<p>ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮಧ್ಯಂತರ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ ನಾಲ್ಕು &#8216;ಜಾತಿಗಳು&#8217; &#8211; ಮಹಿಳೆಯರು, ಯುವಕರು, ರೈತರು ಮತ್ತು ಬಡವರು &#8211; ಸಾಮಾಜಿಕ ಮತ್ತು ಆರ್ಥಿಕ ನೀತಿಯ ಕಾರ್ಯಕ್ಷಮತೆಯ ಸೂಚಕಗಳಲ್ಲಿ ಕೆಟ್ಟ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದ ಗುಂಪುಗಳಾಗಿವೆ ಎಂದು ಅವರು ಹೇಳಿದ್ದಾರೆ.</p>



<p>&#8220;ಭಾರತದಲ್ಲಿ ಕೆಲಸವಿಲ್ಲದ  ಹತಾಶ ಯುವಕರು ಇಸ್ರೇಲ್‌ನಲ್ಲಿ ಉದ್ಧದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಡಲು ಸರತಿ ಸಾಲಿನಲ್ಲಿ ನಿಂತಿರುವಾಗ ಸರ್ಕಾರ ತನ್ನ ಯಶಸ್ಸಿನ ಬಗ್ಗೆ ಹೇಳಿಕೆಗಳನ್ನು ನೀಡುವುದು ದುರಂತ ವ್ಯಂಗ್ಯ,&#8221; ಎಂದು ತರೂರ್ ವಿಷಾದಿಸಿದ್ದಾರೆ.</p>



<p>&#8220;ಒಟ್ಟಾರೆಯಾಗಿ, 8-9 ಪ್ರತಿಶತದಷ್ಟು ನಿರುದ್ಯೋಗ ದರವು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಹೋಗಿದೆ. 2017 ರಲ್ಲಿ ನಿರುದ್ಯೋಗವು 45 ವರ್ಷಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ, ಪ್ರಸ್ತುತ CMIE ಡೇಟಾದ ಪ್ರಕಾರ 7.3 ಪ್ರತಿಶತದಷ್ಟಿದೆ, ಆದರೆ ಕೆಲವೇ ತಿಂಗಳುಗಳ ಹಿಂದೆ 8 ಶೇಕಡಾಕ್ಕಿಂತ ಹೆಚ್ಚಾಗಿದೆ,&#8221; ಎಂದು ಅವರು ಹೇಳಿದ್ದಾರೆ.</p>



<p>ಭಾರತದ ಆರ್ಥಿಕತೆಯು ಸದ್ಯ 2012 ರಲ್ಲಿ ಉದ್ಯೋಗ ನೀಡಿದ್ದಕ್ಕಿಂತ ಕಡಿಮೆ ಜನರಿಗೆ ಉದ್ಯೋಗ ಕೊಡುತ್ತಿದೆ ಎಂದು ಆರೋಪಿಸಿರುವ ತರೂರ್‌, &#8220;ಕೃಷಿ ಮತ್ತು ಉತ್ಪಾದನಾ ವಲಯದಲ್ಲಿ ಉದ್ಯೋಗಗಳ ಪ್ರಮಾಣ ಕುಸಿದಿವೆ, ಆರ್ಥಿಕವಾಗಿ ಅನಿಶ್ಚಿತ ಆದಾಯ ತರುವ ಕನ್ಸ್ಟ್ರಕ್ಷನ್‌ ಕೆಲಸಗಳಲ್ಲಿ ಮತ್ತು ಕೆಳ-ಮಟ್ಟದ ಸೇವಾ ವಲಯದಲ್ಲಿ  ಮಾತ್ರ ಅವರು ಏನಾದರೂ ಒಂದು ಉದ್ಯೋಗ ನೋಡುತ್ತಿದ್ದಾರೆ. ಇಸ್ರೇಲ್‌ನಲ್ಲಿ ಉದ್ಯೋಗ ಹುಡುಕಲು ಹೊರಟಿರುವ ನಮ್ಮ ಜನರು ತಮ್ಮ ಜೀವ ಮತ್ತು ದೇಹವನ್ನು ಅಪಾಯಕ್ಕೆ ಒಡ್ಡಿಕೊಳ್ಳಲು ಸಿದ್ಧರಾಗಿದ್ದಾರೆ, ಜೀವನೋಪಾಯಕ್ಕಾಗಿ ಸಾವನ್ನೂ ಎದುರಿಸಲು ಹಿಂದೆಮುಂದೆ ನೋಡುತ್ತಿಲ್ಲ,&#8221; ಎಂದು ತರೂರ್‌ ಅಭಿಪ್ರಾಯ ಪಟ್ಟಿದ್ದಾರೆ. </p>



<p>ಒಟ್ಟಾರೆ ಉದ್ಯೋಗಗಳಲ್ಲಿ ಕೃಷಿಯ ಪಾಲು ಹೆಚ್ಚಿದೆ, ಕೃಷಿ ವಲಯದ ಹೊರಗೆ ಸಾಕಷ್ಟು ಉದ್ಯೋಗಗಳು ಲಭ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ತರೂರ್‌ ಹೇಳಿದ್ದಾರೆ.</p>
]]></content:encoded>
					
		
		
			</item>
	</channel>
</rss>
